<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Gangappa Talavar &#8211; Peepal Media</title>
	<atom:link href="https://peepalmedia.com/author/gangappa-talavar/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 08 Sep 2022 06:45:17 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.2</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Gangappa Talavar &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಕಾದಲವೇಣಿ ಎಂಬ ನೆಲಗರ್ಭದೊಳು ಕಳುವಾದ&#8220;ಬಾಂದರವಿ&#8221; ಎಂಬೋ ಜೀವಚಿಲುಮೆ…</title>
		<link>https://peepalmedia.com/kaadalaveni-emba-nelagarbhadolu-kalivada-bamderavi-embo-jivachilume/</link>
		
		<dc:creator><![CDATA[Gangappa Talavar]]></dc:creator>
		<pubDate>Thu, 08 Sep 2022 06:45:11 +0000</pubDate>
				<category><![CDATA[ವಿಶೇಷ]]></category>
		<category><![CDATA[karnataka]]></category>
		<category><![CDATA[kolara]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[special]]></category>
		<category><![CDATA[special story]]></category>
		<guid isPermaLink="false">https://peepalmedia.com/?p=4263</guid>

					<description><![CDATA[ಕೋಲಾರದ ಅವಿಭಜಿತ ಜಿಲ್ಲೆಯ ಗೌರಿಬಿದನೂರು ತಾಲೂಕಿನ &#8220;ಕಾದಲವೇಣಿ&#8221; ಎಂಬ ಗ್ರಾಮದಲ್ಲಿ ಮೂಲತಃ ಮಾದಿಗ ಸಮುದಾಯ ನಡೆಸಿ ಕೊಡುವ ಆಚರಣೆ. ನೂರ ಐವತ್ತಕ್ಕೂ ಹೆಚ್ಚಿನ ಮನೆಗಳಿರುವ ಸಣ್ಣ ಗ್ರಾಮ. ಇಲ್ಲಿ ಮೂರು ಮತ್ತು ಐದು ವರ್ಷಕ್ಕೊಮ್ಮೆ ನಡೆಯುವ ಕಾದಲವೇಣಿ ಮಾರಮ್ಮನ ಜಾತ್ರೆ ತುಂಬಾ ಪ್ರಸಿದ್ದ. ಈ ಜಾತ್ರೆ ನಡಿಯೋದಕ್ಕೆ ಮಾರೆಮ್ಮನ ಕುರಿತ ಸಣ್ಣ ಜನಪದ ಕತೆಯೊಂದು ಬೆಸೆದುಕೊಂಡಿದೆ. &#8220;ಬ್ರಾಹ್ಮಣರ ಹುಡುಗಿಯಾದ ಮಾರೆಮ್ಮನನ್ನು ಮಾದಿಗರ ಹುಡುಗನೊಬ್ಬ ಮೋಸದಿಂದ ಮದುವೆಯಾದ್ನಂತೆ.. ಅವನ ಅಸಲಿ ಜಾತಿ ತಿಳಿದ ಮೇಲೆ &#8216;ಇನ್ನೂ ಮುಂದೆ ನಾನು [&#8230;]]]></description>
										<content:encoded><![CDATA[
<p class="has-medium-font-size wp-block-paragraph">ಕೋಲಾರದ ಅವಿಭಜಿತ ಜಿಲ್ಲೆಯ ಗೌರಿಬಿದನೂರು ತಾಲೂಕಿನ &#8220;ಕಾದಲವೇಣಿ&#8221; ಎಂಬ ಗ್ರಾಮದಲ್ಲಿ ಮೂಲತಃ ಮಾದಿಗ ಸಮುದಾಯ ನಡೆಸಿ ಕೊಡುವ ಆಚರಣೆ. ನೂರ ಐವತ್ತಕ್ಕೂ ಹೆಚ್ಚಿನ ಮನೆಗಳಿರುವ ಸಣ್ಣ ಗ್ರಾಮ. ಇಲ್ಲಿ ಮೂರು ಮತ್ತು ಐದು ವರ್ಷಕ್ಕೊಮ್ಮೆ ನಡೆಯುವ ಕಾದಲವೇಣಿ ಮಾರಮ್ಮನ ಜಾತ್ರೆ ತುಂಬಾ ಪ್ರಸಿದ್ದ. ಈ ಜಾತ್ರೆ ನಡಿಯೋದಕ್ಕೆ ಮಾರೆಮ್ಮನ ಕುರಿತ ಸಣ್ಣ ಜನಪದ ಕತೆಯೊಂದು ಬೆಸೆದುಕೊಂಡಿದೆ.</p>



<p class="has-medium-font-size wp-block-paragraph">&#8220;ಬ್ರಾಹ್ಮಣರ ಹುಡುಗಿಯಾದ ಮಾರೆಮ್ಮನನ್ನು ಮಾದಿಗರ ಹುಡುಗನೊಬ್ಬ ಮೋಸದಿಂದ ಮದುವೆಯಾದ್ನಂತೆ.. ಅವನ ಅಸಲಿ ಜಾತಿ ತಿಳಿದ ಮೇಲೆ &#8216;ಇನ್ನೂ ಮುಂದೆ ನಾನು ಮಾರಿಯಾಗಿ ಬಂದು ಕೋಣನಾದ ನಿನ್ನನ್ನು ಬಲಿ ತೆಗೆದುಕೊಳ್ಳುತ್ತೇನೆ; ನನ್ನ ಕರುಳು ಉರಿದಂತೆ ಅವನ ತಾಯಿಯ ಕರುಳು ಉರಿಯಬೇಕು&#8221;.. ಎಂದು ಶಾಪಕೊಟ್ಟಳಂತೆ. ಸ್ವಲ್ಪ ವ್ಯತ್ಯಾಸಗಳೊಂದಿಗೆ ಎಲ್ಲಾ ಕಡೆ ಮಾರೆಮ್ಮನ ಕತೆಗಳಲ್ಲಿ ಕಂಡುಬರುತ್ತದೆ. ಅಂತರ್ಜಾತಿ ವಿವಾಹವನ್ನೂ ನಿಷೇದಿಸಲಿಕ್ಕೆಂದೆ ಪುರೋಹಿತವರ್ಗದಿಂದ ಸೃಷ್ಟಿಸಲ್ಪಟ್ಟಂಥವುಗಳೆಂದು ಈಗಾಗಲೇ ವಿದ್ವಾಂಸರುಗಳು ಅಭಿಪ್ರಾಯ ಪಟ್ಟಿದ್ದಾರೆ ಎಂಬುದು ಗಮನಿಸಬೇಕಾದ ವಿಚಾರ.</p>



<p class="has-medium-font-size wp-block-paragraph">ಚೈತ್ರಮಾಸದಲ್ಲಿ ಈ ಜಾತ್ರೆಯನ್ನು ಊರಿನ ಸಕಲಕುಲಗಳು ಸೇರಿ ಆಚರಿಸಲ್ಪಡುತ್ತಾರೆ.. ಈ ಮಾರಮ್ಮನ ಆಚರಣೆ ಕರಾವಳಿ ಭಾಗದಲ್ಲಿ ನಡೆಯುವ ಭೂತ, ಕೋಲ ಆಚರಣೆಯನ್ನೇ ಹೋಲುತ್ತದೆ. ಇಲ್ಲಿಯೂ ಸಹ ಮಾರೆಮ್ಮನನ್ನು ಊರಗಡಿ ದಾಟಿಸುವ ಸಾಂಪ್ರದಾಯವಿದೆ.</p>



<h2 class="wp-block-heading">&#8220;ಬಾಂದರವಿ&#8221; ಏನಿದು ?!</h2>



<p class="has-medium-font-size wp-block-paragraph">೧.&#8221;ಬಾಂದರವಿ&#8221; ಗ್ರಾಮದೇವತೆ &amp; ಮಾರೆಮ್ಮನ ಜಾತ್ರೆಗಳಲ್ಲಿ ಅನ್ನ ಬೇಯಿಸುವ ಮಡಕೆ.</p>



<p class="has-medium-font-size wp-block-paragraph">೨. ಶಾಪಗ್ರಸ್ತಳಾದ ಮಾರೆಮ್ಮನ ಗಂಡನ ತಾಯಿಯೇ ಬಾಂದರವಿಯಾಗಿದ್ಧಾಳೆಂದು ನಂಬಿಕೆ.</p>



<p class="has-medium-font-size wp-block-paragraph">೩. ಪಾಪ ಪರಿಹಾರಾರ್ಥವಾಗಿ ಬಾಂದರವಿಯಲ್ಲಿ ಬೇಯಿಸಿದ ಅನ್ನವನ್ನು ಪ್ರಸಾದವಾಗಿ ಎಲ್ಲರಿಗೂ ಹಂಚುತ್ತಾರೆ.</p>



<p class="has-medium-font-size wp-block-paragraph">೫. ಕೋಣ ಬಲಿ ನಂತರ ಈ ಬಾಂದರವಿಗೆ ಬೆಂದ ಅನ್ನವನ್ನು ೧೨ ಭಾಗಮಾಡಿ ಆಯಗರಿಗೆ ಹಂಚಿಕೆ ಮಾಡುತ್ತಾರೆ. ಅನುಕ್ರಮವಾಗಿ ಶಾನುಭೋಗ, ಪಟೇಲ, ರೆಡ್ಡಿ, ಅಕ್ಕಸಾಲಿಗ, ಸುಣ್ಣಕಲ್ಲು, ಕಂಬಾರ, ಹೊಲೆಯ, ಹಟ್ಟಿಗೌಡ, ಇವರಿಗೆ ಹಂಚಿಕೆ ಮಾಡುತ್ತಾರೆ.</p>



<p class="has-medium-font-size wp-block-paragraph">೬. ಮಾರೆಮ್ಮನ ತಾಳಿ ಮತ್ತು ಒಡವೆಯನ್ನು ಅಸಾದಿ ಕಿತ್ತುಕೊಂಡು ಹೋಗುತ್ತಾನೆ.. ಇದು ಅವನ ಹಕ್ಕು.</p>



<p class="has-medium-font-size wp-block-paragraph">ಈ ಮೇಲಿನ ಕಾದಾಲವೇಣಿ ಮಾರೆಮ್ಮನಜಾತ್ರೆಗೆ ಸಂಬಂದಿಸಿದ ಪ್ರಚಲಿತ ಕತೆಯನ್ನು ಸಂಗ್ರಹಿಸಿದವರು ನನ್ನ ಗುರುಗಳಾದ ಸಿ.ಎಂ.ಗೋವಿಂದರೆಡ್ಡಿರವರು ತಮ್ಮ &#8220;ಕೋಲಾರ ಜಾತ್ರೆಗಳು&#8221; ಸಂಶೋಧನ ಪ್ರಬಂಧದಲ್ಲಿ</p>



<h2 class="wp-block-heading">ನನ್ನನ್ನು ಕಾಡಿದ್ದು!!</h2>



<p class="has-medium-font-size wp-block-paragraph">೧.ಇಲ್ಲಿ ಅನ್ನದ ಮಡಿಕೆಯನ್ನು ಅಸ್ರೃಶ್ಯ ಹೆಣ್ಣೆಂದು ಭಾವಿಸಿರುವುದು.</p>



<p class="has-medium-font-size wp-block-paragraph">೨. ಆ.. ಅಸ್ರೃಶ್ಯ ಮಡಕೆಯಲ್ಲಿನ ಅನ್ನವನ್ನು ಇಲ್ಲಿ ೧೨ ಬಾಗ ಮಾಡಿ ಮೇಲ್ವರ್ಗಗಳು ಹಂಚಿ ತಿನ್ನುವ ಕ್ರಮ.</p>



<p class="has-medium-font-size wp-block-paragraph">೩.ಹಂಚಿ ತಿನ್ನುವವರು ಒಂದೇ ಪಣಕಟ್ಟಿಗೆ ಸೇರಿರುವವರಾಗುತ್ತಾರೆ. ಇಲ್ಲವೇ ಇವರಲ್ಲಿ ಮೂಲದಲ್ಲಿ ವೈವಾಹಿಕ ಕೂಡಿಕೆಯ ಸಂಬಂಧಗಳಿದ್ದಿರಬೇಕು.</p>



<p class="has-medium-font-size wp-block-paragraph">೪. ಶಕ್ತಿ ದೇವತೆಗೆ ಕೋಣನ ಬಲಿ ನೀಡಿರುವುದು ಆದಿಮಾನವನ ಕಾಲದಿಂದಲೂ ಬಂದಿರುವಂಥದ್ದು.<br>ಅದರ ನೆತ್ತರನ್ನು ಊರ ಹೊಲ,ಗದ್ದೆಗಳಿಗೆ ಎರಚುವುದು ಫಲವಂತಿಕೆಯ ಸಂಕೇತ. ಕೋಣನ ಬಲಿ ನಂತರ ಮಾಂಸವನ್ನು ಹಂಚಿಕೆ ಮಾಡುವುದು ಅವರ ಕುಲದ ಹಕ್ಕು..</p>



<p class="has-medium-font-size wp-block-paragraph">೫. ಕೋಣನ ಬಲಿಯನ್ನು ಜಾತಿಹಿನ್ನಲೆಗೆ ಕಟ್ಟಿದ ಕಟ್ಟುಕಥೆ.</p>



<p class="has-medium-font-size wp-block-paragraph">೬. &#8220;ಬಾಂದರವಿ&#8221; ಆಚರಣೆ ಒಂದೇ ತಟ್ಟೆಯಲ್ಲಿ ಕೂತು ಉಣ್ಣುವುದು ವಿಶ್ವಕುಟುಂಬದ ಸಂಕೇತ.</p>



<p class="has-medium-font-size wp-block-paragraph">೭. ಮಾರೆಮ್ಮನ ಜಾತ್ರೆ ಮಾತೃಪ್ರಧಾನ ಕುಟುಂಬದ ಸಂಕೇತ. ಸ್ತ್ರೀಪ್ರಧಾನ ಆಚರಣೆ</p>



<p class="has-medium-font-size wp-block-paragraph">೮. ಜಾತ್ರೆ ಮುಗಿದ ನಂತರ ಬಾಂದರವಿಯನ್ನು ಮಾದಿಗ ಸಮುದಾಯದವರು ತಮ್ಮ ಮನೆಗೆ ಒಯ್ಯುತ್ತಾರೆ..<br>ಮೂಲದಲ್ಲಿ ಇದು ಮಾದಿಗ ಸಮುದಾಯದವರ ಆಚರಿಸುವ ಆಚರಣೆ ಇದ್ದಿರಬಹುದೆಂದು ಊಹಿಸಬಹುದು..</p>



<p class="has-medium-font-size wp-block-paragraph">೯. ಮಾರೆಮ್ಮ ಬ್ರಾಹ್ಮಣಳಾಗಿದ್ದರೆ ಈ ಅಚರಣೆಯಲ್ಲಿ ಬ್ರಾಹ್ಮಣರು ಭಾಗವಹಿಸಬೇಕಾಗಿತ್ತು ಆದರೆ ಇಲ್ಲಿ ಬ್ರಾಹ್ಮಣರ ಯಾವುದೇ ಪಾತ್ರವಿಲ್ಲ…ಈ ಆಚರಣೆಯಲ್ಲಿ ಶೂದ್ರ ಸಮುದಾಯ ಭಾಗವಹಿಸುತ್ತಿರವುದು ಗಮನಿಸಬೇಕಾದ ವಿಷಯ.</p>



<p class="has-medium-font-size wp-block-paragraph">೧೦. ಮಾರೆಮ್ಮನ ಜಾತ್ರೆ ಮುಗಿದ ನಂತರ ಮಾರೆಮ್ಮನ ಮೈಮೇಲಿರುವ ಒಡವೆ, ರವಿಕೆಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ.. ಹಾಗಾದರೆ ಮೂಲದಲ್ಲಿ ಈ ಮಾರೆಮ್ಮ ಮಾದಿಗರ ಆರಾದ್ಯ ದೇವತೆಯಾಗಿರಬೇಕು. ಇಲ್ಲವೇ ಮಾತೃ, ಮಾತಂಗಿಯೇ ಆಗಿರಬೇಕುವೆಂದು ಊಹಿಸಬಹುದು…</p>



<p class="has-medium-font-size wp-block-paragraph">೧೧. ಈ ಆಚರಣೆಯನ್ನು ಪಣಕಟ್ಟುವಿಗೆ ಸಂಬಂದಿಸಿದ ಕುಲಮೂಲ ಮೀಮಾಂಸೆಯಲ್ಲಿಟ್ಟು ಗ್ರಹಿಸುವುದು..</p>



<p class="has-medium-font-size wp-block-paragraph">ಈ &#8220;ಬಾಂದರವಿ ದಲಿತ ಸಮುದಾಯದ ಜೀವನೆಲೆಯಾದ &#8220;ಗಲ್ಲೇಬಾನಿ&#8221;ಯನ್ನು ನೆನಪಿಸುವಂತಿದೆ…</p>



<figure class="wp-block-image size-large is-resized"><img decoding="async" src="https://peepalmedia.com/wp-content/uploads/2022/09/WhatsApp-Image-2022-09-08-at-11.44.31-AM-738x1024.jpeg" alt="" class="wp-image-4283" width="179" height="249" srcset="https://peepalmedia.com/wp-content/uploads/2022/09/WhatsApp-Image-2022-09-08-at-11.44.31-AM-738x1024.jpeg 738w, https://peepalmedia.com/wp-content/uploads/2022/09/WhatsApp-Image-2022-09-08-at-11.44.31-AM-216x300.jpeg 216w, https://peepalmedia.com/wp-content/uploads/2022/09/WhatsApp-Image-2022-09-08-at-11.44.31-AM-768x1065.jpeg 768w, https://peepalmedia.com/wp-content/uploads/2022/09/WhatsApp-Image-2022-09-08-at-11.44.31-AM.jpeg 923w" sizes="(max-width: 179px) 100vw, 179px" /></figure>



<p class="has-medium-font-size wp-block-paragraph">ಗಂಗಪ್ಪ ತಳವಾರ್<br>ಲೇಖಕರು</p>
]]></content:encoded>
					
		
		
			</item>
	</channel>
</rss>
