<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Naveen Soorinje &#8211; Peepal Media</title>
	<atom:link href="https://peepalmedia.com/author/naveen-soorinje/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 09 Nov 2023 09:51:14 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.2</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Naveen Soorinje &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಇಸ್ರೇಲ್ ವಿರೋಧ ಪಕ್ಷದಿಂದ ಭಾರತ ಕಲಿಯಬೇಕಿರೋದೇನು? ಬಯಲಾದ ಹಿಂದುತ್ವದ ಸುಳ್ಳುಗಳು!</title>
		<link>https://peepalmedia.com/what-should-india-learn-from-israels-opposition/</link>
		
		<dc:creator><![CDATA[Naveen Soorinje]]></dc:creator>
		<pubDate>Thu, 09 Nov 2023 09:51:13 +0000</pubDate>
				<category><![CDATA[ವಿದೇಶ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=31680</guid>

					<description><![CDATA[ಹಿಂದುತ್ವವಾದಿಗಳು ಕಾಂಗ್ರೆಸ್ ಅನ್ನು ಟೀಕಿಸಲು ಇಸ್ರೇಲ್ ನ ವಿರೋಧ ಪಕ್ಷದ ಸುಳ್ಳು ಉದಾಹರಣೆ ನೀಡಿದ್ದಾರೆ. ನಿಜ ಏನೆಂದರೆ &#8220;ಇಸ್ರೇಲ್ ಪ್ರಧಾನಿ ಬೆಂಜಮಿನ್ ಉಗ್ರರ ದಮನದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅವರ ಸುತ್ತ ಮುತ್ತ ಉಗ್ರರೇ ತುಂಬಿಕೊಂಡಿದ್ದಾರೆ&#8221; ಎಂದು ನೇತಾನ್ಯಾಹು ಸಚಿವ ಸಂಪುಟವನ್ನು ಉಗ್ರರಿಗೆ ಹೋಲಿಕೆ ಮಾಡಿ ಇಸ್ರೇಲ್ ವಿರೋಧ ಪಕ್ಷದ ನಾಯಕರು ಟೀಕೆ ಮಾಡಿದ್ದಾರೆ! &#8211; ನವೀನ್‌ ಸೂರಿಂಜೆ, ಪತ್ರಕರ್ತರು ಇಸ್ರೇಲ್ &#8211; ಪ್ಯಾಲೆಸ್ತೇನ್ ಯುದ್ಧ ಘೋಷಣೆಯಾದ ಬಳಿಕ ಇಸ್ರೇಲ್ ನ ವಿರೋಧ ಪಕ್ಷವನ್ನು ವಿಸರ್ಜನೆ ಮಾಡಲಾಗಿದೆ. [&#8230;]]]></description>
										<content:encoded><![CDATA[
<p class="has-background wp-block-paragraph" style="background-color:#27070714"><strong>ಹಿಂದುತ್ವವಾದಿಗಳು ಕಾಂಗ್ರೆಸ್ ಅನ್ನು ಟೀಕಿಸಲು ಇಸ್ರೇಲ್ ನ ವಿರೋಧ ಪಕ್ಷದ ಸುಳ್ಳು ಉದಾಹರಣೆ ನೀಡಿದ್ದಾರೆ. ನಿಜ ಏನೆಂದರೆ &#8220;ಇಸ್ರೇಲ್ ಪ್ರಧಾನಿ ಬೆಂಜಮಿನ್ ಉಗ್ರರ ದಮನದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅವರ ಸುತ್ತ ಮುತ್ತ ಉಗ್ರರೇ ತುಂಬಿಕೊಂಡಿದ್ದಾರೆ&#8221; ಎಂದು ನೇತಾನ್ಯಾಹು ಸಚಿವ ಸಂಪುಟವನ್ನು ಉಗ್ರರಿಗೆ ಹೋಲಿಕೆ ಮಾಡಿ ಇಸ್ರೇಲ್ ವಿರೋಧ ಪಕ್ಷದ ನಾಯಕರು ಟೀಕೆ ಮಾಡಿದ್ದಾರೆ! &#8211; <mark style="background-color:rgba(0, 0, 0, 0)" class="has-inline-color has-vivid-red-color">ನವೀನ್‌ ಸೂರಿಂಜೆ, ಪತ್ರಕರ್ತರು</mark></strong></p>



<p class="wp-block-paragraph">ಇಸ್ರೇಲ್ &#8211; ಪ್ಯಾಲೆಸ್ತೇನ್ ಯುದ್ಧ ಘೋಷಣೆಯಾದ ಬಳಿಕ ಇಸ್ರೇಲ್ ನ ವಿರೋಧ ಪಕ್ಷವನ್ನು ವಿಸರ್ಜನೆ ಮಾಡಲಾಗಿದೆ. ವಿರೋಧ ಪಕ್ಷದ ನಾಯಕರೇ ಸರ್ಕಾರದ ಜೊತೆ ಸೇರಿಕೊಂಡಿದ್ದಾರೆ. ಇದು ಭಾರತವು ಇಸ್ರೇಲ್ ನಿಂದ ಕಲಿಯಬೇಕಿರುವ ಪಾಠ. ಭಾರತವು ಪಾಕಿಸ್ತಾನದ ಮೇಲೆ ಏರ್ ಸ್ಟ್ರೈಕ್ ಮಾಡಿದಾಗ ಸಾಕ್ಷ್ಯ ಕೇಳಿದ ಅಯೋಗ್ಯರು ಇಲ್ಲಿದ್ದಾರೆ&#8221; ಎಂದು ಹಿಂದುತ್ವವಾದಿಯೊಬ್ಬ ಮಾಡಿದ ಭಾಷಣದ ತುಣುಕು ವೈರಲ್ ಆಗುತ್ತಿದೆ.&nbsp;</p>



<p class="wp-block-paragraph">ವಾಸ್ತವವಾಗಿ ಇದೊಂದು ಸುಳ್ಳಿನ ಕಂತೆ. ನಿಜ ಏನೆಂದರೆ &#8220;ಇಸ್ರೇಲ್ ಪ್ರಧಾನಿ ಬೆಂಜಮಿನ್ ಉಗ್ರರ ದಮನದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅವರ ಸುತ್ತ ಮುತ್ತ ಉಗ್ರರೇ ತುಂಬಿಕೊಂಡಿದ್ದಾರೆ&#8221; ಎಂದು ನೇತಾನ್ಯಾಹು ಸಚಿವ ಸಂಪುಟವನ್ನು ಉಗ್ರರಿಗೆ ಹೋಲಿಕೆ ಮಾಡಿ ಇಸ್ರೇಲ್ ವಿರೋಧ ಪಕ್ಷದ ನಾಯಕರು ಟೀಕೆ ಮಾಡಿದ್ದಾರೆ !</p>



<p class="wp-block-paragraph">ಸಾಮಾನ್ಯವಾಗಿ ಎರಡು ದೇಶಗಳ ಮಧ್ಯೆ ಯುದ್ಧ ನಡೆದಾಗ ವಿರೋಧ ಪಕ್ಷವು ಸರ್ಕಾರದ ಕ್ರಮಗಳ ಜೊತೆ ಇದ್ದೇವೆ ಎಂದು ನೈತಿಕ ಬೆಂಬಲವನ್ನು ಘೋಷಿಸುತ್ತದೆ. ಭಾರತವು ಪಾಕಿಸ್ತಾನದ ಮೇಲೆ ಏರ್ ಸ್ಟ್ರೈಕ್ ನಡೆಸಿದಾಗ ಖುದ್ದು ರಾಹುಲ್ ಗಾಂಧಿ ಮತ್ತು ಎಐಸಿಸಿ ಟ್ವೀಟ್ ಮಾಡಿ &#8220;ಭಾರತದ ಸೈನಿಕರ ಸಾಹಸ&#8221;ವನ್ನು ಪ್ರಶಂಸಿದ್ದಲ್ಲದೇ ಸೈನಿಕರ ಜೊತೆ ನಾವಿದ್ದೇವೆ ಎಂದು ಸಾರಿತ್ತು. ಆ ಬಳಿಕ ಎದ್ದ ಕೆಲವು ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಉತ್ತರ ಕೊಡಲು ಸಾಧ್ಯವಾಗದೇ ಇದ್ದಾಗ ಏರ್ ಸ್ಟ್ರೈಕ್ ಗೆ ಸಾಕ್ಷ್ಯ ಕೊಡಿ ಎಂದು ಕೇಳಲಾಯಿತು. ಸರ್ಕಾರದ ಕೆಲಸವನ್ನು ಪರಿಶೀಲಿಸುವುದೇ ವಿರೋಧ ಪಕ್ಷದ ಪ್ರಥಮ ಕೆಲಸವಾದ್ದರಿಂದ ಅದು ಸರಿಯಾಗಿಯೇ ಮಾಡಿದೆ.&nbsp;</p>



<figure class="wp-block-image size-full"><img fetchpriority="high" decoding="async" width="686" height="386" src="https://peepalmedia.com/wp-content/uploads/2023/11/hq720.jpg" alt="" class="wp-image-31685" srcset="https://peepalmedia.com/wp-content/uploads/2023/11/hq720.jpg 686w, https://peepalmedia.com/wp-content/uploads/2023/11/hq720-300x169.jpg 300w, https://peepalmedia.com/wp-content/uploads/2023/11/hq720-150x84.jpg 150w" sizes="(max-width: 686px) 100vw, 686px" /><figcaption class="wp-element-caption"><strong> ಯಾಯಿರ್ ಲ್ಯಾಪಿಡ್  </strong></figcaption></figure>



<p class="wp-block-paragraph">ಈಗ ಇಸ್ರೇಲ್ ವಿಷಯಕ್ಕೆ ಬರೋಣ. ಇಸ್ರೇಲ್ ನ ಅಧಿಕೃತ ಪ್ರತಿಪಕ್ಷದ ನಾಯಕನ ಹೆಸರು ಯಾಯಿರ್ ಲ್ಯಾಪಿಡ್ (Yair Lapid). ಎಲ್ಲಾ ವಿರೋಧ ಪಕ್ಷಗಳ ಸಂಪ್ರದಾಯದಂತೆ ಯುದ್ಧದ ವಿಷಯಾಧರಿತವಾಗಿ ಬೆಂಬಲ ಸೂಚಿಸಿದ್ದಾರೆ. ಈ ಮಧ್ಯೆ ಇಸ್ರೇಲ್ ಪ್ರಧಾನಿ ನೇತಾನ್ಯಾಹು ಒಂದು ಕುತಂತ್ರಿ ಜಾಲವನ್ನು ಹೆಣೆದರು. ಅದೇನೆಂದರೆ, ಪ್ರತಿಪಕ್ಷಗಳನ್ನು ಸೇರಿಸಿಕೊಂಡು ಒಂದು &#8216;ವಾರ್ ಕ್ಯಾಬಿನೆಟ್&#8217; ರಚಿಸೋದು. ಅಂದರೆ &#8216;ಯುದ್ಧಕ್ಕಾಗಿಯೇ ಪ್ರತ್ಯೇಕ ಸಚಿವ ಸಂಪುಟ&#8217; ಎಂದರ್ಥ. ಈ ವಾರ್ ಕ್ಯಾಬಿನೆಟ್ ನಲ್ಲಿ ವಿರೋಧ ಪಕ್ಷದ ನಾಯಕನನ್ನೂ ಸೇರಿಸಲು ತಯಾರಿ ನಡೆಸಿದ್ದರು. ವಿರೋಧ ಪಕ್ಷದ ನಾಯಕ ಯಾಯಿರ್ ಲ್ಯಾಪಿಡ್ ಜೊತೆ ಮಾತುಕತೆ ನಡೆಸಿದ್ದ ನೇತಾನ್ಯಾಹು ಅದನ್ನೇ ಬಳಸಿಕೊಂಡು &#8220;ವಿರೋಧ ಪಕ್ಷದ ನಾಯಕರು ನಮ್ಮ ವಾರ್ ಕ್ಯಾಬಿನೆಟ್ ಸೇರಲು ಒಪ್ಪಿದ್ದಾರೆ&#8221; ಎಂದು ಮಾಧ್ಯಮಗಳಲ್ಲಿ ಬರುವಂತೆ ಮಾಡಿದರು. ವಾಸ್ತವವಾಗಿ ವಿರೋಧ ಪಕ್ಷದ ನಾಯಕರು ವಾರ್ ಕ್ಯಾಬಿನೆಟ್ ಅನ್ನು ಸೇರಲು ಈವರೆಗೂ ನಿರ್ಧರಿಸಿಲ್ಲ.&nbsp;</p>



<p class="wp-block-paragraph">ಈ ಬಗ್ಗೆ ನವೆಂಬರ್ 07 ರಂದು ಮಾತನಾಡಿರುವ ವಿಪಕ್ಷ ನಾಯಕ ಲ್ಯಾಪಿಡ್ &#8220;ನಾನು ಬೆಂಜಮಿನ್ ನೇತಾನ್ಯಾಹು ನೇತೃತ್ವದ ಯಾವುದೇ ಕ್ಯಾಬಿನೆಟ್ ಸೇರಲು ಬಯಸುವುದಿಲ್ಲ. ಈಗಿರುವ ಸರ್ಕಾರದ ಕ್ಯಾಬಿನೆಟ್ ಜೊತೆಗೆ ಇನ್ನೊಂದು ವಾರ್ ಕ್ಯಾಬಿನೆಟ್ ಸೃಷ್ಟಿಸುವುದರಿಂದ ಗೊಂದಲ ಸೃಷ್ಟಿಯಾಗುತ್ತದೆ. ಇದರಿಂದ ಎರಡು ಕ್ಯಾಬಿನೆಟ್ ಗಳ ಮಧ್ಯೆ ಘರ್ಷಣೆ ಆಗಬಹುದು&#8221; ಎಂದಿದ್ದಾರೆ.&nbsp;</p>



<figure class="wp-block-image size-full is-resized"><img decoding="async" width="770" height="513" src="https://peepalmedia.com/wp-content/uploads/2023/11/c18233cdfb604a0aba85ad2aef582d72_18.webp" alt="" class="wp-image-31687" style="width:698px;height:auto" srcset="https://peepalmedia.com/wp-content/uploads/2023/11/c18233cdfb604a0aba85ad2aef582d72_18.webp 770w, https://peepalmedia.com/wp-content/uploads/2023/11/c18233cdfb604a0aba85ad2aef582d72_18-300x200.webp 300w, https://peepalmedia.com/wp-content/uploads/2023/11/c18233cdfb604a0aba85ad2aef582d72_18-768x512.webp 768w, https://peepalmedia.com/wp-content/uploads/2023/11/c18233cdfb604a0aba85ad2aef582d72_18-150x100.webp 150w, https://peepalmedia.com/wp-content/uploads/2023/11/c18233cdfb604a0aba85ad2aef582d72_18-696x464.webp 696w" sizes="(max-width: 770px) 100vw, 770px" /><figcaption class="wp-element-caption"><strong>ಇಸ್ರೇಲ್  ಪ್ರಧಾನಿ ಬೆಂಜಮಿನ್ ನೇತನ್ಯಾಹು ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ</strong></figcaption></figure>



<p class="wp-block-paragraph">ವಿರೋಧ ಪಕ್ಷದ ನಾಯಕ ಯಾಯಿರ್ ಲ್ಯಾಪಿಡ್ ಇಷ್ಟೇ ಹೇಳಿ ಸುಮ್ಮನೆ ಕುಳಿತಿಲ್ಲ. ಪ್ರಧಾನಿ ಬೆಂಜಮಿನ್ ನೇತನ್ಯಾಹು ಉಗ್ರಗಾಮಿಗಳ ಜೊತೆಯೇ ಇದ್ದಾರೆ ಎಂದು ಈ ಯುದ್ಧಕಾಲದಲ್ಲಿ ಕಟು ಟೀಕೆ ಮಾಡಿದ್ದಾರೆ. &#8220;ಬೆಂಜಮಿನ್ ನೇತಾನ್ಯಾಹು ಉಗ್ರಗಾಮಿಗಳ ವಿರುದ್ದ ಸಮರ ಹೂಡಿದ್ದೇನೆ ಅನ್ನುತ್ತಾರೆ. ವಾಸ್ತವವಾಗಿ ಅವರ ಸುತ್ತಮುತ್ತಲೂ ಉಗ್ರರೇ ತುಂಬಿದ್ದಾರೆ. ಅವರು ಉಗ್ರರಿಂದಲೇ ನಿರ್ಬಂಧಿಸಲ್ಪಟ್ಟಿದ್ದಾರೆ&#8221; ಎಂದು ಇಸ್ರೇಲ್ ಸರ್ಕಾರದ ಸಚಿವರನ್ನು ಉಗ್ರರಿಗೆ ಹೋಲಿಸಿ ಕಟುವಾದ ಟೀಕೆ ಮಾಡಿದ್ದಾರೆ.&nbsp;</p>



<p class="wp-block-paragraph">ಹಿಂದುತ್ವವಾದಿಗಳು ಕಾಂಗ್ರೆಸ್ ಅನ್ನು ಟೀಕಿಸಲು ಇಸ್ರೇಲ್ ವಿರೋಧ ಪಕ್ಷದ ಸುಳ್ಳು ಉದಾಹರಣೆ ನೀಡಿದ್ದಾರೆ. ಇಸ್ರೇಲ್ ವಿರೋಧ ಪಕ್ಷವು ಭಾರತದ ವಿರೋಧ ಪಕ್ಷಕ್ಕಿಂತ ಹೆಚ್ಚು ಸಕ್ರಿಯವಾಗಿದ್ದುಕೊಂಡು ಯುದ್ಧದ ಕ್ರಮಗಳನ್ನು ಪ್ರಶ್ನಿಸುತ್ತಿದೆ.</p>



<p class="wp-block-paragraph"><strong>ನವೀನ್‌ ಸೂರಿಂಜೆ</strong></p>



<p class="wp-block-paragraph">ಪತ್ರಕರ್ತರು</p>



<p class="wp-block-paragraph"><strong><sub>ಇದನ್ನೂ ಓದಿ-</sub></strong><a href="https://peepalmedia.com/fake-news/" data-type="post" data-id="29920"><sub>ಸುಳ್ಳು ಸುದ್ದಿಗಳ ಮಹಾಸಾಗರ</sub></a></p>
]]></content:encoded>
					
		
		
			</item>
		<item>
		<title>ಬ್ರಾಹ್ಮಣರ ರಕ್ಷಣೆಗಾಗಿ ಹಿಂದೂ ಮುಸ್ಲಿಂ ದ್ವೇಷ ಮತ್ತು ಸೌಹಾರ್ದತೆಯನ್ನು ಏಕಕಾಲದಲ್ಲಿ ಬಳಸುವ ಹಿಂದುತ್ವ ! </title>
		<link>https://peepalmedia.com/hinduism-simultaneously-uses-hindu-muslim-hatred/</link>
		
		<dc:creator><![CDATA[Naveen Soorinje]]></dc:creator>
		<pubDate>Sat, 04 Nov 2023 05:02:25 +0000</pubDate>
				<category><![CDATA[ಧರ್ಮ- ಸಂಸ್ಕೃತಿ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=31119</guid>

					<description><![CDATA[ಅರ್ಚಕರನ್ನು ಹುಲಿ ಉಗುರು ಸಂಗ್ರಹ ಸಂಬಂಧ ಬಂಧಿಸಿದಾಗ ನವಿಲು ಗರಿ ಬಳಕೆ ಮಾಡುವ ದರ್ಗಾದ ಇಮಾಮ್ ರನ್ನು ಯಾಕೆ ಬಂಧಿಸಲ್ಲ ಎಂದು ಕೇಳುವ ಅರಗ ಜ್ಞಾನೇಂದ್ರರು, ಬ್ರಾಹ್ಮಣರನ್ನು ಬಂಧಿಸಬಾರದು ಎನ್ನುವುದಕ್ಕೆ ಹಣಗೆರೆಯ ದರ್ಗಾದ ಸೌಹಾರ್ದತೆಯನ್ನು ಗುರಾಣಿಯಾಗಿ ಬಳಸುತ್ತಾರೆ&#8211; ನವೀನ್ ಸೂರಿಂಜೆ ಹುಲಿ ಉಗುರು ಬಳಕೆ ಮತ್ತು&#160; ಮಾರಾಟ ಮಾಡುವವರನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಏಕಾಏಕಿ ಬಂಧಿಸುವುದನ್ನು ವಿರೋಧಿಸಿದ್ದ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ, ಅಲ್ಲೂ ಹಿಂದೂ ಮುಸ್ಲಿಂ ದ್ವೇಷವನ್ನು ಮುಂದೆ ತಂದಿದ್ದರು. &#8220;ಮುಸ್ಲೀಮರ ದರ್ಗಾದಲ್ಲಿ ಇಮಾಮ್ [&#8230;]]]></description>
										<content:encoded><![CDATA[
<p class="has-black-color has-text-color has-background wp-block-paragraph" style="background-color:#abb7c247"><strong>ಅರ್ಚಕರನ್ನು ಹುಲಿ ಉಗುರು ಸಂಗ್ರಹ ಸಂಬಂಧ ಬಂಧಿಸಿದಾಗ ನವಿಲು ಗರಿ ಬಳಕೆ ಮಾಡುವ ದರ್ಗಾದ ಇಮಾಮ್ ರನ್ನು ಯಾಕೆ ಬಂಧಿಸಲ್ಲ ಎಂದು ಕೇಳುವ ಅರಗ ಜ್ಞಾನೇಂದ್ರರು, ಬ್ರಾಹ್ಮಣರನ್ನು ಬಂಧಿಸಬಾರದು ಎನ್ನುವುದಕ್ಕೆ ಹಣಗೆರೆಯ ದರ್ಗಾದ ಸೌಹಾರ್ದತೆಯನ್ನು ಗುರಾಣಿಯಾಗಿ ಬಳಸುತ್ತಾರೆ</strong>&#8211; <strong><mark style="background-color:rgba(0, 0, 0, 0)" class="has-inline-color has-vivid-red-color">ನವೀನ್ ಸೂರಿಂಜೆ</mark></strong></p>



<p class="wp-block-paragraph">ಹುಲಿ ಉಗುರು ಬಳಕೆ ಮತ್ತು&nbsp; ಮಾರಾಟ ಮಾಡುವವರನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಏಕಾಏಕಿ ಬಂಧಿಸುವುದನ್ನು ವಿರೋಧಿಸಿದ್ದ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ, ಅಲ್ಲೂ ಹಿಂದೂ ಮುಸ್ಲಿಂ ದ್ವೇಷವನ್ನು ಮುಂದೆ ತಂದಿದ್ದರು. &#8220;ಮುಸ್ಲೀಮರ ದರ್ಗಾದಲ್ಲಿ ಇಮಾಮ್ ಗಳು ಆಶೀರ್ವಾದ ಮಾಡಲು ನವಿಲು ಗರಿ ಬಳಸುತ್ತಾರೆ. ಅವರನ್ಯಾಕೆ ಬಂಧಿಸುವುದಿಲ್ಲ?&#8221; ಎಂದು ಪ್ರಶ್ನಿಸಿದ್ದರು.</p>



<p class="wp-block-paragraph">ಚಿಕ್ಕಮಗಳೂರಿನ ಖಾಂಡ್ಯ ಗ್ರಾಮದ ಮಾರ್ಕಂಡೇಶ್ವರ ದೇವಾಲಯದ ಅರ್ಚಕರಾದ ಕೃಷ್ಣಾನಂದ ಹೊಳ್ಳ, ನಾಗೇಂದ್ರ ಜೋಯಿಸ್ ಎಂಬವರಿಂದ ಹುಲಿ ಉಗುರಿನ ಮೂರು ಲಾಕೆಟ್ ವಶಕ್ಕೆ ಪಡೆದು ಬಂಧಿಸಿದ ಸಂದರ್ಭದಲ್ಲಿ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರರು ಇಮಾಮ್ ಗಳು ಮತ್ತು ದರ್ಗಾದ ನವಿಲು ಗರಿಯ ಚರ್ಚೆಯನ್ನು ಮುನ್ನಲೆಗೆ ತಂದಿದ್ದರು.</p>



<figure class="wp-block-image size-full"><img decoding="async" width="738" height="415" src="https://peepalmedia.com/wp-content/uploads/2023/11/images-2023-10-27T113037.161.jpeg" alt="" class="wp-image-31144" srcset="https://peepalmedia.com/wp-content/uploads/2023/11/images-2023-10-27T113037.161.jpeg 738w, https://peepalmedia.com/wp-content/uploads/2023/11/images-2023-10-27T113037.161-300x169.jpeg 300w, https://peepalmedia.com/wp-content/uploads/2023/11/images-2023-10-27T113037.161-150x84.jpeg 150w, https://peepalmedia.com/wp-content/uploads/2023/11/images-2023-10-27T113037.161-696x391.jpeg 696w" sizes="(max-width: 738px) 100vw, 738px" /></figure>



<p class="wp-block-paragraph">ಅಕ್ಟೋಬರ್ 01 ಬುಧವಾರದಂದು ತೀರ್ಥಹಳ್ಳಿಯ ಬಸವನಗದ್ದೆಯ ಬ್ರಾಹ್ಮಣ ಕುಟುಂಬದ ಪ್ರಸನ್ನ ಅವರ ಮನೆಯಲ್ಲಿ ಜಿಂಕೆ ಮತ್ತು ಕಾಡುಕೋಣದ ಕೊಂಬುಗಳಿದ್ದು, ಅದರ ಜೊತೆಗೆ ಹಲವಾರು ಗಂಧದ ಕೊರಡುಗಳಿದ್ದವು. ಇವೆಲ್ಲವನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡು ಮನೆಯ ಸದಸ್ಯರನ್ನು ಬಂಧಿಸಲು ಮುಂದಾಗಿದ್ದರು. ತಕ್ಷಣ ಸ್ಥಳಕ್ಕೆ ಬಂದ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಅರಣ್ಯಾಧಿಕಾರಿಗಳ ಈ ನಡೆ ಖಂಡಿಸಿ, ಗ್ರಾಮಸ್ಥರೊಂದಿಗೆ ಪ್ರತಿಭಟಿಸಿದರು. ಈ ವೇಳೆ ಅಧಿಕಾರಿಗಳ ಜೊತೆ ಮಾತನಾಡಿದ ಅರಗ ಜ್ಞಾನೇಂದ್ರ &#8220;ಜಿಂಕೆ ಕೊಂಬುಗಳು ಇವರ ಅಜ್ಜನ ಕಾಲದ್ದು. ಜಿಂಕೆ ಕೊಂದು ಕೊಂಬು ತಂದಿದ್ದಲ್ಲ. ಪ್ರಾಯವಾದ ಜಿಂಕೆಗಳು ತಮ್ಮ ಕೊಂಬನ್ನು ತಾವೇ ಉದುರಿಸುತ್ತವೆ. ಅದನ್ನು ಹೆಕ್ಕಿ ತಂದಿದ್ದು. ಇನ್ನು, ಗಂಧದ ಕೊರಡು ಮಾರಾಟಕ್ಕಾಗಿ ತಂದಿರುವುದಲ್ಲ. ತೀರ್ಥಹಳ್ಳಿಯ ಹಣಗೆರೆಯಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ದರ್ಗಾ ಇದೆ. ಆ ದರ್ಗಾಕ್ಕೆ ಗಂಧ ಈ ಬ್ರಾಹ್ಮಣರ ಮನೆಯಿಂದಲೇ ಹೋಗಬೇಕು. ಅದಕ್ಕಾಗಿ ಗಂಧದ ಕೊರಡು ಶೇಖರಿಸಿಡಲಾಗಿದೆ&#8221; ಎಂದರು.&nbsp;</p>



<p class="wp-block-paragraph">ಅರ್ಚಕರನ್ನು ಹುಲಿ ಉಗುರು ಸಂಗ್ರಹ ಸಂಬಂಧ ಬಂಧಿಸಿದಾಗ ನವಿಲು ಗರಿ ಬಳಕೆ ಮಾಡುವ ದರ್ಗಾದ ಇಮಾಮ್ ರನ್ನು ಯಾಕೆ ಬಂಧಿಸಲ್ಲ ಎಂದು ಕೇಳುವ ಅರಗ ಜ್ಞಾನೇಂದ್ರರು, ಬ್ರಾಹ್ಮಣರನ್ನು ಬಂಧಿಸಬಾರದು ಎನ್ನುವುದಕ್ಕೆ ಹಣಗೆರೆಯ ದರ್ಗಾದ ಸೌಹಾರ್ದತೆಯನ್ನು ಗುರಾಣಿಯಾಗಿ ಬಳಸುತ್ತಾರೆ.&nbsp;</p>



<p class="wp-block-paragraph">ತೀರ್ಥಹಳ್ಳಿ ತಾಲೂಕು ಹಜರತ್ ಸೈಯ್ಯದ್ ಸಾದತ್ ಸ್ವಾಮಿ ದರ್ಗಾ, ಚೌಡೇಶ್ವರಿ ದೇವಸ್ಥಾನ ಹಣಗೆರೆ ಕಟ್ಟೆಯಲ್ಲಿ ಗಂಧ ಉತ್ಸವ ಮತ್ತು ಉರುಸ್ ಉತ್ಸವ ಪ್ರತೀ ವರ್ಷ ನಡೆಯುತ್ತಿದೆ. ಅಂದು ಸಂಜೆ ಬಸವನಗದ್ದೆ ಬಿ.ಪಿ. ತಿಮ್ಮಪ್ಪಯ್ಯನವರ ಮನೆಯಲ್ಲಿ ತೇಯ್ದ ಶ್ರೀಗಂಧ ಪ್ರಸಾದ ತಂದ ಬಳಿಕ ಸಂಜೆ 7 ಗಂಟೆಗೆ ನಮಾಜ್ ನಂತರ ಗಂಧ ಏರಿಸಲ್ಪಡುವ ಮೂಲಕ ಉರೂಸ್ ಆರಂಭಗೊಳ್ಳುತ್ತದೆ. ಇದು ಈ ನೆಲದ ನಿಜವಾದ ಸಂಸ್ಕೃತಿ. ಸೈಯ್ಯದ್ ಸಾದತ್ ಮತ್ತು ಚೌಡೇಶ್ವರಿ ಒಟ್ಟಿಗಿದ್ದು ಆರಾಧನೆಗೊಳ ಪಡುವುದೇ ನಮ್ಮ ನೆಲದ ಸೌಂದರ್ಯ. ಈ ರೀತಿಯ ಸೌಹಾರ್ದತೆಯನ್ನು ಹಾಳುಗೆಡಹುವ ಮೂಲಕವೇ ರಾಜಕಾರಣ ಮಾಡುವವರು ತಮ್ಮ ರಕ್ಷಣೆಗಾಗಿ ಮಾತ್ರ ಅದೇ ಸೌಹಾರ್ದತೆಯನ್ನು ಬಳಸಿಕೊಳ್ಳುತ್ತಾರೆ.&nbsp;</p>



<p class="wp-block-paragraph">ಕೋಮು ರಾಜಕಾರಣಕ್ಕಾಗಿ ಅನಾವಶ್ಯಕವಾಗಿ ದರ್ಗಾವನ್ನೋ, ಮಸೀದಿಯನ್ನೋ, ಮಂದಿರ, ಚರ್ಚ್ ಗಳನ್ನೋ ಎಳೆದು ತರುವುದು ಯಾಕೆ ? ಯಾವುದೋ ಅರ್ಚಕನನ್ನು ಹುಲಿ ಉಗುರು ಪ್ರಕರಣಕ್ಕೆ ಬಂಧಿಸಿದರೆ, ಆ ಆರ್ಚಕನಿಗೆ ಸಂಬಂಧವೇ ಇಲ್ಲದ ದರ್ಗಾದ ಇಮಾಮ್ ರನ್ನು ಯಾಕೆ ಬಂಧಿಸಬೇಕು ? ಸುಖಾಸುಮ್ಮನೆ ರಾಜಕಾರಣದಲ್ಲಿ ಮುಸ್ಲೀಮರನ್ನು ಎಳೆದು ತರುವ ಚಾಳಿಯಿದು. ಆದರೆ ತಮ್ಮನ್ನು ರಕ್ಷಿಸಿಕೊಳ್ಳಲು ಅದೇ ಮುಸ್ಲೀಮರ ಭಾವೈಕ್ಯತಾ ಕೇಂದ್ರಗಳನ್ನು ಹಿಂದುತ್ವವಾದಿಗಳು ಬಳಸಿಕೊಳ್ಳುತ್ತಾರೆ. ಬ್ರಾಹ್ಮಣರು ಮಾತ್ರವಲ್ಲ, ನಾವು ನೀವು ಎಲ್ಲರೂ ಬದುಕಿ ಕೊಳ್ಳಲು, ದೌರ್ಜನ್ಯಗಳಿಂದ ಬಚಾವಾಗಲು ಸೌಹಾರ್ದತೆಯೊಂದೇ ದಾರಿ ಎಂಬುದನ್ನು ಹಿಂದುತ್ವವಾದಿಗಳು ಅರ್ಥ ಮಾಡಿಕೊಳ್ಳಬೇಕು.</p>



<p class="wp-block-paragraph"></p>



<p class="wp-block-paragraph"><strong>ನವೀನ್‌ ಸೂರಿಂಜೆ</strong></p>



<p class="wp-block-paragraph">ಪತ್ರಕರ್ತರು</p>



<p class="wp-block-paragraph"><strong>ಇದನ್ನೂ ಓದಿ-</strong> <a href="https://peepalmedia.com/who-is-responsible-for-communal-violence-in-shimoga/" data-type="post" data-id="29024">ಶಿವಮೊಗ್ಗದ ಕೋಮುಹಿಂಸೆಗೆ ಕಾರಣ ಯಾರು? ಸೌಹಾರ್ದತೆ ಕದಡಲು&nbsp; ಕಾಯುತ್ತಿದ್ದಾರೆ ಮತಾಂಧರು !</a></p>
]]></content:encoded>
					
		
		
			</item>
		<item>
		<title>ನಿನ್ನ ಬಾಯಿಗೆ ದನ ಮುಟ್ಟಲಿ’ – ದನ ಅಪ್ಪಿಕೋ ದಿನದ ಬಗ್ಗೆ ಕರಾವಳಿ ಹಿಂದೂಗಳ ಆಕ್ಷೇಪ</title>
		<link>https://peepalmedia.com/cow-hug-day-hindusof-costal-karnataka-object/</link>
		
		<dc:creator><![CDATA[Naveen Soorinje]]></dc:creator>
		<pubDate>Thu, 09 Feb 2023 08:09:24 +0000</pubDate>
				<category><![CDATA[ಧರ್ಮ- ಸಂಸ್ಕೃತಿ]]></category>
		<guid isPermaLink="false">https://peepalmedia.com/?p=19650</guid>

					<description><![CDATA[ಫೆಬ್ರವರಿ 14 ರ ಪ್ರೇಮಿಗಳ ದಿನವನ್ನು ‘ದನ ಅಪ್ಪಿಕೋ’ ದಿನವನ್ನಾಗಿ ಆಚರಿಸುವಂತೆ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಇದು ಹಾಸ್ಯಾಸ್ಪದ ಮಾತ್ರವಲ್ಲ, ಹಿಂದೂಗಳ ನಂಬಿಕೆಗೆ ವ್ಯತಿರಿಕ್ತವಾಗಿದೆ. ಕರಾವಳಿಯ ಹಿಂದೂಗಳ ನಂಬಿಕೆಯ ಪ್ರಕಾರ ದನ ಶುಭಸೂಚಕವಲ್ಲ ! ‘ನಿನ್ನ ಬಾಯಿಗು ಪೆತ್ತ ಮುಟ್ಟರೆ’ ಎಂಬ ಬೈಗುಳ ಗೊತ್ತಿಲ್ಲದ ಕರಾವಳಿಯ ಜನ ಇರಲಿಕ್ಕಿಲ್ಲ. ಪರಸ್ಪರ ಜಗಳವಾಡುವ ಸಂದರ್ಭದಲ್ಲಿ ಯಾರಾದರೂ ಮಿತಿಮಿರಿ ಮಾತನಾಡಿದರೆ ‘ನಿನ್ನ ಬಾಯಿಗೆ ದನ ಮುಟ್ಟಲಿ’ ಎಂದು ಬೈಯುತ್ತಾರೆ. ಅಂದರೆ ದನ ಮನುಷ್ಯನ ಬಾಯಿಯನ್ನು ಮುಟ್ಟಿದರೆ ಮನುಷ್ಯನ ನಾಲಗೆ [&#8230;]]]></description>
										<content:encoded><![CDATA[
<p class="wp-block-paragraph">ಫೆಬ್ರವರಿ 14 ರ ಪ್ರೇಮಿಗಳ ದಿನವನ್ನು ‘ದನ ಅಪ್ಪಿಕೋ’ ದಿನವನ್ನಾಗಿ ಆಚರಿಸುವಂತೆ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಇದು ಹಾಸ್ಯಾಸ್ಪದ ಮಾತ್ರವಲ್ಲ, ಹಿಂದೂಗಳ ನಂಬಿಕೆಗೆ ವ್ಯತಿರಿಕ್ತವಾಗಿದೆ. ಕರಾವಳಿಯ ಹಿಂದೂಗಳ ನಂಬಿಕೆಯ ಪ್ರಕಾರ ದನ ಶುಭಸೂಚಕವಲ್ಲ !</p>



<p class="wp-block-paragraph">‘ನಿನ್ನ ಬಾಯಿಗು ಪೆತ್ತ ಮುಟ್ಟರೆ’ ಎಂಬ ಬೈಗುಳ ಗೊತ್ತಿಲ್ಲದ ಕರಾವಳಿಯ ಜನ ಇರಲಿಕ್ಕಿಲ್ಲ. ಪರಸ್ಪರ ಜಗಳವಾಡುವ ಸಂದರ್ಭದಲ್ಲಿ ಯಾರಾದರೂ ಮಿತಿಮಿರಿ ಮಾತನಾಡಿದರೆ ‘ನಿನ್ನ ಬಾಯಿಗೆ ದನ ಮುಟ್ಟಲಿ’ ಎಂದು ಬೈಯುತ್ತಾರೆ. ಅಂದರೆ ದನ ಮನುಷ್ಯನ ಬಾಯಿಯನ್ನು ಮುಟ್ಟಿದರೆ ಮನುಷ್ಯನ ನಾಲಗೆ ಹೊರಳಾಡಲ್ಲ ಅಥವಾ ಮಾತು ನಿಂತು ಹೋಗುತ್ತದೆ ಎಂಬುದು ತುಳುವರ ನಂಬಿಕೆ.</p>



<p class="wp-block-paragraph">ಈಗಲೂ ಕರಾವಳಿಗರು ಪುಟ್ಟ ಮಗುವನ್ನು ದನ ಮುಟ್ಟಲು ಬಿಡುವುದಿಲ್ಲ. ದನವನ್ನು ಅಪ್ಪಿಕೊಳ್ಳುವುದು ಬಿಡಿ, ಇನ್ನೂ ಮಾತು ಬಾರದ ಪುಟ್ಟ ಮಕ್ಕಳು ದನವನ್ನು ಮುಟ್ಟಿದರೆ ಮಾತೇ ಬರುವುದಿಲ್ಲ ಎಂಬ ನಂಬಿಕೆ ತುಳುವರಲ್ಲಿದೆ. ಇವೆಲ್ಲಾ ಮೂಢನಂಬಿಕೆಗಳೇ ಆಗಿರಬಹುದು. ಮೂಢನಂಬಿಕೆಗಳೇ ಧರ್ಮದ ಮೂಲವಾಗಿರುವಾಗ ಅವರ ಧರ್ಮದ ಮೂಲವನ್ನು ಅವರೇ ಮುರಿಯುವುದು ಎಷ್ಟು ಸರಿ ? ಒಂದೋ ದನವನ್ನು ದನವನ್ನಾಗಿ ನೋಡಿ. ದನವನ್ನು ಹಿಂದೂ ಧರ್ಮವಾಗಿ ನೋಡಿದಾಗ ಕರಾವಳಿಯ ಹಿಂದೂ ಧರ್ಮಿಯರ ಈ ಭಾವನೆಗೂ ಬೆಲೆ ಕೊಡಬೇಕಾಗುತ್ತದೆಯಲ್ಲವೇ ?</p>



<p class="wp-block-paragraph">ಸಾವಿನ ಬಳಿಕ ನಡೆಯುವ ಉತ್ತರ ಕ್ರಿಯೆಯಲ್ಲಿ ‘ಕಕ್ಕೆಗು ನುಪ್ಪು ದೀಪುನಿ’ ಎಂಬ ಪ್ರಮುಖ ನಿಯಮವಿದೆ. ಉತ್ತರಕ್ರಿಯೆಯ ದಿನ ಮೃತನ ಇಷ್ಟದ ಆಹಾರವನ್ನು ಎಲೆಯಲ್ಲಿಟ್ಟು ಕಾಗೆಗೆ ಅರ್ಪಿಸಲಾಗುತ್ತದೆ. ಕಾಗೆ ಬಂದು ತಿಂದ ಬಳಿಕವೇ ಉತ್ತರಕ್ರಿಯೆಯ ಊಟವನ್ನು ಜನರು ಮಾಡಬಹುದು. ಒಂದು ವೇಳೆ ಕಾಗೆ ಬಂದು ತಿನ್ನದೇ ಇದ್ದರೆ ಏನು ಮಾಡಬೇಕು ? ಆಗ ಊಟ ಬಡಿಸಿದ ಎಲೆಯನ್ನು ದನಕ್ಕೆ ತಿನ್ನಿಸಿ ಮುಂದಿನ ಕಾರ್ಯಕ್ರಮ ನೆರವೇರಿಸುತ್ತಾರೆ. ಕರಾವಳಿಯಲ್ಲಿ ಕಾಗೆ ಹೇಗೋ ದನವೂ ಹಾಗೆಯೇ !</p>



<p class="wp-block-paragraph">ಕರಾವಳಿಯಲ್ಲಿ ದನ ದೇವರಲ್ಲ. ದನಕ್ಕೆ ಪ್ರತ್ಯೇಕ ಪೂಜೆಯಾಗಲೀ, ಜನಪದೀಯ ಪ್ರಾಮುಖ್ಯತೆಯಾಗಲೀ ಇಲ್ಲ. ದೈವದ ನುಡಿ/ಮದಿಪು/ಬೀರ/ಪಾಡ್ದನದಲ್ಲಿ ದನವನ್ನು ಕರೆಯುವ ಅಥವಾ &#8216;ಮಾನಾವುನ&#8217; ಪದಗಳು ಇಲ್ಲ. ದೈವದ ಪಾಡ್ದನ ಮತ್ತು ನುಡಿ ಮತ್ತು ಮದಿಪು ಪ್ರಕಾರ ದನವನ್ನು ಕಾಯುವುದು ನಮ್ಮ ದೈವಗಳು.</p>



<p class="wp-block-paragraph">“ಎನ್ನ ಸಂಸಾರ,<br>ಪೂತ ಇಸಲ್ ತೋಜಾಯಿನಕ್ಲೆಗ್ ಪೂತ ರಾಶಿ ತೋಜಾಯೇ<br>ನೀರ್ ಕೊರ್ನಲ್ಪ ಪೇರ್ ಉರ್ಕಾಯೇ<br>ಕೈ ಮುಗಿನಲ್ಪ ತಿಗಲೆ ಕೊರ್ದು ಕಾತೆ<br>ಪೆತ್ತ- ಕೈ ಕಂಜಿನ್ ಕಣ್ ದೀದ್ ಕಾತು ಕೊರ್ಯೆ<br>ಬುಲೆ -ಸಲೆನ್ ಯೆರ್ಕಾದು ಕೊರಿಯೇ .<br>ಸಂಸಾರೋಗು ಬರ್ಪಿಂಚಿ ದಶ ದೋಶೋನು<br>ದಶದಿಕ್ಕುಗು ಪಟ್ಟುದು ಕೊರ್ಪಿನಂಚಿನ ಮಾಯೆ ಯಾನ್.<br>ರುಂಡದ ಎಚ್ಚಿಡ್ ರುಂಡ<br>ತರೆತ್ತ ಎಚ್ಚಿಡ್ ತರೆ ದೀಯೊಂದು<br>ಮಾಯೊಡು ಬತ್ತಿನ ಶಕ್ತಿ ಯಾನ್”<br>ಎಂದು ದೈವ ಹೇಳುತ್ತದೆ.<br>‘ಪೆತ್ತ- ಕೈ ಕಂಜಿನ್ ಕಣ್ ದೀದ್ ಕಾತು ಕೊರ್ಯೆ’ ಎಂದರೆ ದನ ಕರುಗಳನ್ನು ಕಣ್ಣಿಟ್ಟು ಕಾವಲಾಗಿ ನೋಡಿಕೊಂಡಿದ್ದೇನೆ. ಮೂಲತಃ ಕರಾವಳಿಯ ದೈವಾರಾಧನೆಯೆಂದರೆ ದನ, ಕರು, ಕೋಣ, ತೋಟ, ಗದ್ದೆಗಳನ್ನು ಕಾಯುವ ದೈವವಷ್ಟೆ. ಇತ್ತೀಚೆಗೆ ಈ ನಂಬಿಕೆ ಇನ್ನಷ್ಟೂ ವಿಸ್ತಾರ ಸ್ವರೂಪ ಪಡೆದುಕೊಂಡಿದೆ. ಇರಲಿ, ಇಲ್ಲಿ ದನಕರುಗಳನ್ನು ದೈವ ಕಾಪಾಡುತ್ತದೆಯೇ ಹೊರತು ದನವು ದೈವದ ಸಮನಲ್ಲ.</p>



<p class="wp-block-paragraph">ಕರಾವಳಿಯ ದೈವವು ಕೋಲದ ಸಂದರ್ಭದಲ್ಲಿ ಎಲ್ಲಾ ದೇವರನ್ನು &#8216;ಕರೆದು ಕೊಂಡಾಡುವ&#8217; ಕ್ರಮವಿದೆ. ಕರಾವಳಿಯಲ್ಲಿ ದನ ದೇವರಾಗಿದ್ದರೆ ಆ ಸಾಲಿನಲ್ಲಿ ದನದ ಉಲ್ಲೇಖವೂ ಇರಬೇಕಿತ್ತು.</p>



<p class="wp-block-paragraph">“ಮಿತ್ತ್ ಸ್ವಾಮಿನ ದರ್ಮೊನು ಪತೊಂಡೆ. ತಿರ್ತ್ ಭೂಮಿದ ಆದಾರೋನು ಪತೊಂಡೆ… ಮಾಗನೆಡ್ ಮಲ್ಲ ಈಸರ ದೇವೆರೆನ ಚಿತ್ತೊನು ಪತೊಂಡೆ …. ಗುತ್ತು ಬರ್ಕೆದಕುಲೆನ್ ಲೆತ್ತು ಕೊಂಡಾಡೊಂಡೆ… ಮಾಗನೆ ದೇವೆರೆನ ಚಿತ್ತ ತೆಲೆಪಾಯೇ. ನಾಗ ಬೆಮ್ಮೆರೆನ ಸಾರಥಿ ಮಲ್ತೊಂಡೆ. ಪಾಡಿ ಬಿತ್ತ್ ಕೊಡಿಪು ಬರ್ಪಾವೆ … ಮಾದಾಯಿ ಏರುನ್ ಬರ್ಪಾವೆ … ಗೆಂಡದ ಬರ್ಸೋನು ಕರ್ಬೋದ ಕೊಡೆ ಆದ್….. ಕಂಚಿದ ಕೊಟೆಗ್ ಕರ್ಬೋದ ಬೇಲಿ ಆದ್… ಮುಲ್ಲುದ ಪುದೆನ್ ಪೂತ ಪುದೆ ಆದ್ ತುಂಬವೆ…<br>ನಂಬಿನ ಸಂಸಾರೋನು ಮಾಯೋಡು ಕಾಪುವೆ …. ಮಾಯೋಡು ಕಾಪುವೆ…. ಮಾಯೋಡು ಕಾಪುವೆ …. ಮಾಯದ ಮದಿಪು ಕೊರ್ಪೆ….”<br>ಇಲ್ಲೆಲ್ಲೂ ದನದ ಉಲ್ಲೇಖವೇ ಬರುವುದಿಲ್ಲ. ದನ ಕೃಷಿಯ ಭಾಗವಾಗಿರುವುದರಿಂದ ಅದನ್ನು ದೈವ ಕಾಯುತ್ತದೆ ಎಂಬ ನಂಬಿಕೆಯಷ್ಟೇ ಇದೆ.</p>



<p class="wp-block-paragraph">ದನವನ್ನು ಕಾಮಧೇನು ಎಂದೂ, ತೆಂಗಿನ ಮರವನ್ನು ಕಲ್ಪವೃಕ್ಷ ಎಂದೂ ಕರೆಯುತ್ತಾರೆ. ಇವೆರಡೂ ಪೂಜನೀಯವಾದರೆ ಇವರೆಡೂ ಕಾಮಧೇನುವೂ, ಕಲ್ಪವೃಕ್ಷವೂ ಆಗಿರುವುದಿಲ್ಲ. ಕಾಮಧೇನುವೂ, ಕಲ್ಪವೃಕ್ಷವೂ ಆಗಬೇಕಾದರೆ ಬದುಕಿದ್ದಾಗಲೂ, ಸತ್ತ ಬಳಿಕವೂ ಅದರ ಒಂದು ಭಾಗವೂ ವ್ಯರ್ಥವಾಗದೇ ಮನುಷ್ಯನ ಬಳಕೆಗೆ ಯೋಗ್ಯವಾಗಿರಬೇಕು. ಬಳಕೆಯ ತೆಂಗಿನ ಮರ ತನ್ನಷ್ಟಕ್ಕೆ ಗೆದ್ದಲು ಹಿಡಿದು ಸಾಯುವುದಕ್ಕೂ ಮೊದಲೇ ಕಡಿದು ಪಕ್ಕಾಸು ಮಾಡಿ ಮನೆ ಕಟ್ಟುತ್ತೇವೆ. ಸಾಯುವ ದಿನಗಳಿಗೂ ಮೊದಲೇ ದನದ ಚರ್ಮ ಸುಲಿದು ದೈವಕ್ಕೆ ಡೋಲು ಸಿದ್ದಪಡಿಸುತ್ತೇವೆ. ಇದು ಕರಾವಳಿಗರು ಕಲ್ಪವೃಕ್ಷವನ್ನೂ, ಕಾಮಧೇನುವನ್ನೂ ಬಳಸುವ ಪರಿ. ಕೃಷಿ ಪ್ರಧಾನ ಬದುಕಿನಲ್ಲಿ ಯಾವುದು ಪೂಜನೀಯವೋ ಅದು ಆದಾಯ ತರುವುದಿಲ್ಲ. ಹಾಗಾಗಿ ಕೃಷಿಕರಿಗೆ ದನ ಪೂಜನೀಯವಲ್ಲ.</p>



<p class="wp-block-paragraph">ಒಟ್ಟಾರೆ, ದನವನ್ನು ಅಪ್ಪಿಕೊಳ್ಳುವುದು ಎನ್ನುವ ಚಿಂತನೆಯೇ ಕರಾವಳಿಯ ಕೃಷಿಕ ಹಿಂದೂಗಳ ನಂಬಿಕೆಗೆ ವಿರುದ್ಧವಾದುದು.</p>



<ul class="wp-block-list">
<li>ನವೀನ್ ಸೂರಿಂಜೆ</li>
</ul>
]]></content:encoded>
					
		
		
			</item>
		<item>
		<title>ಕಾಂತಾರ: ನಾವು ಬಂದದ್ದು ಎಲ್ಲಿಂದ ಎಂಬುದನ್ನು ಮರೆತುಬಿಡುವುದು ದೊಡ್ಡ ಸಮಸ್ಯೆ</title>
		<link>https://peepalmedia.com/kaantaara-navu-bandaddu-ellinda-embudannu-maretubiduvudu-dodda-samasye/</link>
		
		<dc:creator><![CDATA[Naveen Soorinje]]></dc:creator>
		<pubDate>Mon, 03 Oct 2022 06:24:20 +0000</pubDate>
				<category><![CDATA[ವಿಶೇಷ]]></category>
		<category><![CDATA[ಸಿನಿಮಾ]]></category>
		<category><![CDATA[bengalure]]></category>
		<category><![CDATA[cinema]]></category>
		<category><![CDATA[cinema news]]></category>
		<category><![CDATA[flim]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[kannada cinema]]></category>
		<category><![CDATA[Kantara]]></category>
		<category><![CDATA[karnataka]]></category>
		<category><![CDATA[mangalore]]></category>
		<category><![CDATA[movie]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sandalwood]]></category>
		<guid isPermaLink="false">https://peepalmedia.com/?p=8658</guid>

					<description><![CDATA[&#8220;ನಾವು ಬಂದದ್ದು ಎಲ್ಲಿಂದ ಅಂತ ಮರೆತು ಬಿಡುವುದು ನಮ್ಮ ಜನರ ದೊಡ್ಡ ಸಮಸ್ಯೆ&#8221; ಹೆಚ್ಚುಕಮ್ಮಿ ಇದೇ ಅರ್ಥದ ಡೈಲಾಗ್ ಕಾಂತಾರ ಸಿನೇಮಾದಲ್ಲಿ ಬರುತ್ತದೆ. ಈ ದೊಡ್ಡ ಸಮಸ್ಯೆ ಕಾಂತಾರ ಸಿನೇಮಾ ತಂಡದ ಸಮಸ್ಯೆಯೂ ಹೌದು. ಹಾಗಾಗಿಯೇ ಶೂದ್ರ ಮತ್ತು ದಲಿತ ಸಂಸ್ಕೃತಿಯನ್ನು ಬಿಂಬಿಸಬೇಕಾಗಿದ್ದ ಸಿನೇಮಾದ ಹೆಸರಿನ ಮಧ್ಯೆ ವೈದಿಕರ ಓಂ ಅನ್ನು ಎಳೆದು ತರಲಾಗಿದೆ. ಸಾಲದ್ದಕ್ಕೆ &#8220;ದಂತಕತೆ&#8221; ಎಂಬ ಸಬ್ ಟೈಟಲ್ ಕೊಡಲಾಗಿದೆ. ದಂತಕತೆ ಎಂದಾಗ ನಮ್ಮ ಕುಟುಂಬದ ದೈವ ಕೋಲದ ದಂತಕತೆ ನೆನಪಾಯಿತು. ಈ ದಂತಕತೆ [&#8230;]]]></description>
										<content:encoded><![CDATA[
<p class="wp-block-paragraph" style="font-size:20px">&#8220;ನಾವು ಬಂದದ್ದು ಎಲ್ಲಿಂದ ಅಂತ ಮರೆತು ಬಿಡುವುದು ನಮ್ಮ ಜನರ ದೊಡ್ಡ ಸಮಸ್ಯೆ&#8221; ಹೆಚ್ಚುಕಮ್ಮಿ ಇದೇ ಅರ್ಥದ ಡೈಲಾಗ್ ಕಾಂತಾರ ಸಿನೇಮಾದಲ್ಲಿ ಬರುತ್ತದೆ. ಈ ದೊಡ್ಡ ಸಮಸ್ಯೆ ಕಾಂತಾರ ಸಿನೇಮಾ ತಂಡದ ಸಮಸ್ಯೆಯೂ ಹೌದು. ಹಾಗಾಗಿಯೇ ಶೂದ್ರ ಮತ್ತು ದಲಿತ ಸಂಸ್ಕೃತಿಯನ್ನು ಬಿಂಬಿಸಬೇಕಾಗಿದ್ದ ಸಿನೇಮಾದ ಹೆಸರಿನ ಮಧ್ಯೆ ವೈದಿಕರ ಓಂ ಅನ್ನು ಎಳೆದು ತರಲಾಗಿದೆ. ಸಾಲದ್ದಕ್ಕೆ &#8220;ದಂತಕತೆ&#8221; ಎಂಬ ಸಬ್ ಟೈಟಲ್ ಕೊಡಲಾಗಿದೆ. ದಂತಕತೆ ಎಂದಾಗ ನಮ್ಮ ಕುಟುಂಬದ ದೈವ ಕೋಲದ ದಂತಕತೆ ನೆನಪಾಯಿತು. ಈ ದಂತಕತೆ ಯಾರೋ ಹೇಳಿದ್ದಲ್ಲ. ನಾವೇ ನೋಡಿದ್ದು.</p>



<p class="wp-block-paragraph" style="font-size:20px">ನಮ್ಮ ಕುಟುಂಬದ ದೈವಗಳಿಗೆ ಬಹುಶಃ ಮೂರು ವರ್ಷದ ಹಿಂದೆ ಕೋಲ ನೀಡಲಾಯಿತು. ನಾನು, ಕಾವ್ಯ, ಗೆಳೆಯರಾದ ಬೈರಪ್ಪ ಹರೀಶ್ ಕುಮಾರ್, ನಿಕಿತಾ ಹರೀಶ್ ಕೋಲ ನೋಡಲು ಬೆಂಗಳೂರಿನಿಂದ ಮಂಗಳೂರಿನ ನನ್ನ ಕುಟುಂಬದ ಮನೆಗೆ ಹೋಗಿದ್ದೆವು. ರಾತ್ರಿ ಕೋಲ ಶುರುವಾಯಿತು. ಹೊಸದಾಗಿ ನಾವು ಕುಟುಂಬಿಕರು ಸೇರಿ ಕಟ್ಟಿಸಿರುವ ದೈವಸ್ಥಾನದೊಳಗೆ ದೈವ ಪ್ರವೇಶ ಮಾಡಬೇಕಿತ್ತು.</p>



<p class="wp-block-paragraph" style="font-size:20px">ದೈವ ಜೋರು ಕುಣಿದದ್ದೇ ಗುಡಿಯ ಮೇಲೊಮ್ಮೆ ದಿಟ್ಟಿಸಿತು. &#8220;ಗುಡಿಯ ಮೇಲಿನ ಕಳಶ ತೆಗೆಯಬೇಕು&#8221; ಎಂದು ಕುಟುಂಬದ ಹಿರಿಯರಿಗೆ ದೈವ ಆದೇಶ ನೀಡಿತು.</p>



<p class="wp-block-paragraph" style="font-size:20px">&#8220;ದೈವದ ಗುಡಿಯ ಕಳಶ ತೆಗೆದರೆ ಮತ್ತೆ ಶುದ್ದ ಮಾಡಿ ಬ್ರಹ್ಮಕಲಶ ಮಾಡಬೇಕಾಗುತ್ತದೆ. ಹಾಗಾಗಿ ಕಳಸ ತೆಗೆಯದೇ ಗುಡಿಯನ್ನು ಒಪ್ಪಿಸಿಕೊಳ್ಳಬೇಕು&#8221; ಎಂದು ಕುಟುಂಬದ ಹಿರಿಯರು ದೈವವನ್ನು ಪ್ರಾರ್ಥಿಸಿದರು.</p>



<p class="wp-block-paragraph" style="font-size:20px">ಮತ್ತೆ ಉಗ್ರರೂಪ ತಾಳಿ ಕುಣಿದ ದೈವ &#8220;ದೈವಕ್ಕೆಂತ ಕಳಶ? ತೆಗಿಯಿರಿ. ತೆಗೆದ ಬಳಿಕ ದೈವಸಾನ ಶುದ್ದ ಮಾಡೋಕೆ ಬ್ರಾಹ್ಮಣರು ಬರಬೇಕು ಎಂದು ಹೇಳಿದ್ಯಾರು? ನನ್ನ ದೈವದ ಸಾನದ ಒಳಗೆ ಬ್ರಾಹ್ಮಣ ಪ್ರವೇಶ ಮಾಡಿದರೆ ಅವನಿಗೆ ಹುಚ್ಚು ಹಿಡಿಸ್ತೇನೆ. ನನ್ನ ಕುಟುಂಬದ ಬಾವಿಯಿಂದ ನೀರು ತಂದು ಚಿಮುಕಿಸಿದರೆ ನನ್ನ ಸಾನ ಶುದ್ದವಾಗುತ್ತದೆ&#8221; ಎಂದು ದೈವ ಆದೇಶ ನೀಡಿತ್ತು.</p>



<p class="wp-block-paragraph" style="font-size:20px">ಇದು ನಿಜವಾದ ದೈವ ಪರಂಪರೆ. ದೈವಕ್ಕೂ ವೈದಿಕ ಆಚರಣೆ, ಸಂಕೇತಗಳಿಗೂ ಸಂಬಂಧವಿಲ್ಲ.</p>



<p class="wp-block-paragraph" style="font-size:20px">ಸಿನೇಮಾದ ನಿರ್ದೇಶನ ಮಾಡಿರುವ ವೃಷಬ್ ಶೆಟ್ಟಿಯವರು ಕಾಂತಾರ ಸಿನೇಮಾದ ಸಂದರ್ಶನವೊಂದರಲ್ಲಿ ಮಾತನಾಡುತ್ತಾ &#8220;ಕರಾವಳಿ ಪರಶುರಾಮ ಸೃಷ್ಟಿ&#8221; ಎನ್ನುತ್ತಾರೆ! ಇದು ವೈದಿಕರ ಸುಳ್ಳು ಇತಿಹಾಸ. ಪರಶುರಾಮ ಯಾರೆಂಬುದೇ ಕರಾವಳಿಯ ಜನಪದ ಲೋಕಕ್ಕೆ ಗೊತ್ತಿಲ್ಲ. ಕರಾವಳಿಯ ದೈವಾರಾಧನೆ ಪರಂಪರೆಯಲ್ಲಿ ಪರಶುರಾಮ ಬರುವುದೇ ಇಲ್ಲ. ಹಾಗಾದರೆ ತುಳುನಾಡು ಹೇಗೆ ಸೃಷ್ಟಿಯಾಯಿತು ?</p>



<p class="wp-block-paragraph" style="font-size:20px">ಹೇಗಾಯಿತು ಎಂದರೆ,</p>



<p class="wp-block-paragraph" style="font-size:20px">ಆನಿದ ಕಾಲೊಡು…<br>ಉದಿಯ ಬೆಂದೆರ್ಗೆನಾ ಬೊಲ್ಪುಗು ಸೂರ್ಯ ದೇವೇರು<br>ಪಡ್ಡಾಯಿ ಬಾನೊಡು ಓಲಗ ಆತೆರು ಚಂದ್ರದೇವೆರು<br>ಉದಿಪುಗು ಸೂರ್ಯೆ, ಕಂತುಗು ಚಂದ್ರೆ<br>ತೆಂಕಾಯಿ ಸೆಲಿಯೇಂದ್ರೆ<br>ಬಡಕಾಯಿ ಬಾಲ್ಯನ ಕುಮಾರೆ<br>ನಾಲಂದ ಲೋಕೊಡು ನಾಲು ಗುಂಡದೇವೆರು<br>ಮೂಜಿಂದ ಲೋಕೊಡು ಮೂಜಿತಾನ ಭೂತೊಲು<br>ಕಲ್ಲುಡು ನಾಗೆ, ಪುಂಚೊಡು ಸರ್ಪೆ<br>ಸಾರ ಕಲ್ಲ ಅಸುರೆರು, ದೇವೆರೆ ಕಲ್ಲ ಬೆರ್ಮೆರು<br>ಉದಿಯ ಬೆಂದಿನ ಕಾಲೊಡು…<br>ಮಿತ್ತನಾವೊಡು ಪನ್ನಗ ಬಾನೊಡು ಜಂಬಿದಾರೆಗೆ ಉದಿತಿಜಿ<br>ತಿರ್ತಾನ್ನವೊಲಿ ಪನ್ನಗ ಭೂಮಿಡು ಪುಲ್ಲಕುಡಿ ಕೊಡಿತಿಜಿ<br>ಅಪಗ ಪನ್ಪೆರು ಸ್ವಾಮಿ,<br>ಬಾನ ಪತ್ತೊಡು, ಭೂಮಿ ತಿರ್ಗಾವೊಡು<br>ಭೂಮಿ ಪತ್ತೊಡು ಬಾನ ತಿರ್ಗಾವೊಡು<br>ಬಲಗೈ ತಟ್ಟಿಯೆರು ಸ್ವಾಮಿ ಬಾನ ತಿರ್ಗಾಯೆರು<br>ಎಡಗೈ ತಟ್ಟಿಯೆರು ಸ್ವಾಮಿ ಭೂಮಿ ತಿರ್ಗಾಯೆರು<br>ಬಾನ ಮುತ್ತರೆ, ಭೂಮಿ ಬಿತ್ತರೆ<br>ಬಾನೊಗು ಮುತ್ತರೆ ಭೂಮಿ ತಿರ್ಗುಂಡು<br>ಜಂಬಿದಾರೆಗೆ ಉದಿತುಂಡು<br>ಬಾನುಡು ಮೇಲು ಉದಿಯಬೆಂದುಂಡು ತಾಲವೆ ತಂಬವೆ ಪನ್ಪಿನ ತೆಡಿಲು<br>ಕುಂಕುಮ ಪನಿನೀರ ಬರ್ಸ ಬೂರುಂಡು<br>ಭೂಮಿಡಿ ಕೊಡಿತುಂಡು ಕದಿಕೆ ಕಡೀರ ದೈ<br>ಬುಲೆಟ್ಟು ಮೇಲ್ ಉದಿಯ ಬೆಂದುಂಡು ಅತಿಕಾರೆ ಪನ್ಪಿ ಸತ್ಯದ ಬೆಳೆ<br>ಬಾರೆಡು ಮೇಲ್ ಉದಿಯ ಬೆಂದುಂಡು<br>ಆದಾಳೆ ಭೋದಾಳೆ ಪನ್ಪಿ ದೈಬಾರೆ<br>ನಟ್ಟಿನಡಿಗೆಡು ಮೇಲ್ ಉದಿಯ ಬೆಂದುಂಡು<br>ರಾಜಗಿರಿ ಜಂಪದ್ಪೆ<br>ಗೋವುಡು ಮೇಲ್ ಉದಿಯ ಬೆಂದುಂಡು ಕಬಲ್ತಿಗೋವು<br>ಪಣವುಡು ಮೇಲ್ ಉದಿಯ ಬೆಂದುಂಡು<br>ಇಕ್ಕೇರಿ ಚಕ್ರ ಪಾದೇರಿ ಪಣವು<br>ಬಂಗಾರುಡು ಮೇಲ್ ಉದಿಯಬೆಂದುಂಡು<br>ಕುರಿಚಾತ್ ನಾಣ್ಯ ಬಂಗಾರು<br>ಈತ್ಮಾತ ಉದಿಯ ಬೆಂದಿನ ಕಾಲೊಡು<br>ದೈವೊಲು ಉದಿಯಬೆಂದಿನ ನಾಡು ಓಲುಂದು ಕೇನ್ನಗಾ..<br>ಮೂಡಾಯಿ ಘಟ್ಟದ ಮಿತ್ತು… ಕಂಡದ ಬುಲೆ ಬರಿಟ್ಟು…<br>ಈಚಾನಗರೊಡು, ಕರ್ಮಿನ ಸಾಲೆಡು, ಬೆತ್ತದ ಮಲೆಟ್ಟು..<br>ಅನಿಕಲ್ಲ ದಂಬೆಲ್ಡು, ಬೇಲೂರ ಪದವುಡು, ಸರೊಳಿದ ಸಂಪುಡು<br>ನೆಕ್ಕರೆ ಪುದೆಲುಡು, ನೀರಪರಿಪ್ಪುಡು ಉದಿಯ ಬೆಂದುಡುಯೇ…</p>



<p class="wp-block-paragraph" style="font-size:20px">ಕನ್ನಡದಲ್ಲಿ ಇದರ ಅರ್ಥ<br>ಅಂದಿನ ಕಾಲದಲ್ಲಿ…<br>ಬೆಳಕಿಗೆಂದು ಸೂರ್ಯ ದೇವರು ಉದಯವಾದರು<br>ಬೆಳಕಿಗೆ ಸೂರ್ಯ ದೇವರು<br>ಪಡುವಣ ಬಾನಲ್ಲಿ ಉದಯವಾಗುತ್ತಾರೆ ಚಂದ್ರ ದೇವರು<br>ಉದಯಕ್ಕೆ ಸೂರ್ಯ, ಕಂತಿಗೆ ಚಂದ್ರ<br>ದಕ್ಷಿಣಕ್ಕೆ ಸೆಲಿಯೇಂದ್ರ<br>ಉತ್ತರಕ್ಕೆ ಬಾಲ್ಯನ ಕುಮಾರ<br>ನಾಲ್ಕು ದಿಕ್ಕುಗಳಿಗೆ ನಾಲ್ಕು ಗುಂಡದೇವರು<br>ಮೂರು ಲೋಕದಲ್ಲಿ ಮೂರು ಭೂತ ಸಾನಗಳು<br>ಕಲ್ಲಿನಲ್ಲಿ ನಾಗ, ಹುತ್ತದಲ್ಲಿ ಸರ್ಪ<br>ಸಾವಿರ ಕಲ್ಲಿನ ಅಸುರರು<br>ದೇವರ ಕಲ್ಲಿನ ಬೆರ್ಮೆರು<br>ಉದ್ಭವವಾದ ಕಾಲದಲ್ಲಿ<br>ಮೇಲೆ ನೋಡೋಣಾ ಎಂದರೆ ಜಂಬಿ ತಾರೆ ಉದಯವಾಗಲಿಲ್ಲ<br>ಕೆಳಗೆ ನೋಡೋಣಾ ಎಂದರೆ ಭೂಮಿಯಲ್ಲಿ ಹುಲ್ಲು ಹುಟ್ಟಿಲ್ಲ<br>ಆಗ ಸ್ವಾಮಿ ಹೇಳಿದರು,<br>ಭೂಮಿ ಹಿಡಿದು ಆಕಾಶ ತಿರುಗಿಸಬೇಕು<br>ಆಕಾಶ ಹಿಡಿದು ಭೂಮಿ ತಿರುಗಿಸಬೇಕು<br>ಬಲಗೈ ತಟ್ಟಿದರು ಸ್ವಾಮಿ, ಆಕಾಶ ತಿರುಗಿಸಿದರು<br>ಎಡಗೈ ತಟ್ಟಿದರು ಸ್ವಾಮಿ ಭೂಮಿ ತಿರುಗಿಸಿದರು<br>ಆಕಾಶ ಭೂಮಿಗೆ ಮುತ್ತಲು, ಭೂಮಿ ಎಂಬುದು ಬೀಜ ಬಿತ್ತಲು<br>ಬಾನಿಗೆ ಮೂರು ಬಾರಿ ಭೂಮಿ ಸುತ್ತಿತು<br>ಜಂಬಿ ತಾರೆಗೆ ಉದಯವಾಯಿತು<br>ಬಾನಿನಲ್ಲಿ ಹುಟ್ಟಿಕೊಂಡಿತು ತಾಲವೆ ತಂಬವೆ ಎಂಬ ಸಿಡಿಲು<br>ಭೂಮಿಗೆ ಬಿತ್ತು ಕುಂಕುಮ ಹನಿಧಾರೆ ಮಳೆ<br>ಭೂಮಿಯಲ್ಲಿ ಮೊಳೆತು ಹುಟ್ಟಿಕೊಂಡಿತು ಕದಿಕೆ ಎಂಬ ಹುಲ್ಲು<br>ಬೆಳೆಯಲ್ಲಿ ಮೇಲಾಗಿ ಹುಟ್ಟಿಕೊಂಡಿತು<br>ಅತಿಕಾರೆ ಎಂಬ ಸತ್ಯದ ಬೆಳೆ<br>ಬಾಳೆಯಲ್ಲಿ ಚಿಗುರಿತು ಶ್ರೇಷ್ಠ ಬಾಳೆ<br>‘ಆದಾಳೆ ಬೋದಾಳ’ ಬಾಳೆ ಗಿಡ |<br>ನಟ್ಟಿಕಾಯಿಯಲಿ ಹುಟ್ಟಿಕೊಂಡಿತು ರಾಜಗಿರಿ ಕೆಂಪು ಹರಿವೆ ಸೊಪ್ಪು<br>ಗೋವಿನಲ್ಲಿ ಹುಟ್ಟಿಕೊಂಡಿತು ಕಬಲ್ತಿ ದನ<br>ನಾಣ್ಯದಲ್ಲಿ ಶ್ರೇಷ್ಟವಾಗಿ ಉದಯವಾಯಿತು<br>ಇಕ್ಕೇರಿ ಚಕ್ರ ಪಾದೇರಿ ನಾಣ್ಯ<br>ಬಂಗಾರದಲ್ಲಿ ಶ್ರೇಷ್ಟವಾಗಿ ಹುಟ್ಟಿಕೊಂಡಿತು<br>ಕುರಿಚಾತ್ ನಾಣ್ಯ ಬಂಗಾರ”</p>



<p class="wp-block-paragraph" style="font-size:20px">ಇಷ್ಟೆಲ್ಲಾ ಹುಟ್ಟಿಕೊಂಡ ನಾಡಿನಲ್ಲಿ ದೈವಗಳು ಉದಯವಾದ ಜಾಗ ಯಾವುದು ? ಅಂತ ಕೇಳಿದರೆ,<br>ತುಳುನಾಡಿನ ಪೂರ್ವಭಾಗದಲ್ಲಿರುವ ಘಟ್ಟದ ಪ್ರದೇಶದಲ್ಲಿ..<br>ಗದ್ದೆಯ ಬೆಳೆಗಳ ಬದಿಗಳಲ್ಲಿ<br>ಈಚಾನಗರದಲ್ಲಿ.. ಕರ್ಮಿನ ಸಾಲೆಯಲ್ಲಿ, ಬಿದಿರ ಮಲೆಗಳಲ್ಲಿ..<br>ಕಲ್ಲು ಮತ್ತು ಗದ್ದೆಗಳ ಬಿರುಕುಗಳಲ್ಲಿ, ಬೇಲೂರ ಪದವಿನಲ್ಲಿ<br>ನೆಕ್ಕರೆ ಗಿಡಗಳ ಪೊದೆಗಳಲ್ಲಿ, ನೀರಿನ ಹರಿವಿನಲ್ಲಿ<br>ನಮ್ಮ ದೈವಗಳು ಉದಯವಾದವು</p>



<p class="wp-block-paragraph" style="font-size:20px">ಇದರಲ್ಲಿ ಪರಶುರಾಮ ಎಲ್ಲಿದೆ? ಓಂ ಎಲ್ಲಿದೆ? ವೈದಿಕ ದೇವರುಗಳು ಎಲ್ಲಿದೆ? ಪವಾಡ, ಹಿಂಸೆ ಎಲ್ಲಿದೆ? ತುಳುನಾಡು ಪ್ರಕೃತಿ ವಿಜ್ಞಾನದ ಮೂಲಕ ಉದಯವಾಯಿತು ಎಂಬುದನ್ನು ನಮ್ಮ ಹಿರಿಯರು ಎಷ್ಟು ಸುಂದರವಾಗಿ ಹೇಳಿದ್ದಾರೆ.<br>&#8216;ನಾವು ಬಂದಿದ್ದು ಎಲ್ಲಿಂದ ಎಂಬುದನ್ನು ಮರೆತು ಬಿಡುವುದು ನಮ್ಮ ಜನರ ದೊಡ್ಡ ಸಮಸ್ಯೆ&#8217; ಎಂಬ ಡೈಲಾಗ್ ಸಿನೇಮಾದಲ್ಲಿ ಇದ್ದಿದ್ದರಿಂದ ಇಷ್ಟು ಹೇಳಬೇಕಾಯಿತು‌.</p>


<div class="wp-block-image">
<figure class="alignleft size-full is-resized"><img loading="lazy" decoding="async" src="https://peepalmedia.com/wp-content/uploads/2022/10/image-4.png" alt="" class="wp-image-8685" width="315" height="421"/></figure>
</div>


<p class="wp-block-paragraph" style="font-size:20px">ಇನ್ನು ಸಿನೇಮಾ ವಿಷಯಕ್ಕೆ ಬರೋಣಾ. ದೈವಗಳು ನಮ್ಮನ್ನು ಕಾಯುತ್ತದೆ ಎಂಬುದು ಕರಾವಳಿಗರ ನಂಬಿಕೆ. ಹಾಗಂತ ದೈವಗಳು ಮೇಲ್ವರ್ಗದ ವಿರುದ್ದ ನಿಂತ ಉದಾಹರಣೆಗಳೇ ಇಲ್ಲ. ಮೇಲ್ವರ್ಗದ ಯಜಮಾನರ ಎದುರು ಕೆಲ ದೈವಗಳು ಮಾತನಾಡುವುದೇ ಇಲ್ಲ. ಉದಾಹರಣೆಗೆ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರ ಎದುರು ಪಂಜುರ್ಲಿ ದೈವವು ಕೇವಲ &#8220;ಉದೋ ಪೆರ್ಗಡೇ ಉಧೋ&#8221; ಎಂದಷ್ಟೇ ಹೇಳುತ್ತದೆ. ಹಾಗಾಗಿ ಜನರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ದೈವದ ಮೊರೆ ಹೋಗಬೇಕು ಎಂಬುದನ್ನು ಜನರ ತಲೆಗೆ ತುಂಬುವುದೇ ಒಂದು ರಾಜಕೀಯ ಅಜೆಂಡಾ. ದೈವ ಭೂಮಿ ಬಿಟ್ಟು ಕೊಡಲು ಒಪ್ಪಿಲ್ಲ ಅಂದುಕೊಳ್ಳಿ. &#8220;ಮಾಯೆರ್ದು ಮದಿಪು ಮಲ್ಲೆ&#8221; (ದೈವಕ್ಕಿಂತ ಊರ ಮಾತು ದೊಡ್ಡದು) ಎಂದು ಮಧ್ಯಸ್ಥನೋ, ಊರ ಮುಖ್ಯಸ್ಥನೋ ಹೇಳಿದರೆ ದೈವ ಮರು ಮಾತಾಡುವಂತಿಲ್ಲ. ಊರ ಮುಖ್ಯಸ್ಥನ ಬಾಯಿಯಿಂದಲೋ, ಮುಖ್ಯಸ್ಥನಿಂದ ಸಂಬಳ ಪಡೆಯುವ ಮಧ್ಯಸ್ಥನ ಬಾಯಿಯಿಂದಲೋ ಬರುವ ಮದಿಪು ಯಾರ ಪರವಾಗಿರುತ್ತದೆ ಎಂಬುದನ್ನು ಪ್ರತ್ಯೇಕ ಹೇಳಬೇಕಿಲ್ಲ.</p>



<p class="wp-block-paragraph" style="font-size:20px">ಕರಾವಳಿಯ ದೈವವೆಂದರೆ ಕ್ರೌರ್ಯವಲ್ಲ. ಶೂದ್ರ-ದಲಿತರ ದೈವ ಸಂಸ್ಕೃತಿಯನ್ನು ಪರಿಚಯಿಸಲು ಅಷ್ಟೊಂದು ಕ್ರೌರ್ಯವನ್ನು ವಿಜೃಂಭಿಸಬೇಕಿರಲಿಲ್ಲ. ಕರಾವಳಿಯ ಕಾಡಂಚಿನಲ್ಲಿ ವಾಸ ಮಾಡುವ ದಲಿತ ಆದಿವಾಸಿ ಕುಟುಂಬಗಳು ಮರಗಳ್ಳತನ ಮಾಡಿದ ಉದಾಹರಣೆಯೂ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಶೂದ್ರ ದಲಿತ ಸಂಸ್ಕೃತಿ, ಆಚರಣೆಗಳೆಂದರೆ ಕ್ರೌರ್ಯದ ಪರಮಾವಧಿ ಎಂದು ಬಿಂಬಿಸುವ ಮೂಲಕ ಯಾರನ್ನು ಮೆಚ್ಚಿಸಲು ಹೊರಟಿದ್ದೀರಿ? ಕರಾವಳಿಯ ದೈವಾರಾಧನೆಯೆಂದರೆ ಯಾರಿಗೂ ಕೇಡನ್ನು ಬಯಸದ ನಂಬಿದವರನ್ನು &#8220;ತಾಯಿಯಂತೆಯೂ, ಮಾವನಂತೆಯೂ ಸಲಹುವ&#8221; ದೈವ. &#8220;ಪತ್ತಪ್ಪೆ ಜೋಕುಲೆನು ಒಂಜಿ ಪಟ್ಟೆಲ್ಡು ಪಾಡುದು ತಾಂಕುನ ಅಪ್ಪೆ ಲೆಕಂತಿನ ದೈವ ಯಾನ್&#8221; (ಹತ್ತು ತಾಯ ಮಕ್ಕಳನ್ನು ಒಂದೇ ಮಡಿಲಲ್ಲಿ ಹಾಕಿಕೊಂಡು ಸಾಕುವ ತಾಯಿಯಂತಹ ದೈವ ನಾನು) ಎಂದು ದೈವ ಜನರಿಗೆ ಭರವಸೆ ನೀಡುತ್ತದೆ.</p>



<figure class="wp-block-image size-full"><img loading="lazy" decoding="async" width="904" height="609" src="https://peepalmedia.com/wp-content/uploads/2022/10/image-5.png" alt="" class="wp-image-8686" srcset="https://peepalmedia.com/wp-content/uploads/2022/10/image-5.png 904w, https://peepalmedia.com/wp-content/uploads/2022/10/image-5-300x202.png 300w, https://peepalmedia.com/wp-content/uploads/2022/10/image-5-768x517.png 768w, https://peepalmedia.com/wp-content/uploads/2022/10/image-5-150x101.png 150w, https://peepalmedia.com/wp-content/uploads/2022/10/image-5-696x469.png 696w" sizes="auto, (max-width: 904px) 100vw, 904px" /></figure>



<p class="wp-block-paragraph" style="font-size:20px">ವೃಷಬ್ ಶೆಟ್ಟಿಯವರು ದೈವ ಕುಣಿತಕ್ಕಾಗಿ ಭಾರೀ ಅಭ್ಯಾಸ ಮಾಡಿದ್ದಾರೆ. ಅದು ಸುಲಭ ಸಾಧ್ಯವಲ್ಲ.‌ ಆದರೆ ಅವರ ಕಠಿಣ ಪರಿಶ್ರಮ ಯಾರಿಗಾಗಿ ಬಳಕೆಯಾಗಿದೆ ಎಂಬುದೂ ಮುಖ್ಯವಾಗುತ್ತದೆ. ಹಾಗಾಗಿಯೇ ವೃಷಬ್ ಶೆಟ್ಟಿಯವರು ತಾನೇ ಬರೆದಿರುವ ಡೈಲಾಗ್ ನಂತೆ &#8220;ತಾನು ಎಲ್ಲಿಂದ ಬಂದೆ?&#8221; ಎಂಬುದನ್ನು ಉದ್ದೇಶಪೂರ್ವಕವಾಗಿ ಮರೆತಂತಿದೆ.</p>



<figure class="wp-block-image size-full is-resized"><img loading="lazy" decoding="async" src="https://peepalmedia.com/wp-content/uploads/2022/10/naveen-s.jpg" alt="" class="wp-image-8679" width="137" height="172"/></figure>



<ul class="wp-block-list" style="font-size:20px"><li><strong>ನವೀನ್ ಸೂರಿಂಜೆ</strong><br>ಪತ್ರಕರ್ತರು</li></ul>
]]></content:encoded>
					
		
		
			</item>
	</channel>
</rss>
