<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>praveen shetty &#8211; Peepal Media</title>
	<atom:link href="https://peepalmedia.com/author/praveen/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Wed, 05 Apr 2023 10:19:24 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.9.4</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>praveen shetty &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ರಾಹುಲ್‌ ಗಾಂಧಿಯನ್ನು ಪಪ್ಪು ಎಂದು ಬಿಂಬಿಸಲು ಕೋಟಿಗಟ್ಟಲೆ ಖರ್ಚು &#124; ಬಿಜೆಪಿ ಐಟಿ ಸೆಲ್‌ ನ ಗುಟ್ಟು ಬಹಿರಂಗ</title>
		<link>https://peepalmedia.com/rs-1200-crore-spent-to-portray-rahul-gandhi-as-pappu-the-secret-of-bjp-it-cell-is-revealed/</link>
		
		<dc:creator><![CDATA[praveen shetty]]></dc:creator>
		<pubDate>Tue, 04 Apr 2023 15:18:38 +0000</pubDate>
				<category><![CDATA[ರಾಜಕೀಯ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=20592</guid>

					<description><![CDATA[ಬಿ‌ಜೆ‌ಪಿ ಐ‌ಟಿ ಸೆಲ್  ರಾಹುಲ್‌ ಗಾಂಧಿಯನ್ನು ಪಪ್ಪು ಎಂದು ಬಿಂಬಿಸಲು ಈ ಒಂಭತ್ತು ವರ್ಷಗಳಲ್ಲಿ ಕೋಟಿ‌ಗಟ್ಟಲೆ ರುಪಾಯಿ ಖರ್ಚುಮಾಡಿರುವ ಆಘಾತಕಾರಿ ಗುಟ್ಟನ್ನು ಸ್ವತ: ಬಿಜೆಪಿ ಐಟಿ ಸೆಲ್‌ ಗೆ ಕೆಲಸ ಮಾಡಿದವರೊಬ್ಬರು ರಟ್ಟು ಮಾಡಿರುವುದನ್ನು ಹಿರಿಯ ಲೇಖಕರಾದ ಪ್ರವೀಣ್‌ ಎಸ್‌ ಶೆಟ್ಟಿಯವರು ಕುತೂಹಲಕಾರಿಯಾಗಿ ಬರೆದಿದ್ದಾರೆ. ನಿನ್ನೆ ಒಂದು ಸಮಾರಂಭದಲ್ಲಿ ನಾನು ನನ್ನ ಒಬ್ಬ ಮಿತ್ರರನ್ನು ನಾಲ್ಕು ವರ್ಷಗಳ ನಂತರ ಭೇಟಿಯಾಗಿದ್ದೆ.&#160; ಅವರು 2014 ರಿಂದಲೂ ಬಿ‌ಜೆ‌ಪಿ ಐ‌ಟಿ ಸೆಲ್ ಗಾಗಿ ಕೆಲಸ ಮಾಡುತ್ತಿದ್ದದ್ದು ನನಗೆ ಗೊತ್ತಿತ್ತು. ಸುಳ್ಳು [&#8230;]]]></description>
										<content:encoded><![CDATA[
<p class="has-cyan-bluish-gray-background-color has-background"><strong>ಬಿ‌ಜೆ‌ಪಿ ಐ‌ಟಿ ಸೆಲ್  ರಾಹುಲ್‌ ಗಾಂಧಿಯನ್ನು ಪಪ್ಪು ಎಂದು ಬಿಂಬಿಸಲು ಈ ಒಂಭತ್ತು ವರ್ಷಗಳಲ್ಲಿ  ಕೋಟಿ‌ಗಟ್ಟಲೆ ರುಪಾಯಿ ಖರ್ಚುಮಾಡಿರುವ ಆಘಾತಕಾರಿ ಗುಟ್ಟನ್ನು ಸ್ವತ: ಬಿಜೆಪಿ ಐಟಿ ಸೆಲ್‌ ಗೆ ಕೆಲಸ ಮಾಡಿದವರೊಬ್ಬರು ರಟ್ಟು ಮಾಡಿರುವುದನ್ನು ಹಿರಿಯ ಲೇಖಕರಾದ ಪ್ರವೀಣ್‌ ಎಸ್‌ ಶೆಟ್ಟಿಯವರು ಕುತೂಹಲಕಾರಿಯಾಗಿ ಬರೆದಿದ್ದಾರೆ.</strong></p>



<p>ನಿನ್ನೆ ಒಂದು ಸಮಾರಂಭದಲ್ಲಿ ನಾನು ನನ್ನ ಒಬ್ಬ ಮಿತ್ರರನ್ನು ನಾಲ್ಕು ವರ್ಷಗಳ ನಂತರ ಭೇಟಿಯಾಗಿದ್ದೆ.&nbsp; ಅವರು 2014 ರಿಂದಲೂ ಬಿ‌ಜೆ‌ಪಿ ಐ‌ಟಿ ಸೆಲ್ ಗಾಗಿ ಕೆಲಸ ಮಾಡುತ್ತಿದ್ದದ್ದು ನನಗೆ ಗೊತ್ತಿತ್ತು. ಸುಳ್ಳು ಸುದ್ದಿಗಳ ಮುಖಾಂತರ ಜನರ ಅಭಿಪ್ರಾಯಗಳನ್ನು ರೂಪಿಸುವಲ್ಲಿ ವೃತ್ತಿಪರ ನಿಪುಣತೆ ಹೊಂದಿರುವ ಅಮೆರಿಕಾದ ಕೇಂಬ್ರಿಡ್ಜ್ ಅನಾಲಿಟಿಕಾ ಮತ್ತು ಇಸ್ರೇಲಿನ ಟಾನ್ ಹನ್ನನ್ ಈ ಸಂಸ್ಥೆಗಳ ಸಹಾಯದಿಂದ ಬಿ‌ಜೆ‌ಪಿ ಐ‌ಟಿ ಸೆಲ್ ನೈಜ ವಿಷಯಗಳನ್ನು ತಿರುಚಿ ಮತದಾರರ ತಲೆಯಲ್ಲಿ ತುಂಬುವುದರಲ್ಲಿ ಸಾಕಷ್ಟು ನಿಪುಣತೆ ಹೊಂದಿದೆ ಎಂದು ಅವರೇ ನನಗೆ ಹಿಂದೊಮ್ಮೆ ಹೇಳಿದ್ದರು.</p>



<p>ಮೊದಲೆಲ್ಲಾ ಅವರು ಸಿಕ್ಕಾಗ ಮೋದಿಯನ್ನು ಭಯಂಕರ ಹೊಗಳುತ್ತಿದ್ದರು. 2019 ರ ಲೋಕಸಭಾ ಚುನಾವಣೆಗೆ ಸ್ವಲ್ಪ ಮುಂಚೆ ಅವರು ಭೇಟಿಯಾಗಿದ್ದಾಗ ನನ್ನಲ್ಲಿ ಇಂಗ್ಲೀಷ್ ಜೋಕ್ ಪುಸ್ತಕಗಳು ಇದ್ದರೆ ಕೊಡಲು ಹೇಳಿದ್ದರು, ಹಾಗೂ ಬೇರೆ ಒಳ್ಳೆಯ ಜೋಕುಗಳು ನನಗೆ ಗೊತ್ತಿದ್ದರೆ ಅದನ್ನು ಬರೆದು ಅವರಿಗೆ ಕಳುಹಿಸಿದರೆ ಬಿ‌ಜೆ‌ಪಿ ಐ‌ಟಿ ಸೆಲ್ಲಿನಿಂದ ಪ್ರತಿ ಜೋಕಿಗೆ ರೂ.100 ರೂಪಾಯಿ ಸಂಭಾವನೆ ಕೊಡಿಸುವುದಾಗಿ ಆಗ ವಾಗ್ದಾನ ಮಾಡಿದ್ದರು. (ಹಾಗಾಗಿ ಅವರಿಗೆ ನಾನು “ಜೋಕೇಶ್” ಎಂಬ ಅಡ್ಡ ಹೆಸರು ಇಟ್ಟಿದ್ದೆ).</p>



<p>ಈ ಜೋಕುಗಳನ್ನು ತಿರುಚಿ ಅದಕ್ಕೆ ರಾಹುಲ್ ಗಾಂಧಿಯ ಹೆಸರು ಜೋಡಿಸಿ ಅದನ್ನು ಬಿ‌ಜೆ‌ಪಿ ಐ‌ಟಿ ಸೆಲ್ ಗೆ ಕೊಟ್ಟರೆ ಅವರು ಅದನ್ನು ಪ್ರಸಾರ ಮಾಡುತ್ತಾರಂತೆ. ಬಿ‌ಜೆ‌ಪಿ ಐ‌ಟಿ ಸೆಲ್ ನಿಂದ ಬರುವ ಟೂಲ್ ಕಿಟ್ ಪ್ರಕಾರವೇ ತಿರುಚಿದ ಸುದ್ದಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರ ಮಾಡುವುದು ಜೋಕೇಶರ ಮೂಲ ಕೆಲಸವಾಗಿತ್ತು.&nbsp; ಟ್ವಿಟ್ಟರ್, ಯುಟ್ಯೂಬ್ ಮತ್ತು ಫೇಸ್‌ ಬುಕ್ ನಲ್ಲಿ ಕಾಮೆಂಟ್ ಸೆಕ್ಷನ್ ನಲ್ಲಿ ಮೋದಿ ಮತ್ತು ಬಿ‌ಜೆ‌ಪಿ ಕುರಿತು ಕೆಟ್ಟ ಕಾಮೆಂಟ್ ಹಾಕಿದವರ ವಿರುದ್ಧ ಅಶ್ಲೀಲ ಬೈಗಳು ಸುರಿಸುವುದಕ್ಕೂ ಅವರಿಗೆ ಬಿ‌ಜೆ‌ಪಿಯಿಂದ ಹಣ ಸಿಗುತ್ತದೆಯಂತೆ! ವಿರುದ್ಧ ಗುಂಪಿನ ಗಂಡಸರು ಹಾಕಿದ ಕಾಮೆಂಟಿಗೆ ಬಿ‌ಜೆ‌ಪಿ ಟ್ರೋಲ್ ಗಳು ಕೊಡುವ ಇಂತಹ ಕೊಳಕು ಬೈಗುಳಗಳಿಗೆ ಗಂಡಸರು ಕೇರ್ ಮಾಡುವುದಿಲ್ಲ, ಆದರೆ ಯಾರಾದರೂ ಮಹಿಳೆ ಮೋದಿ ಮತ್ತು ಬಿ‌ಜೆ‌ಪಿ ವಿರುದ್ಧ ಕಾಮೆಂಟ್ ಹಾಕಿದ್ದರೆ ಆ ಕಾಮೆಂಟ್ ಹಾಕಿದ ಮಹಿಳೆಗೆ ಅತ್ಯಂತ ಅಶ್ಲೀಲವಾಗಿ ಬೈದು ಟ್ರೋಲ್ ಮಾಡಿದರೆ ಆ ಮಹಿಳೆ ಜೀವನದಲ್ಲಿ ಇನ್ನೆಂದೂ ಮೋದಿ &amp; ಬಿ‌ಜೆ‌ಪಿಗರ ವಿರುದ್ಧ ಯಾವುದೇ ಕಾಮೆಂಟ್ ಹಾಕುವ ಗೋಜಿಗೆ ಹೋಗುವುದಿಲ್ಲ ಎಂಬ ಮಹಿಳೆಯರ ಮೂಲ ಮನಸ್ಥಿತಿಯನ್ನು ನನ್ನ ಮಿತ್ರರು ಬಿಡಿಸಿ ಹೇಳಿದ್ದರು. ಕೊಳಕು ಬೈಗಳುಗಳಿಗೂ ಎರಡು ರೂಪಾಯಿ ಸಂಭಾವನೆ ಕೊಡುವ ಜಗತ್ತಿನ ಏಕೈಕ ಸಂಸ್ಥೆ ಅಂದರೆ ಅದು ಬಿ‌ಜೆ‌ಪಿ ಐ‌ಟಿ ಸೆಲ್ಲಂತೆ!</p>



<figure class="wp-block-gallery has-nested-images columns-default is-cropped wp-block-gallery-1 is-layout-flex wp-block-gallery-is-layout-flex">
<figure class="wp-block-image size-large"><img fetchpriority="high" decoding="async" width="690" height="388" data-id="20593" src="https://peepalmedia.com/wp-content/uploads/2023/04/BJP-IT-cell.webp" alt="" class="wp-image-20593" srcset="https://peepalmedia.com/wp-content/uploads/2023/04/BJP-IT-cell.webp 690w, https://peepalmedia.com/wp-content/uploads/2023/04/BJP-IT-cell-300x169.webp 300w, https://peepalmedia.com/wp-content/uploads/2023/04/BJP-IT-cell-150x84.webp 150w" sizes="(max-width: 690px) 100vw, 690px" /></figure>
</figure>



<p>ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಚೇಲಾಗಳು ವಿರೋಧಿಗಳಿಗೆ ಕೊಡುವ ಬೈಗುಳಗಳನ್ನು ಓದುವುದೆಂದರೆ ಬಿ‌ಜೆ‌ಪಿಯಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಇಳಿ ವಯಸ್ಸಿನ ಗುಜರಾತಿಗಳಿಗೆ ಒಂದು ರೀತಿಯ ವಿಕೃತ (Sadistic) ಆನಂದ ಕೊಡುತ್ತದೆಯಂತೆ. ಈ ಗುಜರಾತಿಗಳು ಸೋಷಿಯಲ್ ಮೀಡಿಯಾ ಜಾಲಾಡುತ್ತಾ ತಮ್ಮನ್ನು ಯಾರು ಎಷ್ಟು ಹೊಗಳಿದ್ದಾರೆ ಮತ್ತು ವಿರೋಧ ಪಕ್ಷದವರನ್ನು ಎಷ್ಟು ತೆಗಳಿದ್ದಾರೆ ಎಂದು ಓದಿ ವಿಕೃತ ಆನಂದ ಪಡೆಯುವುದರಲ್ಲಿಯೇ ಇಡೀ ದಿನ ನಿರತರಾಗಿರುವುದರಿಂದ, ಅದನ್ನೇ ಅವರ ಭಕ್ತರು ತಮ್ಮ ಅತ್ಯುಚ್ಚ ನೇತಾರ ದಿನಕ್ಕೆ 18 ಗಂಟೆ ಕೆಲಸ ಮಾಡುತ್ತಾರೆ ಎಂದು ಬಡಾಯಿ ಕೊಚ್ಚುತ್ತಿರುವುದಂತೆ.</p>



<p>ಹಿಂದೆಲ್ಲಾ ರಾಹುಲ್ ಗಾಂಧಿಯನ್ನು ಲೇವಡಿ ಮಾಡುತ್ತಿದ್ದ ಈ ಜೋಕೇಶ್ ಮಿತ್ರರು ನಿನ್ನೆ ಸಿಕ್ಕಾಗ ತುಂಬಾ ಬದಲಾಗಿದ್ದಾರೆಂದು&nbsp; ಅನಿಸಿತು. ಈ ಕುರಿತು ಕೇಳಿದಾಗ ಅವರು ಹೇಳಿದ್ದು – ಹೌದು, ವಿವೇಚನಾ ಶಕ್ತಿ ಮತ್ತು ಆತ್ಮಸಾಕ್ಷಿ ಇರುವವರೆಲ್ಲಾ ಈಗ ಬಿ‌ಜೆ‌ಪಿ ಐ‌ಟಿ ಸೆಲ್ ತೊರೆಯುತ್ತಿದ್ದಾರೆ. ಯಾಕೆಂದರೆ ಸಂಭಾವಿತರಿಗೆ ಹೃದಯವಂತರಿಗೆ ಮತ್ತು ದೇಶಕ್ಕಾಗಿ ಜೀವ ತೇದು ಸ್ವರ್ಗ ಸೇರಿರುವ ಮಹಾನ್ ಜೀವಿಗಳಿಗೂ ಬೈದು-ಬೈದು ಸುಳ್ಳು ಸುದ್ದಿಗಳನ್ನು ಹಲವಾರು ವರ್ಷಗಳಿಂದ ಹರಡಿ ಹರಡಿ ನಮ್ಮಲ್ಲಿ ಈಗ ವಿಪರೀತ ಪಾಪಪ್ರಜ್ಞೆ ಕಾಡುತ್ತಿದೆ. ನಮ್ಮವರೇ ನಿಜವಾದ ನೀಚರು ಎಂದು ಈಗ ಅರ್ಥವಾಗಿದೆ. ಕೋಮು ಗಲಭೆ ಹುಟ್ಟು ಹಾಕುವವರು ಮತ್ತು ಹೆಣ ಉರುಳಿಸಿ ಆ ಶವದ ಮೇಲೆ ರಾಜಕೀಯ ಬೇಳೆ ಬೇಯಿಸಿ ಕೊಳ್ಳುವವರೂ ನಮ್ಮವರೇ! ಇವನ್ನೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಸಮರ್ಥಿಸಲು ಹಣ ಪಡೆಯುವ ನಾವೂ ನೀಚರು ಎಂದು ಅನಿಸಿತು. ಹಾಗಾಗಿ ಈಗ ನಮಗೆ ನಮ್ಮ ಮೇಲೆಯೇ ತಿರಸ್ಕಾರ ಮೂಡಿದೆ ಎಂದು ಜೋಕೇಶರು ಪಶ್ಚಾತ್ತಾಪ ಪಟ್ಟರು.</p>



<p>ರಾಹುಲ್ ಗಾಂಧಿ ಮೋದಿಗಿಂತ ಹೆಚ್ಚು ವಿದ್ಯಾವಂತ, ಬುದ್ಧಿವಂತ ಮತ್ತು ಸಂಭಾವಿತ ಎಂಬುದು ನಿಜ. ಆದರೆ ಸತತ ಲೇವಡಿ ಅಪಹಾಸ್ಯಗಳ ಮೂಲಕ ರಾಹುಲ್ ಒಬ್ಬ ಪೆದ್ದ, ಮಂದ ಬುದ್ಧಿಯವನು ಎಂದು ಮಾಧ್ಯಮಗಳಲ್ಲಿ ‘ನರೇಟಿವ್’ ಸೃಷ್ಟಿಸುತ್ತಲೇ ಇರಬೇಕು, ಇದರಿಂದ ಹೊಸ ಪೀಳಿಗೆಯ ಯುವ ಮತದಾರರು (ಕಾಲೇಜು ವಿದ್ಯಾರ್ಥಿಗಳಾಗಿರುವ First Time Voters) ರಾಹುಲರನ್ನು ಹಗುರವಾಗಿ ಪರಿಗಣಿಸುತ್ತಾರೆ ಹಾಗೂ ಅವರ ಮಾತಿಗೆ ಹೆಚ್ಚು ಮಹತ್ವ, ಗೌರವ ಕೊಡುವುದಿಲ್ಲ. ಕೊನೆಗೆ ಇದು ಕಾಂಗ್ರೆಸ್ಸಿಗೆ ನೆಗೆಟಿವ್ ವೋಟ್ ಆಗಿ ಪರಿಣಮಿಸುತ್ತದೆ ಎಂಬುದು ನಮ್ಮ ಬಿ‌ಜೆ‌ಪಿ ರಣತಂತ್ರಗಾರರ ಮನೋವೈಜ್ಞಾನಿಕ ವಿಶ್ಲೇಷಣೆಯಾಗಿತ್ತು ಮತ್ತು ಅದನ್ನೇ ನಾವೂ ಅನುಸರಿಸಬೇಕು ಎಂದು ನಮಗೆ ಟೂಲ್ ಕಿಟ್ ನೀಡಲಾಗಿತ್ತು. ಆದರೆ ರಾಹುಲರ ಇತ್ತೀಚಿನ ಕೇಂಬ್ರಿಡ್ಜ್ ಯಾತ್ರೆಯಿಂದ ಈಗ ಆ ನರೇಟಿವ್ ಉಲ್ಟಾ ಹೊಡೆಯುತ್ತಿದೆ ಎಂದು ಒಪ್ಪಿದರು ಜೋಕೇಶರು.</p>



<figure class="wp-block-gallery has-nested-images columns-default is-cropped wp-block-gallery-2 is-layout-flex wp-block-gallery-is-layout-flex">
<figure class="wp-block-image size-full"><img decoding="async" width="720" height="540" data-id="20595" src="https://peepalmedia.com/wp-content/uploads/2023/04/ac1f48b0ae26ed6760dfe6937da371a31664366923983315_original.webp" alt="" class="wp-image-20595" srcset="https://peepalmedia.com/wp-content/uploads/2023/04/ac1f48b0ae26ed6760dfe6937da371a31664366923983315_original.webp 720w, https://peepalmedia.com/wp-content/uploads/2023/04/ac1f48b0ae26ed6760dfe6937da371a31664366923983315_original-300x225.webp 300w, https://peepalmedia.com/wp-content/uploads/2023/04/ac1f48b0ae26ed6760dfe6937da371a31664366923983315_original-150x113.webp 150w, https://peepalmedia.com/wp-content/uploads/2023/04/ac1f48b0ae26ed6760dfe6937da371a31664366923983315_original-696x522.webp 696w" sizes="(max-width: 720px) 100vw, 720px" /></figure>
</figure>



<p>ಇತ್ತೀಚೆಗೆ ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆ ಮಾಡಿ ಸಾವಿರಾರು ಕಿ.ಮಿ ನಡೆದು ಲಕ್ಷಾಂತರ ಸಾಮಾನ್ಯ ಜನರನ್ನು ಸಂಪರ್ಕಿಸಿ, ಪ್ರೀತಿ ವಿಶ್ವಾಸ ಗೌರವ ಗಳಿಸಿದ ಮೇಲೆ ನಮಗೆ ರಾಹುಲರ ಹೃದಯವಂತಿಕೆ ಗೊತ್ತಾಗಿದ್ದು. ಅವರು ಕಳೆದ ತಿಂಗಳು ಕ್ಯಾಂಬ್ರಿಡ್ಜ್ ನಲ್ಲಿ ಮಾಡಿದ ಭಾಷಣ ಮತ್ತು ಉನ್ನತ ವಿದ್ಯಾವಂತ ಸಭಿಕರೊಟ್ಟಿಗೆ ನಡೆಸಿದ ಸಂವಹನ ನೋಡಿದ ಮೇಲೆ ಅವರಿಗೆ ಆರ್ಥಿಕ ವಿಷಯಗಳ ಮೇಲೆ ಇರುವ ಹಿಡಿತ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳ ಮೇಲೆ ಇರುವ ಪ್ರಭುತ್ವ ಹಾಗೂ ಅವರ ವಿದ್ವತ್ತು ನಮಗೆ ಅರ್ಥವಾಯಿತು. ಕ್ಯಾಂಬ್ರೀಜ್ ನಲ್ಲಿ ಕಲಿಸಿದ ಶಿಸ್ತನ್ನು ಈಗಲೂ ರಾಹುಲ್ ತಮ್ಮ ಜೀವನದಲ್ಲಿ ಪಾಲಿಸುತ್ತಿದ್ದಾರೆ.&nbsp; ಬಿ‌ಜೆ‌ಪಿ ಐಟಿ ಸೆಲ್ ಕೊಡುತ್ತಿದ್ದ ಪುಡಿ ಕಾಸಿನ ಆಸೆಗಾಗಿ ನಾನು ಅವರನ್ನು ಲೇವಡಿ ಮಾಡಿದ್ದಕ್ಕಾಗಿ ನನಗೆ ಈಗ ಪಾಪಪ್ರಜ್ಞೆ ಕಾಡುತ್ತಿದೆ, ಬಹಳ ಪಶ್ಚಾತಾಪ ಆಗುತ್ತಿದೆ, ಎಂದರು ನನ್ನ ಮಿತ್ರರು.</p>



<p>ಕೊರೊನಾದ ಮುನ್ನೆಚ್ಚರಿಕೆ, ಮುನ್ನಾಲೋಚನೆ ಇಲ್ಲದ ಲಾಕ್ ಡೌನ್, ನೋಟು ರದ್ದತಿ, ಅವೈಜ್ಞಾನಿಕ ಜಿ‌ಎಸ್‌ಟಿ, ದಿಲ್ಲಿ ಗಡಿಯಲ್ಲಿ ರೈತರ ಪ್ರತಿಭಟನೆ, ಚೀನಾದ ಗಡಿ ತಂಟೆ, ಅದಾನಿಯ ಷೇರು ಭಾನಗಡಿ, ಈ ಎಲ್ಲಾ ರಾಷ್ಟ್ರೀಯ ಮಹತ್ವದ ವಿಷಯದಲ್ಲಿ ರಾಹುಲರು ಹೇಳಿದ ಭವಿಷ್ಯ ತದನಂತರ ಪೂರ್ಣ ಸತ್ಯವಾಗಿವೆ. ಕಾರಣ ರಾಹುಲ್ ಕೇಂಬ್ರಿಜ್ ನಲ್ಲಿ “ಡೆವೆಲಪ್‌ಮೆಂಟಲ್ ಎಕನಾಮಿಕ್ಸ್” ಎಂಬ ವಿಷಯದಲ್ಲಿ ಸ್ನಾತಕೋತ್ತರ ಪದವಿ ಎಂ.ಫಿಲ್ ಪಡೆದಿದ್ದಾರೆ ಹಾಗೂ 8 ವರ್ಷ ಲಂಡನ್ ನಲ್ಲಿಯ ಒಂದು ಟೆಕ್ ಕಂಪನಿಯಲ್ಲಿ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಮೇಲಾಗಿ ಜಗತ್ ವಿಖ್ಯಾತ ಅರ್ಥಶಾಸ್ತ್ರಿ ಮತ್ತು ನಮ್ಮ ಹಿಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ರವರ ಮಾರ್ಗದರ್ಶನದಲ್ಲಿ ರಾಹುಲರು ಅರ್ಥಶಾಸ್ತ್ರದ ಸೂಕ್ಷ್ಮಗಳನ್ನು ಅರಿತುಕೊಂಡಿದ್ದಾರೆ.</p>



<p>ಇದಕ್ಕೆ ಹೋಲಿಸಿದರೆ ಅರೆಸಾಕ್ಷರ <a>ಮೋದಿಯೆಂದರೆ ಕೇವಲ ಗೋದಿ ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾ ಮುಖಾಂತರ ಗಾಳಿ ಊದಿ ಊದಿ ಉಬ್ಬಿಸಿದ ಒಂದು ಬಲೂನ್ ಅಷ್ಟೇ. ಒಂದು ವೇಳೆ ಗೋದಿ ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾ ಇಲ್ಲವಾದರೆ ಒಡೆದ ಬಲೂನಿನಂತೆ ಮೋದಿ ತಕ್ಷಣ ಚಪ್ಪಟೆಯಾಗುತ್ತಾರೆ ಎಂದು ಆ ಮಿತ್ರರು ಒಪ್ಪಿಕೊಂಡರು. </a>ರಾಹುಲ್ ಗಾಂಧಿಯನ್ನು ಪಪ್ಪು ಎಂದು ಬ್ರಾಂಡ್ ಮಾಡಲು ಹಿಂದಿನ 9 ವರ್ಷದಲ್ಲಿ ಬಿ‌ಜೆ‌ಪಿ ಐ‌ಟಿ ಸೆಲ್ ಕೋಟಿಗಟ್ಟಲೆ  (ರೂ.1200 ಕೋಟಿ ಎಂದು ಅವರು ಹೇಳಿದರು.ಕೆಲ ಸಮಯದ ಹಿಂದೆ ಅಮರ್‌ ಉಜಾಲಾ ಎಂಬ ಹಿಂದಿ ಪತ್ರಿಕೆಯೂ ಇದನ್ನು ಬರೆದಿರುವುದನ್ನು ನಾನು ಓದಿರುವೆ)  ಖರ್ಚು ಮಾಡಿದೆಯೆಂಬ ಆಘಾತಕಾರಿ ಗುಟ್ಟು ಬಿಟ್ಟುಕೊಟ್ಟರು ಆ ಮಿತ್ರರು.</p>



<p>ಈ ರೀತಿಯ ಬಿ‌ಜೆ‌ಪಿಯ ಅಂಧಭಕ್ತರಲ್ಲಿ ಉಂಟಾಗುತ್ತಿರುವ ಹೃದಯಾಳದ ಪ್ರಾಮಾಣಿಕ ಬದಲಾವಣೆ ಪ್ರಜಾಪ್ರಭುತ್ವದ ದೃಷ್ಟಿಯಿಂದ ಒಳ್ಳೆಯ ಸೂಚನೆ !!.</p>



<p><strong>ಪ್ರವೀಣ್ ಎಸ್ ಶೆಟ್ಟಿ</strong><strong></strong></p>



<p>ಹಿರಿಯ ಲೇಖಕರು</p>
]]></content:encoded>
					
		
		
			</item>
		<item>
		<title>ʼಬ್ರಹ್ಮಾಂಡʼ ಎಂಬ ಶಿವನ ವಿಸ್ತಾರವೆಷ್ಟು ? &#160;</title>
		<link>https://peepalmedia.com/what-is-the-extent-of-shiva-called-univers/</link>
		
		<dc:creator><![CDATA[praveen shetty]]></dc:creator>
		<pubDate>Sat, 18 Feb 2023 15:28:30 +0000</pubDate>
				<category><![CDATA[ಸೈನ್ಸ್ + ಟೆಕ್ನಾಲಜಿ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=19846</guid>

					<description><![CDATA[ಶಿವರಾತ್ರಿಯ ಮಹತ್ವ ಸಾರುವ ಅನೇಕ ಪೌರಾಣಿಕ ಕತೆಗಳು ನಮ್ಮಲ್ಲಿವೆ. ಅವುಗಳಲ್ಲಿ ಕೆಲವು ಕಥೆಗಳಿಗೆ ವೈಜ್ಞಾನಿಕ ದೃಷ್ಟಿಕೋನ ಕೊಡಬಹುದು ಎನ್ನುತ್ತಾ “ಬ್ರಹ್ಮಾಂಡʼ ಕಲ್ಪನೆಯನ್ನು ವೈಜ್ಞಾನಿಕ ದೃಷ್ಟಿಕೋನದಲ್ಲಿ ವಿಶ್ಲೇಷಿಸಿದ್ದಾರೆ ಸಂಸ್ಕೃತಿ ಚಿಂತಕರಾದ ಪ್ರವೀಣ್ ಎಸ್ ಶೆಟ್ಟಿ. ಒಮ್ಮೆ ವಿಷ್ಣು ಮತ್ತು ಬ್ರಹ್ಮ ಶಿವನ ‘ಆದಿ ಮತ್ತು ಅಂತ್ಯ’ ಅರಿಯಲು ಪ್ರಯತ್ನಿಸಿ&#160; ಅದು ಸಾಧ್ಯವಾಗದೆ ಹೋದಾಗ ಶಿವನನ್ನು ಲಿಂಗ ರೂಪದಲ್ಲಿ ಪೂಜಿಸಿದ ದಿನವೇ ಶಿವ ರಾತ್ರಿಯಂತೆ. ಈ ಲಿಂಗ ಆದಿ ಅಂತ್ಯವಿಲ್ಲದ ಬ್ರಹ್ಮಾಂಡದ ಪ್ರತೀಕವಂತೆ! ಹೌದು. ಬ್ರಹ್ಮಾಂಡದ ಆದಿ ಅಂತ್ಯ ಯಾರೂ [&#8230;]]]></description>
										<content:encoded><![CDATA[
<p class="has-cyan-bluish-gray-background-color has-background">ಶಿವರಾತ್ರಿಯ ಮಹತ್ವ ಸಾರುವ ಅನೇಕ ಪೌರಾಣಿಕ ಕತೆಗಳು ನಮ್ಮಲ್ಲಿವೆ. ಅವುಗಳಲ್ಲಿ ಕೆಲವು ಕಥೆಗಳಿಗೆ ವೈಜ್ಞಾನಿಕ ದೃಷ್ಟಿಕೋನ ಕೊಡಬಹುದು ಎನ್ನುತ್ತಾ “ಬ್ರಹ್ಮಾಂಡʼ ಕಲ್ಪನೆಯನ್ನು ವೈಜ್ಞಾನಿಕ ದೃಷ್ಟಿಕೋನದಲ್ಲಿ ವಿಶ್ಲೇಷಿಸಿದ್ದಾರೆ ಸಂಸ್ಕೃತಿ ಚಿಂತಕರಾದ ಪ್ರವೀಣ್ ಎಸ್ ಶೆಟ್ಟಿ.</p>



<p>ಒಮ್ಮೆ ವಿಷ್ಣು ಮತ್ತು ಬ್ರಹ್ಮ ಶಿವನ ‘ಆದಿ ಮತ್ತು ಅಂತ್ಯ’ ಅರಿಯಲು ಪ್ರಯತ್ನಿಸಿ&nbsp; ಅದು ಸಾಧ್ಯವಾಗದೆ ಹೋದಾಗ ಶಿವನನ್ನು ಲಿಂಗ ರೂಪದಲ್ಲಿ ಪೂಜಿಸಿದ ದಿನವೇ ಶಿವ ರಾತ್ರಿಯಂತೆ. ಈ ಲಿಂಗ ಆದಿ ಅಂತ್ಯವಿಲ್ಲದ ಬ್ರಹ್ಮಾಂಡದ ಪ್ರತೀಕವಂತೆ!</p>



<p>ಹೌದು. ಬ್ರಹ್ಮಾಂಡದ ಆದಿ ಅಂತ್ಯ ಯಾರೂ ಅರಿತಿಲ್ಲ. ಬ್ರಹ್ಮಾಂಡದ ಪರಿಧಿ ಲೆಕ್ಕ ಮಾಡಿದವರಿಲ್ಲ. ನಮಗೆ ಭೂಮಿಯಿಂದ ಸೂರ್ಯನ ದೂರ ಎಷ್ಟೆಂದು ಶಾಲೆಯಲ್ಲಿ ಕಲಿಸಲಾಗುತ್ತದೆ.&nbsp; ಆದರೆ ಒಂದು ಸೂರ್ಯನಿಂದ ಇನ್ನೊಂದು ಸೂರ್ಯನ ದೂರ ಎಷ್ಟೆಂದು ನಮಗೆ ಕಲಿಸುತ್ತಿಲ್ಲ.&nbsp; ರಾತ್ರಿ ಆಕಾಶ ನೋಡಿದಾಗ ನಮಗೆ ಲಕ್ಷಾಂತರ ನಕ್ಷತ್ರಗಳು ಕಾಣಿಸುತ್ತವೆ. ಆ ಪ್ರತಿಯೊಂದು ನಕ್ಷತ್ರವೂ ಒಂದೊಂದು ಸೂರ್ಯ!&nbsp; ಅವೆಲ್ಲಾ ನಮ್ಮ ಸೂರ್ಯನಿಗಿಂತ ನೂರಾರು ಪಟ್ಟು ದೊಡ್ಡದಿವೆ. (ಈ ಕುರಿತು ಯುಟ್ಯೂಬ್ ನಲ್ಲಿ ಲಭ್ಯವಿರುವ ಪರಿಣಾಮಕಾರಿ ಗ್ರಾಫಿಕ್ಸ್ ನೋಡಬಹುದು). ಆ ನಕ್ಷತ್ರವೆಂಬ ಸೂರ್ಯಗಳು ನಮಗಿಂತ ಎಷ್ಟು ದೂರ ಇವೆ ಎಂದರೆ ಅಲ್ಲಿಂದ ಹೊರಟ ಬೆಳಕು ನಮ್ಮ ಭೂಮಿಯ ವರೆಗೆ ಮುಟ್ಟಲು ಕನಿಷ್ಠ ನಾಲ್ಕು ವರ್ಷ ಬೇಕಾಗುತ್ತದೆ! ಕೆಲವು ನಕ್ಷತ್ರಗಳಂತೂ ನಮ್ಮಿಂದ ಎಷ್ಟು ದೂರ ಇವೆಯೆಂದರೆ ಅವುಗಳ ಬೆಳಕು ನಮ್ಮ ಭೂಮಿಗೆ ಮುಟ್ಟುವುದು ಒಂದು ಸಾವಿರ ವರ್ಷಗಳ ನಂತರ! ಇದಕ್ಕೆ ಹೊಲಿಸಿದರೆ ನಮ್ಮದೇ ಸೂರ್ಯನ ಬೆಳಕು ನಮ್ಮ ಭೂಮಿಗೆ ಮುಟ್ಟಲು ತೆಗೆದುಕೊಳ್ಳುವ ಸಮಯ ಕೇವಲ ಎಂಟು ನಿಮಿಷ ಮಾತ್ರ. ನಕ್ಷತ್ರಗಳು ಸೂರ್ಯನಿಗಿಂತ ನೂರಾರು ಪಟ್ಟು ಹೆಚ್ಚು ಶಾಖ ಹೊರ ಸೂಸುತ್ತವೆ, ಆದರೆ ಅದು ಭೂಮಿಯವರೆಗೆ ಮುಟ್ಟುವುದಿಲ್ಲ,&nbsp; ಅಂದರೆ ಕೇವಲ ಆ ನಕ್ಷತ್ರಗಳ ಬೆಳಕು ಮಾತ್ರ ಭೂಮಿಯ ವರೆಗೆ ಮುಟ್ಟುತ್ತದೆ.&nbsp;</p>



<p>ಬೆಳಕಿನ ವೇಗ ಮತ್ತು ಶಾಖದ ವೇಗ ಬೇರೆ ಬೇರೆ ಆಗಿರುತ್ತದೆ ಎಂದು ನಾವು ಹೈಸ್ಕೂಲಲ್ಲಿಯೇ ಕಲಿತಿರುತ್ತೇವೆ.&nbsp; ಹೀಗೆ ಭಯಂಕರ ಶಾಖ ಮತ್ತು ಭಾರಿ ಬೆಳಕು ಹೊರಸೂಸುವ ಲಕ್ಷಾಂತರ ಸೂರ್ಯಗಳು ಅರ್ಥಾತ್ ನಕ್ಷತ್ರಗಳು ಈ ಬ್ರಹ್ಮಾಂಡದಲ್ಲಿ ಇವೆ. ಭೂಮಿ ಮೇಲೆ ಇರುವ ಅತಿ ಪವರ್ ಫುಲ್ ಟೆಲಿಸ್ಕೋಪ್ ಸಹಾ ನೋಡಲಾಗದಷ್ಟು ದೂರದಲ್ಲಿ ಆ ಸೂರ್ಯಗಳು/ನಕ್ಷತ್ರಗಳು ಇವೆ. ಹಾಗಾದರೆ ಬ್ರಹ್ಮಾಂಡದ ಅಂತಿಮ ಸೀಮೆ ಎಲ್ಲಿಯಾದರೂ ಇರಲು ಸಾಧ್ಯವೇ? ಇದಕ್ಕಾಗಿಯೇ ಅದನ್ನು ಅನಂತ (infinity) ಎಂದು ಕರೆದಿರುವುದು. ನಮ್ಮ ಸೂರ್ಯನಿಗಿಂತ ನೂರು ಪಟ್ಟು ದೊಡ್ಡದಿರುವ ನಕ್ಷತ್ರವನ್ನು ಟೆಲಿಸ್ಕೋಪ್ ನಲ್ಲಿ ನಮ್ಮ ವಿಜ್ಞಾನಿಗಳು ನೋಡುವುದು ಸಾಧ್ಯವಾಗಿದೆ. ಆದರೆ ಅದರ ಆಚೆಗೂ ಅದಕ್ಕಿಂತಲೂ ಹಲವು ಪಟ್ಟು ದೊಡ್ಡದಿರುವ ಸೂರ್ಯಗಳು ಇವೆ.&nbsp; ಆದರೆ ಅವುಗಳ ಬಿಸಿ ಮತ್ತು ಬೆಳಕು ನಮ್ಮ ಸೂರ್ಯನಿಗಿಂತ ಎಷ್ಟು ಪಟ್ಟು ಹೆಚ್ಚಿರಬಹುದು ಎಂದು ನಮಗೆ ಊಹಿಸಲೂ ಸಾಧ್ಯವಿಲ್ಲ! (ಮಿಲ್ಕೀ-ವೇ ಮತ್ತು ಗೆಲಾಕ್ಸೀ ಕುರಿತು ಯುಟ್ಯೂಬ್ ನಲ್ಲಿ ಅದ್ಭುತ ಗ್ರಾಫಿಕ್ಸ್ ಇವೆ!)</p>



<p>ನಮ್ಮ ಸೂರ್ಯನ ಸುತ್ತ ಇರುವ ಒಂಬತ್ತು ಗ್ರಹಗಳಂತೆಯೇ ನಮಗೆ ರಾತ್ರಿ ಕಾಣುವ ಪ್ರತಿಯೊಂದು ಬೃಹತ್ ನಕ್ಷತ್ರಗಳ ಸುತ್ತಲೂ ನೂರಾರು ಗ್ರಹಗಳು ಇವೆ ಎನ್ನುತ್ತಾರೆ ಖಗೋಳ ವಿಜ್ಞಾನಿಗಳು. ಅಂದರೆ ಲಕ್ಷಾಂತರ ಗ್ರಹಗಳ ಸುತ್ತ ಕೋಟ್ಯಾಂತರ ಗ್ರಹಗಳು ಇವೆ ಎಂದಾಯಿತು.&nbsp; ಆ ಕೋಟ್ಯಾಂತರ ಗ್ರಹಗಳಲ್ಲಿ ಒಂದು ಗ್ರಹದಲ್ಲಿಯಾದರೂ ಭೂಮಿಯಂತಹಾ ವಾತಾವರಣ ಇದ್ದಿರಲೂ ಬಹುದು! ಭೂಮಿಗೆ ಎಲ್ಲಿಂದ ಮೊಟ್ಟಮೊದಲ ಜೀವಿಗಳು ಬಂದವೋ ಆ ಮೂಲದಿಂದಲೇ ಆ ಬೇರೆ ಬೇರೆ ಸೂರ್ಯಗಳ/ನಕ್ಷತ್ರಗಳ ಸುತ್ತ ಇರುವ ಕೋಟ್ಯಾಂತರ ಗ್ರಹಗಳ ಮೇಲೆಯೂ ಜೀವಿಗಳ ಉಗಮ ಆಗಿರಬಹುದು ಅಲ್ಲವೇ?&nbsp; ಭೂಮಿಯ ಮೇಲೆ ಎಲ್ಲಾ ಜೀವಿಗಳ ಉಗಮವನ್ನು ನಮ್ಮ ಮನುಷ್ಯರೂಪದ ಅಥವಾ ಅರೆಪ್ರಾಣಿ ರೂಪದ ದೇವರು ಮಾಡಿದ್ದರೆ ಆ ನಕ್ಷತ್ರಗಳ ಸುತ್ತ ಇರುವ ಗ್ರಹಗಳ ಮೇಲೆಯೂ ಆ ಮನುಷ್ಯ ರೂಪದ/ಪ್ರಾಣಿ ರೂಪದ ದೇವರು ಜೀವಿಗಳನ್ನು ಹುಟ್ಟಿಸಿರಲು ಸಾಧ್ಯವೇ?&nbsp; ದೇವರಿಗೆ ಮನುಷ್ಯ&nbsp; ರೂಪ ಅಥವಾ ಪ್ರಾಣಿ ರೂಪ ಇದೆಯೆಂದು ನಿರ್ಧರಿಸಿದವರು ಯಾರು? ನಾವು ಮನುಷ್ಯರೇ ತಾನೇ!</p>



<p>ಸೌರಮಂಡಲ ಅಂದರೆ ನಮ್ಮ ಸೂರ್ಯ ಮತ್ತು ಪೃಥ್ವಿ ಸಹಿತ ಎಲ್ಲಾ ಗ್ರಹಗಳ ರಚನೆ ಆಗಿದ್ದು 450 ಕೋಟಿ ವರ್ಷಗಳ ಹಿಂದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.&nbsp; ಮೊದಮೊದಲು ಪೃಥ್ವಿಯ ತುಂಬೆಲ್ಲಾ ಕೇವಲ ಲಾವಾ ಉಗುಳುವ ಅಗ್ನಿ ಪರ್ವತಗಳೆ ತುಂಬಿದ್ದವು, ಅದರ ನಂತರ ಪೃಥ್ವಿ ತಣ್ಣಗಾಗಿ, ನೀರು ಮತ್ತು ಗಾಳಿಯುಳ್ಳ ವಾತಾವರಣ ಸೃಷ್ಟಿಯಾಗಿ ಪ್ರಕೃತಿ ಮತ್ತು ಜೀವಗಳ ಉಗಮವಾಗಿದ್ದು ಸುಮಾರು 300 ಕೋಟಿ ವರ್ಷಗಳ ಹಿಂದೆಯಂತೆ.&nbsp; ಮೊಟ್ಟಮೊದಲು ಒಂಟಿ ಸೆಲ್ಲಿನ ಜೀವಿಗಳು (ಮೈಕ್ರೋಬ್ ಗಳು) ಉಗಮವಾದವಂತೆ. ಅದರ ನಂತರ ಮೊಟ್ಟೆ ಇಕ್ಕುವ ಜೀವಿಗಳ ಉಗಮವಾಯಿತು. ಕೊನೆಗೆ ಕೇವಲ 25 ಕೋಟಿ ವರ್ಷಗಳ ಹಿಂದೆಯಷ್ಟೆ ಮರಿ ಹಾಕುವ ‘ಸಸ್ತನಿ’ಗಳ ಉಗಮವಾಯಿತು. ಅವುಗಳಲ್ಲೂ ಎರಡು ಕಾಲ ಮೇಲೆ ನಡೆಯುವ ವಾನರ ಜೀವಿಯ ವಿಕಾಸ ಆಗಿದ್ದು ಕೇವಲ 60 ಲಕ್ಷ ವರ್ಷಗಳ ಹಿಂದೆ, ಹಾಗೂ ಮಾನವನ ಅತಿ ಹತ್ತಿರದ ಪೂರ್ವಜ ಹೊಮೊಸೇಪಿಯನ್ ವಿಕಸನಗೊಂಡಿದ್ದು ಎರಡು ಲಕ್ಷ ವರ್ಷಗಳ ಹಿಂದೆ ಅಷ್ಟೇ. ಅದರಲ್ಲೂ ಮೊದಲ 58 ಲಕ್ಷ ವರ್ಷ&nbsp; ವಾನರ/ಮಾನವ ಉಳಿದ ಕಾಡು ಪ್ರಾಣಿಗಳಂತೆಯೇ ಜೀವಿಸುತ್ತಿದ್ದ. ಕೇವಲ ಎರಡು ಲಕ್ಷ ವರ್ಷಗಳ ಹಿಂದೆ ಮಾನವ ಅಲೆಮಾರಿ ಬೇಟೆಗಾರ, ಸಂಗ್ರಹಕಾರ ಆಗಿ ಪ್ರಗತಿ ಹೊಂದಿದನು.&nbsp; ಹೆಚ್ಚೆಂದರೆ ಐವತ್ತು ಸಾವಿರ ವರ್ಷಗಳ ಹಿಂದೆಯಷ್ಟೆ ಮನುಷ್ಯ ನದಿ ದಡಗಳಲ್ಲಿ ಒಂದೆಡೆ ನೆಲೆ ನಿಂತು ಕೃಷಿ, ಹೈನು, ಮೀನುಗಾರಿಕೆಯಲ್ಲಿ ತೊಡಗಿಕೊಂಡನು, ಜತೆಗೆ ಬೆಂಕಿಯ ಸರಿಯಾದ ಬಳಕೆಯನ್ನು ಅರಿತುಕೊಂಡನು. ಆ ಘಟ್ಟದಲ್ಲಿಯೂ ಅವನಿಗೆ ‘ದೇವರು’ ಎಂಬ ಕಲ್ಪನೆ ಹುಟ್ಟಿಯೇ ಇರಲಿಲ್ಲ. ಒಂದು ವೇಳೆ ಮನುಷ್ಯ ರೂಪದ ಅಥವಾ ಅರೆಪ್ರಾಣಿ ರೂಪದ ದೇವರು ನಿಜವಾಗಿ ಇದ್ದಿದ್ದೇ ಆಗಿದ್ದರೆ 60 ಲಕ್ಷ ವರ್ಷಗಳ ಹಿಂದೆಯೇ ವಾನರ/ಮಾನವ ಜೀವಿ ಮೊದಲು ವಿಕಾಸಗೊಂಡ ಕೂಡಲೇ ದೇವರು ತನ್ನ ಮಹಿಮೆಯಿಂದ ಮನುಷ್ಯನಿಗೆ ಭಾಷೆ ಕಲಿಸಿ, ಬೆಂಕಿಯ ಬಳಕೆಯನ್ನು ಕಲಿಸಿ, ಈಗಿನ ಮಟ್ಟದ ಸುಸಂಸ್ಕೃತ ನಾಗರೀಕ ಸಮಾಜವನ್ನು ಆಗಲೇ ನಿರ್ಮಿಸಬೇಕಿತ್ತಲ್ಲವೇ?&nbsp; ಭೂಮಿಯ ಮೇಲಿನ ಮನುಷ್ಯರಿಗೆ ಹಾಗೂ ಇತರ ನಕ್ಷತ್ರಗಳ ಸುತ್ತ ಇರುವ ಗ್ರಹಗಳಲ್ಲಿ ಇರಬಹುದಾದ ಜೀವಿಗಳ ಜತೆ ಮಾನವನಿಗೆ ಯಾಕೆ ಸಂವಹನ ಸಂಪರ್ಕ ದೇವರು ಒದಗಿಸಲಿಲ್ಲ?&nbsp; 60 ಲಕ್ಷ ವರ್ಷಕ್ಕೆ ಮುಂಚೆ ವಾನರ/ಮಾನವ ಜಾತಿಯೇ ಈ ಭೂಮಿ ಮೇಲೆ ಇರದಿದ್ದಾಗ ಆ ಮಾನವ ರೂಪಿ ದೇವರು ಎಲ್ಲಿದ್ದ? ಏನು ಮಾಡುತ್ತಿದ್ದ?</p>



<p>ಈ ಮೇಲಿನ ಪ್ರಶ್ನೆಯನ್ನು ಎತ್ತಿಕೊಂಡು ಈ ಶಿವರಾತ್ರಿಯಂದು ರಾತ್ರಿಯಿಡೀ ಪೂಜೆ ಜಪತಪ ಮಾಡುವಾಗ ನಡುವೆ ಭಕ್ತರು ಸ್ವಲ್ಪ ಅವಕಾಶ ಮಾಡಿಕೊಂಡು ಮನೆಯಿಂದ ಹೊರಬಂದು ಆಕಾಶದಲ್ಲಿ ಮಿಂಚುವ ಲಕ್ಷಾಂತರ ತಾರೆಗಳನ್ನು ವೀಕ್ಷಿಸಿ ಸೀಮಾತೀತ ಶಿವನ (ಬ್ರಹ್ಮಾಂಡದ) ಕಲ್ಪನೆ ಮಾಡಿಕೊಳ್ಳಿ. ಅವುಗಳ ಸುತ್ತ ಇರಬಹುದಾದ ಕೋಟ್ಯಂತರ ಗ್ರಹಗಳನ್ನು ಊಹಿಸಿಕೊಳ್ಳಿ. ಕೊನೆಗೆ ನಿಮ್ಮನ್ನೆ ನೀವು ಒಂದು ಪ್ರಶ್ನೆ ಕೇಳಿಕೊಳ್ಳಿ- ನಮ್ಮ ಮನುಷ್ಯ ರೂಪದ ದೇವರು ಆ ತಾರಾಲೋಕದ ಗ್ರಹಗಳಿಗೆ ಯಾವ ರೂಪದಲ್ಲಿ ಹೋಗಿರಬಹುದು ಎಂದು? ಈ ಸಂದರ್ಭದಲ್ಲಿ ಮಹಾವಿಜ್ಞಾನಿ ಆಲ್ಬರ್ಟ್ ಐನ್ಸ್ಟೈನ್ ಹೇಳಿದ ಒಂದು ಮಾತು ನೆನಪಿಟ್ಟು ಕೊಳ್ಳಬೇಕು. ಅದೇನೆಂದರೆ “ಈ ಜಗತ್ತಿನಲ್ಲಿ ಎರಡು ವಿಷಯಕ್ಕೆ ಸೀಮೆ ಎಂಬುದೇ ಇಲ್ಲ, ಅವೆಂದರೆ ಒಂದನೆಯದು ಈ ಬ್ರಹ್ಮಾಂಡ, ಹಾಗೂ ಎರಡನೆಯದು ಮನುಷ್ಯನ ಮೂರ್ಖತನ”! ಮನುಷ್ಯ ರೂಪದ ಅಥವಾ ಅರೆಪ್ರಾಣಿ ರೂಪದ ದೇವರ ನಂಬಿಕೆಯು ಐನ್ಸ್ಟೈನ್ ಹೇಳಿದ ಎರಡನೇ ಸೀಮಾತೀತ ವರ್ಗಕ್ಕೆ ಸೇರಿರಬಹುದೇ? ಜ್ಯೋತಿಷಿಗಳಿಗೆ ಸೂರ್ಯನ ಚಲನೆ ಮತ್ತು ಸೂರ್ಯನ ಸುತ್ತ ತಿರುಗುವ ಗ್ರಹಗಳ ಚಲನೆ ಕರಾರುವಾಕ್ಕಾಗಿ ಗೊತ್ತಿದೆಯಂತೆ, ಹಾಗಾದರೆ ಅವರಿಗೆ ಬ್ರಹ್ಮಾಂಡ ಎಂಬ ಶಿವನ ಪರಿಧಿ ಹಾಗೂ ಸೀಮೆಯ ಜ್ಞಾನವಿದೆಯೇ? &nbsp;<a></a></p>



<p>ಮೂರು ಸಾವಿರ ವರ್ಷಗಳ ಹಿಂದೆ ಇದ್ದ ಭಾರತದ ಮೂಲ ಧರ್ಮಗಳಾದ ಆಜೀವಿಕಾ ಮತ್ತು ಶ್ರಮಣ ಸಂಸ್ಕೃತಿಗಳಲ್ಲಿ ದೇವರ ಕಲ್ಪನೆಯೇ ಇರಲಿಲ್ಲವಂತೆ! 2,200 ವರ್ಷಗಳ ಹಿಂದೆ ವೈದಿಕ ಧರ್ಮ ಬೆಳೆದ ಮೇಲೆಯೇ ದೇವರ ಕಲ್ಪನೆ ಭಾರತದೆಲ್ಲೆಡೆ ಹರಡಿದ್ದು. ಈಗಿನ ಬಹಳಷ್ಟು ವಿಚಾರವಾದಿಗಳು ಮನುಷ್ಯ ರೂಪದ ಅಥವಾ ಅರೆಪ್ರಾಣಿ ರೂಪದ ದೇವರನ್ನು ನಂಬದಿದ್ದರೂ ಈ ಜಗತ್ತಿನಲ್ಲಿ ಒಂದು ನಿರ್ದಿಷ್ಟ ಲೆಕ್ಕಾಚಾರದಂತೆಯೇ ಪ್ರಕೃತಿಯೊಳಗಿನ ಸಮಸ್ತ ವಿದ್ಯಮಾನಗಳು ನಡೆಯುತ್ತಿರುವುದನ್ನು ನೋಡಿದಾಗ ಯಾವುದೋ ಒಂದು “ಅದೃಶ್ಯ ದಿವ್ಯ ಶಕ್ತಿ” ಎಲ್ಲವನ್ನೂ ಕರಾರುವಾಕ್ಕಾಗಿ ನಿಯಂತ್ರಿಸುತ್ತಿದೆಯೆಂದು ಅನಿಸುತ್ತದೆ ಎಂದು ವಿಚಾರವಾದಿಗಳೂ ಒಪ್ಪುವುದನ್ನು ನಾನು ಕೇಳಿದ್ದೇನೆ. ಈಗಿನ ಜಟಿಲ ಜೀವನದಲ್ಲಿ ಎದುರಾಗುವ ಕಷ್ಟಗಳಿಂದ ಮುಖ್ಯವಾಗಿ ಮಹಿಳೆಯರು ಸ್ಥೈರ್ಯ ಕುಂದಿ ಮಾನಸಿಕ ವ್ಯಾಧಿಗೆ ಖಿನ್ನತೆಗೆ ಬೇಗ ಬಲಿಯಾಗುತ್ತಾರೆ. ಇದರಿಂದ ಅವರ ಕೌಟಂಬಿಕ ಜೀವನ ಅಸ್ತವ್ಯಸ್ತವಾಗುತ್ತದೆ. ಈ ಖಿನ್ನತೆಯಿಂದ ಹೊರಬರಲು ಮನೋವೈದ್ಯರು ಅವರಿಗೆ ಕೆಲವು ಸಿಂಥೆಟಿಕ್ ಡ್ರಗ್ ಗಳನ್ನು ಕೊಡುತ್ತಾರೆ. ಈ ಡ್ರಗ್ ಗಳಿಂದ ಆ ಮನೋರೋಗಿಯ ಮೆದುಳಲ್ಲಿ ರಾಸಾಯನಿಕ ಪ್ರಕ್ರಿಯೆ ನಡೆದು ಅವರಲ್ಲಿ ಉತ್ಸಾಹ ಮತ್ತು ಸ್ಥೈರ್ಯ ಮೂಡುತ್ತದೆ. ಅದೇ ಪ್ರಕಾರ ಹರಕೆ ಪೂಜೆ ಭಜನೆ ಜಪತಪಗಳಿಂದ (ಯಾವುದೇ ದೇವರು ಒಲಿಯದಿದ್ದರೂ) ಸುಪ್ತವಾಗಿ ಮನೋರೋಗಿಗಳ ಮೆದುಳಲ್ಲಿ ಒಂದು ರೀತಿಯ ರಾಸಾಯನಿಕ ಪ್ರಕ್ರಿಯೆ ನಡೆದು ಅವರಲ್ಲಿ ಧೈರ್ಯ ಮತ್ತು ಉತ್ಸಾಹ ಮೂಡುತ್ತದೆಯಂತೆ. ಮನೋರೋಗದಿಂದ ಬಳಲುತ್ತಿರುವವರಿಗೆ ದೇವರ ನಂಬಿಕೆ ಮತ್ತು ಪೂಜೆ ಭಜನೆ ಹರಕೆಗಳು ಹೆಚ್ಚು ಕಡಿಮೆ ಸಿಂಥೆಟಿಕ್ ಡ್ರಗ್ ಕೊಡುವಷ್ಟೇ ಶಮನಕಾರಿ ಪರಿಣಾಮ ಕೊಡುತ್ತದೆಯೆಂದು ಮನೋವಿಜ್ಞಾನಿಗಳ ಅಭಿಪ್ರಾಯ. ಮನುಷ್ಯನಿಗೆ ದೇವರ ನಂಬಿಕೆಯೊಂದು ಇದ್ದಿರದಿದ್ದರೆ ನಮಗೆ ಸಮಾಜದಲ್ಲಿ ಹೆಜ್ಜೆ ಹೆಜ್ಜೆಗೆ ಮನೋರೋಗಿಗಳು ಸಿಗುತ್ತಿದ್ದರು ಎಂಬುದು ಕೆಲವು ಮನಃಶಾಸ್ತ್ರಿಗಳ ಧೃಡ ಅಭಿಪ್ರಾಯ. ಇದನ್ನು ಕೆಲ ಮಟ್ಟಿಗೆ ಒಪ್ಪಲೇ ಬೇಕಾಗುತ್ತದೆ. ಆ ಕಾರಣಕ್ಕಾಗಿ ಒಮ್ಮೆಲೇ ಸಮಾಜದ ಮೇಲೆ ಚಾರ್ವಾಕನಂತೆ&nbsp; ನಾಸ್ತಿಕವಾದ ಹೇರಲು ಸಾಧ್ಯವಿಲ್ಲ ಎಂಬ ಮಾತಲ್ಲಿ ಹುರುಳಿದೆ.</p>



<p>ಕಮ್ಯೂನಿಷ್ಟ್ ಆಡಳಿತದ ದೇಶಗಳಲ್ಲಿ ಅಲ್ಲಿಯ ಸರ್ವಾಧಿಕಾರಿಗಳ 50-60 ವರ್ಷಗಳ ಶತಪ್ರಯತ್ನದ ಹೊರತಾಗಿಯೂ ಅಲ್ಲಿಯ ಜನರಲ್ಲಿ, ಹುಟ್ಟಿನಿಂದ ಬಂದಿದ್ದ ಧರ್ಮಬೀರು ಆಸ್ತಿಕ ಮನಸ್ಥಿತಿಯನ್ನು ತೆಗೆದು ಹಾಕುವುದು ಸಾಧ್ಯವಾಗಿಲ್ಲವೆಂಬುದನ್ನು ನಾವು ಗಮನಿಸಬಹುದು. ಆದರೆ ಜನರಲ್ಲಿ ಕ್ರಮೇಣ ವೈಜ್ಞಾನಿಕ ಮನೋಭಾವ ಹೆಚ್ಚಿಸಲು ಸೀಮೆಯಿಲ್ಲದ ಶಿವನ (ಬ್ರಹ್ಮಾಂಡದ) ಅಗಣಿತ ವಿಸ್ತಾರದ ಕುರಿತು ಯುವ ಜನರಲ್ಲಿ ಕುತೂಹಲವನ್ನು ಹುಟ್ಟಿಸುವುದು ಕೂಡ ಅವಶ್ಯವಾಗಿದೆ. ಮುಂದೊಂದು ದಿನ ನಮ್ಮ ದೇಶದ ಮೂಲ ಜೀವನ ಶೈಲಿ ಹೊಂದಿದ್ದ ಆಜೀವಿಕಾ, ಚಾರ್ವಾಕ, ಶ್ರಮಣ ಸಂಸ್ಕೃತಿಗಳು ಮರಳಿ ಬರಬಹುದೇನೋ!.</p>



<p><strong>ಪ್ರವೀಣ್ ಎಸ್ ಶೆಟ್ಟಿ</strong><strong></strong></p>



<p>ಲೇಖಕರು</p>
]]></content:encoded>
					
		
		
			</item>
		<item>
		<title>ತುಳುನಾಡಿನ ಮಣ್ಣಿನಲ್ಲಿರುವುದು ಭೂತದೈವ ಮತ್ತು ನಾಗದೇವರ ಕಾರಣಿಕ ಮಾತ್ರ</title>
		<link>https://peepalmedia.com/only-bhuta-and-naga-karnika-prevail-in-tulunadu/</link>
		
		<dc:creator><![CDATA[praveen shetty]]></dc:creator>
		<pubDate>Sat, 11 Feb 2023 15:29:07 +0000</pubDate>
				<category><![CDATA[ಧರ್ಮ- ಸಂಸ್ಕೃತಿ]]></category>
		<category><![CDATA[ವಿಶೇಷ]]></category>
		<guid isPermaLink="false">https://peepalmedia.com/?p=19708</guid>

					<description><![CDATA[ನಿಜವಾಗಿ ತುಳುನಾಡಿನ ಮಣ್ಣಿನಲ್ಲಿ ಕೇವಲ ಇಲ್ಲಿಯ ಮೂಲ ಭೂತದೈವ ಮತ್ತು ನಾಗದೇವರ ಕಾರಣಿಕ ಮಾತ್ರ ಇರುವುದು! ವೈದಿಕ ದೇವರುಗಳೆಲ್ಲಾ ಕೇವಲ ನಾಮಮಾತ್ರದ ಉತ್ಸವ ಮೂರ್ತಿಗಳು ಅಷ್ಟೇ. ಅದಕ್ಕಾಗಿಯೇ ಎಲ್ಲಾ ಬ್ರಾಹ್ಮಣರ ದೇವಸ್ಥಾನಗಳಲ್ಲಿ ತುಳುವರ ಭೂತದೈವಗಳನ್ನು ‘ಪರಿವಾರ ದೈವ’ ಎಂಬ ಹೆಸರಲ್ಲಿ ಪ್ರತಿಷ್ಠಾಪಿಸಿ ಆ ಭೂತದೈವಗಳ ನೈಜ ಕಾರಣಿಕವನ್ನು ಎರವಲು ಪಡೆದು ಅದು ವೈದಿಕ ದೇವರ ಮಹಿಮೆ ಎಂದು ಬಿಂಬಿಸಲಾಗುತ್ತದೆ]]></description>
										<content:encoded><![CDATA[
<p>ಕಾರ್ಕಳದ ಪಾರ್ಕಿನಲ್ಲಿಯ ಉಬ್ಬು ಶಿಲ್ಪಗಳಲ್ಲಿ ತುಳುನಾಡಿನ ಭೂತ ದೈವ ನಾಗ ದೇವರೆಲ್ಲಾ ಪರಶುರಾಮನ ಕಾಲಬುಡಲ್ಲಿ ಇರುವಂತೆ ಚಿತ್ರಿಸಿ ಅವಮಾನಿಸಲಾಗಿದೆ ಎಂದು ತುಳುವರು ಆಕ್ರೋಶ ವ್ಯಕ್ತ ಮಾಡಿದ್ದು ಸರಿಯಾಗಿದೆ. ಕಾರಣ ಅನಾದಿ ಕಾಲದಿಂದ ನಮ್ಮ ಸ್ಥಳೀಯ ದೇವರುಗಳನ್ನು ವೈದಿಕ ದೇವರ ಆಧೀನ ಶಕ್ತಿಗಳು ಎಂದು ಹೇಳಿ ಪುರೋಹಿತ ವರ್ಗದವರು, ಮುಖ್ಯವಾಗಿ ವೈಷ್ಣವ (ಮಾಧ್ವ) ಬ್ರಾಹ್ಮಣರು ಅವಮಾನಿಸುತ್ತಾ ಬಂದಿದ್ದಾರೆ.&nbsp; ತುಳು ಬ್ರಾಹ್ಮಣ ಪುರೋಹಿತರು ನಮ್ಮ ಮನೆಯಲ್ಲಿ/ ಕಚೇರಿಯಲ್ಲಿ ಯಾವುದೇ ಪೂಜೆ ಮಾಡಲಿ ಅದು ಮುಗಿದ ಕೂಡಲೇ ತಮ್ಮ ಎಡಗೈಯಿಂದ ತಮ್ಮ ಬಲ ಅಂಗೈಗೆ ತುಲಸಿ ನೀರು ಬಿಟ್ಟುಕೊಂಡು “ಕೃಷ್ಣಾರ್ಪಣಮಸ್ತು” ಎಂದು ಹೇಳಿಯೇ ಪೂಜೆ ಮುಗಿಸುತ್ತಾರೆ.&nbsp; ಗಣಪತಿ ಪೂಜೆ ಇರಲಿ, ಗಣ ಹೋಮವಿರಲಿ, ನಾಗ ಪೂಜೆ, ಶನಿ ಪೂಜೆ, ಶಿವ ಪೂಜೆ, ದುರ್ಗಾದೇವಿಯ ಪೂಜೆ, ಯಾವುದೇ ಆಗಿರಲಿ, ಎಲ್ಲಾ ಪೂಜೆಯ ಕೊನೆಗೆ “ ಕೃಷ್ಣಾರ್ಪಣಮಸ್ತು” ಅಥವಾ “ನಾರಾಯಣಾಂತರ್ಗತ”&nbsp; ಎಂದು ಹೇಳಿಯೇ ಅರ್ಚಕರು ಪೂಜೆ ಮುಗಿಸುವುದು ವಾಡಿಕೆ. ಈ ಕುರಿತು ನಾನು ಒಮ್ಮೆ ಪುರೋಹಿತರಿಗೆ ನೇರವಾಗಿ ಕೇಳಿದಾಗ ಅವರು ಹೇಳಿದ್ದು – ನಮ್ಮ (ಮಾಧ್ವರ) ನಂಬಿಕೆ ಪ್ರಕಾರ ವಿಷ್ಣುವೆ ಸರ್ವೋತ್ತಮ, ಹಾಗಾಗಿ ನಾವು ಯಾವುದೇ ಶೈವ-ಶಾಕ್ತ ದೇವರಿಗೆ ಪೂಜೆ ಮಾಡಿದರೂ ಅದು ಕೊನೆಗೆ ಹೋಗಿ ಮುಟ್ಟುವುದು ‘ವಿಷ್ಣುವಿಗೆ” ಮಾತ್ರ. ಆ ಕಾರಣಕ್ಕಾಗಿಯೇ ನಾವು ಅಲ್ಲಿ ನೆರೆದಿರುವ ಶೂದ್ರ ಭಕ್ತರಿಂದ ‘ಗೋವಿಂದಾ ನಿ ಗೋವಿಂದಾ’ ಎಂದು ಕೂಗಿಸುವುದು ಹಾಗೂ ಕೃಷ್ಣನ ಹೆಸರಲ್ಲಿಯೇ ತುಲಸಿ ನೀರು ಬಿಟ್ಟು ಪೂಜೆ ಮುಗಿಸುವುದು ವಾಡಿಕೆ ಎಂದು ಹೇಳಿದರು. ಶೂದ್ರರಿಗೆ ಇವೆಲ್ಲದರ ಅರ್ಥವೇ ಗೊತ್ತಿಲ್ಲದರಿಂದ ನಮ್ಮ ಹಿಂದೂ ದೇವರ ಪೂಜೆಯ ಕೊನೆಗೆ ದೇವರನ್ನೇ ಮೋಸ ಮಾಡುವ ಪುರೋಹಿತರ ಇಂತಹಾ ಕಪಟ ಮಂತ್ರಕ್ಕೆ ಯಾರೂ ಆಕ್ಷೇಪ ಎತ್ತುವುದಿಲ್ಲ. (ಕೇವಲ ಹವ್ಯಕ ಬ್ರಾಹ್ಮಣ ಪುರೋಹಿತರು ಮಾತ್ರ ಪೂಜೆಯ ಕೊನೆಗೆ “ಶಿವಾರ್ಪಣಮಸ್ತು” ಎಂದು ಹೇಳಿಯೇ ಪೂಜೆ ಮುಗಿಸುತ್ತಾರೆ!).</p>



<p>ಅದೇ ಪ್ರಕಾರ ನಮ್ಮ ಮಣ್ಣಿನ ಭೂತದೈವ ಗಳೆಲ್ಲಾ ಸ್ವತಂತ್ರ ದೈವೀಶಕ್ತಿಗಳಾಗಿದ್ದರೂ ಅವೆಲ್ಲಾ ಶಿವನ ಭೂತಗಣದಲ್ಲಿರುವ ಶಿವನ ಸೇವಕರು ಎಂದು ಅನ್ನುವುದರ ಹಿಂದೆಯೂ ವೈದಿಕರ ಮೇಲರಿಮೆ ಹಾಗೂ ಶೂದ್ರರ ಕೀಳರಿಮೆ ಅಡಗಿದೆ. ನಿಜವಾಗಿ ತುಳುನಾಡಿನ ಮಣ್ಣಿನಲ್ಲಿ ಕೇವಲ ಇಲ್ಲಿಯ ಮೂಲ ಭೂತದೈವ ಮತ್ತು ನಾಗದೇವರ ಕಾರಣಿಕ ಮಾತ್ರ ಇರುವುದು! ವೈದಿಕ ದೇವರುಗಳೆಲ್ಲಾ ಕೇವಲ ನಾಮಮಾತ್ರದ ಉತ್ಸವ ಮೂರ್ತಿಗಳು ಅಷ್ಟೇ. ಅದಕ್ಕಾಗಿಯೇ ಎಲ್ಲಾ ಬ್ರಾಹ್ಮಣರ ದೇವಸ್ಥಾನಗಳಲ್ಲಿ ತುಳುವರ ಭೂತದೈವಗಳನ್ನು ‘ಪರಿವಾರ ದೈವ’ ಎಂಬ ಹೆಸರಲ್ಲಿ ಪ್ರತಿಷ್ಠಾಪಿಸಿ ಆ ಭೂತದೈವಗಳ ನೈಜ ಕಾರಣಿಕವನ್ನು ಎರವಲು ಪಡೆದು ಅದು ವೈದಿಕ ದೇವರ ಮಹಿಮೆ ಎಂದು ಬಿಂಬಿಸಲಾಗುತ್ತದೆ! ಇದು ಸೂರ್ಯನ ಸ್ವತಂತ್ರ ಬೆಳಕನ್ನು ಎರವಲು ಪಡೆದು ಚಂದ್ರ ಬೆಳಗಿದಂತೆ!&nbsp; ತುಳುನಾಡಿನ ಹೆಚ್ಚಿನ ದುರ್ಗಾಪರಮೇಶ್ವರಿ ಕ್ಷೇತ್ರಗಳ ದೇವಿಗೆ “ಉಲ್ಲಾಳ್ತಿ” ಎಂದು ತುಳು ದೈವದ ಹೆಸರಲ್ಲಿ ಕರೆಯಲು ಮುಖ್ಯ ಕಾರಣ ಎಲ್ಲಾ ದುರ್ಗಾ ಕ್ಷೇತ್ರಗಳಲ್ಲಿ ನಿಜವಾದ ಕಾರಣಿಕ ಇರುವುದು ತುಳುವರ ಉಲ್ಲಾಳ್ತಿ ದೈವದ್ದೇ ಹೊರತು ಉತ್ತರ ಭಾರತದಿಂದ ವಲಸೆ ಬಂದ ವೈದಿಕ ದೇವರದ್ದು ಅಲ್ಲ!&nbsp; ವೈದಿಕ ದೇವರುಗಳೆಲ್ಲಾ ಕೇವಲ ಕಾಲ್ಪನಿಕ ಪೌರಾಣಿಕ ಕಥೆಗಳ ಪಾತ್ರಗಳು ಅಷ್ಟೇ!&nbsp; ಪರಶುರಾಮನೂ ಒಂದು ಕಾಲ್ಪನಿಕ ಪುರಾಣ ಪಾತ್ರ ಮಾತ್ರ ಎಂಬುದನ್ನೂ ಜನರ ಮನದಲ್ಲಿ ನಾಟಿಸಲು ಕಾರ್ಕಳದ ಪರಶುರಾಮ ಪಾರ್ಕಿನ ವಿವಾದ ಈಗ ನಮಗೆ ಒಂದು ಉತ್ತಮ ಅವಕಾಶ ಒದಗಿಸಿದೆ.</p>



<p>ನಮ್ಮ ತುಳು ಮಣ್ಣಿನ ಪವಿತ್ರ ಶಕ್ತಿಗಳನ್ನು ವೈದಿಕ ದೇವರಲ್ಲಿ ಸಮೀಕರಿಸುವ ಕೆಟ್ಟ ಪದ್ದತಿ ಬಹಳ ಹಿಂದಿನಿಂದಲೂ ನಮ್ಮ ತುಳುನಾಡಿನಲ್ಲಿ ಇದೆ. ಇತ್ತೀಚೆಗೆ ಕೊರಗಜ್ಜ (ಕೊರಗ ತನಿಯ) ಎಂಬ ದೈವದ ಕಾರಣಿಕದ ಕುರಿತು ಸಾಮಾನ್ಯ ಜನರಿಗೆ ನಂಬಿಕೆ ಹೆಚ್ಚಿದ್ದರಿಂದ ಈಗ ತುಳುನಾಡಿನಲ್ಲಿ ಇರುವ ಕೊರಗಜ್ಜ ಕ್ಷೇತ್ರಗಳಿಗೆ ದೊಡ್ಡ ಸಂಖ್ಯೆಯಲ್ಲಿ ಎಲ್ಲಾ ಜಾತಿಯ ಭಕ್ತರು ಭೇಟಿ ಕೊಡುತ್ತಿದ್ದಾರೆ ಹಾಗೂ ಹರಕೆ ಹೊರುತ್ತಿದ್ದಾರೆ (ತುಳುವ ಬ್ರಾಹ್ಮಣರ ಹೊರತು).&nbsp; ಯಾವುದೇ ಮೂಲನಿವಾಸಿಗಳ ಜಾನಪದ ದೇವರು ಜನಪ್ರಿಯರಾದ ಕೂಡಲೇ ವೈದಿಕರು ಆ ಜಾನಪದ ದೇವರನ್ನು ತಮ್ಮ ವೈದಿಕ ದೇವರ ಅವತಾರ ಅಥವಾ ಪರಮ ಭಕ್ತ ಎಂದು ಹೇಳಿ ಸ್ವಾಧೀನ ಪಡಿಸಿಕೊಳ್ಳುವುದು (Appropriate ಮಾಡುವುದು) ಶತಮಾನಗಳಿಂದ ನಡೆದೇ ಇದೆ. ಅದಕ್ಕೆ ಅನುಗುಣವಾಗಿಯೇ ಕೊರಗಜ್ಜನನ್ನು ಶಿವನ ಅವತಾರ ಅಥವಾ ಶಿವನ ಭಕ್ತ ಎಂದು ಬಿಂಬಿಸಿ ಈ ಮೂಲನಿವಾಸಿಗಳ ದೈವಗಳನ್ನು ವೈದಿಕರು ಕಾಲಾಂತರದಲ್ಲಿ ತಮ್ಮ ಕೈವಶ ಮಾಡಿಕೊಳ್ಳುವ ಉಪಾಯಕ್ಕೆ ಈಗಿನಿಂದಲೇ ಅಡಿಪಾಯ ಹಾಕುತ್ತಿರುವಂತೆ ಕಾಣುತ್ತಿದೆ.&nbsp; ಪಡುಬಿದ್ರಿಯಲ್ಲಿ ಬಹಳ ಕಾರಣಿಕ ಇರುವ ಉಲ್ಲಾಯ ದೈವದ ಬ್ರಹ್ಮಸ್ಥಾನವಿದೆ. ಅಲ್ಲಿ ಜನರು ನೈಜ ಭಕ್ತಿಯಿಂದ ಪ್ರಾಮಾಣಿಕವಾಗಿ ಬೇಡಿದ್ದು ಸಿದ್ದಿಸುತ್ತದೆ ಎಂಬ ಪ್ರತೀತಿ ಇದೆ.&nbsp; ಅಲ್ಲಿಗೆ ಬೆಂಗಳೂರಿನ ಸಿನೆಮಾರಂಗದವರೂ ಯಾವುದೇ ಪ್ರಚಾರವಿಲ್ಲದೆ ಬಂದು ಹರಕೆ ತೀರಿಸಿ ಹೋಗುತ್ತಿದ್ದಾರೆ.&nbsp; ಈ ಬಯಲು ದೈವಸ್ಥಾನದ ದೈವದ ಅಪಾರ ಕಾರಣಿಕ ಕಂಡು ವೈದಿಕರು ಈ ದೈವಕ್ಕೆ “ಖಡ್ಗೇಶ್ವರಿ” ಎಂಬ ವೈದಿಕ ಹೆಸರು ಕೊಟ್ಟು ಅಲ್ಲೊಂದು ಶಾಶ್ವತ ದೇವಸ್ಥಾನ ಕಟ್ಟಿ ಅದು ದುರ್ಗಾದೇವಿಯ ಕ್ಷೇತ್ರ ಎಂದು ಹೇಳಿ ಕಟೀಲು-ಬಪ್ಪನಾಡು ಮಾದರಿಯಲ್ಲಿ ಹಣದ ಹೊಳೆ ಹರಿಸುವ ಪ್ರಯತ್ನ ಹಿಂದಿನ 30 ವರ್ಷಗಳಿಂದ ನಡೆಸುತ್ತಲೇ ಇದ್ದಾರೆ. ಆದರೆ ಆ ಸ್ಥಳದ ಉಲ್ಲಾಯ ದೈವದ ನೈಜ ಕಾರಣಿಕವು ವೈದಿಕರ ಈ ಹುನ್ನಾರವನ್ನು 30 ವರ್ಷಗಳಿಂದ ಸತತವಾಗಿ ಸ್ವತಃ ವಿಫಲ ಗೊಳಿಸುತ್ತಿದೆಯಂತೆ! ಅದು ಬಯಲು ದೈವಸ್ಥಾನವಾಗಿಯೇ ಇರಬೇಕು ಹಾಗೂ ದ್ರಾವಿಡ ರೀತಿಯಲ್ಲಿಯೇ ಪೂಜೆಗಳು ನಡೆಯಬೇಕು, ಅಲ್ಲಿ ತುಲಸಿ ಕಟ್ಟೆ ಇಡಲೇಬಾರದು, ಕಾಣಿಕೆ ಡಬ್ಬಿ ಇಡಲೇಬಾರದು ಎಂಬ ಉಲ್ಲಾಯ ದೈವದ ಆದೇಶವನ್ನು ಪ್ರತಿ ಬಾರಿಯ ದರ್ಶನದಲ್ಲಿ ದೈವಪಾತ್ರಿಯೆ ಹೇಳುತ್ತಾರೆ.&nbsp; ಉಲ್ಲಾಯ ದೈವ ಇದು ಗಂಡು-ಹೆಣ್ಣು ಎರಡೂ ಅಲ್ಲದ ಅತ್ಯಂತ ಕಾರಣಿಕದ ಒಂದು ನಿರಾಕಾರ ದೈವ. ಆದರೂ ಏನೇನೋ ಉಪಾಯದಿಂದ ಅದನ್ನು ಒಂದು ಹೆಣ್ಣು ವೈದಿಕ ದೇವಿಯಾಗಿ ಪರಿವರ್ತಿಸುವ ಪ್ರಯತ್ನ ವೈದಿಕರಿಂದ ನಡೆಯುತ್ತಲೇ ಇದೆಯಂತೆ. ಅದಕ್ಕಾಗಿ ಒಂದು ಕಾಲ್ಪನಿಕ ರಾಕ್ಷಸನನ್ನು ಖಡ್ಗೇಶ್ವರಿ ದೇವಿ ಖಡ್ಗದಿಂದ ಕೊಲ್ಲುವ ಕ್ಷೇತ್ರ ಪುರಾಣವೂ ರೆಡಿ ಇದೆಯಂತೆ. ದೇವಿಯ ಖಡ್ಗದ ಹೊಡೆತಕ್ಕೆ ರಾಕ್ಷಸನ ಪಾದ ತುಂಡಾಗಿ ಭೂಮಿಗೆ ಬಿದ್ದ ಸ್ಥಳ “ಪಾದ ಬಿದ್ದ ಊರು” ಆಗಿ ಪಡುಬಿದ್ರಿ ಆಯಿತಂತೆ!).</p>



<p>ಕಾಲ್ಪನಿಕ ರಾಕ್ಷಸರ ಪಾತ್ರ ಇರುವ ಕ್ಷೇತ್ರ ಪುರಾಣಗಳೆ&nbsp; ವೈದಿಕರ ಮೂಲ ಬಂಡವಾಳ.&nbsp; ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು.&nbsp; ರಾಕ್ಷಸರು-ದಾನವರು-ಅಸುರರು ಎಂಬ ನೂರಡಿ ಎತ್ತರದ ದೈತ್ಯ ಜೀವಿಗಳು ಈ ಜಗತ್ತಿನಲ್ಲಿ ಎಂದೂ ಇರಲೇ ಇಲ್ಲ ಎಂದು ಜೀವಶಾಸ್ತ್ರಜ್ಞರು ಹೇಳುತ್ತಾರೆ. ಕೋಟ್ಯಂತರ ವರ್ಷಗಳ ಹಿಂದೆ ಇದ್ದ ಡೈನೋಸಾರ್ ಗಳ ಪಳೆಯುಳಿಕೆ ನಮಗೆ ಈಗ ಸಿಕ್ಕಿರುವಾಗ ಕೇವಲ ಮೂರು ಸಾವಿರ ವರ್ಷಗಳ ಹಿಂದೆ ಇದ್ದ ನೂರಾರು ಅಡಿ ಎತ್ತರದ ರಾಕ್ಷಸನ ಒಂದೇ ಒಂದೂ ಪಳೆಯುಳಿಕೆ ವಿಜ್ಞಾನಿಗಳಿಗೆ ಯಾಕೆ ಸಿಕ್ಕಿಲ್ಲ?&nbsp; ರಾಕ್ಷಸರು ಎಂಬ ಜೀವಿಗಳು ಕಾಲ್ಪನಿಕ ಎಂದ ಮೇಲೆ ಅವರನ್ನು ಕೊಲ್ಲಲು ಅವತಾರ ಎತ್ತುವ ದೇವರ ಪಾತ್ರಗಳೂ ಶುದ್ಧ ಕಾಲ್ಪನಿಕ ತಾನೇ? ಹಾಗಿರುವಾಗ ಹಿಂದೂ ಪುರಾಣದಲ್ಲಿ ಬರುವ ಎಲ್ಲಾ ರಾಕ್ಷಸರ ಪಾತ್ರಗಳೂ ಹಾಗೂ ಅವರನ್ನು ಕೊಲ್ಲಲು ಅವತಾರ ಎತ್ತುವ ದೇವರ ಕತೆಗಳೆಲ್ಲಾ ಶುದ್ಧ ಕಾಲ್ಪನಿಕ ಕಥೆಗಳು ಎಂದು ಜನರಿಗೆ ಮನನ ಮಾಡುವ ಕಾಲ ಈಗ ಬಂದಿರುವಂತಿದೆ!&nbsp;</p>



<p><strong>ಪ್ರವೀಣ್‌ ಶೆಟ್ಟಿ</strong></p>



<p><strong>ಸಂಸ್ಕೃತಿ ಚಿಂತಕರು</strong><strong></strong></p>
]]></content:encoded>
					
		
		
			</item>
		<item>
		<title>ಥೀಮ್‌ ಪಾರ್ಕಿನಲ್ಲಿ ಪರಶುರಾಮ ಪ್ರತಿಮೆ ಸ್ಥಾಪನೆ-ತುಳುನಾಡಿಗೂ ಪರಶುರಾಮನಿಗೂ ಏನು ಸಂಬಂಧ? ಭಾಗ ೨</title>
		<link>https://peepalmedia.com/installation-of-parashurama-statue-in-theme-park-what-is-the-connection-between-tulnadi-and-parashurama-part-2/</link>
		
		<dc:creator><![CDATA[praveen shetty]]></dc:creator>
		<pubDate>Sat, 28 Jan 2023 15:50:45 +0000</pubDate>
				<category><![CDATA[ವಿಶೇಷ]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Parashurama Statue in Theme Park]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[special story]]></category>
		<guid isPermaLink="false">https://peepalmedia.com/?p=19307</guid>

					<description><![CDATA[ಕಾರ್ಕಳ ತಾಲೂಕಿನ ಬೈಲೂರಿನ ಉಮಿಕ್ಕಲ್‌ ಬೆಟ್ಟದ ಮೇಲೆ ೩೩ ಅಡಿ ಎತ್ತರದ ಪರಶುರಾಮನ ಕಂಚಿನ ಪ್ರತಿಮೆಯೊಂದಿಗೆ ಪರಶುರಾಮ ಥೀಮ್‌ ಪಾರ್ಕ್‌ ಇಂದು ಮುಖ್ಯಮಂತ್ರಿಗಳಿಂದ ಲೋಕಾರ್ಪಣೆ ಗೊಂಡಿದೆ. ಕಾಲ್ಪನಿಕ ಪೌರಾಣಿಕ ವ್ಯಕ್ತಿ ಪರಶುರಾಮನ ಉಲ್ಲೇಖವು ಕರಾವಳಿಯ ಬಗ್ಗೆ ರಚಿತಗೊಂಡ ಯಾವ ಕೃತಿಗಳಲ್ಲೂ ಇಲ್ಲದಿರುವುದರಿಂದ ತುಳುನಾಡಿಗೂ ಪರಶುರಾಮನಿಗೂ ಯಾವ ಸಂಬಂಧವೂ ಇಲ್ಲವೆಂದು ನಿರೂಪಿಸುತ್ತಾರೆ ಚಿಂತಕ ಪ್ರವೀಣ್‌ ಶೆಟ್ಟಿ. ಈ ಸಕಾಲಿಕ ಲೇಖನದ ಎರಡನೇ ಭಾಗ ಇಲ್ಲಿದೆ. ತನ್ನ ತಂದೆಗೆ ಯಾವನೋ ಒಬ್ಬ ರಾಜ ಅನ್ಯಾಯ ಮಾಡಿದನು ಎಂದು ಪರಶುರಾಮ ಕೇವಲ [&#8230;]]]></description>
										<content:encoded><![CDATA[
<p><strong>ಕಾರ್ಕಳ ತಾಲೂಕಿನ ಬೈಲೂರಿನ ಉಮಿಕ್ಕಲ್‌ ಬೆಟ್ಟದ ಮೇಲೆ ೩೩ ಅಡಿ ಎತ್ತರದ ಪರಶುರಾಮನ ಕಂಚಿನ ಪ್ರತಿಮೆಯೊಂದಿಗೆ ಪರಶುರಾಮ ಥೀಮ್‌ ಪಾರ್ಕ್‌ ಇಂದು ಮುಖ್ಯಮಂತ್ರಿಗಳಿಂದ ಲೋಕಾರ್ಪಣೆ ಗೊಂಡಿದೆ. ಕಾಲ್ಪನಿಕ ಪೌರಾಣಿಕ ವ್ಯಕ್ತಿ ಪರಶುರಾಮನ ಉಲ್ಲೇಖವು ಕರಾವಳಿಯ ಬಗ್ಗೆ ರಚಿತಗೊಂಡ ಯಾವ ಕೃತಿಗಳಲ್ಲೂ ಇಲ್ಲದಿರುವುದರಿಂದ ತುಳುನಾಡಿಗೂ ಪರಶುರಾಮನಿಗೂ ಯಾವ ಸಂಬಂಧವೂ ಇಲ್ಲವೆಂದು ನಿರೂಪಿಸುತ್ತಾರೆ ಚಿಂತಕ ಪ್ರವೀಣ್‌ ಶೆಟ್ಟಿ. ಈ ಸಕಾಲಿಕ ಲೇಖನದ ಎರಡನೇ ಭಾಗ ಇಲ್ಲಿದೆ.</strong></p>



<figure class="wp-block-image size-full"><img decoding="async" width="739" height="415" src="https://peepalmedia.com/wp-content/uploads/2023/01/parashurama-park-1.jpg" alt="" class="wp-image-19311" srcset="https://peepalmedia.com/wp-content/uploads/2023/01/parashurama-park-1.jpg 739w, https://peepalmedia.com/wp-content/uploads/2023/01/parashurama-park-1-300x168.jpg 300w, https://peepalmedia.com/wp-content/uploads/2023/01/parashurama-park-1-150x84.jpg 150w, https://peepalmedia.com/wp-content/uploads/2023/01/parashurama-park-1-696x391.jpg 696w" sizes="(max-width: 739px) 100vw, 739px" /><figcaption class="wp-element-caption"><strong>ಪರಶುರಾಮ ಥೀಮ್ ಪಾರ್ಕ್</strong> </figcaption></figure>



<p>ತನ್ನ ತಂದೆಗೆ ಯಾವನೋ ಒಬ್ಬ ರಾಜ ಅನ್ಯಾಯ ಮಾಡಿದನು ಎಂದು ಪರಶುರಾಮ ಕೇವಲ ಆ ರಾಜನ ಕುಟುಂಬದ ಮೇಲೆ ಸೇಡು ತೀರಿಸಿಕೊಳ್ಳುವ ಬದಲು ಸಂಪೂರ್ಣ ಕ್ಷತ್ರಿಯ ಜಾತಿಯ ಮೇಲೆ ಸೇಡು ತೀರಿಸಿ ಎಲ್ಲಾ ಕ್ಷತ್ರಿಯ ಗಂಡಸರನ್ನು ಕೊಲ್ಲುತ್ತಾನಂತೆ! ಗರ್ಭಿಣಿ ಮಹಿಳೆಯರ ಹೊಟ್ಟೆಯಲ್ಲಿ ಇರುವ ಗಂಡು ಭ್ರೂಣವನ್ನೂ ನಾಶ ಮಾಡಿದನಂತೆ! ಈ ಭೂಮಿಗೆ 21 ಸಾರಿ ಸುತ್ತಿ ಏಳೂ ಖಂಡಗಳಲ್ಲಿಯ ಸಮಸ್ತ ಕ್ಷತ್ರಿಯ ಗಂಡಸರನ್ನು ಕೊಂದನಂತೆ. ಆನಂತರ ಬದುಕಿ ಉಳಿದವರು ಕೇವಲ ಕ್ಷತ್ರಿಯ ಹೆಂಗಸರು ಮಾತ್ರವಂತೆ! (ಭೂಲೋಕವೆಂದರೆ ಅದು ಒಂದು ಹಳ್ಳಿಯೇ? ಅಥವಾ ಆಫ್ರಿಕಾ, ಅಮೆರಿಕಾ, ಆಸ್ಟ್ರೇಲಿಯಾ, ಯುರೋಪ್ ಖಂಡಗಳಿಗೂ ಪರಶುರಾಮ ಹೋಗಿದ್ದನೆ? ಚೀನಾ, ಜಪಾನ್, ಕೋರಿಯಾಕ್ಕೂ ಹೋಗಿದ್ದನೆ? ಧ್ರುವ ಪ್ರದೇಶಕ್ಕೂ ಹೋಗಿದ್ದನೆ? ಅಲ್ಲಿಯೂ ಕ್ಷತ್ರಿಯರು ಇದ್ದರೆ?)</p>



<p>ನಮ್ಮ ಅನೇಕ ಪೌರಾಣಿಕ ಕಥೆಗಳಲ್ಲಿರುವ ಇಂತಹಾ ಅಸಂಗತ ಅಂಶಗಳನ್ನು ವಿಶ್ಲೇಷಿಸಲು ಈಗ ಕಾಲ ಪಕ್ವವಾಗಿದೆ. ಒಂದೆಡೆ ಪರಶುರಾಮನು ಕ್ಷತ್ರಿಯರನ್ನು ಸಂಪೂರ್ಣ ನಾಶ ಮಾಡಿದ ಎಂದು ಪುರಾಣ ಹೇಳುತ್ತದೆ. ಆದರೆ ಭಾರತದ ಎಲ್ಲಾ ರಾಜ್ಯಗಳಲ್ಲಿ ಇಂದಿಗೂ ಶೇ.20 ರಷ್ಟು ಹಿಂದೂಗಳು ಕ್ಷತ್ರಿಯ ವರ್ಗದಲ್ಲಿ ಬರುತ್ತಾರೆ. ಪರಶುರಾಮನ ದಾಳಿಯಿಂದ ಕ್ಷತ್ರಿಯ ಗಂಡಸರೆಲ್ಲಾ ಸತ್ತಿದ್ದರೂ ಬದುಕಿ ಉಳಿದಿದ್ದ ಕ್ಷತ್ರಿಯ ಹೆಂಗಸರಿಗೆ ಮುಂದಿನ ಪೀಳಿಗೆಯ ಮಕ್ಕಳಾಗಿದ್ದು “ನಿಯೋಗ” ಎಂಬ ವಿಧಾನದಿಂದಂತೆ ! (ನಿಯೋಗ ಅಂದರೆ ಬ್ರಾಹ್ಮಣ ಗಂಡಸರ ಜತೆ ಅನೈತಿಕ ಸಂಬಂಧದಿಂದಾಗಿ ಕ್ಷತ್ರಿಯ ಹೆಂಗಸರಿಗೆ ಮುಂದಿನ ಪೀಳಿಗೆಯ ಮಕ್ಕಳಾಗಿ ಅವರ ಕ್ಷತ್ರಿಯ ಸಂತತಿ ಮುಂದುವರಿಯುವುದು!) ಈ ಅನೈತಿಕ ಕಟ್ಟುಕಥೆಯ ಮೂಲಕ ಈಗಿನ ಕ್ಷತ್ರಿಯರ ಹುಟ್ಟನ್ನೇ ವೈದಿಕರು ನೇರವಾಗಿ ಅವಮಾನಿಸಿದ್ದಾರೆ! ಪರಶುರಾಮನ ಇಂತಹಾ ಬಾಲಿಶ ಕಥೆಯನ್ನು ನಾವು  ಪ್ಪಿಕೊಳ್ಳುವುದರಿಂದ ಇಂದಿನ ಎಲ್ಲಾ ಕ್ಷತ್ರಿಯರೂ ಬ್ರಾಹ್ಮಣರಿಗೆ ಅನೈತಿಕವಾಗಿ ಹುಟ್ಟಿದವರು ಎಂದು ಸ್ವತಃ ಈಗಿನ ಕ್ಷತ್ರಿಯ ಜಾತಿಯವರೆ ಒಪ್ಪಿಕೊಂಡಂತಾಯಿತು ತಾನೇ? ಇಷ್ಟೊಂದು ಅವಮಾನಕರ ಕಥೆಯನ್ನು ಈಗಿನ ಕ್ಷತ್ರಿಯ ವರ್ಗದವರು ಸಭೆ ಸಮಾರಂಭಗಳಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುವುದೆಂದರೆ ತಮ್ಮ ಪೂರ್ವಜರ ಶೀಲವನ್ನು ತಾವೇ ಅವಮಾನಿಸಿದಂತೆ ಅಲ್ಲವೇ! ವೈದಿಕರ ಕಾಲ್ಪನಿಕ ಪೌರಾಣಿಕ ಕಥೆಗಳು ಯಾವ ಮಟ್ಟಕ್ಕೆ ಶೂದ್ರರನ್ನು ಮಾನಸಿಕ ಗುಲಾಮಗಿರಿಗೆ ದೂಡಿವೆ ಎಂದರೆ ಶೂದ್ರರು ಇಂತಹಾ ಅವಮಾನಕರ ಕಥೆಯನ್ನು ತಾವೇ ಸ್ವತಃ ಪ್ರಚಾರ ಮಾಡುವ ಮೂಲಕ ತಮ್ಮ ಇಡೀ ಸಮುದಾಯದ ಪೂರ್ವಜರು ಅನೈತಿಕವಾಗಿ ಹುಟ್ಟಿದವರು ಎಂದು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದ್ದಾರೆ!</p>



<p>ನಮ್ಮ ಕರಾವಳಿ ಜಿಲ್ಲೆಗಳಲ್ಲಿ ಯಾವುದೇ ಸಭೆ ಸಮಾರಂಭಗಳಿಗೆ ಹೋದರೂ ಅಲ್ಲಿ ಭಾಷಣಕಾರ ಮೊಟ್ಟಮೊದಲು ಹೇಳುವುದು ತಮ್ಮದು &#8220;ಪರಶುರಾಮ ಸೃಷ್ಟಿ&#8221; ಎಂದು. ಯಾರೋ ಒಬ್ಬ ಬ್ರಾಹ್ಮಣ ಸನ್ಯಾಸಿ ಉತ್ತರ ಭಾರತದಿಂದ ದಕ್ಷಿಣಕ್ಕೆ ಬಂದು ತನ್ನ ಕೊಡಲಿ ಸಮುದ್ರಕ್ಕೆ ಬೀಸಿ ಇಲ್ಲಿ ಸಾವಿರಾರು ಚದರು ಮೈಲಿ ಭೂಮಿಯನ್ನು ಸಮುದ್ರದಿಂದ ಮೇಲೆತ್ತಿದ ಮತ್ತು ಈ ಹೊಸ ಭೂಮಿಯನ್ನೆಲ್ಲಾ ಬ್ರಾಹ್ಮಣರಿಗೆ ದಾನ ಮಾಡಿದ, ಹಾಗೂ ನಂತರ ಅದೇ ಬ್ರಾಹ್ಮಣರು ಬೇರೆ ಕಡೆಯಿಂದ ಕ್ಷತ್ರಿಯ ವಿಧವೆಯರನ್ನು ಹಾಗೂ ಶೂದ್ರರನ್ನೂ ಕರೆತಂದು ಇಲ್ಲಿ ನೆಲೆಗೊಳಿಸಿ ಅವರಿಗೆ ಮಕ್ಕಳನ್ನು ಹುಟ್ಟಿಸಿಕೊಟ್ಟರು ಎಂದು ತಮ್ಮದೇ ಪೂರ್ವಜರನ್ನು ನೇರವಾಗಿ ಅವಮಾನಿಸುವ ಕಟ್ಟುಕಥೆಯನ್ನು ಈ ಆಧುನಿಕ ಯುಗದಲ್ಲೂ ನಾವು ಶೂದ್ರರೇ ಪ್ರಚಾರ ಮಾಡುತ್ತಿರುವುದು ವಿಪರ್ಯಾಸ!</p>



<p>ಇಲ್ಲಿಯ ಇತಿಹಾಸದ ಸಂಶೋಧಕರ ಪ್ರಕಾರ ತುಳುನಾಡಿನಲ್ಲಿ ಮೊದಲು ಬ್ರಾಹ್ಮಣರೇ ಇರಲಿಲ್ಲವಂತೆ. ಬ್ರಾಹ್ಮಣರು ತುಳುನಾಡಿಗೆ ಉತ್ತರ ಭಾರತದ ಅಹಿಚ್ಛತ್ರದಿಂದ ವಲಸೆ ಬಂದಿದ್ದು ಬನವಾಸಿ ಕದಂಬ ರಾಜರ ಕಾಲದಲ್ಲಿ, ಅಂದರೆ ಸುಮಾರು 1500 ವರ್ಷಗಳ ಹಿಂದೆ. ಇದರ ಅರ್ಥ ಶೂದ್ರರೇ ತುಳುನಾಡಿನ ಮೂಲ ನಿವಾಸಿಗಳು ಹಾಗೂ ಬ್ರಾಹ್ಮಣರು ತದನಂತರ ವಲಸೆ ಬಂದವರು. ಇದು ಬ್ರಾಹ್ಮಣ ಪರಶುರಾಮ ನಮ್ಮ ತುಳುನಾಡನ್ನು ಮೊದಲು ಸೃಷ್ಟಿಸಿ ನಂತರ ಅವನೇ ಬ್ರಾಹ್ಮಣರನ್ನು ಹಾಗೂ ಶೂದ್ರ ಪ್ರಜೆಗಳನ್ನು ಕರೆತಂದಿದ್ದು ಎಂಬ ಸಿದ್ಧಾಂತ ಶುದ್ಧ ಸುಳ್ಳು ಎಂಬುದನ್ನು ಸಾಬೀತುಗೊಳಿಸುತ್ತದೆ.</p>



<p>ಆದಿಮ ಸಂಸ್ಕೃತಿಯನ್ನು ಅನುಸರಿಸುತ್ತಿದ್ದ ತುಳುನಾಡಿನಲ್ಲಿ ಪ್ರಕೃತಿ ಪೂಜೆಯ ಪ್ರತೀಕವಾಗಿ ನಾಗಪೂಜೆ ಮತ್ತು ಭೂತಪೂಜೆ ಅನಾದಿ ಕಾಲದಿಂದಲೂ ನಡೆಯುತ್ತಿದೆ. ನಾಗಪೂಜೆಗೂ ವೈದಿಕ ಪರಶುರಾಮನಿಗೂ ಯಾವುದೇ ಸಂಬಂಧ ಇಲ್ಲ. ಪರಶುರಾಮನ ಕಾಲ್ಪನಿಕ ಕಥೆ ತುಳುನಾಡಿಗೆ ಆಮದಾಗುವುದಕ್ಕಿಂತ ನೂರಾರು ವರ್ಷಗಳ ಮೊದಲೇ ನಮ್ಮಲ್ಲಿ ನಾಗಪೂಜೆ ಇತ್ತು. ಪರಶುರಾಮನಿಂದ ತುಳುನಾಡಿನಲ್ಲಿ ನಾಗಪೂಜೆ ಸುರುವಾಗಿದ್ದು ಎಂದು ಕರಾವಳಿಯ ಇತಿಹಾಸವನ್ನೇ ವೈದಿಕರು ತಿರುಚಿ ಈಗ ಇಲ್ಲಿಯ ಮೂಲನಿವಾಸಿಗಳನ್ನು ಮೋಸ ಮಾಡುತ್ತಿದ್ದಾರೆ! ಈಗಲೂ ಪ್ರತಿ ಪೂಜೆಯಲ್ಲೂ ಪರಶುರಾಮನ ಹೆಸರು ಉಲ್ಲೇಖಿಸಿಯೇ ಶೂದ್ರರ ಮನೆಯಲ್ಲಿ ಪೂಜೆ ಸಂಪನ್ನ ಮಾಡುವುದು ಕರಾವಳಿಯ ತುಳುವ ಪುರೋಹಿತರ ಅನಿಷ್ಟ ಪದ್ಧತಿ. ಈ ಆಧುನಿಕ ಕಾಲದಲ್ಲೂ ಇಂತಹಾ ಶುದ್ಧ ಕಾಲ್ಪನಿಕ ಕಥೆಯನ್ನು ಅಡಿಗಡಿಗೆ ಉದ್ಧರಿಸುವ ಮೂಲಕ ಪುರೋಹಿತರು ನಮ್ಮ ಪೂರ್ವಜರ ಶೀಲವನ್ನೇ ಅವಮಾನಿಸುತ್ತಿದ್ದಾರೆ ಎಂಬುದನ್ನು ಮರೆಯಬಾರದು. ಆದರೂ ಕರಾವಳಿಯ ಕ್ಷತ್ರಿಯ-ಶೂದ್ರ ವರ್ಗದವರೇ ಪರಶುರಾಮನ ಈ ಬಾಲಿಶ ಕಥೆಯನ್ನು ಈಗಲೂ ನಂಬುವುದು ಮತ್ತು ಪ್ರತಿಯೊಂದು ಸಭೆಯಲ್ಲೂ &#8220;ನಮ್ಮದು ಪರಶುರಾಮ ಸೃಷ್ಟಿ&#8221; ಎಂದು ಹೆಮ್ಮೆಯಿಂದ (ನಿರ್ಲಜ್ಜವಾಗಿ) ಹೇಳಿಕೊಳ್ಳುವುದು ತುಂಬಾ ದುರಾದೃಷ್ಟಕರ.</p>



<p>ಅಂತೆಯೇ ನಮ್ಮ ಕರಾವಳಿಯಲ್ಲಿಯೂ ಬಿಲ್ಲವ ಬಂಟ ಮೊಗವೀರ ಅರೆಭಾಷೆ ಗೌಡರು ರಾಮಕ್ಷತ್ರಿಯ, ಮುಂತಾದ ಒಟ್ಟು ಶೇ.60 ಕ್ಕೂ ಹೆಚ್ಚು ಜನಸಂಖ್ಯೆ ಇರುವ ಸಮುದಾಯದವರು ತಾವು ಕ್ಷತ್ರಿಯರು ಎಂದು ಹೆಮ್ಮೆ ಪಡುತ್ತಾರೆ, (ಆದರೆ ಮಿಲಿಟರಿ ಸೇರಲು ಹೆದರುತ್ತಾರೆ ಎಂಬುದು ಬೇರೆ ವಿಷಯ!). ಹಾಗಿರುವಾಗ ಈ 60% ಕರಾವಳಿಗರ ಪೂರ್ವಜರೆಲ್ಲಾ ನಿಯೋಗ ಎಂಬ ಬಲಾತ್ಕಾರದ ಕೂಡುವಿಕೆಯಿಂದ ಹುಟ್ಟಿದವರು ಎಂದು ಅವಮಾನಿಸುವ ಪರಶುರಾಮನ ಕುತ್ಸಿತ ಪುರಾಣ ಕಥೆಯನ್ನು ನಮ್ಮ ಕರಾವಳಿಯವರ ಹೊರತು ಬೇರೆ ಯಾವುದೇ ಪ್ರದೇಶದ ಮೂಲನಿವಾಸಿಗಳೂ ಪೆದ್ದುಪೆದ್ದಾಗಿ ಹೇಳಿಕೊಂಡು ತಿರುಗುವುದಿಲ್ಲ!</p>



<p>ಅಷ್ಟೇ ಅಲ್ಲ ಭಾರತದ ಯಾವುದೇ ರಾಜ್ಯಕ್ಕೆ ಹೋದರೂ ಪ್ರತಿ ರಾಜ್ಯದಲ್ಲಿಯೂ ಕ್ಷತ್ರಿಯ ವರ್ಗದಲ್ಲಿ ಬರುವ ಜಾತಿಗಳವರು ಕನಿಷ್ಠ 20% ಆದರೂ ಇದ್ದಾರೆ. ಇವರ ಪೂರ್ವಿಕ ಗಂಡಸರನ್ನು ಪರಶುರಾಮ ಸಾರಾಸಗಟಾಗಿ ಕೊಂದಿದ್ದರೆ ಅವರ ಈಗಿನ ಪೀಳಿಗೆ ನಿಯೋಗದಿಂದ ಹುಟ್ಟಿದ್ದು ಎಂದು ಒಪ್ಪಿದಂತೆ ಆಯಿತಲ್ಲವೇ? ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಸ್, ಜಗದೀಶ್ ಚಂದ್ರ ಬೋಸ್, ಲಾಲ್ ಬಹದ್ದೂರ್ ಶಾಸ್ತ್ರಿ, ಬಾಬು ರಾಜೇಂದ್ರ ಪ್ರಸಾದ್, ಜಯಪ್ರಕಾಶ್ ನಾರಾಯಣ್, ಜ್ಯೋತಿ ಬಸು, ಮುಂತಾದವರೆಲ್ಲಾ “ಕಾಯಸ್ಥ” ಎಂಬ ಕ್ಷತ್ರಿಯ ಜಾತಿಯವರು. ಪ್ರಧಾನಿಗಳಾಗಿದ್ದ ಚರಣ್ ಸಿಂಗ್, ಚಂದ್ರಶೇಖರ್, ವಿ ಪಿ ಸಿಂಗ್, ದೇವೇಗೌಡ, ಡಾ.ಮನಮೋಹನ್ ಸಿಂಗ್ ಇವರ ಜಾತಿಗಳೂ ಕ್ಷತ್ರಿಯ ವರ್ಗದಲ್ಲಿ ಬರುತ್ತವೆ. ಹಾಗಾದರೆ ಇವರ ಪೂರ್ವಜರೆಲ್ಲಾ ಬ್ರಾಹ್ಮಣರಿಗೆ ಅನೈತಿಕವಾಗಿ ಹುಟ್ಟಿದವರೇ?</p>



<p>ಒಂದು ವೇಳೆ ಪರಶುರಾಮನೂ ಏಕಲವ್ಯ, ಕರ್ಣ, ಶಂಭೂಕರಂತೆ ಕೆಳ ಜಾತಿಯವನಾಗಿದ್ದರೆ ಹಾಗೂ ಅವನು ಕ್ಷತ್ರಿಯ ಗಂಡಸರನ್ನೆಲ್ಲಾ ಏಕಾಂಗಿಯಾಗಿ ನಾಶ ಮಾಡಿ ಅವರ ಹೆಂಗಸರನ್ನು ತನ್ನ ಕೆಳಜಾತಿಯ ಗಂಡಸರೊಂದಿಗೆ ‘ನಿಯೋಗ’ (ಬಲಾತ್ಕಾರದ ಕೂಡುವಿಕೆ) ಮಾಡಿ ಇಂದಿನ ಕ್ಷತ್ರಿಯ ಜನಾಂಗವನ್ನು (ಅನೈತಿಕವಾಗಿ) ಹುಟ್ಟಿಸಿದನು ಎಂಬ ಪುರಾಣ ಕಥೆ ಪ್ರಚಲಿತವಾಗಿದ್ದರೆ ಇಂದು ನಮ್ಮ ಕರಾವಳಿಯವರು ಮಾತು ಮಾತಿಗೆ ನಮ್ಮದು “ಶೂದ್ರ ಭಾರ್ಗವ ಪರಶುರಾಮನ ಸೃಷ್ಟಿ” ಎಂದು ಹೆಮ್ಮೆ ಪಡುತ್ತಿದ್ದರೆ? ಡಾ.ಅಂಬೇಡ್ಕರರು ನಮ್ಮ ಸಂವಿಧಾನ ಬರೆದಿದ್ದಾರೆ ಎಂಬುದನ್ನೇ ಒಪ್ಪಿಕೊಳ್ಳಲು ಹಿಂಜರಿಯುತ್ತಿರುವ ಮೇಲ್ಜಾತಿಯವರು ಶೂದ್ರ ಪರಶುರಾಮನ ಪುರಾಣ ಕಥೆಯನ್ನು ಒಪ್ಪಿಕೊಳ್ಳುತ್ತಿದ್ದರೇ? ಅಷ್ಟೇ ಅಲ್ಲ ವೈದಿಕರಂತೂ ಇಂತಹಾ ಪೊಳ್ಳು ಪುರಾಣ ಕಥೆ ಬರೆದಾತನನ್ನೇ ಹಿಗ್ಗಾಮುಗ್ಗಾ ಹೀಯಾಳಿಸುತ್ತಿದ್ದರು. ಅಷ್ಟೇ ಅಲ್ಲ ಮೇಲ್ಜಾತಿಯವರು ಆ ಶೂದ್ರ ಪರಶುರಾಮನ ಕುರಿತು ಮತ್ತೊಂದು ಕಾಲ್ಪನಿಕ ಕಥೆ ಕಟ್ಟಿ ಅವನು ಅಸುರ ಕುಲದವನಾಗಿದ್ದ ಹಾಗೂ ಮಹಾನೀಚನಾಗಿದ್ದ ಎಂಬ ದಂತಕಥೆ ಹೆಣೆದು, ಕೊನೆಗೆ ತಮ್ಮ ವೈದಿಕ ದೇವರು ಚಿತ್ರವಿಚಿತ್ರ ರೂಪ ಧರಿಸಿ ಬಂದು ಆ ‘ಪರಶಾಸುರ’ ನನ್ನು ವಧಿಸಿದ ಅಜ್ಜಿಕಥೆ ಕಟ್ಟಿ ಕೃತಾರ್ಥರಾಗುತ್ತಿದ್ದರು.</p>



<p>ಈಗಿರುವ ಅಸುರ-ದಾನವ-ರಾಕ್ಷಸರ ಪುರಾಣ ಕತೆಗಳೆಲ್ಲಾ ಇಂತಹವೇ ಕಟ್ಟುಕಥೆ ತಾನೇ? “ರಾಕ್ಷಸ” ಎಂಬ ನೂರು ಅಡಿ ಎತ್ತರದ ಮಾಯಾವಿ ಜೀವಿಗಳು ಈ ಜಗತ್ತಿನಲ್ಲಿ ಎಂದೂ ಇರಲಿಲ್ಲವೆಂದು ಜೀವಶಾಸ್ತ್ರಜ್ಞರೇ ಹೇಳುತ್ತಾರೆ. ಹಾಗಾಗಿ ರಾಕ್ಷಸರೇ ಇಲ್ಲದಿರುವಾಗ ರಾಕ್ಷಸರನ್ನು ಕೊಲ್ಲಲು ದೇವರು ಬೇರೆ ಬೇರೆ ವಿಚಿತ್ರ ರೂಪದಲ್ಲಿ ಅವತಾರ ತಾಳುವ ಪ್ರಸಂಗವೇ ಉದ್ಭವಿಸುವುದಿಲ್ಲ! ಮಹಾತ್ಮಾ ಜ್ಯೋತಿಬಾ ಫುಲೇ ಹೇಳಿರುವಂತೆ “ಒಳ್ಳೆಯವರನ್ನು ಕೆಟ್ಟವರೆಂದೂ, ಕೆಟ್ಟವರನ್ನು ಒಳ್ಳೆಯವರೆಂದೂ” ತಿರುಚಿ ಬರೆದಿರುವುದೇ ಈಗ ನಾವೆಲ್ಲಾ ಭಯಭಕ್ತಿಯಿಂದ ಪಠಿಸುವ ವೈದಿಕ ದೇವರ ಅವತಾರದ ಪವಿತ್ರ ಪುರಾಣಗಳು! ಹೀಗೆ ಧಾರ್ಮಿಕ ವಿಷಯದಲ್ಲಿ ಜನರನ್ನು ಹೊಸ ದಿಕ್ಕಿನತ್ತ ಆಲೋಚಿಸುವಂತೆ ಮಾಡಿದ ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಡಾ. ಅಂಬೇಡ್ಕರರಿಗೆ ಧನ್ಯವಾದಗಳು. ಕೊರೋನಾದ ನಂತರ ಜನರ ಬದಲಾದ ಮಾನಸಿಕತೆಯನ್ನು ಬಳಸಿಕೊಂಡು ನಮ್ಮ ಹೆಚ್ಚಿನ ಪೌರಾಣಿಕ ಕಥೆಗಳಲ್ಲಿರುವ ಅಸಂಗತ ಅಂಶಗಳನ್ನು ಹೊಸ ದೃಷ್ಟಿಕೋನದಿಂದ ವಿಶ್ಲೇಷಿಸಲು ಈಗ ಕಾಲ ಪಕ್ವವಾಗಿದೆ!</p>



<p><strong>ಪ್ರವೀಣ್ ಎಸ್ ಶೆಟ್ಟಿ</strong></p>



<p><strong>ಚಿಂತಕರು</strong></p>
]]></content:encoded>
					
		
		
			</item>
		<item>
		<title>ಥೀಮ್‌ ಪಾರ್ಕಿನಲ್ಲಿ ಪರಶುರಾಮ ಪ್ರತಿಮೆ ಸ್ಥಾಪನೆ-ತುಳುನಾಡಿಗೂ ಪರಶುರಾಮನಿಗೂ ಏನು ಸಂಬಂಧ?</title>
		<link>https://peepalmedia.com/installation-of-parashurama-statue-in-theme-park-what-is-the-connection-between-tulnadi-and-parashurama/</link>
		
		<dc:creator><![CDATA[praveen shetty]]></dc:creator>
		<pubDate>Fri, 27 Jan 2023 14:09:48 +0000</pubDate>
				<category><![CDATA[ವಿಶೇಷ]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[special story]]></category>
		<guid isPermaLink="false">https://peepalmedia.com/?p=19285</guid>

					<description><![CDATA[ಕಾರ್ಕಳ ತಾಲೂಕಿನ ಬೈಲೂರಿನ ಉಮಿಕ್ಕಲ್‌ ಬೆಟ್ಟದ ಮೇಲೆ ೩೩ ಅಡಿ ಎತ್ತರದ ಪರಶುರಾಮನ ಕಂಚಿನ ಪ್ರತಿಮೆಯೊಂದಿಗೆ ಪರಶುರಾಮ ಥೀಮ್‌ ಪಾರ್ಕ್‌ ಇಂದು ಮುಖ್ಯಮಂತ್ರಿಗಳಿಂದ ಲೋಕಾರ್ಪಣೆ ಗೊಂಡಿದೆ. ಕಾಲ್ಪನಿಕ ಪೌರಾಣಿಕ ವ್ಯಕ್ತಿ ಪರಶುರಾಮನ ಉಲ್ಲೇಖವು ಕರಾವಳಿಯ ಬಗ್ಗೆ ರಚಿತಗೊಂಡ ಯಾವ ಕೃತಿಗಳಲ್ಲೂ ಇಲ್ಲದಿರುವುದರಿಂದ ತುಳುನಾಡಿಗೂ ಪರಶುರಾಮನಿಗೂ ಯಾವ ಸಂಬಂಧವೂ ಇಲ್ಲವೆಂದು ನಿರೂಪಿಸುತ್ತಾರೆ ಚಿಂತಕ ಪ್ರವೀಣ್‌ ಶೆಟ್ಟಿ. ಈ ಸಕಾಲಿಕ ಲೇಖನ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಪ್ರವಾಸೋದ್ಯಮಕ್ಕೆ ಇಂಬು ಕೊಡಲು ಕಾರ್ಕಳ ತಾಲೂಕಿನ ಬೈಲೂರಿನ ಬೆಟ್ಟದ ಮೇಲೆ ೧೦ ಕೋಟಿ [&#8230;]]]></description>
										<content:encoded><![CDATA[
<p><strong>ಕಾರ್ಕಳ ತಾಲೂಕಿನ ಬೈಲೂರಿನ ಉಮಿಕ್ಕಲ್‌ ಬೆಟ್ಟದ ಮೇಲೆ ೩೩ ಅಡಿ ಎತ್ತರದ ಪರಶುರಾಮನ ಕಂಚಿನ ಪ್ರತಿಮೆಯೊಂದಿಗೆ ಪರಶುರಾಮ ಥೀಮ್‌ ಪಾರ್ಕ್‌ ಇಂದು ಮುಖ್ಯಮಂತ್ರಿಗಳಿಂದ ಲೋಕಾರ್ಪಣೆ ಗೊಂಡಿದೆ. ಕಾಲ್ಪನಿಕ ಪೌರಾಣಿಕ ವ್ಯಕ್ತಿ ಪರಶುರಾಮನ ಉಲ್ಲೇಖವು ಕರಾವಳಿಯ ಬಗ್ಗೆ ರಚಿತಗೊಂಡ ಯಾವ ಕೃತಿಗಳಲ್ಲೂ ಇಲ್ಲದಿರುವುದರಿಂದ ತುಳುನಾಡಿಗೂ ಪರಶುರಾಮನಿಗೂ ಯಾವ ಸಂಬಂಧವೂ ಇಲ್ಲವೆಂದು ನಿರೂಪಿಸುತ್ತಾರೆ ಚಿಂತಕ ಪ್ರವೀಣ್‌ ಶೆಟ್ಟಿ. ಈ ಸಕಾಲಿಕ ಲೇಖನ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ.</strong></p>



<p>ಪ್ರವಾಸೋದ್ಯಮಕ್ಕೆ ಇಂಬು ಕೊಡಲು ಕಾರ್ಕಳ ತಾಲೂಕಿನ ಬೈಲೂರಿನ ಬೆಟ್ಟದ ಮೇಲೆ ೧೦ ಕೋಟಿ ರೂಪಾಯಿ ವೆಚ್ಚದಲ್ಲಿ ಒಂದು ಥೀಮ್ ಪಾರ್ಕ್ ಯೋಜನೆ ಕರ್ನಾಟಕ ಸರಕಾರ ಅನುಷ್ಠಾನ ಮಾಡಿದ್ದು, ಅದು ಇದೆ ತಿಂಗಳ 27-28 ಕ್ಕೆ ಮುಖ್ಯಮಂತ್ರಿ ಬೊಮ್ಮಾಯಿಯವರ ಕೈಯಿಂದ ಉದ್ಘಾಟನೆಗೊಳ್ಳಲಿರುವುದು ಸಂತೋಷದ ವಿಷಯ. ಆದರೆ ಆ ಪಾರ್ಕ್ ನಲ್ಲಿ ಪರಶುರಾಮನ 33 ಅಡಿ ಎತ್ತರದ ಕಂಚಿನ ಪ್ರತಿಮೆ ನಿಲ್ಲಿಸುವ ಯೋಜನೆ ನಿರಾಶೆ ತಂದಿದೆ. ಯಾಕೆಂದರೆ ಪರಶುರಾಮ ಎಂಬವನು ಒಬ್ಬ ಕಾಲ್ಪನಿಕ ಪೌರಾಣಿಕ ವ್ಯಕ್ತಿ. ಮೇಲಾಗಿ ಈ ಕಾಲ್ಪನಿಕ ಕಥೆಯಲ್ಲಿಯೂ ಅವನನ್ನು ಒಬ್ಬ ಅತಿ ಸೇಡು ಭರಿತ ಅಮಾನವೀಯ ಜಾತಿವಾದಿ ವ್ಯಕ್ತಿ ಎಂದು ಬಿಂಬಿಸಲಾಗಿದೆ. ಉಡುಪಿ-ಕಾರ್ಕಳದ ಪಿತೃಪ್ರಧಾನ ವೈದಿಕ ಹಿನ್ನೆಲೆ ಇರುವ ರಾಜಕಾರಣಿಗಳು ತಮ್ಮ ಸಮುದಾಯದ ಮೇಲ್ಮೆ ಸಾಧಿಸಲು ಈ ಕ್ರೂರಿ ಪರಶುರಾಮನ ಕಾಲ್ಪನಿಕ ಕಥೆಯನ್ನು ಜೀವಂತವಾಗಿಡಲು ಬಯಸಿ ಕಾರ್ಕಳದಲ್ಲಿ ತೆರಿಗೆದಾರರ ಹಣದಲ್ಲಿ ಪರಶುರಾಮನ ಮೂರ್ತಿ ಸ್ಥಾಪಿಸಿ ತಮ್ಮ ವೈದಿಕ/ಅರೆ-ವೈದಿಕ ಸಮುದಾಯದ ಪೂರ್ವಜರ ಕಾಲ್ಪನಿಕ ಮೇಲ್ಮೆ ಬಿಂಬಿಸಲು ವ್ಯರ್ಥ ಪ್ರಯತ್ನ ನಡೆಸುತ್ತಿರುವಂತಿದೆ.</p>



<p> 500 ವರ್ಷಗಳ ಹಿಂದಿನ ಮುಸ್ಲಿಂ ರಾಜರು, ನವಾಬರು ಸುಲ್ತಾನರು ಮಾಡಿದ ತಪ್ಪಿಗೆ ಅವರ ಜಾತಿ-ಧರ್ಮದ ಇಂದಿನ ಪೀಳಿಗೆಯನ್ನು ಹೊಣೆ ಮಾಡಿ ಹೀನಾಯವಾಗಿ ಪೀಡಿಸುವ ಅತ್ಯಂತ ತುಚ್ಛ ಕಾರ್ಯ ಈಗ ಭಾರತದಲ್ಲಿ ನಡೆಯುತ್ತಿದೆ. ಹಾಗಿರುವಾಗ ಅತ್ಯಂತ ಸೇಡಿನ ಬುದ್ಧಿಯ, ಮಹಾ ಜಾತಿವಾದಿ (ಕಾಲ್ಪನಿಕ) ವ್ಯಕ್ತಿಯ ಪ್ರತಿಮೆ ನಮ್ಮ ಕಾರ್ಕಳಕ್ಕೆ ಬೇಕೆ? ಕಾರ್ಕಳದ ಈ ಪರಶುರಾಮ ಥೀಮ್ ಪಾರ್ಕ್ ಗೆ ಸರಕಾರ ಕೋಟ್ಯಂತರ ಸುರಿದಿರುವುದು ಸಾಮಾನ್ಯ ತೆರಿಗೆದಾರರ ಹಣವೇ ಹೊರತು ಅದು ಯಾವುದೇ ಒಂದು ಮೇಲ್ಜಾತಿಯ ಅಥವಾ ಒಂದು ಪಕ್ಷದ ಹಣ ಅಲ್ಲ! ಎಂಬುದು ನಮ್ಮ ನೆನಪಿನಲ್ಲಿರಲಿ.</p>



<p>ಕಾರ್ಕಳದಲ್ಲಿ ಅತ್ಯಂತ ಸುಂದರ ಕರಿಕಲ್ಲಿನ ಜಗತ್‌ ಪ್ರಸಿದ್ಧ ಗೊಮ್ಮಟೇಶ್ವರ ಮೂರ್ತಿ ಇರುವುದು ನಿಜ. ಅದನ್ನು ಕೆತ್ತಿದ ಶಿಲ್ಪಿ ಯಾರು ಎಂಬುದು ಕಾರ್ಕಳದ ಇತಿಹಾಸದಲ್ಲಿ ಸ್ಪಷ್ಟವಾಗಿ ನಮೂದಾಗಿಲ್ಲ. ಆದರೆ ಈ ಕುರಿತು ಇರುವ ಜಾನಪದ ಕಥೆಗಳ ಪ್ರಕಾರ ಕಲ್ಕುಡ ಎಂಬ ದೈವಿ ಶಕ್ತಿಯುಳ್ಳ ಶಿಲ್ಪಿ ಈ ಮೂರ್ತಿಯನ್ನು ಕೆತ್ತಿದ್ದು. ಆದರೆ ಮೂರ್ತಿ ಕೆತ್ತಿಯಾದ ಮೇಲೆ ಕಲ್ಕುಡನಿಗೆ ಕಾರ್ಕಳದ ಜೈನ ಅರಸ ದೊಡ್ಡ ಅನ್ಯಾಯ ಮಾಡಿದನು ಎಂದು ಕಲ್ಕುಡನ ತಂಗಿ ಕಲ್ಲುರ್ಟಿಯು ಅರಸನ ವಿರುದ್ಧ ಮಾತ್ರ ಸೇಡು ತೀರಿಸಿ ಕೊಳ್ಳುತ್ತಾಳೆ, (ಪರಶುರಾಮನಂತೆ ಕಲ್ಲುರ್ಟಿಯು ಸಮಸ್ತ ಜೈನ ಸಮುದಾಯದ ವಿರುದ್ಧ ಸೇಡು ತೀರಿಸಿಕೊಳ್ಳುವುದಿಲ್ಲ!). ಈ ಕಲ್ಕುಡ ಕಲ್ಲುರ್ಟಿಯನ್ನು ದೈವತ್ವಕ್ಕೆ ಏರಿಸಿ ನಾವು ಈಗ ಪೂಜಿಸುತ್ತೇವೆ. ಹಾಗಾಗಿ ಶಿಲ್ಪಿ ಕಲ್ಕುಡ-ಕಲ್ಲುರ್ಟಿಯ ಮೂರ್ತಿಯನ್ನು ಕಾರ್ಕಳದ ಆ ಹೊಸ ಪಾರ್ಕಿನಲ್ಲಿ ಸ್ಥಾಪಿಸಬೇಕಿತ್ತು. ಹೇಗೂ ಪರಶುರಾಮನದ್ದು ಕಾಲ್ಪನಿಕ ರೂಪವೇ ತಾನೇ? ಅಂತೆಯೇ ತುಳುವ ಸಂಪ್ರದಾಯದ ಪ್ರಕಾರ ಕಲ್ಕುಡ-ಕಲ್ಲುರ್ಟಿಯ ರೂಪವೂ ಕಾಲ್ಪನಿಕವಿದ್ದರೂ ಯಾರದೂ ಅಭ್ಯಂತರ ಇರಲಾರದು. ಹೇಗಿದ್ದರೂ ತುಳುವರೆಲ್ಲಾ ಕಲ್ಕುಡನ ತಂಗಿ ಕಲ್ಲುರ್ಟಿಯನ್ನು ಅತಿ ಕಾರಣಿಕ ದೈವದ ರೂಪದಲ್ಲಿ ಎಲ್ಲೆಡೆಯೂ ಈಗಲೂ ಆರಾಧಿಸುತ್ತಿದ್ದಾರೆ ಅಲ್ಲವೇ! ಅದಿಲ್ಲದಿದ್ದರೆ ವೀರ ಕೋಟಿ ಚೆನ್ನಯರ ಮೂರ್ತಿಗಳನ್ನು ಈ ಕಾರ್ಕಳದ ಥೀಮ್ ಪಾರ್ಕಿನಲ್ಲಿ ಸ್ಥಾಪಿಸಲಿ!</p>



<p>ತುಳುನಾಡಿಗರದು ಮಾತೃ ಪ್ರಧಾನ ಕುಟುಂಬ ವ್ಯವಸ್ಥೆಯಾದರೆ ವೈದಿಕ ಪರಶುರಾಮನದು ಅಪ್ಪಟ ಪಿತೃಪ್ರಧಾನ ಸಮಾಜವಾಗಿತ್ತು. ಅದಕ್ಕಾಗಿ ತನ್ನ ತಂದೆ ಜಮದಗ್ನಿ ಹೇಳಿದನೆಂದು ಪರಶುರಾಮ ತನ್ನ ಅಮಾಯಕ ತಾಯಿಯನ್ನೇ ಕಾರಣವಿಲ್ಲದೆ ಕೊಲ್ಲುತ್ತಾನೆ, (ಮತ್ತೆ ಜೀವಂತ ಮಾಡುತ್ತಾನೆ ಎಂಬುದು ಒಂದು ಸಬೂಬು ಅಷ್ಟೇ). ಇಂತಹಾ ಮಾತೃ ಹಂತಕನ ಗೌರವಾರ್ಥ ಕಾರ್ಕಳದಲ್ಲಿ ಆತನ ಬೃಹತ್ ಪ್ರತಿಮೆ ಸ್ಥಾಪಿಸಬೇಕೆ? ನಮ್ಮ ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿರುವ ಸಮಯದಲ್ಲಿ ಕ್ರೂರ ಜಾತಿವಾದಿ ವೈದಿಕ ಪರಶುರಾಮನ ಹೆಸರಲ್ಲಿ ಮೇಲ್ಜಾತಿ ವೋಟ್ ಬ್ಯಾಂಕ್ ಪಾಲಿಟಿಕ್ಸ್ ಆಗುತ್ತಿದೆಯೇ?</p>



<p><strong>ಯಾವ ಕೃತಿಯಲ್ಲೂ ಪರಶುರಾಮ ಸೃಷ್ಟಿಯ ಉಲ್ಲೇಖವಿಲ್ಲ!</strong><br>ಸುಮಾರು 750 ವರ್ಷಗಳ ಹಿಂದೆ ನಮ್ಮ ಕರಾವಳಿಯ ಉಡುಪಿಯಲ್ಲಿ ಮಾಧ್ವ ವೈಷ್ಣವ ಪರಂಪರೆ ಸ್ಥಾಪಿಸಿದ ಶ್ರೀಮಧ್ವಾಚಾರ್ಯರು ತಮ್ಮ ಯಾವುದೇ ಕೃತಿಯಲ್ಲೂ ಪರಶುರಾಮ ಸೃಷ್ಟಿಯ ಕಥೆಯನ್ನು ಉಲ್ಲೇಖಿಸಿಲ್ಲ. ಆನಂತರ ಮಾಧ್ವ ಪರಂಪರೆಯನ್ನು ದಕ್ಷಿಣ ಭಾರತದೆಲ್ಲೆಡೆ ಪಸರಿಸಿದ ಶ್ರೀವಾದಿರಾಜ ಸ್ವಾಮಿಗಳೂ ಸಂಸ್ಕೃತ, ಕನ್ನಡ, ತುಳು ಭಾಷೆಗಳಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಆದರೆ ಎಲ್ಲಿಯೂ ಅವರು ಪರಶುರಾಮ ಸೃಷ್ಟಿಯ ಕಥೆಯನ್ನು ಉಲ್ಲೇಖಿಸಿಲ್ಲ! ನಮ್ಮ ಕರಾವಳಿಯನ್ನು ಆಳಿದ ಕದಂಬ ರಾಜರ ಕಾಲದಲ್ಲಾಗಲಿ, ಶೈವರಾಗಿದ್ದ ಅಳೂಪ ರಾಜರ ಕಾಲದಲ್ಲಾಗಲಿ, ಅಥವಾ ಜೈನರಾಗಿದ್ದ ಹೊಯ್ಸಳರು, ರಾಣಿ ಅಬ್ಬಕ್ಕ, ಲಿಂಗಾಯತ ಇಕ್ಕೇರಿ ಅರಸರ ಆಡಳಿತ ಕಾಲದಲ್ಲಾಗಲಿ, ವಿಜಯನಗರದ ಆಳ್ವಿಕೆಯ ಕಾಲದಲ್ಲಾಗಲಿ ಈ ಪರಶುರಾಮ ಸೃಷ್ಟಿ ಎಂಬ ಕಾಲ್ಪನಿಕ ಕಥೆ ಪ್ರಚಲಿತವಾಗಿರಲೇ ಇಲ್ಲ. 19-20 ನೇ ಶತಮಾನದಲ್ಲಿ ಕೇರಳದಲ್ಲಿ ಮಹತ್ತರ ಸಾಮಾಜಿಕ ಕ್ರಾಂತಿ ಮಾಡಿ ಈಡಿಗ/ಬಿಲ್ಲವ ಸಮುದಾಯಕ್ಕೆ ಆತ್ಮಸಮ್ಮಾನ ಕಲಿಸಿಕೊಟ್ಟ ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದೂ ಈ ಪರಶುರಾಮನ ಬಾಲಿಶ ಕಥೆಯನ್ನು ಉಲ್ಲೇಖಿಸಲೇ ಇಲ್ಲ. ಕೇರಳ ಮೂಲದ ಆದಿಶಂಕರರು 1200 ವರ್ಷಗಳ ಹಿಂದೆ ಕೊಲ್ಲೂರಿಗೆ ಸ್ವತಃ ಬಂದು ಮೂಕಾಂಬಿಕೆಯ ಕ್ಷೇತ್ರವನ್ನು ಸ್ಥಾಪಿಸಿದರು ಎಂಬ ಐತಿಹ್ಯ ಇದೆ. ಕರಾಚಾರ್ಯರೂ ತಮ್ಮ ಯಾವುದೇ ಕೃತಿಯಲ್ಲೂ ತಮ್ಮ ಹುಟ್ಟೂರು ಕೇರಳ ಅಥವಾ ಮೂಕಾಂಬಿಕಾ ಕ್ಷೇತ್ರ ಇರುವ ತುಳುಗನ್ನಡ ಪ್ರದೇಶವು ʼಪರಶುರಾಮ ಸೃಷ್ಟಿʼ ಎಂದು ಎಲ್ಲಿಯೂ ಹೇಳಿಲ್ಲ. ನಮ್ಮ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ನೆಲೆಸಿರುವಳೆಂದು ಐತಿಹ್ಯವಿರುವ ಪರಶುರಾಮನ ತಾಯಿ ರೇಣುಕಾ ಎಲ್ಲಮ್ಮನ ಕ್ಷೇತ್ರ ಣದಲ್ಲಿಯೂ ಪರಶುರಾಮ ಸೃಷ್ಟಿಯ ಉಲ್ಲೇಖ ಇಲ್ಲ. ನಮ್ಮ ತುಳುನಾಡಿನ ಸಮಗ್ರ ಇತಿಹಾಸದ ಸಂಶೋಧಕ ಡಾ. ಪಾದೂರು ಗುರುರಾಜ ಭಟ್ಟರೂ ಈ ಪರಶುರಾಮ ಸೃಷ್ಟಿಯ ಕಥೆ ಒಂದು ಕಾಲ್ಪನಿಕ ಕಥೆ ಎಂದು ತಮಗೆ ಡಾಕ್ಟರೇಟ್ ತಂದು ಕೊಟ್ಟ “ತುಳುನಾಡು” ಎಂಬ ತಮ್ಮ ಘನ ಕೃತಿಯಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ.</p>



<p><strong>ಉತ್ತರ ಭಾರತದಲ್ಲಿ ಒಂದೇ ಒಂದು ಪರಶುರಾಮನ ಪುರಾತನ ಕ್ಷೇತ್ರವಿಲ್ಲ!</strong><br>ರಾಮಾಯಣ ಮತ್ತು ಮಹಾಭಾರತ ಈ ಎರಡೂ ಮಹಾಕಾವ್ಯಗಳಲ್ಲಿ ಉಲ್ಲೇಖಿತವಾಗಿರುವ ಪರಶುರಾಮ ಎಂಬ ಬ್ರಾಹ್ಮಣ ಋಷಿ ಇದ್ದಿದ್ದು ಉತ್ತರ ಭಾರತದಲ್ಲಿ. ಆದರೆ ಉತ್ತರ ಭಾರತದ ಯಾವುದೇ ಮೂಲ ಗ್ರಂಥದಲ್ಲಿಯೂ ಪರಶುರಾಮ ದಕ್ಷಿಣ ಭಾರತಕ್ಕೆ ಬಂದಿದ್ದ ಹಾಗೂ ಇಲ್ಲಿ ಅವನು ಕೊಡಲಿ ಬೀಸಿ ಸಮುದ್ರದಿಂದ ಭೂಮಿಯನ್ನು ಮೇಲೆತ್ತಿ ಕೊಟ್ಟ ಎಂಬ ಉಲ್ಲೇಖವೇ ಇಲ್ಲ. ಅವನು ಕ್ಷತ್ರಿಯರಿಂದ ಗೆದ್ದ ಎಲ್ಲಾ ಭೂಮಿಯನ್ನು ಬ್ರಾಹ್ಮಣರಿಗೆ ದಾನ ಮಾಡಿ ಹಿಮಾಲಯಕ್ಕೆ ತಪಸ್ಸು ಮಾಡಲು ಹೋದ ಎಂದಷ್ಟೇ ಮೂಲ ಗ್ರಂಥದಲ್ಲಿ ಉಲ್ಲೇಖವಿದೆ. ಪರಶುರಾಮನ ಪೌರಾಣಿಕ ಕಥೆ ಹುಟ್ಟಿದ್ದು ಉತ್ತರ ಭಾರತದಲ್ಲಿ ಆದರೂ ಉತ್ತರದ ಜನರು ಪರಶುರಾಮನನ್ನು ಒಬ್ಬ ಋಷಿ ಎಂದು ಮಾತ್ರ ಪರಿಗಣಿಸುತ್ತಾರೆಯೇ ಹೊರತು ಅವನನ್ನು ದೇವರು ಎಂದು ಯಾರೂ ಪೂಜಿಸುವುದಿಲ್ಲ. ಅವನು ವಿಷ್ಣುವಿನ ಅವತಾರ ಎಂದು ವೈಷ್ಣವರು ಹೇಳಿದರೂ ಅವನನ್ನು ಸ್ವತಃ ವೈಷ್ಣವರೇ ಆರಾಧಿಸುವುದಿಲ್ಲ. ಅದರಲ್ಲೂ ಉತ್ತರ ಭಾರತದ ಠಾಕೂರ್/ ರಜಪೂತ್/ಕುರ್ಮಿ/ ಜಾಟ್/ ಗುಜ್ಜರ್ ಮುಂತಾದ ಕ್ಷತ್ರಿಯ ವರ್ಗದ ಜನರೆಲ್ಲಾ ಮೊದಲಿನಿಂದಲೂ ಪರಶುರಾಮನನ್ನು ಒಬ್ಬ ಸೇಡುಭರಿತ ಕ್ರೂರಿ, ಅಹಂಕಾರಿ, ಹಾಗೂ ತಮ್ಮ ಜಾತಿಯ ಕಡುವೈರಿ ಎಂದು ಪರಿಗಣಿಸುತ್ತಾರೆ. ಯಾಕೆಂದರೆ ಪುರಾಣದ ಪ್ರಕಾರ ಅವನು ಚಿಕ್ಕಚಿಕ್ಕ ಗಂಡು ಮಕ್ಕಳ ಸಹಿತ ಕೋಟ್ಯಂತರ ಅಮಾಯಕ ಕ್ಷತ್ರಿಯ ಗಂಡಸರ ಮಾರಣಹೋಮ ನಡೆಸಿದ ಹೃದಯಹೀನ. ಹಾಗಾಗಿ ಉತ್ತರ ಭಾರತದಲ್ಲಿ ಲಕ್ಷಾಂತರ ಬೇರೆ ಬೇರೆ ದೇವರ ಪುರಾತನ ದೇವಸ್ಥಾನಗಳಿದ್ದರೂ ಒಂದೇ ಒಂದು ಪರಶುರಾಮನ ಪುರಾತನ ಕ್ಷೇತ್ರ ಇಲ್ಲ? ಉತ್ತರ ಪ್ರದೇಶದಲ್ಲಿ 2017 ರಲ್ಲಿ ಯೋಗಿ ಆದಿತ್ಯನಾಥರು ಖ್ಯಮಂತ್ರಿಯಾಗಿ ಆಯ್ಕೆಯಾದ ಮರುದಿನವೇ ತನ್ನ ಚೇಂಬರ್ ನಲ್ಲಿ ಇದ್ದ ಪರಶುರಾಮನ ಫೋಟೋವನ್ನು ತೆಗೆದು ಕಸದ ಬುಟ್ಟಿಗೆ ಹಾಕಿಸಿದರಂತೆ! ಯಾಕೆಂದರೆ ಅವರು ಠಾಕೂರ್ ಎಂಬ ಕ್ಷತ್ರಿಯ ಜಾತಿಯವರು. ಸಾರಾಸಗಟಾಗಿ ತನ್ನ ಕ್ಷತ್ರಿಯ ಜಾತಿಯನ್ನು ಅವಮಾನಿಸುವ ಕ್ರೂರಿ ಪರಶುರಾಮನ ಫೋಟೋ ತನ್ನ ಚೆಂಬರಿನಲ್ಲಿ ಇಡಲು ಅವರ ಮನಸ್ಸು ಒಪ್ಪಲಿಲ್ಲವಂತೆ. ಯೋಗಿ ಆದಿತ್ಯನಾಥರನ್ನು ನೋಡಿಯಾದರೂ ನಾವು ತುಳುನಾಡಿನವರು ಪರಶುರಾಮನ ಗೊಡ್ಡು ಪುರಾಣ ಪಾತ್ರಕ್ಕೆ ಅನಗತ್ಯ ಪಾವಿತ್ರ್ಯ ಮಹತ್ವ ಕಲ್ಪಿಸಿ ಕೊಡುವುದನ್ನು ನಿಲ್ಲಿಸಿದರೆ ಉತ್ತಮ.</p>



<p><strong>ವಿಜ್ಞಾನಿಗಳ ಪ್ರಕಾರ…</strong><br>ಖಂಡಾಂತರ ಚಲನೆಯ ಕಾಲದಲ್ಲಿ ದಕ್ಷಿಣ ಭಾರತದ ಪ್ರಸ್ಥಭೂಮಿ ಏಳು ಕೋಟಿ ವರ್ಷಗಳ ಹಿಂದೆ ಆಫ್ರಿಕಾ ಖಂಡದಿಂದ ಬೆರ್ಪಟ್ಟು ಇಂಚಿಂಚು ಸರಿಯುತ್ತಾ ಬಂದು ಐದು ಕೋಟಿ ವರ್ಷಗಳ ಹಿಂದೆ ಜಂಬೂ ದ್ವೀಪದ ಉಪಖಂಡಕ್ಕೆ ತಾಗಿ ನಿಂತಿತ್ತು. ಆ ಕಾಲದಲ್ಲಿ ನಮ್ಮ ಪಶ್ಚಿಮ ಕರಾವಳಿ ಮತ್ತು ಸಹ್ಯಾದ್ರಿ ಪರ್ವತ ಶ್ರೇಣಿ ರೂಪುಗೊಂಡಿದ್ದು. (ಶ್ರೀಲಂಕಾ ನಡುವಿನ ರಾಮಸೇತುವಿನ ಪ್ರಾಕೃತಿಕ ರಚನೆಗೂ ಇದೇ ಖಂಡಗಳ ಚಲನೆಯ ಸಿದ್ಧಾಂತ ಅನ್ವಯ!). (ಈ ಕುರಿತು ಗೂಗಲ್‌ ನಲ್ಲಿ “ಕಾಂಟಿನೆಂಟಲ್ ಡ್ರೀಫ್ಟ್” ಎಂಬ ವಿಷಯದ ವಿಕಿಪೀಡಿಯ ಓದಿ.) ಏಳು ಕೋಟಿ ವರ್ಷಗಳ ಹಿಂದೆ ಮಾನವ-ವಾನರ ಜಾತಿಯೇ ಈ ಭೂಮಿ ಮೇಲೆ ಇರಲಿಲ್ಲ. ನಮ್ಮ ಪೃಥ್ವಿ ಗ್ರಹದ ರಚನೆಯಾಗಿದ್ದು ಸುಮಾರು 600 ಕೋಟಿ ವರ್ಷಗಳ ಹಿಂದೆಯಂತೆ. ಆದರೆ ಮಾನವನು ಪೃಥ್ವಿಯ ಮೇಲೆ ಉಗಮವಾಗಿದ್ದು ಕೇವಲ 40 ಲಕ್ಷ ವರ್ಷಗಳ ಹಿಂದೆ, ಅದೂ ಹೊಮೋ-ಎರೆಕ್ಟಸ್ ಎಂಬ ಅರೆಮಾನವ ರೂಪದಲ್ಲಿ. ಹಾಗಾಗಿ ಬಹುಶ ಡೈನೊಸಾರ್ ಗಳು ನಮ್ಮ ಈ ಸೋ-ಕಾಲ್ಡ್ ಪರಶುರಾಮ ಸೃಷ್ಟಿಯಲ್ಲಿ ಐದು ಕೋಟಿ ವರ್ಷಗಳ ಹಿಂದೆ ಮೊಟ್ಟ ಮೊದಲು ನಡೆದಾಡಿರಬಹುದೇ?!</p>



<p><strong>ದ್ವೇಶ ಹರಡುವ ಪುರಾಣ ಕಥೆಗಳು ನಮ್ಮಲ್ಲಿ ಮಾತ್ರ!</strong><br>ಜಗತ್ತಿನಲ್ಲಿ ಎಲ್ಲಿಯೂ ಇಲ್ಲದ ಅವೈಜ್ಞಾನಿಕ ಜಾತಿ ವ್ಯವಸ್ಥೆ ಭಾರತದಲ್ಲಿ ಮಾತ್ರ ಇರುವುದು. ಅಷ್ಟೇ ಅಲ್ಲ, ಜಾತಿ ಜಾತಿಯ ನಡುವೆ ದ್ವೇಶ ಹರಡುವ ಪುರಾಣ ಕಥೆಗಳು ಹಾಗೂ ಯಾರೋ ಒಬ್ಬ ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನೇ ಹೊಣೆ ಮಾಡಿ ಆ ಸಮುದಾಯವನ್ನು ಸಂಪೂರ್ಣ ನಾಶ ಮಾಡಲಾಯಿತು ಎಂಬ ತುಚ್ಛ ಜಾತಿ ದ್ವೇಶವನ್ನು ಸಮರ್ಥಿಸುವ ಕಥೆ ಕಟ್ಟುವುದು ಕೇವಲ ಭಾರತದಲ್ಲಿ ಮಾತ್ರ. ಕ್ಷತ್ರಿಯ ಮಹಿಳೆಯರ ಶೀಲವನ್ನು ಘೋರವಾಗಿ ಅವಮಾನಿಸುವ “ನಿಯೋಗ” ಎಂಬ ವ್ಯಭಿಚಾರವನ್ನು ಸಮರ್ಥಿಸುವ ಕಥೆ ಸಹಾ ಇರುವುದು ಭಾರತದಲ್ಲಿ ಮಾತ್ರ. ಕೆಲವು ವೈದಿಕ ಪುರಾಣಗಳ ಪ್ರಕಾರ ಕ್ಷತ್ರಿಯರಾಗಿದ್ದ ಶ್ರೀ ರಾಮ ಮತ್ತು ಶ್ರೀ<br>ಕೃಷ್ಣ ಕೂಡಾ ನಿಯೋಗದಿಂದ ಹುಟ್ಟಿದ್ದಂತೆ!</p>



<p><strong>ಪರಶುರಾಮ ಸೃಷ್ಟಿ ಬಾಲಿಶ ಕಟ್ಟುಕಥೆ</strong><br>ನಮ್ಮ ಕರಾವಳಿಯನ್ನು ಪರಶುರಾಮನು ಸೃಷ್ಟಿಸಿದ್ದು ಎಂಬ ಕಾಲ್ಪನಿಕ ಕತೆಯೂ ಕೇರಳದಿಂದ ಬಂದ ಬಾಲಿಶ ಕಟ್ಟುಕಥೆ. ಸುಮಾರು 350 ವರ್ಷಗಳ ಹಿಂದೆ ಕೇರಳದ ನಂಬೂದ್ರಿ ಬ್ರಾಹ್ಮಣರು ಬರೆದ “ಕೇರಳೊತ್ಪತ್ತಿ” ಎಂಬ ಕೃತಿಯಲ್ಲಿ ಪರಶುರಾಮ ಸೃಷ್ಟಿಯ ಕಥೆ ಮೊಟ್ಟಮೊದಲ ಬಾರಿ ಉಲ್ಲೇಖವಾಯಿತಂತೆ! ಅದು ಹೇಗೋ ಮುನ್ನೂರು ವರ್ಷಗಳ ಹಿಂದೆ ಧಾರ್ಮಿಕ ಕಾರ್ಯಗಳಿಗೆ ಮತ್ತು ಮಂತ್ರಮಾಟ ಕಲಿಯಲು ಕೇರಳಕ್ಕೆ ಹೋಗಿ ಬರುತ್ತಿದ್ದ ತುಳುನಾಡಿನ ಬ್ರಾಹ್ಮಣರ ಮೂಲಕ ಈ ಕಾಲ್ಪನಿಕ ಕಥೆ ನಮ್ಮ ಕನ್ನಡ ಕರಾವಳಿಯನ್ನು ಹೊಕ್ಕು ಅದು ಈಗ ನಿರಭಿಮಾನಿ ತುಳುವ-ಕನ್ನಡಿಗರ ಎಲ್ಲಾ ಸಭೆ ಸಮಾರಂಭಗಳನ್ನು ಆವರಿಸಿ ಕೂತಿದೆ. ಕೇವಲ<br>ಬ್ರಾಹ್ಮಣರನ್ನು ವಿಜೃಂಭಿಸುವ ಹಾಗೂ ಕ್ಷತ್ರಿಯ-ಶೂದ್ರರನ್ನು ಕೀಳಾಗಿಸುವ ಪರಶುರಾಮ ಸೃಷ್ಟಿಯ ಕಥೆಯನ್ನು ತಿರಸ್ಕರಿಸುವ ಕಾಲ<br>ಈಗ ಬಂದಿದೆ.<br><strong>(ಮುಂದಿನ ಭಾಗವನ್ನು ನಾಳೆ( ೨೮.೦೧.೨೦೨೩) ಪೀಪಲ್‌ ಮೀಡಿಯಾದಲ್ಲಿ ಓದಿ)</strong></p>



<p><strong>ಪ್ರವೀಣ್‌ ಎಸ್‌ ಶೆಟ್ಟಿ<br>ಚಿಂತಕರು</strong></p>
]]></content:encoded>
					
		
		
			</item>
	</channel>
</rss>
