<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Rajaram Tallur &#8211; Peepal Media</title>
	<atom:link href="https://peepalmedia.com/author/rajaram-tallur/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 11 Jul 2023 05:49:12 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Rajaram Tallur &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ದ No Intelligenceಮತ್ತು ಓಡಿಶಾ AI ಆಂಕರ್!!</title>
		<link>https://peepalmedia.com/the-no-intelligence-and-odissa-ai/</link>
		
		<dc:creator><![CDATA[Rajaram Tallur]]></dc:creator>
		<pubDate>Tue, 11 Jul 2023 05:49:11 +0000</pubDate>
				<category><![CDATA[ಅಂಕಣ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[writing]]></category>
		<guid isPermaLink="false">https://peepalmedia.com/?p=23524</guid>

					<description><![CDATA[ನಿನ್ನೆಯಿಂದ ಮಾಧ್ಯಮಗಳಲ್ಲಿ ಓಡಿಶಾದ ಪತ್ರಿಕಾಬಳಗವೊಂದು ಸುದ್ದಿ ಓದಬಲ್ಲ ಆಂಕರ್ ರೂಪವೊಂದನ್ನು ಸ್ಥಾಪಿಸಿದೆ ಎಂಬ ಸುದ್ದಿ ಭರ್ಜರಿಯಾಗಿ ಓಡಾಡುತ್ತಿದೆ. ಹಲವು ಪತ್ರಿಕೆಗಳು ಮುಖಪುಟದಲ್ಲೇ ಇದನ್ನು ಪ್ರಕಟಿಸಿಕೊಂಡಿವೆ. ಇದು ಒಟ್ಟಾರೆಯಾಗಿ ನಮ್ಮ ದೇಶದ ಮಾಧ್ಯಮಗಳ “ಬುದ್ಧಿಮತ್ತೆ”ಗೆ ಹಿಡಿದ ಕನ್ನಡಿ.ನಲ್ವತ್ತು ವರ್ಷ ಹಿಂದೆ ಕಂಪ್ಯೂಟರು‌ಗಳು ಆಗಷ್ಟೇ ಭಾರತದಲ್ಲಿ ಕಾಲೂರತೊಡಗಿದ್ದಾಗ, ಕ್ಯಾಲ್ಕ್ಯುಲೇಟರ್‌ಗಳೇ ಊರತುಂಬೆಲ್ಲ ಕಂಪ್ಯೂಟರ್‌ಗಳಾಗಿದ್ದವು! ಸರಳವಾಗಿ, ಅರ್ಥ ಆಗುವಂತೆ ಹೇಳಬೇಕೆಂದರೆ, ಈಗ ಓಡಿಶಾದ ಪತ್ರಿಕಾ ಬಳಗ ಮಾಡಿರುವುದು ಅಷ್ಟೇ ಗಾತ್ರದ ಕೆಲಸ. ಮಾಧ್ಯಮಗಳಲ್ಲಿ ಆರ್ಟಿಫೀಷಿಯಲ್ ಇಂಟೆಲಿಜೆನ್ಸ್ ಯಾವಾಗ ಬಂದಂತಾಗುತ್ತದೆ? ಮಾನವ ಸಂಪರ್ಕ ಇಲ್ಲದೇ [&#8230;]]]></description>
										<content:encoded><![CDATA[
<hr class="wp-block-separator has-alpha-channel-opacity"/>



<p class="wp-block-paragraph">ನಿನ್ನೆಯಿಂದ ಮಾಧ್ಯಮಗಳಲ್ಲಿ ಓಡಿಶಾದ ಪತ್ರಿಕಾಬಳಗವೊಂದು ಸುದ್ದಿ ಓದಬಲ್ಲ ಆಂಕರ್ ರೂಪವೊಂದನ್ನು ಸ್ಥಾಪಿಸಿದೆ ಎಂಬ ಸುದ್ದಿ ಭರ್ಜರಿಯಾಗಿ ಓಡಾಡುತ್ತಿದೆ. ಹಲವು ಪತ್ರಿಕೆಗಳು ಮುಖಪುಟದಲ್ಲೇ ಇದನ್ನು ಪ್ರಕಟಿಸಿಕೊಂಡಿವೆ. ಇದು ಒಟ್ಟಾರೆಯಾಗಿ ನಮ್ಮ ದೇಶದ ಮಾಧ್ಯಮಗಳ “ಬುದ್ಧಿಮತ್ತೆ”ಗೆ ಹಿಡಿದ ಕನ್ನಡಿ.<br>ನಲ್ವತ್ತು ವರ್ಷ ಹಿಂದೆ ಕಂಪ್ಯೂಟರು‌ಗಳು ಆಗಷ್ಟೇ ಭಾರತದಲ್ಲಿ ಕಾಲೂರತೊಡಗಿದ್ದಾಗ, ಕ್ಯಾಲ್ಕ್ಯುಲೇಟರ್‌ಗಳೇ ಊರತುಂಬೆಲ್ಲ ಕಂಪ್ಯೂಟರ್‌ಗಳಾಗಿದ್ದವು! ಸರಳವಾಗಿ, ಅರ್ಥ ಆಗುವಂತೆ ಹೇಳಬೇಕೆಂದರೆ, ಈಗ ಓಡಿಶಾದ ಪತ್ರಿಕಾ ಬಳಗ ಮಾಡಿರುವುದು ಅಷ್ಟೇ ಗಾತ್ರದ ಕೆಲಸ.</p>



<p class="wp-block-paragraph"><br>ಮಾಧ್ಯಮಗಳಲ್ಲಿ ಆರ್ಟಿಫೀಷಿಯಲ್ ಇಂಟೆಲಿಜೆನ್ಸ್ ಯಾವಾಗ ಬಂದಂತಾಗುತ್ತದೆ? ಮಾನವ ಸಂಪರ್ಕ ಇಲ್ಲದೇ (ಅರ್ಥಾತ್ ಸುದ್ದಿ ಡೆಸ್ಕ್ ಇಲ್ಲದೆ) ಯಾವ ಸುದ್ದಿ ಆಯ್ಕೆ ಮಾಡಬೇಕು, ಅದರ ವೇಯ್ಟೇಜ್ ಏನು, ಎಷ್ಟು ಕವರೇಜ್ ಎಂದೆಲ್ಲ ನಿರ್ಧರಿಸಿ, ಆ ಬಳಿಕ ಆ ಸುದ್ದಿಯನ್ನು “ಬಾಟ್ ಮುಖ ಆಂಕರ್” ಓದಿದ ದಿನ ಮಾಧ್ಯಮಗಳಿಗೆ AI ಬಂತು ಅಂತ ಲೆಕ್ಕ.</p>



<p class="wp-block-paragraph"><br>ಕಳೆದ 10-20 ವರ್ಷಗಳಿಂದ ನಿಮ್ಮ ಆಸ್ಪತ್ರೆಯಲ್ಲೋ ಹೊಟೇಲಿನಲ್ಲೋ ಟೋಕನ್ ನಂಬರ್ ಡಿಸ್‌ಪ್ಲೇ ಮಾಡಿ ಓದಿ ಹೇಳುವ, ಟೆಲಿಫೋನಿನಲ್ಲಿ ಒಂದು ಒತ್ತಿ, ಎರಡು ಒತ್ತಿ ಎಂದು ಉಲಿಯುವ IVR ವ್ಯವಸ್ಥೆಯ ಸ್ವಲ್ಪ ಸುಧಾರಿತ ರೂಪ ಇದು ಅಷ್ಟೇ. ನಿಮ್ಮ ಐಫೋನಿನಲ್ಲಿರುವ ಸಿರಿ, ಮನೆಯಲ್ಲಿರುವ ಅಲೆಕ್ಸಾ ಇತ್ಯಾದಿ BOTಗಳು ಕೂಡ ಪ್ರಾಥಮಿಕ AI ಪ್ರಯತ್ನಗಳು. ಅವನ್ನು Narrow AI ಎಂದು ಕರೆಯಬಹುದು.</p>



<p class="wp-block-paragraph"><br>ಈ ಪ್ರಕರಣದಲ್ಲಿ ಸುದ್ದಿ ಡೆಸ್ಕ್ ಸಿದ್ಧಪಡಿಸಿಕೊಟ್ಟ ಸುದ್ದಿಯನ್ನು ಓದಬಲ್ಲ ವ್ಯವಸ್ಥೆಯನ್ನೂ ಮತ್ತು ಅದಕ್ಕೆ ಲಿಪ್ ಸಿಂಕ್ ಮಾಡಬಲ್ಲ ಗ್ರಾಫಿಕ್ಸನ್ನು ಒಟ್ಟಿಗಿಟ್ಟು ಆ ಸಂಸ್ಥೆ ಅದು AI ಎಂದು ಹೇಳಿದಂತಿದೆ. ಅದಕ್ಕೆ ಎಲ್ಲ ಮಾಧ್ಯಮಗಳೂ ಯಾವುದೇ ಪ್ರಶ್ನೆ ಎತ್ತದೆ “ಹೌದಪ್ಪ ವರದಿ” ಪ್ರಕಟಿಸಿದಂತಿದೆ. ಈಗಾಗಲೇ 2018 ರಲ್ಲಿ ಚೀನಾದಲ್ಲಿ, ಭಾರತದಲ್ಲೇ ಇಂಡಿಯಾಟುಡೇ ಬಳಗದಲ್ಲಿ ಈ ತಂತ್ರ ಬಳಕೆ ಆಗಿದೆ. ನಮ್ಮಲ್ಲಿ ಹೆಚ್ಚಿನವರ ಸ್ಮಾರ್ಟ್ ಫೋನ್‌ಗಳಲ್ಲೂ ಈ “ಓದು” ಸೌಲಭ್ಯ ಈಗಾಗಲೇ ಇದೆ. ಬಹುತೇಕ ಕಂಪನಿಗಳ ವರ್ಚುವಲ್ ಅಸಿಸ್ಟಂಟ್ BOTಗಳೂ ಮಾತಾಡಬಲ್ಲವು.</p>



<p class="wp-block-paragraph"><br>ನನಗೆ ಇರುವ ಮಾಹಿತಿಯಂತೆ, ಭಾರತೀಯ ಮಾಧ್ಯಮಗಳಲ್ಲಿ ಈಗಾಗಲೇ ಲಭ್ಯ ಇರುವ ತಂತ್ರಜ್ಞಾನವನ್ನೇ ಸುದ್ದಿಮನೆ ಆಟೊಮೇಷನ್‌ಗೆ ಬಳಸಲು ಸಾಧ್ಯವಾಗಿಲ್ಲ. ಭಾಷಾಂತರಕ್ಕೆ ಇಂದು ಅತ್ಯಂತ ಪರಿಣಾಮಕಾರಿ ಕ್ಯಾಟ್ ಟೂಲುಗಳು ಲಭ್ಯವಿವೆ. ಅವು ಬಂದು 15 ವರ್ಷ ಆಯಿತು. ಭಾರತದಲ್ಲಿ ಯಾವುದೇ ಪತ್ರಿಕಾಸಂಸ್ಥೆ ಅದನ್ನು ಬಳಸಿರುವುದು ಇಲ್ಲಿಯ ತನಕ ನಾನು ಕಂಡಿಲ್ಲ. ಅದನ್ನು ಬಳಸಿದ್ದರೆ, ಈ ಹೊತ್ತಿಗೆ ಮುಕ್ಕಾಲು ಭಾಗ ಸುದ್ದಿ ಡೆಸ್ಕ್ ಕೆಲಸ ಮಾಯವಾಗಿರುತ್ತಿತ್ತು! ಈಗ ಈ ಕ್ಯಾಟ್ ಟೂಲ್‌ಗಳಿಗೆ ಮಷೀನ್ ಲರ್ನಿಂಗ್ ಅಭ್ಯಾಸ ಮಾಡಿಸಲಾಗುತ್ತಿದೆ, ಅದರ ಸುಧಾರಿತ ರೂಪಗಳು ಹೊರಬರುತ್ತಿವೆ. ಅದು ಪರಿಣಾಮಕಾರಿಯಾಗಿ ಅನುಷ್ಠಾನ ಆದರೆ, ವರ್ನಾಕ್ಯುಲರ್ ಪತ್ರಿಕೆಗಳಲ್ಲಿ ಭಾಷಾಂತರ ಮಾಡಬಲ್ಲ ಉಪಸಂಪಾದಕರು ಅಗತ್ಯವೇ ಇರುವುದಿಲ್ಲ!</p>



<p class="wp-block-paragraph"><br>ತಂತ್ರಜ್ಞಾನ ಬೆಳೆಯತೊಡಗಿದಾಗ ಯಾವುದನ್ನು ಎಲ್ಲಿಟ್ಟು ನೋಡಬೇಕು ಎಂದು ಕಲ್ಪನೆ ಇಲ್ಲದ ಪತ್ರಕರ್ತರು, ಜಗತ್ತಿಗಿಂತ ನಾವು ಯಾವತ್ತೂ ಒಂದು ಹೆಜ್ಜೆ ಮುಂದೆ ಎಂದು ಹೇಳುವ ಸ್ಥಿತಿಯಲ್ಲಿ ಈವತ್ತು ಉಳಿದಿಲ್ಲ ಎಂಬುದಕ್ಕೆ ಒಳ್ಳೆಯ ನಿದರ್ಶನ ಇದು!!</p>



<p class="wp-block-paragraph"></p>



<p class="wp-block-paragraph"><strong>Rajaram Talluru</strong></p>
]]></content:encoded>
					
		
		
			</item>
		<item>
		<title>ಚೀನಾ ಕ್ರಾಂತಿ, ಭಾರತೀಯ ಮಾಧ್ಯಮ ಜಗತ್ತು ಇತ್ಯಾದಿ&#8230;</title>
		<link>https://peepalmedia.com/chinese-revolution-indian-media-world-etc/</link>
		
		<dc:creator><![CDATA[Rajaram Tallur]]></dc:creator>
		<pubDate>Tue, 27 Sep 2022 04:24:41 +0000</pubDate>
				<category><![CDATA[ವಿಶೇಷ]]></category>
		<category><![CDATA[china]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[rajaramtallur]]></category>
		<guid isPermaLink="false">https://peepalmedia.com/?p=7413</guid>

					<description><![CDATA[ಭಾರತದೊಳಗೆ ಕನಿಷ್ಠ ವಾರಕ್ಕೊಂದೆರಡು “ಸುದ್ದಿ ಕ್ರಾಂತಿ” ಮಾಡಿ ಅಭ್ಯಾಸ ಆಗಿರುವ ಸೆನ್ಸೇಷನಲ್‌ ಸುದ್ದಿ ಜಗತ್ತು ಈಗ, ಜಗತ್ತಿನ ಉದ್ದಗಲದ ಸಂಗತಿಗಳನ್ನೂ ತಮ್ಮ ಚಹಾಕಪ್ಪಿಗೆ ಇಳಿಸಿಕೊಂಡು, ಅಲ್ಲೇ ಸುಂಟರಗಾಳಿ ಎಬ್ಬಿಸುವುದು ನೋಡಲು ಮಜವಾಗಿರುತ್ತದೆ. ಅಂತಹದೊಂದು ಸಂಭ್ರಮ ಎರಡು ದಿನಗಳಿಂದ ಸದ್ದು ಮಾಡುತ್ತಿದೆ. ಚೀನಾದಲ್ಲಿ ಅಧ್ಯಕ್ಷರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ, ಸೇನೆ ಆಡಳಿತವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂಬ ಸುದ್ದಿ ಅದು. ನಿನ್ನೆ ಮಧ್ಯಾಹ್ನದ ಹೊತ್ತಿಗೆ, ಆರಂಭಿಕವಾಗಿ ಒಂದೆರಡು “ನಾಗಪುರಿ” ಸುದ್ದಿ ವೆಬ್‌ಸೈಟ್‌ಗಳಲ್ಲಿ ಕಾಣಿಸಿಕೊಂಡ ಈ ಸುದ್ದಿ, ಸುಬ್ರಹ್ಮಣ್ಯಂ ಸ್ವಾಮಿ ಅವರ ಟ್ವೀಟ್ [&#8230;]]]></description>
										<content:encoded><![CDATA[
<p class="wp-block-paragraph" style="font-size:20px">ಭಾರತದೊಳಗೆ ಕನಿಷ್ಠ ವಾರಕ್ಕೊಂದೆರಡು “ಸುದ್ದಿ ಕ್ರಾಂತಿ” ಮಾಡಿ ಅಭ್ಯಾಸ ಆಗಿರುವ ಸೆನ್ಸೇಷನಲ್‌ ಸುದ್ದಿ ಜಗತ್ತು ಈಗ, ಜಗತ್ತಿನ ಉದ್ದಗಲದ ಸಂಗತಿಗಳನ್ನೂ ತಮ್ಮ ಚಹಾಕಪ್ಪಿಗೆ ಇಳಿಸಿಕೊಂಡು, ಅಲ್ಲೇ ಸುಂಟರಗಾಳಿ ಎಬ್ಬಿಸುವುದು ನೋಡಲು ಮಜವಾಗಿರುತ್ತದೆ. ಅಂತಹದೊಂದು ಸಂಭ್ರಮ ಎರಡು ದಿನಗಳಿಂದ ಸದ್ದು ಮಾಡುತ್ತಿದೆ. ಚೀನಾದಲ್ಲಿ ಅಧ್ಯಕ್ಷರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ, ಸೇನೆ ಆಡಳಿತವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂಬ ಸುದ್ದಿ ಅದು.</p>



<p class="wp-block-paragraph" style="font-size:20px">ನಿನ್ನೆ ಮಧ್ಯಾಹ್ನದ ಹೊತ್ತಿಗೆ, ಆರಂಭಿಕವಾಗಿ ಒಂದೆರಡು “ನಾಗಪುರಿ” ಸುದ್ದಿ ವೆಬ್‌ಸೈಟ್‌ಗಳಲ್ಲಿ ಕಾಣಿಸಿಕೊಂಡ ಈ ಸುದ್ದಿ, ಸುಬ್ರಹ್ಮಣ್ಯಂ ಸ್ವಾಮಿ ಅವರ ಟ್ವೀಟ್ ಜೊತೆ ತಾರಕಕ್ಕೇರಿದೆ. ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ &#8220;ನಂಬರ್” ಇರುವ ಕಾರಣಕ್ಕಾಗಿ, ಇಲ್ಲಿ ಸುದ್ದಿ ಆದರೆ ಇಂಟರ್ನೆಟ್ ಲೋಕದಲ್ಲಿ ಅದು ಸುದ್ದಿ ಆಗಿ, ಟ್ರೆಂಡ್ ಆಗಿ ಬದಲಾಗುವುದಕ್ಕೆ ಹೆಚ್ಚು ಹೊತ್ತು ಬೇಕಾಗುವುದಿಲ್ಲ. ಇದಕ್ಕೆಲ್ಲ ಕಲಶ ಇಟ್ಟದ್ದು ಮುಂದಿನ ತಿಂಗಳ ಆದಿಯಲ್ಲಿ ಚೀನಾ ಕಮ್ಯುನಿಸ್ಟ್ ಪಕ್ಷದ ವಾರ್ಷಿಕ ಅಧಿವೇಶನ ಇದೆ. ಅದಕ್ಕೆ ಮುನ್ನ ಅಧ್ಯಕ್ಷರ ಪದಚ್ಯುತಿ ನಿಶ್ಚಿತ ಎಂಬ ಕೆಲವು “ಫಲಜ್ಯೋತಿಷ” ಹೇಳಿಕೆಗಳು!</p>


<div class="wp-block-image">
<figure class="aligncenter size-large is-resized"><img fetchpriority="high" decoding="async" src="https://peepalmedia.com/wp-content/uploads/2022/09/china-flight-1024x612.webp" alt="" class="wp-image-7424" width="746" height="439"/></figure>
</div>


<p class="wp-block-paragraph" style="font-size:20px">ನಿನ್ನೆ ತಡರಾತ್ರಿ, ಇಂದು ಬೆಳಗ್ಗೆ ಚೀನಾದಲ್ಲಿ ವಿಮಾನಗಳು ರದ್ಧಾಗಿವೆ ಎಂಬ ಫ್ಲೈಟ್ ಷೆಡ್ಯೂಲ್ ಸ್ಕ್ರೀನ್‌ಷಾಟ್‌ಗಳು, ಲೈವ್ ಫ್ಲೈಟ್ ಟ್ರಾಕರ್ ಸ್ಕ್ರೀನ್‌ಷಾಟ್‌ಗಳು ತಿರುಗಾಡಿ, ನಿನ್ನೆ ಹುಟ್ಟಿದ ಈ ಊಹಾಪೋಹಗಳಿಗೆ ತುಪ್ಪ ಎರೆಯುತ್ತಿವೆ. ನಾನು ಈಗ ಐದು ನಿಮಿಷ ಹಿಂದೆ ತೆಗೆದ ಚೀನಾ ಮೇಲಿನ ಫ್ಲೈಟ್ ಟ್ರಾಕರ್ ಸ್ಕ್ರೀನ್‌ಷಾಟ್‌ನಲ್ಲಿ ಅಂತಹ ಅಸಹಜತೆಗಳೇನೂ ಕಾಣಿಸಲಿಲ್ಲ. ಚಿತ್ರ ಮೇಲಿದೆ ನೋಡಿ. (ಈ ಟ್ರ್ಯಾಕರ್‌ಗಳ ಸಾಚಾತನದ ಬಗ್ಗೆ ಕೇಳಬೇಡಿ ಮತ್ತೆ!) ಈ ಸುದ್ದಿಯ ಹಿನ್ನೆಲೆಯಲ್ಲಿ ತಿರುಗಾಡುತ್ತಿರುವ ಸೇನಾ ಚಲನವಲನ, ಬಾಂಬ್ ಸ್ಫೋಟದ ವೀಡಿಯೊಗಳೆಲ್ಲ ದಿಕ್ಕುದಿಸೆಯಿಲ್ಲದ ಅಬ್ಬೇಪಾರಿ ಮೂಲಗಳವು.</p>



<p class="wp-block-paragraph" style="font-size:20px">ಚೀನಾ ಸುದ್ದಿ-ಮಾಹಿತಿಗೆ ಸಂಬಂಧಿಸಿದಂತೆ ಜಗತ್ತಿನಿಂದ ಪ್ರತ್ಯೇಕವಾಗಿ ಅಭೇದ್ಯ ಕೋಟೆ ಕಟ್ಟಿಕೊಂಡಿದೆ ಮತ್ತು ಅದು ಎಷ್ಟು ಅಭೇದ್ಯ ಎಂಬುದು ಕೋವಿಡ್ ಕಾಲದಲ್ಲಿ ಜಗತ್ತಿಗೆ ಗೊತ್ತಾಗಿದೆ. ಅದು ಪಾಶ್ಚಿಮಾತ್ಯ ಮಾಧ್ಯಮಗಳ ವೈಫಲ್ಯವೂ ಹೌದು. ಆ ಕಾಲದಲ್ಲಿ ಬಂದ, ಅಲ್ಲಿನ ಕೋವಿಡ್ ಸಾವಿನ ವಿಪರೀತ ಸುದ್ದಿಗಳನ್ನೆಲ್ಲ ಗಮನಿಸಿದರೆ, ಈಗ ನನಗೆ ಚೀನಾದಲ್ಲಿ ಜನ ಉಳಿದಿರುವುದೇ ಡೌಟು ಮಾರಾಯ್ರೆ!</p>



<p class="wp-block-paragraph" style="font-size:20px">ಬೇರೆ ದೇಶಗಳಲ್ಲಿ ಚೀನಾ ಬಗ್ಗೆ ಸುದ್ದಿ, ಮಾಹಿತಿ ಲಭ್ಯ ಇಲ್ಲದಿದ್ದರೂ, ದೂರಪೂರ್ವದ ಕೊರಿಯಾ, ಜಪಾನ್‌ಗಳಲ್ಲಿ ಆ ಬಗ್ಗೆ ಸಣ್ಣ ವಾಸನೆಯಾದರೂ ಹೊಡೆಯಲೇಬೇಕು. ಯಾಕೆಂದರೆ ಆ ದೇಶಗಳು ಚೀನಾ ಜೊತೆ ಸಾಕಷ್ಟು ಹಾಸುಹೊಕ್ಕು ಸಂಬಂಧ ಹೊಂದಿವೆ. ಬೆಳಗ್ಗೆಯಿಂದ ಕೊರಿಯಾ ಮತ್ತು ಜಪಾನ್‌ಗಳ ಪ್ರಮುಖ ಸುದ್ದಿ ಪತ್ರಿಕೆಗಳನ್ನು ಗಮನಿಸುತ್ತಿದ್ದೇನೆ. ಅಲ್ಲೆಲ್ಲೂ ಸಣ್ಣ ಸುಳಿವು ಕೂಡ ಇಲ್ಲ.</p>



<p class="wp-block-paragraph" style="font-size:20px">ಇಷ್ಟೆಲ್ಲ ಇದ್ದೂ, ನಿಜಕ್ಕೂ ಚೀನಾದಲ್ಲಿ ಕ್ರಾಂತಿ ಆಗಿದೆ ಎಂದಾದರೆ, ಅವರು ನಿಜಕ್ಕೂ ಗ್ರೇಟ್ ಮಾರಾಯ್ರೆ! ಸುದ್ದಿಯ ನಿಯಂತ್ರಣ ಅವರಿಂದ ಜಗತ್ತು ಕಲೀಬೇಕು! ಯಾವ ದೇಶಕ್ಕೂ ಇಷ್ಟೆಲ್ಲ ಟೆಕ್ನಾಲಜಿ ಇದ್ದರೂ, 24ಗಂಟೆ ದಾಟಿದ ಬಳಿಕವೂ ಕ್ರಾಂತಿಯ ನಿಜ ಚಿತ್ರ ಪಡೆಯಲಾಗಿಲ್ಲ! ಶೇಮ್ ಶೇಮ್!!</p>



<p class="has-text-align-right wp-block-paragraph" style="font-size:20px"><mark style="background-color:rgba(0, 0, 0, 0)" class="has-inline-color has-pale-pink-color">(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)</mark></p>



<figure class="wp-block-image size-full is-resized"><img decoding="async" src="https://peepalmedia.com/wp-content/uploads/2022/09/rajaram-tallur.png" alt="" class="wp-image-5584" width="214" height="193"/></figure>



<p class="wp-block-paragraph" style="font-size:20px"><strong>ರಾಜಾರಾಂ ತಲ್ಲೂರು</strong><br>ಲೇಖಕರು, ಚಿಂತಕರು</p>



<p class="wp-block-paragraph"></p>



<p class="wp-block-paragraph" style="font-size:20px">🔶 ಪೀಪಲ್ ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ<br><a href="https://chat.whatsapp.com/GBc6sg7E2FQLuXblEdBxSi">https://chat.whatsapp.com/GBc6sg7E2FQLuXblEdBxSi</a></p>



<p class="wp-block-paragraph"></p>



<p class="wp-block-paragraph" style="font-size:20px"><mark style="background-color:rgba(0, 0, 0, 0)" class="has-inline-color has-vivid-purple-color">ಮಹಾತ್ಮ ಗಾಂಧಿಯವರಿಂದ ಪ್ರಭಾವಿತರಾದವರು ಕೇವಲ ಭಾರತೀಯರು ಮಾತ್ರವಲ್ಲ. ಜಗತ್ತಿನಾದ್ಯಂತ ಅವರ ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಅಮೆರಿಕದ ಹೆಸರಾಂತ ನಾಗರಿಕ ಹಕ್ಕು ಹೋರಾಟಗಾರ ಮಾರ್ಟಿನ್‌ ಲೂಥರ್‌ ಕಿಂಗ್ ಇದಕ್ಕೊಂದು ಉದಾಹರಣೆ. ಗಾಂಧಿಯವರು ಮಾರ್ಟಿನ್‌ ಲೂಥರ್‌ ಕಿಂಗ್‌ ಅವರನ್ನು ಹೇಗೆ ಪ್ರಭಾವಿಸಿದ್ದರು ಎಂಬುದನ್ನು ವಿವರಿಸಿದ್ದಾರೆ ಸಾಮಾಜಿಕ ಚಿಂತಕ ನಿಕೇತ್‌ ರಾಜ್‌ ಮೌರ್ಯ. <br>ಇದನ್ನೂ ನೋಡಿ</mark><mark style="background-color:rgba(0, 0, 0, 0)" class="has-inline-color has-vivid-cyan-blue-color">:</mark><a href="https://www.youtube.com/watch?v=ULe6eJJ51XQ">https://www.youtube.com/watch?v=ULe6eJJ51XQ</a></p>
]]></content:encoded>
					
		
		
			</item>
		<item>
		<title>ನಮೀಬಿಯಾದಿಂದ ಭಾರತಕ್ಕೆ ಹೊರಟ ಚೀತಾಗಳು &#8211; ಮಾಧ್ಯಮಗಳಿಗೆ ಬೇಕಿತ್ತಾ ಈ ಕರಾಮತ್ತು</title>
		<link>https://peepalmedia.com/nameebiyaadinda-bharatakke-horata-ceetagalu-madyamagalige-bekitta-i-karamattu/</link>
		
		<dc:creator><![CDATA[Rajaram Tallur]]></dc:creator>
		<pubDate>Fri, 16 Sep 2022 05:57:42 +0000</pubDate>
				<category><![CDATA[ವಿಶೇಷ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[rajaram-tallur]]></category>
		<category><![CDATA[special story]]></category>
		<category><![CDATA[writing]]></category>
		<guid isPermaLink="false">https://peepalmedia.com/?p=5571</guid>

					<description><![CDATA[ಭಾರತಕ್ಕೆ ನಮೀಬಿಯಾದಿಂದ ಚೀತಾಗಳು ಬರುತ್ತಿರುವ ಹಿನ್ನೆಲೆಯಲ್ಲಿ ಭಾರತದ ಮಾಧ್ಯಮಗಳು ವರದಿ ಮಾಡಿದ ರೀತಿಯ ಕುರಿತು ಹಿರಿಯ ಪತ್ರಕರ್ತರಾದ ರಾಜಾರಾಮ್ ತಲ್ಲೂರು ಅವರು ವಿಶ್ಲೇಷಣೆಯೊಂದನ್ನು ಬರೆದಿದ್ದಾರೆ ಪೀಪಲ್ ಮೀಡಿಯಾದ ಓದುಗರಿಗಾಗಿ ನಾವು ಅದನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ ಸುದ್ದಿಗಳನ್ನು ಮೂಲದಲ್ಲೇ ಕಲುಷಿತಗೊಳಿಸುವ ತಂತ್ರದ ಬಗ್ಗೆ ನಾನು ಹಲವು ಬಾರಿ ಹೇಳಿದ್ದೇನೆ. ಒಂದು ತಾಜಾ ಉದಾಹರಣೆ ಸಹಿತ ಅದನ್ನು ವಿವರಿಸುವೆ. ಈಗೀಗ ಈ “ಫೇಕ್” ಸುದ್ದಿ ಪ್ರಚಾರ ಬಾಜಾ ಭಜಂತ್ರಿಗಳ ಸಹಿತ ನಡೆದಾಗ, ಸುಳ್ಳೂ ಸತ್ಯವಾಗತೊಡಗುತ್ತದೆ. ಬೇಕಿದ್ದರೆ ನಿಮ್ಮ ಈವತ್ತಿನ ಪತ್ರಿಕೆಗಳನ್ನು [&#8230;]]]></description>
										<content:encoded><![CDATA[
<blockquote class="wp-block-quote has-medium-font-size is-layout-flow wp-block-quote-is-layout-flow"><p><strong>ಭಾರತಕ್ಕೆ ನಮೀಬಿಯಾದಿಂದ ಚೀತಾಗಳು ಬರುತ್ತಿರುವ ಹಿನ್ನೆಲೆಯಲ್ಲಿ ಭಾರತದ ಮಾಧ್ಯಮಗಳು ವರದಿ ಮಾಡಿದ ರೀತಿಯ ಕುರಿತು ಹಿರಿಯ ಪತ್ರಕರ್ತರಾದ ರಾಜಾರಾಮ್ ತಲ್ಲೂರು ಅವರು ವಿಶ್ಲೇಷಣೆಯೊಂದನ್ನು ಬರೆದಿದ್ದಾರೆ ಪೀಪಲ್ ಮೀಡಿಯಾದ ಓದುಗರಿಗಾಗಿ ನಾವು ಅದನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ</strong></p></blockquote>



<p class="has-text-align-justify has-medium-font-size wp-block-paragraph">ಸುದ್ದಿಗಳನ್ನು ಮೂಲದಲ್ಲೇ ಕಲುಷಿತಗೊಳಿಸುವ ತಂತ್ರದ ಬಗ್ಗೆ ನಾನು ಹಲವು ಬಾರಿ ಹೇಳಿದ್ದೇನೆ. ಒಂದು ತಾಜಾ ಉದಾಹರಣೆ ಸಹಿತ ಅದನ್ನು ವಿವರಿಸುವೆ. ಈಗೀಗ ಈ “ಫೇಕ್” ಸುದ್ದಿ ಪ್ರಚಾರ ಬಾಜಾ ಭಜಂತ್ರಿಗಳ ಸಹಿತ ನಡೆದಾಗ, ಸುಳ್ಳೂ ಸತ್ಯವಾಗತೊಡಗುತ್ತದೆ. ಬೇಕಿದ್ದರೆ ನಿಮ್ಮ ಈವತ್ತಿನ ಪತ್ರಿಕೆಗಳನ್ನು ತೆರೆದು ನೋಡಿ!</p>



<p class="has-text-align-justify has-medium-font-size wp-block-paragraph">ಇದೇ “ಜೋರ್ ಸೆ ಬೋಲೋ ಷೋರ್ ಸೆ ಬೋಲೊ” ಕರಾಮತ್ತು!<br>ವಿಷ್ಯ ಇನ್ನೇನಿಲ್ಲ, ನಮೀಬಿಯಾದಿಂದ ಎಂಟು ಚಿರತೆಗಳು ಬರುತ್ತಿವೆ. ಅದನ್ನು ತರಲು ಭಾರತದಿಂದ ವಿಮಾನ ಹೋಗಿದೆ. ಆ ಚಿರತೆಗಳು ಬರುವುದು ನಿಜಕ್ಕೂ ಮಾನವಾಸಕ್ತಿಯ ಸುದ್ದಿ. ಅದರಲ್ಲೇನೂ ಕೊರತೆ ಇಲ್ಲ.</p>



<p class="has-text-align-justify has-medium-font-size wp-block-paragraph">ಆದರೆ, ಮೊನ್ನೆಯಿಂದ ಟ್ವಿಟ್ಟರ್, ಫೇಸ್‌ಬುಕ್ ಇತ್ಯಾದಿಗಳಲ್ಲಿ ಒಂದು ಚಿರತೆ ಮುಖದ ವಿಮಾನದ ಸುದ್ದಿ ಹರಿದಾಡುತ್ತಿದೆ. ಗಮನಿಸಿ, ಹಾಗೆ ಸುತ್ತುತ್ತಿರುವುದು ಕೇವಲ ಒಂದೇ ಒಂದು ಫೋಟೊ!<br>ಒಂದೆರಡು ದಿನಗಳ ಹಿಂದೆ ನಮೀಬಿಯಾದಲ್ಲಿ ಭಾರತದ ರಾಯಭಾರ ಕಚೇರಿಯದೆನ್ನಲಾದ ಟ್ವಿಟ್ಟರ್ ಹ್ಯಾಂಡಲ್ ಒಂದು, ಈ ಬಗ್ಗೆ ಟ್ವೀಟ್ ಮಾಡಿತ್ತು. ಅದಾದ ಬಳಿಕ ತಕ್ಕೊಳ್ಳಿ, <a href="http://ANI, PTI">ANI, PTI</a> ಇತ್ಯಾದಿ ಸುದ್ದಿಮೂಲ ಸಂಸ್ಥೆಗಳು ಅದನ್ನು ಟ್ವೀಟ್ ಮಾಡಿದವು, ಅದಕ್ಕೆ ವೇಷ, ಬಣ್ಣ ಕಟ್ಟಿದವು. ತಕ್ಕೊಳ್ಳಿ, ಅದರ ಬೆನ್ನಿಗೇ ದೇಶದ ಮಾಧ್ಯಮಗಳು ಥೈದ ಥೈದ…. ಎಂದು ಕುಣಿದು ಧೂಳೆಬ್ಬಿಸಿದ್ದೇನು, ಗಿರಕಿ ಹಾಕಿದ್ದೇನು…!!</p>



<p class="has-text-align-justify has-medium-font-size wp-block-paragraph">ತಮಾಷೆ ಎಂದರೆ, ಈ ಸುದ್ದಿ ಹೇಳುತ್ತಿರುವುದು: ಚಿರತೆ ಕೊಂಡೊಯ್ಯಲು ಚಿರತೆ ಮುಖದ ವಿಮಾನ ಭಾರತದಿಂದ ನಮೀಬಿಯಾಕ್ಕೆ ಬಂದಿದೆ ಎಂದು. ಈಗ ಮಾಧ್ಯಮಗಳಿಗೆ ಲಭ್ಯ ಇರುವುದು ಭಾರತದಲ್ಲೇ ಪೇಂಟ್ ಆಗಿ ನಮೀಬಿಯಾಕ್ಕೆ ಹೋದ ವಿಮಾನದ ಕೇವಲ “ಒಂದೇ ಒಂದು” ಫೋಟೊ, ಅದೂ ನಮೀಬಿಯಾದಿಂದ ಬಂದದ್ದು! ಯಾರಿಗೂ ಯಾವ ಶಂಕೆಯೂ ಉಂಟಾಗಲಿಲ್ಲ… ಅಂದರೆ ಅಚ್ಚರಿ ಅಲ್ಲವೇ? ನಮ್ಮ ಸುದ್ದಿಮನೆಗಳಲ್ಲಿ ಎಂತೆಂತಹಾ ಘನಂಧಾರಿಗಳು ಕುಳಿತಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ!! ಝೀ ಟೀವಿ ಅಂತೂ ಈ ಸುದ್ದಿಯನ್ನು ಒಂದೇ ಫೋಟೋ ಇದ್ದರೂ, ದೊಡ್ಡ ವೀಡಿಯೊ ಸುದ್ದಿ ಮಾಡಿ ಬಿತ್ತರಿಸಿದ್ದನ್ನು ನೋಡಿದೆ.</p>



<p class="has-text-align-justify has-medium-font-size wp-block-paragraph">ಈಗ <a href="http://RTI">RTI</a> ಕಾರ್ಯಕರ್ತ ಸಾಕೇತ್ ಗೋಖಲೆ, ಮಾಧ್ಯಮಗಳನ್ನು “ದಿಗಂಬರ”ಗೊಳಿಸಿದ್ದಾರೆ. ಈ ಚಿತ್ರಗಳು, ಮೂಲತಃ ಮಾಸ್ಕೊದ ಟ್ರಾನ್ಸೆರೊ ಏರ್ ಲೈನ್ಸ್ ವಿಮಾನದ ಚಿತ್ರವಾಗಿರಬಹುದು ಎಂಬ ಶಂಕೆ ಅವರದು. ಆ ವಿಮಾನ ಕಂಪನಿ ಚಿರತೆ ಮಾತ್ರವಲ್ಲ, ಹುಲಿ ಮತ್ತಿತರ ಪ್ರಾಣಿಗಳ ಮುಖವನ್ನೂ ತನ್ನ ವಿಮಾನಗಳಲ್ಲಿ ಬಳಸಿದೆ. ಹೆಚ್ಚಿನಂಶ, ಅದೇ ಚಿತ್ರವನ್ನು ಎಲ್ಲ ಮಾಧ್ಯಮಗಳೂ ಇಂದು<a href="http://PTI, UNI"> PTI, UNI </a>ಸುದ್ದಿಮೂಲಗಳನ್ನು ಉಲ್ಲೇಖಿಸಿ ಪ್ರಕಟಿಸಿವೆ.</p>



<p class="has-text-align-justify has-medium-font-size wp-block-paragraph">ನನಗೆ ಸಾಕೇತ್ ಹೇಳುತ್ತಿರುವುದು ಸತ್ಯ ಇರಬಹುದು ಅನ್ನಿಸುತ್ತದೆ. ಏಕೆಂದರೆ, ವಿಮಾನ ದೇಶದೊಳಗೇ ಪೇಂಟ್ ಆಗಿದ್ದರೆ, ಅದರ ಹಲವಾರು ಚಿತ್ರಗಳು ಲಭ್ಯ ಇರಬೇಕಿತ್ತು. ಚಿರತೆ ಬರುವ ಸುದ್ದಿಯ ಬದಲು, ಅದನ್ನು ತರಹೋಗಿದೆಯೆನ್ನಲಾದ ವಿಮಾನದ ಮುಖವನ್ನು ಸುದ್ದಿ ಮಾಡಿ, ತಮ್ಮ ಧಣಿಗಳ ಜನ್ಮ ದಿನದ ಸಂಭ್ರಮ ಆಚರಿಸಲು ಸಿದ್ಧತೆ ಮಾಡಿಕೊಂಡಿರುವ ಮಾಧ್ಯಮಗಳು ಈಗ ಸಿಕ್ಕಿಹಾಕಿಕೊಂಡಂತಿದೆ. ಈಗ ಏನಾಗಿದೆ ಎಂದು ಸ್ಪಷ್ಟನೆ ಕೊಡಬೇಕಾದ ಜವಾಬ್ದಾರಿ ಮಾಧ್ಯಮಗಳದು ಅಲ್ಲವೇ?!<br>ಇದನ್ನೇ ಅಲ್ಲವೇ ಹಿಂದೊಮ್ಮೆ, “ಬಗ್ಗಿ ಎಂದರೆ ತೆವಳುವುದು” ಎಂದು ಎಲ್ ಕೆ ಆಡ್ವಾಣಿಯವರು ಹೇಳಿದ್ದು!</p>



<p class="has-text-align-right has-medium-font-size wp-block-paragraph">(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)</p>



<figure class="wp-block-image size-full"><img decoding="async" width="218" height="197" src="https://peepalmedia.com/wp-content/uploads/2022/09/rajaram-tallur.png" alt="" class="wp-image-5584"/></figure>



<p class="has-medium-font-size wp-block-paragraph"><strong>ರಾಜಾರಾಂ ತಲ್ಲೂರ್‌</strong><br>ಪತ್ರಕರ್ತರು, ಬರಹಗಾರರು</p>
]]></content:encoded>
					
		
		
			</item>
	</channel>
</rss>
