<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Ravi Kumar N &#8211; Peepal Media</title>
	<atom:link href="https://peepalmedia.com/author/ravi-kumar-n/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Fri, 03 Nov 2023 10:29:48 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Ravi Kumar N &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಜಾತಿ ಗಣತಿ&#124; ಡಿ ಕೆ ಶಿ ಮತ್ತು ಒಕ್ಕಲಿಗ ಸಚಿವರು ನಿಲುವು ಸ್ಪಷ್ಟಪಡಿಸಬೇಕು</title>
		<link>https://peepalmedia.com/caste-census-dk-shi-and-okkaliga-ministers-should-clarify-their-stand/</link>
		
		<dc:creator><![CDATA[Ravi Kumar N]]></dc:creator>
		<pubDate>Fri, 03 Nov 2023 10:27:28 +0000</pubDate>
				<category><![CDATA[ರಾಜಕೀಯ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=31097</guid>

					<description><![CDATA[ಸಾಮಾಜಿಕ,ಆರ್ಥಿಕ ಸಮೀಕ್ಷೆ-2015ರ ಕಾಂತರಾಜ್ ವರದಿಯನ್ನು ವಿರೋಧಿಸಿ ಆದಿಚುಂಚನಗಿರಿ ಮಠದ ಡಾ ನಿರ್ಮಲಾನಂದನಾಥ ಮಹಾಸ್ವಾಮೀಜಿಗಳ ಅಧ್ಯಕ್ಷತೆಯ ಒಕ್ಕಲಿಗ ಸಮುದಾಯದ ಸಭೆಯಲ್ಲಿ ಸರ್ಕಾರದ ಭಾಗವೇ ಅಗಿರುವ ಉಪಮುಖ್ಯಮಂತ್ರಿ ಡಿ,.ಕೆ ಶಿವಕುಮಾರ್ ಮತ್ತು ಇತರೆ ಸಚಿವರುಗಳು ಭಾಗವಹಿಸಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು- ರವಿಕುಮಾರ್‌ ಎನ್‌, ಪತ್ರಕರ್ತರು ಆದಿಚುಂಚನಗಿರಿಮಠದ ಡಾ ನಿರ್ಮಲಾನಂದನಾಥ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಒಕ್ಕಲಿಗರ ಸಮುದಾಯದ ಸಭೆಯಲ್ಲಿ ಸಾಮಾಜಿಕ,ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ಕಾಂತರಾಜ್ ವರದಿಯನ್ನು ವಿರೋಧಿಸುವ ನಿರ್ಣಯ ಕೈಗೊಳ್ಳುವ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳು ಮತ್ತು ಸರ್ಕಾರದ ಭಾಗವಾಗಿರುವ ಒಕ್ಕಲಿಗ ಸಮುದಾಯದ ಶಾಸಕ [&#8230;]]]></description>
										<content:encoded><![CDATA[
<p class="has-background wp-block-paragraph" style="background-color:#abb7c24d"><strong>ಸಾಮಾಜಿಕ,ಆರ್ಥಿಕ ಸಮೀಕ್ಷೆ-2015ರ ಕಾಂತರಾಜ್ ವರದಿಯನ್ನು ವಿರೋಧಿಸಿ ಆದಿಚುಂಚನಗಿರಿ ಮಠದ ಡಾ ನಿರ್ಮಲಾನಂದನಾಥ ಮಹಾಸ್ವಾಮೀಜಿಗಳ ಅಧ್ಯಕ್ಷತೆಯ ಒಕ್ಕಲಿಗ ಸಮುದಾಯದ ಸಭೆಯಲ್ಲಿ ಸರ್ಕಾರದ ಭಾಗವೇ ಅಗಿರುವ ಉಪಮುಖ್ಯಮಂತ್ರಿ ಡಿ,.ಕೆ ಶಿವಕುಮಾರ್ ಮತ್ತು ಇತರೆ ಸಚಿವರುಗಳು ಭಾಗವಹಿಸಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು- <mark style="background-color:rgba(0, 0, 0, 0)" class="has-inline-color has-vivid-red-color">ರವಿಕುಮಾರ್‌ ಎನ್‌, ಪತ್ರಕರ್ತರು</mark></strong></p>



<p class="wp-block-paragraph">ಆದಿಚುಂಚನಗಿರಿಮಠದ ಡಾ ನಿರ್ಮಲಾನಂದನಾಥ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಒಕ್ಕಲಿಗರ ಸಮುದಾಯದ ಸಭೆಯಲ್ಲಿ ಸಾಮಾಜಿಕ,ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ಕಾಂತರಾಜ್ ವರದಿಯನ್ನು ವಿರೋಧಿಸುವ ನಿರ್ಣಯ ಕೈಗೊಳ್ಳುವ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳು ಮತ್ತು ಸರ್ಕಾರದ ಭಾಗವಾಗಿರುವ ಒಕ್ಕಲಿಗ ಸಮುದಾಯದ ಶಾಸಕ ,ಸಚಿವರುಗಳು ಉಪಸ್ಥಿತರಿರುವುದನ್ನು ನಿರ್ಣಯಕ್ಕೆ ಸಮ್ಮತಿ ಎಂದೇ ಭಾವಿಸಬಹುದು.</p>



<p class="wp-block-paragraph">ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ಕು ದಿನಗಳ ಹಿಂದೆಯಷ್ಟೆ ಕಾಂತರಾಜ್ ವರದಿ ಸ್ವೀಕರಿಸಿ ಅನುಷ್ಟಾನಗೊಳಿಸಲು ರಾಜ್ಯ ಸರ್ಕಾರ ಬದ್ದವಾಗಿದೆ ಎಂದು ಬಹಿರಂಗವಾಗಿ ಘೋಷಿಸಿರುವಾಗ ಅವರ ಸಂಪುಟದ ಸಹೋದ್ಯೋಗಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಮತ್ತಿತರ ಸಚಿವರುಗಳು ಕಾಂತರಾಜ್ ವರದಿ ವಿರೋಧಿಸಿ ಸರ್ಕಾರಕ್ಕೆ ಮನವಿ ಸಲ್ಲಿಸುವ ಸ್ವಜಾತಿಯ ನಿರ್ಣಯಕ್ಕೆ ಕೈಜೋಡಿಸಿರುವುದು ಸರ್ಕಾರದ ನಿಲುವಿಗೆ ಮತ್ತು ಆಶಯಕ್ಕೆ ತದ್ವಿರುದ್ದ ನಡೆಯಂತೆ ಕಾಣತೊಡಗಿದೆ.</p>



<figure class="wp-block-image size-full"><img fetchpriority="high" decoding="async" width="900" height="450" src="https://peepalmedia.com/wp-content/uploads/2023/11/vokkaliga-new.jpg" alt="" class="wp-image-31098" srcset="https://peepalmedia.com/wp-content/uploads/2023/11/vokkaliga-new.jpg 900w, https://peepalmedia.com/wp-content/uploads/2023/11/vokkaliga-new-300x150.jpg 300w, https://peepalmedia.com/wp-content/uploads/2023/11/vokkaliga-new-768x384.jpg 768w, https://peepalmedia.com/wp-content/uploads/2023/11/vokkaliga-new-150x75.jpg 150w, https://peepalmedia.com/wp-content/uploads/2023/11/vokkaliga-new-696x348.jpg 696w" sizes="(max-width: 900px) 100vw, 900px" /></figure>



<p class="wp-block-paragraph">ಬಲಾಢ್ಯ ಜಾತಿಗಳು ಕಾಂತರಾಜ್ ವರದಿಯನ್ನು ಮೊದಲಿನಿಂದಲೂ ವಿರೋಧಿಸಿಕೊಂಡೆ ಬಂದಿವೆ. ಸಿದ್ದರಾಮಯ್ಯ 2013 ರಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೆ ಜನಜಾತಿಗಳ ಸಾಮಾಜಿಕ,ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗೆ ಅಸ್ತು ಎಂದಿದ್ದು 162 ಕೋ.ರೂಗಳನ್ನು ವಿನಿಯೋಗಿಸಿದೆ. ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜ್ ನೇತೃತ್ವದಲ್ಲಿ ನಡೆದ ಸಮೀಕ್ಷೆ ಜಾತಿಗಣತಿಯ ಮಹತ್ವದ ಸ್ವರೂಪವೇ ಆಗಿದೆ. ಆದರೆ ವರದಿ ಸಿದ್ದಗೊಂಡಿದ್ದರೂ ಅದನ್ನು ಸಿದ್ದರಾಮಯ್ಯ ಸರ್ಕಾರದ ನಂತರ ಬಂದ ಸರ್ಕಾರಗಳು ಆ ವರದಿಯನ್ನು ಸ್ವೀಕರಿಸುವ ಮನಸ್ಸು ಮಾಡಲಿಲ್ಲ. ಅಷ್ಟೇ ಏಕೆ, ಅಲ್ಪಾವಧಿಯ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದ ಸಂದರ್ಭದಲ್ಲೂ ಕಾಂತರಾಜ್ ವರದಿ ಸ್ವೀಕರಿಸಲು ಸರ್ಕಾರದ ಭಾಗವೇ ಆಗಿದ್ದ ಬಲಾಢ್ಯ ಜಾತಿಗಳ ನಾಯಕರುಗಳು ಅಡ್ಡಿ ಪಡಿಸಿದ್ದರು ಎಂಬ ಸತ್ಯವನ್ನು ಮರೆಮಾಚುವಂತಿಲ್ಲ.</p>



<p class="wp-block-paragraph">ಇದೀಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರ ಹಿಡಿದಿರುವಾಗ ಈ ರಾಜ್ಯದ ಬಹುಜನರ ಸಾಮಾಜಿಕ ನ್ಯಾಯದ ತಕ್ಕಡಿಯೆಂದೆ ಗುರುತಿಸ ಬಹುದಾದ ಕಾಂತರಾಜ್ ವರದಿಯನ್ನು ಜಾರಿಗೊಳಿಸುವುದನ್ನು ಎದುರು ನೋಡಲಾಗುತ್ತಿದೆ. ಸಾಮಾಜಿಕ ನ್ಯಾಯದ ಸಮರ್ಪಕ ಹಂಚಿಕೆಗೆ ಜಾತಿಗಣತಿ ಆಗಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪ್ರತಿಪಾದನೆ ಮತ್ತು ಇದೇ ಕಾಂಗ್ರೆಸ್ ಪಕ್ಷದ ನಿಲುವು ಆಗಿದ್ದು, ಸಾಮಾಜಿಕ ನ್ಯಾಯದ ಬೇಡಿಕೆಗೆ ಹೊಸ ಶಕ್ತಿಯೊಂದು ಹರಿದಂತಾಗಿದೆ.</p>



<p class="wp-block-paragraph">ಇದೇ ಮಾದರಿಯಲ್ಲಿ ಬಿಜೆಪಿ ಕೂಡ ಓಬಿಸಿ ವಾದವನ್ನು ಮುಂದಿಟ್ಟಿರುವುದು ಅಂತಿಮವಾಗಿ ಎಲ್ಲದಕ್ಕೂ ಜಾತಿಗಣತಿ ಆಗಲೇಬೇಕಾದ ರಾಜಕೀಯ ಒತ್ತಡವೊಂದು ನಿರ್ಮಾಣವಾಗಿದೆ. ಇದನ್ನು ಮತ ಗಳಿಕೆಯ ಲಾಭ-ನಷ್ಟದ ಆಚೆಗೆ ನಿಂತು ನೋಡುವಾಗ ಬಹುಜನರ ನ್ಯಾಯದ ಕೂಗಿಗೆ ಬಲ ಬಂದಂತಾಗಿದೆ.</p>



<p class="wp-block-paragraph">ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೇ ಜಾತಿಗಣತಿಯನ್ನು ಪ್ರತಿಪಾದಿಸಿರುವುದು ಕರ್ನಾಟಕದಲ್ಲಿ 2015 ರಿಂದ ನೆನಗುದಿಗೆ ಬಿದ್ದಿರುವ ಕಾಂತರಾಜ್ ವರದಿಯ ಜಾರಿಗೆ ಒತ್ತಾಸೆ ಸಿಕ್ಕಂತಾಗಿದ್ದು, ಕಾಂತರಾಜ್ ವರದಿ ಮೇಲ್ನೋಟಕ್ಕೆ ಜನಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ಎನ್ನುವುದಾದರೂ ಅದು ಆಂತರ್ಯವಾಗಿ ಜಾತಿಗಣತಿಯೇ ಆಗಿದೆ. ಈ ವರದಿ ಸೋರಿಕೆ ಎನ್ನಬಹುದಾದ ಅಂಕಿಅಂಶಗಳಿಂದ ಅವಕಾಶ ವಂಚಿತ ಜನಜಾತಿಗಳ ನೈಜ ಸ್ಥಿತಿಗತಿಗಳು ಬೆಳಕಿಗೆ ಬಂದಂತಾಗಿದ್ದು, ಇದುವರೆಗೂ ಸಾಮಾಜಿಕ ನ್ಯಾಯದ ಫಲವನ್ನು ವಂಚಿಸಿದ ಬಲಾಢ್ಯ ಜಾತಿಗಳ ಧೋರಣೆಯೂ ಬಯಲಾಗಿದೆ. ಈ ಕಾರಣಗಳಿಗಾಗಿಯೇ ಆತಂಕಗೊಂಡಿರುವ ಬಲಾಢ್ಯ ಜಾತಿಗಳು ಜಾತಿಗಳ ಜನಸಂಖ್ಯೆಗನುಗುಣವಾಗಿ ಸಾಂವಿಧಾನಿಕ ಪಾಲು ಹಂಚುವ ಮಾರ್ಗಸೂತ್ರವಾಗಿರುವ ಕಾಂತರಾಜ್ ವರದಿಯನ್ನು ವಿರೋಧಿಸಲು ಮುಂದಾಗಿವೆ.</p>



<figure class="wp-block-image size-full"><img decoding="async" width="640" height="480" src="https://peepalmedia.com/wp-content/uploads/2023/11/images-4.jpeg" alt="" class="wp-image-31099" srcset="https://peepalmedia.com/wp-content/uploads/2023/11/images-4.jpeg 640w, https://peepalmedia.com/wp-content/uploads/2023/11/images-4-300x225.jpeg 300w, https://peepalmedia.com/wp-content/uploads/2023/11/images-4-150x113.jpeg 150w" sizes="(max-width: 640px) 100vw, 640px" /></figure>



<p class="wp-block-paragraph">ಭಾರತದ ಒಕ್ಕೂಟ ಸರ್ಕಾರ ಮೀಸಲಾತಿ ಕೊಡಬೇಕಾದ ಸೂತ್ರವೇ ಇಲ್ಲದೆ ಮೇಲ್ಜಾತಿಗಳಿಗೆ ಶೇ. 10 ರಷ್ಟು ಮೀಸಲಾತಿಯನ್ನು ಉದಾರವಾಗಿ ಕೊಟ್ಟಿದ್ದನ್ನು ಪ್ರಶ್ನಿಸಲಾರದ ಶೂದ್ರ ಸಮುದಾಯಗಳಿಗೆ ಇದೀಗ ಕಾಂತರಾಜ್ ವರದಿಯನ್ನು ವಿರೋಧಿಸುತ್ತಿರುವುದು ಸಾಮಾಜಿಕ ನ್ಯಾಯದ ತುತ್ತು ಕಸಿಯುವ ಕೃತ್ಯ ಎಂದೆನಿಸುವುದಿಲ್ಲ.</p>



<p class="wp-block-paragraph">ರಾಜ್ಯದಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರ ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಿ ಅದನ್ನು ಒಕ್ಕಲಿಗ , ಲಿಂಗಾಯಿತ ಸಮುದಾಯಗಳಿಗೆ ಹಂಚಿಕೆ ಮಾಡುವ ಮೂಲಕ ಅವೈಜ್ಞಾನಿಕ ಮತ್ತು ಕೇಡಿನ ರಾಜಕೀಯ ನೀತಿಯನ್ನು ಅನುಷ್ಟಾನ ಗೊಳಿಸಲು ಮುಂದಾಗಿತ್ತು. ಬಹುಜನರ ನ್ಯಾಯದ ಬಗ್ಗೆ  ಯಾವುದೇ ಕಳಕಳಿ ತೋರಲಿಲ್ಲ ಎಂಬುದು ಬಿಜೆಪಿಯ ನೀತಿ ಎತ್ತಿ ತೋರುತ್ತಿದೆ.</p>



<p class="wp-block-paragraph">ಸಾಮಾಜಿಕ,ಆರ್ಥಿಕ ಸಮೀಕ್ಷೆ-2015ರ ಕಾಂತರಾಜ್ ವರದಿಯನ್ನು ವಿರೋಧಿಸಿ ಆದಿಚುಂಚನಗಿರಿ ಮಠದ ಡಾ ನಿರ್ಮಲಾನಂದನಾಥ ಮಹಾಸ್ವಾಮೀಜಿಗಳ ಅಧ್ಯಕ್ಷತೆಯ ಒಕ್ಕಲಿಗ ಸಮುದಾಯದ ಸಭೆಯಲ್ಲಿ ಸರ್ಕಾರದ ಭಾಗವೇ ಅಗಿರುವ ಉಪಮುಖ್ಯಮಂತ್ರಿ ಡಿ,.ಕೆ ಶಿವಕುಮಾರ್ ಮತ್ತು ಇತರೆ ಸಚಿವರುಗಳು ಭಾಗವಹಿಸಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂತರಾಜ್ ವರದಿ ಸ್ವೀಕರಿಸುವ ನಿರ್ಧಾರ ಘೋಷಣೆ ಮಾಡಿರುವಾಗ ಅವರದ್ದೇ ಸಂಪುಟದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಒಕ್ಕಲಿಗ ಸಚಿವರುಗಳು ಕಾಂತರಾಜ್ ವರದಿ ಕುರಿತಾದ ತಮ್ಮ ನಿಲುವನ್ನು ಸ್ಪಷ್ಟವಾಗಿ ಬಹಿರಂಗಪಡಿಸಬೇಕು.</p>



<p class="wp-block-paragraph"><br><strong>ಎನ್.ರವಿಕುಮಾರ್</strong></p>



<p class="wp-block-paragraph">ಪತ್ರಕರ್ತರು</p>



<p class="wp-block-paragraph"><strong>ಇದನ್ನೂ ಓದಿ</strong> <a href="https://peepalmedia.com/big-drama-of-allegations-counter-allegations/" data-type="post" data-id="30714">ಆರೋಪ ಪ್ರತ್ಯಾರೋಪಗಳ ಬೃಹನ್ನಾಟಕ; ಜನಹಿತಕೆ ಮಾರಕ</a></p>
]]></content:encoded>
					
		
		
			</item>
		<item>
		<title>ಶಾಂತಿನಗರ (ರಾಗಿಗುಡ್ಡ) ಬಹುತ್ವ ಭಾರತ, ಗೊತ್ತಾ ನಿಮಗೆ?!</title>
		<link>https://peepalmedia.com/shantinagar-plural-india-do-you-know/</link>
		
		<dc:creator><![CDATA[Ravi Kumar N]]></dc:creator>
		<pubDate>Thu, 05 Oct 2023 14:53:48 +0000</pubDate>
				<category><![CDATA[ಧರ್ಮ- ಸಂಸ್ಕೃತಿ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=29220</guid>

					<description><![CDATA[ಗಣಪತಿ ಮೆರವಣಿಗೆಗಳಲ್ಲಿ ಕಂಡು ಬಂದ&#160; &#160;ಪ್ರಚೋದನಾಕಾರಿ ಫ್ಲೆಕ್ಸ್‌ಗಳು, ಪ್ರತಿಮೆಗಳು, ಸಾಂಕೇತಿಕ ರೂಪಗಳಿಗೆ ಪ್ರತಿ ಎಂಬಂತೆ ಈದ್‌ ಮಿಲಾದ್ ಮೆರವಣಿಗೆಯಲ್ಲೂ ಅಂತಹುದೇ ಪ್ರಚೋದನಾಕಾರಿ ರೂಪಗಳನ್ನು&#160; ವಿಜೃಂಭಿಸಿರುವುದು&#160; ಕ್ರಿಯೆಗೆ ಪ್ರತಿಕ್ರಿಯೆಯಂತೆ ಪ್ರತಿಫಲಿಸುತ್ತವೆ. ಕಣ್ಣಿಗೆ ಕಣ್ಣೆ ಪ್ರತಿಕಾರ ಎನ್ನುವುದೇ ಆದರೆ ಇಡೀ ಸಮಾಜವೇ ಕುರುಡಾಗಿ ಬಿಡುತ್ತದೆ.&#160; ಹೀಗೆ ಕ್ರಿಯೆಗೆ ಪ್ರತಿಕ್ರಿಯೆಯ ಸೇಡಿಗೆ ಬಿದ್ದು ಇಡೀ ಬಡಾವಣೆಯ ಶಾಂತಿಯನ್ನು ದ್ವೇಷದ ಕುಲುಮೆಗೆ ನೂಕುವ ಸಂಚನ್ನು ಸರ್ಕಾರ&#160; ಪಕ್ಷ ರಾಜಕಾರಣವನ್ನು ಬದಿಗಿಟ್ಟು ಗುರುತಿಸಿ ಹತ್ತಿಕ್ಕಬೇಕು – ಎನ್‌ ರವಿಕುಮಾರ್‌, ಪತ್ರಕರ್ತರು. ಅ. 1 ರಂದು [&#8230;]]]></description>
										<content:encoded><![CDATA[
<p class="has-black-color has-text-color has-background wp-block-paragraph" style="background-color:#abb7c259"><strong>ಗಣಪತಿ ಮೆರವಣಿಗೆಗಳಲ್ಲಿ ಕಂಡು ಬಂದ&nbsp; &nbsp;ಪ್ರಚೋದನಾಕಾರಿ ಫ್ಲೆಕ್ಸ್‌ಗಳು, ಪ್ರತಿಮೆಗಳು, ಸಾಂಕೇತಿಕ ರೂಪಗಳಿಗೆ ಪ್ರತಿ ಎಂಬಂತೆ ಈದ್‌ ಮಿಲಾದ್ ಮೆರವಣಿಗೆಯಲ್ಲೂ ಅಂತಹುದೇ ಪ್ರಚೋದನಾಕಾರಿ ರೂಪಗಳನ್ನು&nbsp; ವಿಜೃಂಭಿಸಿರುವುದು&nbsp; ಕ್ರಿಯೆಗೆ ಪ್ರತಿಕ್ರಿಯೆಯಂತೆ ಪ್ರತಿಫಲಿಸುತ್ತವೆ. ಕಣ್ಣಿಗೆ ಕಣ್ಣೆ ಪ್ರತಿಕಾರ ಎನ್ನುವುದೇ ಆದರೆ ಇಡೀ ಸಮಾಜವೇ ಕುರುಡಾಗಿ ಬಿಡುತ್ತದೆ.&nbsp; ಹೀಗೆ ಕ್ರಿಯೆಗೆ ಪ್ರತಿಕ್ರಿಯೆಯ ಸೇಡಿಗೆ ಬಿದ್ದು ಇಡೀ ಬಡಾವಣೆಯ ಶಾಂತಿಯನ್ನು ದ್ವೇಷದ ಕುಲುಮೆಗೆ ನೂಕುವ ಸಂಚನ್ನು ಸರ್ಕಾರ&nbsp; ಪಕ್ಷ ರಾಜಕಾರಣವನ್ನು ಬದಿಗಿಟ್ಟು ಗುರುತಿಸಿ ಹತ್ತಿಕ್ಕಬೇಕು – <mark style="background-color:rgba(0, 0, 0, 0)" class="has-inline-color has-luminous-vivid-orange-color">ಎನ್‌ ರವಿಕುಮಾರ್‌, ಪತ್ರಕರ್ತರು.</mark></strong></p>



<p class="wp-block-paragraph">ಅ. 1 ರಂದು ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಕಿಡಿಗೇಡಿಗಳ ಪುಂಡಾಟದಿಂದ ರಾಜ್ಯವ್ಯಾಪಿ ಖ್ಯಾತಿಗೊಳಗಾಗಿರುವ ಶಿವಮೊಗ್ಗದ ರಾಗಿಗುಡ್ಡ ಬಡಾವಣೆಗೆ ಇನ್ನೊಂದು ಹೆಸರಿದೆ. ಅದು ’ಶಾಂತಿನಗರ’. ಈ ಶಾಂತಿನಗರ ಎಂದು ಹೆಸರಿಡುವುದರ ಹಿಂದೆ ಈ ಭಾಗದ ಜನರ ಸೌಹಾರ್ದತೆ-ಸಹಬಾಳ್ವೆಯ ಮಹೋನ್ನತ ಆಶಯವೂ ಇದೆ.</p>



<p class="wp-block-paragraph">ಶಿವಮೊಗ್ಗ ನಗರದ ಪೂರ್ವ ಮತ್ತು ಉತ್ತರದ ಪಕ್ಕೆಗೆ ಆತುಕೊಂಡಿಂತಿರುವ ಶಾಂತಿನಗರ ಬಡಾವಣೆ ಆಡಳಿತಾತ್ಮಕವಾಗಿ ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಗೆ ಒಳಪಟ್ಟಿದೆ. ನವುಲೆ, ಮಲ್ಲಿಕಾರ್ಜುನ ನಗರ, ಕೃಷಿನಗರಗಳನ್ನೊಳಗೊಂಡ&nbsp; ವಾರ್ಡು ನಂ&nbsp;3 ಮತ್ತು&nbsp;4 ರ ನಡುವೆ ಹಂಚಿಕೊಂಡಿರುವ&nbsp; ಶಾಂತಿನಗರ&nbsp; ವಾರ್ಡುನಂಬರ್ 3 ರ&nbsp; ವಾರ್ಡಿನ 10 ಸಾವಿರ ಮತದಾರರಲ್ಲಿ5 ಸಾವಿರ ಮತದಾರರು ಶಾಂತಿನಗರ ಒಂದೇ&nbsp; ಬಡಾವಣೆಯಲ್ಲಿದೆ.</p>



<p class="wp-block-paragraph">&nbsp;ಶಾಂತಿನಗರದಲ್ಲಿನ&nbsp; ಹಿಂದೂ, (ಶೇ.99 ರಷ್ಟು ದಲಿತರು, ಹಿಂದುಳಿದವರ್ಗಗಳು), ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯಗಳ ಬಡಕುಟುಂಬಗಳು ಗಾರೆಕೆಲಸ, ಟೈಲ್ಸ್&nbsp; ಕೆಲಸ,&nbsp; ಹಮಾಲಿ, ಆಟೋ ಚಾಲನೆ, ಗ್ಯಾರೇಜ್,&nbsp; ಆಸ್ಪತ್ರೆಗಳಲ್ಲಿ ಆಯಾ,&nbsp; &nbsp;ಮನೆಗೆಲಸ&#8230;.ಹೀಗೆ ದಿನಗೂಲಿಯನ್ನೆ ನಂಬಿ ಬದುಕುತ್ತಿದ್ದಾರೆ.&nbsp;</p>



<figure class="wp-block-gallery has-nested-images columns-default is-cropped wp-block-gallery-1 is-layout-flex wp-block-gallery-is-layout-flex">
<figure class="wp-block-image size-large"><img decoding="async" width="1024" height="768" data-id="29238" src="https://peepalmedia.com/wp-content/uploads/2023/10/IMG-20231005-WA0151-1-1024x768.jpg" alt="" class="wp-image-29238" srcset="https://peepalmedia.com/wp-content/uploads/2023/10/IMG-20231005-WA0151-1-1024x768.jpg 1024w, https://peepalmedia.com/wp-content/uploads/2023/10/IMG-20231005-WA0151-1-300x225.jpg 300w, https://peepalmedia.com/wp-content/uploads/2023/10/IMG-20231005-WA0151-1-768x576.jpg 768w, https://peepalmedia.com/wp-content/uploads/2023/10/IMG-20231005-WA0151-1-1536x1152.jpg 1536w, https://peepalmedia.com/wp-content/uploads/2023/10/IMG-20231005-WA0151-1-150x113.jpg 150w, https://peepalmedia.com/wp-content/uploads/2023/10/IMG-20231005-WA0151-1-696x522.jpg 696w, https://peepalmedia.com/wp-content/uploads/2023/10/IMG-20231005-WA0151-1-1068x801.jpg 1068w, https://peepalmedia.com/wp-content/uploads/2023/10/IMG-20231005-WA0151-1.jpg 1600w" sizes="(max-width: 1024px) 100vw, 1024px" /></figure>
</figure>



<p class="wp-block-paragraph">&nbsp;ಎಲ್ಲಾ ಧರ್ಮದ ಜನರೂ&nbsp; ನೆರಹೊರೆಯ ಮನೆಯ ಗೋಡೆಗಳನ್ನೆ ತಬ್ಬಿಕೊಂಡು ಪರಸ್ಪರ ಸೌಹಾರ್ದತೆಯನ್ನು ಕಟ್ಟಿಕೊಂಡವರು. ಸ್ತ್ರೀಶಕ್ತಿ ಸಂಘಗಳು ಹಿಂದೂ, ಮುಸ್ಲಿಂ ಕ್ರಿಶ್ಚಿಯನ್ ಎಂಬ ಧರ್ಮದ ಗೋಡೆಗಳನ್ನು&nbsp; ಒಡೆದು ಹಾಕಿವೆ, ಅಂಗಡಿ ಮುಂಗಟ್ಟುಗಳು ಎಲ್ಲಾ ಧರ್ಮದವರನ್ನು&nbsp; ಪರಸ್ಪರ ಅವಲಂಬಿಸಿವೆ.&nbsp; ದೇವಸ್ಥಾನ, ಚರ್ಚು, ಮಸೀದಿಗಳಲ್ಲಿನ ದೇವರು, ಪಾದ್ರಿ &#8211; ಪ್ರವಾದಿಗಳು ಪಿಸುಮಾತಿನಲ್ಲೇ ಒಬ್ಬರನ್ನೊಬ್ಬರು ಮಾತಾಡಿಕೊಳ್ಳುವಷ್ಟು ಸಾಮೀಪ್ಯದ ಸಂಬಂಧವನ್ನು ಹೊಂದಿದ್ದಾರೆ.&nbsp; &nbsp;ಎಲ್ಲಾ ಧರ್ಮಗಳ&nbsp; ಹಬ್ಬ, ಉತ್ಸವಗಳು&nbsp; &nbsp;ಎಲ್ಲರನ್ನೂ ಒಳಗೊಂಡಂತೆ ನಡೆದ ಇತಿಹಾಸವಿದೆ.&nbsp;</p>



<p class="wp-block-paragraph">&nbsp;ಇಂತಹ ವೈವಿಧ್ಯಮಯ ಬಡಾವಣೆಯ&nbsp; ಸಾಮಾಜಿಕ ಸಂರಚನೆ ಹೇಗಿದೆ ಗೊತ್ತಾ? ಸಾಂಸ್ಕೃತಿಕ-ಧಾರ್ಮಿಕ ಒಳಗೊಳ್ಳುವಿಕೆಯ ಅನನ್ಯತೆಯ ಅದೊಂದು ಬಹುಜನರ ಭವ್ಯ ಭಾರತ ಇದ್ದಂತೆ.&nbsp; &nbsp;ಹೀಗಿರುವ ರಾಗಿಗುಡ್ಡ ಯಾನೆ ಶಾಂತಿನಗರದ ಸಹಬಾಳ್ವೆಯನ್ನು ಕದಡುವ ಕೃತ್ಯಗಳು ಆಗಾಗ ನಡೆಯುತ್ತಲೆ ಇದ್ದು, ಮೊನ್ನೆಯ ಘಟನೆ ಅದರ ಭಾಗವೇ ಆಗಿದೆ. ಇದರ ಹಿಂದೆ ರಾಜಕೀಯ ಹಿತಾಸಕ್ತಿಗಳು, ಮತೀಯ ಸಂಘಟನೆಗಳ ಹುನ್ನಾರಗಳು&nbsp; ಸಕ್ರಿಯವಾಗಿವೆ.&nbsp; &nbsp;ಇದಕ್ಕೆ ಹಿಂದೂ ಮುಸ್ಲಿಂ ಬೇಧವಿಲ್ಲ. ಇದಲ್ಲದೆ&nbsp; ಅಪರಾಧ ಕೃತ್ಯಗಳ ರೌಡಿಶೀಟರ್‌ಗಳು,&nbsp; &nbsp;ಗಾಂಜಾ ದಂಧೆಗಳು ಜನಜೀವನವನ್ನು ಕಾಡುತ್ತಿವೆ. ಇವರುಗಳು ಯಾವುದೇ ಗಲಭೆಗಳಲ್ಲಿ ಪಾತ್ರ ವಹಿಸುವುದನ್ನು ನಿರಾಕರಿಸುವಂತಿಲ್ಲ.</p>



<p class="wp-block-paragraph"><strong>ರಾಜಕೀಯ ಹಿತಾಸಕ್ತಿ</strong></p>



<figure class="wp-block-gallery has-nested-images columns-default is-cropped wp-block-gallery-2 is-layout-flex wp-block-gallery-is-layout-flex">
<figure class="wp-block-image size-large"><img loading="lazy" decoding="async" width="1024" height="461" data-id="29239" src="https://peepalmedia.com/wp-content/uploads/2023/10/IMG-20231005-WA0152-1-1024x461.jpg" alt="" class="wp-image-29239" srcset="https://peepalmedia.com/wp-content/uploads/2023/10/IMG-20231005-WA0152-1-1024x461.jpg 1024w, https://peepalmedia.com/wp-content/uploads/2023/10/IMG-20231005-WA0152-1-300x135.jpg 300w, https://peepalmedia.com/wp-content/uploads/2023/10/IMG-20231005-WA0152-1-768x346.jpg 768w, https://peepalmedia.com/wp-content/uploads/2023/10/IMG-20231005-WA0152-1-150x68.jpg 150w, https://peepalmedia.com/wp-content/uploads/2023/10/IMG-20231005-WA0152-1-696x313.jpg 696w, https://peepalmedia.com/wp-content/uploads/2023/10/IMG-20231005-WA0152-1-1068x481.jpg 1068w, https://peepalmedia.com/wp-content/uploads/2023/10/IMG-20231005-WA0152-1.jpg 1280w" sizes="auto, (max-width: 1024px) 100vw, 1024px" /></figure>
</figure>



<p class="wp-block-paragraph">10 ಸಾವಿರ ಮತದಾರರನ್ನು ಹೊಂದಿರುವ ವಾರ್ಡುನಂಬರ್ 3 ರ ವ್ಯಾಪ್ತಿಗೆ ಬಹುಪಾಲು ಬರುವ ಶಾಂತಿನಗರ ಬಡಾವಣೆ ಒಂದರಲ್ಲೇ 5 ಸಾವಿರ ಮತಗಳಿವೆ.&nbsp; ಈ ಬಡಾವಣೆಯ ಮುಖ್ಯರಸ್ತೆಯ ಎಡಭಾಗ ವಾರ್ಡು ನಂ&nbsp; 4 ಕ್ಕೆ ಸೇರಲಿದ್ದು ಎರಡೂ ಭಾಗಗಳು ಸೇರಿದರೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮತದಾರರ ಸಂಖ್ಯೆ 4 ಸಾವಿರ ಮುಟ್ಟಿದರೆ ಉಳಿದ ಸುಮಾರು ಒಂದು ಸಾವಿರ ಮತಗಳು ಹಿಂದೂಗಳದ್ದಾಗಿದೆ. ಈ ವಾರ್ಡುಗಳಲ್ಲಿ&nbsp; ಶಾಂತಿನಗರದ ಮತದಾರರೇ&nbsp; ಅದರಲ್ಲೂ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮತದಾರರು&nbsp; ನಿರ್ಣಾಯಕರಾಗಿರುವುದರಿಂದ ಇಲ್ಲಿ ಕಾಂಗ್ರೇಸ್ ತನ್ನ ರಾಜಕೀಯ ಹಿಡಿತವನ್ನು ಅಷ್ಟು ಸುಲಭವಾಗಿ ಬಿಟ್ಟುಕೊಟ್ಟಿಲ್ಲ. ಪಾಲಿಕೆ ಚುನಾವಣೆಯಲ್ಲಿ&nbsp; ಈ ವಾರ್ಡನ್ನು ಹೇಗಾದರೂ ಮಾಡಿ ಗೆಲ್ಲಬೇಕೆಂಬ ಬಿಜೆಪಿಯ ಪ್ರಯತ್ನ ಈವರೆಗೂ ಕೈಗೂಡಿಲ್ಲ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು.</p>



<p class="has-black-color has-text-color wp-block-paragraph">ಅನಕ್ಷರಸ್ಥರು, ಕೃಷಿಕೂಲಿ ಕಾರ್ಮಿಕರು, ದುಡಿಯುವ ವರ್ಗವೆ ಇರುವ ಶಾಂತಿನಗರದಲ್ಲಿ&nbsp; ಧರ್ಮದ ಮತೀಯ ಭಾವನೆಯನ್ನು ಸುಲಭವಾಗಿ ಬಿತ್ತಲು ಮತೀಯ ಸಂಘಟನೆಗಳು ಸಲೀಸಾಗಿ ಬಳಸಿಕೊಳ್ಳಲೆತ್ನಿಸುತ್ತಲೆ ಬಂದಿವೆ. <mark style="background-color:rgba(0, 0, 0, 0)" class="has-inline-color has-black-color"><a>ಬಜರಂಗದಳ ಸೇರಿದಂತೆ ಹಿಂದೂ ಹೆಸರಿನ ಮತೀಯವಾದ</a>&nbsp;</mark> ಮತ್ತು ಅದಕ್ಕೆ ಪ್ರತಿಯಾಗಿ&nbsp; ಮುಸ್ಲಿಂರ ಹೆಸರಿನಲ್ಲಿ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ಮತೀಯವಾದ&nbsp; ಸಾಮಾನ್ಯ ಜನರಲ್ಲಿ, ಇಲ್ಲಿನ ಅನಕ್ಷರಸ್ಥ ಯುವಕರಿಗೆ ಧರ್ಮದ್ವೇಷದ ಅಫೀಮನ್ನು ಉಣಿಸುವಲ್ಲಿ ನಿರತವಾಗಿವೆ.&nbsp; ಇದರಿಂದ ಹೊಗೆಯಾಡುವ ಕೋಮುಸಂಘರ್ಷದ ಬೆಂಕಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರೆಡೂ ಚಳಿ ಕಾಯಿಸಿಕೊಳ್ಳುವ ಘಾತುಕ ರಾಜಕಾರಣವನ್ನು ಮಾಡುತ್ತಲೆ ಬಂದಿವೆ.</p>



<p class="wp-block-paragraph"><strong>ಸೇಡಿಗೆ ಬಿದ್ದು ಕುರುಡಾಗುವುದು ಎಂದರೆ ಹೀಗೆಯೇ..</strong></p>



<figure class="wp-block-gallery has-nested-images columns-default is-cropped wp-block-gallery-3 is-layout-flex wp-block-gallery-is-layout-flex">
<figure class="wp-block-image size-large"><img loading="lazy" decoding="async" width="1024" height="808" data-id="29240" src="https://peepalmedia.com/wp-content/uploads/2023/10/IMG-20231005-WA0153-1-1024x808.jpg" alt="" class="wp-image-29240" srcset="https://peepalmedia.com/wp-content/uploads/2023/10/IMG-20231005-WA0153-1-1024x808.jpg 1024w, https://peepalmedia.com/wp-content/uploads/2023/10/IMG-20231005-WA0153-1-300x237.jpg 300w, https://peepalmedia.com/wp-content/uploads/2023/10/IMG-20231005-WA0153-1-768x606.jpg 768w, https://peepalmedia.com/wp-content/uploads/2023/10/IMG-20231005-WA0153-1-150x118.jpg 150w, https://peepalmedia.com/wp-content/uploads/2023/10/IMG-20231005-WA0153-1-696x549.jpg 696w, https://peepalmedia.com/wp-content/uploads/2023/10/IMG-20231005-WA0153-1-1068x843.jpg 1068w, https://peepalmedia.com/wp-content/uploads/2023/10/IMG-20231005-WA0153-1.jpg 1280w" sizes="auto, (max-width: 1024px) 100vw, 1024px" /></figure>
</figure>



<p class="wp-block-paragraph">ಶಾಂತಿನಗರಕ್ಕೆ ಹಿಂದೂ ಮತ್ತು ಮುಸ್ಲಿಂರ ಹೆಸರಿನಲ್ಲಿ&nbsp; ಮತೀಯ ಸಂಘಟನೆಗಳು ಕಾಲಿಟ್ಟ ಕ್ಷಣದಿಂದಲೆ ಇಲ್ಲಿ ಸೌಹಾರ್ದತೆಗೆ ಕೊಳ್ಳಿ ಇಡುವ ಕೆಲಸ ಆರಂಭವಾಗಿತ್ತು. ಇದರಲ್ಲಿ ಯಾರೂ ಹೆಚ್ಚಲ್ಲ. ಯಾರೂ ಕಡಿಮೇಯೇನಲ್ಲ.&nbsp;ಈ ಹಿನ್ನೆಲೆಯಲ್ಲಿಯೇ ಶಾಂತಿನಗರವನ್ನು ಪೊಲೀಸರ ಲಿಸ್ಟ್ ನಲ್ಲಿ ಅತ್ಯಂತ ಸೂಕ್ಷ್ಮ ಪ್ರದೇಶವೆಂದು ಗುರುತು ಮಾಡಿ ಸಂದರ್ಭನುಸಾರ ಕಣ್ಗಾವಲಿರಿಸಿದ್ದರು.&nbsp; &nbsp;ಶಾಂತಿ ನಗರ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ 16ಗಣಪತಿಗಳನ್ನು ಒಂದೇ ದಿನ ಸೆ. 24 ರಂದು ಮೆರವಣಿಗೆಯೊಂದಿಗೆ ವಿಸರ್ಜನೆ ಮಾಡಲು ಗಣಪತಿ ಸಮಿತಿಗಳ ಮನವೊಲಿಸುವಲ್ಲಿ ಪೊಲೀಸರು ಯಶಸ್ವಿಯಾದರು. ಅದರಂತೆ ಅಂದು ಇಡೀ ಬಡಾವಣೆಯನ್ನು ಕೇಸರಿ ಬಂಟಿಂಗ್ಸ್, ಸೇರಿದಂತೆ ಶಿವಾಜಿ ಮಹಾರಾಜ ರ ಪ್ರತಿಮೆಗಳೊಂದಿಗೆ ಅಲಂಕಾರ ಮಾಡುವ ಮೂಲಕ ಶಾಂತಿಯುತವಾಗಿ ಗಣಪತಿ ಮೆರವಣಿಗೆ&nbsp; ಮುಕ್ತಾಯಗೊಂಡಿತ್ತು.</p>



<p class="wp-block-paragraph">ಅದೇ ರೀತಿ ಅ. 1ರಂದು&nbsp; ಈದ್ ಮಿಲಾದ್ ಮೆರವಣಿಗೆಯನ್ನೂ ಅದ್ದೂರಿಯಾಗಿ ನಡೆಸಲು ನಿರ್ಧರಿಸಿದ್ದ ಮುಸ್ಲಿಂ ಸಮಿತಿಯು ಇಡೀ ಬಡಾವಣೆಯಲ್ಲಿ ಹಸಿರು ಬಂಟಿಂಗ್ಸ್ , ಲೈಟಿಂಗ್ಸ್ ಗಳಿಂದ ಅಲಂಕರಿಸಲಾಯಿತಲ್ಲದೆ ಟಿಪ್ಪು ಸುಲ್ತಾನ್ ಪ್ರತಿಮೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಟಿಪ್ಪು ಕಾಲಿನಿಂದ ಮೆಟ್ಟಿ ಕೊಲ್ಲುತ್ತಿರುವ &nbsp;ಆ ವ್ಯಕ್ತಿಗಳಿಗೆ ಕೇಸರಿ ಬಣ್ಣವಿದ್ದದ್ದು , ಶಾಂತಿನಗರದ ಕೆಲವು ತಿರುವುಗಳಲ್ಲಿ ಸಾಬ್ರು ಸಾಮ್ರಾಜ್ಯ,&nbsp; ಮುಸ್ಲಿಂ ಸಾಮ್ರಾಜ್ಯ ಎಂಬ&nbsp; ಕಮಾನುಗಳನ್ನು ಕಟ್ಟಲಾಗಿತ್ತು. ಅಲ್ಲದೆ ಮುಸ್ಲಿಂ ಎಂಪೈರ್&nbsp; ಔರಂಗಜೇಬ್&nbsp; ಎಂದು ಅಖಂಡ ಭಾರತದ ಚಿತ್ರವನ್ನು ಹಸಿರು ಬಣ್ಣದೊಂದಿಗೆ ಔರಂಗ್‌ಜೇಬನ&nbsp; ಕಟೌಟ್ ಹಾಕಿದ್ದು ಹಿಂದೂ ಸಂಘಟನೆಗಳ ಆಕ್ಷೇಪಕ್ಕೆ ಕಾರಣವಾಯಿತು.</p>



<p class="wp-block-paragraph">ಪೊಲೀಸರು ಈ ಆಕ್ಷೇಪಾರ್ಹ ಚಿತ್ರಗಳನ್ನು ತೆರವುಗೊಳಿಸಲು&nbsp; ಮುಂದಾಗಿದ್ದರಿಂದಲೇ&nbsp; ಮತೀಯ ಮತ್ತಿನಲ್ಲಿದ್ದ ಕೆಲವು ಯುವಕರ ಗುಂಪು ಅಡ್ಡಿಪಡಿಸಲಾರಂಭಿಸಿತು. ಇದು ಮುಂದುವರೆದು&nbsp; ಅ. 1ರಂದು ಗಲಭೆ ಸ್ವರೂಪವನ್ನು ಪಡೆದುಕೊಂಡಿತು.</p>



<figure class="wp-block-gallery has-nested-images columns-default is-cropped wp-block-gallery-4 is-layout-flex wp-block-gallery-is-layout-flex">
<figure class="wp-block-image size-large"><img loading="lazy" decoding="async" width="1024" height="885" data-id="29243" src="https://peepalmedia.com/wp-content/uploads/2023/10/IMG-20231005-WA0154-1-1024x885.jpg" alt="" class="wp-image-29243" srcset="https://peepalmedia.com/wp-content/uploads/2023/10/IMG-20231005-WA0154-1-1024x885.jpg 1024w, https://peepalmedia.com/wp-content/uploads/2023/10/IMG-20231005-WA0154-1-300x259.jpg 300w, https://peepalmedia.com/wp-content/uploads/2023/10/IMG-20231005-WA0154-1-768x664.jpg 768w, https://peepalmedia.com/wp-content/uploads/2023/10/IMG-20231005-WA0154-1-150x130.jpg 150w, https://peepalmedia.com/wp-content/uploads/2023/10/IMG-20231005-WA0154-1-696x602.jpg 696w, https://peepalmedia.com/wp-content/uploads/2023/10/IMG-20231005-WA0154-1-1068x923.jpg 1068w, https://peepalmedia.com/wp-content/uploads/2023/10/IMG-20231005-WA0154-1.jpg 1241w" sizes="auto, (max-width: 1024px) 100vw, 1024px" /></figure>
</figure>



<p class="wp-block-paragraph">&nbsp;ಇಲ್ಲಿ ಮುಖ್ಯವಾದ ವಿಷಯವೆಂದರೆ ಈದ್ ಮಿಲಾದ್ ಮೆರವಣಿಗೆಯಲ್ಲಿ ಈ ಹಿಂದೆಂದೂ ಕಾಣಿಸಿಕೊಳ್ಳದ ’ಔರಂಗಜೇಬ್’ , ’ಮುಸ್ಲಿಂ ಸಾಮ್ರಾಜ್ಯ’ ಎಂಬುದು ಕಾಣಿಸಿಕೊಂಡಿದ್ದೇಕೆ? ಶಾಂತಿ ನಗರದ ಬಹುತೇಕ ಮುಸ್ಲಿಂರಿಗೆ ಔರಂಗಜೇಬ್ ಯಾರು ಎಂಬುದು ಸರಿಯಾಗಿ ತಿಳಿದಿಲ್ಲ.&nbsp; ಒಂದು ತಿರುವಿನಲ್ಲಿ ಹಿಂದೂ-ಮುಸ್ಲಿಂ ಕ್ರಿಶ್ಚಿಯನ್‌ರು ನೆರೆಹೊರೆಯಂತೆ ಬಾಳುತ್ತಿರುವಾಗ ಸಾಬ್ರ ಸಾಮ್ರಾಜ್ಯ ಎಂಬ ಕಮಾನು ಕಟ್ಟುವ ಉದ್ದೇಶದ ಹಿಂದೆ ಏನಿತ್ತು ? ಇಂತಹ ಪ್ರಚೋದನೆಯ ಹಿಂದೆ ಯಾರಿದ್ದಾರೆ?, ಅವರ ಉದ್ದೇಶವೇನು? ಅಮಾಯಕ ಮುಸ್ಲಿಂರನ್ನು ಅಪರಾಧಿಗಳನ್ನಾಗಿಸುವ ಮೂಲಕ ಸಾಧಿಸುವುದಾದರೂ ಏನು?</p>



<p class="wp-block-paragraph">ಗಣಪತಿ ಮೆರವಣಿಗೆಗಳಲ್ಲಿ ಕಂಡು ಬಂದ&nbsp; &nbsp;ಪ್ರಚೋದನಾಕಾರಿ ಫ್ಲೆಕ್ಸ್‌ಗಳು, ಪ್ರತಿಮೆಗಳು, ಸಾಂಕೇತಿಕ ರೂಪಗಳಿಗೆ ಪ್ರತಿ ಎಂಬಂತೆ ಈದ್‌ ಮಿಲಾದ್ ಮೆರವಣಿಗೆಯಲ್ಲೂ ಇಂತಹ ಅಂತಹುದೇ ಪ್ರಚೋದನಾಕಾರಿ ರೂಪಗಳನ್ನು&nbsp; ವಿಜೃಂಭಿಸಿರುವುದು&nbsp; ಇವೆಲ್ಲವೂ ಕ್ರಿಯೆಗೆ ಪ್ರತಿಕ್ರಿಯೆಯಂತೆ ಪ್ರತಿಫಲಿಸುತ್ತವೆ. ಕಣ್ಣಿಗೆ ಕಣ್ಣೆ ಪ್ರತಿಕಾರ ಎನ್ನುವುದೇ ಆದರೆ ಇಡೀ ಸಮಾಜವೇ ಕುರುಡಾಗಿಬಿಡುತ್ತದೆ.&nbsp; ಹೀಗೆ ಕ್ರಿಯೆಗೆ ಪ್ರತಿಕ್ರಿಯೆಯ ಸೇಡಿಗೆ ಬಿದ್ದು ಇಡೀ ಬಡಾವಣೆಯ ಶಾಂತಿಯನ್ನು ದ್ವೇಷದ ಕುಲುಮೆಗೆ ನೂಕುವ ಸಂಚನ್ನು ಸರ್ಕಾರ&nbsp; ಪಕ್ಷ ರಾಜಕಾರಣವನ್ನು ಬದಿಗಿಟ್ಟು ಗುರುತಿಸಿ ಹತ್ತಿಕ್ಕಬೇಕು.</p>



<p class="wp-block-paragraph">ಮಹಾನಗರ ಪಾಲಿಕೆ ಮತ್ತು ಲೋಕಸಭಾ ಚುನಾವಣೆಯು ಸಮೀಪದಲ್ಲೆ ಇರುವುದರಿಂದ&nbsp; ರಾಜಕೀಯ ಪಕ್ಷಗಳು&nbsp; ಮತ್ತದರ ಸಂಘಟನೆಗಳ ಮತೀಯ ರಾಜಕಾರಣವನ್ನು ಜೀವಂತವಾಗಿಡುವ ಪ್ರಯತ್ನಗಳಿಗೆ ಶಾಂತಿನಗರದ ಗಲಭೆ ವರದಾನವಾದಂತಾಗಿದೆ.&nbsp; ಹಿಂದೂ-ಮುಸ್ಲಿಂರ ರಕ್ಷಣೆಯ, ಸತ್ಯಶೋಧನೆಯ ಹೆಸರಿನ ಪೊಲಿಟಿಕಲ್ ಅಜೆಂಡಾಗಳಿಂದ&nbsp; &nbsp;ಉರಿವ ಮನೆಯ ಗಳ ಇರಿಯುವ ತಹ&#8230;ತಹಿಕೆಗೆ ಶಾಂತಿನಗರ ಎಂಬ ಸೌಹಾರ್ದ ಭಾರತ ನಲುಗಿ ಹೋಗದಿರಲಿ.</p>



<p class="wp-block-paragraph"><strong>ಎನ್.ರವಿಕುಮಾರ್</strong></p>



<p class="wp-block-paragraph">ಪತ್ರಕರ್ತರು</p>



<p class="wp-block-paragraph"><strong><sub>ಇದನ್ನೂ ಓದಿ-</sub></strong><a href="https://peepalmedia.com/who-is-responsible-for-communal-violence-in-shimoga/" data-type="post" data-id="29024"><sub>ಶಿವಮೊಗ್ಗದ ಕೋಮುಹಿಂಸೆಗೆ ಕಾರಣ ಯಾರು? ಸೌಹಾರ್ದತೆ ಕದಡಲು&nbsp; ಕಾಯುತ್ತಿದ್ದಾರೆ ಮತಾಂಧರು !</sub></a></p>
]]></content:encoded>
					
		
		
			</item>
		<item>
		<title>ʼಹೊಲಗೇರಿʼ ಪ್ರಕರಣ &#124;ನ್ಯಾಯಪೀಠವೂ ಜಡಗೊಂಡಿದೆಯೇ?</title>
		<link>https://peepalmedia.com/holageri-case-is-the-court-also-inactive/</link>
		
		<dc:creator><![CDATA[Ravi Kumar N]]></dc:creator>
		<pubDate>Wed, 16 Aug 2023 07:41:46 +0000</pubDate>
				<category><![CDATA[ದಲಿತ ನೋಟ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=25623</guid>

					<description><![CDATA[ಅರಿವಿನಿ‌‌ ಉನ್ನತೀಕರಣದ ಚಲನೆಗೆ ತಮ್ಮನ್ನು ತಾವು ಒಗ್ಗಿಸಿಕೊಳ್ಳದೆ ಹೋದರೆ ನ್ಯಾಯಪೀಠವೂ ಜಡಗೊಂಡಿದೆ ಎಂದರ್ಥ ಅಷ್ಟೆ. ಇದು ಬಹುದೊಡ್ಡ ಅಪಾಯಕಾರಿ.&#160; ಎಷ್ಟೋ ಬಾರಿ ಇಂತಹ ಉದಾಹರಣೆಗಳು ಸಿಗುತ್ತಲೆ ಇವೆ &#8211; ಎನ್‌ ರವಿಕುಮಾರ್‌, ಪತ್ರಕರ್ತರು ಒಂದು ಹಳ್ಳಿಯಲ್ಲಿ ಊರು- ಕೇರಿ ಗಳಿರುತ್ತವೆ. &#8220;ಊರು-ಕೇರಿ&#8221;&#160; ಎಂದು ಕರೆಯುವುದರಲ್ಲೆ ಜಾತಿವ್ಯವಸ್ಥೆಯ ಅಭಿವ್ಯಕ್ತಿ&#160; ಅಡಗಿದೆ.&#160; ಒಂದು ಹಳ್ಳಿಯ ಸಾಮಾಜಿಕ ಸಂರಚನೆ ಜಾತಿ ಆಧಾರವಾಗಿಯೇ ರೂಪಿಸಲ್ಪಟ್ಟಿರುತ್ತದೆ.&#160; ಅಲ್ಲಿ ಊರು,ಕೇರಿ, ಹಟ್ಟಿ,ತಾಂಡಾ&#8230;..ಹೀಗೆ ವಿಂಗಡಿಸಲ್ಪಟ್ಟಿರುತ್ತವೆ.&#160; ಹಳ್ಳಿಯ ಪ್ರಧಾನ ಧಾರೆಯಲ್ಲಿ ಕಾಣುವಂತೆ &#8220;ಊರೊಳಗೆ&#8221; ಇರುತ್ತದೆ.&#160; ಈ ಊರಲ್ಲಿ&#160; ಬ್ರಾಹ್ಮಣರು [&#8230;]]]></description>
										<content:encoded><![CDATA[
<p class="has-background wp-block-paragraph" style="background:linear-gradient(135deg,rgb(238,238,238) 100%,rgb(169,184,195) 100%)"><strong>ಅರಿವಿನಿ‌‌ ಉನ್ನತೀಕರಣದ ಚಲನೆಗೆ ತಮ್ಮನ್ನು ತಾವು ಒಗ್ಗಿಸಿಕೊಳ್ಳದೆ ಹೋದರೆ ನ್ಯಾಯಪೀಠವೂ ಜಡಗೊಂಡಿದೆ ಎಂದರ್ಥ ಅಷ್ಟೆ. ಇದು ಬಹುದೊಡ್ಡ ಅಪಾಯಕಾರಿ.&nbsp; ಎಷ್ಟೋ ಬಾರಿ ಇಂತಹ ಉದಾಹರಣೆಗಳು ಸಿಗುತ್ತಲೆ ಇವೆ</strong> &#8211; <strong><mark style="background-color:rgba(0, 0, 0, 0)" class="has-inline-color has-vivid-red-color">ಎನ್‌ ರವಿಕುಮಾರ್‌, ಪತ್ರಕರ್ತರು</mark></strong></p>



<p class="wp-block-paragraph"></p>



<p class="wp-block-paragraph">ಒಂದು ಹಳ್ಳಿಯಲ್ಲಿ ಊರು- ಕೇರಿ ಗಳಿರುತ್ತವೆ. &#8220;ಊರು-ಕೇರಿ&#8221;&nbsp; ಎಂದು ಕರೆಯುವುದರಲ್ಲೆ ಜಾತಿವ್ಯವಸ್ಥೆಯ ಅಭಿವ್ಯಕ್ತಿ&nbsp; ಅಡಗಿದೆ.&nbsp;</p>



<p class="wp-block-paragraph">ಒಂದು ಹಳ್ಳಿಯ ಸಾಮಾಜಿಕ ಸಂರಚನೆ ಜಾತಿ ಆಧಾರವಾಗಿಯೇ ರೂಪಿಸಲ್ಪಟ್ಟಿರುತ್ತದೆ.&nbsp;</p>



<p class="wp-block-paragraph">ಅಲ್ಲಿ ಊರು,ಕೇರಿ, ಹಟ್ಟಿ,ತಾಂಡಾ&#8230;..ಹೀಗೆ ವಿಂಗಡಿಸಲ್ಪಟ್ಟಿರುತ್ತವೆ.&nbsp;</p>



<p class="wp-block-paragraph">ಹಳ್ಳಿಯ ಪ್ರಧಾನ ಧಾರೆಯಲ್ಲಿ ಕಾಣುವಂತೆ &#8220;ಊರೊಳಗೆ&#8221; ಇರುತ್ತದೆ.&nbsp;</p>



<p class="wp-block-paragraph">ಈ ಊರಲ್ಲಿ&nbsp;</p>



<p class="wp-block-paragraph">ಬ್ರಾಹ್ಮಣರು</p>



<p class="wp-block-paragraph">ಲಿಂಗಾಯಿತರು</p>



<p class="wp-block-paragraph">ಒಕ್ಕಲಿಗರು&#8230;</p>



<p class="wp-block-paragraph">ಇತ್ಯಾದಿ ಜಾತಿಶ್ರೇಷ್ಠತೆಯ ವರ್ಗದ ಜನರಿದ್ದರೆ</p>



<p class="wp-block-paragraph">ಉಳಿದಂತೆ ಊರಿನ ಹಿಂಭಾಗಕ್ಕೋ ಅಥವಾ ಪಕ್ಕಕ್ಕೋ   ಶ್ರೇಣಿಕೃತವಾಗಿ</p>



<p class="wp-block-paragraph">ಕುಂಬಾರರ ಕೇರಿ</p>



<p class="wp-block-paragraph">ಅಗಸರ ಬೀದಿ</p>



<p class="wp-block-paragraph">ತಳವಾರರ ಕೇರಿ</p>



<p class="wp-block-paragraph">ತಾಂಡಾ</p>



<p class="wp-block-paragraph">ಹೊಲಗೇರಿ</p>



<p class="wp-block-paragraph">ಮಾದಿಗರಟ್ಟಿ&#8230;ಇತ್ಯಾದಿ ಶೂದ್ರ- ಅಸ್ಪೃಶ್ಯಜಾತಿಗಳೆಂದು ಗುರುತಿಸಲ್ಪಟ್ಟವರನ್ನಿಡಲಾಗಿರುತ್ತದೆ</p>



<p class="wp-block-paragraph">( ಪಟ್ಟಣ- ನಗರಗಳಲ್ಲಿ ಕೊಳಗೇರಿಗಳಿರುತ್ತವೆ)</p>



<p class="wp-block-paragraph">ಬಾವಿ, ಬೋರ್ ವೆಲ್ ಗಳು ಊರೊಳಗಿದ್ದಿದ್ದರಿಂದ ಹಟ್ಟಿ, ಕೇರಿಯ ಮಂದಿ ಊರಿನವರ ಅನುಮತಿ‌ ಪಡೆದು ನೀರಿಡಿಯಬೇಕೆಂಬ ಕಡ್ಡಾಯ ಕಠಿಣ ನಿಯಮಗಳು ಇದ್ದವು.&nbsp;</p>



<p class="wp-block-paragraph">&nbsp;&#8220;ಊರೊಳಗೆ&#8221; ಹೋಗಲು&nbsp; ಒಂದು ರಾಜಮಾರ್ಗ&nbsp; ಇರುತ್ತದೆ. ಅದಕ್ಕೊಂದು ದ್ವಾರಬಾಗಿಲು ಕೂಡ ಇರುತ್ತದೆ. ಸಲೀಸಾಗಿ ಊರೊಳಗಿನ ಜಾತ್ಯಸ್ತರು ನಡೆದುಕೊಂಡೊ ,ತಮ್ಮ ವಾಹನಗಳ ಮೂಲಕವೋ ಮನೆಗೆ ತಲುಪಬಹುದು.&nbsp;</p>



<p class="wp-block-paragraph">ಇನ್ನುಳಿದಂತೆ ಕೇರಿ, ಹಟ್ಟಿಗಳಿಗೆ ಹೋಗಲು ಗಿಡಗೆಂಟೆ,ಮುಳ್ಳುಮೆಳೆಯ ಮಗ್ಗಲು ದಾರಿಯಲ್ಲಿ ಆ ಜನ ಪಾದ ಗಾಯಗೊಂಡೇ ಜೋಪಡಿಗಳ ಸೇರಿಕೊಳ್ಳಬೇಕು. ( ಈಗ ಬದಲಾಗಿದೆ. ಈ ಹಟ್ಟಿಗಳಿಗೆ ಕಾಂಕ್ರೀಟ್ ರಸ್ತೆಗಳು ಬಂದಿವೆ. ಸೌಲತ್ತುಗಳಿದ್ದರೂ ಇವುಗಳು ಪ್ರತ್ಯೇಕವಾಗಿಯೇ ಉಳಿದುಕೊಂಡಿವೆ!)</p>



<p class="wp-block-paragraph">ಜಾತಿ ವ್ಯವಸ್ಥೆಯನ್ನು ಸೃಷ್ಟಿಸಿ&nbsp; ಪೋಷಿಸಿಕೊಂಡು‌ ಬಂದವರೇ&nbsp; ಅಸ್ಪೃಶ್ಯ‌ ಜಾತಿಗಳನ್ನು ನಿಂದಿಸಲೆಂದೆ ಗಾದೆಗಳನ್ನು ಕಟ್ಟಿದವರು. ಅದು ಎಷ್ಟರ ಮಟ್ಟಿಗೆ ಪ್ರಚಲಿತವೆಂದರೆ ಅಸ್ಪೃಶ್ಯ ,ದುರ್ಬಲ ಜಾತಿಗಳು ತಮಗರಿವಿಲ್ಲದೆ ಅಥವಾ ಅಂತಹ ಗಾದೆಗಳ ಹಿನ್ನಲೆ ಅರ್ಥಮಾಡಿಕೊಳ್ಳದೆ ತಾವೇ ಬಳಸಿಕೊಳ್ಳುತ್ತಾ ಬಂದಿವೆ.&nbsp;</p>



<p class="wp-block-paragraph">ಆದರೆ ಕಾಲಘಟ್ಟದ ಗೋಡೆಯಿಂದ ಜಿಗಿದು ನೋಡುವಾಗ ತನ್ನಂತೆ‌ ಇರುವ ಮನುಷ್ಯರನ್ನು ಮನುಷ್ಯರೇ‌ ಲೇವಡಿ ಮಾಡುವ , ಅವಮಾನಿಸುವ ಗಾದೆಗಳನ್ನೂ ವರ್ತಮಾನದಲ್ಲೂ&nbsp; &nbsp;ಬಳಸುವುದು ಅನಾಗರೀಕತೆಯ ಸಂಕೇತ.&nbsp; ಇಂತಹ ಗಾದೆಗಳ ಸೃಷ್ಟಿ ಮತ್ತು ಮುಂದುವರೆಸುವ ಉದ್ದೇಶವನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು. ಅದಕ್ಕಾಗಿ ಈ ಸಮಾಜದ ಭಾಗವೇ&nbsp; ಆಗಿರುವ ಕಲಾವಿದರು, ನಟರು, ಪತ್ರಕರ್ತರು, ಕವಿಗಳು, ರಾಜಕಾರಣಿಗಳು, ಪೊಲೀಸರು ಅದಕ್ಕಿಂತ ಮುಖ್ಯವಾಗಿ &#8220;ನ್ಯಾಯಾಧೀಶ&#8221; ರುಗಳು ನಮ್ಮ ಸಾಮಾಜಿಕ‌ ಸಂರಚನೆಯನ್ನು ಆಳವಾಗಿ ತಿಳಿದುಕೊಳ್ಳಬೇಕು. ಮತ್ತು ಸಂವಿಧಾನದ ಬೆಳಕಲ್ಲಿ ಪ್ರತಿಯೊಬ್ಬ ಪ್ರಜೆಯ ಘನತೆ-ನ್ಯಾಯ &#8211; ಸಮಾನತೆಯನ್ನು&nbsp; ಎತ್ತಿಹಿಡಿಯಬೇಕಾಗುತ್ತದೆ.</p>



<figure class="wp-block-gallery has-nested-images columns-default is-cropped wp-block-gallery-5 is-layout-flex wp-block-gallery-is-layout-flex">
<figure class="wp-block-image size-full"><img loading="lazy" decoding="async" width="275" height="183" data-id="25626" src="https://peepalmedia.com/wp-content/uploads/2023/08/images-4-1.jpg" alt="" class="wp-image-25626" srcset="https://peepalmedia.com/wp-content/uploads/2023/08/images-4-1.jpg 275w, https://peepalmedia.com/wp-content/uploads/2023/08/images-4-1-150x100.jpg 150w" sizes="auto, (max-width: 275px) 100vw, 275px" /></figure>
</figure>



<p class="wp-block-paragraph">1976ರಲ್ಲಿ ಸಂವಿಧಾನಕ್ಕೆ 42 ನೇ ತಿದ್ದುಪಡಿ ತರುವ ಮೂಲಕ ಸೇರಿಸಲ್ಪಟ್ಟ ಮೂಲಭೂತ ಕರ್ತವ್ಯಗಳಲ್ಲಿ&nbsp; &#8221; ವೈಜ್ಞಾನಿಕ ಮನೋಭಾವನೆ, ಮಾನವೀಯತೆ, ಜಿಜ್ಞಾಸೆಯ ಮತ್ತು ಸುಧಾರಣೆ ಯ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದು ಮತ್ತು ಇತರರಲ್ಲಿ ಬೆಳೆಸುವುದು&#8221; ಒಂದಾಗಿದೆ. ಇದು&nbsp; ನ್ಯಾಯನಿರ್ಣಯಿಸುವ ಪೀಠಗಳಲ್ಲಿರುವವರಿಗೂ&nbsp; ಅನ್ವಯವಾಗುತ್ತೆ ಎಂಬುದನ್ನು ಪ್ರತ್ಯೇಕ ವಾಗಿ ಹೇಳಬೇಕಿಲ್ಲ ಎಂದು ಭಾವಿಸುತ್ತೇನೆ. ಇಲ್ಲದೆ ಹೋದರೆ ಯಾವುದೇ ಒಂದು ಸಮುದಾಯದ ನಿಂದನೆಯನ್ನು ಕೇವಲ ಒಂದು&#8221; ಗಾದೆ&#8221; ಯಷ್ಟೆ ಎಂದು ತಳ್ಳಿ ಹಾಕುವ ಮೂಲಕ‌ ಮನುಷ್ಯ ಸಮುದಾಯದ ಅವಮಾನವನ್ನು ಸ್ಥಿರೀಕರಿಸಿಬಿಟ್ಟಂತಾಗುತ್ತದೆ.&nbsp;</p>



<p class="wp-block-paragraph">ಅರಿವಿನಿ‌‌ ಉನ್ನತೀಕರಣದ ಚಲನೆಗೆ ತಮ್ಮನ್ನು ತಾವು ಒಗ್ಗಿಸಿಕೊಳ್ಳದೆ ಹೋದರೆ ನ್ಯಾಯಪೀಠವೂ ಜಡಗೊಂಡಿದೆ ಎಂದರ್ಥ ಅಷ್ಟೆ. ಇದು ಬಹುದೊಡ್ಡ ಅಪಾಯಕಾರಿ.&nbsp; ಎಷ್ಟೋ ಬಾರಿ ಇಂತಹ ಉದಾಹರಣೆಗಳು ಸಿಗುತ್ತಲೆ ಇವೆ..</p>



<p class="wp-block-paragraph"><strong>ಎನ್‌ ರವಿಕುಮಾರ್‌ ಟೆಲೆಕ್ಸ್‌</strong></p>



<p class="wp-block-paragraph">ಪತ್ರಕರ್ತರು‌</p>



<p class="wp-block-paragraph"><mark style="background-color:rgba(0, 0, 0, 0)" class="has-inline-color has-vivid-cyan-blue-color"><strong>ಇ</strong></mark><strong><a href="https://peepalmedia.com/the-caste-stain-on-the-human-brain-has-not-faded/" data-type="post" data-id="23718">ದನ್ನೂ ಓದಿ-</a></strong><a href="https://peepalmedia.com/the-caste-stain-on-the-human-brain-has-not-faded/" data-type="post" data-id="23718">ಮನುಷ್ಯನ ಮೆದುಳಿಗಂಟಿದ ಜಾತಿ ಕಲೆ ಮಸುಕಾಗಿಲ್ಲ.</a></p>
]]></content:encoded>
					
		
		
			</item>
		<item>
		<title>ದಲಿತರು ಬಿಜೆಪಿಯಿಂದ ದೂರ ಉಳಿವುದೇ ಈ ಹೊತ್ತಿನ ರಾಜಕೀಯ ಮೌಲ್ಯ</title>
		<link>https://peepalmedia.com/the-political-value-of-this-time-is-that-dalits-should-stay-away-from-bjp/</link>
		
		<dc:creator><![CDATA[Ravi Kumar N]]></dc:creator>
		<pubDate>Mon, 08 May 2023 07:13:42 +0000</pubDate>
				<category><![CDATA[ಚುನಾವಣೆ 2023]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=21408</guid>

					<description><![CDATA[2013 ರ ಚುನಾವಣೆಯಲ್ಲಿ&#160; ಅಧಿಕಾರಕ್ಕೆ ಬಂದ&#160; ಕಾಂಗ್ರೆಸ್ &#160;ಸರ್ಕಾರದ&#160; ಸಿದ್ದರಾಮಯ್ಯ ದಲಿತ ಸಮುದಾಯಕ್ಕೆ ಕೊಟ್ಟ ಕೊಡುಗೆ ಕಡಿಮೆಯೇನಲ್ಲ. ಆದರೆ ಧರ್ಮ, ದೇವರು ಎಂಬ ಭಾವನಾತ್ಮಕ ಸಂಗತಿಗಳ ಸಮೂಹ ಸನ್ನಿಗೆ ಒಳಗಾದ ದಲಿತ ಸಮುದಾಯ ಬಿಜೆಪಿಯನ್ನು ಹಿಂಬಾಲಿಸಿದ್ದು ವಿಪರ್ಯಾಸ. ಸರ್ಕಾರದ ಕೊನೆ ದಿನದಲ್ಲಿ ಒಳಮೀಸಲಾತಿ ಹೆಸರಿನಲ್ಲಿ ಮೂಗಿಗೆ ತುಪ್ಪ ಸವರಿರುವ ಬಿಜೆಪಿ ದಲಿತ ಸಮುದಾಯವನ್ನು ನಿರ್ಲಜ್ಜತನದಿಂದ ವಂಚಿಸಿರುವುದನ್ನು ದಲಿತ ಸಮುದಾಯ ಅರ್ಥಮಾಡಿಕೊಳ್ಳಬೇಕು, ಯೋಚಿಸಿ ಮತಚಲಾಯಿಸಬೇಕು – ಎನ್‌ ರವಿಕುಮಾರ್ ಬಿಜೆಪಿ&#160; ಅಭ್ಯರ್ಥಿಯಾಗಿರುವ, ಕೊಲೆ, ಸುಲಿಗೆ, ವಂಚನೆಯಂತಹ ಡಜನ್ ಗಟ್ಟಲೆ [&#8230;]]]></description>
										<content:encoded><![CDATA[
<p class="has-vivid-cyan-blue-color has-text-color wp-block-paragraph">2013 ರ ಚುನಾವಣೆಯಲ್ಲಿ&nbsp; ಅಧಿಕಾರಕ್ಕೆ ಬಂದ&nbsp; ಕಾಂಗ್ರೆಸ್ &nbsp;ಸರ್ಕಾರದ&nbsp; ಸಿದ್ದರಾಮಯ್ಯ ದಲಿತ ಸಮುದಾಯಕ್ಕೆ ಕೊಟ್ಟ ಕೊಡುಗೆ ಕಡಿಮೆಯೇನಲ್ಲ. ಆದರೆ ಧರ್ಮ, ದೇವರು ಎಂಬ ಭಾವನಾತ್ಮಕ ಸಂಗತಿಗಳ ಸಮೂಹ ಸನ್ನಿಗೆ ಒಳಗಾದ ದಲಿತ ಸಮುದಾಯ ಬಿಜೆಪಿಯನ್ನು ಹಿಂಬಾಲಿಸಿದ್ದು ವಿಪರ್ಯಾಸ. ಸರ್ಕಾರದ ಕೊನೆ ದಿನದಲ್ಲಿ ಒಳಮೀಸಲಾತಿ ಹೆಸರಿನಲ್ಲಿ ಮೂಗಿಗೆ ತುಪ್ಪ ಸವರಿರುವ ಬಿಜೆಪಿ ದಲಿತ ಸಮುದಾಯವನ್ನು ನಿರ್ಲಜ್ಜತನದಿಂದ ವಂಚಿಸಿರುವುದನ್ನು ದಲಿತ ಸಮುದಾಯ ಅರ್ಥಮಾಡಿಕೊಳ್ಳಬೇಕು, ಯೋಚಿಸಿ ಮತಚಲಾಯಿಸಬೇಕು – <strong>ಎನ್‌ ರವಿಕುಮಾರ್</strong></p>



<p class="wp-block-paragraph">ಬಿಜೆಪಿ&nbsp; ಅಭ್ಯರ್ಥಿಯಾಗಿರುವ, ಕೊಲೆ, ಸುಲಿಗೆ, ವಂಚನೆಯಂತಹ ಡಜನ್ ಗಟ್ಟಲೆ ಗಂಭೀರ ಕ್ರಿಮಿನಲ್ ಕೇಸುಗಳನ್ನು ಹೊಂದಿರುವ ಮಣಿಕಂಠ ರಾಥೋಡ್&nbsp; ಭಾರತೀಯ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂಬ ಉನ್ನತ ಪಟ್ಟದಲ್ಲಿ ಕುಳಿತಿರುವ ಕರ್ನಾಟಕದ ಹಿರಿಯ ನಾಯಕ ಎಂ ಮಲ್ಲಿಕಾರ್ಜುನ ಖರ್ಗೆ ಅವರ ಕಟುಂಬವನ್ನೆ ಮುಗಿಸಿಬಿಡುತ್ತೇನೆ ಎಂದು&nbsp; ಘೋಷಿಸುತ್ತಾನೆ.&nbsp; ಈ ಸಂಬಂಧ ಬಹಿರಂಗವಾಗಿರುವ ಆಡಿಯೋವೇ ನಕಲಿ ಎಂದು ಈ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಾರೆ, ಬಿಜೆಪಿ ಸಂಘಟನಾ ಕಾರ್ಯದರ್ಶಿ, ಕರ್ನಾಟಕದ ಬಿಜೆಪಿಯ ಸಮಸ್ತ ರಾಜಕೀಯ ವ್ಯವಹಾರಗಳನ್ನು ಬೆರಳ ತುದಿಯಲ್ಲಿ ಆಡಿಸುತ್ತಿರುವ ಬಿ.ಎಲ್ ಸಂತೋಷ್, ಖರ್ಗೆ ಅವರ ಕುಟುಂಬದ ಕೊಲೆಗೆ ಸಂಚು ಎಂಬ ಆರೋಪವನ್ನು “ಹತಾಶೆ”ಯದ್ದೆಂದು ಲೇವಡಿ ಮಾಡಿ ಟ್ವೀಟ್ ಮಾಡುತ್ತಾರೆ. ಎಂದರೆ ಖರ್ಗೆ ಎಂಬ ಈ ರಾಷ್ಟ್ರದ ಹಿರಿಯ ನಾಯಕ ಮತ್ತವರ ಕುಟುಂಬದ ಜೀವ ಎಷ್ಟೊಂದು ಅಗ್ಗ-ಹಗುರ ಎಂದು ಬಿಜೆಪಿ ನಾಯಕರು ಭಾವಿಸಿದ್ದಾರೆ ಎಂಬುದನ್ನು&nbsp; ಯೋಚಿಸಬೇಕು.</p>



<p class="wp-block-paragraph">ಇದೇ ಮೋದಿ ಹಿಂದೊಮ್ಮೆ ತಾವು ಹಿಂದುಳಿದ ವರ್ಗದ ನಾಯಕನೆಂಬ ಕಾರಣಕ್ಕೆ ಕಾಂಗ್ರೆಸ್ ಅವಮಾನ ಮಾಡುತ್ತಿದೆ. ಇದು ಸಮಸ್ತ ಹಿಂದುಳಿದ ವರ್ಗಗಳಿಗೆ ಮಾಡಿದ ಘೋರ ಅವಮಾನ ಎಂದು ಚೀರಿಕೊಂಡಿದ್ದು ಯಾರಿಗಾದರೂ ನೆನಪಿರಬಹುದು.&nbsp; ವಾರದೊಪ್ಪತ್ತಿನಲ್ಲಿ ಪ್ರಧಾನಿ ನರೇಂದ್ರಮೋದಿ ಅವರನ್ನು ವಿಷದ ಹಾವಿಗೆ ಹೋಲಿಸಿದರೆಂದು ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಷ್ಟೆಲ್ಲಾ ಎಳೆದಾಡಿದ, ನಿಂದಿಸಿದ, ಖಂಡಿಸಿದ ಭಕ್ತರಿರಲಿ, ಸ್ವತಃ ಮೋದಿ ಅವರೆ ರಾಜ್ಯಕ್ಕೆ ಬಂದು ನನ್ನನ್ನು ಖರ್ಗೆ ಬೈಯ್ದರು, ಆಡಿದರು ಎಂದು ಗೋಳಾಡಿದರು. ತನಗೆ ಬೈಯ್ದ ಬೈಗುಳಗಳನ್ನು ದೇಶಕ್ಕೆ ಲೇಪಿಸಿದರು. ಪ್ರಚೋದಿಸಿದರು. ರಾಜಕೀಯ ಮೌಲ್ಯಗಳು, ಭಾಷೆಯ ಸಂಸ್ಕಾರಗಳನ್ನು&nbsp; ಖರ್ಗೆ ಅವರಿಗೆ ಬೋಧಿಸಲಾಯಿತು. ಕಾಂಗ್ರೆಸ್ಸಿಗ ರು ನನಗೆ 91&nbsp; ಬಾರಿ ನಿಂದಿಸಿದ್ದಾರೆಂದು ಚಿತ್ರಗುಪ್ತನ ಲೆಕ್ಕವಿಟ್ಟರು. ಸೋಷಿಯಲ್ ಮೀಡಿಯಾಗಳಲ್ಲಿ ಖರ್ಗೆ ಅವರನ್ನು ದಿನಮಾತ್ರದೊಳಗೆ ಖಳನಾಯಕನಂತೆ ಬಿಂಬಿಸಲಾಯಿತು. ಅಷ್ಟೇ ಅಲ್ಲ, ಅಂಬೇಡ್ಕರ್ ಅವರನ್ನು ಕಾಂಗ್ರೆಸ್‌ &nbsp;ಹೇಗೆಲ್ಲಾ ಅವಮಾನ ಮಾಡಿದೆ ಎಂದು ಕಪೋಲಕಲ್ಪಿತವಾಗಿ ವಾಗ್ಝರಿ ಸುರಿಸಿದರು.</p>



<p class="wp-block-paragraph">&nbsp;ಅದೇ ಮೋದಿ ಮತ್ತವರ ಪರಿವಾರದ ಪುಂಡರು ನಿಜವಾದ ಅಂಬೇಡ್ಕರ್ ವಾದಿ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನಿಸುತ್ತಿರುವುದು, ನಿಂದಿಸುತ್ತಿರುವುದು ಅದು ದಲಿತ ಸಮುದಾಯಕ್ಕೆ, ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ ಆಗುವುದಿಲ್ಲವೆ? ಎಂಬುದಕ್ಕೆ ಯಾರಾದರೂ ಉತ್ತರ ಕೊಡಬಹುದಾ?</p>



<p class="wp-block-paragraph">ಮಲ್ಲಿಕಾರ್ಜುನ ಖರ್ಗೆ ಜಾತಿಯ ಅವಮಾನ ಮತ್ತು ಹಿಂಸೆಯ&nbsp; ಕುಲುಮೆಯಿಂದ ಎದ್ದು ಬಂದ, ರಾಷ್ಟ್ರಮಟ್ಟದವರೆಗೆ ಬೆಳೆದು ನಿಂತ&nbsp; ದಲಿತ ನಾಯಕ ಎಂಬುದನ್ನು ಮೋದಿ ಮತ್ತವರ ಬಿಜೆಪಿ ಪಕ್ಷ ಮರೆತು ದಾಳಿ ನಡೆಸುತ್ತಿರುವುದು&nbsp; ದಲಿತ ಸಮುದಾಯದ ಮೇಲಿನ ರಾಜಕೀಯ ಮತ್ತು ಸಾಮಾಜಿಕ ಹಲ್ಲೆ ಎಂದಾಗುವುದಿಲ್ಲವೆ? ದಲಿತರನ್ನು ಸುಲಿದು, ಶೋಷಿಸಿ, ಕೊಂದು ದಕ್ಕಿಸಿ ಕೊಳ್ಳಬಹುದೆಂಬ ಪರಂಪರಾಗತ ಮನೋಭಾವದ ರಾಕ್ಷಸ&nbsp; ಈಗ ಇನ್ನಷ್ಟು ದಷ್ಟಪುಷ್ಟವಾಗಿ ವಿಜೃಂಭಿಸುತ್ತಿರುವುದಕ್ಕೆ ಖರ್ಗೆ ಮತ್ತವರ ಕುಟುಂಬವನ್ನು ಮುಗಿಸಿಬಿಡುತ್ತೇನೆ ಎಂದ ತಮ್ಮ ಪಕ್ಷದ ಕ್ರಿಮಿನಲ್ ಅಭ್ಯರ್ಥಿಯನ್ನು&nbsp; ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿಯ ವಿಕೃತ ಸಂಸ್ಕಾರವೇ ಸಾಕ್ಷಿ.</p>



<p class="wp-block-paragraph">ದಲಿತರು ಎಷ್ಟೇ ಎತ್ತರದ ಸ್ಥಾನ-ಮಾನದಲ್ಲಿದ್ದರೂ ಅವರು ಆರಂಭಕ್ಕೂ –ಅಂತ್ಯಕ್ಕೂ ದಲಿತರೇ ಆಗಿರುತ್ತಾರೆ. ಈ ಸಮಾಜ ಅವರನ್ನು ಹಾಗೆಯೇ ನೋಡುತ್ತದೆ, ನಡೆದುಕೊಳ್ಳುತ್ತದೆ. ದಲಿತರ ಮೊದಲ ಶತ್ರು ಮನುಸಿದ್ಧಾಂತದ ನೆಲೆಗಟ್ಟಿನಲ್ಲಿ ರಾಜಕೀಯ ರೂಪವಾಗಿರುವ ಬಿಜೆಪಿ ಎಂಬುದನ್ನು ದಲಿತರು ಅರಿತುಕೊಳ್ಳುವುದರಲ್ಲಿ ವಿಫಲರಾಗಿರುವುದು ಮತ್ತು ಅಂಬೇಡ್ಕರ್ ಅವರ ವಿಚಾರಧಾರೆ. ಹೋರಾಟಗಳಿಂದ ವಿಮುಖವಾಗಿರುವುದರಿಂದಲೆ ಖರ್ಗೆಯಂತ ಹಿರಿಯ ದಲಿತ ನಾಯಕನನ್ನು ಬಿಜೆಪಿ ಹೆಜ್ಜೆ ಹೆಜ್ಜೆಗೂ ಅವಮಾನಿಸುವ ದಾಷ್ಟ್ಯ ತೋರುತ್ತಿದೆ. ಖರ್ಗೆ ಅವರಿಗೆ ಮಾಡುತ್ತಿರುವ ಅವಮಾನ&nbsp; ಬಿಜೆಪಿಯಲ್ಲಿರುವ ದಲಿತರೆ ಆದ ಗೋವಿಂದ ಕಾರಜೋಳ, ಶ್ರೀನಿವಾಸ್ ಪ್ರಸಾದ್, ರಮೇಶ್ ಜಿಗಜಿಣಗಿಯಂತ ನಾಯಕರಿಗೆ ಏನೂ ಅನಿಸುವುದಿಲ್ಲ ಎಂದಾದರೆ ಅವರ ಸಂವೇದನೆ ಗೆ ತುಕ್ಕು ಹಿಡಿದಿರಬಹುದು.</p>



<p class="wp-block-paragraph">ಬಿಜೆಪಿ ರಾಜ್ಯದಲ್ಲಿ ದಷ್ಟ-ಪುಷ್ಟಗೊಳ್ಳಲು ದಲಿತರದ್ದೂ ಪಾಲಿದೆ. ಹಿಂದೂತ್ವದ ಅಮಲಿಗೆ ಬಿದ್ದ ದಲಿತರು ಬಿಜೆಪಿಯ ಕಾಲಾಳುಗಳಾಗಿ, ರಾಜಕೀಯ ಗುಲಾಮಗಿರಿಯಲ್ಲಿ ತೊಡಗಿರುವುದು ಇದಕ್ಕೆ ಕಾರಣ. ಬಿಜೆಪಿ ನಾಯಕರುಗಳೇ ಸಂವಿಧಾನ ಬದಲಾವಣೆಯಂತ ಘೋಷಣೆಗಳನ್ನು ಕೂಗುತ್ತಿದ್ದರೂ ಬಿಜೆಪಿಯಲ್ಲಿನ&nbsp; ದಲಿತರು ಮಾತ್ರ&nbsp; ಕಿವಿಗಳಿಗೆ ಕಾದ ಸೀಸ ಸುರಿದು ಕಿವುಡಾದವರಂತೆ ಇದ್ದಾರೆ. ದಲಿತರು ಮತ್ತು ದಲಿತರ ಹೆಸರಿನಲ್ಲಿನ ರಾಜಕೀಯ ಶಕ್ತಿಗಳು ಅಂಬೇಡ್ಕರ್ ಅವರ ಸೈದ್ಧಾಂತಿಕತೆ ವಿರುದ್ಧವಾದ ಸಿದ್ಧಾಂತದ ಬಿಜೆಪಿಯ ಜೊತೆಗೆ ಕೈಜೋಡಿಸಿರುವುದು ಅತ್ಯಂತ ಅಪಾಯಕಾರಿ&nbsp; ಸ್ಥಿತಿ.</p>



<figure class="wp-block-gallery has-nested-images columns-default is-cropped wp-block-gallery-6 is-layout-flex wp-block-gallery-is-layout-flex">
<figure class="wp-block-image size-large"><img loading="lazy" decoding="async" width="301" height="167" data-id="21409" src="https://peepalmedia.com/wp-content/uploads/2023/05/download-2.jpg" alt="" class="wp-image-21409" srcset="https://peepalmedia.com/wp-content/uploads/2023/05/download-2.jpg 301w, https://peepalmedia.com/wp-content/uploads/2023/05/download-2-150x83.jpg 150w" sizes="auto, (max-width: 301px) 100vw, 301px" /></figure>
</figure>



<p class="wp-block-paragraph">&nbsp;ಕರ್ನಾಟಕದ ಜನಸಂಖ್ಯೆಯಲ್ಲಿ ದಲಿತರೇ ನಂಬರ್ ಒನ್. ಪರಂಪರಾಗತವಾಗಿ <a>ಕಾಂಗ್ರೆಸ್ ನ</a> &nbsp;ಓಟು ಬ್ಯಾಂಕ್ ಆಗಿಯೇ ಇದ್ದ ದಲಿತರಿಗೆ ಸಾಮಾಜಿಕ ನ್ಯಾಯ ಎಂಬುದು ಮೀಸಲು ಕ್ಷೇತ್ರಗಳ ಕಾರಣಕ್ಕಷ್ಟೆ ಸೀಮಿತವಾಗಿದೆ ವಿನಃ, ಮುಖ್ಯಮಂತ್ರಿ ಪದವಿ ಎಂಬುದು ಕನ್ನಡಿಯೊಳಗಿನ ಗಂಟಷ್ಟೆ. 90 ರ ದಶಕದಲ್ಲಿ&nbsp; ಕರ್ನಾಟಕದಲ್ಲೂ ದಲಿತ ರಾಜಕೀಯ ಅಸ್ಮಿತೆಯ ಬಹುಜನಸಮಾಜ ಪಕ್ಷ(ಬಿಎಸ್ಪಿ)&nbsp; ಸಂಚಲನ ಮೂಡಿಸಿತ್ತು. ಸಾಂಪ್ರದಾಯಿಕ ಕಾಂಗ್ರೆಸ್ ನ ತೆಕ್ಕೆಯಿಂದ ಹಳೆ ಮೈಸೂರು ಮತ್ತು ಉತ್ತರಕರ್ನಾಟಕದ ಕೆಲವು ಭಾಗಗಳಲ್ಲಿ ಬಿಎಸ್ಪಿ ತೆಕ್ಕೆಗೆ&nbsp; ಸಾಮೂಹಿಕವಾಗಿ ಸರಿದ ದಲಿತರು ಸ್ವಾಭಿಮಾನಿ ರಾಜಕಾರಣವನ್ನು ನೆಲೆಗೊಳಿಸುವ ಹೊತ್ತಿನಲ್ಲೆ ಬಿಎಸ್ಪಿ ಉತ್ತರ ಪ್ರದೇಶದಲ್ಲಿ &nbsp;ಸೈದ್ಧಾಂತಿಕ ವಿರೋಧಿಯಾದ ಬಿಜೆಪಿಯ ಸಖ್ಯ ಮಾಡಿದ್ದು&nbsp; ಆಘಾತಕಾರಿಯಾದದ್ದು. ಇದು ಕರ್ನಾಟಕದಲ್ಲಿ&nbsp; ದಲಿತರ ರಾಜಕೀಯ ಓಟಕ್ಕೆ ಹಿನ್ನಡೆ ಆಯಿತೆನ್ನಬಹುದು.&nbsp; 1999 ರಲ್ಲಿ ಕಾಂಗ್ರೆಸ್ ಗೆ ಮರಳಿದ ದಲಿತರು 2004 ರ ಚುನಾವಣೆಯ ಹೊತ್ತಿಗೆ&nbsp; ಬಿಜೆಪಿ ಕಡೆಗೆ ಮುಖಮಾಡಿದ್ದರು. ದಲಿತರು ಹೆಚ್ಚು ಇಷ್ಟ ಪಡುತ್ತಿದ್ದ ಹಿಂದುಳಿದ ವರ್ಗದ ಎಸ್. ಬಂಗಾರಪ್ಪನವರು ಬಿಜೆಪಿಗೆ ಸೇರಿದ್ದು ಅವರನ್ನು ಹಿಂಬಾಲಿಸಿದ ದಲಿತರು&nbsp; ಬಂಗಾರಪ್ಪ ಅವರು ಬಿಜೆಪಿಯಿಂದ ಹೊರಬಂದರೂ&nbsp; ದಲಿತರು, ಹಿಂದುಳಿದ ವರ್ಗಗಳು ಅಲ್ಲಿಯೇ ಉಳಿದು ಬಿಜೆಪಿಗೆ ಕೂಲಿಯಾಳುಗಳಾಗಿದ್ದಾರೆ.&nbsp;</p>



<p class="wp-block-paragraph">2013 ರ ಚುನಾವಣೆಯಲ್ಲಿ&nbsp; ಅಧಿಕಾರಕ್ಕೆ ಬಂದ&nbsp; ಕಾಂಗ್ರೆಸ್ &nbsp;ಸರ್ಕಾರದ&nbsp; ಸಿದ್ದರಾಮಯ್ಯ ದಲಿತ ಸಮುದಾಯಕ್ಕೆ ಕೊಟ್ಟ ಕೊಡುಗೆ ಕಡಿಮೆಯೇನಲ್ಲ. ಆದರೆ ಧರ್ಮ, ದೇವರು ಎಂಬ ಭಾವನಾತ್ಮಕ ಸಂಗತಿಗಳ ಸಮೂಹ ಸನ್ನಿಗೆ ಒಳಗಾದ ದಲಿತ ಸಮುದಾಯ ಬಿಜೆಪಿಯನ್ನು ಹಿಂಬಾಲಿಸಿದ್ದು ವಿಪರ್ಯಾಸ. ಶ್ರೀನಿವಾಸ್ ಪ್ರಸಾದ್‍ರಂತಹ ನಾಯಕರು ಬಿಜೆಪಿಗೆ ಸೇರಿದ್ದು ಬಿಜೆಪಿಗಿದ್ದ ಮಡಿವಂತಿಕೆಯನ್ನು ಸಕ್ರಮಗೊಳಿಸಿತು.&nbsp; ದಲಿತರನ್ನು ವೈದಿಕ ಹಿಂದೂತ್ವಕ್ಕೆ&nbsp; ರೂಪಾಂತರಗೊಳಿಸಿ ಪರಿಚಾರಕ್ಕಿಟ್ಟುಕೊಂಡಿರುವ ಬಿಜೆಪಿ&nbsp; ಸಖತ್ತಾದ ಫಲವನ್ನೆ ಪಡೆಯುತ್ತಿದೆ.&nbsp; ಸರ್ಕಾರದ ಕೊನೆ ದಿನದಲ್ಲಿ ಒಳಮೀಸಲಾತಿ ಹೆಸರಿನಲ್ಲಿ ಮೂಗಿಗೆ ತುಪ್ಪ ಸವರಿರುವ ಬಿಜೆಪಿ ದಲಿತ ಸಮುದಾಯವನ್ನು&nbsp; ನಿರ್ಲಜ್ಜತನದಿಂದ ವಂಚಿಸಿರುವುದನ್ನು ದಲಿತ ಸಮುದಾಯ ಅರ್ಥಮಾಡಿಕೊಳ್ಳಬೇಕು.</p>



<p class="wp-block-paragraph">ಸಭ್ ಕಾ ಸಾಥ್ ಸಭ್ ಕಾ ವಿಕಾಸ್ ಎಂದು ಘೋಷಣೆ ಹಾಕುವ ಪ್ರಧಾನಮಂತ್ರಿಗಳ ಮನ್ ಕಿ ಬಾತ್ ನಲ್ಲಿ ಗುಜರಾತ್, ಉತ್ತರಪ್ರದೇಶ, ರಾಜಾಸ್ತಾನ, ಹರ್ಯಾಣದಲ್ಲಿ ದಲಿತರನ್ನು ಗೋ ಮಾಂಸ ತಿಂದ ಆರೋಪದ ಮೇಲೆ ಬೀದಿಯಲ್ಲಿ ಕಟ್ಟಿ ಹೊಡೆಯುವ, ದಲಿತ ಹೆಣ್ಣುಮಕ್ಕಳನ್ನು ಅತ್ಯಾಚಾರ ಹತ್ಯೆಮಾಡಿದ ಬಗ್ಗೆ ಸೊಲ್ಲೆ ಹೊರಡುವುದಿಲ್ಲ. ದೂರದ ಮಾತೇಕೆ? ಕರ್ನಾಟಕದಲ್ಲೆ ಕಳೆದ ನಾಲ್ಕು ವರ್ಷಗಳಲ್ಲಿ ದೇವನಹಳ್ಳಿ, ಕೋಲಾರ, ಹಾಸನ, ತುಮಕೂರು ಮೈಸೂರು ಜಿಲ್ಲೆಗಳಲ್ಲಿ ದಲಿತರ ಮೇಲೆ ನಡೆದ ಹಲ್ಲೆ, ದೌರ್ಜನ್ಯಗಳಿಗೆ ಬೊಮ್ಮಾಯಿ ಸರ್ಕಾರ ಶಿಕ್ಷೆ ವಿಧಿಸಿದೆಯಾ? ಬಿಜೆಪಿ ಯಾಕೆ ಇದನ್ನೆಲ್ಲಾ ಖಂಡಿಸುವುದಿಲ್ಲ? ಸಂವಿಧಾನ ಬದಲಾಯಿಸುತ್ತೇವೆ ಎನ್ನುವ ಬಿಜೆಪಿ ಮಹಾನುಭಾವರಿಗೆ ಇದೆಲ್ಲಾ ಹಿಂಸೆ, ಅಮಾನವೀಯ, ಅನ್ಯಾಯ ಎಂದು ಅನಿಸುವುದಿಲ್ಲ ಯಾಕೆಂದರೆ ಅವರು ಅಂಬೇಡ್ಕರ್ ವಾದಿಗಳಲ್ಲ. ಅವರದ್ದೇನಿದ್ದರೂ ಮನುಸ್ಮೃತಿ ಮತ್ತು&nbsp; ಗೋಳ್ವಾಲ್ಕರ್‍ ನ ʼಬಂಚ್ ಆಫ್ ಥಾಟ್ಸ್ʼ&nbsp; ಅಷ್ಟೆ.</p>



<p class="wp-block-paragraph">&nbsp;ಅಂಬೇಡ್ಕರ್ ಅವರ ಆಶಯ ಮತ್ತು ಅವರು ಬರೆದ ಸಂವಿಧಾನದ ವಿರುದ್ದ ದಿಕ್ಕಿನಲ್ಲಿ ಚಲಿಸುತ್ತಿರುವ ಬಿಜೆಪಿಯಿಂದ ದಲಿತರು ಎಲ್ಲಾ ಕಾಲಕ್ಕೂ ಅಂತರವನ್ನು ಕಾಯ್ದುಕೊಳ್ಳಬೇಕು.&nbsp; ದಲಿತರು ಬಿಜೆಪಿ ಪಾಲಿನ ಕಾಲಾಳುಗಳೇ ಹೊರತು&nbsp; ನಾಯಕರಲ್ಲ.&nbsp; ಕರ್ನಾಟಕ ವಿಧಾನಸಭಾ ಚುನಾವಣೆಯು ನಡೆಯುತ್ತಿರುವ ಈ ಹೊತ್ತಿನಲ್ಲಿ ದಲಿತರು ಬಿಜೆಪಿಯನ್ನು ತಾತ್ವಿಕ ನೆಲೆಗಟ್ಟಿನಲ್ಲಿ ವಿರೋಧಿಸುವುದು ಮತ್ತು ಮತಶಕ್ತಿಯಿಂದ ಮಣಿಸುವ ಸ್ವಾಭಿಮಾನ ತೋರುವ ಅವಕಾಶವೊಂದು ಬಂದಿದೆ. ಇದು ಅಂಬೇಡ್ಕರ್ ಅವರಿಗೆ ಸಲ್ಲಿಸಬಹುದಾದ ಕೃತಜ್ಞತೆ. ಈ ಪ್ರಯತ್ನದಲ್ಲಿ&nbsp; ಅಂಬೇಡ್ಕರ್ ಸಿದ್ಧಾಂತದ ಸನಿಹಕ್ಕಾದರೂ ಇರುವ ಪರ್ಯಾಯ ರಾಜಕೀಯ ಶಕ್ತಿಗಳ ಜೊತೆ ನಿಲ್ಲುವುದು ರಾಜಕೀಯ ಕರ್ತವ್ಯವೇ ಆಗಿರುತ್ತದೆ.</p>



<p class="wp-block-paragraph"><strong>ಎನ್.ರವಿಕುಮಾರ್</strong></p>



<p class="wp-block-paragraph">ಪತ್ರಕರ್ತರು</p>



<p class="wp-block-paragraph"><strong>ಇದನ್ನೂ ಓದಿ</strong>&#8211; <a rel="noreferrer noopener" href="http://ಉಚಿತ ಸವಲತ್ತುಗಳ ರಾಜಕೀಯ" target="_blank">http://ಉಚಿತ ಸವಲತ್ತುಗಳ ರಾಜಕೀಯ</a> <a href="https://peepalmedia.com/the-politics-of-free-bies/" target="_blank" rel="noreferrer noopener">https://peepalmedia.com/the-politics-of-free-bies/</a></p>
]]></content:encoded>
					
		
		
			</item>
		<item>
		<title>ಹತ್ರಾಸ್‍ನ ‘ನ್ಯಾಯ’ ಪ್ರಕರಣ : ದಲಿತರನ್ನು ಕೊಂದು ದಕ್ಕಿಸಿ ಕೊಳ್ಳಬಹುದಾದ ವ್ಯವಸ್ಥೆ ನೆಲೆಗೊಳ್ಳುತ್ತಲೇ ಇದೆ.</title>
		<link>https://peepalmedia.com/hatras-justice-case-a-system-where-dalits-can-be-killed-and-abducted-continues-to-be-established/</link>
		
		<dc:creator><![CDATA[Ravi Kumar N]]></dc:creator>
		<pubDate>Sat, 04 Mar 2023 10:44:45 +0000</pubDate>
				<category><![CDATA[ದಲಿತ ನೋಟ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=19964</guid>

					<description><![CDATA[2020 ರಲ್ಲಿ ಹಾತರಸ್‌ ನಲ್ಲಿ ನಡೆದ ಬರ್ಬರ ಅತ್ಯಾಚಾರ ಮತ್ತು ಕಗ್ಗೊಲೆ ಪ್ರಕರಣಕ್ಕೆ &#160;ಸಂಬಂಧಿಸಿ ತೀರ್ಪು ಹೊರಬಿದ್ದಿದೆ. &#160;ಈ ದೇಶದಲ್ಲಿ ದಲಿತರು, ದಮನಿತರನ್ನು ಸಲೀಸಾಗಿ ಕೊಂದು ದಕ್ಕಿಸಿ ಕೊಳ್ಳಬಹುದು, ದಲಿತರ ಬದುಕು ಇನ್ನಷ್ಟೂ ಶೋಚನೀಯವಾಗಲಿದೆ ಎಂಬ ಆತಂಕಿತ ಸಂದೇಶವನ್ನು ಈ ತೀರ್ಪು ನೀಡಿದೆ. ಸದರಿ ತೀರ್ಪಿನ ಸುತ್ತ ಬರೆದಿದ್ದಾರೆ ಪತ್ರಕರ್ತ ಎನ್‌ ರವಿಕುಮಾರ್. 2020 ರ ಸೆ.14 ರಂದು &#160;ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ 19 ವರ್ಷದ ದಲಿತ ಯುವತಿಯ&#160; ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ತೀರ್ಪು [&#8230;]]]></description>
										<content:encoded><![CDATA[
<p class="has-cyan-bluish-gray-background-color has-background wp-block-paragraph">2020 ರಲ್ಲಿ ಹಾತರಸ್‌ ನಲ್ಲಿ ನಡೆದ ಬರ್ಬರ ಅತ್ಯಾಚಾರ ಮತ್ತು ಕಗ್ಗೊಲೆ ಪ್ರಕರಣಕ್ಕೆ &nbsp;ಸಂಬಂಧಿಸಿ ತೀರ್ಪು ಹೊರಬಿದ್ದಿದೆ. &nbsp;ಈ ದೇಶದಲ್ಲಿ ದಲಿತರು, ದಮನಿತರನ್ನು ಸಲೀಸಾಗಿ ಕೊಂದು ದಕ್ಕಿಸಿ ಕೊಳ್ಳಬಹುದು, ದಲಿತರ  ಬದುಕು ಇನ್ನಷ್ಟೂ ಶೋಚನೀಯವಾಗಲಿದೆ ಎಂಬ ಆತಂಕಿತ ಸಂದೇಶವನ್ನು ಈ ತೀರ್ಪು ನೀಡಿದೆ. ಸದರಿ ತೀರ್ಪಿನ ಸುತ್ತ ಬರೆದಿದ್ದಾರೆ ಪತ್ರಕರ್ತ ಎನ್‌ ರವಿಕುಮಾರ್.</p>



<p class="wp-block-paragraph">2020 ರ ಸೆ.14 ರಂದು &nbsp;ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ 19 ವರ್ಷದ ದಲಿತ ಯುವತಿಯ&nbsp; ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ತೀರ್ಪು ಪ್ರಕಟವಾಗಿದೆ.&nbsp; ಎಲ್ಲಾ ನಾಲ್ವರು ಆರೋಪಿಗಳನ್ನು ಹತ್ರಾಸ್ ನ ವಿಶೇಷ ನ್ಯಾಯಾಲಯ&nbsp; ಅತ್ಯಾಚಾರ ಮತ್ತು ಹತ್ಯೆಯ ಆರೋಪದಿಂದ ಮುಕ್ತಗೊಳಿಸಿದ್ದರೆ ಅವರಲ್ಲಿ ಓರ್ವನಿಗೆ ಮಾತ್ರ ಈ ಮೇಲಿನ ಆರೋಪಗಳಲ್ಲದ ಬೇರೊಂದು(304 ಐಪಿಸಿ) ಅಪರಾಧಕ್ಕಾಗಿ&nbsp; ಜೀವಾವಧಿ ಶಿಕ್ಷೆ ನೀಡಿ&nbsp; ಈಗ ತೀರ್ಪು ನೀಡಿದೆ.</p>



<p class="wp-block-paragraph">ಬರ್ಬರವಾಗಿ ಹತ್ಯೆಯಾದ ಹತ್ರಾಸ್ ದಲಿತ ಹುಡುಗಿಯನ್ನು ನಾನು 1993 ರಲ್ಲಿ ತೆರೆಕಂಡ ರಾಜಕುಮಾರ್‌ ಸಂತೋಷಿಯ ನಿರ್ದೇಶನದ ಹಿಂದಿ ಸಿನಿಮಾದ ‘ಊರ್ಮಿ’ (ಊರ್ಮಿಳಾ) ಎಂದು ಭಾವಿಸಿಕೊಂಡಿದ್ದೇನೆ. ಇವಳು ಇಡೀ ದೇಶವೇ ಖಂಡಿಸಿ ಬೀದಿಗಿಳಿದು ಮೊಂಬತ್ತಿ ಹಚ್ಚಿಸಿಕೊಂಡ ‘ನಿರ್ಭಯಾ’ಳಾಗಲಿ, ಹೈದ್ರಾಬಾದ್‍ನಲ್ಲಿ ಸಜೀವ ದಹನಗೊಂಡು ಆರೋಪಿಗಳು ಎನ್‍ಕೌಂಟರ್‌ ನಲ್ಲಿ ಹತರಾದ ಪ್ರಕರಣದ ಎಲೈಟ್‍ಕ್ಲಾಸ್‍ನ ಹೆಣ್ಣುಮಗಳಂತಲ್ಲ.&nbsp; ಹತ್ರಾಸ್‍ನ ಅಸಹಾಯಕ ದಲಿತ ಕುಟುಂಬದ&nbsp; ಆ ಹುಡುಗಿ ದಾಮಿನಿ ಸಿನಿಮಾದಲ್ಲಿ ಬರುವ ಯಕಶ್ಚಿತ್ ‘ಊರ್ಮಿ’ ಅಷ್ಟೇ.</p>



<p class="wp-block-paragraph">19&nbsp; ವರ್ಷದ&nbsp; ಊರ್ಮಿಯ&nbsp; ಬೆನ್ನ ಮೂಳೆಗಳು&nbsp; ನುಜ್ಜುಗುಜ್ಜಾಗಿದ್ದವು.&nbsp; ಕೊರಳ ನರಳಗಳೊಳಗೆ ರಕ್ತ ಹೆಪ್ಪುಗಟ್ಟಿತ್ತು. ನಾಲಿಗೆ ತುಂಡಾಗಿ, ದೇಹವೆಲ್ಲಾ ಕಾಮುಕರ ದಾಳಿಗೆ ತುತ್ತಾಗಿ&nbsp; ಗಾಯಗಳಿಂದ&nbsp; ನಂಜಾಡುತ್ತಿದ್ದವು.&nbsp; ಕೊನೆಯದಾಗಿ ಅಕೆಯ ತಲೆಗೆ ಕಲ್ಲಿನಿಂದ ಜಜ್ಜಿ ಬಿಟ್ಟು ಹೋಗಿದ್ದರು. ಈ ನತದೃಷ್ಟ ಹುಡುಗಿ ಅತ್ಯಾಚಾರದ ಅಮಾನುಷ ಕ್ರೌರ್ಯದಿಂದ ನರಳಿ, ನರಳಿ 15 ದಿನಗಳ ಕಾಲ ಸಾವಿನೊಂದಿಗೆ ಸೆಣಸಾಡುತ್ತಾ ಸೆ.29, 2020 ರಂದು&nbsp; ದೆಹಲಿಯ ಅಸ್ಪತ್ರೆಯಲ್ಲಿ ಅನುಮಾನಾಸ್ಪದವಾಗಿ ಕೊನೆಯುಸಿರೆಳೆದಿದ್ದಳು.</p>



<p class="wp-block-paragraph">ಉತ್ತರಪ್ರದೇಶದ ಯೋಗಿ ಅದಿತ್ಯನಾಥ್‍ನ ಆಡಳಿತ ರಾಮರಾಜ್ಯದ ಅಮಲಿನಲ್ಲಿ ತೇಲುತ್ತಿರುವಾಗ ಹತ್ರಾಸ್&nbsp; ಜಿಲ್ಲೆಯಲ್ಲಿ 2020 , ಸೆ. 14.&nbsp; ಎಮ್ಮೆಗಳಿಗೆ ಮೇವು ತರಲು ಹೊಲಕ್ಕೆ ಹೋಗಿದ್ದ ಊರ್ಮಿ&nbsp; ಸಾಮೂಹಿಕ ಅತ್ಯಾಚಾರ, ಹತ್ಯೆಯ ಕ್ರೌರ್ಯಕ್ಕೆ ತುತ್ತಾಗಿ ಬಿದ್ದಿದ್ದಳು.&nbsp; ಅರೆಬರೆ ಜೀವಸ್ಥಿತಿಯಲ್ಲಿದ್ದ ಆಕೆಯನ್ನು ಹತ್ರಾಸ್ ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಕರಣದ ಕುರಿತು ಹುಡುಗಿ ಕುಟುಂಬ ಪೊಲೀಸ್ ಠಾಣೆಗೆ ಎಡತಾಕಿದರೆ ಪೊಲೀಸರು ಕೇಸು ದಾಖಲಿಸಲು ನಿರಾಕರಿಸಿದರು.&nbsp; ಆರು ದಿನಗಳ ಆನಂತರ ಚಾಂದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತದೆ. ಹಸಿದ&nbsp; ತೋಳಗಳು ತಿಂದು ಹಾಕಿದ ದೇಹದ ಅವಶೇಷದಂತಿದ್ದ ಊರ್ಮಿ ಸೆ. 22 ರಂದು ಪೊಲೀಸರಿಗೆ ಹೇಳಿಕೆ ನೀಡಿ ತನ್ನ ಮೇಲೆ ನಡೆದ&nbsp; ಅತ್ಯಾಚಾರ –ಘೋರ ಹಿಂಸೆಯನ್ನು ವಿವರಿಸುತ್ತಾಳೆ.&nbsp; ಪೊಲೀಸರು ವಿಧಿಯಿಲ್ಲದೆ ಈ ಕೃತ್ಯ ಎಸಗಿದ ಬಲಾಢ್ಯ ಜಾತಿಯ ಲವಕುಶ್, ಸಂದೀಪ್, ರಾಮು, ರವಿ ಅವರುಗಳನ್ನು ಬಂಧಿಸುತ್ತಾರೆ.&nbsp;</p>



<figure class="wp-block-gallery has-nested-images columns-default is-cropped wp-block-gallery-7 is-layout-flex wp-block-gallery-is-layout-flex">
<figure class="wp-block-image size-large"><img loading="lazy" decoding="async" width="900" height="500" data-id="19965" src="https://peepalmedia.com/wp-content/uploads/2023/03/ಹತ್ರಾಸ್.jpeg" alt="" class="wp-image-19965" srcset="https://peepalmedia.com/wp-content/uploads/2023/03/ಹತ್ರಾಸ್.jpeg 900w, https://peepalmedia.com/wp-content/uploads/2023/03/ಹತ್ರಾಸ್-300x167.jpeg 300w, https://peepalmedia.com/wp-content/uploads/2023/03/ಹತ್ರಾಸ್-768x427.jpeg 768w, https://peepalmedia.com/wp-content/uploads/2023/03/ಹತ್ರಾಸ್-150x83.jpeg 150w, https://peepalmedia.com/wp-content/uploads/2023/03/ಹತ್ರಾಸ್-696x387.jpeg 696w" sizes="auto, (max-width: 900px) 100vw, 900px" /></figure>
</figure>



<p class="wp-block-paragraph">ಈ ದೇಶದಲ್ಲಿ ಕನಿಷ್ಠ ನ್ಯಾಯ, ಮತ್ತು ವೃತ್ತಿಪರತೆಗೆ ಬದ್ಧವಾಗಿರುವ ಮಾಧ್ಯಮಗಳು ಇರುವುದರಿಂದಲೇ ಈ ಪ್ರಕರಣ ಬಯಲಿಗೆ ಬರುತ್ತದೆ.&nbsp; ದಲಿತ ಸಂಘಟನೆಗಳು, ವಿಪಕ್ಷಗಳು, ಮನುಷ್ಯರೆಸಿಕೊಂಡವರು&nbsp; ಊರ್ಮಿ ಪ್ರಕರಣವನ್ನು ಖಂಡಿಸಿ ಬೀದಿಗಳಿಯುತ್ತವೆ.&nbsp; ಆದರೆ&nbsp; ಇಡೀ ಆಡಳಿತ&nbsp; ವ್ಯವಸ್ಥೆಯೇ ಪೈಶಾಚಿಕ ಕೃತ್ಯ ನಡೆಸಿದವರ ರಕ್ಷಣೆಗೆ ನಿಂತಂತೆ ಭಾಸವಾಗುತ್ತದೆ.&nbsp; ಆಸ್ಪತ್ರೆಯಲ್ಲಿ ಅಸುನೀಗಿದ ಊರ್ಮಿಯ ಶವವನ್ನು ಅವರ ಕುಟುಂಬಕ್ಕೆ ಕೊಡದೆ ಅವರ ಅನುಮತಿಯನ್ನೂ ಕೇಳದೆ ಪೊಲೀಸರೆ ರಾತ್ರೋರಾತ್ರಿ ಸುಟ್ಟು&nbsp; ಹಾಕುತ್ತಾರೆ. ಇದರ ವರದಿಗೆ ಹೋದ ಪತ್ರಕರ್ತರನ್ನು ಊರ ಒಳಗೆ ಬಿಡದಂತೆ ನಿರ್ಬಂಧಿಸಲಾಗುತ್ತದೆ.</p>



<p class="wp-block-paragraph">ಊರ್ಮಿ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಲು ಹೊರಟ ಕಾಂಗ್ರೆಸ್ ನ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ವಿಪಕ್ಷಗಳ&nbsp; ನಾಯಕರುಗಳನ್ನು ಬಂಧಿಸಿ ಹತ್ರಾಸ್ ಗೆ ಹೋಗದಂತೆ ತಡೆಯಲಾಗುತ್ತದೆ.&nbsp; ದೆಹಲಿಯ ಪತ್ರಕರ್ತ ಕೇರಳ ಮೂಲದ ಸಿದ್ದಿಕಿ ಕಪ್ಪನ್ ನನ್ನು ಬಂಧಿಸಿ ದೇಶದ್ರೋಹದ ಕೇಸು ಹಾಕಿ ವರ್ಷಗಟ್ಟಲೆ ಜೈಲಿನಲ್ಲಿಡಲಾಗುತ್ತದೆ.</p>



<p class="wp-block-paragraph">ಊರ್ಮಿಯ ಸಾವಿನ ಕ್ರೌರ್ಯಕ್ಕಿಂತ ಭೀಕರವಾದದ್ದು ಎಂದರೆ ಯೋಗಿ ಆದಿತ್ಯನಾಥ್ ಅಡಳಿತದಲ್ಲಿ ಊರ್ಮಿ ಪ್ರಕರಣದ ಆರೋಪಿಗಳ ಪರವಾಗಿ ಬಲಾಢ್ಯ ಠಾಕೂರ್ ಸಮುದಾಯ ಪ್ರತಿಭಟನೆ ನಡೆಸಿದ್ದು ಈ ದೇಶದಲ್ಲಿ ಜಾತಿವ್ಯವಸ್ಥೆ ಎಷ್ಟೊಂದು&nbsp; ಪ್ರಜ್ಞಾಪೂರ್ವಕ ದರ್ಪವನ್ನು ಮೆರೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿತ್ತು.&nbsp; ಕರ್ಣಸೇನಾ, ರಾಷ್ಟ್ರೀಯ ಸ್ವರ್ಣ ಪರಿಷದ್ ಹೆಸರಿನಲ್ಲಿ ಮೇಲ್ಜಾತಿಗಳು&nbsp; ಊರ್ಮಿಯ ಪ್ರಕರಣದ ಆರೋಪಿಗಳ ಪರವಾಗಿ ಬೀದಿಗಿಳಿದಿದ್ದವು. ಆರ್ ಎಸ್ ಎಸ್, ಬಜರಂಗದಳಗಳು ಬಹಿರಂಗವಾಗಿ ಬೆಂಬಲ ನೀಡುವ ಮೂಲಕ ಪರಂಪರಾಗತ ನಿರ್ಲಜ್ಜ ಧೋರಣೆಯನ್ನು ಪ್ರದರ್ಶಿಸಿದವು. ಇದರ ಹಿಂದೆ ಉತ್ತರ ಪ್ರದೇಶದ ಸರ್ಕಾರ ಬೆಂಬಲವಾಗಿ ನಿಂತದ್ದು ಬಹಿರಂಗ ರಹಸ್ಯ!. ಇಡಿ ವ್ಯವಸ್ಥೆಯೇ ಬಲಾಢ್ಯರ ರಕ್ಷಣೆಗೆ ನಿಂತಾಗ&nbsp; ಅಲಹಾಬಾದ್ ನ್ಯಾಯಾಲಯ ಊರ್ಮಿ ಪ್ರಕರಣವನ್ನು ಸಿಬಿಐಗೆ ವಹಿಸಿದ್ದು ಒಂದು ಭರವಸೆಯಾಗಿ ಕಂಡಿತೆನ್ನಬಹುದು.&nbsp; ಯೋಗಿ ಸರ್ಕಾರಕ್ಕೆ ಹಿನ್ನಡೆಯಾಗಿ ಮುಖ ಉಳಿಸಿಕೊಳ್ಳಲು ಹತ್ರಾಸ್ ನ ಎಸ್ಪಿಯನ್ನು ಅಮಾನತು ಗೊಳಿಸುವ ಪ್ರಹಸನವೂ ನಡೆದು ಹೋಯಿತು.&nbsp; ಸಿಬಿಐ ತನಿಖೆಯಲ್ಲಿ ಊರ್ಮಿ ಮೇಲೆ ಅತ್ಯಾಚಾರ ಮತ್ತು ಹಲ್ಲೆ ನಡೆದಿರುವುದನ್ನು ತನ್ನ ಚಾರ್ಜ್‌ ಶೀಟ್ ನಲ್ಲಿ ವಿವರವಾಗಿ&nbsp; ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಹೀಗಿದ್ದೂ ರೇಪ್, ಕೊಲೆ ಮತ್ತು ಅಟ್ರಾಸಿಟಿ ಕೇಸುಗಳಡಿಯಲ್ಲಿ ಎರಡೂವರೆ ವರ್ಷಗಳ ಕಾಲ ನಡೆದ ಈ ಪ್ರಕರಣದ ವಿಚಾರಣೆಯಲ್ಲಿ ಕೊನೆಗೂ ಊರ್ಮಿಗೆ ನ್ಯಾಯ ದಕ್ಕಲಿಲ್ಲ.</p>



<p class="wp-block-paragraph">ಹತ್ರಾಸ್‍ನ ವಿಶೇಷ ನ್ಯಾಯಾಲಯ&nbsp; ಈ ಪ್ರಕರಣದ ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸಿದ್ದರೆ, ಓರ್ವನಿಗೆ ಮಾತ್ರ ಇಲ್ಲದ ಕಾರಣಕ್ಕೆ ಶಿಕ್ಷೆ ವಿಧಿಸಿದೆ. ಊರ್ಮಿಗೆ ಈ ಹಂತದಲ್ಲಿ ನ್ಯಾಯ ಸಿಕ್ಕಿಲ್ಲ. ಒಂದು ತೀರ್ಪು ಪ್ರಕಟವಾಗಿದೆ ಅಷ್ಟೆ.&nbsp; ಪ್ರಾಸಿಕ್ಯೂಶನ್, ಸಿಬಿಐ ತನಿಖೆಯ ಅರೋಪ ಪಟ್ಟಿಯನ್ನು ಸಮರ್ಥವಾಗಿ ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಎಡವಿರುವುದು ಸ್ಪಷ್ಟವಾಗಿದೆ ಎಂದಷ್ಟೆ ಈ ಸಂದರ್ಭದಲ್ಲಿ ಹೇಳಬಹುದು.</p>



<p class="wp-block-paragraph">ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯ, ಅತ್ಯಾಚಾರ, ಹತ್ಯೆ ಪ್ರಕರಣಗಳಲ್ಲಿ ಆರೋಪ‌ ಸಾಬೀತಾಗಿ ಶಿಕ್ಷೆಗೆ ಗುರಿಯಾಗುವ ಪ್ರಕರಣಗಳ ಸಂಖ್ಯೆ ಕೇವಲ ಶೇ. 15.4 ರಷ್ಟು ಮಾತ್ರ. ಉಳಿದ ಶೇ. 84.6 ರಷ್ಟು ಪ್ರಕರಣಗಳಲ್ಲಿ ಅಪರಾಧಿಗಳು ತಪ್ಪಿಸಿ ಕೊಳ್ಳುತ್ತಾರೆ.&nbsp; ಈ ದೇಶದಲ್ಲಿ ಪ್ರತಿ ಆರು ನಿಮಿಷಕ್ಕೆ ಓರ್ವ ದಲಿತ ಹೆಣ್ಣುಮಗಳ ಮೇಲೆ ಅತ್ಯಾಚಾರ ಅಥವಾ ಹತ್ಯೆ ನಡೆಯುತ್ತದೆ. ಎಲ್ಲಾ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗುವ ಹಂತದಲ್ಲೆ ಅವುಗಳನ್ನು ಸಮಾಧಿ ಗೊಳಿಸಲಾಗುತ್ತದೆ.&nbsp;</p>



<p class="wp-block-paragraph">ಊರ್ಮಿ ಪ್ರಕರಣದ&nbsp; ಹಿನ್ನಡೆಯನ್ನು&nbsp; ಕೇವಲ ನ್ಯಾಯದಾನದ ಪ್ರಕ್ರಿಯೆಗೆ ಸೀಮಿತಗೊಳಿಸಿ ನೋಡುವಂತಿಲ್ಲ. ಸಾಮಾಜಿಕವಾಗಿ ಇಂತಹ ತೀರ್ಪುಗಳಿಂದ ಉತ್ತೇಜಿತವಾಗಬಹುದಾದ ಜಾತಿ ಆಧಾರಿತ ಕ್ರೌರ್ಯಗಳು, ಅವುಗಳನ್ನು ಮುಚ್ಚಿ ಹಾಕಲು ಮುಂದಾಗುವ&nbsp; ಪ್ರಭುತ್ವದ ದ್ರೋಹಗಳು, ಮತ್ತು ಬೆಂಬಲಿಸುವ ಆರ್ ಎಸ್ ಎಸ್ ಸೇರಿದಂತೆ ಜಾತಿ ಸಂಘಟನೆಗಳ&nbsp; ಸಂವೇದನಾ ರಹಿತ ಧೋರಣೆಗಳ ಬಗ್ಗೆ ಆತಂಕ ಪಡಬೇಕಾಗುತ್ತದೆ.&nbsp; ಈ ದೇಶದಲ್ಲಿ ದಲಿತರು, ದಮನಿತರನ್ನು ಸಲೀಸಾಗಿ ಕೊಂದು ದಕ್ಕಿಸಿಕೊಂಡು ಬಿಡಬಹುದು ಎಂಬುದಕ್ಕೆ ಅನೇಕ ಉದಾಹರಣೆಗಳು ಸಿಗುತ್ತವೆ.&nbsp; ದಲಿತರನ್ನು ಕೊಂದು ದಕ್ಕಿಸಿಕೊಳ್ಳಬಹುದಾದ ‘ವ್ಯವಸ್ಥೆ’ ನೆಲೆಗೊಳ್ಳುತ್ತಲೆ ಇದೆ. ಅವುಗಳ ಸಾಲಿಗೆ ಹತ್ರಾಸ್‍ನ&nbsp; ದಲಿತ ಊರ್ಮಿಯ ಪ್ರಕರಣವೂ ಒಂದು ಎನ್ನಬಹುದು. ಜಾಗತಿಕವಾಗಿ ಭಾರತ ವಿಶ್ವಗುರುವೆಂಬ ಭ್ರಮೆಗೆ ದೂಡುವ&nbsp; ಹುಸಿ ರಾಜಕಾರಣದೊಳಗೆ ಈ ದೇಶದ ದಲಿತರು ದಮನಿತರ ಅತ್ಯಾಚಾರ, ಹತ್ಯೆಗಳು,&nbsp; ಕಣ್ಣೀರು, ಅಕ್ರಂದನವನ್ನು&nbsp; ಭಾರತಮಾತೆಯ ಕಿರೀಟ ಕಲಶದಂತೆ&nbsp;&nbsp; ವಿಜೃಂಭಿಸಲಾಗುತ್ತಿದೆ!&nbsp;&nbsp;&nbsp;&nbsp;&nbsp;&nbsp; &nbsp;</p>



<p class="wp-block-paragraph"><strong>ಎನ್.ರವಿಕುಮಾರ್</strong></p>



<figure class="wp-block-gallery has-nested-images columns-default is-cropped wp-block-gallery-8 is-layout-flex wp-block-gallery-is-layout-flex"></figure>



<p class="wp-block-paragraph">ಪತ್ರಕರ್ತರು</p>
]]></content:encoded>
					
		
		
			</item>
		<item>
		<title>ಕೊಂದು ಬದುಕುಳಿದವರುಂಟೇ?!</title>
		<link>https://peepalmedia.com/killed-and-survived/</link>
		
		<dc:creator><![CDATA[Ravi Kumar N]]></dc:creator>
		<pubDate>Fri, 17 Feb 2023 07:15:50 +0000</pubDate>
				<category><![CDATA[ವಿಶೇಷ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=19813</guid>

					<description><![CDATA[“ಟಿಪ್ಪುಸುಲ್ತಾನನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯನನ್ನು ಹೊಡೆದುಹಾಕಬೇಕು” ಎಂಬ ಸಚಿವ ಅಶ್ವಥ್‌ ನಾರಾಯಣ ಅವರ ಹೇಳಿಕೆ ಮುಂದಿನ ರಕ್ತಸಿಕ್ತ ಚುನಾವಣೆಗೆ ಮುನ್ನುಡಿ ಬರೆದಂತಿದೆ. ಆಡಳಿತಾರೂಢ ಪಕ್ಷ ತನ್ನ ಸಾಧನೆಗಳ ಮೂಲಕ ಜನರ ಮುಂದೆ ಮತಯಾಚನೆ ಮಾಡಲಾಗದೆ&#160; ಸ್ವಯಂ ಸಾರ್ವಕರ್ ಗಳನ್ನು,&#160;ಗೋಡ್ಸೆಗಳನ್ನು ಮರು ಸೃಷ್ಟಿಸ ಹೊರಟಿದೆ. ಕೊಂದು ಬದುಕುಳಿದವರುಂಟೇ? ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ ಎನ್ನುತ್ತಾರೆ ಪತ್ರಕರ್ತ ಎನ್‌ ರವಿಕುಮಾರ್. ನಮ್ಮ ಮಾಧ್ಯಮಗಳು ಅದರಲ್ಲೂ ನ್ಯೂಸ್ ಚಾನಲ್ ಗಳು ಪ್ರಜಾಪ್ರಭುತ್ವ ದ ಹಬ್ಬವೆಂದೆ ಕರೆಯಬಹುದಾದ ಚುನಾವಣೆಗಳನ್ನು ಯುದ್ಧ ವೆಂದೂ, ಮತಕ್ಷೇತ್ರಗಳನ್ನು &#160;ರಣರಂಗ ವೆಂದೂ, [&#8230;]]]></description>
										<content:encoded><![CDATA[
<p class="has-text-align-center wp-block-paragraph"><strong>“</strong><strong>ಟಿಪ್ಪುಸುಲ್ತಾನನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯನನ್ನು ಹೊಡೆದುಹಾಕಬೇಕು” ಎಂಬ ಸಚಿವ ಅಶ್ವಥ್‌ ನಾರಾಯಣ ಅವರ ಹೇಳಿಕೆ ಮುಂದಿನ ರಕ್ತಸಿಕ್ತ ಚುನಾವಣೆಗೆ ಮುನ್ನುಡಿ ಬರೆದಂತಿದೆ. ಆಡಳಿತಾರೂಢ ಪಕ್ಷ ತನ್ನ ಸಾಧನೆಗಳ ಮೂಲಕ ಜನರ ಮುಂದೆ ಮತಯಾಚನೆ ಮಾಡಲಾಗದೆ</strong><strong>&nbsp; </strong><strong>ಸ್ವಯಂ ಸಾರ್ವಕರ್ ಗಳನ್ನು,</strong><strong>&nbsp;</strong><strong>ಗೋಡ್ಸೆಗಳನ್ನು ಮರು ಸೃಷ್ಟಿಸ ಹೊರಟಿದೆ. ಕೊಂದು ಬದುಕುಳಿದವರುಂಟೇ? ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ ಎನ್ನುತ್ತಾರೆ ಪತ್ರಕರ್ತ ಎನ್‌ ರವಿಕುಮಾರ್.</strong></p>



<p class="wp-block-paragraph">ನಮ್ಮ ಮಾಧ್ಯಮಗಳು ಅದರಲ್ಲೂ ನ್ಯೂಸ್ ಚಾನಲ್ ಗಳು ಪ್ರಜಾಪ್ರಭುತ್ವ ದ ಹಬ್ಬವೆಂದೆ ಕರೆಯಬಹುದಾದ ಚುನಾವಣೆಗಳನ್ನು <strong>ಯುದ್ಧ</strong> ವೆಂದೂ, ಮತಕ್ಷೇತ್ರಗಳನ್ನು &nbsp;<strong>ರಣರಂಗ</strong> ವೆಂದೂ, ಹುರಿಯಾಳು ನಾಯಕರುಗಳಿಗೆ ಅತಿಮಾನುಷ ಶಕ್ತಿಗಳನ್ನು &nbsp; ಲೇಪಿಸಿ&nbsp;</p>



<p class="wp-block-paragraph">ಚಾಣಕ್ಯ , ಸಾಮ್ರಾಟ,&nbsp; ಯೋಧ, ರಣಧೀರ, ರಣವಿಕ್ರಮ, ಬಾಹುಬಲಿ, ರಣ ಬೇಟೆಗಾರ.. ವೀರಪರಾಕ್ರಮಿ&#8230;ಹೀಗೆ ನಾನಾ ರೋಚಕ ಪರಿಭಾಷೆಗಳಿಂದ ಕಟ್ಟಿಕೊಡುತ್ತಿವೆ.&nbsp;</p>



<p class="wp-block-paragraph">ಇವೆಲ್ಲವೂ ತಾಮಸ ಗುಣಗಳಡಗಿದ ಹಿಂಸೆಯು ಹೊಂದಿರಬಹುದಾದ ರೂಪಗಳೆ ಆಗಿರುತ್ತವೆ. ಮತ್ತು ಸಾಮಾನ್ಯರಾದವರೂ ಈ ವಿಶೇಷಣಗಳಿಂದ ಉದ್ದೀಪನಗೊಂಡು &#8216;ನಾಗವಲ್ಲಿ&#8217; ಪಾತ್ರದ ರೂಪದಂತೆ ಆಡಬಲ್ಲರು. ಯುದ್ಧದಾಹಿ ಶ್ರೀರಾಮನಂತೆಯೂ, ಲಂಕೆಸುಟ್ಟ ಹನುಮನಂತೆಯೂ&nbsp; ಮುಂದುವರೆದು&nbsp; <a>ಆಡಳಿತಾರೂಢ ಪಕ್ಷ ತನ್ನ ಸಾಧನೆಗಳ ಮೂಲಕ ಜನರ ಮುಂದೆ ಮತಯಾಚನೆ ಮಾಡಲಾಗದೆ</a>&nbsp;ಸ್ವಯಂ ಸಾರ್ವಕರ್ ಗಳನ್ನು,&nbsp; ಗೋಡ್ಸೆಗಳನ್ನು ಮರು ಸೃಷ್ಟಿಸ ಹೊರಟಿದ್ದಾರೆ. ಈ ಅತಿರೇಕಗಳನ್ನು ನಿಯಂತ್ರಿಸಬೇಕಾದ ಮಾಧ್ಯಮಗಳು ಹೊಣೆಗಾರಿಕೆ ಮೆರೆತು ಅವುಗಳನ್ನು&nbsp; ವಿಜೃಂಭಿಸುವ ಮೂಲಕ ಪ್ರೋತ್ಸಾಹಿಸುತ್ತಿವೆ ಎನ್ನಬಹುದು.&nbsp;</p>



<p class="wp-block-paragraph">ಅಹಿಂಸೆ,ಸತ್ಯವನ್ನೆ&nbsp; ಬದುಕಾಗಿಸಿದ&nbsp;ಗಾಂಧಿಯ ಸ್ಮೃತಿ ಮಾಧ್ಯಮಗಳಿಗೆ ಅಪಥ್ಯವಾಗಿರುವುದರಿಂದ ಯಾರನ್ನೂ ಗಾಂಧಿ ಪ್ರೇಣಿತಗೊಳಿಸಲಾಗುತ್ತಿಲ್ಲ. ಹಾಗೇಯೇ ಬುದ್ಧ &#8211; ಬಸವ ಪ್ರಭಾವವನ್ನೂ ಕೂಡ.&nbsp;&nbsp;</p>



<p class="wp-block-paragraph">ಕೆಡುಕು ಮತ್ತು ನಕಾರಾತ್ಮಕ ಪಾತ್ರಗಳು ಮನುಷ್ಯರನ್ನು ಬಹುಬೇಗ ಆವರಿಸಿಕೊಳ್ಳುತ್ತವೆ. ಅದರಲ್ಲೂ ನವಮಾಧ್ಯಮಗಳ ಈ ಕಾಲದಲ್ಲಿ ಈ ಪ್ರಭಾವ ಸಲೀಸಾಗಿ ಕೆಲಸ ಮಾಡುತ್ತಿದೆ.&nbsp;</p>



<p class="wp-block-paragraph">ಸಚಿವ ಡಾ.ಅಶ್ವತ್ಥ ನಾರಾಯಣ ಅವರು ಸ್ವಯಂ&nbsp; ಟಿಪ್ಪುವನ್ನು ಕೊಂದ&nbsp; ನಂಜೇಗೌಡ- ಉರಿಗೌಡ( ಕಲ್ಪಿತ. ಇತಿಹಾಸದಲ್ಲಿ ಇಲ್ಲದ ಪಾತ್ರಗಳು) ರುಗಳನ್ನೆ&nbsp; ಮೈದುಂಬಿಕೊಂಡು ಪ್ರಚೋದನಾತ್ಮಕ ಮಾತುಗಳನ್ನು ಆಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಹೊಡೆದಾಕಿ ಎಂಬ ಮಾತು&nbsp; &nbsp;ಅವರ ಬೌದ್ಧಿಕತೆಯ ಮಿತಿಯನ್ನೂ, ಅವಿವೇಕವನ್ನೂ ಜಗಜ್ಜಾಹೀರುಗೊಳಿಸಿದೆ. ಕಾನೂನು ಭಾಗದಿಂದ ಇದೊಂದು ಅಪರಾಧ ಕ್ರಿಯೆ ಎಂದಾದರೂ. ಸಾಂವಿಧಾನಿಕ ಸ್ಥಾನಮಾನದಲ್ಲಿರುವ ಅಶ್ವಥ್ ನಾರಾಯಣ ಅವರು ಸಂವಿಧಾನದ ಪ್ರಮಾಣಕ್ಕೆ ಬಗೆದ ದ್ರೋಹ ಎಂಬುದು ಮುಖ್ಯವಾಗುತ್ತದೆ.&nbsp;</p>



<p class="wp-block-paragraph">ʼಇನ್ನೊಬ್ಬರನ್ನು ಕೊಂದವರಾದರೂ ಉಳಿದರೆʼ ಎಂಬ ಕಾಲಸತ್ಯದ ಅರಿವಿಲ್ಲದೆ ಆಡುವ ಮಾತುಗಳು&nbsp; ಅಜ್ಞಾನಿಗಳಿಗಷ್ಟೆ ಸಾಧ್ಯ.</p>



<p class="wp-block-paragraph">ಆದರೆ&nbsp; ಅಶ್ವತ್ ನಾರಾಯಣ ಅವರನ್ನು ಟೀಕಿಸುವ ಭರದಲ್ಲಿ ಸಿದ್ದರಾಮಯ್ಯ ಅವರ ಅಭಿಮಾನಿಗಳು ಸಿದ್ದರಾಮಯ್ಯ ಅವರನ್ನು ಚಿತ್ರನಟ ದರ್ಶನ್ ಅವರಿಗೆ ರೂಪಾಂತರಿಸಿ ಕೈಗೆ ಮಚ್ಚುಕೊಟ್ಟು ನಿಲ್ಲಿಸಿದ್ದಾರೆ. ಇದು ಅಶ್ವಥ್ ನಾರಾಯಣ ರ ಮಾತಿನಷ್ಟೆ ಸಮನಾದದ್ದು.&nbsp;</p>



<p class="wp-block-paragraph">ಕಳೆದ ದಿನಗಳಲ್ಲಿ ದೇಶದ ರೈತರು ನಡೆಸಿದ ಚಳವಳಿ ಮತ್ತು&nbsp;ಇತ್ತೀಚೆಗೆ ರಾಹುಲ್ ಗಾಂಧಿ&nbsp; ಕೈಗೊಂಡ ಭಾರತ್ ಜೋಡೋ ಯಾತ್ರೆ ಹಿಂಸೆ- ದ್ವೇಷವನ್ನು ವಿರೋಧಿಸುವುದಕ್ಕೆ ಹೊಸ ಮಾದರಿಯನ್ನೆ ಕೊಟ್ಟಿದ್ದನ್ನು&nbsp; &nbsp;ಯಾರೂ ಮರೆಯುವಂತಿಲ್ಲ.</p>



<p class="wp-block-paragraph"><strong>ಹಿಂಸೆ ಎಂಬುದು ಕ್ರಿಯೆಯೇ ಆಗಿರಬೇಕಿಲ್ಲ. ಅದು ನಮ್ಮೊಳಗೆ ಚಲನೆ ಮತ್ತು ಯೋಚನೆ ರೂಪದಲ್ಲಿದ್ದರೂ ಅದು ಅಪಾಯಕಾರಿ.</strong>&nbsp; ಮನುಷ್ಯ ಮೂಲತಃ ಒಳ್ಳೆಯವನು/ ಳು. ಪ್ರೀತಿ, ಕರುಣೆ, ಕ್ಷಮೆ ‌ಎಲ್ಲವೂ ಜನ್ಮದಾತ ಗುಣಗಳೆ ಆಗಿರುತ್ತವೆ. ಮತ್ತು ಸಂಘಜೀವಿ ಕೂಡ. ಆದರೆ ನಮ್ಮ ಸಾಮಾಜಿಕ, ರಾಜಕೀಯ ವಾತಾವರಣಗಳು ಮನುಷ್ಯನೊಳಗೆ ಕೇಡು, ಹಿಂಸೆ, ದುರಾಸೆಗಳನ್ನು ತುಂಬುತ್ತಿವೆ. ಇವು ಹೊರಗಿನಿಂದ ಬಂದ ಗುಣಗಳು. ಇವುಗಳ ವಶವಾಗದೆ ತನ್ನ ಮೂಲ ಗುಣಗಳೊಂದಿಗೆ ಬದುಕುವುದೆ ನಮಗಿರುವ ಸವಾಲು.&nbsp;ಈ ಸವಾಲನ್ನು ಎದುರಿಸುವ ಶಕ್ತಿಯನ್ನು ಮತ್ತು ಬಿತ್ತುವ ಕರ್ತವ್ಯವನ್ನು ಮಾಧ್ಯಮಗಳು ಮಾಡಬೇಕಾಗುತ್ತವೆ.&nbsp;</p>



<p class="wp-block-paragraph">ಅಶೋಕ ಚಕ್ರವರ್ತಿಗೆ ಮನುಷ್ಯತ್ವದ ಮಹತ್ವ&nbsp; ಅರಿವಾಗಬೇಕಾದರೆ ಕಳಿಂಗದ ಘನಘೋರ ಯುದ್ಧ ನಡೆಯಬೇಕಾಯಿತು. ಗುಜರಾತ್ ನ ಮಾರಣಹೋಮದಿಂದ&nbsp; ಕಾರಣಕರ್ತರು&nbsp; ಮನುಷ್ಯತ್ವದ ಕಡೆಗೆ ಬದಲಾಗಿದ್ದೇ ಆದರೆ ಸಬ್ ಕಾ&nbsp; ಸಾಥ್ ಎಂಬ ಘೋಷಣೆಗೆ&nbsp; ಘನತೆಯ ಹೆಜ್ಜೆಗಳು&nbsp; ಮೂಡಬಲ್ಲವು&nbsp;</p>



<p class="wp-block-paragraph">&#8220;ಕೊಲ್ಲಬೇಡ ಮತ್ತು ಹತ್ಯೆಗೆ ನೀನು‌ ಕಾರಣನಾಗಬೇಡ&#8221;&nbsp; ಎಂಬ ಬುದ್ಧಗುರುವಿನ ಮಾತು ಎಲ್ಲಾ ಕಾಲಕ್ಕೂ ಎದೆಯ ಕೋಣೆಯ ಬೆಳಕಾಗಬೇಕಾದ, ಬೆಳಕಾಗಿಸಬೇಕಾದ&nbsp; ವಿವೇಕ.</p>



<p class="wp-block-paragraph"><strong>ಎ‌ನ್.ರವಿಕುಮಾರ್</strong></p>



<p class="wp-block-paragraph">ಪತ್ರಕರ್ತರು.</p>



<figure class="wp-block-table"><table><tbody><tr><td></td></tr></tbody></table></figure>
]]></content:encoded>
					
		
		
			</item>
		<item>
		<title>ಪ್ರಳಯಕ್ಕೆ ಮೊದಲು ಎಚ್ಚರಾಗುವ ಕಾಲವಿದು</title>
		<link>https://peepalmedia.com/jana-sahitya-sammelana-n-ravikumar/</link>
		
		<dc:creator><![CDATA[Ravi Kumar N]]></dc:creator>
		<pubDate>Fri, 06 Jan 2023 13:37:05 +0000</pubDate>
				<category><![CDATA[ಹೆಣ್ಣೋಟ]]></category>
		<guid isPermaLink="false">https://peepalmedia.com/?p=18937</guid>

					<description><![CDATA[ದೊಡ್ಡ ದೊಡ್ಡ ಕವಿಗಳು, ವಿದ್ವಾಂಸರು ಬರೆದ ಮಾತ್ರದಿಂದಲೇ ಕನ್ನಡ ಸಾಹಿತ್ಯ ಮೇರು ಕೀರ್ತಿಯನ್ನು ಗಳಿಸಿದ್ದಲ್ಲ. ಈ ಮಣ್ಣಿನ ಬಹುಜನರ ಸಾಹಿತ್ಯವೂ ತಾಯಿ ಬೇರು ಅನ್ನೋದನ್ನ ಮರೆಯುವಂತಿಲ್ಲ. ಇದನ್ನು&#160; ಸಮಕಾಲೀನವಾಗಿ ಉಳಿಸಿ ಕೊಳ್ಳಬೇಕಾಗಿದೆ.&#160;ಹೀಗೆ, ಜನಸಾಹಿತ್ಯವನ್ನು ಸಮಕಾಲೀನ ಗೊಳಿಸುವ ಹಾಗೂ ಎಲ್ಲರನ್ನೂ ಒಳಗೊಳ್ಳುವ&#160; ಅಗತ್ಯವನ್ನು ಪ್ರತಿಪಾದಿಸುವುದೇ ’ಜನಸಾಹಿತ್ಯ ಸಮ್ಮೇಳನ’ದ ಜೀವದ್ರವ್ಯ ಎನ್ನುತ್ತಾರೆ ಪತ್ರಕರ್ತ ಎನ್‌ ರವಿಕುಮಾರ್‌. &#160; ಪ್ರತಿನಾಯಕತ್ವ, ಪ್ರತಿಕಾವ್ಯ. ಪ್ರತಿ ಸಂಸ್ಕೃತಿ..ಇವುಗಳು ಹುಟ್ಟುವುದು ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ಬಂಡಾಯದ ಬಗೆ ಎಂಬುದು&#160; ಗೊತ್ತಿರುವ ಸಂಗತಿ.&#160; ಈ ಮಣ್ಣಿನೊಳಗೆ ಇಂತಹ [&#8230;]]]></description>
										<content:encoded><![CDATA[
<p class="wp-block-paragraph"><strong>ದೊಡ್ಡ ದೊಡ್ಡ ಕವಿಗಳು, ವಿದ್ವಾಂಸರು ಬರೆದ ಮಾತ್ರದಿಂದಲೇ ಕನ್ನಡ ಸಾಹಿತ್ಯ ಮೇರು ಕೀರ್ತಿಯನ್ನು ಗಳಿಸಿದ್ದಲ್ಲ. ಈ ಮಣ್ಣಿನ ಬಹುಜನರ ಸಾಹಿತ್ಯವೂ ತಾಯಿ ಬೇರು ಅನ್ನೋದನ್ನ ಮರೆಯುವಂತಿಲ್ಲ. ಇದನ್ನು</strong><strong>&nbsp;</strong><strong> ಸಮಕಾಲೀನವಾಗಿ ಉಳಿಸಿ ಕೊಳ್ಳಬೇಕಾಗಿದೆ.</strong><strong>&nbsp;</strong><strong>ಹೀಗೆ, ಜನಸಾಹಿತ್ಯವನ್ನು ಸಮಕಾಲೀನ ಗೊಳಿಸುವ ಹಾಗೂ ಎಲ್ಲರನ್ನೂ ಒಳಗೊಳ್ಳುವ</strong><strong>&nbsp;</strong><strong> ಅಗತ್ಯವನ್ನು ಪ್ರತಿಪಾದಿಸುವುದೇ ’ಜನಸಾಹಿತ್ಯ ಸಮ್ಮೇಳನ’ದ ಜೀವದ್ರವ್ಯ ಎನ್ನುತ್ತಾರೆ ಪತ್ರಕರ್ತ ಎನ್‌ ರವಿಕುಮಾರ್‌. &nbsp;</strong></p>



<p class="wp-block-paragraph">ಪ್ರತಿನಾಯಕತ್ವ, ಪ್ರತಿಕಾವ್ಯ. ಪ್ರತಿ ಸಂಸ್ಕೃತಿ..ಇವುಗಳು ಹುಟ್ಟುವುದು ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ಬಂಡಾಯದ ಬಗೆ ಎಂಬುದು&nbsp; ಗೊತ್ತಿರುವ ಸಂಗತಿ.&nbsp; ಈ ಮಣ್ಣಿನೊಳಗೆ ಇಂತಹ ’ಪ್ರತಿತನ’ಗಳಿಗೆ ಅಥವಾ ’ಪರ್ಯಾಯ’ ಗಳಿಗೆ ಬಹುದೊಡ್ಡ ಪರಂಪರೆಯಿದೆ. ಇದರ ಮುಂದುವರೆದ&nbsp; ಕಾಲದ ಕರೆಯಾಗಿ ಇದೀಗ&nbsp; &#8220;ಜನಸಾಹಿತ್ಯ ಸಮ್ಮೇಳನ&#8221; ನಡೆಯುತ್ತಿದೆ.</p>



<p class="wp-block-paragraph">ಈ ಜನಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ನಡೆಯುತ್ತಿರುವ ೮೬ ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿ ಸಮ್ಮೇಳನವಾಗಿಯೂ, ಪ್ರತಿರೋಧವಾಗಿಯೂ ನಡೆಯುತ್ತಿದೆ ಎಂಬುದು ಮುಖ್ಯವಾದ ಸಂಗತಿ. ಈ ಪ್ರತಿರೋಧವನ್ನು ಉಪೇಕ್ಷಿಸಲಾಗದು.&nbsp; &nbsp;ಯಾವುದೇ ಒಂದು ವರ್ಗ&nbsp; &nbsp;ಸಾಹಿತ್ಯ, ಸಂಸ್ಕೃತಿಯ ಹೆಸರಿನಲ್ಲಿ&nbsp; ಯಜಮಾನಿಕೆ ಧೋರಣೆಗಳಿಂದ ಪ್ರಭುತ್ವ ಸಾಧಿಸಲು ಹೊರಟಾಗ ಬಹುಜನರ ಸಾಹಿತ್ಯ ಬಡವಾಗಿಬಿಡುತ್ತದೆ ಅಥವಾ ಅದು ಅಂಚಿಗೆ&nbsp; &nbsp;ತಳ್ಳಲ್ಪಡುತ್ತದೆ. ಈ&nbsp; ಅಪಾಯವನ್ನು ಗ್ರಹಿಸಿ ಇಂತಹ ಸಂದರ್ಭದಲ್ಲಿ ಬಹುಜನರು ಎಚ್ಚೆತ್ತುಕೊಳ್ಳಬೇಕು. ಹಾಗೆ ಎಚ್ಚರಗೊಳ್ಳುವ ಪ್ರಕ್ರಿಯೆಯೇ ಪ್ರತಿರೋಧವಾಗಿಯೂ ಪ್ರತಿತನಗಳಾಗಿಯೂ ಹುಟ್ಟುತ್ತವೆ.</p>



<p class="wp-block-paragraph">ಜಾತಿ, ಧರ್ಮ ಲಿಂಗ ಬೇಧವಿಲ್ಲದೆ ಎಲ್ಲರನ್ನೂ ಒಳಗೊಂಡು ಶ್ರೀಮಂತ ಗೊಳ್ಳಬೇಕಾಗಿದ್ದ ೮೬ ನೇ ಕನ್ನಡ ಸಾಹಿತ್ಯ ಸಮ್ಮೇಳನವು ಕ್ಷುಲ್ಲಕ ರಾಜಕೀಯ, ಸೈದ್ಧಾಂತಿಕ ಕಿಡಿಗೇಡಿತನಕ್ಕೆ ಈಡಾಗಿರುವುದು&nbsp;ಕನ್ನಡ&nbsp;ನಾಡಿನ ಸಾಂಸ್ಕೃತಿಕ ಚೈತನ್ಯಕ್ಕೆ ಒದಗಿದ ದುರ್ಗತಿ.&nbsp; ಧರ್ಮ, ಜಾತಿ, ಲಿಂಗ ತಾರತಮ್ಯವೆ&nbsp; ಎದ್ದು ಕಾಣುತ್ತಿರುವ ಈ ಸಾಹಿತ್ಯ ಸಮ್ಮೇಳನ ಒಡ್ಡೋಲಗದಂತೆ ಕಂಡ ಕಾರಣವೇ ಅದಕ್ಕೆ ಪ್ರತಿಯಾಗಿ ಜನಸಾಹಿತ್ಯ ಸಮ್ಮೇಳನ ಅನಿವಾರ್ಯವಾಗಿದೆ. ಇದು ತಾತ್ತ್ವಿಕ ಪ್ರತಿರೋಧದ ಸಂಕೇತವೂ ಕೂಡ.</p>



<p class="wp-block-paragraph">ಕನ್ನಡ ಸಾಹಿತ್ಯ ಪರಿಷತ್ತಿನ ನ ಅಧ್ಯಕ್ಷರ ಚುನಾವಣೆಯೇ ಒಂದು ರಾಜಕೀಯ ಪಕ್ಷ ಮತ್ತು ಮತೀಯ ವಿಚಾರಧಾರೆ ಆಧಾರಿತ ಸಂಘಟನೆಯ&nbsp;ಬೆಂಬಲದಲ್ಲಿ ನಡೆದು&nbsp; ಹೋದ ದಿನವೇ ಕನ್ನಡಕ್ಕೂ ಧರ್ಮ, ಜಾತಿಯ ಗೆದ್ದಲು ಹಿಡಿದಿರುವುದು ನಿಚ್ಚಳವಾಗಿತ್ತು.&nbsp; ಪ್ರಭುತ್ವದ ಮರ್ಜಿಗೆ ಕನ್ನಡ ಸಾಹಿತ್ಯ ಪರಿಷತ್ತನ್ನು ಮುಡಿಪಾಗಿಡುವ ಮೂಲಕ ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ ಅವರು&nbsp; ತಮ್ಮ ಗೆಲುವಿಗೆ ಕೊಡುಗೆ ಕೊಟ್ಟವರ ಋಣ ಸಮರ್ಪಣೆಗೆ ನಿಂತಿರುವುದೇ&nbsp; ಸಾಹಿತ್ಯ ಸಮ್ಮೇಳನದ ಅಧ್ವಾನಗಳಿಗೆ ಕಾರಣ ಎಂದರೆ ತಪ್ಪೇನು?&nbsp; ಕನ್ನಡದ ಹೆಸರಿನಲ್ಲಿ&nbsp; ರಾಜಕೀಯ, ಮತೀಯ ಹಿತಾಸಕ್ತಿಯ ಕನ್ನಡ ಸಾಹಿತ್ಯ ಪರಿಷತ್ತಿನ ಈ ನಡೆ ಕನ್ನಡ ಸಾಹಿತ್ಯ ಸಮ್ಮೇಳನದ ಮೂಲ ಆಶಯಗಳ ಪರಂಪರೆಗೆ ಕಪ್ಪು ಚುಕ್ಕೆಯಾದಂತಾಗಿದೆ.&nbsp;</p>



<p class="wp-block-paragraph">ಸಾಹಿತ್ಯ ಸಮ್ಮೇಳನಗಳು ಕನ್ನಡ ಭಾಷೆ. ಸಂಸ್ಕೃತಿ ಮತ್ತು ಬದುಕಿನ ಜೀವಂತಿಕೆಯ ಪರಿಧಿಯನ್ನು ವಿಸ್ತರಿಸುವುದೇ ಆಗಿರುತ್ತದೆ.&nbsp; ಅದು ಎಲ್ಲರನ್ನೂ ಒಳಗೊಂಡಾಗ ಮಾತ್ರ ಸಾಧ್ಯ.&nbsp; ಜೀವಪರ, ಜನಪರವಿಲ್ಲದ ಯಾವುದೂ ಸಾಹಿತ್ಯವೆನಿಸಿಕೊಳ್ಳಲಾರದು. ದೊಡ್ಡ ದೊಡ್ಡ ಕವಿಗಳು, ವಿದ್ವಾಂಸರು ಬರೆದ ಮಾತ್ರದಿಂದಲೇ ಕನ್ನಡ ಸಾಹಿತ್ಯ ಮೇರು ಕೀರ್ತಿಯನ್ನು ಗಳಿಸಿದ್ದಲ್ಲ. ಈ ಮಣ್ಣಿನ ಬಹುಜನರ ಸಾಹಿತ್ಯವೂ ತಾಯಿ ಬೇರು ಅನ್ನೋದನ್ನ ಮರೆಯುವಂತಿಲ್ಲ. ಇದನ್ನು&nbsp; ಸಮಕಾಲೀನವಾಗಿ ಉಳಿಸಿ ಕೊಳ್ಳಬೇಕಾಗಿದೆ.&nbsp; ಹೀಗೆ ಜನಸಾಹಿತ್ಯವನ್ನು ಸಮಕಾಲೀನ ಗೊಳಿಸುವ ಹಾಗೂ ಎಲ್ಲರನ್ನೂ ಒಳಗೊಳ್ಳುವ&nbsp; ಅಗತ್ಯವನ್ನು ಪ್ರತಿಪಾದಿಸುವುದೇ ’ಜನಸಾಹಿತ್ಯ ಸಮ್ಮೇಳನ’ದ ಜೀವದ್ರವ್ಯ.</p>



<p class="wp-block-paragraph">ದುರಾದೃಷ್ಟವೆಂದರೆ ಹಾವೇರಿಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ದೊಡ್ಡರಂಗೇಗೌಡರು ಇವತ್ತಿನ ಸಂದರ್ಶನದಲ್ಲಿ &#8220;ಜನಸಾಹಿತ್ಯ ಸಮ್ಮೇಳನ ಎನ್ನುವುದಕ್ಕಿಂತ&nbsp; ಅದು ಒಂದು ಪಂಥದ ಸಮ್ಮೇಳನ. ಹಾವೇರಿಯ ಸಾಹಿತ್ಯ ಸಮ್ಮೇಳನ ಆ ಪಂಥಕ್ಕೆ ಆಗುತ್ತಿಲ್ಲ. ಅದಕ್ಕೆ&nbsp; ನಾವು ಬೇರೆಪಂಥ-ವರ್ಗದವರು&#8221;&nbsp; ಎಂದು ಹೇಳುವ ಮೂಲಕ ಸಾಹಿತ್ಯದ ಘನತೆಯನ್ನು ಪಂಥ-ವರ್ಗಗಳ ಗೂಟಕ್ಕೆ ಕಟ್ಟುವ ತಮ್ಮ ಬೌದ್ಧಿಕ ದಿವಾಳಿತನವನ್ನು ಪ್ರದರ್ಶಿಸಿದ್ದಾರೆ.</p>



<p class="wp-block-paragraph">ದೊಡ್ಡರಂಗೇಗೌಡರು ಈ ಹಿಂದಿನ ತಮ್ಮ ಸಂದರ್ಶನವೊಂದರಲ್ಲೇ ನನಗೆ ನರೇಂದ್ರ ಮೋದಿ ಮತ್ತು ಮಹಾತ್ಮ ಗಾಂಧಿ ಇಬ್ಬರು ರೋಲ್ ಮಾಡೆಲ್ ಗಳೆಂದು ಹೇಳುವ ಮೂಲಕ ತಮ್ಮೊಳಗಿನ ವೈರುಧ್ಯ ವಿಕಲ್ಪವನ್ನು ಸಾರಿಕೊಂಡಿದ್ದರು. ಇಂತಹವರಿಗೆ&nbsp; ಜನಸಾಹಿತ್ಯ ಸಮ್ಮೇಳನ ಒಂದು ಪಂಥದ ಸಮ್ಮೇಳನವಾಗಿ ಕಂಡಿದ್ದರಲ್ಲಿ ಯಾವುದೇ ದೋಷವಿಲ್ಲ .</p>



<p class="wp-block-paragraph">&nbsp;&#8220;ಜನರನ್ನು ಕೊಂದ ಖಡ್ಗಗಳ ಮೇಲೆ ಶಾಂತಿ- ಮಂತ್ರಗಳನ್ನೇಕೆ&nbsp; ಕೊರೆದಿದ್ದಾರೆ&nbsp;</p>



<p class="wp-block-paragraph">ಅಸತ್ಯದ ಕತ್ತಲೇಕೆ ಮನೆ ಮಾಡಿದೆ&nbsp;</p>



<p class="wp-block-paragraph">ಸತ್ಯದ ಬೆಳಕಿನಲ್ಲಿ</p>



<p class="wp-block-paragraph">ಸೂರ್ಯನೆ ಹೇಳು ಹೆಪ್ಪುಗಟ್ಟಿದ ಮನಸ್ಸುಗಳನ್ನು ಕರಗಿಸುವುದೆಂತು</p>



<p class="wp-block-paragraph">ಮೋಡಗಳೇ ತಿಳಿಸಿ ಮಳೆಯಲ್ಲಿ ಸೇರಿಲ್ಲವೆ ಬಡವರ ಕಣ್ಣೀರು</p>



<p class="wp-block-paragraph">ಭವಿಷ್ಯವೇ ತಾಳು ಎಲ್ಲೆಡೆ ಆವರಿಸಿದೆ ನೋವು</p>



<p class="wp-block-paragraph">ಪ್ರಳಯಕ್ಕೆ ಮೊದಲು ಎಚ್ಚರಾಗುತ್ತಾರೆ ಅವರು.</p>



<p class="wp-block-paragraph">ಎಂದು ರಂಜಾನ್ ದರ್ಗಾ ಬರೆಯುತ್ತಾರೆ.</p>



<p class="wp-block-paragraph">ಈಗ&nbsp; ಪ್ರಳಯಕ್ಕೆ ಮೊದಲು ಎಲ್ಲರೂ ಎಚ್ಚರಗೊಳ್ಳುವ ಕಾಲ.&nbsp;&nbsp;</p>



<p class="wp-block-paragraph"><strong>ಎನ್.ರವಿಕುಮಾರ್</strong></p>



<p class="wp-block-paragraph">ಪತ್ರಕರ್ತರು<strong></strong></p>
]]></content:encoded>
					
		
		
			</item>
		<item>
		<title>ತೊಟ್ಟು ಪ್ರೇಮವ ಕುಡಿಸಿ</title>
		<link>https://peepalmedia.com/tottu-premava-kudisi-by-n-ravikumar/</link>
		
		<dc:creator><![CDATA[Ravi Kumar N]]></dc:creator>
		<pubDate>Sun, 27 Nov 2022 07:19:57 +0000</pubDate>
				<category><![CDATA[ಕಲೆ – ಸಾಹಿತ್ಯ]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[n ravikumar]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[poem]]></category>
		<category><![CDATA[poetry]]></category>
		<category><![CDATA[telex]]></category>
		<guid isPermaLink="false">https://peepalmedia.com/?p=16724</guid>

					<description><![CDATA[ಸಾಮಾಜಿಕ ತಲ್ಲಣಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ಟೆಲೆಕ್ಸ್‌ ರವಿಕುಮಾರ್‌ ಎಂದೇ ಖ್ಯಾತರಾಗಿರುವ ರವಿಕುಮಾರ್‌ ಎನ್‌ ಅವರ ಒಂದು ಭಾವ ತೀವ್ರ ಕವಿತೆ ನಿಮ್ಮ ಭಾನುವಾರದ ಓದಿಗಾಗಿ ನೋಡು; ನೀನುಒಂದು ತೊಟ್ಟು ಪ್ರೇಮವನ್ನುಕುಡಿಸಿದ್ದರಿಂದಲೆ ಈಗ ನನಗೆರೆಕ್ಕೆಗಳು ಮೂಡಿವೆ ಗಾಳಿಯಲ್ಲಿ ತೇಲುವುದುನಿದ್ದೆಯಲ್ಲಿ ಮಾತಾಡುವುದುಕನ್ನಡಿಯೆ ನಾಚುವಂತೆ ನುಲಿಯುವುದು ಅಷ್ಟೇ…ಅಲ್ಲ; ಬೀದಿಯ ನಿರ್ಗತಿಕರನ್ನು ಕಂಡಾಗಕಣ್ಣೀರಿನಲಿ ‌ಮುಳುಗುವುದುಗೋಪುರದಲ್ಲೋ ಮಸೀದಿಯ ಬುರುಜು…ಸಿಲುಬೆಯಲ್ಲೋರಕ್ತ ಜಿನುಗುವುದಾ ಕಂಡಾಗ ಈ ರೆಕ್ಕೆಗಳು ಸುಟ್ಟಂತೆ ವಿಲ ವಿಲನೆ ಒದ್ದಾಡುತ್ತೇನೆ..ಏನೆಲ್ಲಾ ಆಗುತ್ತಿದೆಯೋ ಅದಕ್ಕೆಲ್ಲಾನೀನೇ ಕಾರಣ ಅಲ್ಲೆಲ್ಲೋ..ಪ್ರೇಮಿಗಳನ್ನು ಕೊಂದರಂತೆಅವರಿಗಿದ್ದ ರೆಕ್ಕೆಗಳ ಕತ್ತರಿಸಿದೇವರ ತುರುಬಿಗೆ ಶೃಂಗರಿಸಿಮೆರವಣಿಗೆ ಕರೆದೊಯ್ದಿದ್ದಾರೆಮರ್ಯಾದಸ್ತರು [&#8230;]]]></description>
										<content:encoded><![CDATA[
<h2 class="has-text-align-center has-very-light-gray-to-cyan-bluish-gray-gradient-background has-background wp-block-heading" style="font-style:normal;font-weight:700"><strong>ಸಾಮಾಜಿಕ ತಲ್ಲಣಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ಟೆಲೆಕ್ಸ್‌ ರವಿಕುಮಾರ್‌ ಎಂದೇ ಖ್ಯಾತರಾಗಿರುವ ರವಿಕುಮಾರ್‌ ಎನ್‌ ಅವರ ಒಂದು ಭಾವ ತೀವ್ರ ಕವಿತೆ ನಿಮ್ಮ ಭಾನುವಾರದ ಓದಿಗಾಗಿ</strong></h2>



<p class="has-black-color has-text-color dropcapp1 wp-block-paragraph">ನೋಡು; ನೀನು<br>ಒಂದು ತೊಟ್ಟು ಪ್ರೇಮವನ್ನು<br>ಕುಡಿಸಿದ್ದರಿಂದಲೆ ಈಗ ನನಗೆ<br>ರೆಕ್ಕೆಗಳು ಮೂಡಿವೆ</p>



<p class="wp-block-paragraph">ಗಾಳಿಯಲ್ಲಿ ತೇಲುವುದು<br>ನಿದ್ದೆಯಲ್ಲಿ ಮಾತಾಡುವುದು<br>ಕನ್ನಡಿಯೆ ನಾಚುವಂತೆ ನುಲಿಯುವುದು</p>



<p class="wp-block-paragraph">ಅಷ್ಟೇ…ಅಲ್ಲ;</p>



<p class="wp-block-paragraph">ಬೀದಿಯ ನಿರ್ಗತಿಕರನ್ನು ಕಂಡಾಗ<br>ಕಣ್ಣೀರಿನಲಿ ‌ಮುಳುಗುವುದು<br>ಗೋಪುರದಲ್ಲೋ ಮಸೀದಿಯ ಬುರುಜು…ಸಿಲುಬೆಯಲ್ಲೋ<br>ರಕ್ತ ಜಿನುಗುವುದಾ ಕಂಡಾಗ ಈ ರೆಕ್ಕೆಗಳು ಸುಟ್ಟಂತೆ ವಿಲ ವಿಲನೆ ಒದ್ದಾಡುತ್ತೇನೆ..<br>ಏನೆಲ್ಲಾ ಆಗುತ್ತಿದೆಯೋ ಅದಕ್ಕೆಲ್ಲಾ<br>ನೀನೇ ಕಾರಣ</p>



<p class="wp-block-paragraph">ಅಲ್ಲೆಲ್ಲೋ..<br>ಪ್ರೇಮಿಗಳನ್ನು ಕೊಂದರಂತೆ<br>ಅವರಿಗಿದ್ದ ರೆಕ್ಕೆಗಳ ಕತ್ತರಿಸಿ<br>ದೇವರ ತುರುಬಿಗೆ ಶೃಂಗರಿಸಿ<br>ಮೆರವಣಿಗೆ ಕರೆದೊಯ್ದಿದ್ದಾರೆ<br>ಮರ್ಯಾದಸ್ತರು</p>



<p class="wp-block-paragraph">ಯಾರು ಹೆತ್ತ‌ ಮಗನೋ/ ಮಗಳೋ<br>ಈ ದೇವರು<br>ಊರ ಪಾಪವೆಲ್ಲಾ ಹೊತ್ತು ತಿರುಗುತ್ತಾನೆ/ ಳೆ<br>ಆ ದೇವರಿಗೂ ಒಂದು ತೊಟ್ಟು<br>ಪ್ರೇಮವ ಕುಡಿಸಬಾರದೆ,<br>ರೆಕ್ಕೆಗಳು ಮೂಡಿ ಎತ್ತದಾರೂ<br>ಹಾರಿ ಹೋಗಲಿ<br>ಕೇಡುಗಳಿಂದ ದೂ….ರ<br>ನಮ್ಮಂತೆ</p>



<p class="wp-block-paragraph">ದೇಶಾವರಿ ದೊರೆಯ ಮಾತಲ್ಲದೆ<br>ಕೇಳುವ ಮಾತಾದರೂ ಯಾವುದು<br>ಪ್ರಜೆಗಳ ನಾಲಿಗೆಗಳ ಸಿಗಿದು<br>ಸುಡುವ ಸೂತಕದ ಕಾಲದಲಿ<br>ಹೆರಿಗೆ ಕೋಣೆಗಳೂ ಉಸಿರುಗಟ್ಟಿವೆ</p>



<p class="wp-block-paragraph">ಎಂದಾದರೂ ಒಂದು ದಿನ<br>ನಾವು ಭೇಟಿ ಆಗೋಣ<br>ಯುದ್ಧಗಳಿಲ್ಲದ ಭೂಮಿಯಲ್ಲೋ<br>ದುಃಖಗಳಿಲ್ಲದ ಕಾಡಿನಲ್ಲೋ<br>ಮತ್ತೂ..;<br>ರಾಜಕೀಯವಿಲ್ಲದ ನಾಡಿನಲ್ಲಿ</p>



<p class="wp-block-paragraph">ಆಗ ಬತ್ತದ ನನ್ನ &#8211; ನಿನ್ನ ಪ್ರೇಮದ<br>ಕುರಿತು ಮಾತಾಡೋಣ</p>



<p class="wp-block-paragraph">ಮತ್ತೂ….</p>



<p class="wp-block-paragraph">ಕ್ಷುದ್ರ ರಾಜಕಾರಣ ದ ಕುಲುಮೆಯಲಿ<br>ಬೇಯುತ್ತಿರುವ ಧರ್ಮದ ಕುರಿತೂ…</p>



<p class="wp-block-paragraph"></p>



<figure class="wp-block-image size-large is-resized"><img loading="lazy" decoding="async" src="https://peepalmedia.com/wp-content/uploads/2022/11/image-32-682x1024.png" alt="" class="wp-image-16726" width="207" height="296"/></figure>



<p class="wp-block-paragraph">&#8211; ಎನ್.ರವಿಕುಮಾರ್</p>
]]></content:encoded>
					
		
		
			</item>
		<item>
		<title>ಚಪ್ಪಲಿ‌ ಕಾಯಿರಿ ಎನ್ನುವ ಪ್ರಭುತ್ವ ಪ್ರಾಯೋಜಿತ&#160; ʼಅಪರಾಧʼ ಕ್ಕೆ ಶಿಕ್ಷೆ ಬೇಡವೆ?!</title>
		<link>https://peepalmedia.com/dodda-ganesh-temple-tender-issue-n-ravikumar-telex-article/</link>
		
		<dc:creator><![CDATA[Ravi Kumar N]]></dc:creator>
		<pubDate>Thu, 03 Nov 2022 11:24:55 +0000</pubDate>
				<category><![CDATA[ದಲಿತ ನೋಟ]]></category>
		<category><![CDATA[basavanagudi]]></category>
		<category><![CDATA[dodda ganesha temple]]></category>
		<category><![CDATA[kannada]]></category>
		<category><![CDATA[N Ravi Kumar]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=14009</guid>

					<description><![CDATA[ಸರ್ಕಾರವು ೨-೧೧-೨೦೨೨ ರಂದು ದೇವಸ್ಥಾನದ ಚಪ್ಪಲಿ ಸ್ಟಾಂಡ್‌ ನಿರ್ವಹಣೆಗೆ ಪರಿಶಿಷ್ಟರಿಂದ ಅರ್ಜಿ ಅಹ್ವಾನಿಸಿರುವುದು ಅಸ್ಪೃಶ್ಯತೆ ಆಚರಣೆಯನ್ನು ಪೋಷಿಸುವುದರ ಜೊತೆಗೆ ಇದೊಂದು ದೌರ್ಜನ್ಯವೂ ಕೂಡ ಆಗಿದೆ ಎಂದು ಕೆ ಎನ್‌ ರವಿಕುಮಾರ್ ಖಡಕ್‌ ಆಗಿ ಪ್ರತಿಕ್ರಿಯಿಸುತ್ತಾರೆ. ಸರ್ಕಾರದ ಮುಜರಾಯಿ ಇಲಾಖೆಯ ಅಧೀನದ ಬೆಂಗಳೂರಿನ ದೊಡ್ಡಗಣಪತಿ ದೇವಸ್ಥಾನ ಮತ್ತು ಅದರ ಸಮೂಹ ದೇವಸ್ಥಾನಗಳಿಗೆ&#160; ಪೂಜಾ ಸಾಮಗ್ರಿ ಮಾರಾಟ ಸ್ಥಳ, ಈಡುಗಾಯಿ ಆಯುವುದು, ಎಳನೀರು ಮಾರಾಟ ಮಾಡುವ ಹಕ್ಕುಗಳನ್ನು ಸಾಮಾನ್ಯ ಜಾತಿಗೆ ನಿಗದಿ ಪಡಿಸಿ, ಚಪ್ಪಲಿ ಕಾಯುವ ಸ್ಥಳದ ಹಕ್ಕನ್ನು ಪರಿಶಿಷ್ಟ [&#8230;]]]></description>
										<content:encoded><![CDATA[
<h5 class="has-text-align-center wp-block-heading"><strong>ಸರ್ಕಾರವು ೨-೧೧-೨೦೨೨ ರಂದು ದೇವಸ್ಥಾನದ ಚಪ್ಪಲಿ ಸ್ಟಾಂಡ್‌ ನಿರ್ವಹಣೆಗೆ ಪರಿಶಿಷ್ಟರಿಂದ ಅರ್ಜಿ ಅಹ್ವಾನಿಸಿರುವುದು ಅಸ್ಪೃಶ್ಯತೆ ಆಚರಣೆಯನ್ನು ಪೋಷಿಸುವುದರ ಜೊತೆಗೆ ಇದೊಂದು ದೌರ್ಜನ್ಯವೂ ಕೂಡ ಆಗಿದೆ ಎಂದು ಕೆ ಎನ್‌ ರವಿಕುಮಾರ್ ಖಡಕ್‌ ಆಗಿ ಪ್ರತಿಕ್ರಿಯಿಸುತ್ತಾರೆ.</strong></h5>



<p class="wp-block-paragraph">ಸರ್ಕಾರದ ಮುಜರಾಯಿ ಇಲಾಖೆಯ ಅಧೀನದ ಬೆಂಗಳೂರಿನ ದೊಡ್ಡಗಣಪತಿ ದೇವಸ್ಥಾನ ಮತ್ತು ಅದರ ಸಮೂಹ ದೇವಸ್ಥಾನಗಳಿಗೆ&nbsp; ಪೂಜಾ ಸಾಮಗ್ರಿ ಮಾರಾಟ ಸ್ಥಳ, ಈಡುಗಾಯಿ ಆಯುವುದು, ಎಳನೀರು ಮಾರಾಟ ಮಾಡುವ ಹಕ್ಕುಗಳನ್ನು ಸಾಮಾನ್ಯ ಜಾತಿಗೆ ನಿಗದಿ ಪಡಿಸಿ, ಚಪ್ಪಲಿ ಕಾಯುವ ಸ್ಥಳದ ಹಕ್ಕನ್ನು ಪರಿಶಿಷ್ಟ ಜಾತಿಗೆ ಮೀಸಲಿರಿಸಿ ಟೆಂಡರ್ ಕರೆಯಲಾಗಿತ್ತು. ಸರ್ಕಾರಿ ಅಧೀನ ಇಲಾಖೆಯೇ ಇಂತಹದ್ದೊಂದು&nbsp;ಜಾತಿ ತಾರತಮ್ಯವನ್ನು ಅನುಸರಿಸುವುದಕ್ಕೆ ವ್ಯಾಪಕವಾಗಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಸದರಿ ಟೆಂಡರ್ ನ್ನು ಮುಜರಾಯಿ ಇಲಾಖೆ ರದ್ದುಗೊಳಿಸಿದೆ. ಈ</p>



<p class="wp-block-paragraph">ಹೀಗೆ ವಿವಿಧ ಕಸುಬು(ಹಕ್ಕು)ಗಳನ್ನು ಜಾತಿ ಆಧಾರಿತವಾಗಿ ನಿಗದಿ ಪಡಿಸಿ ಟೆಂಡರ್ ಕರೆದಿರುವುದು ಪರಂಪರಾಗತವಾಗಿ ಬಂದ ಜಾತಿ ಆಧಾರಿತ ಶ್ರೇಣೀಕೃತ ವ್ಯವಸ್ಥೆಯನ್ನು ಜೀವಂತವಾಗಿಡುವ ಹುನ್ನಾರವೆಂದು ಯಾರಿಗಾದರೂ ಅನಿಸಿದರೆ ಅದೇನು ಆಶ್ಚರ್ಯ ಕರ ಸಂಗತಿ ಅಲ್ಲ.&nbsp;</p>



<p class="wp-block-paragraph">&nbsp;ಮುಜರಾಯಿ ಇಲಾಖೆ ಎಂದರೆ ಅದು ಸರ್ಕಾರ ಎಂದೇ ಅರ್ಥ.&nbsp;ಮುಜರಾಯಿ ಇಲಾಖೆಯಲ್ಲಿ ಪರಿಶಿಷ್ಟ ಜಾತಿಯ ಅರ್ಚಕರನ್ನು ನೇಮಕಗೊಳಿಸುವ ಪ್ರಸ್ತಾವವನ್ನು ಮೂಲೆ ಗುಂಪು ಮಾಡಿರುವ ರಾಜ್ಯ ಸರ್ಕಾರ ಮುಜರಾಯಿ ಅಧೀನದ ದೇವಸ್ಥಾನಗಳಲ್ಲಿ&nbsp; ಜಾತಿ ಆಧಾರಿತವಾಗಿ ಟೆಂಡರ್ ಹಕ್ಕುಗಳನ್ನು ನಿರ್ಧರಿಸಿ ಬಹಿರಂಗವಾಗಿ ಅಧಿಸೂಚನೆ ಹೊರಡಿಸುವ ಮೂಲಕ&nbsp; ಸರ್ಕಾರವೇ ಖುಲ್ಲಾಂ ಖುಲ್ಲಾ ಅಸ್ಪೃಶ್ಯತೆಯ ಆಚರಣೆಯನ್ನು ಪ್ರೋತ್ಸಾಹಿಸಿದಂತಾಗಿದೆ.</p>



<p class="wp-block-paragraph">2016 ರಲ್ಲಿ&nbsp; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು &nbsp;ಸರ್ಕಾರಿ ಕಾಮಗಾರಿಗಳಲ್ಲಿ ಶೇ. 24 ರಷ್ಟು ಕಾಮಗಾರಿಗಳನ್ನು ಗರಿಷ್ಠ 50 ಲಕ್ಷದವರೆಗಿನ ಕಾಮಗಾರಿಗಳನ್ನು&nbsp; ಎಸ್ಸಿ/ಎಸ್ಟಿ ಸಮುದಾಯಕ್ಕೆ ಸೇರಿದ ಗುತ್ತಿಗೆದಾರರಿಗೆ ಮೀಸಲಿರಿಸಿ &#8220;Karnataka transparency in public procurement Bill 2016”&nbsp;(KTPPB) ಜಾರಿಗೆ ತರಲಾಗಿತ್ತು. ಪರಿಶಿಷ್ಟಜಾತಿ/ವರ್ಗಗಳ ಗುತ್ತಿಗೆದಾರರನ್ನು ಉದ್ಯಮಶೀಲತೆ ದೃಷ್ಟಿಯಿಂದ ಉತ್ತೇಜಿಸುವ ಮತ್ತು ಸಾಮಾಜಿಕ ನ್ಯಾಯದ ಮೂಲಕ ಆರ್ಥಿಕವಾಗಿ ಸಶಕ್ತಗೊಳಿಸುವ ಆಶಯ ಈ ಕಾಯಿದೆಯದ್ದಾಗಿತ್ತು. ಈ ಕಾಯಿದೆಗೆ ರಾಜ್ಯಪಾಲ ವಜುಬಾಯಿವಾಲಾ ಅವರು ಅನುಮೋದಿಸದೆ ರಾಷ್ಟ್ರಪತಿಗಳ ಅಂಗಳಕ್ಕೆ ಸಾಗುಹಾಕಿದ್ದರು.&nbsp; ಅಂತಿಮವಾಗಿ ಆವತ್ತಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಯೋಗದೊಂದಿಗೆ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಈ ಕಾಯಿದೆಯ ಮಹತ್ವ ಮತ್ತು ಆಶಯವನ್ನು ಮನವರಿಕೆ ಮಾಡಿಕೊಟ್ಟ ಪರಿಣಾಮ 2017 ರಲ್ಲಿ ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ ಪರಿಶಿಷ್ಟಜಾತಿ/ವರ್ಗಗಳ ಗುತ್ತಿಗೆ ದಾರರಿಗೆ ಶೇ. 24 ರಷ್ಟು ಕಾಮಗಾರಿಗಳನ್ನು ಮೀಸಲಿಡುವ ಈ ಕಾಯ್ದೆ ಅನುಷ್ಠಾನಗೊಳ್ಳುತ್ತಾ ಬರುತ್ತಿದೆ.</p>


<div class="wp-block-image">
<figure class="aligncenter size-full"><img loading="lazy" decoding="async" width="600" height="357" src="https://peepalmedia.com/wp-content/uploads/2022/11/WhatsApp-Image-2022-11-03-at-4.49.37-PM.jpeg" alt="" class="wp-image-14014" srcset="https://peepalmedia.com/wp-content/uploads/2022/11/WhatsApp-Image-2022-11-03-at-4.49.37-PM.jpeg 600w, https://peepalmedia.com/wp-content/uploads/2022/11/WhatsApp-Image-2022-11-03-at-4.49.37-PM-300x179.jpeg 300w, https://peepalmedia.com/wp-content/uploads/2022/11/WhatsApp-Image-2022-11-03-at-4.49.37-PM-150x89.jpeg 150w" sizes="auto, (max-width: 600px) 100vw, 600px" /></figure>
</div>


<p class="wp-block-paragraph">ಈಗಿನ ಸರ್ಕಾರದ ಮುಜರಾಯಿ ಇಲಾಖೆ ಬಹುಶಃ&nbsp; KTPPA ಕಾಯಿದೆಯಡಿ&nbsp; ಟೆಂಡರ್ ಕರೆಯಲಾಗಿದೆ ಎನ್ನುವುದಾದರೆ&nbsp; ಈ ಕಾಯ್ದೆಯನ್ನು ಆಡಳಿತ ಪಕ್ಷದ&nbsp; ಸಿದ್ಧಾಂತಕ್ಕೆ ಅನುಗುಣವಾಗಿ ಅರ್ಥೈಸಿಕೊಂಡು&nbsp; ಆಳುವವರನ್ನು ಸಂಪ್ರೀತಿಗೊಳಿಸಲು ಮುಜರಾಯಿ ಅಧಿಕಾರಿಗಳು ಉತ್ಸುಕರಾಗಿದ್ದರಾ? ಈ ಕಾಯಿದೆಯಂತೆ ಒಟ್ಟಾರೆ ಸರ್ಕಾರಿ ಕಾಮಗಾರಿಗಳಲ್ಲಿ&nbsp; ಶೇ. 24 ರಷ್ಟು ಕಾಮಗಾರಿಗಳನ್ನು ಪರಿಶಿಷ್ಟ ಜಾತಿ./ವರ್ಗಗಳಿಗೆ ಮೀಸಲಿಡಬೇಕೆಂದಿದೆಯೇ ಹೊರತು ಕಾಮಗಾರಿಗಳಲ್ಲಿ ಜಾತಿಯನ್ನು ಅಳವಡಿಸುವಂತಿಲ್ಲ ಎಂಬ ಸಾಮಾನ್ಯ ಜ್ಞಾನವೂ ದೊಡ್ಡಗಣಪತಿ ದೇವಸ್ಥಾನದಲ್ಲಿ ಚಪ್ಪಲಿ ಕಾಯುವ ಟೆಂಡರ್ ಹಕ್ಕನ್ನು ಪರಿಶಿಷ್ಟ ಜಾತಿ/ವರ್ಗಗಳಿಗೆ ಮೀಸಲಿರಿಸಿದ ಮುಜರಾಯಿ ಇಲಾಖೆಗೆ ಇಲ್ಲದೇ ಹೋಗಿತ್ತಾ? ಒಂದು ಕಾಯಿದೆಯ ವ್ಯಾಖ್ಯಾನ&nbsp; ಸರ್ಕಾರ ಬದಲಾದಂತೆ ಬದಲಾಗಿ ಹೋಗುತ್ತದಾ?</p>



<p class="wp-block-paragraph">ಸಾರ್ವಜನಿಕವಾಗಿ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ದೊಡ್ಡಗಣಪತಿ ದೇವಸ್ಥಾನ ಮತ್ತದರ ಸಮೂಹ ದೇವಸ್ಥಾನಗಳ&nbsp; ಟೆಂಡರ್ ರದ್ದುಗೊಳಿಸಿರುವುದು ಮೇಲ್ನೋಟಕ್ಕೆ&nbsp; ಆದ ಪ್ರಮಾದಕ್ಕೆ ಪರಿಹಾರ ಎನ್ನಬಹುದು.&nbsp; &nbsp;ಆದರೆ ಇಂತಹದ್ದೊಂದು &#8220;ಸಾಮಾಜಿಕ ಅಪರಾಧ&#8221; (social crime) ವನ್ನು&nbsp; ಪ್ರಜ್ಞಾಪೂರ್ವಕವಾಗಿಯೇ ಅನುಸರಿಸಿಕೊಂಡು ಬರುತ್ತಿರುವುದಕ್ಕೆ&nbsp; ಮುಜರಾಯಿ ಇಲಾಖೆಯ ಟೆಂಡರ್ ತಾಜಾ ಉದಾಹರಣೆಯಾಗಿ ಕಾಣುತ್ತದೆ.&nbsp; ಸರ್ಕಾರದ ಪರಿಶಿಷ್ಟ ಜಾತಿ/ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಪರಮ ನಿರ್ಲಕ್ಷ್ಯಕ್ಕೆ ಅನುಸೂಚಿತ ಜಾತಿ /ಪಂಗಡಗಳ ಕಲ್ಯಾಣ ಸಮಿತಿಯೇ ತನ್ನ ವರದಿಯಲ್ಲಿ ಕನ್ನಡಿ ಹಿಡಿದೆ. ಕೇವಲ ಎಸ್ಸಿ/ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಳದ ನಿರ್ಧಾರವನ್ನು ಮುಂದಿಟ್ಟುಕೊಂಡು ಮೆರವಣಿಗೆ ಹೊರಟವರಿಗೆ ಇದಾವುದು ಕಾಣುವುದಿಲ್ಲ.</p>



<p class="wp-block-paragraph">ಅದಿರಲಿ, ಮುಜರಾಯಿ ಇಲಾಖೆಯು ಹೊರಡಿಸಿದ ಟೆಂಡರ್ ಪ್ರಕಟಣೆಯು ನೇರವಾಗಿ ಅಸ್ಪೃಶ್ಯತೆ ಆಚರಣೆಯಾಗಿದೆ. ಇದೊಂದು ಅಟ್ರಾಸಿಟಿಯೇ ಕೂಡ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಿಮಿನಲ್ ಕೇಸು&nbsp; ದಾಖಲಿಸಬಾರದೇಕೆ?&nbsp;ಯಾವ ಆಧಾರದ ಮೇಲೆ ಇಂತಹ ಕಸುಬು ಆಧಾರಿತ&nbsp; ಟೆಂಡರ್ ಕರೆಯಲಾಯಿತು.? ಎಲ್ಲವೂ ತನಿಖೆಯಾಗಬೇಕು.&nbsp;</p>



<p class="wp-block-paragraph">ಸಂವಿಧಾನ ಬದ್ಧ ಸರ್ಕಾರಗಳ ಮೂಗಿನಡಿಯಲ್ಲೆ &#8216;ಜಾತಿ&#8217; ಮನಸ್ಥಿತಿ ಜಾಗೃತವಾಗಿದ್ದರೆ ಅದು ಇಡೀ ವ್ಯವಸ್ಥೆಯನ್ನೆ&nbsp; ಜಾತಿಕೋರ ಸಮಾಜವನ್ನಾಗಿ ನಿರ್ಮಿಸುತ್ತದೆ.&nbsp;</p>



<p class="wp-block-paragraph"> &nbsp;</p>



<p class="wp-block-paragraph">&nbsp;<strong>ಎನ್.ರವಿಕುಮಾರ್</strong></p>



<p class="wp-block-paragraph">ʼಶಿವಮೊಗ್ಗ ಟೆಲೆಕ್ಸ್ʼ ಕನ್ನಡ ದಿನಪತ್ರಿಕೆಯ ಸಂಪಾದಕರು. ಸಾಮಾಜಿಕ ಹೋರಾಟಗಾರ, ಪ್ರಗತಿಪರ ಚಿಂತಕ, ರಾಜಕೀಯ ವಿಶ್ಲೇಷಣಾಕಾರ.</p>
]]></content:encoded>
					
		
		
			</item>
		<item>
		<title>ದಲಿತರ ಮನೆ ಭೇಟಿ:‌ ಜಾತಿವಾದ ಪೋಷಣೆಯ ಮಂದರೂಪ</title>
		<link>https://peepalmedia.com/dalitara-mane-bheti-jativaada-poshaneya-mandarupa/</link>
		
		<dc:creator><![CDATA[Ravi Kumar N]]></dc:creator>
		<pubDate>Thu, 13 Oct 2022 09:01:56 +0000</pubDate>
				<category><![CDATA[ದಲಿತ ನೋಟ]]></category>
		<category><![CDATA[Dalit]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[special]]></category>
		<category><![CDATA[special story]]></category>
		<category><![CDATA[writing]]></category>
		<guid isPermaLink="false">https://peepalmedia.com/?p=10462</guid>

					<description><![CDATA[ದಲಿತರ ಮನೆ ಹುಡುಕಿಕೊಂಡು ಬಂದು ಹೋಗುವುದೆಂದರೆ ತಾವು ಸವರ್ಣೀಯರು, ನೀವು ನಿಮ್ನರು ಎಂಬ ಬಗೆದು ನೋಡುವ ನೋಟವನ್ನು ಇನ್ನಷ್ಟು ಆಳಕ್ಕೆ ಬಿತ್ತಿದಂತೆಯೇ ಸರಿ. ಇದು ಒಂದು ರೀತಿಯ ಅಟ್ರಾಸಿಟಿಯ ಮಂದ ರೂಪವೇ ಎನ್ನುತ್ತಾರೆ ಪತ್ರಕರ್ತ ಎನ್‌ ರವಿಕುಮಾರ್. ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದ್ದೇವೆ. ಸಮಾನತೆಯ ಆಶಯ ಪರಿಪೂರ್ಣವಾಗಿ ಅನುಷ್ಠಾನಗೊಂಡಿಲ್ಲ ಎನ್ನುವುದಕ್ಕೆ ಪ್ರತಿದಿನವು ಉದಾಹರಣೆಗಳು ಅಂಗೈ ಹುಣ್ಣಿನಂತೆ ಕಾಣುತ್ತಲೆ ಇವೆ. ಈ ನಾಡಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತವರ ಬಳಗದವರು ದಲಿತರ ಮನೆಯಲ್ಲಿ ಮಂಡಕ್ಕಿ ಇತ್ಯಾದಿ ತಿನಿಸು [&#8230;]]]></description>
										<content:encoded><![CDATA[
<p class="wp-block-paragraph"><strong>ದಲಿತರ ಮನೆ ಹುಡುಕಿಕೊಂಡು ಬಂದು ಹೋಗುವುದೆಂದರೆ ತಾವು ಸವರ್ಣೀಯರು, ನೀವು ನಿಮ್ನರು ಎಂಬ ಬಗೆದು ನೋಡುವ ನೋಟವನ್ನು ಇನ್ನಷ್ಟು ಆಳಕ್ಕೆ ಬಿತ್ತಿದಂತೆಯೇ ಸರಿ. ಇದು ಒಂದು ರೀತಿಯ ಅಟ್ರಾಸಿಟಿಯ ಮಂದ ರೂಪವೇ ಎನ್ನುತ್ತಾರೆ ಪತ್ರಕರ್ತ ಎನ್‌ ರವಿಕುಮಾರ್.</strong></p>



<p class="wp-block-paragraph">ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದ್ದೇವೆ. ಸಮಾನತೆಯ ಆಶಯ ಪರಿಪೂರ್ಣವಾಗಿ ಅನುಷ್ಠಾನಗೊಂಡಿಲ್ಲ ಎನ್ನುವುದಕ್ಕೆ ಪ್ರತಿದಿನವು ಉದಾಹರಣೆಗಳು ಅಂಗೈ ಹುಣ್ಣಿನಂತೆ ಕಾಣುತ್ತಲೆ ಇವೆ.</p>



<p class="wp-block-paragraph">ಈ ನಾಡಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತವರ ಬಳಗದವರು ದಲಿತರ ಮನೆಯಲ್ಲಿ ಮಂಡಕ್ಕಿ ಇತ್ಯಾದಿ ತಿನಿಸು ತಿಂದದ್ದು ಒಂದು ಮಹತ್ತರ ಸಾಧನೆಯಂತೆ ಆತ್ಮರತಿಯಲ್ಲಿ ಮೀಯುತ್ತಿದ್ದಾರೆ. ದಲಿತರ ಮನೆಯಲ್ಲಿ ಊಟ/ ಉಪಹಾರ/ ವಾಸ್ತವ್ಯ., ದಲಿತರ ಪಾದ ತೊಳೆದು ಊದುಬತ್ತಿ ಹಚ್ಚುವುದು ಇವೆಲ್ಲಾ ಶೋಕಿಯಾಗಿ ಬಿಟ್ಟಿವೆ. ಚುನಾವಣೆ ಕಾಲಕ್ಕೊ, ಮತ್ಯಾವುದೋ ಸಂದರ್ಭದಲ್ಲಿ ದಲಿತರ ಮನೆಗಳ ಹುಡುಕಿಕೊಂಡು ಹೋಗುವುದರ ಹಿಂದೆ ಒಂದು ಆತ್ಮವಂಚನೆಯ ರಾಜಕಾರಣ ಮಾತ್ರ ಅಡಗಿದೆಯೇ ಹೊರತು ಜಾತ್ಯತೀತ ಆಶಯದ ಅನುಷ್ಠಾನದ ಪ್ರಾಮಾಣಿಕ ನಡೆಯಲ್ಲ ಎಂಬುದನ್ನು ಭೂತಗನ್ನಡಿ ಹಾಕಿ ‌ಹುಡುಕಬೇಕಿಲ್ಲ.</p>



<p class="wp-block-paragraph">ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಅವರು ತಮ್ಮ ಸಂಪುಟ ಸಹೋದ್ಯೋಗಿಯಾಗಿರುವ ದಲಿತರೇ ಆದ ಗೋವಿಂದ ಕಾರಜೋಳ,  ತಮ್ಮದೇ ಪಕ್ಷದ  ದಲಿತ ಸಮುದಾಯದ ಶಾಸಕರ ಮನೆಗಳಿಗೆ ಎಂದೂ ಹೋಗಿ ಕುಂತು ಕುಶಲೋಪರಿ ಮಾತಾಡಿ ಊಟ,  ಉಪಹಾರ ತಿಂದಿಲ್ಲವೆ? ಹಾಗೊಮ್ಮೆ ತಿಂದಿದ್ದರೆ ಮತ್ಯಾಕೆ ಯಾರೋ ಬಡ ದಲಿತನ ಮನೆಗೆ ಬಂದು ಮಂಡಕ್ಕಿ, ಕೇಸರಿಬಾತು ಚಪ್ಪರಿಸಿ  ಮಾಧ್ಯಮಗಳಿಗೆ ಮುಖವೊಡ್ಡುವುದರ ಉದ್ದೇಶವೇನು?</p>



<p class="wp-block-paragraph"></p>



<figure class="wp-block-image size-large"><img loading="lazy" decoding="async" width="1024" height="682" src="https://peepalmedia.com/wp-content/uploads/2022/10/WhatsApp-Image-2022-10-12-at-11.13.33-AM-1-1024x682.jpeg" alt="" class="wp-image-10201" srcset="https://peepalmedia.com/wp-content/uploads/2022/10/WhatsApp-Image-2022-10-12-at-11.13.33-AM-1-1024x682.jpeg 1024w, https://peepalmedia.com/wp-content/uploads/2022/10/WhatsApp-Image-2022-10-12-at-11.13.33-AM-1-300x200.jpeg 300w, https://peepalmedia.com/wp-content/uploads/2022/10/WhatsApp-Image-2022-10-12-at-11.13.33-AM-1-768x512.jpeg 768w, https://peepalmedia.com/wp-content/uploads/2022/10/WhatsApp-Image-2022-10-12-at-11.13.33-AM-1-150x100.jpeg 150w, https://peepalmedia.com/wp-content/uploads/2022/10/WhatsApp-Image-2022-10-12-at-11.13.33-AM-1-696x464.jpeg 696w, https://peepalmedia.com/wp-content/uploads/2022/10/WhatsApp-Image-2022-10-12-at-11.13.33-AM-1-1068x712.jpeg 1068w, https://peepalmedia.com/wp-content/uploads/2022/10/WhatsApp-Image-2022-10-12-at-11.13.33-AM-1.jpeg 1280w" sizes="auto, (max-width: 1024px) 100vw, 1024px" /></figure>



<p class="wp-block-paragraph"></p>



<p class="wp-block-paragraph">ದಲಿತ್ ಐಡೆಂಟಿಟಿಯನ್ನು ರಾಜಕೀಯ ಮಾರಾಟ ಕೌಶಲ (Political marketing skill) ಆಗಿ ಬಳಸಿಕೊಳ್ಳುವ ಕಸುಬು ರಾಜಕಾರಣಿಗಳಿಗೆ, ರಾಜಕೀಯ ಪಕ್ಷಗಳಿಗೆ ಹೊಸತಲ್ಲ. ರಾಜಕಾರಣಿಗಳಾಗಲಿ, ಮಠಾಧಿಪತಿಗಳಾಗಲಿ ಎಂದೋ ಒಂದು ದಿನ ದಲಿತರ ಮನೆಯಲ್ಲಿ ಉಂಡು, ನೀರು ಕುಡಿದು ಹೋದ ಮಾತ್ರಕ್ಕೆ ದಲಿತರನ್ನು ಸಮಾನತೆಯ ಮೇಲ್ಪದರಕ್ಕೆ ತಂದಂತಾಗಲಿ, ಅವರ ಭಾಗ್ಯೋದಯವಾಗಿ ಬಿಡುತ್ತದೆ ಎಂತಾದರೆ ಇಂತಹ ಭೇಟಿಗಳು ನಿರಂತರವಾಗಿ ಸಾಗಲಿ.</p>



<p class="wp-block-paragraph">ಮೊನ್ನೆ ಮೊನ್ನೆಯಷ್ಟೆ ಉಳ್ಳೇರಳ್ಳಿಯಲ್ಲಿ ದೇವರ ಕೋಲು ಮುಟ್ಟಿದ ದಲಿತ ಬಾಲಕನಿಗೆ ದಂಡ ವಿಧಿಸಿದ ಜಾತಿವಾದಿಗಳ ಕೃತ್ಯವಾಗಲಿ, ಕೋಲಾರದ ದಾನವಳ್ಳಿಯಲ್ಲಿ ಸವರ್ಣೀಯರು ಮತ್ತು ದಲಿತರ ನಡುವೆ ನಡೆದ ಮಾರಾಮಾರಿಯಾಗಲಿ ಮುಖ್ಯಮಂತ್ರಿಗಳ ಅರಿವಿಗೆ ಬಂದಿಲ್ಲವಾ?</p>



<p class="wp-block-paragraph">&nbsp;ಮುಖ್ಯಮಂತ್ರಿಗಳು ವಂದಿಮಾಗಧರ ಸಮೇತ &#8216;ದಲಿತ&#8217; ನೊಬ್ಬನ ಮನೆಯಲ್ಲಿ ಮಂಡಕ್ಕಿ‌ ಮೆಲ್ಲುತ್ತಿದ್ದರೆ, ಅತ್ತ&nbsp; ಚಿಕ್ಕಮಗಳೂರು ಜಿಲ್ಲೆಯಲ್ಲಿ ( ಆಡಳಿತಾರೂಢ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರ ಜಿಲ್ಲೆ) ಅವರದ್ದೇ ಪಕ್ಷದ ಮುಖಂಡ ತೋಟದ ಮಾಲೀಕ ದಲಿತ ಕುಟುಂಬವನ್ನು ಲೈನ್ ಮನೆಗಳೆಂಬ ವಧಾಗೃಹಗಳಲ್ಲಿ ಕೂಡಿ ಹಾಕಿ ಬಡಿಯುತ್ತಿದ್ದ ಅಮಾನುಷ ಕೃತ್ಯವನ್ನೇನಾದರೂ ಗಮನಿಸಿದರಾ?</p>



<p class="wp-block-paragraph">ಹಾಗೊಮ್ಮೆ ಈ ಮೇಲಿನ ತಾಜಾ ಘಟನೆಗಳ ಬಗ್ಗೆ ಸಿಎಂ ಏನಾದರೂ ಟ್ವೀಟ್ ಮಾಡಿದ್ದು ಯಾರಿಗಾದರೂ ಗೊತ್ತಾಯಿತಾ? ಹೋಗಲಿ, ಅವರ ಸಚಿವ ಸಂಪುಟದ ಸಹೋದ್ಯೋಗಿಗಳಾಗಲಿ, ವಕ್ತಾರರಾಗಲಿ ಖಂಡನಾ ಹೇಳಿಕೆ ಯಾ ಅಧಿಕಾರ ದಂಡ ಪ್ರಯೋಗದ ಜವಾಬ್ದಾರಿಯ ಮಾತುಗಳನ್ನಾದರೂ ಆಡಿದ್ದು ಯಾರಿಗಾದರೂ ಕೇಳಿಸಿತಾ?</p>



<p class="wp-block-paragraph">ಅಷ್ಟಕ್ಕೂ ಅಧಿಕಾರಸ್ಥರು, ರಾಜಕಾರಣಿಗಳು ದಲಿತರ ಮನೆಗಳನ್ನು &#8216;ಹುಡುಕಿಕೊಂಡು&#8217; ಬಂದುಹೋಗುತ್ತಾರೆ ಎಂದರೆ ಈ ಸಮಾಜದಲ್ಲಿ ಪ್ರಜ್ಞಾಪೂರ್ವಕವಾಗಿ ಜಾತೀಯತೆಯನ್ನು ಜೀವಂತವಾಗಿರಿಸುವ ಹುನ್ನಾರವೇ ಆಗಿರುತ್ತದೆ.  ಮುಖ್ಯಮಂತ್ರಿಗಳು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಶಾಸಕರು, ಸಚಿವರು, ಅಧಿಕಾರಿಗಳು, ಸಾಮಾನ್ಯರು&#8230;ಹೀಗೆ ನಾನಾ ಬಗೆಯ ನೂರಾರು ಜನರನ್ನು ಭೇಟಿ ಮಾಡುತ್ತಲೇ ಇರುತ್ತಾರೆ. ಇವರಲ್ಲಿ ದಲಿತರೂ ಇರುತ್ತಾರೆ. ಹಾಗಿದ್ದ ಮೇಲೆ ದಲಿತರ ಮನೆಯನ್ನೇ ಹುಡುಕಿಕೊಂಡು ಹೋಗುವುದು ಒಂದು  ಕ್ಷುಲ್ಲಕ ರಾಜಕಾರಣವಷ್ಟೆ ಎನ್ನದೆ ಬೇರೆ ಏನೆನ್ನಬೇಕು?</p>



<p class="wp-block-paragraph"></p>



<figure class="wp-block-image size-large"><img loading="lazy" decoding="async" width="1024" height="684" src="https://peepalmedia.com/wp-content/uploads/2022/10/WhatsApp-Image-2022-10-13-at-1.58.36-PM-1024x684.jpeg" alt="" class="wp-image-10468" srcset="https://peepalmedia.com/wp-content/uploads/2022/10/WhatsApp-Image-2022-10-13-at-1.58.36-PM-1024x684.jpeg 1024w, https://peepalmedia.com/wp-content/uploads/2022/10/WhatsApp-Image-2022-10-13-at-1.58.36-PM-300x200.jpeg 300w, https://peepalmedia.com/wp-content/uploads/2022/10/WhatsApp-Image-2022-10-13-at-1.58.36-PM-768x513.jpeg 768w, https://peepalmedia.com/wp-content/uploads/2022/10/WhatsApp-Image-2022-10-13-at-1.58.36-PM-150x100.jpeg 150w, https://peepalmedia.com/wp-content/uploads/2022/10/WhatsApp-Image-2022-10-13-at-1.58.36-PM-696x465.jpeg 696w, https://peepalmedia.com/wp-content/uploads/2022/10/WhatsApp-Image-2022-10-13-at-1.58.36-PM-1068x713.jpeg 1068w, https://peepalmedia.com/wp-content/uploads/2022/10/WhatsApp-Image-2022-10-13-at-1.58.36-PM.jpeg 1280w" sizes="auto, (max-width: 1024px) 100vw, 1024px" /></figure>



<p class="wp-block-paragraph"></p>



<p class="wp-block-paragraph">75 ವರ್ಷಗಳ ನಂತರವೂ ದಲಿತರ ಮನೆಗಳಿಗೆ ಅಧಿಕಾರಸ್ಥ ಸರ್ವರ್ಣೀಯರು ಹೋಗುವ ಮೂಲಕ ಜಾತಿ ತರತಮವನ್ನು ಹೋಗಲಾಡಿಸುವ ಮಹತ್ತರ ಸಂದೇಶ ಸಾರುವುದೇ ಎಂದಾದರೆ ಕಳೆದ 75 ವರ್ಷಗಳ ಕಾಲ ಸಮಸಮಾಜವನ್ನು ಇಚ್ಛಾಶಕ್ತಿಯಿಂದ ಕಟ್ಟಲು ನಾವು ಸೋತಿದ್ದೇವೆ ಎಂಬುದರ ಸಂಕೇತವಲ್ಲವೆ? ನಮ್ಮ ಉತ್ಕೃಷ್ಟ ಸಂವಿಧಾನದ ರಾಜಕೀಯ ವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ನಿಮ್ಮ  ವೈಫಲ್ಯ &#8211; ಹೊಣೆಗೇಡಿತನ ಎಂದು ಕರೆದರೆ  ತಪ್ಪೇನು? ದಲಿತರ ಮನೆ ಹುಡುಕಿಕೊಂಡು ಬಂದು ಹೋಗುವುದೆಂದರೆ ತಾವು ಸವರ್ಣೀಯರು, ನೀವು ನಿಮ್ನರು ಎಂಬ ಬಗೆದು ನೋಡುವ ನೋಟವನ್ನು ಇನ್ನಷ್ಟು ಆಳಕ್ಕೆ ಬಿತ್ತಿದಂತೆಯೇ ಸರಿ.  ಇದು ಒಂದು ರೀತಿಯ ಅಟ್ರಾಸಿಟಿಯ ಮಂದ ರೂಪವೇ ಆಗಿರುತ್ತದೆ.</p>



<p class="wp-block-paragraph">ಇವನಾರವ ಇವನಾರವ ಇವನಾರವ ಎಂದೆಣಿಸದಿರಯ್ಯ<br>ಇವ ನಮ್ಮವ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯಾ</p>



<p class="wp-block-paragraph">ಎಂದ ಬಸವಣ್ಣನನ್ನು ನಿಮ್ಮ ಮನೆಗಳಿಗೆ ತಂದು ನೇತು ಹಾಕಿಕೊಂಡಿರಿ, ಆದರೆ ನಿಮ್ಮ ಮನಗಳಲ್ಲಿ&nbsp; ನೆಲೆಗೊಳಿಸಿಕೊಂಡಿರಾ?</p>



<p class="wp-block-paragraph">ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ತರತಮವಿಲ್ಲದ ಒಳಗೊಳ್ಳುವಿಕೆ ಎಂಬುದು ಅಂತರ್ಗತ ಅರಿವು ಎಂದಾದಾಗ ಮಾತ್ರ ಯಾರು ಯಾರ ಮನೆಯಲ್ಲಿ ಉಂಡರು, ವಾಸ್ತವ್ಯ ಹೂಡಿದರು ಎಂಬುದು ಮುಖ್ಯವಾಗುವುದೇ ಇಲ್ಲ, ಎಲ್ಲರೂ ‌ಮನುಷ್ಯರಂತೆ ಕಾಣುತ್ತಾರೆ.</p>



<p class="wp-block-paragraph">ಭಾರತಕ್ಕೆ ಕೇವಲ ರಾಜಕೀಯ ಸ್ವಾತಂತ್ರ್ಯಕ್ಕಿಂತ ಸಾಮಾಜಿಕ, ಆರ್ಥಿಕ‌ ಸ್ವಾತಂತ್ರ್ಯ ವೂ ಸಿಕ್ಕಾಗ ಮಾತ್ರ ಸ್ವಾತಂತ್ರ್ಯ ಅರ್ಥಪೂರ್ಣ. ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯವಿಲ್ಲದ ರಾಜಕೀಯ ಸ್ವಾತಂತ್ರ್ಯ ನಿಷ್ಪ್ರಯೋಜಕ ಎಂದು ಬ್ರಿಟಿಷರಿಂದ ಪಡೆಯಬೇಕಾದ ಸ್ವಾತಂತ್ರ್ಯಕ್ಕೆ ಪರಿಪೂರ್ಣ ಕಣ್ಣು ಮತ್ತು ಹೃದಯವನ್ನು ಮೂಡಿಸಿದ ದ್ರಷ್ಟಾರ ಬಾಬಾಸಾಹೇಬ್ ಅಂಬೇಡ್ಕರ್ . ಹೀಗೆ ಸಿಕ್ಕ ಸ್ವಾತಂತ್ರ್ಯ ಕಾಲದಲ್ಲೂ ದಲಿತರ ಪಾಡು ಬದಲಾಗಿಲ್ಲ. ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಮತ್ತು ಯೋಜನೆಗಳಿಂದ ದಲಿತರ ಬದುಕನ್ನು, ಅವರ ಸ್ವಾಭಿಮಾನದ ಘನತೆಯನ್ನು ಕಟ್ಟಿಕೊಡಬೇಕಾದ ಆಳುವವರು ಕೇವಲ ಅವನ ಮನೆಯ ತಣಿಗೆಯಲ್ಲಿ ಕೈತೊಳೆದು ಮುಂದೊಂದು ದಿನಕ್ಕೆ ಇನ್ನೊಂದು ಮನೆಗೆ ಕಾಯುತ್ತಾರೆ. ಇಂತಹ&nbsp; ನಾಟಕಗಳಿಂದ ದಲಿತರ ಬದುಕು ಹಸನಾಗುವುದಿಲ್ಲ. ಫೋಟೋ, ಪ್ರಚಾರಗಳು ಮಾತ್ರ ಉಳಿಯುತ್ತವೆ. ಚುನಾವಣೆಗಳು ಮುಗಿಯುತ್ತವೆ.</p>



<p class="wp-block-paragraph">ರಾಜ್ಯಸರ್ಕಾರಗಳು ದಲಿತ ಸಮುದಾಯದ ಅಭ್ಯುದಯಕ್ಕಾಗಿ ಮೀಸಲಾಗಿಸಿದ ಎಸ್ ಸಿಪಿ/ ಟಿಎಸ್ ಪಿ ( ವಿಶೇಷ ಘಟಕ ಯೋಜನೆ/ ಗಿರಿಜನ ಉಪ ಯೋಜನೆ) ಅನುದಾನ ಸದ್ಬಳಕೆ ಆಗಿದೆಯಾ? ದಲಿತರು ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ, ಆರ್ಥಿಕವಾಗಿ  ಆಗಿರಬಹುದಾದ ಪ್ರಗತಿಯನ್ನು ಆಯಾ ವರ್ಷ ಶ್ರೇತಪತ್ರ ಮೂಲಕ ಪ್ರಕಟಿಸಿದ್ದೇ ಆದರೆ ಅದು ಸರ್ಕಾರಗಳ ನಿಜ ಕಾಳಜಿ. ಸರ್ಕಾರದ ಅನುಸೂಚಿತ ಜಾತಿ &#8211; ಪಂಗಡಗಳ ಕಲ್ಯಾಣ ಸಮಿತಿಯೇ ತನ್ನ ವರದಿಯಲ್ಲಿ ದಲಿತರ ಕೈಗಾರಿಕಾ ಯೋಜನೆಯ ವೈಫಲ್ಯ, ಕಂಟಕಗಳನ್ನು ಸರ್ಕಾರದ ಮುಂದಿಟ್ಟಿದೆ. ದಲಿತರಿಗೆ ಕೈಗಾರಿಕೆ ಸ್ಥಾಪನೆಗೆ ಭೂಮಿ ಕೊಡುವ ಸರ್ಕಾರ ಅದಕ್ಕೆ ಮೂಲಭೂತ ಸೌಕರ್ಯಗಳನ್ನು ಕೊಡದೆ ಕತ್ತು‌ ಹಿಸುಕುತ್ತಿರುವುದು ಅಧಿಕೃತ ವರದಿಯಲ್ಲೆ ಬಯಲಾಗಿರುವಾಗ ದಲಿತರ ಮನೆಗಳಲ್ಲಿ ಆತಿಥ್ಯ ಪಡೆದು ಪುಳಕಿತರಾಗುವ ಸರ್ಕಾರ( ಮುಖ್ಯಮಂತ್ರಿ) ದ ನಡೆ  ಕಾಲದ ವಿಡಂಬನೆಯಷ್ಟೆ!</p>



<p class="wp-block-paragraph"></p>



<figure class="wp-block-image size-large"><img loading="lazy" decoding="async" width="1024" height="682" src="https://peepalmedia.com/wp-content/uploads/2022/10/WhatsApp-Image-2022-10-12-at-11.13.31-AM-1024x682.jpeg" alt="" class="wp-image-10199" srcset="https://peepalmedia.com/wp-content/uploads/2022/10/WhatsApp-Image-2022-10-12-at-11.13.31-AM-1024x682.jpeg 1024w, https://peepalmedia.com/wp-content/uploads/2022/10/WhatsApp-Image-2022-10-12-at-11.13.31-AM-300x200.jpeg 300w, https://peepalmedia.com/wp-content/uploads/2022/10/WhatsApp-Image-2022-10-12-at-11.13.31-AM-768x512.jpeg 768w, https://peepalmedia.com/wp-content/uploads/2022/10/WhatsApp-Image-2022-10-12-at-11.13.31-AM-150x100.jpeg 150w, https://peepalmedia.com/wp-content/uploads/2022/10/WhatsApp-Image-2022-10-12-at-11.13.31-AM-696x464.jpeg 696w, https://peepalmedia.com/wp-content/uploads/2022/10/WhatsApp-Image-2022-10-12-at-11.13.31-AM-1068x712.jpeg 1068w, https://peepalmedia.com/wp-content/uploads/2022/10/WhatsApp-Image-2022-10-12-at-11.13.31-AM.jpeg 1280w" sizes="auto, (max-width: 1024px) 100vw, 1024px" /></figure>



<p class="wp-block-paragraph"></p>



<p class="wp-block-paragraph">ದಲಿತರಿಗೆ ಯಾರ ಕರುಣೆ, ದೇಣಿಗೆಯೂ ಬೇಕಿಲ್ಲ, ಸಾಂವಿಧಾನಿಕ ಹಕ್ಕು ಮತ್ತು ನ್ಯಾಯ ಮಾತ್ರ ಬೇಕು. ದಲಿತರು ಬಹಿಷ್ಕಾರ ಹಲ್ಲೆಗಳಿಗೊಳಗಾಗುತ್ತಿರುವ ಕಾಲದಲ್ಲೂ ಇತ್ತ  ಮುಖ್ಯಮಂತ್ರಿಗಳಿಗೆ  ದಲಿತರ ಮನೆಯೊಂದರಲ್ಲಿ ತಿನ್ನುವ ಅನ್ನವಾದರೂ ಗಂಟಲಲ್ಲಿ ಹೇಗೆ ಇಳಿಯಬಲ್ಲದು?</p>



<p class="wp-block-paragraph">ನಮ್ಮ ಮುಖ್ಯಮಂತ್ರಿ ಗಳು,</p>



<p class="wp-block-paragraph">ದಲಿತರ ಮನೆಯ ಹೊಸ್ತಿಲು ತುಳಿವಾಗ<br>ಚೆನ್ನಯ್ಯನ ಮನೆಯ ದಾಸನ ಮಗನು<br>ಕಕ್ಕಯ್ಯನ ಮನೆಯ ದಾಸಿಯ ಮಗಳು<br>ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ<br>ಸಂಗವ ಮಾಡಿದರು. ಇವರಿಬ್ಬರಿಗೆ ಹುಟ್ಟಿದ ಮಗ ನಾನು<br>ಕೂಡಲಸಂಗಮದೇವ ಸಾಕ್ಷಿಯಾಗಿ. </p>



<p class="wp-block-paragraph">ಎಂದು ವಚನ ಧರ್ಮದ ಪ್ರಾಮಾಣಿಕತೆಯನ್ನು ಪ್ರಮಾಣಿಸಿದರಾ?</p>



<p class="wp-block-paragraph">ಎಷ್ಟೇ ಆಗಲಿ ಅವರು ರಾಜಕಾರಣಿಗಳು. ಆದರೆ ನಮ್ಮ ಮಾಧ್ಯಮಗಳಾದರೂ &#8220;ದಲಿತರ ಮನೆ&#8221; ಗಳೆಂದು ಬಗೆದು ಬರೆಯುವುದಾದರೂ ಏಕೆ? ಮಾಧ್ಯಮಗಳು ಸ್ಥಾಪಿತ ಸಿದ್ಧಮಾದರಿಗೆ ಜೋತು ಬಿದ್ದು ಪ್ರಜ್ಞಾಪೂರ್ವಕವಾಗಿಯೇ ಜಾತೀಯತೆಯನ್ನು ಆಚರಿಸುತ್ತಾ ಬಂದಿವೆ ಎಂದು ಯಾರಿಗಾದರೂ ಅನಿಸಿದರೆ ಆಶ್ಚರ್ಯವೇನಿಲ್ಲ. ಇಲ್ಲದೆ ಹೋಗಿದ್ದರೆ ಮುಖ್ಯಮಂತ್ರಿ ಮತ್ತವರ ದಂಡು ಮಂಡಕ್ಕಿ ತಿಂದ ಮನೆಯನ್ನು ಮನುಷ್ಯರದ್ದು ಎಂದಷ್ಟೆ ಹೇಳುತ್ತಿದ್ದವು &#8220;ದಲಿತರ ಮನೆಯಲ್ಲಿ ಊಟ ಮಾಡಿದ / ಉಪಹಾರ ತಿಂದ/ ನೀರು ಕುಡಿದ/ ವಾಸ್ತವ್ಯ ಹೂಡಿದ ಮುಖ್ಯಮಂತ್ರಿಗಳು&#8221; ಎಂಬ ತಲೆ ಬರಹಗಳಡಿ ಸಡಗರಪಡುತ್ತಿರಲಿಲ್ಲ.</p>



<p class="wp-block-paragraph"><strong>ದಲಿತರೂ ಕೂಡ ಪಾರಂಪರಿಕ&nbsp; ದಾಸ್ಯ ಮನೋಭಾವದಿಂದ ಬಿಡುಗಡೆಗೊಳ್ಳದೇ ಹೋದರೆ &#8216;ಮನೆ&#8217;&nbsp; ಹುಡುಕಿಕೊಂಡು ಬರುವವರು ಇದ್ದೇ ಇರುತ್ತಾರೆ.</strong></p>



<p class="wp-block-paragraph"><strong>ದರ್ವಾಜಾ ಬಂದ್ ರಕೋ&#8230;</strong></p>



<p class="has-text-align-center wp-block-paragraph">(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲಾ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ.)</p>



<p class="wp-block-paragraph"><strong>ಎನ್‌ ರವಿಕುಮಾರ್‌</strong><br>ʼಶಿವಮೊಗ್ಗ ಟೆಲೆಕ್ಸ್ʼ ಕನ್ನಡ ದಿನಪತ್ರಿಕೆಯ ಸಂಪಾದಕರು. ಸಾಮಾಜಿಕ ಹೋರಾಟಗಾರ, ಪ್ರಗತಿಪರ ಚಿಂತಕ, ರಾಜಕೀಯ ವಿಶ್ಲೇಷಣಾಕಾರ.</p>
]]></content:encoded>
					
		
		
			</item>
	</channel>
</rss>
