<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Sara Ali Parladka &#8211; Peepal Media</title>
	<atom:link href="https://peepalmedia.com/author/sara-ali-parladka/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sat, 16 Sep 2023 13:49:54 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.9.4</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Sara Ali Parladka &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಮಕ್ಕಳ ಕಮರಿದ ಕನಸುಗಳು ಮತ್ತೆ ಚಿಗುರಲಿ&#8230;</title>
		<link>https://peepalmedia.com/let-the-lost-dreams-spring-up-again/</link>
		
		<dc:creator><![CDATA[Sara Ali Parladka]]></dc:creator>
		<pubDate>Sat, 16 Sep 2023 13:37:31 +0000</pubDate>
				<category><![CDATA[ಯುವ ನೋಟ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=27993</guid>

					<description><![CDATA[ಮಕ್ಕಳು ಭವಿಷ್ಯದಲ್ಲಿ&#160; ಸಫಲರಾಗಲು ಮೇಲಿಂದ ಮೇಲೆ&#160; ಅವಕಾಶಗಳನ್ನು ಕಲ್ಪಿಸಿ ಗೆಲುವು&#160; ಸಾಧಿಸುವವರೆಗೆ&#160;ಶಾಲೆಯಿಂದ ಪ್ರೋತ್ಸಾಹ ದೊರೆಯಬೇಕು. ಮಕ್ಕಳ ಕಮರಿ ಹೋದ ಆ ಕನಸುಗಳಿಗೆ ಅವಕಾಶಗಳನ್ನು ನೀಡುತ್ತಾ ಅವುಗಳನ್ನು ಮತ್ತೆ ಚಿಗುರಿಸಬೇಕು – ಸಾರಾಅಲಿ ಪರ್ಲಡ್ಕ, ಯುವ ಬರಹಗಾರ್ತಿ ಬದುಕಲ್ಲಿ ಸೋಲು, ಗೆಲುವು ಸಾಮಾನ್ಯ.&#160; ಆದರೆ ಅದನ್ನು ಸಮಚಿತ್ತದಿಂದ ಸ್ವೀಕರಿಸಬೇಕು&#160; ಅಂತ&#160; ಹೇಳುತ್ತಾರೆ. ‌ಆದರೆ&#160; ಕೆಲವು ಸಂದರ್ಭಗಳಲ್ಲಿ ಸೋತವರು&#160; ಸೋತ ಸ್ಥಿತಿಯಲ್ಲೇ ಉಳಿಯುವುದುಂಟು. ಅಂತಹವರಿಗೆ ಸುತ್ತಲಿನವರು ಅವಕಾಶಗಳನ್ನು&#160; ಕಲ್ಪಿಸಿ ಅವರನ್ನು ಮೇಲೆತ್ತಬೇಕು. ಹತ್ತನೆಯ ತರಗತಿಯಲ್ಲಿ&#160; ನಡೆಯುವ &#8220;CBSE ಬೋರ್ಡ್&#160; ಪರೀಕ್ಷೆಗೆ [&#8230;]]]></description>
										<content:encoded><![CDATA[
<p class="has-black-color has-text-color has-background" style="background-color:#abb7c259"><strong>ಮಕ್ಕಳು ಭವಿಷ್ಯದಲ್ಲಿ&nbsp; ಸಫಲರಾಗಲು ಮೇಲಿಂದ ಮೇಲೆ&nbsp; ಅವಕಾಶಗಳನ್ನು ಕಲ್ಪಿಸಿ ಗೆಲುವು&nbsp; ಸಾಧಿಸುವವರೆಗೆ&nbsp;ಶಾಲೆಯಿಂದ ಪ್ರೋತ್ಸಾಹ ದೊರೆಯಬೇಕು. ಮಕ್ಕಳ ಕಮರಿ ಹೋದ ಆ ಕನಸುಗಳಿಗೆ ಅವಕಾಶಗಳನ್ನು ನೀಡುತ್ತಾ ಅವುಗಳನ್ನು ಮತ್ತೆ ಚಿಗುರಿಸಬೇಕು – <mark style="background-color:rgba(0, 0, 0, 0)" class="has-inline-color has-vivid-red-color">ಸಾರಾಅಲಿ ಪರ್ಲಡ್ಕ, ಯುವ ಬರಹಗಾರ್ತಿ</mark></strong></p>



<p>ಬದುಕಲ್ಲಿ ಸೋಲು, ಗೆಲುವು ಸಾಮಾನ್ಯ.&nbsp; ಆದರೆ ಅದನ್ನು ಸಮಚಿತ್ತದಿಂದ ಸ್ವೀಕರಿಸಬೇಕು&nbsp; ಅಂತ&nbsp; ಹೇಳುತ್ತಾರೆ. ‌ಆದರೆ&nbsp; ಕೆಲವು ಸಂದರ್ಭಗಳಲ್ಲಿ ಸೋತವರು&nbsp; ಸೋತ ಸ್ಥಿತಿಯಲ್ಲೇ ಉಳಿಯುವುದುಂಟು. ಅಂತಹವರಿಗೆ ಸುತ್ತಲಿನವರು ಅವಕಾಶಗಳನ್ನು&nbsp; ಕಲ್ಪಿಸಿ ಅವರನ್ನು ಮೇಲೆತ್ತಬೇಕು.</p>



<p>ಹತ್ತನೆಯ ತರಗತಿಯಲ್ಲಿ&nbsp; ನಡೆಯುವ &#8220;CBSE ಬೋರ್ಡ್&nbsp; ಪರೀಕ್ಷೆಗೆ &#8221; ವರ್ಷದ ಆರಂಭದಿಂದ&nbsp; ಕೊನೆಯ ಪ್ರಮುಖ ಪರೀಕ್ಷೆ ಮುಗಿಯುವವರೆಗೆ&nbsp; ಶಿಕ್ಷಕರು ಹಾಗೂ ಪೋಷಕರು ಮಕ್ಕಳಲ್ಲಿ ಕಲಿಕೆಗೆ ಸಂಬಂಧಿಸಿದಂತೆ ಮುಖ್ಯ ಪಾತ್ರ ವಹಿಸಿ ಬಹಳವೇ ಜಾಗೃತಿಯನ್ನು ಮೂಡಿಸುತ್ತಾರೆ.&nbsp;&nbsp; ಪರೀಕ್ಷೆಯ ತಯಾರಿಯ&nbsp; ನಡುವಲ್ಲಿಯೂ ಮಕ್ಕಳು ತಮ್ಮ ಮುಂದಿನ ಭವಿಷ್ಯದ ಯೋಜನೆಗಳನ್ನು ರೂಪಿಸಿಕೊಳ್ಳುತ್ತಾ, ಮುಂದೆ ತಾವು ಓದಬೇಕಾದ ಕಾಲೇಜುಗಳನ್ನು ಆರಿಸಿಕೊಳ್ಳುವಷ್ಟರ&nbsp; ಮಟ್ಟಿಗೆ ತಮ್ಮದೇ ಆದ ಕನಸುಗಳಿಗೆ ರೆಕ್ಕೆ ಕಟ್ಟಿಕೊಂಡಿರುತ್ತಾರೆ.&nbsp; ವಿದ್ಯಾರ್ಥಿ ಜೀವನದಲ್ಲಿ ಹತ್ತನೆಯ ತರಗತಿಯ ಪರೀಕ್ಷೆ ಎಂದರೆ ಅತ್ಯಂತ ನಿರ್ಣಾಯಕ ಪರೀಕ್ಷೆಗಳಲ್ಲಿ ಒಂದೆಂದು ಪರಿಗಣಿತವಾಗಿರುವ ಕಾರಣ&nbsp; &nbsp;ಶಾಲಾ ಶಿಕ್ಷಕ ವೃಂದವು ಮಕ್ಕಳ ಅತ್ಯುತ್ತಮ ಫಲಿತಾಂಶದ ನಿರೀಕ್ಷೆಯನ್ನಿಟ್ಟು ಸಾಕಷ್ಟು ಶ್ರಮಿಸುತ್ತಿರುತ್ತಾರೆ. ಹೆತ್ತವರಂತೂ ಅವರ ಓದಿನಲ್ಲಿ&nbsp; ವಿಶೇಷವಾದ ಕಾಳಜಿ ವಹಿಸುವುದನ್ನು ಕಂಡು ಮಕ್ಕಳು ಕೂಡ ಆದಷ್ಟು ಏಕಾಗ್ರತೆಯಿಂದ ಕಲಿಕೆಯಲ್ಲಿ ತಲ್ಲೀನಗೊಳ್ಳುತ್ತಾರೆ.&nbsp;</p>



<p>ಕೊನೆಗೂ&nbsp; ಪಬ್ಲಿಕ್ ಪರೀಕ್ಷೆಯು ನಡೆದು ಫಲಿತಾಂಶವೂ&nbsp; ಹೊರ ಬರುತ್ತದೆ. ಅದರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಉತ್ತೀರ್ಣಗೊಳ್ಳುತ್ತಾರೆ. ಉತ್ತೀರ್ಣಗೊಂಡ ಮಕ್ಕಳು ತಮಗೆ ಲಭಿಸಿರುವ ಅಂಕಗಳ ಬಗ್ಗೆ ಹೆಮ್ಮೆಪಡುವುದೇನು,&nbsp; ಸಂಭ್ರಮಿಸುವುದೇನು&#8230;. ಎಲ್ಲೆಲ್ಲೂ ವಿದ್ಯಾರ್ಥಿಗಳು ಸಡಗರದಿಂದ&nbsp; ತಮ್ಮ ಅಂಕ ಪಟ್ಟಿಗಳನ್ನು&nbsp; ಸ್ಟೇಟಸ್ ಹಾಕಿಕೊಳ್ಳುವುದು,&nbsp;ತಮ್ಮ&nbsp;ಆತ್ಮೀಯರು ನೀಡುವ&nbsp; ಅಭಿನಂದನೆಗಳ, ಉಡುಗೊರೆಗಳ ಮಳೆಯಲ್ಲಿ ಮಿಂದೇಳುತ್ತಾ ಕುಣಿದು ವಿಜಯೋತ್ಸವ ಆಚರಿಸುತ್ತಿರುತ್ತಾರೆ.</p>



<p>ಮತ್ತೊಂದೆಡೆ ಪರೀಕ್ಷೆಗೆ ಸಾಕಷ್ಟು ಪೂರ್ವ ತಯಾರಿ ನಡೆಸಿದ  ಕೆಲವು ವಿದ್ಯಾರ್ಥಿಗಳು ಅನುತ್ತೀರ್ಣಗೊಳ್ಳುವುದಿದೆ.  ಇಷ್ಟೊಂದು ಪೂರ್ವ ಸಿದ್ಧತೆ ನಡೆಸಿಯೂ ಅನುತ್ತೀರ್ಣ ಗೊಂಡಿದ್ದಾರೆಂದರೆ, ಆ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವು ಬಹಳವೇ ಕುಂಠಿತವಾಗಿತ್ತೆಂದರ್ಥ.   ವ್ಯಕ್ತಿಯು ಯಾವುದೇ ವಿಷಯದಲ್ಲಿ ಯಶಸ್ವಿಯಾಗಲು ಸಾಮರ್ಥ್ಯಗಳ ಅಗತ್ಯವಿದೆ. ಶಿಕ್ಷಣ ಶಾಸ್ತ್ರದ ಪ್ರಕ್ರಿಯೆಗಳು ಕೂಡ ಮಗು ಕೇಂದ್ರಿತ ಮತ್ತು ವೈಯಕ್ತಿಕ ಸಾಧನೆಗಳ ಮೂಲಕ ಫಲ ನೀಡುತ್ತದೆ. ಕೆಲವು ಮಕ್ಕಳಿಗೆ ಕಲಿಕೆಯೆಂದರೆ ನೀರಿನಲ್ಲಿ ಕಾಗದದ ದೋಣಿ ಇಳಿಸಿ ಆಡಿದಷ್ಟು ಸರಳವಾಗಿದ್ದರೆ, ಇನ್ನು ಕೆಲವು ಮಕ್ಕಳಿಗೆಕಬ್ಬಿಣದ ಕಡಲೆ. </p>



<p>&nbsp;ಉತ್ತೀರ್ಣಗೊಂಡ ಅಷ್ಟೊಂದು ಮಕ್ಕಳ ಸಂಭ್ರಮಗಳ ಮಧ್ಯೆ ಅನುತ್ತೀರ್ಣಗೊಂಡ&nbsp; ವಿದ್ಯಾರ್ಥಿಗಳು ತಮ್ಮ ಕನಸುಗಳೆಲ್ಲವು&nbsp; ಕಮರಿಹೋದವೆಂದು&nbsp; ತಿಳಿದು ಮಾನಸಿಕವಾಗಿ ನೊಂದುಕೊಳ್ಳುತ್ತಾರೆ. ನಿರಾಶೆಯಿಂದ ಕೈ ಚೆಲ್ಲಿ ಕೂರದಂತೆ,&nbsp; ಫಲಿತಾಂಶ&nbsp; ಬಂದ ಅದೇ ತಿಂಗಳೊಳಗೆ&nbsp; ಶಿಕ್ಷಣ ಮಂಡಳಿಯು ಪೂರಕ ಪರೀಕ್ಷೆಯನ್ನು ಬರೆಯುವ ಅವಕಾಶವನ್ನು&nbsp; ನೀಡಿ ಅವರಿಗೆ ಪುನ: ಅವಕಾಶವನ್ನು ಕಲ್ಪಿಸುತ್ತದೆ.&nbsp; ಹೇಗೋ ಇನ್ನೊಮ್ಮೆ ಓದಿ ಪರೀಕ್ಷೆಗಳನ್ನು&nbsp; ಬರೆದು ಉತ್ತೀರ್ಣಗೊಂಡು&nbsp; &nbsp;ತಮ್ಮ&nbsp; &nbsp;ಸಹಪಾಠಿಗಳ&nbsp; ಜೊತೆಯಲ್ಲಿ ಮುಂದಿನ ವ್ಯಾಸಂಗ ನಡೆಸಬೇಕು ಎಂದುಕೊಂಡು ಪೂರಕ ಪರೀಕ್ಷೆಗಾಗಿ&nbsp; ಮತ್ತೆ ಸಜ್ಜಾಗುತ್ತಾರೆ. ಆದರೆ&nbsp; ಕೆಲವೊಮ್ಮೆ ಆ ಪರೀಕ್ಷೆಗಳು ಮೊದಲಿನ ಪರೀಕ್ಷೆಗಳಿಗಿಂತ ತುಸು ಜಟಿಲವೇ ಇರುತ್ತದೆ.&nbsp; ದುರಾದೃಷ್ಟವಶಾತ್&nbsp; ಕೆಲವು ಮಕ್ಕಳು&nbsp; ಇಲ್ಲಿಯೂ ಅನುತ್ತೀರ್ಣಗೊಳ್ಳುತ್ತಾರೆ. ಮೇಲಿಂದ ಮೇಲೆ ಅನುತ್ತೀರ್ಣಗೊಂಡ ಈ ಮಕ್ಕಳು ತಮ್ಮ ಮೇಲಿನ ಭರವಸೆಯನ್ನು ಸಂಪೂರ್ಣ ಕಳೆದುಕೊಂಡು ದಾರಿತಪ್ಪುವಂತದ್ದು ಪ್ರಾರಂಭವಾಗುವುದೇ ಇಲ್ಲಿಂದ.</p>



<figure class="wp-block-gallery has-nested-images columns-default is-cropped wp-block-gallery-1 is-layout-flex wp-block-gallery-is-layout-flex">
<figure class="wp-block-image size-large"><img fetchpriority="high" decoding="async" width="1024" height="576" data-id="27994" src="https://peepalmedia.com/wp-content/uploads/2023/09/result-1024x576.jpg" alt="" class="wp-image-27994" srcset="https://peepalmedia.com/wp-content/uploads/2023/09/result-1024x576.jpg 1024w, https://peepalmedia.com/wp-content/uploads/2023/09/result-300x169.jpg 300w, https://peepalmedia.com/wp-content/uploads/2023/09/result-768x432.jpg 768w, https://peepalmedia.com/wp-content/uploads/2023/09/result-150x84.jpg 150w, https://peepalmedia.com/wp-content/uploads/2023/09/result-696x392.jpg 696w, https://peepalmedia.com/wp-content/uploads/2023/09/result-1068x601.jpg 1068w, https://peepalmedia.com/wp-content/uploads/2023/09/result.jpg 1200w" sizes="(max-width: 1024px) 100vw, 1024px" /></figure>
</figure>



<p>ಪರೀಕ್ಷೆಯ ಸೋಲನ್ನು&nbsp; ಜೀವನದ ಸೋಲೆಂದು ಭ್ರಮಿಸಿ ಅಪಮಾನಕ್ಕೊಳಪಟ್ಟ ಈ&nbsp; ಮಕ್ಕಳನ್ನು&nbsp; ಸುತ್ತಲಿನ ಸಮಾಜದ ನಡವಳಿಕೆಯು ಮಾನಸಿಕವಾಗಿ&nbsp; ಕುಗ್ಗಿಸುತ್ತದೆ.&nbsp; ಶಾಲೆಯ&nbsp; ಕೀರ್ತಿಯ ಗುರಿಯನಿಟ್ಟು ಫಲಿತಾಂಶಕ್ಕಾಗಿ ಶ್ರಮಿಸಿದ ಬಹುತೇಕ ಶಾಲಾ ಶಿಕ್ಷಕ ವೃಂದದಿಂದ ಕೂಡ ಆಮೇಲಿನ ದಿನಗಳಲ್ಲಿ ಇವರಿಗಾಗಿ ಯಾವುದೇ&nbsp; ಯಾವುದೇ ಮಾಹಿತಿ ಮಾರ್ಗದರ್ಶನಗಳಾಗಲಿ ಸಿಗುವುದಿಲ್ಲ. ಇನ್ನು ನಿಮ್ಮ ಪಾಡು ನೀವೇ ನೋಡಿಕೊಳ್ಳಿ ಎಂಬಂತೆ&nbsp; ಅವರೊಳಗೆ ಭರವಸೆ ತುಂಬದೆ ಸಂಪೂರ್ಣವಾಗಿ ಕೈ ಬಿಟ್ಟು ಬಿಡುವುದೂ ಉಂಟು.&nbsp;ಇನ್ನು ತಮ್ಮ&nbsp; ಸ್ವಂತ ಮನೆಗಳಲ್ಲಿಯೂ&nbsp;ಮಾತಿನಲ್ಲಿ ನಿಂದಿಸಿ ತಿವಿಯುವ ಪೋಷಕರು,&nbsp;ಅಕ್ಕಪಕ್ಕದವರ ಪರಿಹಾಸ್ಯ ಇತ್ಯಾದಿಗಳನ್ನು ಅನುಭವಿಸುತ್ತಾ ಆ ಮಗು ತನ್ನ ಆತ್ಮಸ್ಥೈರ್ಯವನ್ನೇ ಕಳೆದುಕೊಳ್ಳುತ್ತದೆ. ಇಂತಹ ಸಂದರ್ಭಗಳಲ್ಲಿ ಕೆಲವು ಮಕ್ಕಳು ಜಿಗುಪ್ಸೆಗೊಂಡು ಹೇಳದೆ ಕೇಳದೆ ಮನೆ ತೊರೆಯುವುದೋ, ಇನ್ನು ಕೆಲವು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವುದೋ ನಡೆಯುತ್ತದೆ. ಮತ್ತೆ ಕೆಲವು ಮಕ್ಕಳು ತಾನಿನ್ನು ಓದುವುದೇ ಇಲ್ಲವೆಂದು ಕಲಿಕೆಗೆ ತಿಲಾಂಜಲಿ ಇಟ್ಟು ಕೈಗೆ ಸಿಕ್ಕಿದ ಕೆಲಸಕ್ಕೆ ಸೇರಿಕೊಂಡು ಅಷ್ಟರಲ್ಲೇ ಬದುಕು ಕಟ್ಟಿಕೊಳ್ಳುವುದೂ ಇದೆ.</p>



<p>ಈ ಎಲ್ಲ ಅಂಶಗಳನ್ನು ಗಮನಿಸಿ ನಮ್ಮ ರಾಜ್ಯದ ಶಿಕ್ಷಣ ಇಲಾಖೆಯು ಮಕ್ಕಳ&nbsp; ವಿದ್ಯಾರ್ಥಿ ಬದುಕು ಮೊಟಕುಗೊಳ್ಳದಂತೆ&nbsp; ಆ ಬಗ್ಗೆ ಮತ್ತೊಮ್ಮೆ ಚಿಂತನೆ ನಡೆಸಲೇಬೇಕು. ಪೂರಕ ಪರೀಕ್ಷೆಯಲ್ಲಿಯೂ ಅನುತ್ತೀರ್ಣರಾದ &nbsp;ಮಕ್ಕಳ ಭವಿಷ್ಯದ&nbsp;ದೃಷ್ಟಿಯಿಂದ&nbsp;ಪುನ:ಮರು ಪರೀಕ್ಷೆ ಬರೆಯುವಂತೆ ಅವಕಾಶಗಳನ್ನು ಹೊಂದಿಸಬೇಕು. ಅವರ ಪಾಲಿನ&nbsp; ಒಂದು ಶೈಕ್ಷಣಿಕ ವರ್ಷವೇ&nbsp; ಹಾಳಾಗದಂತೆ ತಡೆಯಬೇಕು.&nbsp; ಮಕ್ಕಳು ಭವಿಷ್ಯದಲ್ಲಿ&nbsp; ಸಫಲರಾಗಲು ಮೇಲಿಂದ ಮೇಲೆ&nbsp; ಅವಕಾಶಗಳನ್ನು ಕಲ್ಪಿಸಿ ಗೆಲುವು&nbsp; ಸಾಧಿಸುವವರೆಗೆ&nbsp;ಶಾಲೆಯಿಂದ ಪ್ರೋತ್ಸಾಹ ದೊರೆಯಬೇಕು. ಮಕ್ಕಳ ಕಮರಿ ಹೋದ ಆ ಕನಸುಗಳಿಗೆ ಅವಕಾಶಗಳನ್ನು ನೀಡುತ್ತಾ ಅವುಗಳನ್ನು ಮತ್ತೆ ಚಿಗುರಿಸಬೇಕು.</p>



<p><a><strong><mark style="background-color:rgba(0, 0, 0, 0)" class="has-inline-color has-black-color">ಸಾರಾಅಲಿ ಪರ್ಲಡ್ಕ</mark></strong></a></p>



<p>ಯುವ ಬರಹಗಾರ್ತಿ</p>



<p class="has-vivid-red-color has-text-color"><strong><a href="https://peepalmedia.com/rollcall-journalists/" data-type="post" data-id="27979">ಇದನ್ನೂ ಓದಿ</a></strong><a href="https://peepalmedia.com/rollcall-journalists/" data-type="post" data-id="27979"> : </a><a href="https://peepalmedia.com/rollcall-journalists/" data-type="post" data-id="27979">ರೋಲ್ಕಾಲ್ ಪತ್ರಕರ್ತರ ಕಾಟ, ಕಲಾವಿದರಿಗೆ ಪೀಕಲಾಟ</a></p>
]]></content:encoded>
					
		
		
			</item>
		<item>
		<title>ಹೆಣ್ಣು ಒಂದು ಹೆಜ್ಜೆ ಮುಂದಿಟ್ಟರೆ ನಾಲ್ಕು ಹೆಜ್ಜೆ ಹಿಂದಿಡುತ್ತಾಳೆ</title>
		<link>https://peepalmedia.com/if-a-woman-takes-one-step-forward-she-takes-four-steps-back/</link>
		
		<dc:creator><![CDATA[Sara Ali Parladka]]></dc:creator>
		<pubDate>Thu, 22 Jun 2023 07:11:21 +0000</pubDate>
				<category><![CDATA[ಹೆಣ್ಣೋಟ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=22571</guid>

					<description><![CDATA[ತಲೆಯೊಳಗೆ ಭದ್ರವಾಗಿರಿಸಿಕೊಂಡ ಹಿರಿಯರ ಬುದ್ಧಿವಾದಗಳಿಂದಾಗಿ ತಾನು ಹೊತ್ತ ಎಲ್ಲಾ ಜವಾಬ್ದಾರಿಗಳನ್ನು ಕಳಚಿಟ್ಟು ಹೆಣ್ಣು ತನಗಾಗಿ ಬದುಕನ್ನು ರೂಪಿಸಿಕೊಳ್ಳುವುದು ವಿರಳ – ಸಾರಾಅಲಿ ಪರ್ಲಡ್ಕ, ಯುವ ಬರಹಗಾರ್ತಿ ಸ್ತ್ರೀ ಮತ್ತು ಪುರುಷರ ನಡುವಿನ ಅಸಮಾನತೆಯು ಕಳಚಿ ಹೆಣ್ಣು ಜಾತಿಗಂಟಿದ ಕೀಳರಿಮೆ, ಅನ್ಯಾಯಗಳನ್ನು ತೊಡೆದು ಹಾಕುವುದು &#160;ಸಮಾನತೆಯ ಆಶಯ. ಮಹಿಳಾ ಸಮಾನತೆಗಾಗಿ ನಡೆಯುವ &#160;ಹೋರಾಟಗಳು ಇಂದಿಗೂ ಮುಂದುವರಿಯುತ್ತಲೇ ಇವೆ ಎಂದರೆ ಇಲ್ಲಿ ಸಮಸ್ಯೆ ಪರಿಹಾರಗೊಂಡಿಲ್ಲ ಎಂದೇ ಅರ್ಥ. ಮಹಿಳಾ ಸಮಾನತೆಯತ್ತ ಇಟ್ಟ ಹೆಜ್ಜೆಗಳನ್ನು ಹಿಂತಿರುಗಿ ನೋಡಿದರೆ &#160;&#160;ಇಂದು&#160; ಸ್ತ್ರೀ&#160; ಭೂತಕಾಲಕ್ಕಿಂತ&#160; [&#8230;]]]></description>
										<content:encoded><![CDATA[
<p class="has-vivid-cyan-blue-color has-text-color"><strong>ತಲೆಯೊಳಗೆ ಭದ್ರವಾಗಿರಿಸಿಕೊಂಡ ಹಿರಿಯರ ಬುದ್ಧಿವಾದಗಳಿಂದಾಗಿ ತಾನು ಹೊತ್ತ ಎಲ್ಲಾ ಜವಾಬ್ದಾರಿಗಳನ್ನು ಕಳಚಿಟ್ಟು ಹೆಣ್ಣು ತನಗಾಗಿ ಬದುಕನ್ನು ರೂಪಿಸಿಕೊಳ್ಳುವುದು ವಿರಳ </strong><strong>–</strong><strong> ಸಾರಾಅಲಿ ಪರ್ಲಡ್ಕ, ಯುವ ಬರಹಗಾರ್ತಿ</strong></p>



<p><strong>ಸ್ತ್ರೀ</strong> ಮತ್ತು ಪುರುಷರ ನಡುವಿನ ಅಸಮಾನತೆಯು ಕಳಚಿ ಹೆಣ್ಣು ಜಾತಿಗಂಟಿದ ಕೀಳರಿಮೆ, ಅನ್ಯಾಯಗಳನ್ನು ತೊಡೆದು ಹಾಕುವುದು &nbsp;ಸಮಾನತೆಯ ಆಶಯ. ಮಹಿಳಾ ಸಮಾನತೆಗಾಗಿ ನಡೆಯುವ &nbsp;ಹೋರಾಟಗಳು ಇಂದಿಗೂ ಮುಂದುವರಿಯುತ್ತಲೇ ಇವೆ ಎಂದರೆ ಇಲ್ಲಿ ಸಮಸ್ಯೆ ಪರಿಹಾರಗೊಂಡಿಲ್ಲ ಎಂದೇ ಅರ್ಥ. ಮಹಿಳಾ ಸಮಾನತೆಯತ್ತ ಇಟ್ಟ ಹೆಜ್ಜೆಗಳನ್ನು ಹಿಂತಿರುಗಿ ನೋಡಿದರೆ &nbsp;&nbsp;ಇಂದು&nbsp; ಸ್ತ್ರೀ&nbsp; ಭೂತಕಾಲಕ್ಕಿಂತ&nbsp; ಸ್ವಲ್ಪ &nbsp;ಸುಧಾರಿತ ಸ್ಥಾನಮಾನವನ್ನು ಹೊಂದಿದ್ದಾಳೆ ಅಂದುಕೊಳ್ಳಬಹುದಷ್ಟೆ. ಹೆಣ್ಣು ಒಂದು ಹೆಜ್ಜೆ ಮುಂದಿಟ್ಟರೆ ನಾಲ್ಕು ಹೆಜ್ಜೆ ಹಿಂದಿಟ್ಟಿರುವ &nbsp;ವಿದ್ಯಮಾನಗಳು ನಮ್ಮ ಎದುರಲ್ಲೇ ಇವೆ.</p>



<p>ಹಾಗೆ ನೋಡಿದರೆ ಹೆಣ್ಣಿನ ತಾಯ್ತನದ ಸಾಮರ್ಥ್ಯ, ಪೋಷಣೆಯ ಕಾರ್ಯ,&nbsp; ಬಿಡುವಿಲ್ಲದ ಮನೆ ಕೆಲಸ, ಹೊರಗಿನ ದುಡಿಮೆ, ಸಮಾಜದಲ್ಲಿನ ಅವಳ ಕಾರ್ಯವೈಖರಿ ಇತ್ಯಾದಿಗಳನ್ನು ಪರಿಶೀಲಿಸಿದಾಗ&nbsp; ಹೆಣ್ಣು&nbsp; &nbsp;ಎಲ್ಲದರಲ್ಲೂ ಸಮರ್ಥಳು ಎನ್ನಲೇಬೇಕು. ಆದರೆ ಎಲ್ಲವನ್ನು ಮಾಡುತ್ತಾಳೆ ಅಂತ ʼಇದೆಲ್ಲವೂʼ ಅವಳಿಗೇ ಮೀಸಲು ಎಂಬ ಭಾವನೆ ಸಮಾಜದಲ್ಲಿ ಹಾಸುಹೊಕ್ಕಿರುವುದು ವಿಪರ್ಯಾಸ.&nbsp; ಆಕೆಗೆ ಬೇಕಿರುವುದು ಸಮಾನತೆಯಲ್ಲ ಬದಲಿಗೆ ಗಂಡಿಗಿಂತ ಎರಡು ಪಟ್ಟು ಮೇಲಿನ ಸ್ಥಾನ. ತನಗೆ&nbsp; ಅದು ಬೇಕೆಂದು ಕೇಳುವ ಗುಂಡಿಗೆ ಅವಳಿಗಿದೆ.</p>



<p>ವಿವಾಹದ ವಯಸ್ಸಿಗೆ&nbsp; ಬರುತ್ತಿದ್ದಂತೇ&nbsp; &nbsp;ಹೆತ್ತವರ ಜವಾಬ್ದಾರಿ ನಿರ್ವಹಣೆಗೆ &nbsp;ಸೋತು, ಅವರ ಆಯ್ಕೆಗೆ&nbsp; ಒಪ್ಪಿಗೆಯ ಸಾಥ್‌ ನೀಡಬೇಕಾಗುತ್ತದೆ. ಗಂಡನ&nbsp; ಪ್ರೀತಿಗಾಗಿ ತನ್ನೆಲ್ಲ ಕನಸುಗಳಿಗೆ ಪೂರ್ಣ ವಿರಾಮವಿಟ್ಟು ಬಾಳಸಂಗಾತಿಯ ಜೊತೆ ಹೆಜ್ಜೆ ಇಡಲಾರಂಭಿಸ ಬೇಕಾಗುತ್ತದೆ. ಪತ್ನಿ ಎನ್ನುವ ಪದವಿಯನ್ನು ನಿಭಾಯಿಸುವಾಗ ಅವಳು ಭಾವನಾತ್ಮಕವಾಗಿಯೂ, ಅನಿವಾರ್ಯವಾಗಿಯೂ&nbsp; ಬದುಕಿನಲ್ಲಿ&nbsp; ಎದುರಾಗುವ ಪ್ರತಿಯೊಂದಕ್ಕೂ&nbsp; ಶಿರಬಾಗಲೇ ಬೇಕಾಗುತ್ತದೆ.&nbsp; ಮದುವೆಯ ಆನಂತರ&nbsp; ಗಂಡನಿಗೆ&nbsp; ತಕ್ಕ ಹೆಂಡತಿಯಾಗಿ,&nbsp; ಅತ್ತೆ ಮಾವಂದಿರ ಸೇವೆ, ಬಸಿರು, ಬಾಣಂತನ,&nbsp; ತಾಯ್ತನ, ಮಕ್ಕಳ ಪೋಷಣೆ, ಕುಟುಂಬ ಸಂಭಾಳಿಸುವಿಕೆ ಹೀಗೇ ಹಲವು ಹಂತಗಳನ್ನು&nbsp; ಹೆಣ್ಣು ತನ್ನ ಕರ್ತವ್ಯವೆಂದು ಬಗೆದು ತನ್ನನ್ನು ತಾನು ಆ ಜವಾಬ್ದಾರಿಗೆ ಪಳಗಿಸಿಕೊಳ್ಳುತ್ತಾಳೆ. ಇದೆಲ್ಲವನ್ನು ನಿರ್ವಹಿಸುತ್ತಾ ಬದುಕು ಸಾಗುವಾಗ ಅವಳು ಬಾವಿಯೊಳಗಿನ ಕಪ್ಪೆಯಂತೆ ತನ್ನ ಪೂರ್ಣ ಜೀವನವನ್ನು ಅಷ್ಟಕ್ಕೇ ಹೊಂದಿಸಿಕೊಂಡು ಸಂತೃಪ್ತಿಯ ಮುಖವಾಡವನ್ನು ಧರಿಸುತ್ತಾಳೆ.&nbsp;ಆಗಲೇ ಯಜಮಾನಿ ಎನ್ನುವ ಕಿರೀಟವೊಂದು ಶಿರವೇರುತ್ತದೆ. ಅಲ್ಲಿಂದ ಮತ್ತೆ ಸಮಾನತೆಯ&nbsp; ಆಸೆ ಆಕೆಯ ಮನದಿಂದ ಬತ್ತಿಯೇ ಹೋಗುತ್ತದೆ.</p>



<figure class="wp-block-gallery has-nested-images columns-default is-cropped wp-block-gallery-2 is-layout-flex wp-block-gallery-is-layout-flex">
<figure class="wp-block-image size-large"><img decoding="async" width="435" height="696" data-id="22573" src="https://peepalmedia.com/wp-content/uploads/2023/06/Women-Pressure.jpg" alt="" class="wp-image-22573" srcset="https://peepalmedia.com/wp-content/uploads/2023/06/Women-Pressure.jpg 435w, https://peepalmedia.com/wp-content/uploads/2023/06/Women-Pressure-188x300.jpg 188w, https://peepalmedia.com/wp-content/uploads/2023/06/Women-Pressure-150x240.jpg 150w, https://peepalmedia.com/wp-content/uploads/2023/06/Women-Pressure-300x480.jpg 300w" sizes="(max-width: 435px) 100vw, 435px" /></figure>
</figure>



<p class="has-text-align-center">Photo: The Hindu Business Line</p>



<p>ಮದುವೆ ಆಗಿ ಮಕ್ಕಳಾದವೆಂದರೆ&nbsp; ಅವಳೊಂದು&nbsp; ರೆಕ್ಕೆ ಕತ್ತರಿಸಲ್ಪಟ್ಟ ಹಕ್ಕಿಯ ತರಹ. ಮತ್ತೆ ಮುಂದೆಂದೂ ಹಾರಲು ಸಾಧ್ಯವಿಲ್ಲವೆಂದು ಅವರೆಲ್ಲರಿಗೂ ಖಚಿತವಾಗಿಬಿಡುತ್ತದೆ.&nbsp; ಅಂದರೆ ತನ್ನ ಗುರಿ ತಲುಪಲೆಂದು ಈ ಹೊಣೆಗಾರಿಕೆಗಳಿಂದ ಆಕೆ ನುಣುಚಿ ಕೊಳ್ಳಲಾರಳೆಂಬುದು ಅವರಿಗೆ ಖಾತರಿಯಾಗುತ್ತದೆ. ಆಕೆಯೂ ತನಗಾಗುವ&nbsp; ಶೋಷಣೆಗಳನ್ನು ಸಹಿಸಿ ಕೊಳ್ಳುತ್ತಾ ಇರುವಲ್ಲಿಗೇ ತಾನು ಹೊಂದಿಕೊಳ್ಳುತ್ತಾಳೆ.</p>



<p>ಕಾಲ ಕ್ರಮೇಣ ಕೆಲಸದಲ್ಲೇನಾದರೂ ಹೆಚ್ಚು ಕಡಿಮೆ ಕಂಡರೆ&nbsp; ಅವರೆಲ್ಲರಿಂದ ಬೈಸಿಕೊಳ್ಳುವುದು, ತನ್ನ ಮೇಲೆರಗುವ ರೇಗಾಟದಂತಹ ಮಾನಸಿಕ ಹಿಂಸೆಗಳೆಲ್ಲವನ್ನು ಸಹಿಸಿಕೊಳ್ಳುತ್ತಾ, ಕೆಲವನ್ನು ಕಂಡೂ ಕಾಣದಂತೆ ಇದೆಲ್ಲವೂ ಹೆಣ್ಣಿಗೆ ಮಾಮೂಲಿಗಳೆಂಬಂತೆ&nbsp; ಕಣ್ಣುಮುಚ್ಚಿ ತನ್ನನ್ನು ತಾನು ತಣ್ಣಗಿರಿಸಿಕೊಳ್ಳುತ್ತಾಳೆ.&nbsp; ಹೆಣ್ಣನ್ನು ವೇತನರಹಿತ ಆಳಿನಂತೆ&nbsp; ನಡೆಸಿಕೊಳ್ಳುವವರೇ ಹೆಚ್ಚು.&nbsp; ಆದರೂ ಕೂಡ ಇವೆಲ್ಲವುಗಳನ್ನು ಆಕೆ ತನ್ನ ಬದುಕಿನ &#8220;ಸಂತೃಪ್ತಿ&#8221; ಎಂದುಕೊಳ್ಳುವುದೇ ಅಚ್ಚರಿಯ ಸಂಗತಿ!. ಹೆಣ್ಣು ತನ್ನ ಬದುಕಲ್ಲಿ ಸೋಲುವುದು ಅವಳೊಳಗಿನ ಮಮಕಾರದ ಮುಂದೆ.&nbsp; ಮಕ್ಕಳ ಭವಿಷ್ಯಕ್ಕಾಗಿ ಎಂತಹ ತ್ಯಾಗಕ್ಕೂ ಆಕೆ ಸಿದ್ಧಳಿರುತ್ತಾಳೆ. ಹುಟ್ಟಿದ ಮನೆಯಿಂದಲೂ, ಮೆಟ್ಟಿದ ಮನೆಯವರಿಂದಲೂ&nbsp; ಹಿತವಚನ&nbsp; ಹೇಳಿಸಿ, ಸಾಮಾಜೀಕರಣ ಗೊಳಿಸಿ ಅವಳ&nbsp; ಮನಸನ್ನು&nbsp; ಆ ಬದುಕಿಗೆ ಒಗ್ಗಿಸಿ ಬಿಡುತ್ತಾರೆ.&nbsp;ಹೊರಲಾರದಷ್ಟು ಜವಾಬ್ದಾರಿಗಳನ್ನು ಹೊತ್ತು ಬಸವಳಿದ ಹೆಣ್ಣನ್ನು&nbsp;ಅವಳ ದಣಿವು ಮನೆಯೊಳಗೆಯೇ&nbsp; ಬಂಧಿಸಿ ಬಿಡುತ್ತದೆ.&nbsp; ಆ ಹೆಣ್ಣು ಮಗಳು ಚಿಕ್ಕ ವಯಸ್ಸಿಗೆ&nbsp; ಎಲ್ಲ ರೀತಿಯ ಬದುಕಿನ ಸೌಂದರ್ಯವನ್ನು ಕಳೆದುಕೊಳ್ಳುತ್ತಾಳೆ.</p>



<p><strong>ಇದ್ನು ಓದಿದ್ದೀರಾ?</strong> <a href="https://peepalmedia.com/najma-baangi/" data-type="post" data-id="21869">ಮನದಿಚ್ಛೆಯಂತೆ ಇದ್ದೆ, ಉಟ್ಟೆ, ತೊಟ್ಟೆ-ನಜ್ಮಾ ಬಾಂಗಿ</a></p>



<p>ತವರಿನಿಂದ&nbsp; ಧಾರೆ ಎರೆದು ಕೊಡಬೇಕಾದರೆ ಮಗಳಿಗೆ ಒಂದು ಮಾತು ಹೇಳಿಯೇ ಕಳುಹಿಸುತ್ತಾರೆ. ಮಗಳೇ&#8230;ಏನಾದರೊಂದು ಮಾತು ಬರುತ್ತೆ, ಹೋಗುತ್ತೆ &#8230;ಆದರೆ ನೀನು ಎಲ್ಲವನ್ನು ಹೊಟ್ಟೆಗೆ ಹಾಕಿಕೊಂಡು ಅವರೊಂದಿಗೆ ಹೊಂದಿಕೊಂಡು ಅಲ್ಲಿ ಬದುಕು ಕಟ್ಟಿಕೊಳ್ಳಬೇಕು&nbsp; ಅಂತ.&nbsp; ತಲೆಯೊಳಗೆ ಭದ್ರವಾಗಿರಿಸಿಕೊಂಡ ಈ ಬುದ್ಧಿವಾದಗಳಿಂದಾಗಿ ತಾನು ಹೊತ್ತ ಎಲ್ಲಾ ಜವಾಬ್ದಾರಿಗಳನ್ನು ಕಳಚಿಟ್ಟು ಯಾವತ್ತೂ ಹೆಣ್ಣು ತನಗಾಗಿ ಬದುಕನ್ನು ರೂಪಿಸಿಕೊಳ್ಳುವುದು ವಿರಳ.&nbsp;</p>



<p><strong>ಸಾರಾಅಲಿ ಪರ್ಲಡ್ಕ</strong></p>



<p>ಬರಹಗಾರ್ತಿ</p>



<p><strong>ಇದನ್ನೂ ಓದಿ-</strong> <a href="https://peepalmedia.com/?page_id=22572" data-type="page" data-id="22572" target="_blank" rel="noreferrer noopener">ನಾವೆಲ್ಲರೂ ಮುಟ್ಟಾಗುವ ಹೆಣ್ಣಿನ ಒಡಲ ಉತ್ಪನ್ನಗಳೇ…</a></p>
]]></content:encoded>
					
		
		
			</item>
		<item>
		<title>ವಯಸ್ಸು ನಲವತ್ತು, ನೆನಪೇ ಸವಲತ್ತು</title>
		<link>https://peepalmedia.com/vayassu-nalavattu-nenape-savalattu/</link>
		
		<dc:creator><![CDATA[Sara Ali Parladka]]></dc:creator>
		<pubDate>Wed, 28 Sep 2022 03:21:50 +0000</pubDate>
				<category><![CDATA[ವಿಶೇಷ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[kannada writing]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[special]]></category>
		<category><![CDATA[special story]]></category>
		<category><![CDATA[writing]]></category>
		<guid isPermaLink="false">https://peepalmedia.com/?p=7595</guid>

					<description><![CDATA[ಜೀವನವನ್ನು ಆದಷ್ಟು ಬದುಕಿಯೇ ಬಿಡಬೇಕೆನ್ನುವ ಧಾವಂತಕ್ಕೆ ಬಿದ್ದು, ತಿಂದುಂಡು ಕುಣಿದಾಡಿಕೊಳ್ಳುತ್ತಾ ಮೋಜು ಮಸ್ತಿ ನಡೆಸುವುದೇ ಬದುಕೆಂದುಕೊಂಡ ಈ ತಲೆಮಾರಿಗೆ ಬದುಕಲ್ಲಿ ಅಲ್ಲಲ್ಲಿ ಕೈ ಕೊಡುವ ಸಮಸ್ಯೆಗಳು ಬದುಕಿನ ವಸಂತಗಳನ್ನು ಕನಿಷ್ಠವನ್ನಾಗಿಸಿ ಬಿಡುತ್ತವೆ ಎನ್ನುತ್ತಾರೆ ಸಾರಾ ಅಲಿ ಪರ್ಲಡ್ಕ. ಮಳೆಯ ಹನಿಗಳಿಂದ ಮೂಡುವ ನೀರ ಗುಳ್ಳೆಗಳು ಕ್ಷಣ ಮಾತ್ರದಲ್ಲಿ ಅದೇ ನೀರಿನೊಂದಿಗೆ ಲೀನವಾಗಿ ಕಣ್ಮರೆಯಾಗುವಷ್ಟೇ ಈ ಮಾನವ ಬದುಕೆಂಬುದು ನಿರರ್ಗಳವಾಗಿ ಒಪ್ಪಿಕೊಳ್ಳುವಂತದ್ದು. ಜೀವನವನ್ನು ಆದಷ್ಟು ಬದುಕಿಯೇ ಬಿಡಬೇಕೆನ್ನುವ ಧಾವಂತಕ್ಕೆ ಬಿದ್ದು, ತಿಂದುಂಡು ಕುಣಿದಾಡಿಕೊಳ್ಳುತ್ತಾ ಮೋಜು ಮಸ್ತಿ ನಡೆಸುವುದೇ ಬದುಕೆಂದುಕೊಂಡ [&#8230;]]]></description>
										<content:encoded><![CDATA[
<p style="font-size:20px"><strong>ಜೀವನವನ್ನು ಆದಷ್ಟು ಬದುಕಿಯೇ ಬಿಡಬೇಕೆನ್ನುವ ಧಾವಂತಕ್ಕೆ ಬಿದ್ದು, ತಿಂದುಂಡು ಕುಣಿದಾಡಿಕೊಳ್ಳುತ್ತಾ ಮೋಜು ಮಸ್ತಿ ನಡೆಸುವುದೇ ಬದುಕೆಂದುಕೊಂಡ ಈ ತಲೆಮಾರಿಗೆ ಬದುಕಲ್ಲಿ ಅಲ್ಲಲ್ಲಿ ಕೈ ಕೊಡುವ ಸಮಸ್ಯೆಗಳು ಬದುಕಿನ ವಸಂತಗಳನ್ನು ಕನಿಷ್ಠವನ್ನಾಗಿಸಿ ಬಿಡುತ್ತವೆ ಎನ್ನುತ್ತಾರೆ ಸಾರಾ ಅಲಿ ಪರ್ಲಡ್ಕ.</strong></p>



<p style="font-size:20px">ಮಳೆಯ ಹನಿಗಳಿಂದ ಮೂಡುವ ನೀರ ಗುಳ್ಳೆಗಳು ಕ್ಷಣ ಮಾತ್ರದಲ್ಲಿ ಅದೇ ನೀರಿನೊಂದಿಗೆ ಲೀನವಾಗಿ ಕಣ್ಮರೆಯಾಗುವಷ್ಟೇ ಈ ಮಾನವ ಬದುಕೆಂಬುದು ನಿರರ್ಗಳವಾಗಿ ಒಪ್ಪಿಕೊಳ್ಳುವಂತದ್ದು. ಜೀವನವನ್ನು ಆದಷ್ಟು ಬದುಕಿಯೇ ಬಿಡಬೇಕೆನ್ನುವ ಧಾವಂತಕ್ಕೆ ಬಿದ್ದು, ತಿಂದುಂಡು ಕುಣಿದಾಡಿಕೊಳ್ಳುತ್ತಾ ಮೋಜು ಮಸ್ತಿ ನಡೆಸುವುದೇ ಬದುಕೆಂದುಕೊಂಡ ಈ ತಲೆಮಾರಿಗೆ&nbsp; ಬದುಕಲ್ಲಿ ಅಲ್ಲಲ್ಲಿ ಕೈ ಕೊಡುವ ಸಮಸ್ಯೆಗಳು&nbsp; ಬದುಕಿನ ವಸಂತಗಳನ್ನು ಕನಿಷ್ಠವನ್ನಾಗಿಸಿಬಿಡುತ್ತವೆ.</p>



<p style="font-size:20px">ನಲವತ್ತು ದಾಟಿದೊಡನೆ ವೈದ್ಯಕೀಯ ಪರೀಕ್ಷೆಗಳಿಗೆ ದೇಹವನ್ನು ಒಡ್ಡಬೇಕೆನ್ನುವಂತಹ ಸಿದ್ಧಾಂತವು ಸಾರ್ವತ್ರಿಕವಾಗಿ ಪ್ರಚಲಿತದಲ್ಲಿದೆ. ವರ್ಷ ನಲವತ್ತು ಆಗುತ್ತಿದ್ದಂತೆ ಏನೋ ನಡೆಯಬಾರದ್ದು ನಡೆದಿರುವಂತೆ ಗಡಗಡ ನಡುಗಬೇಕಿಲ್ಲ. </p>



<p style="font-size:20px">ವೈದ್ಯಕೀಯ ತಪಾಸಣಾಕೇಂದ್ರಗಳಲ್ಲಿ, ಪ್ರಯೋಗಾಲಯದಲ್ಲಿ ದುಂಬಾಲು ಬಿದ್ದು ರೋಗಗಳೇನಾದರೂ ಭಾದಿಸಿದೆಯೋ ಎಂದು ಚಾತಕ ಪಕ್ಷಿಯಂತೆ ಕಾಯುತ್ತ ಇರಬೇಕಾಗಿಯೂ ಇಲ್ಲ. ಅಂತಹ ಚಿಂತನೆಗಳಿಂದ&nbsp; ಶರೀರವನ್ನು ರೋಗಗಳು ಪ್ರವೇಶಿಸುವ ಸಾಧ್ಯತೆಗಳು ಹೆಚ್ಚಾಗಿರುವುದು. ನಕಾರಾತ್ಮಕ ಚಿಂತನೆಗಳಿಂದ ಮನಸ್ಸನ್ನು ಮುಕ್ತವಾಗಿರಿಸಬೇಕು. ನಲವತ್ತು ಕಳೆಯುತ್ತಿದ್ದಂತೆಯೇ ಮೊದಲಿನಂತೆ ಬದುಕಲು ಮುಜುಗರ ಪಡುವವರಿದ್ದಾರೆ. ಅವರನ್ನು ಸಮಾಜವು ಪರೋಕ್ಷವಾಗಿ ಮುಪ್ಪಿಗೆ ಒಗ್ಗಲು ತಾಕೀತು ಮಾಡುತ್ತಲಿರುತ್ತದೆ. ಮೊದಲಿನಂತೆ ಬಟ್ಟೆ ಬರೆ ತೊಡುವುದನ್ನೋ, ಮುಂಚಿನ ಹುಡುಗಾಟಿಕೆಗಳ ತೊರೆಯಬೇಕೆನ್ನುವುದನ್ನು&nbsp; ನಿರ್ಲಕ್ಷಿಸಿಕೊಂಡು ತಮ್ಮ ಬಯಕೆಯಂತೆ&nbsp; ಬದುಕು ನಡೆಸುವುದರಲ್ಲೇನೂ ತಪ್ಪಿಲ್ಲ. ವಯಸ್ಸನ್ನು ವ್ಯಂಗ್ಯವಾಡುವವರಿಗೆ ನೀವು ನೀಡಬೇಕಾದ ಉತ್ತರ ಈ&nbsp; ಫೋರ್ಟಿ ಎನ್ನುವುದು ಜಸ್ಟ್ ನಂಬರಲ್ಲವೇ ಎಂದು. ಮನಸ್ಸು ಇಚ್ಚಿಸಿದಂತೆ ಶರೀರದ ಬೆಳವಣಿಗೆಯು ನಲವತ್ತು ಆಗುವುದರಲ್ಲಿ ಸಂಪೂರ್ಣತೆ ಹೊಂದುತ್ತದೆ ಅಷ್ಟೇ. ಬದುಕಿನ ಪ್ರಾಥಮಿಕ ಹಂತದಲ್ಲಿ ಒಳ್ಳೆಯ ಅಥವಾ ಕೆಟ್ಟ ಅಭ್ಯಾಸಗಳು ಬಲು ಬೇಗನೆ ಜೀವನ ಶೈಲಿಯಾಗಿ ಮಾರ್ಪಾಡು ಆಗುತ್ತವೆ. ನಲವತ್ತರ ನಂತರದಲ್ಲಿ ಹೊಸ ಅಭ್ಯಾಸಗಳನ್ನು ಪರಿಪಾಠ ಗೊಳಿಸಿಕೊಳ್ಳುವುದು ವಿರಳ. ಆದರೆ ತನ್ನಲ್ಲಿನ ತಪ್ಪುಗಳನ್ನು ತಿದ್ದಿ ಸುಂದರ ಬದುಕು ಕಟ್ಟಲು ಅಥವಾ ಜ್ಞಾನೋದಯಕ್ಕೆ ನಲವತ್ತನೇ ವಯಸ್ಸು ಪ್ರೋತ್ಸಾಹಿಸುತ್ತದೆ. ನಲವತ್ತರಲ್ಲಿ ತಿದ್ದಿ ಬಾಳದವನು ಮತ್ತೆ ತನ್ನ ಜೀವನದಲ್ಲಿ ಬದಲಾವಣೆಗೆ ಪ್ರಯತ್ನಿಸಲಾರ ಎನ್ನುವ ಮಾತೊಂದನ್ನು ಹಿರಿಯರು ಹೇಳುತ್ತಿರುತ್ತಾರೆ.</p>



<figure class="wp-block-image size-full is-resized"><img decoding="async" src="https://peepalmedia.com/wp-content/uploads/2022/09/life-new.jpg" alt="" class="wp-image-7601" width="736" height="415" srcset="https://peepalmedia.com/wp-content/uploads/2022/09/life-new-300x170.jpg 300w, https://peepalmedia.com/wp-content/uploads/2022/09/life-new-150x85.jpg 150w" sizes="(max-width: 736px) 100vw, 736px" /></figure>



<p style="font-size:20px">ಮನುಷ್ಯನ ಆಯುಷ್ಯವು ಶತವರ್ಷಕ್ಕೆ ಪರಿಮಿತವಾಗಿರುತ್ತದೆ. ಆದರೆ ಅಷ್ಟು ಸುದೀರ್ಘ ಆಯುಷ್ಯವನ್ನು ಗಳಿಸಿ ಸವಿದು ಸವೆಸಿ ಗತಿಸುವವರು ಮಾತ್ರ ಬಹಳ ವಿರಳ. ಆ ಆಯುಷ್ಯದ ಅರ್ಧದಷ್ಟನ್ನು ಇರುಳಿನ ನಿದ್ರೆಗಳಲ್ಲಿ ಕಳೆದರೆ, ಅದರ ಇನ್ನರ್ಧವು ಶೈಶವ ಕೌಮಾರ್ಯದಲ್ಲಿ ಮತ್ತು ಮುಪ್ಪಿನಲ್ಲಿ ಕಳೆದು ಹೋಗುತ್ತದೆ. ಇನ್ನು ಉಳಿದುದರಲ್ಲಿ ಬಹು ಪಾಲು ಬದುಕಿನ ಮಜಲುಗಳಲ್ಲಿ&nbsp; ಗಳಿಸಿಕೊಂಡ ಯಶಸ್ಸೋ, ತೋರಿದ ಹುಂಬತನಗಳೋ ಆಗಿರಬಹುದು. ಕೆಲವೊಮ್ಮೆ ವಯಸ್ಸಿನ್ನೂ ಪಕ್ವಗೊಂಡಿಲ್ಲವೆಂದು ವಯಸ್ಸನ್ನು&nbsp; ಆರೋಪಿಸಿಯೇ ವರ್ಷಗಳನ್ನು ಸವೆಸಿರುತ್ತೇವೆ. ಬದುಕಿನುದ್ದಕ್ಕು ಪಾಠ ಕಲಿಯುವುದರಲ್ಲೇ ಬದುಕು ಕೊನೆಯಾಗಿಸುವ&nbsp; ವಿಚಿತ್ರ ಓಟವೇನು ಈ ಬದುಕಿನ ಆಟ!?<a></a></p>



<p style="font-size:20px">ಬದುಕಿನ ನಲವತ್ತರ ವಸಂತಗಳನ್ನು ದಾಟಿದವರು ತನ್ನ ಹಾಗೂ ಇತರರ ಬದುಕಿನ ಚಿತ್ರಣಗಳನ್ನು ಸಮೀಪದಿಂದ ಅಲ್ಲ, ಹೃದಯದಿಂದ ಕಂಡವರಾಗಿದ್ದಾರೆ. ಅನುಭವಗಳನ್ನು ಹೇಳಿಕೊಳ್ಳುವಾಗಲೆಲ್ಲ ತಮಗರಿವಿಲ್ಲದೆ ತತ್ವಗಳೊಂದಿಗೆ ಅವರು ಪೋಣಿಸುತ್ತಾರೆ. ಎಲ್ಲೆಲ್ಲಿ ಹೇಗೆಲ್ಲಾ ಎಚ್ಚರಿಕೆ ವಹಿಸಬೇಕೆಂದು ಇವರಲ್ಲೇ ಕೇಳಿ ಕಲಿತುಕೊಳ್ಳಬೇಕೆಂದು ಹಲವು ಘಟನೆಗಳು ಘಟಿಸಿದಾಗಲೆಲ್ಲ ಇವರು ನೀಡಿದ ಸಲಹೆ, ಎಚ್ಚರಿಕೆಯ ಅರಿವಾಗುತ್ತದೆ. ಈ ನಲವತ್ತು ಹಾಗೆಯೇ, ಬದುಕಿನ ಅನುಭವಗಳ ಆಗರ. ಮಾತುಗಳ ಮಧ್ಯೆ ಮಾರ್ಮಿಕವಾಗಿ ಅವರದ್ದೇ ಆದಂತಹ ಜಿಜ್ಞಾಸೆಗಳನ್ನು ಹೊರಗೆಡಹುತ್ತಾ ನಿಮ್ಮ ದಾರಿಯನ್ನು ಸುಭದ್ರಗೊಳಿಸಿರೆನ್ನುವ ಸಂದೇಶ ನೀಡುತ್ತಾರೆ.</p>



<figure class="wp-block-image size-full is-resized"><img loading="lazy" decoding="async" src="https://peepalmedia.com/wp-content/uploads/2022/09/WhatsApp-Image-2022-09-28-at-9.47.34-AM.jpeg" alt="" class="wp-image-7615" width="754" height="430"/></figure>



<p style="font-size:20px">ಇಂದು ನಲವತ್ತು ವಸಂತಗಳನ್ನು ದಾಟಿ ನಿಂತವರು, ಅಂದಿನ ತಮ್ಮ ಬಾಲ್ಯಾವಸ್ಥೆಯ ಕನಸು ತುಂಬಿದ ಪುಟ್ಟ ಕಣ್ಣುಗಳಾಗಿದ್ದವರು. ಅಂದು ಆ ಮಕ್ಕಳು&nbsp; ಕುಟುಂಬ ಬಳಗದ ಕೆಲವು ಯುವ &nbsp;ಉತ್ಸಾಹಿಗಳನ್ನು ನೋಡುತ್ತಾ, ಅವರ ಮಾತುಗಳನ್ನು ಆಲಿಸುತ್ತಿದ್ದವರು. ಅವರ ಅಂದ ಚಂದ, ಹುರುಪು, ಪರೋಪಕಾರ, ಸಂಪತ್ತು, ಸವಲತ್ತು, ಮಾತುಗಾರಿಕೆ ಇತ್ಯಾದಿ ವೈವಿಧ್ಯಮಯ ವ್ಯಕ್ತಿತ್ವಗಳಿಗೆ ಮೂಕ ವಿಸ್ಮಿತರಾಗಿದ್ದವರು. ಅಂದು ಯಾರೂ ಆ ಮಕ್ಕಳ ಕಡೆ ಗಮನ ಹರಿಸಿರಲಿಕ್ಕಿಲ್ಲ. ಆದರೆ ಅಂದಿನ ಆ ಯುವ ಹುರುಪುಗಳಿಗೆ ಇಂದು ನಲವತ್ತನ್ನು ದಾಟಿರುವ ಅಂದಿನ ಆ ಮಕ್ಕಳೇ ದೊಡ್ಡ ಅಭಿಮಾನಿಗಳಾಗಿದ್ದರು. ಆ ಉತ್ಸಾಹಿ ಯುವಕ ಯುವತಿಯರು ಜೀವನದಲ್ಲಿ ವಯಸ್ಸಿನೊಂದಿಗೆ ರಾಜಿಯಾಗುತ್ತಾ ಮುಪ್ಪನ್ನು ಅಪ್ಪಿಕೊಳ್ಳುವ ಚಿತ್ರಣಗಳ ಸಂಪೂರ್ಣ ದೃಶ್ಯಾವಳಿಗಳನ್ನು ಕಂಡ ಇಂದಿನ ಪಕ್ವಗೊಂಡ ನಲವತ್ತರವರೇ ಅಂದೊಮ್ಮೆ ಪುಟ್ಟ ಬೆರಗುಗಣ್ಣಿನ ಮುಗ್ಧ ವೀಕ್ಷಕರಾಗಿದ್ದವರು.</p>



<p style="font-size:20px">ಜೀವನದ ಕೊನೆಯ ಹಂತದಲ್ಲಿ&nbsp; ಮರೆವಿನ ಸುಳಿಗೆ ಸಿಕ್ಕು ನಿಷ್ಕ್ರಿಯರಾದವರು, ಯಾವುದಾದರು ರೋಗಕ್ಕೆ ತುತ್ತಾಗಿರುವವರು&nbsp; ತಮ್ಮ ಜೀವನದ ಅನುಭವಗಳನ್ನು&nbsp; ವೃದ್ಧಾಪ್ಯದಲ್ಲಿ ನಿರಾಳವಾಗಿ ಹಂಚಿಕೊಳ್ಳುವಷ್ಟು ಶಕ್ತರಾಗಿರುವುದಿಲ್ಲ. ಅಂತಹವರಿಂದ ಯುವ ಪೀಳಿಗೆಗೆ ಸಾಕಷ್ಟು ಹಳೆಯ ಕಾಲದ ಮಾಹಿತಿ ಸಿಗುವುದು ವಿರಳ. ಆದರೆ ಇಂದಿನ ನಲವತ್ತರವರು ತಮ್ಮ ಸ್ಮರಣೆಯಲ್ಲಿ ಸೆರೆ ಹಿಡಿದಿಟ್ಟ ಅಂದಿನ ಅವರ ಯುವ ಬದುಕಿನಿಂದ ಇಂದಿನವರೆಗಿನ ಚಿತ್ರಣಗಳನ್ನು ನಿರಾಯಾಸವಾಗಿ ಬಿಡಿಸಬಲ್ಲರು. ಆದ್ದರಿಂದಲೇ ಅವರು ಪದೇ ಪದೇ ಬದುಕು ಬಲು ಚಿಕ್ಕದು ಎನ್ನುತ್ತಿರುತ್ತಾರೆ. ಅಂದು ತಮ್ಮ ಮನೆಗಳಲ್ಲಿ ಇದ್ದ ಹಿರಿ ಮುದಿ ಜೀವಗಳು ಬದುಕಿ ಬಂದ ದಾರಿ, ಉಳಿಸಿಕೊಟ್ಟ ಸಂಸ್ಕೃತಿ, ಕಲಿಸಿಕೊಟ್ಟ ಆದರ್ಶಗಳನ್ನು ತಂದೆ ತಾಯಿಯರು ಹೇಳಿಕೊಟ್ಟಿರುವುದನ್ನು ಆಲಿಸಿ ಕೊಂಡಿರುವುದರಿಂದಲೇ ಇಂದಿಗೂ ತಮ್ಮ ಪೂರ್ವಜರು ಏನಾಗಿದ್ದರು, ಹೇಗಿದ್ದರು ಎಂಬುದರ ಬಗೆಗಿನ ವಿಸ್ಮಯಗಳು ಇವರಿಂದ ಲಭ್ಯವಾಗುವುದು. ನಲವತ್ತು ದಾಟಿದವರು ಅಂದಿನಿಂದ ಇಂದಿನವರೆಗೂ&nbsp; ಕುಟುಂಬದವರೊಂದಿಗೆ ಇರಿಸಿಕೊಂಡ&nbsp; ಒಡನಾಟದ ಪ್ರತಿಫಲವಾಗಿ ಇಂದು ಬಲು ದೂರದ ಕುಟುಂಬಸ್ಥರೆನಿಸಿಕೊಂಡವರ ತಲೆಮಾರುಗಳ ಪರಿಚಯ ಹಿಡಿದು&nbsp; ನಮಗೆ ಅದೆಷ್ಟು ಸಮೀಪದ ಬಂಧುಗಳಾಗಿದ್ದರು &nbsp;ಎನ್ನುವುದನ್ನು ನಿಖರವಾಗಿ&nbsp; ತಿಳಿಸಬಲ್ಲರು.</p>



<figure class="wp-block-image size-full is-resized"><img loading="lazy" decoding="async" src="https://peepalmedia.com/wp-content/uploads/2022/09/health.jpg" alt="" class="wp-image-7602" width="696" height="217"/></figure>



<p style="font-size:20px">ಇಂದು ನಲವತ್ತು ಕಳೆದಿರುವವರು&nbsp; ಮೊಬೈಲ್ ಇಲ್ಲದೇ ಇದ್ದ ಕಾಲವನ್ನು ಮನೋಹರವಾಗಿ ದಾಟಿ ಬಂದವರೇ ಆಗಿದ್ದರು. ಈ ಮೊಬೈಲ್ ಇಂದು&nbsp; ಹಿರಿ ಕಿರಿಯರೆನ್ನದೆ ಎಲ್ಲರ ಕೈ, ಕಣ್ಣ್ಮನಸ್ಸುಗಳನ್ನು ಸಂಪೂರ್ಣವಾಗಿ ವಶೀಕರಿಸಿ ಪರಸ್ಪರರಲ್ಲಿ ಅಂತರ ಮೂಡಿಸಿದೆ. ಇಂದಿಗಿಂತ ಅಂದಿನ ತಮ್ಮ ಕೌಮಾರ್ಯವು ಅತೀ ಸುಂದರವಾಗಿ ಇತ್ತೆಂದು ಇಂದಿಗೂ&nbsp; ಹಲವು ಸಂದರ್ಭಗಳಲ್ಲಿ ಹೇಳುತ್ತಾರೆ. ಕಪ್ಪು ಬಿಳುಪು ದೂರದರ್ಶನದ ಮನೋರಂಜನೆಯನ್ನು ಸವಿಯುವವರನ್ನು ಹತ್ತಿರದಿಂದ ಕಂಡು, ಆಗ ತಾನೆ ನವೀಕರಣಗೊಂಡ ಬಣ್ಣದ ಚಿತ್ರಗಳುಳ್ಳ ಟಿವಿ ವೀಕ್ಷಣೆಯನ್ನು&nbsp; ಹೊಸತನದೊಂದಿಗೆ ಖುಷಿಯಿಂದ ಅನುಭವಿಸಿದ ಆ ಅನುಭವಗಳ ಖುಷಿ, ಒಂದೇ ಚಾನೆಲ್ ಇದ್ದಾಗ ಅದು ಪ್ರಸಾರ ಮಾಡುತ್ತಿದ್ದುದರಲ್ಲೇ ಆನಂದಿಸುತ್ತಿದ್ದ ನೆನಪುಗಳು, ವಿಸಿಆರ್ ಗೆ ಅದರದ್ದೇ ಆದಂತಹ ಕ್ಯಾಸೆಟ್ ಹಾಕಿಸಿ ಸಿನೇಮಾ ನೋಡುತ್ತಿರುವಾಗ ನೆರೆಹೊರೆಯ ಹುಡುಗರು, ಮಹಿಳೆಯರು ತಮ್ಮ ಕೆಲಸಗಳನ್ನು ಲಗುಬಗೆಯಿಂದ ಮುಗಿಸಿ ಬಂದು ಶಿಸ್ತಿನಿಂದ ಟಿವಿ ವೀಕ್ಷಿಸುತ್ತಿದ್ದ ಚಿತ್ರಣಗಳು ತಮ್ಮ ಚಿತ್ತಪಟಲದಲ್ಲಿ ಇನ್ನೂ ಅಚ್ಚಾಗಿ&nbsp; ಉಳಿದಿದೆಯೆಂದು ಮೆಲುಕು ಹಾಕುತ್ತಾರೆ. ಅಂದು ಜನರಲ್ಲಿ ಇಷ್ಟೊಂದು ಒತ್ತಡದ ಬದುಕು ಇರಲಿಲ್ಲವೆಂದು ಅವರು ಮಾರ್ಮಿಕವಾಗಿ ಹೇಳುತ್ತಾರೆ. ಬದುಕು ಹಾಗೂ ಕಾಲಗಳಲ್ಲಿ ಬದಲಾವಣೆಗೊಳ್ಳುವ ರೀತಿಗಳನ್ನು ಇಂಚು ಇಂಚಾಗಿ ಕಂಡವರಿವರು. ಯಾಕೆಂದರೆ ಈಗಿನ್ನು ಮೂವತ್ತರ ಅಸುಪಾಸಿನಲ್ಲಿ ಇರುವವರು ಇಷ್ಟೊಂದು&nbsp; ಕಾಣದವರಾದರೆ, ಅರವತ್ತು ದಾಟಿದವರು ಅಂದು ಎಲ್ಲೊ ಒಂದು ಕಡೆ&nbsp; ಅವರದ್ದೇ ಬದುಕಿನ ಪರದಾಟದ ಓಟದಲ್ಲಿದ್ದವರು. ತಮ್ಮ ಇತಿಹಾಸದ ಬಗೆಗೆ ಹೇಳಿಕೊಳ್ಳಲು ಇಂದಿನ ನಲವತ್ತರ ಯುವ ಪೀಳಿಗೆಗಳಲ್ಲಿ ಇರಿಸಿಕೊಂಡ ಗೆಳೆತನ, ಸಲಿಗೆ ಅರವತ್ತರವರಿಗೆ ಅಸಾಧ್ಯವಾಗಬಹುದೆಂದರೆ ತಪ್ಪಾಗದು.</p>



<figure class="wp-block-image size-large is-resized"><img loading="lazy" decoding="async" src="https://peepalmedia.com/wp-content/uploads/2022/09/WhatsApp-Image-2022-09-28-at-7.51.22-AM-768x1024.jpeg" alt="" class="wp-image-7598" width="170" height="219"/></figure>



<p style="font-size:20px"><a><strong>ಸಾರಾ ಅಲಿ ಪರ್ಲಡ್ಕ</strong></a><br>ಬರಹಗಾರ್ತಿ</p>



<p></p>



<p style="font-size:20px">🔶 ಪೀಪಲ್ ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ<br><a href="https://chat.whatsapp.com/GBc6sg7E2FQLuXblEdBxSi">https://chat.whatsapp.com/GBc6sg7E2FQLuXblEdBxSi</a></p>



<p></p>



<p style="font-size:20px"><strong><mark style="background-color:rgba(0, 0, 0, 0)" class="has-inline-color has-vivid-red-color">ಇದನ್ನೂ ನೂಡಿ:</mark></strong> <mark style="background-color:rgba(0, 0, 0, 0)" class="has-inline-color has-vivid-purple-color">ಫಲ ಜ್ಯೋತಿಷ್ಯ ಎಂದರೇನು? ಅದು ಎಲ್ಲಿಂದ ಹುಟ್ಟಿಕೊಂಡಿತು. ಜ್ಯೋತಿಷ್ಯವನ್ನು ವಿಜೃಂಭಿಸುತ್ತಿರುವ ಹಿಂದಿರುವ ಹುನ್ನಾರಗಳಿಗೆ ಕಾರಣಗಳೇನು ಎಂಬುದನ್ನು ವಿವರಿಸಿದ್ದಾರೆ ಪ್ರಖ್ಯಾತ ಗಣಿತಶಾಸ್ತ್ರಜ್ಞ ಪ್ರೊ.ಎಸ್.ಬಾಲಚಂದ್ರರಾವ್ ವಿವರಿಸಿದ್ದಾರೆ‌.</mark></p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<iframe loading="lazy" title="ಫಲ ಜ್ಯೋತಿಷ್ಯ ಎಂದರೇನು? ಅದು ಎಲ್ಲಿ ಹುಟ್ಟಿತು? What is astrology?" width="696" height="392" src="https://www.youtube.com/embed/DnSo1zz40FQ?feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture" allowfullscreen></iframe>
</div></figure>



<p><a href="https://fb.watch/fOCHi3vzyS/">https://fb.watch/fOCHi3vzyS/</a></p>
]]></content:encoded>
					
		
		
			</item>
	</channel>
</rss>
