<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Shivaraj Mothi &#8211; Peepal Media</title>
	<atom:link href="https://peepalmedia.com/author/shivaraj-mothi/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 02 Nov 2023 11:35:43 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.9.4</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Shivaraj Mothi &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಕರ್ನಾಟಕ ರಾಜ್ಯೋತ್ಸವ 2023 &#124; ಸೂಲಗಿತ್ತಿ ಮಲ್ಲಮ್ಮಗೆ ಎಡೆದೊರೆ ನಾಡು ಪ್ರಶಸ್ತಿ</title>
		<link>https://peepalmedia.com/ededore-nadu-award-for-midwife-mallamma/</link>
		
		<dc:creator><![CDATA[Shivaraj Mothi]]></dc:creator>
		<pubDate>Thu, 02 Nov 2023 11:35:43 +0000</pubDate>
				<category><![CDATA[ನಾಡು-ನುಡಿ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=31035</guid>

					<description><![CDATA[ಕನ್ನಡ ರಾಜ್ಯೋತ್ಸವ ಅಂಗವಾಗಿ ರಾಯಚೂರು ಜಿಲ್ಲಾಡಳಿತದಿಂದ ನೀಡುವ ಎಡೆದೊರೆ ನಾಡು ಸಾಧಕರ ಪ್ರಶಸ್ತಿ ಅನೇಕ ವರ್ಷಗಳಿಂದ ಸೂಲಗಿತ್ತಿಯಾಗಿ, ಜನಪದ ವೈದ್ಯೆಯಾಗಿ &#160;ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಕವಿತಾಳ ಪಟ್ಟಣದ ಸೂಲಗಿತ್ತಿ ಮಲ್ಲಮ್ಮ ಅವರಿಗೆ &#160;ಒಲಿದು ಬಂದಿದೆ. ತುಂಬು ಗರ್ಭಿಣಿಯರ ಪಾಲಿನ ಸಾಕ್ಷಾತ್ ದೇವರ ಸ್ವರೂಪಿ, ಬಡವರ ಪಾಲಿನ ಭಾಗ್ಯವತಿ ಸೂಲಗಿತ್ತಿ ಮಲ್ಲಮ್ಮ ಹತ್ತು ಸಾವಿರಕ್ಕೂ ಹೆಚ್ಚು ಉಚಿತ ಹೆರಿಗೆ ಮಾಡಿಸಿದವರು. ಗಿಡಮೂಲಿಕೆ ಔಷಧಿ ನೀಡುವಲ್ಲಿ ನಿಪುಣತೆ ಹೊಂದಿ ತನ್ನ ಹೆರಿಗೆಯನ್ನು ತಾನೇ ಮಾಡಿಕೊಂಡ ಗಟ್ಟಿಗಿತ್ತಿಯೂ ಹೌದು. ಯಾರೇ ಕರೆದರೂ [&#8230;]]]></description>
										<content:encoded><![CDATA[
<p>ಕನ್ನಡ ರಾಜ್ಯೋತ್ಸವ ಅಂಗವಾಗಿ ರಾಯಚೂರು ಜಿಲ್ಲಾಡಳಿತದಿಂದ ನೀಡುವ <a>ಎಡೆದೊರೆ ನಾಡು </a>ಸಾಧಕರ ಪ್ರಶಸ್ತಿ ಅನೇಕ ವರ್ಷಗಳಿಂದ ಸೂಲಗಿತ್ತಿಯಾಗಿ, ಜನಪದ ವೈದ್ಯೆಯಾಗಿ &nbsp;ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಕವಿತಾಳ ಪಟ್ಟಣದ ಸೂಲಗಿತ್ತಿ ಮಲ್ಲಮ್ಮ ಅವರಿಗೆ &nbsp;ಒಲಿದು ಬಂದಿದೆ.</p>



<p>ತುಂಬು ಗರ್ಭಿಣಿಯರ ಪಾಲಿನ ಸಾಕ್ಷಾತ್ ದೇವರ ಸ್ವರೂಪಿ, ಬಡವರ ಪಾಲಿನ ಭಾಗ್ಯವತಿ ಸೂಲಗಿತ್ತಿ ಮಲ್ಲಮ್ಮ ಹತ್ತು ಸಾವಿರಕ್ಕೂ ಹೆಚ್ಚು ಉಚಿತ ಹೆರಿಗೆ ಮಾಡಿಸಿದವರು. ಗಿಡಮೂಲಿಕೆ ಔಷಧಿ ನೀಡುವಲ್ಲಿ ನಿಪುಣತೆ ಹೊಂದಿ ತನ್ನ ಹೆರಿಗೆಯನ್ನು ತಾನೇ ಮಾಡಿಕೊಂಡ ಗಟ್ಟಿಗಿತ್ತಿಯೂ ಹೌದು. ಯಾರೇ ಕರೆದರೂ ಇಲ್ಲವೆನ್ನದೆ &nbsp;ಎಲ್ಲ ವರ್ಗದವರಿಗೂ ಸೂಲಗಿತ್ತಿ ಸೇವೆಯನ್ನು ಮಾಡುತ್ತಾ ಬರುತ್ತಿರುವ ಇವರ ಗುಣ, ವೃತ್ತಿಗೆ ತಲೆಬಾಗಿ ಸಲಾಂ ಹೊಡಯಲೇ ಬೇಕಿದೆ.</p>



<figure class="wp-block-image size-large"><img fetchpriority="high" decoding="async" width="1024" height="859" src="https://peepalmedia.com/wp-content/uploads/2023/11/WhatsApp-Image-2023-11-02-at-2.49.30-PM-1024x859.jpeg" alt="" class="wp-image-31049" srcset="https://peepalmedia.com/wp-content/uploads/2023/11/WhatsApp-Image-2023-11-02-at-2.49.30-PM-1024x859.jpeg 1024w, https://peepalmedia.com/wp-content/uploads/2023/11/WhatsApp-Image-2023-11-02-at-2.49.30-PM-300x252.jpeg 300w, https://peepalmedia.com/wp-content/uploads/2023/11/WhatsApp-Image-2023-11-02-at-2.49.30-PM-768x644.jpeg 768w, https://peepalmedia.com/wp-content/uploads/2023/11/WhatsApp-Image-2023-11-02-at-2.49.30-PM-150x126.jpeg 150w, https://peepalmedia.com/wp-content/uploads/2023/11/WhatsApp-Image-2023-11-02-at-2.49.30-PM-696x584.jpeg 696w, https://peepalmedia.com/wp-content/uploads/2023/11/WhatsApp-Image-2023-11-02-at-2.49.30-PM-1068x896.jpeg 1068w, https://peepalmedia.com/wp-content/uploads/2023/11/WhatsApp-Image-2023-11-02-at-2.49.30-PM.jpeg 1280w" sizes="(max-width: 1024px) 100vw, 1024px" /></figure>



<p>ಸ್ಥಳೀಯವಾಗಿ ಸೂಲಗಿತ್ತಿ ಮಲ್ಲಮ್ಮ, ವೇಷಗಾರ ಮಲ್ಲಮ್ಮ ಎಂತಲೂ ಪ್ರಸಿದ್ಧಿ ಪಡೆದಿರುವ ಇವರು &nbsp;ಬರೀ ಸೂಲಗಿತ್ತಿ ವೃತ್ತಿಗೆ ಸೀಮಿತವಾಗದೇ, ಗಿಡಮೂಲಿಕೆಯ ಔಷಧಿ ನೀಡುವ ಪರಿಣತಿ ಹೊಂದಿ ಜನಪದ ವೈದ್ಯೆಯಾಗಿಯೂ ಬಡವರ ಬಾಯಲ್ಲಿ ಇದ್ದಾರೆ. ಸಹಜ-ಸರಳ, ಆರೋಗ್ಯವಂತ ಜನನಕ್ಕೆ ಕಾರಣವಾಗಿರುವ ಮಲ್ಲಮ್ಮರ ತಾಯ್ತನ, ಅಂತಃಕರಣ, ವಿಶ್ವಾಸ, ಮಾನವೀಯತೆಯ ಬಗ್ಗೆ ಹೇಳಲು ಅಸಾಧ್ಯ. ಬಡ ಹೆಣ್ಣುಮಕ್ಕಳ ಸೇವೆ ಮಾಡುತ್ತಿರುವ, ನೂರಾರು ಗಿಡಮೂಲಿಕೆಗಳಿಂದ ಔಷಧಿಯನ್ನು ನೀಡುವ, ಅದರಲ್ಲೂ ವಿಶೇಷವಾಗಿ ಮಕ್ಕಳ ಆರೋಗ್ಯ ಕಾಪಾಡುವ ಈಕೆ ಮಹಾಮಾತೆಯೇ ಸರಿ.</p>



<p>ಬೇರೆ-ಬೇರೆ ಕಡೆಯಿಂದ ಗಿಡಮೂಲಿಕೆಯ ಔಷಧಿಗಾಗಿ ಹಾಗೂ ಸೂಲಗಿತ್ತಿ ಎಂಬ ಕಾರಣಕ್ಕೆ ಬಾಣಂತಿಯರು, ಇತರರೂ ಇವರ ಬಳಿ ಬರುತ್ತಲೇ ಇರುತ್ತಾರೆ.. ಬಂದವರೆಲ್ಲ ಇವರ ಕೈಗುಣದಿಂದ ಗುಣವೂ ಆಗುತ್ತಿದ್ದಾರೆ. ಹಣಕ್ಕಾಗಿ ಕೆಲಸ ಮಾಡಿದ್ರೆ ನಾನು ಮಾಡುವ ಕೆಲಸ ಹುಸಿಯಾಗುತ್ತದೆ ಎಂದು ನಂಬಿರುವ ಇವರ ಬದುಕು‌ ಮಾತ್ರ ಹರಕು ಜೋಪಡಿಯಲ್ಲಿದೆ. ಇಂತಹ ಬಹಳ ಸೂಲಗಿತ್ತಿಯರು ಎಲೆಮರೆಯ ಕಾಯಿಗಳಂತೆ ಈ ಭಾಗದಲ್ಲಿ ಕಾಣಸಿಗುತ್ತಾರೆ. ಇಂತಹವರನ್ನೆಲ್ಲ ಗುರುತಿಸಿ ಬಳಸಿ ಕೊಳ್ಳುವಂತೆ ಆಗಬೇಕಿದೆ.</p>



<p>ಸಾಂಪ್ರದಾಯಿಕ ಹೆರಿಗೆ ಮಾಡಿಸುವುದು ಒಂದು ಮಾನವೀಯ ಹಾಗೂ ಸವಾಲಿನ‌ ಕೆಲಸವೂ ಹೌದು. ಮಲ್ಲಮ್ಮನ ಬದುಕು ಮಾತ್ರ ಸ್ವಂತ ಜಾಗವಿಲ್ಲದೇ, ಸೂರಿಲ್ಲದೇ ಕುಸಿಯುತ್ತಿದೆ. ಅವರಿಗೆ ಜಿಲ್ಲಾಡಳಿತವು ಅಗತ್ಯ ನೆರವು ಒದಗಿಸಿ, ಸಹಾಯಕ್ಕೆ ಧಾವಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇನೆ. &nbsp;</p>



<p>ನಿಮ್ಮ ನಿಸ್ವಾರ್ಥ ಜೀವಪೊರೆಯುವ ಸೇವೆಗೆ ಜಿಲ್ಲಾಮಟ್ಟದ ಪ್ರಶಸ್ತಿ ಬಂದಿದೆ, ನಿಮಗೆ ಹೇಗನ್ನಿಸುತ್ತದೆ ಎಂದು ಆತ್ಮೀಯವಾಗಿ ಅವರನ್ನು ಕೇಳಿದರೆ &nbsp;“ನನಗೇನು ಎಲ್ಲವೂ ಸಂತೋಷ. ದುಡ್ಡು ಬೇಡ, ಆಸ್ತಿ ಬೇಡ. ನಾನು ಹೋದ ಕಡೆಯಲ್ಲೆಲ್ಲಾ ಮರ್ಯಾದೆ ಸಿಕ್ಕರೆ ಸಾಕು. ಮರ್ಯಾದೆ ಅಂದ್ರೆ ಹೆರಿಗೆ ಮಾಡಿಸುವುದಕ್ಕೆ ಭಯವಿಲ್ಲದಂತೆ ನನಗೆ ಅಧಿಕಾರ ಕೊಟ್ಟರೆ ಸಾಕು. ಬಾಣಂತನ ಮಾಡಿ ಮನೆಗೆ ಬರುತ್ತೇನೆ. ಅವರೇನು ಅಂತಾರೆ, ಇವರೇನು ಅಂತಾರೆ ಎಂಬ ಭಯವಿರುತ್ತದೆ ಅಲ್ವಾ, ಅದು ಇಲ್ಲದಂತೆ ನೀನು ಹೀಗೆಯೇ ಹೆರಿಗೆ ಮಾಡುತ್ತಾ ಇರಮ್ಮಾ ಅಂತ ಸರಕಾರದಿಂದ ಅನಿಸಿಕೊಂಡರೆ ಸಾಕು” ಅಂತ ಮಲ್ಲಮ್ಮ ಹೇಳಿಕೊಂಡಾಗ ಅವರ ಮುಗ್ಧತೆಗೆ &nbsp;ಖುಷಿಯಾಗುತ್ತದೆ.</p>



<figure class="wp-block-image size-large"><img decoding="async" width="1024" height="752" src="https://peepalmedia.com/wp-content/uploads/2023/11/WhatsApp-Image-2023-11-02-at-2.58.07-PM-1024x752.jpeg" alt="" class="wp-image-31050" srcset="https://peepalmedia.com/wp-content/uploads/2023/11/WhatsApp-Image-2023-11-02-at-2.58.07-PM-1024x752.jpeg 1024w, https://peepalmedia.com/wp-content/uploads/2023/11/WhatsApp-Image-2023-11-02-at-2.58.07-PM-300x220.jpeg 300w, https://peepalmedia.com/wp-content/uploads/2023/11/WhatsApp-Image-2023-11-02-at-2.58.07-PM-768x564.jpeg 768w, https://peepalmedia.com/wp-content/uploads/2023/11/WhatsApp-Image-2023-11-02-at-2.58.07-PM-150x110.jpeg 150w, https://peepalmedia.com/wp-content/uploads/2023/11/WhatsApp-Image-2023-11-02-at-2.58.07-PM-696x511.jpeg 696w, https://peepalmedia.com/wp-content/uploads/2023/11/WhatsApp-Image-2023-11-02-at-2.58.07-PM-1068x784.jpeg 1068w, https://peepalmedia.com/wp-content/uploads/2023/11/WhatsApp-Image-2023-11-02-at-2.58.07-PM.jpeg 1280w" sizes="(max-width: 1024px) 100vw, 1024px" /></figure>



<p>ಮನೆಯಲ್ಲಿ ಊಟಕ್ಕೆ ಕುಳಿತಾಗಲೂ ಊರಿನ ಬಾಣಂತಿಯರ ಹೆರಿಗೆ ನೋವಿನ ಸುದ್ದಿ ಕಿವಿಗೆ ಬಿದ್ದರೆ ಸಾಕು. ತಕ್ಷಣವೇ ಊಟ ಬಿಟ್ಟಾದರೂ ಓಡಿಹೋಗಿ ಡೆಲಿವರಿ ಮಾಡಿ ಬರುತ್ತಾಳೆಂದೂ, ಈ ತರಹ ಸಾಕಷ್ಟು ಮಾಡಿದ್ದಾರೆಂದೂ ಮಲ್ಲಮ್ಮನ ಹಿರಿಯ ಮಗಳಾದ ನಾಗಮ್ಮ ತನ್ನ ತಾಯಿಯ ಸೇವೆಯ ಬಗ್ಗೆ ಸ್ಮರಿಸಿಕೊಳ್ಳುತ್ತಾರೆ.</p>



<p>&#8220;ಹಡೆಯುವವಳ ನೋವು ಸೂಲಗಿತ್ತಿಗೆ ಬಾರದು&#8221; ಎಂಬ ನಾಣ್ಣುಡಿಯನ್ನು ಸುಳ್ಳು ಮಾಡಿ ಎಲ್ಲ ಹೆರಿಗೆಗಳ ನೋವ ತಾನೇ ಉಂಡ ಸೂತಕವಿಲ್ಲದ ಮಲ್ಲಮ್ಮನ ಸೇವೆ ಸಮಾಜಕ್ಕೆ ಮಾದರಿ ಹಾಗೂ ಅಚ್ಚರಿ. ಇವರ ಸಾಧನೆಯ ಹಾದಿಯೇ ಒಂದು ವಿಸ್ಮಯ, ವೈದ್ಯಲೋಕದ ಬೆರಗು. ಈ ಅಪರೂಪದ ಸೂಲಗಿತ್ತಿಯ ಮಾನವೀಯ &nbsp;ಸೇವೆಯನ್ನು ರಾಯಚೂರು ಜಿಲ್ಲಾಡಳಿತವು ಗುರುತಿಸಿ ಎಡೆದೊರೆ ನಾಡು ಸಾಧನಾ ಪುರಸ್ಕಾರ ಪ್ರಶಸ್ತಿ ನೀಡಿದೆ. ಅವರಿಗೆ ನಮ್ಮ ಕಡೆಯಿಂದ ಅಭಿನಂದನೆಗಳು. ಅವರ ಈ ಸೇವೆಯು ಹೀಗೆಯೇ ನಿರಂತರವಾಗಿ ಸಾಗಲೆಂದು ಆಶಿಸುತ್ತೇನೆ.</p>



<p><strong>ಶಿವರಾಜ್ ಮೋತಿ</strong></p>



<p>ಯುವ ಬರಹಗಾರ, ಹಟ್ಟಿ ಚಿನ್ನದ ಗಣಿ</p>
]]></content:encoded>
					
		
		
			</item>
		<item>
		<title>ಹೈದ್ರಾಬಾದ್ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಿ</title>
		<link>https://peepalmedia.com/make-a-separate-state-of-hyderabad-karnataka/</link>
		
		<dc:creator><![CDATA[Shivaraj Mothi]]></dc:creator>
		<pubDate>Tue, 18 Apr 2023 12:06:51 +0000</pubDate>
				<category><![CDATA[ಕ್ಯಾಂಪಸ್ ಕನ್ನಡಿ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=20928</guid>

					<description><![CDATA[ಹೈದ್ರಾಬಾದ್ ಕರ್ನಾಟಕದ ಬಗ್ಗೆ ತಾತ್ಸಾರ ಭಾವನೆ ಯಾಕೆ? ಪ್ರತ್ಯೇಕ ರಾಜ್ಯ ಕೇಳಿದ ತಕ್ಷಣ ಉರಿದು ಅಖಂಡ ಕರ್ನಾಟಕದ ಬಗ್ಗೆ ಪಾಠ ಮಾಡುವವರೇ, ಯಾವಾಗಲಾದರೂ ನೀವು ಹೈ.ಕ ದವರನ್ನು ನಮ್ಮವರು ಅಂತ ಭಾವಿಸಿದ್ದು ಇದೆಯೇ? ಉಕ ಪ್ರವಾಹಕ್ಕೆ ತತ್ತರಿಸಿ‌ ಹೋಗಿರುವಾಗ, ಅಲ್ಲಿಗೆ ಅಲ್ಪವಾದರೂ ಸಹಾಯವಾಯಿತು. ಅದೇ ಸಮಯದಲ್ಲಿ ಹೈದ್ರಾಬಾದ್ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳು ನಿಮಗೆ ನೆನಪು ಬರಲಿಲ್ಲ. ನಿಮ್ಮ ಅಖಂಡ ಕರ್ನಾಟಕದ‌ ಭಾವನೆ ಆಗ ಎಲ್ಲಿಗೆ ಹೋಗಿತ್ತು? ಕಾನೂನು ವಿದ್ಯಾರ್ಥಿ ಶಿವರಾಜ್‌ ಮೋತಿಯವರ ಪ್ರಶ್ನೆಗಳಿವು. ತುಳು ಭಾಷೆಯನ್ನು [&#8230;]]]></description>
										<content:encoded><![CDATA[
<p class="has-cyan-bluish-gray-background-color has-background"><strong>ಹೈದ್ರಾಬಾದ್ ಕರ್ನಾಟಕದ ಬಗ್ಗೆ ತಾತ್ಸಾರ ಭಾವನೆ ಯಾಕೆ? ಪ್ರತ್ಯೇಕ ರಾಜ್ಯ ಕೇಳಿದ ತಕ್ಷಣ ಉರಿದು ಅಖಂಡ ಕರ್ನಾಟಕದ ಬಗ್ಗೆ ಪಾಠ ಮಾಡುವವರೇ, ಯಾವಾಗಲಾದರೂ ನೀವು ಹೈ.ಕ ದವರನ್ನು ನಮ್ಮವರು ಅಂತ ಭಾವಿಸಿದ್ದು ಇದೆಯೇ? ಉಕ ಪ್ರವಾಹಕ್ಕೆ ತತ್ತರಿಸಿ‌ ಹೋಗಿರುವಾಗ, ಅಲ್ಲಿಗೆ ಅಲ್ಪವಾದರೂ ಸಹಾಯವಾಯಿತು. ಅದೇ ಸಮಯದಲ್ಲಿ ಹೈದ್ರಾಬಾದ್ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳು ನಿಮಗೆ ನೆನಪು ಬರಲಿಲ್ಲ. ನಿಮ್ಮ ಅಖಂಡ ಕರ್ನಾಟಕದ‌ ಭಾವನೆ ಆಗ ಎಲ್ಲಿಗೆ ಹೋಗಿತ್ತು? ಕಾನೂನು ವಿದ್ಯಾರ್ಥಿ ಶಿವರಾಜ್‌ ಮೋತಿಯವರ ಪ್ರಶ್ನೆಗಳಿವು.</strong></p>



<p>ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆ ಮಾಡಲು ಹೊರಡುತ್ತಿರುವವರು ಹೈದ್ರಾಬಾದ್ ಕರ್ನಾಟಕದ ಯಾವುದಾದರೂ ಒಂದು ಜಿಲ್ಲೆಯನ್ನು ಆಯ್ದು ಎರಡನೇ ರಾಜಧಾನಿ ಅಥವಾ ಪ್ರತ್ಯೇಕ ರಾಜ್ಯ ಮಾಡಲು ಮುಂದಾಗಬಾರದೇಕೆ?</p>



<p>ಕಲ್ಯಾಣ‌ ಎಂದು ಹೆಸರಿಡುತ್ತಲೇ ಎಷ್ಟೋ‌ ಅನುದಾನವನ್ನು ಕಡಿಮೆ‌ ಮಾಡಿದ ಕೀರ್ತಿ ಅಂದಿನ ಮುಖ್ಯಮಂತ್ರಿಗಳಿಗೆ ಖಂಡಿತವಾಗಿ ಸಲ್ಲಲೇಬೇಕು, ಈ ಪ್ರಕ್ರಿಯೆ ನಿರಂತರ ನಡೆಯುತ್ತಲೇ ಇದೆ.‌ ಏನಿಲ್ಲ, ಹೈದ್ರಾಬಾದ್ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿ ಅಷ್ಟೇ, ಇಲ್ಲದಿದ್ದರೆ ಬೆಂಗಳೂರಿನಂತಹ ಇನ್ನೊಂದು ಮಹಾನಗರ ರಾಜಧಾನಿಯಾಗಿ ಹುಟ್ಟಲಿ. ಅಂದರೆ ರಾಜ್ಯ ಒಂದೇ, ರಾಜಧಾನಿಗಳು ಎರಡು ಬೇಕು. ಆಗ ಮಾತ್ರ ನಮ್ಮ ಸಮಸ್ಯೆಗಳು ಬಗೆಹರಿಯಬಹುದು. ನಮ್ಮ ಭಾಗದ ರಾಜಕಾರಣಿಗಳಿಗೆ ಇಚ್ಛಾಶಕ್ತಿಯ ಕೊರತೆ ಹಾಗೂ ಅಭಿವೃದ್ಧಿಯ ವಿಷಯದಲ್ಲಿ ಸರಕಾರಕ್ಕೆ ಪ್ರಶ್ನಿಸುವ ಎದೆಗಾರಿಕೆಯ ಧೈರ್ಯವೇ ಇಲ್ಲ.</p>



<p>ನಾವು ಹಿಂದೆ ಹೈದರಾಬಾದ್ ಸಂಸ್ಥಾನದವರು.‌ ನಮ್ಮ ಹೈದರಾಬಾದ್ ಸಂಸ್ಥಾನದ ಭಾಗವಾಗಿದ್ದ ತೆಲಂಗಾಣವು ಇಂದು ಪ್ರತ್ಯೇಕ ರಾಜ್ಯ ಆಗಿದೆ. ಮಹಾರಾಷ್ಟ್ರದಲ್ಲಿನ ನಮ್ಮ ಹೈದರಾಬಾದ್ ಸಂಸ್ಥಾನದ ಭಾಗವಾಗಿದ್ದ ವಿದರ್ಭ ಪ್ರಾಂತ್ಯವು ಕೂಡ ವಿಶೇಷ ಸ್ಥಾನಮಾನ ಪಡೆದು ಅಭಿವೃದ್ಧಿ ಹೊಂದುತ್ತಿದೆ. ಆದರೆ ಮೂಲ ಹೈದರಾಬಾದ್ ಸಂಸ್ಥಾನದ ಭಾಗವಾಗಿದ್ದ ನಂತರ ಕರ್ನಾಟಕ ರಾಜ್ಯ ಸೇರಿದ ನಮ್ಮ ಈ ಏಳು ಜಿಲ್ಲೆಗಳ (ಬೀದರ್, ಕಲ್ಬುರ್ಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ) ಜನರಿಗೆ ಇನ್ನೂ ಸಾಂವಿಧಾನಿಕವಾಗಿ ಸಿಗಲೇ ಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಹೈದರಾಬಾದ್ ಕರ್ನಾಟಕ ಪ್ರದೇಶ ಹಿಂದುಳಿದಿದೆ ಎಂದು ಹಿರಿಯರು ಹೋರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿ ನಮ್ಮ ಭಾಗಕ್ಕೆ ಸಂವಿಧಾನದ ಕಲಂ ತಿದ್ದುಪಡಿ ತಂದು 371 ಜೆ ಕಲಂ ವಿಶೇಷ ಸ್ಥಾನಮಾನವನ್ನು ಯುಪಿಎ ಸರ್ಕಾರದಲ್ಲಿ ಜಾರಿಗೆ ತರಲಾಗಿದೆ. ಈ ಕಲಂ ಅನ್ವಯ ಅಭಿವೃದ್ಧಿ ಕಾರ್ಯ ಆರಂಭ ಆಗಬೇಕಿತ್ತು. ಆದರೆ ಇದುವರೆಗೂ 371 ಜೆ ಕಲಂ ವಿಶೇಷ ಸ್ಥಾನಮಾನ ಸಮರ್ಪಕವಾಗಿ ಜಾರಿಗೆ ಬಂದಿಲ್ಲ.</p>



<figure class="wp-block-gallery has-nested-images columns-default is-cropped wp-block-gallery-1 is-layout-flex wp-block-gallery-is-layout-flex">
<figure class="wp-block-image size-large"><img decoding="async" width="720" height="847" data-id="20931" src="https://peepalmedia.com/wp-content/uploads/2023/04/ಹೈದರಾಬಾದ್ಕರ್ನಾಟಕದಿನ.jpg" alt="" class="wp-image-20931" srcset="https://peepalmedia.com/wp-content/uploads/2023/04/ಹೈದರಾಬಾದ್ಕರ್ನಾಟಕದಿನ.jpg 720w, https://peepalmedia.com/wp-content/uploads/2023/04/ಹೈದರಾಬಾದ್ಕರ್ನಾಟಕದಿನ-255x300.jpg 255w, https://peepalmedia.com/wp-content/uploads/2023/04/ಹೈದರಾಬಾದ್ಕರ್ನಾಟಕದಿನ-150x176.jpg 150w, https://peepalmedia.com/wp-content/uploads/2023/04/ಹೈದರಾಬಾದ್ಕರ್ನಾಟಕದಿನ-300x353.jpg 300w, https://peepalmedia.com/wp-content/uploads/2023/04/ಹೈದರಾಬಾದ್ಕರ್ನಾಟಕದಿನ-696x819.jpg 696w" sizes="(max-width: 720px) 100vw, 720px" /></figure>
</figure>



<p>ರಾಯಚೂರಿಗೆ ಮಂಜೂರಾಗಿದ್ದ ಐಐಟಿಯನ್ನು ಧಾರವಾಡಕ್ಕೆ ಹೊತ್ತೊಯ್ದವರು ಯಾರೆಂದು ಪ್ರತ್ಯೇಕವಾಗಿ ಬಿಡಿಸಿ ಹೇಳುವ ಪ್ರಮೇಯವೇ ಇಲ್ಲ. ಕಲ್ಯಾಣ ಕರ್ನಾಟಕದ ಜನರ ಬಗ್ಗೆ ಈಗಲೂ ಕಿಂಚಿತ್ತು ಕಾಳಜಿಯಿಲ್ಲದವರು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಕೇಳಿದಾಗಲೂ, ಈಗಲೇ ಹೀಗೆ ಮುಂದೆ ಅವರು ಹೇಗೆಯೋ ಎಂದು ನಾವೇ ಅವರಿಗೆ ಇನ್ನಷ್ಟು ಕೊಬ್ಬಲು ಬಿಡಬಾರದೆಂದೇ ಆ ಕೂಗಿಗೆ ನಮ್ಮ ಭಾಗದವರು ಧ್ವನಿಗೂಡಿಸಲಿಲ್ಲ.</p>



<p>ಕಲ್ಯಾಣ ಕರ್ನಾಟಕ ಹಿಂದುಳಿದ ಜಿಲ್ಲೆಗಳನ್ನು ಹೊಂದಿದೆ. ಇಲ್ಲಿ ಜನಹಿತವಾದ ಮಹೋನ್ನತವಾದ ಯಾವ ಕಲ್ಯಾಣವೂ ಆಗುತ್ತಿಲ್ಲವಾದ್ದರಿಂದ ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಎಲ್ಲಾ ವಿಧದಲ್ಲೂ ಇವು ಹಿಂದುಳಿದಿವೆ. ಈ ನಿಟ್ಟಿನಲ್ಲಿ ಜನಾರ್ದನ ರೆಡ್ಡಿಯವರು ನಮಗೂ ಒಂದು ಪ್ರಾದೇಶಿಕ ಪಕ್ಷ ಇರಲೆಂದು ಪಕ್ಷ ಕಟ್ಟಿದ್ದ ಪರಿ ಶ್ಲಾಘನೀಯವೂ ಆಗಿದೆ. ನಮ್ಮ ಭಾಗದ ಜನ ಎಚ್ಚೆತ್ತು ಕೊಂಡರೆ ಈ ವಿಷಯದಲ್ಲಿ ಕರ್ನಾಟಕ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಹೊಸದೊಂದು ಚರಿತ್ರೆಯನ್ನು ಸೃಷ್ಟಿಸಬಹುದು.</p>



<p>ನಮಗೆ ಬಜೆಟಲ್ಲಿ ಪ್ರತಿಸಲವೂ ಅನ್ಯಾಯವಾಗುತ್ತಿದೆ. ನಮ್ಮ ಭಾಗದ ಶಾಸಕರಂತೂ ಮೌನವಾಗಿರುತ್ತಾರೆ. ಯಾರೂ ಪಕ್ಷಭೇದ ಮರೆತು ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳಿಗೆ ಪ್ರಶ್ನೆ ಮಾಡುವುದು ಕಂಡು ಬರುವುದಿಲ್ಲ. ಪರಿಹಾರ ಸಿಗಲಿಲ್ಲವೆಂದು ನಮ್ಮ ಹೈದ್ರಾಬಾದ್ ಕರ್ನಾಟಕಕ್ಕಾಗಿ ರಾಜೀನಾಮೆ‌ ಕೊಟ್ಟು ಹೊರ ಬರುವುದೂ ಇಲ್ಲ. ಅಷ್ಟೊಂದು ಅಧಿಕಾರಕ್ಕಾಗಿ ಅಂಟಿಕೊಂಡಿದ್ದಾರೆ.</p>



<p>ಮುಂದಿನ ದಿನಗಳಲ್ಲಿ ಪ್ರತ್ಯೇಕ ರಾಜ್ಯ ಆಗಬಹುದು. ಆದರೆ ಪ್ರತ್ಯೇಕ ರಾಜ್ಯ ಮಾಡುವ ಅಧಿಕಾರ ಸಂಸತ್ತು ಮತ್ತು ಪ್ರಧಾನಿಗಳಿಗಿದೆ. ನಮ್ಮ ಕೂಗು ದೆಹಲಿಗೆ ಕೇಳಿಸಿದ್ರೆ ಮಾತ್ರ ರಾಜ್ಯ ಸಿಗುತ್ತೆ.‌‌ ಈಗಾಗಲೇ ಸುಖಾಸುಮ್ಮನೇ ಸಿಎಂ ಸ್ಥಾನಕ್ಕಾಗಿ ಹೋರಾಡಿ, ಮಂಕುಬೂದಿ ಆಗಿದ್ದನ್ನು ನಾವ್ಯಾರೂ ಮರೆತಿಲ್ಲ.</p>



<p>ಹೈದ್ರಾಬಾದ್ ಕರ್ನಾಟಕದ ಬಗ್ಗೆ ಈ ‌ರೀತಿಯ ತಾತ್ಸಾರ ಭಾವನೆ ಯಾಕೆ? ಪ್ರತ್ಯೇಕ ರಾಜ್ಯ ಕೇಳಿದ ತಕ್ಷಣ ಉರಿದು ಅಖಂಡ ಕರ್ನಾಟಕದ ಬಗ್ಗೆ ಪಾಠ ಮಾಡುವವರೇ, ಯಾವಾಗಲಾದರೂ ನೀವು ಹೈ.ಕದವರನ್ನು ನಮ್ಮವರು ಅಂತ ಭಾವಿಸಿದ್ದು ಇದೆಯೇ? ಹೈದ್ರಾಬಾದ್ ಕರ್ನಾಟಕ ಪ್ರತ್ಯೇಕ ಅಂತ ಕೇಳಿದ ತಕ್ಷಣವೇ ರಾಜ್ಯ ಒಡೆಯುವವರು, ಅದು ಇದು ಅಂತೆಲ್ಲ ಹೇಳ್ತೀರಲ್ವ‌‌.? ಉ.ಕ ಪ್ರವಾಹಕ್ಕೆ ತತ್ತರಿಸಿ‌ ಹೋಗಿರುವಾಗ, ಅಲ್ಲಿಗೆ ಅಲ್ಪವಾದರೂ ಸಹಾಯವಾಯಿತು. ಅದೇ ಸಮಯದಲ್ಲಿ ಹೈದ್ರಾಬಾದ್ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳು ನಿಮಗೆ ನೆನಪು ಬರಲಿಲ್ಲ. ನಿಮ್ಮ ಅಖಂಡ ಕರ್ನಾಟಕದ‌ ಭಾವನೆ ಆಗ ಎಲ್ಲಿಗೆ ಹೋಗಿತ್ತು ಹೇಳಿ ನೋಡುವಾ.? ನಿಮ್ಮ ಭಾಗದ ರಾಜಕಾರಣಿಗಳಿಗೆ ಕೇಳಿ ಅಂತ ಉಪದೇಶ ನೀಡಲು ಮಾತ್ರ ಬರಬೇಡಿ.</p>



<p>ನಿಮ್ಮಲ್ಲಿ‌ ಮಾನವೀಯತೆ ನಶಿಸಿದ ಮೇಲೆ ನಾವಿನ್ನು ಕಠೋರ ಹೃದಯದಿಂದಲೇ, ವಿಷಾದದೊಂದಿಗೆ‌ ಹೈದ್ರಾಬಾದ್ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಿ ಎಂದು ಕೇಳಿಯೇ ಕೇಳುತ್ತೇವೆ.</p>



<p>ದಶಕಗಳ ಸುದೀರ್ಘ ಹೋರಾಟದ ಫಲವಾಗಿ ಸಾಂವಿಧಾನಿಕ ತಿದ್ದುಪಡಿಯಿಂದ 371(ಜೆ) ಅಡಿಯಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ದೊರೆತ ವಿಶೇಷ ಮೀಸಲಾತಿಗೆ ಸಂಬಂಧಿಸಿದಂತೆ ವೈದ್ಯಕೀಯ ಕೋಟಾದ ವಿಚಾರವಾಗಿ ಭಾಷೆಯನ್ನು ಮುಂದಿಟ್ಟುಕೊಂಡು ವೈದ್ಯಕೀಯ ಪ್ರವೇಶಗಳನ್ನು ನಿರಾಕರಿಸಿ, ಮೀಸಲಾತಿಯನ್ನು ಪ್ರಶ್ನಿಸಿ ಉಚ್ಚ&nbsp; ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ದಾವೆ ಹೂಡಿದ್ದ ರಾಯಚೂರಿನ ನವೋದಯ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಎಸ್.ಆರ್. ರೆಡ್ಡಿಯಂತಹವರನ್ನು ಆತನ ಶಿಕ್ಷಣ ಸಂಸ್ಥೆ, ಆಸ್ಪತ್ರೆ ಸೇರಿ ಎಲ್ಲಾ ವ್ಯವಹಾರಗಳನ್ನು ಜಿಲ್ಲೆಯಿಂದ ಹೊರ ಹಾಕಬೇಕಾಗಿತ್ತು. ಆ ಪ್ರಯತ್ನವೂ ನಮ್ಮ ರಾಜಕಾರಣಿಗಳಿಂದ ನಡೆಯಲಿಲ್ಲ, ಅದು ಸಾಧ್ಯವೂ ಕೂಡ ಆಗಲಿಲ್ಲ.</p>



<p><strong>ಇದನ್ನೂ ಓದಿ</strong>&#8211;<a href="http://ಉರಿ ನಂಜು ಕಡೆಗಣಿಸುವ ಹಾಗಿತ್ತೇ?" target="_blank" rel="noreferrer noopener">http://ಉರಿ ನಂಜು ಕಡೆಗಣಿಸುವ ಹಾಗಿತ್ತೇ?</a></p>



<p>ಹೈದರಾಬಾದ್ ಕರ್ನಾಟಕ ಭಾಗದ ಹಿತಾಸಕ್ತಿಗಾಗಿ ಮತ್ತು ನಮ್ಮ ಇಡೀ ರಾಜ್ಯಕ್ಕೆ ಧಕ್ಕೆ ಬಾರದಂತೆ ಬಸವಾದಿ ಶರಣರ ತತ್ವಕ್ಕೆ ಅನುಗುಣವಾಗಿ ಕಲ್ಯಾಣ ಕರ್ನಾಟಕ ನಿರ್ಮಿಸಲು ಹೊಸ ರಾಜಕೀಯ ಪಕ್ಷ ಸ್ಥಾಪನೆ ಮಾಡುವ ಕುರಿತು ಚುನಾವಣಾ ಆಯೋಗದಲ್ಲಿ ಹೊಸ ಪಕ್ಷದ ನೋಂದಣಿಗೆ ದೆಹಲಿ ಮಟ್ಟದಲ್ಲಿ ಪ್ರಯತ್ನಿಸುತ್ತಿರುವವರಿಗೆ ನಮ್ಮ ಭಾಗದ ಏಳಿಗೆಗಾಗಿ ನಮ್ಮವರು ಮಾಡುವ ಪ್ರಯತ್ನಕ್ಕೆ ನಾವೆಲ್ಲರೂ ಬೆಂಬಲ ಸೂಚಿಸೋಣ! ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟ ಮಾದರಿಯನ್ನು ಮುಂದಿನ ದಿನಗಳಲ್ಲಿ ನಾವೇಕೆ ಅನುಸರಿಸಬಾರದು? ಅನ್ನುವ ಗಂಭೀರವಾದ&nbsp; ಪ್ರಶ್ನೆ‌ಯನ್ನು ರಾಯಚೂರು ಜಿಲ್ಲೆಯ ಮಾನ್ವಿಯ ಖ್ಯಾತ ಹಿರಿಯ ಪತ್ರಕರ್ತರಾದ ಬಸವರಾಜ‌ ಭೋಗಾವತಿಯವರು ಐದು ವರ್ಷಗಳ ಹಿಂದೆಯೇ ಎತ್ತಿದ್ದಾರೆ.</p>



<figure class="wp-block-gallery has-nested-images columns-default is-cropped wp-block-gallery-2 is-layout-flex wp-block-gallery-is-layout-flex">
<figure class="wp-block-image size-large"><img loading="lazy" decoding="async" width="1024" height="1024" data-id="20930" src="https://peepalmedia.com/wp-content/uploads/2023/04/Election-Poster-copy-1-1024x1024.webp" alt="" class="wp-image-20930" srcset="https://peepalmedia.com/wp-content/uploads/2023/04/Election-Poster-copy-1-1024x1024.webp 1024w, https://peepalmedia.com/wp-content/uploads/2023/04/Election-Poster-copy-1-300x300.webp 300w, https://peepalmedia.com/wp-content/uploads/2023/04/Election-Poster-copy-1-150x150.webp 150w, https://peepalmedia.com/wp-content/uploads/2023/04/Election-Poster-copy-1-768x768.webp 768w, https://peepalmedia.com/wp-content/uploads/2023/04/Election-Poster-copy-1-1536x1536.webp 1536w, https://peepalmedia.com/wp-content/uploads/2023/04/Election-Poster-copy-1-2048x2048.webp 2048w, https://peepalmedia.com/wp-content/uploads/2023/04/Election-Poster-copy-1-696x696.webp 696w, https://peepalmedia.com/wp-content/uploads/2023/04/Election-Poster-copy-1-1068x1068.webp 1068w, https://peepalmedia.com/wp-content/uploads/2023/04/Election-Poster-copy-1-1920x1920.webp 1920w" sizes="auto, (max-width: 1024px) 100vw, 1024px" /></figure>
</figure>



<p>ಕಲ್ಯಾಣ ಕರ್ನಾಟಕ ಅಂತ ಹೆಸರಿಗಷ್ಟೇ ಘೋಷಣೆ ಮಾಡಿ ಏನು ಉದ್ಧಾರ ಮಾಡಿದ್ದಾರೆ? ಪ್ರತ್ಯೇಕ ರಾಜ್ಯ ಮಾಡಿಯಾದರೂ ಉದ್ಧರಿಸಬಹುದೇನೂ ಎಂಬ ಆಶಾಭಾವನೆಯೊಂದಿಗೆ, ನಮ್ಮ ಭಾಗವನ್ನು ಕಲ್ಯಾಣ ಮಾಡದೇ, ಆಸೆ ತೋರಿಸಿ ಮೋಸ ಮಾಡುತ್ತಾ ಈಗಲೂ ಅಭಿವೃದ್ಧಿ ವಿಷಯದಲ್ಲಿ ಕೂಡ ನಮ್ಮನ್ನು ತುಳಿಯುತ್ತಾ, ಅನ್ಯಾಯ ಮಾಡುತ್ತಿರುವ ನೀವು ನಮ್ಮ ಭಾಗದ ಸಮಸ್ತ ಜನತೆಗೆ ದ್ರೋಹ ಬಗೆಯುತ್ತಿದ್ದೀರಿ!</p>



<p>ಮತ್ತೊಂದು ಚುನಾವಣೆ ಬಂದಿದೆ. ನಮ್ಮ ನಿರೀಕ್ಷೆಯನ್ನು ಈಡೇರಿಸುವ ಭರವಸೆ ನೀಡುವ ಅಭ್ಯರ್ಥಿಗಳಿಗೆ ಮತಚಲಾಯಿಸೋಣ. &nbsp;</p>



<p><strong>ಶಿವರಾಜ್ ಮೋತಿ</strong></p>



<p>ಕಾನೂನು ವಿದ್ಯಾರ್ಥಿ</p>



<p>ಹಟ್ಟಿ ಚಿನ್ನದ ಗಣಿ, ರಾಯಚೂರು ಜಿಲ್ಲೆ</p>



<p><strong><a href="http://ರಂಗಭೂಮಿಗೆ ಪಕ್ಷ ರಾಜಕಾರಣದ ಧೂಳು?" target="_blank" rel="noreferrer noopener">ಇದನ್ನೂ ಓದಿ-</a></strong><a href="http://ರಂಗಭೂಮಿಗೆ ಪಕ್ಷ ರಾಜಕಾರಣದ ಧೂಳು?" target="_blank" rel="noreferrer noopener">http://ರಂಗಭೂಮಿಗೆ ಪಕ್ಷ ರಾಜಕಾರಣದ ಧೂಳು?</a></p>
]]></content:encoded>
					
		
		
			</item>
		<item>
		<title>ಅಪರೂಪಕ್ಕೊಮ್ಮೆ ಅಪರೂಪದ ವ್ಯಕ್ತಿ</title>
		<link>https://peepalmedia.com/special-person-special-one-shivaraj-mothi/</link>
		
		<dc:creator><![CDATA[Shivaraj Mothi]]></dc:creator>
		<pubDate>Sat, 15 Oct 2022 11:09:24 +0000</pubDate>
				<category><![CDATA[ಅಂಕಣ]]></category>
		<category><![CDATA[bengalure]]></category>
		<category><![CDATA[illiterate]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[village]]></category>
		<category><![CDATA[writing]]></category>
		<guid isPermaLink="false">https://peepalmedia.com/?p=10865</guid>

					<description><![CDATA[ಒಂಬತ್ತನೆಯ ತರಗತಿಯವರೆಗೆ ಮಾತ್ರ ಓದಿಕೊಂಡಿರುವ ಶೋಭಾ ಟಿ.ಗುನ್ನಾಪೂರ ಸಾಹಿತ್ಯದ ಓದು-ಬರಹದಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡು ಅಪರೂಪದ ಕತೆಗಳನ್ನು ʼಭೂಮಿಯ ಋಣʼ ಕಥಾ ಸಂಕಲನದಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಪುಸ್ತಕದ ಬಿಡುಗಡೆ ಸಮಾರಂಭವು ನಾಳೆ ಬೆಂಗಳೂರಿನಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಲೇಖಕಿಯ ಕುರಿತಾಗಿ ಆಪ್ತವಾಗಿ ಬರೆದಿದ್ದಾರೆ ಕಾನೂನು ವಿದ್ಯಾರ್ಥಿ ಶಿವರಾಜ ಮೋತಿ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದವರಾದ ಶೋಭಾ ಟಿ ಗುನ್ನಾಪೂರ ಅವರ ತವರುಮನೆ ಶಿರಶ್ಯಾಡ ಎಂಬ ಗ್ರಾಮ. ಕೃಷಿ ಮತ್ತು ಸಾಹಿತ್ಯದಲ್ಲಿ ಅಪಾರ ಆಸಕ್ತಿ, ಪತಿ [&#8230;]]]></description>
										<content:encoded><![CDATA[
<p><strong>ಒಂಬತ್ತನೆಯ ತರಗತಿಯವರೆಗೆ ಮಾತ್ರ ಓದಿಕೊಂಡಿರುವ ಶೋಭಾ ಟಿ.ಗುನ್ನಾಪೂರ ಸಾಹಿತ್ಯದ ಓದು-ಬರಹದಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡು ಅಪರೂಪದ ಕತೆಗಳನ್ನು ʼಭೂಮಿಯ ಋಣʼ ಕಥಾ ಸಂಕಲನದಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಪುಸ್ತಕದ ಬಿಡುಗಡೆ ಸಮಾರಂಭವು ನಾಳೆ ಬೆಂಗಳೂರಿನಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಲೇಖಕಿಯ ಕುರಿತಾಗಿ ಆಪ್ತವಾಗಿ ಬರೆದಿದ್ದಾರೆ ಕಾನೂನು ವಿದ್ಯಾರ್ಥಿ ಶಿವರಾಜ ಮೋತಿ.</strong></p>



<p>ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದವರಾದ <strong>ಶೋಭಾ ಟಿ ಗುನ್ನಾಪೂರ</strong> ಅವರ ತವರುಮನೆ ಶಿರಶ್ಯಾಡ ಎಂಬ ಗ್ರಾಮ. ಕೃಷಿ ಮತ್ತು ಸಾಹಿತ್ಯದಲ್ಲಿ ಅಪಾರ ಆಸಕ್ತಿ, ಪತಿ ತುಕಾರಾಮ್ ಗುನ್ನಾಪೂರ ಅವರು ಸಹ ರೈತರಾಗಿದ್ದಾರೆ. ಇವರಿಗೆ ಮೂವರು ಗಂಡು ಮಕ್ಕಳು ಹಾಗೂ ಒಬ್ಬ ಹೆಣ್ಣು ಮಗಳು ಇದಾರೆ. ಓದುವ ಹವ್ಯಾಸ ಉಳ್ಳವರು ಎಲ್ಲಿದ್ದರೂ, ಹೇಗಿದ್ದರೂ ಸುಖಿಯಾಗಿರಬಲ್ಲರು ಎಂಬ ಮಾತೊಂದಿದೆ. ಈ ಮಾತಿಗೆ ಕೈಗನ್ನಡಿ ಹಾಗೂ ಅಲ್ಪ‌ವಿದ್ಯೆ ಮಹಾಗರ್ವಿ ಎಂಬ ಮಾತಿಗೆ ತದ್ವಿರುದ್ಧವಾಗಿದ್ದಾರೆ ಇವರು ಎಂದರೂ ಸಹ ಅತಿಶಯೋಕ್ತಿ ಎನಿಸಲಾರದು</p>



<p><strong>ನೆನಪುಗಳ ಕನವರಿಕೆ</strong></p>



<p>ಓದಿದ್ದು ಕೇವಲ ಒಂಬತ್ತನೇ ತರಗತಿಯವರೆಗೆ ಮಾತ್ರ. ಆದರೂ ಕನ್ನಡ ಸಾಹಿತ್ಯವನ್ನು ಅದರಲ್ಲೂ ಸೃಜನಶೀಲ ಸಾಹಿತ್ಯ, ವಿಚಾರ ಸಾಹಿತ್ಯವನ್ನು ಓದುವ ಅಪಾರ ಆಸಕ್ತಿ ಇರಿಸಿಕೊಂಡಿದ್ದಾರೆ. “ನಮ್ಮ ಬಾಲ್ಯದ ಸಮಯದಲ್ಲಿ ಮುಂದೆ ಕಲಿಯಲು ಹಳ್ಳಿಯಲ್ಲಿ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹವಿರಲಿಲ್ಲ. ಹಾಗಾಗಿ ನಮ್ಮ ತಂದೆಯವರು ನಾನು ದೊಡ್ಡವಳಾದ ಬಳಿಕ ನನ್ನನ್ನು ಶಾಲೆಗೆ ಕಳುಹಿಸುವುದು ಬೇಡವೆಂದು ತೀರ್ಮಾನಿಸಿ ನನಗೆ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿಬಿಟ್ಟರು” ಎನ್ನುವ ಇವರು “ನನಗಿನ್ನೂ ಕಲಿಯಬೇಕೆಂಬ ಆಸಕ್ತಿ ಇತ್ತು. ಆದರೆ ಹಳ್ಳಿಯಲ್ಲಿ ದೊಡ್ಡವರಾದ ಬಳಿಕ ಮತ್ತೆಲ್ಲಿ ಶಾಲೆಗೆ ಕಳಿಸಬೇಕಂತ ಆಲೋಚಿಸಿಯೇ ಮದುವೆ ಮಾಡಿದರು” ಎಂದು ಇವರು ಹೇಳುತ್ತಾರೆ.</p>



<p></p>



<figure class="wp-block-image size-full"><img loading="lazy" decoding="async" width="720" height="506" src="https://peepalmedia.com/wp-content/uploads/2022/10/WhatsApp-Image-2022-10-15-at-3.48.39-PM.jpeg" alt="" class="wp-image-10870" srcset="https://peepalmedia.com/wp-content/uploads/2022/10/WhatsApp-Image-2022-10-15-at-3.48.39-PM.jpeg 720w, https://peepalmedia.com/wp-content/uploads/2022/10/WhatsApp-Image-2022-10-15-at-3.48.39-PM-300x211.jpeg 300w, https://peepalmedia.com/wp-content/uploads/2022/10/WhatsApp-Image-2022-10-15-at-3.48.39-PM-150x105.jpeg 150w, https://peepalmedia.com/wp-content/uploads/2022/10/WhatsApp-Image-2022-10-15-at-3.48.39-PM-696x489.jpeg 696w" sizes="auto, (max-width: 720px) 100vw, 720px" /></figure>



<p></p>



<p>“ಆದರೆ ನನಗೆ ಕಲಿಯಲೇಬೇಕೆಂಬ ಛಲ ಇದ್ದಿದ್ದರಿಂದ ಬರೆಯಲು, ಓದಲು ರೂಢಿಸಿಕೊಂಡೆ. ಕಸದಲ್ಲಿ ಯಾವುದಾದರೂ ಪೇಪರ್ ಬಿದ್ದಿತ್ತೆಂದರೂ ಸಹ ಅದರಲ್ಲಿನ ಅಕ್ಷರಗಳನ್ನು ಓದದೇ ಹೋದರೆ ನನಗೆ ಸಮಾಧಾನವೇ ಆಗುತ್ತಿರಲಿಲ್ಲ. ನಮ್ಮದು ಕೂಡು ತುಂಬು ಕುಟುಂಬ. ಏಳು ಮಂದಿ ಅಣ್ಣ-ತಮ್ಮಂದಿರು, ಏಳು ಮಂದಿ ಹೆಣ್ಣುಮಕ್ಕಳು, ಅತ್ತೆ, ಮಾವ ಅಷ್ಟಿದ್ದರೂ ಅವರ ಜೊತೆ ನಾನು ಕೆಲಸ ಮಾಡಿ ಓದು ಬರಹದ ಕಡೆ ಲಕ್ಷ್ಯ, ಸಮಯವೂ ಕೊಡುತ್ತಿದ್ದೆ. ಬೇಕಾದಷ್ಟು ಕೆಲಸವಿದ್ದರೂ ಸಹ ಓದು ಬರಹಕ್ಕೆಂದೇ ಎರಡು ಗಂಟೆ ಕಡ್ಡಾಯವಾಗಿ ಸಮಯ ಮೀಸಲು ಮಾಡಿ ಓದುತ್ತಿದ್ದೆ, ಬರೆಯುತ್ತಿದ್ದೆ. ಅಮ್ಮ ನೀನು ಇಷ್ಟೆಲ್ಲಾ ಕತೆ, ಕಾದಂಬರಿ ಓದುತ್ತಿಯಾ, ಚಿಕ್ಕ ಪುಟ್ಟದು ಬರೆಯುತ್ತೀಯಾ, ಏನಾದರೂ ಪುಸ್ತಕ ಬರೆ ಎಂದು ಬರಬರುತ್ತಾ ನನ್ನ ಮಕ್ಕಳು ನನಗೆ ಬುದ್ಧಿ ಹೇಳತೊಡಗಿದರು” ಎಂದು ನೆನಪುಗಳನ್ನು ಮೆಲುಕು ಹಾಕುತ್ತಾರೆ.</p>



<p>&nbsp;ಇವರ ಎರಡು ಪುಸ್ತಕಗಳು ಮಕ್ಕಳ ಒತ್ತಾಯದ ಪರಿಣಾಮವೇ ಇರಬಹುದು. ʼಭೂಮಿಯ ಋಣʼ ಕಥಾ ಸಂಕಲನ ಇದೇ ಅಕ್ಟೋಬರ್ ೧೬ ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಆತ್ಮಚರಿತ್ರೆ ಮುದ್ರಣದ ಹಂತದಲ್ಲಿದೆ. ಇವರು ಬರೆದ ಕವಿತೆಗಳು ಪಂಜಾಬಿ ಭಾಷೆಗೆ ಅನುವಾದಗೊಂಡಿವೆ ಹಾಗೂ ಕತೆಗಳು ಸಂಯುಕ್ತ ಕರ್ನಾಟಕ ಮತ್ತು ಇನ್ನಿತರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.</p>



<p></p>



<figure class="wp-block-image size-full"><img loading="lazy" decoding="async" width="720" height="960" src="https://peepalmedia.com/wp-content/uploads/2022/10/WhatsApp-Image-2022-10-15-at-3.48.39-PM-1.jpeg" alt="" class="wp-image-10871" srcset="https://peepalmedia.com/wp-content/uploads/2022/10/WhatsApp-Image-2022-10-15-at-3.48.39-PM-1.jpeg 720w, https://peepalmedia.com/wp-content/uploads/2022/10/WhatsApp-Image-2022-10-15-at-3.48.39-PM-1-225x300.jpeg 225w, https://peepalmedia.com/wp-content/uploads/2022/10/WhatsApp-Image-2022-10-15-at-3.48.39-PM-1-150x200.jpeg 150w, https://peepalmedia.com/wp-content/uploads/2022/10/WhatsApp-Image-2022-10-15-at-3.48.39-PM-1-300x400.jpeg 300w, https://peepalmedia.com/wp-content/uploads/2022/10/WhatsApp-Image-2022-10-15-at-3.48.39-PM-1-696x928.jpeg 696w" sizes="auto, (max-width: 720px) 100vw, 720px" /></figure>



<p></p>



<p><strong>ಸಮಾಜಮುಖಿ ಹೆಜ್ಜೆಗಳು</strong></p>



<p>ಸಾಮಾನ್ಯ ಹಳ್ಳಿಯ ಹೆಣ್ಣುಮಗಳಾದ ಶೋಭಾ ಗುನ್ನಾಪೂರ ಅವರು ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘದ ಪ್ರತಿನಿಧಿಯಾಗಿ ಅನೇಕ ಹೆಣ್ಣುಮಕ್ಕಳ ಬದುಕಿಗೆ ಸ್ಪೂರ್ತಿಯಾಗಿದ್ದಾರೆ. ಪ್ರಗತಿಪರ ರೈತರೂ ಎನಿಸಿಕೊಂಡಿದ್ದಾರೆ. ಇವರಿಗೆ 2019ರಲ್ಲಿ ಮಾತಾ ಜೀವಿ ಪ್ರಶಸ್ತಿ ಲಭಿಸಿದೆ. ಹಿರೇಮಸಳಿಯಲ್ಲಿ ಕುಡಿತ ಬಿಡಿಸಲು, ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು, ನೊಂದ ಮಹಿಳೆಯರಿಗೆ ಸಾಂತ್ವನ ನೀಡಿ ಆಸರೆಯಾಗಿ ನಿಲ್ಲಲು ಶ್ರಮಿಸಿದ್ದಾರೆ.</p>



<p><strong>ಇವರು ಮಕ್ಕಳಿಗಾಗಿ ಆಸ್ತಿ ಮಾಡಲಿಲ್ಲ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿದ್ದಾರೆ.</strong></p>



<p>ಇಂದು ಇವರ ಕುಟುಂಬ ಸುಸ್ಥಿರವಾಗಿದೆ. ಮಕ್ಕಳು ಉತ್ತಮವಾದ ಉದ್ಯೋಗದಲ್ಲಿದ್ದಾರೆ. ಸುನಿಲ್ ಕುಮಾರ್ ಗುನ್ನಾಪೂರ ಬೆಂಗಳೂರಿನಲ್ಲಿ ಹೈಕೋರ್ಟ್ ವಕೀಲರಾಗಿದ್ದು ಸಾಮಾಜಿಕ ಕಾರ್ಯಕರ್ತರೂ ಆಗಿದ್ದಾರೆ. ಅನಿಲ್ ಕುಮಾರ್ ಗುನ್ನಾಪೂರ ಬಾಗಲಕೋಟೆಯಲ್ಲಿ ಸರ್ವೆಯರ್ ಆಗಿದ್ದು ಬರಹಗಾರರಾಗಿದ್ದಾರೆ. ಇನ್ನೊಬ್ಬರು ಭೀಮರಾವ್ ಗುನ್ನಾಪೂರ ಉನ್ನತ ಅಧಿಕಾರಿಯಾಗಬೇಕೆಂಬ ಮಹಾದಾಸೆಯೊಂದಿಗೆ ಅಭ್ಯಾಸ ಮಾಡುತ್ತಿದ್ದಾರೆ. ಇನ್ನೊಬ್ಬ ಹೆಣ್ಣುಮಗಳು ಅನಿತಾ ಮದುವೆಯಾಗಿ ಗಂಡನ ಮನೆಯಲ್ಲಿ ಸುಖವಾಗಿದ್ದಾರೆ.</p>



<p></p>



<blockquote class="wp-block-quote has-small-font-size is-layout-flow wp-block-quote-is-layout-flow" style="max-width:691px;margin-top:0px;margin-bottom:-6px"><p>ನಾಳೆ ಅಂದರೆ ಅಕ್ಟೋಬರ್‌ 16ರಂದು ಸಾಮಾಜಿಕ ನ್ಯಾಯಕ್ಕಾಗಿ ವಕೀಲರು, ಕರ್ನಾಟಕ ಹಾಗೂ ವೈಷ್ಣವಿ ಪ್ರಕಾಶನ ಸಹಯೋಗದಲ್ಲಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು, ಅಕ್ಕಮಹಾದೇವಿ ಸಭಾಂಗಣದಲ್ಲಿ ಬೆಳಿಗ್ಗೆ 10:30ರಿಂದ ಕಾರ್ಯಕ್ರಮ ಪ್ರಾರಂಭವಾಗಲಿದೆ.</p></blockquote>



<p></p>



<p>ಪದವಿ, ಸರ್ಟಿಫೀಕೇಟ್ ಗಳು ಸಾಧನೆಗೆ ಅನಿವಾರ್ಯವಲ್ಲ ಎಂದು ತೋರಿಸಿ ಇಂದು ನಮ್ಮ ಮುಂದೆ ಮಾದರಿಯಾಗಿ ನಿಂತಿದ್ದಾರೆ ಶೋಭಾ ಗುನ್ನಾಪೂರ ಇವರು. ಪ್ರಚಾರದಿಂದ ದೂರ ಇರುವ ಇವರು ಎಲೆಮರೆಯ ಕಾಯಿಯಂತೆ ತಮ್ಮ ಕೆಲಸವನ್ನು ಪ್ರೀತಿಯಿಂದ ಮಾಡುತ್ತಾ ಸಾಗುತ್ತಿದ್ದಾರೆ. ಅವರ ಬರಹಗಳೂ, ಸೇವೆಯೂ, ಹೀಗೆಯೇ ಸಾಗುತ್ತಿರಲಿ ಮತ್ತು ಸಾಹಿತ್ಯ ಲೋಕದಲ್ಲಿ ಇವರ ಹೆಸರು ಶಾಶ್ವತವಾಗುಳಿಯಲಿ &nbsp;ಎಂದು ಆಶಿಸೋಣ.</p>



<p></p>



<figure class="wp-block-image size-full is-resized"><img loading="lazy" decoding="async" src="https://peepalmedia.com/wp-content/uploads/2022/10/117159658_944242746044674_5646119364001772730_n-1.jpg" alt="" class="wp-image-10875" width="169" height="153"/><figcaption><strong>ಶಿವರಾಜ್‌ ಮೋತಿ</strong> (ಕಾನೂನು ವಿದ್ಯಾರ್ಥಿ)</figcaption></figure>



<p></p>
]]></content:encoded>
					
		
		
			</item>
	</channel>
</rss>
