<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ಇಕಾಲಜಿ &#8211; Peepal Media</title>
	<atom:link href="https://peepalmedia.com/category/%e0%b2%87%e0%b2%95%e0%b2%be%e0%b2%b2%e0%b2%9c%e0%b2%bf/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 23 Nov 2023 07:15:17 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>ಇಕಾಲಜಿ &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಸಾವು ಬದುಕಿನ ನಡುವೆ ಕಾರ್ಮಿಕರು; ಭಾಷಣದಲ್ಲಿ ಮೈಮರೆತ ವಿಶ್ವಗುರುಗಳು</title>
		<link>https://peepalmedia.com/workers-between-life-and-death/</link>
		
		<dc:creator><![CDATA[Peepal Media]]></dc:creator>
		<pubDate>Thu, 23 Nov 2023 06:46:49 +0000</pubDate>
				<category><![CDATA[ಇಕಾಲಜಿ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=33000</guid>

					<description><![CDATA[ಜನರಿಗೆ ಬದುಕು ಕಟ್ಟಿಕೊಡುವುದಕ್ಕಿಂತಾ ಅವರ ಭಾವನೆಗಳನ್ನೇ ಉದ್ದೀಪಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಮೋದಿ ನೇತೃತ್ವದ ಬಿಜೆಪಿ ಪಕ್ಷಕ್ಕೆ ಹಾಗೂ ಅದರ ಹಿಂದಿರುವ ಸಂಘಕ್ಕೆ ಬೇಕಿರುವುದು ದೇವರು ಧರ್ಮ ಭಾವ ಭಕ್ತಿಯನ್ನು ಪ್ರಚೋದಿಸುವ ಸಂಗತಿಗಳೇ. ಚಾರ್ದಾಮ್ ಯಾತ್ರೆಯ ಕುರಿತು ಭಕ್ತರ ಭಾವನೆಗಳನ್ನೇ ಅಧಿಕಾರದ ಮೆಟ್ಟಲುಗಳಾಗಿ ಬಳಸಲು ಈ ಸರ್ವಋತು ಸುರಂಗ ಮಾರ್ಗ ಯೋಜನೆಯನ್ನು ಅತ್ಯಂತ ಅಪಾಯಕಾರಿ ಸ್ಥಳದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ – ಶಶಿಕಾಂತ ಯಡಹಳ್ಳಿ ಉತ್ತರಾಖಂಡದ ಉತ್ತರಕಾಶಿಯಲ್ಲಿ ನಿರ್ಮಿಸುತ್ತಿರುವ ಸಿಲ್ಕ್ಯಾರಾ ಹೆದ್ದಾರಿ ಸುರಂಗದ ಕಾಮಗಾರಿ ಸಂದರ್ಭದಲ್ಲಿ ಭೂಕುಸಿತವಾಗಿ 41 [&#8230;]]]></description>
										<content:encoded><![CDATA[
<p class="has-black-color has-text-color has-background has-link-color wp-elements-e48e8e8a6b22931b2d6728b8e14073fb" style="background-color:#abb7c273"><strong>ಜನರಿಗೆ ಬದುಕು ಕಟ್ಟಿಕೊಡುವುದಕ್ಕಿಂತಾ ಅವರ ಭಾವನೆಗಳನ್ನೇ ಉದ್ದೀಪಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಮೋದಿ ನೇತೃತ್ವದ ಬಿಜೆಪಿ ಪಕ್ಷಕ್ಕೆ ಹಾಗೂ ಅದರ ಹಿಂದಿರುವ ಸಂಘಕ್ಕೆ ಬೇಕಿರುವುದು ದೇವರು ಧರ್ಮ ಭಾವ ಭಕ್ತಿಯನ್ನು ಪ್ರಚೋದಿಸುವ ಸಂಗತಿಗಳೇ. ಚಾರ್ದಾಮ್ ಯಾತ್ರೆಯ ಕುರಿತು ಭಕ್ತರ ಭಾವನೆಗಳನ್ನೇ ಅಧಿಕಾರದ ಮೆಟ್ಟಲುಗಳಾಗಿ ಬಳಸಲು ಈ ಸರ್ವಋತು ಸುರಂಗ ಮಾರ್ಗ ಯೋಜನೆಯನ್ನು ಅತ್ಯಂತ ಅಪಾಯಕಾರಿ ಸ್ಥಳದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ – <mark style="background-color:rgba(0, 0, 0, 0)" class="has-inline-color has-vivid-red-color">ಶಶಿಕಾಂತ ಯಡಹಳ್ಳಿ</mark></strong></p>



<p>ಉತ್ತರಾಖಂಡದ ಉತ್ತರಕಾಶಿಯಲ್ಲಿ ನಿರ್ಮಿಸುತ್ತಿರುವ ಸಿಲ್ಕ್ಯಾರಾ ಹೆದ್ದಾರಿ ಸುರಂಗದ ಕಾಮಗಾರಿ ಸಂದರ್ಭದಲ್ಲಿ ಭೂಕುಸಿತವಾಗಿ 41 ಜನ ಕಾರ್ಮಿಕರು ಸುರಂಗದಲ್ಲಿ ಸಿಲುಕಿಕೊಂಡು ಸಾವಿನ ಭಯದಲ್ಲಿ ಬದುಕಿನ ಆತಂಕದ ಕ್ಷಣಗಳನ್ನು ಕಳೆಯುತ್ತಿದ್ದು ಕಳೆದ 11 ದಿನಗಳಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.</p>



<p>ಕೇಂದ್ರ ಸರಕಾರದ ಯೋಜನೆಯಂತೆ ಚಾರದಾಮ್ ಸರ್ವಋತು ರಸ್ತೆ ಯೋಜನೆಯಡಿ ಉತ್ತರಕಾಶಿಯಿಂದ ಯಮನೋತ್ರಿಗೆ ಹೋಗುವ ನಡುವಿನ ಮಾರ್ಗದಲ್ಲಿ&nbsp; 4.5 ಕಿಮಿ ಉದ್ದದ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿದ್ದಾಗ ನವೆಂಬರ್ 12 ರಂದು ಈ ಭೀಕರ ದುರಂತ ನಡೆದಿದೆ. ರಕ್ಷಣಾ&nbsp; ಕಾರ್ಯಾಚರಣೆ ಜಾರಿಯಲ್ಲಿದೆಯಾದರೂ ಇನ್ನೂ ಫಲಕೊಟ್ಟಿಲ್ಲ.</p>



<p>ಹಿಮಾಲಯದ ತಪ್ಪಲಲ್ಲಿ, ಅತ್ಯಂತ ಸಡಿಲವಾದ ಭೂತಳ ರಚನೆ ಇರುವಲ್ಲಿ ಇಂತಹ ಯೋಜನೆಗಳು ಅಪಾಯಕಾರಿ ಎಂದು ಭೂಗರ್ಭ ಶಾಸ್ತ್ರಜ್ಞರು, ಪರಿಸರವಾದಿಗಳು ಮೊದಲೇ ಎಚ್ಚರಿಸಿದ್ದರು. ಆದರೂ ಕಡುಕಷ್ಟಕರವಾದ ಚಾರ್ದಾಮ್ ಯಾತ್ರೆಯನ್ನು ಸರಳಗೊಳಿಸಲು ಭೂಗರ್ಭವನ್ನು ಬಗೆದು ಸುರಂಗ ಮಾರ್ಗವನ್ನು ನಿರ್ಮಿಸುವ ಅನರ್ಥಕಾರಿ ಯೋಜನೆಯನ್ನು ಹಮ್ಮಿಕೊಂಡಿದೆ.&nbsp;</p>



<figure class="wp-block-image size-full"><img fetchpriority="high" decoding="async" width="1200" height="900" src="https://peepalmedia.com/wp-content/uploads/2023/11/uttarkashi-tunnel-collapse-new-drill-begins-rescue-work.jpg" alt="" class="wp-image-33007" srcset="https://peepalmedia.com/wp-content/uploads/2023/11/uttarkashi-tunnel-collapse-new-drill-begins-rescue-work.jpg 1200w, https://peepalmedia.com/wp-content/uploads/2023/11/uttarkashi-tunnel-collapse-new-drill-begins-rescue-work-300x225.jpg 300w, https://peepalmedia.com/wp-content/uploads/2023/11/uttarkashi-tunnel-collapse-new-drill-begins-rescue-work-1024x768.jpg 1024w, https://peepalmedia.com/wp-content/uploads/2023/11/uttarkashi-tunnel-collapse-new-drill-begins-rescue-work-768x576.jpg 768w, https://peepalmedia.com/wp-content/uploads/2023/11/uttarkashi-tunnel-collapse-new-drill-begins-rescue-work-150x113.jpg 150w, https://peepalmedia.com/wp-content/uploads/2023/11/uttarkashi-tunnel-collapse-new-drill-begins-rescue-work-696x522.jpg 696w, https://peepalmedia.com/wp-content/uploads/2023/11/uttarkashi-tunnel-collapse-new-drill-begins-rescue-work-1068x801.jpg 1068w" sizes="(max-width: 1200px) 100vw, 1200px" /><figcaption class="wp-element-caption">ಸಿಲ್ಕ್ಯಾರಾ ಸುರಂಗ ದುರಂತ</figcaption></figure>



<p>ಸಂಘಿಗಳು ಈ ಭೂಕುಸಿತ ದುರಂತಕ್ಕೆ ಕಾರಣವಾದ ಅಸುರಕ್ಷಿತ ಯೋಜನೆಯ ಬಗ್ಗೆ ಚಕಾರ ಎತ್ತುತ್ತಿಲ್ಲ. ಆದರೆ ಅದರ ಬದಲಾಗಿ ಭಾವನಾತ್ಮಕ ಕತೆಯೊಂದನ್ನು ಹರಿಬಿಡುತ್ತಿದ್ದಾರೆ. ಅದೇನೆಂದರೆ &#8220;ಈ ಸುರಂಗದ ಕಾಮಗಾರಿ ಆರಂಭವಾಗುವ&nbsp; ಜಾಗದಲ್ಲಿ ಭೂಕನಾಗ ಎನ್ನುವ ಚಿಕ್ಕ ದೇವಸ್ಥಾನವಿತ್ತು. ಕಾರ್ಮಿಕರು ಪ್ರತಿದಿನ ಅದಕ್ಕೆ ನಮಸ್ಕರಿಸಿ ಕೆಲಸಕ್ಕೆ ಹೋಗುತ್ತಿದ್ದರಿಂದ ಯಾವುದೇ ಅವಘಡ ಸಂಭವಿಸಿರಲಿಲ್ಲ. ಆದರೆ ಯಾವಾಗ ಕನ್ ಸ್ಟ್ರಕ್ಷನ್ ಕಂಪನಿಯವರು ಈ ದೇವಸ್ಥಾನವನ್ನು ಡಿಮಾಲಿಶ್ ಮಾಡಿದರೋ ಆಗ ಭೂಕನಾಗ ದೇವರ ಕೋಪಕ್ಕೆ ಒಳಗಾಗಿ ಈ ದುರಂತ ಸಂಭವಿಸಿತು. ಈ ಅನಾಹುತಕ್ಕೆ ದೈವದ ಶಾಪವೇ ಕಾರಣವಾಗಿದೆ.&#8221; ಹೀಗೊಂದು ಕಲ್ಪನೆಯ ಕಥೆಯನ್ನು ಹುಟ್ಟುಹಾಕುವ ಮೂಲಕ ದೇವರ ಮಹಿಮೆಯನ್ನು ಎತ್ತಿಹಿಡಿದು ಭಕ್ತಾದಿಗಳಲ್ಲಿ ಭಾವತೀವ್ರತೆಯನ್ನು ಹುಟ್ಟು ಹಾಕಲು ಪ್ರಯತ್ನಿಸಲಾಗುತ್ತಿದೆ. ಈ ದುರಂತಕ್ಕೆ ಅವೈಜ್ಞಾನಿಕ ಯೋಜನೆ ಕಾರಣ ಎಂಬ ಆರೋಪವನ್ನು ಮರೆಮಾಚಲು ದೇವರ ಕೋಪದ ಕಲ್ಪನೆ ಹರಿಬಿಡಲಾಗಿದೆ. ದೈವದ ಸಿಟ್ಟು ಇರುವುದೇ ಆಗಿದ್ದರೆ ಅದು ಗುತ್ತಿಗೆದಾರರ ಮೇಲಿರಬೇಕಿತ್ತು. ದೇವಸ್ಥಾನವನ್ನು ತೆರವು ಗೊಳಿಸಿದವರಿಗೆ ತೊಂದರೆ ಆಗಬಹುದಾಗಿತ್ತು. ಇಲ್ಲವೇ ಈ ರೀತಿಯ ಅವೈಜ್ಞಾನಿಕ ಪರಿಸರ ವಿರೋಧಿ ಯೋಜನೆಯನ್ನು ರೂಪಿಸಿದವರ ಪ್ರಾಣಕ್ಕೆ ಸಂಚಕಾರ ಬರಬಹುದಾಗಿತ್ತು. ಆದರೆ ದಿನವೂ ಪ್ರಾರ್ಥನೆ ಸಲ್ಲಿಸಿಯೇ ಕೆಲಸಕ್ಕೆ ಹೋಗುತ್ತಿದ್ದ ಪಾಪದ ಶ್ರಮಜೀವಿಗಳ ಮೇಲೆ ಯಾಕೆ ದೈವ ಮುನಿಸಿ ಕೊಳ್ಳಬೇಕು? ಕಾರ್ಮಿಕರ ಜೀವಕ್ಕೆ ಅಪಾಯ ತಂದೊಡ್ಡಬೇಕಿತ್ತು?. ಪ್ರಶ್ನೆ ಕೇಳುವವರಿಗಿಂತ ಭಾವಪ್ರಚೋದನೆಗೆ ಒಳಗಾಗುವ ಭಕ್ತರೇ ಹೆಚ್ಚಿರುವಾಗ ಇಲ್ಲಿ ದೈವವೂ ನಿರುತ್ತರ!</p>



<p>ಹೋಗಲಿ, ದೇಶಾದ್ಯಂತ ದೀಪಾವಳಿಯ ಸಂಭ್ರಮದ ಆಚರಣೆಯ ದಿನ ಹೀಗೊಂದು ದುರಂತ ನಡೆಯಿತಲ್ಲಾ, ಅದಕ್ಕೆ ತಕ್ಷಣ ಸ್ಪಂದಿಸಬೇಕಿದ್ದ ವಿಶ್ವಗುರುಗಳು ಯಾಕೆ ಸುಮ್ಮನಿದ್ದರು? ಪ್ರಾಣಾಪಾಯದಲ್ಲಿರುವ ಕಾರ್ಮಿಕರ ರಕ್ಷಣಾ ಕಾರ್ಯದ ಕೆಲಸ ಅಧಿಕಾರಿಗಳು ಹಾಗೂ ಗುತ್ತಿಗೆದಾರರದ್ದು ಎಂದುಕೊಂಡ ಪ್ರಧಾನಿಗಳು ತಮಗೂ ಈ ದುರಂತಕ್ಕೂ ಸಂಬಂಧವೇ ಇಲ್ಲವೆಂಬಂತೆ ಯಾಕೆ ಮೌನವಹಿಸಿದರು? ಯಾಕೆಂದರೆ ಅಲ್ಲಿ ಸಾವಿನ ವಿರುದ್ದ ಬದುಕಲು ಹೋರಾಡುತ್ತಿದ್ದವರು ದೊಡ್ಡ ಅಧಿಕಾರಿಗಳಲ್ಲ, ಬಂಡವಾಳಶಾಹಿಗಳೂ ಅಲ್ಲಾ, ಕಾರ್ಪೋರೇಟ್ ಕಂಪನಿಯವರಂತೂ ಮೊದಲೇ ಅಲ್ಲ.‌ ಕೇವಲ ಕಾರ್ಮಿಕರು. ಅಂತವರ ಜೀವಕ್ಕೆ ವಿಶ್ವಗುರುಗಳ ಒಡ್ಡೋಲಗದಲ್ಲಿ ಯಾವ ಬೆಲೆಯೂ ಇಲ್ಲ. ಗಾಯಗೊಂಡರೆ ಇಲ್ಲವೇ ಸತ್ತರೆ ಒಂದಿಷ್ಟು ಪರಿಹಾರ ಕೊಟ್ಟು ಬೇರೆ ಕಾರ್ಮಿಕರಿಂದ ಕಾಮಗಾರಿ ಮುಂದುವರೆಸಿದರಾಯ್ತು ಎನ್ನುವುದೇ ಆಳುವ ವರ್ಗಗಳ ಧೋರಣೆ. ನಿಜವಾದ ಮಾನವೀಯತೆ ಇರುವ ಜನನಾಯಕ ತನ್ನದೇ ದೇಶದಲ್ಲಿ, ತನ್ನದೇ ಯೋಜನೆಯಲ್ಲಿ ದುರಂತ ಸಂಭವಿಸಿದಾಗ ಚುನಾವಣಾ ಭಾಷಣ ಮಾಡುತ್ತಾ ಸುತ್ತುವುದಿಲ್ಲ. ಕ್ರಿಕೆಟ್ ಆಟ ನೋಡಿ ಆನಂದಿಸುವುದಿಲ್ಲ. ಎಲ್ಲ ಬಿಟ್ಟು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲಿಸಬೇಕಿತ್ತು. ಕಾರ್ಮಿಕರ ಕುಟುಂಬಗಳಿಗೆ ಸಾಂತ್ವನ ಹೇಳಬೇಕಿತ್ತು. ಆದರೆ ಈ ದೇಶವನ್ನಾಳುತ್ತಿರುವುದು ನೀರೋ ಮಾದರಿಯ ದೊರೆ ದೇಶಕ್ಕೆ ಬೆಂಕಿ ಬಿದ್ದಾಗ ನೀರೋ ದೊರೆ ಪಿಟೀಲು ಬಾರಿಸುತ್ತಿದ್ದರೆ, ನಮ್ಮ ವಿಶ್ವಗುರು ದೊರೆ ಚುನಾವಣಾ ಭಾಷಣ ಮಾಡುತ್ತಿದ್ದರು. ಇದು ನಿಜಕ್ಕೂ ಅಕ್ಷಮ್ಯ.&nbsp;</p>



<figure class="wp-block-image size-full is-resized"><img decoding="async" width="750" height="472" src="https://peepalmedia.com/wp-content/uploads/2023/11/NPIC-20231118142016.jpg" alt="" class="wp-image-33006" style="width:698px;height:auto" srcset="https://peepalmedia.com/wp-content/uploads/2023/11/NPIC-20231118142016.jpg 750w, https://peepalmedia.com/wp-content/uploads/2023/11/NPIC-20231118142016-300x189.jpg 300w, https://peepalmedia.com/wp-content/uploads/2023/11/NPIC-20231118142016-150x94.jpg 150w, https://peepalmedia.com/wp-content/uploads/2023/11/NPIC-20231118142016-696x438.jpg 696w" sizes="(max-width: 750px) 100vw, 750px" /><figcaption class="wp-element-caption">ರಕ್ಷಣಾ ಕಾರ್ಯ</figcaption></figure>



<p>ಇಷ್ಟಕ್ಕೂ ಚಾರ್ದಾಮ್ ಯಾತ್ರೆ ಎನ್ನುವುದು ಹಿಂದೂ ಶ್ರದ್ದಾ ಭಕ್ತಿಯ ಸ್ಥಳವಾಗಿದೆ. ಅನೇಕ ಅಡೆತಡೆ ಅಪಾಯಗಳನ್ನು ಎದುರಿಸಿಯೇ ಲಕ್ಷಾಂತರ ಭಕ್ತರು ದೇವರ ದರ್ಶನಕ್ಕೆ ಪ್ರತಿವರ್ಷವೂ ಹೋಗುತ್ತಾರೆ. ಜನರಿಗೆ ಬದುಕು ಕಟ್ಟಿಕೊಡುವುದಕ್ಕಿಂತಾ ಅವರ ಭಾವನೆಗಳನ್ನೇ ಉದ್ದೀಪಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಮೋದಿ ನೇತೃತ್ವದ ಬಿಜೆಪಿ ಪಕ್ಷಕ್ಕೆ ಹಾಗೂ ಅದರ ಹಿಂದಿರುವ ಸಂಘಕ್ಕೆ ಬೇಕಿರುವುದು ಇಂತಹ ದೇವರು ಧರ್ಮ ಭಾವ ಭಕ್ತಿಯನ್ನು ಪ್ರಚೋದಿಸುವ ಸಂಗತಿಗಳೇ. ಅವರಿಗೆ ದೇಶದ ಅಭಿವೃದ್ಧಿ ಅಂದರೆ ಮಂದಿರಗಳ ನಿರ್ಮಾಣವೆಂಬುದು ಆದ್ಯತೆಯ ಕಾರ್ಯಗಳಾಗಿವೆ. ರಾಮಮಂದಿರ ನಿರ್ಮಾಣದ ಜೊತೆಗೆ ಜನತೆಯ ಭಾವನೆಗಳನ್ನು ಕೇಂದ್ರೀಕರಿಸುವ ಕಾರ್ಯವೇ ಕೇಂದ್ರ ಸರಕಾರದ ಮೊದಲ ಸಾಧ್ಯತೆಯಾಗಿದೆ. ಚಾರ್ದಾಮ್ ಯಾತ್ರೆಯ ಕುರಿತು ಭಕ್ತರ ಭಾವನೆಗಳನ್ನೇ ಅಧಿಕಾರದ ಮೆಟ್ಟಲುಗಳಾಗಿ ಬಳಸಲು ಈ ಸರ್ವಋತು ಸುರಂಗ ಮಾರ್ಗ ಯೋಜನೆಯನ್ನು ಅತ್ಯಂತ ಅಪಾಯಕಾರಿ ಸ್ಥಳದಲ್ಲಿ ಅಭಿವೃದ್ದಿ ಪಡಿಸಲಾಗುತ್ತಿದೆ. ಪರಿಸರದ ವಿರುದ್ಧವಾಗಿ ನಡೆಯುವ ಯಾವುದೇ ಅಭಿವೃದ್ಧಿಗಳು ಪ್ರಕೃತಿ ಒಡ್ಡುವ ನಕಾರಾತ್ಮಕ ದುಷ್ಪರಿಣಾಮಗಳನ್ನೂ ಎದುರಿಸಬೇಕಾಗುತ್ತದೆ. ಭೂಕಂಪದ ಸಂಭವನೀಯತೆ ಹೆಚ್ಚಿರುವ ಸ್ಥಳದಲ್ಲಿ, ಭೂಗರ್ಭದ ಶಿಲಾರಚನೆ ಸಡಿಲವಾಗಿರುವ ಪರಿಸ್ಥಿತಿಯಲ್ಲಿ, ಭೂಕುಸಿತ ಹಾಗೂ ಪ್ರವಾಹದ ಅಪಾಯ ಸದಾ ಇರುವ ಭೂಪ್ರದೇಶದಲ್ಲಿ ಈ ರೀತಿಯ ಅವೈಜ್ಞಾನಿಕ ಬೃಹತ್ ಯೋಜನೆಗಳು ಅನಗತ್ಯವಾಗಿತ್ತು. ಆದರೆ ಜನರ ಧಾರ್ಮಿಕ ಭಾವನೆಗಳ ಮೇಲೆಯೇ ತನ್ನ ಅಧಿಕಾರವನ್ನು ಪ್ರತಿಷ್ಠಾಪಿಸಿಕೊಂಡಿರುವ ಸರಕಾರಕ್ಕೆ ಇವೆಲ್ಲವೂ ಬೇಕಿತ್ತು.&nbsp;</p>



<p>ಹೀಗಾಗಿ.. ಕಾಮಗಾರಿ ಸಮಯದಲ್ಲೇ ಭೂಕುಸಿತ ಆರಂಭವಾಗಿದೆ. ಮುಂದೆಯೂ ಅನೇಕ ಅಪಾಯಗಳು, ಅಗಣಿತ ದುರಂತಗಳೂ ಕಾಯ್ದಿವೆ. ಆದರೂ ಜನರ ತೆರಿಗೆಯ ಹಣದಿಂದ ಈ ರೀತಿಯ ಅವೈಜ್ಞಾನಿಕ ಕಾಮಗಾರಿಗಳು ಜಾರಿಯಲ್ಲಿವೆ. ದುರಂತ ಸಂಭವಿಸಿದರೂ ನೀರೋ ದೊರೆ ಭಾಷಣದ ಪಿಟೀಲು ಬಾರಿಸುವುದರಲ್ಲಿ ನಿರತವಾಗಿದ್ದಾರೆ.&nbsp;</p>



<p><strong>ಶಶಿಕಾಂತ ಯಡಹಳ್ಳಿ</strong></p>



<p>ರಂಗಕರ್ಮಿ</p>



<p><strong>ಇದನ್ನೂ ಓದಿ-</strong><a href="https://peepalmedia.com/why-are-congressmen-like-this/" data-type="post" data-id="32976">ಕಾಂಗ್ರೆಸ್ಸಿಗರು ಹೀಗೇಕೆ?</a></p>
]]></content:encoded>
					
		
		
			</item>
		<item>
		<title>ಪ್ಲಾಸ್ಟಿಕ್ ಸಮಸ್ಯೆಯಲ್ಲ &#8211; ಮನುಷ್ಯರದ್ದೇ ಸಮಸ್ಯೆ</title>
		<link>https://peepalmedia.com/plastic-is-not-the-problem-humans-are/</link>
		
		<dc:creator><![CDATA[Peepal Media]]></dc:creator>
		<pubDate>Sat, 19 Aug 2023 11:54:35 +0000</pubDate>
				<category><![CDATA[ಇಕಾಲಜಿ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=25963</guid>

					<description><![CDATA[ಸುಮಾರು 460 ಮಿಲಿಯನ್ ಟನ್‌ಗಳ ವಾರ್ಷಿಕ ಜಾಗತಿಕ ಉತ್ಪಾದನೆಯೊಂದಿಗೆ, ನಾವು ಅಕ್ಕಿಯಷ್ಟೇ ಪ್ಲಾಸ್ಟಿಕ್ ಅನ್ನು ಉತ್ಪಾದಿಸುತ್ತೇವೆ ಮತ್ತು ಅದರಲ್ಲಿ 10 ಪ್ರತಿಶತಕ್ಕಿಂತ ಕಡಿಮೆ ಮರುಬಳಕೆ ಮಾಡಲಾಗುತ್ತದೆ. ಇದರಲ್ಲಿ ಬಹುಪಾಲು ಭೂಕುಸಿತಗಳಂತ ಪರಿಸರ ದುರ್ಘಟನೆಗಳಲ್ಲಿ ಭೂಮಿಯನ್ನು ಸೇರುತ್ತವೆ – ಮಂಜುನಾಥ್‌ ಹೊಳಲು, ಕೃಷಿ ಬರಹಗಾರರು ಆಹಾರ ಉತ್ಪನ್ನಗಳನ್ನು ಸುರಕ್ಷಿತವಾಗಿ &#160;ಮತ್ತು ಅಗ್ಗವಾಗಿ ಪೊಟ್ಟಣ ಮಾಡಲು ಪ್ಲಾಸ್ಟಿಕ್ ಒಂದು ಸಾಧನ. ಆದರೆ ಇದನ್ನು ಮರುಬಳಕೆ ಮಾಡದಿದ್ದರೆ ಅಥವಾ ಜವಾಬ್ದಾರಿಯುತವಾಗಿ ವಿಲೇವಾರಿ ಮಾಡದಿದ್ದರೆ &#160;ಇದೊಂದು ಮಹಾ &#160;ಸಮಸ್ಯೆಯಾಗಬಲ್ಲದು. ಪ್ಲಾಸ್ಟಿಕ್ ನಮ್ಮ ಜೀವನದಲ್ಲಿ [&#8230;]]]></description>
										<content:encoded><![CDATA[
<p class="has-text-align-center has-background" style="background-color:#39302b1a"><strong><mark style="background-color:rgba(0, 0, 0, 0)" class="has-inline-color has-black-color">ಸುಮಾರು 460 ಮಿಲಿಯನ್ ಟನ್‌ಗಳ ವಾರ್ಷಿಕ ಜಾಗತಿಕ ಉತ್ಪಾದನೆಯೊಂದಿಗೆ, ನಾವು ಅಕ್ಕಿಯಷ್ಟೇ ಪ್ಲಾಸ್ಟಿಕ್ ಅನ್ನು ಉತ್ಪಾದಿಸುತ್ತೇವೆ ಮತ್ತು ಅದರಲ್ಲಿ 10 ಪ್ರತಿಶತಕ್ಕಿಂತ ಕಡಿಮೆ ಮರುಬಳಕೆ ಮಾಡಲಾಗುತ್ತದೆ. ಇದರಲ್ಲಿ ಬಹುಪಾಲು ಭೂಕುಸಿತಗಳಂತ ಪರಿಸರ ದುರ್ಘಟನೆಗಳಲ್ಲಿ ಭೂಮಿಯನ್ನು ಸೇರುತ್ತವೆ –</mark><mark style="background-color:rgba(0, 0, 0, 0)" class="has-inline-color has-luminous-vivid-orange-color"> </mark></strong><mark style="background-color:rgba(0, 0, 0, 0)" class="has-inline-color has-vivid-red-color">ಮಂಜುನಾಥ್‌ ಹೊಳಲು, ಕೃಷಿ ಬರಹಗಾರರು</mark></p>



<p>ಆಹಾರ ಉತ್ಪನ್ನಗಳನ್ನು ಸುರಕ್ಷಿತವಾಗಿ &nbsp;ಮತ್ತು ಅಗ್ಗವಾಗಿ ಪೊಟ್ಟಣ ಮಾಡಲು ಪ್ಲಾಸ್ಟಿಕ್ ಒಂದು ಸಾಧನ. ಆದರೆ ಇದನ್ನು ಮರುಬಳಕೆ ಮಾಡದಿದ್ದರೆ ಅಥವಾ ಜವಾಬ್ದಾರಿಯುತವಾಗಿ ವಿಲೇವಾರಿ ಮಾಡದಿದ್ದರೆ &nbsp;ಇದೊಂದು ಮಹಾ &nbsp;ಸಮಸ್ಯೆಯಾಗಬಲ್ಲದು. ಪ್ಲಾಸ್ಟಿಕ್ ನಮ್ಮ ಜೀವನದಲ್ಲಿ ಪ್ರಬಲ ಪಾತ್ರವನ್ನು ವಹಿಸಲು ಆರಂಭಿಸಿ ಒಂದು ಶತಮಾನಕ್ಕಿಂತಲೂ ಹೆಚ್ಚೇ ಸಮಯ ಸರಿದಿದೆ. ಅದನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡದಿದ್ದಾಗ ಗಾಳಿ, ನೀರು ಮತ್ತು ಭೂಮಿಯನ್ನು ಕಲುಷಿತಗೊಳಿಸಲು ಅದು ಪ್ರಾರಂಭಿಸುತ್ತದೆ.</p>



<p>ಸುಮಾರು 460 ಮಿಲಿಯನ್ ಟನ್‌ಗಳ ವಾರ್ಷಿಕ ಜಾಗತಿಕ ಉತ್ಪಾದನೆಯೊಂದಿಗೆ, ನಾವು ಅಕ್ಕಿಯಷ್ಟೇ ಪ್ಲಾಸ್ಟಿಕ್ ಅನ್ನು ಉತ್ಪಾದಿಸುತ್ತೇವೆ ಮತ್ತು ಅದರಲ್ಲಿ 10 ಪ್ರತಿಶತಕ್ಕಿಂತ ಕಡಿಮೆ ಮರುಬಳಕೆ ಮಾಡಲಾಗುತ್ತದೆ. ಇದರಲ್ಲಿ ಬಹುಪಾಲು ಭೂಕುಸಿತಗಳಂತ ಪರಿಸರ ದುರ್ಘಟನೆಗಳಲ್ಲಿ &nbsp;ಭೂಮಿಯನ್ನು ಸೇರುತ್ತವೆ. ಮತ್ತು ಇನ್ನೂ ಹಲವಾರು ಮಿಲಿಯನ್ ಟನ್‌ಗಳು ಜಲಮೂಲಗಳಿಗೆ ಪ್ರವೇಶಿಸಿ, ನಮ್ಮ ಸಮುದ್ರ ಪರಿಸರ ವ್ಯವಸ್ಥೆಗೆ ಗಂಭೀರವಾದ ದೀರ್ಘಕಾಲೀನ ಹಾನಿಯನ್ನುಂಟುಮಾಡುತ್ತವೆ.</p>



<figure class="wp-block-gallery has-nested-images columns-default is-cropped wp-block-gallery-1 is-layout-flex wp-block-gallery-is-layout-flex">
<figure class="wp-block-image size-large"><img decoding="async" width="300" height="168" data-id="25965" src="https://peepalmedia.com/wp-content/uploads/2023/08/download-6.jpg" alt="" class="wp-image-25965" srcset="https://peepalmedia.com/wp-content/uploads/2023/08/download-6.jpg 300w, https://peepalmedia.com/wp-content/uploads/2023/08/download-6-150x84.jpg 150w" sizes="(max-width: 300px) 100vw, 300px" /></figure>
</figure>



<p>ಜಾಗತಿಕವಾಗಿ, 46 ಪ್ರತಿಶತ ಪ್ಲಾಸ್ಟಿಕ್ ಅನ್ನು ಪ್ಯಾಕೇಜಿಂಗ್ ಉದ್ಯಮದಿಂದ ಉತ್ಪಾದಿಸಲಾಗುತ್ತದೆ. ಭಾರತದಲ್ಲಿ, CIPET (ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ &amp; ಟೆಕ್ನಾಲಜಿ) ಒದಗಿಸಿದ 2017 ರ ಅಂದಾಜಿನ ಪ್ರಕಾರ ಇದು ಸುಮಾರು 24 ಶೇಕಡಾ. ಪ್ಲಾಸ್ಟಿಕ್ (ಪ್ಯಾಕೇಜಿಂಗ್) ಇಲ್ಲದೆ ಭಾರತದಂತಹ ಉಷ್ಣವಲಯದ ದೇಶದಲ್ಲಿ ಆಹಾರ ವ್ಯರ್ಥವಾಗುವುದನ್ನು ಊಹಿಸಲಾಗದು.</p>



<p><strong>ಮರುಬಳಕೆ ಇನ್ನೂ ಕಡಿಮೆ</strong></p>



<p>ಹಾಗಾದರೆ ನಮ್ಮ ಜೀವನದ ಗುಣಮಟ್ಟವನ್ನು ಹಾಳುಮಾಡದೆ ಪ್ಲಾಸ್ಟಿಕ್‌ನ್ನು ಉತ್ತಮ ರೀತಿಯಲ್ಲಿ ಹೇಗೆ ಬಳಸುವುದು?ಇದಕ್ಕೆ &nbsp;ಮರುಬಳಕೆಯು ಉತ್ತರವಾಗಿದೆ. ಮರುಬಳಕೆಯು ಪ್ಲಾಸ್ಟಿಕ್‌ ತಯಾರಿಕೆಗಿಂತ ಸುಲಭವಾಗಿದೆ. ಇತ್ತೀಚಿನ OECD ವರದಿಯು ಜಾಗತಿಕವಾಗಿ ಪ್ಲಾಸ್ಟಿಕ್ ಮರುಬಳಕೆಯ ಸರಾಸರಿ ದರವು ಕೇವಲ ಶೇಕಡಾ 9 ರಷ್ಟಿದೆ ಎಂದು ತೋರಿಸಿದೆ ಮತ್ತು US ನಲ್ಲಿ ಸಹ ಪ್ಲಾಸ್ಟಿಕ್ ತ್ಯಾಜ್ಯದ ಶೇಕಡಾ 4 ರಷ್ಟು ಮರುಬಳಕೆಯಾಗುತ್ತದೆ (ಇದು ಭಾರತದಲ್ಲಿ ಸುಮಾರು 13 ಶೇಕಡಾ).</p>



<p><strong>ಜಾಗತಿಕ ಮರುಬಳಕೆ ದರ ಏಕೆ ಕಡಿಮೆಯಾಗಿದೆ</strong><strong>?</strong></p>



<figure class="wp-block-gallery has-nested-images columns-default is-cropped wp-block-gallery-2 is-layout-flex wp-block-gallery-is-layout-flex">
<figure class="wp-block-image size-large"><img loading="lazy" decoding="async" width="800" height="532" data-id="25964" src="https://peepalmedia.com/wp-content/uploads/2023/08/Municipal_recycling_facilities_Montgomery_County_MD._2007_Credit_USEPA_14410405277.jpg" alt="" class="wp-image-25964" srcset="https://peepalmedia.com/wp-content/uploads/2023/08/Municipal_recycling_facilities_Montgomery_County_MD._2007_Credit_USEPA_14410405277.jpg 800w, https://peepalmedia.com/wp-content/uploads/2023/08/Municipal_recycling_facilities_Montgomery_County_MD._2007_Credit_USEPA_14410405277-300x200.jpg 300w, https://peepalmedia.com/wp-content/uploads/2023/08/Municipal_recycling_facilities_Montgomery_County_MD._2007_Credit_USEPA_14410405277-768x511.jpg 768w, https://peepalmedia.com/wp-content/uploads/2023/08/Municipal_recycling_facilities_Montgomery_County_MD._2007_Credit_USEPA_14410405277-150x100.jpg 150w, https://peepalmedia.com/wp-content/uploads/2023/08/Municipal_recycling_facilities_Montgomery_County_MD._2007_Credit_USEPA_14410405277-696x463.jpg 696w" sizes="auto, (max-width: 800px) 100vw, 800px" /></figure>
</figure>



<p>ಪ್ರತ್ಯೇಕಿಸದ ಪ್ಲಾಸ್ಟಿಕ್ ತ್ಯಾಜ್ಯವು ಪರಿಸರ ವ್ಯವಸ್ಥೆಯನ್ನು ಪ್ರವೇಶಿಸುತ್ತದೆ. ಅದು ಭೂಕುಸಿತಗಳು ಮತ್ತು ಜಲಮೂಲಗಳಲ್ಲಿ (ನದಿಗಳು, ಸಾಗರಗಳು, ಇತ್ಯಾದಿ) ಕೊನೆಗೊಳ್ಳುತ್ತದೆ. ಸ್ಥಳೀಯ ಸಮುದಾಯ ಮಟ್ಟದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಪ್ರತ್ಯೇಕಿಸುವುದು ಮತ್ತು ಸಂಸ್ಕರಣೆಗೆ ಯೋಜನೆ, ಹೂಡಿಕೆ ಮತ್ತು ನಿಖರವಾದ ಅನುಷ್ಠಾನದ ಅಗತ್ಯವಿದೆ. ಹಿಂದೆ ಹಲವಾರು ಪ್ರಯತ್ನಗಳ ಹೊರತಾಗಿಯೂ, ಮನೆಯ ಮಟ್ಟದಲ್ಲಿ ಪ್ಲಾಸ್ಟಿಕ್ ಅನ್ನು ಪ್ರತ್ಯೇಕಿಸುವುದು ವಿಫಲವಾಗಿದೆ. ಇದಲ್ಲದೆ, ಎಲ್ಲಾ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಅನ್ನು ಮರುಬಳಕೆ ಮಾಡಲಾಗುವುದಿಲ್ಲ ಮತ್ತು ಸಾಮಾನ್ಯ ಗ್ರಾಹಕರಲ್ಲಿ ಇದರ ಬಗ್ಗೆ ಅರಿವು ತುಂಬಾ ಕಡಿಮೆ ಇದೆ. ಹಸಿರು ಆರ್ಥಿಕತೆಯಲ್ಲಿ, ಪ್ಲಾಸ್ಟಿಕ್ ತ್ಯಾಜ್ಯವು ಹೊಸ ಪ್ಯಾಕೇಜಿಂಗ್ ವಸ್ತುಗಳನ್ನು ಉತ್ಪಾದಿಸಲು ಅಥವಾ ಸಾಮಾನ್ಯವಾಗಿ ಬಳಸುವ ಇತರ ಮನೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ಉತ್ಪಾದಿಸಲು ಕಚ್ಚಾ ವಸ್ತುವಾಗಿ ಪ್ಯಾಕೇಜಿಂಗ್ ವಸ್ತುಗಳ ತಯಾರಕರಿಗೆ ಹಿಂತಿರುಗುತ್ತದೆ.</p>



<p>ಗ್ರಾಹಕ ಉತ್ಪನ್ನಗಳ ತಯಾರಕರು ಪ್ಲಾಸ್ಟಿಕ್ ವಸ್ತುಗಳ ಯಶಸ್ವಿ ಮರುಬಳಕೆಗೆ ಅಗತ್ಯವಾದ ಆರ್ಥಿಕತೆಯನ್ನು ಖಾತ್ರಿಪಡಿಸುವಲ್ಲಿ ದೊಡ್ಡ ಪಾತ್ರವನ್ನು ಹೊಂದಿದ್ದಾರೆ. ಗ್ರಾಹಕರ ಜಾಗೃತಿಯು ಪ್ಲಾಸ್ಟಿಕ್ ಮರುಬಳಕೆಗೆ ಉತ್ತಮ ಆರಂಭವನ್ನು ಹಾಕಿಕೊಟ್ಟಿದೆ. ಆದರೆ ನಾವು ಮತ್ತಷ್ಟೂ ಮುಂದೆ ಹೋಗಿ ಅದನ್ನು ಮರುಬಳಕೆ ಮಾಡುವ ಘಟಕಕ್ಕೆ ತಲುಪಿಸಲು ಸಮರ್ಥವಾದ ಸಂಗ್ರಹಣಾ ಕಾರ್ಯವಿಧಾನವನ್ನು ರಚಿಸಬೇಕಾಗಿದೆ.</p>



<p>ಪ್ಲಾಸ್ಟಿಕ್ ಅನ್ನು ಜವಾಬ್ದಾರಿಯುತವಾಗಿ ಬಳಸಲು ನಾವು ವಿಫಲವಾದರೆ ಪ್ಲಾಸ್ಟಿಕ್ ಅನ್ನು ದೂಷಿಸಲಾಗುವುದಿಲ್ಲ. ಈ ಬಗ್ಗೆ ಯೋಚಿಸಲು, ಕಾರ್ಯರೂಪಕ್ಕೆ ಇಳಿಸಲು ಇದು ಸಕಾಲ.</p>



<p><strong>ಮಂಜುನಾಥ್‌ ಹೊಳಲು</strong></p>



<p>ಕೃಷಿ ಬರಹಗಾರರು</p>



<p><strong>ಇದನ್ನೂ ಓದಿ-</strong> <a href="https://peepalmedia.com/soil-health-is-human-health/" data-type="post" data-id="20477">&lt;strong&gt;ಮಣ್ಣಿನ ಆರೋಗ್ಯವೇ ಮಾನವನ ಆರೋಗ್ಯ&lt;/strong&gt;</a></p>
]]></content:encoded>
					
		
		
			</item>
		<item>
		<title>ತುಮಕೂರಿನ ಶಿವಗಂಗಾ ಬೆಟ್ಟದಲ್ಲಿ ಪ್ಲಾಸ್ಟಿಕ್ ಸಂಗ್ರಹ ಅಭಿಯಾನ</title>
		<link>https://peepalmedia.com/plastic-collection-campaign/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 13 Jul 2023 13:18:07 +0000</pubDate>
				<category><![CDATA[ಇಕಾಲಜಿ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=23661</guid>

					<description><![CDATA[ಶಿವಗಂಗಾ ಹಿಲ್ಸ್, ತುಮಕೂರು: &#160;ಯುವಧ್ವನಿ ಡಿಬೇಟ್ ಕ್ಲಬ್ ಶಿವಗಂಗಾ ಬೆಟ್ಟಗಳಲ್ಲಿ ಪ್ಲಾಸ್ಟಿಕ್ ಸಂಗ್ರಹಿಸುವ ಅಭಿಯಾನವನ್ನು ಇತ್ತೀಚೆಗೆ ಯಶಸ್ವಿಗೊಳಿಸಿತು. ಮಾನಸ ಅವರ ನೇತೃತ್ವದಲ್ಲಿ, 11 ಜನ ಸ್ವಯಂಸೇವಕರ ತಂಡವು ಪರಿಸರದ ಮೇಲೆ ಪ್ಲಾಸ್ಟಿಕ್ ತ್ಯಾಜ್ಯದ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜವಾಬ್ದಾರಿಯುತ ತ್ಯಾಜ್ಯ ನಿರ್ವಹಣೆಯನ್ನು ಉತ್ತೇಜಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಬೆಳಿಗ್ಗೆ ಸುಮಾರು 11.30 ಗಂಟೆಗೆ &#160;ಬೆಟ್ಟದ ತುದಿಯನ್ನು ತಲಪಿದ ತಂಡವು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸುವ ಕಾರ್ಯವನ್ನು ಪ್ರಾರಂಭಿಸಿತು. ಇಬ್ಬರು ಸ್ವಯಂ ಸೇವಕರನ್ನೊಳಗೊಂಡ ಪ್ರತಿ ತಂಡವು [&#8230;]]]></description>
										<content:encoded><![CDATA[
<p><strong>ಶಿವಗಂಗಾ ಹಿಲ್ಸ್, ತುಮಕೂರು</strong>: &nbsp;ಯುವಧ್ವನಿ ಡಿಬೇಟ್ ಕ್ಲಬ್ ಶಿವಗಂಗಾ ಬೆಟ್ಟಗಳಲ್ಲಿ ಪ್ಲಾಸ್ಟಿಕ್ ಸಂಗ್ರಹಿಸುವ ಅಭಿಯಾನವನ್ನು ಇತ್ತೀಚೆಗೆ ಯಶಸ್ವಿಗೊಳಿಸಿತು.</p>



<p>ಮಾನಸ ಅವರ ನೇತೃತ್ವದಲ್ಲಿ, 11 ಜನ ಸ್ವಯಂಸೇವಕರ ತಂಡವು ಪರಿಸರದ ಮೇಲೆ ಪ್ಲಾಸ್ಟಿಕ್ ತ್ಯಾಜ್ಯದ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜವಾಬ್ದಾರಿಯುತ ತ್ಯಾಜ್ಯ ನಿರ್ವಹಣೆಯನ್ನು ಉತ್ತೇಜಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.</p>



<figure class="wp-block-gallery has-nested-images columns-default is-cropped wp-block-gallery-3 is-layout-flex wp-block-gallery-is-layout-flex">
<figure class="wp-block-image size-large"><img loading="lazy" decoding="async" width="770" height="1024" data-id="23662" src="https://peepalmedia.com/wp-content/uploads/2023/07/IMG-20230712-WA0229-770x1024.jpg" alt="" class="wp-image-23662" srcset="https://peepalmedia.com/wp-content/uploads/2023/07/IMG-20230712-WA0229-770x1024.jpg 770w, https://peepalmedia.com/wp-content/uploads/2023/07/IMG-20230712-WA0229-226x300.jpg 226w, https://peepalmedia.com/wp-content/uploads/2023/07/IMG-20230712-WA0229-768x1021.jpg 768w, https://peepalmedia.com/wp-content/uploads/2023/07/IMG-20230712-WA0229-150x199.jpg 150w, https://peepalmedia.com/wp-content/uploads/2023/07/IMG-20230712-WA0229-300x399.jpg 300w, https://peepalmedia.com/wp-content/uploads/2023/07/IMG-20230712-WA0229-696x925.jpg 696w, https://peepalmedia.com/wp-content/uploads/2023/07/IMG-20230712-WA0229.jpg 963w" sizes="auto, (max-width: 770px) 100vw, 770px" /></figure>
</figure>



<p>ಬೆಳಿಗ್ಗೆ ಸುಮಾರು 11.30 ಗಂಟೆಗೆ &nbsp;ಬೆಟ್ಟದ ತುದಿಯನ್ನು ತಲಪಿದ ತಂಡವು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸುವ ಕಾರ್ಯವನ್ನು ಪ್ರಾರಂಭಿಸಿತು. ಇಬ್ಬರು ಸ್ವಯಂ ಸೇವಕರನ್ನೊಳಗೊಂಡ ಪ್ರತಿ ತಂಡವು ಪ್ಲಾಸ್ಟಿಕ್ ಬಾಟಲಿಗಳು ಮತ್ತು ಬಿಸಾಡಿದ ಇತರ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿತು.</p>



<p>ಇದೇ ಸಂದರ್ಭದಲ್ಲಿ ಪ್ರವಾಸಿಗರು ಮತ್ತು ಅಂಗಡಿಯವರಿಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಲಾಯಿತು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ, ಮರುಬಳಕೆ ಮಾಡುವ ಬಗ್ಗೆ ಮಾಹಿತಿಗಳನ್ನು ನೀಡಲಾಯಿತು.</p>



<figure class="wp-block-gallery has-nested-images columns-default is-cropped wp-block-gallery-4 is-layout-flex wp-block-gallery-is-layout-flex">
<figure class="wp-block-image size-large"><img loading="lazy" decoding="async" width="770" height="1024" data-id="23666" src="https://peepalmedia.com/wp-content/uploads/2023/07/IMG-20230712-WA0230-770x1024.jpg" alt="" class="wp-image-23666" srcset="https://peepalmedia.com/wp-content/uploads/2023/07/IMG-20230712-WA0230-770x1024.jpg 770w, https://peepalmedia.com/wp-content/uploads/2023/07/IMG-20230712-WA0230-226x300.jpg 226w, https://peepalmedia.com/wp-content/uploads/2023/07/IMG-20230712-WA0230-768x1021.jpg 768w, https://peepalmedia.com/wp-content/uploads/2023/07/IMG-20230712-WA0230-150x199.jpg 150w, https://peepalmedia.com/wp-content/uploads/2023/07/IMG-20230712-WA0230-300x399.jpg 300w, https://peepalmedia.com/wp-content/uploads/2023/07/IMG-20230712-WA0230-696x925.jpg 696w, https://peepalmedia.com/wp-content/uploads/2023/07/IMG-20230712-WA0230.jpg 963w" sizes="auto, (max-width: 770px) 100vw, 770px" /></figure>
</figure>



<p>ಗಂಟೆಗಟ್ಟಲೆ ಶ್ರಮಿಸಿದ ತಂಡವು 20 ಕಿಲೋಗ್ರಾಂಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿತು. ಈ ಅಭಿಯಾನವು ಸ್ವಚ್ಛ ಪರಿಸರಕ್ಕೆ ಕಾರಣವಾಯಿತಲ್ಲದೆ ಸುಸ್ಥಿರ ತ್ಯಾಜ್ಯ ನಿರ್ವಹಣಾ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕಾದ ತುರ್ತು ಅಗತ್ಯವನ್ನು ಒತ್ತಿಹೇಳಿತು.</p>



<p>ಯುವಧ್ವನಿ ಡಿಬೇಟ್ ಕ್ಲಬ್ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿತು.</p>
]]></content:encoded>
					
		
		
			</item>
		<item>
		<title>ಹವಾಮಾನ ಬದಲಾವಣೆ: ಕಾನ್ಫರೆನ್ಸ್ ಟೇಬಲ್‍ನಿಂದ ಡಿನ್ನರ್ ಟೇಬಲ್ಲಿಗೆ &#124; ಭಾಗ 2</title>
		<link>https://peepalmedia.com/climate-change-from-the-conference-table-to-the-dinner-table-part-2/</link>
		
		<dc:creator><![CDATA[K S Ravikumar]]></dc:creator>
		<pubDate>Thu, 25 May 2023 14:59:18 +0000</pubDate>
				<category><![CDATA[ಇಕಾಲಜಿ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=21925</guid>

					<description><![CDATA[ನಮ್ಮ ಪ್ರಧಾನಮಂತ್ರಿಗಳ ಜೆಟ್ ವಿಮಾನವು ಬಲುದೊಡ್ಡ ಗಾತ್ರ ಹೊಂದಿದ್ದು ಸಾಮಾನ್ಯ ಪ್ರಯಾಣಿಕ ಮತ್ತು ಕಾರ್ಗೊ ವಿಮಾನಗಳಿಗಿಂತ ಹೆಚ್ಚು ಕಾರ್ಬನ್ ಅನ್ನು ಗಾಳಿಗೆ ಉಗುಳುತ್ತದೆ. ಇಷ್ಟೊಂದು ಕಾರ್ಬನ್ ಉಗುಳಿಕೊಂಡು ಪ್ರಧಾನಮಂತ್ರಿ ಹುದ್ದೆಯ ಕಾರ್ಯಭಾರಗಳಿಗಿಂತ ಅಷ್ಟು ಮುಖ್ಯವಲ್ಲದ ಚುನಾವಣಾ ಪ್ರಚಾರಕ್ಕೆ ಸ್ವತಃ ನ.ದಾ.ಮೋದಿಯವರು ಬರಲೇಬೇಕೆ? ಅದೂ ಒಂದಲ್ಲ ಹಲವು ಬಾರಿ‌ &#8211; &#160;ಕೆ ಎಸ್‌ ರವಿಕುಮಾರ್, ವಿಜ್ಞಾನ ಬರಹಗಾರರು ನಮ್ಮ ತಿನಿಸು ಮತ್ತು ಕಾರ್ಬನ್ ನ.ದಾ.ಮೋದಿಯವರ ಆಶಯದಂತೆಯೆ ನಮ್ಮೆಲ್ಲರ ಮನೆಯಲ್ಲಿ ಊಟದ ಮೇಜಿದ್ದು ಅಲ್ಲಿ ನಾವು ನಿರುಮ್ಮಳವಾಗಿ ಊಟ ಮಾಡುತ್ತ [&#8230;]]]></description>
										<content:encoded><![CDATA[
<p class="has-cyan-bluish-gray-background-color has-background">ನಮ್ಮ ಪ್ರಧಾನಮಂತ್ರಿಗಳ ಜೆಟ್ ವಿಮಾನವು ಬಲುದೊಡ್ಡ ಗಾತ್ರ ಹೊಂದಿದ್ದು ಸಾಮಾನ್ಯ ಪ್ರಯಾಣಿಕ ಮತ್ತು ಕಾರ್ಗೊ ವಿಮಾನಗಳಿಗಿಂತ ಹೆಚ್ಚು ಕಾರ್ಬನ್ ಅನ್ನು ಗಾಳಿಗೆ ಉಗುಳುತ್ತದೆ. ಇಷ್ಟೊಂದು ಕಾರ್ಬನ್ ಉಗುಳಿಕೊಂಡು ಪ್ರಧಾನಮಂತ್ರಿ ಹುದ್ದೆಯ ಕಾರ್ಯಭಾರಗಳಿಗಿಂತ ಅಷ್ಟು ಮುಖ್ಯವಲ್ಲದ ಚುನಾವಣಾ ಪ್ರಚಾರಕ್ಕೆ ಸ್ವತಃ ನ.ದಾ.ಮೋದಿಯವರು ಬರಲೇಬೇಕೆ? ಅದೂ ಒಂದಲ್ಲ ಹಲವು ಬಾರಿ‌ &#8211; &nbsp;<strong>ಕೆ ಎಸ್‌ ರವಿಕುಮಾರ್, ವಿಜ್ಞಾನ ಬರಹಗಾರರು</strong></p>



<p></p>



<p><strong>ನಮ್ಮ ತಿನಿಸು ಮತ್ತು ಕಾರ್ಬನ್</strong></p>



<p>ನ.ದಾ.ಮೋದಿಯವರ ಆಶಯದಂತೆಯೆ ನಮ್ಮೆಲ್ಲರ ಮನೆಯಲ್ಲಿ ಊಟದ ಮೇಜಿದ್ದು ಅಲ್ಲಿ ನಾವು ನಿರುಮ್ಮಳವಾಗಿ ಊಟ ಮಾಡುತ್ತ ಹವಾಮಾನ ಬದಲಾವಣೆಗಳ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದುಕೊಳ್ಳೋಣ. ಅಲ್ಲಿಂದಲೇ ಇನ್ನಷ್ಟು ಆಲೋಚನಾ ಲಹರಿ ಶುರುವಾಗಬಹುದು. ನಿತ್ಯ ಊಟದ ಮೇಜಿಗೆ ತರತರಹದ ತಿನಿಸುಗಳು ಬಂದು ಕೂರುತ್ತವೆ. ಅನ್ನ, ರೊಟ್ಟಿ, ಚಪಾತಿ, ಮುದ್ದೆ, ಮೀನು, ಮಾಂಸ, ಮೊಟ್ಟೆ, ತರಕಾರಿಗಳ ಬಗೆಬಗೆಯ ಮೇಲೋಗರಗಳು, ಉಪ್ಪು, ಕಾಳುಮೆಣಸಿನ ಪುಡಿ, ಮೊಸರು, ಕುಡಿಯುವ ನೀರು ಹೀಗೆ ಏನೆಲ್ಲ ಅವರವರ ಖರೀದಿ ಕಸುವಿಗೆ ತಕ್ಕಂತೆ ಬಂದು ಕೂರಬಹುದು. ಕೆಲವರ ಮನೆಯಲ್ಲಿ ಸದಾ ಬಗೆಬಗೆಯ ಹಣ್ಣುಗಳನ್ನು ಬೋಗುಣಿಯಲ್ಲಿ ಜೋಡಿಸಿ ಇಟ್ಟಿರುತ್ತಾರೆ. ಸರಿ, ಇವೆಲ್ಲ ನಮ್ಮ ಊಟದ ಮೇಜಿಗೆ ಎಲ್ಲಿಂದ ಬರುತ್ತವೆ, ಸಂತೆ, ಅಂಗಡಿ, ಸೂಪರ್ ಮಾರ್ಕೆಟ್‍ಗಳಿಂದ ತಾನೆ? ಇವೆಲ್ಲ ಈ ಸ್ಥಳಗಳಲ್ಲಿ ಉತ್ಪತ್ತಿಯಾಗುವುದಿಲ್ಲ. </p>



<p>ಮೀನು ಕೆರೆ, ಕಡಲು, ಕೃತಕ ಹೊಂಡ, ಹೊಳೆಗಳಿಂದ ಬಂದರೆ, ಮೊಸರು ಮೊಟ್ಟೆ ಮಾಂಸಗಳು ಡೈರಿ, ಪೌಲ್ಟ್ರಿ, ಕಸಾಯಿಖಾನೆ, ಜಾನುವಾರು ಸಾಕಣಿಕೆಯ ಹಳ್ಳಿ ನೆಲೆಗಳಿಂದ ಬರುತ್ತವೆ. ತರಕಾರಿ, ಹಣ್ಣುಗಳು ದೂರದ ಹೊಲ, ತೋಟಗಳಿಂದ ಬರುತ್ತವೆ. ಈರುಳ್ಳಿ. ಮೆಣಸಿನಕಾಯಿ, ಸಂಬಾರ ಪದಾರ್ಥಗಳು, ಕಾಳು, ಬೇಳೆ, ಅಕ್ಕಿ, ಗೋಧಿ, ಜೋಳ, ರಾಗಿಗಳು ಸುತ್ತಮುತ್ತಲ ಹೊಲಗದ್ದೆಗಳು ಇಲ್ಲವೇ ದೂರದ ರಾಜ್ಯಗಳಿಂದ ಬರುತ್ತವೆ. ಇವೆಲ್ಲ ನಮ್ಮ ಊಟದ ಮೇಜಿಗೆ ಪೂರ್ಣ ಅಣಿಗೊಳಿಸಿದ ತಿನಿಸಾಗಿ ಬರುವ ಮುನ್ನ ಚೊಕ್ಕಟಗೊಳಿಸಿಲ್ಪಟ್ಟ ಕಚ್ಚಾ ಸಾಮಾಗ್ರಿಗಳಾಗಿ ಕ್ಯಾರಿಯರ್, ಲಾರಿ, ಟ್ರಕ್ಕು, ರೈಲು ಮುಂತಾದವುಗಳಲ್ಲಿ ನಮ್ಮೂರಿಗೆ ಸಾಗಿಸಲ್ಪಟ್ಟಿರುತ್ತವೆ. ಈ ವಾಹನಗಳೆಲ್ಲ ಕಾರ್ಬನ್ ಉಗುಳುವ ಗ್ಯಾಸ್, ಪೆಟ್ರೊಲ್, ಡೀಸೆಲ್ ಮುಂತಾದವನ್ನು ಬಳಸುತ್ತವೆ ಎಂಬುದನ್ನು ನಾವು ಮರೆಯಬಾರದು. ಮತ್ತೆ ಇವನ್ನೆಲ್ಲ ಅಂಗಡಿ, ಬಜಾರುಗಳಿಂದ ನಾವು ಕಾರ್ಬನ್ ಉಗುಳುವ ನಮ್ಮ ವಾಹನಗಳಲ್ಲಿ ಮನೆಗೆ ತರುತ್ತೇವೆ ಎಂಬುದನ್ನೂ ಮರೆಯಬಾರದು. ನಾನು ಊಟದ ವಿಷಯವನ್ನು ಕಾರ್ಬನ್ ಬಿಡುಗಡೆಗೆ ತಳಕು ಹಾಕಿ ಹಸಿವನ್ನು ಬದಿಗೆ ಸರಿಸಿದೆ ಎಂದು ಭಾವಿಸಬೇಡಿ. ಉಣಿಸು ಉಳಿವಿಗೆ ತೀರಾ ಅಗತ್ಯ. ಈ ಅಗತ್ಯದ ಹಿಂದೆ ಕಾರ್ಬನ್ ಬಿಡುಗಡೆಯಾಗುವುದನ್ನು ನಾವು ಗ್ರಹಿಸಬೇಕು. ಜೊತೆಗೆ ಊಟದ ತಟ್ಟೆ, ಎಲೆಗಳಲ್ಲಿ ಹೆಚ್ಚಾಯಿತೆಂದು ತಿನ್ನದೆ ಉಳಿಸಿದ ತಿನಿಸನ್ನ ಕಸಕ್ಕೆ ಎಸೆಯುವ ಅಸಡ್ಡೆಯ ಬಗ್ಗೆಯೂ ನಮಗೆ ಎಚ್ಚರವಿರಬೇಕು. ನಾವು ಬ್ಯಾಟರಿ ಚಾರ್ಜಿಗೆ ಬಳಸುವ ವಿದ್ಯುತ್, ಕಲ್ಲಿದ್ದಲನ್ನು ಸುಟ್ಟು ನಮ್ಮ ಮನೆಗೆ ಬಂದಿರುವುದಾದರೂ ಎಲ್ಲೆಲ್ಲಿ ಸಾಧ್ಯವೊ ಅಲ್ಲೆಲ್ಲ ಬ್ಯಾಟರಿ ಚಾಲಿತ ವಾಹನಗಳನ್ನು ಬಳಸುವುದು ಮುಂದೆ ರೂಢಿಯಾಗಬೇಕು. ಹೀಗೆ ಮಾಡುವುದರಿಂದ ಒಂದು ಹಂತದಲ್ಲಾದರೂ ಕಾರ್ಬನ್ ಬಿಡುಗಡೆ ಇಲ್ಲವಾಗುತ್ತದೆ. ಪ್ರಧಾನಿಯವರ ಊಟದ ಮೇಜಿನ ಹೋಲಿಕೆ ನನಗೆ ಇಷ್ಟೆಲ್ಲ ಆಲೋಚಿಸಲು ಅನುವು ಮಾಡಿಕೊಟ್ಟಿತು. ಜಾಗತಿಕ ನಾಯಕರು ಈ ಹೋಲಿಕೆಯ ಒಳ ಸಂದೇಶವನ್ನು ಗ್ರಹಿಸಿರುವವರೊ ಇಲ್ಲವೊ ಗೊತ್ತಿಲ್ಲ. ಈ ತನಕ ಯಾವ ಪ್ರತಿಕ್ರಿಯೆಯೂ ಅವರಿಂದ ಬಂದಿಲ್ಲ.</p>



<p><strong>ನನ್ನ, ನಿಮ್ಮ ಪ್ರಶ್ನೆ</strong></p>



<p>ಈಗ ಕೇಳುವ ಪ್ರಶ್ನೆ ನನ್ನದು ಮಾತ್ರವಲ್ಲ ನಿಮ್ಮದೂ ಆಗಿರಬಹುದು. ಹವಾಮಾನ ಬದಲಾವಣೆಯನ್ನು ತಡೆಯಲು ಜನಚಳವಳಿ ಬೇಕು ಎನ್ನುವ ಅಧಿಕಾರದ ನಾವೆಯಲ್ಲಿ ವಿಹರಿಸುವ ನಾಯಕರಿಗೆ ತಮ್ಮ ತಮ್ಮ ತಲೆಯ ಲೆಕ್ಕಕ್ಕೆ ಕಾರ್ಬನ್ ಕಡಿತಗೊಳಿಸುವ ಹೊಣೆ ಅನ್ವಯಿಸಬೇಕೊ ಬೇಡವೊ? ಇಪ್ಪತ್ತನಾಲ್ಕು ಗಂಟೆ ಅಧಿಕಾರದ ಗಡುವನ್ನು ಅನುಭವಿಸುವ ನಾಯಕರ ಬದುಕಿನಲ್ಲಿ ಆಡಳಿತಾತ್ಮಕ ಜವಾಬುದಾರಿಗಳ ನಡುವೆಯೆ ವೈಯುಕ್ತಿಕ ಆಸೆ, ಅಗತ್ಯಗಳೂ ಪೂರೈಸಿಕೊಳ್ಳಲ್ಪಡಬೇಕು. ಇದರಲ್ಲಿ ಅವರ ಪಕ್ಷ ರಾಜಕಾರಣವೂ ಸೇರಿರುತ್ತೆ. ನ.ದಾ.ಮೋದಿಯವರು 2021ರಲ್ಲಿ ಗ್ಲಾಸ್ಗೋದಲ್ಲಿ ಜರುಗಿದ ವಿಶ್ವಸಂಸ್ಥೆಯ COP26 ಸಮ್ಮೇಳನದಲ್ಲಿ ಭಾಗವಹಿಸಿ ಬಂದರು. ಅಲ್ಲಿ ಮಾತನಾಡುತ್ತ 2070ನೇ ಇಸವಿಯ ಹೊತ್ತಿಗೆ ಭಾರತ ಸೊನ್ನೆ ಕಾರ್ಬನ್ ಸಾಧನೆ ಮಾಡಲಿದೆ ಎಂದು ಘೋಷಿಸಿ ಬಂದರು. ಈ ಕಾಲಾವಕಾಶ ಜಗತ್ತಿನ ಬೇರೆಲ್ಲ ದೇಶಗಳ ಗುರಿಗೆ ಹೋಲಿಸಿದರೆ ಬಹಳ ಹೆಚ್ಚೇ ಎನ್ನಬೇಕು. 2060ರ ಗುರಿ ಇಟ್ಟುಕೊಂಡಿರುವ ಚೀನಾ ಹೊರತುಪಡಿಸಿ ಜಗತ್ತಿನ ಬಹುತೇಕ ದೇಶಗಳು 2050ರ ಹೊತ್ತಿಗೆ ಸೊನ್ನೆ ಕಾರ್ಬನ್ ಗುರಿಗೆ ಬದ್ಧವಾಗಿವೆ.</p>



<p>ನನಗೆ ಈಗಲೂ ಅರ್ಥವಾಗಿಲ್ಲ, ನ.ದಾ.ಮೋದಿಯವರು 2070ನೇ ಗುರಿಯ ಮೊಳೆಗೆ ಭಾರತವನ್ನು ಯಾಕೆ ತೂಗುಹಾಕಿ ಬಂದರು ಅಂತ! ಅವರು ಗ್ಲಾಸ್ಗೋದಿಂದ ಬಂದ ಮರು ವರುಷದಿಂದಲೇ 99 ಹೊಚ್ಚಹೊಸ ಕಲ್ಲಿದ್ದಿಲು ಗಣಿಗಾರಿಕೆಯ ರಹದಾರಿಯನ್ನು ಖಾಸಗೀ ಕಂಪೆನಿಗಳಿಗೆ ಒಕ್ಕೂಟ ಸರ್ಕಾರವು ಹರಾಜು ಹಾಕಿತು. ಕೆಲವು ಹರಾಜುಗಳಲ್ಲಿ ಹಗರಣದ ವಾಸನೆ ಕೂಡಾ ಮೂಗಿಗಡರಿದೆ. ನ.ದಾ.ಮೋದಿಯವರಿಗೆ ‘ಆತ್ಮೀಯ’ರಾದ ಅದಾನಿ ಕಂಪೆನಿಗಳ ಸಮೂಹವು ಕಳೆದ ಮಾರ್ಚಿಯಲ್ಲಿ ಅತಿ ಕಡಿಮೆ ಬಿಡ್ಡಿಂಗ್‍ನಲ್ಲಿ ಮಹಾರಾಷ್ಟ್ರದ ಚಂದ್ರಾಪುರ ಕಲ್ಲಿದ್ದಲು ಗಣಿಗಾರಿಕೆಯ ಲೈಸೆನ್ಸ್ ಪಡೆಯಿತು. ಹರಾಜಿನಲ್ಲಿ ಅದಾನಿ ಕಂಪೆನಿಯು ಸೇರಿದಂತೆ ಭಾಗವಹಿಸಿದ ಇನ್ನೊಂದೇ ಒಂದು ಕಂಪೆನಿಯೆಂದರೆ Cavill Mining Private Limited. ಇದೂ ಕೂಡಾ ಅದಾನಿ ಸಮೂಹಕ್ಕೆ ‘ಹಿಂಬಾಗಿಲಿ’ನಿಂದ ಕೂಡಿಕೊಳ್ಳುವ ಕಂಪೆನಿಯಂತೆ. ಅದಾನಿ ಸಮೂಹದ ಒಟ್ಟು ಆದಾಯದಲ್ಲಿ ಶೇಕಡಾ 60 ರಷ್ಟು ಕಲ್ಲಿದ್ದಿಲಿನ ತರಾವರಿ ವ್ಯವಹಾರಗಳಿಂದ ಬರುತ್ತದೆ ಎಂದು ವಿಕಿಪಿಡಿಯಾ ಬರೆಯುತ್ತದೆ. ಅಂದಮೇಲೆ ಭಾರತದಲ್ಲಿ ಕಲ್ಲಿದ್ದಿಲಿನ ಸಧ್ಯದ ಅವಲಂಬನೆ ಯಾರಿಗಾಗಿ, ಯಾಕಾಗಿ ಅಂತ ನಿಮಗೆಲ್ಲ ಈಗ ಗೊತ್ತಾಗಿರಬೇಕು?</p>



<p>ಈಗ ಹೊಸ ಹೊಸ ಪ್ರದೇಶಗಳು ಗಣಿಗಾರಿಕೆಯ ಕುಣಿಕೆಗೆ ಕೊರಳು ಒಡ್ಡುತ್ತಿವೆ. ಪಳೆಯುಳಿಕೆ ಇಂಧನವಾದ ಕಲ್ಲಿದ್ದಿಲಿನ ಅವಲಂಬನೆ ಕಮ್ಮಿಯಾಗಬೇಕು (phasing out) ಎನ್ನುತ್ತಲೇ ಒಕ್ಕೂಟ ಸರ್ಕಾರ ಯಾಕೆ ಮತ್ತಷ್ಟು ಕಲ್ಲಿದ್ದಿಲಿನ ಕಾವಿನಲ್ಲಿ ಪಿರ್ರೆ ಕಾಯಿಸಲು ಹೊರಟಿದೆ? ಈಗ ಶೇಕಡಾ 70ರಷ್ಟು ಕಲ್ಲಿದ್ದಿಲನ್ನು ಸುಟ್ಟು ಭಾರತದಲ್ಲಿ ವಿದ್ಯುತ್ತನ್ನು ಪಡೆಯಲಾಗುತ್ತಿದೆ. ಮುಂಬರುವ ವರುಷಗಳಲ್ಲಿ ಭಾರತ ಉಪಖಂಡವು ಬಿಸಿಯಲೆಗಳು ಮತ್ತು ದಿಡೀರ್ ಬರಗಳಿಗೆ ಸಿಲುಕುವ ಸಾಧ್ಯತೆ ಹೆಚ್ಚಿರುವುದರಿಂದ ಕಲ್ಲಿದ್ದಿಲನ್ನು ಉರಿಸುವುದೂ ಇನ್ನೂ ಹೆಚ್ಚಲಿದೆ.</p>



<p><strong>ಹಾರುವ ಅರಮನೆ</strong></p>



<figure class="wp-block-gallery has-nested-images columns-default is-cropped wp-block-gallery-5 is-layout-flex wp-block-gallery-is-layout-flex">
<figure class="wp-block-image size-large"><img loading="lazy" decoding="async" width="960" height="540" data-id="21931" src="https://peepalmedia.com/wp-content/uploads/2023/05/Boeing-777-er-air-force-one-Jetline-Marvel.jpg" alt="" class="wp-image-21931" srcset="https://peepalmedia.com/wp-content/uploads/2023/05/Boeing-777-er-air-force-one-Jetline-Marvel.jpg 960w, https://peepalmedia.com/wp-content/uploads/2023/05/Boeing-777-er-air-force-one-Jetline-Marvel-300x169.jpg 300w, https://peepalmedia.com/wp-content/uploads/2023/05/Boeing-777-er-air-force-one-Jetline-Marvel-768x432.jpg 768w, https://peepalmedia.com/wp-content/uploads/2023/05/Boeing-777-er-air-force-one-Jetline-Marvel-150x84.jpg 150w, https://peepalmedia.com/wp-content/uploads/2023/05/Boeing-777-er-air-force-one-Jetline-Marvel-696x392.jpg 696w" sizes="auto, (max-width: 960px) 100vw, 960px" /></figure>
</figure>



<p>ಕಲ್ಲಿದ್ದಿಲನ್ನು ಒಂದು ಕಡೆ ವಿಪರೀತ ಉತ್ತೇಜಿಸುವ ಒಕ್ಕೂಟ ಸರ್ಕಾರವಿದ್ದರೆ ಇನ್ನೊಂದು ಕಡೆ ನಮ್ಮ ಪ್ರಧಾನಿಯವರ ಆದ್ಯತೆಗಳು ಹೇಗಿವೆ ಎಂಬುದನ್ನು ನಾವು ತಿಳಿದರೆ ತಪ್ಪಾಗಲಾರದು. ಹಿಂದೆ ಆಗಿಹೋದ ಸ್ವತಂತ್ರ ಭಾರತದ ಪ್ರಧಾನಮಂತ್ರಿಗಳು, ರಾಷ್ಟ್ರಪತಿಗಳು ಮತ್ತು ಉಪ-ರಾಷ್ಟ್ರಪತಿಗಳು ಏರ್‍ಇಂಡಿಯಾಕ್ಕೆ ಸೇರಿದ ಇದ್ದುದರಲ್ಲಿ ಗಟ್ಟಿಮುಟ್ಟಾದ ಮತ್ತು ಕೊಂಚ ಮಾರ್ಪಾಟು ಹೊಂದಿದ Air India Boeing 747-400 ವಿಮಾನವನ್ನೆ ಬಳಸುತ್ತ ಬಂದಿದ್ದರು. ಆದರೆ ನಮ್ಮ ನ.ದಾ.ಮೋದಿಯವರು ತುಂಬಾ ವಿಭಿನ್ನ ವ್ಯಕ್ತಿತ್ವ ಹೊಂದಿದವರು. ಹಿಂದಿನವರಿಗಿಂತ ಹೆಚ್ಚಾಗಿ ದಿನದ 18 ತಾಸು ‘ದುಡಿ’ಯುತ್ತ ಕ್ರಿಯಾಶೀಲವಾಗಿ ಆಲೋಚಿಸಬಲ್ಲವರು. ಅವರ ಒಕ್ಕೂಟ ಸರ್ಕಾರವು ಅಮೆರಿಕಾದ Boeing Commercial Airplanes ಕಂಪೆನಿಗೆ 2016ರಲ್ಲಿ ವಿಶೇಷ ಹೇಳಿಕೆ ಸಲ್ಲಿಸಿ Special Extra Section Flight (SESF-VVIP transport) ಮಾದರಿಯ ಎರಡು Boeing 777-300 Extended Range ವಿಮಾನಗಳನ್ನು 8,458 ಕೋಟಿ ರೂಪಾಯಿ ತೆತ್ತು ಖರೀದಿಸಿತು. ಒಂದು ಪ್ರಧಾನಮಂತ್ರಿಗಳಿಗಾದರೆ, ಇನ್ನೊಂದು ರಾಷ್ಟ್ರಪತಿ ಮತ್ತು ಉಪ-ರಾಷ್ಟ್ರಪತಿಗಳಿಗೆ ಎಂದು. ಇವು ನಿಜಕ್ಕೂ ಹಾರುವ ಅರಮನೆಗಳೇ ಸರಿ (ಜಗತ್ತಿನಲ್ಲಿ ಟ್ರಂಪ್ ಬಿಟ್ಟರೆ ನ.ದಾ.ಮೋದಿಯವರ ಬಳಿಯೆ ಇಂತಹ ಬೋಯಿಂಗ್ ವಿಮಾನವಿರುವುದು ಎಂದು ಹೇಳಲಾಗುತ್ತಿದೆ). ಎರಡು ವರುಷಗಳ ಕಾಲ ಬೇಕಾದ ಹಾಗೆ ಮಾರ್ಪಾಟುಗಳನ್ನು ಮಾಡಿಸಿಕೊಂಡ, ಒಂದು ವಿಮಾನ ಹೊಂದಬಹುದಾದ ಎಲ್ಲ ಬಗೆಯ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆ ಇರುವ ನಮ್ಮ ಪ್ರಧಾನಮಂತ್ರಿಗಳ ಜೆಟ್ ವಿಮಾನವು ಬಲುದೊಡ್ಡ ಗಾತ್ರ ಹೊಂದಿದ್ದು ಸಾಮಾನ್ಯ ಪ್ರಯಾಣಿಕ ಮತ್ತು ಕಾರ್ಗೊ ವಿಮಾನಗಳಿಗಿಂತ ಹೆಚ್ಚು ಕಾರ್ಬನ್ ಅನ್ನು ಗಾಳಿಗೆ ಉಗುಳುತ್ತದೆ. ನ್ಯಾಫ್ತಾ, ಗ್ಯಾಸೊಲಿನ್ ಮತ್ತು ಸೀಮೆಎಣ್ಣೆಯಂತಹ ಪೆಟ್ರೋಲಿಯಮ್ ಉತ್ಪನ್ನಗಳ ಬೇರೆಬೇರೆ ಬಗೆಯ ಮಿಶ್ರಣವನ್ನು ಜೆಟ್ ಫ್ಯೂಯೆಲ್ (Aviation Turbine Fuel,ATF ಎಂದೂ ಕರೆಯುತ್ತಾರೆ) ಎಂದು ಹೆಸರಿಸಿ ಜೆಟ್ ವಿಮಾನಗಳಲ್ಲಿ ಬಳಸುತ್ತಾರೆ.</p>



<p>ಸಾಮಾನ್ಯವಾಗಿ 777 ಸರಣಿಯ ಬೋಯಿಂಗ್ ಜೆಟ್ ವಿಮಾನಗಳು ತಾಸಿಗೆ 6,080ರಿಂದ 7,500 ಲೀಟರ್ ಜೆಟ್ ಫ್ಯೂಯೆಲ್ ಅನ್ನು ಬಳಸುತ್ತವೆ. ಅಂದರೆ ಸೆಕೆಂಡಿಗೆ 1.68ರಿಂದ 2.08 ಲೀಟರ್‍ಗಳು. ಮನುಷ್ಯರೂ ಸೇರಿದಂತೆ ಒಳಗಿರುವ ಸರಕು ಸಾಮಾಗ್ರಿಗಳ ತೂಕ, ಹಾರುವ ವೇಗ, ಎತ್ತರ ಮತ್ತು ಗಾಳಿಯ ವೇಗ, ಒತ್ತಡಗಳೂ ಇಂಧನ ಬಳಕೆಯ ಪ್ರಮಾಣದ ಮೇಲೆ ಪ್ರಭಾವ ಬೀರುತ್ತವೆ. ಪ್ರತೀ ಒಂದು ಕಿ.ಗ್ರಾಂ. (ಬಹುತೇಕ ಒಂದು ಲೀಟರಿಗೆ ಸಮ) ಜೆಟ್ ಫ್ಯೂಯೆಲ್ ಉರಿದಾಗ 3.16 ಕಿ.ಗ್ರಾಂ. ಕಾರ್ಬನ್(ಡೈಆಕ್ಸೈಡ್) ಗಾಳಿಗೆ ಬಿಡುಗಡೆಯಾಗುತ್ತದೆ. ದೆಹಲಿ ಮತ್ತು ಬೆಂಗಳೂರುಗಳ ನಡುವಿನ ಆಗಸ ದೂರ (Aerial distance) 1,740 ಕಿ.ಮೀ.ಗಳು. ಈ ದೂರ ಕ್ರಮಿಸಲು ಜೆಟ್ ವಿಮಾನಕ್ಕೆ 2 ತಾಸು ಸಾಕು ಎಂದಾದರೆ ಒಂದು ಪ್ರಯಾಣದಲ್ಲಿ ಅದು 12,160ರಿಂದ 15,000 ಲೀಟರ್‌ಗಳಷ್ಟು ಜೆಟ್ ಫ್ಯೂಯೆಲ್ ಬಳಸಿತು ಎನ್ನಬಹುದು. (ಅಲ್ಲಿಗೆ ಪ್ರತೀ ಸೆಕೆಂಡಿಗೆ 3.36ರಿಂದ 4.16 ಲೀಟರ್ ಉರಿದಿರಬೇಕು). ಹಾಗಿದ್ದರೆ ಕಾರ್ಬನ್ ಎಷ್ಟು ಬಿಡುಗಡೆಯಾಗಬಹುದು? ಮೇಲಿನ ಲೆಕ್ಕದಂತೆ 2 ತಾಸಿಗೆ 38,425.6 ಕಿ.ಗ್ರಾಂ.ನಿಂದ 47,400 ಕಿ.ಗ್ರಾಂ.ಗಳು! ವಾಪಾಸಾಗಲು ಮತ್ತೆ ಇಷ್ಟೇ ಕೂಡಿಕೊಳ್ಳಿ. ಅಲ್ಲಿಗೆ ಒಮ್ಮೆ ದೆಹಲಿಯಿಂದ ಬೆಂಗಳೂರಿಗೆ ಬಂದು ಮತ್ತೆ ದೆಹಲಿಗೆ ಮರಳಲು 76,851.2ರಿಂದ 94,800 ಕಿ.ಗ್ರಾಂ.ನಷ್ಟು ಕಾರ್ಬನ್ ಅನ್ನು ಒಂದು ಜೆಟ್ ವಿಮಾನ ಉಗುಳುತ್ತದೆ (ನೆನಪಿರಲಿ, ಇದೊಂದು ಕಚ್ಚಾ ಲೆಕ್ಕ. ಕಾರ್ಬನ್ ಪ್ರಮಾಣ ಕೊಂಚ ಆಚೀಚೆ ಆಗಬಹುದು)</p>



<p><a>ಇಷ್ಟೊಂದು ಕಾರ್ಬನ್ ಉಗುಳಿಕೊಂಡು ಪ್ರಧಾನಮಂತ್ರಿ ಹುದ್ದೆಯ ಕಾರ್ಯಭಾರಗಳಿಗಿಂತ ಅಷ್ಟು ಮುಖ್ಯವಲ್ಲದ ಚುನಾವಣಾ ಪ್ರಚಾರಕ್ಕೆ ಸ್ವತಃ ನ.ದಾ.ಮೋದಿಯವರು ಬರಲೇಬೇಕೆ? ಅದೂ ಒಂದಲ್ಲ ಹಲವು ಬಾರಿ. </a>ಈವರೆಗೆ ಈ ಹಿಂದೆ ಯಾವ ಪ್ರಧಾನಿಗಳೂ ಪಾಲ್ಗೊಳ್ಳದಷ್ಟು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿರುವ ಅವರು ಇನ್ನುಮುಂದೆ ತಾವು ಕುಳಿತಲ್ಲಿಂದಲೇ ಒಂದು ಭಾಷಣ ಮಾಡಿ ವಿಡಿಯೊ ಪ್ರಸಾರ ಮಾಡಿಸಬಹುದಲ್ಲವೆ? ಹೇಗಿದ್ದರೂ ದೇಶದ (ಅಪವಾದಗಳ ಹೊರತಾಗಿ) ಬಹುತೇಕ ಪ್ರಿಂಟ್ ಮತ್ತು ಟಿವಿ ಚಾನೆಲ್‍ಗಳು ನ.ದಾ.ಮೋದಿಯವರು ಮತ್ತು ಅವರ ಪಕ್ಷದ ಬಗ್ಗೆ ‘ವಿಶೇಷ’ ಅಕ್ಕರೆ ಹೊಂದಿರುವ ಕಾರಣ ಪ್ರಧಾನಿಯವರ ಕನಸು, ಆಶಯ, ಅನಿಸಿಕೆ, ಟೀಕೆ, ದೂರು ದುಮ್ಮಾನಗಳನ್ನು ಹೆಚ್ಚು ಸಮಯಾವಕಾಶ ಕೊಟ್ಟು ಮೊದಲ ಆದ್ಯತೆಯಾಗಿ ಜನರಿಗೆ ತಲುಪಿಸುವುದರಿಂದ ಪ್ರಧಾನಿಯವರು ಕಾರ್ಬನ್ ಕಡಿತಗೊಳಿಸುವ ಕಡೆ ಮುಂದಿನ ದಿನಗಳಲ್ಲಿ ಹೆಚ್ಚು ಗಮನ ಕೊಡಬೇಕು. ಭಾರತದ ಪ್ರಧಾನಿಗಳಲ್ಲೆ ಅತಿ ಕಡಿಮೆ ಗಡುವಿನಲ್ಲಿ ಅತಿ ಹೆಚ್ಚು ವಿಮಾನ ಪ್ರಯಾಣ ಮಾಡಿದವರೆಂದರೆ ಬಹುಶಃ ನ.ದಾ.ಮೋದಿಯವರೆ ಇರಬೇಕು. ಚುನಾವಣಾ ಸಂಬಂಧಿ ರೋಡ್‍ಶೋ, ರ್ಯಾಲಿಗಳಿಗೆ ಬಂದಾಗ ಕಾರ್ಬನ್ ಉಗುಳುವ ಅತ್ಯಾಧುನಿಕ ಕಾರುಗಳು ಮತ್ತು ಹೆಲಿಕಾಪ್ಟರ್ ಗಳ ಬಳಕೆಯ ಬಗ್ಗೆಯೂ ಅವರು ಆಲೋಚಿಸಬೇಕು. ಅವರ ಭಾರೀ ಬಂದೋಬಸ್ತ್ ಕಾರಿನ ಹಿಂದೆ ಮುಂದೆ ಸಾಲುಗಟ್ಟಲೆ ಕಮಾಂಡೊ ವಾಹನಗಳು ಓಡುತ್ತವೆ. ಅವು ಕೂಡಾ ತಮ್ಮ ಪಾಲಿನ ಕಾರ್ಬನ್ ಅನ್ನು ಹೊರಹಾಕುತ್ತವೆ.</p>



<p>(ಮುಂದುವರಿಯುವುದು&#8230;)</p>



<p><strong>ಕೆ.ಎಸ್.ರವಿಕುಮಾರ್, ಹಾಸನ</strong></p>



<p>ಲೇಖಕರು. ಮುಖ್ಯವಾಗಿ ವಿಜ್ಞಾನ ಬರಹಗಾರರು. ಪರಿಸರದ ಮೇಲೆ ವಿಶೇಷ ಆಸಕ್ತಿ. ಚಾರಣ ಹವ್ಯಾಸ.</p>



<p>ಮೊ : 9964604297</p>



<p><strong>ಇದನ್ನು ಓದಿದ್ದೀರಾ?-</strong><a href="https://peepalmedia.com/climate-change-from-the-conference-table-to-the-dinner-table-part-1/" data-type="post" data-id="21816" target="_blank" rel="noreferrer noopener">ಹವಾಮಾನ ಬದಲಾವಣೆ: ಕಾನ್ಫರೆನ್ಸ್ ಟೇಬಲ್‍ನಿಂದ ಡಿನ್ನರ್ ಟೇಬಲ್ಲಿಗೆ | ಭಾಗ 1</a></p>
]]></content:encoded>
					
		
		
			</item>
		<item>
		<title>ಹವಾಮಾನ ಬದಲಾವಣೆ: ಕಾನ್ಫರೆನ್ಸ್ ಟೇಬಲ್‍ನಿಂದ ಡಿನ್ನರ್ ಟೇಬಲ್ಲಿಗೆ &#124; ಭಾಗ 1</title>
		<link>https://peepalmedia.com/climate-change-from-the-conference-table-to-the-dinner-table-part-1/</link>
		
		<dc:creator><![CDATA[K S Ravikumar]]></dc:creator>
		<pubDate>Mon, 22 May 2023 13:03:49 +0000</pubDate>
				<category><![CDATA[ಇಕಾಲಜಿ]]></category>
		<category><![CDATA[india]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=21816</guid>

					<description><![CDATA[ಪ್ರತಿಯೊಂದು ದೇಶದ ಪ್ರತಿಯೊಂದು ಸಮಾಜದ ಪ್ರತೀ ವ್ಯಕ್ತಿಯು ತನ್ನ ನಿತ್ಯಬದುಕಿನಲ್ಲಿ ಹವಾಮಾನ ಬದಲಾವಣೆಗಳು ಉಲ್ಬಣಗೊಳ್ಳದಂತೆ ಕಾರ್ಬನ್ ಉಗುಳದಿರುವ ಅಥವಾ ಅತಿ ಕಡಿಮೆ ಉಗುಳುವಂತಹ ಚಟುವಟಿಕೆಯನ್ನು ಹೇಗೆ ಹಮ್ಮಿಕೊಳ್ಳಬೇಕು ಎಂದು ಆಲೋಚಿಸುವಂತಾಗಬೇಕು – ಕೆ.ಎಸ್.ರವಿಕುಮಾರ್. ಸಪೋರೊ ಪಟ್ಟಣ ಜಪಾನಿನಲ್ಲಿದೆ. ಹೊಕಾಯಿಡೊ ಪ್ರಿಫೆಕ್ಚರಿನ ರಾಜಧಾನಿ. 2022ರ ಫೆಬ್ರವರಿಯ ಚಳಿಗಾಲದಲ್ಲಿ ಅದು ಜಗತ್ತಿನ ಗಮನ ಸೆಳೆಯಿತು. 24 ತಾಸಿನ ಗಡುವಿನಲ್ಲಿ ಅಲ್ಲಿ 60 ಸೆಂ.ಮೀ. (2 ಅಡಿಯಷ್ಟು) ಮಂಜು ಬಿತ್ತು. ಅಲ್ಲಿನ ನಿವಾಸಿಗಳು ಇದು ಒಂದು ದಿನದ ವಿದ್ಯಮಾನ ಎಂದುಕೊಂಡರು. ಆದರೆ [&#8230;]]]></description>
										<content:encoded><![CDATA[
<p class="has-vivid-green-cyan-color has-white-background-color has-text-color has-background"><strong>ಪ್ರತಿಯೊಂದು ದೇಶದ ಪ್ರತಿಯೊಂದು ಸಮಾಜದ ಪ್ರತೀ ವ್ಯಕ್ತಿಯು ತನ್ನ ನಿತ್ಯಬದುಕಿನಲ್ಲಿ ಹವಾಮಾನ ಬದಲಾವಣೆಗಳು ಉಲ್ಬಣಗೊಳ್ಳದಂತೆ ಕಾರ್ಬನ್ ಉಗುಳದಿರುವ ಅಥವಾ ಅತಿ ಕಡಿಮೆ ಉಗುಳುವಂತಹ ಚಟುವಟಿಕೆಯನ್ನು ಹೇಗೆ ಹಮ್ಮಿಕೊಳ್ಳಬೇಕು ಎಂದು ಆಲೋಚಿಸುವಂತಾಗಬೇಕು </strong><strong>–</strong><strong> ಕೆ.ಎಸ್.ರವಿಕುಮಾರ್.</strong></p>



<p>ಸಪೋರೊ ಪಟ್ಟಣ ಜಪಾನಿನಲ್ಲಿದೆ. ಹೊಕಾಯಿಡೊ ಪ್ರಿಫೆಕ್ಚರಿನ ರಾಜಧಾನಿ. 2022ರ ಫೆಬ್ರವರಿಯ ಚಳಿಗಾಲದಲ್ಲಿ ಅದು ಜಗತ್ತಿನ ಗಮನ ಸೆಳೆಯಿತು. 24 ತಾಸಿನ ಗಡುವಿನಲ್ಲಿ ಅಲ್ಲಿ 60 ಸೆಂ.ಮೀ. (2 ಅಡಿಯಷ್ಟು) ಮಂಜು ಬಿತ್ತು. ಅಲ್ಲಿನ ನಿವಾಸಿಗಳು ಇದು ಒಂದು ದಿನದ ವಿದ್ಯಮಾನ ಎಂದುಕೊಂಡರು. ಆದರೆ ಹಾಗಾಗಲಿಲ್ಲ. ಮಂಜು ಬೀಳುತ್ತಲೇ ಹೋಯಿತು. ಚಳಿಗಾಲ ಮುಗಿಯುವ ಹೊತ್ತಿಗೆ ಒಟ್ಟು ಬಿದ್ದ ಮಂಜಿನ ಪ್ರಮಾಣ 1,190 ಸೆಂ.ಮೀ.(11.9 ಮೀಟರ್)ಗೆ ತಲುಪಿತ್ತು. ಕೆಲವು ದಿನ ಮಂಜು ಎಷ್ಟು ಬಿತ್ತೆಂದರೆ ಅದರ ಮೇಲೆ ಹತ್ತಿ ವಿದ್ಯುತ್ ತಂತಿಗಳನ್ನು ಸಲೀಸಾಗಿ ಮುಟ್ಟಬಹುದಿತ್ತು (ಹಾಗಂತ ಯಾರೂ ಮುಟ್ಟಲು ಹೋಗಲಿಲ್ಲ ಅನ್ನಿ). ರಸ್ತೆಗಳೆಲ್ಲ ಮುಚ್ಚಿಹೋದವು. ಹೇಗೋ ನಡುವೆ ನಡೆದು ಹೋಗುವಷ್ಟು ಕಾಲುದಾರಿಗಳನ್ನು ಜನ ಮಾಡಿಕೊಂಡರು. ವಿಮಾನ, ರೈಲು. ಬಸ್ ಸಂಚಾರಗಳು ನಿಂತುಹೋದವು. ಮನೆಗಳು ಮಂಜಿನಡಿ ಹೂತುಹೋದವು. ಗಟ್ಟಿಸಿ ಸುರಂಗ ಕೊರೆದುಕೊಂಡು ಹಗಲು ಬೆಳಕಿಗೆ ಬರಬೇಕಿತ್ತು. ಉತ್ತರ ಧ್ರುವ ಮತ್ತು ಸೈಬೀರಿಯಾ ಕಡೆಯಿಂದ ಬೀಸಿದ ಮಂಜಿನ ಗಾಳಿಗಳಿಗೆ ಸಪೋರೊ ಬೆಬ್ಬಳಿಸಿಹೋಯಿತು. ಹಿಂದೆಲ್ಲ ಇಷ್ಟೊಂದು ಥಂಡಿಯನ್ನು ಮಂಜಿನ ಗಾಳಿಗಳು ತಂದಿರಲಿಲ್ಲ. ಒಂದೊಮ್ಮೆ ತಂದಿದ್ದರೂ ಇಡಿಯ ಚಳಿಗಾಲವನ್ನು ಜನ ಅವ್ಯಕ್ತ ಅಂಜಿಕೆಯಲ್ಲಿ ಕಳೆಯುವಂತೆ ಮಾಡಿರಲಿಲ್ಲ. ಕಳೆದ ಮೂರ್ನಾಲ್ಕು ವರುಷಗಳಿಂದ ಸಪೋರೊ ಇರುವ ಉತ್ತರ ಜಪಾನ್ ಅತಿಯಾದ ಮಂಜಿನ ದಾಳಿಗೆ ತುತ್ತಾಗುತ್ತ ಬರುತ್ತಿದೆ. ಹವಾಮಾನ ಬದಲಾವಣೆಯ ಮತ್ತೊಂದು ಅತಿರೇಕ ಇದು.</p>



<p>ಸಪೋರೊ 1972ರಲ್ಲಿ ಚಳಿಗಾಲದ ಒಲಿಂಪಿಕ್ಸ್‌ನ್ನು ಯಶಸ್ವಿಯಾಗಿ ನಡೆಸಿಕೊಟ್ಟಿತ್ತು. ಪ್ರತೀವರುಷ ಇಲ್ಲಿ ಸಡಗರದ ಮಂಜಿನ ಹಬ್ಬ ನಡೆಯುತ್ತದೆ. ಇಂತಹ ಸಪೋರೊದಲ್ಲಿ ಜಪಾನ್ ಸರ್ಕಾರ ಮೊನ್ನೆ ಅಂದರೆ ಕಳೆದ ಏಪ್ರಿಲ್ 15, 16ರಂದು ಉ7 ಸದಸ್ಯ ದೇಶಗಳ ಮಂತ್ರಿಗಳ ಸಭೆಯನ್ನು ನಡೆಸಿತು. ಸಭೆಯ ಮುಖ್ಯ ಅಜೆಂಡಾ ‘ಹವಾಮಾನ’ (ಬದಲಾವಣೆ), ‘ಶಕ್ತಿ’(ಯ ಬಳಕೆ) ಮತ್ತು ‘ಪರಿಸರ’ (ರಕ್ಷಣೆಯ) ಕುರಿತಾಗಿತ್ತು. ಈ ಸಭೆಯಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾ, ಕುಕ್ ನಡುಗಡ್ಡೆಗಳು, ಇಂಡೋನೇಶಿಯಾ, ವಿಯೆಟ್ನಾಮ್, ಬ್ರೆಜಿಲ್ ಮುಂತಾದ ದೇಶಗಳ ಜೊತೆಗೆ ಭಾರತಕ್ಕೂ ವಿಶೇಷ ಕರೆ ಇತ್ತು. ಭಾರತದ ಕಡೆಯಿಂದ ಒಕ್ಕೂಟ ಸರ್ಕಾರದ ಪರಿಸರ ಮಂತ್ರಿ ಭೂಪೇಂದರ್ ಯಾದವ್ ಪಾಲ್ಗೊಂಡಿದ್ದರು.</p>



<figure class="wp-block-gallery has-nested-images columns-default is-cropped wp-block-gallery-6 is-layout-flex wp-block-gallery-is-layout-flex">
<figure class="wp-block-image size-large"><img loading="lazy" decoding="async" width="1024" height="588" data-id="21817" src="https://peepalmedia.com/wp-content/uploads/2023/05/thejapantimes-1024x588.jpeg" alt="" class="wp-image-21817" srcset="https://peepalmedia.com/wp-content/uploads/2023/05/thejapantimes-1024x588.jpeg 1024w, https://peepalmedia.com/wp-content/uploads/2023/05/thejapantimes-300x172.jpeg 300w, https://peepalmedia.com/wp-content/uploads/2023/05/thejapantimes-768x441.jpeg 768w, https://peepalmedia.com/wp-content/uploads/2023/05/thejapantimes-1536x882.jpeg 1536w, https://peepalmedia.com/wp-content/uploads/2023/05/thejapantimes-150x86.jpeg 150w, https://peepalmedia.com/wp-content/uploads/2023/05/thejapantimes-696x400.jpeg 696w, https://peepalmedia.com/wp-content/uploads/2023/05/thejapantimes-1068x613.jpeg 1068w, https://peepalmedia.com/wp-content/uploads/2023/05/thejapantimes-1920x1102.jpeg 1920w, https://peepalmedia.com/wp-content/uploads/2023/05/thejapantimes.jpeg 2000w" sizes="auto, (max-width: 1024px) 100vw, 1024px" /></figure>
</figure>



<p>ಸಭೆಯ ಕೊನೆಯಲ್ಲಿ ಉ7 ಮಂತ್ರಿಗಳು ಭವಿಷ್ಯದಲ್ಲಿ ಕಾರ್ಬನ್ ಉಗುಳದ ‘ಹಸಿರು’ ಮೂಲಗಳಿಂದ ವಿದ್ಯುತ್ ತಯಾರಿಸುವ ವಿಧಾನಗಳನ್ನು ಹೆಚ್ಚೆಚ್ಚು ನೆಚ್ಚಿಕೊಳ್ಳುವುದು ಎಂಬ ತೀರ್ಮಾನಕ್ಕೆ ಬಂದರಾದರೂ ಸಧ್ಯದ ಕಲ್ಲಿದ್ದಿಲಿನ ಮೇಲಿನ ಅವಲಂಬನೆಯನ್ನು ಒಮ್ಮೆಲೆ ನಿಲುಗಡೆಗೆ ತರಲು ಸಾಧ್ಯವಿಲ್ಲವೆಂದು ಹಂತಹಂತವಾಗಿ ತರಲು ಸಮಯಾವಕಾಶ ಬೇಕೆಂಬ ನಿಲುವಿಗೆ ಅಂಟಿಕೊಂಡರು. ನಮ್ಮ ಪ್ರತಿನಿಧಿ ಭೂಪೇಂದರ್ ಯಾದವ್ ಭಾರತದ ನಿಲುವನ್ನು ಹೇಳಲೇ ಬೇಕಿದ್ದುದರಿಂದ ‘ಕಾರ್ಬನ್ ಕಡಿತಕ್ಕೆ ಸಿರಿವಂತ, ಮುಂದುವರಿದ ದೇಶಗಳು ಈ ಕೂಡಲೆ ಗುರುತರವಾದ ಕ್ರಮಗಳನ್ನು ಮೊದಲು ಕೈಗೊಳ್ಳಬೇಕು, ಆಮೇಲೆ ನಮ್ಮಂತ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಹೆಚ್ಚಿನ ಸುಧಾರಿತ ಅವಕಾಶಗಳೊಂದಿಗೆ ಆ ಕ್ರಮಗಳನ್ನು ಅನುಸರಿಸುವುದು ಸಲೀಸಾಗುತ್ತದೆ’ ಎಂದರು. ಬಡ ಮತ್ತು ಮುಂದುವರಿಯುತ್ತಿರುವ ದೇಶಗಳೆಲ್ಲ ಹೆಚ್ಚಾಗಿ ಭಾರತದ ದನಿಯಲ್ಲೆ ಮಾತನಾಡುತ್ತವೆ. ವಾತಾವರಣಕ್ಕೆ ಲಾಗಾಯ್ತಿನಿಂದ ಕಾರ್ಬನ್ ಅನ್ನು ಹೇರಳ ಉಗುಳಿ ಉಗುಳಿ ಜಗತ್ತಿಗೆಲ್ಲ ಹವಾಮಾನದ ಅನಾಹುತಗಳನ್ನು ತಂದಿಟ್ಟ ಸಿರಿವಂತ ದೇಶಗಳು ತಮ್ಮ ಪಾಲಿನ ಜವಾಬುದಾರಿಯನ್ನು ತುರ್ತಾಗಿ ನಿಭಾಯಿಸದೆ ಉಳಿದವರಿಗೆಲ್ಲ ಕಾರ್ಬನ್ ಕಡಿತಕ್ಕೆ ‘ಹಾಗೆ ಮಾಡಿ ಹೀಗೆ ಮಾಡಿ’ ಎಂದು ಸೂಚಿಸುವುದು ಸೊಕ್ಕಿನ ಹೆಡ್ಡತನವಲ್ಲದೆ ಇನ್ನೇನು?</p>



<p>ನಾನೀಗ ತಲೆಬರಹದಲ್ಲಿ ಹೇಳಿರುವ ವಿಷಯಕ್ಕೆ ಬರುತ್ತೇನೆ. ಈವರೆಗೆ ನೀವು ಓದಿದ್ದು&nbsp; ಅಗತ್ಯವಿದ್ದ ಒಂದು ಮುನ್ನುಡಿಯನ್ನು. ಅಂದ ಹಾಗೆ ಊಟದ ಮೇಜಿ(ಡಿನ್ನರ್ ಟೇಬಲ್)ಗೆ ತಂದಿಡುವ ತಿನಿಸುಗಳೆಲ್ಲ ಅಡುಗೆ ಮನೆಯಲ್ಲಿ ತಯಾರಾಗುತ್ತವೆ ತಾನೇ. ಊಟದ ಮೇಜಿನ ಮೇಲೆಯೆ ಅಡುಗೆ ತಯಾರಿಸಿ ಯಾರೂ ಉಣ್ಣುವುದಿಲ್ಲವಲ್ಲ. ಹಾಗೆಯೆ ನಾನಷ್ಟು ಪೂರಕ ಮಾಹಿತಿಗಳ ಮುನ್ನುಡಿಯ ಅಡುಗೆಯೊಂದಿಗೆ ನಿಮ್ಮ ಓದನ್ನು ಮುಖ್ಯ ವಿಷಯದ ಊಟದ ಟೇಬಲಿಗೆ ಒಯ್ಯಬೇಕಾಯಿತು.</p>



<p><strong>ಜನಚಳವಳಿಗಳೇ ಹುಟ್ಟಬೇಕು</strong></p>



<p>ಸಪೋರೊ ಸಭೆಗೆ ನಾವು ಪ್ರತಿನಿಧಿಯನ್ನು ಕಳುಹಿಸಿದ್ದೇವಲ್ಲವೆ. ಆ ಪ್ರತಿನಿಧಿ ಅಲ್ಲಿ ಭಾರತದ ನಿಲುವನ್ನು ತಮ್ಮ ಮಾತುಗಳಲ್ಲಿ ಪ್ರಕಟಪಡಿಸಿದರು. ಇತ್ತ ನಮ್ಮ ಒಕ್ಕೂಟ ಸರ್ಕಾರದ ಪ್ರಧಾನಮಂತ್ರಿಗಳಾದ ಮಾನ್ಯ ನರೇಂದ್ರ ದಾಮೋದರ ಮೋದಿ(ನ.ದಾ.ಮೋ.)ಯವರು ಏಪ್ರಿಲ್ 15ರಂದು ಒಂದು ವಿಡಿಯೊ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡಿದರು. ಈ ಸಭೆಯನ್ನು ವಿಶ್ವಬ್ಯಾಂಕ್ ‘ವೈಯುಕ್ತಿಕ ವರ್ತನೆಯನ್ನು ಬದಲಿಸಿಕೊಂಡು ಹವಾಮಾನ ಬದಲಾವಣೆಯನ್ನು ಸಂಬಾಳಿಸುವ ಬಗೆ ಹೇಗೆ’ (Making it Personal: How Behavioural Change Can Tackle Climate Change) ಎಂಬ ವಿಷಯದಡಿ ಹಮ್ಮಿಕೊಂಡಿತ್ತು. ಯಾವುದೇ ಜಾಗತಿಕ ವೇದಿಕೆಗಳಲ್ಲಿ ಮಾತನಾಡುವ ಅವಕಾಶ ಸಿಕ್ಕರೆ ‘ಹೌದಲ್ಲಾ, ಹೀಗೂ ಸರಿಯೇ’ ಎಂದು ಅಚ್ಚರಿ ಮೂಡಿಸುವಂತೆ ನ.ದಾ.ಮೋದಿಯವರು ಮಾತನಾಡಬಲ್ಲರು. ಈಗಲೂ ಹಾಗೆಯೆ ಮಾತನಾಡಿದರು. ‘ಹವಾಮಾನ ಬದಲಾವಣೆಯನ್ನು ಸಂಬಾಳಿಸಲು ಜನ ಚಳವಳಿಯೇ ಆಗಬೇಕು’ ಎಂದರು. ಮುಂದುವರೆದು ‘ಬರಿಯ ಕಾನ್ಫರೆನ್ಸ್ ಟೇಬಲ್‍ನಲ್ಲಿ ಹವಾಮಾನ ಬದಲಾವಣೆಯನ್ನು ಚರ್ಚಿಸಿದರಷ್ಟೆ ಉಪಯೋಗವಿಲ್ಲ, ನಮ್ಮ ಡಿನ್ನರ್ ಟೇಬಲಿನ ಮಾತುಕತೆಗಳಲ್ಲೂ ಹವಾಮಾನ ಬದಲಾವಣೆಯನ್ನು ಸಂಬಾಳಿಸಲು ಮಾಡುವುದೇನು ಎಂಬ ಬಗ್ಗೆ ಚರ್ಚೆ ಶುರುವಾದರೆ ಜನ ಚಳವಳಿಗಳು ಹುಟ್ಟುತ್ತವೆ’ ಎಂದರು. ಅದ್ಭುತವಾದ ಹೋಲಿಕೆ ಎನ್ನಿ. ದೇಶದೇಶಗಳ ನಾಯಕರು ಜಾಗತಿಕ ಮಟ್ಟದ ‘ಸಮ್ಮೇಳನದ ಮೇಜಿ’(ಕಾನ್ಫರೆನ್ಸ್ ಟೇಬಲ್)ನಲ್ಲಿ ಹವಾಮಾನ ಬದಲಾವಣೆಯನ್ನು ಚರ್ಚಿಸುವುದರ ಜೊತೆಜೊತೆಗೆ ಜಗತ್ತಿನ ಜನಸಾಮಾನ್ಯರು ತಮ್ಮ ನಿತ್ಯದ ‘ಊಟದ ಮೇಜಿ’(ಡಿನ್ನರ್ ಟೇಬಲ್)ನಲ್ಲಿ ಚರ್ಚಿಸಬೇಕೆಂಬ ನ.ದಾ.ಮೋದಿಯವರ ಕನಸನ್ನು ನಾನು ಮೆಚ್ಚುತ್ತೇನೆ. ಆದರೆ ಭಾರತವೂ ಸೇರಿದಂತೆ ಜಗತ್ತಿನ ಬಹುಮಂದಿ ಊಟದ ಮೇಜನ್ನು ಹೊಂದುವುದಿರಲಿ, ಎರಡು ಹೊತ್ತಿನ ಊಟವನ್ನು ಹೊಂದಿಸಿಕೊಳ್ಳುವ ಅವಕಾಶ ಪಡೆದಿಲ್ಲ ಎಂದು ಅವರಿಗೆ ನೆನಪಿಸಲೂ ಬಯಸುತ್ತೇನೆ. ಇರಲಿ, ಸಧ್ಯಕ್ಕೆ ಆ ವಿಚಾರದ ಆಳಕ್ಕೆ ಜಿಗಿಯುವುದು ಬೇಡ.</p>



<figure class="wp-block-gallery has-nested-images columns-default is-cropped wp-block-gallery-7 is-layout-flex wp-block-gallery-is-layout-flex">
<figure class="wp-block-image size-large"><img loading="lazy" decoding="async" width="1024" height="683" data-id="21819" src="https://peepalmedia.com/wp-content/uploads/2023/05/GABRIEL-BORIC-ADDRESSING-UN-SESSION-BLOOMBERG-1024x683.jpg" alt="" class="wp-image-21819" srcset="https://peepalmedia.com/wp-content/uploads/2023/05/GABRIEL-BORIC-ADDRESSING-UN-SESSION-BLOOMBERG-1024x683.jpg 1024w, https://peepalmedia.com/wp-content/uploads/2023/05/GABRIEL-BORIC-ADDRESSING-UN-SESSION-BLOOMBERG-300x200.jpg 300w, https://peepalmedia.com/wp-content/uploads/2023/05/GABRIEL-BORIC-ADDRESSING-UN-SESSION-BLOOMBERG-768x512.jpg 768w, https://peepalmedia.com/wp-content/uploads/2023/05/GABRIEL-BORIC-ADDRESSING-UN-SESSION-BLOOMBERG-1536x1024.jpg 1536w, https://peepalmedia.com/wp-content/uploads/2023/05/GABRIEL-BORIC-ADDRESSING-UN-SESSION-BLOOMBERG-2048x1366.jpg 2048w, https://peepalmedia.com/wp-content/uploads/2023/05/GABRIEL-BORIC-ADDRESSING-UN-SESSION-BLOOMBERG-150x100.jpg 150w, https://peepalmedia.com/wp-content/uploads/2023/05/GABRIEL-BORIC-ADDRESSING-UN-SESSION-BLOOMBERG-696x464.jpg 696w, https://peepalmedia.com/wp-content/uploads/2023/05/GABRIEL-BORIC-ADDRESSING-UN-SESSION-BLOOMBERG-1068x712.jpg 1068w, https://peepalmedia.com/wp-content/uploads/2023/05/GABRIEL-BORIC-ADDRESSING-UN-SESSION-BLOOMBERG-1920x1280.jpg 1920w" sizes="auto, (max-width: 1024px) 100vw, 1024px" /><figcaption class="wp-element-caption"> President of Chile Gabriel Boric speaks at the 77th session of the United Nations General Assembly </figcaption></figure>
</figure>



<p>ನಿಜ, ಪ್ರತಿಯೊಂದು ದೇಶದ ಪ್ರತಿಯೊಂದು ಸಮಾಜದ ಪ್ರತಿ ವ್ಯಕ್ತಿಯು ತನ್ನ ನಿತ್ಯಬದುಕಿನಲ್ಲಿ ಹವಾಮಾನ ಬದಲಾವಣೆಗಳು ಉಲ್ಬಣಗೊಳ್ಳದಂತೆ ಕಾರ್ಬನ್ ಉಗುಳದಿರುವ ಅಥವಾ ಅತಿ ಕಡಿಮೆ ಉಗುಳುವಂತಹ ಚಟುವಟಿಕೆಯನ್ನು ಹೇಗೆ ಹಮ್ಮಿಕೊಳ್ಳಬೇಕು ಎಂದು ಆಲೋಚಿಸುವಂತಾದರೆ ಅದಕ್ಕಿಂತ ಸೋಜಿಗದ ಬದಲಾವಣೆ ಇನ್ನೊಂದಿರಲಾರದು. ಪಳೆಯುಳಿಕೆ ಇಂಧನ ಬಳಸುವ ನಮ್ಮ ನಿತ್ಯ ಬಳಕೆಯ ವಾಹನಗಳು ಕಾರ್ಬನ್ ಉಗುಳುತ್ತವೆ ಎಂದು ನಮಗೆ ತಿಳಿದಿರಬೇಕು. ಅವುಗಳ ಅತಿ ಅಗತ್ಯದ ಬಳಕೆಗಷ್ಟೆ ನಮ್ಮ ಓಡಾಟವನ್ನು ಮಿತಿಗೊಳಿಸಿಕೊಳ್ಳಬೇಕು. ಇಲ್ಲವೆ ಬ್ಯಾಟರಿ ಚಾಲಿತ ವಾಹನಗಳನ್ನು ಪರ್ಯಾಯವಾಗಿ ಬಳಸಬೇಕು. ಭಾರತವೂ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳು ಗಾಳಿಗೆ ವಿಪರೀತ ಕಾರ್ಬನ್ ಉಗುಳುವ ಕಲ್ಲಿದ್ದಿಲ್ಲನ್ನು ಉರಿಸಿ ವಿದ್ಯುತ್ ತಯಾರಿಸುತ್ತವೆ. ನಾವು ವಿದ್ಯುತ್ತನ್ನು ಪೋಲು ಮಾಡಿದರೆ ಅತ್ತ ಶಕ್ತಿಸ್ಥಾವರಗಳು ಹೆಚ್ಚುವರಿ ಕಲ್ಲಿದ್ದಿಲನ್ನು ಉರಿಸಬೇಕಾಗುತ್ತದೆ. ಹೆಚ್ಚುವರಿ ಕಾರ್ಬನ್ ಗಾಳಿಪಾಲಾಗುತ್ತದೆ.</p>



<p>(ಮುಂದುವರಿಯುವುದು..)‌</p>



<p><strong>ರವಿಕುಮಾರ್‌ ಕೆ ಎಸ್‌</strong></p>



<p>ವಿಜ್ಞಾನ ಬರಹಗಾರರು. ಪರಿಸರದ ಮೇಲೆ ವಿಶೇಷ ಆಸಕ್ತಿ. ಚಾರಣ ಹವ್ಯಾಸ.</p>



<p><strong>ಇದನ್ನೂ ಓದಿ-</strong><a href="https://peepalmedia.com/?page_id=21818" data-type="page" data-id="21818" target="_blank" rel="noreferrer noopener">ಅಮೆರಿಕಾ ಎಂಬ ಬಲೂನಿಗೆ ಹವಾಮಾನದ ಮಿಸೈಲುಗಳು| ಮುಂದಿನ ಸರದಿ ಯಾರದ್ದೋ?</a></p>
]]></content:encoded>
					
		
		
			</item>
		<item>
		<title>ಭಾಗ 2 &#124; ಹವಾಮಾನದ ಹದಗೆಟ್ಟ ಬದಲಾವಣೆ &#8211; ರೈತಾಪಿ ಕಸುಬು ಉಳಿದೀತೆ?</title>
		<link>https://peepalmedia.com/part-2-worsening-climate-change-will-farmers-survive/</link>
		
		<dc:creator><![CDATA[K S Ravikumar]]></dc:creator>
		<pubDate>Tue, 25 Apr 2023 11:20:24 +0000</pubDate>
				<category><![CDATA[ಇಕಾಲಜಿ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=21092</guid>

					<description><![CDATA[ವರುಷದಿಂದ ವರುಷಕ್ಕೆ ರೈತಾಪಿ ಬದುಕು ದಿಡೀರ್ ಹವಾಮಾನ ಬದಲಾವಣೆಗಳಿಂದ ನಜ್ಜುಗುಜ್ಜಾಗಿ ಹೋಗುತ್ತಿದೆ. ಹೀಗೆಯೆ ಮುಂದುವರೆದು ರೈತರು ಬೇಸಾಯವನ್ನೇ ಕೈಬಿಟ್ಟರೆ ಕತೆಯೇನು? ನಮಗೆ ಹಸಿವಾದಾಗ ನಮಗೆ ಉಣಿಸಿಗೆ ಬೇಕಾದ ಕಾಳು, ಬೇಳೆ, ನುಚ್ಚು, ರವೆ, ಹಿಟ್ಟುಗಳನ್ನು ಇಂಟರ್‌ನೆಟ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳುವಂತಹ ಸಾಫ್ಟ್‌ವೇರ್ ಪ್ರೋಗ್ರಾಮ್ ಉಂಟೇ?- ಕೆ ಎಸ್‌ ರವಿಕುಮಾರ್ ಹಾನಿಗೀಡಾದ ಸಾಸಿವೆ ಗೋಧಿಯ ನಂತರ ಹೆಚ್ಚು ಹಾನಿಗೀಡಾದ ಎರಡನೆಯ ಚಳಿಗಾಲದ ಬೆಳೆಯೆಂದರೆ ಸಾಸಿವೆ. ಇದು ವಾಣಿಜ್ಯ ಬೆಳೆ. ದಕ್ಷಿಣದಲ್ಲಿ ನಾವು ಸಾಸಿವೆಯನ್ನು ಮಸಾಲೆ ಹುಡಿಗಳಲ್ಲಿ ಮತ್ತು ನೇರ ಒಗ್ಗರಣೆಗಷ್ಟೆ [&#8230;]]]></description>
										<content:encoded><![CDATA[
<p class="has-pale-cyan-blue-background-color has-background">ವರುಷದಿಂದ ವರುಷಕ್ಕೆ ರೈತಾಪಿ ಬದುಕು ದಿಡೀರ್ ಹವಾಮಾನ ಬದಲಾವಣೆಗಳಿಂದ ನಜ್ಜುಗುಜ್ಜಾಗಿ ಹೋಗುತ್ತಿದೆ. ಹೀಗೆಯೆ ಮುಂದುವರೆದು ರೈತರು ಬೇಸಾಯವನ್ನೇ ಕೈಬಿಟ್ಟರೆ ಕತೆಯೇನು? ನಮಗೆ ಹಸಿವಾದಾಗ ನಮಗೆ ಉಣಿಸಿಗೆ ಬೇಕಾದ ಕಾಳು, ಬೇಳೆ, ನುಚ್ಚು, ರವೆ, ಹಿಟ್ಟುಗಳನ್ನು ಇಂಟರ್‌ನೆಟ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳುವಂತಹ ಸಾಫ್ಟ್‌ವೇರ್ ಪ್ರೋಗ್ರಾಮ್ ಉಂಟೇ?- <strong>ಕೆ ಎಸ್‌ ರವಿಕುಮಾರ್</strong></p>



<p><strong>ಹಾನಿಗೀಡಾದ ಸಾಸಿವೆ</strong></p>



<p>ಗೋಧಿಯ ನಂತರ ಹೆಚ್ಚು ಹಾನಿಗೀಡಾದ ಎರಡನೆಯ ಚಳಿಗಾಲದ ಬೆಳೆಯೆಂದರೆ ಸಾಸಿವೆ. ಇದು ವಾಣಿಜ್ಯ ಬೆಳೆ. ದಕ್ಷಿಣದಲ್ಲಿ ನಾವು ಸಾಸಿವೆಯನ್ನು ಮಸಾಲೆ ಹುಡಿಗಳಲ್ಲಿ ಮತ್ತು ನೇರ ಒಗ್ಗರಣೆಗಷ್ಟೆ ಬಳಸುತ್ತೇವೆ. ಉತ್ತರದಲ್ಲಿ ಹಾಗಲ್ಲ, ಅಲ್ಲಿ ಸಾಸಿವೆಯಿಂದ ಎಣ್ಣೆ ತೆಗೆದು ಅಡುಗೆಗೆ ಬಳಸುತ್ತಾರೆ. ಸಾಸಿವೆಗೆ ಕೊರತೆಯಾಯಿತೆಂದರೆ ಇತರ ಅಡುಗೆ ಎಣ್ಣೆಗಳಿಗೆ ಬೇಡಿಕೆ ಹೆಚ್ಚುತ್ತದೆ, ಬೆಲೆಯೂ ಏರುತ್ತದೆ. ಜಗತ್ತಿನಲ್ಲೆ ನಂಬರ್ 1 ಅತಿ ದೊಡ್ಡ ಅಡುಗೆ ಎಣ್ಣೆಯ ಬಳಕೆದಾರ ದೇಶವಾಗಿರುವ ಭಾರತ ಬರುವ ದಿನಗಳಲ್ಲಿ ಸಹಜವಾಗಿ ಸಾಸಿವೆ ಎಣ್ಣೆಯ ಕೊರತೆ ತುಂಬಲು ತಾಳೆ ಎಣ್ಣೆ, ಸೂರ್ಯಕಾಂತಿ ಎಣ್ಣೆ, ವೆಜಿಟೇಬಲ್ ಎಣ್ಣೆಗಳ ಆಮದನ್ನು ಹೆಚ್ಚಿಸಬೇಕಾಗುತ್ತದೆ (ಅಂದಹಾಗೆ ಈ ಹೆಚ್ಚುವರಿ ಆಮದಿನ ಲಾಭ ದೇಶದಲ್ಲೆ ಅತಿ ದೊಡ್ಡ ಅಡುಗೆ ಎಣ್ಣೆಯ ಆಮದನ್ನು ನಿರ್ವಹಿಸುತ್ತಿರುವ ಅದಾನಿ-ವಿಲ್ಮರ್ ಕಂಪೆನಿಗೆ ದೊರೆಯುತ್ತದೆ ಎಂದು ನಾನು ಬಿಡಿಸಿ ಹೇಳಬೇಕೆ?)</p>



<figure class="wp-block-gallery has-nested-images columns-default is-cropped wp-block-gallery-8 is-layout-flex wp-block-gallery-is-layout-flex">
<figure class="wp-block-image size-large"><img loading="lazy" decoding="async" width="945" height="694" data-id="21094" src="https://peepalmedia.com/wp-content/uploads/2023/04/2.Tribune-India.jpg" alt="" class="wp-image-21094" srcset="https://peepalmedia.com/wp-content/uploads/2023/04/2.Tribune-India.jpg 945w, https://peepalmedia.com/wp-content/uploads/2023/04/2.Tribune-India-300x220.jpg 300w, https://peepalmedia.com/wp-content/uploads/2023/04/2.Tribune-India-768x564.jpg 768w, https://peepalmedia.com/wp-content/uploads/2023/04/2.Tribune-India-150x110.jpg 150w, https://peepalmedia.com/wp-content/uploads/2023/04/2.Tribune-India-696x511.jpg 696w" sizes="auto, (max-width: 945px) 100vw, 945px" /></figure>
</figure>



<p><strong>ಕೊಳೆತಿನಿಯ ಕಾಟ</strong></p>



<p>ಬಿಸಿಯಲೆಗಳು ಎರಗಬಹುದೆಂದು ಗೋಧಿ ಹೊಲಗಳಿಗೆ ಈಗಾಗಲೆ ನೀರು ಹಾಯಿಸಿ ತಂಪಾಗಿರಿಸಲು ಹೆಣಗುತ್ತಿದ್ದ ರೈತರು ಈಗ ಬಿದ್ದ ಅಕಾಲದ ಮಳೆಯಿಂದಾಗಿ ಹೊಲದಲ್ಲಿ ತೇವಾಂಶ ಮಿತಿಮೀರಿ ಗೋಧಿ ಗಿಡಗಳಿಗೆ ಕೊಳೆತಿನಿ (ಫಂಗಸ್) ತಗಲುವುದನ್ನು ಕಾಣಬೇಕಾಯಿತು.&nbsp; <em><strong>Puccinia striiformis</strong></em><em><strong> &nbsp;</strong></em>ಪ್ರಭೇದದ ಕೊಳೆತಿನಿಯಿಂದ ಬರುವ ಹಳದಿ ತುಕ್ಕಿನ ಫಂಗಸ್ ಕಾಯಿಲೆ ಗೋಧಿ ಎಲೆಗಳನ್ನು ಹಳದಿ ಬಣ್ಣಕ್ಕೆ ತಿರುಗಿಸಿ ಕ್ರಮೇಣ ಸಾಯಿಸಿಬಿಡುತ್ತದೆ. ಹರ್ಯಾಣದ ರೋಹತಕ್ ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಇನ್ನೊಂದು ಬಗೆಯ ಫಂಗಸ್ ತೆನೆತುಂಬಿದ ಗೋಧಿಗಿಡಗಳನ್ನು ಕಪ್ಪುಬಣ್ಣಕ್ಕೆ ತಿರುಗಿಸಿದೆ.</p>



<p>ಪಂಜಾಬಿನಲ್ಲಿ ಹಲವು ಕಡೆ ಇನ್ನೇನು ಕೆಲವೇ ದಿನಗಳಲ್ಲಿ ಕಟಾವಾಗಬಹುದು ಎಂಬ ಹಂತದಲ್ಲಿದ್ದ ಗೋಧಿ ತೆನೆಗಳು ನೆಲಕಚ್ಚಿದ ಸ್ಥಿತಿಯಲ್ಲೆ ಮೊಳಕೆಯೊಡೆಯುತ್ತಿವೆ. ಮಳೆ ಬಾರದೆ ಬರಿಯ ಗಾಳಿಗೆ ನೆಲಕ್ಕೊರಗಿದ್ದಿದ್ದರೆ ಅವು ಫಸಲು ಕೊಡುತ್ತಿದ್ದವು. ಆದರೆ ಮಳೆಗೆ ಒದ್ದೆಯಾದ ಮೇಲೆ ಅವು ಹಾಳಾದಂತೆಯೆ. ಒದ್ದೆಯಾಗಿ ಕೊಳೆತ ಮತ್ತು ಬೂಷ್ಟು ಬಂದು ಕಪ್ಪುಬಣ್ಣಕ್ಕೆ ತಿರುಗಿದ ಗೋಧಿಗಿಡಗಳು ಮಣ್ಣುಪಾಲಾಗಿ ಪಂಜಾಬಿನಲ್ಲೀಗ ಜಾನುವಾರುಗಳು ಒಣಹುಲ್ಲಿನ ಕೊರತೆ ಅನುಭವಿಸಬೇಕಾಗಿದೆ. ಫರೀದ್‍ಕೋಟ್‍ನಲ್ಲಿ ಒಣಹುಲ್ಲಿನ ದರ ಒಂದೇ ವಾರದಲ್ಲಿ ಕ್ವಿಂಟಾಲಿಗೆ 400ರಿಂದ 650-700 ರೂಪಾಯಿಗಳಿಗೆ ಏರಿದೆ. ಮತ್ತೆ ಈ ಒಣಹುಲ್ಲನ್ನು ಖರೀದಿಸುವವರೂ ರೈತರೆ. ಅವರೆ ಹೆಚ್ಚು ಜಾನುವಾರುಗಳನ್ನು ಸಾಕುವುದಲ್ಲವೆ? ಸಾಲದ ಹೊರೆ, ಬೆಳೆಹಾನಿ, ಮೇವಿನ ಕೊರತೆ, ಸರಿಹೊತ್ತಿಗೆ ನೆರವಿಗಾಗದ ಸರ್ಕಾರಗಳ ಹೊಣೆಗೇಡಿತನ ಹೀಗೆ ಎಲ್ಲದಕ್ಕೂ ತಲೆಕೊಡುವುದು ಕಡೆಗೆ ರೈತರೆ ಆಗಿರುತ್ತಾರೆ. ಬಹುಶಃ ಜಗತ್ತಿನಲ್ಲಿ ಬೇರೆ ಯಾವ ವೃತ್ತಿಯವರೂ ಇಷ್ಟೊಂದು ನಿರುತ್ಸಾಹದ, ನಿರುತ್ತೇಜಕ ಸನ್ನಿವೇಶಗಳಿಗೆ ಸಿಲುಕುವುದಿಲ್ಲವೆಂದು ಕಾಣುತ್ತದೆ. ಅದೂ ಒಂದು ಬಾರಿಯಲ್ಲ, ಪ್ರತೀ ವರುಷ ಮತ್ತೆ ಮತ್ತೆ.</p>



<p><strong>ಗೋಧಿಕಾಳಿನ ಗುಣಮಟ್ಟ</strong></p>



<figure class="wp-block-gallery has-nested-images columns-default is-cropped wp-block-gallery-9 is-layout-flex wp-block-gallery-is-layout-flex">
<figure class="wp-block-image size-large"><img loading="lazy" decoding="async" width="660" height="443" data-id="21093" src="https://peepalmedia.com/wp-content/uploads/2023/04/2023_4largeimg_550574873.jpg" alt="" class="wp-image-21093" srcset="https://peepalmedia.com/wp-content/uploads/2023/04/2023_4largeimg_550574873.jpg 660w, https://peepalmedia.com/wp-content/uploads/2023/04/2023_4largeimg_550574873-300x201.jpg 300w, https://peepalmedia.com/wp-content/uploads/2023/04/2023_4largeimg_550574873-150x101.jpg 150w" sizes="auto, (max-width: 660px) 100vw, 660px" /></figure>
</figure>



<p>ಹೊಲದಲ್ಲಿ ನಿಸರ್ಗದ ಹಲವಾರು ಸವಾಲುಗಳನ್ನು ಎದುರಿಸಿ ಅಂತೂ ಕಟಾವಾಗಿ ಕಸಕಡ್ಡಿಯಿಂದ ಚೊಕ್ಕಟಗೊಂಡ ಗೋಧಿಕಾಳುಗಳು ಮಂಡಿಯನ್ನು ತಲುಪಿದ ಮೇಲೂ ಹಲವು ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕಾಗುತ್ತದೆ. ಮೊದಲ ಹಂತದಲ್ಲಿ ಮಧ್ಯ ಹಾಗೂ ಉತ್ತರ ಭಾರತದ ಮಂಡಿಯನ್ನು ತಲುಪಿರುವ ಗೋಧಿಯಲ್ಲಿ ಶೇಕಡಾ 80ರಷ್ಟು ಕಳಪೆಯಾಗಿದೆ ಎಂದು ಕೊಳ್ಳುವವರು ಮೂಗು ಮುರಿದಿದ್ದಾರೆ. ಫೆಬ್ರವರಿಯ ಬಿಸಿಯಲೆಗಳು ಮತ್ತು ಮಾರ್ಚಿಯಲ್ಲಿ ಮಳೆಯ ತೇವಾಂಶಕ್ಕೆ ತುತ್ತಾದ ಗೋಧಿಬೆಳೆ ಹಿಟ್ಟಾಗಲು ಬೇಕಾದ ತನ್ನ ಸಹಜತನವನ್ನು ಕಳೆದುಕೊಂಡದ್ದೇ ಇದಕ್ಕೆ ಕಾರಣ. ಗೋಧಿಕಾಳುಗಳಲ್ಲಿ ಅಗತ್ಯಕ್ಕಿಂತ (ಶೇಕಡಾ 12ರ ಒಳಗಿರಬೇಕು) ಹೆಚ್ಚು ತೇವಾಂಶವಿರುವುದು (ಈಗ ಶೇಕಡಾ 18ರ ಆಸುಪಾಸಿನಲ್ಲಿದೆ) ಅವುಗಳ ಖರೀದಿಗೆ ಅಡ್ಡಿಯಾಗಿದೆ. ಹಲವು ಮಂಡಿಗಳಲ್ಲಿ ಖರೀದಿ ಇಲ್ಲದೆ ಗುಪ್ಪೆಗಟ್ಟಲೆ ಗೋಧಿ ಹಾಗೆಯೆ ಬಿದ್ದುಕೊಂಡಿದೆ (ಕೆಲವು ಮಂಡಿಗಳಲ್ಲಿ ಸರ್ಕಾರದ ಕನಿಷ್ಟ ಬೆಂಬಲದ ಬೆಲೆ (MSP)ಗಿಂತಲೂ ಕಡಿಮೆ ದರಕ್ಕೆ ಖರೀದಿಸಲ್ಪಟ್ಟಿದೆ). ಆದರೆ ಮುಂದೆ ಅದು ಬೇರೆಬೇರೆ ಹಂತಗಳಲ್ಲಿ ಮಾರುಕಟ್ಟೆಯ ವ್ಯವಹಾರ ವಹಿವಾಟುಗಳಿಗೆ ಒಳಪಡಬೇಕಲ್ಲ, ಮಂಡಿಯಲ್ಲೆ ಬಿದ್ದುಕೊಂಡಿದ್ದರೆ ಪ್ರಯೋಜನವೇನು? ಹೆಚ್ಚು ಮಳೆಗೆ ತುತ್ತಾದ ಪಂಜಾಬಿನಲ್ಲಿ ಗೋಧಿಯನ್ನು ಕೊಳ್ಳಲು ರಿಲೆಯನ್ಸ್, ಐಟಿಸಿ, ಅದಾನಿ ಗ್ರೂಪ್ ಮುಂತಾದ ಕಾರ್ಪೊರೇಟುಗಳು ಇನ್ನೂ ಮುಂದೆ ಬಂದಿಲ್ಲ ಎಂದು ಮಧ್ಯವರ್ತಿ ಕಮಿಷನ್ ಏಜೆಂಟರು ಗೋಳು ತೋಡಿಕೊಂಡಿದ್ದಾರೆ. ಸರ್ಕಾರೆಗಳೇ ಪೂರ್ತಿ ಮುಂದೆ ನಿಂತು ಗೋಧಿಯನ್ನು ಕೊಳ್ಳಲೆಂದರೆ ಅವು ನಿಗದಿಪಡಿಸಿದ ಗುಣಮಟ್ಟದಲ್ಲಿ ಗೋಧಿ ಬೆಳೆಯಿರಬೇಕು. ಈ Food Corporation of India ದ ಗೋದಾಮುಗಳಲ್ಲಿ ಹೆಚ್ಚು ಕಾಲ ಕೂಡಿಡ ಬೇಕಿರುವುದರಿಂದ ಕಾಳಿನ ಗುಣಮಟ್ಟ ಉತ್ತಮವಾಗಿರಲೇ ಬೇಕು. ಆದರೆ ಈ ನೆಪವೊಡ್ಡಿ ಸರ್ಕಾರಗಳು ಲಾಭಕ್ಕಷ್ಟೆ ಕಣ್ಣು ನೆಟ್ಟ ಕಾರ್ಪೊರೇಟುಗಳಂತೆ ಹಿಂದೆಗೆಯುಂತಿಲ್ಲ. ರೈತರ ನೆರವಿಗೆ ಬರಲೇಬೇಕಿದೆ. ಹೀಗಾಗಿ ಸರ್ಕಾರಗಳು ತಾವು ಪಾಲಿಸುವ ಗುಣಮಟ್ಟ ಸಂಬಂಧಿ ನಿಯಮಗಳನ್ನು ಕೊಂಚ ಸಡಿಲಿಸಿ ಖರೀದಿಸಲು ಮುಂದೆ ಬರಬೇಕೆಂದು ರೈತರು ಬೇಡಿಕೆ ಇಟ್ಟಿದ್ದಾರೆ. ಹಾಗೆಲ್ಲ ಸರ್ಕಾರಗಳು (ಅದೂ ಕಾರ್ಪೋರೇಟ್‍ಗಳ ‘ಚೆಡ್ಡಿ’ದೋಸ್ತ್ ಸರ್ಕಾರಗಳು) ಬೇಡಿಕೆ, ಅರಿಕೆ, ಕೋರಿಕೆ, ಮನವಿ, ಮೊರೆಗಳಿಗೆ ಮಣಿಯುವುದುಂಟೆ! ಇದೆಲ್ಲ ರೈತರಿಗೆ ಗೊತ್ತಿಲ್ಲವೆ? ಹರ್ಯಾಣದ ರೈತರು ರಸ್ತೆತಡೆ ಮಾಡಿ ಪ್ರತಿಭಟಿಸುತ್ತಿದ್ದಂತೆ ರಾಜ್ಯ ಸರ್ಕಾರ ಮತ್ತು ಒಕ್ಕೂಟ ಸರ್ಕಾರಗಳು ಕ್ರಮವಾಗಿ ಖರೀದಿ ಸಂಗ್ರಹಣೆ (procurement) ಮತ್ತು ಕಾಳಿನ ಗುಣಮಟ್ಟದ ನಿಯಮಗಳನ್ನು ಸಡಿಲಿಸಿದವು. ಸಡಿಲಿಸಲ್ಪಟ್ಟ ಗುಣಮಟ್ಟದ ನಿಯಮಗಳು ಹರ್ಯಾಣವಲ್ಲದೆ ಪಂಜಾಬ್, ಚಂಡೀಘರ್ ಮತ್ತು ರಾಜಸ್ತಾನಗಳಿಗೂ ಅಳವಟ್ಟವು</p>



<p><strong>ಒಕ್ಕೂಟ ಸರ್ಕಾರದ ನಿರೀಕ್ಷೆ ನಿಜವಾಗಬಹುದೆ?</strong></p>



<p class="has-pale-cyan-blue-background-color has-background">ಯಾರದೋ ಸಾಧನೆಯ ಕಟ್ಟಕಡೆಯ ಯಶಸ್ಸಿನ ಲಾಭವನ್ನು ತಮ್ಮದೇ ಎಂದು ಬಿಂಬಿಸಿಕೊಳ್ಳಲು ಸರ್ಕಾರಗಳು ಮುನ್ನುಗ್ಗುವುದನ್ನು ನಾವು ಕಂಡಿದ್ದೇವೆ. ನಮ್ಮ ಒಕ್ಕೂಟ ಸರ್ಕಾರವೂ ಇದಕ್ಕೆ ಹೊರತಲ್ಲ. 2022-2023ನೇ ಸಾಲಿಗೆ 11.218 ಕೋಟಿ ಟನ್ನುಗಳ ಸಾರ್ವಕಾಲಿಕ ದಾಖಲೆಯ ಗೋಧಿ ಬೆಳೆ ಬರುತ್ತದೆಂದು ಸರ್ಕಾರ ಒಂದೇ ಸಮನೆ ನಾಲ್ಕೈದು ತಿಂಗಳುಗಳಿಂದ ಗಳಹುತ್ತಲೆ ಬಂದಿದೆ. ತಾನೇ ನಿಂತು ಗೋಧಿ ಬೆಳೆದಿರುವೆನೇನೊ ಎಂಬ ದನಿಯಲ್ಲಿ ಅದು ಮಾತನಾಡಿತ್ತು. ಕೃಷಿ ಮಂತ್ರಾಲಯವಂತೂ ‘ಯಾವ ಬಿಸಿಯಲೆಗೂ ಬೆದರಬೇಡಿ, ಯಾವ ಮಳೆಗೂ ಜಗ್ಗಬೇಡಿ, ಯಾವ ಬಿರುಗಾಳಿಗೂ ಕುಗ್ಗಬೇಡಿ’ ಎಂದು ರೈತರಿಗೆ ವೀರಾವೇಶದ ಸೂಚನೆ(ಘೋಷಣೆ)ಗಳನ್ನು ನೀಡಿತ್ತು. ಸರ್ಕಾರಿ ಹಿಡಿತದ ಹವಾಮಾನ, ಕೃಷಿ ಮತ್ತು ಸಂಶೋಧನಾ ಸಂಸ್ಥೆಗಳೂ ಸರ್ಕಾರದ ದನಿಗೆ ಒತ್ತಾಸೆಯಾಗಿ ಬಾಯಿಪಾಠ ಒಪ್ಪಿಸಿದವು. ನೆಲ ಮತ್ತು ಮುಗಿಲಿನ ವಾಸ್ತವ ಗೊತ್ತಿರುವ ರೈತರು ಇಂತಹ ಜೊಳ್ಳು, ಬರಡು, ಟೊಳ್ಳು ಉತ್ತೇಜನಗಳಿಂದ ಹುರುಪು ಗೊಳ್ಳುವುದಿಲ್ಲ. ಕಳೆದ ಫೆಬ್ರವರಿಯಲ್ಲಿ ವಿಪರೀತ ಏರಿದ ತಾಪ ಮತ್ತು ಮಾರ್ಚಿಯ ಅಕಾಲದ ಮಳೆ, ಆಲಿಕಲ್ಲುಗಳ ಹೊಡೆತದಿಂದ ತತ್ತರಿಸಿರುವ ರೈತರು ಈ ವರುಷ ಸರ್ಕಾರ ನಿರೀಕ್ಷಿಸಿದ ಗೋಧಿ ಬೆಳೆ ಸಾಧ್ಯವಿಲ್ಲ ಎನ್ನುತ್ತಿದ್ದರೂ ಒಕ್ಕೂಟ ಸರ್ಕಾರ ಅದನ್ನು ಒಪ್ಪಿರಲಿಲ್ಲ. ಈಗ ನಿಧಾನಕ್ಕೆ ಅದು ವಾಸ್ತವವನ್ನು ಅರಿಯುತ್ತಿದೆ. ಮಾರ್ಚ್ ಕಡೆಯ ವಾರದಲ್ಲಿ ತನ್ನ ನಿರೀಕ್ಷಿತ ಇಳುವರಿಯಲ್ಲಿ ಒಟ್ಟು 10 ಲಕ್ಷ ಟನ್ನಿನಷ್ಟು ಕಡಿಮೆಯಾಗಬಹುದು ಎಂದಿದ್ದು ಏಪ್ರಿಲ್ ಮೊದಲ ವಾರದ ಹೊತ್ತಿಗೆ 20 ಲಕ್ಷ ಟನ್ ಕಮ್ಮಿಯಾಗಬಹುದು ಎಂದಿದೆ (ಪೂರ್ಣ ಚಿತ್ರಣ ಪಡೆಯಲು ನಾವು ಜೂನ್-ಜುಲೈವರೆಗೆ ಕಾಯಬೇಕು). United States Department of Agriculture(USDA)ಗೆ ಸೇರಿದ Foreign Agriculture Service(FAS) ಸಂಸ್ಥೆಯು ಒಟ್ಟು ಇಳುವರಿ 10.8 ಕೋಟಿ ಟನ್ನುಗಳಾಗಬಹುದು ಎಂದು ಅಂದಾಜಿಸಿದೆ. Roller Flour Millers Federation of India (RFMFI)&nbsp; &nbsp;&nbsp;ಜೊತೆಗೂಡಿ Agriwatch ಸಂಸ್ಥೆಯು ನಡೆಸಿದ ಸರ್ವೆ ಪ್ರಕಾರ ಈ ವರುಷ ಒಟ್ಟು ಇಳುವರಿ 10.29 ಲಕ್ಷ ಟನ್ ಆಗಬಹುದು. ಇಷ್ಟಾಗಿಯೂ ಇದು ಕಳೆದ ವರುಷದ ಇಳುವರಿಯಾದ 9.76 ಕೋಟಿ ಟನ್ನಿಗಿಂತ ಹೆಚ್ಚು. ನಮ್ಮ ರೈತರ ಸಾಗುವಳಿಯ ಹುಮ್ಮಸ್ಸಿಗೆ ನಾವು ಬೆನ್ನು ತಟ್ಟಲೇ ಬೇಕಲ್ಲವೆ? ಇದೇ ರೈತರನ್ನು ಹದಿಮೂರು ತಿಂಗಳು ಅಕ್ಷರಶಃ ಬೀದಿಯಲ್ಲಿ ಹೋರಾಟಕ್ಕೆ ಕೂರಿಸಿದ್ದ ಒಕ್ಕೂಟ ಸರ್ಕಾರದ ‘ಚೂಪು ಸಲಾಕೆ’ಗಳಿಗೆ ರೈತರು ಹವಾಮಾನ ಬದಲಾವಣೆ ಎಂಬ ಯೂಪಸ್ತಂಭಕ್ಕೆ ಕಟ್ಟಿಹಾಕಲ್ಪಟ್ಟ ಮೊಟ್ಟಮೊದಲ ಬಲಿಗಳು ಎಂದು ಅರಿವಾಗಬೇಕು. &nbsp;&nbsp;&nbsp;</p>



<p>&nbsp;ಅಬ್ಬಾ! ದೇಶದ ಹಸಿವು ನೀಗುವ ರೈತರಿಗೆ ಈಪಾಟಿ ತೊಡಕುಗಳು ಕಾಲಿಗೆ ಬಿಗಿದು ಕೊಳ್ಳಬಾರದು. ವರುಷದಿಂದ ವರುಷಕ್ಕೆ ರೈತಾಪಿ ಬದುಕು ದಿಡೀರ್ ಹವಾಮಾನ ಬದಲಾವಣೆಗಳಿಂದ ನಜ್ಜುಗುಜ್ಜಾಗಿ ಹೋಗುತ್ತಿದೆ. ಹೀಗೆಯೆ ಮುಂದುವರೆದು ರೈತರು ಬೇಸಾಯವನ್ನೇ ಕೈಬಿಟ್ಟರೆ ಕತೆಯೇನು? ನಮಗೆ ಹಸಿವಾದಾಗ ನಮಗೆ ಉಣಿಸಿಗೆ ಬೇಕಾದ ಕಾಳು, ಬೇಳೆ, ನುಚ್ಚು, ರವೆ, ಹಿಟ್ಟುಗಳನ್ನು ಇಂಟರನೆಟ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳುವಂತಹ ಸಾಫ್ಟ್‌ವೇರ್ ಪ್ರೋಗ್ರಾಮ್ ಉಂಟೇ?</p>



<p><strong>ರವಿಕುಮಾರ್ ಕೆ.ಎಸ್, ಹಾಸನ</strong></p>



<p>ಲೇಖಕರು. ಮುಖ್ಯವಾಗಿ ವಿಜ್ಞಾನ ಬರಹಗಾರರು. ಪರಿಸರದ ಮೇಲೆ ವಿಶೇಷ ಆಸಕ್ತಿ. ಚಾರಣ ಹವ್ಯಾಸ.</p>



<p>ಮೊಬೈಲ್:‌ 9964604297</p>



<p><strong>ಇದನ್ನೂ ಓದಿ</strong>&#8211;<a href="https://peepalmedia.com/worsening-climate-change-will-farmers-survive/" target="_blank" rel="noreferrer noopener">https://peepalmedia.com/worsening-climate-change-will-farmers-survive/</a><a rel="noreferrer noopener" href="http://ಹವಾಮಾನದ ಹದಗೆಟ್ಟ ಬದಲಾವಣೆ - ರೈತಾಪಿ ಕಸುಬು ಉಳಿದೀತೆ?" target="_blank">ಹವಾಮಾನದ ಹದಗೆಟ್ಟ ಬದಲಾವಣೆ &#8211; ರೈತಾಪಿ ಕಸುಬು ಉಳಿದೀತೆ?</a></p>
]]></content:encoded>
					
		
		
			</item>
		<item>
		<title>ಹವಾಮಾನದ ಹದಗೆಟ್ಟ ಬದಲಾವಣೆ &#8211; ರೈತಾಪಿ ಕಸುಬು ಉಳಿದೀತೆ?</title>
		<link>https://peepalmedia.com/worsening-climate-change-will-farmers-survive/</link>
		
		<dc:creator><![CDATA[K S Ravikumar]]></dc:creator>
		<pubDate>Mon, 24 Apr 2023 11:58:42 +0000</pubDate>
				<category><![CDATA[ಇಕಾಲಜಿ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=21066</guid>

					<description><![CDATA[ಉತ್ತರ ಭಾರತಕ್ಕೆ ಹವಾಮಾನ ವೈಪರೀತ್ಯ ಹೊಸದೇನಲ್ಲ. ಆದರೆ, ಅಚ್ಚರಿ ಮತ್ತು ಆತಂಕ ಮೂಡಿಸಿದ ವಿಚಾರವೇನೆಂದರೆ ಒಂದೇ ವಾರದಲ್ಲಿ ಎರಡು ಸುಂಟರಗಾಳಿಗಳು ಎರಗಿದ್ದು. ಬರುವ ದಿನಗಳಲ್ಲಿ ಅವುಗಳ ಉಪಟಳ ನಮ್ಮಲ್ಲೂ ಹೆಚ್ಚಲಾರದು ಎಂದು ಹೇಳುವಂತಿಲ್ಲ. ನಮ್ಮಲ್ಲಿ ಚುನಾವಣೆಯ ಬಿರುಗಾಳಿ ಎಬ್ಬಿಸುತ್ತಿರುವ ನಮ್ಮ ರಾಜಕಾರಣಿಗಳಾರೂ ಹವಾಮಾನ ಬದಲಾವಣೆಯ ಬಗ್ಗೆ ತುಟಿ ಪಿಟ್ಟೆನ್ನುತ್ತಿಲ್ಲ; ಪ್ರಣಾಳಿಕೆಯಲ್ಲಿ ಚಕಾರವಿಲ್ಲ- ಕೆ.ಎಸ್.ರವಿಕುಮಾರ್, ಹಾಸನ ಕಳೆದ ಮಾರ್ಚ್ 24ರ ಶುಕ್ರವಾರ ಸಂಜೆ ಪಂಜಾಬಿನ ಫಾಜಿಲ್ಕ ಜಿಲ್ಲೆಯ ಗಡಿಹಳ್ಳಿ ಬುಕೇನ್‍ವಾಲಾದಲ್ಲಿ ಒಂದು ಸುಂಟರಗಾಳಿ (Tornado, twister) ಎದ್ದಿತು. ಜನ [&#8230;]]]></description>
										<content:encoded><![CDATA[
<p class="has-black-color has-cyan-bluish-gray-background-color has-text-color has-background">ಉತ್ತರ ಭಾರತಕ್ಕೆ ಹವಾಮಾನ ವೈಪರೀತ್ಯ ಹೊಸದೇನಲ್ಲ. ಆದರೆ, ಅಚ್ಚರಿ ಮತ್ತು ಆತಂಕ ಮೂಡಿಸಿದ ವಿಚಾರವೇನೆಂದರೆ ಒಂದೇ ವಾರದಲ್ಲಿ ಎರಡು ಸುಂಟರಗಾಳಿಗಳು ಎರಗಿದ್ದು. ಬರುವ ದಿನಗಳಲ್ಲಿ ಅವುಗಳ ಉಪಟಳ ನಮ್ಮಲ್ಲೂ ಹೆಚ್ಚಲಾರದು ಎಂದು ಹೇಳುವಂತಿಲ್ಲ. ನಮ್ಮಲ್ಲಿ ಚುನಾವಣೆಯ ಬಿರುಗಾಳಿ ಎಬ್ಬಿಸುತ್ತಿರುವ ನಮ್ಮ ರಾಜಕಾರಣಿಗಳಾರೂ ಹವಾಮಾನ ಬದಲಾವಣೆಯ ಬಗ್ಗೆ ತುಟಿ ಪಿಟ್ಟೆನ್ನುತ್ತಿಲ್ಲ; ಪ್ರಣಾಳಿಕೆಯಲ್ಲಿ ಚಕಾರವಿಲ್ಲ- <strong>ಕೆ.ಎಸ್.ರವಿಕುಮಾರ್, ಹಾಸನ</strong></p>



<p></p>



<p>ಕಳೆದ ಮಾರ್ಚ್ 24ರ ಶುಕ್ರವಾರ ಸಂಜೆ ಪಂಜಾಬಿನ ಫಾಜಿಲ್ಕ ಜಿಲ್ಲೆಯ ಗಡಿಹಳ್ಳಿ ಬುಕೇನ್‍ವಾಲಾದಲ್ಲಿ ಒಂದು ಸುಂಟರಗಾಳಿ (Tornado, twister) ಎದ್ದಿತು. ಜನ ಹವ್ವಳಿಸಿ ನೋಡುನೋಡುತ್ತಿದ್ದಂತೆ ಸುಂಟರಗಾಳಿಯ ಉರುಟು ಕಂಬ ನೆಲಕ್ಕಿಳಿದು ತಿರುಗುತ್ತ ಹಳ್ಳಿಯ ಕಡೆಗೇ ದೌಡಾಯಿಸಿ ಬಂತು. ಮನೆ, ಕೊಟ್ಟಿಗೆಗಳ ಮಾಡು ತಡಿಕೆ ಎಲ್ಲ ಹಾರಿ ಹೋದವು. ಬೊಡ್ಡೆ ಕಿತ್ತು ಗಿಡಮರಗಳು ಗಿರಗಿಟ್ಟೆ ಆಡಿದವು. ಹೊತ್ತೊಯ್ಯಬಲ್ಲ ಎಲ್ಲ ವಸ್ತುಗಳನ್ನು ಅದು ತನ್ನೊಂದಿಗೆ ಒಯ್ಯಿತು. ಹಳ್ಳಿಯಲ್ಲಿ ಸಾಕಷ್ಟು ಗಂಡಾಗುಂಡಿ ಮಾಡಿದ ಮೇಲೆ ಹೊಲಗಳ ಕಡೆಗೆ ನುಗ್ಗಿತು. ರೈತರ ತಿಂಗಳುಗಳ ದುಡಿಮೆಯಿಂದ ಕಟಾವಿನ ದಿನಗಳನ್ನು ಎದುರು ನೋಡುತ್ತ ತೆನೆದುಂಬಿ ತೊನೆದಾಡುತ್ತಿದ್ದ ಗೋಧಿಯ ಪೈರುಗಳು ಸುಂಟರಗಾಳಿಯ ಹುಚ್ಚು ಕಸುವಿಗೆ ಸಿಕ್ಕು ಹೊರೆ ಕಟ್ಟಿ ಎಸೆದಂತೆ ಕಸಕ್ಕನೆ ಕಿತ್ತೆದ್ದು ಹೋದವು. ಹಾರಿಹೋಗದವು ಇನ್ನೇಳದಂತೆ ನೆಲಕ್ಕೊರಗಿದವು. ಗೋಧಿ ಫಸಲಿಗೆ ಒದಗಿದ ಹಾನಿ ಎದೆಗೆಡಿಸುವಂತಿತ್ತು. ಬುಕೇನ್‍ವಾಲಾದ ಹಲವು ರೈತರು ಮನೆಯನ್ನೂ ಕಳಕೊಂಡರು, ಕೈಯಾರೆ ಬೆಳೆದ ಗೋಧಿ ಬೆಳೆಯನ್ನೂ ಕಳಕೊಂಡರು. ಭಾರತದ ಭಾಗದಲ್ಲಿ ತನ್ನಿಂದಾದಷ್ಟು ಅವಾಂತರ ಮಾಡಿದ ಮೇಲೆ ಈ ಸುಂಟರಗಾಳಿ ಗಡಿದಾಟಿ ಪಾಕಿಸ್ತಾನದ ಕಡೆ ಸಾಗಿತು. ಯಾವ ಪಾಸ್‍ಪೋರ್ಟ್ ವೀಸಾಗಳ ಗೊಡವೆಯಿಲ್ಲದೆ, ಗಡಿಭದ್ರತಾಪಡೆಗಳ ಕಾವಲನ್ನು ಲೆಕ್ಕಿಸದೆ, ರಾಷ್ಟ್ರೀಯತೆ ದೇಶಭಕ್ತಿಯ ನಾಟಕೀಯ ವಿವರಣೆಗಳಿಗೆ ದಕ್ಕದೆ ‘ನಿಮ್ಮ ಪಾಡನ್ನು ನೀವಿನ್ನು ನೋಡಿಕೊಳ್ಳಿ’ ಎಂದು ಕಣ್ಮರೆಯಾಯಿತು.</p>



<p>ಒಂದು ಸುಂಟರಗಾಳಿಗೆ ಇಷ್ಟೊಂದು ತಲೆಕೆಡಿಸಿಕೊಳ್ಳಬೇಕೆ ಎಂದು ಕೆಲವರಿಗಾದರೂ ಅನಿಸಬಹುದು. ಭಾರತದಿಂದ ಹೊರನಡೆದ ಈ ಸುಂಟರಗಾಳಿ ಹೇಳಬೇಕೆಂದರೆ ಪಂಜಾಬಿನಲ್ಲಿ ಒಂದೇ ವಾರದಲ್ಲಿ ಕಾಣಿಸಿಕೊಂಡ ಎರಡನೆಯ ಪ್ರಕರಣವಾಗಿತ್ತು. ಮೊದಲನೆಯದು ಕಾಣಿಸಿಕೊಂಡಾಗ ಸಾಮಾನ್ಯ ಎಂದು ಅದನ್ನು ಕಡೆಗಣಿಸಲಾಗಿತ್ತು. ಆದರೆ ನಾಲ್ಕೈದು ದಿನದಲ್ಲೆ ಎರಡನೆಯದನ್ನು ಕಂಡಾಗ ಜನ, ಹವಾಮಾನ ಇಲಾಖೆ, ಮಾಧ್ಯಮಗಳು ಮತ್ತು ಅಧಿಕಾರಿಗಳು ಎಲ್ಲರೂ ದಿಗ್ಗನೆಚ್ಚತ್ತರು. ಹಾಗೆ ನೋಡಿದರೆ ಪಂಜಾಬಿನ ಭಾಗದಲ್ಲಿ ಸುಂಟರಗಾಳಿಗಳು ಅಪರೂಪವೇ. ದಾಖಲೆಗಳ ಪ್ರಕಾರ 2007ರಿಂದ ಈಚೆಗೆ ಬುಕೇನ್‍ವಾಲಾದಲ್ಲಿ ಕಂಡ ಸುಂಟರಗಾಳಿಯೇ ನಾಲ್ಕನೆಯದು. ಕಳೆದ 119 ವರುಷಗಳ ದಾಖಲೆಯ ಪುಟಗಳನ್ನು ತಿರುವಿದರೆ ಇದು 15ನೆಯದು. ಅಚ್ಚರಿ ಮತ್ತು ಆತಂಕ ಮೂಡಿಸಿದ ವಿಚಾರವೇನೆಂದರೆ ಒಂದೇ ವಾರದಲ್ಲಿ ಎರಡು ಸುಂಟರಗಾಳಿಗಳು ಎರಗಿದ್ದು. ಹಾಗಿದ್ದರೆ ಬರುವ ದಿನಗಳಲ್ಲಿ ಅವುಗಳ ಉಪಟಳ ಹೆಚ್ಚಬಹುದೇ? ಉತ್ತರ ನಿಸರ್ಗಕ್ಕೆ ಮಾತ್ರ ಗೊತ್ತು.</p>



<p>ಸುಂಟರಗಾಳಿಗಳು ಮುನ್ಸೂಚನೆ ನೀಡದೆ ಜರುಗಿ ಬಿಡುವಂತಹವು. ಮೂರ್ನಾಲ್ಕು ತಾಸುಗಳಲ್ಲಿ ರೂಪುಗೊಂಡು ತಮ್ಮ ಕೆಲಸ ಮುಗಿಸಿ ಜಾಗ ಖಾಲಿ ಮಾಡುತ್ತವೆ. ಹವಾಮಾನ ಇಲಾಖೆ ಸುಂಟರಗಾಳಿಗಳೇಳುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗದ ತನ್ನ ಪೇಚಾಟವನ್ನು ಆಗಾಗ ತೋಡಿಕೊಳ್ಳುತ್ತದೆ. ತೀರಾ ಸರಳವಾಗಿ ವಿವರಿಸುವುದಾದರೆ ತೇವಭರಿತ ಬಿಸಿಯಾದ ಗಾಳಿ ನೆಲಮಟ್ಟದಲ್ಲಿರುವಾಗ ಮೇಲೆ ಆಕಾಶದಲ್ಲಿ ಗುಡುಗು ಸಿಡಿಲಿನ ಮಳೆ (Thunderstorm) &nbsp;ತರಬಲ್ಲ ಮೋಡಗಳು ದಟ್ಟವಾಗಿ ಕವಿದಿರುತ್ತವೆ. ಈ ಮೋಡಗಳ ಕೂಡಿಕೆಯಲ್ಲಿರುವ ಥಂಡಿ ಒಣಗಾಳಿಯು ನೆಲದ ಕಡೆಗಿಳಿಯಲು ತವಕಿಸುವಾಗ ನೆಲಮಟ್ಟದ ಹಗುರ ಬಿಸಿಗಾಳಿಯು ವಾತಾವರಣದ ಮೇಲಿನ ಸ್ತರಗಳಿಗೆ ಏರಲು ತವಕಿಸುತ್ತದೆ. ಈ ಎರಡೂ ಗಾಳಿಗಳ ನಡುವೆ ತೀವ್ರ ತಿಕ್ಕಾಟ (Collision) ಜರುಗಿ ಸುಂಟರಗಾಳಿಗಳೆದ್ದು ಕುಣಿಯುತ್ತವೆ. ಇಂತಹ ಸನ್ನಿವೇಶಗಳು ಹೆಚ್ಚೆಚ್ಚು ಜರುಗಲು ಹವಾಮಾನ ಬದಲಾವಣೆಯು ಸಾಕಷ್ಟು ಅವಕಾಶಗಳನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ. ಮೊನ್ನೆ ಏಪ್ರಿಲ್ 1ರ ರಾತ್ರಿ ಅಮೆರಿಕಾದ ಏಳು ರಾಜ್ಯಗಳಲ್ಲಿ 40 ಕಡೆ ಸುಂಟರಗಾಳಿಗಳೆದ್ದು ಸಾಕಷ್ಟು ಹಾನಿ ಮಾಡಿರುವುದನ್ನು ನೋಡಿದರೆ ಹವಾಮಾನ ಪರಿಣಿತರ ಅನಿಸಿಕೆ ಸರಿಯೆನಿಸುತ್ತದೆ.</p>



<p>ನಾನಿಲ್ಲಿ ಹೆಚ್ಚು ಒತ್ತು ಕೊಟ್ಟು ಹೇಳಹೊರಟಿರುವುದು ಸುಂಟರಗಾಳಿಗಳು ಆಸ್ತಿಪಾಸ್ತಿಗೆ ಮಾಡುವ ಹಾನಿಯ ಜೊತೆಗೆ ಬೆಳೆಗಳಿಗೆ ಎಸಗುವ ಹಾನಿಯೂ ಮುಖ್ಯ ಎಂದು. ಈ ವರುಷ 11.218 ಕೋಟಿ ಟನ್ನುಗಳ ದಾಖಲೆ ಗೋಧಿಬೆಳೆಯನ್ನು ಕಾಣಬಹುದು ಎಂದು ಭಾರತ ಕಾತರದಿಂದ ಕಾಯುತ್ತಿರುವಾಗಲೇ ನಮ್ಮ ರೈತರಿಗೆ ಅದೆಷ್ಟು ಸವಾಲುಗಳು ಎದುರಾಗಬೇಕೊ ತಿಳಿಯದು.</p>



<p><strong>ಪಡುವಣದ ಅಡಚಣೆ</strong></p>



<figure class="wp-block-gallery has-nested-images columns-default is-cropped wp-block-gallery-10 is-layout-flex wp-block-gallery-is-layout-flex">
<figure class="wp-block-image size-large"><img loading="lazy" decoding="async" width="628" height="365" data-id="21067" src="https://peepalmedia.com/wp-content/uploads/2023/04/indian-farmer-Krishi-Jagaran.jpg" alt="" class="wp-image-21067" srcset="https://peepalmedia.com/wp-content/uploads/2023/04/indian-farmer-Krishi-Jagaran.jpg 628w, https://peepalmedia.com/wp-content/uploads/2023/04/indian-farmer-Krishi-Jagaran-300x174.jpg 300w, https://peepalmedia.com/wp-content/uploads/2023/04/indian-farmer-Krishi-Jagaran-150x87.jpg 150w" sizes="auto, (max-width: 628px) 100vw, 628px" /></figure>
</figure>



<p>ಪ್ರತೀ ವರುಷ ‘ಪಡುವಣದ ಅಡಚಣೆ’ (Western disturbance) ಎಂದು ಕರೆಯಲ್ಪಡುವ ವಿದ್ಯಮಾನವೊಂದು ಡಿಸೆಂಬರ್‌ ನಿಂದ ಮಾರ್ಚಿಯ ತನಕ ಜರುಗುತ್ತದೆ. ಆರ್ಕಟಿಕ್ ಕಡೆಯಿಂದ ಬೀಸಿ ಬರುವ ತಂಪು ಗಾಳಿ ಮತ್ತು ಉಷ್ಣವಲಯದಿಂದ ಬೀಸಿ ಬರುವ ಬಿಸಿ ಗಾಳಿ ಎರಡೂ ಬೆರೆತು ಹುಟ್ಟಿದ ಪಡುವಣ ಅಡಚಣೆಯ jet stream ಗಳು ತಿಂಗಳಿಗೆ ನಾಲ್ಕರಿಂದ ಆರು ಬಾರಿ (ನಾಲ್ಕು ತಿಂಗಳ ಗಡುವಿನಲ್ಲಿ ಒಟ್ಟು 16ರಿಂದ 24ರವರೆಗೆ) ಮೆಡಿಟರೇನಿಯನ್ ಕಡಲು, ಕಪ್ಪು ಕಡಲು ಮತ್ತು ಕ್ಯಾಸ್ಪಿಯನ್ ಕಡಲಿನಿಂದ ನೀರಾವಿಯ ಹೇರಳ ತೇವಾಂಶವನ್ನು ಪಡೆದುಕೊಂಡು ಇರಾನ್, ಅಫಘಾನಿಸ್ತಾನಗಳ ಮೇಲೆ ಹಾದು ಬಂದು ಪಶ್ಚಿಮ ಹಿಮಾಲಯದ ಹೆಬ್ಬೆಟ್ಟಗಳಿಗೆ ಮಂಜನ್ನು ತಂದು ಸುರಿದರೆ ಪಶ್ಚಿಮ, ವಾಯುವ್ಯ ಹಾಗೂ ಮಧ್ಯ ಭಾರತದ ರಾಜ್ಯಗಳಿಗೆ ಮಳೆಯನ್ನು ತರುತ್ತವೆ. ಚಳಿಗಾಲದ ಈ ಮಳೆ ಗೋಧಿ ಬೆಳೆಗೆ ಹಸನಾಗಿರುತ್ತದೆ. ಆದರೆ 2020ರಿಂದ ಈಚೆಗೆ ಬೆಚ್ಚಗಾಗುತ್ತಿರುವ ಆರ್ಕಟಿಕ್ ಪ್ರದೇಶದಿಂದ ಬರುವ ಗಾಳಿ ತಂಪಾಗಿರುವ ಬದಲು ಬಿಸಿಯಾಗತೊಡಗಿದ್ದು ಈ ಪಡುವಣ ಅಡಚಣೆಯ ಗಾಳಿಗಳ ವಲಸೆಯಲ್ಲಿ ಹಿಂದಿದ್ದ ಹದವನ್ನು ತಪ್ಪಿಸಿದೆ. ಈ ಚಳಿಗಾಲದಲ್ಲಂತೂ ಡಿಸೆಂಬರ್ ಮತ್ತು ಫೆಬ್ರವರಿಗಳಲ್ಲಿ ಪಡುವಣ ಅಡಚಣೆಯ ಗಾಳಿಯು ಒಂದೇ ಒಂದು ಮೋಡವನ್ನು ಭಾರತಕ್ಕೆ ತರಲಿಲ್ಲ. ಮಾರ್ಚ್ ಕೂಡಾ ಫೆಬ್ರವರಿಯಂತೆ ವಿಪರೀತ ತಾಪವನ್ನು ದಾಖಲಿಸಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಆದರೆ ಈ ಎಚ್ಚರಿಕೆಯನ್ನು ಅಣಕಿಸುವಂತೆ ಮಾರ್ಚಿಯಲ್ಲಿ ಪಡುವಣ ಅಡಚಣೆಯ ಗಾಳಿಗಳು ತಂದದ್ದು ದಂಡಿ ಮಳೆ. ಮಾರ್ಚಿಯಲ್ಲಿ ಸಾಮಾನ್ಯವಾಗಿ ಉತ್ತರ ಮತ್ತು ವಾಯುವ್ಯ ಭಾರತ ಮಳೆ ಕಾಣುವುದಿಲ್ಲ. ಆದರೆ ಈ ಬಾರಿ ಬಂದ ಮಳೆ ಬರಿಯ ಮಳೆಯಾಗಿರದೆ ಮತ್ತೆ ಮತ್ತೆ ಆಲಿಕಲ್ಲಿನೊಂದಿಗೆ ಎರಗಿದ ಹುಚ್ಚು ಮಳೆಯಾಗಿದ್ದಿತು. ಜಾಗತಿಕ ತಾಪ ಏರಿಕೆಗೆ ಬರುಬರುತ್ತ ಚಳಿಗಾಲ ಮೊಟಕುಗೊಂಡು ಬೇಸಗೆ ಹಿಗ್ಗುತ್ತಿರುವುದರಿಂದ ಉತ್ತರ ಆಫ್ರಿಕಾ, ಮಧ್ಯ ಏಷ್ಯಾ ಮತ್ತು ದಕ್ಷಿಣ ಯುರೋಪುಗಳ ಮೇಲಿನ ಪಡುವಣ ಅಡಚಣೆಯ ಗಾಳಿಯು ವಿಪರೀತ ಕಾದು ಮೆಡಿಟರೇನಿಯನ್, ಕಪ್ಪು ಮತ್ತು ಕ್ಯಾಸ್ಪಿಯನ್ ಕಡಲುಗಳಿಂದ ಹೆಚ್ಚೆಚ್ಚು ನೀರಾವಿಯ ತೇವಾಂಶವನ್ನು ಭಾರತದ ಕಡೆ ಹೊತ್ತು ತರುತ್ತಿದೆ. ಹೆಚ್ಚುವರಿ ನೀರಾವಿಯೆಂದರೆ ಹೆಚ್ಚು ಮಳೆ ಮತ್ತು ಹೆಚ್ಚು ಆಲಿಕಲ್ಲುಗಳು ತಾನೆ?</p>



<p>ಮಾರ್ಚಿಯಲ್ಲಿ ಬಿಸಿಯಲೆಗಳ ಕಾವನ್ನು ದಿಗಿಲುಗೊಂಡು ಎದುರು ನೋಡುತ್ತಿದ್ದ ಉತ್ತರ ಭಾರತೀಯರಿಗೆ ಸಿಕ್ಕಿದ್ದು ಮಳೆಯ ಮಾರಕ ಪೆಟ್ಟು. ಮಾರ್ಚ್ ಕಡೆಯ ಹೊತ್ತಿಗೆ ಇಲ್ಲವೆ ಏಪ್ರಿಲ್ ಮೊದಲ ವಾರದಲ್ಲಿ ಕಟಾವಾಗಬೇಕಿದ್ದ ಗೋಧಿಯ ಪೈರನ್ನು ಬಿರುಗಾಳಿಗಳ ಮುಂದಾಳ್ತನದಲ್ಲಿ ಬಿರುಸು ಮಳೆ ಮತ್ತು ಆಲಿಕಲ್ಲಿಗಳು ಮೇಲೇಳದಂತೆ ಜಪ್ಪಿ ಹಾಕಿದವು.</p>



<p>ಮಳೆಯ ಸಾಧ್ಯತೆ ಹೆಚ್ಚಿದಂತೆ ಹವಾಮಾನ ಇಲಾಖೆಯು ರೈತರಿಗೆ ಗೋಧಿ ಕಟಾವನ್ನು ಮುಂದೂಡಲು ಸೂಚಿಸಿತು. ನವೆಂಬರ್ ಮೊದಲಲ್ಲೆ ಬಿತ್ತನೆ ಮಾಡಿದವರು ಅದಾಗಲೆ ಮಾರ್ಚಿಯ ಶುರುವಿನಲ್ಲಿ ಕಟಾವು ಮುಗಿಸಿದ್ದರು. ಕಟಾವಾದ ಬಹುಪಾಲು ಬೆಳೆ&nbsp; ಹೊಲದಲ್ಲೆ ಇತ್ತು. ಇನ್ನೊಂದಷ್ಟು ಒಕ್ಕಲಾಟ ಮುಗಿಸಿ ಮಂಡಿಗೆ ತಲುಪಿಯಾಗಿತ್ತು. ಕಟಾವಾಗದೆ ಉಳಿದವು ಮಳೆಯ ತೇವಾಂಶ ಹೀರಿಕೊಂಡು ಬಲಿತ ಗೋಧಿಕಾಳಿನ ಗುಣಮಟ್ಟವನ್ನು ಕುಗ್ಗಿಸಿದವು. ನವೆಂಬರ್ ಕಡೆಯಲ್ಲಿ ಬಿತ್ತನೆಯಾದ ಗೋಧಿ ಮಾರ್ಚ್ ಕಡೆಯಲ್ಲಿ ಅಥವಾ ಏಪ್ರಿಲಿನ ಶುರುವಿನಲ್ಲಿ ಕಟಾವಾಗಬೇಕಿತ್ತು. ಒಟ್ಟು ಎಲ್ಲವೂ ಗೋಜಲಾಗಿತ್ತು. ಮಾರ್ಚಿಯ ಮಳೆ ರೈತರ ಸುಗ್ಗಿಯ ಸಂತೋಷವನ್ನು ಕಿತ್ತುಕೊಂಡಿತ್ತು. ಬಹುಶಃ ಉತ್ತರ ಭಾರತದ ಗೋಧಿ ಬೆಳೆಗಾರರು ತಮ್ಮ ಸಾಗುವಳಿಯ ಚರಿತ್ರೆಯಲ್ಲೆ ಮಾರ್ಚಿಯಲ್ಲಿ ಇಷ್ಟು ಆತಂಕ, ಅಂಜಿಕೆಗೆ ಈಡಾದದ್ದೇ ಇರಲಿಲ್ಲವೇನೊ. ಪಂಜಾಬ್, ಹರ್ಯಾಣ ಮತ್ತು ರಾಜಸ್ತಾನಗಳಲ್ಲಂತೂ ರೈತರು ಬಹಳ ಉದ್ವಿಗ್ನದಲ್ಲೆ ಮಾರ್ಚಿಯ ದಿನಗಳನ್ನು ಕಳೆದರು.</p>



<figure class="wp-block-gallery has-nested-images columns-default is-cropped wp-block-gallery-11 is-layout-flex wp-block-gallery-is-layout-flex">
<figure class="wp-block-image size-large"><img loading="lazy" decoding="async" width="1024" height="625" data-id="21069" src="https://peepalmedia.com/wp-content/uploads/2023/04/crop-damage-Down-to-earth.jpg" alt="" class="wp-image-21069" srcset="https://peepalmedia.com/wp-content/uploads/2023/04/crop-damage-Down-to-earth.jpg 1024w, https://peepalmedia.com/wp-content/uploads/2023/04/crop-damage-Down-to-earth-300x183.jpg 300w, https://peepalmedia.com/wp-content/uploads/2023/04/crop-damage-Down-to-earth-768x469.jpg 768w, https://peepalmedia.com/wp-content/uploads/2023/04/crop-damage-Down-to-earth-150x92.jpg 150w, https://peepalmedia.com/wp-content/uploads/2023/04/crop-damage-Down-to-earth-696x425.jpg 696w" sizes="auto, (max-width: 1024px) 100vw, 1024px" /></figure>
</figure>



<p><strong>ಸರಣಿ ಸಿಕ್ಕುಗಳು</strong></p>



<p>ಮಾರ್ಚಿಯ ಮೊದಲ ವಾರದಲ್ಲೆ ಪಡುವಣ ಅಡಚಣೆಯಿಂದ ಪುಸಲಾಯಿಸಲ್ಪಟ್ಟ, ತಾಸಿಗೆ 30 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಬೀಸುತ್ತಿದ್ದ ನೆಲಮಟ್ಟದ ಹೊಯ್ಗಾಳಿ ಪಂಜಾಬ್, ಹರ್ಯಾಣದ ಹಲವು ಜಿಲ್ಲೆಗಳಲ್ಲಿ ಹಾಲುಗಟ್ಟುತ್ತಿದ್ದ ಗೋಧಿತೆನೆಗಳನ್ನು ಒಣಗಿಸತೊಡಗಿತು. ಒಣಗಿದ ಕಾಳುಗಳು ಸಿಪ್ಪೆಯಲ್ಲೆ ಬಿರುಕುಬಿಟ್ಟವು.</p>



<p>ಹೊಯ್ಗಾಳಿಯ ನಂತರ ಹವಾಮಾನ ಇಲಾಖೆ ಆಲಿಕಲ್ಲಿನ ಮಳೆಗಳ ಬಗ್ಗೆ ಮುನ್ಸೂಚನೆ ನೀಡಿತು (ಈ ವರುಷ ವಿಪರೀತ ತಾಪವನ್ನು ಕಂಡ ಫೆಬ್ರವರಿಯಲ್ಲಿ ಹದ ಮಳೆಯಾಗಿದ್ದಿದ್ದರೆ ಬೆಳವಣಿಗೆಯ ನಡುಹಂತದಲ್ಲಿದ್ದ ಗೋಧಿ ಪೈರಿಗೆ ಒಳಿತಾಗುತ್ತಿತ್ತೇನೊ. ಆದರೆ ಹಾಗಾಗಲಿಲ್ಲ). ಮುಂದೆ ಹಲವು ದಿನ ಪಂಜಾಬ್, ಹರ್ಯಾಣ, ಉತ್ತರಪ್ರದೇಶ, ಹಿಮಾಚಲ ಪ್ರದೇಶ, ರಾಜಸ್ತಾನಗಳಲ್ಲಿ ವ್ಯಾಪಕ ಮಳೆಯೊಂದಿಗೆ ಸುರಿದ ಆಲಿಕಲ್ಲು 24 ತಾಸಿಗೂ ಹೆಚ್ಚು ಕಾಲ ನೆಲವನ್ನು ಅಚ್ಚ ಬಿಳಿಯಾಗಿಸಿಬಿಟ್ಟಿತ್ತು. ಆಲಿಕಲ್ಲಿನಡಿ ಜಜ್ಜಿಹೋದ ಗೋಧಿ ಬೆಳೆಯ ‘ಅಳು’ವನ್ನು ಬೆಳೆದ ರೈತ ಮಾತ್ರ ಕೇಳಿಸಿಕೊಳ್ಳಬಹುದಿತ್ತು. ಹರ್ಯಾಣದ ಚೌರಮಸ್ತಪುರ ಹಳ್ಳಿಯ ಗುರುವಿಂದರ್ ಸಿಂಗ್ 35 ಎಕರೆಯಲ್ಲಿ ಗೋಧಿ ಬೆಳೆದಿದ್ದರು. ಮಳೆ ಗಾಳಿಗಳು ಅವರ ಕಠಿಣ ದುಡಿಮೆಯ 20 ಎಕರೆಯಲ್ಲಿದ್ದ ಅರೆ ಬಲಿತು ನಿಂತಿದ್ದ ಗೋಧಿಬೆಳೆಯನ್ನು ಮುರಿದು ಮಲಗಿಸಿದವು. ಇನ್ನುಳಿದಿದ್ದರಲ್ಲಿ ಬರುವ ಇಳುವರಿಯು ಸಾಗುವಳಿಯ ಪೂರ್ತಿ ವೆಚ್ಚವನ್ನು ತುಂಬಿಕೊಡುವುದೊ ಇಲ್ಲವೊ ಗೊತ್ತಿಲ್ಲ. ಮತ್ತೊಬ್ಬ ರೈತ ಕುರ್ಬಾನಪುರದ ಕರಮ್ ಸಿಂಗ್ ಬೆಳೆದ ಬಹುಪಾಲು ಗೋಧಿ ನೆಲಕ್ಕೊರಗಿದ್ದಲ್ಲದೆ ಈಗಾಗಲೆ ಕಟಾವು ಮಾಡಿ ಒಂದೆಡೆ ಒಟ್ಟಿದ್ದ ಸಾಸಿವೆಯ ಗುಪ್ಪೆಗಳು ಪೂರ್ತಿ ಮಳೆಯಲ್ಲಿ ತೊಯ್ದು ನಿರುಪಯುಕ್ತವಾಗಿ ಹೋದವು. ಅಖೇರಿ ಮದನಪುರದ ರೈತ ಮಹಿಳೆ ಪರ್ವೀನ್ ʼನನ್ನ 12 ಎಕರೆಯಲ್ಲಿ ಬೆಳೆದಿದ್ದ ಅಷ್ಟೂ ಗೋಧಿ ನಾಶವಾಗಿದೆ. ಸರ್ಕಾರ ನೆರವಾಗದಿದ್ದರೆ ನಾನೂ ಬರ್ಬಾದ್ ಆದಂತೆ’ ಎಂದು ಕಣ್ಣೀರಿಟ್ಟಿದ್ದಾರೆ. ಕನಿನಾ ಹೋಬಳಿಯ ಎಲ್ಲ 53 ಹಳ್ಳಿಗಳ ಗೋಧಿ ಹೊಲಗಳಿಗೆ ಪೂರ್ತಿ ಹಾನಿಯಾಗಿದೆ. ಕರ್ನಾಲ್ ಜಿಲ್ಲೆಯಲ್ಲಿ 1.5 ಲಕ್ಷ ಹೆಕ್ಟೇರ್ ಪ್ರದೇಶದ ಗೋಧಿ ಹೊಲ ನಾಶವಾಗಿದ್ದರೆ, ಅಂಬಾಲ, ಮಹೇಂದ್ರಘರ್, ಪಾನಿಪತ್ ಜಿಲ್ಲೆಗಳಲ್ಲಿ ಒಟ್ಟು 56 ಸಾವಿರ ಹೆಕ್ಟೇರ್ (1.4 ಲಕ್ಷ ಎಕರೆಗಳು) ಪ್ರದೇಶದ ಗೋಧಿಪೈರು ಹಾಗೂ ಸಾಸಿವೆ ನೆಲಸಮವಾಗಿರುವುದರ ಕುರಿತು The Tribune ಪತ್ರಿಕೆ ಹಾನಿಯ ತಾಣಗಳಿಂದಲೇ ನೇರ ವರದಿಗಳನ್ನು ನೀಡಿದೆ. ಮಹೇಂದ್ರಘರ್ ಜಿಲ್ಲೆಯೊಂದೆ ಶೇಕಡಾ 50ರಷ್ಟು ಗೋಧಿ ಮತ್ತು ಶೇಕಡಾ 75ರಷ್ಟು ಸಾಸಿವೆ ಬೆಳೆ ನಾಶವನ್ನು ದಾಖಲಿಸಿದೆ.</p>



<figure class="wp-block-gallery has-nested-images columns-default is-cropped wp-block-gallery-12 is-layout-flex wp-block-gallery-is-layout-flex">
<figure class="wp-block-image size-large"><img loading="lazy" decoding="async" width="761" height="1024" data-id="21068" src="https://peepalmedia.com/wp-content/uploads/2023/04/SADHU-SINGH-IMAGE-COURTESY-THE-TRIBUNE-09.04.2023-761x1024.jpg" alt="" class="wp-image-21068" srcset="https://peepalmedia.com/wp-content/uploads/2023/04/SADHU-SINGH-IMAGE-COURTESY-THE-TRIBUNE-09.04.2023-761x1024.jpg 761w, https://peepalmedia.com/wp-content/uploads/2023/04/SADHU-SINGH-IMAGE-COURTESY-THE-TRIBUNE-09.04.2023-223x300.jpg 223w, https://peepalmedia.com/wp-content/uploads/2023/04/SADHU-SINGH-IMAGE-COURTESY-THE-TRIBUNE-09.04.2023-768x1033.jpg 768w, https://peepalmedia.com/wp-content/uploads/2023/04/SADHU-SINGH-IMAGE-COURTESY-THE-TRIBUNE-09.04.2023-150x202.jpg 150w, https://peepalmedia.com/wp-content/uploads/2023/04/SADHU-SINGH-IMAGE-COURTESY-THE-TRIBUNE-09.04.2023-300x404.jpg 300w, https://peepalmedia.com/wp-content/uploads/2023/04/SADHU-SINGH-IMAGE-COURTESY-THE-TRIBUNE-09.04.2023-696x936.jpg 696w, https://peepalmedia.com/wp-content/uploads/2023/04/SADHU-SINGH-IMAGE-COURTESY-THE-TRIBUNE-09.04.2023.jpg 770w" sizes="auto, (max-width: 761px) 100vw, 761px" /></figure>
</figure>



<p class="has-text-align-center"><strong>ಸಾಧುಸಿಂಗ್</strong> </p>



<p><strong>ನೀರಾವರಿ ಕಾಲುವೆಯೆ ಸಾವಿಗೆ ಸಾಕ್ಷಿಯಾದಾಗ</strong></p>



<p class="has-cyan-bluish-gray-background-color has-background">ಇದೇ ಏಪ್ರಿಲ್ 8ರಂದು ಪಂಜಾಬಿನ ಮುಕ್ತಸರ್ ಜಿಲ್ಲೆಯ ಭಲ್ಲಾಯಿನ ಹಳ್ಳಿಯ 65 ವರುಷದ&nbsp; ಸಾಧುಸಿಂಗ್ ಸಂಜೆಯಿಂದ ಕಾಣೆಯಾದರು. ಮಾರನೇ ದಿನ ಅವರ ಕಳೇಬರ ಮತ್ತು ಅವರು ಓಡಿಸುತ್ತಿದ್ದ ಮೋಟಾರ್ ಬೈಕು ಎರಡೂ ರಾಜಸ್ತಾನಕ್ಕೆ ಅವರ ಹಳ್ಳಿಯ ಮೂಲಕ ಹಾದುಹೋಗುವ Rajasthan Feeder Canal (ಇಂದಿರಾ ಗಾಂಧಿ ಕಾಲುವೆ)ನಲ್ಲಿ ಸಿಕ್ಕವು. ಕಣ್ಣಾರೆ ಕಂಡವರ ಹೇಳಿಕೆಯನ್ನು ಉಲ್ಲೇಖಿಸುವ ಪೊಲೀಸ್ ದಾಖಲೆಗಳ ಪ್ರಕಾರ ಸಾಧುಸಿಂಗ್ ಮೋಟಾರ್‌ ಬೈಕನ್ನು ನೇರವಾಗಿ ಕಾಲುವೆಯ ನೀರಿಗೇ&nbsp; ಚಲಾಯಿಸಿ ಮುಳುಗಿ ಕೊನೆಯುಸಿರೆಳೆದಿದ್ದರು. ಇದು ಆಕಸ್ಮಿಕ ಸಾವಾಗಿರಲಿಲ್ಲ. ಆತ್ಮಹತ್ಯೆಯಾಗಿತ್ತು. ಆತ್ಮಹತ್ಯೆಗೆ ಕಾರಣ ಅವರ ಗೋಧಿಹೊಲಗಳಲ್ಲಿ ಬಿತ್ತನೆಯಾಗಿತ್ತು. ಸಾಧುಸಿಂಗ್ 12 ಎಕರೆಗಳ ಜಮೀನಿನ ಮಾಲೀಕ. ಜೊತೆಗೆ ಈ ಬಾರಿ 25 ಎಕರೆಗಳಷ್ಟು ಜಮೀನನ್ನು ಬೇರೆಯವರಿಂದ ಗೇಣಿಗೆ ಪಡೆದು ಒಟ್ಟು 37 ಎಕರೆಯಲ್ಲಿ ಗೋಧಿ ಬೆಳೆದಿದ್ದರು. ಇಷ್ಟು ಜಮೀನಿನಲ್ಲಿ ಗೋಧಿ ಬೆಳೆಯಲು 7 ಲಕ್ಷ ಸಾಗುವಳಿ ಸಾಲವನ್ನು ಪಡೆದಿದ್ದರು. ಹುಚ್ಚು ಮಳೆ ಮತ್ತು ಆಲಿಕಲ್ಲುಗಳು ಬಹುತೇಕ ಅವರ ಗೋಧಿ ಬೆಳೆಯ ಹುಟ್ಟಡಗಿಸಿದವು. ಕಂಗಾಲಾದ ಸಾಧುಸಿಂಗ್ ಆತ್ಮಹತ್ಯೆಗೆ ಶರಣಾದರು. ಪಂಜಾಬ್ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಗೋಧಿಬೆಳೆ ಹಾನಿಯನ್ನು ದಾಖಲಿಸಿದೆ. ರಾಜ್ಯದ ಎಲ್ಲೆಡೆ&nbsp; ರೈತಾಪಿ ಜನರ ನಡುವೆ ನಿರುತ್ಸಾಹ ಮಡುಗಟ್ಟಿದೆ. ಈ ವರುಷದ ಬೈಶಾಖಿ ಹಬ್ಬ ಕಳೆಗುಂದಿದೆ. ಬೈಶಾಖಿ ಉಲ್ಲಾಸದ ಸುಗ್ಗಿಯ ಜೊತೆ ತಳುಕು ಹಾಕಿಕೊಂಡ ಹಬ್ಬ<strong>.</strong></p>



<p>ಇತ್ತ ಹರ್ಯಾಣ ಕಳೆದ ವರುಷದಂತೆ ಈ ವರುಷವೂ ವಿಫಲ ಇಳುವರಿಯ ಕಡೆ ಜಾರುತ್ತಿರುವಾಗ ಅತ್ತ ಪಂಜಾಬ್ ಕೂಡಾ ಹಾನಿಯ ಮೇಲೆ ಹಾನಿಯನ್ನು ದಾಖಲಿಸಿತು. ಪಂಜಾಬಿನಲ್ಲಿ ಈ ವರುಷ 34.9 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಗೋಧಿಯನ್ನು ಬೆಳೆಯಲಾಗಿದೆ. ಸುಂಟರಗಾಳಿಗಳು ನರ್ತಿಸಿದ ಫಾಜಿಲ್ಕ ಜಿಲ್ಲೆ ಹೆಚ್ಚು ಹಾನಿಯನ್ನು ಕಂಡಿದೆ. ಮುಕ್ತಸರ್ ಜಿಲ್ಲೆಯಲ್ಲಿ 90 ಸಾವಿರ ಹೆಕ್ಟೇರ್ ಗೋಧಿಹೊಲ ನೆಲಕಚ್ಚಿದ್ದರೆ ರೊಪಾರ್ ಜಿಲ್ಲೆಯಲ್ಲಿ ಬೆಳೆನಾಶ 30 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಹರಡಿಹೋಗಿದೆ. ಲೂಧಿಯಾನ ಜಿಲ್ಲೆಯಲ್ಲಿ ಕಾಳು ಹಿಟ್ಟುಗಟ್ಟುತ್ತಿದ್ದ ನಿರ್ಣಾಯಕ ಹಂತದಲ್ಲೆ 25 ಸಾವಿರ ಹೆಕ್ಟೇರ್ ನಲ್ಲಿದ್ದ ಗೋಧಿಬೆಳೆ ನಾಶವಾಗಿದೆ. ಜಲಂಧರ್ ಜಿಲ್ಲೆಯಲ್ಲಿ ಒಟ್ಟು ಬೇಸಾಯಕ್ಕೆ ಒಳಪಟ್ಟ ಗೋಧಿಬೆಳೆಯಲ್ಲಿ ಶೇಕಡಾ 30ರಷ್ಟು ನಾಶವಾಗಿದೆ. ತಗ್ಗಿರುವ ಹೊಲಗಳಲ್ಲಿ ಮಳೆಯ ನೀರು ದಿನಗಟ್ಟಲೆ ನಿಂತು ಗೋಧಿ ಗಿಡಗಳು ಕೊಳೆತು ಹೋಗಿವೆ. ಒಟ್ಟಾರೆ ಈ ವರುಷ ಪಂಜಾಬಿನಲ್ಲಿ ಅಂದಾಜಿಸಿದ ಇಳುವರಿಯಲ್ಲಿ ಶೇಕಡಾ 10-15ರಷ್ಟು ಕಡಿಮೆಯಾಗ ಬಹುದಾಗಿದೆ (ಪಂಜಾಬ್ ಮತ್ತು ಹರ್ಯಾಣಗಳಲ್ಲಿ ಸರ್ಕಾರದಿಂದ ಪರಿಹಾರ ಕೋರಿ ಪೋರ್ಟಲ್‍ನಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ರೈತರು ಕೋರಿಕೆ ಸಲ್ಲಿಸುತ್ತಿದ್ದಾರೆ).</p>



<p>ಮಾರ್ಚ್ ಮೂರನೇ ವಾರದಲ್ಲಿ ರಾಜಸ್ತಾನದ ಗೋಧಿ ಹೊಲಗಳು ದಾಳಿಗೊಳಗಾದವು. ಹಾನಿ ಎಷ್ಟರ ಮಟ್ಟಿಗಿತ್ತೆಂದರೆ ಬುಂದಿ ಜಿಲ್ಲೆಯ ಬಜಾಡ್ ಹಳ್ಳಿಯ ರೈತ ಪೃಥ್ವಿರಾಜ್ ಬೇರ್ವಾ ಮೂರ್ನಾಲ್ಕು ದಿನ ತಾಸಿಗೆ 40 ಕಿ.ಮೀ.ಗಿಂತಲೂ ವೇಗವಾಗಿ ಬೀಸಿದ ಬಿರುಗಾಳಿ ಮತ್ತು ಮಳೆಗೆ ತಮ್ಮ ಗೋಧಿ ಬೆಳೆ ಮಕಾಡೆ ಮಲಗಿದ್ದನ್ನು ಕಂಡು ಕುಸಿದು ಹೋದರು. ಮಳೆ ನಿಂತ ಮಾರನೇ ದಿನ ಕಡೆಯ ಬಾರಿ ಹೊಲಕ್ಕೊಮ್ಮೆ ಭೇಟಿಕೊಟ್ಟು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡರು. ರಾಜಸ್ತಾನದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಒಂದು ಅಡಿಯಷ್ಟು ದಪ್ಪನಾಗಿ ಬಿದ್ದಿತ್ತು. ಹೊಲಗಳೆಲ್ಲ ಬೆಳ್ಳಗೆ ಬೆಳಗುತ್ತಿದ್ದವು. ರಾಜಸ್ತಾನದಲ್ಲಿ ಗೋಧಿಯಲ್ಲದೆ ಬಾರ್ಲಿ, ಸಾಸಿವೆ, ಕಡಲೆಗಳಿಗೂ ಬಹಳ ಹಾನಿಯಾಗಿದೆ. ಈ ನಡುವೆ ರಾಜಸ್ತಾನ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಗಳಲ್ಲಿ ಒಟ್ಟು ನೆಲಕಚ್ಚಿ ನಾಶವಾದ ಗೋಧಿಹೊಲಗಳ ವಿಸ್ತೀರ್ಣ 5.23 ಲಕ್ಷ ಹೆಕ್ಟೇರ್ ಗಳಷ್ಟು ಎಂದು ಸರ್ಕಾರಿ ಸರ್ವೆಗಳು ಲೆಕ್ಕಹಾಕಿವೆ. ಹೆಚ್ಚು ಹಾನಿಗೊಳಗಾದ ಪಂಜಾಬ್ ಮತ್ತು ಹರ್ಯಾಣಗಳಿಂದ ಆಖೈರಾದ ಲೆಕ್ಕ ಇನ್ನೂ ಬರಬೇಕಿದೆ.</p>



<p>ಹವಾಮಾನದ ನಾಟಕೀಯ ತ್ವರಿತ ಬದಲಾವಣೆಗಳು ಇನ್ನೂ ಏನೇನು ಆಘಾತಗಳನ್ನು ನಮ್ಮ ರೈತರಿಗೆ ತರಲಿಕ್ಕಿದೆಯೊ ಗೊತ್ತಿಲ್ಲ.</p>



<p><strong>(ಈ ಲೇಖನದ ಮುಂದಿನ ಭಾಗ ನಾಳೆ (25) ಪ್ರಕಟವಾಗಲಿದೆ)</strong></p>



<p><strong>ಕೆ.ಎಸ್.ರವಿಕುಮಾರ್, ಹಾಸನ</strong></p>



<p>ಲೇಖಕರು. ಮುಖ್ಯವಾಗಿ ವಿಜ್ಞಾನ ಬರಹಗಾರರು. ಪರಿಸರದ ಮೇಲೆ ವಿಶೇಷ ಆಸಕ್ತಿ. ಚಾರಣ ಹವ್ಯಾಸ.</p>



<p>ಮೊ : 9964604297</p>



<p class="has-vivid-cyan-blue-color has-text-color">ಇದನ್ನೂ ಓದಿ-<a href="http://ಅಮೆರಿಕಾ ಎಂಬ ಬಲೂನಿಗೆ ಹವಾಮಾನದ ಮಿಸೈಲುಗಳು| ಬಾಂಬ್ ಸೈಕ್ಲೋನ್" target="_blank" rel="noreferrer noopener">http://ಅಮೆರಿಕಾ ಎಂಬ ಬಲೂನಿಗೆ ಹವಾಮಾನದ ಮಿಸೈಲುಗಳು| ಬಾಂಬ್ ಸೈಕ್ಲೋನ್</a></p>
]]></content:encoded>
					
		
		
			</item>
		<item>
		<title>ನಮ್ಮ ಜಿಗಿತ ಮಳೆಗಾಲದಿಂದ ನೇರ ಬೇಸಗೆಯತ್ತ&#8230;!</title>
		<link>https://peepalmedia.com/our-leap-from-rainy-season-to-straight-summer/</link>
		
		<dc:creator><![CDATA[K S Ravikumar]]></dc:creator>
		<pubDate>Wed, 22 Mar 2023 10:18:02 +0000</pubDate>
				<category><![CDATA[ಇಕಾಲಜಿ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=20344</guid>

					<description><![CDATA[ಬಹುಶಃ ಜಗತ್ತಿನಲ್ಲಿ ಇನ್ನು ಮುಂದೆ ಉಳಿಯುವುದು ಎರಡೇ ಕಾಲವೇನೊ, ಒಂದು ಬೇಸಗೆ ಮತ್ತೊಂದು ಮಳೆಗಾಲ. ಇವೆರಡೂ ಬೇರೆಬೇರೆಯಾಗಿ ಬರುವುದಿಲ್ಲ. ಒಂದರೊಳಗೊಂದು ಬೆರೆತು ಬರುತ್ತವೆ. ರೈತರು ಹೇಗೆ ಈ ಅತಿರೇಕಗಳಿಗೆ ಹೊಂದಿಕೊಳ್ಳಬೇಕೊ ಗೊತ್ತಿಲ್ಲ. ಕೆ ಎಸ್‌ ರವಿಕುಮಾರ್‌ ಬರೆದಿರುವ ʼಬಿಸಿಬಿಸಿ ಫೆಬ್ರವರಿ &#8211; ಚಳಿಗಾಲ ಪರಾರಿʼ ಲೇಖನದ ಕೊನೆಯ ಸರಣಿ. ಗೋಧಿಯಷ್ಟೆ ಅಲ್ಲ ಗೋಧಿ ಮಾತ್ರವಲ್ಲ, ಬೇಸಗೆಯಲ್ಲಿ ಇಳುವರಿ ಕೊಡುವ ಯಾವುದೇ ಬಗೆಯ ಆಹಾರ, ವಾಣಿಜ್ಯ ಬೆಳೆಗಳು ಮತ್ತು ಹಣ್ಣು, ತರಕಾರಿ, ಬೇಳೆಕಾಳುಗಳು ಕೂಡಾ ಬಿಸಿಯಲೆಗಳಿಗೆ ತತ್ತರಿಸುತ್ತವೆ. ಅತಿತಾಪಕ್ಕೆ [&#8230;]]]></description>
										<content:encoded><![CDATA[
<p class="has-vivid-red-color has-white-background-color has-text-color has-background">ಬಹುಶಃ ಜಗತ್ತಿನಲ್ಲಿ ಇನ್ನು ಮುಂದೆ ಉಳಿಯುವುದು ಎರಡೇ ಕಾಲವೇನೊ, ಒಂದು ಬೇಸಗೆ ಮತ್ತೊಂದು ಮಳೆಗಾಲ. ಇವೆರಡೂ ಬೇರೆಬೇರೆಯಾಗಿ ಬರುವುದಿಲ್ಲ. ಒಂದರೊಳಗೊಂದು ಬೆರೆತು ಬರುತ್ತವೆ. ರೈತರು ಹೇಗೆ ಈ ಅತಿರೇಕಗಳಿಗೆ ಹೊಂದಿಕೊಳ್ಳಬೇಕೊ ಗೊತ್ತಿಲ್ಲ. ಕೆ ಎಸ್‌ ರವಿಕುಮಾರ್‌ ಬರೆದಿರುವ ʼಬಿಸಿಬಿಸಿ ಫೆಬ್ರವರಿ &#8211; ಚಳಿಗಾಲ ಪರಾರಿʼ ಲೇಖನದ ಕೊನೆಯ ಸರಣಿ.</p>



<p><strong>ಗೋಧಿಯಷ್ಟೆ ಅಲ್ಲ</strong></p>



<p>ಗೋಧಿ ಮಾತ್ರವಲ್ಲ, ಬೇಸಗೆಯಲ್ಲಿ ಇಳುವರಿ ಕೊಡುವ ಯಾವುದೇ ಬಗೆಯ ಆಹಾರ, ವಾಣಿಜ್ಯ ಬೆಳೆಗಳು ಮತ್ತು ಹಣ್ಣು, ತರಕಾರಿ, ಬೇಳೆಕಾಳುಗಳು ಕೂಡಾ ಬಿಸಿಯಲೆಗಳಿಗೆ ತತ್ತರಿಸುತ್ತವೆ. ಅತಿತಾಪಕ್ಕೆ ಅವುಗಳ ಚಿಗುರು ಮುರುಟಿ ಹೋಗಬಹುದು. ಹೂವುಗಳು ಪರಾಗಸ್ಪರ್ಶದಿಂದ fertilize ಆಗುವ ಮುನ್ನವೆ ಒಣಗಿ ಉದುರಿ ಹೋಗಬಹುದು. ಮಿಡಿ, ಹೀಚು ಕಾಯಿಗಳು ಬಲಿಯದೆ ಸೊರಗಿ ಹೋಗಬಹುದು. ವಾರಗಟ್ಟಲೆ ತಾಪ ಮುಂದುವರಿದರೆ ಗಿಡಮರಗಳೇ ಗಾರೆದ್ದು ಹೋಗಬಹುದು. ಪರಾಗಸ್ಪರ್ಶ ನಡೆಸುವ ಕೀಟಗಳು ಅತಿತಾಪ ತಾಳದೆ ಅಳಿದು ಹೋಗಬಹುದು. ಅಥವಾ ಉಳಿದುಕೊಂಡರೂ ಬಿರುಬಿಸಿಲಿಗೆ ಬಾಡಿ ಬಗ್ಗಿದ ಹೂವುಗಳಲ್ಲಿ ಮಕರಂದ ಆವಿಯಾಗಿ ಹೋಗಿ ಹಸಿದು ಸಾಯಬಹುದು. ಈಗಾಗಲೆ ಈ ರೀತಿಯ ಬೇಕಿರದ ಬದಲಾವಣೆಗಳು ವರದಿಯಾಗುತ್ತಿವೆ.</p>



<p>ಕಾಶ್ಮೀರ ತಂಪಿಗೆ ಹೆಸರಾದ ತಾಣ. ಬೇಸಗೆ ಅಲ್ಲಿ ಬಿರುಸಾಗಿರುವುದಿಲ್ಲ. ಆದರೆ ಕಳೆದ ಕೆಲವು ವರುಷಗಳಿಂದ ಹವಾಮಾನ ಅಲ್ಲಿಯೂ ಬದಲಾಗಿದೆ. ಬಿಸಿಲಿನ ಹದನ ಅಲ್ಲಿ ಕಂಗೆಡಿಸುವ ಮಟ್ಟಕ್ಕೇರಿದೆ. ಜಗತ್ತಿನ ಅತಿ ದುಬಾರಿ ಸಂಬಾರ ಪದಾರ್ಥ ಎನಿಸಿರುವ ಕೇಸರಿ ಬೆಳೆಯುವ ಕಾಶ್ಮೀರಿಗಳು ಬಿಸಿಲಿನ ಬೇಗೆಗೆ ಬೆಬ್ಬರಬಿದ್ದು ಹೋಗಿದ್ದಾರೆ. ಹೊರಾಂಗಣದಲ್ಲಿ ಕೇಸರಿ ಬೆಳೆಯುವುದು ತ್ರಾಸವಾಗಿದೆ. ಸುಡುಬಿಸಿಲಿನ ಹೊಡೆತಕ್ಕೆ ಕೇಸರಿ ಗಿಡಗಳು ಬಾಡಿ ಒರಗುತ್ತಿವೆ. ಕೇಸರಿ ಸಾಗುವಳಿ ವರುಷದಿಂದ ವರುಷಕ್ಕೆ ಕುಗ್ಗುತ್ತಿದೆ. 1996ರಲ್ಲಿ 5,707 ಹೆಕ್ಟೇರ್ ಹರಹಿನಲ್ಲಿ ಸಾಗುವಳಿಯಾಗುತ್ತಿದ್ದ ಕೇಸರಿ 2020ರಲ್ಲಿ 1,116 ಹೆಕ್ಟೇರಿಗೆ ಕುಸಿಯಿತು. ಕಳೆದ ಇಪ್ಪತ್ತು ವರುಷಗಳಲ್ಲಿ ಇಳುವರಿ ವರುಷಕ್ಕೆ 16 ಮೆಟ್ರಿಕ್ ಟನ್ನಿನಿಂದ 5.6 ಮೆಟ್ರಿಕ್ ಟನ್ನಿಗೆ ಇಳಿದಿದೆ. ಕಾಶ್ಮೀರಿಗಳ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ)ಕ್ಕೆ ಕೇಸರಿಯ ಕೊಡುಗೆ ಮುಖ್ಯವಾದದ್ದು. ಹವಾಮಾನ ಬದಲಾವಣೆಯ ಹೊಡೆತದಿಂದ ಕೇಸರಿ ಸಾಗುವಳಿ ನೆಲ ಕಚ್ಚದಂತೆ ತಡೆಯಲು <em>Sher-e-Kashmir University of Agricultural Sciences and Technology (SKUAST)</em> ಒಳಾಂಗಣದಲ್ಲಿ ಕೇಸರಿ ಬೆಳೆಯುವ ಹೊಸ ವಿಧಾನವನ್ನು ರೈತರಿಗೆ ಪರಿಚಯಿಸಿದೆ. ಸಧ್ಯಕ್ಕೆ ಇದು ಪ್ರಯೋಗದ ಹಂತದಲ್ಲಿದ್ದರೂ ಬೆಳೆಗಾರರಲ್ಲಿ ಹತಾಶೆಯನ್ನು ತಗ್ಗಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಮುಕ್ತ ಪರಿಸರದಲ್ಲಿ ಹೆಚ್ಚು ಇಳುವರಿ ತೆಗೆದಂತೆ ಒಳಾಂಗಣದಲ್ಲಿ ತೆಗೆಯಲು ಜಾಗದ ಮಿತಿ ಅಡ್ಡಬರುತ್ತದೆ. ಒಳಾಂಗಣದಲ್ಲಿ ತಾಪವನ್ನು ಒಂದು ಗೊತ್ತಾದ ಮಟ್ಟದಲ್ಲಿರಿಸಲು ಪೂರಕ ವ್ಯವಸ್ಥೆ ಮಾಡಿಕೊಳ್ಳ ಬೇಕಾಗುತ್ತದೆ. ಇದಕ್ಕೆಲ್ಲ ಹೆಚ್ಚುವರಿ ಖರ್ಚು ಬರುತ್ತದೆ. ಒಟ್ಟಾರೆ ಯಾವುದೇ ಬಗೆಯ ಬೇಸಾಯ ಈವರೆಗೆ ನಡೆದ ಹಾಗೆ ಮುಂದಿರುವುದಿಲ್ಲ.</p>



<p>&nbsp;ಬಿಸಿಯಲೆಗಳ ಪರಿಣಾಮಗಳು ಬೇಸಾಯದ ಮೇಲಷ್ಟೆ ಅಲ್ಲ, ಹೈನುಗಾರಿಕೆ ಮತ್ತು ಕೋಳಿಸಾಕಣೆಗಳ ಮೇಲೂ ಆಗುತ್ತವೆ. ಬಿಸಿಯಲೆಗಳಿಂದ ಕರಾವಿನ ಜಾನುವಾರುಗಳ ದೇಹದ ತಾಪ 0.5 ರಿಂದ 3.5 ಡಿಗ್ರಿ ಸೆಲ್ಸಿಯಸ್‍ಗಳಷ್ಟು ಹೆಚ್ಚಿದರೆ ಹಾಲಿನ ಉತ್ಪತ್ತಿ ಶೇಕಡಾ 15ರಷ್ಟು ಕಡಿಮೆಯಾಗಬಹುದು. ಬಡಪಾಯಿ ಮೊಟ್ಟೆಕೋಳಿಗಳ ಕತೆ ಬೇರೆ ಅಲ್ಲ. ಬರಿಯ ಎರಡು ದಿನಗಳ ಕಾಲ ಬಿಸಿಯಲೆಗಳಿಗೆ ಅವು ಸಿಲುಕಿದರೆ ಅವುಗಳ ದೇಹದಲ್ಲೂ ತಾಪವೇರಿ ಮೊಟ್ಟೆ ಉತ್ಪತ್ತಿ ಶೇಕಡಾ 10ರಷ್ಟು ಕುಗ್ಗಬಹುದು. ಬಿಸಿಯಲೆಗಳಿಂದ ಬಿಸಿಯಾದ ದೇಹ ತನ್ನ ತಾಪವನ್ನು ಬೆವರಿನ ಮೂಲಕ ಸಮತೋಲನದಲ್ಲಿರಿಸಲು ತನ್ನೊಳಗಿನ ನೀರಿನ ತೇವಾಂಶವನ್ನು ಹೆಚ್ಚುವರಿಯಾಗಿ ಬಳಸಿಕೊಳ್ಳುತ್ತದೆ. ಸಹಜವಾಗಿ ಹಾಲು, ಮೊಟ್ಟೆಗಳಿಗೆ ಸಾಕಷ್ಟು ನೀರು ದಕ್ಕದೆ ಅವುಗಳ ಉತ್ಪಾದನೆ ತಗ್ಗುತ್ತದೆ. ಮನುಷ್ಯರಷ್ಟೆ ಅಲ್ಲದೆ ಎಲ್ಲ ಜೀವಸಂಕುಲಗಳು ವಿಪರೀತ ತಾಪದಲ್ಲಿ ಡಿಹೈಡ್ರೇಷನ್(ದೇಹದಲ್ಲಿ ನೀರಿಲ್ಲವಾಗುವುದು)ನಿಂದ ನರಳುತ್ತವೆ. ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳೆರಡೂ ಒಮ್ಮೆಲೆ ಎದುರಾಗುವ ಸಂದರ್ಭವಿದ್ದರೆ ಅದು&nbsp; ಬಿಸಿಯಲೆಗಳು ಕವಿದಾಗ.</p>



<p>ಬರುವ ದಿನಗಳಲ್ಲಿ ಉತ್ತರದ ಜಮ್ಮುವಿನಿಂದ ಹಿಡಿದು ದಕ್ಷಿಣದ ಕೇರಳದವರೆಗೆ ಮತ್ತು ಪಶ್ಚಿಮದ ಗುಜರಾತಿನಿಂದ ಹಿಡಿದು ಪೂರ್ವದ ಬಂಗಾಳವರೆಗಿನ ಪ್ರದೇಶಗಳೆಲ್ಲ ಬಿಸಿಯಲೆಗಳ ಹೊಡೆತಕ್ಕೆ ಮೇಲಿಂದ ಮೇಲೆ ತುತ್ತಾಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಈಗಾಗಲೆ ದಿನದ ಸಾಮಾನ್ಯ ತಾಪಕ್ಕಿಂತ 8-11 ಡಿಗ್ರಿ ಸೆಲ್ಸಿಯಸ್ ಹೆಚ್ಚಳದ ತಾಪವು ದೇಶದ ಹಲವೆಡೆ ದಾಖಲಾಗಿದೆ. ಇದು ಕಳೆದ ವರುಷದ ಹೆಚ್ಚಳಕ್ಕಿಂತಲೂ ಹೆಚ್ಚು. ಮುಂದಿನ ವರುಷಗಳಲ್ಲಿ ಹೀಗೆ ಬೇಸಗೆ ಫೆಬ್ರವರಿಗಿಂತ ಮುನ್ನವೇ ಅಂದರೆ ಡಿಸೆಂಬರ್, ಜನವರಿಯಿಂದಲೇ ಶುರುವಾಗುವ ಪರಿಪಾಟವನ್ನು ನಾವು ಊಹಿಸಬಹುದಾಗಿದೆ. ಚಳಿಗಾಲ ಬರಬರುತ್ತ ಮೊಟಕಾಗುತ್ತದೆ. ಕಡೆಗೆ ಮಾನ್ಸೂನ್ ಮಳೆಗಳ ನಂತರ ನೇರ ಬೇಸಗೆಗೆ ನಾವು ಜಿಗಿಯುತ್ತೇವೆ.</p>



<p class="has-black-color has-text-color">ಸಾಮಾನ್ಯವಾಗಿ ಬಿಸಿಯಲೆಗಳನ್ನು ಹಿಂಬಾಲಿಸಿ ಬರಗಾಲ ಬರುತ್ತದೆ. ಆಮೇಲೆ ಒಮ್ಮೆಲೆ ಹುಚ್ಚು ನೆರೆಗಳನ್ನು ತರುವ ಮಳೆ ಸುರಿಯುತ್ತದೆ. ಇವು ಯಾವುವೂ ನಮ್ಮ ಬೇಸಾಯದ ಲೆಕ್ಕಾಚಾರಕ್ಕೆ ಪೂರಕವಾಗಿರುವುದಿಲ್ಲ. <a>ಬಹುಶಃ ಜಗತ್ತಿನಲ್ಲಿ ಇನ್ನು ಮುಂದೆ ಉಳಿಯುವುದು ಎರಡೇ ಕಾಲವೇನೊ, ಒಂದು ಬೇಸಗೆ ಮತ್ತೊಂದು ಮಳೆಗಾಲ. ಇವೆರಡೂ ಬೇರೆಬೇರೆಯಾಗಿ ಬರುವುದಿಲ್ಲ. ಒಂದರೊಳಗೊಂದು ಬೆರೆತು ಬರುತ್ತವೆ. ರೈತರು ಹೇಗೆ ಈ ಅತಿರೇಕಗಳಿಗೆ ಹೊಂದಿಕೊಳ್ಳಬೇಕೊ ಗೊತ್ತಿಲ್ಲ.</a> ಕಾಲದ ಪ್ರತೀ ಹಂತವೂ ನಿಡುಗಾಲ ಒಂದು ಸ್ಥಿರತೆಯನ್ನು ಕಾಪಾಡಿಕೊಂಡಿದ್ದರೆ ಅದನ್ನು ನೆಚ್ಚಿಕೊಂಡು ಮತ್ತು ಅದಕ್ಕೆ ಹೊಂದಿಕೊಂಡು ಬೇಸಾಯ ಮಾಡುವುದು ಸುಲಭ ಮತ್ತು ಸಹಜ. ಆದರೆ ಇನ್ನು ಮುಂದೆ ಹೇಗೋ&#8230;&#8230;</p>



<p></p>



<p class="has-vivid-red-color has-text-color">ಭಾರತ ಮತ್ತು ಬಿಸಿಯಲೆಗಳು</p>



<p class="has-vivid-red-color has-text-color">ವಿಶ್ವಬ್ಯಾಂಕ್ ದೇಶದೇಶಗಳಿಗೆ ಸಾಲ ಕೊಡುತ್ತದೆ. ಈಗೀಗ ಸಲಹೆ ರೂಪದಲ್ಲಿ ಎಚ್ಚರಿಕೆಯನ್ನೂ ಕೊಡುತ್ತಿದೆ. ಅದರ <em>Climate Investment Opportunities in India’s Cooling Sector</em>&nbsp; ವರದಿ ಕಳೆದ ಡಿಸೆಂಬರ್‌ ನಲ್ಲಿ ಬಿಡುಗಡೆಯಾಗಿದೆ. ವರದಿಯಲ್ಲಿ ಜಗತ್ತಿನಲ್ಲೆ ಭಾರತ ಅತಿಹೆಚ್ಚು ಕಾಲ ಬಿಸಿಯಲೆಗಳಿಗೆ ತುತ್ತಾಗಬಲ್ಲ ಮೊದಲ ದೇಶವಾಗಲಿದೆ ಎಂಬ ದಿಗಿಲನ್ನು ವ್ಯಕ್ತಪಡಿಸಲಾಗಿದೆ. ಆರ್ಥಿಕ ಬೆಳವಣಿಗೆಗೆ ಗಂಭೀರ ಕುತ್ತನ್ನು ತರಬಲ್ಲ ಈ ಬಿಸಿಯಲೆಗಳನ್ನು ಎದುರಿಸಲು ದೇಶ ಅಣಿಯಾಗಿದೆಯೆ ಎಂಬ ಪ್ರಶ್ನೆಯೂ ಇಲ್ಲಿ ಎದ್ದಿದೆ. ಭಾರತದ ಬಹುಸಂಖ್ಯಾತ ಬಡವರು ಮತ್ತು ಸಮಾಜದ ಅಂಚಿಗೆ ತಳ್ಳಲ್ಪಟ್ಟವರು ಬಿಸಿಯಲೆಗಳಿಂದ ಹೆಚ್ಚು ಹಾನಿಗೊಳಗಾಗುತ್ತಾರೆ. ಈ ಮಂದಿ ತಮ್ಮನ್ನು ಬಿಸಿಯಲೆಗಳ ತಾಪದಿಂದ ಕಾಪಾಡಿಕೊಳ್ಳಲು ಅಗತ್ಯವಿರುವ ವಿದ್ಯುತ್ ಪಂಖ, ಏರ್ ಕೂಲರ್, ಏರ್ ಕಂಡಿಷನ್ ಇತ್ಯಾದಿ ವ್ಯವಸ್ಥೆಗಳನ್ನು ಕಲ್ಪಿಸಿಕೊಳ್ಳುವಷ್ಟು ಆರ್ಥಿಕ ಕಸುವಿಲ್ಲದವರಾಗಿದ್ದಾರೆ (2019ರ <a rel="noreferrer noopener" href="https://pib.gov.in/PressReleaseIframePage.aspx?PRID=1568328" target="_blank">India Cooling Action Plan (ICAP)</a> ಪ್ರಕಾರ ಭಾರತದಲ್ಲಿ ಶೇಕಡಾ 8ರಷ್ಟು ಕುಟುಂಬಗಳು ಮಾತ್ರ ಏರ್ ಕಂಡಿಷನ್ ಹೊಂದಿವೆ). ಜನಸಂಖ್ಯೆಯ ಬಲುದೊಡ್ಡ ಭಾಗದ ಬದುಕುಳಿಯುವ ಅವಕಾಶವನ್ನೆ ಬಿಸಿಯಲೆಗಳು ಮುಂಬರುವ ದಿನಗಳಲ್ಲಿ ಕಿತ್ತುಕೊಳ್ಳಬಹುದಾಗಿದೆ. ಹೊರಗೆ ಬಿಸಿಲಲ್ಲೆ ಕೆಲಸ ಮಾಡುವಂತಹ ದುಡಿಮೆಗಾರರ ದೊಡ್ಡ ವರ್ಗವೇ ಭಾರತದಲ್ಲಿ ಇದೆ. ಇವರ ಸಂಖ್ಯೆ 38 ಕೋಟಿಗೂ ಹೆಚ್ಚು. ಇವರಲ್ಲಿ ಶೇಕಡಾ 75ರಷ್ಟು ದುಡಿಮೆಗಾರರು ಬಿಸಿಯಲೆಗಳು ತರುವ ಬವಣೆಗಳಿಗೆ ನೇರ ಗುರಿಯಾಗಲಿದ್ದಾರೆ ಎಂದು ವಿಶ್ವಬ್ಯಾಂಕ್ ವರದಿ ಕಳವಳ ತೋರಿದೆ. ದೇಶದ ಬಗೆಬಗೆಯ ಆರ್ಥಿಕ ಉತ್ಪಾದನೆಗಳಲ್ಲಿ ಈ ‘ಬಿಸಿಲು ದುಡಿಮೆ’ಯ ಜನರ ಕೊಡುಗೆ ಬಹಳ ದೊಡ್ಡದು.</p>



<p class="has-vivid-red-color has-text-color">ಜಾಗತಿಕ ತಾಪ ಏರಿಕೆಗೆ ದೊಡ್ಡ ಕಾರಣವಾಗಿರುವ ಕಾರ್ಬನ್ ಬಿಡುಗಡೆಯನ್ನು ಹತೋಟಿಗೆ ತರಲು ಭಾರತ ಗಂಭೀರ ಮತ್ತು ತುರ್ತಿನ ಕ್ರಮಗಳನ್ನು ಜಾರಿಗೊಳಿಸದಿದ್ದರೆ ಇಸವಿ 2036ರಿಂದಾಚೆಗೆ ಬಿಸಿಯಲೆಗಳು ಈಗ್ಗಿಂತ 25 ಪಟ್ಟು ಹೆಚ್ಚು ಸಮಯ ಕವಿದು ಗುರುತರ ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳನ್ನು ತರಬಹುದಾಗಿದೆ ಎಂದು ವರದಿ ಮೇಲಿಂದ ಮೇಲೆ ಉಲ್ಲೇಖಿಸಿದೆ.</p>



<p class="has-vivid-red-color has-text-color">ಅಂದಹಾಗೆ ನಮ್ಮ ಬಹುತೇಕ ಟಿವಿ ಮಾಧ್ಯಮಗಳು ವಿಶ್ವಬ್ಯಾಂಕಿನ ಎಚ್ಚರಿಕೆಯನ್ನು ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ಈ ಬಗ್ಗೆ ಚರ್ಚಿಸಲು ಅವಿನ್ನೂ ಸಮಯ ನಿಗದಿಪಡಿಸಿಕೊಂಡಿಲ್ಲ. ದಿನಕ್ಕೆ 25 ಗಂಟೆ ಇದ್ದಿದ್ದರೆ ಆ ಹೆಚ್ಚುವರಿ ಒಂದು ತಾಸನ್ನು ಹವಾಮಾನ ಬದಲಾವಣೆಗೆ ಮೀಸಲಿಡಬಹುದಿತ್ತು. ‘ಓ ಬುಗುರಿ ಭೂಮಿಯೆ ಒಂದು ತಾಸು ತಡವಾಗಿ ಸುತ್ತು&#8230;’</p>



<p></p>



<p><strong>ಕೆ.ಎಸ್.ರವಿಕುಮಾರ್, ಹಾಸನ</strong></p>



<p>ಲೇಖಕರು. ಮುಖ್ಯವಾಗಿ ವಿಜ್ಞಾನ ಬರಹಗಾರರು. ಪರಿಸರದ ಮೇಲೆ ವಿಶೇಷ ಆಸಕ್ತಿ. ಚಾರಣ ಹವ್ಯಾಸ.</p>



<p>ಮೊ : 9964604297</p>



<p></p>
]]></content:encoded>
					
		
		
			</item>
		<item>
		<title>ಬಿಸಿಯಲೆಗಳ ಹೊಡೆತದ ಪರಿಣಾಮಗಳು</title>
		<link>https://peepalmedia.com/effects-of-heat-strokeg/</link>
		
		<dc:creator><![CDATA[K S Ravikumar]]></dc:creator>
		<pubDate>Tue, 21 Mar 2023 07:43:21 +0000</pubDate>
				<category><![CDATA[ಇಕಾಲಜಿ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=20301</guid>

					<description><![CDATA[ಭಾರತ ಕಳೆದ ಕೆಲವು ವರುಷಗಳಿಂದ ಸರಾಸರಿ 101 ಶತಕೋಟಿಯಷ್ಟು ಕೆಲಸದ ತಾಸುಗಳನ್ನು ಬಿಸಿಯಲೆ ಮತ್ತು ವಿಪರೀತ ತಾಪಕ್ಕೆ ಕಳೆದುಕೊಳ್ಳುತ್ತಿದೆ. ನಮ್ಮ ಒಕ್ಕೂಟ ಸರ್ಕಾರ ಮತ್ತು ಅದರ ಬೆನ್ನಿಗೆ ನಿಂತಿರುವ ಬಹುತೇಕ ಮಾಧ್ಯಮಗಳು ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡಿವೆಯೆ? ಇದು ಕೆ ಎಸ್‌ ರವಿಕುಮಾರ್‌ ಬರೆದಿರುವ ʼಬಿಸಿಬಿಸಿ ಫೆಬ್ರವರಿ &#8211; ಚಳಿಗಾಲ ಪರಾರಿʼ ಲೇಖನದ ಎರಡನೆಯ ಸರಣಿ. ಹೊಲಗಿಚ್ಚಿನ ಬೆದರಿಕೆ ಬಿಸಿಯಲೆಗಳು ಎರಗುತ್ತಿದ್ದಂತೆ ಅವುಗಳ ಮೊದಲ ಹೊಡೆತ ಚಳಿಗಾಲದಲ್ಲಿ ಬಿತ್ತನೆಯಾದ ಬೆಳೆಗಳ ಮೇಲಾಗುತ್ತದೆ. ಮುಖ್ಯವಾಗಿ ಗೋಧಿಯ ಇಳುವರಿಯ ಮೇಲಾಗುತ್ತದೆ. ಈ [&#8230;]]]></description>
										<content:encoded><![CDATA[
<p class="has-vivid-cyan-blue-color has-text-color"><strong>ಭಾರತ ಕಳೆದ ಕೆಲವು ವರುಷಗಳಿಂದ ಸರಾಸರಿ 101 ಶತಕೋಟಿಯಷ್ಟು ಕೆಲಸದ ತಾಸುಗಳನ್ನು ಬಿಸಿಯಲೆ ಮತ್ತು ವಿಪರೀತ ತಾಪಕ್ಕೆ ಕಳೆದುಕೊಳ್ಳುತ್ತಿದೆ. ನಮ್ಮ ಒಕ್ಕೂಟ ಸರ್ಕಾರ ಮತ್ತು ಅದರ ಬೆನ್ನಿಗೆ ನಿಂತಿರುವ ಬಹುತೇಕ ಮಾಧ್ಯಮಗಳು ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡಿವೆಯೆ? ಇದು ಕೆ ಎಸ್‌ ರವಿಕುಮಾರ್‌ ಬರೆದಿರುವ ʼಬಿಸಿಬಿಸಿ ಫೆಬ್ರವರಿ &#8211; ಚಳಿಗಾಲ ಪರಾರಿʼ ಲೇಖನದ ಎರಡನೆಯ ಸರಣಿ.</strong></p>



<p class="has-vivid-cyan-blue-color has-text-color"></p>



<p><strong>ಹೊಲಗಿಚ್ಚಿನ ಬೆದರಿಕೆ</strong></p>



<p>ಬಿಸಿಯಲೆಗಳು ಎರಗುತ್ತಿದ್ದಂತೆ ಅವುಗಳ ಮೊದಲ ಹೊಡೆತ ಚಳಿಗಾಲದಲ್ಲಿ ಬಿತ್ತನೆಯಾದ ಬೆಳೆಗಳ ಮೇಲಾಗುತ್ತದೆ. ಮುಖ್ಯವಾಗಿ ಗೋಧಿಯ ಇಳುವರಿಯ ಮೇಲಾಗುತ್ತದೆ. ಈ ವರುಷ ಒಕ್ಕೂಟ ಸರ್ಕಾರವು ನಮ್ಮ ರೈತರಿಂದ 11.2 ಕೋಟಿ ಟನ್ನುಗಳಷ್ಟು ಗೋಧಿಯ ದಾಖಲೆ ಉತ್ಪಾದನೆಯನ್ನು ನಿರೀಕ್ಷೆ ಮಾಡುತ್ತಿದೆ (ಕಳೆದ ವರುಷಕ್ಕಿಂತ 44.4 ಲಕ್ಷ ಟನ್ನು ಹೆಚ್ಚು). ‘ಬಿಸಿಯಲೆಗಳು ಬೆಳೆದು ನಿಂತ ಗೋಧಿಗೆ ಹಾನಿ ಮಾಡಲಾರವು’ ಎಂದು ಒಕ್ಕೂಟ ಸರ್ಕಾರದ ಕೃಷಿಮಂತ್ರಿ ಭವಿಷ್ಯ ಹೇಳಿದ್ದಾರೆ. Food Secretary ಸಂಜೀವ್ ಚೋಪ್ರಾ ಕೂಡಾ ಕೃಷಿಮಂತ್ರಿಯನ್ನು ಅನುಮೋದಿಸಿದ್ದಾರೆ. ಕಟುಸತ್ಯ ಹೇಳಿ ಅಧಿಕಾರಕ್ಕೆ ಅಂಡಂಟಿಸಿಕೊಂಡವರಿಗೆ ಮುಜುಗರದ ತುರಿಕೆ ತರಬಾರದೆಂದೊ ಏನೋ ಒಂದಷ್ಟು ಪರಿಣಿತರು ರೈತರಿಗೆ ಹುರುಪು ತುಂಬಿದ್ದಾರೆ. ‘ಈ ಬಾರಿಯ ಬಿಸಿಯಲೆಗಳು 2022ರಂತೆ ತೀವ್ರವಾಗಿರುವುದಿಲ್ಲ, ಮಾರ್ಚ್‍ನಲ್ಲಿ ಅವು ಕಾಣುವ ಮುನ್ಸೂಚನೆಯಿಲ್ಲ, ಹೆದರಬೇಡಿ’ ಎಂದು ಭಾರತೀಯ ಹವಾಮಾನ ಇಲಾಖೆಯ ಡೈರೆಕ್ಟರ್ ಜನರಲ್ ಆಗಿರುವ ಮೃತ್ಯುಂಜಯ ಮಹೊಪಾತ್ರ ಹೇಳಿದ ಬೆನ್ನಲ್ಲೆ Indian Institute of Wheat and Barley Research(IIWBR)ನ ಬೆಳೆ ಖಾಯಿಲೆಗಳ ಮುಖ್ಯ ತನಿಖಾಧಿಕಾರಿಯಾದ ಗ್ಯಾನೆಂದರ್ ಸಿಂಗ್ ‘ಈಗಿರುವ ತಾಪದ ಸನ್ನಿವೇಶವು ಗೋಧಿಯ ಸುಗ್ಗಿಗೆ ಒಂದು ಸಮಸ್ಯೆಯೆ ಅಲ್ಲ, ಮಾರ್ಚ್ 25ರ ತನಕದ ತಾಪ ಗೋಧಿ ಕಟಾವಿಗೆ ಅನುಕೂಲವಾಗಿಯೆ ಇರುತ್ತದೆ, ರೈತರು ಗಾಬರಿಯಾಗುವುದು ಬೇಡ’ ಎಂದರು. Indian Council of Agricultural Research (ICAR) ಮತ್ತು ರಾಜ್ಯಗಳ ಕೃಷಿವಿಶ್ವವಿದ್ಯಾನಿಲಯಗಳು ಕೂಡಿ ಅತಿತಾಪವನ್ನೂ ತಡೆದುಕೊಂಡು ಬೆಳೆಯಬಲ್ಲ ಗೋಧಿ ತಳಿಗಳನ್ನು ಅಭಿವೃದ್ಧಿ ಪಡಿಸಿದ್ದು ಶೇಕಡಾ 50ರಷ್ಟು ಪ್ರದೇಶದಲ್ಲಿ ಈ ತಳಿಗಳೇ ಬಿತ್ತನೆಯಾಗಿರುವುದರಿಂದ (ಕಳೆದ ವರುಷವೂ ಇಂತಹ ತಳಿಗಳ ಬಿತ್ತನೆಯಾಗಿತ್ತು) ಈ ಬಾರಿ ಒಕ್ಕೂಟ ಸರ್ಕಾರದ ನಿರೀಕ್ಷೆಯಂತೆ ಗೋಧಿಯ ದಾಖಲೆ ಫಸಲು ಬರಬಹುದು ಎಂಬ ವಾದವೂ ಇದೆ. ದಾಖಲೆ ಫಸಲು ಬಂದರೆ ನನಗೂ ಸಂತೋಷವೆ (ಈ ಬಾರಿ ಬೇರೆ ವಿಶ್ವಸಂಸ್ಥೆಗೆ ಕೊಟ್ಟ ಮಾತಿನಂತೆ ತಾಲಿಬಾನಿಗಳ ಅಫಘಾನಿಸ್ತಾನಕ್ಕೆ 20 ಸಾವಿರ ಟನ್ನಿನಷ್ಟು ಗೋಧಿ ಕಳಿಸಿದ್ದೇವೆ. ಅದರ ಜಾಗವನ್ನು ಹೊಸಗೋಧಿ ತುಂಬಬೇಕಲ್ಲ).</p>



<p>&nbsp;ಅಧಿಕಾರಸ್ಥರು ಮತ್ತು ಸರ್ಕಾರಿ ಪರಿಣಿತರು ದೆಹಲಿಯ ಸುಸಜ್ಜಿತ ಹವಾನಿಯಂತ್ರಿತ ಕಛೇರಿಗಳಲ್ಲಿ ಕುಳಿತು ಹುರುಪಿನ ಹೇಳಿಕೆ ಕೊಡುವುದು ಸರಾಗ. ಆದರೆ ಗೋಧಿಯ ಹೊಲಗಳಲ್ಲಿ ಜರುಗುವ ನಿಜಸಂಗತಿ ಏನು? ಅಧಿಕಾರಸ್ಥರ ಹೇಳಿಕೆಗಳನ್ನು ನೆಚ್ಚಿ ರೈತರು ನಿರಾಳ ನಿದ್ದೆ ತೆಗೆಯಲಾರರು. ಕಳೆದ ವರುಷದ ಕಹಿ ಅನುಭವ ಈ ವರುಷ ಅವರನ್ನು ನಿದ್ದೆಗೆಟ್ಟು ಕಟಾವನ್ನು ಸಮೀಪಿಸುತ್ತಿರುವ ಗೋಧಿ ಹೊಲಗಳನ್ನು ಕಾಯುವಂತೆ ಮಾಡಿದೆ. ಕಳೆದ ವರುಷ ಏನಾಯಿತು? ಫಸಲು ಇನ್ನೇನು ಕೈಗೆ ಹತ್ತಿತು ಎನ್ನುವಾಗ ಬಿಸಿಯಲೆಗಳು ಮುಗಿಬಿದ್ದು ವಾತಾವರಣ ವಿಪರೀತ ಬಿಸಿಯಾಯಿತು. ಎಷ್ಟು ಬಿಸಿಯಾಯಿತೆಂದರೆ ಬೆಳೆದುನಿಂತ ಗೋಧಿ ಹೊಲಗಳಲ್ಲಿ ಬಿರು ಬಿಸಿಲಿನ ವೇಳೆ ತನ್ನಷ್ಟಕ್ಕೆ ಬೆಂಕಿ ಹೊತ್ತಿಕೊಂಡಿತು. ಕಾಡ್ಗಿಚ್ಚಿನ ಹಾಗೆ. ಇದನ್ನು ಹೊಲಗಿಚ್ಚು (Farm fire) ಎಂದು ಕರೆಯುತ್ತಾರೆ. ಪಂಜಾಬ್, ರಾಜಸ್ತಾನ, ಹರ್ಯಾಣ, ಮಧ್ಯಪ್ರದೇಶ, ಉತ್ತರಪ್ರದೇಶಗಳ ಹೆಕ್ಟೇರುಗಟ್ಟಲೆ ಹರಹಿನಲ್ಲಿ ಸಾವಿರಾರು ಗೋಧಿ ಹೊಲಗಳು ಹೀಗೆ ಬೆಂಕಿಯಲ್ಲಿ ಉರಿದು ಹೋದವು. ರೈತರು ಏನೂ ಮಾಡಲಾಗದೆ ಉರಿಯುವುದನ್ನು ಕಂಡು ಎದೆಯೊತ್ತಿಕೊಂಡು ಬಿಕ್ಕಳಿಸಿದರು. ಹೀಗಾಗುವುದನ್ನು ಬಿಲ್‍ಕುಲ್ ಅವರು ನಿರೀಕ್ಷೆ ಮಾಡಿರಲಿಲ್ಲ. ಇದೊಂದು ಆಘಾತಕಾರಿ ಅನುಭವ, ಆದರೆ ಈ ವರುಷ ಸುಮ್ಮನಿರಲಾದೀತೆ?</p>



<figure class="wp-block-gallery has-nested-images columns-default is-cropped wp-block-gallery-13 is-layout-flex wp-block-gallery-is-layout-flex">
<figure class="wp-block-image size-large"><img loading="lazy" decoding="async" width="1024" height="675" data-id="20307" src="https://peepalmedia.com/wp-content/uploads/2023/03/The-Hans-India-1-1024x675.jpg" alt="" class="wp-image-20307" srcset="https://peepalmedia.com/wp-content/uploads/2023/03/The-Hans-India-1-1024x675.jpg 1024w, https://peepalmedia.com/wp-content/uploads/2023/03/The-Hans-India-1-300x198.jpg 300w, https://peepalmedia.com/wp-content/uploads/2023/03/The-Hans-India-1-768x506.jpg 768w, https://peepalmedia.com/wp-content/uploads/2023/03/The-Hans-India-1-150x99.jpg 150w, https://peepalmedia.com/wp-content/uploads/2023/03/The-Hans-India-1-696x459.jpg 696w, https://peepalmedia.com/wp-content/uploads/2023/03/The-Hans-India-1-1068x704.jpg 1068w, https://peepalmedia.com/wp-content/uploads/2023/03/The-Hans-India-1.jpg 1200w" sizes="auto, (max-width: 1024px) 100vw, 1024px" /></figure>
</figure>



<p>ಈ ವರುಷ ನಮ್ಮ ಉತ್ತರ ಕರ್ನಾಟಕವೂ ಸೇರಿದಂತೆ ಗೋಧಿ ಬೆಳೆಯುವ ಉತ್ತರ ಭಾರತದ ರಾಜ್ಯಗಳಲ್ಲಿ ರೈತರು ಹಗಲೆಲ್ಲ ಗೋಧಿ ಹೊಲಗಳ ಬಳಿಯೆ ಬೀಡುಬಿಟ್ಟು ಕಾಯುತ್ತಿದ್ದಾರೆ. ಬೆಂಕಿ ಆರಿಸಲು ಸಾಕಷ್ಟು ನೀರನ್ನು ದಾಸ್ತಾನು ಮಾಡಿಕೊಂಡು ಅಣಿಯಾಗಿದ್ದಾರೆ. ಒಮ್ಮೆಲೆ ಇಡೀ ಹೊಲಕ್ಕೆ ಬೆಂಕಿ ಬೀಳುವುದಿಲ್ಲವಲ್ಲ. ಎಲ್ಲಿ ಬೆಂಕಿ ಕಾಣಿಸಿಕೊಂಡಿತೊ ಅಲ್ಲಿಗೆ ದೌಡಾಯಿಸಿ ನೀರು ಎರಚಿ ಬೆಂಕಿ ಆರಿಸುತ್ತಾರೆ. ಪೂರ್ತಿ ಹೊಲ ಸುಡುವ ಬದಲು ಎಲ್ಲೋ ಒಂಚೂರು ಜಾಗದಲ್ಲಿ ಗೋಧಿ ಬೆಳೆ ಸುಡಬಹುದು ಅಷ್ಟೆ. ಹೆಚ್ಚಿನ ನೀರಾವರಿ ಅನುಕೂಲ ಇರುವವರು ಬೆಳೆಯ ಬುಡಕ್ಕೆ ಹದವಾಗಿ ನೀರು ಹಾಯಿಸುತ್ತಿದ್ದಾರೆ. ಈ ನೀರು ಆವಿಯಾಗಿ ಹೊಲದ ಮೇಲಿನ ಗಾಳಿಯನ್ನು ತಂಪಾಗಿರಿಸುವ ಮೂಲಕ ಬೆಂಕಿ ಕಾಣಿಸಲು ಅಗತ್ಯವಿರುವ ತಾಪ ಹುಟ್ಟದಂತೆ ಮಾಡುತ್ತದೆ. ಬಹುಶಃ ರೈತರು ಇಂತಹ ಮುನ್ನೆಚ್ಚರಿಕೆಗಳಿಗಿಂತ ಹೆಚ್ಚಿನದೇನನ್ನೂ ಮಾಡಲಾರರು. ಹೀಗೆಲ್ಲ ಮಾಡಿ ಫಸಲನ್ನು ಉಳಿಸಿಕೊಂಡರೂ ದಿನಗಟ್ಟಲೆ ಕವಿದ ಬಿಸಿಹವೆಗೆ ಗೋಧಿಕಾಳುಗಳು ತೇವಾಂಶ ಕಳೆದುಕೊಂಡು ಜೊಳ್ಳಾಗಿಬಿಡುತ್ತವೆ. ಕಳೆದ ವರುಷ ಈ ಜೊಳ್ಳಿನ ಕಾರಣಕ್ಕೇ ಶೇಕಡಾ 10-20ರಷ್ಟು ಇಳುವರಿ ಕುಗ್ಗಿಹೋಗಿತ್ತು. ಚಳಿಗಾಲದ ಗೋಧಿಗೆ ಕಾಳು ಕಟ್ಟಲಿರುವ ನಿರ್ಣಾಯಕ ತಿಂಗಳಾದ ಮಾರ್ಚ್‍ನಲ್ಲಿಯೂ ದಿನದ ಅತಿ ಹೆಚ್ಚಿನ ತಾಪ 40 ಡಿಗ್ರಿಗಿಂತಲೂ ಹೆಚ್ಚಾದರೆ ಈ ವರುಷ ಜೊಳ್ಳಿನ ಪ್ರಮಾಣ ಇನ್ನೂ ಹೆಚ್ಚಬಹುದೆಂದು ರೈತರು ಮತ್ತು ಸಗಟು ಖರೀದಿದಾರರು ಆತಂಕದಲ್ಲಿದ್ದಾರೆ.</p>



<p>ಇನ್ನೂ ಎರಡು ಕಾರಣಕ್ಕೆ ರೈತರಲ್ಲಿ ತಲ್ಲಣವಿದೆ. ಏರಿದ ತಾಪದ ವೇಳೆ ಬೆಳೆಗಳಿಗೆ ಕಾಯಿಲೆಗಳೂ ಬರಬಹುದು ಮತ್ತು ಅವಕಾಶವಾದಿ ಹುಳುಹುಪ್ಪಟೆಗಳ ಕಾಟ ಹೆಚ್ಚಬಹುದು. ಬೆಳೆದು ನಿಂತ ಗೋಧಿಗೆ ಅತಿತಾಪದ ವೇಳೆಯಲ್ಲೆ ಕಾಣಬರುವ ‘ಹಳದಿ ತುಕ್ಕಿನ ಕಾಯಿಲೆ’ಯ ಬಗ್ಗೆ ಎಚ್ಚರದಿಂದಿರುವಂತೆ Indian Council of Agricultural Research – Indian Institute of Wheat and Barley Research (ICAR-IIWBR) ಸಂಸ್ಥೆಯು ಫೆಬ್ರವರಿ 20ರಂದು ರೈತರಿಗೆ ಸರಿಹೊತ್ತಿನ ಸೂಚನೆ ನೀಡಿತು. ಅಂತೂ ಹಲವು ಪರೀಕ್ಷೆಗಳನ್ನು ರೈತರು ಎದುರಿಸಬೇಕು. ಇಷ್ಟುಕಾಲ ರೈತರು ಮಳೆಯೊಂದಿಗೆ ಜೂಜಾಡುತ್ತಿದ್ದರು, ಇನ್ನುಮೇಲೆ ಬಿಸಿಯಲೆಗಳೊಂದಿಗೂ ಜೂಜಾಡಬೇಕು. ಈ ನಡುವೆ ಹವಾಮಾನ ಇಲಾಖೆ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲಿ ತಾಸಿಗೆ 20-30 ಕಿ.ಮೀ. ವೇಗದಲ್ಲಿ ಬೀಸುವ ಬಿರುಸು ಬಿಸಿಗಾಳಿ ಬೆಳೆದು ನಿಂತ ಗೋಧಿ ಪೈರನ್ನು ನೆಲಸಮ&nbsp; ಮಾಡುವ ಸಾಧ್ಯತೆಯ ಬಗ್ಗೆ ಮುನ್ನೆಚ್ಚರಿಕೆ ನೀಡಿತ್ತು. ಹಾಗೆಯೆ ಕೆಲವು ಕಡೆ ಗೋಧಿ ಹೊಲಗಳು ನೆಲಸಮವಾದವು. ತೆನೆ ಬಲಿಯುವ ಮೊದಲೆ ಇನ್ನೇಳದಂತೆ ಮಲಗಿದ ಗೋಧಿ ಹೊಲಗಳ ಹರಹು ಲಕ್ಷಾಂತರ ಹೆಕ್ಟೇರುಗಟ್ಟಲೆ ಪ್ರದೇಶದಲ್ಲಿ ಬಿತ್ತನೆಯಾಗಿದ್ದಕ್ಕೆ ಹೋಲಿಸಿದರೆ ಕಮ್ಮಿಯೇ ಇರಬಹುದು. ನಾವಿಲ್ಲಿ ಗಮನಿಸಬೇಕಾದದ್ದು ಇನ್ನು ಮುಂದಿನ ದಿನಗಳಲ್ಲಿ ಬೇಸಾಯ ಎನ್ನುವುದು ಹೇಗೆಲ್ಲ ಬಗೆಬಗೆಯ ಸವಾಲುಗಳನ್ನು ಎದುರಿಸಬೇಕಾಗಬಹುದು ಎಂಬ ಅಂಶವನ್ನು.</p>



<p>&nbsp;ಭಾರತ 2022-23ಕ್ಕೆ ಎಷ್ಟು ಪ್ರಮಾಣದ ಗೋಧಿಯನ್ನು ಉತ್ಪಾದಿಸಬಲ್ಲುದು ಎಂಬುದನ್ನು ಅಂದಾಜುಮಾಡಲು ಬರುವ ಏಪ್ರಿಲ್ ಮೊದಲ ವಾರದವರೆಗಿನ ಗಡುವು ಬಹಳ ನಿರ್ಣಾಯಕವಾದುದು. ಈ ಗಡುವಿನಲ್ಲಿ ಉತ್ತರ ಭಾರತದಲ್ಲಿ ಅತಿಹೆಚ್ಚಿನ ತಾಪ 37 ಡಿಗ್ರಿ ಸೆಲ್ಸಿಯಸ್ ದಾಟಬಾರದು. ಹಾಗೇನಾದರೂ ಆದರೆ ಬಹುಪಾಲು ಗೋಧಿ ಜೊಳ್ಳಾಗಿ ರೈತರ ಕಣ್ಣಲ್ಲಿ ನೀರು ತರಿಸಬಹುದಾಗಿದೆ. ಹಾಗಾಗದಿರಲಿ.</p>



<figure class="wp-block-gallery has-nested-images columns-default is-cropped wp-block-gallery-14 is-layout-flex wp-block-gallery-is-layout-flex">
<figure class="wp-block-image size-large"><img loading="lazy" decoding="async" width="1024" height="729" data-id="20308" src="https://peepalmedia.com/wp-content/uploads/2023/03/Gaon-Connection-1024x729.jpg" alt="" class="wp-image-20308" srcset="https://peepalmedia.com/wp-content/uploads/2023/03/Gaon-Connection-1024x729.jpg 1024w, https://peepalmedia.com/wp-content/uploads/2023/03/Gaon-Connection-300x214.jpg 300w, https://peepalmedia.com/wp-content/uploads/2023/03/Gaon-Connection-768x547.jpg 768w, https://peepalmedia.com/wp-content/uploads/2023/03/Gaon-Connection-1536x1093.jpg 1536w, https://peepalmedia.com/wp-content/uploads/2023/03/Gaon-Connection-150x107.jpg 150w, https://peepalmedia.com/wp-content/uploads/2023/03/Gaon-Connection-696x495.jpg 696w, https://peepalmedia.com/wp-content/uploads/2023/03/Gaon-Connection-1068x760.jpg 1068w, https://peepalmedia.com/wp-content/uploads/2023/03/Gaon-Connection.jpg 1686w" sizes="auto, (max-width: 1024px) 100vw, 1024px" /></figure>
</figure>



<p class="has-vivid-cyan-blue-color has-text-color"><strong>ಕಳೆದುಹೋಗುವ ಕೆಲಸದ ತಾಸು</strong><strong>(</strong><strong>Work hour) </strong>ಗಳು</p>



<p class="has-vivid-cyan-blue-color has-text-color">&nbsp;ಬಿಸಿಯಲೆಗಳು ಹಗಲಿನ ವೇಳೆ ನಮ್ಮ ಕೆಲಸದ ಅವಕಾಶವನ್ನೆ ಕಸಿದುಕೊಳ್ಳುತ್ತವೆ. ಬಹುಪಾಲು ಜನರ&nbsp; ದುಡಿಮೆ ಬಿಸಿಲಿನಲ್ಲೆ ಜರುಗುವುದರಿಂದ ಅವರ ಆದಾಯದ ತಾಸುಗಳು ಹಾನಿಗೊಳ್ಳುತ್ತವೆ. ದೆಹಲಿಯಲ್ಲಿ ಆಟೋರಿಕ್ಷಾ ಚಾಲಕನೊಬ್ಬ ಬೆಳಿಗ್ಗೆ 10ರವರೆಗೆ ಆಟೋ ಓಡಿಸಿ ನಂತರ ಸಂಜೆ 4 ಗಂಟೆಯವರೆಗೆ ಮನೆಯಲ್ಲಿ ಬಿಸಿಯಲೆಗಳಿಂದ ರಕ್ಷಣೆ ಪಡೆಯುತ್ತಾನೆ. ಅಲ್ಲಿಗೆ ಆತ ದಿನಕ್ಕೆ 6 ಗಂಟೆಗಳ ಕೆಲಸದ ತಾಸುಗಳನ್ನು ಕಳೆದುಕೊಳ್ಳುತ್ತಾನೆ. ಜೊತೆಗೆ ಈ ಗಡುವಿನ ಗಳಿಕೆಯನ್ನೂ ಕಳೆದುಕೊಳ್ಳುತ್ತಾನೆ. ಒಂದು ತಿಂಗಳ ಬಿಸಿಯಲೆಗಳು ಒಟ್ಟಾರೆ ಆತನಿಂದ ಸರಾಸರಿ 180 ಕೆಲಸದ ತಾಸುಗಳನ್ನು ಕಸಿದುಕೊಂಡಿರುತ್ತವೆ. ಅಂತೆಯೆ ರೈತನೊಬ್ಬ ಬೆಳಿಗ್ಗೆ 10&nbsp; ರವರೆಗೆ ತನ್ನ ಜಮೀನಿನಲ್ಲಿ ದುಡಿದು ಮನೆಗೆ ಮರಳಿ ಮತ್ತೆ ಸಂಜೆ 4 ಕ್ಕೆ ದುಡಿಯ ಹೊರಟರೆ ಅವನೂ 6 ಕೆಲಸದ ತಾಸುಗಳನ್ನು ಕಳೆದುಕೊಳ್ಳುತ್ತಾನೆ. ನಿಗದಿತ ಸಮಯದಲ್ಲಿ ಆತನ ಬೇಸಾಯದ ಕೆಲಸಗಳು ಮುಗಿಯದೆ ಇಳುವರಿಯ ಮೇಲೆ ಕೆಟ್ಟ ಪರಿಣಾಮ ಬೀರಿಯೆ ಬೀರುತ್ತದೆ. ಇವತ್ತಿಗೂ ಜಗತ್ತಿನಲ್ಲಿ ಶೇಕಡಾ 50ರಷ್ಟು ಬೇಸಾಯಗಾರರು ತಮ್ಮ ಬೆವರಿನ ದುಡಿಮೆ (Physical labour) ಯ ಮೂಲಕವೇ ಸಾಗುವಳಿ ಮಾಡುವುದು (ಮತ್ತು ಇವರೆಲ್ಲ ಬಹುತೇಕ ಸಣ್ಣ ಹಿಡುವಳಿದಾರರೆ ಆಗಿರುತ್ತಾರೆ). ಸಹಜವಾಗಿ ಬಿಸಿಯಲೆಗಳಿಂದ ಇವರ ಕೆಲಸಗಳು ಏರುಪೇರಾಗಿ ಕಡೆಯಲ್ಲಿ ಆಹಾರದ ಕೊರತೆಗೆ ಕಾರಣವಾಗುತ್ತವೆ. ಮುಂದೆ ಮುಂದೆ ರೈತರು ಬಿಸಿಯಲೆಗಳ ಬವಣೆ ಅನುಭವಿಸಲಾಗದೆ ಬೇಸಗೆ ಬೆಳೆ ಬೆಳೆಯುವುದನ್ನೆ ಕೈಬಿಟ್ಟರೆ! ಕಲ್ಪಿಸಿಕೊಳ್ಳಲು ದಿಗಿಲಾಗುತ್ತಿದೆ.</p>



<p class="has-vivid-cyan-blue-color has-text-color">Lancet ಎಂಬ ಸಂಸ್ಥೆ 2017ರಲ್ಲಿ ಜಾಗತಿಕವಾಗಿ ಬಿಸಿಯಲೆಗಳಿಗೆ ಬಲಿಯಾದ ಕೆಲಸದ ತಾಸುಗಳು 153 ಶತಕೋಟಿ ಎಂದು ತನ್ನ ಸರ್ವೆಯಲ್ಲಿ ಲೆಕ್ಕಿಸಿದೆ. 2018ರಲ್ಲಿ 150 ಶತಕೋಟಿ ಕೆಲಸದ ತಾಸುಗಳು ಮಾನವಕುಲಕ್ಕೆ ನಷ್ಟವಾಗಿವೆ. 2019ರಲ್ಲಿ ಈ ಲೆಕ್ಕ ಒಮ್ಮೆಲೆ 302 ಶತಕೋಟಿಗೇರಿದರೆ ಭಾರತ ಒಂದರಲ್ಲೆ 118 ಶತಕೋಟಿಗಳು ಎನ್ನಲಾಗಿದೆ. 2020ರಲ್ಲಿ ಭಾರತವೂ ಸೇರಿದಂತೆ ಜಗತ್ತಿನಲ್ಲಿ ಒಟ್ಟು ನಷ್ಟವಾದ ಕೆಲಸದ ತಾಸುಗಳು 295 ಶತಕೋಟಿಗಳು. ಕೆಲಸದ ತಾಸುಗಳ ನಷ್ಟವೆಂದರೆ ಆದಾಯ ಮತ್ತು ಸಂಪತ್ತಿನ ಉತ್ಪಾದನೆಯಲ್ಲೂ ಗಮನಾರ್ಹ ನಷ್ಟ ಎಂದರ್ಥ.</p>



<p class="has-vivid-cyan-blue-color has-text-color">ಜಗತ್ತು ಬಿಸಿಯಲೆಗಳನ್ನು ಗಂಭೀರವಾಗಿ ಪರಿಗಣಿಸದೇ ಹೋದರೆ 2030ರ ಇಸವಿ ವೇಳಗೆ 118 ಶತಕೋಟಿ ಜನ ಭೀಕರ ಬರ ಮತ್ತು ತಾಪಕ್ಕೆ ಸಿಲುಕಲಿದ್ದಾರೆ ಎಂದು ಕೆನ್ಯಾದ ಆಗಾಖಾನ್ ಯೂನಿವರ್ಸಿಟಿಯ ಅಸಿಸ್ಟೆಂಟ್ ಪ್ರೊಫೆಸರ್ ಅಬ್ದು ಮೊಹಿದ್ದಿನ್ ಎಚ್ಚರಿಸಿದ್ದಾರೆ.</p>



<p class="has-vivid-cyan-blue-color has-text-color">ಬಹಳ ಮುಖ್ಯವಾಗಿ ಒಂದು ಅಂಶವನ್ನು ಇಲ್ಲಿ ಹೇಳಬೇಕು. ಭಾರತ ಕಳೆದ ಕೆಲವು ವರುಷಗಳಿಂದ ಸರಾಸರಿ 101 ಶತಕೋಟಿಯಷ್ಟು ಕೆಲಸದ ತಾಸುಗಳನ್ನು ಬಿಸಿಯಲೆ ಮತ್ತು ವಿಪರೀತ ತಾಪಕ್ಕೆ ಕಳೆದುಕೊಳ್ಳುತ್ತಿದೆ. ಒಂದು ದೇಶದ ಮಟ್ಟಿಗೆ ಜಗತ್ತಿನಲ್ಲೆ ಇದು ಅತಿ ಹೆಚ್ಚಿನ ಪ್ರಮಾಣವಾಗಿದೆ. ನಮ್ಮ ಒಕ್ಕೂಟ ಸರ್ಕಾರ ಮತ್ತು ಅದರ ಬೆನ್ನಿಗೆ ನಿಂತಿರುವ ಬಹುತೇಕ ಮಾಧ್ಯಮಗಳು ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡಿವೆಯೆ?</p>



<figure class="wp-block-gallery has-nested-images columns-default is-cropped wp-block-gallery-15 is-layout-flex wp-block-gallery-is-layout-flex"></figure>



<p><strong>ಕೆ.ಎಸ್.ರವಿಕುಮಾರ್, ಹಾಸನ</strong></p>



<p>ಲೇಖಕರು. ಮುಖ್ಯವಾಗಿ ವಿಜ್ಞಾನ ಬರಹಗಾರರು. ಪರಿಸರದ ಮೇಲೆ ವಿಶೇಷ ಆಸಕ್ತಿ. ಚಾರಣ ಹವ್ಯಾಸ.</p>



<p>ಮೊ : 9964604297</p>



<p>***</p>
]]></content:encoded>
					
		
		
			</item>
		<item>
		<title>ಬಿಸಿಬಿಸಿ ಫೆಬ್ರವರಿ &#8211; ಚಳಿಗಾಲ ಪರಾರಿ</title>
		<link>https://peepalmedia.com/hot-february-winter-escape/</link>
		
		<dc:creator><![CDATA[K S Ravikumar]]></dc:creator>
		<pubDate>Mon, 20 Mar 2023 12:12:21 +0000</pubDate>
				<category><![CDATA[ಇಕಾಲಜಿ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=20294</guid>

					<description><![CDATA[ಹವಾಮಾನದಲ್ಲಿನ ಬದಲಾವಣೆಗಳಿಂದಾಗಿ ಹವಾಮಾನದ ಮಾದರಿಗಳು ಬದಲಾಗುತ್ತಿವೆ. ಬೇಸಗೆಯ ದಿನಗಳು ದೀರ್ಘವಾಗಿ ಚಳಿಗಾಲದ ದಿನಗಳು ಮರೆಯಾಗುತ್ತಿವೆ. ಭಾರತೀಯ ಹವಾಮಾನ ಇಲಾಖೆಯು 2023ರ ಫೆಬ್ರವರಿ ತಿಂಗಳು ಭಾರತದ ಮಟ್ಟಿಗೆ ಕಳೆದ 122 ವರುಷಗಳಲ್ಲೆ ಇಷ್ಟೊಂದು ತಾಪವನ್ನು ದಾಖಲಿಸಿರಲಿಲ್ಲ ಎಂದು ಫೆಬ್ರವರಿ 28ರಂದೇ ಷರಾ ಬರೆಯಿತು! ವಿಜ್ಞಾನ ಬರಹಗಾರ ಕೆ.ಎಸ್. ರವಿಕುಮಾರ್ ಈ ಹವಾಮಾನ ವೈಪರೀತ್ಯದ ಕುರಿತು ಸರಣಿ ಲೇಖನಗಳನ್ನು ಬರೆದಿದ್ದಾರೆ. ಮೊದಲ ಸರಣಿ ಇಲ್ಲಿದೆ. ಇದೀಗ ಎರಡನೆಯ ವರುಷದಲ್ಲೂ ನಾವು ಚಳಿಗಾಲದಿಂದ ನೇರ ಕಡುಬೇಸಗೆಗೆ ಜಿಗಿಯುತ್ತಿದ್ದೇವೆ. ಮಾಗಿ ಮತ್ತು ಬೇಸಗೆಗಳ [&#8230;]]]></description>
										<content:encoded><![CDATA[
<p class="has-cyan-bluish-gray-background-color has-background">ಹವಾಮಾನದಲ್ಲಿನ ಬದಲಾವಣೆಗಳಿಂದಾಗಿ ಹವಾಮಾನದ ಮಾದರಿಗಳು ಬದಲಾಗುತ್ತಿವೆ. ಬೇಸಗೆಯ ದಿನಗಳು ದೀರ್ಘವಾಗಿ ಚಳಿಗಾಲದ ದಿನಗಳು ಮರೆಯಾಗುತ್ತಿವೆ. ಭಾರತೀಯ ಹವಾಮಾನ ಇಲಾಖೆಯು 2023ರ ಫೆಬ್ರವರಿ ತಿಂಗಳು ಭಾರತದ ಮಟ್ಟಿಗೆ ಕಳೆದ 122 ವರುಷಗಳಲ್ಲೆ ಇಷ್ಟೊಂದು ತಾಪವನ್ನು ದಾಖಲಿಸಿರಲಿಲ್ಲ ಎಂದು ಫೆಬ್ರವರಿ 28ರಂದೇ ಷರಾ ಬರೆಯಿತು! ವಿಜ್ಞಾನ ಬರಹಗಾರ ಕೆ.ಎಸ್. ರವಿಕುಮಾರ್ ಈ ಹವಾಮಾನ ವೈಪರೀತ್ಯದ  ಕುರಿತು ಸರಣಿ ಲೇಖನಗಳನ್ನು ಬರೆದಿದ್ದಾರೆ. ಮೊದಲ ಸರಣಿ ಇಲ್ಲಿದೆ.</p>



<p>ಇದೀಗ ಎರಡನೆಯ ವರುಷದಲ್ಲೂ ನಾವು ಚಳಿಗಾಲದಿಂದ ನೇರ ಕಡುಬೇಸಗೆಗೆ ಜಿಗಿಯುತ್ತಿದ್ದೇವೆ. ಮಾಗಿ ಮತ್ತು ಬೇಸಗೆಗಳ ಕೊಂಡಿಯಾದ ವಸಂತದ ಒಸಗೆಯನ್ನು ನಾವು ಕಾಣುತ್ತೇವೊ ಗೊತ್ತಿಲ್ಲ. ಕಳೆದ ವರುಷ ಕಾಣಲಿಲ್ಲ, ಈ ವರುಷವೂ ಅನುಮಾನ. ಗಿಡಮರಗಳೇನೋ ಹೊಳಪಿನ ಮುದ್ದಾದ ತಿಳಿಹಸಿರು ಚಿಗುರೆಲೆಗಳನ್ನು ತಳೆದು ತೊನೆದಾಡುತ್ತಿವೆ. ಆದರೆ ವಸಂತದ ಹಿತವಾದ ಹವೆಗೆ ಮೈಯೊಡ್ಡುವ ಬದಲು ಧಗೆಗೆ ಬೆವರು ಬಸಿದು ಹೈರಾಣಾಗುತ್ತಿದ್ದೇವೆ. ಕಳೆದ ಜನವರಿಯ ಕೊನೆಕೊನೆಯಲ್ಲೆ ನಾವು ಮಾತನಾಡಿಕೊಂಡೆವು ‘ಏನಪ್ಪ ಇದು, ಈಗಲೇ, ಜನವರಿಯಲ್ಲೆ ದಿನದ ಅತಿಹೆಚ್ಚಿನ ತಾಪ 30 ಡಿಗ್ರಿ ಸೆಲ್ಸಿಯಸ್ ದಾಟಿ ಹೋಗುತ್ತಿದೆಯಲ್ಲ, ಯಾಕೋ 2023ರ ಬೇಸಗೆಯನ್ನೂ ಗಾಳಿಯ ಬಿಸಿಯಲೆಗಳು ಹುರಿದು ಮುಕ್ಕಬಹುದು’ ಎಂದು. ಹಾಗೇ ಆಗುವಂತಿದೆ.</p>



<p>ನಾವಿರುವ ಹಾಸನ ನಗರದಲ್ಲಿ ಕಳೆದ ವರುಷದ ಡಿಸೆಂಬರ್‌ನಲ್ಲಿ ದಿನದ ಅತಿಹೆಚ್ಚಿನ ತಾಪ (day time maximum temperature) 26ನೇ ತಾರೀಕಿನಂದು 35 ಡಿಗ್ರಿ ಸೆಲ್ಸಿಯಸ್ಸಿಗೆ ತಲುಪಿತ್ತು. ನಂತರ ಜನವರಿಯಲ್ಲಿ 4ನೇ ತಾರೀಕಿನಂದು 34ರಲ್ಲಿತ್ತು. ಫೆಬ್ರವರಿಯಲ್ಲಿ 26ನೇ ತಾರೀಕಿನಂದು 36ಕ್ಕೆ ನೆಗೆಯಿತು. ಈ ನೆಗೆತ ಹಾಸನದಲ್ಲಿ ಮಾತ್ರವಲ್ಲ, ಬಹುಪಾಲು ದೇಶದ ಎಲ್ಲೆಡೆ ಕಂಡುಬಂತು. ಭಾರತೀಯ ಹವಾಮಾನ ಇಲಾಖೆ(IMD)ಯು 2023ರ ಫೆಬ್ರವರಿ ತಿಂಗಳು ಭಾರತದ ಮಟ್ಟಿಗೆ ಕಳೆದ 122 ವರುಷಗಳಲ್ಲೆ ಇಷ್ಟೊಂದು ತಾಪವನ್ನು ದಾಖಲಿಸಿರಲಿಲ್ಲ ಎಂದು ಫೆಬ್ರವರಿ 28ರಂದೇ ಷರಾ ಬರೆಯಿತು. ಆಮೇಲೆ ಇನ್ನೊಂದು ತಿದ್ದುಪಡಿ ಹೇಳಿಕೆಯನ್ನು ಬಿಡುಗಡೆ ಮಾಡಿ ಫೆಬ್ರವರಿ ತಿಂಗಳು 1877ರಿಂದಲೇ ಇಷ್ಟೊಂದು ಬಿಸಿ ಎನಿಸಿರಲಿಲ್ಲ ಎಂದಿತು (ನೋಡಿ ಮಾರ್ಚ್1 ರ The Economic Times). ಸರಾಸರಿ ಲೆಕ್ಕದಲ್ಲಿ ಹೇಳುವುದಾದರೆ ಭಾರತದಲ್ಲಿ 2023ರ ಫೆಬ್ರವರಿ ತಿಂಗಳು 29.54 (30 ಎಂದಿಟ್ಟುಕೊಳ್ಳಿ) ಡಿಗ್ರಿ ಸೆಲ್ಸಿಯಸ್ ತಾಪವನ್ನು ದಾಖಲಿಸಿತು. ಹಿಂದೆಂದೂ ಇಂತಹ ದಾಖಲೆ ಹವಾಮಾನದ ದಸ್ತಾವೇಜಿಗೆ ಸೇರಿರಲಿಲ್ಲ. ಉತ್ತರ ಭಾರತದ ನೂರಾರು ಕಡೆ ಆಗಲೆ ದಿನದ ಅತಿ ಹೆಚ್ಚಿನ ತಾಪ 40 ಡಿಗ್ರಿ ದಾಟಿಹೋಗಿ ಜನ ತತ್ತರಿಸಿದ್ದಾರೆ. ಹಿಂದೆಲ್ಲ ಸಾಮಾನ್ಯವಾಗಿ ಮೇ ತಿಂಗಳಲ್ಲಿ ಕಾಣುವ ಈ ತಾಪ ಕಳೆದ ವರುಷ ಮಾರ್ಚಿಯಲ್ಲಿ ಕಂಡುಬಂತು, ಈ ವರುಷ ಫೆಬ್ರವರಿಯಲ್ಲೆ ಕಂಡುಬಂದಿದೆ. ಹೆಚ್ಚುಕಡಿಮೆ ಒಂದು ತಿಂಗಳ ಮುಂಚೆಯೆ. ಅಂದಮೇಲೆ ಮಾರ್ಚ್, ಏಪ್ರಿಲ್, ಮೇ, ಜೂನ್‍ಗಳ ದಿನಗಳು ನಮ್ಮೆಲ್ಲರ ಪಾಲಿಗೆ ಹೇಗಿರಬಹುದು!</p>



<figure class="wp-block-gallery has-nested-images columns-default is-cropped wp-block-gallery-16 is-layout-flex wp-block-gallery-is-layout-flex">
<figure class="wp-block-image size-large"><img loading="lazy" decoding="async" width="678" height="452" data-id="20295" src="https://peepalmedia.com/wp-content/uploads/2023/03/images-6.jpeg" alt="" class="wp-image-20295" srcset="https://peepalmedia.com/wp-content/uploads/2023/03/images-6.jpeg 678w, https://peepalmedia.com/wp-content/uploads/2023/03/images-6-300x200.jpeg 300w, https://peepalmedia.com/wp-content/uploads/2023/03/images-6-150x100.jpeg 150w" sizes="auto, (max-width: 678px) 100vw, 678px" /></figure>
</figure>



<p>ಬಯಲು ನಾಡಿನಲ್ಲಿ ಸಾಮಾನ್ಯ ತಾಪ 40 ಡಿಗ್ರಿ ಸೆಲ್ಸಿಯಸ್ ದಾಟಿದರೆ ಬಿಸಿಯಲೆಗಳು ಜರುಗಬಹುದು. ಕರಾವಳಿ ಭಾಗದಲ್ಲಿ 37 ಡಿಗ್ರಿ ಸೆಲ್ಸಿಯಸ್ ದಾಟಿದರೆ ಬಿಸಿಯಲೆಗಳು ಎರಗುತ್ತವೆ. ಬೆಟ್ಟಗುಡ್ಡಗಳ ಮಲೆಸೀಮೆಯಲ್ಲಿ 30 ಡಿಗ್ರಿ ಸೆಲಿಯಸ್ ದಾಟಿದರೆ ಅಲ್ಲಿನವರಿಗೆ ಬಿಸಿಯಲೆಗಳ ಅನುಭವವಾಗಬಹುದು.</p>



<p>ಉತ್ತರದಲ್ಲಿ ಅತಿ ಹೆಚ್ಚಿನ ತಾಪ 45 ಡಿಗ್ರಿ ಸೆಲ್ಸಿಯಸ್‍ಗೆ ತಲುಪಿದರೆ ದಕ್ಷಿಣದ ನಮ್ಮ ಭಾಗದಲ್ಲಿ 39-40ಕ್ಕಾದರೂ ತಲುಪಬೇಡವೆ. ಸಾಮಾನ್ಯವಾಗಿ ದಕ್ಷಿಣದಲ್ಲಿ ತಾಪ 40ರ ಹತ್ತಿರಕ್ಕೆ ಬಂತೆಂದರೆ ಮೂರು ದಿಕ್ಕುಗಳಲ್ಲಿ ನಮ್ಮನ್ನು ಸುತ್ತುವರಿದಿರುವ ಅರಬಿ ಕಡಲು, ಇಂಡಿಯನ್ ಹೆಗ್ಗಡಲು ಮತ್ತು ಬಂಗಾಳ ಕೊಲ್ಲಿಗಳು ಸೈಕ್ಲೋನುಗಳನ್ನು ಕಳಿಸಿಕೊಟ್ಟು ಅಥವಾ ಬರಿಯ ಮೋಡಗಳ ಹಿಂಡನ್ನಾದರೂ ಕಳಿಸಿಕೊಟ್ಟು ಸೂರ್ಯನ ಶಾಖ ನೇರ ನಮ್ಮನ್ನು ತಟ್ಟದಂತೆ ನೋಡಿಕೊಳ್ಳುತ್ತವೆ. ಮಳೆ ಇಲ್ಲವೆ ಸೈಕ್ಲೋನಿನ ಗಾಳಿ ತಂದ ನೀರಾವಿ ಒಟ್ಟು ವಾತಾವರಣವನ್ನು ಸಹಿಸುವ ಮಟ್ಟದಲ್ಲಿ ಇರಿಸುತ್ತವೆ. ಇದು ಈವರೆಗಿನ ನಮ್ಮ ಅನುಭವ ಮತ್ತು ತಿಳುವಳಿಕೆ. ಆದರೆ ನಿಸರ್ಗವನ್ನು ನಂಬುವಂತಿಲ್ಲ. ಮಿಟಕಲಾಡಿಯಂತೆ ಅದೀಗ ಗುಟ್ಟು ಬಿಟ್ಟುಕೊಡುತ್ತಿಲ್ಲ. ನಾವೊಂದು ಬಗೆದರೆ ಅದು ಬೇರೊಂದು ಬಗೆಯುತ್ತಿದೆ. ಯಾಕೆಂದರೆ ನಾವೀಗ ತಬ್ಬಿಬ್ಬುಗೊಳಿಸಬಲ್ಲ ದಿಡೀರ್ ಹವಾಮಾನ ಬದಲಾವಣೆಗಳ ನಡುವೆ ಹಾದುಹೋಗುತ್ತಿದ್ದೇವೆ.</p>



<p>ಅಂತೂ ಫೆಬ್ರವರಿಯಲ್ಲಿ ರಾತ್ರಿಯೆಲ್ಲ ವಿದ್ಯುತ್ ಪಂಖ ಉರಿಸಿ ನಿದ್ದೆಹೋದ ದಿನಗಳನ್ನು ಕಳೆದಿದ್ದಾಯಿತು. ನಡುಹಗಲಿನ ಬಿಸಿಲಂತೂ ಕಲ್ಪನೆಗೂ ಮೀರಿ ಬಿರುಸಾಗಿದೆ. ಎರಡು ನಿಮಿಷ ಹೊರ ನಿಂತರೆ ಕಣ್ಣು ಕತ್ತಲೆ ಬಂದು ಬವಳಿ ಬೀಳುವಂತಾಗುತ್ತದೆ. ಭಾರತೀಯ ಹವಾಮಾನ ಪರಿಣಿತರಾದ ರಾಜೇಶ್ ಕಪಾಡಿಯಾ ಅವರ ಪ್ರಕಾರ ‘ಫೆಬ್ರವರಿಯಲ್ಲಿ ತಾಪ ಈ ಮಟ್ಟಕ್ಕೆ ಬಂದಿರುವುದು ಭಾರತವಷ್ಟೆ ಅಲ್ಲ ಇಡೀ ಏಷ್ಯಾಖಂಡದಲ್ಲೆ ಮೊದಲ ಬಾರಿ ಎನಿಸಿದೆ. ಇದು ಚಾರಿತ್ರಿಕವೇ ಸರಿ. ಭಾರತವಷ್ಟೆ ಅಲ್ಲ, ಪಕ್ಕದ ಪಾಕಿಸ್ತಾನದಲ್ಲೂ ನಿಸರ್ಗ ಬೇರೆ ಕತೆ ಬರೆಯುತ್ತಿಲ್ಲ. ಅಲ್ಲಿನ ಮಿಥಿ ಎಂಬಲ್ಲಿ ಫೆಬ್ರವರಿಯಲ್ಲಿ ದಿನದ ಅತಿಹೆಚ್ಚಿನ ತಾಪ 40 ಡಿಗ್ರಿ ದಾಟಿತು. ಹಿಂದಿನ ದಾಖಲೆ 1953ರಲ್ಲಿ ಉಮರ್‍ಕೋಟ್ ಎಂಬಲ್ಲಿ ಒಟ್ಟಾರೆ ಬೇಸಗೆಯಲ್ಲಿ 39.4 ಡಿಗ್ರಿ ದಾಖಲಾಗಿದ್ದುದಾಗಿತ್ತು!</p>



<p>&nbsp;ಭಾರತೀಯ ಹವಾಮಾನ ಇಲಾಖೆಯ ಚರಿತ್ರೆಯಲ್ಲೆ ಫೆಬ್ರವರಿ ತಿಂಗಳಲ್ಲಿ ಬಿಸಿಯಲೆಗಳು ಬರಬಹುದೆಂದು ಮುನ್ಸೂಚನೆ ನೀಡಿದ್ದು ಇದೇ ಮೊದಲ ಬಾರಿಯಾಗಿದೆ. ‘ಕೊಂಕಣ ಮತ್ತು ಗುಜರಾತಿನ ಕಛ್ ಪ್ರದೇಶದಲ್ಲಿ ಬಿಸಿಯಲೆಗಳು ಕಾಣಿಸಿಕೊಳ್ಳುತ್ತವೆ’ ಎಂಬ ಅದರ ಮುನ್ಸೂಚನೆಯೆ ಈ ವರುಷದ ಮೊದಲ ಅಧಿಕೃತ ಮುನ್ಸೂಚನೆಯಾಗಿದೆ.</p>



<figure class="wp-block-gallery has-nested-images columns-default is-cropped wp-block-gallery-17 is-layout-flex wp-block-gallery-is-layout-flex">
<figure class="wp-block-image size-large"><img loading="lazy" decoding="async" width="1024" height="683" data-id="20297" src="https://peepalmedia.com/wp-content/uploads/2023/03/1677587214_Summer-Heat-Temperature-7-1024x683.jpeg" alt="" class="wp-image-20297" srcset="https://peepalmedia.com/wp-content/uploads/2023/03/1677587214_Summer-Heat-Temperature-7-1024x683.jpeg 1024w, https://peepalmedia.com/wp-content/uploads/2023/03/1677587214_Summer-Heat-Temperature-7-300x200.jpeg 300w, https://peepalmedia.com/wp-content/uploads/2023/03/1677587214_Summer-Heat-Temperature-7-768x512.jpeg 768w, https://peepalmedia.com/wp-content/uploads/2023/03/1677587214_Summer-Heat-Temperature-7-150x100.jpeg 150w, https://peepalmedia.com/wp-content/uploads/2023/03/1677587214_Summer-Heat-Temperature-7-696x464.jpeg 696w, https://peepalmedia.com/wp-content/uploads/2023/03/1677587214_Summer-Heat-Temperature-7-1068x712.jpeg 1068w, https://peepalmedia.com/wp-content/uploads/2023/03/1677587214_Summer-Heat-Temperature-7.jpeg 1200w" sizes="auto, (max-width: 1024px) 100vw, 1024px" /></figure>
</figure>



<p><strong>ಬಿಸಿಯಲೆಗಳೂ, ಬಿಸಿಯಪ್ಪುಗೆಯೂ</strong></p>



<p>ನಮ್ಮನ್ನು ಆಳುವವರಿಗೆ ಎಂತೆಂತಹ ‘ಗುರುತರ’ ಆದ್ಯತೆಯ ಆಲೋಚನೆಗಳು ಬರುತ್ತವೆಂದರೆ Animal Welfare Board of India ಸೂಚನೆಯ ಮೇರೆಗೆ ಒಕ್ಕೂಟ ಸರ್ಕಾರವು ಫೆಬ್ರವರಿ 14ನೇ ತಾರೀಕಿನ ‘ಪ್ರೇಮಿಗಳ ದಿನ’ ವನ್ನು ‘ದನ ತಬ್ಬುವ ದಿನ (Cow Hug Day)’ ಎಂದು ಆಚರಿಸಲು ಅಧಿಕೃತ ಇಸ್ತಿಹಾರನ್ನೇ ಹೊರಡಿಸಿತು (ಆಮೇಲೆ ಎಲ್ಲೆಡೆಯಿಂದ ತಾನು ಊಹಿಸದ ತೀವ್ರ ಸೃಜನಶೀಲ ಗೇಲಿಗಳು ಬಂದ ಕಾರಣ ಕರೆಯನ್ನು ವಾಪಾಸು ಪಡೆಯಿತು). ಈ ಹುಚ್ಚಾಟದ ನಡುವೆ ದಿನದ ಅತಿಹೆಚ್ಚಿನ ತಾಪ ಗುಜರಾತಿನ ಭುಜ್‍ನಲ್ಲಿ ಫೆಬ್ರವರಿ ಮೊದಲ ವಾರದಲ್ಲಿ 33 ಡಿಗ್ರಿ ಸೆಲ್ಸಿಯಸ್ ಇದ್ದದ್ದು ಪ್ರೇಮಿಗಳ ದಿನದಂದು 34 ಡಿಗ್ರಿ ಮುಟ್ಟಿ ತಾರೀಕು 15ರಂದು 37ನ್ನು ತಲುಪಿ 16ರಂದು 40.3ಕ್ಕೇರಿ ಬಿಟ್ಟಿತ್ತು. ಈ ವರುಷ ಭಾರತದಲ್ಲಿ 40ರ ಮಿತಿಯನ್ನು ದಾಟಿದ ಮೊದಲ ತಾಣ ಎಂಬ ಹೆಸರು ಭುಜ್ ಮೇಲೆ ಅಗತುಕೊಂಡಿತು&nbsp; (ಇದೇ ಭುಜ್‍ನಲ್ಲಿ 2022ರಲ್ಲಿ ದಿನದ ಅತಿ ಹೆಚ್ಚಿನ ತಾಪ ಮೊದಲಬಾರಿಗೆ ಮಾರ್ಚ್ 15ರಂದು 40 ಡಿಗ್ರಿ ದಾಟಿತ್ತು. ಅಲ್ಲಿಗೆ ಈ ವರುಷ 27 ದಿನಗಳ ಮುಂಚೆಯೆ 40 ತಲುಪಿದ್ದುದಕ್ಕೆ ಭುಜ್ ಮಂದಿ ಅಚ್ಚರಿ ಗೊಳ್ಳಬೇಕೊ, ಅಂಜಿಕೆ ಪಡಬೇಕೊ ಗೊತ್ತಿಲ್ಲ). ಭುಜ್ ಅಲ್ಲದೆ ಉತ್ತರ ಭಾರತದ ನೂರಾರು ತಾಣಗಳು 40 ಡಿಗ್ರಿಗೂ ಹೆಚ್ಚಿನ ತಾಪವನ್ನು ದಾಖಲಿಸಿದವು. ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮಾತ್ರ ತಲೆಕೆಡಿಸಿ ಕೊಂಡಂತ್ತಿತ್ತು. ಸರ್ಕಾರಗಳ ಮಟ್ಟದಲ್ಲಿ ಮತ್ತು ಮಾಧ್ಯಮಗಳಲ್ಲಿ ಎಂದಿನಂತೆ ‘ದನ ತಬ್ಬುವ’ ಅವಕಾಶ ತಪ್ಪಿಹೋದದ್ದರ ಬಗ್ಗೆ ಗುಸುಗುಸು, ನಿರಾಸೆಯ ಗೊಣಗಾಟಗಳು ಜರುಗುತ್ತಿದ್ದವು. ಈಪಾಟಿ ತಾಪದಲ್ಲಿ ತಬ್ಬಿಕೊಳ್ಳಲು ಪ್ರೇಮಿಗಳೇ ಹಿಂದುಮುಂದು ನೋಡುವಾಗ ಬಿಸಿನೆತ್ತರಿನ ಜೀವಿಗಳನ್ನು ತಬ್ಬಿಕೊಳ್ಳಿ ಎನ್ನುವುದು ಜಾಣ್ಮೆಯೆ? ಪಾಪ, ಮೊದಲೇ ಧಗೆಯಿಂದ ವಿಪರೀತ ನೀರಡಿಸಿ ದಣಿದಿರುವ ದನಗಳಿಗೇಕೆ ಕಸಿವಿಸಿ ಮಾಡುವುದು?</p>



<p></p>



<p><strong>ಕೆ.ಎಸ್.ರವಿಕುಮಾರ್, ಹಾಸನ</strong></p>



<p>ಲೇಖಕರು. ಮುಖ್ಯವಾಗಿ ವಿಜ್ಞಾನ ಬರಹಗಾರರು. ಪರಿಸರದ ಮೇಲೆ ವಿಶೇಷ ಆಸಕ್ತಿ. ಚಾರಣ ಹವ್ಯಾಸ.</p>



<p>ಮೊ : 9964604297</p>
]]></content:encoded>
					
		
		
			</item>
	</channel>
</rss>
