<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ದಲಿತ ನೋಟ &#8211; Peepal Media</title>
	<atom:link href="https://peepalmedia.com/category/%E0%B2%9C%E0%B2%A8-%E0%B2%97%E0%B2%A3-%E0%B2%AE%E0%B2%A8/dalit-view/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 14 Aug 2025 12:18:44 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>ದಲಿತ ನೋಟ &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಒಳಮೀಸಲಾತಿ ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ದೇವನೂರು ಮಹಾದೇವ ಬಹಿರಂಗ ಪತ್ರ</title>
		<link>https://peepalmedia.com/devanur-mahadevs-open-letter-to-chief-minister-siddaramaiah/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 14 Aug 2025 12:18:43 +0000</pubDate>
				<category><![CDATA[ದಲಿತ ನೋಟ]]></category>
		<category><![CDATA[ವಿಶೇಷ]]></category>
		<guid isPermaLink="false">https://peepalmedia.com/?p=64220</guid>

					<description><![CDATA[ಒಳಮೀಸಲಾತಿ ಜಾರಿಯ ಚರ್ಚೆ ಬಿಸಿ ಏರಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಹಿತಿ, ಚಿಂತಕ ದೇವನೂರು ಮಹಾದೇವ ಅವರು ಬಹಿರಂಗ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಮುಖ್ಯಮಂತ್ರಿಗಳು ಶೀಘ್ರವೇ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಪತ್ರದ ಒಟ್ಟೂ ಅಂಶ ಈ ಕೆಳಗಿನಂತಿದೆ. ನಾನು ಗೊಂದಲ, ಆತಂಕಗಳ ನಡುವೆ ತಮಗೆ ಈ ಪತ್ರ ಬರೆಯುತ್ತಿರುವೆ. ಒಳಮೀಸಲಾತಿ ವರದಿ ವಿವಾದಕ್ಕೊಳಗಾಗಿ, ಎಲ್ಲಿ ಮುಂದೂಡಲ್ಪಡುತ್ತದೊ ಎಂಬುದು ನನ್ನನ್ನು ತುಂಬಾ ಕಾಡುತ್ತಿದೆ. ಜೊತೆಗೆ, ಖಾಲಿ ಇರುವ ಉದ್ಯೋಗಗಳಿಗೂ ನೇಮಕಾತಿ ಇಲ್ಲದೆ ಏಗುತ್ತಿರುವ ತರುಣರು, ತಮ್ಮ ತಾರುಣ್ಯ [&#8230;]]]></description>
										<content:encoded><![CDATA[
<p>ಒಳಮೀಸಲಾತಿ ಜಾರಿಯ ಚರ್ಚೆ ಬಿಸಿ ಏರಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಹಿತಿ, ಚಿಂತಕ ದೇವನೂರು ಮಹಾದೇವ ಅವರು ಬಹಿರಂಗ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಮುಖ್ಯಮಂತ್ರಿಗಳು ಶೀಘ್ರವೇ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಪತ್ರದ ಒಟ್ಟೂ ಅಂಶ ಈ ಕೆಳಗಿನಂತಿದೆ.</p>



<p>ನಾನು ಗೊಂದಲ, ಆತಂಕಗಳ ನಡುವೆ ತಮಗೆ ಈ ಪತ್ರ ಬರೆಯುತ್ತಿರುವೆ. ಒಳಮೀಸಲಾತಿ ವರದಿ ವಿವಾದಕ್ಕೊಳಗಾಗಿ, ಎಲ್ಲಿ ಮುಂದೂಡಲ್ಪಡುತ್ತದೊ ಎಂಬುದು ನನ್ನನ್ನು ತುಂಬಾ ಕಾಡುತ್ತಿದೆ. ಜೊತೆಗೆ, ಖಾಲಿ ಇರುವ ಉದ್ಯೋಗಗಳಿಗೂ ನೇಮಕಾತಿ ಇಲ್ಲದೆ ಏಗುತ್ತಿರುವ ತರುಣರು, ತಮ್ಮ ತಾರುಣ್ಯ ಕಳೆದುಕೊಂಡು ಮಧ್ಯ ವಯಸ್ಕರಾಗುತ್ತಿದ್ದಾರೆ. ಇದು ತುಂಬಾನೆ ದಯನೀಯ ಪರಿಸ್ಥಿತಿ.</p>



<p>ಇಂತಹ ಪರಿಸ್ಥಿತಿಯಲ್ಲಿ ನನಗೆ ತೋರುತ್ತಿರುವ ಪರಿಹಾರ ಇದು. ಒಂದು, ಜಸ್ಟೀಸ್ ನಾಗಮೋಹನ್ದಾಸ್ ಆಯೋಗದ ವರದಿಯನ್ನು ಯಥಾವತ್ತಾಗಿ ಅನುಷ್ಠಾನ ಮಾಡುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳಬೇಕು. ಇದರ ಜೊತೆಗೇನೆ, ಇಂದು ದಲಿತ ಸಮುದಾಯವೂ ದಿನದಿನಕ್ಕೂ ಚಲನಶೀಲತೆ ಪಡೆದುಕೊಂಡು ಬದಲಾವಣೆಯಾಗುತ್ತಿರುವುದರಿಂದ ಅದಕ್ಕೆ ತಕ್ಕಂತೆ ಮೀಸಲಾತಿ ಪ್ರಾತಿನಿಧ್ಯವನ್ನು ಸಮತೋಲನ ಮಾಡುವುದಕ್ಕಾಗಿ ಹಾಗೂ ಕಾಲಕಾಲಕ್ಕೆ ಹೊಸ ದತ್ತಾಂಶಗಳಿಂದ ಒಳ ಮೀಸಲಾತಿಯ ಪ್ರಮಾಣವನ್ನು ಪರಿಷ್ಕರಿಸಲು, ಹಿಂದುಳಿದ ವರ್ಗಗಳಿಗೆ ಇರುವಂತೆಯೇ, ಪರಿಶಿಷ್ಟ ಜಾತಿಗಳ ಆಯೋಗಕ್ಕೂ ಅಧಿಕಾರ ಮತ್ತು ಕಾರ್ಯವ್ಯಾಪ್ತಿಯನ್ನು ಒದಗಿಸಬೇಕು ಎಂಬುದು ನನ್ನ ಭಾವನೆ. ಈ ರೀತಿಯಾದರೆ ಆ ಆಯೋಗದ ಮುಂದೆ, ಜಸ್ಟೀಸ್ ನಾಗಮೋಹನ್ ದಾಸ್ ಅವರ ವರದಿಯ ಬಗ್ಗೆ ಇರಬಹುದಾದ ಯಾವುದೇ ಆಕ್ಷೇಪಣೆಗಳನ್ನು ಸಲ್ಲಿಸಲು ಹಾಗೂ ಪರಿಹಾರ ಕಂಡುಕೊಳ್ಳಲು ಸಾಧ್ಯತೆ ಹೆಚ್ಚುತ್ತದೆ.</p>



<p>ಈ ಹಿಂದೆ ಮೀಸಲಾತಿ ಹೆಚ್ಚಳ ಆಯೋಗದ ಅಧ್ಯಕ್ಷರಾಗಿ ಜಸ್ಟೀಸ್ ನಾಗಮೋಹನ್ ದಾಸ್ ಅವರು ಸಲ್ಲಿಸಿದ ವರದಿಯಲ್ಲಿ &#8216;ಪರಿಶಿಷ್ಠ ಜಾತಿ ಸಮುದಾಯವು 17.98%, ಪರಿಶಿಷ್ಟ ಪಂಗಡವು 7.41% ಜನಸಂಖ್ಯೆ ಇರುವುದರಿಂದ ಎಸ್‌ಸಿಗೆ 18% ಹಾಗೂ ಎಸ್‌ಟಿಗೆ 7.50% ನೀಡುವುದು ಸೂಕ್ತ&#8217; ಎಂದಿದ್ದರು. (ಆದರೆ, ಅಂದು ಆ ಆಯೋಗದ ಮುಂದೆ 17%ಗೆ ಏರಿಸುವ ವಿಚಾರವಷ್ಟೇ ಇದ್ದುದರಿಂದ, ಶಿಫಾರಸ್ಸು ಅಷ್ಟಕ್ಕೆ ಸೀಮಿತವಾಗಿತ್ತು). ತಾವು 1% ಹೆಚ್ಚಳದ ನಿರ್ಧಾರ ಕೈಗೊಂಡರೆ ಹೆಚ್ಚುವರಿಯಾಗಿ ಸಿಗುವ 1% ನಿಂದ ಇಂದಿನ ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದಾದ ಸಾಧ್ಯತೆ ಇದೆ. ಇದು ಸರ್ಕಾರದ ಕೈಯಲ್ಲೇ ಇದೆ ಎಂದುಕೊಂಡಿದ್ದೇನೆ. ನೀವು ಈ ಕುರಿತು ಆಶ್ವಾಸನೆ ನೀಡಿದರೂ ದಲಿತ ಸಮುದಾಯ ನಂಬುತ್ತದೆ.</p>



<p>01-08-2024ರ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಪರಿಶಿಷ್ಟ ಜಾತಿಗಳು ವೈವಿಧ್ಯಮಯ ಭಿನ್ನರೂಪತೆಯ (Heterogeneous) ಗುಂಪುಗಳಾಗಿವೆ ಎಂದು ಅಭಿಪ್ರಾಯ ನೀಡಿದೆ. ವರ್ಗೀಕರಣ ನಿರ್ಧರಿಸುವಾಗ ಸರ್ವಾಂಗೀಣ ಹಿಂದುಳಿದಿರುವಿಕೆಯನ್ನೂ ಪರಿಗಣಿಸಿ ನಿರ್ಧರಿಸಬೇಕಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಜಸ್ಟೀಸ್ ನಾಗಮೋಹನ್ ದಾಸ್‌ರವರ ವರದಿಯನ್ನು ಗಮನಿಸಿದರೆ ಅದು ಸುಪ್ರೀಂ ಕೋರ್ಟ್ ಆಶಯಕ್ಕೆ ತಕ್ಕಂತೆಯೇ ಇರುವಂತೆ ಕಾಣಿಸುತ್ತದೆ.</p>



<p>ಇದಲ್ಲದೆ, ಜಸ್ಟೀಸ್ ನಾಗಮೋಹನ್ ದಾಸ್ ವರದಿಯು ಸಮಗ್ರ ಸಮೀಕ್ಷೆ ಮಾಡುವ ಮೂಲಕವೇ ಅಂಕಿ-ಅಂಶಗಳನ್ನು ಸಂಗ್ರಹಿಸಿದೆ. ವಿಸ್ತಾರವಾದ ಸಮೀಕ್ಷೆ ಮಾಡಿ 94% ರಷ್ಟು ಜನರ ಮಾಹಿತಿ ಸಂಗ್ರಹಿಸಿದೆ. ಮನೆ ಮನೆ ಸರ್ವೇ, ನಿಗಧಿತ ಕೇಂದ್ರಗಳಲ್ಲಿ ಸರ್ವೆ, Online ಸರ್ವೆ ಅವಕಾಶ ಹೀಗೆ ಸಮಗ್ರ ಪ್ರಯತ್ನ ಮಾಡಿದೆ. ಈ ರೀತಿ ಸಮೀಕ್ಷೆ ಅಪರೂಪ. ಮೊದಲು ಇದನ್ನು ಎಲ್ಲರೂ ಗೌರವಿಸಬೇಕಾಗಿದೆ. ಹಾಗೆಂದು ಈಗ ಎದ್ದಿರುವ ಆಕ್ಷೇಪಣೆಗಳನ್ನು ತಳ್ಳಿ ಹಾಕಬೇಕಿಲ್ಲ. ಅವನ್ನು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶಾಶ್ವತ ಆಯೋಗಕ್ಕೆ ಹೆಚ್ಚಿನ ಅಧಿಕಾರ ಮತ್ತು ಕಾರ್ಯವ್ಯಾಪ್ತಿಯನ್ನು ತಾವು ಘೋಷಣೆ ಮಾಡುವುದಾದರೆ, ಅದು ಮುಂದಿನ ದಿನಗಳಲ್ಲಿ ಕಾಲಕಾಲಕ್ಕೆ ಲಭ್ಯವಾಗುವ ಜಾತಿ/ಜನಗಣತಿಯ ದತ್ತಾಂಶಗಳ ಮೂಲಕ ಪರಿಷ್ಕರಣೆಯ ಮೂಲಕ ಸಮತೋಲನ ಮಾಡಲು ಅವಕಾಶವಾಗುತ್ತದೆ.</p>



<p>ಕೊನೆಯದಾಗಿ, 1) ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು 18% ಮತ್ತು 7.5% ಮಾಡುವ ಬಗ್ಗೆ ಆಶ್ವಾಸನೆ ನೀಡುವುದು. 2) ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ಶಾಶ್ವತ ಆಯೋಗಕ್ಕೆ ಹೆಚ್ಚಿನ ಕಾರ್ಯವ್ಯಾಪ್ತಿ ಹಾಗೂ ಅಧಿಕಾರದ ಘೋಷಣೆ ಮಾಡುವುದು. 3) ಮೀಸಲಾತಿಯನ್ನು ನೀಡದಿರುವುದಕ್ಕಾಗಿಯೇ ಹುಟ್ಟಿಕೊಂಡಿದೆಯೇನೋ ಎಂಬಂತಿರುವ &#8216;ಗುತ್ತಿಗೆ ಕೆಲಸ&#8217;ಗಳಲ್ಲು ಮೀಸಲಾತಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುವುದು. ಅಷ್ಟೇ ಅಲ್ಲದೇ, 4) ಪರಿಶಿಷ್ಟ ಜಾತಿ/ಪಂಗಡಗಳ ಹೆಸರಿನಲ್ಲಿ ಸುಳ್ಳು ಪ್ರಮಾಣ ಪತ್ರ ಪಡೆದುಕೊಂಡಿರುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಅಗತ್ಯವಿರುವ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ನಿರ್ಧಾರ ಪ್ರಕಟಿಸುವುದು. ಇಂಥಹ ನಿಲವುಗಳು ಜಸ್ಟೀಸ್ ನಾಗಮೋಹನ್ ದಾಸ್ ವರದಿಯನ್ನು ತಕ್ಷಣವೇ ಅನುಷ್ಠಾನ ಮಾಡಲು ಪೂರಕ ವಾತಾವರಣ ಉಂಟು ಮಾಡಬಹುದು ಎಂದು ಭಾವಿಸುತ್ತೇನೆ.</p>



<p>ವಂದನೆಗಳೊಡನೆ.</p>



<p>ದೇವನೂರ ಮಹಾದೇವ</p>
]]></content:encoded>
					
		
		
			</item>
		<item>
		<title>ಜಾತಿ ದೌರ್ಜನ್ಯ: ಬುಲೆಟ್ ಬೈಕ್ ಓಡಿಸಿದ್ದಕ್ಕೆ ದಲಿತ ಯುವಕನ ಕೈ ಕತ್ತರಿಸಿದ ಸವರ್ಣೀಯರು</title>
		<link>https://peepalmedia.com/caste-atrocities-upper-caste-people-chop-off-the-hand-of-a-dalit-youth-who-was-riding-a-bullet-bike/</link>
		
		<dc:creator><![CDATA[Peepal Media]]></dc:creator>
		<pubDate>Thu, 13 Feb 2025 13:12:56 +0000</pubDate>
				<category><![CDATA[ದಲಿತ ನೋಟ]]></category>
		<category><![CDATA[Caste atrocities]]></category>
		<category><![CDATA[Dalit assault]]></category>
		<category><![CDATA[Dalit community]]></category>
		<category><![CDATA[tamil nadu]]></category>
		<guid isPermaLink="false">https://peepalmedia.com/?p=53888</guid>

					<description><![CDATA[ಪ್ರಬಲ ಜಾತಿಗರು ಬುಲೆಟ್ ಬೈಕ್ ಓಡಿಸಿದ ಕಾರಣಕ್ಕೆ ದಲಿತ ಯುವಕನ ಕೈ ಕತ್ತರಿಸಿರುವ ವಿಕೃತ ಘಟನೆಯೊಂದು ತಮಿಳುನಾಡಿನ ಶಿವಗಂಗ ಜಿಲ್ಲೆಯ ಮೇಳಪಿದವೂರು ಗ್ರಾಮದಲ್ಲಿ ನಡೆದಿದೆ.   2025 ಫೆಬ್ರವರಿ 12 ರಂದು ಸಂಜೆ ತಮಿಳುನಾಡಿನ ಶಿವಗಂಗ ಜಿಲ್ಲೆಯ ಮೇಳಪಿದವೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬುಲೆಟ್ ಬೈಕ್ ಓಡಿಸುತ್ತಿದ್ದ ಅಯ್ಯಸಾಮಿ ಎಂಬ ಯುವಕನನ್ನು ಅಡ್ಡಗಟ್ಟಿ ದಾಳಿ ನಡೆಸಿರುವ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಬುಧವಾರ ಸಂಜೆ ಅಯ್ಯಸಾಮಿ ತನ್ನ ಬುಲೆಟ್ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ, ಅದೇ [&#8230;]]]></description>
										<content:encoded><![CDATA[
<p>ಪ್ರಬಲ ಜಾತಿಗರು ಬುಲೆಟ್ ಬೈಕ್ ಓಡಿಸಿದ ಕಾರಣಕ್ಕೆ ದಲಿತ ಯುವಕನ ಕೈ ಕತ್ತರಿಸಿರುವ ವಿಕೃತ ಘಟನೆಯೊಂದು ತಮಿಳುನಾಡಿನ ಶಿವಗಂಗ ಜಿಲ್ಲೆಯ ಮೇಳಪಿದವೂರು ಗ್ರಾಮದಲ್ಲಿ ನಡೆದಿದೆ.  </p>



<p>2025 ಫೆಬ್ರವರಿ 12 ರಂದು ಸಂಜೆ ತಮಿಳುನಾಡಿನ ಶಿವಗಂಗ ಜಿಲ್ಲೆಯ ಮೇಳಪಿದವೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬುಲೆಟ್ ಬೈಕ್ ಓಡಿಸುತ್ತಿದ್ದ ಅಯ್ಯಸಾಮಿ ಎಂಬ ಯುವಕನನ್ನು ಅಡ್ಡಗಟ್ಟಿ ದಾಳಿ ನಡೆಸಿರುವ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.</p>



<p>ಪೊಲೀಸರ ಪ್ರಕಾರ, ಬುಧವಾರ ಸಂಜೆ ಅಯ್ಯಸಾಮಿ ತನ್ನ ಬುಲೆಟ್ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ, ಅದೇ ಗ್ರಾಮದ ಮೂವರು ಪ್ರಬಲ ಜಾತಿ ಹಿಂದೂಗಳಾದ ಆರ್. ವಿನೋದ್‌ಕುಮಾರ್ (21), ಎ. ಅಥೀಶ್ವರನ್ (22) ಮತ್ತು ಎಂ. ವಲ್ಲರಸು (21) ಅಡ್ಡಗಟ್ಟಿ ಹರಿತವಾದ ಆಯುಧಗಳಿಂದ ಹಲ್ಲೆ ಮಾಡಿದ್ದಾರೆ ಎಂದು ವರದಿ ಹೇಳಿದೆ.</p>



<p>ಹಲ್ಲೆಗೊಳಗಾದ ಅಯ್ಯಸಾಮಿ ಶಿವಗಂಗೆಯ ಕಾಲೇಜಿನಲ್ಲಿ ಮೂರನೇ ವರ್ಷದ ಯುಜಿ ಗಣಿತ ವಿದ್ಯಾರ್ಥಿ ಎಂದು ತಿಳಿದುಬಂದಿದ್ದು, ಹಲ್ಲೆಯಿಂದಾಗಿ ಗಂಭೀರ ಗಾಯಗೊಂಡಿದ್ದ ಅವರನ್ನು ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.</p>



<p>“ಪ್ರಬಲ ಸಮುದಾಯದ ಯುವಕರು ಮಾತ್ರ ದುಬಾರಿ ಬೈಕ್‌ಗಳನ್ನು ಓಡಿಸಬಹುದು. ದಲಿತರು ಅಂತಹ ಬೈಕ್‌ಗಳನ್ನು ಓಡಿಸಬಾರದು” ಎಂದು ಹೇಳುತ್ತಾ ಆರೋಪಿಗಳು ಅಯ್ಯಸಾಮಿಯ ಕೈಗಳನ್ನು ಕಡಿದಿದ್ದಾರೆ” ಎಂದು ಸಂತ್ರಸ್ತ ಯುವಕನ ಸಂಬಂಧಿ ಮುನಿಯಸಾಮಿ ಹೇಳಿದ್ದಾರೆ.&nbsp;</p>



<p>ದಾಳಿ ನಡೆದಾಗ ಅಯ್ಯಸಾಮಿ ತಪ್ಪಿಸಿಕೊಂಡು ಸ್ಥಳದಿಂದ ಓಡಿ ಹೋಗಿ ಮನೆ ತಲುಪಿದ್ದಾರೆ. ಇಲ್ಲದಿದ್ದರೆ ಆರೋಪಿಗಳು ಆತನನ್ನು ಕೊಲೆ ಮಾಡುತ್ತಿದ್ದರು ಎಂದು ಮುನಿಯಸಾಮಿ ತಿಳಿಸಿದ್ದಾರೆ.</p>



<p>ಕುಟುಂಬಸ್ಥರು ಅಯ್ಯಸಾಮಿಯನ್ನು ಆಸ್ಪತ್ರೆಗೆ ಕರೆದೊಯ್ದ ನಂತರ, ಪ್ರಬಲ ಜಾತಿಯವರು ದಲಿತ ಕುಟುಂಬದ ಮನೆಯನ್ನು ದೋಚಿದ್ದಾರೆ. ಗ್ರಾಮದಲ್ಲಿ ಜಾತಿ ತಾರತಮ್ಯ ಚಾಲ್ತಿಯಲ್ಲಿದೆ. ತಮ್ಮ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡುವಂತೆ ಮುನಿಯಸಾಮಿ ಒತ್ತಾಯಿಸಿದ್ದಾರೆ.</p>



<p>“ಅಯ್ಯಸಾಮಿ ಬುಲೆಟ್ ಬೈಕ್ ಚಲಾಯಿಸುವುದು ಪ್ರಬಲ ಜಾತಿಯವರಿಗೆ ಇಷ್ಟವಿರಲಿಲ್ಲ. ಈ ಹಿಂದೆಯೂ ಅವರು ಬೈಕಿಗೆ ಹಾನಿ ಮಾಡಿದ್ದರು” ಎಂದು ಅವರ ತಂದೆ ಭೂಮಿನಾಥನ್ ಹೇಳಿದ್ದಾರೆ.</p>



<p>ಬುಲೆಟ್ ಓಡಿಸಿದ್ದಕ್ಕೆ ದಾಳಿ ಮಾಡಲಾಗಿದೆ ಎಂಬುವುದನ್ನು ಪೊಲೀಸ್ ಮೂಲಗಳು ನಿರಾಕರಿಸಿವೆ.&nbsp;</p>



<p>ಅಯ್ಯಸಾಮಿ ಆರೋಪಿಗಳಲ್ಲಿ ಒಬ್ಬನಾದ ಅಥೀಶ್ವರನ್‌ಗೆ ಗೇಲಿ ಮಾಡಿದ್ದರು. ಈ ವಿಚಾರಕ್ಕೆ ಅವರ ನಡುವೆ ಮೊದಲೇ ಜಗಳವಿತ್ತು. ತನಿಖೆ ಇನ್ನೂ ಮುಂದುವರೆದಿದೆ ಎಂದು ಹೇಳಿರುವುದಾಗಿ ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್ ವರದಿ ಹೇಳಿದೆ.</p>



<p>ಘಟನೆ ಸಂಬಂಧ ಸಿಪ್ಕಾಟ್ ಪೊಲೀಸರು ವಿನೋದ್‌ಕುಮಾರ್, ಅಥೀಶ್ವರನ್ ಮತ್ತು ವಲ್ಲರಸು ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ 296 (1), 126 (2), 118 (1), 351 (3) ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್‌ 3(1)(ಆರ್)(ಎಸ್‌) ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿಯೂ ವರದಿಯಾಗಿದೆ.</p>
]]></content:encoded>
					
		
		
			</item>
		<item>
		<title>ಕೇಂದ್ರ ಸಚಿವ ಸಂಪೂಟದಿಂದ ಅಮಿತ್ ಶಾ ವಜಾಕ್ಕೆ ಆಗ್ರಹಿಸಿ, ಅಣುಕು ಶವಯಾತ್ರೆ ದಲಿತ &#8211; ಜನಪರ ಚಳುವಳಿಗಳ ಒಕ್ಕೂಟದಿಂದ ಪ್ರತಿಭಟನೆ</title>
		<link>https://peepalmedia.com/amit-shahs-dismissal-from-union-minister-samputa-protest-by-alliance-of-dalit-peoples-movements/</link>
		
		<dc:creator><![CDATA[ರಮೇಶ್‌ ಹಾಸನ್‌]]></dc:creator>
		<pubDate>Fri, 20 Dec 2024 20:27:26 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[ದಲಿತ ನೋಟ]]></category>
		<category><![CDATA[ದೇಶ]]></category>
		<category><![CDATA[ಧರ್ಮ- ಸಂಸ್ಕೃತಿ]]></category>
		<category><![CDATA[ಮೀಡಿಯಾ]]></category>
		<category><![CDATA[ಹಾಸನ]]></category>
		<category><![CDATA[kannada]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=51009</guid>

					<description><![CDATA[ಹಾಸನ: ಭಾರತದ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತು ಅಪಮಾನಕರ ಮಾತುಗಳನ್ನಾಡಿರುವ ಕೇಂದ್ರ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಬಂಧಿಸುವAತೆ ಆಗ್ರಹಿಸಿ ದಲಿತ &#8211; ಜನಪರ ಚಳುವಳಿಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿದಲ್ಲದೆ ಕೇಂದ್ರ ಗೃಹಮಂತ್ರಿ ಪ್ರತಿಕೃತಿ ಧಹಿಸಿ ಜಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ಬಂದ ಅವರು, ದಲಿತ ಹಿರಿಯ ಮುಖಂಡ [&#8230;]]]></description>
										<content:encoded><![CDATA[
<p><br><strong>ಹಾಸನ:</strong> ಭಾರತದ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತು ಅಪಮಾನಕರ ಮಾತುಗಳನ್ನಾಡಿರುವ ಕೇಂದ್ರ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಬಂಧಿಸುವAತೆ ಆಗ್ರಹಿಸಿ ದಲಿತ &#8211; ಜನಪರ ಚಳುವಳಿಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿದಲ್ಲದೆ ಕೇಂದ್ರ ಗೃಹಮಂತ್ರಿ ಪ್ರತಿಕೃತಿ ಧಹಿಸಿ ಜಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.</p>



<p><br>ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ಬಂದ ಅವರು, ದಲಿತ ಹಿರಿಯ ಮುಖಂಡ ಎಚ್.ಕೆ. ಸಂದೇಶ್ ಮತ್ತು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಸೋಮಶೇಖರ್ ಮಾತನಾಡಿ, ಇದೆ ವೇಳೆ ಸಿ ಮಾತನಾಡಿ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಡಿರುವ ಅಪಮಾನಕರ ಮಾತುಗಳು ಅತ್ಯಂತ ಖಂಡನೀಯವಾದುದು. ಈ ಮಾತುಗಳು ಅಮಿತ್ ಶಾ ಅವರ ಮನುವಾದಿ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ ಹಾಗೂ ಅವರು ಹಿಂದೆಯೂ ಈಗಲೂ ಮುಂದೆಯೂ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಒಪ್ಪಿಕೊಳ್ಳುವುದಿಲ್ಲ ಎನ್ನುವುದು ಸಾಬೀತಾಗುತ್ತದೆ. ಇಂತಹ <strong>ಮನುವಾದಿ ಮನಸ್ಥಿತಿಯ ಅಮಿತ್ ಶಾ ಭಾರತದ ಗೃಹ ಸಚಿವರಾಗಿ</strong> ಮುಂದುವರಿದರೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ವ್ಯಕ್ತಿತ್ವ ಮತ್ತು ಅವರ ಆಶಯಗಳಿಗೆ ವಿರುದ್ಧವಾಗುತ್ತದೆ. ಹಾಗೂ ಭಾರತದ ಸಂವಿಧಾನದ ಮೂಲ ತತ್ವಗಳಿಗೆ ದಕ್ಕೆಯಾಗುತ್ತದೆ ಎಂದರು. ಭಾರತದ ಸಂವಿಧಾನದ 75ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ದೇಶದ ರಾಜ್ಯ ಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿಯೇ ಭಾರತದ ಸಂವಿಧಾನ ಶಿಲ್ಪಿ ಬಾಬಾಸಾಹೆಬ್ ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಅಮಿತ್ ಶಾ ಅವರು ಆಡಿರುವ ಅಪಮಾನಕರ ಮಾತುಗಳು ಕೇವಲ ಆಕಸ್ಮಿಕವೇನೂ ಅಲ್ಲ. </p>



<figure class="wp-block-image size-full"><img fetchpriority="high" decoding="async" width="941" height="649" src="https://peepalmedia.com/wp-content/uploads/2024/12/cc72074c-cc4c-4c7a-b2db-6c72453c4803.jpg" alt="" class="wp-image-51011" srcset="https://peepalmedia.com/wp-content/uploads/2024/12/cc72074c-cc4c-4c7a-b2db-6c72453c4803.jpg 941w, https://peepalmedia.com/wp-content/uploads/2024/12/cc72074c-cc4c-4c7a-b2db-6c72453c4803-300x207.jpg 300w, https://peepalmedia.com/wp-content/uploads/2024/12/cc72074c-cc4c-4c7a-b2db-6c72453c4803-768x530.jpg 768w, https://peepalmedia.com/wp-content/uploads/2024/12/cc72074c-cc4c-4c7a-b2db-6c72453c4803-150x103.jpg 150w, https://peepalmedia.com/wp-content/uploads/2024/12/cc72074c-cc4c-4c7a-b2db-6c72453c4803-218x150.jpg 218w, https://peepalmedia.com/wp-content/uploads/2024/12/cc72074c-cc4c-4c7a-b2db-6c72453c4803-696x480.jpg 696w" sizes="(max-width: 941px) 100vw, 941px" /></figure>



<p>ಸಂವಿಧಾನದ ಕುರಿತ ಚರ್ಚೆಯ ಸಂದರ್ಭದಲ್ಲಿಯೇ ಸಂವಿಧಾನ ಶಿಲ್ಪಿಗೆ ಅವಮಾನ ಮಾಡುವುದು ಅವರ ನೈಜ ಉದ್ದೇಶವಾಗಿತ್ತು. ಅಮಿತ್ ಶಾ ಪ್ರತಿನಿಧಿಸುವ ಆರ್‌ಎಸ್‌ಎಸ್, ಜನಸಂಘ ಮತ್ತು ಬಿಜೆಪಿ ಭಾರತ ದೇಶವನ್ನು ಸಾರ್ವಭೌಮ ಸಮಾಜವಾದಿ ಮತಧರ್ಮ ನಿರಪೇಕ್ಷ ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ನಿರೂಪಿಸುವ ಭಾರತದ ಸಂವಿಧಾನ ಮತ್ತು ಅದರ ರಚನೆಗೆ ಅತ್ಯಂತ ಮಹತ್ವದ ಕೊಡುಗೆ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿರುದ್ಧ ಆರಂಭದಿAದಲೂ ತೀವ್ರ ಅಸಮಾಧಾನ ಮತ್ತು ಅತೃಪ್ತಿಯನ್ನು ಹೊರಹಾಕಿರುವುದು ಇಡೀ ದೇಶಕ್ಕೇ ಗೊತ್ತಿರುವ ಇತಿಹಾಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಂಬೇಡ್ಕರ್ ಅವರ ಜಾತಿ ಹಿನ್ನೆಲೆಯನ್ನು ಎತ್ತಿ ತೋರಿಸುತ್ತಾ ಅಂಬೇಡ್ಕರ್ ಅವರು ಸಂವಿಧಾನ ಬರೆಯಲೇ ಇಲ್ಲ ಎನ್ನುವ ಸುಳ್ಳುಗಳನ್ನು ಪ್ರಚಾರ ಮಾಡುವುದರ ಜೊತೆಗೆ ಅಂಬೇಡ್ಕರ್ ಅವರು ರಚಿಸಿರುವ ಭಾರತದ ಸಂವಿಧಾನವನ್ನು ತಾನು ಒಪ್ಪುವುದೂ ಇಲ್ಲ ಎನ್ನುವುದನ್ನು ಆರ್‌ಎಸ್‌ಎಸ್ ಆಗ ಬಹಿರಂಗವಾಗಿಯೇ ಹೇಳಿತ್ತು. ಅಂತಹ ಸಂಘಪರಿವಾರ ಮತ್ತು ಬಿಜೆಪಿಯ ಅಮಿತ್ ಶಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಆಡಿರುವ ಅಪಮಾನಕರವಾದ ಮಾತುಗಳು ಅವರ ಮನುವಾದಿ ಪರಂಪರೆಯ ಮುಂದುವರಿಕೆಯ ಭಾಗವಾಗಿಯೇ ಬಂದಿವೆ. ಇದು ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ವ್ಯಕ್ತಿತ್ವ ಮತ್ತು ಭಾರತದ ಸಂವಿಧಾನಕ್ಕೆ ಆಗಿರುವ ಅತ್ಯಂತ ಘೋರ ಅಪಮಾನವಾಗಿದೆ. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ವಿರೋಧಿ, ಸಂವಿಧಾನ ವಿರೋಧಿ ಮನುವಾದಿ ಅಮಿತ್ ಶಾ ಅವರನ್ನು ಕೂಡಲೇ ಕೇಂದ್ರ ಸಚಿವ ಸಂಪುಟದಿAದ ವಜಾಗೊಳಿಸಬೇಕು ಹಾಗೂ ಸಂವಿಧಾನ ಮತ್ತು ಸಂವಿಧಾನ ಶಿಲ್ಪಿಯನ್ನು ಅವಮಾನಿಸಿದ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ಬಂಧಿಸಬೇಕೆಂದು ಆಗ್ರಹಿಸಿದರು. ಹಾಸನ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ಭಾರತದ ಮಾನ್ಯ ರಾಷ್ಟ್ರಪತಿ  ಮತ್ತು ಮಾನ್ಯ ಪ್ರಧಾನ ಮಂತ್ರಿಯವರನ್ನು ಈ ಮೂಲಕ ಆಗ್ರಹಪೂರ್ವಕವಾಗಿ ಒತ್ತಾಯಪಡಿಸುತ್ತಿರುವುದಾಗಿ ಹೇಳಿದರು.<br>ಪ್ರತಿಭಟನೆಯಲ್ಲಿ ಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ದಲಿತ ಹಿರಿಯ ಮುಖಂಡ ಎಚ್.ಕೆ. ಸಂದೇಶ್, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಸೋಮಶೇಖರ್, ಹಿರಿಯ ರಂಗಕರ್ಮಿ ಪ್ರಸಾದ್ ರಕ್ಷಿದಿ, ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಟಿ.ಆರ್. ವಿಜಯಕುಮಾರ್, ದಸಂಸ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಈರೇಶ್ ಹಿರೇಹಳ್ಳಿ, ದಲಿತ ಹಿರಿಯ ಮುಖಂಡರು ಕೃಷ್ಣದಾಸ್, ರಾಜಶೇಖರ್, ಡಿಎಚ್‌ಎಸ್ ಸಂಚಾಲಕ ಎಂ.ಜಿ. ಪೃಥ್ವಿ, ಸಂವಿಧಾನ ಓದು ಅಭಿಯಾನದ ರಾಜು ಗೊರೂರು, ಆಜಾದ್ ಟಿಪ್ಪು ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಮುಬಶಿರ್ ಅಹಮದ್, ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ರಮೇಶ್, ಹಿರಿಯ ಕಲಾವಿದ ಗ್ಯಾರಂಟಿ ರಾಮಣ್ಣ ಇತರರು ಉಪಸ್ಥಿತರಿದ್ದರು.</p>
]]></content:encoded>
					
		
		
			</item>
		<item>
		<title>ಶಾಲಾ ಬೋರ್ಡಿನಿಂದ &#8216;ಹರಿಜನ ಕಾಲೋನಿ&#8217; ಎಂಬ ಪದವನ್ನು ಅಳಿಸಿದ ತಮಿಳುನಾಡು ಸಚಿವ</title>
		<link>https://peepalmedia.com/tamilnad-minister-erases-harijan-colony-from-school-board/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 26 Nov 2024 06:41:45 +0000</pubDate>
				<category><![CDATA[ದಲಿತ ನೋಟ]]></category>
		<category><![CDATA[Dalit]]></category>
		<category><![CDATA[stalin]]></category>
		<category><![CDATA[tamilnad]]></category>
		<guid isPermaLink="false">https://peepalmedia.com/?p=49608</guid>

					<description><![CDATA[ಚೆನ್ನೈ: ತಮಿಳುನಾಡಿನ ನಾಮಕ್ಕಲ್‌ನ ಮಲ್ಲಸಮುದ್ರಂನಲ್ಲಿರುವ ಪಂಚಾಯತ್ ಯೂನಿಯನ್ ಪ್ರಾಥಮಿಕ ಶಾಲೆಯ ನೇಮ್‌ಬೋರ್ಡ್‌ನಲ್ಲಿ &#8216;ಹರಿಜನ ಕಾಲೋನಿ&#8217; ಎಂಬ ಪದವನ್ನು ಸರ್ಕಾರ ಸೋಮವಾರ ಕಪ್ಪು ಬಣ್ಣ ಬಳಿದು ಅಳಿಸಿ, &#8221; ಮಲ್ಲಸಮುದ್ರಂ ಪೂರ್ವ &#8221; ಎಂದು ಮರುನಾಮಕರಣ ಮಾಡಲಾಗಿದೆ. ಹರಿಜನ ಕಾಲೋನಿ ಎಂದು ಬರೆದಿರುವ ಬಗ್ಗೆ ಇಬ್ಬರು ವ್ಯಕ್ತಿಗಳು ಮುಖ್ಯಮಂತ್ರಿ ಸ್ಟಾಲಿನ್‌ ಅವರ ಗಮನಕ್ಕೆ ತಂದಿದ್ದರು. ತಮ್ಮ X ನಲ್ಲಿ, ಸ್ಟಾಲಿನ್ ಅವರು, &#8220;ಸಮಾನತೆಯ ಸಮಾಜದ ಕಡೆಗೆ ನಮ್ಮ ಪ್ರಯಾಣಕ್ಕೆ ಬೆಂಬಲ ನೀಡಿರುವ ಗಣೇಶನ್ ಮತ್ತು ವಕೀಲ ಅನ್ಬಳಗನ್ ಅವರಂತವರು ಶ್ಲಾಘನೀಯರು&#8221; ಎಂದು ಆ [&#8230;]]]></description>
										<content:encoded><![CDATA[
<p><strong>ಚೆನ್ನೈ:</strong> ತಮಿಳುನಾಡಿನ ನಾಮಕ್ಕಲ್‌ನ ಮಲ್ಲಸಮುದ್ರಂನಲ್ಲಿರುವ ಪಂಚಾಯತ್ ಯೂನಿಯನ್ ಪ್ರಾಥಮಿಕ ಶಾಲೆಯ ನೇಮ್‌ಬೋರ್ಡ್‌ನಲ್ಲಿ &#8216;ಹರಿಜನ ಕಾಲೋನಿ&#8217; ಎಂಬ ಪದವನ್ನು ಸರ್ಕಾರ ಸೋಮವಾರ ಕಪ್ಪು ಬಣ್ಣ ಬಳಿದು ಅಳಿಸಿ, &#8221; ಮಲ್ಲಸಮುದ್ರಂ ಪೂರ್ವ &#8221; ಎಂದು ಮರುನಾಮಕರಣ ಮಾಡಲಾಗಿದೆ. ಹರಿಜನ ಕಾಲೋನಿ ಎಂದು ಬರೆದಿರುವ ಬಗ್ಗೆ ಇಬ್ಬರು ವ್ಯಕ್ತಿಗಳು ಮುಖ್ಯಮಂತ್ರಿ ಸ್ಟಾಲಿನ್‌ ಅವರ ಗಮನಕ್ಕೆ ತಂದಿದ್ದರು.</p>



<p><br><a href="https://x.com/mkstalin/status/1861051590708203901">ತಮ್ಮ X ನಲ್ಲಿ, ಸ್ಟಾಲಿನ್ ಅವರು</a>, &#8220;ಸಮಾನತೆಯ ಸಮಾಜದ ಕಡೆಗೆ ನಮ್ಮ ಪ್ರಯಾಣಕ್ಕೆ ಬೆಂಬಲ ನೀಡಿರುವ ಗಣೇಶನ್ ಮತ್ತು ವಕೀಲ ಅನ್ಬಳಗನ್ ಅವರಂತವರು ಶ್ಲಾಘನೀಯರು&#8221; ಎಂದು ಆ ಇಬ್ಬರು ವ್ಯಕ್ತಿಗಳನ್ನು ಅಭಿನಂದಿಸಿದ್ದಾರೆ. ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಅವರು ಸೋಮವಾರ ಹರಿಜನ ಕಾಲೋನಿ ಎಂಬ ಹೆಸರನ್ನು ಅಧಿಕೃತವಾಗಿ &#8220;ಮಲ್ಲಸಮುದ್ರನ್ ಪೂರ್ವ&#8221; ಎಂದು ಬದಲಾಯಿಸಿದರು, ಶಾಲೆಯ ಬೋರ್ಡ್‌ನಿಂದ ಈ ಹೆಸರನ್ನು ಕಪ್ಪು ಬಣ್ಣ ಬಳಿದು ಅಳಿಸಿದರು. </p>


<div class="wp-block-image">
<figure class="aligncenter size-large is-resized"><img decoding="async" width="831" height="1024" src="https://peepalmedia.com/wp-content/uploads/2024/11/GdOiDWsaMAAu1eT-831x1024.jpg" alt="" class="wp-image-49610" style="width:351px;height:auto" srcset="https://peepalmedia.com/wp-content/uploads/2024/11/GdOiDWsaMAAu1eT-831x1024.jpg 831w, https://peepalmedia.com/wp-content/uploads/2024/11/GdOiDWsaMAAu1eT-244x300.jpg 244w, https://peepalmedia.com/wp-content/uploads/2024/11/GdOiDWsaMAAu1eT-768x946.jpg 768w, https://peepalmedia.com/wp-content/uploads/2024/11/GdOiDWsaMAAu1eT-1247x1536.jpg 1247w, https://peepalmedia.com/wp-content/uploads/2024/11/GdOiDWsaMAAu1eT-150x185.jpg 150w, https://peepalmedia.com/wp-content/uploads/2024/11/GdOiDWsaMAAu1eT-300x370.jpg 300w, https://peepalmedia.com/wp-content/uploads/2024/11/GdOiDWsaMAAu1eT-324x400.jpg 324w, https://peepalmedia.com/wp-content/uploads/2024/11/GdOiDWsaMAAu1eT-696x857.jpg 696w, https://peepalmedia.com/wp-content/uploads/2024/11/GdOiDWsaMAAu1eT-1068x1316.jpg 1068w, https://peepalmedia.com/wp-content/uploads/2024/11/GdOiDWsaMAAu1eT.jpg 1289w" sizes="(max-width: 831px) 100vw, 831px" /></figure></div>


<p>ಗಣೇಶನ್ ಅವರನ್ನು ಸಚಿವರು ಶಾಲು ಹೊದಿಸಿ ಸನ್ಮಾನಿಸಿದರು ಮತ್ತು ಅನ್ಬಳಗನ್ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದರು. ದಿವಂಗತ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರನ್ನು ಉಲ್ಲೇಖಿಸಿ, <a href="https://x.com/Anbil_Mahesh/status/1861009252984226090">ಸಚಿವರು ಎಕ್ಸ್‌ನಲ್ಲಿ, </a>&#8220;ಸಮಾನತೆಯನ್ನು ಬೆಳೆಸುವ ಏಕೈಕ ಅಸ್ತ್ರ ಶಿಕ್ಷಣ,&#8221; ಎಂದು ಬರೆದುಕೊಂಡಿದ್ದಾರೆ.</p>



<p>ತಮಿಳುನಾಡು ಸರ್ಕಾರ ಈ ದಲಿತ ಸಮುದಾಯವನ್ನು ಆದಿ ದ್ರಾವಿಡರು ಎಂದು ಕರೆಯುತ್ತಾರೆ. ಕೇಂದ್ರದ 1982 ರ ಅಧಿಕೃತ ಸುತ್ತೋಲೆಯು ಪರಿಶಿಷ್ಟ ಜಾತಿ (Scheduled Caste) ಎಂಬ ಪದದ ಬಳಕೆಯನ್ನು ಪ್ರತಿಪಾದಿಸುತ್ತದೆ.</p>


<div class="wp-block-image">
<figure class="aligncenter size-large is-resized"><img decoding="async" width="1024" height="912" src="https://peepalmedia.com/wp-content/uploads/2024/11/GdOiDEsbkAAq1RJ-1024x912.jpg" alt="" class="wp-image-49611" style="width:448px;height:auto" srcset="https://peepalmedia.com/wp-content/uploads/2024/11/GdOiDEsbkAAq1RJ-1024x912.jpg 1024w, https://peepalmedia.com/wp-content/uploads/2024/11/GdOiDEsbkAAq1RJ-300x267.jpg 300w, https://peepalmedia.com/wp-content/uploads/2024/11/GdOiDEsbkAAq1RJ-768x684.jpg 768w, https://peepalmedia.com/wp-content/uploads/2024/11/GdOiDEsbkAAq1RJ-150x134.jpg 150w, https://peepalmedia.com/wp-content/uploads/2024/11/GdOiDEsbkAAq1RJ-696x620.jpg 696w, https://peepalmedia.com/wp-content/uploads/2024/11/GdOiDEsbkAAq1RJ-1068x951.jpg 1068w, https://peepalmedia.com/wp-content/uploads/2024/11/GdOiDEsbkAAq1RJ.jpg 1329w" sizes="(max-width: 1024px) 100vw, 1024px" /></figure></div>


<p></p>
]]></content:encoded>
					
		
		
			</item>
		<item>
		<title>ಬಿಹಾರದಲ್ಲಿ ದಲಿತರಿಗೆ, ಒಬಿಸಿಗಳಿಗೆ 65% ರಷ್ಟು ಮೀಸಲಾತಿ ಜಾರಿ: ಹೈಕೋರ್ಟ್ ತಡೆ</title>
		<link>https://peepalmedia.com/implementation-of-65-reservation-for-obcs-for-dalits-in-bihar-high-court-stays/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 20 Jun 2024 08:09:21 +0000</pubDate>
				<category><![CDATA[ದಲಿತ ನೋಟ]]></category>
		<category><![CDATA[india]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=41015</guid>

					<description><![CDATA[ಪಟ್ನಾ: ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಜನಾಂಗದವರಿಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ಶೇ 50ರಿಂದ 65ಕ್ಕೆ ಹೆಚ್ಚಿಸಿರುವ ಬಿಹಾರ ಸರ್ಕಾರದ ನಿರ್ಧಾರವನ್ನು ಪಟ್ನಾ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ. ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಕೆ.ವಿನೋದ್ ಚಂದ್ರನ್ ನೇತೃತ್ವದ ವಿಭಾಗೀಯ ಪೀಠವು ಗುರುವಾರ ಈ ಆದೇಶ ಪ್ರಕಟಿಸಿದೆ. ಇದರಿಂದ ಮುಖ್ಯಮಂತ್ರಿ ನಿತೀತ್ ಕುಮಾರ್ ಅವರಿಗೆ ಭಾರಿ ಹಿನ್ನಡೆಯಾಗಿದೆ ಎಂದೇ ಹೇಳಲಾಗುತ್ತಿದೆ. 2023ರ ನವೆಂಬರ್ 21ರಂದು ಮೀಸಲಾತಿಯನ್ನು ಶೇ 50ರಿಂದ 65ಕ್ಕೆ ಏರಿಕೆ ಮಾಡುವ ಪ್ರಸ್ತಾವಕ್ಕೆ [&#8230;]]]></description>
										<content:encoded><![CDATA[
<p><strong>ಪಟ್ನಾ:</strong> ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಜನಾಂಗದವರಿಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ಶೇ 50ರಿಂದ 65ಕ್ಕೆ ಹೆಚ್ಚಿಸಿರುವ ಬಿಹಾರ ಸರ್ಕಾರದ ನಿರ್ಧಾರವನ್ನು ಪಟ್ನಾ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ. </p>



<p> ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಕೆ.ವಿನೋದ್ ಚಂದ್ರನ್ ನೇತೃತ್ವದ ವಿಭಾಗೀಯ ಪೀಠವು ಗುರುವಾರ ಈ ಆದೇಶ ಪ್ರಕಟಿಸಿದೆ. ಇದರಿಂದ ಮುಖ್ಯಮಂತ್ರಿ ನಿತೀತ್ ಕುಮಾರ್ ಅವರಿಗೆ ಭಾರಿ ಹಿನ್ನಡೆಯಾಗಿದೆ ಎಂದೇ ಹೇಳಲಾಗುತ್ತಿದೆ. </p>



<p>2023ರ ನವೆಂಬರ್ 21ರಂದು ಮೀಸಲಾತಿಯನ್ನು ಶೇ 50ರಿಂದ 65ಕ್ಕೆ ಏರಿಕೆ ಮಾಡುವ ಪ್ರಸ್ತಾವಕ್ಕೆ ಬಿಹಾರ ಸಚಿವ ಸಂಪುಟ ಅನುಮೋದನೆ ನೀಡಿ, ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಇದನ್ನು ಪ್ರಶ್ನಿಸಿ ಸುಮಾರು ಹತ್ತರಷ್ಟು ಮೇಲ್ಮನವಿಗಳನ್ನು ಹೈಕೋರ್ಟಿಗೆ ಸಲ್ಲಿಸಲಾಗಿತ್ತು.</p>



<p>ಅರ್ಜಿದಾರರ ಪರ ವಾದ ಮಂಡಿಸಿದ ವಕೀಲೆ ರಿತಿಕಾ ರಾಣಿ, &#8216;ಮೀಸಲಾತಿ ಜಾರಿ ಸಂವಿಧಾನದ ಉಲ್ಲಂಘನೆಯಾಗಿದೆ&#8217; ಎಂದು ಹೇಳಿದ್ದಾರೆ.ಎರಡೂ ಕಡೆಯ ವಾದ ಆಲಿಸಿದ ಬಳಿಕ ನ್ಯಾಯಾಲಯ ಮಾರ್ಚ್‌ನಲ್ಲಿ ತೀರ್ಪನ್ನು ಕಾಯ್ದಿರಿಸಿತ್ತು. ಈಗ ಸ್ಪಷ್ಟವಾಗಿ ತನ್ನ ಆದೇಶವನ್ನು ಪ್ರಕಟಿಸಿದೆ. </p>
]]></content:encoded>
					
		
		
			</item>
		<item>
		<title>ತಮಿಳುನಾಡು: ಅಂತರ್ಜಾತಿ ವಿವಾಹ ಮಾಡಿಸಿದ್ದಕ್ಕೆ ಸಿಪಿಎಂ ಕಚೇರಿ ದ್ವಂಸ ಮಾಡಿದ ದುಷ್ಕರ್ಮಿಗಳು</title>
		<link>https://peepalmedia.com/tamil-nadu-miscreants-vandalized-cpm-office-for-inter-caste-marriage/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 15 Jun 2024 07:39:03 +0000</pubDate>
				<category><![CDATA[ದಲಿತ ನೋಟ]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=40802</guid>

					<description><![CDATA[ತಿರುನೆಲ್ವೇಲಿ: ಸವರ್ಣಿಯ ಜಾತಿಯ ಯುವತಿ ಮತ್ತು ದಲಿತ ಯುವಕನ ವಿವಾಹ ಮಾಡಿಸಿದ್ದಕ್ಕಾಗಿ ತಿರುನೆಲ್ವೇಲಿ ಜಿಲ್ಲೆಯಲ್ಲಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸ್‌ವಾದಿ) ಕಚೇರಿಯನ್ನು ದುಷ್ಕರ್ಮಿಗಳು ಧ್ವಂಸ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆಯುವತಿಯ ಕುಟುಂಬದ ಸದಸ್ಯರು ಸೇರಿದಂತೆ 8 ಮಂದಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದು, ವಿಚಾರಣೆಯನ್ನು ನಡೆಸುತ್ತಿದ್ದಾರೆ. ಸ್ಥಳೀಯರ ಹೇಳಿಕೆಯ ಪ್ರಕಾರ ಪಾಲಯಂಗೊಟ್ಟೈನ ಪರಿಶಿಷ್ಟ ಸಮುದಾಯದ ಅರುಂತಥಿಯಾರ್ ಜಾತಿಗೆ ಸೇರಿದ ಮದನ್ ಮತ್ತು ಪೆರುಮಾಳ್ಪುರಂನ ಪಿಳ್ಳೈ ಸಮುದಾಯದ ದಾಕ್ಷಾಯಿಣಿ 6 ವರ್ಷಗಳಿಂದ ಪ್ರೀತಿಸುತ್ತಿದ್ದರು. ಯುವತಿಯ ಕುಟುಂಬವು ಅಂತರ್ಜಾತಿ ವಿವಾಹವನ್ನು ಒಪ್ಪದ ಕಾರಣ [&#8230;]]]></description>
										<content:encoded><![CDATA[
<figure class="wp-block-image"><img decoding="async" src="https://naanugauri.com/wp-content/uploads/2024/06/Capture-114.jpg" alt="" title="Capture"/></figure>



<p>ತಿರುನೆಲ್ವೇಲಿ: ಸವರ್ಣಿಯ ಜಾತಿಯ ಯುವತಿ ಮತ್ತು ದಲಿತ ಯುವಕನ ವಿವಾಹ ಮಾಡಿಸಿದ್ದಕ್ಕಾಗಿ ತಿರುನೆಲ್ವೇಲಿ ಜಿಲ್ಲೆಯಲ್ಲಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸ್‌ವಾದಿ) ಕಚೇರಿಯನ್ನು ದುಷ್ಕರ್ಮಿಗಳು ಧ್ವಂಸ ಮಾಡಿದ್ದಾರೆ.</p>



<p>ಘಟನೆಗೆ ಸಂಬಂಧಿಸಿದಂತೆಯುವತಿಯ ಕುಟುಂಬದ ಸದಸ್ಯರು ಸೇರಿದಂತೆ 8 ಮಂದಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದು, ವಿಚಾರಣೆಯನ್ನು ನಡೆಸುತ್ತಿದ್ದಾರೆ.</p>



<p>ಸ್ಥಳೀಯರ ಹೇಳಿಕೆಯ ಪ್ರಕಾರ ಪಾಲಯಂಗೊಟ್ಟೈನ ಪರಿಶಿಷ್ಟ ಸಮುದಾಯದ ಅರುಂತಥಿಯಾರ್ ಜಾತಿಗೆ ಸೇರಿದ ಮದನ್ ಮತ್ತು ಪೆರುಮಾಳ್ಪುರಂನ ಪಿಳ್ಳೈ ಸಮುದಾಯದ ದಾಕ್ಷಾಯಿಣಿ 6 ವರ್ಷಗಳಿಂದ ಪ್ರೀತಿಸುತ್ತಿದ್ದರು. ಯುವತಿಯ ಕುಟುಂಬವು ಅಂತರ್ಜಾತಿ ವಿವಾಹವನ್ನು ಒಪ್ಪದ ಕಾರಣ ಪ್ರೇಮಿಗಳಿಬ್ಬರು ಸ್ಥಳೀಯ ಸಿಪಿಎಂ ಕಾರ್ಯಕರ್ತರನ್ನು ಸಂಪರ್ಕಿಸಿದ್ದರು.  ಸಿಪಿಐ(ಎಂ) ಪಕ್ಷ  ಮುಂದೆ ಬಂದು ಪ್ರೇಮಿಗಳಿಗೆ ಸಹಾಯ ಮಾಡಿತ್ತು. ಕಳೆದ ಅವರು ಗುರುವಾರ ಅಸ್ಪೃಶ್ಯತೆ ನಿರ್ಮೂಲನಾ ಮೋರ್ಚಾದ ಸಹಾಯದಿಂದ ವಿವಾಹವಾಗಿದ್ದರು ಎನ್ನಲಾಗಿದೆ.</p>



<p>ವಿವಾಹ ಕಾರ್ಯಕ್ರಮದ ನಂತರ ವಧು ಧಾಕ್ಷಾಯಿಣಿ ಕುಟುಂಬವು ಸಿಪಿಐ(ಎಂ) ಕಚೇರಿಗೆ ದಾಳಿ ಮಾಡಿದೆ. ಪೊಲೀಸರು ಕೂಡಲೇ ಪಕ್ಷದ ಕಚೇರಿ ತೆರಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋಗಳಲ್ಲಿ ಧಾಕ್ಷಾಯಿಣಿ ಕುಟುಂಬದ ಸದಸ್ಯರು ಕಚೇರಿಯ ಬಾಗಿಲು ಮುರಿದು ಪಕ್ಷದ ಪದಾಧಿಕಾರಿಗಳು ಹಾಗೂ ಪೊಲೀಸರೊಂದಿಗೆ ವಾಗ್ವಾದಕ್ಕಿಳಿಯುವುದನ್ನು ದೃಶ್ಯಗಳಲ್ಲಿ ನೋಡಬಹುದಾಗಿದೆ. </p>



<p>ನವವಿವಾಹಿತರು ಸಿಪಿಐ(ಎಂ) ಕಚೇರಿಯಲ್ಲಿದ್ದಾರೆ ಎಂಬ ಮಾಹಿತಿ ಪಡೆದ ಹುಡುಗಿಯ ಕುಟುಂಬ, ಪಕ್ಷದ ಕಚೇರಿಗೆ ಧಾವಿಸಿ ಅವರನ್ನು ಹುಡುಕಾಟ ನಡೆಸಿದ್ದಾರೆ. ಇದು ಬಾಲಕಿಯ ಕುಟುಂಬದ ಸದಸ್ಯರು ಮತ್ತು ಸಿಪಿಐ(ಎಂ) ಪದಾಧಿಕಾರಿಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿ ಕಚೇರಿಯ ಧ್ವಂಸಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. </p>



<p></p>
]]></content:encoded>
					
		
		
			</item>
		<item>
		<title>  ರೋಹಿಣಾಕ್ಷ ಶಿರ್ಲಾಲುರಿಂದ ಬೌದ್ಧ-ಮುಸ್ಲಿಮರಲ್ಲಿ ಕೋಮುಭಾವನೆ ಕೆರಳಿಸುವ ಬರಹ: ವಿವಿಗೆ ಪತ್ರ ಬರೆಯಲು ನಿರ್ಧಾರ</title>
		<link>https://peepalmedia.com/writing-by-rohinaksha-shirlalu-inciting-communal-feelings-among-buddhists-and-muslims-decision-to-write-letter-to-v-v/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 22 May 2024 07:08:52 +0000</pubDate>
				<category><![CDATA[ಇತಿಹಾಸ]]></category>
		<category><![CDATA[ಕಲೆ – ಸಾಹಿತ್ಯ]]></category>
		<category><![CDATA[ದಲಿತ ನೋಟ]]></category>
		<category><![CDATA[ಧರ್ಮ- ಸಂಸ್ಕೃತಿ]]></category>
		<category><![CDATA[ಸೈನ್ಸ್ + ಟೆಕ್ನಾಲಜಿ]]></category>
		<category><![CDATA[bengalure]]></category>
		<category><![CDATA[bhowdha]]></category>
		<category><![CDATA[Gulbarga]]></category>
		<category><![CDATA[hindu]]></category>
		<category><![CDATA[india]]></category>
		<category><![CDATA[kalaburagi]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Muslim]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=39774</guid>

					<description><![CDATA[ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರೋಹಿಣಾಕ್ಷ ಶಿರ್ಲಾಲ ಎಂಬುವವರು ಬರೆದಿರುವ ಲೇಖನದಲ್ಲಿ &#160;ಬೌದ್ಧರು, ಮುಸ್ಲಿಮರು, ಅಂಬೇಡ್ಕರ್‌ವಾದಿಗಳಲ್ಲಿ ತಪ್ಪು ಅಭಿಪ್ರಾಯ ಮೂಡುವಂತೆ ಲೇಖಕರು ಸುಳ್ಳು ಬರೆದಿದ್ದಾರೆ ಎಂದು ಕಲಬುರಗಿಯ ಸೌಹಾರ್ಧ ಬಳಗದ ದತ್ತಾತ್ರೆಯ ಇಕ್ಕಳಕಿ ಆರೋಪಿಸಿದ್ದಾರೆ. &#160;ರೋಹಿಣಾಕ್ಷ ಅವರು &#8216;ಅಂಬೇಡ್ಕರರನ್ನು ಬುದ್ಧನೇಕೆ ಸೆಳೆದ&#8217; ಶಿರ್ಷಿಕೆಯೊಂದಿಗೆ ಇಂದು ಬುಧವಾರ ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ಲೇಖನ ಪ್ರಕಟಿಸಿದ್ದಾರೆ. ಈ ಲೇಖನದಲ್ಲಿ &#8216;ಬೌದ್ಧಧಮ್ಮಕ್ಕೆ ಬಾರಿ ಪೆಟ್ಟು ಬಿದ್ದದ್ದು ಮುಸ್ಲಿಂ ಆಕ್ರಮಣದಿಂದ. &#160;ಮುಸ್ಲಿಮರು ಬೌದ್ಧ ವಿಗ್ರಹಗಳನ್ನು ನಾಶ ಮಾಡಿದರು, ಬಿಕ್ಕುಗಳನ್ನು ಕೊಂದುಬಿಟ್ಟರು, ನಳಂದವನ್ನು ಸುಟ್ಟುಹಾಕಿದರು, [&#8230;]]]></description>
										<content:encoded><![CDATA[
<p>ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರೋಹಿಣಾಕ್ಷ ಶಿರ್ಲಾಲ ಎಂಬುವವರು ಬರೆದಿರುವ ಲೇಖನದಲ್ಲಿ &nbsp;ಬೌದ್ಧರು, ಮುಸ್ಲಿಮರು, ಅಂಬೇಡ್ಕರ್‌ವಾದಿಗಳಲ್ಲಿ ತಪ್ಪು ಅಭಿಪ್ರಾಯ ಮೂಡುವಂತೆ ಲೇಖಕರು ಸುಳ್ಳು ಬರೆದಿದ್ದಾರೆ ಎಂದು ಕಲಬುರಗಿಯ ಸೌಹಾರ್ಧ ಬಳಗದ ದತ್ತಾತ್ರೆಯ ಇಕ್ಕಳಕಿ ಆರೋಪಿಸಿದ್ದಾರೆ.</p>



<p>&nbsp;ರೋಹಿಣಾಕ್ಷ ಅವರು &#8216;ಅಂಬೇಡ್ಕರರನ್ನು ಬುದ್ಧನೇಕೆ ಸೆಳೆದ&#8217; ಶಿರ್ಷಿಕೆಯೊಂದಿಗೆ ಇಂದು ಬುಧವಾರ ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ಲೇಖನ ಪ್ರಕಟಿಸಿದ್ದಾರೆ. ಈ ಲೇಖನದಲ್ಲಿ &#8216;ಬೌದ್ಧಧಮ್ಮಕ್ಕೆ ಬಾರಿ ಪೆಟ್ಟು ಬಿದ್ದದ್ದು ಮುಸ್ಲಿಂ ಆಕ್ರಮಣದಿಂದ. &nbsp;ಮುಸ್ಲಿಮರು ಬೌದ್ಧ ವಿಗ್ರಹಗಳನ್ನು ನಾಶ ಮಾಡಿದರು, ಬಿಕ್ಕುಗಳನ್ನು ಕೊಂದುಬಿಟ್ಟರು, ನಳಂದವನ್ನು ಸುಟ್ಟುಹಾಕಿದರು, ಭಾರತದಲ್ಲಿ ಮಾತ್ರವಲ್ಲ ಇಸ್ಲಾಂ ಹೋದಡೆಯಲ್ಲೆಲ್ಲಾ ನಾಶ ಮಾಡಿತು&#8217; ಎಂಬ ಸತ್ಯವನ್ನು ಅಂಬೇಡ್ಕರ್‌ ಅರ್ಥ ಮಾಡಿಕೊಂಡಿದ್ದರು ಎಂದು ರೋಹಿಣಾಕ್ಷ ಅಂಬೇಡ್ಕರ್‌ ಹೆಸರಲ್ಲಿ ಸುಳ್ಳು ಮಾಹಿತಿಯನ್ನು ಬಿತ್ತುತ್ತಿದ್ದಾರೆ ಎಂದು ಎಂದು ಇಕ್ಕಳಿಕೆ ಆರೋಪಿಸಿದ್ದಾರೆ.</p>



<p>ಬೌದ್ಧ ಧರ್ಮದ ಉದಯವನ್ನು ಒಂದು ಕ್ರಾಂತಿಯೆಂದೂ, ಬ್ರಾಹ್ಮಣರಿಂದ ಪ್ರಾರಂಭವಾದ ಪ್ರತಿಕ್ರಾಂತಿಯು ಬೌದ್ಧಧಮ್ಮದ ಅವನತಿ ಮತ್ತು ಪತನಕ್ಕೆ ಕಾರಣವಾಯಿತು ಎಂದು ಡಾ. ಅಂಬೇಡ್ಕರ್‌ ದಾಖಲಿಸಿರುವುದು (ಸಂ:3/2015, ಪುಟ:163) ಅಂಬೇಡ್ಕರ್‌ ಸಂಪುಟಗಳಲ್ಲಿ ದಾಖಲಾಗಿದೆ. ತಾವು ಬೌದ್ಧ ಧಮ್ಮಕ್ಕೆ ಮತಾಂತರ ಆಗಲು ಹಿಂದೂ ಧರ್ಮದ ಸನಾತನತೆಯೆ ಕಾರಣ ಎಂದು ಅಂಬೇಡ್ಕರ್‌ ಪದೆ ಪದೆ ಹೇಳುತ್ತಿದ್ದರು ಎಂದು ಇಕ್ಕಳಕಿ ತಿಳಿಸಿದ್ದಾರೆ.</p>



<p>3.10.1935 ರಲ್ಲಿ ನಾಸಿಕ್ ಜಿಲ್ಲೆಯ ಯಹೋಲ ಮುನಿಸಿಪಾಲಟಿಯು ಡಾ.ಅಂಬೇಡ್ಕರ್ ಅವರಿಗೆ ಬಿನ್ನವತ್ತಳೆ ಅರ್ಪಿಸಿತು. ಇದಕ್ಕೆ ಉತ್ತರಿಸುತ್ತಾ ಡಾ. ಅಂಬೇಡ್ಕರ್ &#8216;ಹಿಂದೂಧರ್ಮದಲ್ಲಿ ಬೇರೂರಿದ ಅಸಮಾನತೆಯು ಆ ಧರ್ಮವನ್ನು ತೊರೆಯುವಂತೆ ನನ್ನನ್ನು ಒತ್ತಾಯಿಸುತ್ತಿದೆ. ನನ್ನ ತಪ್ಪಿಲ್ಲದೆ ಇದ್ದರೂ ನಾನು&nbsp; ಅಸ್ಪೃಶ್ಯನಾಗಿ ಜನಿಸಿದೆ. ಈಗ ನಾನು ಹಿಂದೂವಾಗಿ ಸಾಯಲಾರೆ, ಇದರ ನಿರ್ಧಾರ ನನ್ನ ಕೈಯಲ್ಲಿದೆ&#8217; ಎಂದು ಹೇಳುತ್ತಾರೆ. ಹೀಗೆ ಬೌದ್ಧ ಧರ್ಮ ನಾಶವಾಗಲು ಬ್ರಾಹ್ಮಣರು ಕಾರಣ ಎಂಬ ಸತ್ಯ ಅಂಗೈಯಲ್ಲಿ ಇರುವಾಗ ರೋಹಿಣಾಕ್ಷ ಅವರು ಬೌದ್ಧ ಧರ್ಮದ ನಾಶಕ್ಕೆ ಮುಸ್ಲಿಮರು ಕಾರಣ ಎನ್ನುವ ಮೂಲಕ ಕೋಮು ಬಾವನೆ ಕೆರಳಿಸಲು ಕಾರಣರಾಗಿದ್ದಾರೆ. ಲೇಖಕರು ಇಡೀ ಲೇಖನದಲ್ಲಿ ಒಂದೇ ಒಂದು ಪದವನ್ನು ಹಿಂದೂ ಧರ್ಮದ ಸನಾತನೆಯ ಬಗ್ಗೆ ಉಲ್ಲೇಖ ಮಾಡದೆ ಲೇಖಕರು ದಿಡೀರ್ &#8216;ಮುಸ್ಲಿಮರೆ ಬೌದ್ಧಧರ್ಮದ ನಾಶಕರು&#8217; ಎಂದು ಬರೆದಿದ್ದಾರೆ ಎಂದು ದೂರಿದ್ದಾರೆ.</p>



<p>ಕಲಬುರಗಿ ಹಿಂದೂ-ಬೌದ್ಧ-ಮುಸ್ಲಿಂ ಧರ್ಮೀಯರು ಸಾಮರಸ್ಯದಿಂದ ಬದುಕುವ ಸೂಫಿ-ಶರಣರ ಸೌಹಾರ್ಧದ ನೆಲೆ. ಇಂತಹ ನೆಲೆಯಲ್ಲಿ ಬೌದ್ಧರು-ಮುಸ್ಲೀಮರ ಮಧ್ಯೆ ಕೋಮು ದ್ವೇಶವನ್ನು ಬಿತ್ತಲು ಈ ಲೇಖಕರು ಪ್ರಯತ್ನಿಸಿದ್ದಾರೆ. ಈ ಮೂಲದ ಸ್ವತಃ ಅಂಬೇಡ್ಕರ್ ಆಲೋಚನೆಗಳನ್ನು ತಪ್ಪಾಗಿ ಅರ್ಥೈಸಲು ಪ್ರಯತ್ನಿಸಿದ್ದಾರೆ. ಈ ಮೂಲಕ ಕಲಬುರಗಿಯ ಅಂಬೇಡ್ಕರ್ ವಾದಿಗಳಿಗೂ ಪರೋಕ್ಷವಾಗಿ ಅವಮಾನ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಜೈಭೀಮ್ ಬಂಧುಗಳು, ಬೌದ್ಧಾನುಯಾಯಿಗಳು, ಮುಸ್ಲೀಂ ಬಂಧುಗಳು ಒಟ್ಟಾಗಿ ಈ ಬರಹವನ್ನೂ, ಈ ಬರಹ ಬರೆದ ಲೇಖಕರಿಗೂ ಕಲಬುರಗಿಯ ಸೌಹಾರ್ಧ ಕದಡುವ ನೀಚತನಕ್ಕೆ ದಿಕ್ಕಾರ ಹೇಳಬೇಕಿದೆ. ಈ ಕುರಿತು ಸೆಂಟ್ರಲ್ ಯುನಿವರ್ಸಿಟಿಯ ಕುಲಪತಿಗಳಿಗೆ ಎಚ್ಚರಿಕೆಯ ಪತ್ರ ನೀಡಲಾಗುವುದು ಎಂದು ದತ್ರಾತ್ರೆಯ ಇಕ್ಕಳಕಿ ತಿಳಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ʼಮಹಾಡ್ʼ ಮರೆಯಲಾಗದ ಮೊದಲ ದಲಿತ ಕ್ರಾಂತಿ</title>
		<link>https://peepalmedia.com/%ca%bcmahad%ca%bc-was-the-first-dalit-revolution-that-will-never-be-forgotten/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 20 Mar 2024 11:26:53 +0000</pubDate>
				<category><![CDATA[ಇತಿಹಾಸ]]></category>
		<category><![CDATA[ದಲಿತ ನೋಟ]]></category>
		<category><![CDATA[ಸತ್ಯ ಶೋಧ]]></category>
		<category><![CDATA[Ambedkar]]></category>
		<category><![CDATA[Ambedkar odu]]></category>
		<category><![CDATA[ambedkasr]]></category>
		<category><![CDATA[amdedkar]]></category>
		<category><![CDATA[anand teltumbde]]></category>
		<category><![CDATA[anand theldumbde]]></category>
		<category><![CDATA[Dalit]]></category>
		<category><![CDATA[dalit activists]]></category>
		<category><![CDATA[Dalit cultural resistance]]></category>
		<category><![CDATA[india]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=37232</guid>

					<description><![CDATA[(ಮಹಾಡ್ ಚೌಡರ್ ಕೆರೆ ಚಳವಳಿ ದಲಿತ ಚಳವಳಿಯಲ್ಲಿ ಒಂದು ಮರೆಯಲಾಗದ ಅಧ್ಯಾಯ. ಈ ಕುರಿತು 2016ರಲ್ಲಿ ಇಂಗ್ಲಿಷ್‌ನಲ್ಲಿ ಡಾ. ಆನಂದ್ ತೇಲ್ತುಂಬ್ಡೆ ಅವರು&#160; “Mahad: The Making of the First Dalit Revolt” ಎಂಬ ಮಹತ್ವದ ವಿವರವಾದ ವಿಶ್ಲೇಷಣಾತ್ಮಕ ಪುಸ್ತಕ ಬರೆದು ಪ್ರಕಟಿಸಿದರು. ಈ ಪುಸ್ತಕವನ್ನು ಹಿರಿಯ ಲೇಖಕ ಅಬ್ದುಲ್ ರೆಹಮಾನ್ ಪಾಷಾ ಅವರು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದು, ಕ್ರಿಯಾ ಮಾಧ್ಯಮ &#160;ಪ್ರಕಟಿಸಿದೆ. ) ‘‘ಮಹಾಡ್ ದಲಿತರಿಗೆ ಮುಂದಿನ ಹಾದಿಯನ್ನು ತೋರಿಸುವ ದೀಪಸ್ತಂಭವಾಗಿದೆ. ಮಹಾಡ್ ಚಳವಳಿಗೆ [&#8230;]]]></description>
										<content:encoded><![CDATA[
<ul class="wp-block-list">
<li><strong>ಆನಂದ್‌ ತೇಲ್ತುಂಬ್ಡೆ (ಕನ್ನಡಕ್ಕೆ: ಅಬ್ದುಲ್‌ ರೆಹಮಾನ್‌ ಪಾಷ)  </strong></li>
</ul>



<p>(ಮಹಾಡ್ ಚೌಡರ್ ಕೆರೆ ಚಳವಳಿ ದಲಿತ ಚಳವಳಿಯಲ್ಲಿ ಒಂದು ಮರೆಯಲಾಗದ ಅಧ್ಯಾಯ. ಈ ಕುರಿತು 2016ರಲ್ಲಿ ಇಂಗ್ಲಿಷ್‌ನಲ್ಲಿ ಡಾ. ಆನಂದ್ ತೇಲ್ತುಂಬ್ಡೆ ಅವರು&nbsp; “Mahad: The Making of the First Dalit Revolt” ಎಂಬ ಮಹತ್ವದ ವಿವರವಾದ ವಿಶ್ಲೇಷಣಾತ್ಮಕ ಪುಸ್ತಕ ಬರೆದು ಪ್ರಕಟಿಸಿದರು. ಈ ಪುಸ್ತಕವನ್ನು ಹಿರಿಯ ಲೇಖಕ ಅಬ್ದುಲ್ ರೆಹಮಾನ್ ಪಾಷಾ ಅವರು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದು, ಕ್ರಿಯಾ ಮಾಧ್ಯಮ &nbsp;ಪ್ರಕಟಿಸಿದೆ. )</p>



<p>‘‘ಮಹಾಡ್ ದಲಿತರಿಗೆ ಮುಂದಿನ ಹಾದಿಯನ್ನು ತೋರಿಸುವ ದೀಪಸ್ತಂಭವಾಗಿದೆ. ಮಹಾಡ್ ಚಳವಳಿಗೆ ಎರಡು ದಶಕಕ್ಕೂ ಮುನ್ನ ಕೇರಳದಲ್ಲಿ ನಡೆದ ಅಯ್ಯಂಕಾಳಿ ಚಳವಳಿಯ ಗೌರವಾರ್ಹ ಉದಾಹರಣೆ ಬಿಟ್ಟರೆ, ದಲಿತರು ಮೊಟ್ಟ ಮೊದಲ ಬಾರಿಗೆ ಜಾತಿ ಗುಲಾಮಗಿರಿಯ ನೊಗವನ್ನು ಕಿತ್ತೊಗೆದು ತಮ್ಮ ಮಾನವ ಹಕ್ಕುಗಳನ್ನು ನಿಶ್ಚಿತವಾಗಿ ಪ್ರತಿಪಾದಿಸುವ ತಮ್ಮ ನಿರ್ಧಾರವನ್ನು ತೋರಿದ್ದು ಮಹಾಡ್‌ನಲ್ಲಿಯೇ. ಜಾತಿಗೆ ಸಂಬಂಧಿಸಿದ ಕೆಲವು ಅಂಶಗಳನ್ನು ವಿರೋಧಿಸಿದ್ದು ಮತ್ತು ದೇವಸ್ಥಾನದಲ್ಲಿ ಪ್ರವೇಶದ ಹಕ್ಕು, ಸಾರ್ವಜನಿಕ ನೀರಿನ ಮೂಲಗಳಿಂದ ನೀರನ್ನು ಬಳಸುವ ಹಕ್ಕು ಇಂಥ ನಾಗರಿಕ ಹಕ್ಕುಗಳಿಗಾಗಿ ಇತರ ಆಂದೋಲನಗಳೂ ಮಹಾಡ್‌ಗಿಂತ ಮುಂಚೆ ನಡೆದಿದ್ದವು. ನಿಜವೆಂದರೆ, ಮಹಾಡ್ ಆಂದೋಲನದ ಒಂದು ಭಾಗವಾಗಿ, ಸ್ವಲ್ಪವೇ ಮುಂಚೆ ದಾಸ್‌ಗಾಂವ್‌ನಲ್ಲಿರುವ ಕ್ರಾಫೋರ್ಡ್ ಬಾವಿಯನ್ನು ಬಳಸುವಲ್ಲಿ ಮಾಡಿದ ಆಂದೋಲನವು ಆ ಹೊತ್ತಿಗೆ ಯಶಸ್ವಿಯಾಗಿತ್ತು.</p>



<p>ದಲಿತ ಚಳವಳಿಯ ಹೆಗ್ಗುರುತುಗಳಾಗಿ ಮತ್ತು ದಲಿತ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ನೀಡಿದ ಕೊಡುಗೆಗಾಗಿ ಅವೆಲ್ಲವೂ ಬಹಳ ಮಹತ್ವವನ್ನು ಪಡೆದಿವೆ. ಆದರೆ, ಅವಕ್ಕೂ ಮತ್ತು ಮಹಾಡ್ ಚಳವಳಿಗೂ ಇರುವ ಪ್ರಮುಖ ವ್ಯತ್ಯಾಸವಿರುವುದು ಸಂಘಟನೆ ಮತ್ತು ನಾಯಕತ್ವದ ಸ್ವರೂಪದಲ್ಲಿ. ಸಂಘಟನೆಯ ದೃಷ್ಟಿಯಿಂದ ಮತ್ತು ಡಾ.ಅಂಬೇಡ್ಕರ್ ಅವರಂಥ ವರ್ಚಸ್ವಿ ನಾಯಕತ್ವದ ಕೊರತೆ ಅಲ್ಲಿತ್ತು. ಇದರಿಂದಾಗಿ ಅವು ತಮ್ಮ ಸ್ಥಳೀಯ ಮಿತಿಯನ್ನು ದಾಟಿ ಹೊರಗೆ ಸೈದ್ಧಾಂತಿಕ ಮತ್ತು ಐತಿಹಾಸಿಕ ಪ್ರಭಾವವನ್ನು ಬೀರಲಿಲ್ಲ. ಮಹಾಡ್‌ಗಿಂತ ಮುಂಚೆ, ದೇವಸ್ಥಾನದ ಪ್ರವೇಶದ ನಾಗರಿಕ ಹಕ್ಕಿಗಾಗಿ ನಡೆದ ವೈಕೊಮ್ ಸತ್ಯಾಗ್ರಹವೂ(1924-25) ಕೂಡ, ಮಹಾತ್ಮಾ ಗಾಂಧಿ ಮತ್ತು ಅವರಂಥ ಇನ್ನೂ ಹಲವಾರು ಮುಖ್ಯವಾಹಿನಿ ನಾಯಕರುಗಳ ದಂಡೇ ಅದರಲ್ಲಿ ಭಾಗವಹಿಸಿತ್ತು. ಮಹಾಡ್‌ನ ತೇಜಸ್ಸಾಗಲಿ, ಅದಕ್ಕೆ ಸಿಕ್ಕ ಪ್ರಚಾರದ ವ್ಯಾಪಕತೆಯಾಗಲಿ ವೈಕೊಮ್ ಸತ್ಯಾಗ್ರಹಕ್ಕೆ ಇರಲಿಲ್ಲ. ಅದು ಮುಖ್ಯವಾಹಿನಿಯ ಇತಿಹಾಸದಲ್ಲಿ ಮಹತ್ವವನ್ನು ಪಡೆದರೂ ದಲಿತರಲ್ಲಿ ಮಹಾಡ್‌ನಂಥ ಪ್ರತಿಷ್ಠಿತ ಸ್ಥಾನವನ್ನು ಗಳಿಸಿಕೊಳ್ಳುವಲ್ಲಿ ಸೋತಿತು. ವೈಕೊಮ್ ಚಳವಳಿಗೆ ಸ್ಫೂರ್ತಿಯಾಗಲಿ ನಾಯಕತ್ವವಾಗಲಿ ದಲಿತರಿಂದ ಬಂದಿರಲಿಲ್ಲ. ಆದರೆ ಮಹಾಡ್ ಚಳವಳಿ, ತನ್ನ ಸಂಘಟನೆಯ ಪರಿಮಾಣ, ಧ್ಯೇಯದೃಷ್ಟಿಯ ಸಂವಹನ, ಸ್ವಯಂಪ್ರೇರಣೆ ಮತ್ತು ನಾಯಕತ್ವದ ದೃಷ್ಟಿಯಿಂದ ದಲಿತರು ತಮ್ಮ ನಾಗರಿಕ ಹಕ್ಕುಗಳಿಗಾಗಿ ಹೂಡಿದ ಬಂಡಾಯದ ಅಭೂತಪೂರ್ವ ನಿದರ್ಶನವಾಗಿತ್ತು. ದಮನಿತರ ನಾಗರಿಕ ಹಕ್ಕುಗಳ ಹೋರಾಟವಾಗಿ ಅದು ದೇಶದ್ದಷ್ಟೇ ಅಲ್ಲ, ಜಾಗತಿಕ ಇತಿಹಾಸದಲ್ಲಿಯೂ ಪ್ರಮುಖ ಸ್ಥಾನವನ್ನು ಪಡೆಯಬೇಕು.</p>



<p><strong>2. </strong><strong>ಎರಡು ಚಾರಿತ್ರಿಕ ಚಳವಳಿಗಳ ರೋಮಾಂಚಕ ಭಾಗಗಳು</strong></p>



<p>ಪುಸ್ತಕದಲ್ಲಿರುವ ಆರ್.ಬಿ. ಮೋರೆ ಅವರ ಮೂಲ ಕಥನದ ಕೆಲವು ರೋಮಾಂಚಕ ಭಾಗಗಳು ಹೀಗಿವೆ:</p>



<p><strong>ಕೆರೆ ನೀರನ್ನು ನಿರಾಕರಿಸುವ ಅಸ್ಪಶ್ಯತೆಯನ್ನು ಧಿಕ್ಕರಿಸಿದವರ ಮೇಲೆ ದಾಳಿ</strong></p>



<p>ಸಾಂಪ್ರದಾಯಿಕ ಮತ್ತು ಕ್ರೂರ ಪರಂಪರಾಗತ ಧೋರಣೆಯನ್ನು ಪೋಷಿಸಿಕೊಂಡು ಬಂದಿದ್ದವರಿಗೆ ಇದೆಲ್ಲವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ತಮ್ಮ ಜನರನ್ನು ಕಾಲ್ನಡಿಗೆಯಲ್ಲೋ ಸೈಕಲ್ ಹತ್ತಿಕೊಂಡೋ ಹೋಗಿ, ‘ಮಹಾರ್‌ರು ಈಗಾಗಲೇ ಕೆರೆಯನ್ನು ಕಲುಷಿತಗೊಳಿಸಿದ್ದಾರೆ, ಇನ್ನು ಅವರು ವೀರೇಶ್ವರ ದೇವಸ್ಥಾನವನ್ನು ಪ್ರವೇಶಿಸುವವರಿದ್ದಾರೆ’ ಎಂಬ ವದಂತಿಯನ್ನು ರೈತ ಸಮುದಾಯದಲ್ಲಿ ಹಬ್ಬಿಸಿದರು. ಇವರ ಸುಳ್ಳು ವದಂತಿಗೆ ಕಿವಿಗೊಟ್ಟು, ಮೇಲ್ಜಾತಿಯ ಭೂಮಾಲಕರು ಮತ್ತು ಲೇವಾದೇವಿ ಸಾಹುಕಾರರ ಚಿತಾವಣೆಗೆ ಬಲಿಯಾಗಿ ಸ್ಪೃಶ್ಯ ಜಾತಿಗಳ ಸಾವಿರಾರು ಬಡ ಜನ ತಮ್ಮ ದೇವರು ಮತ್ತು ಧರ್ಮವನ್ನು ಕಾಪಾಡಲು ಮಹಾಡ್‌ನತ್ತ ಧಾವಿಸಿದರು. ವೀರೇಶ್ವರ ದೇವಸ್ಥಾನದ ಆವರಣದಲ್ಲಿ ಒಗ್ಗೂಡಿದರು. ಅವರ ಉಪಸ್ಥಿತಿಯಿಂದ ಉತ್ತೇಜಿತರಾದ ಕೆಲವು ಅಶಿಸ್ತಿನ ವ್ಯಕ್ತಿಗಳು ಸಮ್ಮೇಳನದ ನಂತರ ಮಾರ್ಕೆಟ್‌ನಲ್ಲಿ ಓಡಾಡುತ್ತಿದ್ದ ಅಸ್ಪೃಶ್ಯ ವ್ಯಕ್ತಿಗಳನ್ನು ಹಿಡಿದು ಹೊಡೆಯತೊಡಗಿದರು.</p>



<p>ಅಸ್ಪೃಶ್ಯರು ಕೆರೆಯಿಂದ ಹಿಂದಿರುಗಿದ ಎರಡು ಮೂರು ಗಂಟೆಗಳ ಕಾಲ ಇದು ನಡೆಯಿತು. ಈ ಹೊತ್ತಿಗೆ ಸಮ್ಮೇಳನಕ್ಕೆ ಬಂದಿದ್ದ ಹೆಚ್ಚಿನ ಜನ ಊಟ ಮಾಡಿ ತಮ್ಮ ತಮ್ಮ ಗ್ರಾಮಗಳಿಗೆ ಹೊರಟಿದ್ದರು, ಕೆಲವರು ಆಗಲೇ ಹೋಗಿಯೇ ಬಿಟ್ಟಿದ್ದರು. ಇನ್ನು ಕೆಲವರು ಇನ್ನೂ ಊಟ ಮಾಡುತ್ತಿದ್ದರು, ತಮ್ಮ ಜನರ ಮೇಲೆ ಆಗುತ್ತಿರುವ ದಾಳಿಯ ಸುದ್ದಿ ಕೇಳಿ ಅವರು ಊಟವನ್ನು ಅರ್ಧದಲ್ಲಿಯೇ ಬಿಟ್ಟು ಎದ್ದರು. ಅವರು ದಾಳಿಕೋರರನ್ನು ಮುಖಾಮುಖಿ ಎದುರಿಸುವ ನಿರ್ಧಾರವನ್ನು ಮಾಡಿದ್ದರು. ಪೆಂಡಾಲುಗಳನ್ನು ಮುರಿದು ಅದರಿಂದ ಕೋಲು, ಬಡಿಗೆಗಳನ್ನು ಎತ್ತಿಕೊಂಡರು. ಕೆಲವು ಡಾಕ್ ಬಂಗಲೆಗೆ ಓಡಿ ಹೋಗಿ ಅಸಹಾಯಕ ಜನರ ಮೇಲೆ ದಾಳಿ ಮಾಡುತ್ತಿರುವ ಹೇಡಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಅನುಮತಿಯನ್ನು ಕೋರಿದರು. ಆದರೆ ಅವರಿಗೆ ಆಕ್ರೋಶಕ್ಕೆ ಒಳಗಾಗದೆ ಶಾಂತವಾಗಿ ತಮ್ಮ ತಮ್ಮ ಗ್ರಾಮಗಳಿಗೆ ಮರಳಲು ಹೇಳಲಾಯಿತು. ಬಸ್ ಡಿಪೋದ ಪಶ್ಚಿಮ ಭಾಗದಲ್ಲಿ ಸಾವಿರಾರು ಅಸ್ಪೃಶ್ಯರು ಸೇರಿದ್ದರು. ಮೇಲೆ ಹೇಳಿದ ಗೂಂಡಾಗಳು ಮಾರ್ಕೆಟ್ ಪ್ರದೇಶದಲ್ಲಿ, ಓಣಿ ಓಣಿಗಳಲ್ಲಿ ಮುಕ್ತವಾಗಿ ಓಡಾಡಿ ಅಸ್ಪಶ್ಯ ಜಾತಿಯ ಒಬ್ಬೊಬ್ಬರೇ ಸಿಗುವ ವ್ಯಕ್ತಿಗಳನ್ನು ಹಿಡಿದು ಹೊಡೆಯುವುದಕ್ಕಾಗಿ ನೋಡುತ್ತಿದ್ದರು. ಇಂಥವರ ಮಾರಣಾಂತಿಕ ಹಲ್ಲೆಗೆ ಸಿಕ್ಕವರಲ್ಲಿ ಒಬ್ಬರು ಮಹಾರ್ ಸಮಾಜ್ ಸೇವಾ ಸಂಘದ ಅಧ್ಯಕ್ಷರಾದ ಭಿಕಾಜಿ ಸಾಂಭಾಜಿ ಗಾಯಕ್ವಾಡ್ ಮತ್ತು ಬಾಂಬೆಯಿಂದ ಬಂದಿದ್ದ ಇನ್ನು ಕೆಲವರು.</p>



<p>ಪಟ್ಟಣದ ರಸ್ತೆಗಳು ತಮ್ಮ ಮೂಲಭೂತ ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಮುಗ್ಧ ದಲಿತರ ರಕ್ತದಿಂದ ಕಲೆಯಾಗಿದ್ದವು. ಗೂಂಡಾಗಳು ಮಾರ್ಕೆಟ್‌ನಲ್ಲಿ ಬೇಸ್ ಕ್ಯಾಂಪ್‌ಗಳ ಮೇಲೆಯೂ ದಾಳಿ ನಡೆಸಲು ಏಳು ಬಾರಿ ಪ್ರಯತ್ನಿಸಿದ್ದರು; ಆದರೆ, ಬಾಗಿಲಲ್ಲೇ ಕೈಯಲ್ಲಿ ಕುಡಗೋಲು, ಕಬ್ಬಿಣದ ರಾಡುಗಳನ್ನು ಹಿಡಿದು ನಿಂತಿದ್ದ, ವಯಸ್ಸಾದ ಆದರೂ ಕಟ್ಟುಮಸ್ತಾದ ಶರೀರದ ಇಬ್ಬರು ಕಾರ್ಯಕರ್ತರು, ಶಿವರಾಮ್ ಗೋಪಾಲ್ ಜಾಧವ್ ಮತ್ತು ಸಾಂಭಾಜಿ ತುಕಾರಾಮ್ ಗಾಯಕ್ವಾಡ್ ಮತ್ತು ಅವರ ಬೆನ್ನಿಗೆ ನಿಂತಿದ್ದ ಯುವಜನರ ಬಲವಾದ ಗುಂಪನ್ನು ನೋಡಿ ಹಿಮ್ಮೆಟ್ಟಿದ್ದರು. ಅವರ ಕೋಪೋದ್ರಿಕ್ತ ಮುಖ ಮತ್ತು ಕೈಯಲ್ಲಿನ ಆಯುಧಗಳನ್ನು ನೋಡಿ ಅವರ ಮೇಲೆ ಹಲ್ಲೆ ಮಾಡುವ ಧೈರ್ಯ ಆ ಗೂಂಡಾಗಳಿಗೆ ಬರಲಿಲ್ಲ. ಹಾಗೆಯೇ ಗುಂಪುಗುಂಪುಗಳಲ್ಲಿ ಓಡಾಡುತ್ತಿದ್ದ ಅಸ್ಪೃಶ್ಯರನ್ನು ಅವರು ಮುಟ್ಟಲು ಹೋಗಲಿಲ್ಲ. ನಂತರ ಈ ಗೂಂಡಾಗಳು ತಮ್ಮ ಗಮನವನ್ನು ಮೋಚಿಗಳ ಅಂಗಡಿಗಳ ಮೇಲೆ ತಿರುಗಿಸಿದರು. ಕಂಡೇಶ್‌ನಿಂದ ಬಂದಿದ್ದ ಈ ಅಂಗಡಿಕಾರ ಪುರುಷರನ್ನಷ್ಟೇ ಅಲ್ಲ, ಎಳೆಯ, ವೃದ್ಧ ಮಹಿಳೆಯರನ್ನು ಚಚ್ಚಿದರು. ಈ ಕ್ರೌರ್ಯಕ್ಕೆ ಮಕ್ಕಳೂ ಬಲಿಯಾದರು. ಭಾನುದಾಸ್ ಕಾಂಬ್ಳಿ ಮತ್ತು ಪಿ.ಎನ್.ರಾಜ್‌ಭೋಗ್‌ರಂಥ ಹೆಸರಾಂತ ಅಸ್ಪೃಶ್ಯ ನಾಯಕರೂ ಈ ಹಲ್ಲೆಗಳಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು.’’</p>



<p><strong>ಮನುಸ್ಮತಿಯ ದಹನ</strong></p>



<p>‘‘ಕೆಲವರು, ಸತ್ಯಾಗ್ರಹವನ್ನು ಮಾಡಬೇಕು, ಆದರೆ ಬಾಬಾಸಾಹೇಬರು ಅದರಲ್ಲಿ ಭಾಗವಹಿಸಬಾರದು ಎಂದು ಸಲಹೆ ನೀಡಿದರು. ಹೆಚ್ಚಿನವರು ಸತ್ಯಾಗ್ರಹದ ಪರವಾಗಿಯೇ ಇದ್ದರು. ಬಾಬಾಸಾಹೇಬ್ ಮೌನವಾಗಿ ಎಲ್ಲರ ಅಭಿಪ್ರಾಯಗಳನ್ನು ಜಾಗರೂಕತೆಯಿಂದ ಆಲಿಸುತ್ತಿದ್ದರು. ಕೊನೆಯಲ್ಲಿ, ಅವರೆಂದರು, ‘‘ಸತ್ಯಾಗ್ರಹವನ್ನು ಮಾಡಿ ಜೈಲಿಗೆ ಹೋಗಲು 1,000 ಜನ ಸಿದ್ಧವಾಗಿದ್ದರೆ ನಾವು ಸತ್ಯಾಗ್ರಹ ಮಾಡೋಣ.’’ ಈ ನಿರ್ಧಾರವನ್ನು ತೆಗೆದುಕೊಳ್ಳುವ ಹೊತ್ತಿಗೆ ರಾತ್ರಿ 12 ಆಗಿತ್ತು. ಸತ್ಯಾಗ್ರಹಿಗಳು ತೆಗೆದುಕೊಳ್ಳಬೇಕಾಗಿದ್ದ ಶಪಥದ ಕರಡನ್ನು ತಯಾರಿಸಲಾಯಿತು. ಕರಡಿನ ಮುಖ್ಯವಾದ ಭಾಗದ ಒಕ್ಕಣೆ ಹೀಗಿತ್ತು: ‘‘ನಾನು ಜೈಲಿಗೆ ಹೋಗಲು, ಹೋರಾಡಲು, ಸತ್ಯಾಗ್ರಹವನ್ನು ಮಾಡುತ್ತಾ ಮಡಿಯಲೂ ಸಿದ್ಧನಿದ್ದೇನೆ’’. ಧರ್ಮಶಾಲಾದ ಕಚೇರಿಯಲ್ಲಿ ಇದರ ಹಲವಾರು ಪ್ರತಿಗಳನ್ನು ತಯಾರಿಸಲಾಯಿತು. ಶಿಕ್ಷಿತ ಪ್ರತಿನಿಧಿಗಳಲ್ಲಿ ಅದನ್ನು ಹಂಚಿ, ಸತ್ಯಾಗ್ರಹಿಗಳಿಗೆ ಓದಿ ಹೇಳಿ ಅವರ ಸಮ್ಮತಿಗಾಗಿ ಹೆಬ್ಬೆಟ್ಟಿನ ಗುರುತನ್ನು ಪಡೆಯಲು ಹೇಳಲಾಯಿತು. ಬೆಳಗಿನ ಜಾವ 4 ಗಂಟೆಗೆ 3,500 ಜನ ತಮ್ಮ ಸಮ್ಮತಿಯನ್ನು ದಾಖಲಿಸಿದ್ದರು. ಇದಲ್ಲದೇ ಇನ್ನೂ ಹೆಚ್ಚಿನ ಜನ ಮುಂದೆ ಬರುತ್ತಲಿದ್ದರು. ಆದ್ದರಿಂದ ಸಹಿಯನ್ನು ಸಂಗ್ರಹಿಸುವ ಕೆಲಸವನ್ನು ನಿಲ್ಲಿಸಲಾಯಿತು.</p>



<p>ಬೆಳಗ್ಗೆ 4:30ರ ಹೊತ್ತಿಗೆ ಸತ್ಯಾಗ್ರಹಿಗಳು ಸಹಿ ಹಾಕಿದ್ದ ಕಾಗದಗಳ ಕಟ್ಟುಗಳನ್ನು ಬಾಬಾಸಾಹೇಬರ ಸಮ್ಮುಖದಲ್ಲಿ ಇಡಲಾಯಿತು. ಅಷ್ಟು ಹೊತ್ತಿಗೆ ಕ್ಯಾಂಪಿನಲ್ಲಿದ್ದ ಇತರರ ಹಾಗೆಯೇ ಅವರು ಎದ್ದು ಬಹಳ ಹೊತ್ತಾಗಿತ್ತು. ಬೆಳಗ್ಗೆ 7 ಗಂಟೆಗೆ ಅವರು ಕಲೆಕ್ಟರ್‌ರಿಗೆ ಒಂದು ಪತ್ರವನ್ನು ತಲುಪಿಸಲು ಹೇಳಿದರು. ನಾನು ಆ ಪತ್ರವನ್ನು ತೆಗೆದುಕೊಂಡು ಹೋಗುತ್ತಿರುವಾಗ ಡಾಕ್ ಬಂಗಲೆಯ ಹಾದಿಯಲ್ಲಿ ಒಬ್ಬ ಮನುಷ್ಯ ಜೀವಿಯನ್ನೂ ಕಾಣಲಿಲ್ಲ. ಇಡೀ ಮಾರ್ಕೆಟ್ ನಿರ್ಜನವಾಗಿತ್ತು. ನಾನು ಪತ್ರವನ್ನು ಕಲೆಕ್ಟರ್‌ಅವರ ಕೈಗೊಪ್ಪಿಸಿದೆ, ಅದರ ಮೇಲೆ ಕಣ್ಣಾಡಿಸಿದವರೇ ತಾವು ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲಿಗೆ ಆಗಮಿಸುವುದಾಗಿ ನನ್ನ ಮೂಲಕ ಮೌಖಿಕ ಸೂಚನೆ ನೀಡಿ ನನ್ನನ್ನು ಕಳುಹಿಸಿಕೊಟ್ಟರು. ನಾನು ಬಂದು ಅದನ್ನು ಬಾಬಾಸಾಹೇಬರಿಗೆ ತಿಳಿಸಿದೆ.</p>



<p>ಬಾಬಾಸಾಹೇಬರ ಜೊತೆ ಸ್ನೇಹದಿಂದ ಇದ್ದ ಬಾಪು ಸಹಸ್ರಬುದ್ಧೆ, ತಮಾಷೆಯಾಗಿ ಹೇಳಿದರು, ‘‘ನಿನ್ನನ್ನು ಬಂಧಿಸದೇ ಹಿಂದಕ್ಕೆ ಹೇಗೆ ಕಳುಹಿಸಿದರು?’’ ಅದಕ್ಕೆ ನಾನು ಏನೂ ಹೇಳಲಿಲ್ಲ. ಆ ಹೊತ್ತಿನಲ್ಲಿ ಬಾಬಾಸಾಹೇಬ್ ಸುತ್ತ ಕೆಲವರಿದ್ದರು. ಉಳಿದವರು ಸಭಾಂಗಣಕ್ಕೆ ಹೊರಟು ಹೋಗಿದ್ದರು. ಆ ದಿನದ ಗೋಷ್ಠಿ ಬೆಳಗಿನ 9 ಗಂಟೆಗೆ, ಮನುಸ್ಮತಿಯ ಪ್ರತಿಯನ್ನು ಸುಡುವುದರೊಂದಿಗೆ ಆರಂಭವಾಯಿತು. ಪವಿತ್ರ ಚಿತೆಗಾಗಿ ಒಂದು ವಿಶೇಷ ಸ್ಥಳವನ್ನು ಪೆಂಡಾಲ್ ಹತ್ತಿರದಲ್ಲಿ ನಿರ್ಮಿಸಲಾಗಿತ್ತು. ಹೋಮ ಹವನಕ್ಕೆ ಬೇಕಾದ ಎಲ್ಲಾ ಸಾಮಗ್ರಿಯನ್ನು ವ್ಯವಸ್ಥೆ ಮಾಡಲಾಗಿತ್ತು. ಬಾಬಾಸಾಹೇಬ ಬೆಂಕಿಯ ಎದುರಿಗೆ ನಿಂತಿದ್ದರು ಮತ್ತು ಬಾಪು ಸಹಸ್ರಬದ್ಧೆ ಮನುಸ್ಮತಿಯ ಆಕ್ಷೇಪಾರ್ಹ ಭಾಗಗಳ ಹಾಳೆಗಳನ್ನು ಬಾಬಾಸಾಹೇಬರ ಕೈಗಳಿಂದ ತೆಗೆದುಕೊಂಡು, ಅದನ್ನೊಮ್ಮೆ ಓದಿ ಬೆಂಕಿಗೆ ಹಾಕುತ್ತಿದ್ದರು. ಈ ಕಾರ್ಯಕ್ರಮ ನಡೆಯುತ್ತಿರುವಾಗ ಜನರಲ್ಲಿ ಉತ್ಸಾಹ, ಹುಮ್ಮಸ್ಸು ತುಂಬಿ ತುಳುಕುತ್ತಿತ್ತು.’’</p>
]]></content:encoded>
					
		
		
			</item>
		<item>
		<title>ಮಹಿಷ ದಸರ ವಿರೋಧಿಸಿದ ಸಂಸದ ಪ್ರತಾಪ್ ಸಿಮ್ಮ ಅವರಿಗೆ ಧನ್ಯವಾದಗಳು&#8230;!!!?</title>
		<link>https://peepalmedia.com/thanks-to-mp-pratap-simma-who-opposed-mahisha-dasara/</link>
		
		<dc:creator><![CDATA[Peepal Media]]></dc:creator>
		<pubDate>Tue, 10 Oct 2023 12:41:44 +0000</pubDate>
				<category><![CDATA[ದಲಿತ ನೋಟ]]></category>
		<guid isPermaLink="false">https://peepalmedia.com/?p=29552</guid>

					<description><![CDATA[ಕಳೆದ ಒಂದು ತಿಂಗಳಿಂದಲೂ ಸತತವಾಗಿ ಬಹಳ ಹಠಕ್ಕೆ ಬಿದ್ದಂತೆ ಮಹಿಷ ದಸರವನ್ನು ವಿರೋಧಿಸುತ್ತಲೇ ಬಂದಿರುವ ಮೈಸೂರು ಸಂಸದರಾದಂತಹ ಸನ್ಮಾನ್ಯ ಪ್ರತಾಪ್ ಸಿಂಹ ಅವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ಸನ್ಮಾನ್ಯರು ನಿನ್ನೆ ಅಂದರೆ ದಿನಾಂಕ 9-10-23ರಂದು ಮಹಿಷೂರಿನಲ್ಲಿ ಮತ್ತೊಮ್ಮೆ ಪತ್ರಿಕಾಗೋಷ್ಟಿ ಕರೆದು ವಿಪರೀತ ಟೆನ್ಶನ್ ಗೊಳಗಾದವರಂತೆ ಒಂದೇ ಉಸಿರಿನಲ್ಲಿ ಮತ್ತೊಮ್ಮೆ ತಮ್ಮ ವಿರೋಧವನ್ನು ಬಹಳ ಉಗ್ರವಾಗಿಯೇ ಪ್ರಕಟಿಸಿದ್ದಾರೆ! ಹಿಂದಿನ ಅವರ ಪತ್ರಿಕಾಗೋಷ್ಟಿಗಳಲ್ಲಿ ತಾಳ್ಮೆಯಿರುತ್ತಿತ್ತು. ಆದರೆ ಇಂದಿನ ಪತ್ರಿಕಾಗೋಷ್ಟಿಯಲ್ಲಿ ಅವರು ಉಗ್ರನರಸಿಂಹನಂತಾಗಿದ್ದರು! ಹಾಗಾಗಿ ಅಸುರರ ವಿರುದ್ದ ಭಯಂಕರ ವಾಗ್ದಾಳಿಯನ್ನೇ ನಡೆಸಿದರು. [&#8230;]]]></description>
										<content:encoded><![CDATA[
<p></p>



<p class="dropcapp2"><mark style="background-color:rgba(0, 0, 0, 0)" class="has-inline-color has-vivid-red-color">ಕ</mark>ಳೆದ ಒಂದು ತಿಂಗಳಿಂದಲೂ ಸತತವಾಗಿ ಬಹಳ ಹಠಕ್ಕೆ ಬಿದ್ದಂತೆ ಮಹಿಷ ದಸರವನ್ನು ವಿರೋಧಿಸುತ್ತಲೇ ಬಂದಿರುವ ಮೈಸೂರು ಸಂಸದರಾದಂತಹ ಸನ್ಮಾನ್ಯ ಪ್ರತಾಪ್ ಸಿಂಹ ಅವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.</p>



<p>ಸನ್ಮಾನ್ಯರು ನಿನ್ನೆ ಅಂದರೆ ದಿನಾಂಕ 9-10-23ರಂದು ಮಹಿಷೂರಿನಲ್ಲಿ ಮತ್ತೊಮ್ಮೆ ಪತ್ರಿಕಾಗೋಷ್ಟಿ ಕರೆದು ವಿಪರೀತ ಟೆನ್ಶನ್ ಗೊಳಗಾದವರಂತೆ ಒಂದೇ ಉಸಿರಿನಲ್ಲಿ ಮತ್ತೊಮ್ಮೆ ತಮ್ಮ ವಿರೋಧವನ್ನು ಬಹಳ ಉಗ್ರವಾಗಿಯೇ ಪ್ರಕಟಿಸಿದ್ದಾರೆ!</p>



<p>ಹಿಂದಿನ ಅವರ ಪತ್ರಿಕಾಗೋಷ್ಟಿಗಳಲ್ಲಿ ತಾಳ್ಮೆಯಿರುತ್ತಿತ್ತು. ಆದರೆ ಇಂದಿನ ಪತ್ರಿಕಾಗೋಷ್ಟಿಯಲ್ಲಿ ಅವರು ಉಗ್ರನರಸಿಂಹನಂತಾಗಿದ್ದರು! ಹಾಗಾಗಿ ಅಸುರರ ವಿರುದ್ದ ಭಯಂಕರ ವಾಗ್ದಾಳಿಯನ್ನೇ ನಡೆಸಿದರು. ಇದನ್ನು ಕೇಳಿ ನಮ್ಮ ಅನೇಕ ಗೆಳೆಯರೂ ರೊಚ್ಚಿಗೆದ್ದಿದ್ದರು! ನಾನು ಯಾಕೆ ನಿಮಗಿಷ್ಟು ಕೋಪ ಎಂದು ನಮ್ಮ ಗೆಳೆಯರನ್ನು ಕೇಳಿದೆ. ಅದಕ್ಕವರು &#8220;ಇನ್ನೇನ್ ಸಾರ್.. ನಮ್ಮನ್ನ ಈ ತರ ಮಟ್ಟಹಾಕಬೇಕು ಅಂತಾವ್ನೆ. ನಾವು ಏನು ಅಂತ ಇವನಿಗೆ ತೋರಿಸದೆ ಬಿಡಕ್ಕಾಗ್ತದಾ ಸಾರ್ &#8221; ಎಂದರು. ಆಗ ನಾನು ಅವರೊಬ್ಬ ಸಂಸದರು ಹಾಗೆಲ್ಲಾ ಏಕವಚನದಲ್ಲಿ ಮಾತಾಡಬಾರದು ಎಂದು ಸಮಾಧಾನ ಮಾಡಿ, ಸನ್ಮಾನ್ಯ ಸಂಸದರು ಉದ್ವೇಗದಲ್ಲಿ&nbsp; ಮಾತಾಡುವಾಗ ಅವರದೇ ಮೆದುಳಿಂದ, ಅವರದೇ ಬಾಯಿಂದ, ಅವರದೇ ಹೃದಯದಿಂದ ಮತ್ತು ಅವರದೇ ಕರುಳಿನಿಂದ ಹೊರಬಿದ್ದ&nbsp; ಕೆಲವು ಸತ್ಯಗಳನ್ನು ತಿಳಿಸಿದೆ , ಅನಲೈಸ್ ಮಾಡಿ ತಿಳಿಸಿದೆ. ಆಗ ವ್ಯಗ್ರಗೊಂಡಿದ್ದ ನಮ್ಮ ಅಸುರ ಗೆಳೆಯರು ಕೂಲಾದರು!</p>



<figure class="wp-block-gallery has-nested-images columns-default is-cropped wp-block-gallery-1 is-layout-flex wp-block-gallery-is-layout-flex">
<figure class="wp-block-image size-large"><img loading="lazy" decoding="async" width="1024" height="585" data-id="29565" src="https://peepalmedia.com/wp-content/uploads/2023/10/IMG_20230909_154757-1-1024x585.jpg" alt="" class="wp-image-29565" srcset="https://peepalmedia.com/wp-content/uploads/2023/10/IMG_20230909_154757-1-1024x585.jpg 1024w, https://peepalmedia.com/wp-content/uploads/2023/10/IMG_20230909_154757-1-300x171.jpg 300w, https://peepalmedia.com/wp-content/uploads/2023/10/IMG_20230909_154757-1-768x439.jpg 768w, https://peepalmedia.com/wp-content/uploads/2023/10/IMG_20230909_154757-1-150x86.jpg 150w, https://peepalmedia.com/wp-content/uploads/2023/10/IMG_20230909_154757-1-696x398.jpg 696w, https://peepalmedia.com/wp-content/uploads/2023/10/IMG_20230909_154757-1-1068x610.jpg 1068w, https://peepalmedia.com/wp-content/uploads/2023/10/IMG_20230909_154757-1.jpg 1080w" sizes="auto, (max-width: 1024px) 100vw, 1024px" /></figure>
</figure>



<p>ಹಾಗೆ ನಾನು ಸನ್ಮಾನ್ಯ ಸಂಸದರ ಮಾತಿನಲ್ಲಿ ಕಂಡಂತಹ ಸತ್ಯಗಳೇನೆಂದರೆ; ಅವು ಈ ಕೆಳಗಿನಂತಿವೆ!</p>



<ol class="wp-block-list" type="1">
<li>ಸನ್ಮಾನ್ಯ ಸಂಸದರು ಮಹಿಷ ದಸರ ಮಾಡುವವರನ್ನು ಈಗಲೇ ಹೊಸಕಿಹಾಕಬೇಕು. ಮಟ್ಟಹಾಕಬೇಕು ಅಂದರು. ಹೌದಲ್ವಾ? ಯಾರಿಗಂದರು? ಭಾರತದ ಮೂಲನಿವಾಸಿ ಬಹುಜನರಿಗಂದರು. ಅಲ್ಲಿಗೆ ಅವರು ತಮಗೆ ದೇಶಾದ್ಯಂತ, ಕರ್ನಾಟಕ ರಾಜ್ಯಾದ್ಯಂತ ಬಿಜೆಪಿಗೆ ಓಟು ಹಾಕಿದ ದಲಿತ, ಪ್ರಗತಿಪರ, ಹಿಂದುಳಿದ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರೆಲ್ಲರನ್ನೂ&nbsp; ಮಟ್ಟಹಾಕಬೇಕು ಬೆಳೆಯಲು ಬಿಡಬಾರದು ಎಂದರಲ್ಲವೇ!?</li>
</ol>



<p>ಜೊತೆಗೆ ಬಿಜೆಪಿಯಲ್ಲಿರುವ ಅಸುರ ವಂಶದ ನಮ್ಮ ಮಹೇಶಣ್ಣ, ಶಿವರಾಮಣ್ಣ, ನಾರಾಯಣ ಸ್ವಾಮ್ಗಳು,&nbsp;&nbsp; ಕಾರಜೋಳರು ಎಲ್ಲರ ಮುಖಕ್ಕೂ ಮಂಗಳಾರತಿ ಎತ್ತಿದ್ದಾರೆ. ಅವರೇ ಕೋಪ ರೋಷ ಪಡದೆ ಅಮಿಕಂಡಿರುವಾಗ ನಿಮಗ್ಯಾಕೆ ಕೋಪ?&nbsp; ಅಂದೆ. ನಿಮಗಿಂತ್ಲೂ ಕೋಪ ಮಾಡ್ಕಬೇಕಾಗಿರೋರು ಅವರು &#8220;ಅರರೇ ನಮಗಿಂತ್ಲೂ ಚಿಕ್ಕಹುಡುಗ ನಮ್ ಜನನಾ ಈತರ ಮಟ್ಟ ಹಾಕಬೇಕು ಅಂತಾನಲ್ಲ ಅಂತ ಅಣ್ಣೋರಿಗೆ ತಾನೇ ಹಲ್ಲು ಹಸಿಟ್ಟಾಗಬೇಕು? ನೀವು ಸುಮ್ನಿರಪ್ಪ ಅಂದೆ.</p>



<p>2. ಸನ್ಮಾನ್ಯ ಸಿಮ್ಮರು ನಾವು ಈ ತರ ಗಲಭೆಗಳನ್ನು ಸೃಷ್ಟಿಸಿಯೇ ನಮ್ಮ ಪಕ್ಷ ಕಟ್ಟಿರೋದು, ಈತರ ಗಲಭೆ ಸೃಷ್ಟಿಸಿಯೇ ಅಧಿಕಾರಕ್ಕೆ ಬಂದಿರೋದು ಅಂತ ಎಷ್ಟು ಪ್ರಾಮಾಣಿಕವಾಗಿ ಹೇಳಿದ್ರು ಅಲ್ವಾ? ಇದಕ್ಕೆ ಅಭಿನಂದನೆ ಸಲ್ಲಿಸಬೇಕೋ ಬ್ಯಾಡ್ವೋ!?</p>



<p>ನಮ್ಮ ಜನರಿಗೆ ನಾವು ಬಡ್ಕೊಂಡು ಸಾಯ್ತಾ ಇದ್ವಿ. ಬಿಜೆಪಿಯವರು ಗಲಭೆ ಸೃಷ್ಟಿಸಿ ಗೆಲ್ತಾರೆ ಕಣ್ರಪ್ಪ. ಗೆಲ್ಲಕೋಸ್ಕರವೇ ಸುಮ್ ಸುಮ್ನೆ ಗಲಭೆ ಅಂತ ಎಷ್ಟು ಹೇಳಿದ್ರು ನಂಬ್ತಾ ಇರ್ಲಿಲ್ಲ. ನಮ್ಮ ಅಣ್ಣನೂ ಅಷ್ಟೇ ಹೇ ನಾವು ಅಂದುಕೊಂಡಂಗಿಲ್ಲ. ನಾವೆಲ್ಲ ಪೂರ್ವಾಗ್ರಹಕ್ಕೆ ಒಳಗಾಗಿ ಬಿಜೆಪಿಯವರನ್ನ ತಪ್ಪು ತಿಳ್ಕೊಂಡಿದ್ವಿ. ಬಟ್ ಬಿಜೆಪಿ ನಮಗೆ ಸ್ಪೇಸ್ ಕೊಡುತ್ತೆ ಅಂತಿದ್ರು. ಈಗ ಸನ್ಮಾನ್ಯ ಸಿಮ್ಮರೇ ಒಂದು ಸ್ಪಷ್ಟ ಚಿತ್ರಣ ಕೊಟ್ರು. ನಮ್ಮ ಜನ ಇನ್ನಾದರೂ ಅರಿತುಕೊಳ್ಳುತ್ತಾರೆ. ಅದಕ್ಕಾಗಿ ಸಿಮ್ಮರಿಗೆ ಧನ್ಯವಾದ.</p>



<p>3. ಸನ್ಮಾನ್ಯ ಸಿಮ್ಮರು ಮಹಿಷ ಅನ್ನೋ ಅಪದ್ದ, ಅಸಹ್ಯ, ಅಪಚಾರದ ಮಹಿಷ ದಸರ ನಡೆಯಲು ಬಿಡಲ್ಲ ಎಂದರು. ಅಂದರೆ ಅವರು ಭಾರತದ ಸಂವಿಧಾನ ಕೊಡಮಾಡುವ ಉಪಾಸನಾ ಸ್ವಾತಂತ್ರ್ಯವನ್ನೂ ಧಿಕ್ಕರಿಸಿ ತಾನು ಬಾಬಾಸಾಹೇಬರು ಬರೆದಿರುವ ಸಂವಿಧಾನದ ಆಶಯವನ್ನು ಧಿಕ್ಕರಿಸುತ್ತೇನೆ, ಮನುವಾದವನ್ನು ಎತ್ತಿಹಿಡಿಯುತ್ತೇನೆ ಎಂದಂತಾಯಿತಲ್ಲವೇ? ಅಲ್ಲಿಗೆ ನಾವು ಏನು ಪ್ರತಾಪ್ ಸಿಮ್ಮ ಎಂದರೆ ಒಂದು ಇದು ಅನ್ಕೊಂಡಿದ್ವೋ ಅದಲ್ಲ. ಅವರು ಕನಿಷ್ಟ ಸಂವಿಧಾನದ ಉಪಾಸನ ಸ್ವಾತಂತ್ರ್ಯ ವನ್ನೂ ಗೌರವಿಸುವ ಘನತೆ ಹೊಂದಿಲ್ಲ ಎಂಬುದನ್ನು ತಾವೇ ಸಾಬೀತು ಪಡಿಸಿದರು.</p>



<p>&#8220;ಯಾರೋ ನಾಲ್ಕು ಜನ ಮಹಿಷನಿಗೆ ಪುಷ್ಪಾರ್ಚನೆ ಮಾಡ್ತಿವಿ ಅಂತ ಬಂದ್ರೆ ಬಿಟ್ ಬಿಡ್ತಿವಾ ಹೊಸಕಿ ಹಾಕ್ತಿವಿ&#8221; ಎನ್ನುತ್ತಾ ಸಂವಿಧಾನ ಒಬ್ಬನಿಗಾಗಲಿ, ಒಂದು ಕೋಟಿ ಜನರಿಗಾಗಲಿ ಒಂದೇ ಎಂಬುದನ್ನೇ ತಿಳಿದಿಲ್ಲ ಎಂದು ಜಗತ್ತಿನ ಮುಂದೆ ತಾವೇ ಬೆತ್ತಲಾದರು-ಬೆತ್ತಲೆ ಜಗತ್ತಿನ ಸಿಮ್ಮರು. ಈ ಮೂಲಕ ನಮ್ಮ ಜನ ಅವರನ್ನು ನಾಯಕ ಎಂದು ನಂಬಿದ್ದನ್ನು ಅವರೇ ಒಡೆದು ಚೂರುಮಾಡಿದರು. ಅದಕ್ಕಾಗಿ ಅವರಿಗೆ ಧನ್ಯವಾದಗಳು..!!</p>



<p>4. ತಾಯಿ ಚಾಮುಂಡಿ ಸರ್ವಶಕ್ತೆ, ಕಷ್ಟ ನಷ್ಟಗಳನ್ನು ಪರಿಹರಿಸಬಲ್ಲ ಶಕ್ತಿ ಎಂದು ಜನರು &nbsp;ದೇವಿಯನ್ನು &nbsp;&nbsp;&nbsp;&nbsp;ನಂಬಿದ್ದಾರೆ. ಸನ್ಮಾನ್ಯ ಸಿಮ್ಮರಿಗೆ ಮಾತ್ರ ಅಂತಹ ನಂಬಿಕೆ ಇದ್ದಂತ್ತಿಲ್ಲ!..</p>



<p>&#8220;ತಾಯಿಯನ್ನು ಭಕ್ತರೆಲ್ಲರೂ ಕೂಡಿ ರಕ್ಷಿಸಬೇಕು&#8221; ಎನ್ನುವ ಮೂಲಕ ತಾಯಿ ಚಾಮುಂಡಿ ದೇವಿಯ ಶಕ್ತಿಯನ್ನು ಲೇವಡಿ ಮಾಡಿದ್ಧಾರೆ&#8230; ಅಣಕಿಸಿದ್ದಾರೆ&#8230;ಅವಮಾನಿಸಿದ್ದಾರೆ. ಅದಕ್ಕಾಗಿ ತಾಯಿ ಚಾಮುಂಡೇಶ್ವರಿಯೇ&nbsp; ಸಿಮ್ಮರಿಗೆ ಶಾಪ ಹಾಕುತ್ತಾಳೆ! ತನ್ನ ದಡ್ಡತನದಿಂದ ತಾನೇ ತಾಯಿ ಚಾಮುಂಡೇಶ್ವರಿಯ ಶಾಪಕ್ಕೆ ಗುರಿಯಾಗಿಸಿ ನಮ್ಮನ್ನು ಸಂಘರ್ಷದಿಂದ ಪಾರು ಮಾಡಿದ್ದಕ್ಕೆ ಧನ್ಯವಾದಗಳು!!</p>



<p>&nbsp;5. &nbsp;ಮಹಿಷ ದಸರವನ್ನು ನಾವು ಲೋಕಲ್ ಆಗಿ ಆಚರಿಸಲು ನಿರ್ಧರಿಸಿದ್ದೆವು. ಅದನ್ನೂ ಜನಗಳಿಗೆಲ್ಲಾ ಸುದ್ದಿ ಮುಟ್ಟಿಸಿ ಕನಿಷ್ಟ ಎರಡು ಸಾವಿರ ಜನರನ್ನಾದರೂ ಸೇರಿಸಲು ಪರದಾಡುತ್ತಿದ್ದೆವು. ಆದರೆ ಸಿಮ್ಮರು ಮಹಿಷ ದಸರಕ್ಕೆ&nbsp; ಪ್ರಚಾರದ ಮೇಲೆ ಪ್ರಚಾರ ಮಾಡುತ್ತಾ ಮಹಿಷ ದಸರವನ್ನು ಗ್ಲೋಬಲ್ ಲೆವಲ್ ಗೆ ವಿಸ್ತರಿಸಿದರು. ನಾಡಿನ ಎಲ್ಲಾ&nbsp; ದಲಿತರನ್ನು ಒಗ್ಗೂಡಿಸಿ ಈಗ ಮಹಿಷ ದಸರಕ್ಕೆ ಸುಮಾರು 10 ಸಾವಿರ ಜನ ಬರುವಂತೆ ಮಾಡಿದರು!!!</p>



<p>ಅದಕ್ಕಾಗಿ ಧನ್ಯವಾದಗಳು ಸಿಮ್ಮ ಸಾರ್.</p>



<p>6. ಸಿಮ್ಮ ಸಾಹೇಬರು ಧಮ್ಕಿ ಹಾಕಿದ್ದು ನಮಗೆ ಅಂದ್ಕೊಂಡ್ರಾ? ನೋ ವೇ! ಚಾನ್ಸೇ ಇಲ್ಲ. ಧಮ್ಕಿ ಹಾಕ್ತಾ ಇರೋದು ಸರ್ಕಾಕ್ಕೆ&#8230;.ಸಿದ್ದರಾಮಯ್ಯನವರ ಸರ್ಕಾರಕ್ಕೆ&#8230;ದಲಿತ ಉಸ್ತುವಾರಿ ಸಚಿವ ಎಚ್.ಮಹದೇವಪ್ಪನವರಿಗೆ&#8230;ಜಿಲ್ಲಾಡಳಿತಕ್ಕೆ ಮತ್ತು ಕಾನೂನು ಸುವ್ಯವಸ್ಥೆಯ ಪೊಲೀಸ್ ನವರಿಗೆ&#8230;</p>



<p>ಹಂಗಾಗಿ ಅವರು ನೋಡ್ಕೋತಾರೆ ಬಿಡಿ. ಪೊಲೀಸ್ ಬಳಿ ಅಲೆದಾಡುವ&nbsp; ನಮ್ಮ ಕೆಲಸ ಸರಳಗೊಳಿಸಿದ ಸಿಮ್ಮರಿಗೆ ಧನ್ಯವಾದಗಳು.</p>



<p>7. &nbsp;ಸಂಸದರನ್ನು ನಾವು ಮಾನವರಾಗಿ ಮಾತ್ರ ನೋಡಿದ್ದೆವು. ಬಹಳ ಜನಪ್ರೀತಿ ಇರಬಹುದು ಎಂದು ಭ್ರಮಿಸಿದ್ದೆವು. ಈಗ ಅವರೊಳಗಿರುವ ಮೃಗವನ್ನು ದರ್ಶಿಸಿ ನಮ್ಮ ತಪ್ಪು ಕಲ್ಪನೆಯನ್ನು ಹೋಗಲಾಡಿಸಿದರು. ಅದಕ್ಕಾಗಿ ಅವರಿಗೆ ಧನ್ಯವಾದಗಳು..!!</p>



<p>8. ಮಹಿಷ ದಸರ ಮಾಡುವವರ ತಲೆಯಲ್ಲಿ ಬುದ್ದಿಯಿಲ್ಲ. ನಾಲ್ಕುಜನ ಬಿಟ್ರೆ ಅಲ್ಲಿ ಯಾರೂ ಇಲ್ಲ. ಅವರನ್ನು ಮಟ್ಟಹಾಕದೆ ಬಿಡುವುದಿಲ್ಲ ಎನ್ನುವ ಮೂಲಕ ಸನ್ಮಾನ್ಯ ಸಿಮ್ಮರು ನಮ್ಮ ಬೆಂಬಲಿಗರನ್ನು ಲಕ್ಷಾಂತರಗೊಳಿಸಿದರು.ಮತ್ತು ಮುಂದೆ ಸಿಮ್ಮರನ್ನು ಮಟ್ಟಹಾಕಲೇಬೇಕು ಎಂದು ನಮ್ಮ ಜನ ಗಟ್ಟಿಯಾಗಿ ತೀರ್ಮಾನ ಮಾಡುವಂತೆ ಪ್ರೇರೇಪಿಸಿದರು. ಈ ಕಾರಣಕ್ಕಾದರೂ ನಾವಂತು ಸನ್ಮಾನ್ಯ ಸಿಮ್ಮ ಅವರೇನಿದಾರೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲೇಬೇಕು&#8230;!!</p>



<p>9. ನವರಾತ್ರಿಯಂತೆ ಒಂಬತ್ತನೆಯದಾಗಿ ಸಿಮ್ಮರು ಮಹಿಷ ದಸರ ಉದ್ಘಾಟಿಸಲಿರುವ ಮಹಿಳಾ ಚಿಂತಕಿ, ಮಾಜಿ ಸಚಿವರೂ ಹಿರಿಯರೂ ಆದ ಶ್ರೀಮತಿ ಬಿ.ಟಿ.ಲಲಿತಾನಾಯಕ್ ಅವರನ್ನು ವಯಸ್ಸು ಮತ್ತು ಹಿರಿತನ ಯಾವುದನ್ನೂ ಲೆಕ್ಕಿಸದೆ ಲೇವಡಿ ಮಾಡಿದರು. ಅವರು ಸಚಿವರಾಗಿದ್ದಾಗ ಅವರ ಮಗ ಕುಡಿದ ಮತ್ತಿನಲ್ಲಿ ಬಾಬಾಸಾಹೇಬರ ಪ್ರತಿಮೆಗೆ ಆಲ್ಕೋಹಾಲ್ ಸುರಿದಿದ್ದ ಪ್ರಕರಣ ನೆನಪಿಸಿ ಅಂತಹ ಮಗನ ತಾಯಿ ಮಹಿಷ ದಸರ ಉದ್ಘಾಟಿಸುವುದನ್ನು ಅಪಹಾಸ್ಯ ಮಾಡಿದರು. ಮಗ ಮಾಡಿದ ತಪ್ಪಿಗೆ ದಲಿತರು ಅಂದೇ ಹೋರಾಟಮಾಡಿ ಶಿಕ್ಷೆ ಕೊಡಿಸಿದರು. ತಾಯಿಯೂ ನೈತಿಕ ಹೊಣೆಹೊತ್ತು ಮಂತ್ರಿಪದವಿಗೆ ರಾಜೀನಾಮೆ ಕೊಟ್ಟರು ಮತ್ತು ಮಗ ಮಾಡಿದ ತಪ್ಪಿಗೆ ಕ್ಷಮೆ ಯಾಚಿಸಿದರು ಅಲ್ಲಿಗೆ ಪ್ರಕರಣ ಮುಗಿಯಿತು.</p>



<p>ಆದರೂ ಅದನ್ನು ಸಿಮ್ಮ ಸಾಹೇಬರು ಈಗ ಉಲ್ಲೇಖಿಸಿ ಲೇವಡಿ ಮಾಡಿದರು!</p>



<p>ಆಗ ನಮಗೆ ಕಂಡಿದ್ದು ಇದೇ ಸಿಮ್ಮರು ತಮ್ಮ ಹೆಂಡತಿಯನ್ನೇ ತಂಗಿ ಎಂದು ಹೇಳಿ ಸರ್ಕಾರದಿಂದ ಫ್ರೀ ಸೈಟು ಹೊಡೆದಿದ್ದರೆಂಬುದು ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ರವಿಬೆಳಗೆರೆಯವರು ಬರೆದಿದ್ದರು!</p>



<p>ಕಳೆದ ಚುನಾವಣಾ ಸಂದರ್ಭದಲ್ಲಿ ಇಬ್ಬಿಬ್ಬರು ಯುವತಿಯರ ಜೊತೆ ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ಸಿಕ್ಕಿಬಿದ್ದಿದ್ದರು. ಅದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರು!&nbsp; ನಮಗೆ ಸನ್ಮಾನ್ಯರು ಲಲಿತಾನಾಯಕ್ ಅವರ 1996 ರ ಘಟನೆ ನೆನಪಿಸಿ, ತಮ್ಮ ಘಟನೆ ನೆನಪಿಗೂ ಅವಕಾಶ ಮಾಡಿಕೊಟ್ಟದ್ದಕ್ಕೆ ಧನ್ಯವಾದಗಳು! ಅಂದಹಾಗೆ, ಇದೇ ಸಿಮ್ಮ, ಸಂಘಪರಿವಾರ, ಬಿಜೆಪಿ, ಮೋದಿ ಸಾಹೇಬರು ಎಲ್ಲರನ್ನೂ ಒಂದಲ್ಲ ಎರಡಲ್ಲ ಮೂರಲ್ಲ ಮೂವತ್ತು ವರ್ಷಗಳ ಕಾಲ ವಾಚಾಮಗೋಚರವಾಗಿ ಉಗಿದು ಉಪ್ಪುಹಾಕುತ್ತಿದ್ದ ನಮ್ಮ ಹುಲಿ ಮಹೇಶಣ್ಣ, ಪ್ರಸಾದಣ್ಣ, ನಾರಾಯಣ ಸ್ವಾಮಣ್ಣ, ಶಿವರಾಮಣ್ಣ ಎಲ್ಲರನ್ನೂ ನೀವು ಪಕ್ಷಕ್ಕೆ ಸೇರಿಸಿಕೊಂಡಾಗ ನಾವೇನು ನಿಮಗೆ ಬರ ಬಂದಿತ್ತಾ? ಉಗ್ತವರನ್ನೆ ಉಣ್ಣೋಕೆ ಸೇರಿಸಿಕೊಂಡಿದ್ದೀರಲ್ಲ ಅಂತ ಕೇಳಲಿಲ್ಲ. ಈಗ ನೆನಪಿಸಿದ್ದಕ್ಕೆ ಧನ್ಯವಾದಗಳು ಸಾಹೇಬ್ರೆ. ಇದೆಲ್ಲಾ ವಿತ್ ಡ್ಯೂ ರೆಸ್ಪೆಕ್ಟ್ ಸಾರ್&#8230;!!</p>



<p>ಹೀಗೆ ಒಂದೊಂದು ಪಾಸಿಟಿವ್ ಅಂತಕ್ಕಂತದ್ದೇನಿದೆ ಅವುಗಳನ್ನು ಎಳೆಎಳೆಯಾಗಿ ಎಳೆದು ಹೇಳಿದ ಮೇಲೆ ನಮ್ಮ ಹುಡುಗರ ಒಂದು ಇದೇನಿದೆ ಅದು ಅರ್ಥವಾಗಿ ತಣ್ಣಗಾದರು.</p>



<p>ಧನ್ಯವಾದಗಳು ಪ್ರತಾಪ್ ಸಿಮ್ಮಾಜಿ.</p>



<p>ಸಿಮ್ಮಾಜಿ ನಿಮ್ಮದು ಆದ್ರೂ ಸ್ವಲ್ಪ ಎಚ್ಚರ ನಿಮ್ ಪಕ್ಷದಲ್ಲಿ ನಮ್ಮ ಮಹೇಶಣ್ಣನಂತಹ ಮಹಿಷ ಕುಲದ ಹುಲಿಗಳಿವೆ. ಅಷ್ಟೇ ಆಮೇಲೆ!</p>



<p>ವಿತ್ ಡ್ಯೂ ರೆಸ್ಪೆಕ್ಟ್ ಮತ್ತೊಮ್ಮೆ ಧನ್ಯವಾದಗಳು. ಸಿಗೋಣ ಮಹಿಷ ದಸರ ದಿನ! ನೀವೂ ಚಾಮುಂಡಿ ಚಲೋ ಗೆ ಬಂದಿರ್ತೀರಲ್ಲ. ನಮ್ ಅಣ್ಣಂದಿರನ್ನು ಕರೆಯಲು ಹೋದೀರಿ ಜೋಕೆ!</p>



<p><strong>ಡಾ.ಚಮರಂ</strong></p>



<p>ಚಿತ್ರ ನಿರ್ದೇಶಕರು</p>



<p><strong><a href="https://peepalmedia.com/memory-sowjanya-justice/" data-type="post" data-id="29531">ಇದನ್ನೂ ಓದಿ-</a></strong><a href="https://peepalmedia.com/memory-sowjanya-justice/" data-type="post" data-id="29531">ನೆನಪು | ಸೌಜನ್ಯ ನ್ಯಾಯ</a></p>



<p></p>
]]></content:encoded>
					
		
		
			</item>
		<item>
		<title>ಅಗ್ರಹಾರದೊಳಗಣ ಹೊಲ(ಸು)ಗೇರಿ..</title>
		<link>https://peepalmedia.com/agrahardolagana-holasugeri/</link>
		
		<dc:creator><![CDATA[Peepal Media]]></dc:creator>
		<pubDate>Mon, 21 Aug 2023 12:05:09 +0000</pubDate>
				<category><![CDATA[ದಲಿತ ನೋಟ]]></category>
		<guid isPermaLink="false">https://peepalmedia.com/?p=26055</guid>

					<description><![CDATA[ಯಾರ ಆಯ್ಕೆಗೂ ನಿಲುಕದ ಕೇವಲ ಹುಟ್ಟಿನ ಕಾರಣಕ್ಕಾಗಿ ಸಾಮಾಜಿಕವಾಗಿ ಅವಮಾನಿತವೆಂದು ಗುರುತಿಸಲ್ಪಟ್ಟಂತಹ ಪದವೊಂದು ಸಾರ್ವಜನಿಕವಾಗಿ ಮಾಡುವ ಅವಮಾನ ಅದು ಅನುಭವಿಸಿದವರಿಗಷ್ಟೇ ಗೊತ್ತು. ಉಪೇಂದ್ರವಾದಿಗಳು ಇದನ್ನು ಅರ್ಥ ಮಾಡಿಕೊಳ್ಳಲಿ &#8211; ಶಂಕರ್ ಸೂರ್ನಳ್ಳಿ, ಲೇಖಕರು ನಮ್ಮ ಸೂಪರ್ ಸ್ಟಾರ್ ನಟ ಉಪೇಂದ್ರರವರು ತಮ್ಮನ್ನು ತಾವೇ ಬುದ್ಧಿವಂತ ಎಂದು ಕರೆದು ಕೊಂಡಂತವರು. ಅವರ ಸಿನಿಮಾ ಒಂದು ʼಬುದ್ಧಿವಂತರಿಗಾʼ ಎಂಬ ಟೈಟಲನ್ನು ಹೊತ್ತು ಬಂದದ್ದೂ ಇದೆ. ಜೊತೆಗೆ ಬುದ್ಧಿವಂತ ಎನ್ನುವ ಹೆಸರಿನ ಅವರ ಸಿನಿಮಾವೂ ಕೂಡಾ ಇದೆ. ಹೌದು, ಸನ್ಮಾನ್ಯ ಉಪೇಂದ್ರರವರು [&#8230;]]]></description>
										<content:encoded><![CDATA[
<p class="has-background" style="background-color:#fcbb8d1a"><strong>ಯಾರ ಆಯ್ಕೆಗೂ ನಿಲುಕದ ಕೇವಲ ಹುಟ್ಟಿನ ಕಾರಣಕ್ಕಾಗಿ ಸಾಮಾಜಿಕವಾಗಿ ಅವಮಾನಿತವೆಂದು ಗುರುತಿಸಲ್ಪಟ್ಟಂತಹ ಪದವೊಂದು ಸಾರ್ವಜನಿಕವಾಗಿ ಮಾಡುವ ಅವಮಾನ ಅದು ಅನುಭವಿಸಿದವರಿಗಷ್ಟೇ ಗೊತ್ತು. ಉಪೇಂದ್ರವಾದಿಗಳು ಇದನ್ನು ಅರ್ಥ ಮಾಡಿಕೊಳ್ಳಲಿ &#8211; <mark style="background-color:rgba(0, 0, 0, 0)" class="has-inline-color has-vivid-red-color">ಶಂಕರ್ ಸೂರ್ನಳ್ಳಿ</mark></strong>, <mark style="background-color:rgba(0, 0, 0, 0)" class="has-inline-color has-vivid-red-color"><strong>ಲೇಖಕರು</strong></mark></p>



<p>ನಮ್ಮ ಸೂಪರ್ ಸ್ಟಾರ್ ನಟ ಉಪೇಂದ್ರರವರು ತಮ್ಮನ್ನು ತಾವೇ ಬುದ್ಧಿವಂತ ಎಂದು ಕರೆದು ಕೊಂಡಂತವರು. ಅವರ ಸಿನಿಮಾ ಒಂದು ʼಬುದ್ಧಿವಂತರಿಗಾʼ ಎಂಬ ಟೈಟಲನ್ನು ಹೊತ್ತು ಬಂದದ್ದೂ ಇದೆ. ಜೊತೆಗೆ ಬುದ್ಧಿವಂತ ಎನ್ನುವ ಹೆಸರಿನ ಅವರ ಸಿನಿಮಾವೂ ಕೂಡಾ ಇದೆ.</p>



<p>ಹೌದು, ಸನ್ಮಾನ್ಯ ಉಪೇಂದ್ರರವರು ಬುದ್ಧಿವಂತ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಅವರಿದನ್ನು ಅನೇಕ ಸಂದರ್ಭಗಳಲ್ಲಿ ಸಾಕ್ಷೀಕರಿಸಿ ತೋರಿಸಿಯೂ ಇದ್ದಾರೆ ಕೂಡ. ಅಂದರೆ, ತಮ್ಮದೇ ಚಿತ್ರಗಳಲ್ಲಿ ಬಡತನ, ಸಾಮಾಜಿಕ ಅಸಮಾನತೆಯ ನೋವನ್ನು ತೋರಿಸಲೂ ಅವರಿಗೆ ಗೊತ್ತು ಅದೇ ರೀತಿ ಬ್ರಾಹ್ಮಣ್ಯದ ಮೆರೆಸುವಿಕೆಯೂ ಕೂಡ ಅವರಿಗೆ ಕರತಲಾಮಲಕ. ತನ್ನದೇ ಹೆಸರಿಟ್ಟುಕೊಂಡ ’ಉಪೇಂದ್ರ’ ದಂತಹ ಚಿತ್ರದ ಮೂಲಕ ಹೆಣ್ಣನ್ನು ಕೆಳಮಟ್ಟದಲ್ಲಿ ಚಿತ್ರಿಸಲೂ ಗೊತ್ತು. ರಕ್ತ ಕಣ್ಣೀರಿನಂತಹ ಚಿತ್ರದ ಮೂಲಕ ಅವಳನ್ನು ಹಾಡಿ ಹೊಗಳಲೂ ಕೂಡ ಗೊತ್ತೆಂಬ ವಿಚಾರ ಅವರ ಚಿತ್ರಗಳನ್ನು ನೋಡಿದವರಿಗೆ ಗೊತ್ತಿದ್ದ ವಿಚಾರವೇ.</p>



<p>ಯಾವುದೋ ಮಾತಿನ ಭರದಲ್ಲಿ ಊರಿದ್ದಲ್ಲಿ ಹೊಲಗೇರಿ ಎಂಬ ಗಾದೆ ಮಾತನ್ನು ನಟ ಉಪೇಂದ್ರರವರು ಉಲ್ಲೇಖ ಮಾಡಿದ್ದನ್ನು ಒಪ್ಪಿಕೊಳ್ಳಬಹುದಾದರೂ ನಂತರದ ಬೆಳವಣಿಗೆಗಳಲ್ಲಿ ಅವರ ಅನುಯಾಯಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಾಡಹೊರಟ ಉಪೇಂದ್ರ ಪರ ಮೊಂಡುವಾದಗಳನ್ನು ನೋಡಿದಾಗ ಯಾಕೋ ಇವರುಗಳ ಮನಸ್ಸೇ ತೊಳೆದರೂ ಹೋಗದಷ್ಟು ಹೊಲಸಿನಿಂದ ಮಲಿನಗೊಂಡಿದೆ ಎಂಬುದನ್ನ ಎತ್ತಿ ತೋರಿಸುತ್ತಿದೆ.</p>



<p>ಬಾಯಿ ತಪ್ಪಿ ಬಂದ ಒಂದು ಸಣ್ಣ ಗಾದೆ ಮಾತಿಗೆ ಕೇಸು, ಎಫ್ ಐ ಆರ್, ಪ್ರತಿಭಟನೆ ಇವೆಲ್ಲಾ ಬೇಕಿತ್ತಾ..!? ಇದು ಅತಿರೇಕವೆನಿಸೋಲ್ಲವೇ ಎಂಬುದು ಅನೇಕರ ವಾದ. ಹೌದು, ಇಂತಹ ಗಾದೆಯ ಮಾತುಗಳು ಸಮಾಜದಲ್ಲಿ ಸಹಜವಾಗಿ ಬಳಕೆಯಲ್ಲಿದ್ದಂತವುಗಳು. ಕಳೆದ ವರ್ಷ ಉಡುಪಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ ಎಸ್ ದ್ವಾರಕಾನಾಥ್ ರವರು ನಾವು ಸಾಮಾನ್ಯವಾಗಿ ಬಳಸುವ ಹಗಲುವೇಷ ಎನ್ನುವ ಹೆಸರನ್ನು ಹೊಂದಿರುವ ಜಾತಿ ಸಹ ಇದ್ದಿರುವ ಬಗ್ಗೆ ಹೇಳಿದ್ದರು. ಅದೇ ರೀತಿ ದೊಂಬರಾಟ ಎನ್ನುವ ಪದವೂ ಕೂಡ ಇಂದಿನ ಸಂದರ್ಭದಲ್ಲಿ ಆಕ್ಷೇಪಾರ್ಹ ಪದವೇ ಆಗಿದೆ. ದೊಂಬ ಸಮುದಾಯವನ್ನು ಬೊಟ್ಟು ಮಾಡುವ ಈ ಪದ ಸರ್ವೇ ಸಾಮಾನ್ಯ ಎಂಬಂತೆ ಸಮಾಜದಲ್ಲಿ ಬಳಕೆಯಲ್ಲಿದೆ.</p>



<p>ಹೌದು, ಸದ್ಯಕ್ಕೆ ಸುದ್ದಿಯಲ್ಲಿರುವ ಈ ಹೊಲಗೇರಿ ಯಂತಹ ಗಾದೆ, ನಾಣ್ನುಡಿಗಳು ಬಿಂಬಿಸುವಂತಹ ಮಾತಿನ ತೀಕ್ಷ್ಣತೆಯ ಅರಿವಿಲ್ಲದವರಿಗೆ ಮೇಲಿನ ಪ್ರತಿರೋಧಗಳೆಲ್ಲ ಅತಿರೇಕ ಅನ್ನಿಸೋದು ಸಹಜವೇ. ಆದರೆ, ಆ ಕುಹಕದ ಮಾತುಗಳು ಮಾಡುವ ಘಾಸಿಯ ನೋವುಂಡವರಿಗೆ ಮಾತ್ರ ಖಂಡಿತಾ ಹಾಗನ್ನಿಸದು.</p>



<p>ನನ್ನೊಬ್ಬ ಗೆಳೆಯನಿದ್ದ ಆತ ಚಿಕ್ಕವನಿದ್ದಾಗ ಅವನಿಗೆ ಕವಿ ಪಂಜೆ ಮಂಗೇಶ್ ರಾವ್ ಹೆಸರು ಕೇಳಿದರೇನೇ ಮಹಾ ಕೋಪ. ಅಷ್ಟಕ್ಕೂ ಪಾಪದ ಆ ಕವಿ ಆತನಿಗೆ ಮಾಡಿದ ದ್ರೋಹವಾದರೂ ಏನು ಗೊತ್ತೇ ಅದೇ ಅವರ ಉದಯರಾಗ ಹಾಡು.</p>



<p>ಮೂಡುವನು ರವಿ ಮೂಡುವನು; ಕತ್ತಲೊಡನೆ ಜಗಳಾಡುವನು<br>ಮೂಡಣ ರಂಗಸ್ಥಳದಲಿ&#8230;..<br>ಮಲಗಿದ ಕೂಸಿನ ನಿದ್ದೆಯ ಕಸವನು; ಗುಡಿಸುವನೂ ಕಣ್ ಬಿಡಿಸುವನು…</p>



<p>ಶಾಲೆಯ ಪಠ್ಯದಲ್ಲಿದ್ದ ಈ ಪದ್ಯದಲ್ಲಿ ಬರುವ ’ಕೂಸ” (ಕೂಸು) ಎನ್ನುವ ಪದ ಹಾಗು ಅದಕ್ಕೆ ಕನ್ನಡ ಶಿಕ್ಷಕರು ನೀಡುವ ವಿವರಣೆ ಆ ದುರ್-ಗಳಿಗೆಯಲ್ಲಿನ ಅವನ ಒದ್ದಾಟ, ಚಡಪಡಿಸುವಿಕೆ (ಈ ಪಾಠ ಮುಗಿದರೆ ಸಾಕಪ್ಪಾ ಎನ್ನುವ) ಆ ಮಾನಸಿಕ ಹಿಂಸೆ ಪಾಪ ಅವನಿಗಷ್ಟೇ ಗೊತ್ತು. ದಲಿತ ಸಮುದಾಯಕ್ಕೆ ಸೇರಿದ ಅವನ ಉಪಜಾತಿಯ ಹೆಸರಾದ ಈ ಕೂಸ (ಕೂಸಾಳು) ಪದ ಕೇಳಿ ಮಿಕ್ಕ ಮಕ್ಕಳೆಲ್ಲ ನಗಾಡುವುದು, ಅವನ ಜಾತಿ ಗೊತ್ತಿದ್ದ ನೆರೆಕೆರೆಯ ಸಹಪಾಠಿಗಳು ಈ ಸಂದರ್ಭದಲ್ಲಿ ಇವನನ್ನೇ ನೋಡಿ ಎಲ್ಲರೆದುರು ಕುಹಕದಿಂದ ಹಲ್ಕಿರಿದು ನೋಡುವುದು ಅವನಿಗೊಂದು ಭಯಂಕರ ದುಃಸ್ವಪ್ನ..</p>



<figure class="wp-block-gallery has-nested-images columns-default is-cropped wp-block-gallery-2 is-layout-flex wp-block-gallery-is-layout-flex">
<figure class="wp-block-image size-large"><img loading="lazy" decoding="async" width="310" height="163" data-id="26076" src="https://peepalmedia.com/wp-content/uploads/2023/08/ಜಾತಿ-೨-1.jpg" alt="" class="wp-image-26076" srcset="https://peepalmedia.com/wp-content/uploads/2023/08/ಜಾತಿ-೨-1.jpg 310w, https://peepalmedia.com/wp-content/uploads/2023/08/ಜಾತಿ-೨-1-300x158.jpg 300w, https://peepalmedia.com/wp-content/uploads/2023/08/ಜಾತಿ-೨-1-150x79.jpg 150w" sizes="auto, (max-width: 310px) 100vw, 310px" /></figure>
</figure>



<p>ಭಟ್ಟರ ಮನೆಗೋ, ಶೆಟ್ಟರ ಮನೆಗೋ ಹೋಗುವ ದಾರಿಯಲಿ ಸಿಗುವ ಎರಡು ದಲಿತರ ಮನೆಯ ನೆಪದಲ್ಲಿ ಕಾಂಕ್ರೀಟ್ ರಸ್ತೆ ಮಾಡಿ ಅಲ್ಲೊಂದು ಸಿಮೆಂಟ್ ಬೋರ್ಡ್ ನೆಟ್ಟು “ಹರಿಜನ ಕಾಲನಿಗೆ ಹೋಗುವ ರಸ್ತೆ” ಕಾಮಗಾರಿಯ ವೆಚ್ಚ ಇಷ್ಟು ಅಂತ ಬೋರ್ಡ್ ಹಾಕುವುದು, ಯಾರಾದರೂ ಅಲ್ಲಿನವರ ಮನೆಯ ದಾರಿ ಕೇಳಿದರೆ ಯಾವ ದಲಿತನೂ ಕೂಡ ಹರಿಜನ ಕಾಲನಿ ರಸ್ತೆ ಅಂತ ಬೋರ್ಡ್ ಇದೆಯಲ್ಲ ಅಲ್ಲೇ ಪಕ್ಕದ್ದು ನಮ್ಮ ಮನೆ ಅಂತ ಹೇಳ ಹೋಗರು.</p>



<p>ಹಿಂದೆಲ್ಲಾ ದಲಿತರ ಮಕ್ಕಳು ಶಾಲೆಗೆ ಸೇರುವಾಗ ಓದು ಬರಹ ತಿಳಿಯದ ಅವರ ಪೋಷಕರೊಂದಿಗೆ ಬಂದ ಇಂತಹ ಮಕ್ಕಳ ಹೆಸರನ್ನು ಅಡ್ಮಿಷನ್ ಮಾಡಿ ಬರೆದುಕೊಳ್ಳುವಾತ ವಿದ್ಯಾರ್ಥಿಯ ಜಾತಿಯನ್ನು ಕೇಳಿ ಮಂಜು ಹರಿಜನ, ಗಣಪ ಹರಿಜನ ಅಂತಲೇ ಹೆಸರು ಬರೆದುಕೊಳ್ಳುತ್ತಿದ್ದರು. ಆ ರೀತಿಯ ಹೆಸರು ಬೇಡ ಅಂತ ಹೇಳಿದರೆ ಉಳಿದವರಿಗೆ ಸೀತಾರಾಮ ಆಚಾರಿ, ನಾಗರಾಜ ಶೆಟ್ಟಿ, ರಮೇಶ ಭಟ್ಟ ಅಂತ ಬರಕೊಳ್ಳುವ ಹಾಗೆ ನಿಂದೇನಯ್ಯ ಹೊಸ ರಾಗ ಅಂತ ಉಡಾಫೆಯ ಉತ್ತರ. ಅಂತೂ ಜೀವಮಾನವಿಡೀ ಎಲ್ಲಾ ದಾಖಲೆಗಳಲ್ಲೂ ಅವರ ಮಕ್ಕಳ ದಾಖಲೆಗಳಲ್ಲೂ ಕೂಡ (ಪೋಷಕರಿಗೆ ಸಂಬಂಧಿಸಿದ ಮಾಹಿತಿಯಲ್ಲಿ) ಈ ನಿಷೇಧಿತ ಹರಿಜನ ಪದವನ್ನು ಹೊತ್ತೇ ಅವನ ಕುರಿತ ದಾಖಲೆಗಳು ಓಡಾಡುತ್ತಿರುತ್ತವೆ.</p>



<p>ಇಲ್ಲಿ ಹರಿಜನ ಕಾಲನಿಯ ಬೋರ್ಡ್ ಹಾಕುವವನಿಗಾಗಲೀ, ಶಾಲೆಯಲ್ಲಿ ಹೆಸರನ್ನು ನೊಂದಾಯಿಸಿ ಕೊಳ್ಳುವವನಿಗಾಗಲೀ ಆ ಹರಿಜನ ಪದ ಕೇವಲ ಎಲ್ಲದರಂತೆ ಒಂದು ಸಾಮಾನ್ಯ ಪದವೇ ವಿನಹ ಅದರ ಹಿಂದೆ ಅಡಗಿರುವಂತಹ ಒಂದು ಅವಮಾನದ ಹಿನ್ನೆಲೆಯ ಅರಿವು ಖಂಡಿತಾ ಇದ್ದಿರುವುದಿಲ್ಲ. ಒಂದು ವೇಳೆ ಈ ಅರಿವು ಇದ್ದರೂ ಕೂಡ ಅವರಿಗದು ಬೇಕಾಗಿಯೂ ಇಲ್ಲ. ಸಂಬಂಧಿಸಲ್ಪಟ್ಟ ಈ ಜಾತಿ ಇಲ್ಲಿ ನಿಜ ತಾನೇ? ಉಳಿದ ಜಾತಿಯವರು ಮಾಡಿದಂತೆ ಅದನ್ನ ಇಲ್ಲಿಯೂ ಕೂಡ ನಮೂದಿಸಿದ್ದರಲ್ಲಿ ತಪ್ಪೇನು? ಒಂದು ವೇಳೆ ಜಾತಿ ನಮೂದಿಸದೇ ಬಿಟ್ಟ ಮಾತ್ರಕ್ಕೆ ಅವರ ಜಾತಿಯೇನು ಬದಲಾಗುತ್ತಾ? ಇಲ್ಲ ತಾನೆ? ಎಂಬ ವಿತಂಡವಾದಕ್ಕಿಳಿಯುತ್ತಾರೆ. ಉಪೇಂದ್ರರ ’ಊರಿದ್ದಲ್ಲಿ ಹೊಲಗೇರಿಯೂ ಇರುತ್ತದೆ” ಎನ್ನುವ ಗಾದೆಯ ಸಮರ್ಥನೆ ಮಾಡುತ್ತಿರುವ ಉಪೇಂದ್ರವಾದಿಗಳ ಮನೋಸ್ಥಿತಿಯೂ ಕೂಡ ಇದೇ ಹೊರತು ಬೇರೇನಲ್ಲ.</p>



<p>ತನ್ನ ಮಾತಿಗೆ ವಿರೋಧ ಬಂದಾಕ್ಷಣ ಉಪೇಂದ್ರ ಅವರು ತಕ್ಷಣ ಮತ್ತೊಂದು ವೀಡಿಯೋ ಮಾಡಿ ನಾನು ಬಾಲ್ಯದಲ್ಲಿ ಬಡತನದ ನೋವುಂಡಂತವನು ಹಾಗೆ ಹೀಗೆ ಎಂದು ಜಾಲತಾಣದಲ್ಲಿ ಪ್ರತಿರೋಧಕ್ಕೆ ಪ್ರತಿಯಾಗಿ ಮಾತಾಡಿದ್ದರು. ಮಿ. ಉಪೇಂದ್ರರವರೇ ನೀವು ಇಲ್ಲಿ ಹೇಳಿದಂತಹ ಆರ್ಥಿಕ ದಾರಿದ್ರ್ಯಕ್ಕೂ ಮತ್ತು ನಿಮಗರಿವಿಲ್ಲದ ಸಾಮಾಜಿಕ ದಾರಿದ್ರ್ಯಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕುಂದಾಪುರದ ಬಡ ಕುಟುಂಬದಲ್ಲಿ ಹುಟ್ಟಿದ ನೀವು (ನಿಮ್ಮ ಹೆತ್ತವರು) ಬೆಂಗಳೂರಿಗೆ ಬಂದು ಹೊಟ್ಟೆಪಾಡಿಗಾಗಿ ಯಾವುದೋ ಸಣ್ಣ ಹೋಟೇಲನ್ನಾದರೂ ತೆರೆದು ’ಬ್ರಾಹ್ಮಣರ ಹೋಟೆಲ್” ಎಂಬ ನಾಮದಡಿಯಲ್ಲಿ ಬದುಕಿದಿರಿ. ಆದರೆ ಶೂದ್ರನೊಬ್ಬ ಸಮಾಜದಲ್ಲಿ ತನ್ನ ಹೆಸರನ್ನ ಬಹಿರಂಗವಾಗಿ ಬಿಂಬಿಸಿಕೊಂಡು ಈ ರೀತಿ ಬದುಕಲು ಸಾಧ್ಯವೇ? ಶೂದ್ರನ ಹೋಟೇಲಿಗೆ ಗಂಜಿ ಕುಡಿಯಲು ನಿಮ್ಮಂತವರಿಗೆ ಆ ಕಾಲದಲ್ಲಿ ಸಾಧ್ಯವಿತ್ತೇ? ಈಗ ಪರಿಸ್ಥಿತಿಯಲ್ಲಿ ಅಲ್ಪಸ್ವಲ್ಪ ಬದಲಾವಣೆಗಳಾಗಿದೆಯೇ ವಿನಹ ಜಾತೀಯತೆ ಇಂದಿಗೂ ಕೂಡ ಸಮಾಜದಲ್ಲಿ ಬೇರೆ ಬೇರೆ ಬಗೆಯಲ್ಲಿ ಚಾಲ್ತಿಯಲ್ಲಿದೆ. ಇಂತಾದ್ದರಲ್ಲಿ ಹೊಲಗೇರಿಯಂತಹ ಮಾತುಗಳಿಂದ ನಿಮ್ಮಂತವರ ಮೇಲರಿಮೆಯನ್ನು ಸದಾ ಜೀವಂತವಾಗಿಡಲು ದಯವಿಟ್ಟು ಪ್ರಯತ್ನಿಸದಿರಿ.</p>



<p>ಯಾರ ಆಯ್ಕೆಗೂ ನಿಲುಕದ ಕೇವಲ ಹುಟ್ಟಿನ ಕಾರಣಕ್ಕಾಗಿ ಸಾಮಾಜಿಕವಾಗಿ ಅವಮಾನಿತವೆಂದು ಗುರುತಿಸಲ್ಪಟ್ಟಂತಹ ಪದವೊಂದು ಸಾರ್ವಜನಿಕವಾಗಿ ಮಾಡುವ ಅವಮಾನ ಅದು ಅನುಭವಿಸಿದವರಿಗಷ್ಟೇ ಗೊತ್ತು. ಉಪೇಂದ್ರವಾದಿಗಳು ಇದನ್ನು ಅರ್ಥ ಮಾಡಿಕೊಳ್ಳಲಿ</p>



<p><strong>ಶಂಕರ್ ಸೂರ್ನಳ್ಳಿ</strong></p>



<p>ಲೇಖಕರು</p>



<p><strong><sub>ಇದನ್ನೂ ಓದಿ-</sub></strong><a href="https://peepalmedia.com/upendra-tarlenanamaga/" data-type="post" data-id="25484"><sub>ಉಪೇಂದ್ರ-ತರ್ಲೆನನ್ಮಗ</sub></a></p>
]]></content:encoded>
					
		
		
			</item>
	</channel>
</rss>
