<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ಇತಿಹಾಸ &#8211; Peepal Media</title>
	<atom:link href="https://peepalmedia.com/category/%E0%B2%9C%E0%B2%A8-%E0%B2%97%E0%B2%A3-%E0%B2%AE%E0%B2%A8/history/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sun, 19 Oct 2025 08:55:29 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>ಇತಿಹಾಸ &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಸಂಸತ್ತಿನ ಪೂರ್ವಸೂರಿಗಳು -11 : ಅಲ್ಪಾವಧಿಯ ಪ್ರಧಾನಿಯಾಗಿದ್ದ ಚಂದ್ರಶೇಖರ್‌ ಒಬ್ಬ ರಾಜಕೀಯ ಬಂಡಾಯಗಾರ</title>
		<link>https://peepalmedia.com/chandrashekhar-who-was-prime-minister-was-a-political-rebel/</link>
		
		<dc:creator><![CDATA[Peepal Media Desk]]></dc:creator>
		<pubDate>Sun, 19 Oct 2025 08:55:28 +0000</pubDate>
				<category><![CDATA[ಅಂಕಣ]]></category>
		<category><![CDATA[ಇತಿಹಾಸ]]></category>
		<guid isPermaLink="false">https://peepalmedia.com/?p=68064</guid>

					<description><![CDATA[ಈ ಲೇಖನ ಸರಣಿಯು &#8216;ದಿ ಅರ್ಲಿ ಪಾರ್ಲಿಮೆಂಟರಿಯನ್ಸ್&#8217; ಎಂಬ ಶೀರ್ಷಿಕೆಯ &#8216;ದಿ ವೈರ್&#8217; ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಹನ್ನೊಂದನೇ ಲೇಖನ ಹಿರಿಯ ಸಂಸದ ಮತ್ತು ಮಾಜಿ ಪ್ರಧಾನಿಯಾಗಿದ್ದ ಚಂದ್ರಶೇಖರ್‌ ಅವರು ಮೂರು ಬಾರಿ ರಾಜ್ಯಸಭೆಗೆ ಮತ್ತು ಎಂಟು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದವರು. ಅವರೊಬ್ಬ ಹುಟ್ಟಾ ಬಂಡಾಯಗಾರ. ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್‌ ನೆಹರೂ, ಅವರ ಮಗಳು ಇಂದಿರಾ ಗಾಂಧಿ, ಆಕೆಯ ಮಗ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>ಈ ಲೇಖನ ಸರಣಿಯು &#8216;ದಿ ಅರ್ಲಿ ಪಾರ್ಲಿಮೆಂಟರಿಯನ್ಸ್&#8217; ಎಂಬ ಶೀರ್ಷಿಕೆಯ &#8216;ದಿ ವೈರ್&#8217; ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಹನ್ನೊಂದನೇ ಲೇಖನ</p>
</blockquote>



<pre class="wp-block-code"><code><strong>ಚಂದ್ರಶೇಖರ್ ಯಾವತ್ತೂ ವ್ಯಕ್ತಿ ಕೇಂದ್ರಿತ ರಾಜಕಾರಣದ ವಿರೋಧಿಯಾಗಿದ್ದರು. ಸೈದ್ಧಾಂತಿಕ ಮತ್ತು ಸಾಮಾಜಿಕ ಬದಲಾವಣೆಯ ರಾಜಕಾರಣವನ್ನು ಬೆಂಬಲಿಸುತ್ತಿದ್ದರು.</strong></code></pre>



<p>ಹಿರಿಯ ಸಂಸದ ಮತ್ತು ಮಾಜಿ ಪ್ರಧಾನಿಯಾಗಿದ್ದ ಚಂದ್ರಶೇಖರ್‌ ಅವರು ಮೂರು ಬಾರಿ ರಾಜ್ಯಸಭೆಗೆ ಮತ್ತು ಎಂಟು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದವರು. ಅವರೊಬ್ಬ ಹುಟ್ಟಾ ಬಂಡಾಯಗಾರ. ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್‌ ನೆಹರೂ, ಅವರ ಮಗಳು ಇಂದಿರಾ ಗಾಂಧಿ, ಆಕೆಯ ಮಗ ರಾಜೀವ್‌ ಗಾಂಧಿ, ಪಿವಿ ನರಸಿಂಹ ರಾವ್, ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಸೇರಿದಂತೆ ಹಲವು ಪ್ರಧಾನ ಮಂತ್ರಿಗಳ ವಿರುದ್ಧ ರಾಜಕೀಯ ಹೋರಾಟ ನಡೆಸಿದ ಹೆಗ್ಗಳಿಕೆ ಅವರಿಗಿದೆ.</p>



<p><strong>ಕಾಂಗ್ರೆಸ್‌ನೊಳಗಿನ ಬಂಡಾಯಗಾರ</strong><br>1962 ರಲ್ಲಿ ಮೊದಲ ಬಾರಿಗೆ ಪ್ರಜಾ ಸೋಷಿಯಲಿಸ್ಟ್‌ ಪಕ್ಷದ (ಪಿಎಸ್‌ಪಿ) ಅಭ್ಯರ್ಥಿಯಾಗಿ ರಾಜ್ಯಸಭೆಗೆ ಆಯ್ಕೆಯಾಗುವ ಅವರು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದ್ದರು. ಸಂಸದರಾಗಿ ಅವರು ಮಾಡುವ ಮೊದಲ ಕೆಲಸ, ಆಗಿನ ಪ್ರಧಾನ ಮಂತ್ರಿ ನೆಹರೂ ಅವರನ್ನು ಎದುರು ಹಾಕಿಕೊಳ್ಳುವುದು. ಆಗಿನ ಪಂಜಾಬ್‌ ಮುಖ್ಯಮಂತ್ರಿ ಪ್ರತಾಪ್‌ ಸಿಂಗ್‌ ಕೈರೋನ್‌ ವಿರುದ್ಧ ಕೇಳಿ ಬಂದಿದ್ದ ಭ್ರಷ್ಟಾಚಾರ ಆರೋಪದ ಕುರಿತು ತನಿಖೆ ನಡೆಸಲು ಒಂದು ಆಯೋಗವನ್ನು ರಚಿಸಲಾಗಿತ್ತು. ಆ ಆಯೋಗ ತನ್ನ ವರದಿಯನ್ನು ಸಲ್ಲಿಸಿತೇ ಎಂದು ಚಂದ್ರಶೇಖರ್‌ ಪ್ರಧಾನ ಮಂತ್ರಿಯ ಬಳಿ ಕೇಳುತ್ತಾರೆ. ನೆಹರೂ ತಾನಿನ್ನೂ ಆ ವರದಿಯನ್ನು ಪಡೆದಿಲ್ಲ ಎಂದು ಉತ್ತರಿಸುತ್ತಾರೆ. ಆದರೆ, ಮರುದಿನ ಚಂದ್ರಶೇಖರ್‌ ಅವರು, ಕೆಲವು ಪತ್ರಿಕೆಗಳು ವರದಿಯ ಭಾಗಗಳನ್ನು ಪ್ರಕಟಿಸಿವೆ ಎಂದು ಹೇಳುತ್ತಾ ಅದೇ ವಿಷಯವನ್ನು ಮತ್ತೆ ಎತ್ತುತ್ತಾರೆ.</p>



<p>ಪ್ರಧಾನ ಮಂತ್ರಿ ತಾನು ಅದನ್ನು ಮರೆತಿದ್ದೆ ಮತ್ತು ವರದಿಯನ್ನು ಸ್ವೀಕರಿಸಲಾಗಿದೆ ಎಂದು ಒಪ್ಪಿಕೊಳ್ಳುತ್ತಾರೆ. “ಕ್ಷಮಿಸಿ” ಎಂದು ಚಂದ್ರಶೇಖರ್‌ ಬಳಿ ಹೇಳುತ್ತಾರೆ. ಚಂದ್ರಶೇಖರ್‌ ಆ ಪ್ರಶ್ನೆಯನ್ನು ಮುಂದುವರಿಸಿದ ರೀತಿ ನೆಹರೂ ಅವರನ್ನು ಪ್ರಭಾವಿತಗೊಳಿಸಿತ್ತು. “ಆ ಗಡ್ಡದಾರಿ ಯುವಕ ಯಾರು?” ಎಂದು ನೆಹರೂ ತನ್ನ ಸಂಪುಟದ ಮಂತ್ರಿಗಳಲ್ಲಿ ಒಬ್ಬರಾಗಿದ್ದ ದಿನೇಶ್‌ ಸಿಂಗ್‌ ಬಳಿ ಕೇಳುತ್ತಾರೆ. “ಅವರು ಉತ್ತರ ಪ್ರದೇಶದ ಪಿಎಸ್‌ಪಿ ಸದಸ್ಯ. ಇದೀಗ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.” ಎಂದು ಸಿಂಗ್‌ ಉತ್ತರಿಸುತ್ತಾರೆ.</p>



<p>ಮರುದಿನ ಅದೇ ಸಿಂಗ್‌ ಚಂದ್ರಶೇಖರ್‌ ಬಳಿ ನೆಹರೂ ಅವರನ್ನು ಭೇಟಿಯಾಗುವಂತೆ ಹೇಳುತ್ತಾರೆ. ಹಾಗೆ ಯುವ ಪೀಳಿಗೆ ಮತ್ತು ಹಳೆ ಪೀಳಿಗೆಯ ಭೇಟಿ ನಡೆಯುತ್ತದೆ. ಅದರೊಂದಿಗೆ ಚಂದ್ರಶೇಖರ್‌ ಅವರ ಸುಮಾರು ಅರ್ಧ ಶತಮಾನಗಳಷ್ಟು ಕಾಲದ ಪ್ರಜಾಸತ್ತಾತ್ಮಕ ವೃತ್ತಿಜೀವನಕ್ಕೆ ಮುನ್ನುಡಿ ಬರೆಯಲಾಗುತ್ತದೆ. 1964 ಮೇ ತಿಂಗಳಲ್ಲಿ ನೆಹರೂ ಅವರ ಮರಣದ ನಂತರ ಚಂದ್ರಶೇಖರ್‌ ಅವರು ಅಶೋಕ್‌ ಮೆಹ್ತಾ, ಎನ್‌ಡಿ ತಿವಾರಿ, ಎಸ್‌ಎಮ್. ಕೃಷ್ಣ, ವಸಂತ್‌ ಸಾಥೇ ಮೊದಲಾದವರ ಜೊತೆಗೆ ಕಾಂಗ್ರೆಸ್‌ ಪಕ್ಷವನ್ನು ಸೇರುತ್ತಾರೆ.</p>



<p>ಆ ನಂತರ ಚಂದ್ರಶೇಖರ್‌ ಅವರು ಇಂದಿರಾ ಗಾಂಧಿಯವರ ಆಪ್ತರಾಗುತ್ತಾರೆ. 1969 ರಲ್ಲಿ ಕಾಂಗ್ರೆಸ್‌ ವಿಭಜನೆಯ ಸಮಯದಲ್ಲಿ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ಚುನಾಯಿತ ಸದಸ್ಯರಾಗಿದ್ದರು. ಇಂದಿರಾ ಗಾಂಧಿ ಚಂದ್ರಶೇಖರ್‌ ಬಳಿ ಪಕ್ಷವು ಅನುಸರಿಸಬೇಕಾದ ಆರ್ಥಿಕ ನೀತಿಗಳ ಕುರಿತು ಒಂದು ಟಿಪ್ಪಣಿ ನೀಡಲು ಕೋರಿದ್ದರು. ಚಂದ್ರಶೇಖರ್‌ ಅದಕ್ಕಾಗಿ ಒಂದು ಉನ್ನತ ಮಟ್ಟದ ಎಡಪಂಥೀಯ ಅರ್ಥಶಾಸ್ತ್ರಜ್ಞರ ಸಭೆ ಕರೆದು, ಅವರು ಇಂದಿರಾ ಗಾಂಧಿ ಕೋರಿದ ಟಿಪ್ಪಣಿ ತಯಾರಿಸಿಕೊಡಬೇಕೆಂದು ಆಗ್ರಹಿಸುತ್ತಾರೆ. ಏಐಸಿಸಿಯ ಬೆಂಗಳೂರು ಅಧಿವೇಶನದಲ್ಲಿ ಅವರು ಆ ಟಿಪ್ಪಣಿಯನ್ನು ಓದುತ್ತಾರೆ. ನಂತರದಲ್ಲಿ ಇದು ಹತ್ತು ಅಂಶಗಳ ಕಾರ್ಯಕ್ರಮ ಎಂದೇ ಪ್ರಸಿದ್ಧವಾಯಿತು. ಹಿಂದಿನ ರಾಜರುಗಳಿಗೆ ನೀಡುತ್ತಿದ್ದ ರಾಜಧನ ರದ್ಧತಿ, ಬ್ಯಾಂಕ್‌ ಮತ್ತು ಕಲ್ಲಿದ್ದಲು ರಾಷ್ಟ್ರೀಕರಣ ಮತ್ತು ಗರೀಬೀ ಹಠಾವೋ ಮೊದಲಾದ ಕಾರ್ಯಕ್ರಮಗಳಿಗೆ ಇದು ಬುನಾದಿ ಹಾಕಿತು.</p>



<p>ಸ್ಥಾಪಿತ ಹಿತಾಸಕ್ತಿಗಳ ವಿರುದ್ಧದ ಅವರ ಹೋರಾಟಗಳು ಮತ್ತು ನಿಲುವುಗಳ ಕಾರಣದಿಂದ ಚಂದ್ರಶೇಖರ್‌ ಅವರನ್ನು “ಯಂಗ್‌ ಟರ್ಕ್”‌ ಎಂದೇ ಕರೆಯುತ್ತಿದ್ದರು. ಸಮಾನತೆಯ ನೀತಿಗಳಿಗಾಗಿ ಕಾಂಗ್ರೆಸ್‌ ಒಳಗಡೆಯೇ “ಸಕ್ರಿಯ ಗುಂಪು” ರಚಿಸಿಕೊಂಡಿದ್ದ ಇತರ ಯಂಗ್‌ ಟರ್ಕ್‌ಗಳಲ್ಲಿ ಕೃಷ್ಣಕಾಂತ್‌, ಮೋಹನ್‌ ಧಾರಿಯಾ, ರಾಮ್ ಧನ್ ಮತ್ತು ಲಕ್ಷ್ಮಿ ಕಾಂತಮ್ಮ ಮೊದಲಾದವರು ಸೇರಿದ್ದರು.</p>



<p>ಚಂದ್ರಶೇಖರ್ ಯಾವತ್ತೂ ವ್ಯಕ್ತಿ ಕೇಂದ್ರಿತ ರಾಜಕಾರಣದ ವಿರೋಧಿಯಾಗಿದ್ದರು. ಸೈದ್ಧಾಂತಿಕ ಮತ್ತು ಸಾಮಾಜಿಕ ಬದಲಾವಣೆಯ ರಾಜಕಾರಣವನ್ನು ಬೆಂಬಲಿಸುತ್ತಿದ್ದರು. ಹಾಗಾಗಿಯೇ <a href="tel:197375">1973-75</a> ರ ಪ್ರಕ್ಷಬ್ಧ ಕಾಲಘಟ್ಟದಲ್ಲಿ ಅವರು ಹಿಂದಿನ ತಲೆಮಾರಿನ ನಾಯಕರಾಗಿದ್ದ ಜಯಪ್ರಕಾಶ್‌ ನಾರಾಯಣ್‌ ಮತ್ತು ಅವರ ಆದರ್ಶ ತುಂಬಿದ ಬದುಕಿನ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಬಹಳ ಬೇಗನೇ ಅವರು ಕಾಂಗ್ರೆಸ್‌ನೊಳಗಿನ ಭಿನ್ನಮತದ ಕೇಂದ್ರಬಿಂದುವಾಗಿ ಬದಲಾಗುತ್ತಾರೆ.</p>



<p>ಅವರು ತಮ್ಮ ಅಧಿನಾಯಕಿ ಇಂದಿರಾ ಗಾಂಧಿಯವರ ನೀತಿಗಳನ್ನು ಕೂಡ ಕಟುವಾಗಿ ಟೀಕಿಸುತ್ತಿದ್ದರು. 1975 ಜೂನ್‌ 25 ರಂದು ತುರ್ತು ಪರಿಸ್ಥಿತಿ ಘೋಷಣೆಯಾದಾಗ ಚಂದ್ರಶೇಖರ್‌ ಕಾಂಗ್ರೆಸ್‌ ಸಂಸದರಾಗಿದ್ದರು. ಅಷ್ಟೇ ಅಲ್ಲದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಉನ್ನತ ಅಂಗಗಳಾದ ಕೇಂದ್ರ ಚುನಾವಣಾ ಸಮಿತಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು. ಆದರೂ ಕೂಡ ಆಂತರಿಕ ಭದ್ರತಾ ಕಾಯ್ದೆಯಡಿಯಲ್ಲಿ ಸುಮಾರು 19 ತಿಂಗಳುಗಳ ಕಾಲ ಅವರು ಜೈಲುವಾಸವನ್ನು ಅನುಭವಿಸಬೇಕಾಗಿ ಬಂದಿತ್ತು.</p>



<p><strong>ಆರಂಭಿಕ ಕಾಲ</strong><br>1927 ಏಪ್ರಿಲ್‌ 17 ರಂದು ಉತ್ತರ ಪ್ರದೇಶದ ಬಲ್ಲಿಯಾದಲ್ಲಿರುವ ಇಬ್ರಾಹಿಂಪಟ್ಟಿ ಎಂಬ ಹಳ್ಳಿಯಲ್ಲಿ ಒಂದು ಕಿಸಾನ್‌ ರಜಪೂತ ಕುಟುಂಬದಲ್ಲಿ ಚಂದ್ರಶೇಖರ್‌ ಅವರ ಜನನ. ಬಲ್ಲಿಯಾದಲ್ಲಿರುವ ಸತೀಶ್ ಚಂದ್ರ ಪಿಜಿ ಕಾಲೇಜಿನಲ್ಲಿ ಪದವಿ ಮತ್ತು 1951 ರಲ್ಲಿ ಅಲಹಾಬಾದ್ ವಿಶ್ವವಿದ್ಯಾಲಯದಿಂದ ಎಂಎ ಪದವಿ ಅವರ ವಿದ್ಯಾಭ್ಯಾಸ.</p>



<p>ವಿದ್ಯಾರ್ಥಿ ರಾಜಕೀಯದಲ್ಲಿ ಅವರೊಬ್ಬ ಫೈರ್‌ಬ್ರ್ಯಾಂಡ್ ಎಂದೇ ಪ್ರಸಿದ್ಧರಾಗಿದ್ದರು. ಆಚಾರ್ಯ ನರೇಂದ್ರ ದೇವ ಅವರೊಂದಿಗೆ ಸಮಾಜವಾದಿ ಪಕ್ಷದಲ್ಲಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದವರು. ಓದು ಮುಗಿಸಿದ ನಂತರ, ಸಮಾಜವಾದಿ ಚಳವಳಿಯಲ್ಲಿ ಪೂರ್ಣ ಕಾಲಿಕ ಕಾರ್ಯಕರ್ತರಾಗಿ ತೊಡಗಿಸಿಕೊಳ್ಳುತ್ತಾರೆ.</p>



<p>ಬಲ್ಲಿಯಾದ ಪಿಎಸ್‌ಪಿ ಜಿಲ್ಲಾ ಕಾರ್ಯದರ್ಶಿಯಾಗಿ 1951 ರಲ್ಲಿ ಮೊದಲ ಬಾರಿಗೆ ಆಯ್ಕೆಯಾಗುತ್ತಾರೆ. ನಂತರದ ಒಂದು ವರ್ಷದೊಳಗೆ ಪಿಎಸ್‌ಪಿಯ ಉತ್ತರ ಪ್ರದೇಶ ರಾಜ್ಯ ಘಟಕದ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಾರೆ. <a href="tel:195556">1955-56</a> ರ ಹೊತ್ತಿಗೆ ಅವರು ರಾಜ್ಯದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. 1962 ರಲ್ಲಿ ಉತ್ತರ ಪ್ರದೇಶದಿಂದ ಪಿಎಸ್‌ಪಿ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಆಯ್ಕೆಯಾಗುವುದರೊಂದಿಗೆ ಅವರ ಸಂಸದೀಯ ಬದುಕು ಆರಂಭವಾಗುವುದು.</p>



<p>1968 ಮತ್ತು 1974 ರಲ್ಲಿ ಅವರು ಉತ್ತರ ಪ್ರದೇಶದಿಂದಲೇ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮತ್ತೆ ರಾಜ್ಯಸಭೆಗೆ ಆಯ್ಕೆಯಾಗುತ್ತಾರೆ. 1977 ರಲ್ಲಿ ಬಲ್ಲಿಯಾದಿಂದ ಜನತಾ ಪಕ್ಷದ ಸದಸ್ಯರಾಗಿ ಲೋಕಸಭೆ ಪ್ರವೇಶಿಸುತ್ತಾರೆ. 1977 ಮೇ 1 ರಂದು ಆಡಳಿತಾರೂಢ ಜನತಾ ಪಕ್ಷದ ಅಧ್ಯಕ್ಷರಾಗಿ ಅವರು ಆಯ್ಕೆಯಾಗುತ್ತಾರೆ. 1988 ರವರೆಗೆ ಆ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ.</p>



<p>ಅದರ ನಂತರ ಅವರು ಜನತಾ ಪಾರ್ಟಿಯ ವಿವಿಧ ಅವತಾರಗಳಲ್ಲಿ ಬಲ್ಲಿಯಾದಿಂದ ಸ್ಫರ್ಧಿಸಿ ಗೆಲ್ಲುತ್ತಾರೆ. 1980 ರಲ್ಲಿ ಜನತಾ ಪಾರ್ಟಿ, 1989 ರಲ್ಲಿ ಜನತಾ ದಳ, 1991, 1996, 1998, 1999 ಮತ್ತು 2004 ರಲ್ಲಿ ಎಸ್‌ಜೆಪಿಯಿಂದ ಗೆಲ್ಲುತ್ತಾರೆ. 1984 ರಲ್ಲಿ ಒಂದು ಬಾರಿ ಮಾತ್ರವೇ ಆ ಕ್ಷೇತ್ರದಲ್ಲಿ ಅವರು ಸೋಲು ಕಂಡಿದ್ದರು.</p>



<p>ಚಂದ್ರಶೇಖರ್ ಒಬ್ಬ ಅಸಾಮಾನ್ಯ ಸಂಸದೀಯ ಪಟುವಾಗಿದ್ದರು. ಅವರಿಗೆ 1995 ರಲ್ಲಿ ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅವರು ಸಂಸತ್ತಿನಲ್ಲಿ ಯಾವುದಾದರೂ ವಿವಾದಾತ್ಮಕ ವಿಷಯಗಳ ಕುರಿತು ಮಾತನಾಡುವಾಗ ಅಥವಾ ಅಂತಹ ವಿಷಯಗಳಲ್ಲಿ ಮಧ್ಯಪ್ರವೇಶ ಮಾಡುವಾಗಲೆಲ್ಲ, ಇಡೀ ಸದನವು ಅವರ ಮಾತನ್ನು ಉತ್ಸಾಹದಿಂದ ಕೇಳಿಸಿಕೊಳ್ಳುತ್ತಿತ್ತು. ಸರಕಾರ ಕೂಡ ಅವರ ಅಭಿಪ್ರಾಯಗಳಿಗೆ ಗೌರವ ಕೊಡುತ್ತಿತ್ತು. ಅವರು ಮಾತನಾಡಿದರು, ಗಟ್ಟಿಯಾಗಿಯೇ ಮಾತನಾಡಿದರು, ತನ್ನ ನೋಟ್ ನೋಡದೆ ಮಾತನಾಡುತ್ತಲೇ ಹೋದರು.</p>



<p><strong>ಭಾರತ ಯಾತ್ರೆ (1983)</strong><br>ಚಂದ್ರಶೇಖರ್‌ ಅವರು 6 ಜನವರಿ 1983 ರಿಂದ 25 ಜೂನ್‌ 1983 ರ ತನಕ ಸುಮಾರು 4260 <a href="http://ಕಿ.ಮೀ">ಕಿ.ಮೀ</a> ದೀರ್ಘವಾದ ಪಾದಯಾತ್ರೆ ಕೈಗೊಂಡಿದ್ದರು. ಕನ್ಯಾಕುಮಾರಿಯಿಂದ ಆರಂಭವಾದ ಆ ಪಾದಯಾತ್ರೆ ನವದೆಹಲಿಯ ರಾಜ್‌ಘಾಟ್‌ ತನಕ ಸಾಗಿತ್ತು. ಜನಸಾಮಾನ್ಯರ ನಡುವೆ ಸಂಪರ್ಕವನ್ನು ಗಟ್ಟಿಗೊಳಿಸಲು ಮತ್ತು ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಆ ಪಾದಯಾತ್ರೆಯನ್ನು ಕೈಗೊಳ್ಳಲಾಗಿತ್ತು. ಜನವರಿ 6 ರಂದು ಕರ್ನಾಟಕದಲ್ಲಿ ಅವರ ಪಕ್ಷ ಅಧಿಕಾರ ವಹಿಸಿಕೊಂಡ ದಿನವೇ ಅವರು ಕನ್ಯಾಕುಮಾರಿಯಿಂದ ಭಾರತ ಯಾತ್ರೆ ಹೊರಟಿದ್ದರು.</p>



<p>ತರ್ತು ಪರಿಸ್ಥಿತಿ ಘೋಷಣೆಯ ಎಂಟನೇ ವಾರ್ಷಿಕ ಮತ್ತು ಭಾರತ ಕ್ರಿಕೆಟ್‌ ತಂಡ ವಿಶ್ವಕಪ್‌ ಗೆದ್ದ ದಿನವಾದ ಜೂನ್‌ 25 ರಂದು ನವದೆಹಲಿಯ ರಾಜ್‌ಘಾಟ್‌ನಲ್ಲಿ ಭಾರತ ಯಾತ್ರೆಯನ್ನು ಸಮಾರೋಪ ಮಾಡುತ್ತಾರೆ.</p>



<p>1988 ರಲ್ಲಿ ಜನತಾ ಪಾರ್ಟಿ ಇತರ ಪಕ್ಷಗಳೊಂದಿಗೆ ವಿಲೀನಗೊಂಡು <a href="http://ವಿ.ಪಿ">ವಿ.ಪಿ</a>. ಸಿಂಗ್‌ ನೇತೃತ್ವದ ಜನತಾ ದಳ ರೂಪುಗೊಳ್ಳುತ್ತದೆ. 1989 ರ ಸಾರ್ವತ್ರಿಕ ಚುನಾವಣೆಗಳ ನಂತರ ಜನತಾ ದಳದ ಸಂಸದೀಯ ಪಕ್ಷವನ್ನು ಮುನ್ನಡೆಸಲು <a href="http://ವಿ.ಪಿ">ವಿ.</a><a href="http://ವಿ.ಪಿ">ಪಿ</a> ಸಿಂಗ್‌ ಅವರಿಗಿಂತ ಹೆಚ್ಚಿನ ಅರ್ಹತೆ ತನಗಿದೆ ಎಂದು ಚಂದ್ರಶೇಖರ್‌ ಭಾವಿಸುತ್ತಾರೆ.</p>



<p><a href="http://ವಿ.ಪಿ">ವಿ.ಪಿ</a>. ಸಿಂಗ್ ಉತ್ತರ ಪ್ರದೇಶ ರಾಜಕೀಯಕ್ಕೆ ಪ್ರವೇಶಿಸುವ ಮೊದಲೇ ಸಂಸದರಾಗಿದ್ದ ಚಂದ್ರಶೇಖರ್‌ ಹಿರಿಯ ಸಂಸದರು ಮತ್ತು ಹಿರಿಯ ರಾಜಕಾರಣಿಯೂ ಆಗಿದ್ದರು. ಹಾಗಾಗಿಯೇ ತನಗೆ ಸಂಸದೀಯ ಪಕ್ಷದ ಬೆಂಬಲ ಇದೆ ಎಂದು ಅವರು ಭಾವಿಸಿರಬಹುದು.</p>



<p>ಆದರೆ 1988 ರಲ್ಲಿ <a href="http://ವಿ.ಪಿ">ವಿ.ಪಿ</a>. ಸಿಂಗ್‌ ಜೊತೆಗೆ ಕಾಂಗ್ರೆಸ್‌ ತೊರೆದು ಬಂದಿದ್ದ ಅರುಣ್‌ ನೆಹರು ಮತ್ತು ದೇವಿಲಾಲ್‌ ಮೈತ್ರಿ ಮಾಡಿಕೊಂಡು, ಸಂಸದೀಯ ನಾಯಕನನ್ನು ಆರಿಸುವ ಸಮಯ ಬಂದಾಗ, ಚಂದ್ರಶೇಖರ್‌ ಅವರಿಗೆ ಯಾವ ಸಾಧ್ಯತೆಯನ್ನೂ ಬಿಟ್ಟುಕೊಡದೆ <a href="http://ವಿ.ಪಿ">ವಿ.ಪಿ</a>. ಸಿಂಗ್‌ ಅವರನ್ನು ಆಯ್ಕೆ ಮಾಡಿ ಬಿಡುತ್ತಾರೆ. ಪ್ರಧಾನಿಯಾಗಿ ತನ್ನನ್ನು ಆಯ್ಕೆ ಮಾಡದ ಆ ನಡೆಯಿಂದ ಕೋಪಗೊಳ್ಳುವ ಚಂದ್ರಶೇಖರ್‌ ಸಭೆಯಿಂದ ಎದ್ದು ಹೊರ ನಡೆಯುತ್ತಾರೆ.</p>



<p><strong>ಹಂಗಾಮಿ ಪ್ರಧಾನಿ</strong><br><a href="http://ವಿ.ಪಿ">ವಿ.ಪಿ</a>. ಸಿಂಗ್ ಮತ್ತು ದೇವಿಲಾಲ್ ಒಟ್ಟಿಗೆ ಒಪ್ಪಂದ ಮಾಡಿಕೊಂಡು ತಾನು ಪ್ರಧಾನ ಮಂತ್ರಿಯಾಗುವುದನ್ನು ತಪ್ಪಿಸಿದರೆಂದು ಚಂದ್ರಶೇಖರ್‌ ಯಾವಾಗಲೂ ದೂರುತ್ತಿದ್ದರು. 1990 ರಲ್ಲಿ ಮಂಡಲ್‌ ವರದಿಯ ನಂತರದ ಗಲಾಟೆಯ ಸಮಯದಲ್ಲಿ ಅದೇ ನೆಪವನ್ನು <a href="http://ವಿ.ಪಿ">ವಿ.ಪಿ</a>. ಸಿಂಗ್‌ ಸರಕಾರವನ್ನು ಉರಳಿಸಲೂ ಬಳಸಿಕೊಳ್ಳುತ್ತಾರೆ. ನಂತರ ಅವರು ಹೊಸ ಪಕ್ಷವಾದ ಜನತಾ ದಳ (ಎಸ್)‌ ಕಟ್ಟುತ್ತಾರೆ. ಅವರ ಜೊತೆಗಿದ್ದ 64 ಸಂಸದರು ಮತ್ತು ರಾಜೀವ್‌ ಗಾಂಧಿಯವರ ಸಹಕಾರದಿಂದ 1990 ರಲ್ಲಿ <a href="http://ವಿ.ಪಿ">ವಿ.ಪಿ</a>. ಸಿಂಗ್‌ ಅವರನ್ನು ಕೆಳಗಿಳಿಸಿ ಭಾರತದ ಎಂಟನೇ ಪ್ರಧಾನ ಮಂತ್ರಿಯಾಗಿ ಚಂದ್ರಶೇಖರ್‌ ನೇಮಕಗೊಳ್ಳುತ್ತಾರೆ.</p>



<p>ಅವರ ಅಧಿಕಾರಾವಧಿಯಲ್ಲಿ, ಮನಮೋಹನ್ ಸಿಂಗ್ ಆರ್ಥಿಕ ಸಲಹೆಗಾರರಾಗಿದ್ದರು. ಅವರು ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರೊಂದಿಗೆ ಆರ್ಥಿಕ ಉದಾರೀಕರಣದ ಕುರಿತು ಹಲವು ದಾಖಲೆಗಳನ್ನು ಸಿದ್ಧಪಡಿಸಿದ್ದರು. ಆದರೆ ಕಾಂಗ್ರೆಸ್ ತನ್ನ ಬೆಂಬಲವನ್ನು ಹಿಂಪಡೆದುಕೊಂಡ ಕಾರಣ ಸಂಸತ್ತಿನಲ್ಲಿ ಅವು ಯಾವುವೂ ಅಂಗೀಕಾರವಾಗುವುದಿಲ್ಲ.</p>



<p>ಜೈರಾಮ್‌ ರಮೇಶ್‌ ತಮ್ಮ “ಟು ದಿ ಬ್ರಿಂಕ್ ಅಂಡ್ ಬ್ಯಾಕ್: ಇಂಡಿಯಾಸ್ 1991 ಸ್ಟೋರಿ” ಎಂಬ ಪುಸ್ತಕದಲ್ಲಿ ಹೀಗೆ ಬರೆಯುತ್ತಾರೆ. “ಚಂದ್ರಶೇಖರ್‌ ಅವರ ವ್ಯಾಪಾರ ಮತ್ತು ಹೂಡಿಕೆ ಕುರಿತಾದ ಸಂಪುಟ ಸಮಿತಿಯು 11 ಮಾರ್ಚ್‌ 1991 ರಂದೇ ಹೊಸ ರಫ್ತು ನೀತಿಯನ್ನು ಅನುಮೋದಿಸಿತ್ತು. ಆ ಅನುಮೋದನೆಯಲ್ಲಿ ನಂತರದಲ್ಲಿ ಭಾರತದ ಆರ್ಥಿಕ ಸುಧಾರಣೆಗೆ ನಾಂದಿ ಹಾಡಿದ <a href="http://ಪಿ.ವಿ">ಪಿ.ವಿ</a>. ನರಸಿಂಹ ರಾವ್‌ ಸರಕಾರದ 4 ಜುಲೈ 1991 ರ ಪ್ಯಾಕೇಜ್‌ನ ಮುಖ್ಯ ಅಂಶಗಳು ಅಡಕವಾಗಿದ್ದವು.”</p>



<p>ಆದರೂ, ಚಂದ್ರಶೇಖರ್‌ ಕೇವಲ ಏಳು ತಿಂಗಳ ಕಾಲ ಮಾತ್ರವೇ ಪ್ರಧಾನಿಯಾಗಿದ್ದರು. ಚರಣ್‌ ಸಿಂಗ್‌ ನಂತರ ಎರಡನೇ ಅತಿ ಕಡಿಮೆ ಅವಧಿಯ ಪ್ರಧಾನ ಮಂತ್ರಿ ಅವರಾಗಿದ್ದರು. ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸುವ ಮೊದಲೇ 1991 ಮಾರ್ಚ್‌ 6 ರಂದು ಕಾಂಗ್ರೆಸ್‌ ತನ್ನ ಬೆಂಬಲವನ್ನು ಹಿಂಪಡೆದ ಕಾರಣ ಚಂದ್ರಶೇಖರ್‌ ರಾಜೀನಾಮೆ ನೀಡಬೇಕಾಗಿ ಬರುತ್ತದೆ.</p>



<p>ಸಂಸದರಾಗಿ ಅವರು ಬಡಬಗ್ಗರ ಪರವಾಗಿ ತೀವ್ರ ಆಸಕ್ತಿ ಹೊಂದಿದ್ದರು. ಆ ವರ್ಗದ ಏಳಿಗೆಗಾಗಿ, ಸಾಮಾಜಿಕ ಬದಲಾವಣೆಗಾಗಿ ತ್ವರಿತ ನೀತಿಗಳನ್ನು ರೂಪಿಸಲು ಅವರು ಸದಾ ವಾದಿಸುತ್ತಿದ್ದರು. ಆ ಮೂಲಕ ತನ್ನದೇ ಆದ ಛಾಪು ಮೂಡಿಸಿದರು. ಅದರೊಂದಿಗೆ ಪ್ರಭುತ್ವ ಬೆಂಬಲದೊಂದಿಗೆ ಬೆಳೆದು ಬರುತ್ತಿದ್ದ ಏಕಸ್ವಾಮ್ಯತನಗಳ ವಿರುದ್ಧ ಅವರು ತೀವ್ರ ದಾಳಿಗಿಳಿದಾಗ ಅಧಿಕಾರ ಕೇಂದ್ರಗಳೊಂದಿಗೆ ಸಂಘರ್ಷವನ್ನೂ ಎದುರಿಸಬೇಕಾಯಿತು.</p>



<p>ಲೋಕಸಭೆಯಲ್ಲಿ ಕೆಲವು ಹಾಸ್ಯಭರಿತ ಕ್ಷಣಗಳಿದ್ದವು. ಚಂದ್ರಶೇಖರ್‌ ಅವರು ಅಟಲ್‌ ಬಿಹಾರಿ ವಾಜಪೇಯಿಯವರನ್ನು “ಗುರುದೇವ” ಎಂದು ಕರೆಯುತ್ತಿದ್ದರು. ಬದಲಿಗೆ ವಾಜಪೇಯಿ ಚಂದ್ರಶೇಖರ್‌ ಅವರನ್ನು “ಗುರು ಘಾಂಟಾಲ್”‌ ಎಂದು ಕರೆಯುತ್ತಿದ್ದರು. ಪ್ರಧಾನಮಂತ್ರಿಯಾಗಿದ್ದ <a href="http://ಪಿ.ವಿ">ಪಿ.ವಿ</a>. ನರಸಿಂಹರಾವ್‌ ಸಾಮಾನ್ಯವಾಗಿ ಯಾವುದೇ ವಿವಾದಾತ್ಮಕ ವಿಷಯಗಳ ಮೇಲೆ ಮಾತನಾಡುತ್ತಿರಲಿಲ್ಲ. ಆದಷ್ಟೂ ಅಂತಹ ಸಂಗತಿಗಳನ್ನು ತಪ್ಪಿಸಿಕೊಳ್ಳುತ್ತಿದ್ದರು. ವಿರೋಧ ಪಕ್ಷದ ಸದಸ್ಯರು ಕೆರಳಿಸಿದರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಇದನ್ನು ಗಮನಿಸಿದ ಚಂದ್ರಶೇಖರ್‌ ಒಂದು ದಿನ ಅವರನ್ನು “ಮೌನಿ ಬಾಬಾ” ಎಂದು ಕರೆದು ಬಿಟ್ಟಿದ್ದರು.</p>



<p>ಚಂದ್ರಶೇಖರ್‌ 1969 ರಲ್ಲಿ ಯಂಗ್‌ ಇಂಡಿಯನ್‌ ಎಂಬ ವಾರಪತ್ರಿಕೆಯನ್ನು ಸ್ಥಾಪಿಸಿ ಅದರ ಸಂಪಾದಕರಾಗಿದ್ದರು. ಆ ಕಾಲದಲ್ಲಿ ಅತಿಹೆಚ್ಚು ಉಲ್ಲೇಖಿಸಲ್ಪಟ್ಟ ಸಂಪಾದಕೀಯಗಳು ಎಂದು ಅವು ಹೆಗ್ಗಳಿಕೆ ಪಡೆದುಕೊಂಡಿದ್ದವು. ಇಂದಿರಾ ಗಾಂಧಿಯಿಂದ ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದಾಗ ಮೇರಿ ಜೈಲ್‌ ಡೈರಿ ಎಂಬ ಪುಸ್ತಕವನ್ನೂ ಬರೆದಿದ್ದರು. ಅವರ ಬರಹಗಳ ಸಂಗ್ರಹ ಡೈನಾಮಿಕ್ಸ್‌ ಆಫ್‌ ಸೋಷಿಯಲ್ ಚೇಂಜ್‌ ಬಹಳ ಪ್ರಸಿದ್ಧವಾಗಿದೆ.</p>



<p>ದೀರ್ಘಕಾಲದ ಅನಾರೋಗ್ಯದ ಕಾರಣ 2007 ಜುಲೈ 8 ರಂದು ಚಂದ್ರಶೇಖರ್‌ ನಿಧನರಾದರು. ಆಗ ಅವರಿಗೆ 80 ವರ್ಷ ವಯಸ್ಸಾಗಿತ್ತು.</p>



<p><em><strong>ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.</strong></em></p>
]]></content:encoded>
					
		
		
			</item>
		<item>
		<title>ಸಂಸತ್ತಿನ ಪೂರ್ವಸೂರಿಗಳು- 10: ಜೀವನಪೂರ್ತಿ ಕಮ್ಯುನಿಸ್ಟ್‌ ಆಗಿದ್ದ ಮಹಿಳಾ ಹೋರಾಟಗಾರ್ತಿ, ರೇಣು ಚಕ್ರವರ್ತಿ</title>
		<link>https://peepalmedia.com/renu-chakraborty-a-female-communist-activist/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 13 Oct 2025 06:08:21 +0000</pubDate>
				<category><![CDATA[ಅಂಕಣ]]></category>
		<category><![CDATA[ಇತಿಹಾಸ]]></category>
		<guid isPermaLink="false">https://peepalmedia.com/?p=67790</guid>

					<description><![CDATA[ಈ ಲೇಖನ ಸರಣಿಯು &#8216;ದಿ ಅರ್ಲಿ ಪಾರ್ಲಿಮೆಂಟರಿಯನ್ಸ್&#8217; ಎಂಬ ಶೀರ್ಷಿಕೆಯ &#8216;ದಿ ವೈರ್&#8217; ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಹತ್ತನೇ ಲೇಖನ ರೇಣು ಚಕ್ರವರ್ತಿ ಒಬ್ಬ ಕಮ್ಯುನಿಸ್ಟ್ ನಾಯಕಿ, ಸಂಘಟಕಿ, ಖ್ಯಾತ ಸಂಸದೀಯ ಪಟು ಮತ್ತು ಶಿಕ್ಷಣ ತಜ್ಞೆ. ಭಾರತದ ಕಮ್ಯುನಿಸ್ಟ್ ಚಳುವಳಿ ಮತ್ತು ಮಹಿಳಾ ಚಳುವಳಿಗಳ ಮೇಲೆ ಅಳಿಸಲಾಗದ ಛಾಪು ಮೂಡಿಸಿದವರು. 1948 ರಲ್ಲಿ ಭಾರತೀಯ ಕಮ್ಯುನಿಸ್ಟ್‌ ಪಕ್ಷ ನಿಷೇಧಿಸಲ್ಪಟ್ಟಾಗ, 1951 [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>ಈ ಲೇಖನ ಸರಣಿಯು &#8216;ದಿ ಅರ್ಲಿ ಪಾರ್ಲಿಮೆಂಟರಿಯನ್ಸ್&#8217; ಎಂಬ ಶೀರ್ಷಿಕೆಯ &#8216;ದಿ ವೈರ್&#8217; ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಹತ್ತನೇ ಲೇಖನ</p>
</blockquote>



<pre class="wp-block-code"><code>ತಮ್ಮ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ, ಕಾರ್ಮಿಕ ಚಳವಳಿಯಲ್ಲಿ ರೇಣು ಚಕ್ರವರ್ತಿ ಆಳವಾಗಿ ತೊಡಗಿಸಿಕೊಂಡಿದ್ದರು, ಹಲವಾರು ಮುಷ್ಕರಗಳನ್ನು ಆಯೋಜಿಸಿದ್ದರು ಮತ್ತು ಹಲವು ಬಾರಿ ಜೈಲು ಶಿಕ್ಷೆಗೂ ಗುರಿಯಾಗಿದ್ದರು.</code></pre>



<p>ರೇಣು ಚಕ್ರವರ್ತಿ ಒಬ್ಬ ಕಮ್ಯುನಿಸ್ಟ್ ನಾಯಕಿ, ಸಂಘಟಕಿ, ಖ್ಯಾತ ಸಂಸದೀಯ ಪಟು ಮತ್ತು ಶಿಕ್ಷಣ ತಜ್ಞೆ. ಭಾರತದ ಕಮ್ಯುನಿಸ್ಟ್ ಚಳುವಳಿ ಮತ್ತು ಮಹಿಳಾ ಚಳುವಳಿಗಳ ಮೇಲೆ ಅಳಿಸಲಾಗದ ಛಾಪು ಮೂಡಿಸಿದವರು.</p>



<p>1948 ರಲ್ಲಿ ಭಾರತೀಯ ಕಮ್ಯುನಿಸ್ಟ್‌ ಪಕ್ಷ ನಿಷೇಧಿಸಲ್ಪಟ್ಟಾಗ, 1951 ರ ತನಕ ರೇಣು ಚಕ್ರವರ್ತಿ ಭೂಗತರಾಗಿದ್ದರು. ನಂತರ 1951 ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವು ಸ್ಪರ್ಧಿಸಲು ನಿರ್ಧರಿಸುತ್ತದೆ. ರೇಣು ಚಕ್ರವರ್ತಿ ಬಸಿರ್ಹಾತ್‌ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲುತ್ತಾರೆ. ಆ ಮೂಲಕ ಪಶ್ಚಿಮ ಬಂಗಾಳದಿಂದ ಚುನಾಯಿತರಾದ ಏಕೈಕ ಮಹಿಳಾ ಸಂಸದರಾಗಿ ಗುರುತಿಸಿಕೊಳ್ಳುತ್ತಾರೆ. 1957 ರಲ್ಲಿ ಅದೇ ಕ್ಷೇತ್ರದಿಂದ ಅವರು ಮರು ಆಯ್ಕೆಯಾಗುತ್ತಾರೆ. 1962 ರಲ್ಲಿ ಮೂರನೇ ಲೋಕಸಭೆಗೆ ಸ್ಪರ್ಧಿಸುವ ಅವರು ಇಡೀ ದೇಶದಲ್ಲಿಯೇ ಅತ್ಯಧಿಕ ಮತಗಳನ್ನು ಪಡೆದುಕೊಂಡು ಗೆದ್ದು ಬರುತ್ತಾರೆ.</p>



<p>1964 ರಲ್ಲಿ ಸಿಪಿಐ ಪಕ್ಷವು ವಿಭಜನೆಯಾದ ನಂತರ ಅವರು ಹಳೆಯ ಪಕ್ಷದಲ್ಲಿಯೇ ಮುಂದುವರಿಯುತ್ತಾರೆ. ಆದರೆ, 1967 ಮತ್ತು 1971 ರ ಚುನಾವಣೆಗಳಲ್ಲಿ ಅದೇ ಕ್ಷೇತ್ರದಿಂದ ಸಿಪಿಐ(ಎಂ) ಅಭ್ಯರ್ಥಿಯ ಎದುರು ಸೋಲು ಕಂಡಿದ್ದರು. ಹಾಗಂತ ಅವರು ತಮ್ಮ ಕ್ಷೇತ್ರವನ್ನು ಎಂದೂ ನಿರ್ಲಕ್ಷಿಸಲಿಲ್ಲ. ಜನರು ಅವರ ಒಡನಾಟವನ್ನು ಮೆಚ್ಚುತ್ತಿದ್ದರು. 1969 ರಲ್ಲಿ ಯುನೈಟೆಡ್‌ ಫ್ರಂಟ್‌ನ ಎರಡನೇ ಅವಧಿಯಲ್ಲಿ ಕೆಲಕಾಲ ಸಹಕಾರಿ ಮಂತ್ರಿಯಾಗಿಯೂ ಕೆಲಸ ಮಾಡಿದ್ದರು.</p>



<p>1958 ರಲ್ಲಿ ಅಮೃತಸರದಲ್ಲಿ ನಡೆದ ಸಿಪಿಐ ಕಾಂಗ್ರೆಸ್‌ನಲ್ಲಿ ಅವರು ರಾಷ್ಟ್ರೀಯ ಮಂಡಳಿಗೆ ಆಯ್ಕೆಯಾಗಿದ್ದರು.</p>



<p>1917 ಅಕ್ಟೋಬರ್‌ 21 ರಂದು ಕಲ್ಕತ್ತಾದ ಒಂದು ಬ್ರಾಹ್ಮೋ ಕುಟುಂಬದಲ್ಲಿ ಜನಿಸಿದ ರೇಣು ಕಲ್ಕತ್ತಾದ ಲೊರೆಟೊ ಹೌಸ್ ಮತ್ತು ವಿಕ್ಟೋರಿಯಾ ಸಂಸ್ಥೆಯಲ್ಲಿ ಓದಿಕೊಂಡು ನಂತರ ಕೇಂಬ್ರಿಡ್ಜ್‌ನ ನ್ಯೂನ್‌ಹ್ಯಾಮ್ ಕಾಲೇಜಿನಲ್ಲಿ ಶಿಕ್ಷಣವನ್ನು ಪೂರ್ತಿ ಮಾಡುತ್ತಾರೆ. ಕಲ್ಕತ್ತಾದಲ್ಲಿ ಆನರ್‌ ಪದವಿ ಪಡೆದ ನಂತರ, ಕೇಂಬ್ರಿಡ್ಜಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಟ್ರೈಪೋಸ್‌ ಉತ್ತೀರ್ಣರಾಗುತ್ತಾರೆ <a href="tel:193739">(1937-39</a>). ಡಾ. ಬಿಧಾನ್ ಚಂದ್ರ ರಾಯ್ ಸೋದರ ಸೊಸೆಯಾಗಿದ್ದ ರೇಣು ಅವರು, ಅವರಿಂದಲೇ ರಾಜಕೀಯದಲ್ಲಿ ಆಸಕ್ತಿ ತಳೆದಿದ್ದರು.</p>



<p>ಯುರೋಪಿನಲ್ಲಿದ್ದಾಗ, ರೇಣು ಚಕ್ರವರ್ತಿ ಫ್ಯಾಸಿಸಂನ ಉದಯವನ್ನು ಕಣ್ಣಾರೆ ಕಂಡವರು. ಬರ್ಲಿನ್ನಿನ ಅನ್ಟರ್ ಡೆನ್ ಲಿಂಡೆನ್‌ನಲ್ಲಿ ಫ್ಯಾಸಿಸ್ಟ್ ಯುವಕರು ಮಾರ್ಚ್‌ ನಡೆಸುವುದನ್ನು ಅವರು ಕಂಡಿದ್ದರು. ಆಸ್ಟ್ರಿಯಾದ ಮೇಲೆ ನಾಜಿ ಆಕ್ರಮಣಕ್ಕೆ ಸಾಕ್ಷಿಯಾಗಿದ್ದರು. ಜೆಕೊಸ್ಲೊವಾಕಿಯಾದ ವಿಘಟನೆಯ ಘಟನೆಗಳನ್ನು ಗಮನಿಸುತ್ತಿದ್ದರು. ಅವರು ಫ್ಯಾಸಿಸಮ್ಮಿನ ಕಟು ವಿರೋಧಿಯಾಗಿದ್ದರು. ಹಿಟ್ಲರನ ಕಿಂಡರ್‌, ಕುಚೆ, ಕಿರ್ಚೆ – ಮಹಿಳೆಯರು ಹೆರಿಗೆ, ಅಡುಗೆ ಮತ್ತು ಚರ್ಚ್‌ಗೆ ಸೀಮಿತ – ಎಂಬ ನಿಲುವನ್ನು ತಿರಸ್ಕರಿಸಿದ್ದರು.</p>



<p>ರೇಣು ಚಕರ್ವರ್ತಿ ಅವರು ಮಾರ್ಕ್ಸ್‌ವಾದಿ ಚಿಂತಕ ಜಾನ್ ಸ್ಟ್ರಾಚಿಯವರ ಉಪನ್ಯಾಸಗಳಿಗೆ ಹಾಜರಾಗುತ್ತಿದ್ದರು. ನಂತರ FEDIND (ಫೆಡರೇಷನ್‌ ಆಫ್‌ ಇಂಡಿಯನ್‌ ಸ್ಟೂಡೆಂಟ್ಸ್‌ ಸೊಸೈಟೀಸ್‌ ಇನ್‌ ಇಂಗ್ಲೆಂಡ್‌ ಆಂಡ್‌ ಐರ್ಲೆಂಡ್)‌ ಸಂಘಟನೆಯ ಸ್ಥಾಪಕ ಕಾರ್ಯದರ್ಶಿಯಾದರು. ಅಮೇರಿಕಾದಲ್ಲಿ 1938 ರಲ್ಲಿ ನಡೆದ ಅಂತರಾಷ್ಟ್ರೀಯ ಯುವ ಕಾಂಗ್ರೆಸ್‌ನಲ್ಲಿ ಕೂಡ ಅವರು ಭಾಗವಹಿಸಿದ್ದರು.</p>



<p>1939 ರಲ್ಲಿ ಕೇಂಬ್ರಿಡ್ಜ್‌ನಲ್ಲಿ ನಡೆದ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಸಮ್ಮೇಳನದಲ್ಲಿ ತಾನು ಕೇಳಿದ್ದ ಆಕೆಯ ಧ್ವನಿಯನ್ನು ಹಿರಿಯ ಸಂಸದ ಹಿರೇನ್‌ ಮುಖರ್ಜಿ ನೆನಪಿಸಿಕೊಳ್ಳುತ್ತಾರೆ. ಆ ಸಮ್ಮೇಳನದ ಘೋಷಣೆಯು “ಯಾವ ಬಾವುಟ, ಅದು ಕೆಂಬಾವುಟ” ಎಂದಾಗಿತ್ತು.</p>



<p>1938 ರಲ್ಲಿ ಅವರು ಪ್ರಮುಖ ಬ್ರಿಟಿಷ್ ಕಮ್ಯುನಿಸ್ಟ್ ರಜನಿ ಪಾಮ್ ದತ್ ಅವರ ಜೊತೆ ಸಂಪರ್ಕಕ್ಕೆ ಬರುತ್ತಾರೆ. ಅದೇ ವರ್ಷ, ಅವರು ಗ್ರೇಟ್ ಬ್ರಿಟನ್ ಕಮ್ಯುನಿಸ್ಟ್ ಪಕ್ಷವನ್ನು ಸೇರುವುದು. ಭಾರತಕ್ಕೆ ಮರಳಿದ ನಂತರ ಆಗ ಇಲ್ಲಿ ಅಕ್ರಮವಾಗಿದ್ದ ಕಮ್ಯುನಿಸ್ಟ್‌ ಪಕ್ಷವನ್ನು ಸೇರಿ ಸಕ್ರಿಯ ಎಡಪಂಥೀಯ ರಾಜಕಾರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಆ ಕುರಿತು ಅವರು ಹೀಗೆ ಬರೆಯುತ್ತಾರೆ. “ನಾನು ಭಾರತಕ್ಕೆ ಮರಳಿ ಬಂದಿದ್ದೆ, ನನ್ನ ದೇಶದ ವಿಮೋಚನೆಗಾಗಿ ಹೋರಾಡುವ ಕಿಚ್ಚಿನ ಜೊತೆಗೆ.”</p>



<p>ಬ್ರಿಟನ್‌ನಲ್ಲಿದ್ದಾಗ ಪ್ರಮುಖ ಕಮ್ಯುನಿಸ್ಟ್‌ ಚಿಂತಕ ಮತ್ತು ಪತ್ರಕರ್ತ ನಿಖಿಲ್‌ ಚಕ್ರವರ್ತಿ ಅವರನ್ನು ಭೇಟಿಯಾಗುತ್ತಾರೆ. 1942 ಜನವರಿ 3 ರಂದು ರೇಣು ಮತ್ತು ನಿಖಿಲ್‌ ಭಾರತದಲ್ಲಿ ವಿವಾಹಿತರಾಗುತ್ತಾರೆ. ಅವರಿಗೆ ಜನಿಸಿದ ಮಗ ಸುಮಿತ್‌ ಚಕ್ರವರ್ತಿ, ತಂದೆ ಸ್ಥಾಪಿಸಿದ ಮೇನ್‌ಸ್ಟ್ರೀಮ್‌ ಪತ್ರಿಕೆಯ ಸಂಪಾದಕರಾಗಿದ್ದಾರೆ.</p>



<p>ಎರಡನೇ ಮಹಾಯುದ್ಧದ ಸಮಯದಲ್ಲಿ, ಇಂಡೋ-ಬರ್ಮಾ ಗಡಿಯಲ್ಲಿ ಬ್ರಿಟಿಷ್ ಮತ್ತು ಅಮೇರಿಕನ್ ಸೈನಿಕರು ಮಹಿಳೆಯರ ಮೇಲೆ ನಡೆಸಿದ ದೌರ್ಜನ್ಯಗಳನ್ನು ಪ್ರತಿಭಟಿಸಿ ರೇಣು ಚಕ್ರವರ್ತಿ ಮತ್ತು ಇತರರು ವೈಸ್‌ರಾಯ್‌ಗೆ ಪತ್ರ ಬರೆದು ಸಹಿ ಸಂಗ್ರಹ ನಡೆಸುತ್ತಾರೆ. ಜಪಾನ್‌ ಪಡೆಗಳು ಮುನ್ನುಗ್ಗಿ ಬರುತ್ತಿದ್ದರೂ ಕೂಡ ಬ್ರಿಟಿಷ್‌ ಸೇನೆ ಹಳ್ಳಿಗಳನ್ನು ನಾಶ ಮಾಡುವುದನ್ನು ತಡೆಯಲು ಅವರು ಹಳ್ಳಿಗಳಿಗೆ ಪ್ರಯಾಣಿಸುತ್ತಾರೆ. ಅದಾಗಲೇ ಮೂಡಿ ಬರುತ್ತಿದ್ದ ಬರ ಪರಿಸ್ಥಿತಿಗೂ ಅವರು ಸ್ಪಂದಿಸುತ್ತಾರೆ.</p>



<p>1940 ರ ಆರಂಭದಲ್ಲಿ ದೆಹಲಿಯಲ್ಲಿ ನಡೆದ AISF ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಭಾಗವಹಿಸಿದ್ದರು. ರೇಣು ಚಕ್ರವರ್ತಿ, ಕನಕ್‌ ದಾಸ್‌ಗುಪ್ತಾ ಮೊದಲಾದವರು ಬಂಗಾಳದಲ್ಲಿ ಹೆಣ್ಣುಮಕ್ಕಳನ್ನು ಸಂಘಟಿಸಿಕೊಂಡು ವಿದ್ಯಾರ್ಥಿನಿಯರ ಸಮಿತಿಯನ್ನು ರಚಿಸುತ್ತಾರೆ.</p>



<p>1940 ರಲ್ಲಿ ಛಾತ್ರಿ ಸಂಘ (ವಿದ್ಯಾರ್ಥಿನಿಯರ ಸಂಘಟನೆ) ತನ್ನ ಮೊದಲ ಸಮ್ಮೇಳನವನ್ನು ಲಕ್ನೋದಲ್ಲಿ ನಡೆಸುತ್ತದೆ. ರೇಣು ಚಕ್ರವರ್ತಿ ಅದರ ಪ್ರಮುಖ ಸಂಘಟಕರಲ್ಲಿ ಒಬ್ಬರಾಗಿದ್ದರು. ತರುಣಿ ವಿದ್ಯಾರ್ಥಿನಿಯರು ಸೇರಿ ಮಹಿಳಾ ಚಳುವಳಿಗೆ ಅಡಿಪಾಯ ಹಾಕಿದ ಆ ಕಾರ್ಯಕ್ರಮಕ್ಕೆ ಸರೋಜಿನಿ ನಾಯ್ಡು ಮುಖ್ಯ ಅತಿಥಿಗಳಾಗಿ ಆಗಮಿಸಿ, ಅಧ್ಯಕ್ಷತೆ ವಹಿಸಿದ್ದರು.</p>



<p>1942 ರ ಏಪಿಲ್‌ ತಿಂಗಳಲ್ಲಿ ರೇಣು ಚಕ್ರವರ್ತಿ, ರಾಣಿ ಮಿತ್ರಾ ದಾಸ್‌ಗುಪ್ತಾ ಮತ್ತು ಮಣಿಕುಂತಲಾ ಸೇನ್ ಅವರುಗಳು ಸೇರಿಕೊಂಡು ಮಹಿಳಾ ಆತ್ಮ ರಕ್ಷಾ ಸಮಿತಿ (MARS) ಯನ್ನು ರಚಿಸುತ್ತಾರೆ. ಅದಕ್ಕೆ ಇಲಾ ಭಟ್ಟಾಚಾರ್ಯ ಅವರನ್ನು ಸಂಘಟನಾ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ನಂತರ MARS ಸಾವಿರಾರು ಸದಸ್ಯರನ್ನು ಒಳಗೊಂಡ ಬೃಹತ್‌ ಮತ್ತು ಪರಿಣಾಮಕಾರಿ ಸಂಘಟನೆಯಾಗಿ ಬೆಳೆಯುತ್ತದೆ.</p>



<p>1942 ಡಿಸೆಂಬರ್‌ ತಿಂಗಳಲ್ಲಿ ಕಲ್ಕತ್ತಾ ಸೇರಿದಂತೆ, ವಿಶಾಖಪಟ್ಟಣ, ಚಿತ್ತಗಾಂಗ್‌ ಮತ್ತು ಇತರ ಕಡೆಗಳಲ್ಲಿ ಜಪಾನ್‌ ದಾಳಿ ಮಾಡಲು ಆರಂಭಿಸಿ ಬಾಂಬ್‌ ಸುರಿಸುತ್ತದೆ. ಆಗ ಉಂಟಾದ ಸಾಮೂಹಿಕ ವಲಸೆಯಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಬಹಳ ದೊಡ್ಡ ಮಟ್ಟದ ಸಹಾಯ ಲಭಿಸುವುದು ಇದೇ MARS ಸಂಘಟನೆಯಿಂದ. ರೇಣು ಚಕ್ರವರ್ತಿ ಆ ಪರಿಹಾರ ಕಾರ್ಯಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ತೆಭಾಗ ಚಳುವಳಿಯಲ್ಲಿ ಕೂಡ MARS ಮಹತ್ವದ ಪಾತ್ರ ವಹಿಸಿತ್ತು.</p>



<p>ಇದರ ಜೊತೆಗೆ, ನಿರ್ಗತಿಕ ಮಹಿಳೆಯರ ಪುನರ್ವಸತಿಗಾಗಿ ನಾರಿ ಸೇವಾ ಸಂಘವನ್ನು ಕೂಡ ಸ್ಥಾಪಿಸುತ್ತಾರೆ. AIWC (ಆಲ್‌ ಇಂಡಿಯಾ ವುಮೆನ್ಸ್‌ ಕಾನ್ಫರೆನ್ಸ್)‌ ಸದಸ್ಯರೂ ಆಗಿದ್ದ ರೇಣು ಅವರ ತಾಯಿ ಬ್ರಹ್ಮ ಕುಮಾರಿ ರಾಯ್‌ ಈ ಸಂಘದ ಕೇಂದ್ರದಲ್ಲಿದ್ದರು. ನಿಖಿಲ್‌ ಚಕ್ರವರ್ತಿ ಅವರ ತಾಯಿ ಶೈಲಜಾ ಚಕ್ರವರ್ತಿ ಕೂಡ ಮಹಿಳಾ ಸಬಲೀಕರಣಕ್ಕಾಗಿ ದುಡಿದಿದ್ದರು.</p>



<p>1942 ಏಪ್ರಿಲ್‌ 27 ಮತ್ತು 28 ರಂದು MARS ಸಂಘಟನೆಯ ಮೊದಲ ಸಮ್ಮೇಳನ ನಡೆಯುತ್ತದೆ. ಅಲ್ಲಿ ರೇಣು ಚಕ್ರವರ್ತಿ ಮಾತನಾಡುತ್ತಾರೆ. ಅದರ ಮೊದಲ ಪ್ರಾಂತೀಯ ಸಮ್ಮೇಳನವು 1943 ಮೇ 8 ರಂದು ಕಲ್ಕತ್ತಾದಲ್ಲಿ ನಡೆಯುತ್ತದೆ. ಅಲ್ಲಿ ಅವರು ಸವಿಸ್ತಾರವಾಗಿ ಮಾತನಾಡುತ್ತಾರೆ. ಬರ ಪರಿಹಾರಕ್ಕೆ ಒತ್ತಾಯಿಸಿ ವಿಧಾನಸಭೆಗೆ 5,000 ಮಹಿಳೆಯರ ಜಾಥಾವನ್ನು MARS ಆಯೋಜಿಸುತ್ತದೆ. ನಾಗರಿಕ ರಕ್ಷಣಾ ಘಟಕಗಳು, ಪ್ರಥಮ ಚಿಕಿತ್ಸಾ ಕೇಂದ್ರಗಳು ಮತ್ತು ಗಂಜಿಕೇಂದ್ರಗಳನ್ನು ಸ್ವತಃ ರೇಣು ಚಕ್ರವರ್ತಿ ಮುಂದೆ ನಿಂತು ಸಂಘಟಿಸುತ್ತಾರೆ.</p>



<p><a href="tel:194647">1946-47</a> ರ ಕೋಮು ಗಲಭೆಗಳಲ್ಲಿ, ಅದರಲ್ಲೂ ವಿಶೇಷವಾಗಿ ನವಖಲಿಯಲ್ಲಿ ಅವರು ಸಕ್ರಿಯರಾಗಿದ್ದರು. ಅವರು ಹೀಗೆ ಬರೆಯುತ್ತಾರೆ. “ನನ್ನ ಪುಟ್ಟ ಮಗ (ಸುಮಿತ್‌) ಆಗ ಕೇವಲ ಒಂದು ವರ್ಷದ ಮಗು. ನಾನು ಕಷ್ಟದಲ್ಲಿದ್ದೆ, ಆದರೆ ನವಖಲಿಯಲ್ಲಿ ಕಷ್ಟ ಅನುಭವಿಸುತ್ತಿರುವ ಸಹೋದರಿಯರ ಕೂಗು ಕೇಳಿಕೊಂಡು ನನಗೆ ಮನೆಯಲ್ಲಿ ಉಳಿಯಲು ಸಾಧ್ಯವಿರಲಿಲ್ಲ.”</p>



<p>ಅವರು ಅಪಾರ ಅಧ್ಯಯನ ನಡೆಸಿ ಬರೆದಿರುವ ಪುಸ್ತಕ “ಭಾರತೀಯ ಮಹಿಳಾ ಚಳುವಳಿಯಲ್ಲಿ ಕಮ್ಯುನಿಸ್ಟರು” <a href="tel:194050">1940-50</a> ರ ನಡುವಿನ ಮಹಿಳಾ ಚಳುವಳಿಯ ಸಮಗ್ರ ಇತಿಹಾಸವನ್ನು ಕಟ್ಟಿಕೊಡುತ್ತದೆ.</p>



<p>ತನ್ನ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ, ಕಾರ್ಮಿಕ ಚಳುವಳಿಯಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದರು. ಹಲವು ಕಾರ್ಮಿಕ ಮುಷ್ಕರಗಳನ್ನು ಅವರು ಆಯೋಜಿಸಿದ್ದರು. ಹಲವು ಬಾರಿ ಜೈಲು ಶಿಕ್ಷೆಗೂ ಗುರಿಯಾಗಿದ್ದರು. ಅವರು ಮಹಿಳಾ ಚಳುವಳಿಗೆ ಗಣನೀಯ ಕೊಡುಗೆ ನೀಡಿದವರು. 1953 ರಲ್ಲಿ ಅವರು ಸದಸ್ಯರಾಗಿ ಆಯ್ಕೆಯಾಗಿದ್ದ ವುಮೆನ್ಸ್‌ ಇಂಟರ್ನ್ಯಾಷನಲ್ ಡೆಮಾಕ್ರಟಿಕ್ ಫೆಡರೇಷನ್‌ (WIDF) ಸಹಿತ ಹಲವು ಸಂಘಟನೆಗಳ ಕಾರ್ಯಕಾರಿ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದರು.</p>



<p>WIDF ನ ಸಂವಿಧಾನ ಸಭೆಯು 1945 ರಲ್ಲಿ ಪ್ಯಾರಿಸ್‌ನಲ್ಲಿ MARS ಸಂಯೋಜನೆಯೊಂದಿಗೆ ನಡೆಯುತ್ತದೆ. WIDF ಸಂಘಟನೆಯು 1953 ಜೂನ್‌ ತಿಂಗಳಲ್ಲಿ ಕೋಪನ್‌ ಹೇಗನ್‌ನಲ್ಲಿ ತನ್ನ ವಿಶ್ವ ಕಾಂಗ್ರೆಸ್‌ಗೆ ಭಾರತದಿಂದ ಪ್ರತಿನಿಧಿಗಳನ್ನು ಆಹ್ವಾನಿಸುತ್ತದೆ. ವಿದೇಶದಿಂದ ಹಿಂತಿರುಗುವ ರೇಣು ಚಕ್ರವರ್ತಿ ಆ ಆಹ್ವಾನವನ್ನು ಹಿಡಿದುಕೊಂಡೇ ಬಂದಿದ್ದರು. ಆ ಮೂಲಕ 30 ಮಹಿಳೆಯರ ನಿಯೋಗ ರಚಿಸಿ ಕಳುಹಿಸಿಕೊಡುತ್ತಾರೆ.</p>



<p>1953 ಮಾರ್ಚ್‌ 10 ರಂದು ದೆಹಲಿಯಲ್ಲಿ ಅದರ ಪೂರ್ವಸಿದ್ಧತಾ ಸಭೆ ನಡೆಯುತ್ತದೆ. ರೇಣು ಚಕ್ರವರ್ತಿ, ಅರುಣಾ ಅಸಫ್‌ ಅಲಿ ಸೇರಿದಂತೆ 12 ರಾಜ್ಯಗಳ ಇತರ ಪ್ರತಿನಿಧಿಗಳು WIDF ಮನವಿಗೆ ಸಹಿ ಮಾಡುತ್ತಾರೆ.</p>



<p>1953 ಮೇ 9 ರಂದು ರಾಷ್ಟ್ರೀಯ ಪೂರ್ವಸಿದ್ಧತಾ ಸಮ್ಮೇಳನವನ್ನು ದೆಹಲಿಯಲ್ಲಿ ಆಯೋಜಿಸಲಾಗುತ್ತದೆ. ಅಲ್ಲಿ ರಾಷ್ಟ್ರೀಯ ಸಮನ್ವಯ ಸಮಿತಿಯನ್ನು ರಚಿಸಲಾಗುತ್ತದೆ. 1954 ಜೂನ್‌ 4 ರಂದು ನ್ಯಾಷನಲ್‌ ಫೆಡರೇಷನ್‌ ಆಫ್‌ ಇಂಡಿಯನ್‌ ವುಮೆನ್‌ (NFIW) ಸಂಘಟನೆಯ ಸ್ಥಾಪನಾ ಸಭೆ ಆರಂಭವಾಗುತ್ತದೆ. ಅಲ್ಲಿ ರೇಣು ಚಕ್ರವರ್ತಿ ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ ಮತ್ತು ಸಂಘಟನೆಯ ಸಂವಿಧಾನದ ಕರಡು ತಯಾರಿಸುತ್ತಾರೆ. 1962 ರ NFIW ಸಮ್ಮೇಳನದಲ್ಲಿ ಅವರು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಾರೆ. 1970 ರ ತನಕ ಅವರ ಆ ಸ್ಥಾನದಲ್ಲಿ ಮುಂದುವರಿಯುತ್ತಾರೆ.</p>



<p>1950 ರ ದಶಕದಲ್ಲಿ ಜಮ್ಶೆಡ್‌ಪುರ ಮತ್ತಿತರ ಕಡೆಗಳಲ್ಲಿ ನಡೆದ ಕಾರ್ಮಿಕ ಚಳುವಳಿಯಲ್ಲಿ ರೇಣು ಚಕ್ರವರ್ತಿ ಸಕ್ರಿಯರಾಗಿದ್ದರು. ಆ ಕಾರಣದಿಂದ ಅವರು ಮತ್ತಷ್ಟು ಸೆರೆವಾಸವನ್ನೂ ಅನುಭವಿಸುತ್ತಾರೆ. AIWC ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದ ಅವರು, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಇದ್ದರೂ ಕೂಡ ಇತರ ಕಮ್ಯುನಿಸ್ಟ್‌ ಮತ್ತು ಎಡಪಂಥೀಯ ಮಹಿಳೆಯರೊಂದಿಗೆ ಕೆಲಸ ಮಾಡುತ್ತಲೇ ಬಂದರು.</p>



<p>1940 ರಿಂದ 1947 ರವರೆಗೆ ಅವರು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಲೇ, ಸಾಮುದಾಯಿಕ ಮತ್ತು ಪಕ್ಷದ ಕೆಲಸಗಳಿಗೂ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಅವರೊಬ್ಬ ಪ್ರತಿಭಾನ್ವಿತ ಗಾಯಕಿ ಮತ್ತು ಚಿತ್ರ ಕಲಾವಿದೆಯಾಗಿದ್ದರು. ಅವರ ಲೋಕಸಭಾ ವ್ಯಕ್ತಿಚಿತ್ರದಲ್ಲಿ ಅಂಕಣಗಳ ಓದು ಮತ್ತು ಬರವಣಿಗೆ ಅವರ ಹವ್ಯಾಸಗಳಾಗಿದ್ದವೆಂದು ಕಾಣಬಬಹುದು. ಅವರು ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳೆಲ್ಲವೂ ಮಹಿಳೆಯರ ವಿಮೋಚನೆಯ ಮೇಲೆ ಕೇಂದ್ರೀಕರಿಸಿದ್ದವು.</p>



<p>1970 ರ ಹೊತ್ತಿಗೆ ತನ್ನ ಜನ್ಮಜಾತ ಹೃದಯ ರೋಗದಿಂದ ಬಳಲುತ್ತಿದ್ದ ಅವರು ಹೃದಯ ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದರು. ಇದರ ಹೊರತಾಗಿಯೂ ಅವರು ಸೆರೆಬ್ರಲ್‌ ಹೇಮರೇಜ್‌ ಆಗುವ ತನಕವೂ ಸಕ್ರಿಯವಾಗಿಯೇ ಇದ್ದರು.</p>



<p>1994 ಏಪ್ರಿಲ್ 16 ರಂದು ರೇಣು ಚಕ್ರವರ್ತಿ ನಿಧನರಾದರು.</p>



<p><strong><em>ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.</em></strong></p>
]]></content:encoded>
					
		
		
			</item>
		<item>
		<title>ಬೊಗಸೆಗೆ ದಕ್ಕಿದ್ದು-53 : ಸಿಡಿ, ಬಾಯಿಗೆ ಬೀಗ, ಹರಕೆಗಾಗಿ ಕಳವು!</title>
		<link>https://peepalmedia.com/cd-lock-your-mouth-steal-for-a-vow/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 02 Oct 2025 14:22:58 +0000</pubDate>
				<category><![CDATA[ಅಂಕಣ]]></category>
		<category><![CDATA[ಇತಿಹಾಸ]]></category>
		<category><![CDATA[ಕೋಮುವಾದ]]></category>
		<guid isPermaLink="false">https://peepalmedia.com/?p=67254</guid>

					<description><![CDATA[&#8220;..ಕೆಲವೊಂದು ಆಚರಣೆಗಳು ಹಿಂದೂತ್ವದ ಮೂಲಭೂತವಾದಿ ನಾಯಕರ ಕುಮ್ಮಕ್ಕಿನಿಂದ ಮತ್ತೆ ಹೊರಬಂದು ಹೆಡೆಯೆತ್ತಲು ಹವಣಿಸುತ್ತಿವೆ. ಅವುಗಳಲ್ಲಿ ಒಂದು ಸಿಡಿ. ಇವು ಹಿಂಸಾತ್ಮಕ ಆಚರಣೆಗಳಾಗಿದ್ದವು..&#8221; ನಿಖಿಲ್ ಕೋಲ್ಪೆಯವರ ಬರಹದಲ್ಲಿ ದಮನಿತರನ್ನು ದೇವರು ಮತ್ತು ನಂಬಿಕೆಯ ಹೆಸರಿನಲ್ಲಿ ಇನ್ನಷ್ಟು ದಮನಿಸಲು ನಮ್ಮ ಸಮಾಜವು ಕಂಡುಕೊಂಡಿರುವ ಆಚರಣಾ ವ್ಯವಸ್ಥೆಗಳು ಲೆಕ್ಕವಿಲ್ಲದಷ್ಟಿವೆ. ಇಂತಾ ಆಚರಣೆಗಳಲ್ಲಿ ಕೆಲವು ಹಿಂದೆ ಮುಕ್ತವಾಗಿ ಮತ್ತು ರಾಜಾರೋಷವಾಗಿ ನಡೆಯುತ್ತಿದ್ದು, ನಂತರ ಬಿಲ ಸೇರಿದ್ದರೂ, ಕೆಲವೊಂದು ಆಚರಣೆಗಳು ಹಿಂದೂತ್ವದ ಮೂಲಭೂತವಾದಿ ನಾಯಕರ ಕುಮ್ಮಕ್ಕಿನಿಂದ ಮತ್ತೆ ಹೊರಬಂದು ಹೆಡೆಯೆತ್ತಲು ಹವಣಿಸುತ್ತಿವೆ. ಅವುಗಳಲ್ಲಿ ಒಂದು [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>&#8220;..ಕೆಲವೊಂದು ಆಚರಣೆಗಳು ಹಿಂದೂತ್ವದ ಮೂಲಭೂತವಾದಿ ನಾಯಕರ ಕುಮ್ಮಕ್ಕಿನಿಂದ ಮತ್ತೆ ಹೊರಬಂದು ಹೆಡೆಯೆತ್ತಲು ಹವಣಿಸುತ್ತಿವೆ. ಅವುಗಳಲ್ಲಿ ಒಂದು ಸಿಡಿ. ಇವು ಹಿಂಸಾತ್ಮಕ ಆಚರಣೆಗಳಾಗಿದ್ದವು..&#8221; ನಿಖಿಲ್ ಕೋಲ್ಪೆಯವರ ಬರಹದಲ್ಲಿ</p>
</blockquote>



<p>ದಮನಿತರನ್ನು ದೇವರು ಮತ್ತು ನಂಬಿಕೆಯ ಹೆಸರಿನಲ್ಲಿ ಇನ್ನಷ್ಟು ದಮನಿಸಲು ನಮ್ಮ ಸಮಾಜವು ಕಂಡುಕೊಂಡಿರುವ ಆಚರಣಾ ವ್ಯವಸ್ಥೆಗಳು ಲೆಕ್ಕವಿಲ್ಲದಷ್ಟಿವೆ. ಇಂತಾ ಆಚರಣೆಗಳಲ್ಲಿ ಕೆಲವು ಹಿಂದೆ ಮುಕ್ತವಾಗಿ ಮತ್ತು ರಾಜಾರೋಷವಾಗಿ ನಡೆಯುತ್ತಿದ್ದು, ನಂತರ ಬಿಲ ಸೇರಿದ್ದರೂ, ಕೆಲವೊಂದು ಆಚರಣೆಗಳು ಹಿಂದೂತ್ವದ ಮೂಲಭೂತವಾದಿ ನಾಯಕರ ಕುಮ್ಮಕ್ಕಿನಿಂದ ಮತ್ತೆ ಹೊರಬಂದು ಹೆಡೆಯೆತ್ತಲು ಹವಣಿಸುತ್ತಿವೆ. ಅವುಗಳಲ್ಲಿ ಒಂದು ಸಿಡಿ. ಇವು ಹಿಂಸಾತ್ಮಕ ಆಚರಣೆಗಳಾಗಿದ್ದವು.</p>



<p><strong>ಸಿಡಿಯಾಟ</strong><br>ಕರ್ನಾಟಕದಲ್ಲಿ ಅಮಾನವೀಯ ಪದ್ಧತಿಗಳ ದಾಖಲಾತಿ ನಡೆದಾಗ ಸಿಡಿ ಆಚರಣೆಯು ಮಂಡ್ಯ, ಚಿತ್ರದುರ್ಗ, ಕಲಬುರ್ಗಿ, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಡೆಯುತ್ತಿತ್ತು. ಕೆಲವು ಊರುಗಳ ಉದಾಹರಣೆ ಕೊಡಬೇಕೆಂದರೆ, ಆಳಂದ ತಾಲೂಕಿನ ಹಡಗಲಿ ಅಫ್ಜಲ್ ಪುರ ತಾಲೂಕಿನ ಘತ್ತರಗಿ, ಮಂಡ್ಯ ಜಿಲ್ಲೆಯ ಮಳವಳ್ಳಿ, ಹಲಗೂರು ಬಳಿಯ ಗುಂಡಾಪುರ, ದೊಡ್ಡರಸಿನಕೆರೆ, ಕಸಲಗೆರೆ, ಅರಸಿನಗೆರೆ, ಕನಕಪುರ ತಾಲೂಕಿನ ಸಾತನೂರು, ಕೇರಲಾಳಸಂದ್ರ, ಮಳಗಾಳ, ಕಬ್ಬಾಳ, ಜಗಳೂರು ತಾಲೂಕಿನ ಹಾಲೆಕಲ್ಲು ಮೊದಲಾದ ಹಳ್ಳಿಗಳಲ್ಲಿ ಒಂದೊಂದು ರೀತಿಯ ಸಿಡಿ ನಡೆಯುತ್ತಿತ್ತು.</p>



<p>ಸಿಡಿಯಾಟದಲ್ಲಿ ಹಿಂದುಳಿದ ಎಲ್ಲಾ ಜಾತಿಗಳವರು ಭಾಗವಹಿಸುತ್ತಾರಾದರೂ, ಮಾದಿಗರು, ನಾಯಕರು ಮುಂತಾದ “ಕೆಳ ಜಾತಿ”ಗಳಿಗೆ ಸೇರಿದವರೇ ಹೆಚ್ಚು ಮತ್ತು ಪುರುಷರಿಗಿಂತ ಮಹಿಳೆಯರೇ ಹೆಚ್ಚು. ಮಾರಮ್ಮ ಮುಂತಾದ ಹೆಣ್ಣು ದೇವತೆಗಳನ್ನು ಪ್ರಸನ್ನಗೊಳಿಸುವ ಹೆಸರಿನಲ್ಲಿ, ಹರಕೆ ರೂಪದಲ್ಲಿ ಸಿಡಿ ಆಡಲಾಗುತ್ತದೆ. ಉದಾಹರಣೆಗೆ ಕಬ್ಬಾಳದ ಕಬ್ಬಾಳಮ್ಮ, ಮಳಗಾಳದ ಮಸಣಮ್ಮ, ಹಾಲೇಕಲ್ಲಿನ ಕರಿಯಮ್ಮ, ಘತ್ತರಗಿಯ ಬಾಗಮ್ಮ… ಹೀಗೆ. ಊರಿಗೆ ಒಳ್ಳೆಯದಾಗುತ್ತದೆ, ಇಲ್ಲವಾದಲ್ಲಿ ಕೆಟ್ಟದಾಗುತ್ತದೆ ಎಂಬುದು ನಂಬಿಕೆ. ಹಲವಾರು ಕಾರಣಗಳಿಂದ ಹರಕೆ ಹೊತ್ತವರೂ ಇರುತ್ತಾರೆ.</p>



<p>ವಿಶೇಷವಾಗಿ ಆರಿಸಿದ ಮರದಿಂದ ಸಿಡಿಗೋಲು ಅಥವಾ ಸಿಡಿಮರ&nbsp; ತಯಾರಿಸಲಾಗುತ್ತದೆ. ಜಾತ್ರೆಯ ದಿನ ಇದಕ್ಕೆ ವಿಶೇಷ ಪೂಜೆ, ಪ್ರಾಣಿಬಲಿ, ಅಲಂಕಾರಗಳು, ವಿಧಿವಿಧಾನಗಳು ಇರುತ್ತವೆ. ಅವೆಲ್ಲವೂ ಒತ್ತಟ್ಟಿಗಿರಲಿ. ಇದೊಂದು ಮರದ ಏತದಂತಾ ರಚನೆ.&nbsp; ಅದನ್ನು ಆಕಾಶದತ್ತ ಮೇಲೆತ್ತಿ ಒಂದು ಕಡೆಯಲ್ಲಿರುವ ಹಗ್ಗದ ಮೂಲಕ ಗಾಳಿಯಲ್ಲಿ ಅತ್ತಿಂದಿತ್ತ, ಇತ್ತಿಂದತ್ತ ತಿರುಗಿಸಬಹುದು. ಕೆಲವು ಕಡೆ ಇವುಗಳಿಗೆ ಚಕ್ರಗಳಿದ್ದು, ಬೇಕೆಂದರೆ ಮೆರವಣಿಗೆಯಲ್ಲಿ ಕೊಂಡೊಯ್ಯಬಹುದು. ಮರದ ಇನ್ನೊಂದು ತುದಿಯಲ್ಲಿ ಹಗ್ಗಕ್ಕೆ ಕಟ್ಟಿರುವ ಕೊಕ್ಕೆ ಇರುತ್ತದೆ. ಈ ಕೊಕ್ಕೆಯನ್ನು ಸಿಡಿಯಾಡುವವರ ಬೆನ್ನು ಹುರಿಗೆ ಸಿಕ್ಕಿಸಿ ಮೇಲೆತ್ತಲಾಗುತ್ತದೆ. ಕೋಲನ್ನು ಆ ಕಡೆ ಈ ಕಡೆ ಗಾಳಿಯಲ್ಲಿ ತೂಗಾಡಿಸುತ್ತಾ ಸಿಡಿಬಂಡಿಯು ಮೆರವಣಿಗೆಯಲ್ಲಿ ಹೋಗುತ್ತದೆ. ಆ ವ್ಯಕ್ತಿಯ ಒಂದು ಕೈಯಲ್ಲಿ&nbsp; ಕತ್ತಿ ಇರುತ್ತದೆ. ಎಲ್ಲಾ ಮುಗಿದ ನಂತರ ಆ ವ್ಯಕ್ತಿಯನ್ನು ಕೆಳಗಿಳಿಸಲಾಗುತ್ತದೆ. ತೀರಾ ಅಪಾಯಕಾರಿಯಾದ, ಅಪಾರ ನೋವು ಮತ್ತು ದೇಹಹಾನಿ ಉಂಟುಮಾಡುವ ಈ ಆಚರಣೆ ಯಾಕಾಗಿ ಮಾಡುತ್ತಾರೋ! ಈ ರೀತಿ ಇರುವುದನ್ನು ಬಂಡಿ ಸಿಡಿ ಎನ್ನುತ್ತಾರೆ. ಕೆಲವು ಕಡೆ ಸಿಡಿಮರವು ಒಂದೇ ಜಾಗದಲ್ಲಿ ಇರುತ್ತದೆ. ಬೇರೆಬೇರೆ ಊರುಗಳಲ್ಲಿ ಬೇರೆಬೇರೆ ವಿಧಿವಿಧಾನಗಳಿವೆ. ಕೆಲವು ಕಡೆ ತೊಟ್ಟಿಲು ಸಿಡಿ ಇತ್ತು. ಅದರಲ್ಲಿ ಕೊಕ್ಕೆಯಲ್ಲಿ ಸಿಕ್ಕಿಸುವ ಬದಲು ತೊಟ್ಟಿಲಲ್ಲಿ ಕುಳ್ಳಿರಿಸಲಾಗುತ್ತದೆ. ಇನ್ನೂ ಕೆಲವು ಕಡೆಗಳಲ್ಲಿ ಕೊಕ್ಕೆಯ ಬದಲು ಸೊಂಟಕ್ಕೆ ಕಟ್ಟಿ ತೂಗಾಡಿಸಲಾಗುತ್ತದೆ. ಇನ್ನೂ ಕೆಲವು ಕಡೆಗಳಲ್ಲಿ ಮನುಷ್ಯರ ಬದಲು ಗೊಂಬೆಗಳನ್ನು ತೂಗಾಡಿಸಲಾಗುತ್ತದೆ. ಇವು ಬಹುಶಃ ಈ ಹಿಂಸಾತ್ಮಕ ಆಚರಣೆಗೆ ಕಾಲಕ್ರಮೇಣ ಮಾಡಲಾದ ಪರಿಷ್ಕರಣೆ ಅಥವಾ ಸುಧಾರಣೆಗಳಾಗಿರಬಹುದು.</p>



<p>ಅಫ್ಜಲ್ ಪುರ ತಾಲೂಕಿನ ಘತ್ತರಗಿಯಲ್ಲಿ ಭೀಮಾ ನದಿದಡದ ಬಾಗಮ್ಮನ ಗುಡಿಯಿದೆ. ದಾಖಲಾತಿ ಕಾಲಕ್ಕೆ ಬೇರೆಬೇರೆ ಊರುಗಳಿಂದ ಬರುವ ಸಿಡಿಯಾಡುವವರಿಗೆ ಉಳಿದುಕೊಳ್ಳಲು ಪ್ರತ್ಯೇಕ ಕೋಣೆಗಳೂ ಇದ್ದವು. ಇಲ್ಲಿ ಎರಡು ಗಾಲಿಗಳ ಇಲ್ಲಿನ ಸಿಡಿಬಂಡಿಯ ತೊಲೆ 40ರಿಂದ 50 ಅಡಿ ಉದ್ದವಿತ್ತು. ತೊಲೆಯ ಕೊನೆಗೆ ಹಗ್ಗದಿಂದ ಕಟ್ಟಿದ ಕೊಕ್ಕೆ ಇತ್ತು. ಪಕ್ಕವೇ ಇನ್ನೊಂದು ಹಗ್ಗವಿದ್ದು, ಇದನ್ನು ಸಿಡಿಯಾಡುವವರು ಆಧಾರವಾಗಿ ಬಳಸಿಕೊಳ್ಳಬಹುದು. ದೀಪಾವಳಿ ಕಾಲದಲ್ಲಿ ಈ ಸಿಡಿ ನಡೆಯುತ್ತಿತ್ತು. ಈ ದಾಖಲಾತಿ ಸಮಯದಲ್ಲಿ (ಎರಡು ದಶಕಗಳಿಗೂ ಹಿಂದೆ) ಇದೊಂದು ದೊಡ್ಡ ಮಟ್ಟದ ವ್ಯಾಪಾರ, ಆರ್ಥಿಕ ವಹಿವಾಟು ನಡೆಯುವ ಜಾತ್ರೆ. ಆ ವರ್ಷ 42 ಮಹಿಳೆಯರು, 18 ಪುರುಷರು ಮತ್ತು ಐವರು ಇತರರು ಸಿಡಿಯಾಡಲು ಬಂದಿದ್ದರು. ಮೊದಲ ಸಿಡಿ 4,751 ರೂ.ಗಳಿಗೆ ಹರಾಜಾಗಿದ್ದರೆ, 65ನೆಯದು 501 ರೂ.ಗಳಿಗೆ. ಇಲ್ಲಿ ನದಿಯಲ್ಲಿ ಸ್ನಾನ ಇತ್ಯಾದಿ ಹಲವು ವಿಧಿಗಳಿದ್ದು, ಅವುಗಳ ವಿವರಣೆ ನಮಗೆ ಸದ್ಯ ಬೇಡ. ಸಿಡಿ ಆಚರಣೆಯ ಹಿಂಸಾತ್ಮಕ ವಿಧಾನಗಳನ್ನು ಸರಕಾರ ಹಿಂದೇಯೇ ನಿಷೇದಿಸಿತ್ತು. ಸಿಡಿ ಆಚರಣೆಗೆ ಪರವಿರೋಧಗಳು ಸಮಾಜದ ನಡುವೆಯೇ ಇವೆ. ಸರಕಾರ ನಿಷೇಧಿಸಿದರೂ ಜನರ ಮನಃಪರಿವರ್ತನೆ ಆಗದೆ ಹೆಚ್ಚಿನ ಪ್ರಯೋಜನವೇನೂ ಇಲ್ಲ.</p>



<p>ಯಾಕೆಂದರೆ, ನಿಷೇಧದ ಹೊರತಾಗಿಯೂ ವರ್ಷಗಳಿಂದ ಸಿಡಿ ಆಚರಣೆಯು ಅಲ್ಲಲ್ಲಿ ನಡೆಯುತ್ತಲೇ ಬಂದಿದೆ. ಕೆಲವು ಕಡೆ ಸಂಘಟಕರ ವಿರುದ್ಧ ಕೇಸುಗಳು ಕೂಡಾ ದಾಖಲಾಗುತ್ತಾ ಬಂದಿವೆ. ದಲಿತ ಸಂಘಟನೆಗಳ ಪ್ರತಿಭಟನೆಗಳು ಕೂಡಾ ನಡೆಯುತ್ತಲೇ ಬಂದಿವೆ. 2024ರ ಪತ್ರಿಕಾ ವರದಿಗಳನ್ನು, ಯೂಟ್ಯೂಬ್ ವಿಡಿಯೋಗಳನ್ನು ನೋಡಿದರೂ ಸಾಕು. ಹಲವಾರು ಕಡೆಗಳಲ್ಲಿ ಸಿಡಿ ಆಚರಣೆಯು ನಡೆದಿರುವುದು ತಿಳಿಯುತ್ತದೆ. ಉದಾಹರಣೆಗೆ ಮಂಡ್ಯ ಜಿಲ್ಲೆಯ ಸಂತೆ ಕೆಸಲಕೆರೆ‌, ಚಳ್ಳಕೆರೆ ತಾಲೂಕಿನ ಗೌರಸಮುದ್ರ ಬಳಿಯ ತುಮಲಿ ಮಾರಮ್ಮನ ಜಾತ್ರೆ…ಹೀಗೆ. ಅವುಗಳ ಪಟ್ಟಿಯನ್ನಿಲ್ಲಿ ನೀಡಲು ಹೋಗುವುದಿಲ್ಲ.</p>



<p>ನಂಬಿಕೆ ಮತ್ತು ಧರ್ಮಾಚರಣೆಯ ಹೆಸರಿನಲ್ಲಿ ಬಿಜೆಪಿ ಮತ್ತು ಕೆಲವು ಬಲಪಂಥೀಯ ಸಂಘಟನೆಗಳು ಸಿಡಿ ಆಚರಣೆಯನ್ನು ಬೆಂಬಲಿಸುತ್ತಿವೆ ಮತ್ತು ಈಗಾಗಲೇ ನಿಂತಿರುವ ಕಡೆಗಳಲ್ಲೂ ಈ ಆಚರಣೆಯನ್ನು ಮತ್ತೆ ಆರಂಭಿಸಿವೆ. ಕೆಲವು ಪತ್ರಿಕೆಗಳು ಮತ್ತು ಟಿವಿ ಮಾಧ್ಯಮಗಳು ಇವುಗಳನ್ನು ಅಮಾನವೀಯ ಎಂದು ಕರೆದು ಆಕ್ಷೇಪದ ಧ್ವನಿಯಲ್ಲಿ ವರದಿ ಮಾಡಿದ್ದರೆ, ಇನ್ನೂ ಕೆಲವು “ಭಕ್ತರು ಭಾವಪರವಶರಾಗಿ ಈ ಸಾಂಸ್ಕೃತಿಕ ಆಚರಣೆಯನ್ನು ಕಣ್ತುಂಬಿಕೊಂಡರು” ಇತ್ಯಾದಿಯಾಗಿ ಈ ಆಚರಣೆಯನ್ನು ವೈಭವೀಕರಿಸಿ ಅತಿರಂಜಿತವಾಗಿ ವರ್ಣಿಸಿವೆ. ಇದಕ್ಕೆ ಒಂದು ಸಾಕ್ಷ್ಯವಾಗಿ ಹೇಳಬೇಕೆಂದರೆ , ಈ ಆಚರಣೆಗೆ ಕಾನೂನು ಪ್ರಕಾರ ನಿಷೇಧವಿದ್ದರೂ, ದಾವಣಗೆರೆ ತಾಲೂಕಿನ ಕೆಂಚಿಕೊಪ್ಪ ಗ್ರಾಮದ ಮಾಯಮ್ಮ, ಮರಿಯಮ್ಮ ದೇವಿಯರ ಜೋಡಿ ಸಿಡಿ ಉತ್ಸವ ಕಳೆದ ಸಲ ಶಾಸಕ ಎಂ.ಪಿ. ರೇಣುಕಾಚಾರ್ಯ ಎದುರೇ ನಡೆದು ವಿವಾದಕ್ಕೆ ಕಾರಣವಾಗಿತ್ತು.</p>



<p>ಇಂತಾ ಪ್ರಕರಣಗಳಲ್ಲಿ ಮುಂದೆ ಯಾವ ಕ್ರಮ ಕೈಗೊಳ್ಳಲಾಯಿತು ಎಂಬ ಬಗ್ಗೆ ಯಾರೂ ನಿಗಾ ಇಟ್ಟಂತೆ ಅಥವಾ ಕಾಳಜಿ ವಹಿಸಿದಂತೆ ಕಾಣುವುದಿಲ್ಲ. ತೀರಾ ಹಿಂಸಾತ್ಮಕವಾದ ಕೊಕ್ಕೆ ಸಿಡಿಯ ವರದಿಗಳು ನೋಡಲು ಸಿಗದಿರುವುದೇ ಒಂದು ಸಮಾಧಾನ. ಸರಕಾರ ಸದ್ಯಕ್ಕೆ ಒಂದೋ ಹಿಂಸಾತ್ಮಕವಲ್ಲದ ಸರಳ, ಸಾಂಕೇತಿಕ ಆಚರಣೆಗೆ ಅವಕಾಶ ಮಾಡಿಕೊಡಬೇಕು; ಇಲ್ಲವೇ ಕಾನೂನು ಉಲ್ಲಂಘಿಸುವವರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ತಾನೇ ಅನುಷ್ಟಾನಗೊಳಿಸಲು ಆಗದ, ಅಥವಾ ಅನುಷ್ಟಾನಗೊಳಿಸಲು ಮನಸ್ಸಿಲ್ಲದ ಕತ್ತೆ ಕಾನೂನು ತಂದಾದರೂ ಏನು ಪ್ರಯೋಜನ?</p>



<p><strong>ಸ್ವಯಂ ಹಿಂಸೆ, ಬಾಯಿಗೆ ಬೀಗ</strong><br>ಸ್ವಯಂ ಹಿಂಸೆಯ ಆಚರಣೆ ಬೇರೆಬೇರೆ ಕಡೆ ಬೇರೆಬೇರೆ ರೀತಿಯಲ್ಲಿ ಇವೆ. ಕಲಬುರ್ಗಿಯ ಬೂಪಾಲ ತ್ಯಾಗನೂರು, ಅಳಂದ ತಾಲೂಕಿನ ಹಡಗಲಿ, ಧಾರವಾಡ ಜಿಲ್ಲೆಯ ಹಡಗಲಿ ತಾಲೂಕಿನ ಕಮತಗಿ, ಬಳ್ಳಾರಿಯ ಹಂಪಿ ಮುಂತಾದ ಕಡೆಗಳಲ್ಲಿ ಮಾದಿಗ ಜನಾಂಗದವರು ಹರಕೆ ಹೊತ್ತು ಮೈಗೆ ಕೊಕ್ಕೆಗಳನ್ನು ಸಿಕ್ಕಿಸಿ ಸ್ವಯಂ ಹಿಂಸೆ ಅನುಭವಿಸುವುದು ಕಂಡುಬಂದಿತ್ತು. ಸ್ವಯಂ ಹಿಂಸೆಯು ಮುಸ್ಲಿಮರ ಮುಖ್ಯವಾಗಿ ಶಿಯಾ ಪಂಗಡದಲ್ಲಿಯೂ ಇದೆ. ಮೊಹರಂ ಸಮಯದಲ್ಲಿ ಮುಖ್ಯವಾಗಿ ಉತ್ತರ ಕರ್ನಾಟಕದ ಶಿಯಾ ಸಮುದಾಯದವರು ಮೊಹಮ್ಮದ್ ಪೈಗಂಬರ್ ಅವರ ಮೊಮ್ಮಗಳಾದ ಹಸನ್ ಮತ್ತು ಹುಸೇನ್ ಕಾದಾಡಿದ ಕರ್ಬಲಾ ಯುದ್ಧದ ನೆನಪಿನಲ್ಲಿ ನಡೆಯುವ ಮೆರವಣಿಗೆಯಲ್ಲಿ ಆವೇಶದಿಂದ ಕುಣಿಯುತ್ತಾ, ಕೊರಡೆ ಮತ್ತಿತರ ಆಯುಧಗಳಿಂದ ಮೈಗೆ ಹೊಡೆದುಕೊಂಡು ಸ್ವಯಂ ಗಾಯ ಮಾಡಿಕೊಳ್ಳುವುದು ನಡೆಯುತ್ತದೆ. ಇದು ಇಸ್ಲಾಮೇತರ ಆಚಾರ ಎಂದು ವಿರೋಧಿಸುವ ಪ್ರಬಲ ವರ್ಗವೊಂದು ಮುಸ್ಲಿಮರಲ್ಲೇ ಇದೆ.</p>



<p>ಇದಕ್ಕೆ ಕಲಶವಿಟ್ಟಂತೆ ಮಂಡ್ಯದ ಕೆಲವು ಕಡೆ ಬಾಯಿಗೆ ಬೀಗ ಎಂಬ ಆಚರಣೆಯೊಂದು ನಡೆಯುತ್ತಿತ್ತು. ಇದರಲ್ಲಿ ಪುರುಷರು ಮತ್ತು ಮಹಿಳೆಯರು ಬಾಯಿಗೆ ಅಡ್ಡವಾಗಿ ಅಥವಾ ನಾಲಗೆಗೆ ಲಂಬವಾಗಿ ಸರಳುಗಳನ್ನು ಚುಚ್ಚಿಕೊಳ್ಳುತ್ತಾರೆ. ದಾಖಲಾತಿ ನಡೆದ ಸಮಯದಲ್ಲಿ ಒಂದು ಕಡೆ ಒಂಭತ್ತು ಪುರುಷರು ಮತ್ತು ಮೂವರು ಮಹಿಳೆಯರು ಈ ಆಚರಣೆಯಲ್ಲಿ ಭಾಗವಹಿಸಿದ್ದರು. ವಣ್ಣಿಯರ್ ಭಕ್ತ ಮಂಡಲಿ ಎಂಬ ಹೆಸರಿನಲ್ಲಿ ನಡೆದ ಈ ಆಚರಣೆಯಲ್ಲಿ ಒಬ್ಬರು ಮಹಿಳೆ 12 ಅಡಿ ಉದ್ದದ ಸರಳೊಂದನ್ನು ಬಾಯಿಗೆ ಅಡ್ಡಲಾಗಿ ಚುಚ್ಚಿಕೊಂಡಿದ್ದೇ ಅಲ್ಲದೇ, ಅದು ಸಾಲದು ಎಂಬಂತೆ, ಡಬ್ಬಣದ ಮೂಲಕ ಮೈಗೆ ನಿಂಬೆಹಣ್ಣುಗಳನ್ನೂ ಚುಚ್ಚಿಕೊಂಡಿದ್ದರು! ಈ ಚಿತ್ರವು ಕೆಲವು ಪತ್ರಿಕೆಗಳಲ್ಲಿಯೂ ಪ್ರಕಟವಾಗಿತ್ತು.</p>



<p>ಹರಕೆ ಹೊತ್ತು ಕಳವು ಮಾಡುವ ಒಂದು ಪದ್ಧತಿ ಉತ್ತರ ಕನ್ನಡದ ಒಂದು ದೇವಾಲಯದಲ್ಲಿ ನಡೆಯುತ್ತಿತ್ತು. ಅಲ್ಲಿ ದೇವರಿಗೆ ಬೇರೆಬೇರೆ ರೀತಿಯಲ್ಲಿ ಹರಕೆ ಹೊರುವ ಹಾಗೆ ಜನರು ಕಳ್ಳತನದ ಹರಕೆ ಹೊರುತ್ತಿದ್ದರು. ಹೀಗೆ ಕಳವು ಮಾಡಿದ ಸೊತ್ತನ್ನು ದೇವಾಲಯಕ್ಕೆ ಸಲ್ಲಿಸಬೇಕು ಎಂಬುದು ವಿಪರ್ಯಾಸ! ಸಿಕ್ಕಿಬಿದ್ದರೆ ಏಟು ತಿನ್ನಬೇಕಾದವರು ಒಬ್ಬರು, ಕಳ್ಳಮಾಲನ್ನು ಅನುಭವಿಸುವವರು ಬೇರೊಬ್ಬರು! ಇಂತಾ ಒಂದು ವಂಚಕ ಹರಕೆ ರೂಪಿಸಿದವರ ಚಾಲಾಕಿತನವನ್ನು ಮೆಚ್ಚಲೇಬೇಕು. ಹಾಗೆಂದು ಶಿವರಾತ್ರಿಯಂದು ಕಳವು ಮಾಡುವುದು ಕರಾವಳಿಯಲ್ಲಿ ಸಾಮಾನ್ಯವೇ ಆಗಿತ್ತು. ಶಿವರಾತ್ರಿಯಂದು ಜಾಗರಣೆ ಇರಬೇಕು. ರಾತ್ರಿ ಹೊತ್ತು ಕಳವು ಮಾಡುವವರೂ, ಕಾಯುವವರೂ ಜಾಗರಣೆ ಮಾಡಲೆಂದು ಈ ಪದ್ಧತಿ ತರಲಾಗಿದೆ ಎಂಬ ಸಮಜಾಯಿಶಿಯೂ ಇತ್ತು. ಸಾಮಾನ್ಯವಾಗಿ ಬೇರೆಯವರ ತರಕಾರಿ, ತೆಂಗಿನಕಾಯಿ ಕದ್ದು, ಬೇರೆಯವರ ಮನೆಯ, ವಿಶೇಷವಾಗಿ ಬಡವರ ಮನೆಯ ಮುಂದೆ ಇಡುವುದು, ಮನೆ ಮಾಡಿಗೆ ಕಲ್ಲೆಸೆಯುವುದು, ವಸ್ತುಗಳನ್ನು ಕದ್ದು ಎಲ್ಲೆಲ್ಲಿಯೋ ಇಡುವುದು ಇತ್ಯಾದಿ ಕಿಡಿಗೇಡಿ ಕೃತ್ಯಗಳು ಸಾಮಾನ್ಯವಾಗಿದ್ದವು, ಮನರಂಜಕವಾಗಿಯೂ ಇದ್ದವು. ಇದು ಅತಿರೇಕವಾಗಿ ಸಾರ್ವಜನಿಕ ರಸ್ತೆಗಳಿಗೆ ಕಲ್ಲು ಉರುಳಿಸಿ ತಡೆ ಮಾಡುವುದು, ಬೆಳೆಗಳನ್ನು ಹಾಳುಮಾಡುವುದು, ತಮಗಾಗದವರ ಮನೆ ಮುಂದೆ ಮಲವಿಸರ್ಜನೆ ಮಾಡುವುದು, ಲಾಭಕ್ಕೆಂದೇ ಕದಿಯುವುದು ಇವೆಲ್ಲ ಕೂಡಾ ಮಿತಿ ಮೀರಿ ನಡೆಯುತ್ತಿದ್ದವು. ರಾತ್ರಿಯಿಡೀ ಇಸ್ಪೀಟು ಭಜನೆ ಇರುತ್ತಿತ್ತು. ಇವೆಲ್ಲವೂ ಕಾಲಕ್ರಮೇಣ ಕಡಿಮೆಯಾಗಿ ಇಲ್ಲವೇ ಎನ್ನುವಷ್ಟು ಕಡಿಮೆಯಾಗಿವೆ.</p>



<p>ಆದರೆ, ಧರ್ಮದ ಹೆಸರಿನಲ್ಲಿ ನಡೆಯುವ ಇಂತಾ ಆಚರಣೆಗಳಲ್ಲಿ ಭಕ್ತಿಶ್ರದ್ಧೆಗಳು ಮಾಯವಾಗಿ ಮನರಂಜನೆಯೇ ಉದ್ದೇಶವಾಗಿದೆ, ಆಧ್ಯಾತ್ಮಿಕತೆ ಮಾಯವಾಗಿ ಕಾಟಾಚಾರಗಳಷ್ಟೇ ಉಳಿದಿವೆ ತಿರುಳು ಮಾಯವಾಗಿ, ಚಿಪ್ಪನ್ನೇ ಜಗಿಯಲಾಗುತ್ತಿದೆಎಂಬುದನ್ನು ಇದು ಸೂಚಿಸುತ್ತದೆ. ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಇನ್ನೂ ಕೆಲವು ವಿಚಿತ್ರ ಆಚರಣೆಗಳನ್ನು ಮುಂದಿನ ಕಂತಿನಲ್ಲಿ ಚುಟುಕಾಗಿ ನೋಡಿ ಮುಗಿಸೋಣ.</p>
]]></content:encoded>
					
		
		
			</item>
		<item>
		<title>ಬೊಗಸೆಗೆ ದಕ್ಕಿದ್ದು-52 : ಬಿದಿರು ಮೆಳೆ ಉತ್ಸವ, ಸಾಮೂಹಿಕ ಸಂಭೋಗ, ಬೆತ್ತಲೆ ತಿರುಗಾಟ…!</title>
		<link>https://peepalmedia.com/bamboo-shoot-festival-mass-sex-naked-walking-around/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 25 Sep 2025 04:18:18 +0000</pubDate>
				<category><![CDATA[ಅಂಕಣ]]></category>
		<category><![CDATA[ಇತಿಹಾಸ]]></category>
		<guid isPermaLink="false">https://peepalmedia.com/?p=66733</guid>

					<description><![CDATA[&#8220;..ಮಹಿಳಾ ಶೋಷಣೆಯ ಅಮಾನವೀಯ ಹೆರಿಗೆ, ಬೆತ್ತಲೆ ಸೇವೆ, ಅರೆಬೆತ್ತಲೆ ಸೇವೆ ಅಥವಾ ಬೇವಿನುಡುಗೆ ಬಗ್ಗೆ ಇಲ್ಲಿ ನೋಡಿದ್ದೇವೆ. ಇನ್ನೂ ಕೆಲವು ಲೈಂಗಿಕತೆ ಸಂಬಂಧಿ ಆಚರಣೆಗಳನ್ನು ಈಗ ನೋಡೋಣ..&#8221; ನಿಖಿಲ್ ಕೋಲ್ಪೆಯವರ ಬರಹದಲ್ಲಿ ಉಳ್ಳವರು ಮತ್ತು ಮೇಲು ಜಾತಿ ಎಂದು ಕರೆದುಕೊಳ್ಳುವವರು ತಮಗಿಂತ ದುರ್ಬಲರನ್ನು, ಅದರಲ್ಲೂ ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಶೋಷಿಸಲು ಧರ್ಮದ ಹೆಸರಿನಲ್ಲಿ ಹಲವಾರು ದಾರಿಗಳನ್ನು ಕಂಡುಕೊಂಡಿದ್ದಾರೆ. ಇದರಲ್ಲಿ ಈ ಕೆಳಜಾತಿ ಎನಿಸಿಕೊಳ್ಳುವ, ಹಿಂದುಳಿದ ಜಾತಿಗಳ ಬಲಾಢ್ಯರೂ ಸೇರಿಕೊಂಡಿರುವುದರಲ್ಲಿ ಯಾವುದೇ ಆಶ್ಚರ್ಯ ಇಲ್ಲ. ಕೆಲವು ಸಲ ಕೇವಲ ಅಜ್ಞಾನ, [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>&#8220;..ಮಹಿಳಾ ಶೋಷಣೆಯ ಅಮಾನವೀಯ ಹೆರಿಗೆ, ಬೆತ್ತಲೆ ಸೇವೆ, ಅರೆಬೆತ್ತಲೆ ಸೇವೆ ಅಥವಾ ಬೇವಿನುಡುಗೆ ಬಗ್ಗೆ ಇಲ್ಲಿ ನೋಡಿದ್ದೇವೆ. ಇನ್ನೂ ಕೆಲವು ಲೈಂಗಿಕತೆ ಸಂಬಂಧಿ ಆಚರಣೆಗಳನ್ನು ಈಗ ನೋಡೋಣ..&#8221; ನಿಖಿಲ್ ಕೋಲ್ಪೆಯವರ ಬರಹದಲ್ಲಿ</p>
</blockquote>



<p>ಉಳ್ಳವರು ಮತ್ತು ಮೇಲು ಜಾತಿ ಎಂದು ಕರೆದುಕೊಳ್ಳುವವರು ತಮಗಿಂತ ದುರ್ಬಲರನ್ನು, ಅದರಲ್ಲೂ ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಶೋಷಿಸಲು ಧರ್ಮದ ಹೆಸರಿನಲ್ಲಿ ಹಲವಾರು ದಾರಿಗಳನ್ನು ಕಂಡುಕೊಂಡಿದ್ದಾರೆ. ಇದರಲ್ಲಿ ಈ ಕೆಳಜಾತಿ ಎನಿಸಿಕೊಳ್ಳುವ, ಹಿಂದುಳಿದ ಜಾತಿಗಳ ಬಲಾಢ್ಯರೂ ಸೇರಿಕೊಂಡಿರುವುದರಲ್ಲಿ ಯಾವುದೇ ಆಶ್ಚರ್ಯ ಇಲ್ಲ. ಕೆಲವು ಸಲ ಕೇವಲ ಅಜ್ಞಾನ, ಭಯ, ಒತ್ತಡ, ಲಾಲಸೆ ಮತ್ತು ಮೂಢನಂಬಿಕೆಗಳೇ ಜನರನ್ನು ಬಲಿಪಶುಗಳನ್ನಾಗಿ ಮಾಡುತ್ತವೆ. ಪ್ರತಿಭಟಿಸದಿರುವ ಮತ್ತು ವಿರೋಧಿಸದೇ ಒಪ್ಪಿಕೊಳ್ಳುವ ಸಾಮೂಹಿಕ ಮನೋಭಾವವೇ ಇವುಗಳನ್ನು ಮುಂದುವರಿಸಿಕೊಂಡು ಹೋಗಲು ಅನುಕೂಲವಾಗುತ್ತದೆ. ಕೇವಲ ಸರಕಾರದ ಮತ್ತು ಕೆಲವು ಸಂಘಸಂಸ್ಥೆಗಳ ಪ್ರಯತ್ನಗಳಷ್ಟೇ ಸಾಲವು. ಮಹಿಳಾ ಶೋಷಣೆಯ ಅಮಾನವೀಯ ಹೆರಿಗೆ, ಬೆತ್ತಲೆ ಸೇವೆ, ಅರೆಬೆತ್ತಲೆ ಸೇವೆ ಅಥವಾ ಬೇವಿನುಡುಗೆ ಬಗ್ಗೆ ಇಲ್ಲಿ ನೋಡಿದ್ದೇವೆ. ಇನ್ನೂ ಕೆಲವು ಲೈಂಗಿಕತೆ ಸಂಬಂಧಿ ಆಚರಣೆಗಳನ್ನು ಈಗ ನೋಡೋಣ. ಇವೆಲ್ಲವೂ ಹಿಂದೆ ಹೇಳಿರುವ ಎರಡು ದಶಕಗಳ ಹಿಂದೆ ನಡೆದ ಸರಕಾರಿ ಪ್ರಾಯೋಜಿತ ಕಿರು ದಾಖಲಾತಿ ಕಾರ್ಯಕ್ರಮದಲ್ಲಿ ಕಂಡುಬಂದವುಗಳ ಮೇಲೆ ಆಧರಿತವಾದದ್ದು ಮತ್ತು ಪ್ರಸ್ತುತ ಪರಿಸ್ಥಿತಿ ಏನು ಎಂಬ ಬಗ್ಗೆ ತಿಳಿದುಕೊಳ್ಳಲು ನನಗೆ ಯಾವುದೇ ಅವಕಾಶ ಅಥವಾ ಸಾಧ್ಯತೆಗಳಿಲ್ಲ ಎಂದು ಮತ್ತೆಮತ್ತೆ ಸ್ಪಷ್ಟಪಡಿಸಬೇಕಾಗಿದೆ.</p>



<p>ತಮಗೆ ಗುರುತು ಪರಿಚಯ ಇಲ್ಲದವರ ಜೊತೆ ಲೈಂಗಿಕ ಸಂಬಂಧ ಬೆಳೆಸುವುದು, ಮಕ್ಕಳಿಲ್ಲದವರು ಮಕ್ಕಳಾಗುವ ಆಸೆಯಿಂದ ಅಪರಿಚಿತರ ಜೊತೆಗೆ ದೇವರ ಹೆಸರಿನಲ್ಲಿ ಲೈಂಗಿಕ ಸಂಬಂಧ ಬೆಳೆಸುವುದು, ಮಕ್ಕಳಾಗುತ್ತವೆ ಎಂದು ನಂಬಿ ಮಹಿಳೆಯರು ರಾತ್ರಿಯ ಸಮಯದಲ್ಲಿ ಬೆತ್ತಲಾಗಿ ಊರಲ್ಲಿ ಸುತ್ತುವುದು ಇತ್ಯಾದಿ ಅಮಾನವೀಯ ಆಚರಣೆಗಳು ನಮ್ಮ ಕರ್ನಾಟಕದಲ್ಲಿ ನಡೆಯುತ್ತವೆ ಎಂದರೆ ಎಲ್ಲರಿಗೂ ಆಶ್ಚರ್ಯ ಆಗಬಹುದು. ಆದರೆ, ಮೇಲೆ ಹೇಳಿದ ದಾಖಲಾತಿಯ ಸಮಯದಲ್ಲಿ ಇವೆಲ್ಲವೂ ನಡೆಯುತ್ತಿದ್ದವು. ಈಗಲೂ ನಡೆಯುತ್ತಿವೆಯೋ ಎಂಬುದನ್ನು ತಮ್ಮ ಸುತ್ತಮುತ್ತಲೂ ಗಮನಿಸಿ, ಓದುಗರಾದ ನೀವೇ ಹೇಳಬೇಕು.</p>



<p>ದಾಖಲಾತಿಯ ವೇಳೆಯಲ್ಲಿ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿ ರಂಗನ ಬೆಟ್ಟ ಪರಿಸರದಲ್ಲಿ, ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕೆಂಗೊಂಡ, ಕಲಬುರ್ಗಿ ಜಿಲ್ಲೆಯ ಭೂಪಾಲ ತ್ಯಾಗನೂರು ಗ್ರಾಮದಲ್ಲಿ ಈ ರೀತಿಯ ಆಚರಣೆಗಳು ನಡೆಯುತ್ತಿದ್ದವು. ಚಾಮರಾಜನಗರ ಜಿಲ್ಲೆಯ ನಂಜನಗೂಡಿನಲ್ಲಿ, ತುಮಕೂರಿನ ದೇವರಾಯ ಬೆಟ್ಟದ ಬಳಿ, ಮಂಡ್ಯ ಜಿಲ್ಲೆಯ ಮಳವಳ್ಳಿಯ ಒಂದು ದೇವಾಲಯದ ಜಾತ್ರೆಯ ಸಮಯದಲ್ಲಿ ಇಂತಾ ಆಚರಣೆಗಳು ನಡೆಯುತ್ತಿವೆ ಎಂಬ ಪ್ರಾಥಮಿಕ ಮಾಹಿತಿಗಳಿದ್ದರೂ, ಅವುಗಳನ್ನು ಆಗ ದೃಢಪಡಿಸಿಕೊಳ್ಳಲು ಆಗಿರಲಿಲ್ಲ.</p>



<p><strong>ಬಿದಿರುಮೆಳೆ ಉತ್ಸವ</strong><br>ರಾಜ್ಯದ ಪ್ರಮುಖ ಪ್ರವಾಸಿ ತಾಣವಾದ ಬಿಳಿಗಿರಿರಂಗನ ಬೆಟ್ಟದ ಸುತ್ತಮುತ್ತಲಿನ ಪ್ರದೇಶಗಳು ವನ್ಯಜೀವಿಗಳಿಗಷ್ಟೇ ಅಲ್ಲದೇ ಸೋಲಿಗರೂ ಸೇರಿದಂತೆ ಬುಡಕಟ್ಟು ಜನರಿಗೆ ಆಶ್ರಯ ತಾಣ. ಇಲ್ಲಿನ ಬಿಳಿಗಿರಿ ರಂಗನಾಥಸ್ವಾಮಿ ಅಥವಾ ರಂಗಯ್ಯ ದೇವಸ್ಥಾನ ಬಹಳ ಪ್ರಸಿದ್ಧ. ರಂಗಯ್ಯ ಸೋಲಿಗರ ಹೆಣ್ಣನ್ನು ಮದುವೆಯಾಗಿ ಇಲ್ಲಿಯೇ ನೆಲೆಸಿದ, ಅವನು ತಮ್ಮ ಹತ್ತಿರದ&nbsp; ಸಂಬಂಧಿ ಎಂಬ ಖಚಿತ ನಂಬಿಕೆ ಸೋಲಿಗರಿಗೆ.</p>



<p>ಪ್ರತೀ ವರ್ಷ ನಡೆಯುವ ಜಾತ್ರೆಯಲ್ಲಿ ಬೇರೆಬೇರೆ ಕಡೆಗಳಿಂದ ಸಾವಿರಾರು ಜನರು ಸೇರುತ್ತಾರೆ. ಸೋಲಿಗರೂ ಬಂದು ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಹೀಗೆ ಬಂದ ಸೋಲಿಗರಲ್ಲಿ ಒಂದು ವರ್ಗದ ಮಂದಿ ಒಂದು ವಿಲಕ್ಷಣ ಸಂಪ್ರದಾಯ ಅನುಸರಿಸುತ್ತಿದ್ದರು. ಅದಕ್ಕೆ ಬಿದಿರುಮೆಳೆ ಉತ್ಸವ ಎಂದು ಹೆಸರು. ಆಗ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳ ಬಿದಿರುಮೆಳೆಗಳ ನಡುವೆ ಸೋಲಿಗ ಮಹಿಳೆಯರು ಅಪರಿಚಿತ ಪುರುಷರೊಂದಿಗೆ ಲೈಂಗಿಕ ಕ್ರಿಯೆಗಳಲ್ಲಿ ಪಾಲುಗೊಳ್ಳುತ್ತಾರೆ. ಹರಕೆಯ ರೂಪದಲ್ಲಿಯೂ ಕೆಲವರು ಭಾಗವಹಿಸುತ್ತಾರೆ.</p>



<p>ತಮ್ಮ ಸಂಬಂಧಿ, ಎಂದರೆ ಬಾವನಾದ ರಂಗನಾಥನ ಮನರಂಜನೆಗಾಗಿ ಇದನ್ನು ಮಾಡುತ್ತೇವೆ ಎಂಬುದು ಅವರ ಬಲವಾದ ನಂಬಿಕೆ! ವಿಶೇಷವೆಂದರೆ, ಇದರಲ್ಲಿ ಭಾಗವಹಿಸುವವರೆಲ್ಲರೂ ಸೋಲಿಗ ಮಹಿಳೆಯರಾಗಿದ್ದರೂ, ಅದರ ದುರ್ಲಾಭ ಪಡೆಯುವವರು ಸೋಲಿಗರಲ್ಲದೇ ಬೇರೆಬೇರೆ ಜನಾಂಗಗಳ ಪುರುಷರಾಗಿರುತ್ತಾರೆ. ಆದಿಮ ಜನಾಂಗದ ಮುಕ್ತ ಲೈಂಗಿಕತೆಯ ಸಂಕೇತವಾದ ಆಚರಣೆ ಇದಾಗಿರಬಹುದಾದರೂ, ಇದನ್ನೊಂದು ಶೋಷಕ ವ್ಯವಸ್ಥೆಯನ್ನಾಗಿ ಆಚರಣೆಗೆ ತಂದವರು ಯಾರು ಮತ್ತು ಯಾವತ್ತಿನಿಂದ ಇದು ನಡೆಯುತ್ತಿತ್ತು ಎಂಬುದು ಯಾರಿಗೂ ಗೊತ್ತಿಲ್ಲ. ಇಂತಾ ಸಂದರ್ಭಗಳ ಕಾರಣದಿಂದ ಮಕ್ಕಳೇನಾದರೂ ಹುಟ್ಟಿದರೆ, ಅವುಗಳನ್ನು ಬಿಳಿಗಿರಿರಂಗನ ಪ್ರಸಾದ ಎಂದು ಭಾವಿಸಿ, ಯಾವುದೇ ಭೇದಭಾವ ಮಾಡದೇ ಹಾಕುವಷ್ಟು ಈ ನಂಬಿಕೆ ಬಲವಾಗಿತ್ತು. ಈ ದಾಖಲಾತಿ ನಡೆದ ಹೊತ್ತಿಗೆ ಜಾತ್ರೆಯ ವೇಳೆಯಲ್ಲಿ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತಾದುದರಿಂದ ಎರಡು ಮೂರು ಕಿ.ಮೀ. ದೂರದೂರದಲ್ಲಿ ಇದು ನಡೆಯುತ್ತಿತ್ತು.&nbsp; ಈ ಕುರಿತು ಪ್ರತ್ಯಕ್ಷದರ್ಶಿ ಸಾಕ್ಷ್ಯವೂ ಇತ್ತು.</p>



<p><strong>ಸಾಮೂಹಿಕ ಸಂಭೋಗ</strong><br>ಈ ದಾಖಲಾತಿ ಹೊತ್ತಿಗೆ, ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕೆಂಗೊಂಡ ಎಂಬಲ್ಲಿ ನಡೆಯುವ ಜಾತ್ರೆಯು ಸಾಮೂಹಿಕ ಸಂಭೋಗಕ್ಕೆ ಕುಖ್ಯಾತವಾಗಿತ್ತು. ಲಂಬಾಣಿ ಸಮುದಾಯದ ಕೆಲವರು ಸೇರಿ ನಡೆಸುವ ಈ ಆಚರಣೆಯು ಮಧ್ಯರಾತ್ರಿ ಆರಂಭವಾಗಿ ಬೆಳಗ್ಗಿನ ಜಾವದ ತನಕ ನಡೆಯುತ್ತಿತ್ತು. ದೇವಾಲಯದ ಸುತ್ತಮುತ್ತಲಿನ ಗಿಡಗಂಟಿಗಳ ಮರೆಯಲ್ಲಿ ಮದ್ಯಪಾನ ಮಾಡಿ, ಸಾಮೂಹಿಕ ಮತ್ತು ಎಗ್ಗಿಲ್ಲದ ರೇವ್ ಪಾರ್ಟಿಯಂತೆ ಇದು ನಡೆಯುತ್ತಿತ್ತು. ಇದು ಎಷ್ಟು ಕುಖ್ಯಾತಿ ಪಡೆದಿತ್ತು ಎಂದರೆ, ಯಾರನ್ನಾದರೂ “ಕೆಂಕೊಂಡಕ್ ಹೋಗಿದ್ದಿ?” ಎಂದು ಚುಡಾಯಿಸುವುದು ಸಾಮಾನ್ಯವಾಗಿತ್ತು. ನಂತರ ಪೊಲೀಸರ ಬಿಗು ಕ್ರಮದಿಂದಾಗಿ ಇದು ಕಡಿಮೆಯಾಗಿತ್ತು ಎಂದು ಕೇಳಿದ್ದೇನೆ. ಕೆಲವು ಗುಡಿಗಳಲ್ಲಿ ಕೆಳ ವರ್ಗದ ದಂಪತಿಗಳು ಆವರಣದ ಒಳಗೆಯೇ ಈ ರೀತಿಯ ಸಾಮೂಹಿಕ ಆಚರಣೆ ನಡೆಸುತ್ತಾರೆ ಎಂದು ತಿಳಿದುಬಂದಿತ್ತಾದರೂ, ದಾಖಲಾತಿಯ ಸಂಪನ್ಮೂಲ ಮತ್ತು ಸಮಯದ ಸೀಮಿತತೆಯಲ್ಲಿ ಇದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.</p>



<p><strong>ಮಕ್ಕಳಾಗದವರ ಬೆತ್ತಲೆ ತಿರುಗಾಟ</strong><br>ಕಲಬುರ್ಗಿ ಜಿಲ್ಲೆಯ ಭೂಪಾಲ ತ್ಯಾಗನೂರು ಎಂಬಲ್ಲಿ ಊರಿನ ಮಾದಿಗ ಸಮುದಾಯದಲ್ಲಿ ಮದುವೆಯಾದ ಮಹಿಳೆಗೆ ಮಕ್ಕಳಾಗದೇ ಇದ್ದಲ್ಲಿ, ಆಕೆ ಬತ್ತಲಾಗಿ ಊರಿಡೀ ತಿರುಗಬೇಕು ಎಂದು ನಿರ್ಧರಿಸಲಾಗುತ್ತಿತ್ತು. ಈ ಅಮಾನವೀಯ ಪದ್ಧತಿಯಲ್ಲಿ ಆಕೆಯ ಸಂಬಂಧಿಕರು, ನೆರೆಹೊರೆಯವರು ಸ್ನಾನ ಮಾಡಿಸಿ, ಕೆಲವು ವಿಧಿವಿಧಾನಗಳೊಂದಿಗೆ ಅರಿಶಿನ ಕುಂಕುಮದಿಂದ ಅಲಂಕಾರ ಮಾಡುತ್ತಾರೆ. ಆಕೆ ರಾತ್ರಿಯ ವೇಳೆ ಮಾರಮ್ಮನ ಹೆಸರು ಹೇಳಿಕೊಂಡು ಬೆತ್ತಲೆಯಾಗಿ ಊರು ತಿರುಗಲು ಹೋಗುತ್ತಾಳೆ. ನಂತರ ಏನು ನಡೆಯುತ್ತದೆ ತಿಳಿಯದು. ಇಂತದ್ದೊಂದು ಪದ್ಧತಿ ಇರುವಲ್ಲಿ ಮಕ್ಕಳಾಗದ ಮಹಿಳೆಯ ಪರಿಸ್ಥಿತಿ ಹೇಗಿರಬಹುದೆಂದು ನೀವು ಊಹಿಸಬಹುದು.</p>



<p><strong>ಕುಲಗೂಡಿಸುವುದು, ನಾಲಿಗೆಗೆ ಬರೆ</strong><br>ಮಂಡ್ಯ ಜಿಲ್ಲೆಯ ಹಲವಾರು ಹಳ್ಳಿಗಳಲ್ಲಿ ಕುಲಗೂಡಿಸುವುದು ಎಂಬೊಂದು ಪದ್ಧತಿಯು ದಲಿತರು ಮತ್ತು ಹಿಂದುಳಿದ ಜಾತಿಗಳಲ್ಲಿ ಆಚರಣೆಯಲ್ಲಿತ್ತು. ಹೆಣ್ಣು ಕುಲಗೆಟ್ಟಿದ್ದಾಳೆ ಎಂದು ಭಾವಿಸಲಾದರೆ, ಆಕೆಯನ್ನು ಮತ್ತೆ ಕುಲಕ್ಕೆ ಸೇರಿಸಿಕೊಳ್ಳಲು ಈ ಆಚರಣೆ ನಡೆಯುತ್ತದೆ. ಆಕೆಯನ್ನು ಗಂಜಳ ಅಥವಾ ಸೆಗಣಿ ನೀರಿನಿಂದ ಸ್ನಾನ ಮಾಡಿಸಿ, ಅದನ್ನೇ ಆಕೆಗೆ ಕುಡಿಸುತ್ತಾರೆ. ನಂತರ ಬೆಳ್ಳಿಯ ಕಡ್ಡಿಯೊಂದನ್ನು ಕಾಯಿಸಿ, ಆಕೆಯ ನಾಲಗೆ ಬರೆ ಹಾಕಲಾಗುತ್ತದೆ.</p>



<p><strong>ದೇವಸ್ಥಾನದಲ್ಲಿ ಪತ್ನಿಗೆ ಹೊಡೆಸುವುದು</strong><br>ದೇವಸ್ಥಾನದಲ್ಲಿ ಪತ್ನಿಗೆ ಹೊಡೆಸುವ ವಿಲಕ್ಷಣ ಪದ್ಧತಿಯೊಂದು ಉತ್ತರ ಕನ್ನಡ ಜಿಲ್ಲೆಯ ಅನಿಲ್ಗೋಡು ಎಂಬ ಊರಿನಲ್ಲಿ ಆಚರಿಸಲಾಗುತ್ತಿತ್ತು. ಪತ್ನಿ ವಿವಾಹ ಬಾಹಿರ ಸಂಬಂಧ ಹೊಂದಿದ್ದಾಳೆ ಎಂದೇನಾದರೂ ಪತಿಗೆ ಸಂಶಯ ಬಂದರೆ, ಆತ ಊರಿನ ದೇವಾಲಯಕ್ಕೆ ದೂರು ನೀಡುತ್ತಾನೆ. ಅಲ್ಲಿನ ಪೂಜಾರಿಯು ಆಕೆ ತಪ್ಪೊಪ್ಪಿಕೊಳ್ಳುವ ತನಕ ಆಕೆಗೆ ಹೊಡೆದು “ಪ್ರಾಯಶ್ಚಿತ್ತ” ಮಾಡುತ್ತಾನೆ.</p>



<p><strong>ವಿಧವೆಯರಿಗೆ ವೇಶ್ಯೆಯರಿಂದ ಬೈಯ್ಯಿಸುವುದು</strong><br>ದಾಖಲಾತಿಯ ವೇಳೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಚಂದಾವರ ಎಂಬ ಊರಿನಲ್ಲಿ ಜಾತ್ರೆಯ ದಿನದಂದು ಊರಿನ ವಿಧವೆ ಮಹಿಳೆಯರನ್ನು ಅವಮಾನಕಾರಕವಾಗಿ ನಿಂದಿಸಲಾಗುತ್ತದೆ ಮತ್ತು ಅದಕ್ಕಾಗಿಯೇ ವಿಶೇಷವಾಗಿ ಪೇಟೆಯಿಂದ ವೇಶ್ಯೆಯರನ್ನು ಕರೆಸಲಾಗುತ್ತದೆ ಎಂಬುದು ಬೆಳಕಿಗೆ ಬಂದಿತ್ತು. ಆದರೆ, ಈ ಕುರಿತು ಮಾಹಿತಿ ನೀಡಲು ಯಾರೂ ಮುಂದೆ ಬಂದಿರಲಿಲ್ಲ.</p>



<p>ಇವೆಲ್ಲವೂ ನೇರವಾಗಿ ಮಹಿಳೆಯನ್ನು, ಮುಖ್ಯವಾಗಿ ಕೆಳಜಾತಿ ಎನಿಸಿಕೊಂಡಿರುವ ಮಹಿಳೆಯನ್ನು ಗುರಿ ಮಾಡಿರುವಂತ ಆಚರಣೆಗಳು. ಸದ್ಯ ಇರುವ ಕಾನೂನುಗಳ ವ್ಯಾಪ್ತಿಯಲ್ಲಿಯೇ ಇವುಗಳಲ್ಲಿ ಕೆಲವನ್ನು ಮಟ್ಟಹಾಕಲು ಸಾಧ್ಯವಿದೆಯಾದರೂ, ಧಾರ್ಮಿಕ ನೆಪ ಹೊಂದಿರುವ ಮತ್ತು ಜನರ ಮನಸ್ಸಿನಲ್ಲಿ ಆಳವಾಗಿ ಬೇರುಬಿಟ್ಟಿರುವ ಕೆಲವನ್ನು ಸಂಪೂರ್ಣವಾಗಿ ತೊಡೆದುಹಾಕುವುದು ದೃಢ ಸಂಕಲ್ಪ, ಮನಃಪರಿವರ್ತನೆ, ಶಿಕ್ಷಣ ಇತ್ಯಾದಿಗಳು ಬೇಕಾಗುತ್ತವೆ. ಮೂಢನಂಬಿಕೆ ಆಳವಾಗಿರುವಾಗ ಕಾನೂನಿನ ಮೂಲಕ ತಡೆದರೂ, ಆ ಮನೋಭಾವವು ಸಾಯದೇ ಬೇರೊಂದು ರೂಪದಲ್ಲಿ ಮೈದಾಳುತ್ತದೆ ಅಥವಾ ಯಾರಿಗೂ ಗೊತ್ತಾಗದಂತೆ ಗುಟ್ಟಿನಲ್ಲಿ ನಡೆಯುತ್ತದೆ.</p>



<p>ಮುಂದಿನ ಕೆಳಜಾತಿಗಳ ಪುರುಷರನ್ನು ಅವಮಾನಿಸುವ ಕೆಲವು ವಿಚಿತ್ರ ಅಮಾನವೀಯ ಆಚರಣೆಗಳನ್ನು ಕಿರು ವಿವರಗಳೊಂದಿಗೆ ನೋಡೋಣ.</p>
]]></content:encoded>
					
		
		
			</item>
		<item>
		<title>ಸಂಸತ್ತಿನ ಪೂರ್ವಸೂರಿಗಳು &#8211; 8 : ಸಮ ಸಮಾಜಕ್ಕಾಗಿ ಅನೇಕ ಹೋರಾಟಗಳನ್ನು ನಡೆಸಿದ ಎಸ್.ಎಂ. ಜೋಶಿ</title>
		<link>https://peepalmedia.com/s-m-joshi-who-fought-many-battles-for-an-equal-society/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 13 Sep 2025 05:57:06 +0000</pubDate>
				<category><![CDATA[ಅಂಕಣ]]></category>
		<category><![CDATA[ಇತಿಹಾಸ]]></category>
		<category><![CDATA[ವಿಶೇಷ]]></category>
		<guid isPermaLink="false">https://peepalmedia.com/?p=65952</guid>

					<description><![CDATA[ಈ ಲೇಖನ ಸರಣಿಯು &#8216;ದಿ ಅರ್ಲಿ ಪಾರ್ಲಿಮೆಂಟರಿಯನ್ಸ್&#8217; ಎಂಬ ಶೀರ್ಷಿಕೆಯ &#8216;ದಿ ವೈರ್&#8217; ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಎಂಟನೇ ಲೇಖನ ಎಸ್.ಎಂ. ಜೋಶಿ ಎಂದೇ ಜನಪ್ರಿಯರಾಗಿದ್ದ ಶ್ರೀಧರ್ ಮಹಾದೇವ್ ಜೋಶಿ, ತಮ್ಮ ಬದುಕಿನುದ್ದಕ್ಕೂ ಅನೇಕ ಹೊಡೆತಗಳನ್ನು ತಿಂದವರು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅವರನ್ನು ಬ್ರಿಟಿಷ್ ಪೊಲೀಸರು ಥಳಿಸಿದ್ದರು. ಜಾತ್ಯಾತೀತತೆ ಮತ್ತು ರಾಷ್ಟ್ರೀಯ ಏಕತೆಯ ವಿಚಾರದಲ್ಲಿ ಹಿಂದುತ್ವ ಶಕ್ತಿಗಳು ಥಳಿಸಿದವು. ಸ್ವತಂತ್ರ ಭಾರತದಲ್ಲಿ ಕಾಂಗ್ರೆಸ್ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>ಈ ಲೇಖನ ಸರಣಿಯು &#8216;ದಿ ಅರ್ಲಿ ಪಾರ್ಲಿಮೆಂಟರಿಯನ್ಸ್&#8217; ಎಂಬ ಶೀರ್ಷಿಕೆಯ &#8216;ದಿ ವೈರ್&#8217; ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಎಂಟನೇ ಲೇಖನ</p>
</blockquote>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow" style="flex-basis:100%">
<pre class="wp-block-code"><code>ಸಮಾಜವಾದಿ ಕಾರ್ಯಕರ್ತ, ರಾಜಕಾರಣಿ ಮತ್ತು ಬರಹಗಾರರಾಗಿದ್ದ ಜೋಶಿ, ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಭಾರತದಲ್ಲಿ ವಿವಿಧ ಸಾಮಾಜಿಕ-ರಾಜಕೀಯ ಚಳುವಳಿಗಳಲ್ಲಿ ಭಾಗವಹಿಸಿದವರು..</code></pre>
</div>
</div>



<p>ಎಸ್.ಎಂ. ಜೋಶಿ ಎಂದೇ ಜನಪ್ರಿಯರಾಗಿದ್ದ ಶ್ರೀಧರ್ ಮಹಾದೇವ್ ಜೋಶಿ, ತಮ್ಮ ಬದುಕಿನುದ್ದಕ್ಕೂ ಅನೇಕ ಹೊಡೆತಗಳನ್ನು ತಿಂದವರು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅವರನ್ನು ಬ್ರಿಟಿಷ್ ಪೊಲೀಸರು ಥಳಿಸಿದ್ದರು. ಜಾತ್ಯಾತೀತತೆ ಮತ್ತು ರಾಷ್ಟ್ರೀಯ ಏಕತೆಯ ವಿಚಾರದಲ್ಲಿ ಹಿಂದುತ್ವ ಶಕ್ತಿಗಳು ಥಳಿಸಿದವು. ಸ್ವತಂತ್ರ ಭಾರತದಲ್ಲಿ ಕಾಂಗ್ರೆಸ್ ಸರಕಾರಗಳೇ ಅವರನ್ನು ಬಂಧಿಸಿದ್ದವು.</p>



<p>1904 ನವೆಂಬರ್ 12 ರಂದು ಪುಣೆಯ ಜುನ್ನಾರ್ ಎಂಬಲ್ಲಿ ಎಸ್.ಎಂ. ಜೋಶಿ ಅವರ ಜನನ. ಎಸ್.ಎಂ. ಎಂದೇ ಖ್ಯಾತರಾಗಿದ್ದ ಅವರು ಕೆಳ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು. ತಂದೆ ಮಹಾದೇವ್ ಜನಾರ್ಧನ ಜೋಶಿ ಜುನ್ನಾರ್ ನ್ಯಾಯಾಲಯದಲ್ಲಿ ಗುಮಾಸ್ತರಾಗಿದ್ದರು. 1916 ರಲ್ಲಿ ಅವರ ತಂದೆ ನಿಧನರಾಗುತ್ತಾರೆ. ಅಂದರೆ ಎಸ್.ಎಂ. ಇನ್ನೂ ತನ್ನ ಪ್ರಾಥಮಿಕ ಶಿಕ್ಷಣ ಪೂರ್ತಿಗೊಳಿಸುವ ಮೊದಲೇ.</p>



<p>1924 ರಲ್ಲಿ ಫರ್ಗುಸನ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಎಸ್.ಎಂ. ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಳ್ಳುವುದು. 1928 ರಲ್ಲಿ ದೇವಾಲಯಗಳಿಗೆ ದಲಿತರ ಪ್ರವೇಶಕ್ಕಾಗಿ ಅವರು ಹೋರಾಟ ಆರಂಭಿಸುತ್ತಾರೆ. ಪುಣೆಯ ಪಾರ್ವತಿ ದೇವಸ್ಥಾನದಲ್ಲಿ ದಲಿತರ ಪ್ರವೇಶಕ್ಕೆಂದು 1929 ರಲ್ಲಿ ನಡೆದ ಸತ್ಯಾಗ್ರಹದ ನೇತೃತ್ವವನ್ನು ಅವರು ವಹಿಸಿಕೊಂಡಿದ್ದರು. ಆ ಸತ್ಯಾಗ್ರಹದಲ್ಲಿ ಸಂಪ್ರದಾಯಸ್ಥರು ಸತ್ಯಾಗ್ರಹಿಗಳ ಮೇಲೆ ದಾಳಿ ಮಾಡಿ ಅವರನ್ನು ಥಳಿಸಿದ್ದರು. ಆ ಘಟನೆಯಲ್ಲಿ ಜೋಶಿ ಗಾಯಗೊಳ್ಳುತ್ತಾರೆ. ಈ ಮೊದಲು ಪುಣೆಯಲ್ಲಿ ಸೈಮನ್ ಆಯೋಗದ ವಿರುದ್ಧ ನಡೆಸಿದ್ದ ಮೋರ್ಚಾವನ್ನು ಮುನ್ನಡೆಸಿದ ಕಾರಣಕ್ಕೆ ಪೊಲೀಸರಿಂದ ಥಳಿಸಲ್ಪಟ್ಟಿದ್ದರು.</p>



<p>ಮಹಾತ್ಮಾ ಗಾಂಧಿಯವರಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ ಜೋಶಿ, 1929 ರಲ್ಲಿ ಸೈಮನ್ ಆಯೋಗದ ವಿರುದ್ಧದ ಪ್ರತಿಭಟನೆಯಲ್ಲಿ ಮತ್ತು 1931 ರ ಉಪ್ಪು ಸತ್ಯಾಗ್ರಹದಲ್ಲೂ ಭಾಗವಹಿಸುತ್ತಾರೆ. ಎರಡು ಪ್ರಕರಣಗಳಲ್ಲೂ ಬಂಧಿತರಾಗಿ ಶಿಕ್ಷೆಗೆ ಗುರಿಯಾಗುತ್ತಾರೆ. ಜೈಲಿನಲ್ಲಿ ಕಳೆದ ಈ ಕಾಲಾವಧಿಯಲ್ಲಿ ಅವರು ಮಾರ್ಕ್ಸ್ವಾದಿ ತತ್ವಶಾಸ್ತ್ರ ಮತ್ತು ಸಮಾಜವಾದಿ ಸಾಹಿತ್ಯಗಳನ್ನು ಅಧ್ಯಯನ ಮಾಡುತ್ತಾರೆ. ಆ ಮೂಲಕ ಗಟ್ಟಿಯಾದ ಸಮಾಜವಾದಿ ಚಿಂತನೆಗಳನ್ನು ಬೆಳೆಸಿಕೊಳ್ಳುತ್ತಾರೆ. 1928 ರಲ್ಲಿ ಪುಣೆಯಲ್ಲಿ ಎನ್.ಜಿ. ಗೋರ್ ಮತ್ತು ಆರ್.ಕೆ. ಖಾದಿಲ್ಕರ್ ಅವರುಗಳ ಜೊತೆಗೆ ಸೇರಿಕೊಂಡು ಜವಾಹರಲಾಲ್ ನೆಹರೂ ಅವರ ಅಧ್ಯಕ್ಷತೆಯಲ್ಲಿ ಎರಡನೇ ಯುವಜನ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸುತ್ತಾರೆ.</p>



<p>1930 ರಲ್ಲಿ ಅಸಹಕಾರ ಚಳುವಳಿಯಲ್ಲಿ ತೊಡಗಿಕೊಳ್ಳುವ ಎಸ್.ಎಂ. ಅದಕ್ಕಾಗಿ ಒಂದು ವರ್ಷ ಕಠಿಣ ಜೈಲು ಶಿಕ್ಷೆಗೂ ಗುರಿಯಾಗುತ್ತಾರೆ. ಆದರೆ ಬಹಳ ಬೇಗನೇ ಮತ್ತೆ ಬಂಧಿತರಾಗುತ್ತಾರೆ. “ರಾಯ್ ದಿನ”ದ ಕಾರ್ಯಕ್ರಮದಲ್ಲಿ ಅವರು ಮಾಡಿದ ಭಾಷಣದ ಕಾರಣಕ್ಕೆ ಅವರನ್ನು ಬಂಧಿಸಲಾಗಿತ್ತು. ಕಮ್ಯುನಿಸ್ಟ್ ನಾಯಕ ಎಂ.ಎನ್. ರಾಯ್ ಅವರನ್ನು ಬಿಡುಗಡೆ ಮಾಡುವಂತೆ ಬಾಂಬೆಯಲ್ಲಿ ಅವರು ಭಾಷಣ ಮಾಡಿದ್ದರು. ಸೆಕ್ಷನ್ 124A ಅಡಿಯಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಅದಕ್ಕಾಗಿ ಎರಡು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಲಾಗಿತ್ತು. 1931-32ರ ಅವಧಿಯಲ್ಲಿ ಅವರು ನಾಸಿಕ್ ಜೈಲಿನಲ್ಲಿದ್ದಾಗ, ಕಾಂಗ್ರೆಸ್ ಒಳಗಡೆ ಸಮಾಜವಾದಿ ಪಕ್ಷವನ್ನು ಕಟ್ಟುವ ಕಲ್ಪನೆಯ ಜೊತೆಗೆ ಅವರು ಆಟವಾಡಲು ಆರಂಭಿಸಿದ್ದರು.</p>



<p>1940 ರಲ್ಲಿ ಮಡಗಾಂವ್ ಶೇತ್ಕರಿ ಸಮ್ಮೇಳನದಲ್ಲಿ ಮಾಡಿದ ಭಾಷಣದ ಕಾರಣಕ್ಕೆ ಮತ್ತೆ ಅವರ ಮೇಲೆ ದೇಶದ್ರೋಹದ ಆರೋಪವನ್ನು ಹೊರಿಸಲಾಗುತ್ತದೆ. ವಿಚಾರಣೆಗೆ ಗುರಿಪಡಿಸಿ ಒಂದು ವರ್ಷದ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಇದಕ್ಕೂ ಮೊದಲು ಅವರನ್ನು ಯುದ್ಧ ವಿರೋಧಿ ಪ್ರಚಾರ ಮಾಡಿದ ಕಾರಣಕ್ಕೆ ಗೋರ್ ಮತ್ತು ಖಾದಿಲ್ಕರ್ ಜೊತೆಗೆ ಒಂದು ತಿಂಗಳಿಗಿಂತ ಮೇಲೆ ಬಂಧನದಲ್ಲಿಡಲಾಗಿತ್ತು.</p>



<p>1934 ರಲ್ಲಿ ಕಾಂಗ್ರೆಸ್ ಸಮಾಜವಾದಿ ಪಕ್ಷದ ಸ್ಥಾಪನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅದರ ಸ್ಥಾಪಕ ಸದಸ್ಯರಾಗಿದ್ದರು. ಅದರ ರಾಷ್ಟ್ರೀಯ ಕಾರ್ಯಕಾರಿಣಿಗೆ ಬಾಂಬೆಯಿಂದ ಆಯ್ಕೆಯಾಗಿದ್ದರು. ತಮ್ಮ ರಾಜಕೀಯ ಜೀವನದಲ್ಲಿ, ಮಹಾರಾಷ್ಟ್ರ ಯುವ ಸಮ್ಮೇಳನ ಮತ್ತು ಜನ ಸಂಪರ್ಕ ಸಮಿತಿಯ ಕಾರ್ಯದರ್ಶಿಯಾಗಿ ದಣಿವರಿಯದ ಉತ್ಸಾಹದಿಂದ ಕೆಲಸ ಮಾಡಿದವರು. 1936 ರಲ್ಲಿ ಫೈಜ್ಪುರ ಎಐಸಿಸಿ ಕಾಂಗ್ರೆಸ್ ಸಮಾವೇಶ ಮತ್ತು ಸಿಎಸ್ಪಿಯ ರಾಷ್ಟ್ರೀಯ ಸಮ್ಮೇಳನದ ಯಶಸ್ಸಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.</p>



<p>ಎಸ್.ಎಂ. ಜಾತ್ಯತೀತತೆಗೆ ಕಟಿಬದ್ಧರಾಗಿದ್ದರು. ಹಿರಿಯ ಸಮಾಜವಾದಿ ನಾಯಕ ಮಧು ಲಿಮಾಯೆ ತಮ್ಮ ಆತ್ಮಚರಿತ್ರೆಯಲ್ಲಿ ಹೀಗೆ ಬರೆಯುತ್ತಾರೆ, “ನಾನು 1938 ರಲ್ಲಿ ರಾಜಕೀಯ ಜೀವನಕ್ಕೆ ಪ್ರವೇಶಿಸಿದೆ. ಆಗ ನಾನಿನ್ನೂ ಚಿಕ್ಕವನಾಗಿದ್ದೆ. ಆದರೆ ಚಿಕ್ಕ ವಯಸ್ಸಿನಲ್ಲಿಯೇ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದರಿಂದ, ನಾನು ಕೂಡ ಬೇಗನೆ ಕಾಲೇಜ್ ಪ್ರವೇಶಿಸಿದೆ. ಆ ದಿನಗಳಲ್ಲಿ ಪುಣೆಯಲ್ಲಿ ಒಂದು ಕಡೆ ಆರ್ಎಸ್ಎಸ್ ಮತ್ತು ಸಾವರ್ಕರ್ವಾದಿಗಳು ಹಾಗೂ ಮತ್ತೊಂದು ಕಡೆ ರಾಷ್ಟ್ರೀಯವಾದಿ, ಸಮಾಜವಾದಿ ಮತ್ತು ಎಡಪಂಥೀಯ ರಾಜಕೀಯ ಸಂಘಟನೆಗಳು ಸಕ್ರಿಯವಾಗಿದ್ದವು. 1938 ಮೇ 1 ರಂದು ನಾವು ಮೇ ದಿನ ಆಚರಿಸಲು ಮೆರವಣಿಗೆ ನಡೆಸಿದ್ದೆವು. ಪ್ರಸಿದ್ಧ ಕ್ರಾಂತಿಕಾರಿ ಸೇನಾಪತಿ ಬಾಪಟ್ ಮತ್ತು ನಮ್ಮ ಸಮಾಜವಾದಿ ನಾಯಕ ಎಸ್.ಎಂ. ಜೋಶಿ ಸೇರಿದಂತೆ ಇತರರ ಮೇಲೆ ಆರ್ಎಸ್ಎಸ್ ಮತ್ತು ಸಾವರ್ಕರ್ವಾದಿಗಳು ದಾಳಿ ನಡೆಸಿದರು.”</p>



<p>1937 ರಲ್ಲಿ ಕಾಂಗ್ರೆಸ್ ಅಧಿಕಾರ ಸ್ವೀಕರಿಸುವುದನ್ನು ವಿರೋಧಿಸಿದ ಎಸ್.ಎಂ. ಪ್ರಗತಿಪರ ಒಕ್ಕಲು ಕಾನೂನೊಂದನ್ನು ಜಾರಿಗೆ ತರುವಂತೆ ಒತ್ತಾಯಿಸಿ ರೈತ ಮೋರ್ಚಾವನ್ನು ಮುನ್ನಡೆಸಿದ್ದರು. ಅವರು 1937-38 ರಲ್ಲಿ ಪುಣೆ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು ಎಂಬುದನ್ನು ಇಲ್ಲಿ ಗಮನಿಸಬೇಕು. 1939 ರಲ್ಲಿ ಸುಭಾಷ್ ಚಂದ್ರ ಬೋಸರ ನೇತೃತ್ವದಲ್ಲಿ ಕಲ್ಕತ್ತಾದಲ್ಲಿ ನಡೆದ ರ್ಯಾಡಿಕಲ್ ಕಾನ್ಫರೆನ್ಸಲ್ಲಿಯೂ ಎಸ್.ಎಂ. ಭಾಗವಹಿಸಿದ್ದರು.</p>



<p>ಎಂ.ಎಸ್. ಆರಂಭದಲ್ಲಿ ಮದುವೆಗೆ ಸಿದ್ಧರಿರಲಿಲ್ಲ. ಆದರೆ ವಿದ್ಯಾವಂತೆಯಾಗಿದ್ದ ತಾರಾ ಪೆಂಡ್ಸೆ ಅವರ ಮನಸ್ಸು ಬದಲಾಯಿಸುವಲ್ಲಿ ಸಫಲರಾಗುತ್ತಾರೆ. ಆಕೆ ಹೆಣ್ಣು ಮಕ್ಕಳ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಜೋಶಿಯವರ ಬದುಕಿನ ಹಲವು ಕಠಿಣ ಸಂದರ್ಭಗಳಲ್ಲಿ ಬೆಂಬಲವಾಗಿ ನಿಂತಿದ್ದರು.</p>



<p>1942 ರಲ್ಲಿ “ಕ್ವಿಟ್ ಇಂಡಿಯಾ” ಚಳುವಳಿಯ ಸಮಯದಲ್ಲಿ ಒಬ್ಬ ಮುಸ್ಲಿಂ ಮೌಲವಿಯ ವೇಷ ಧರಿಸಿ ಭೂಗತರಾಗಿದ್ದರು. 1943 ರಲ್ಲಿ ತಮ್ಮ ಸಂಗಾತಿಗಳೊಂದಿಗೆ ಬಾಂಬೆಯಲ್ಲಿ ತಲೆಮರೆಸಿಕೊಂಡಿದ್ದಾಗ ಬಂಧಿತರಾಗುತ್ತಾರೆ. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅವರನ್ನು ಗೂಢಾಲೋಚನೆಯ ಆರೋಪದಿಂದ ಖುಲಾಸೆಗೊಳಿಸಲಾಗುತ್ತದೆ. ಆದರೂ ಕೂಡ, 1946 ರವರೆಗೆ ಅವರೆಲ್ಲರನ್ನು ವಿಚಾರಣಾಧೀನ ಖೈದಿಗಳನ್ನಾಗಿ ಬಂಧಿಸಿಡಲಾಗಿತ್ತು.</p>



<p>ಜೋಶಿ 1941-42 ರಲ್ಲಿ ರಾಷ್ಟ್ರ ಸೇವಾ ದಳವನ್ನು ಸ್ಥಾಪಿಸಿದ್ದರು. ಅವರು ಅದರ ಮುಖ್ಯ ಸಂಘಟಕರಲ್ಲಿ ಒಬ್ಬರಾಗಿದ್ದರು. 1941-42 ಮತ್ತು 1947-52 ರ ನಡುವೆ ಅವರು ಗ್ರಾಮ ಕಾರ್ಯಗಳಲ್ಲಿ ಅದರ ಚಟುವಟಿಕೆಗಳನ್ನು ಮುನ್ನಡೆಸಿದ್ದರು. 1947 ರಲ್ಲಿ ಸತಾರಾದಲ್ಲಿ ರಾಷ್ಟ್ರ ಸೇವಾ ದಳದ ದೊಡ್ಡದೊಂದು ರ್ಯಾಲಿಯನ್ನು ಜೋಶಿ ಆಯೋಜಿಸಿಸಿದ್ದರು.</p>



<p>ಸಮಾಜವಾದಿ ಪಕ್ಷವು 1947 ರಲ್ಲಿ ಕಾಂಗ್ರೆಸ್ನಿಂದ ಬೇರ್ಪಟ್ಟಾಗ ಜೋಶಿ ಅದರ ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. 1948 ರಲ್ಲಿ ಸಮಾಜವಾದಿ ಪಕ್ಷವು ಸ್ಥಾಪನೆಗೊಂಡಾಗ ಅದರ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು ಜೋಶಿ. 1952 ರಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ನಿಂದ ಕವಲೊಡೆದಿದ್ದ ಕಿಸಾನ್ ಮಜ್ದೂರ್ ಪ್ರಜಾ ಪಕ್ಷಗಳು ವಿಲೀನಗೊಂಡು ಪ್ರಜಾ ಸಮಾಜವಾದಿ ಪಕ್ಷವನ್ನು ರಚಿಸಲಾಗುತ್ತದೆ. 1964 ರವರೆಗೆ ಜೋಶಿ ಈ ಹೊಸ ಪಕ್ಷದಲ್ಲಿದ್ದರು. ಮತ್ತೊಮ್ಮೆ ಎರಡು ಪಕ್ಷಗಳು ವಿಲೀನಗೊಂಡು “ಸಂಯುಕ್ತ ಸಮಾಜವಾದಿ ಪಕ್ಷ (ಎಸ್ಎಸ್ಪಿ) ರೂಪುಗೊಂಡಾಗ, ಜೋಶಿ 1964 ರಿಂದ 1969 ರವರೆಗೆ ಅದರ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುತ್ತಾರೆ.</p>



<p><strong>ಸಂಸದರಾಗಿ</strong><br>1952 ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದರಾದರೂ ಅದರಲ್ಲಿ ಸೋಲುತ್ತಾರೆ. ಆದರೆ 1953 ರಲ್ಲಿ ಬಾಂಬೆ ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ ಗೆಲ್ಲುತ್ತಾರೆ. ಸಂಯುಕ್ತ ಮಹಾರಾಷ್ಟ್ರ ಸಮಿತಿಯನ್ನು ಮುನ್ನಡೆಸುತ್ತಿದ್ದ ಅವರು 1957 ರಲ್ಲಿ ಪುನಹ ಶಾಸಕರಾಗಿ ಆಯ್ಕೆಯಾಗುತ್ತಾರೆ. 1960 ರಲ್ಲಿ ಸಂಯುಕ್ತ ಮಹಾರಾಷ್ಟ್ರ ಹುಟ್ಟುವುದು. ಆದರೆ, 1962 ರಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಜೋಶಿ ಸೋಲುತ್ತಾರೆ. ನಂತರ ಅವರು 1967 ರಲ್ಲಿ ಸಂಯಕ್ತ ಸಮಾಜವಾದಿ ಪಕ್ಷ ಮತ್ತು ಸಂಪೂರ್ಣ ಮಹಾರಾಷ್ಟ್ರ ಸಮಿತಿ ಅಭ್ಯರ್ಥಿಯಾಗಿ ಲೋಕಸಭೆಗೆ ಚುನಾಯಿತರಾಗುತ್ತಾರೆ. 1971 ರವರೆಗೆ ಅವರು ಸಂಸದರಾಗಿ ಮುಂದುವರಿಯುತ್ತಾರೆ. ಲೋಕಸಭೆಯಲ್ಲಿ ಅವರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಹಲವು ಪ್ರಮುಖ ವಿಷಯಗಳನ್ನು ಎತ್ತಿದ್ದರು.</p>



<p>ಸಂಯುಕ್ತ ಮಹಾರಾಷ್ಟ್ರ ಚಳುವಳಿ ಅಥವಾ ಸಂಯುಕ್ತ ಮಹಾರಾಷ್ಟ್ರ ಸಮಿತಿಯು 1956 ರಿಂದ 1960 ರವರೆಗೆ ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ಮರಾಠಿ ಭಾಷಿಕ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಮುಂದಿಟ್ಟುಕೊಂಡಿದ್ದ ಒಂದು ಸಂಘಟನೆಯಾಗಿತ್ತು. ಬಾಂಬೆ ರಾಜ್ಯದ ಮರಾಠಿ ಭಾಷಿಕ ಪ್ರದೇಶಗಳನ್ನು ಒಟ್ಟು ಸೇರಿಸಿಕೊಂಡು, ಬಾಂಬೆಯನ್ನು ರಾಜಧಾನಿ ಮಾಡಿಕೊಂಡು ಒಂದು ಹೊಸ ಮರಾಠಿ ಭಾಷಿಕ ರಾಜ್ಯವನ್ನು ರಚಿಸಬೇಕೆಂಬುದು ಈ ಸಂಘಟನೆಯ ಪ್ರತಿಪಾದನೆಯಾಗಿತ್ತು. 1960 ಮೇ 1 ರಂದು ಮರಾಠಿ ಭಾಷಾ ರಾಜ್ಯವಾಗಿ ಮಹಾರಾಷ್ಟ್ರದ ಹುಟ್ಟಿನೊಂದಿಗೆ ಸಂಘಟನೆಯು ತನ್ನ ಗುರಿ ಸಾಧಿಸುತ್ತದೆ.</p>



<p>ಸ್ವಾತಂತ್ರ್ಯಾ ನಂತರ ಎಸ್.ಎಂ. ಅವರು ಟ್ರೇಡ್ ಯೂನಿಯನ್ ಚಳುವಳಿಯಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಳ್ಳುತ್ತಾರೆ. ಆ ಮೂಲಕ ಅವರು ಟ್ರೇಡ್ ಯೂನಿಯನ್ ನಾಯಕರಾಗಿ ಹೊರ ಹೊಮ್ಮುತ್ತಾರೆ. ರಕ್ಷಣಾ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಾರೆ. 1960 ರಲ್ಲಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷರಾಗಿಯೂ, ಟ್ರಾನ್ಸ್ಪೋರ್ಟ್ ಕಾಮ್ಗಾರ್ ಸಭಾದ (ಮಹಾರಾಷ್ಟ್ರ) ಚೇರ್ಮನ್ ಆಗಿಯೂ ಆಯ್ಕೆಯಾಗುತ್ತಾರೆ. ಅವರು ಹಲವು ಕಾರ್ಮಿಕ ಮುಷ್ಕರಗಳಿಗೆ ನೇತೃತ್ವ ವಹಿಸಿದ್ದರು.</p>



<p>ಸಮಾಜವಾದಿ ಕಾರ್ಯಕರ್ತ, ರಾಜಕಾರಣಿ ಮತ್ತು ಬರಹಗಾರರಾದ ಜೋಶಿ, ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಭಾರತದಲ್ಲಿ ವಿವಿಧ ಸಾಮಾಜಿಕ-ರಾಜಕೀಯ ಚಳುವಳಿಗಳಲ್ಲಿ ಭಾಗವಹಿಸಿದರು. ಸಾನೆ ಗುರುಗಳ ಪ್ರಭಾವಕ್ಕೆ ಒಳಗಾಗಿದ್ದ ಜೋಶಿ, ಗುರುಗಳ ಹೆಸರಿನಲ್ಲಿ ತನ್ನ ಊರಿನಲ್ಲಿಯೂ 1950 ರಲ್ಲಿ “ಸೇವಾ ಪಥಕ್” ಆರಂಭಿಸುತ್ತಾರೆ. ಅದೇ ವರ್ಷ ಅವರು ಆರು ತಿಂಗಳ ಕಾಲದ ಭೂದಾನ ಪಾದ ಯಾತ್ರೆಯನ್ನು ಕೈಗೊಳ್ಳುತ್ತಾರೆ. 1952 ರಲ್ಲಿ ಉಪವಾಸ ಸತ್ಯಾಗ್ರಹಕ್ಕಾಗಿ ಅವರನ್ನು ಒಂದು ತಿಂಗಳ ಕಾಲ ಬಂಧಿಸಿಡಲಾಗಿತ್ತು.</p>



<p>ಗೋವಾ ಸ್ವಾತಂತ್ರ್ಯ ಚಳುವಳಿಯಲ್ಲಿ ಕೂಡ ಎಸ್.ಎಂ. ಪ್ರಮುಖ ಪಾತ್ರ ವಹಿಸಿದ್ದರು.</p>



<p>ಸಂಯುಕ್ತ ಮಹಾರಾಷ್ಟ್ರ ಚಳುವಳಿಯ ಕಾಲದಲ್ಲಿ ರಾಜಕೀಯ ಪಕ್ಷಗಳನ್ನು ಒಗ್ಗೂಡಿಸುವುದು, ಪುಣೆಯಲ್ಲಿ ಕಾರ್ಮಿಕ ಸಂಘಗಳನ್ನು ಕಟ್ಟುವುದು, ದಲಿತ ಚಳುವಳಿಗಳಲ್ಲಿ ಭಾಗವಹಿಸುವುದು, ಮಂಡಲ್ ಆರೋಗದ ಸ್ಥಾಪನೆಯಲ್ಲಿ ಕೆಲಸ ಮಾಡುವುದು ಹೀಗೆ ಎಲ್ಲ ಕಡೆಯೂ ಜೋಶಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು. ಮುಂಬೈನಲ್ಲಿ ಭಾಷಾಧಾರಿತ ಗಲಭೆಗಳು ಮತ್ತು ಪುಣೆಯಲ್ಲಿ ಕೋಮು ಗಲಭೆಗಳು ಭುಗಿಲೆದ್ದಾಗ ಅವರು ಶಾಂತಿ ರಕ್ಷಕನಾಗಿ ಅಲ್ಲಿ ಕೆಲಸ ಮಾಡಿದ್ದರು.</p>



<p>1973-74 ರ ಕಾಲಘಟ್ಟದಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಸಂಪೂರ್ಣ ಕ್ರಾಂತಿ ಚಳುವಳಿಯಲ್ಲಿ ಅವರು ಸಕ್ರಿಯವಾಗಿ ಭಾಗವಹಿಸಿದ್ದರು. 1977 ರಲ್ಲಿ ಜನತಾ ಪಕ್ಷದ ಸ್ಥಾಪಕ ಸದಸ್ಯರೂ, 1977-80 ರವರೆಗೆ ಅದರ ಮಹಾರಾಷ್ಟ್ರ ಘಟಕದ ಅಧ್ಯಕ್ಷರೂ ಆಗಿದ್ದರು.</p>



<p>ಎಸ್.ಎಂ. ಒಬ್ಬ ಉತ್ತಮ ಸಂಘಟಕರಾಗಿದ್ದರು. ಅವರ ವಿರೋಧಿಗಳು ಕೂಡ ಅವರನ್ನು ಒಬ್ಬ ಸಮರ್ಥ ಮತ್ತು ಶ್ರದ್ಧಾವಂತ ಕಾರ್ಯಕರ್ತನೆಂದು ಗುರುತಿಸಿದ್ದರು.</p>



<p>ಜೋಶಿ ಪತ್ರಿಕೋದ್ಯಮ ಕ್ಷೇತ್ರದಲ್ಲೂ ಗಮನಾರ್ಹ ಕೊಡುಗೆ ನೀಡಿದ್ದಾರೆ. ಅವರು ಡೈಲಿ ನ್ಯೂಸ್ ಆಫ್ ಪೂಣಾ (1953) ಮತ್ತು ಬಾಂಬೆಯ ಲೋಕ್ ಮೀರಾ (1958-62) ಪತ್ರಿಕೆಗಳಲ್ಲಿ ಸಂಪಾದಕರಾಗಿ ಕೆಲಸ ಮಾಡಿದ್ದರು. ಅವರೊಬ್ಬ ಅದ್ಭುತ ಭಾಷಣಕಾರರಾಗಿದ್ದರು. ಮರಾಠಿ ಪತ್ರಿಕೆಗಳಲ್ಲಿ ರಾಜಕೀಯ ಮತ್ತು ಸಮಾಜವಾದದ ಕುರಿತು ಬಹಳವೇ ಲೇಖನಗಳನ್ನು ಬರೆಯುತ್ತಿದ್ದರು.</p>



<p>ಹಲವಾರು ಮಾಸ ಪತ್ರಿಕೆಗಳಿಗೂ ಅವರು ಬರೆಯುತ್ತಿದ್ದರು. “ಉರ್ಮಿ” ಅವರ ಕಥಾ ಸಂಕಲನ. ಸಮಾಜವಾದಿ ಚಿಂತನೆಗಳ ಕುರಿತ “ಆಸ್ಪೆಕ್ಟ್ಸ್ ಆಫ್ ಸೋಷಿಯಲಿಸ್ಟ್ ಪಾಲಿಸಿ” (1969) ಸಂಪುಟವನ್ನು ಪ್ರಕಟಿಸಿದ್ದರು.</p>



<p>ಎಸ್.ಎಂ. ಜೋಶಿ ತಮ್ಮ 84 ನೇ ವಯಸ್ಸಿನಲ್ಲಿ ನಿಧನರಾದರು.</p>
]]></content:encoded>
					
		
		
			</item>
		<item>
		<title>‎ಸೆಪ್ಟಂಬರ್ 14.2025 ರ ಹಿಂದಿ ದಿವಸ್ ವಿರೋಧಿಸುವ ಬಗೆ ಹೇಗೆ?</title>
		<link>https://peepalmedia.com/how-to-protest-hindi-diwas-on-september-14-2025/</link>
		
		<dc:creator><![CDATA[ರಮೇಶ್‌ ಹಾಸನ್‌]]></dc:creator>
		<pubDate>Sun, 24 Aug 2025 06:44:26 +0000</pubDate>
				<category><![CDATA[ಅಂಕಣ]]></category>
		<category><![CDATA[ಇತಿಹಾಸ]]></category>
		<category><![CDATA[ಮೀಡಿಯಾ]]></category>
		<category><![CDATA[news]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=64700</guid>

					<description><![CDATA[‎ಪ್ರತಿ ವರ್ಷ ನಮ್ಮ ತೆರಿಗೆ ಹಣದಲ್ಲಿ ಇಂಡಿಯಾ ಸರ್ಕಾರ ಅಂದಾಜು 500 ಕೋಟಿ ಖರ್ಚು ಮಾಡಿ ಸೆಪ್ಟೆಂಬರ್ 14ರಂದು &#8216;ಹಿಂದಿ ದಿವಸ್&#8217; ಎಂದು ಆಚರಿಸುತ್ತಿದೆ. ಈ ಆಚರಣೆಗೆ ಒಂದೊಂದು ಘೋಷವಾಕ್ಯ ಬೇರೆ ಪ್ರಕಟಿಸಿ ಅದರ ಆಧಾರದಲ್ಲಿ ನಮ್ಮ ಮೇಲೆ ನಮ್ಮದೇ ದುಡ್ಡಿನಲ್ಲಿ ಮತ್ತು ನಮ್ಮ ಕನ್ನಡ ನೆಲದಲ್ಲಿಯೇ ಹಿಂದಿ ಹೇರಿಕೆಯನ್ನು ರಾಜ ರೋಷವಾಗಿ ಮಾಡುತ್ತಾ ಬರುತ್ತಿದೆ.ಇದಕ್ಕೆ ಕಡಿವಾಣ ಹಾಕಲು 2019 ರಿಂದ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ನಾವುಗಳು ವರ್ಷದಿಂದ ವರ್ಷಕ್ಕೆ ಹೆಚ್ಚು ಜನರಲ್ಲಿ ಹಿಂದಿ ಹೇರಿಕೆ [&#8230;]]]></description>
										<content:encoded><![CDATA[
<p>‎ಪ್ರತಿ ವರ್ಷ ನಮ್ಮ ತೆರಿಗೆ ಹಣದಲ್ಲಿ ಇಂಡಿಯಾ ಸರ್ಕಾರ ಅಂದಾಜು <strong>500 ಕೋಟಿ ಖರ್ಚು </strong>ಮಾಡಿ ಸೆಪ್ಟೆಂಬರ್ 14ರಂದು &#8216;ಹಿಂದಿ ದಿವಸ್&#8217; ಎಂದು ಆಚರಿಸುತ್ತಿದೆ. ಈ ಆಚರಣೆಗೆ ಒಂದೊಂದು ಘೋಷವಾಕ್ಯ ಬೇರೆ ಪ್ರಕಟಿಸಿ ಅದರ ಆಧಾರದಲ್ಲಿ ನಮ್ಮ ಮೇಲೆ ನಮ್ಮದೇ ದುಡ್ಡಿನಲ್ಲಿ ಮತ್ತು ನಮ್ಮ ಕನ್ನಡ ನೆಲದಲ್ಲಿಯೇ ಹಿಂದಿ ಹೇರಿಕೆಯನ್ನು ರಾಜ ರೋಷವಾಗಿ ಮಾಡುತ್ತಾ ಬರುತ್ತಿದೆ.ಇದಕ್ಕೆ ಕಡಿವಾಣ ಹಾಕಲು 2019 ರಿಂದ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ನಾವುಗಳು ವರ್ಷದಿಂದ ವರ್ಷಕ್ಕೆ ಹೆಚ್ಚು ಜನರಲ್ಲಿ ಹಿಂದಿ ಹೇರಿಕೆ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಯಶಸ್ಸಿನ ಕಡೆಗೆ ಸಾಗುತ್ತಿದ್ದೇವೆ ಮತ್ತು ಇದರ ಪರಿಣಾಮ  ಪರೋಕ್ಷವಾಗಿ ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರ ಕೈಬಿಟ್ಟು ದ್ವಿಭಾಷಾ ಸೂತ್ರ ಸರ್ಕಾರ ಜಾರಿಗೊಳಿಸುವ ಸನಿಹಕ್ಕೆ ಬಂದಿದೆ.<br>‎<br>‎ಶಿಕ್ಷಣದಲ್ಲಿ ದ್ವಿಭಾಷಾ ಸೂತ್ರದ ಹೆಸರಿನಲ್ಲಿ ಹಿಂದಿ ಹೇರಿಕೆಗೆ ಕನ್ನಡ ನಾಡಿನಲ್ಲಿ ಶೇಕಡ<em> 50ರಷ್ಟು</em> ಮಾತ್ರವೇ ಹಿನ್ನಡೆ ಆಗಲಿದೆ ವಿನಃ ಸಂಪೂರ್ಣ ಹಿಂದಿ ಹೇರಿಕೆ ನಿಲ್ಲುವುದಿಲ್ಲ. <strong>ಸಂವಿಧಾನದ ಆರ್ಟಿಕಲ್ 343 ರಿಂದ 351</strong> ರಲ್ಲಿ ಹಿಂದಿ ಮತ್ತು ಸಂಸ್ಕೃತಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ತೆಗೆದರೆ ಮಾತ್ರ ಕನ್ನಡ ನೆಲದಲ್ಲಿ ಸಂಪೂರ್ಣ ಹಿಂದಿ ಹೇರಿಕೆ ನಿಲ್ಲುತ್ತದೆ ಆದ ಕಾರಣ ಈ ಹಿಂದಿ ದಿವಸ ಆಚರಣೆಯನ್ನು ವಿರೋಧಿಸುವುದ ಮುಂದುವರಿಸಬೇಕು ಮತ್ತು ತೀವ್ರಗೊಳಿಸಬೇಕು  ಇಲ್ಲದಿದ್ದರೆ ಕನ್ನಡವನ್ನು ವಿಶ್ವಮಟ್ಟದದಲ್ಲಿ ಬೆಳೆಸುವುದರ ಕಡೆ ವ್ಯಯಿಸಿಬೇಕಾದ ನಮ್ಮ ಸಮಯ ಹಣವನ್ನು ಕನ್ನಡ ನಾಡಿನಲ್ಲೇ ಕನ್ನಡವನ್ನು ಉಳಿಸಲು ವ್ಯಯಿಸಿಬೇಕಾಗುತ್ತದೆ.<br>‎<br>‎ಕನ್ನಡ ಒಂದು ದೇಶ. ಕನ್ನಡ ಒಂದು ವಿಶ್ವ ಭಾಷೆ.ಅಂತ ಕನ್ನಡವನ್ನು ಇಂಡಿಯಾ ಸಂವಿಧಾನ ಬಳಸಿ ಕೇವಲ ಪ್ರಾದೇಶಿಕ ಭಾಷೆ ಮಾಡಲಾಗಿದೆ.ಇತರೆ ಪ್ರಮುಖ ದ್ರಾವಿಡ ಭಾಷೆಗಳ ಹೆಸರಿನಲ್ಲಿ ಇಲ್ಲದ ಒತ್ತಕ್ಷರ ನಮ್ಮ ಕನ್ನಡದಲ್ಲಿ ಮಾತ್ರ ಸಿಗುತ್ತದೆ ಉದಾಹರಣೆ ತೆಲುಗು ತಮಿಳು ಮಲಯಾಳಂ ತುಳು ಕೊಡವ.ಇಲ್ಲಿ ಗಮನಿಸಿ ಯಾವುದಕ್ಕೂ ಒತ್ತಕ್ಷರ ಇಲ್ಲ.ಆದರೆ &#8216;ಕನ್ನಡ&#8217;ದಲ್ಲಿ ನ ಗೆ ನ ಒತ್ತಕ್ಷರ ಇದೆ. ಕನ್ನಡ ಒಂದು ದೇಶ ಎಂದು ಹೇಗೆ ಹೇಳಬಹುದು ಎಂದರೆ ಕನ+ನಾಡು, ಕನ್ನಾಡು, ಕನ್ನಡ. ಹೀಗೆ ನಾಡು ಪದವನ್ನು ತನ್ನ ಹೆಸರಿನಲ್ಲಿ ಒಳಗೊಂಡಿದೆ ನಮ್ಮ ನೆಲದ ನುಡಿ ನಮ್ಮ ತಾಯಿ ನುಡಿ ಕನ್ನಡ.ನಾಡು ಎಂದರೆ ದೇಶ ಎಂದರ್ಥ ಎಂಬ ಕಾರಣಕ್ಕೆ ತಮಿಳುನಾಡು ಬದಲು ತಮಿಳಗಂ ಪದ ಬಳಸಿ ಅಲ್ಲಿನ ನಾರ್ತ್ ಹಿಂದಿಯಾ ಸಂಸ್ಕ್ರುತದ ರಾಜ್ಯಪಾಲ ಛೀಮಾರಿ ಹಾಕಿಸಿಕೊಂಡದ್ದು ಎರಡು ಮೂರು ವರ್ಷಗಳ ಹಿಂದೆ ನಡೆದಿದೆ. ಕನ್ನಡದ ಬಗ್ಗೆ ಹೇಳುತ್ತಾ ಹೋದರೆ ಪುಟಗಳು ಸಾಲದು.<br>‎<br>‎ಆದರೆ ಕನ್ನಡದ ಬಗ್ಗೆ ಎಲ್ಲರಲ್ಲಿ ಇರಲೇಬೇಕಾದ ತಿಳುವಳಿಕೆ ಈ ಕೆಳಗಿನ ಸಾಲಿನಲ್ಲಿ ತಿಳಿಸಿ ಘೋಷ ವಾಕ್ಯದ ಕಡೆಗೆ ಸಾಗೋಣ.ಆ ಸಾಲು ಇಂತಿದೆ &#8216;ಕನ್ನಡ ದ್ರಾವಿಡ ನುಡಿ ಕುಟುಂಬಕ್ಕೆ ಸೇರಿದ ಒಂದು ಪ್ರಮುಖ ನುಡಿ ಇತರೆ ಪ್ರಮುಖ ದ್ರಾವಿಡ ನುಡಿಗಳು ತೆಲುಗು ತಮಿಳು ಮತ್ತು ಮಲಯಾಳಂ&#8217;.<br>‎<br>‎ಗಾಂಧಿಯವರು ಬ್ರಿಟಿಷರನ್ನು ಓಡಿಸಿ ಪ್ರಜಾಪ್ರಭುತ್ವ ತರಲು ಹೋರಾಟಕ್ಕೆ ಇಳಿದ ಆರಂಭದಲ್ಲಿ ಇಂಗ್ಲಿಷ್ ವಿರುದ್ಧ ಒಂದು ಭಾಷೆ ಬೇಕು ಎಂದು ಅವರ ಮಾತೃಭಾಷೆ ಗುಜರಾತಿಯನ್ನು ಇತರರಿಗೆ ಕಲಿಸಲು ಮುಂದಾಗಲಿಲ್ಲ ಅವರು ಮುಂದಾಗಿದ್ದು ಹಿಂದಿ ಕಲಿಸಲು ಅದಕ್ಕಾಗಿ ಅವರು <strong>1918ರಲ್ಲಿ</strong> ಇಂದಿನ ಚೆನ್ನೈ ಅಂದಿನ ಮದ್ರಾಸ್ನಲ್ಲಿ &#8216;ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ&#8217; ತೆರೆದರು. ಗಾಂಧಿ ಸ್ವಾರ್ಥಿಯಾಗಿದ್ದರೆ ಗುಜರಾತಿ ಪ್ರಚಾರ ಸಭಾ ತೆರೆಯುತ್ತಿದ್ದರು ಆದರೆ ಅವರಿಗೆ ಬ್ರಿಟಿಷರ ಓಡಿಸಿ ಪ್ರಜಾಪ್ರಭುತ್ವ ತರುವುದು ಗುರಿಯಾಗಿತ್ತೆ ವಿನಹ ಇನ್ನು ಯಾವುದೇ ಸ್ವಾರ್ಥವಲ್ಲ. ಗಾಂಧಿ ಫೋಟೋ ಇಟ್ಟುಕೊಂಡು ಮತ್ತು ಅವರು ಕಟ್ಟಿದ ಸಂಸ್ಥೆಗಳ ಇಟ್ಟುಕೊಂಡು ಪರ ವಿರೋಧ ರಾಜಕೀಯ ಮಾಡುತ್ತಿರುವ ಕಿಡಿಗೇಡಿಗಳಿಗೆ ಸ್ವಾರ್ಥವೇ ಮುಖ್ಯವಾಗಿದೆ. <strong>1964ರ </strong>ವರೆಗೂ ಖಾಸಗಿ ದೇಣಿಗೆಯಲ್ಲಿ ನಡೆಯುತ್ತಿದ್ದ ಈ ಸಂಸ್ಥೆಯನ್ನು ಇಂಡಿಯಾ ಸರ್ಕಾರ ಇಲ್ಲಿಯವರೆಗೂ ಸಾವಿರಾರು ಕೋಟಿ ನಮ್ಮ ತೆರಿಗೆ ಹಣ ನೀಡಿ ಇದನ್ನು ರಾಷ್ಟ್ರೀಯ ಮುಖ್ಯ ಸಂಸ್ಥೆಗಳಲ್ಲಿ ಒಂದು ಅಂತ ಮಾಡಿ ಇದರ ಕಚೇರಿಗಳನ್ನು ದಕ್ಷಿಣದ ಎಲ್ಲಾ ರಾಜ್ಯಗಳಲ್ಲೂ ತೆರೆದು ಹಿಂದಿ ಹೇರಿಕೆ ಕಾರಣವಾಗಿದೆ.<br>‎<br>‎ಕರ್ನಾಟಕ ಏಕೀಕರಣದ ಗುರಿ ಇಟ್ಟುಕೊಂಡು <strong>1890 ರಲ್ಲಿ</strong> ಶುರುವಾದ &#8216;ಕರ್ನಾಟಕ ವಿದ್ಯಾವರ್ಧಕ ಸಂಘ&#8217; ಇರುವ ಧಾರವಾಡದಲ್ಲಿಯೇ &#8216;ಕರ್ನಾಟಕ ರಾಜ್ಯ ಮಟ್ಟದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ&#8217; ಕಚೇರಿ ಕೂಡ ಸ್ಥಾಪಿತವಾಗಿದೆ ಇದು ಎಂತಹ ದುರಂತ ಅಲ್ಲವೇ? ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕರ್ನಾಟಕದ ಮುಖ್ಯ ಕಚೇರಿ ಶಾಶ್ವತವಾಗಿ ಬಂದ್ ಮಾಡಿ ಈ ಕಟ್ಟಡವನ್ನು <em>ಕನ್ನಡ ಪದ ಕಟ್ಟುವ ಕಚೇರಿ</em> ಯಾಗಿ ಬದಲಾಯಿಸಬೇಕೆಂದು ಈ ವರ್ಷದ ಘೋಷವಾಕ್ಯ ಇಟ್ಕೊಂಡು ನಾವುಗಳು ಸೆಪ್ಟೆಂಬರ್ <strong>14ರ ಹಿಂದಿ</strong> ದಿವಸ್ ವಿರೋಧ ಮಾಡೋಣ ಎಂದು ಈ ಮೂಲಕ ನಿಮ್ಮೆಲ್ಲರಲ್ಲು ಮನವಿ ಮಾಡಿಕೊಳ್ಳುತ್ತಿದ್ದೇವೆ.<br><strong>‎<br>✍️ ಅಬಿ ಒಕ್ಕಲಿಗ<br>ಮುಂದಾಳು<br>‎<em>ನಾವು Dravida ಕನ್ನಡಿಗರು ಚಳುವಳಿ</em></strong><br>‎</p>
]]></content:encoded>
					
		
		
			</item>
		<item>
		<title>ಸಂಸತ್ತಿನ ಪೂರ್ವಸೂರಿಗಳು ಭಾಗ 5 : ಸ್ಪೀಕರ್ ಆಗಿ ಸಮಾಜವಾದಿ ನಾಯಕ ರಬಿ ರೇ ಅವರ ಹೆಜ್ಜೆಗುರುತುಗಳು ಗಮನಾರ್ಹ</title>
		<link>https://peepalmedia.com/the-footprints-of-socialist-leader-rabi-ray-are-notable/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 16 Aug 2025 10:21:44 +0000</pubDate>
				<category><![CDATA[ಅಂಕಣ]]></category>
		<category><![CDATA[ಇತಿಹಾಸ]]></category>
		<guid isPermaLink="false">https://peepalmedia.com/?p=64254</guid>

					<description><![CDATA[ಈ ಲೇಖನ ಸರಣಿಯು &#8216;ದಿ ಅರ್ಲಿ ಪಾರ್ಲಿಮೆಂಟರಿಯನ್ಸ್&#8217; ಎಂಬ ಶೀರ್ಷಿಕೆಯ &#8216;ದಿ ವೈರ್&#8217; ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಐದನೇ ಲೇಖನ ಭಾರತದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಒಂಭತ್ತನೇ ಲೋಕಸಭಾ ಚುನಾವಣೆಯು ಹೊಸದೇ ಒಂದು ಯುಗಕ್ಕೆ ನಾಂದಿ ಹಾಡಿತ್ತು. ಅದೇ ಮೊದಲ ಬಾರಿಗೆ ಯಾವ ಪಕ್ಷವೂ ಬಹುಮತ ಪಡೆಯದೆ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಅತಂತ್ರ ಸ್ಥಿತಿಯ ನಡುವೆಯೂ ಸಂಸತ್‌ ಸದಸ್ಯರು ತಮ್ಮ ಪಕ್ಷ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>ಈ ಲೇಖನ ಸರಣಿಯು &#8216;ದಿ ಅರ್ಲಿ ಪಾರ್ಲಿಮೆಂಟರಿಯನ್ಸ್&#8217; ಎಂಬ ಶೀರ್ಷಿಕೆಯ &#8216;ದಿ ವೈರ್&#8217; ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಐದನೇ ಲೇಖನ</p>
</blockquote>



<pre class="wp-block-code"><code><em>ರಾಷ್ಟ್ರೀಯ ರಾಜಕಾರಣದಲ್ಲಿ ರೇ ಅವರೊಬ್ಬ ಅತ್ಯುನ್ನತ ವ್ಯಕ್ತಿತ್ವವಾಗಿದ್ದರು. ತನ್ನ ಕೊನೆಗಾಲದವರೆಗೂ ಸಮಾಜವಾದಿ ಸಿದ್ಧಾಂತದಲ್ಲಿ ನಂಬಿಕೆಯಿಟ್ಟದ್ದರು. ಒಡಿಶಾ ಜೊತೆಗೆ ದೇಶದ ಇತರ ಭಾಗಗಳ ಯುವರಾಜಕಾರಣಿಗಳಿಗೆ ಸ್ಪೂರ್ತಿಯ ಸೆಲೆಯಾಗಿದ್ದರು.</em></code></pre>



<p>ಭಾರತದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಒಂಭತ್ತನೇ ಲೋಕಸಭಾ ಚುನಾವಣೆಯು ಹೊಸದೇ ಒಂದು ಯುಗಕ್ಕೆ ನಾಂದಿ ಹಾಡಿತ್ತು. ಅದೇ ಮೊದಲ ಬಾರಿಗೆ ಯಾವ ಪಕ್ಷವೂ ಬಹುಮತ ಪಡೆಯದೆ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಅತಂತ್ರ ಸ್ಥಿತಿಯ ನಡುವೆಯೂ ಸಂಸತ್‌ ಸದಸ್ಯರು ತಮ್ಮ ಪಕ್ಷ ಬೇಧವನ್ನು ಮರೆತು ರಬಿ ರೇ ಅವರನ್ನು ಸ್ಪೀಕರ್‌ ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡುತ್ತಾರೆ. ಸರಳತೆ ಮತ್ತು ಪಾರದರ್ಶಕ ಪ್ರಾಮಾಣಿಕತೆಗಳ ಒಟ್ಟು ಮೊತ್ತವಾಗಿದ್ದ ರೇ, ತಮ್ಮ ನಿಷ್ಪಕ್ಷಪಾತ ಮತ್ತು ವಿವೇಚನಾಯುಕ್ತ ಶೈಲಿಯಿಂದ ಸ್ಪೀಕರ್‌ ಸ್ಥಾನದ ಪ್ರತಿಷ್ಠೆ ಮತ್ತು ಘನತೆಯನ್ನು ಮೇಲಕ್ಕೆತ್ತಿ ಶ್ರೀಮಂತಗೊಳಿಸಿದರು.</p>



<p>1926 ನವೆಂಬರ್‌ 26 ರಂದು ಒರಿಸ್ಸಾದ ಆಗಿನ ಪುರಿ ಜಿಲ್ಲೆಯ (ಈಗ ಖುರ್ದಾ) ಭಾಂಗರ್‌ ಗ್ರಾಮದಲ್ಲಿ ರಬಿ ರೇ ಅವರ ಜನನ. ತನ್ನೂರಿನ ಇತರರಂತೆ ಅವರು ಕೂಡ ಸ್ವಾತಂತ್ರ್ಯ ಹೋರಾಟಕ್ಕೆ ಆಕರ್ಷಿತರಾಗಿದ್ದರು. ಒಬ್ಬ ನಿಜವಾದ ಸಮಾಜವಾದಿ ಮತ್ತು ಲೋಹಿಯಾ ಅವರ ಶಿಷ್ಯನಾಗಿದ್ದ ರೇ, <a href="tel:194647">1946-47</a> ರ ಹೊತ್ತಿಗೆ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುತ್ತಾರೆ. ಅದು ರಾವೆನ್‌ಶಾ ಕಾಲೇಜಿನಲ್ಲಿ (ಈಗ ವಿಶ್ವವಿದ್ಯಾಲಯ) ಓದುವಾಗ ನಡೆದ ಘಟನೆ. ಅವರು ಯೂನಿಯನ್‌ ಜಾಕ್‌ ಧ್ವಜವನ್ನು ಇಳಿಸಿ ತ್ರಿವರ್ಣ ಪತಾಕೆಯನ್ನು ಹಾರಿಸಿದ್ದರು. ಆ ಮೂಲಕ ಇತರ ವಿದ್ಯಾರ್ಥಿಗಳೊಂದಿಗೆ ಬಂಧನಕ್ಕೊಳಗಾಗಿದ್ದರು. ಆದರೆ, ಆಗಿನ್ನೂ ದೇಶ ಬ್ರಿಟಿಷ್‌ ಆಳ್ವಿಕೆಯ ಅಡಿಯಲ್ಲಿದ್ದರೂ ಕೂಡ ಶಿಕ್ಷಣ ಸಂಸ್ಥೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಬೇಕೆಂಬ ವಿದ್ಯಾರ್ಥಿಗಳ ಬೇಡಿಕೆಗೆ ಸರಕಾರ ಮಣಿಯಲೇಬೇಕಾಗಿ ಬಂದಿತ್ತು.</p>



<p>ತನ್ನ ಪ್ರಾಂತ್ಯದ ಪ್ರತಿಷ್ಠಿತ ರಾವೆನ್‌ಶಾ ಕಾಲೇಜಿನಲ್ಲಿ ಇತಿಹಾಸದಲ್ಲಿ ಬಿಎ (ಆನರ್ಸ್) ಪದವಿ ಪಡೆದ ನಂತರ, ಕಟಕ್‌ನ ಮಧುಸೂದನ್‌ ಲಾ ಕಾಲೇಜಿನಲ್ಲಿ ಕಾನೂನು ಅಧ್ಯಯನ ಮಾಡುತ್ತಾರೆ ರಬಿ ರೇ. ಎರಡೂ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗುವ ಮೂಲಕ ಅವರು ತಮ್ಮ ರಾಜಕೀಯ ಭವಿಷ್ಯದ ಬುನಾದಿಯನ್ನು ಹಾಕಿಕೊಂಡಿದ್ದರು.</p>



<p>ಲೋಹಿಯಾ ಅವರ ಅತ್ಯಂತ ನಿಕಟವರ್ತಿಗಳಲ್ಲಿ ರೇ ಒಬ್ಬರಾಗಿದ್ದರು. 1949 ರಲ್ಲಿ ಸ್ಥಾಪಿಸಲ್ಪಟ್ಟ ಯಂಗ್‌ ಸೋಷ್ಯಲಿಸ್ಟ್‌ ಲೀಗ್‌ (ವೈಎಸ್‌ಎಲ್‌) ಅಥವಾ “ನೌಜವಾನ್‌ ಸಮಾಜವಾದಿ ಸಂಘ”ದ ಸ್ಥಾಪಕರಲ್ಲಿ ರೇ ಒಬ್ಬರಾಗಿದ್ದರು. ನಂತರ ಅದು ಸಮಾಜವಾದಿ ಯುವಜನ ಸಭಾ (ಎಸ್‌ವೈಎಸ್‌) ಎಂದು ಮರುನಾಮಕರಣಗೊಳ್ಳುತ್ತದೆ. 1948 ರಲ್ಲಿ ಲೋಹಿಯಾ ಒಡಿಶಾ ಭೇಟಿ ನೀಡಿದ್ದರು. ಆ ಸಮಯದಲ್ಲಿ ಅವರು ಕೆಳವರ್ಗದ ಜನರ ಬಗ್ಗೆ ಆಡಿದ ಮಾತುಗಳು ರೇ ಅವರ ಹೃದಯವನ್ನು ಮೀಟುತ್ತವೆ. ಸಮಾಜವಾದಿ ತತ್ವಗಳನ್ನು ಅಳವಡಿಸಿಕೊಂಡಿದ್ದ ಅವರು, ರಾವೆನ್‌ಶಾ ಕಾಲೇಜಿನಲ್ಲಿ ತನ್ನ ಪರೀಕ್ಷಾ ಅರ್ಜಿಯಲ್ಲಿ ತುಂಬಬೇಕಿದ್ದ ಜಾತಿ ಕಾಲಮ್ಮನ್ನು ತುಂಬಲು ನಿರಾಕರಿಸುತ್ತಾರೆ.</p>



<p>ಕಾಲೇಜು ದಿನಗಳಿಂದಲೂ ಸಮಾಜವಾದದಲ್ಲಿ ತೀವ್ರ ನಂಬಿಕೆಯುಳ್ಳವರಾಗಿದ್ದ ರೇ, 1948 ರಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರಿಕೊಳ್ಳುತ್ತಾರೆ. ತನಗೆ ಸಹಜವಾಗಿಯೇ ಒಲಿದಿದ್ದ ನಾಯಕತ್ವ ಗುಣಗಳು ಮತ್ತು ಸಮಾಜವಾದದ ಕಡೆಗಿನ ಆಳವಾದ ಬದ್ಧತೆಯಿಂದಾಗಿ ಸಮಾಜವಾದಿ ಚಳುವಳಿಯ ಮುಂಚೂಣಿಯಲ್ಲಿ ಸದಾ ಕಾಣಿಸಿಕೊಳ್ಳುತ್ತಾರೆ. 1953 ರಲ್ಲಿ ವಾರಣಾಸಿಯ ಕಾಶಿ ವಿದ್ಯಾಪೀಠದಲ್ಲಿ ನಡೆದ ಸಮಾಜವಾದಿ ಯುವಕ್‌ ಸಭಾದ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಾರೆ. ಮುಂದಿನ ವರ್ಷದ ತನಕ ಆ ಸ್ಥಾನದಲ್ಲಿ ಅವರು ಮುಂದುವರಿದಿದ್ದರು. 1955 ರಲ್ಲಿ ಅವರು ಒರಿಸ್ಸಾದ ಪುರಿಯಲ್ಲಿ ಎಸ್‌ವೈಎಸ್‌ ಸಮ್ಮೇಳನವನ್ನು ಆಯೋಜಿಸುತ್ತಾರೆ. ಅದರ ಉದ್ಘಾಟನೆಯನ್ನು ಶ್ರೀ ಮಧು ಲಿಮಾಯೆ ಅವರು ನೆರವೇರಿಸಿದ್ದರು. 1956 ರಲ್ಲಿ ಲೋಹಿಯಾ ನೇತೃತ್ವದೊಂದಿಗೆ ಅವರು ಒರಿಸ್ಸಾದಲ್ಲಿ ಸಮಾಜವಾದಿ ಪಕ್ಷವನ್ನು ಸ್ಥಾಪಿಸುತ್ತಾರೆ. ಆ ಅವಧಿಯಲ್ಲಿ ರೇ ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರೂ ಆಗಿದ್ದರು. 1960 ರಲ್ಲಿ ಸುಮಾರು ಒಂದು ವರ್ಷ ಕಾಲ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು.</p>



<p>ಸಮಾಜವಾದಿ ಚಳವಳಿಯ ಸಮಯದಲ್ಲಿ, <a href="tel:196074">1960-74</a> ರ ಕಾಲಾವಧಿಯಲ್ಲಿ ಪಕ್ಷವು ಮುನ್ನಡೆಸುತ್ತಿದ್ದ ಹಲವು ಸತ್ಯಾಗ್ರಹಗಳ ಕಾರಣಗಳಿಂದ ಹಲವಾರು ಬಾರಿ ಜೈಲುವಾಸ ಅನುಭವಿಸಿದ್ದರು. <a href="tel:197576">1975-76</a> ರ ತುರ್ತು ಪರಿಸ್ಥಿತಿಯ ಕಾಲದಲ್ಲೂ ಜೈಲುವಾಸ ಅನುಭವಿಸಿದ್ದರು.</p>



<p>ರೇ ಅವರ ಸಂಸತ್‌ ಪ್ರವೇಶ ಆರಂಭವಾಗುವುದು 1967 ರಲ್ಲಿ ನಡೆದ ನಾಲ್ಕನೇ ಲೋಕಸಭಾ ಚುನಾವಣೆಯ ಮೂಲಕ. ಸಂಸತ್ತಿನಲ್ಲಿ ಸಂಯುಕ್ತ ಸಮಾಜವಾದಿ ಪಕ್ಷದ (ಎಸ್‌ಎಸ್‌ಪಿ) ಸಂಸದೀಯ ನಾಯಕರೂ ಆಗಿದ್ದರು. ಈ ಅವಧಿಯಲ್ಲಿ ಲೋಹಿಯಾ ಕೂಡ ಸಂಸದರಾಗಿದ್ದರು. ತನ್ನ ನೇರ ಮತ್ತು ಸ್ಪಷ್ಟ ದೃಷ್ಟಿಕೋನಗಳು, ವಿರೋಧಿಸುವಾಗಲೂ ಅವರಿಗಿದ್ದ ಕಟ್ಟುವ ಗುಣಗಳ ಕಾರಣದಿಂದ ಅವರೊಬ್ಬ ಸಮರ್ಥ ಸಂಸದರಾಗಿ ರೂಪುಗೊಳ್ಳುತ್ತಾರೆ. ಸಂಸತ್ತಿನ ಚರ್ಚೆಗಳು ಮತ್ತು ಒಟ್ಟು ರಾಷ್ಟ್ರೀಯ ಬದುಕಿಗೆ ಅವರ ಕೊಡುಗೆ ಅಗಾಧವೂ ಶ್ರೀಮಂತವೂ ಆಗಿತ್ತು. 1974 ರಲ್ಲಿ ಒರಿಸ್ಸಾದಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತಾರೆ.</p>



<p>1977 ರಲ್ಲಿ ನಡೆದ ಆರನೇ ಲೋಕಸಭಾ ಚುನಾವಣೆಯು ಒಂದು ಹೊಸ ರಾಜಕೀಯ ವ್ಯವಸ್ಥೆಯನ್ನು ಹುಟ್ಟುಹಾಕಿತ್ತು. ಸ್ವಾತಂತ್ರ್ಯಾ ನಂತರದ ಭಾರತದ ಚುನಾವಣಾ ರಾಜಕಾರಣದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದ ಕಾಂಗ್ರೆಸ್‌ ಪಕ್ಷ ಮೊದಲ ಬಾರಿಗೆ ಸೋತಿತ್ತು. ಆ ಜಾಗದಲ್ಲಿ ಜನತಾ ಪಕ್ಷ ಸರಕಾರ ರಚಿಸಿತ್ತು. ರೇ ಅವರ ನಿಸ್ವಾರ್ಥ ಸೇವೆಯಿಂದ ಪ್ರಭಾವಿತರಾಗಿದ್ದ ಮೊರಾರ್ಜಿ ದೇಸಾಯಿ 1979 ರ ಜನವರಿಯಲ್ಲಿ ಅವರನ್ನು ಆರೋಗ್ಯ ಸಚಿವರಾಗಿ ತಮ್ಮ ಸಂಪುಟಕ್ಕೆ ಸೇರಿಸಿಕೊಳ್ಳುತ್ತಾರೆ. ತಮ್ಮ ಇತರ ಕರ್ತವ್ಯಗಳ ಜೊತೆಗೆ 1980 ರ ಜನವರಿ ತನಕ ಅವರು ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು.</p>



<p>1989 ರ ಸಾರ್ವತ್ರಿಕ ಚುನಾವಣೆಯಲ್ಲಿ ಒರಿಸ್ಸಾದ ಕೇಂದ್ರಪಾರ ಕ್ಷೇತ್ರದಿಂದ ಜನತಾ ದಳದ ಟಿಕೆಟ್‌ ಮೂಲಕ ರೇ ಎರಡನೇ ಬಾರಿಗೆ ಸಂಸತ್‌ ಪ್ರವೇಶ ಮಾಡುತ್ತಾರೆ. ಆದರೆ, ಅವರು ಬಹಳ ದೊಡ್ಡ ಪ್ರಸಿದ್ದಿ ಪಡೆಯುವುದು <a href="tel:198991">1989-91</a> ಕಾಲಾವಧಿಯಲ್ಲಿ ಒಂಬತ್ತನೇ ಲೋಕಸಭೆಗೆ ಸ್ಪೀಕರ್‌ ಆಗುವ ಮೂಲಕ. ಅದು ಭಾರತೀಯ ರಾಜಕಾರಣದ ಅತ್ಯಂತ ಪ್ರಕ್ಷುಬ್ಧ ದಿನಗಳಾಗಿದ್ದವು. ಅವರು ಒರಿಸ್ಸಾ ಮೂಲದ ಮೊದಲ ಸ್ಪೀಕರ್‌ ಕೂಡ ಆಗಿದ್ದರು. 1991 ರಲ್ಲಿ ಮೂರನೇ ಬಾರಿಗೆ ಹತ್ತನೇ ಲೋಕಸಭೆಗೂ ಚುನಾಯಿತರಾಗುತ್ತಾರೆ.</p>



<p>1989 ಡಿಸೆಂಬರ್‌ 19 ರಂದು ಒಂಬತ್ತನೇ ಲೋಕಸಭೆಯ ಸ್ಪೀಕರ್‌ ಆಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದರು. ತನ್ನ ಈ ಉನ್ನತ ಹುದ್ದೆಯ ಗಂಭೀರ ಜವಾಬ್ದಾರಿ ಮತ್ತು ನಿಷ್ಪಕ್ಷಪಾತದ ಸಂಪೂರ್ಣ ಅರಿವಿದ್ದ ರೇ ಅವರು, ತಾವು ಸ್ಪೀಕರ್‌ ಸ್ಥಾನದಲ್ಲಿ ಇರುವ ತನಕ ಪಕ್ಷ ರಾಜಕಾರಣವನ್ನು ಮುಂದಿಡುವುದಿಲ್ಲವೆಂದೂ ಸರ್ವರಿಗೂ ನ್ಯಾಯಯುತವಾಗಿರುತ್ತೇನೆ ಎಂದೂ ಲೋಕಸಭೆಗೆ ಭರವಸೆ ನೀಡಿದ್ದರು.</p>



<p>ರೇ ಅವರು ಸ್ಪೀಕರ್ ಆಗಿದ್ದ ಅವಧಿಯಲ್ಲಿ, <a href="http://ವಿ.ಪಿ">ವಿ.ಪಿ</a>. ಸಿಂಗ್ ಮತ್ತು ಚಂದ್ರಶೇಖರ್ ಪ್ರಧಾನ ಮಂತ್ರಿಗಳಾಗಿದ್ದರು. ರಾಜೀವ್ ಗಾಂಧಿ ವಿರೋಧ ಪಕ್ಷದ ನಾಯಕರಾಗಿದ್ದರು. ಅವರು ಕಾಯ್ದುಕೊಂಡ ಉನ್ನತ ಗುಣಗಳ ಕಾರಣದಿಂದ ಲೋಕಸಭೆಯಲ್ಲಿ ಪಕ್ಷಾತೀತವಾಗಿ ಎಲ್ಲ ಸದಸ್ಯರು ಅವರನ್ನು ಪ್ರೀತಿಯಿಂದ ಗೌರವಿಸುತ್ತಿದ್ದರು.</p>



<p>ರೇ ಅವರು ಕೇವಲ ಒಂದೂವರೆ ವರ್ಷ ಮಾತ್ರವೇ ಸ್ಪೀಕರ್‌ ಹುದ್ದೆಯಲ್ಲಿದ್ದರಾದರೂ, ಪ್ರತಿ ಅಧಿವೇಶನದಲ್ಲು ಅವರಿಗೆ ಹಲವು ಸವಾಲುಗಳು ಎದುರಾಗಿದ್ದವು. ಅವುಗಳನ್ನು ಅವರು ದೃಢವಾಗಿ ಮತ್ತು ಚತುರತೆಯಿಂದ ನಿಭಾಯಿಸಿದ್ದರು. ಕೆಲವು ಕ್ಲಿಷ್ಟ ಮತ್ತು ಸೂಕ್ಷ್ಮ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದರ ಜೊತೆಗೆ, ಕೆಲವು ಕಾರ್ಯ ವಿಧಾನಗಳಲ್ಲಿ ಹೊಸ ಪ್ರಯೋಗಗಳನ್ನು ನಡೆಸಿದರು. ಆ ಮೂಲಕ ಸಂಸತ್ತಿನ ಕಾರ್ಯನಿರ್ವಹಣೆ ಹೆಚ್ಚು ಪರಿಣಾಮಕಾರಿಯಾಗಿ ಬದಲಾಯಿತು.</p>



<p>ಜನತಾ ದಳ ವಿಭಜನೆಯಾದ ನಂತದ ಆ ಪಕ್ಷದ ಸಂಸದರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸುವ ವಿಷಯದಲ್ಲಿ ರೇ ತೆಗೆದುಕೊಂಡ ನಿರ್ಧಾರವು ಅವರ ಅತ್ಯಂತ ಪ್ರಮುಖ ಮತ್ತು ದೂರಗಾಮಿ ನಿರ್ಧಾರಗಳಲ್ಲಿ ಒಂದು. 1990 ನವೆಂಬರ್‌ 6 ರಂದು ಜನತಾ ದಳ ವಿಭಜನೆಯಾಗಿ, ಅದರ 58 ಸದಸ್ಯರು ತಮ್ಮ ಹೊಸ ಗುರುತಾಗಿ ಜನತಾ ದಳ (ಎಸ್) ಎಂದು ಘೋಷಿಸಿಕೊಳ್ಳುತ್ತಾರೆ. ವಿಭಜನೆಯ ಸಮಯ ಮತ್ತು ಉಚ್ಛಾಟನೆ ಕುರಿತು ವಾದ ಮತ್ತು ಪ್ರತಿವಾದಗಳು ಎದ್ದಿದ್ದವು. ಇಂತಹ ಕ್ಲಿಷ್ಟಕರ ಸಮಸ್ಯೆಯನ್ನು ಬಿಡಿಸುವ ಕಷ್ಟ ರೇ ಅವರದ್ದಾಗಿತ್ತು. ತಾನು ಯಾವುದೇ ನಿರ್ಧಾರಕ್ಕೆ ಬರುವ ಮೊದಲು ಇದರ ಸಾಧಕ-ಬಾಧಕಗಳನ್ನು ಅವರು ನಿರ್ಲಿಪ್ತವಾಗಿ ಪರಿಶೀಲಿಸಿದ್ದರು. ಆ ಮೂಲಕ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದರು. ತನ್ನ ಕಾನೂನು ಜ್ಞಾನ ಮತ್ತು ನಿಷ್ಪಕ್ಷಪಾತಿ ನಿಲುವುಗಳು ಇಲ್ಲಿ ಬಹಳ ಸಹಾಯ ಮಾಡಿದವು. ಇದೊಂದು ಐತಿಹಾಸಿಕ ಉಲ್ಲೇಖಾರ್ಹ ತೀರ್ಪಾಗಿ ಹೊರ ಬಂದಿತ್ತು.</p>



<p>ಸ್ಪೀಕರ್ ಆಗಿ ರೇ ತೆಗೆದುಕೊಂಡ ಮತ್ತೊಂದು ಪ್ರಮುಖ ನಿರ್ಧಾರವೆಂದರೆ, ಸುಪ್ರೀಂ ಕೋರ್ಟಿನ ನ್ಯಾಯಾಧೀಶರನ್ನು ಹುದ್ದೆಯಿಂದ ತೆಗೆದುಹಾಕುವಂತೆ ರಾಷ್ಟ್ರಪತಿಗಳಿಗೆ ಕೋರುವ ಮೊಟ್ಟ ಮೊದಲ ಪ್ರಸ್ತಾವನೆಯೊಂದನ್ನು ಅಂಗೀಕರಿಸುವುದು. ಅವರು ಆ ಪ್ರಸ್ತಾವನೆಯನ್ನು ಒಪ್ಪಿ, ನ್ಯಾಯಾಧೀಶರನ್ನು ತೆಗೆದುಹಾಕಲು ಸಲ್ಲಿಸಿದ್ದ ಆಧಾರಗಳ ತನಿಖೆಗೆ ಒಂದು ಸಮಿತಿಯನ್ನೂ ರಚಿಸಿದ್ದರು. ಕಾನೂನಿನ ಅಡಿಯಲ್ಲಿ ಈ ಪ್ರಸ್ತಾವನೆಗೆ ತನ್ನದೇ ಆದ ನೆಲೆ ಇರುವುದರಿಂದ, ಇತರ ಪ್ರಸ್ತಾವನೆಗಳಂತೆ ಸದನದ ವಿಸರ್ಜನೆಯೊಂದಿಗೆ ಅದು ರದ್ಧಾಗುವುದಿಲ್ಲ. ಕೊನೆಗೆ ಹತ್ತನೇ ಲೋಕಸಭೆಯು ಈ ಪ್ರಸ್ತಾವನೆಯನ್ನು ಅಂಗೀಕರಿಸುತ್ತದೆ.</p>



<p>ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಆಹಾರದ ಲಭ್ಯತೆ, ಕುಡಿಯುವ ನೀರಿನ ಸೌಲಭ್ಯ, ವಸತಿ, ಆರೋಗ್ಯ ರಕ್ಷಣೆ, ಉಳುವವನಿಗೆ ಭೂಮಿ, ಕೃಷಿ ಉಪಕರಣಗಳು, ಉದ್ಯೋಗ, ಗುಡಿಸಲುಗಳ ಮತ್ತು ಸಣ್ಣ ಕೈಗಾರಿಕೆಗಳ ಅಭಿವೃದ್ಧಿ, ಪ್ರಾಥಮಿಕ ಶಿಕ್ಷಣ, ಬಡ ಮತ್ತು ದುರ್ಬಲ ವರ್ಗಗಳ ಶೋಷಣೆ ಹಾಗೂ ಕಿರುಕುಳದ ವಿರುದ್ಧ ರಕ್ಷಣೆ ಮುಂತಾದ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ಎತ್ತಲು ಸಂಸದರಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ನೀಡುವ ಮೂಲಕ ರೇ ಲೋಕಸಭೆಯ ಕಾರ್ಯನಿರ್ವಹಣೆಗೆ ಹೊಸ ದಿಕ್ಸೂಚಿಯನ್ನು ಒದಗಿಸಿದವರು. ಕೋಮು ಗಲಭೆಗಳು, ಬೆಲೆ ಏರಿಕೆ, ಯೋಜನೆ ಮತ್ತು ಅಭಿವೃದ್ಧಿ, ರಕ್ಷಣೆಯನ್ನು ಬಲಪಡಿಸುವುದು ಮುಂತಾದ ರಾಷ್ಟ್ರೀಯ ಕಾಳಜಿಯ ವಿಷಯಗಳಿಗೂ ಅವರು ಆದ್ಯತೆ ನೀಡಿದ್ದರು. ಇಂತಹ ಸೂಕ್ಷ್ಮ ಮತ್ತು ನಿರ್ಣಾಯಕ ವಿಷಯಗಳಲ್ಲಿ ಸದನವು ತನ್ನ ನಿಜವಾದ ಕಾಳಜಿಯನ್ನು ವ್ಯಕ್ತಪಡಿಸಲು&nbsp; ಮೂಲಕ ಅವರು ಅನುವು ಮಾಡಿಕೊಡುತ್ತಿದ್ದರು. ಎಲ್ಲ ಚರ್ಚೆಗಳಲ್ಲಿಯೂ ಸಕಾರಾತ್ಮಕ ಮತ್ತು ರಚನಾತ್ಮಕ ಫಲಿತಾಂಶಗಳು ಹೊರಬರುವಂತೆ ಅವರು ಸದನದ ಚರ್ಚೆಗಳನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದರು.</p>



<p>ರೇ ಅವರ ಅಧಿಕಾರಾವಧಿಯಲ್ಲಿ ನಡೆದ ಇನ್ನೊಂದು ಐತಿಹಾಸಿಕ ಸಂಗತಿಯೆಂದರೆ, ಪ್ರಧಾನ ಮಂತ್ರಿ <a href="http://ವಿ.ಪಿ">ವಿ.ಪಿ</a>. ಸಿಂಗ್‌ ಸಲ್ಲಿಸಿದ್ದ ಮೊಟ್ಟ ಮೊದಲ ವಿಶ್ವಾಸಮತ ಯಾಚನೆ ಒಂದೇ ದಿನದಲ್ಲಿ ಚರ್ಚೆ ನಡೆದು ಅಂಗೀಕಾರಗೊಳ್ಳುವುದು. ಹನ್ನೊಂದು ತಿಂಗಳುಗಳ ತರುವಾಯ ಮೊದಲ ಬಾರಿಗೆ ವಿಶ್ವಾಸಮತ ಯಾಚನೆಯಲ್ಲಿ ಸೋತು <a href="http://ವಿ.ಪಿ">ವಿ.ಪಿ</a>. ಸಿಂಗ್‌ ಸರಕಾರ ಪತನವಾಗುವುದರ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಯಾಗುತ್ತದೆ.</p>



<p>ತನ್ನ ಅಧಿಕಾರಾವಧಿಯಲ್ಲಿ, ಸಂಸದರಿಗೆ ತುರ್ತು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳನ್ನು ಎತ್ತಿ ಚರ್ಚೆ ನಡೆಸಲು ಅನುಕೂಲವಾಗುವಂತೆ ಸದನದ ಕಾರ್ಯವಿಧಾನಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿದ್ದರು. ಸದನದ ಕಲಾಪ ಪಟ್ಟಿಯಲ್ಲಿಲ್ಲದಿದ್ದರೂ ತುರ್ತು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳನ್ನು ಚರ್ಚಿಸಲು ಸಂಸದರು “ಶೂನ್ಯ ವೇಳೆ”ಯನ್ನು ಬಳಸಿಕೊಳ್ಳುತ್ತಿದ್ದರು. ಸದನದ ವೇಳೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲೆಂದು ರೇ, ಈ ಶೂನ್ಯ ವೇಳೆಯನ್ನು ಸಾಂಸ್ಥಿಕವಾಗಿ ಮರು ರೂಪಿಸಿದರು. ಸದನದ ವಿವಿಧ ಪಕ್ಷಗಳು ಮತ್ತು ಗುಂಪುಗಳ ನಾಯಕರ ಅಭಿಪ್ರಾಯಗಳನ್ನು ಪಡೆದುಕೊಂಡ ನಂತರ, ಪ್ರತಿ ಸಭೆಯ ಬೆಳಿಗ್ಗೆ 10:30ರೊಳಗೆ ತಮ್ಮ ವಿಷಯಗಳನ್ನು ಸಲ್ಲಿಸಿದರೆ, ಅಂತಹ ತುರ್ತು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳನ್ನು ಸಂಕ್ಷಿಪ್ತವಾಗಿ ಸಲ್ಲಿಸಲು ಏಳು ಸಂಸದರಿಗೆ ಅವಕಾಶ ನೀಡಲಾಗಿತ್ತು. ಈ ವ್ಯವಸ್ಥೆಯನ್ನು ಸದನದ ಎಲ್ಲ ವಿಭಾಗಗಳು ಮೆಚ್ಚಿಕೊಂಡವು. ಅದಕ್ಕೆ ಕಾರಣ ಸದನದಲ್ಲಿ ಹೆಚ್ಚು ವಿಷಯಗಳನ್ನು ಕ್ರಮಬದ್ಧವಾಗಿ ಚರ್ಚಿಸಬಹುದು ಮತ್ತು ಸದನದ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಬಹುದು ಎಂಬುದು ಮಾತ್ರವೇ ಆಗಿರಲಿಲ್ಲ. ಸದನದ ಗದ್ದಲಕ್ಕೆ ಕಾರಣವಾಗುತ್ತಿದ್ದ ಕೆಲವು ವಿಷಯಗಳಲ್ಲಿ ಸರಕಾರವು ದೃಢವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿಯೂ ಇದು ರಚನಾತ್ಮಕವಾಗಿ ಕೆಲಸ ಮಾಡುತ್ತಿತ್ತು.</p>



<p>ಒಕ್ಕೂಟ ಸರಕಾರದ ಸಚಿವ ಮತ್ತು ಲೋಕಸಭಾ ಸ್ಪೀಕರ್ ಆಗಿ, ರೇ ಅವರು ಸದನದ ನಡಾವಳಿಯಲ್ಲಿ ಒಂದು ಶ್ರೀಮಂತ ಸಂಪ್ರದಾಯವನ್ನು ಹುಟ್ಟು ಹಾಕಿದ್ದರು. ಅವರು ತನ್ನ ಬದುಕಿನಲ್ಲಿ ಸಮಾಜವಾದಿ ವಿಚಾರಗಳಿಗೆ ಮತ್ತು ಮೌಲ್ಯಗಳಿಗೆ ಬದ್ಧತೆಯಿಂದ ಕೆಲಸ ಮಾಡಿದ್ದರು. ವಿವಿಧ ಸಂಸದೀಯ ನಿಯೋಗಗಳ ನಾಯಕರಾಗಿ ವ್ಯಾಪಕವಾಗಿ ಪ್ರಯಾಣ ಮಾಡಿದ್ದರು. “ಚೌಕಂಬಾ” (ಹಿಂದಿ) ಪಾಕ್ಷಿಕ ಮತ್ತು “ಸಮತಾ” (ಒರಿಯಾ) ಮಾಸ ಪತ್ರಿಕೆಗಳ ಸಂಪಾದಕರಾಗಿಯೂ ಕೆಲಸ ಮಾಡಿದ್ದರು.</p>



<p>ರಬಿ ರೇ, 2017 ಮಾರ್ಚ್‌ 6 ರಂದು ತಮ್ಮ ದೀರ್ಘಕಾಲದ ಅನಾರೋಗ್ಯದಿಂದ, ಪತ್ನಿ ಡಾ. ಸರಸ್ವತಿ ಸ್ವೈನ್‌ ಅವರನ್ನು ಅಗಲಿ, ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.</p>



<p>ಆಗಿನ ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರೇ ಅವರ ಪತ್ನಿಗೆ ಬರೆದ ಪತ್ರದಲ್ಲಿ “ಅವರ ನಿಧನದೊಂದಿಗೆ, ದೇಶವು ಸಮಾಜದ ತಳಮಟ್ಟದೊಂದಿಗೆ ಸದಾ ಸಂಪರ್ಕವನ್ನಿಟ್ಟುಕೊಂಡಿದ್ದ ನಾಯಕನನ್ನು ಕಳೆದುಕೊಂಡಿತು.” ಎಂದು ಬರೆದರು.</p>



<p>ಆಗಿನ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ರೇ ಅವರನ್ನು “ಪರಿಣತ ಸಮಾಜವಾದಿ ನಾಯಕ” ಎಂದು ಬಣ್ಣಿಸಿದರು. ಅವರ ಶಿಷ್ಯರಲ್ಲಿ ಒಬ್ಬರಾಗಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, “ರಬಿ ರೇಜೀ ನನಗೆ ರಕ್ಷಕನಂತೆ ಇದ್ದರು. ಅವರ ನಿಧನವು ಭಾರತೀಯ ರಾಜಕೀಯಕ್ಕೆ ದೊಡ್ಡ ನಷ್ಟವಾಗಿದೆ ಮತ್ತು ಸಮಾಜವಾದಿ ಚಳುವಳಿಗೆ ಅವರು ನೀಡಿದ ಕೊಡುಗೆಗಳು ಶಾಶ್ವತವಾಗಿ ಉಳಿಯುತ್ತವೆ” ಎಂದು ಹೇಳಿದರು.</p>



<p>ರಾಷ್ಟ್ರೀಯ ರಾಜಕಾರಣದಲ್ಲಿ ರೇ ಅವರೊಬ್ಬ ಅತ್ಯುನ್ನತ ವ್ಯಕ್ತಿತ್ವವಾಗಿದ್ದರು. ತನ್ನ ಕೊನೆಗಾಲದವರೆಗೂ ಸಮಾಜವಾದಿ ಸಿದ್ಧಾಂತದಲ್ಲಿ ನಂಬಿಕೆಯಿಟ್ಟದ್ದರು. ಒಡಿಶಾ ಜೊತೆಗೆ ದೇಶದ ಇತರ ಭಾಗಗಳ ಯುವರಾಜಕಾರಣಿಗಳಿಗೆ ಬಹಳ ದೊಡ್ಡ ಸ್ಪೂರ್ತಿಯಾಗಿದ್ದರು. ಕೃಷಿ ವಿಗಣ್ಯ ಕೇಂದ್ರ ಮತ್ತು ನವೋದಯ ವಿದ್ಯಾಲಯ ಸ್ಥಾಪನೆ ಸೇರಿದಂತೆ ತನ್ನ ಆರು ದಶಕಗಳ ಕಾಲದ ರಾಜಕೀಯ ಬದುಕಿನಲ್ಲಿ ತನ್ನ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದರು. ರಬಿ ರೇ ಸಮಾಜವಾದಿ ರಾಜಕಾರಣದ ಪ್ರತಿಪಾದಕರಾಗಿದ್ದರು. ಸಮಾಜದ ಸಮಾಜೋ-ಆರ್ಥಿಕ ಅಭಿವೃದ್ಧಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದವರು.</p>
]]></content:encoded>
					
		
		
			</item>
		<item>
		<title>ಸಂಸತ್ತಿನ ಪೂರ್ವಸೂರಿಗಳು ಭಾಗ 3 : ವಿದ್ಯಾರ್ಥಿ ರಾಜಕಾರಣದಿಂದ ಸಂಸತ್ತಿನವರೆಗೆ, ಪಿಕೆವಿ ಶ್ರಮಿಸಿದ ಹಾದಿ ಇದು</title>
		<link>https://peepalmedia.com/from-student-politics-to-parliament/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 24 Jul 2025 10:10:40 +0000</pubDate>
				<category><![CDATA[ಅಂಕಣ]]></category>
		<category><![CDATA[ಇತಿಹಾಸ]]></category>
		<category><![CDATA[ಜನ-ಗಣ-ಮನ]]></category>
		<guid isPermaLink="false">https://peepalmedia.com/?p=63073</guid>

					<description><![CDATA[ಈ ಲೇಖನ ಸರಣಿಯು &#8216;ದಿ ಅರ್ಲಿ ಪಾರ್ಲಿಮೆಂಟರಿಯನ್ಸ್&#8217; ಎಂಬ ಶೀರ್ಷಿಕೆಯ &#8216;ದಿ ವೈರ್&#8217; ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಮೂರನೇ ಲೇಖನ ಕಮ್ಯುನಿಸ್ಟ್ ನಾಯಕ ಪಡಯಾಟ್ಟು ಕೇಶವ ಪಿಳ್ಳೆ ವಾಸುದೇವನ್ ನಾಯರ್ ಸದಾ ಸರಳ ಜೀವನವನ್ನು ನಡೆಸುತ್ತಿದ್ದವರು. ಸಮಾಜದ ಎಲ್ಲಾ ವರ್ಗಗಳಿಗೂ ಸುಲಭವಾಗಿ ಲಭ್ಯವಾಗುತ್ತಿದ್ದ ಮನುಷ್ಯ. ತನ್ನ ಆರು ದಶಕಗಳ ಸುದೀರ್ಘ ರಾಜಕಾರಣದಲ್ಲಿ ಮುಖ್ಯಮಂತ್ರಿಯಾಗಿಯೂ, ನಾಲ್ಕು ಬಾರಿ ಸಂಸದರಾಗಿಯೂ ಆಯ್ಕೆಯಾಗಿದ್ದರು. ಲೋಕಸಭೆಯಲ್ಲಿಸಿಪಿಐಸಂಸದೀಯ ಪಕ್ಷದ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p><strong>ಈ ಲೇಖನ ಸರಣಿಯು &#8216;ದಿ ಅರ್ಲಿ ಪಾರ್ಲಿಮೆಂಟರಿಯನ್ಸ್&#8217; ಎಂಬ ಶೀರ್ಷಿಕೆಯ &#8216;ದಿ ವೈರ್&#8217; ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಮೂರನೇ ಲೇಖನ</strong></p>
</blockquote>



<h2 class="wp-block-heading"><em><strong>ಕಮ್ಯುನಿಸ್ಟ್ ನಾಯಕ ಪಡಯಾಟ್ಟು ಕೇಶವ ಪಿಳ್ಳೆ ವಾಸುದೇವನ್ ನಾಯರ್ ಸದಾ ಸರಳ ಜೀವನವನ್ನು ನಡೆಸುತ್ತಿದ್ದವರು. ಸಮಾಜದ ಎಲ್ಲಾ ವರ್ಗಗಳಿಗೂ ಸುಲಭವಾಗಿ ಲಭ್ಯವಾಗುತ್ತಿದ್ದ ಮನುಷ್ಯ. ತನ್ನ ಆರು ದಶಕಗಳ ಸುದೀರ್ಘ ರಾಜಕಾರಣದಲ್ಲಿ ಮುಖ್ಯಮಂತ್ರಿಯಾಗಿಯೂ, ನಾಲ್ಕು ಬಾರಿ ಸಂಸದರಾಗಿಯೂ ಆಯ್ಕೆಯಾಗಿದ್ದರು. </strong></em><em><strong>ಲೋಕಸಭೆಯಲ್ಲಿ</strong></em><em><strong>ಸಿಪಿಐ</strong></em><em><strong>ಸಂಸದೀಯ</strong></em><em><strong> ಪಕ್ಷದ </strong></em><em><strong>ನಾಯಕರಾಗಿದ್ದರು</strong></em><em><strong>.</strong></em></h2>



<p>ಹಿರಿಯ ಸಂಸದ ಮತ್ತು ಕಮ್ಯುನಿಸ್ಟ್ ನಾಯಕ ಪಿಕೆವಿ ಎಂದೇ ಜನಪ್ರಿಯರಾಗಿರುವ ಪಡಯಾಟ್ಟು ಕೇಶವ ಪಿಳ್ಳೆ ವಾಸುದೇವನ್ ನಾಯರ್, ಮಾರ್ಚ್ 2, 1926 ರಂದು ಕೋಟ್ಟಯಂ ಜಿಲ್ಲೆಯ ಕಿಡಂಗೂರಿನಲ್ಲಿ ಜನಿಸಿದರು. ಏಪ್ರಿಲ್ 1977 ರಿಂದ ಅಕ್ಟೋಬರ್ 1978 ರವರೆಗೆ ಕೆ. ಕರುಣಾಕರನ್ ಮತ್ತು <a href="http://ಎ.ಕೆ">ಎ.ಕೆ</a>. ಆಂಟನಿ ಅವರುಗಳ ಸಂಪುಟದಲ್ಲಿ ಕೈಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅದರ ನಂತರ ಅಕ್ಟೋಬರ್ 29, 1978 ರಂದು ಕೇರಳದ ಒಂಬತ್ತನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದ್ದರು. ಆದರೆ, ಕೇರಳದಲ್ಲಿ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್‌) ಸರಕಾರ ರಚಿಸಲು ಅನುಕೂಲಕರ ವಾತಾವರಣ ನಿರ್ಮಿಸಲೆಂದು ಒಂದು ವರ್ಷದೊಳಗೆ, ಅಕ್ಟೋಬರ್‌ 7, 1979 ರಂದು, ತನ್ನ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿದ್ದರು. ಪಿಕೆವಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ತಾನು ವಾಸವಿದ್ದ ಪೆರುಂಬಾವೂರಿಗೆ ಸರಕಾರಿ ಸಾರಿಗೆ ಬಸ್ಸಿನಲ್ಲಿ ಹೋದ ಘಟನೆಯನ್ನು ಅವರ ಸಹೋದ್ಯೋಗಿಗಳು ನೆನೆಯುತ್ತಾರೆ. ಅಂತಹ ಸರಳ ವ್ಯಕ್ತಿತ್ವ ಅವರದ್ದಾಗಿತ್ತು.</p>



<p>ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾ, ಹಿರಿಯ ಕಾನೂನು ತಜ್ಞರಾದ ನ್ಯಾಯಮೂರ್ತಿ <a href="http://ವಿ.ಆರ್">ವಿ.ಆರ್</a>.‌ ಕೃಷ್ಣ ಅಯ್ಯರ್‌ ಆಡಿದ ಮಾತುಗಳು ಹೀಗಿವೆ:<br><em>“ಅವರು ಒಬ್ಬ ನಾಯಕನಾಗಿದ್ದಾಗಲೂ ನನ್ನ ಅತ್ಯುತ್ತುಮ ಸ್ನೇಹಿತರಾಗಿದ್ದರು ಮತ್ತು ಸಾರ್ವಜನಿಕ ವ್ಯಕ್ತಿಯಾಗಿ ಅತ್ಯಂತ ವಿನಯವಂತ ಮನುಷ್ಯರಾಗಿದ್ದರು. ಅವರ ಹವ್ಯಾಸಗಳು, ಜೀವನಶೈಲಿ, ರಾಜಕಾರಣ ಮತ್ತು ಕ್ರಾಂತಿಕಾರಿ ಸಂಘರ್ಷಗಳು ಅವರ ಯಶಸ್ಸಿನ ಗುಟ್ಟುಗಳಾಗಿದ್ದವು. ಅವೇ ಅವರನ್ನು ನಾನು ಇಷ್ಟಪಡುವಂತೆ ಮಾಡಿದ ಸಂಗತಿಗಳು. ಸಿಪಿಐ ಪಕ್ಷವು ಅವರಲ್ಲಿ ಸಮಾಜವಾದಿಯೊಬ್ಬನ ಚಿಂತನೆಯನ್ನೂ, ರಾಷ್ಟ್ರೀಯ ಸಮಸ್ಯೆಗಳ ಬಗೆಗಿನ ಅರಿವನ್ನೂ, ದ್ವಂದ್ವಾತ್ಮಕ ಭೌತವಾದದ ಚಿಂತನೆಯನ್ನೂ ಕಂಡುಕೊಂಡಿತ್ತು. ನನಗೆ ನೆನಪಿರುವಂತೆ ಒಮ್ಮೆ ಬರ್ನಾರ್ಡ್‌ ಶಾ ಹೀಗೆ ಬರೆದಿದ್ದರು. “ಏನೂ ತಿಳಿಯದ ಒಬ್ಬ ವ್ಯಕ್ತಿ. ಆದರೆ ಆತ ತನಗೆ ಎಲ್ಲವೂ ತಿಳಿದಿದೆ ಎಂದು ಭಾವಿಸಿರುತ್ತಾನೆ. </em><em>ಆತ</em><em>ಸ್ಪಷ್ಟವಾಗಿ</em><em>ಒಬ್ಬ</em><em>ರಾಜಕಾರಣಿಯೇ</em><em>ಆಗಿರುತ್ತಾನೆ</em><em>.” ಭಾರತವೆಂಬೋ ಇಂಡಿಯಾದ ರಾಜಕಾರಣದಲ್ಲಿ ಈ ಮಾತು ಖಂಡಿತವಾಗಿಯೂ ಇಂದು ಕೂಡ ಪ್ರಸ್ತುತವೇ ಆಗಿದೆ. ಒಮ್ಮೆ ಚರ್ಚಿಲ್‌ ಕೂಡ “ಪುಂಡರು, ಫಟಿಂಗರು ಮತ್ತು ಮೈಗಳ್ಳರು” ಎಂದು ಕಟುವಾಗಿಯೇ ಜರೆದಿದ್ದರು. ನಕಲಿ ರಾಜಕಾರಣಿಗಳು ಮತ್ತು ಬಲಾಢ್ಯ ಸಂಸತ್‌ ಸದಸ್ಯರ ಬಗ್ಗೆ ಹೇಳಲು ನಾನು ಕೂಡ ಅವೇ ಕಟು ಮಾತುಗಳನ್ನು ಮತ್ತೆ ಉಲ್ಲೇಖಿಸುತ್ತೇನೆ. ಕೆಲವರು ಅಧಿಕಾರದಲ್ಲಿದ್ದರೆ, ಇನ್ನು ಕೆಲವರು ಅಧಿಕಾರಕ್ಕಾಗಿ ಹಾತೊರೆಯುತ್ತದ್ದಾರೆ. ಆದರೆ ಅದಕ್ಕೆಲ್ಲ ವಿರುದ್ಧವಾಗಿ ಪಿಕೆವಿ ತಮ್ಮ ಬದುಕಿನುದ್ದಕ್ಕೂ ಹೇಗೆ ಉದಾತ್ತರಾಗಿದ್ದರು ಎಂಬುದನ್ನು ಸಾಧ್ಯವಾದಷ್ಟು ಗಟ್ಟಿದನಿಯಲ್ಲಿ ಹೇಳುತ್ತೇನೆ. ಅವರು ಅದೆಂತಹ ಮಾದರಿ ರಾಜಕಾರಣಿಯಾಗಿದ್ದರು. ನಮ್ಮ ಮುಂದಿನ ಪೀಳಿಗೆ ಅನುಸರಿಸಬಹುದಾದ ಮಾದರಿಯಾಗಿದ್ದರು. ಅವರು ಕಮ್ಯುನಿಸಮ್ಮಿನ ಸಾರವನ್ನು ಅರಿತಿದ್ದರು. ಸುಖಾಸುಮ್ಮನೆ ಸದ್ದುಗದ್ದಲ ಮಾಡುವ ವ್ಯಕ್ತಿ ಆಗಿರಲೇ ಇಲ್ಲ.”</em><br>ಆಲುವಾದ ಯೂನಿಯನ್‌ ಕ್ರಿಶ್ಚಿಯನ್‌ ಕಾಲೇಜಿನಲ್ಲಿ ವಿದ್ಯಾರ್ಥಿ ದೆಸೆಯಲ್ಲಿಯೇ ಅವರು ರಾಜಕೀಯಕ್ಕೆ ಪ್ರವೇಶಿಸಿದ್ದರು. ದೇಶವು ಆಗ ಸ್ವಾತಂತ್ರ್ಯ ಹೋರಾಟದ ಉತ್ತುಂಗದಲ್ಲಿತ್ತು. ಎಲ್ಲ ಕಡೆಯಲ್ಲಿಯೂ ವಿದ್ಯಾರ್ಥಿಗಳು ಹೋರಾಟದ ಮುಂಚೂಣಿಯಲ್ಲಿರುತ್ತಿದ್ದ ಕಾಲವದು.</p>



<p>ಪಿಕೆವಿ ಅವರಿದ್ದ ತಿರುವಾಂಕೂರು ಪ್ರಾಂತ್ಯವು ರಾಜಾಡಳಿತ ಪ್ರದೇಶವಾಗಿತ್ತು. ಅದು ಬ್ರಿಟಿಷ್‌ ವಸಾಹತುಶಾಹಿಯ ಭಾಗವಾಗಿರಲಿಲ್ಲ. ಹಾಗಾಗಿಯೇ, ರಾಷ್ಟ್ರೀಯ ಹೋರಾಟದಿಂದ ಪ್ರಚೋದಿತವಾಗಿದ್ದರೂ ತಿರುವಾಂಕೂರಿನ ಪ್ರಸಿದ್ಧ ಹೋರಾಟವು ರಾಜಪ್ರಭುತ್ವವನ್ನು ಪ್ರಜಾಪ್ರಭುತ್ವವಾಗಿ ಬದಲಾಯಿಸುವ ಗುರಿಯನ್ನು ಹೊಂದಿತ್ತು.</p>



<p>ಯುಸಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ತೀವ್ರವಾದಿ ಹೋರಾಟ ಮತ್ತು ಸಂಘರ್ಷಕ್ಕೆ ಅದಾಗಲೇ ಹೆಸರುವಾಸಿಯಾಗಿದ್ದರು. ಆ ಕಾಲದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬಹಳ ಮಂದಗಾಮಿ ಮತ್ತು ಶ್ರೀಮಂತರ ಪರ ಎಂದು ತನ್ನ ಸಂಗಾತಿಗಳು ಗುರುತಿಸಿದ್ದ ಕಾರಣದಿಂದಲೇ 1945 ರಲ್ಲಿ ಪಿಕೆವಿ ಕಮ್ಯುನಿಸ್ಟ್‌ ಪಕ್ಷವನ್ನು (ಸಿಪಿಐ) ಸೇರುತ್ತಾರೆ. ಅವರು ಯುಸಿಸಿಯ ಯುನಿಟ್‌ ಕಾರ್ಯದರ್ಶಿ ಮತ್ತು ತಿರುವಾಂಕೂರು ವಿದ್ಯಾರ್ಥಿ ಸಂಘದ ಅಧ್ಯಕ್ಷರೂ ಆಗುತ್ತಾರೆ. ಪ್ರಜಾಪ್ರಭುತ್ವವನ್ನು ಶಕ್ತಿಶಾಲಿಯಾಗಿ ಪ್ರತಿಪಾದಿಸುತ್ತಿದ್ದ ರಾಷ್ಟ್ರೀಯವಾದಿ ವಿದ್ಯಾರ್ಥಿ ಸಂಘಟನೆಯಾಗಿತ್ತು ಅದು. 1948 ರಲ್ಲಿ ಅಖಿಲ ಕೇರಳ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿಯೂ ಪಿಕೆವಿ ಆಯ್ಕೆಯಾಗುತ್ತಾರೆ.</p>



<p>ಈ ಕಾಲದಲ್ಲಿಯೇ ಅವರ ವಿರುದ್ಧ ಮೊದಲ ಅರೆಸ್ಟ್ ವಾರೆಂಟ್‌ ಹೊರಡುವುದು. ಅದು ರಾಜನ ವಿರುದ್ಧ ಮಾಡಿದ್ದ ಭಾಷಣದ ಕಾರಣಕ್ಕಾಗಿತ್ತು. 1947‌ ರಲ್ಲಿ ದೇಶ ಸ್ವತಂತ್ರಗೊಂಡರೂ ಸಿಪಿಐ ಪಕ್ಷವು ಬಡವರ ಹಕ್ಕುಗಳು ಮತ್ತು ಸಮಾಜವಾದಿ ನಾಡಿಗಾಗಿ ಹೋರಾಟವನ್ನು ಮುಂದುವರಿಸಲು ತೀರ್ಮಾನಿಸುತ್ತದೆ.</p>



<p>1948 ರಲ್ಲಿ ಸರಕಾರದ ವಿರುದ್ಧ ಸಶಸ್ತ್ರ ಹೋರಾಟಕ್ಕೆ ಕರೆ ನೀಡುವ ಕಲ್ಕತ್ತಾ ಪ್ರಬಂಧವನ್ನು ಸಿಪಿಐ ಕೈಗೆತ್ತಿಕೊಂಡಾಗ ಪಕ್ಷವನ್ನು ದೇಶದಲ್ಲಿ ನಿಷೇಧಿಸಲಾಗುತ್ತದೆ. ಆಗ ಭೂಗತರಾದ ನೂರಾರು ಕಮ್ಯುನಿಸ್ಟ್‌ ಕಾರ್ಯಕರ್ತರಲ್ಲಿ ಪಿಕೆವಿ ಕೂಡ ಒಬ್ಬರಾಗಿದ್ದರು. ಆ ಕಾಲದಲ್ಲಿ ಪಿಕೆವಿ ಮತ್ತು ಸಂಗಾತಿಗಳು ರಾಜ್ಯಾದ್ಯಂತ ಅಜ್ಞಾತರಾಗಿ ಓಡಾಡಿದ್ದರು. ಆಗ ಅವರ ಗುಪ್ತನಾಮ “ವಲ್ಸನ್”‌ ಎಂದಾಗಿತ್ತು. ಅದು ಅವರ ಇಷ್ಟದ ಸಿಹಿತಿಂಡಿಯ ಹೆಸರೂ ಆಗಿತ್ತು.</p>



<p>ಇದೇ ಕಾಲದಲ್ಲಿ ಅವರು <a href="http://ಕೆ.ಪಿ">ಕೆ.ಪಿ</a>. ಲಕ್ಷ್ಮಿಕುಟ್ಟಿಯಮ್ಮ ಅವರನ್ನು ಪೆರಂಬಾವೂರಿನ ಕೊಪ್ಪಿಳ್ಳಿಲ್‌ ಮನೆಯಲ್ಲಿ ವಿವಾಹವಾಗುವುದು. ವಧು ತನ್ನ ಕಾಲೇಜು ಬದುಕಿನ ಸಹಪಾಠಿಯೂ, ಆತ್ಮೀಯ ಗೆಳೆಯನೂ ಆಗಿದ್ದ ಪಿ. ಗೋವಿಂದ ಪಿಳ್ಳೆಯ ಸಹೋದರಿಯಾಗಿದ್ದ ಕಾರಣ, ಈ ವಿವಾಹವನ್ನು ಪಕ್ಷದ ಕಾರ್ಯಕರ್ತರು ಮತ್ತು ಸ್ನೇಹಿತರು ಸೇರಿ ನಡೆಸಿದ್ದರು. ಗೋವಿಂದ ಪಿಳ್ಳೆ ನಂತರದಲ್ಲಿ ಸಿಪಿಐ(ಎಂ) ಪಕ್ಷದ ಪ್ರಮುಖ ನಾಯಕ ಮತ್ತು ಬುದ್ಧಿಜೀವಿಯಾಗಿ ಹೊರ ಹೊಮ್ಮಿದ್ದರು. ದೇಶಾಭಿಮಾನಿ ಪತ್ರಿಕೆಯ ಸಂಪಾದಕರೂ ಆಗಿದ್ದವರು.</p>



<p>ಅವರ ಭೂಗತ ಬದುಕಿನ ಕಾಲ ಬಹಳ ಕೆಟ್ಟ ಕಾಲವಾಗಿತ್ತು. ದಮನಕಾರಿ ಸರಕಾರ ಅವರ ಮನೆಯ ಮೇಲೆ ದಾಳಿ ನಡೆಸುತ್ತಿತ್ತು. ತನ್ನ ಪತ್ನಿ ಮತ್ತು ಕುಟುಂಬದ ಇತರ ಸದಸ್ಯರಿಗೆ ಕಿರುಕುಳ ನೀಡುತ್ತಿತ್ತು. ಈ ಕಾಲಾವಧಿಯು ಅವರ ಬದುಕಿನ ಅತ್ಯಂತ ಯಾತನಾಮಯ ಕಾಲವಾಗಿತ್ತು. ಅವರ ಮೊದಲ ಮಗುವಿಗೆ ಇನ್ನೂ ಎರಡು ವರ್ಷಗಳು ತುಂಬುವ ಮೊದಲೇ ಮಾರಕ ಅಪಘಾತವೊಂದು ಘಟಿಸಿತ್ತು. ಸರಕಾರ ಅವರ ಸ್ವಾತಂತ್ರ್ಯವನ್ನು ಎಷ್ಟರ ಮಟ್ಟಿಗೆ ಕಸಿದುಕೊಂಡಿತ್ತೆಂದರೆ, ತನ್ನ ಮಗುವಿನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲೂ ಅವರಿಂದ ಸಾಧ್ಯವಾಗಿರಲಿಲ್ಲ.</p>



<p>ಪಿಕೆವಿ ಅವರ ಮೊದಲ ಬಂಧನ ನಡೆಯುವುದು 1950 ರ ದಶಕದ ಆರಂಭದಲ್ಲಿ. ವಿದ್ಯಾರ್ಥಿ ಹೋರಾಟದ ನೇತೃತ್ವ ವಹಿಸಿದ್ದಕ್ಕಾಗಿ ಅವರನ್ನು ತಿರುವನಂತಪುರದ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಬಂಧಿಸಿಡಲಾಗಿತ್ತು. ತನ್ನ ವಿದ್ಯಾರ್ಥಿ ಸಂಗಾತಿಗಳು ಮತ್ತು ಕೆಲವು ಪುಡಿ ಅಪರಾಧಿಗಳ ಜೊತೆಗೆ ತಿಂಗಳುಗಳ ಕಾಲ ಅವರು ಲಾಕ್‌ಅಪ್‌ ಕೋಣೆಯಲ್ಲಿ ಕಳೆದಿದ್ದರು. ಅಲ್ಲಿರುವಾಗಲೇ ಮಗ ಜನಿಸಿದ ಸುದ್ದಿಯನ್ನು ಒಬ್ಬ ಸಂದೇಶವಾಹಕ ತಂದು ಮುಟ್ಟಿಸಿದ್ದ. ಇದನ್ನು ತಿಳಿದ ಒಬ್ಬ ಕರುಣಾಮಯಿ ಇನ್ಸ್‌ಪೆಕ್ಟರ್‌ ಅವರನ್ನು ಬಿಡುಗಡೆ ಮಾಡಿದ್ದ.</p>



<p>1951 ರಲ್ಲಿ ಸಿಪಿಐ ಮೇಲಿನ ನಿಷೇಧವನ್ನು ತೆರವುಗೊಳಿಸಲಾಗುತ್ತದೆ. ಹಾಗಾಗಿ ಅದು ಕಾನೂನಾತ್ಮಕ ಕೆಲಸಗಳನ್ನು ಮತ್ತೆ ಕೈಗೆತ್ತಿಕೊಳ್ಳುತ್ತದೆ. ಆ ಹೊತ್ತಿಗಾಗಲೇ ಪಿಕೆವಿ ರಾಜಕಾರಣದಲ್ಲಿ ಅದೆಷ್ಟು ಆಳವಾಗಿ ತೊಡಗಿಕೊಂಡಿದ್ದರೆಂದರೆ, ಅವರು ಆಲ್‌ ಕೇರಳ ಸ್ಟೂಡೆಂಟ್ಸ್‌ ಫೆಡರೇಷನ್‌ ಅಧ್ಯಕ್ಷರಾಗಿದ್ದರು. ಹಾಗಾಗಿಯೇ ಅವರಿಗೆ ತಿರುವನಂತಪುರದ ಸರಕಾರಿ ಕಾನೂನು ಕಾಲೇಜಿನಲ್ಲಿ ತಮ್ಮ ವ್ಯಾಸಂಗವನ್ನು ಮುಂದುವರಿಸಲೂ ಸಾಧ್ಯವಾಗುವುದಿಲ್ಲ.</p>



<p>ಅವರು ತಿರುವಾಂಕೂರು ವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದರು. ಕೇರಳ ಯೂತ್ ಫೆಡರೇಷನ್‌, ಆಲ್‌ ಇಂಡಿಯಾ ಸ್ಟೂಂಡೆಟ್ಸ್‌ ಫೆಡರೇಷನ್‌ (ಎಐಎಸ್‌ಎಫ್)‌ ಮತ್ತು ಆಲ್‌ ಇಂಡಿಯಾ ಯೂತ್ ಫೆಡರೇಷನ್‌ (ಎಐವೈಎಫ್)‌ ಸಂಘಟನೆಗಳ ಅಧ್ಯಕ್ಷರಾಗಿದ್ದರು. ವರ್ಲ್ಡ್‌ ಫೆಡರೇಷನ್‌ ಆಫ್‌ ಡೆಮಾಕ್ರಟಿಕ್‌ ಯೂತ್‌ ಸಂಘಟನೆಯ ಉಪಾಧ್ಯಕ್ಷರೂ ಆಗಿದ್ದರು.</p>



<p>ಪಿಕೆವಿ ಮತ್ತು ಖ್ಯಾತ ಚಲನಚಿತ್ರ ನಟ ಬಲರಾಜ್ ಸಹಾನಿ ಅವರುಗಳು ಆಲ್‌ ಇಂಡಿಯಾ ಯೂತ್ ಫೆಡರೇಷನ್‌ ಕಲ್ಪನೆಯ ಬೆನ್ನಿಗೆ ನಿಂತಿದ್ದವರು. ದೆಹಲಿಯ ಪ್ರಖರ ಯುವ ನಾಯಕ ಗುರು ರಾಧಾ ಕಿಶನ್, ದೆಹಲಿಯಲ್ಲಿ ಎಐವೈಎಫ್‌ನ ಮೊದಲ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸುವಲ್ಲಿ ಸಕ್ರಿಯರಾಗಿ ಕೆಲಸ ಮಾಡಿದ್ದರು. ಅವರ ಈ ಪ್ರಯತ್ನಗಳ ಪ್ರತಿಫಲವಾಗಿ ದೇಶದಾದ್ಯಂತದ ಹಲವಾರು ಯುವ ಸಂಘಟನೆಗಳ ಸುಮಾರು 250ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ವೀಕ್ಷಕರು ಆ ಸಮ್ಮೇಳನದಲ್ಲಿ ಭಾಗವಹಿಸಿದ್ದರು. 1964 ರಲ್ಲಿ ಪಕ್ಷವು ಇಬ್ಭಾಗವಾದಾಗ ಪಿಕೆವಿ ಸಿಪಿಐನಲ್ಲಿಯೇ ಉಳಿದುಕೊಳ್ಳುತ್ತಾರೆ. 1982 ರಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಾರೆ.</p>



<p>ಪಿಕೆವಿ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿಯುವುದು 1957 ರಲ್ಲಿ ತಿರುವಲ್ಲಾದಿಂದ ಲೋಕಸಭೆಗೆ ಸ್ಪರ್ಧಿಸುವ ಮೂಲಕ. ತಿರುವಲ್ಲಾ ಸಾಮಾನ್ಯವಾಗಿ ಕಮ್ಯುನಿಸ್ಟ್‌ ವಿರೋಧಿ ಕ್ಷೇತ್ರವೆಂದು ಪರಿಗಣಿಸಲ್ಪಟ್ಟಿದ್ದರೂ, ತನ್ನ ವಿದ್ಯಾರ್ಥಿ ಮತ್ತು ಯುವಜನ ನಾಯಕನೆಂಬ ಗುರುತು ಮತ್ತು ಅದರ ಪ್ರಭಾವದಿಂದ ಕಾಂಗ್ರೆಸ್‌ ಅಭ್ಯರ್ಥಿಯನ್ನು ಸೋಲಿಸಿ ಸಂಸದರಾಗಿ ಚುನಾಯಿತರಾಗುತ್ತಾರೆ.</p>



<p>ಅದಾಗಲೇ ಅನುಭವಿ ಸಂಸದನಾಗಿದ್ದ ಪಿಕೆವಿ, 1962 ರಲ್ಲಿ ಮೂರನೇ ಲೋಕಸಭೆಗೆ ಅಂಬಲಪ್ಪುಳ ಮತ್ತು 1967 ರಲ್ಲಿ ನಾಲ್ಕನೇ ಲೋಕಸಭೆಗೆ ಪೀರುಮೇಡುವಿನಿಂದ ಆಯ್ಕೆಯಾಗುತ್ತಾರೆ. ಯುವ ಸಂಸದನಾಗಿ ತನ್ನದೇ ಆದ ಛಾಪು ಮೂಡಿಸುವಲ್ಲಿ ಪಿಕೆವಿ ಯಶಸ್ವಿಯಾಗುತ್ತಾರೆ. ಮೊರಾರ್ಜಿ ದೇಸಾಯಿ ಅವರಂತಹ ಹಿರಿಯರು ಕೂಡ ಅತ್ಯುತ್ತಮ ಸಂಸದನೆಂದು ಕೊಂಡಾಡುವಷ್ಟರ ಮಟ್ಟಿಗೆ ಅವರು ಬೆಳೆಯುತ್ತಾರೆ.</p>



<p>1982 ರಿಂದ 2004 ರವರೆಗೆ ಪಿಕೆವಿ ಚುನಾವಣಾ ರಾಜಕಾರಣದಿಂದ ದೂರವುಳಿಯುತ್ತಾರೆ. ಈ ಕಾಲದಲ್ಲಿ ಅವರು ತಮ್ಮ ಶ್ರಮವನ್ನೆಲ್ಲ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳಿಗೆ ಮೀಸಲಿಟ್ಟಿದ್ದರು. ಈ ಕಾಲಾವಧಿಯಲ್ಲಿ ಅವರು ಬಹುತೇಕ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿದ್ದರು. ಒಬ್ಬ ಸಮರ್ಥ ಸಂಘಟಕನೆಂಬ ಖ್ಯಾತಿ ಪಡೆದಿದ್ದ ಪಿಕೆವಿ, ರಾಜಕೀಯ ನಾಯಕನಾಗುವುದರ ಜೊತೆಗೆ ಹಲವಾರು ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.</p>



<p>ಅತಿ ವೇಗವಾಗಿ ಬೆಳೆಯುತ್ತಿರುವ ಮತ್ತು ಸಂಕೀರ್ಣವಾಗುತ್ತಿರುವ ರಾಜಕೀಯ ಸನ್ನಿವೇಶದಲ್ಲಿ, ಪಕ್ಷದ ಕೇಂದ್ರದಲ್ಲಿ ಅವರ ಸಹಾಯ ಮತ್ತು ಮಾರ್ಗದರ್ಶನ ಲಭ್ಯವಾಗಿಸಲು 2004 ರ ಚುನಾವಣೆಯಲ್ಲಿ ತಿರುವನಂತಪುರದಿಂದ ಸ್ಪರ್ಧಿಸುವಂತೆ ಪಕ್ಷ ಅವರನ್ನು ಕೇಳಿಕೊಳ್ಳುತ್ತದೆ. ಆದರೆ ಅವರು ಮೊದಲಿಗೆ ಇದರಿಂದ ಹಿಮ್ಮೆಟ್ಟುತ್ತಾರೆ. 40 ಮತ್ತು 50 ರ ದಶಕದಲ್ಲಿ ಸಂಸತ್ತಿನಲ್ಲಿ ದೀರ್ಘ ಕಾಲ ಕೆಲಸ ಮಾಡಿದ್ದ ಅವರು, ಕಳೆದ ಎರಡು ದಶಕಗಳಿಂದ ಸಂಸದೀಯ ಬದುಕಿನಿಂದ ದೂರವುಳಿದಿದ್ದರು. ಹಾಗಾಗಿಯೇ ಮತ್ತೊಮ್ಮೆ ಅದನ್ನು ಪಡೆಯುವುದು ಅವರಿಗೆ ಇಷ್ಟವಿರಲಿಲ್ಲ.</p>



<p>ಆದರೂ ಕೂಡ ಕೊನೆಗೆ ಪಕ್ಷದ ನಿರ್ಧಾರಕ್ಕೆ ತಲೆ ಬಾಗುತ್ತಾರೆ. ತನ್ನ ವೃದ್ಧಾಪ್ಯ, ಹೃದಯದ ಶಸ್ತ್ರಚಿಕಿತ್ಸೆ ಮತ್ತು ಕಾಡುತ್ತಿದ್ದ ಮಧುಮೇಹದ ಹೊರತಾಗಿಯೂ ಅವರು ಚುನಾವಣಾ ಪ್ರಚಾರದಲ್ಲಿ ತೊಡಗುತ್ತಾರೆ. ಪಕ್ಷವು ಅವರಿಗೆ ತನ್ನ ವೈಯಕ್ತಿಕ ಆದ್ಯತೆಗಳಿಗಿಂತ ಬಹಳ ಮೇಲಿನದ್ದಾಗಿತ್ತು. 37 ವರ್ಷಗಳ ಅಂತರದ ನಂತರ, ತಿರುವನಂತಪುರದಿಂದ ಅವರು 14 ನೇ ಲೋಕಸಭೆಗೆ ಮತ್ತೆ ಚುನಾಯಿತರಾಗುತ್ತಾರೆ. ಅದೂ ಕೂಡ ಗಣನೀಯ ಬಹುಮತದೊಂದಿಗೆ.</p>



<p>ಇಂತಹ ಕಮ್ಯುನಿಸ್ಟ್ ನಾಯಕ ಪಡಯಾಟ್ಟು ಕೇಶವ ಪಿಳ್ಳೆ ವಾಸುದೇವನ್ ನಾಯರ್ ಸದಾ ಸರಳ ಜೀವನವನ್ನು ನಡೆಸುತ್ತಿದ್ದವರು. ಸಮಾಜದ ಎಲ್ಲಾ ವರ್ಗಗಳಿಗೂ ಸುಲಭವಾಗಿ ಲಭ್ಯವಾಗುತ್ತಿದ್ದ ಮನುಷ್ಯ. ತನ್ನ ಆರು ದಶಕಗಳ ಸುದೀರ್ಘ ರಾಜಕಾರಣದಲ್ಲಿ ಮುಖ್ಯಮಂತ್ರಿಯಾಗಿಯೂ, ನಾಲ್ಕು ಬಾರಿ ಸಂಸದರಾಗಿಯೂ ಆಯ್ಕೆಯಾಗಿದ್ದರು. ಲೋಕಸಭೆಯಲ್ಲಿ ಸಿಪಿಐ ಸಂಸದೀಯ ಪಕ್ಷದ ನಾಯಕರಾಗಿದ್ದರು.</p>



<p>ಕೆಪಿಎಸಿ ತರದ ಪ್ರಸಿದ್ಧ ಸಾಂಸ್ಕೃತಿಕ ಸಂಸ್ಥೆಗಳ ಚುಕ್ಕಾಣಿಯನ್ನೂ ಅವರು ಹಿಡಿದಿದ್ದರು. ಪ್ರತಿಷ್ಠಿತ ವಯಲಾರ್‌ ರಾಮವರ್ಮ ಟ್ರಸ್ಟ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. <a href="tel:195457">1954-57</a> ರಲ್ಲಿ ಜನಯುಗಂ ದಿನಪತ್ರಿಕೆಯ ಮತ್ತು ಸಿಪಿಐ ರಾಜ್ಯ ಘಟಕದ ನವಯುಗಂ ವಾರಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡುವ ಮೂಲಕ ಪತ್ರಿಕೋದ್ಯಮದಲ್ಲೂ ತಮ್ಮ ಹೆಗ್ಗುರುತನ್ನು ಮೂಡಿಸಿದವರು. ಅದ್ಭುತ ಬರಹಗಾರನಾಗಿದ್ದ ಪಿಕೆವಿ ರಾಜಕೀಯ ಮತ್ತು ಜೀವನ ಚರಿತ್ರೆಗಳ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.</p>



<p>ಜುಲೈ 12, 2005 ರಂದು ತಮ್ಮ 79 ನೇ ವಯಸ್ಸಿನಲ್ಲಿ ಪಿಕೆವಿ ನಿಧನರಾದರು. ಅವರ ಪತ್ನಿ ಲಕ್ಷ್ಮಿಕುಟ್ಟಿಯಮ್ಮ, ಮೂವರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದರು.</p>



<p><strong><em>ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.</em></strong></p>
]]></content:encoded>
					
		
		
			</item>
		<item>
		<title>ಸಂಸತ್ತಿನ ಪೂರ್ವಸೂರಿಗಳು ಭಾಗ 2 : ದೀರ್ಘಕಾಲದ ಸಂಸದ ಮತ್ತು ಮೊದಲ ಕಮ್ಯುನಿಸ್ಟ್‌ ಗೃಹ ಸಚಿವ ಇಂದ್ರಜಿತ್‌ ಗುಪ್ತಾ</title>
		<link>https://peepalmedia.com/first-communist-home-minister-indrajit-gupta/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 16 Jul 2025 11:03:07 +0000</pubDate>
				<category><![CDATA[ಅಂಕಣ]]></category>
		<category><![CDATA[ಇತಿಹಾಸ]]></category>
		<guid isPermaLink="false">https://peepalmedia.com/?p=62647</guid>

					<description><![CDATA[ಈ ಲೇಖನ ಸರಣಿಯು &#8216;ದಿ ಅರ್ಲಿ ಪಾರ್ಲಿಮೆಂಟರಿಯನ್ಸ್&#8217; ಎಂಬ ಶೀರ್ಷಿಕೆಯ &#8216;ದಿ ವೈರ್&#8217; ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಎರಡನೇ ಲೇಖನ ನಿರ್ಣಯಗಳಿಗೆ ಮಧ್ಯಸ್ಥಿಕೆ ವಹಿಸುತ್ತಿದ್ದ ಅವರ ಶೈಲಿ ಮತ್ತು ದೀರ್ಘ ಕಾಲದ ಅಧಿಕಾರಾವಧಿಗಳೆರಡೂ ಸೇರಿ ಅವರಿಗೆ “ಫಾದರ್‌ ಆಫ್‌ ದಿ ಹೌಸ್”‌ ಎಂಬ ಬಿರುದನ್ನು ತಂದು ಕೊಟ್ಟವು. ಫೆಬ್ರವರಿ 24, ಕಮ್ಯುನಿಸ್ಟ್‌ ನಾಯಕ ಮತ್ತು ಹಿರಿಯ ಸಂಸದೀಯ ಪಟು ಇಂದ್ರಜಿತ್‌ ಗುಪ್ತಾ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p><strong>ಈ ಲೇಖನ ಸರಣಿಯು &#8216;ದಿ ಅರ್ಲಿ ಪಾರ್ಲಿಮೆಂಟರಿಯನ್ಸ್&#8217; ಎಂಬ ಶೀರ್ಷಿಕೆಯ &#8216;ದಿ ವೈರ್&#8217; ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಎರಡನೇ ಲೇಖನ</strong></p>
</blockquote>



<h2 class="wp-block-heading">ನಿರ್ಣಯಗಳಿಗೆ ಮಧ್ಯಸ್ಥಿಕೆ ವಹಿಸುತ್ತಿದ್ದ ಅವರ ಶೈಲಿ ಮತ್ತು ದೀರ್ಘ ಕಾಲದ ಅಧಿಕಾರಾವಧಿಗಳೆರಡೂ ಸೇರಿ ಅವರಿಗೆ “ಫಾದರ್‌ ಆಫ್‌ ದಿ ಹೌಸ್”‌ ಎಂಬ ಬಿರುದನ್ನು ತಂದು ಕೊಟ್ಟವು.</h2>



<p>ಫೆಬ್ರವರಿ 24, ಕಮ್ಯುನಿಸ್ಟ್‌ ನಾಯಕ ಮತ್ತು ಹಿರಿಯ ಸಂಸದೀಯ ಪಟು ಇಂದ್ರಜಿತ್‌ ಗುಪ್ತಾ ಅವರ ಸಂಸ್ಮರಣಾ ದಿನ. 37 ವರ್ಷಗಳಷ್ಟು ಸುದೀರ್ಘ ಕಾಲ ಸಂಸದರಾಗಿದ್ದ ಅವರಿಗೆ “ಫಾದರ್‌ ಆಫ್‌ ದಿ ಹೌಸ್”‌ ಎಂಬ ಬಿರುದೂ ಲಭಿಸಿತ್ತು. 11 ಬಾರಿ ಅವರು ಲೋಕಸಭೆಗೆ ಆಯ್ಕೆಯಾಗಿದ್ದರು. ಆ ಮೂಲಕ ಸ್ವತಂತ್ರ ಭಾರತದ ಅತ್ಯಂತ ದೀರ್ಘಾವಧಿಯ ಸಂಸದರೆಂಬ ಹೆಗ್ಗಳಿಕೆಗೆ ಪಾತ್ರರಾದರು.</p>



<p>1992ರಲ್ಲಿ ಇಂದ್ರಜಿತ್‌ ಗುಪ್ತಾ ಅವರು ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಅವರು ದೇಶ ಕಂಡ ಮೊಟ್ಟ ಮೊದಲ ಕಮ್ಯುನಿಸ್ಟ್‌ ಗೃಹ ಸಚಿವರು. ಇಷ್ಟೆಲ್ಲ ಇದ್ದರೂ ಅವರು ಬಹಳ ನಾಚಿಕೆ ಸ್ವಭಾವದ ವ್ಯಕ್ತಿಯಾಗಿದ್ದರು. ಯುವಕನಾಗಿದ್ದಾಗ ಸುರೈಯ್ಯಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದರು. ಆದರೆ, ತನ್ನ ಪ್ರೀತಿಯನ್ನು ಅವರು ಎಂದೂ ಹೇಳಿಕೊಳ್ಳಲೇ ಇಲ್ಲ. ಕೊನೆಗೆ ತನ್ನ 62ನೇ ವಯಸ್ಸಿನಲ್ಲಿ ಅದೇ ಸುರೈಯ್ಯಾರನ್ನು ಮದುವೆಯಾಗುವುದು. ಆಕೆಯ ಮೊದಲ ಪತಿ ಛಾಯಾಗ್ರಾಹಕ ಅಹ್ಮದ್‌ ಅಲಿ (ಸಮಾಜವಾದಿ ನಫೀಸಾ ಅಲಿ ಅವರ ತಂದೆ) ಜೊತೆಗಿನ ತನ್ನ ಮೊದಲ ವಿವಾಹದಿಂದ ಕಾನೂನಾತ್ಮಕವಾಗಿ ವಿಚ್ಛೇದನ ಪಡೆಯುವವರೆಗೆ, ಅಂದರೆ ಸುಮಾರು 40 ವರ್ಷಗಳ ಕಾಲ ಅವರು ಕಾದಿದ್ದರು.</p>



<p>ವಿರೋಧ ಪಕ್ಷದ ಕಟ್ಟಾಳಾಗಿ ಮತ್ತು ಭಾರತೀಯ ಕಮ್ಯುನಿಸ್ಟ್‌ ಪಕ್ಷದ ನಾಯಕರಾಗಿ ಲೋಕಸಭೆಯಲ್ಲಿ ಅವರ ಭಾಷಣಗಳು ಶಕ್ತಿಶಾಲಿಯೂ, ಹದವಾಗಿಯೂ, ತರ್ಕಬದ್ಧ ಟೀಕೆಗಳಿಂದಲೂ ಕೂಡಿರುತ್ತಿದ್ದವು. ಆ ಮೂಲಕ ಅವರು ತನ್ನ&nbsp; ರಾಜಕೀಯ ವಿರೋಧಿಗಳಿಂದಲೂ ಮೆಚ್ಚುಗೆಯನ್ನು ಗಳಿಸಿದ್ದರು.</p>



<p>ಯುನೈಟೆಡ್‌ ಫ್ರಂಟ್‌ ಸರಕಾರದ (1996-98) ಅವಧಿಯಲ್ಲಿ ಗೃಹ ಸಚಿವರಾಗಿದ್ದ ಅವರು, ಸರಕಾರದ ವೈಫಲ್ಯಗಳನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತಿದ್ದರು. ತಮ್ಮ ಪ್ರಖರ ಮಾತುಗಳಿಂದ ಖಜಾನೆ ಸಂಬಂಧಿ ಅಧಿಕಾರ ವರ್ಗದ ಅನೇಕರು ಹುಬ್ಬೇರುವಂತೆ ಮಾಡಿದ್ದರು. ಅವರು ಗೃಹ ಸಚಿವರಾಗಿದ್ದ ಕಾಲದಲ್ಲಿ, ಬಿಜೆಪಿ ಪ್ರಮುಖ ವಿರೋಧ ಪಕ್ಷವಾಗಿದ್ದಾಗ, ದೊಡ್ಡ ಮಟ್ಟದ ಚರ್ಚೆಗಳ ನಂತರದ ಖಾಸಗಿ ಭೇಟಿಗಳಲ್ಲಿ ವಿರೋಧ ಪಕ್ಷದ ಸದಸ್ಯರ ಬಳಿ ಅವರು ಹೇಳಿಕೊಳ್ಳುತ್ತಿದ್ದ ಮಾತು ಹೀಗೆ: “ನಾನೇನಾದರೂ ಈಗ ವಿರೋಧ ಪಕ್ಷದ ಸ್ಥಾನದಲ್ಲಿರುತ್ತಿದ್ದರೆ, ನೀವೀಗ ಮಾಡುತ್ತಿರುವುದನ್ನು ಖಂಡಿತಾ ನಾನು ಮಾಡುತ್ತಿರಲಿಲ್ಲ.” ಅವರ ಹಿರಿತನದ ಆಧಾರದಲ್ಲಿಯೇ 1991, 1996, 1998 ಮತ್ತು 1999 ಇಸವಿಗಳಲ್ಲಿ ಹಂಗಾಮಿ ಸ್ಪೀಕರ್‌ ಸ್ಥಾನಕ್ಕೆ ಏರಿದ್ದರು.</p>



<p>ಅವರು ಕೇಂದ್ರ ಗೃಹ ಸಚಿವ ಸ್ಥಾನವನ್ನು ಅಲಂಕರಿಸಿದ ಮೊದಲ ಕಮ್ಯುನಿಸ್ಟ್‌ ಎಂಬುದು ಗಮನಾರ್ಹ. ಅದು ನಡೆದದ್ದು 1996ರಲ್ಲಿ. ಇದೊಂದು ರೀತಿಯಲ್ಲಿ ಇತಿಹಾಸದ ನಾಟಕೀಯ ತಿರುವು ಎಂದು ಹೇಳಬಹುದು. ಸ್ವಾತಂತ್ರ್ಯಾ ನಂತರ ಕೇಂದ್ರ ಗೃಹ ಸಚಿವಾಲಯವು ಮೂರು ಬಾರಿ ಕಮ್ಯುನಿಸ್ಟ್‌ ಪಕ್ಷವನ್ನು ದೇಶದಲ್ಲಿ ನಿಷೇಧಿಸಿತ್ತು. ಆ ಕಾರಣದಿಂದ ಇಂದ್ರಜಿತ್‌ ಗುಪ್ತಾ ಸೇರಿದಂತೆ ಹಲವಾರು ಕಮ್ಯನಿಸ್ಟ್‌ ಕಾರ್ಯಕರ್ತರು ಜೈಲು ಪಾಲಾಗಿದ್ದರು ಅಥವಾ ಭೂಗತರಾಗಿದ್ದರು.</p>



<p><strong>ಸಿಪಿಐ(ಎಂ) ನ ಹಿರಿಯ ಸಂಸದ ದಿವಂಗತ ರೂಪಚಂದ್ ಪಾಲ್ ಅವರ ಪ್ರಕಾರ:</strong><br>“ಸದನದಲ್ಲಿ ಯಾವುದೇ ರೀತಿಯ ಗದ್ದಲಗಳು ಉಂಟಾದರೂ, ಆ ಗದ್ದಲದ ಆಯಾಮಗಳು ಏನೇ ಇದ್ದರೂ, ಸದನದ ಪ್ರತಿಯೊಂದು ವಿಭಾಗದ ಜನರೂ ನೋಡುತ್ತಿದ್ದದ್ದು, ಮುಂದಿನ ಸಾಲಿನ ಮೂಲೆಯ ಆಸನದಲ್ಲಿ ಸಭಾಪತಿಗಳಿಗೆ ಮುಖಮಾಡಿ ಕುಳಿತಿರುತ್ತಿದ್ದ “ಪಿತಾಮಹ”ನ ಕಡೆಗೆ. ಕೊನೆಗೆ, ಚೆಂದದ ಇಂಗ್ಲಿಷ್‌ ಭಾಷೆಯಲ್ಲಿ “ಪಿತಾಮಹ” ಮಾತನಾಡುತ್ತಾರೆ. ಅಂತೂ ಸಮಸ್ಯೆ ಬಗೆಹರಿಯುತ್ತದೆ. ಗೌರವಾನ್ವಿತ ಸ್ಪೀಕರ್‌ ಅವರ ಕೊಠಡಿಯಲ್ಲಿ “ಪಿತಾಮಹ”ರ ಸಮ್ಮುಖದಲ್ಲಿ ನಡೆಯುವ ಸಣ್ಣ ಚರ್ಚೆಯೊಂದಿಗೆ ಸದನ ಮತ್ತೆ ಸರಾಗವಾಗಿ ಮುಂದುವರಿಯುತ್ತದೆ. 1960ರಿಂದ ಆರಂಭವಾದ ಈ ಇನ್ನಿಂಗ್ಸ್‌ “ಪಿತಾಮಹ”ರ ಮರಣದ ತನಕವೂ ಸುದೀರ್ಘವಾಗಿ ಮುಂದುವರಿದಿತ್ತು.</p>



<p>ಮಾರ್ಚ್ 18, 1919 ರಂದು ನಾಗರಿಕ ಸೇವಾ ವಲಯದ ಸದಸ್ಯರೇ ಇದ್ದ ಒಂದು ಕುಟುಂಬದಲ್ಲಿ ಗುಪ್ತಾ ಅವರ ಜನನ. ಆದರೆ, ಅವರು ತನ್ನ ವೃತ್ತಿ ಬದುಕಿನಲ್ಲಿ ನಾಗರಿಕ ನೇವೆಯ ಬದಲಿಗೆ, ದೇಶ ಸೇವೆಯನ್ನು ಆರಿಸಿಕೊಳ್ಳುತ್ತಾರೆ. ಶಿಮ್ಲಾದಲ್ಲಿ ಶಾಲಾ ಶಿಕ್ಷಣ ಪಡೆದ ನಂತರ 1937ರಲ್ಲಿ ದೆಹಲಿಯ ಸೇಂಟ್‌ ಸ್ಟೀಫನ್ಸ್‌ ಕಾಲೇಜಿನಲ್ಲಿ ಪದವಿ ಪಡೆಯುತ್ತಾರೆ. ಆ ನಂತರ ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡ್‌ಗೆ ತೆರಳುತ್ತಾರೆ. ಅಲ್ಲಿ ಅವರ ವ್ಯಾಸಂಗ ನಡೆಯುವುದು ಕಿಂಗ್ಸ್‌ ಕಾಲೇಜ್‌ ಮತ್ತು ಕೇಂಬ್ರಿಜ್‌ ವಿಶ್ವವಿದ್ಯಾಲಯಗಳಲ್ಲಿ. ಬ್ರಿಟನ್‌ನಲ್ಲಿದ್ದ ವಿದ್ಯಾರ್ಥಿಯಾಗಿದ್ದಾಗ ಕಮ್ಯುನಿಸ್ಟ್‌ ಚಳುವಳಿಯ ಕಡೆಗೆ ಆಕರ್ಷಿತರಾಗುತ್ತಾರೆ. ಅರ್ಥಶಾಸ್ತ್ರದಲ್ಲಿ ಪದವಿ ಪಡೆದುಕೊಂಡ ನಂತರ 1940ರಲ್ಲಿ ಅವರು ಭಾರತಕ್ಕೆ ಮರಳುವುದು.</p>



<p>ಗುಪ್ತಾ ಬ್ರಹ್ಮ ಸಮಾಜದ ಸದಸ್ಯರಾಗಿದ್ದರು. ಪಶ್ಚಿಮ ಬಂಗಾಳದ ಅತ್ಯಂತ ವರ್ಚಸ್ವಿ ಮುಖ್ಯಮಂತ್ರಿಗಳಲ್ಲಿ ಒಬ್ಬರಾದ ಬಿ.ಸಿ. ರಾಯ್‌ ಅವರ ಸಂಬಂಧಿಯಾಗಿದ್ದರು. ಹಾಗಾಗಿಯೇ, ಅವರು ಭಾರತಕ್ಕೆ ಮರಳಿ ಬಂದು ಕಾರ್ಮಿಕ ನಾಯಕನಾಗಿ ಗುರುತಿಸಿಕೊಂಡಾಗ ತನ್ನನ್ನು ತಾನು “ಮರುವರ್ಗೀಕರಣ” ಮಾಡಿಕೊಳ್ಳಬೇಕಾಗಿ ಬಂದಿತ್ತು.</p>



<p>ಭಾರತೀಯ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಬದ್ಧ ಕಾರ್ಯಕರ್ತನಾಗಿದ್ದ ಗುಪ್ತಾ ಅವರು 1948-50ರ ಕಾಲದಲ್ಲಿ ಸುಮಾರು ಒಂದೂವರೆ ವರ್ಷಗಳ ಕಾಲ ಭೂಗತರಾಗಿದ್ದರು. 1953, 1959 ಮತ್ತು 1969 ಇಸವಿಗಳಲ್ಲಿ ಅವರು ಜೈಲುಶಿಕ್ಷೆಯನ್ನೂ ಅನುಭವಿಸಿದ್ದರು. ಆದರೆ, ಈ ಯಾವ ಸಂಕಷ್ಟಗಳು ಕೂಡ ಅವರಿಗೆ ಅಡೆತಡೆಯಾಗಿ ಅನಿಸಲೇ ಇಲ್ಲ. ಬದಲಿಗೆ, ಅವರು ಪಕ್ಷಕ್ಕೆ ಮತ್ತಷ್ಟು ನಿಷ್ಟರಾದರು. ತಳಮಟ್ಟದ ಕಾರ್ಮಿಕರು ಮತ್ತು ಟ್ರೇಡ್‌ ಯೂನಿಯನ್ ಚಳುವಳಿಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರು. ಆ ನಂತರದ ವರ್ಷಗಳಲ್ಲಿ ಅವರು ಸಂಸತ್ತಿನಲ್ಲಿ ಕಮ್ಯುನಿಸ್ಟ್‌ ಪಕ್ಷದ ದನಿಯಾದರು.</p>



<p><strong>ಇಂದ್ರಜಿತ್‌ ಗುಪ್ತಾ ಅವರ ಹಳೆಯ ಒಡನಾಡಿ ಮತ್ತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ಅವರು ಹೇಳುವಂತೆ:</strong><br>“ಇಂದ್ರಜಿತ್ ಗುಪ್ತಾ ನನಗಿಂತ ಕೆಲವು ವರ್ಷ ಕಿರಿಯರಾಗಿದ್ದರು. ಅವರು ಕೇಂಬ್ರಿಜ್‌ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗ, 1936ರಲ್ಲಿ ಇಂಗ್ಲೆಂಡಿನಲ್ಲಿ ಭೇಟಿಯಾಗಿದ್ದೆ. ಅದು ಫ್ಯಾಸಿಸಂ ವಿರುದ್ಧದ ರೋಮಾಂಚಕ ದಿನಗಳಾಗಿದ್ದವು. ರಾಜಕೀಯ ಉತ್ಸಾಹವು ವಿದ್ಯಾರ್ಥಿ ಸಮೂಹವನ್ನು ವಿಶೇಷವಾಗಿ ಆಕರ್ಷಿಸುತ್ತಿತ್ತು. ಅದರಲ್ಲೂ ಭಾರತೀಯ ವಿದ್ಯಾರ್ಥಿಗಳು ದೊಡ್ಡ ಮಟ್ಟದಲ್ಲಿ ಆಕರ್ಷಿತರಾಗುತ್ತಿದ್ದರು. ನಾವು ಲಂಡನ್‌, ಕೇಂಬ್ರಿಜ್‌ ಮತ್ತು ಆಕ್ಸ್‌ಫರ್ಡ್‌ ಮೊದಲಾದ ಕಡೆಗಳಲ್ಲಿ ಭಾರತೀಯ ವಿದ್ಯಾರ್ಥಿ ಒಕ್ಕೂಟ ಮತ್ತು ಮಜ್ಲಿಸ್‌ಗಳನ್ನು ಸಂಘಟಿಸುತ್ತಿದ್ದೆವು. ರಾಜಕೀಯ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿಕೊಂಡು ಭಾರತದ ಸ್ವಾತಂತ್ರ್ಯದ ಉದ್ಧೇಶಗಳನ್ನು ಪ್ರಚಾರ ಮಾಡುತ್ತಿದ್ದೆವು. ಶ್ರೀಯುತ ಕೃಷ್ಣ ಮೆನನ್‌ ಅವರ ಇಂಡಿಯಾ ಲೀಗ್‌ನ ಪ್ರಚಾರದ ಕಾರ್ಯದಲ್ಲಿ ಸಹಾಯ ಮಾಡುತ್ತಿದ್ದೆವು.&nbsp; ಇಂದ್ರಜಿತ್ ಗುಪ್ತಾ ಮತ್ತು ನಾನು ಸೇರಿದಂತೆ ನಮ್ಮಲ್ಲಿ ಕೆಲವರು 1940ರಲ್ಲಿ ಪೂರ್ಣಕಾಲಿಕವಾಗಿ ಕಮ್ಯುನಿಸ್ಟ್ ಪಕ್ಷವನ್ನು ಸೇರಿಕೊಂಡೆವು. ಬಂಧನವನ್ನು ತಪ್ಪಿಸಿಕೊಳ್ಳುತ್ತಿದ್ದ ಆ ದಿನಗಳು ನನಗೀಗಲೂ ನೆನಪಿದೆ. ನಾನು ಮತ್ತು ಗುಪ್ತಾ ಕೆಲವು ಕಾಲ ಭೂಗತರಾಗಿ ಜೊತೆಯಾಗಿ ಕಳೆದಿದ್ದೆವು. ಪಕ್ಷ ವಿಭಜನೆಯಾದ ನಂತರ ಇಂದ್ರಜಿತ್‌ ಗುಪ್ತಾ ಸಿಪಿಐನಲ್ಲಿಯೇ ಉಳಿದರು. ನಾನು ಸಿಪಿಐ(ಎಂ) ಸೇರಿದೆ. ನಾವಿಬ್ಬರೂ ಟ್ರೇಡ್ ಯೂನಿಯನ್ ಚಳವಳಿಯಲ್ಲಿ ಕೆಲಸ ಮಾಡುತ್ತಿದ್ದವರು. ಒಬ್ಬ ನಿಜವಾದ ಕಮ್ಯುನಿಸ್ಟ್‌ನಂತೆ ಅವರು ಸಂಸದೀಯ ಮತ್ತು ಸಂಸದೀಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಪಕ್ಷ ವಿಭಜನೆಯಾದಾಗಲೂ, ನಾವು ಅವರ ವಿರುದ್ಧ ಅಭ್ಯರ್ಥಿಯನ್ನು ನಿಲ್ಲಿಸಲಿಲ್ಲ. ಆ ಮೂಲಕ ಅವರು ಗೆಲ್ಲಲು ಸಹಾಯ ಮಾಡಿದೆವು.”</p>



<p>1964ರಲ್ಲಿ ಪಕ್ಷವು ಚೀನಾ ವಿಷಯದಲ್ಲಿ ಇಬ್ಭಾಗವಾದಾಗ, ಎಸ್.ಎ. ಡಾಂಗೆ ನೇತೃತ್ವದ ಮಾತೃ ಸಂಘಟನೆಗೆ ನಿಷ್ಠರಾದ ರಾಷ್ಟ್ರೀಯ ಮಂಡಳಿಯ 35 ಸದಸ್ಯರಲ್ಲಿ ಗುಪ್ತಾ ಕೂಡ ಒಬ್ಬರಾಗಿದ್ದರು. ನಿಜದಲ್ಲಿ ಸ್ವತಃ ಗುಪ್ತಾ ಅವರೇ ಆ ಗುಂಪಿನ ಮುಖ್ಯ ನಿರ್ಣಯವನ್ನು ರಚಿಸಿದ್ದರು. ಅವರು ಡಾಂಗೆಯ ಕಾಂಗ್ರೆಸ್‌ ಒಲವನ್ನು ವಿರೋಧಿಸುತ್ತಿದ್ದರು. ಅದರಲ್ಲೂ ವಿಶೇಷವಾಗಿ ತುರ್ತು ಪರಿಸ್ಥಿತಿಯ ನಂತರ. ಆದರೆ, ಎಂದೂ ಅದನ್ನು ಪಕ್ಷದ ಹೊರಗೆ ಸಾರ್ವಜನಿಕವಾಗಿ ತೋರಿಸಿಕೊಂಡವರಲ್ಲ.</p>



<p>1960ರಲ್ಲಿ ಪಶ್ಚಿಮ ಬಂಗಾಳದಿಂದ ನಡೆದ ಉಪಚುನಾವಣೆಯಲ್ಲಿ ಗುಪ್ತಾ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗುವುದು. ಅದರ ನಂತರ, 1977-79ರ ಅವಧಿಯನ್ನು ಹೊರತು ಪಡಿಸಿ ತನ್ನ ಮರಣದ ತನಕವೂ ಸಂಸದರಾಗಿದ್ದರು. ಇಂದಿರಾಗಾಂಧಿಯವರ ತುರ್ತು ಪರಿಸ್ಥಿತಿಯನ್ನು ಬೆಂಬಲಿಸಿದ ಕಾರಣ 1977ರ ಸಾರ್ವತ್ರಿಕ ಚುನಾವಣೆಯಲ್ಲಿ ಸಿಪಿಐ ಸೋಲು ಕಂಡಿತ್ತು.</p>



<p>1968ರಲ್ಲಿ ಗುಪ್ತಾ ಸಿಪಿಐ ರಾಷ್ಟ್ರೀಯ ಮಂಡಳಿಯ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಾರೆ. 1988ರಲ್ಲಿ ಪಕ್ಷದ ಉಪಪ್ರಧಾನ ಕಾರ್ಯದರ್ಶಿಯಾಗುತ್ತಾರೆ. ಕೊನೆಗೆ 1990ರಲ್ಲಿ ಅವರನ್ನು ಸಿಪಿಐ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗುತ್ತದೆ. 1996ರ ವರೆಗೆ, ಅಂದರೆ ಆರು ವರ್ಷಗಳ ಕಾಲ ಅವರು ಆ ಹುದ್ದೆಯಲ್ಲಿದ್ದರು.</p>



<p>ಸಕ್ರಿಯ ಟ್ರೇಡ್ ಯೂನಿಯನ್ ಹೋರಾಟಗಾರರಾಗಿದ್ದ ಗುಪ್ತಾ ಈ ಮೊದಲು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಜೊತೆಗೆ ವಿಶ್ವ ಟ್ರೇಡ್ ಯೂನಿಯನ್‌ಗಳ ಒಕ್ಕೂಟದ ಉಪಾಧ್ಯಕ್ಷರಾಗಿದ್ದರು. 1998ರಲ್ಲಿ ಅದರ ಅಧ್ಯಕ್ಷರಾಗಿಯೂ ಆಯ್ಕೆಯಾಗುತ್ತಾರೆ. ಸ್ವಾಂತತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ತನ್ನ ಕುಟುಂಬದ ಹಲವಾರು ವ್ಯಕ್ತಿಗಳು ನಾಗರಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರೂ, ತಾನು ಮಾತ್ರ ದೀನದಲಿತ ಮತ್ತು ಶೋಷಿತ ಜನಸಾಮಾನ್ಯರ ಹಕ್ಕುಗಳಿಗಾಗಿ ಹೋರಾಡಲು ತೀರ್ಮಾನಿಸಿದ್ದರು. ಅವರು ತನ್ನನ್ನು ತಾನು ಕಾರ್ಮಿಕ ವರ್ಗದೊಂದಿಗೆ ಗುರುತಿಸಿಕೊಳ್ಳಲು ಬಯಸಿದ್ದರು.</p>



<p>ಜನಸಾಮಾನ್ಯರ ಬದುಕಿನ ಮೇಲೆ ಪರಿಣಾಮ ಬೀರುವ ಸಮಸ್ಯೆಗಳೆಲ್ಲವೂ ಗುಪ್ತಾ ಅವರ ಭಾಷಣಗಳಲ್ಲಿ ಪ್ರತಿಧ್ವನಿಸುತ್ತಿದ್ದವು. ಅವು ಸಂಸತ್ತಿನ ಒಳಗಾದರೂ ಸರಿ ಹೊರಗಾದರೂ ಸರಿ. ಕಾರ್ಮಿಕರ ಹಕ್ಕುಗಳು, ಕನಿಷ್ಠ ವೇತನ, ಟ್ರೇಡ್‌ ಯೂನಿಯನ್‌ಗಳ ಹಕ್ಕುಗಳು ಮೊದಲಾದ ಸಂಗತಿಗಳ ಬಗ್ಗೆ ಅವರು ಉತ್ಸಾಹದಿಂದ ಮಾತನಾಡುತ್ತಿದ್ದರು. ಲೋಕಸಭೆಯಲ್ಲಿ ಅವರು ಸೆಣಬು ಮಿಲ್ಲಿನ ಕಾರ್ಮಿಕರ, ತಂಬಾಕು ತೋಟದ ಕಾರ್ಮಿಕರ ಮತ್ತು ಕೃಷಿ ಕಾರ್ಮಿಕರ ಪರಿಸ್ಥಿತಿಯ ಕುರಿತು ಹಲವು ಬಾರಿ ಪ್ರಸ್ತಾಪಿಸಿದ್ದರು. ಅಗತ್ಯ ವಸ್ತುಗಳ ಬೆಲೆಯೇರಿಕೆ ಅವರ ಭಾಷಣದಲ್ಲಿ ಪುನರಾವರ್ತನೆಯಾಗುತ್ತಿದ್ದ ಮತ್ತೊಂದು ಸಂಗತಿ. ಬರ, ಆಹಾರದ ಕೊರತೆ, ಸಾರ್ವಜನಿಕ ವಿತರಣಾ ವ್ಯವಸ್ಥೆಯ ದುಸ್ಥಿತಿ, ಶೈಕ್ಷಣಿಕ ವ್ಯವಸ್ಥೆಯಲ್ಲಿನ ಬಿಕ್ಕಟ್ಟು, ಆರೋಗ್ಯ ವಲಯದ ಮೂಲ ಸೌಕರ್ಯ ಕೊರತೆ, ಅರೆ ಸೈನಿಕ ಪಡೆಗಳ ಸಮಸ್ಯೆಗಳು ಮೊದಲಾದವು ಅವರ ಮನಸಿಗೆ ತಾಕುತ್ತಿದ್ದ ಸಂಗತಿಗಳು.</p>



<p>ಲಿಂಗ ಸಮಾನತೆಯ ವಿಷಯದಲ್ಲಿಯೂ ಅವರು ಮುಂಚೂಣಿಯಲ್ಲಿದ್ದರು. ಶಾಸನಾತ್ಮಕ ಮತ್ತು ಆಡಳಿತಾತ್ಮಕ ಕ್ರಮಗಳ ಮೂಲಕ ಮಹಿಳೆಯರ ಸಬಲೀಕರಣಕ್ಕಾಗಿ ನಿರ್ದಿಷ್ಟವೂ ಶಕ್ತಿಶಾಲಿಯೂ ಆದ ಯೋಜನೆಗಳನ್ನು ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದರು. ಸಂಸತ್ತಿನಲ್ಲಿ ಮಹಿಳೆಯರ ಸಮಸ್ಯೆಗಳ ಕುರಿತ ಚರ್ಚೆಗಳು ನಡೆಯುವಾಗ ಬಹಳ ಉತ್ಸಾಹ ಮತ್ತು ಅಷ್ಟೇ ಸೂಕ್ಷ್ಮತೆಯಿಂದ ಮಾತನಾಡುತ್ತಿದ್ದರು. ಮಹಿಳೆಯರ ಮೇಲಿನ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ಕೊನೆಗಾಣಿಸಲೆಂದು ಲೋಕಸಭೆಯು ನಿರ್ಣಯ ಕೈಗೊಳ್ಳಲು ಚರ್ಚಿಸುತ್ತಿದ್ದ ಕಾಲದಲ್ಲಿ, 1975ರ ಹೊತ್ತಿನಲ್ಲಿಯೇ ಅವರು ಮಹಿಳೆಯರಿಗೆ 15% ಮೀಸಲಾತಿಯನ್ನು ಜಾರಿಗೆ ತರಬೇಕೆಂದು ಪ್ರತಿಪಾದಿಸಿದ್ದರು. ಅದರ ಜೊತೆಗೇ ಶತಮಾನಗಳಷ್ಟು ಹಳೆಯದಾದ, ಊಳಿಗಮಾನ್ಯ ಪದ್ಧತಿಯ ಪಳೆಯುಳಿಕೆಯಾದ ಮಹಿಳೆಯರ ಮೇಲಿನ ಪೂರ್ವಾಗ್ರಹಗಳನ್ನು ತೊಡೆದು ಹಾಕಲು ಕರೆ ನೀಡುತ್ತಿದ್ದರು. ಮಹಿಳೆಯರ ಅನಕ್ಷರತೆಯನ್ನು, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ, ತೊಡೆದು ಹಾಕಲು ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಒತ್ತಡ ಹೇರುತ್ತಿದ್ದರು. 37 ವರ್ಷಗಳ ಕಾಲ ಸಂಸದರಾಗಿದ್ದ ಅವರು ತತ್ವಾದರ್ಶಗಳು ಮತ್ತು ಮೌಲ್ಯಗಳಿಗೆ ಆಳವಾದ ಬದ್ಧತೆಯನ್ನು ಪ್ರದರ್ಶಿಸಿದ್ದರು.</p>



<p>“ಕ್ಯಾಪಿಟಲ್ ಅಂಡ್ ಲೇಬರ್ ಇನ್ ದಿ ಜೂಟ್ ಇಂಡಸ್ಟ್ರಿ” ಮತ್ತು “ಫಾರ್ ಸೆಲ್ಫ್‌ ರಿಲಯನ್ಸ್ ಇನ್ ನ್ಯಾಷನಲ್ ಡಿಫೆನ್ಸ್” ಎಂಬ ಎರಡು ಪುಸ್ತಕಗಳನ್ನು ಅವರು ಪ್ರಕಟಿಸಿದ್ದಾರೆ. ತಳಮಟ್ಟದ ಅನುಭವ, ತೀಕ್ಷ್ಣ ಬುದ್ಧಿಶಕ್ತಿ ಮತ್ತು ಅದ್ಭುತ ಮಾತುಗಾರಿಕೆಯಿಂದಾಗಿ ಜನರಿಗೆ ಹತ್ತಿರವಾದವರು. ತನ್ನ ಉನ್ನತ ಸ್ಥಾನಮಾನಗಳ ಹೊರತಾಗಿಯೂ ಜನಸಾಮಾನ್ಯರಿಗೆ ಸದಾ ಹತ್ತಿರದಲ್ಲೇ ಇದ್ದ ವ್ಯಕ್ತಿ. ಕೇಂದ್ರ ಗೃಹ ಸಚಿವರಾಗಿದ್ದಾಗಲೂ ಸರಕಾರದ ವಿಶಾಲ ಬಂಗಲೆಯನ್ನು ತಿರಸ್ಕರಿಸಿ, ವೆಸ್ಟರ್ನ್‌ ಕೋರ್ಟ್‌ನಲ್ಲಿರುವ ತನ್ನ ಎರಡು ಕೋಣೆಗಳ ಫ್ಲಾಟ್‌ನಲ್ಲಿಯೇ ವಾಸಿಸುತ್ತಿದ್ದರು.</p>



<p>ಇಂದ್ರಜಿತ್‌ ಗುಪ್ತಾ ಅವರು ಫೆಬ್ರವರಿ 20, 2001 ರಂದು ತಮ್ಮ 82 ನೇ ವಯಸ್ಸಿನಲ್ಲಿ ಕೋಲ್ಕತ್ತಾದಲ್ಲಿ ಕ್ಯಾನ್ಸರ್ ರೋಗದಿಂದ ನಿಧನರಾದರು. ಅವರ ಸಾವಿನಲ್ಲೂ ಕೂಡ, ಪಕ್ಷಬೇಧ ಮರೆತು ಎಲ್ಲ ರಾಜಕೀಯ ನಾಯಕರು ಅವರಿಗೆ ಗೌರವ ಸಲ್ಲಿಸಿ, ಅವರನ್ನು ಪ್ರೀತಿಯಿಂದ ನೆನೆದಿದ್ದರು.</p>



<p><strong>ಅವರ ನಿಧನದ ಸಂದರ್ಭದಲ್ಲಿ, ಆಗಿನ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರು ಮಹೋನ್ನತ ಸಂಸದೀಯ ಪಟುವಿಗೆ ಗೌರವ ಸಲ್ಲಿಸುತ್ತಾ ಆಡಿದ ಮಾತುಗಳು ಹೀಗಿವೆ:</strong><br>“ಒಬ್ಬ ಅದ್ಭುತ ಮತ್ತು ಅನುಭವಿ ಸಂಸದೀಯ ಪಟು, ಜನರ ನಿಜವಾದ ನಾಯಕ, ಶ್ರೀಯುತ ಇಂದ್ರಜಿತ್‌ ಗುಪ್ತಾ ಅವರು ನಮ್ಮ ದೇಶದ ಕಮ್ಯುನಿಸ್ಟ್‌ ಚಳುವಳಿಯ ಮುಂಚೂಣಿ ನಾಯಕರು. ತನ್ನ ಕೊನೆಗಾಲದವರೆಗೂ ಜನರ ಹಕ್ಕುಗಳು ಮತ್ತು ಅವರ ಸ್ವಾತಂತ್ರ್ಯಕ್ಕಾಗಿ, ಅದರಲ್ಲೂ ವಿಶೇಷವಾಗಿ ಹಿಂದುಳಿದವರಿಗಾಗಿ ಹೋರಾಡಿದವರು. ಸಾರ್ವಜನಿಕ ಹಿತಾಸಕ್ತಿ, ನಿರರ್ಗಳ ಮಾತುಗಾರಿಕೆ, ಸೂಕ್ಷ್ಮ ಬುದ್ಧಿಯಿಂದ ಸಂಸತ್ತಿನ ಕಲಾಪಗಳನ್ನು ಮತ್ತು ಚರ್ಚೆಗಳನ್ನು ಶ್ರೀಮಂತಗೊಳಿಸಿದವರು. ಗಾಂಧೀಜಿಯ ಸರಳತೆ, ಪ್ರಜಾಪ್ರಭುತ್ವ ದೃಷ್ಟಿಕೋನ, ಮೌಲ್ಯಗಳಿಗೆ ಆಳವಾದ ಬದ್ಧತೆ, ರಾಜಿಯಾಗದ ಪ್ರಾಮಾಣಿಕತೆ ಮೊದಲಾದವುಗಳಿಂದಾಗಿ ತನ್ನ ದೀರ್ಘ ಮತ್ತು ಚಾರಿತ್ರಿಕ ಸಾರ್ವಜನಿಕ ಬದುಕಿನಲ್ಲಿ ಪಕ್ಷ ಮತ್ತು ಸಿದ್ಧಾಂತಗಳನ್ನು ಮೀರಿ ತನ್ನ ಸಂಪರ್ಕಕ್ಕೆ ಬಂದ ಎಲ್ಲ ಜನರ ಪ್ರೀತಿ ಮತ್ತು ಗೌರವಗಳನ್ನು ಗಳಿಸಿದರು.”</p>



<p>ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಕಾರ, ಗುಪ್ತಾ ಅವರು “ಅತ್ಯುನ್ನತ ವ್ಯಕ್ತಿತ್ವ”ವನ್ನು ಹೊಂದಿದ್ದರು. ಅವರ “ಜೀವನವು ತೆರೆದ ಪುಸ್ತಕದಂತೆ” ಇತ್ತು.</p>



<p>ಡಿಸೆಂಬರ್ 5, 2006 ರಂದು, ಆಗಿನ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೇಖಾವತ್ ಸಂಸತ್ ಭವನದಲ್ಲಿ ಇಂದ್ರಜಿತ್‌ ಗುಪ್ತಾರ ಪ್ರತಿಮೆಯನ್ನು ಅನಾವರಣಗೊಳಿಸಿದರು.</p>



<p><strong><em>ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.</em></strong></p>
]]></content:encoded>
					
		
		
			</item>
		<item>
		<title>ಇಣುಕು &#8211; 1 : ಶಾಂತಿಗಾಗಿ ಹಿರೋಶಿಮಾ-ನಾಗಸಾಕಿ ಕಡೆಗೆ ಜಗತ್ತು ಇಣುಕಿ ಹಾಕಬೇಕಿದೆ</title>
		<link>https://peepalmedia.com/world-needs-to-look-to-hiroshima-nagasaki-for-peace/</link>
		
		<dc:creator><![CDATA[Peepal Media Desk]]></dc:creator>
		<pubDate>Sun, 29 Jun 2025 03:22:34 +0000</pubDate>
				<category><![CDATA[ಅಂಕಣ]]></category>
		<category><![CDATA[ಇತಿಹಾಸ]]></category>
		<guid isPermaLink="false">https://peepalmedia.com/?p=61734</guid>

					<description><![CDATA[&#8220;..ಇರಾನ್ ಭಾರತದ ಹಳೆಯ ಮಿತ್ರ ದೇಶ. ಅದೊಂದು ಮುಸ್ಲಿಂ ದೇಶ ಎಂಬ ಕಾರಣಕ್ಕೆ ಇಸ್ರೇಲ್ ದಾಳಿಯನ್ನು ಸಮರ್ಥಿಸುವುದು ಭಾರತದಲ್ಲಿ ಒಂದು ಸಮುದಾಯದ ವಿರುದ್ಧದ ದ್ವೇಷದ ಕಾರಣವೂ ಹೌದು..&#8221; ಯುವ ಚಿಂತಕ ಎಂ.ಕೆ ಸಾಹೇಬ್ ನಾಗೇಶನಹಳ್ಳಿ ಬರಹದಲ್ಲಿ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಜಪಾನ್ ಗೆ ಭೇಟಿ ನೀಡಿದ್ದೆ. ಆಗ ಜಪಾನಿನ ಬೇರೆ ಬೇರೆ ವಯಸ್ಸಿನ ವಿದ್ಯಾರ್ಥಿಗಳನ್ನು, ಮಹಿಳೆಯರನ್ನು, ಹಿರಿಯ ಬುದ್ಧಿಜೀವಿಗಳನ್ನು, ಶಿಕ್ಷಕ ವರ್ಗದವರನ್ನು ಹೀಗೆ ಅನೇಕ ವರ್ಗಗಳ ಜನರ ಜೊತೆ ಮುಕ್ತವಾಗಿ ಮಾತನಾಡಲು ಅವಕಾಶ ಸಿಕ್ಕಿತ್ತು. ಒಂದು [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>&#8220;..ಇರಾನ್ ಭಾರತದ ಹಳೆಯ ಮಿತ್ರ ದೇಶ. ಅದೊಂದು ಮುಸ್ಲಿಂ ದೇಶ ಎಂಬ ಕಾರಣಕ್ಕೆ ಇಸ್ರೇಲ್ ದಾಳಿಯನ್ನು ಸಮರ್ಥಿಸುವುದು ಭಾರತದಲ್ಲಿ ಒಂದು ಸಮುದಾಯದ ವಿರುದ್ಧದ ದ್ವೇಷದ ಕಾರಣವೂ ಹೌದು..&#8221; ಯುವ ಚಿಂತಕ ಎಂ.ಕೆ ಸಾಹೇಬ್ ನಾಗೇಶನಹಳ್ಳಿ ಬರಹದಲ್ಲಿ</p>
</blockquote>



<p>ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಜಪಾನ್ ಗೆ ಭೇಟಿ ನೀಡಿದ್ದೆ. ಆಗ ಜಪಾನಿನ ಬೇರೆ ಬೇರೆ ವಯಸ್ಸಿನ ವಿದ್ಯಾರ್ಥಿಗಳನ್ನು, ಮಹಿಳೆಯರನ್ನು, ಹಿರಿಯ ಬುದ್ಧಿಜೀವಿಗಳನ್ನು, ಶಿಕ್ಷಕ ವರ್ಗದವರನ್ನು ಹೀಗೆ ಅನೇಕ ವರ್ಗಗಳ ಜನರ ಜೊತೆ ಮುಕ್ತವಾಗಿ ಮಾತನಾಡಲು ಅವಕಾಶ ಸಿಕ್ಕಿತ್ತು. ಒಂದು ಸೆಮಿನಾರ್ ನಡೆದಿದ್ದ ಸಂದರ್ಭದಲ್ಲಿ&nbsp; ಟೋಕಿಯೋ ವಿಶ್ವವಿದ್ಯಾಲಯದ ಹೆಸರಾಂತ ಪ್ರೊಫೆಸರ್ ಗೆ ನಾನೊಂದು ನೇರವಾಗಿ&nbsp; ಪ್ರಶ್ನೆ ಕೇಳಿದೆ.</p>



<p>ನಿಮ್ಮ ಮೇಲೆ ಅಮೇರಿಕಾ ದೇಶ 2ನೇ ಮಹಾಯುದ್ದದ ಸಂದರ್ಭದಲ್ಲಿ ಹಿರೋಶಿಮಾ, ನಾಗಸಾಕಿ ಮೇಲೆ ಅಣು ಬಾಂಬ್ ಹಾಕಿ ಸರ್ವನಾಶ ಮಾಡಿದೆ. ಆದರೆ ನೀವೇಕೆ ಯು. ಎಸ್.ಎ ದೇಶದ ಜೊತೆಗೆ ಏನು ನಡೆದೇ ಇಲ್ಲ ಅನ್ನುವ ರೀತಿ ಚೆನ್ನಾಗಿ ಇದ್ದೀರಿ ಎನ್ನುವದು ನನ್ನ ಪ್ರಶ್ನೆ ಆಗಿತ್ತು.</p>



<p>ಪ್ರೊಫೆಸರ್ ಉತ್ತರಿಸುತ್ತಾ ಹೌದು ಅಮೇರಿಕಾ ಜೊತೆಗೆ ಒಳ್ಳೆಯ ಸಂಬಂಧಕ್ಕೆ ತನ್ನದೇ ಆದ ಬೇರೆ ರಾಜಕೀಯ ಇತಿಹಾಸವಿದೆ. ಆದರೆ ಅಮೆರಿಕದ ಮೇಲೆ ದ್ವೇಷ ಇಲ್ಲದಿರುವುದಕ್ಕೆ ಆ ಎರೆಡು ಬಾಂಬ್ ಗಳೇ ಕಾರಣ ಎಂದರು. ದಯವಿಟ್ಟು ವಿಸ್ತಾರವಾಗಿ ಹೇಳಿ ಸ್ಯಾನ್ (ಲಿಂಗ ಮತ್ತು ವಯಸ್ಸಿನ ಅಂತರವಿಲ್ಲದೆ ಎಲ್ಲರಿಗೂ ಹೆಸರಿನ ನಂತರ ಗೌರವ ಸೂಚಿಸಲು ಬಳಸುವ ಪದ) ಎಂದೇ.<br><br>ಹಿರೋಷಿಮಾದ ಮೇಲೆ ಆಗಸ್ಟ್ 6, 1945ರಂದು ಲಿಟಲ್ ಮ್ಯಾನ್ ಎಂಬ ಅಣು ಬಾಂಬ್ ಹಾಕಿದ ತಕ್ಷಣಕ್ಕೆ 70ರಿಂದ 80 ಸಾವಿರ ಜನ ಸತ್ತರು. 1945ರ ಡಿಸೆಂಬರ್ ಕೊನೆಗೆ ಅಲ್ಲಿನ ಒಟ್ಟು ಜನಸಂಖ್ಯೆಯ 3,50,000 ಜನರಲ್ಲಿ 1,40,000 ಕೊನೆ ಉಸಿರು ತೊರೆದರು.</p>



<p>ಅದೇ ರೀತಿಯಾಗಿ ನಾಗಸಾಕಿಯ ಮೇಲೆ ಆಗಸ್ಟ್ 9, 1945 ರಂದು ಫ್ಯಾಟ್ ಮ್ಯಾನ್ ಎಂಬ ಅಣು ಬಾಂಬ್ ಹಾಕಿದ್ದಕ್ಕೆ ತಕ್ಷಣಕ್ಕೆ 40-50 ಸಾವಿರ ಜನರ ಮಾರಣಹೋಮ ಆಯಿತು.1945ರ ಕೊನೆಗೆ ಒಟ್ಟು 2,40,000 ಜನಸಂಖ್ಯೆಯಲ್ಲಿ ನರಳಿ-ನರಳಿ&nbsp; ಸರಿಸುಮಾರು 70 ಸಾವಿರ ಜನರು ಬಾಂಬ್ ಗೆ ಬಲಿಯಾದರು.</p>



<p>ಆ ಕ್ಷಣಕ್ಕೆ ಸುಮಾರು 4,000*C ನಷ್ಟು ಬಿಸಿ ತಾಪಮಾನ ಏರಿಕೆ ಆಯಿತು. ಎರೆಡು ಪ್ರದೇಶದಿಂದ ಒಟ್ಟು 2ಲಕ್ಷ 10 ಸಾವಿರ ಜನ ಸತ್ತರು. ಅಲ್ಲಿ ಕಂಡಿದ್ದ ನೋವು,ಸಾವು,ನರಕ ಯಾತನೆ,ದೇಹದ ಭಾಗಗಳು ಸುಟ್ಟು ಕರಕಲಾಗಿ ನಾರುತ್ತಿದ್ದ ರಕ್ತದ ಮಡುವನ್ನು ನೋಡಿದವರು ದ್ವೇಷವನ್ನು ಹೇಗೆ ಉಳಿಸಿಕೊಳ್ಳಲು ಸಾಧ್ಯ ಎಂದು ಮರು ಪ್ರಶ್ನೆ ಮಾಡಿದರು.</p>



<p>ಆ ಪೀಡಿತ ಪ್ರದೇಶಗಳಲ್ಲಿ ಪ್ರಾಣ ಉಳಿದಿದ್ದ ಜೀವಗಳು, ಆ ಕಾಲ ಘಟ್ಟದಲ್ಲಿ ಬದುಕಿದ್ದ ಜನರು, ಮಾನವ ವಿಕೃತ ವಿನಾಶದ ಕುರಿತು, ದ್ವೇಷ ಮತ್ತು ಬಾಂಬ್ ಗಳ ವಿರುದ್ಧ ಶಾಂತಿಯ ಬಗ್ಗೆ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ. ಮನೆಯಿಂದ ಮನೆಗೆ ಬಾಯಿಯಿಂದ-ಬಾಯಿಗೆ ಸುಸ್ಥಿರ ಬದುಕಿಗೆ ಶಾಂತಿಯ ಅವಶ್ಯಕತೆಯ ಕಥೆಗಳನ್ನು ವಿದ್ಯಾರ್ಥಿಗಳಿಗೆ, ಯುವಜನರಿಗೆ&nbsp; ಹಿರಿಯರು ಕಲಿಸಿಕೊಡುತ್ತಾ ಸಾಗುತ್ತಿದ್ದಾರೆ. ಹಾಗಾಗಿ ಮತ್ತೆ ನಾವು ಅಮೇರಿಕಾದಂತಹ ನೀಚ ಅಮಾನವೀಯ ವಿಕೃತಿ ಮೆರೆಯಬೇಕು ಎಂದು ಅನಿಸಲಿಲ್ಲ ಎಂದರು. ಅದಕ್ಕಾಗಿ ಅಂತರರಾಷ್ಟ್ರೀಯ ಶಾಂತಿಯ ವಿಶ್ವವಿದ್ಯಾಲಯ ಜಪಾನ್ ನಲ್ಲಿದೆ. ಜಪಾನಿನ ಪಠ್ಯಕ್ರಮದಲ್ಲಿ ಶಾಂತಿ ಮತ್ತು ನೈತಿಕತೆಯ ಪಾಠವನ್ನು ಪ್ರಾಥಮಿಕ ಹಂತದಲ್ಲೇ ಕಲಿಸಿಕೊಡಲಾಗುವುದು. ತಮ್ಮಿಂದ ಇನ್ನೊಬ್ಬರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು ಎಂಬ ನೈತಿಕ ಮೌಲ್ಯವು ಜಪಾನಿನ ನಾಡಿ ಮಿಡಿತವಾಗಿದೆ.ಅದರ ಪ್ರತಿ ಫಲವೇ ಜಗತ್ತಿನಲ್ಲಿಯೇ ಹೆಚ್ಚು&nbsp; ಸಿವಿಕ್ ಸೆನ್ಸ್ (ನಾಗರಿಕ ಪ್ರಜ್ಞೆ) ಹೊಂದಿರುವ ನಾಗರಿಕರು ಆ ದೇಶದಲ್ಲಿ ಸಿಗುವುದು.</p>



<p>ಅಮೇರಿಕಾ ಪ್ರಜಾಪ್ರಭುತ್ವದ ಹೆಸರಲ್ಲಿ ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಹಾಕದೆ ಇರುವ ಬಾಂಬ್ ಗಳೇ ಇಲ್ಲ. ಮೊನ್ನೆ ಇರಾನ್ ಮೇಲೆ ಹಾಕಿದ ಬಾಂಬ್ ಗಳ ಹೊತ್ತೊಯ್ಯದ B -2 ಸ್ಟೀಲ್ತ್ ವಿಮಾನದ ಬಗ್ಗೆ ಪಾಶ್ಚಿಮಾತ್ಯ ದೇಶದ ಮತ್ತು ಭಾರತದ ಕೆಲವು ಮಿಡಿಯಾಗಳ ಅದರ ವಿಕೃತಿಯ ಶ್ರೇಷ್ಟತೆಯ ಬಗ್ಗೆ ಹೆಮ್ಮೆಯಿಂದ ಹೇಳುತ್ತಿದ್ದವು. ಜನರ ಮತ್ತು ಪ್ರಕೃತಿಯ ಜೀವವನ್ನು ಕ್ಷಣಾರ್ಧದಲ್ಲೇ ತಗೆಯುವ ಬಾಂಬ್ ಗಳ ಬಗ್ಗೆ, ಯುದ್ಧ ವಿಮಾನಗಳ ಬಗ್ಗೆ&nbsp; ಹೇಳುವ ರೀತಿ ನೋಡಿದರೆ ಭಯವಾಗುತ್ತಿತ್ತು. ಹೀಗೆ ಹುಟ್ಟಿಸುವ ಭಯವೇ ಯುದ್ಧ ಪರಿಕಾರಗಳ ವಹಿವಾಟಿಗೆ ಪ್ರಚಾರವೂ ಹೌದು.&nbsp; ಮಿಡಿಯಾಗಳ&nbsp; ಇಷ್ಟೊಂದು ಹೀನ ಮಾನಸಿಕ ಸ್ಥಿತಿ ಪ್ರಪಂಚವನ್ನು ಕ್ರೌರ್ಯದ ಕಡೆಗೆ ತೆಗೆದುಕೊಂಡು ಹೋಗುತ್ತದೆ.</p>



<p>ಇರಾನ್ ಭಾರತದ ಹಳೆಯ ಮಿತ್ರ ದೇಶ. ಆ ದೇಶದ ಸಾರ್ವಭೌಮತ್ವದ ಮೇಲೆ ಇಸ್ರೇಲ್ ಮತ್ತು ಅಮೇರಿಕಾ ಮಾಡಿದ ದಾಳಿಯನ್ನು ಭಾರತದ ಸೋ ಕಾಲ್ಡ್ ದೇಶಭಕ್ತರು ಅದೊಂದು ಮುಸ್ಲಿಂ ಸಮುದಾಯದ ದೇಶ ಅನ್ನುವ ಕಾರಣಕ್ಕೆ ದಾಳಿಯನ್ನು ಸಮರ್ಥಿಸಿಕೊಳ್ಳುತ್ತಿರುವುದು ಭಾರತದಲ್ಲಿ ಒಂದು ಸಮುದಾಯದ ವಿರುದ್ಧ ದ್ವೇಷವೂ ಸಾಮಾನ್ಯೀಕರಣವಾಗುತ್ತಿರುವುದನ್ನು ಎತ್ತಿ ತೋರಿಸುತ್ತದೆ.</p>



<p>ಹಿಟ್ಲರ್ ನ ಕಾಲದಲ್ಲಿ ಸ್ವತಃ ಜನೋಸೈಡಿಗೆ ಗುರಿಯಾಗಿದ್ದ ದೇಶವೇ ಇಂದು ಗಾಜಾದಲ್ಲಿ ಜನೋಸೈಡ್&nbsp; ಮಾಡುತ್ತಿರುವ ಇಸ್ರೇಲ್ ತನ್ನ ಇತಿಹಾಸವನ್ನು ಮೆಲಕು ಹಾಕಬೇಕಿದೆ. ಮತ್ತು ಅಹಂಕಾರದಲ್ಲಿ ಮೆರೆಯುತ್ತಿರುವ,ಸೋ ಕಾಲ್ಡ್ ಪ್ರಜಾಪ್ರಭುತ್ವವನ್ನು ಕಾಪಾಡುವ ಹೆಸರಲ್ಲಿಯೇ, ವ್ಯಾಪಾರೀಕರಣದ ಲಾಭಕ್ಕಾಗಿ ಪ್ರಪಂಚದ ಬೇರೆ ಬೇರೆ ದೇಶಗಳ ಮೇಲೆ ಬಾಂಬುಗಳ ಮೂಲಕ ಸರ್ವನಾಶ ಮಾಡುತ್ತಾ ಯುದ್ಧಗಳನ್ನು ಜೀವಂತವಿಡುವ&nbsp; ಅಮೇರಿಕಾ, ಜಪಾನಿನ ಮೇಲೆ ಮಾಡಿದ ಕ್ರೌರ್ಯವನ್ನು,ಆ ಬರ್ಬರತೆಯನ್ನು,ಅಮಾಯಕರ ಪ್ರಾಣ ತೆಗೆದ ಆ ಇತಿಹಾಸವನ್ನು, 2025ಕ್ಕೆ 80 ವರ್ಷ ಆದರೂ ಅಣು ಬಾಂಬಿನ ಪರಿಣಾಮವನ್ನು ಚಿತ್ರಹಿಂಸೆಯಿಂದ, ದೈಹಿಕವಾಗಿ ಮತ್ತು ಮಾನಸಿಕವಾಗಿ ಇಂದಿಗೂ ಎದುರಿಸುತ್ತಿರುವ ಪೀಳಿಗೆಯನ್ನು,ಹಸಿವು ನೀಗಿಸುತ್ತಿದ ಭೂಮಿ ಬಂಜರು ಆಗಿ ಬಿಕೋ ಅನ್ನುತ್ತಿರುವುದನ್ನು, ಗಮನಿಸಿ, ಆತ್ಮ ಅವಲೋಕಿಸಿ,ತಪ್ಪನ್ನು ತಿದ್ದಿಕೊಂಡು, ನೈಜವಾಗಿ ಶಾಂತಿಯ ಬಗ್ಗೆ ಅಮೇರಿಕಾ ಮತ್ತು ಇನ್ನಿತರ ಎಲ್ಲಾ ದೇಶಗಳು ಪ್ರಾಮಾಣಿಕವಾಗಿ ಕಾರ್ಯನಿರತರಾಗಬೇಕಿದೆ. ಇಲ್ಲದೆ ಹೋದಲ್ಲಿ, ಇಂದಲ್ಲ ಮುಂದೆ ಮೂರನೇ ಮಹಾಯುದ್ಧ&nbsp; ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಮಹಾ ಯುದ್ಧ ಅಂದರೆ ಬೇರೇನಿಲ್ಲ,ನಾವು ಆತ್ಮಹತ್ಯೆ ಮಾಡಿಕೊಂಡು,ಭವಿಷ್ಯದ ಪೀಳಿಗೆಯ ಕುಡಿಯನ್ನು ಹುಟ್ಟುವ ಮುಂಚೆಯೇ ಕೊಂದು, ಪ್ರಕೃತಿಯನ್ನು ಸರ್ವನಾಶ ಮಾಡುವುದು.</p>
]]></content:encoded>
					
		
		
			</item>
	</channel>
</rss>
