<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ಆರೋಗ್ಯ &#8211; Peepal Media</title>
	<atom:link href="https://peepalmedia.com/category/health/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Wed, 27 Aug 2025 02:23:48 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>ಆರೋಗ್ಯ &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಕ್ಯಾನ್ಸರ್‌ನ ಹೊಸ ಮುಖ: ಯುವಜನತೆಯನ್ನೂ ಬಾಧಿಸುತ್ತಿರುವ ಮಹಾಮಾರಿ</title>
		<link>https://peepalmedia.com/the-new-face-of-cancer-an-epidemic-affecting-even-the-youth/</link>
		
		<dc:creator><![CDATA[Peepal Media]]></dc:creator>
		<pubDate>Wed, 27 Aug 2025 02:23:47 +0000</pubDate>
				<category><![CDATA[ಆರೋಗ್ಯ]]></category>
		<guid isPermaLink="false">https://peepalmedia.com/?p=64870</guid>

					<description><![CDATA[ಕ್ಯಾನ್ಸರ್&#8230; ಈ ಹೆಸರನ್ನು ಕೇಳಿದರೆ ಸಾಕು ಎಲ್ಲರಿಗೂ ನಡುಕ ಹುಟ್ಟುತ್ತದೆ. ಬಹುತೇಕ ಪ್ರತಿಯೊಂದು ಕುಟುಂಬಕ್ಕೂ ಕ್ಯಾನ್ಸರ್‌ನೊಂದಿಗೆ ಒಂದಿಲ್ಲೊಂದು ಸಂಬಂಧವಿರುತ್ತದೆ. ಧೈರ್ಯದಿಂದ ಹೋರಾಡಿದ ಒಬ್ಬ ಆಪ್ತ, ಚಿಕಿತ್ಸೆ ಪಡೆಯುತ್ತಿರುವ ಸಹೋದ್ಯೋಗಿ, ಅಥವಾ ಸದ್ದಿಲ್ಲದೆ ಹೋರಾಡುತ್ತಿರುವ ಸ್ನೇಹಿತನ ತಂದೆ-ತಾಯಿ. ಭಾರತದಲ್ಲಿ ಇಂದು ಕ್ಯಾನ್ಸರ್ ಒಂದು ಸಾಮಾನ್ಯ ಕಾಯಿಲೆಯಾಗಿದೆ. &#8216;ದಿ ಜರ್ನಲ್ ಆಫ್ ದಿ ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್&#8217; (JAMA) ನಲ್ಲಿ ಪ್ರಕಟವಾದ &#8216;ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್&#8217; (ICMR) ನ ಇತ್ತೀಚಿನ ಅಧ್ಯಯನದ ಪ್ರಕಾರ, 2024ರಲ್ಲಿ ದೇಶದಲ್ಲಿ 15.6 [&#8230;]]]></description>
										<content:encoded><![CDATA[
<hr class="wp-block-separator has-alpha-channel-opacity"/>



<h3 class="wp-block-heading"></h3>



<p>ಕ್ಯಾನ್ಸರ್&#8230; ಈ ಹೆಸರನ್ನು ಕೇಳಿದರೆ ಸಾಕು ಎಲ್ಲರಿಗೂ ನಡುಕ ಹುಟ್ಟುತ್ತದೆ. ಬಹುತೇಕ ಪ್ರತಿಯೊಂದು ಕುಟುಂಬಕ್ಕೂ ಕ್ಯಾನ್ಸರ್‌ನೊಂದಿಗೆ ಒಂದಿಲ್ಲೊಂದು ಸಂಬಂಧವಿರುತ್ತದೆ. ಧೈರ್ಯದಿಂದ ಹೋರಾಡಿದ ಒಬ್ಬ ಆಪ್ತ, ಚಿಕಿತ್ಸೆ ಪಡೆಯುತ್ತಿರುವ ಸಹೋದ್ಯೋಗಿ, ಅಥವಾ ಸದ್ದಿಲ್ಲದೆ ಹೋರಾಡುತ್ತಿರುವ ಸ್ನೇಹಿತನ ತಂದೆ-ತಾಯಿ. ಭಾರತದಲ್ಲಿ ಇಂದು ಕ್ಯಾನ್ಸರ್ ಒಂದು ಸಾಮಾನ್ಯ ಕಾಯಿಲೆಯಾಗಿದೆ. <br>&#8216;ದಿ ಜರ್ನಲ್ ಆಫ್ ದಿ ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್&#8217; (JAMA) ನಲ್ಲಿ ಪ್ರಕಟವಾದ &#8216;ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್&#8217; (ICMR) ನ ಇತ್ತೀಚಿನ ಅಧ್ಯಯನದ ಪ್ರಕಾರ, 2024ರಲ್ಲಿ ದೇಶದಲ್ಲಿ 15.6 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ಮತ್ತು 8,74,404 ಸಾವುಗಳು ಸಂಭವಿಸಿವೆ. ಈ ಅಂಕಿಅಂಶವು ದೇಶದ ಆರೋಗ್ಯ ಸಮಸ್ಯೆಗಳಿಗೆ ಹಿಡಿದ ಕನ್ನಡಿಯಾಗಿದೆ. <br><br>&#8216;ಕ್ಯಾನ್ಸರ್ ಇನ್ಸಿಡೆನ್ಸ್ ಮತ್ತು ಮೋರ್ಟಾಲಿಟಿ ಅಕ್ರಾಸ್ 43 ಕ್ಯಾನ್ಸರ್ ರಿಜಿಸ್ಟ್ರೀಸ್ ಇನ್ ಇಂಡಿಯಾ&#8217; ಎಂಬ ಶೀರ್ಷಿಕೆಯ ಈ ಅಧ್ಯಯನ, ಇದೇ ಪ್ರವೃತ್ತಿ ಮುಂದುವರಿದರೆ 2045ರ ವೇಳೆಗೆ ದೇಶದಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ 24.6 ಲಕ್ಷಕ್ಕೆ ತಲುಪಬಹುದು ಎಂದು ಅಂದಾಜಿಸಿದೆ.</p>



<hr class="wp-block-separator has-alpha-channel-opacity"/>



<h3 class="wp-block-heading"><strong>ದೇಶದಲ್ಲಿ ಸಾಮಾನ್ಯವಾದ ಕ್ಯಾನ್ಸರ್ ವಿಧಗಳು</strong></h3>



<p>ICMR ಅಧ್ಯಯನದ ಪ್ರಕಾರ, ಲಿಂಗವನ್ನು ಆಧರಿಸಿ ಕ್ಯಾನ್ಸರ್ ಪ್ರವೃತ್ತಿಗಳಲ್ಲಿ ಸ್ಪಷ್ಟ ವ್ಯತ್ಯಾಸಗಳಿವೆ. ಪುರುಷರಲ್ಲಿ ಬಾಯಿಯ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಮತ್ತು ಪ್ರೋಸ್ಟೇಟ್ ಕ್ಯಾನ್ಸರ್ ಸಾಮಾನ್ಯವಾಗಿದೆ. ಕಳೆದ ವರ್ಷ ಕೇವಲ ಬಾಯಿಯ ಕ್ಯಾನ್ಸರ್‌ನಿಂದಲೇ 1,13,000 ಹೊಸ ಪ್ರಕರಣಗಳು ವರದಿಯಾಗಿವೆ. ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಮತ್ತು ಅಂಡಾಶಯದ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತವೆ. <br><br>2024ರಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು 2,38,000ಕ್ಕಿಂತ ಹೆಚ್ಚಿವೆ. ಭಾರತೀಯ ಮಹಿಳೆಯರನ್ನು ಹೆಚ್ಚು ಕಾಡುತ್ತಿರುವ ಕಾಯಿಲೆ ಇದಾಗಿದೆ. ಈ ಅಧ್ಯಯನದ ಪ್ರಕಾರ ದೇಶದಲ್ಲಿ ಜೀವಿತಾವಧಿಯ ಕ್ಯಾನ್ಸರ್ ಅಪಾಯ ಶೇ 11ರಷ್ಟಿದೆ, ಆದರೆ ಮಿಜೋರಾಂನಂತಹ ಪ್ರದೇಶಗಳಲ್ಲಿ ಈ ಅಪಾಯ ತೀರಾ ಹೆಚ್ಚಾಗಿದೆ.</p>



<p>ಪುರುಷರಲ್ಲಿ ಶೇ 21.1 ಮತ್ತು ಮಹಿಳೆಯರಲ್ಲಿ ಶೇ 18.9ರಷ್ಟು ಕ್ಯಾನ್ಸರ್ ಪ್ರಮಾಣ ದಾಖಲಾಗಿದೆ. ಕಳವಳಕಾರಿ ವಿಷಯವೆಂದರೆ, 30-40 ವರ್ಷ ವಯಸ್ಸಿನವರಲ್ಲಿಯೂ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗುತ್ತಿವೆ. ಹಿಂದೆ ವಯಸ್ಸಾದ ಮಹಿಳೆಯರ ಕಾಯಿಲೆ ಎಂದು ಪರಿಗಣಿಸಲಾಗಿದ್ದ ಸ್ತನ ಕ್ಯಾನ್ಸರ್ ಈಗ ಯುವತಿಯರನ್ನೂ ಬಾಧಿಸುತ್ತಿದೆ. ತಂಬಾಕು ಜಗಿಯುವುದು, ಧೂಮಪಾನ ಮತ್ತು ಮದ್ಯಪಾನದಂತಹ ಜೀವನಶೈಲಿಯ ಅಭ್ಯಾಸಗಳು ಬಾಯಿಯ ಕ್ಯಾನ್ಸರ್‌ಗೆ ಕಾರಣವಾಗುತ್ತಿದ್ದರೆ, ಬದಲಾಗುತ್ತಿರುವ ಆಹಾರ ಪದ್ಧತಿಗಳು, ಒತ್ತಡ ಮತ್ತು ಚಲನೆಯಿಲ್ಲದ ಜೀವನಶೈಲಿ ಯುವತಿಯರಲ್ಲಿ ಸ್ತನ ಕ್ಯಾನ್ಸರ್‌ಗೆ ಕಾರಣವಾಗುತ್ತಿವೆ. ಪುರುಷರಲ್ಲಿ ಅತಿ ಹೆಚ್ಚು ಕ್ಯಾನ್ಸರ್ ಪ್ರಮಾಣ ದೆಹಲಿಯಲ್ಲಿ ದಾಖಲಾಗಿದೆ. ಆದರೆ ಐಜ್ವಾಲ್ ಮತ್ತು ಶ್ರೀನಗರದಲ್ಲಿ ಕೆಲವು ನಿರ್ದಿಷ್ಟ ರೀತಿಯ ಕ್ಯಾನ್ಸರ್ ಪ್ರಮಾಣ ದೇಶದಲ್ಲೇ ಅತಿ ಹೆಚ್ಚಿದೆ.</p>



<hr class="wp-block-separator has-alpha-channel-opacity"/>



<h3 class="wp-block-heading"><strong>ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವುದು ಹೇಗೆ?</strong></h3>



<p>ಕ್ಯಾನ್ಸರ್ ತಡೆಗಟ್ಟಲು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದೇ ಮೊದಲ ರಕ್ಷಣಾ ಮಾರ್ಗ ಎಂದು ಈ ಅಧ್ಯಯನ ಪುನರುಚ್ಚರಿಸಿದೆ. ತಂಬಾಕು ಮತ್ತು ಧೂಮಪಾನವನ್ನು ತ್ಯಜಿಸುವುದರಿಂದ ಕ್ಯಾನ್ಸರ್ ತಡೆಯಬಹುದು ಎಂದು ವೈದ್ಯರು ಹೇಳುತ್ತಾರೆ. ಸಣ್ಣದಾಗಿ ನಡೆಯುವುದು ಮತ್ತು ಮೆಟ್ಟಿಲುಗಳನ್ನು ಹತ್ತುವುದು ಸಹ ದೊಡ್ಡ ಬದಲಾವಣೆ ತರಬಲ್ಲದು ಎಂದು ಅವರು ಹೇಳುತ್ತಾರೆ. ಇದರ ಜೊತೆಗೆ, ಹುರಿದ ಮತ್ತು ಪ್ಯಾಕ್ ಮಾಡಲಾದ ಆಹಾರಗಳನ್ನು ಕಡಿಮೆ ಮಾಡಿ, ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು. <br><br>ಮಹಿಳೆಯರು ಸ್ತನ ಮತ್ತು ಗರ್ಭಕಂಠದ ಪರೀಕ್ಷೆಗಳನ್ನು, ಪುರುಷರು ಬಾಯಿಯ ಮತ್ತು ಶ್ವಾಸಕೋಶದ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ತಂಬಾಕು, ಬೊಜ್ಜು, ಸೋಂಕುಗಳು ಮತ್ತು ಮಾಲಿನ್ಯದಂತಹ ಅಪಾಯಗಳನ್ನು ನಿಯಂತ್ರಿಸಿದರೆ ಪ್ರಪಂಚದಾದ್ಯಂತ ಲಕ್ಷಾಂತರ ಕ್ಯಾನ್ಸರ್ ಪ್ರಕರಣಗಳನ್ನು ತಡೆಯಬಹುದು ಎಂದು ತಜ್ಞರು ಹೇಳುತ್ತಾರೆ.</p>
]]></content:encoded>
					
		
		
			</item>
		<item>
		<title>ಮಕ್ಕಳು, ದೊಡ್ಡವರು ಎಂಬ ಭೇದವಿಲ್ಲದೆ ಹೆಚ್ಚುತ್ತಿದೆ ಸ್ಥೂಲಕಾಯ: ಭಾರತದಲ್ಲಿ ಆತಂಕ ಮೂಡಿಸುವ ಪರಿಸ್ಥಿತಿಯಿದೆ ಎಂದ ವಿಶ್ವಸಂಸ್ಥೆ</title>
		<link>https://peepalmedia.com/obesity-is-increasing-regardless-of-whether-it-is-children-or-adults/</link>
		
		<dc:creator><![CDATA[Peepal Media]]></dc:creator>
		<pubDate>Mon, 04 Aug 2025 02:27:02 +0000</pubDate>
				<category><![CDATA[ಆರೋಗ್ಯ]]></category>
		<guid isPermaLink="false">https://peepalmedia.com/?p=63571</guid>

					<description><![CDATA[ಭಾರತದಲ್ಲಿ ಸ್ಥೂಲಕಾಯದ ಸಮಸ್ಯೆ ಆತಂಕ ಮೂಡಿಸುತ್ತಿದೆ. ಈ ಸಮಸ್ಯೆ ದೊಡ್ಡವರು ಮತ್ತು ಮಕ್ಕಳ ನಡುವೆ ಯಾವುದೇ ಭೇದವಿಲ್ಲದೆ ತೀವ್ರಗೊಳ್ಳುತ್ತಿದೆ. ಈ ವಿಷಯವನ್ನು ವಿಶ್ವಸಂಸ್ಥೆಯ (UN) ಅನೇಕ ಸಂಸ್ಥೆಗಳು ಸಿದ್ಧಪಡಿಸಿದ ವರದಿಯು ಬಹಿರಂಗಪಡಿಸಿದೆ. ಇತ್ತೀಚೆಗೆ &#8216;ಸ್ಟೇಟ್ ಆಫ್ ಫುಡ್ ಸೆಕ್ಯುರಿಟಿ ಅಂಡ್ ನ್ಯೂಟ್ರಿಷನ್ (SOFI) ಇನ್ ದಿ ವರ್ಲ್ಡ್ 2025&#8217; ಎಂಬ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಆಹಾರ ಮತ್ತು ಕೃಷಿ ಸಂಸ್ಥೆ (FAO), ವಿಶ್ವ ಆರೋಗ್ಯ ಸಂಸ್ಥೆ (WHO), ವಿಶ್ವ ಆಹಾರ ಕಾರ್ಯಕ್ರಮ (WFP), ಕೃಷಿ ಅಭಿವೃದ್ಧಿಗಾಗಿ ಅಂತರರಾಷ್ಟ್ರೀಯ [&#8230;]]]></description>
										<content:encoded><![CDATA[
<p>ಭಾರತದಲ್ಲಿ ಸ್ಥೂಲಕಾಯದ ಸಮಸ್ಯೆ ಆತಂಕ ಮೂಡಿಸುತ್ತಿದೆ. ಈ ಸಮಸ್ಯೆ ದೊಡ್ಡವರು ಮತ್ತು ಮಕ್ಕಳ ನಡುವೆ ಯಾವುದೇ ಭೇದವಿಲ್ಲದೆ ತೀವ್ರಗೊಳ್ಳುತ್ತಿದೆ. ಈ ವಿಷಯವನ್ನು ವಿಶ್ವಸಂಸ್ಥೆಯ (UN) ಅನೇಕ ಸಂಸ್ಥೆಗಳು ಸಿದ್ಧಪಡಿಸಿದ ವರದಿಯು ಬಹಿರಂಗಪಡಿಸಿದೆ. ಇತ್ತೀಚೆಗೆ &#8216;ಸ್ಟೇಟ್ ಆಫ್ ಫುಡ್ ಸೆಕ್ಯುರಿಟಿ ಅಂಡ್ ನ್ಯೂಟ್ರಿಷನ್ (SOFI) ಇನ್ ದಿ ವರ್ಲ್ಡ್ 2025&#8217; ಎಂಬ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಆಹಾರ ಮತ್ತು ಕೃಷಿ ಸಂಸ್ಥೆ (FAO), ವಿಶ್ವ ಆರೋಗ್ಯ ಸಂಸ್ಥೆ (WHO), ವಿಶ್ವ ಆಹಾರ ಕಾರ್ಯಕ್ರಮ (WFP), ಕೃಷಿ ಅಭಿವೃದ್ಧಿಗಾಗಿ ಅಂತರರಾಷ್ಟ್ರೀಯ ನಿಧಿ (IFAD), ಯುನೈಟೆಡ್ ನೇಷನ್ಸ್ ಚಿಲ್ಡ್ರನ್ಸ್ ಫಂಡ್ (UNICEF) ಈ ವರದಿಯನ್ನು ಸಿದ್ಧಪಡಿಸಿವೆ.</p>



<p>ಐದು ವರ್ಷದ ಮಕ್ಕಳಲ್ಲಿ 3.7% ಏರಿಕೆ</p>



<p>ಈ ವರದಿಯ ಪ್ರಕಾರ, ಭಾರತದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಅಧಿಕ ತೂಕ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಈ ವಯಸ್ಸಿನ ಮಕ್ಕಳಲ್ಲಿ ಅಧಿಕ ತೂಕದ ಪ್ರಮಾಣವು 2012 ರಲ್ಲಿ 2.7% ಇದ್ದರೆ, 2024 ರ ಹೊತ್ತಿಗೆ ಅದು 3.7% ಕ್ಕೆ ಏರಿದೆ. ಅಂದರೆ, 27 ಲಕ್ಷದಿಂದ 42 ಲಕ್ಷಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಮಕ್ಕಳು ಸ್ಥೂಲಕಾಯ ಮತ್ತು ದೀರ್ಘಕಾಲದ ಕಾಯಿಲೆಗಳಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.</p>



<p>ಬಾಲ್ಯದಲ್ಲಿ ಅಧಿಕ ತೂಕದ ಸಮಸ್ಯೆ ಮಾನಸಿಕ ಮತ್ತು ಸಾಮಾಜಿಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಇದು ಶಾಲೆಯಲ್ಲಿ ಮಕ್ಕಳ ಕಾರ್ಯಕ್ಷಮತೆ ಮತ್ತು ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು ಎಂದು WHO ವಿವರಿಸಿದೆ. ಸ್ಥೂಲಕಾಯದ ಸಮಸ್ಯೆ ಇರುವ ಮಕ್ಕಳು ದೊಡ್ಡವರಾದಾಗಲೂ ಇದೇ ಸ್ಥಿತಿ ಹೊಂದುವ ಸಾಧ್ಯತೆ ಹೆಚ್ಚಿರುತ್ತದೆ ಮತ್ತು ವಯಸ್ಕರಲ್ಲಿ ಸಾಂಕ್ರಾಮಿಕವಲ್ಲದ ಕಾಯಿಲೆಗಳು (NCD) ಬರುವ ಅಪಾಯ ಹೆಚ್ಚಿರುತ್ತದೆ ಎಂದು ಎಚ್ಚರಿಕೆ ನೀಡಿದೆ.</p>



<p>20 ಕೋಟಿಗೂ ಹೆಚ್ಚು ಜನರು</p>



<p>ಭಾರತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿಯೂ ಸಹ ಸ್ಥೂಲಕಾಯವು ಸ್ಥಿರವಾಗಿ ಹೆಚ್ಚುತ್ತಿದೆ. 2012 ರಲ್ಲಿ 4.7% ಇದ್ದ ಈ ಸಂಖ್ಯೆ, ಈಗ 7.3% ಕ್ಕೆ ಏರಿದೆ. ಭಾರತದಲ್ಲಿ 20.55 ಕೋಟಿ ದೊಡ್ಡವರು ಸ್ಥೂಲಕಾಯದಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಈ ಸಂಶೋಧನಾ ಫಲಿತಾಂಶಗಳು ಭಾರತದಲ್ಲಿನ ಆತಂಕಕಾರಿ ಪರಿಸ್ಥಿತಿಯನ್ನು ಬಹಿರಂಗಪಡಿಸುತ್ತಿವೆ ಎಂದು ICMR, ಅಕಾಡೆಮಿ ಆಫ್ ಸೈಂಟಿಫಿಕ್ ಅಂಡ್ ಇನ್ನೊವೇಟಿವ್ ರಿಸರ್ಚ್ ಮತ್ತು ಸಿಂಬಯೋಸಿಸ್ ಮೆಡಿಕಲ್ ಕಾಲೇಜಿನ ವೈದ್ಯಕೀಯ ಮತ್ತು ಆರೋಗ್ಯ ತಜ್ಞರು ಹೇಳಿದ್ದಾರೆ.</p>



<p>ಪ್ರತಿ 20ನೇ ಮನೆಯಲ್ಲಿ</p>



<p>ಭಾರತದಲ್ಲಿನ ಪ್ರತಿ 20ರಲ್ಲಿ ಒಂದು ಮನೆಯಲ್ಲಿ ಎಲ್ಲರೂ ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಹಾಗೆಯೇ, ಪ್ರತಿ ಹತ್ತನೇ ಮನೆಯ ಎಲ್ಲರಿಗೂ ಸ್ಥೂಲಕಾಯದ ಸಮಸ್ಯೆ ಇದೆ. ಅಧಿಕ ತೂಕ ಮತ್ತು ಸ್ಥೂಲಕಾಯವನ್ನು ಬಾಡಿ ಮಾಸ್ ಇಂಡೆಕ್ಸ್ (BMI) ಮೂಲಕ ಅಳೆಯಲಾಗುತ್ತದೆ. BMI 25-29.9 ರ ನಡುವೆ ಇದ್ದರೆ ಅದನ್ನು ಅಧಿಕ ತೂಕ ಎಂದು ಪರಿಗಣಿಸಲಾಗುತ್ತದೆ, BMI 30-39.9 ರ ನಡುವೆ ಇದ್ದರೆ ಅದನ್ನು ಸ್ಥೂಲಕಾಯ ಎಂದು ಪರಿಗಣಿಸಲಾಗುತ್ತದೆ. BMI 24.9 ಕ್ಕಿಂತ ಹೆಚ್ಚಿದ್ದರೆ ಅದನ್ನು ಅನಾರೋಗ್ಯಕರ ಎಂದು ಗುರುತಿಸಲಾಗುತ್ತದೆ.</p>



<p>ಗ್ರಾಮೀಣ ಪ್ರದೇಶಗಳಿಗಿಂತ ನಗರಗಳಲ್ಲಿ ದ್ವಿಗುಣ</p>



<p>ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಸ್ಥೂಲಕಾಯದಿಂದ ಬಳಲುತ್ತಿರುವವರ ಸಂಖ್ಯೆ ದ್ವಿಗುಣವಾಗಿದೆ. ಹಾಗೆಯೇ, ಶ್ರೀಮಂತ ವರ್ಗಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಸ್ಥೂಲಕಾಯದ ಸಮಸ್ಯೆಯನ್ನು ನಿಯಂತ್ರಿಸಲು ಭಾರತದಲ್ಲಿ ಅನೇಕ ಕಾರ್ಯಕ್ರಮಗಳು ಮತ್ತು ಪ್ರಯತ್ನಗಳನ್ನು ಮಾಡಿದ್ದರೂ, ಅವು ಅಷ್ಟಾಗಿ ಪರಿಣಾಮ ಬೀರಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.</p>



<p>ವೈಯಕ್ತಿಕ ಮಟ್ಟದಲ್ಲಿ ಗಮನ ಹರಿಸಿ, ಅಧಿಕ ತೂಕ ಮತ್ತು ಸ್ಥೂಲಕಾಯದ ಸಮಸ್ಯೆಯ ಬಗ್ಗೆ ಸೂಕ್ತ ಕ್ರಮಗಳು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಅವರು ಸೂಚಿಸಿದ್ದಾರೆ. ಇಲ್ಲವಾದರೆ, ಈ ಸಮಸ್ಯೆ ತೀವ್ರಗೊಂಡು, ಸಂತ್ರಸ್ತರಲ್ಲಿ NCDಗಳು ಅಭಿವೃದ್ಧಿ ಹೊಂದುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ. ವಿಶೇಷವಾಗಿ ಭಾರತದ ದಕ್ಷಿಣ ಪ್ರದೇಶ, ಶ್ರೀಮಂತ ಕುಟುಂಬಗಳು ಮತ್ತು ನಗರ ಪ್ರದೇಶಗಳಲ್ಲಿ ಸ್ಥೂಲಕಾಯ ಬರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹೇಳಿದ್ದಾರೆ ಮತ್ತು ಇಲ್ಲಿನ ಜನರ ಮೇಲೆ ಸರ್ಕಾರಗಳು ವಿಶೇಷ ಗಮನ ಹರಿಸಬೇಕು ಎಂದು ಹೇಳಿದ್ದಾರೆ.</p>



<p>58 ಕೋಟಿ ಜನರಿಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ</p>



<p>ಇದಲ್ಲದೆ, ಪೌಷ್ಟಿಕಾಂಶದ ಕೊರತೆಯೂ ಭಾರತಕ್ಕೆ ಒಂದು ಸಮಸ್ಯೆಯಾಗಿದೆ. ಇಂದಿಗೂ ದೇಶದ 40.4% ಜನರು, ಅಂದರೆ 58.50 ಕೋಟಿ ಜನರು ಆರೋಗ್ಯಕರ ಆಹಾರವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು SOFI ವರದಿ ವಿವರಿಸಿದೆ. ಇದು ಬಹಳ ಆತಂಕಕಾರಿ ವಿಷಯ ಎಂದು ಅದು ಹೇಳಿದೆ.</p>



<p>ಭಾರತದಲ್ಲಿ 2022-24 ರಲ್ಲಿ 17.2 ಕೋಟಿ ಜನರು ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದಾರೆ. ಭಾರತವು ನಾಲ್ಕನೇ ಅತಿದೊಡ್ಡ ಆರ್ಥಿಕತೆಯೆಂದು ಹೇಳಿಕೊಂಡರೂ, ಇಲ್ಲಿನ ಜನರಿಗೆ ಕನಿಷ್ಠ ಆರೋಗ್ಯಕರ ಆಹಾರವೂ ಸಿಗದಿರುವ ಪರಿಸ್ಥಿತಿ ಇದೆ ಎಂದು ವಿಶ್ಲೇಷಕರು ಹೇಳಿದ್ದಾರೆ.</p>
]]></content:encoded>
					
		
		
			</item>
		<item>
		<title>ಶಾಲಾ ಕಾಲೇಜುಗಳಿಂದಲೇ ಕಡ್ಡಾಯ &#8216;ಹೃದಯ ತಪಾಸಣೆ&#8217;ಗೆ ಸರ್ಕಾರ ಚಿಂತನೆ: ಸಚಿವ ರಾಜಣ್ಣ</title>
		<link>https://peepalmedia.com/government-considering-making-heart-check-ups-mandatory-in-schools-and-colleges/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 07 Jul 2025 03:09:20 +0000</pubDate>
				<category><![CDATA[ಆರೋಗ್ಯ]]></category>
		<category><![CDATA[ರಾಜ್ಯ]]></category>
		<category><![CDATA[ಹಾಸನ]]></category>
		<guid isPermaLink="false">https://peepalmedia.com/?p=62225</guid>

					<description><![CDATA[ತೀರಾ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆಲ್ಲಾ ಹೃದಯಾಘಾತ ಸಂಭವಿಸಿ ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳ ಮಕ್ಕಳಿಗಾಗಿಯೇ ಕಡ್ಡಾಯ &#8216;ಹೃದಯ ತಪಾಸಣೆ&#8217; ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ಸಚಿವ ಕೆ ಎನ್ ರಾಜಣ್ಣ ತಿಳಿಸಿದ್ದಾರೆ. ಅತಿ ಹೆಚ್ಚು ಹೃದಯಾಘಾತ ಪ್ರಕರಣಗಳನ್ನು ಕಾಣುತ್ತಿರುವ ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು ಎಲ್ಲ ಆಸ್ಪತ್ರೆಗಳಲ್ಲಿಯೂ ಹೃದಯಾಘಾತಕ್ಕೆ ಕಾರಣ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕ್ರಮಗಳನ್ನು ಕೈಗೊಂಡು ಜಾಗೃತಿ ಮೂಡಿಸಲು ಎಲ್ಲಾ ಜಿಲ್ಲಾಡಳಿತಕ್ಕೂ ಕರೆ ನೀಡಲಾಗಿದೆ ಎಂದು ಸಚಿವ ರಾಜಣ್ಣ [&#8230;]]]></description>
										<content:encoded><![CDATA[
<p>ತೀರಾ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆಲ್ಲಾ ಹೃದಯಾಘಾತ ಸಂಭವಿಸಿ ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳ ಮಕ್ಕಳಿಗಾಗಿಯೇ ಕಡ್ಡಾಯ &#8216;ಹೃದಯ ತಪಾಸಣೆ&#8217; ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ಸಚಿವ ಕೆ ಎನ್ ರಾಜಣ್ಣ ತಿಳಿಸಿದ್ದಾರೆ.</p>



<p>ಅತಿ ಹೆಚ್ಚು ಹೃದಯಾಘಾತ ಪ್ರಕರಣಗಳನ್ನು ಕಾಣುತ್ತಿರುವ ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು ಎಲ್ಲ ಆಸ್ಪತ್ರೆಗಳಲ್ಲಿಯೂ ಹೃದಯಾಘಾತಕ್ಕೆ ಕಾರಣ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕ್ರಮಗಳನ್ನು ಕೈಗೊಂಡು ಜಾಗೃತಿ ಮೂಡಿಸಲು ಎಲ್ಲಾ ಜಿಲ್ಲಾಡಳಿತಕ್ಕೂ ಕರೆ ನೀಡಲಾಗಿದೆ ಎಂದು ಸಚಿವ ರಾಜಣ್ಣ ಮಾಹಿತಿ ನೀಡಿದ್ದಾರೆ.</p>



<p>ತಾವು ಉಸ್ತುವಾರಿ ಸಚಿವರಾಗಿರುವ ಹಾಸನ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಬಗ್ಗೆ ತಪಾಸಣೆ ಜೊತೆಗೆ ಜಾಗೃತಿಯೂ ಮೂಡಿಸಬೇಕಿದೆ. ಆಹಾರ ಪದ್ದತಿ ಬದಲಾವಣೆ, ಬದಲಾದ ಜೀವನ ಶೈಲಿ, ವಂಶ ಪಾರಂಪರ್ಯ ಸೇರಿ ಹಲವು ಕಾರಣಗಳಿವೆ. ಆದರೆ, ಹೃದಯಾಘಾತದಿಂದ ವ್ಯಕ್ತಿ ಸಾವನ್ನಪ್ಪಿರುವ ಬಗ್ಗೆ ಖಚಿತ ಮಾಹಿತಿ ಪಡೆಯಲು ಮೃತಪಟ್ಟ ಕುಟುಂಬದವರ ಮನ ಒಲಿಸಿ ಕಡ್ಡಾಯವಾಗಿ ಮರಣೋತ್ತರ ಪರೀಕ್ಷೆ ಮಾಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲು ಸಚಿವ ರಾಜಣ್ಣ ಮುಂದಾಗಿದ್ದಾರೆ. ಅದರ ಜೊತೆಗೆ ರಾಜ್ಯಾದ್ಯಂತ ಇದನ್ನು ವಿಸ್ತರಿಸಲು ತಜ್ಞರ ಸಮಿತಿ ರಚನೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಹೃದಯಾಘಾತದ ಸಾವಿನ ಪ್ರಕರಣಗಳ ಬಗ್ಗೆ ತಜ್ಞರ ಸಮಿತಿಯಿಂದ ಆರೋಗ್ಯ ಇಲಾಖೆಗೆ ವರದಿ ಸಲ್ಲಿಕೆ ; ವರದಿಯಲ್ಲಿನ ಪ್ರಮುಖ ಅಂಶಗಳಿವು</title>
		<link>https://peepalmedia.com/expert-committee-submits-report-to-health-department/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 05 Jul 2025 11:03:13 +0000</pubDate>
				<category><![CDATA[ಆರೋಗ್ಯ]]></category>
		<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[ಮೀಡಿಯಾ]]></category>
		<guid isPermaLink="false">https://peepalmedia.com/?p=62188</guid>

					<description><![CDATA[ರಾಜ್ಯದಲ್ಲಿ ಹೃದಯಾಘಾತದ ಸಾವಿನ ಪ್ರಕರಣ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ರಚಿಸಿದ ತಜ್ಞರ ಸಮಿತಿ ಇಲಾಖೆಗೆ ಪ್ರಾಥಮಿಕ ವರದಿ ಸಲ್ಲಿಸಿದೆ. ಆರೋಗ್ಯ ಇಲಾಖೆಯ ಟೆಕ್ನಿಕಲ್ ಕಮಿಟಿ ಈ ಬಗ್ಗೆ ವರದಿ ಸಿದ್ಧಪಡಿಸಿ ಹಲವು ಅಂಶಗಳ ಬಗ್ಗೆ ಮಾಹಿತಿ ನೀಡಿದೆ. ರಾಜ್ಯದ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದ ಸಭೆಯಲ್ಲಿ ಈ ಟೆಕ್ನಿಕಲ್ ಕಮಿಟಿಯ ವರದಿಯ ಅಂಶಗಳನ್ನು ಚರ್ಚಿಸಲಾಗಿದೆ. ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ರವೀಂದ್ರ ನಾಥ್ ತಂಡದಿಂದ ಸರ್ಕಾರಕ್ಕೆ ಮಹತ್ವದ ಅಧ್ಯಯನ ವರದಿ [&#8230;]]]></description>
										<content:encoded><![CDATA[
<p></p>



<p>ರಾಜ್ಯದಲ್ಲಿ ಹೃದಯಾಘಾತದ ಸಾವಿನ ಪ್ರಕರಣ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ರಚಿಸಿದ ತಜ್ಞರ ಸಮಿತಿ ಇಲಾಖೆಗೆ ಪ್ರಾಥಮಿಕ ವರದಿ ಸಲ್ಲಿಸಿದೆ. ಆರೋಗ್ಯ ಇಲಾಖೆಯ ಟೆಕ್ನಿಕಲ್ ಕಮಿಟಿ ಈ ಬಗ್ಗೆ ವರದಿ ಸಿದ್ಧಪಡಿಸಿ ಹಲವು ಅಂಶಗಳ ಬಗ್ಗೆ ಮಾಹಿತಿ ನೀಡಿದೆ.</p>



<p>ರಾಜ್ಯದ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದ ಸಭೆಯಲ್ಲಿ ಈ ಟೆಕ್ನಿಕಲ್ ಕಮಿಟಿಯ ವರದಿಯ ಅಂಶಗಳನ್ನು ಚರ್ಚಿಸಲಾಗಿದೆ. ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ರವೀಂದ್ರ ನಾಥ್ ತಂಡದಿಂದ ಸರ್ಕಾರಕ್ಕೆ ಮಹತ್ವದ ಅಧ್ಯಯನ ವರದಿ ಸಲ್ಲಿಸಿ ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸಿದೆ.</p>



<p>ತಾಂತ್ರಿಕ ಸಲಹಾ ಸಮಿತಿಯು ವರದಿಯಲ್ಲಿ ಪ್ರಮುಖ ಅಂಶಗಳನ್ನು ಉಲ್ಲೇಖಿಸಲಾಗಿದೆ. ರಾಜ್ಯ ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಸಲ್ಲಿಸಿದಂತ ವರದಿಯಲ್ಲಿ ಒಟ್ಟು 251 ಮಂದಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ. 251 ರೋಗಿಗಳಲ್ಲಿ 87 ಮಂದಿಗೆ ಮಧುಮೇಹ ಕಾಯಿಲೆ, 102 ರೋಗಿಗಳಿಗೆ ರಕ್ತದೊತ್ತಡ, 35 ಮಂದಿಗೆ ಕೊಲೆಸ್ಟ್ರಾಲ್ ಮತ್ತು 40 ಮಂದಿಗೆ ಹೃದಯ ಸಂಬಂಧಿ ಕಾಯಿಲೆ ಇರುವುದನ್ನು ಪತ್ತೆ ಹಚ್ಚಿದೆ.</p>



<p>ದೇಹದೊಳಗಿನ ರೋಗಗಳ ಹೊರತಾಗಿ 251 ಮಂದಿಯಲ್ಲಿ 111 ಜನರು ಧೂಮಪಾನಿಗಳಾಗಿದ್ದಾರೆ. 19 ಮಂದಿಗೆ ಕೋವಿಡ್ ಹಿಸ್ಟರಿ ಇದೆ. 77 ಮಂದಿಗೆ ಯಾವುದೇ ರೋಗಗಳು ಇರಲಿಲ್ಲ. 30 ವರ್ಷಕ್ಕಿಂತ ಕಡಿಮೆ ವಯಸ್ಸಿನ 12 ಹೃದ್ರೋಗಿಗಳ ಬಗ್ಗೆ ಅಧ್ಯಯನ ಕೂಡ ಮಾಡಲಾಗಿದೆ.</p>



<p>31 ರಿಂದ 40 ವಯಸ್ಸಿನ 66 ಹೃದ್ರೋಗಿಗಳ ಬಗ್ಗೆ ಅಧ್ಯಯನ ಕೈಗೊಳ್ಳಲಾಗಿದೆ. 41ರಿಂದ 45 ವಯಸ್ಸಿನ 172 ಹೃದ್ರೋಗಿಗಳ ಬಗ್ಗೆ ಕೂಡ ಅಧ್ಯಯನವನ್ನು ತಾಂತ್ರಿಕ ಸಲಹಾ ಸಮಿತಿ ನಡೆಸಿದೆ.</p>
]]></content:encoded>
					
		
		
			</item>
		<item>
		<title>ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣ ; ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲೂ &#8216;ಸ್ಟೆಮಿ&#8217; ಯೋಜನೆ ವಿಸ್ತರಣೆ</title>
		<link>https://peepalmedia.com/stemi-scheme-expanded-to-taluk-centres-tooo/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 30 Jun 2025 11:55:04 +0000</pubDate>
				<category><![CDATA[ಆರೋಗ್ಯ]]></category>
		<category><![CDATA[ಬ್ರೇಕಿಂಗ್ ಸುದ್ದಿ]]></category>
		<guid isPermaLink="false">https://peepalmedia.com/?p=61838</guid>

					<description><![CDATA[ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಯಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ರಾಜ್ಯಾಧ್ಯಂತ ಎಲ್ಲಾ ತಾಲ್ಲೂಕು ಕೇಂದ್ರಗಳಿಗೂ ಸ್ಟೆಮಿ ಯೋಜನೆ ವಿಸ್ತರಣೆಗೆ ನಿರ್ಧರಿಸಿರುವುದಾಗಿ ಆರೋಗ್ಯ ಇಲಾಖೆ ನಿರ್ಧರಿಸಿದೆ. ಈ ಬಗ್ಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಮಾಹಿತಿ ನೀಡಿದ್ದು ರಾಜ್ಯಾಧ್ಯಂತ ಎಲ್ಲಾ ತಾಲ್ಲೂಕುಗಳಲ್ಲಿ ಸ್ಟೆಮಿ ಯೋಜನೆ ವಿಸ್ತರಣೆ ಮಾಡಲಾಗುತ್ತಿದೆ. ಮುಂದಿನ ವರ್ಷದೊಳಗೆ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲೂ ಸ್ಟೆಮಿ ಯೋಜನೆ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ. ರಾಜ್ಯ ಸರ್ಕಾರ ರಾಜ್ಯಾಧ್ಯಂತ ವಿಸ್ತರಿಸುತ್ತಿರುವಂತ ಸ್ಟೆಮಿ ಯೋಜನೆ [&#8230;]]]></description>
										<content:encoded><![CDATA[
<p>ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಯಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ರಾಜ್ಯಾಧ್ಯಂತ ಎಲ್ಲಾ ತಾಲ್ಲೂಕು ಕೇಂದ್ರಗಳಿಗೂ ಸ್ಟೆಮಿ ಯೋಜನೆ ವಿಸ್ತರಣೆಗೆ ನಿರ್ಧರಿಸಿರುವುದಾಗಿ ಆರೋಗ್ಯ ಇಲಾಖೆ ನಿರ್ಧರಿಸಿದೆ.</p>



<p>ಈ ಬಗ್ಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಮಾಹಿತಿ ನೀಡಿದ್ದು ರಾಜ್ಯಾಧ್ಯಂತ ಎಲ್ಲಾ ತಾಲ್ಲೂಕುಗಳಲ್ಲಿ ಸ್ಟೆಮಿ ಯೋಜನೆ ವಿಸ್ತರಣೆ ಮಾಡಲಾಗುತ್ತಿದೆ. ಮುಂದಿನ ವರ್ಷದೊಳಗೆ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲೂ ಸ್ಟೆಮಿ ಯೋಜನೆ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.</p>



<p>ರಾಜ್ಯ ಸರ್ಕಾರ ರಾಜ್ಯಾಧ್ಯಂತ ವಿಸ್ತರಿಸುತ್ತಿರುವಂತ ಸ್ಟೆಮಿ ಯೋಜನೆ ಅಂದರೆ ಹಬ್ ಆಂಡ್ ಸ್ಟೋಕ್ ಮಾಡೆಲ್ ಎಂಬುದಾಗಿದೆ. ಈ ಯೋಜನೆಯ ಅಡಿಯಲ್ಲಿ ತಾಲ್ಲೂಕು ಕೇಂದ್ರಗಳಲ್ಲೇ ಹೃದಯಾಘಾತಕ್ಕೆ ಒಳಗಾದವರಿಗೆ ತುರ್ತು ವೈದ್ಯಕೀಯ ನೆರವು ಸಿಗಲಿದೆ. ಆ ಮೂಲಕ ಪ್ರಾಣಾಪಾಯದಿಂದ ಹೃದಯಾಘಾತಕ್ಕೆ ಒಳಗಾದವರನ್ನು ಪಾರು ಮಾಡುವಂತ ಚಿಕಿತ್ಸಾ ವಿಧಾನ ಇದಾಗಿದೆ.</p>



<p>ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ನೀಡಿದ ಮಾಹಿತಿಯಂತೆ ಈ ಮೊದಲು 86 ತಾಲ್ಲೂಕು ಕೇಂದ್ರಗಳಲ್ಲಿ ಮಾತ್ರವೇ ಸ್ಟೆಮಿ ಯೋಜನೆ ಇತ್ತು. ಮುಂದಿನ ವರ್ಷದೊಳಗೆ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲೂ ಯೋಜನೆ ಆರಂಭಗೊಳ್ಳಲಿದೆ ಎಂದರು.</p>
]]></content:encoded>
					
		
		
			</item>
		<item>
		<title>ಸ್ತನ ಕ್ಯಾನ್ಸರ್ ಜಾಗೃತಿ ಅಭಿಯಾನಕ್ಕೆ ಉಪಾಸನಾ ಕಾಮಿನೇನಿ ಕೊನಿಡೇಲಾ ರಾಯಭಾರಿ</title>
		<link>https://peepalmedia.com/upasana-kamineni-is-the-ambassador-for-the-breast-cancer-awareness/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 12 Jun 2025 07:25:14 +0000</pubDate>
				<category><![CDATA[ಆರೋಗ್ಯ]]></category>
		<category><![CDATA[ಮೀಡಿಯಾ]]></category>
		<guid isPermaLink="false">https://peepalmedia.com/?p=60824</guid>

					<description><![CDATA[ಹೈದ್ರಾಬಾದ್: ಆರೋಗ್ಯ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಫ್ಯೂಜಿಫಿಲ್ಮ್ ಇಂಡಿಯಾ ಆಯೋಜಿಸಿರುವ ಸಿಎಸ್ಆರ್ ಸ್ತನ ಕ್ಯಾನ್ಸರ್ ಜಾಗೃತಿ ಅಭಿಯಾನಕ್ಕೆ ಅಪೋಲೋ ಹಾಸ್ಪಿಟಲ್ಸ್ ಫೌಂಡೇಶನ್‌ ಸಿಎಸ್‌ ಆರ್ ಉಪಾಧ್ಯಕ್ಷೆ ಉಪಾಸನಾ ಕಾಮಿನೇನಿ ಕೊನಿಡೇಲಾ ಅವರು ರಾಯಭಾರಿಯಾಗಿ ಸಾಥ್‌ ಕೊಟ್ಟಿದ್ದಾರೆ. ಸಿಎಸ್ಆರ್ ಅಭಿಯಾನದ ಉದ್ದೇಶ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಪ್ರೇರೇಪಿಸುವುದು. ಬೇಗನೆ ಹುಡುಕಿ, ಬೇಗನೆ ಹೋರಾಡಿ ಎಂಬುವುದು ಈ ಅಭಿಮಾನದ ಘೋಷ ವಾಕ್ಯವಾಗಿದೆ. ಈ ಜಾಗೃತಿ ಅಭಿಯಾನವನ್ನು 24 ನಗರಗಳಲ್ಲಿ [&#8230;]]]></description>
										<content:encoded><![CDATA[
<p></p>



<p>ಹೈದ್ರಾಬಾದ್: ಆರೋಗ್ಯ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಫ್ಯೂಜಿಫಿಲ್ಮ್ ಇಂಡಿಯಾ ಆಯೋಜಿಸಿರುವ ಸಿಎಸ್ಆರ್ ಸ್ತನ ಕ್ಯಾನ್ಸರ್ ಜಾಗೃತಿ ಅಭಿಯಾನಕ್ಕೆ ಅಪೋಲೋ ಹಾಸ್ಪಿಟಲ್ಸ್ ಫೌಂಡೇಶನ್‌ ಸಿಎಸ್‌ ಆರ್ ಉಪಾಧ್ಯಕ್ಷೆ ಉಪಾಸನಾ ಕಾಮಿನೇನಿ ಕೊನಿಡೇಲಾ ಅವರು ರಾಯಭಾರಿಯಾಗಿ ಸಾಥ್‌ ಕೊಟ್ಟಿದ್ದಾರೆ. ಸಿಎಸ್ಆರ್ ಅಭಿಯಾನದ ಉದ್ದೇಶ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಪ್ರೇರೇಪಿಸುವುದು. ಬೇಗನೆ ಹುಡುಕಿ, ಬೇಗನೆ ಹೋರಾಡಿ ಎಂಬುವುದು ಈ ಅಭಿಮಾನದ ಘೋಷ ವಾಕ್ಯವಾಗಿದೆ.</p>



<p>ಈ ಜಾಗೃತಿ ಅಭಿಯಾನವನ್ನು 24 ನಗರಗಳಲ್ಲಿ ಜಾರಿಗೆ ತರಲಾಗುವುದು, ತರಬೇತಿ ಪಡೆದ ಕ್ಷೇತ್ರ ಶಿಕ್ಷಕರ ನೇತೃತ್ವದಲ್ಲಿ ರಚನಾತ್ಮಕ ಸಮುದಾಯ ತೊಡಗಿಸಿಕೊಳ್ಳುವಿಕೆ, ಆರೋಗ್ಯ ಅಪಾಯದ ಮೌಲ್ಯಮಾಪನ ಮತ್ತು ಸಂವೇದನಾಶೀಲ ಪ್ರಯತ್ನಗಳ ಮೂಲಕ 1.5 ಲಕ್ಷಕ್ಕೂ ಹೆಚ್ಚು ಮಹಿಳೆಯರನ್ನು ತಲುಪುವ ಗುರಿಯನ್ನು ಹೊಂದಿದೆ.</p>



<p>ಕಾರ್ಯಕ್ರಮವನ್ನು ಅಪೋಲೋ ಫೌಂಡೇಶನ್ ಜಾರಿಗೊಳಿಸುತ್ತಿದ್ದು, ಹೆಚ್ಚು ಮಾಹಿತಿಯುಕ್ತ ಮತ್ತು ಆರೋಗ್ಯ-ಅರಿವುಳ್ಳ ಸಮಾಜವನ್ನು ನಿರ್ಮಿಸುವ ಫ್ಯೂಜಿಫಿಲ್ಮ್ ಇಂಡಿಯಾದ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ.</p>



<p>ಅಪೋಲೋ ಆಸ್ಪತ್ರೆಗಳ ಸಿಎಸ್‌ಆರ್‌ನ ಉಪಾಧ್ಯಕ್ಷೆ ಶ್ರೀಮತಿ ಉಪಾಸನಾ ಕಾಮಿನೇನಿ ಕೊನಿಡೇಲಾ ಅವರು, &#8216;ಆರೋಗ್ಯ ರಕ್ಷಣಾ ನಾಯಕರಾಗಿ, ಅನಾರೋಗ್ಯಕ್ಕೆ ಚಿಕಿತ್ಸೆ ನೀಡುವುದು ಮಾತ್ರವಲ್ಲದೆ ಜಾಗೃತಿ, ಶಿಕ್ಷಣ ಮತ್ತು ಪ್ರವೇಶದ ಮೂಲಕ ಅದನ್ನು ನಿರೀಕ್ಷಿಸುವ ಜವಾಬ್ದಾರಿ ನಮಗಿದೆ. ಹಲವಾರು ಮಹಿಳೆಯರಿಗೆ ಮೊದಲೇ ಕಾರ್ಯನಿರ್ವಹಿಸಲು ಅಗತ್ಯವಾದ ಮಾಹಿತಿ ಮತ್ತು ಸಂಪನ್ಮೂಲಗಳ ಕೊರತೆಯಿಂದಾಗಿ ಸ್ತನ ಕ್ಯಾನ್ಸರ್ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಲೇ ಇದೆ. ಫ್ಯೂಜಿಫಿಲ್ಮ್ ಇಂಡಿಯಾದ ಈ ಸಿಎಸ್‌ಆರ್ ಉಪಕ್ರಮವು ಆ ವಾಸ್ತವದ ಆಳವಾದ ತಿಳುವಳಿಕೆಯನ್ನು ಪ್ರತಿಬಿಂಬಿಸುತ್ತದೆ. ನಮ್ಮ ಬೆಂಬಲವು ಹಂಚಿಕೆಯ ಬದ್ಧತೆಯಲ್ಲಿ ನೆಲೆಗೊಂಡಿದೆ, ಅದು ಹೆಚ್ಚು ಮುಖ್ಯವಾದ ಸ್ಥಳದಲ್ಲಿ ಅರ್ಥಪೂರ್ಣ ಕ್ರಮ ಕೈಗೊಳ್ಳುವುದು ಮತ್ತು ತಡವಾಗುವ ಮೊದಲು ಅರಿವು ಅಗತ್ಯವಿರುವ ಮಹಿಳೆಯರಿಗೆ ತಲುಪುವಂತೆ ನೋಡಿಕೊಳ್ಳುವುದು&#8217; ಎಂದರು.</p>



<p>ಫ್ಯೂಜಿಫಿಲ್ಮ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಕೋಜಿ ವಾಡಾ ಅವರು, &#8220;ಫ್ಯೂಜಿಫಿಲ್ಮ್ ಇಂಡಿಯಾದಲ್ಲಿ, &#8216;ನಮ್ಮ ಜಗತ್ತಿಗೆ ಹೆಚ್ಚಿನ ನಗುವನ್ನು ನೀಡುವುದು&#8217; ಎಂಬ ನಮ್ಮ ಗುಂಪಿನ ಉದ್ದೇಶವನ್ನು ಸಾಕಾರಗೊಳಿಸುವ ನವೀನ ಉತ್ಪನ್ನಗಳು ಮತ್ತು ಪರಿಹಾರಗಳನ್ನು ತಲುಪಿಸಲು ನಾವು ಬದ್ಧರಾಗಿದ್ದೇವೆ. ವೈವಿಧ್ಯಮಯ ವಿಚಾರಗಳು, ಅನನ್ಯ ಸಾಮರ್ಥ್ಯಗಳು ಮತ್ತು ಅಸಾಧಾರಣ ಜನರನ್ನು ಸಂಯೋಜಿಸುವ ಮೂಲಕ, ಜಗತ್ತಿಗೆ ಸಂತೋಷ ಮತ್ತು ನಗುವನ್ನು ತರುವ ಪರಿಹಾರಗಳನ್ನು ರಚಿಸುವ ಗುರಿಯನ್ನು ನಾವು ಹೊಂದಿದ್ದೇವೆ. &#8216;ಬೇಗನೆ ಹುಡುಕಿ, ಬೇಗನೆ ಹೋರಾಡಿ&#8217; ಸ್ತನ ಕ್ಯಾನ್ಸರ್ ಜಾಗೃತಿ ಸಿಎಸ್ಆರ್ ಅಭಿಯಾನದೊಂದಿಗೆ, ನಾವು ಸ್ತನ ಕ್ಯಾನ್ಸರ್ ಜಾಗೃತಿಯ ವ್ಯಾಪ್ತಿಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದ್ದೇವೆ ಮತ್ತು ಅನೇಕ ಜೀವಗಳನ್ನು ಉಳಿಸಲು ಸಾಧ್ಯವಾಗುವಂತೆ ಆರಂಭಿಕ ರೋಗನಿರ್ಣಯವನ್ನು ಮುಂದುವರಿಸಲು ಬದ್ಧರಾಗಿದ್ದೇವೆ&#8221; ಎಂದು ಹೇಳಿದರು.</p>
]]></content:encoded>
					
		
		
			</item>
		<item>
		<title>2022 ರಲ್ಲಿ ನೋಂದಾಯಿತ ಸಾವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನಕ್ಕೆ ವೈದ್ಯಕೀಯ ಚಿಕಿತ್ಸೆ ಸಿಗಲಿಲ್ಲ; ನೋಂದಾಯಿಸದ ಸಾವುಗಳ ಲೆಕ್ಕವಿಲ್ಲ</title>
		<link>https://peepalmedia.com/more-than-half-of-registered-deaths-in-2022-did-not-receive-medical-treatment/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 10 Jun 2025 08:54:24 +0000</pubDate>
				<category><![CDATA[ಅಂಕಣ]]></category>
		<category><![CDATA[ಆರೋಗ್ಯ]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[civil registration system]]></category>
		<category><![CDATA[health]]></category>
		<category><![CDATA[india]]></category>
		<category><![CDATA[kananda]]></category>
		<category><![CDATA[karnataka]]></category>
		<category><![CDATA[Medical Attention]]></category>
		<category><![CDATA[Medical care]]></category>
		<guid isPermaLink="false">https://peepalmedia.com/?p=60670</guid>

					<description><![CDATA[ಭಾರತದಲ್ಲಿ ದಾಖಲಾಗಿರುವ ಎಲ್ಲಾ ಸಾವುಗಳಲ್ಲಿ, ಸುಮಾರು ಅರ್ಧದಷ್ಟು ಜನರು ಸಾಯುವ ಸಮಯದಲ್ಲಿ ಯಾವುದೇ ವೈದ್ಯಕೀಯ ಸೇವೆಯನ್ನು ಪಡೆಯಲಿಲ್ಲ. ನಾಗರಿಕ ನೋಂದಣಿ ವ್ಯವಸ್ಥೆಯ ( civil registration system &#8211; CRS) 2022 ರ ಇತ್ತೀಚಿನ ಮಾಹಿತಿಯ ಪ್ರಕಾರ, ದಾಖಲಾಗಿರುವ ಮರಣಗಳಲ್ಲಿ 50.7% ರಷ್ಟು ಜನರು ಯಾವುದೇ ವೈದ್ಯಕೀಯ ಸೇವೆಯನ್ನು ಪಡೆದಿರಲಿಲ್ಲ ಎಂಬುದು ಕಂಡು ಬಂದಿದೆ. ಇನ್ನು ದಾಖಲಾಗದ ಸಾವಿನ ಸಂಖ್ಯೆ ಇದರಲ್ಲಿ ಸೇರಿಲ್ಲ. ವಿಚಿತ್ರವೆಂದರೆ, ಒಟ್ಟು ಸಾವುಗಳಲ್ಲಿ ಎಷ್ಟು ಶೇಕಡಾವಾರು ದಾಖಲಾಗಿವೆ ಎಂಬುದರ ಕುರಿತು ಯಾವುದೇ ದತ್ತಾಂಶ ಲಭ್ಯವಿಲ್ಲ &#8211; ಮತ್ತು ದತ್ತಾಂಶ [&#8230;]]]></description>
										<content:encoded><![CDATA[
<pre class="wp-block-code"><code><em><strong><mark style="background-color:rgba(0, 0, 0, 0)" class="has-inline-color has-vivid-red-color">ಇತ್ತೀಚಿನ ಸಿಆರ್‌ಎಸ್ ದತ್ತಾಂಶವು 2022 ರಲ್ಲಿ ದಾಖಲಾದ 'ಒಟ್ಟು' ಸಾವುಗಳ ಸಂಖ್ಯೆಯನ್ನು ಬಹಿರಂಗಪಡಿಸಿದೆ. 2022 ರ ಮತ್ತೊಂದು ದತ್ತಾಂಶ ಸಂಗ್ರಹವಾದ ಎಸ್‌ಆರ್‌ಎಸ್ ಅನ್ನು ಬಿಡುಗಡೆ ಮಾಡಲಾಗಿಲ್ಲ, ಇದರಿಂದಾಗಿ ಎಷ್ಟು 'ಶೇಕಡಾವಾರು' ಸಾವುಗಳು ನೋಂದಾಯಿಸದೆ ಉಳಿದಿವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅಸಾಧ್ಯವಾಗಿದೆ</mark></strong></em></code></pre>



<p>ಭಾರತದಲ್ಲಿ ದಾಖಲಾಗಿರುವ ಎಲ್ಲಾ ಸಾವುಗಳಲ್ಲಿ, ಸುಮಾರು ಅರ್ಧದಷ್ಟು ಜನರು ಸಾಯುವ ಸಮಯದಲ್ಲಿ ಯಾವುದೇ ವೈದ್ಯಕೀಯ ಸೇವೆಯನ್ನು ಪಡೆಯಲಿಲ್ಲ. ನಾಗರಿಕ ನೋಂದಣಿ ವ್ಯವಸ್ಥೆಯ ( civil registration system &#8211; CRS) 2022 ರ ಇತ್ತೀಚಿನ ಮಾಹಿತಿಯ ಪ್ರಕಾರ, ದಾಖಲಾಗಿರುವ ಮರಣಗಳಲ್ಲಿ 50.7% ರಷ್ಟು ಜನರು ಯಾವುದೇ ವೈದ್ಯಕೀಯ ಸೇವೆಯನ್ನು ಪಡೆದಿರಲಿಲ್ಲ ಎಂಬುದು ಕಂಡು ಬಂದಿದೆ.</p>



<p>ಇನ್ನು ದಾಖಲಾಗದ ಸಾವಿನ ಸಂಖ್ಯೆ ಇದರಲ್ಲಿ ಸೇರಿಲ್ಲ. ವಿಚಿತ್ರವೆಂದರೆ, ಒಟ್ಟು ಸಾವುಗಳಲ್ಲಿ ಎಷ್ಟು <em>ಶೇಕಡಾವಾರು</em> ದಾಖಲಾಗಿವೆ ಎಂಬುದರ ಕುರಿತು ಯಾವುದೇ ದತ್ತಾಂಶ ಲಭ್ಯವಿಲ್ಲ &#8211; ಮತ್ತು ದತ್ತಾಂಶ ಸಿಗದಿರುವುದನ್ನು ಇದರಲ್ಲಿ ಉಲ್ಲೇಖಿಸಲಾಗಿಲ್ಲ. ಆದ್ದರಿಂದ ಸತ್ತವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರಿಗೆ ವೈದ್ಯಕೀಯ ಚಿಕಿತ್ಸೆ ಸಿಗಲಿಲ್ಲ ಎಂಬ ತೀರ್ಮಾನವು ಸಣ್ಣಮಟ್ಟಿನ ಅಂದಾಜು ಆಗಿರಬಹುದು.</p>



<p>2020 ಕ್ಕೆ ಹೋಲಿಸಿದರೆ 2022 ರಲ್ಲಿ  ಸಾಯುವ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದ ಜನರ ಶೇಕಡಾವಾರು ಪ್ರಮಾಣವು ಐದು ಶೇಕಡಾ ಪಾಯಿಂಟ್‌ಗಳಷ್ಟು ಕಡಿಮೆಯಾಗಿದೆ.</p>



<p>2022 ಮತ್ತು 2021 ರ ನಡುವಿನ ಹೋಲಿಕೆಯನ್ನು ಇಲ್ಲಿ ತಪ್ಪಿಸಲಾಗಿದೆ. ಏಕೆಂದರೆ ಆ ಸಮಯದಲ್ಲಿ ಕೋವಿಡ್-19 ರ ಎರಡನೇಯ ಡೆಲ್ಟಾ ಅಲೆ ಬಂದಿತ್ತು ಮತ್ತು ವೈದ್ಯಕೀಯ ಚಿಕಿತ್ಸೆ ಪಡೆಯುವ ಜನರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿತ್ತು, ಅದು ನಿಜಕ್ಕೂ ಸಂಭವಿಸಿದೆ.</p>



<p>ರಾಜ್ಯ ಸರ್ಕಾರಗಳ ಕಳಪೆ ಆರೋಗ್ಯ ಮೂಲಸೌಕರ್ಯಕ್ಕೆ ಮತ್ತು ಭಾಗಶಃ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳನ್ನು ಪಡೆದ ಜನರು ಇಷ್ಟು ಕಡಿಮೆ ಶೇಕಡಾವಾರು ಪ್ರಮಾಣದಲ್ಲಿದ್ದಾರೆ ಎಂಬುದು ಸತ್ಯ.</p>



<p>2022 ರಲ್ಲಿ, ವೈದ್ಯಕೀಯ ಚಿಕಿತ್ಸೆ ಪಡೆದ ಎಲ್ಲರಲ್ಲಿ, 25% ಜನರು ವೈದ್ಯಕೀಯ ಸಂಸ್ಥೆಗಳಿಂದ ಪಡೆದವರು. ಇನ್ನೂ 17.1% ಜನರು ಮೆಡಿಕಲ್‌ ಕೇರ್ ವ್ಯಾಪ್ತಿಯಿಂದ ಹೊರಗಿದ್ದರೂ, ಒಂದಲ್ಲ ಒಂದು ರೂಪದಲ್ಲಿ ವೈದ್ಯಕೀಯ ಆರೈಕೆಯನ್ನು ಪಡೆದರು.</p>



<p><strong>ಮರಣ ನೋಂದಣಿ</strong></p>



<p>2021 ರಲ್ಲಿ 102.2 ಲಕ್ಷವಿದ್ದ ನೋಂದಾಯಿತ ಸಾವುಗಳ ಸಂಖ್ಯೆ 2022 ರಲ್ಲಿ 86.5 ಲಕ್ಷಕ್ಕೆ ಇಳಿದಿದೆ. ಇದು ಶೇ. 15.4 ರಷ್ಟು ಇಳಿಕೆಯಾಗಿದೆ.</p>



<p>ಭಾರತದ ಕೆಲವು ಪ್ರಮುಖ ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು, ಉತ್ತರ ಪ್ರದೇಶ, ಕರ್ನಾಟಕ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಹರಿಯಾಣ ರಾಜ್ಯಗಳು ನೋಂದಾಯಿತ ಸಾವುಗಳ ಸಂಖ್ಯೆಯಲ್ಲಿ ಇಳಿಕೆಗೆ ಗಮನಾರ್ಹವಾಗಿ ಕಾರಣವಾಗಿವೆ.</p>



<p>2022 ರಲ್ಲಿ ಸಾವಿನ ನೋಂದಣಿ ಸಂಖ್ಯೆಯಲ್ಲಿನ ಈ ಕುಸಿತವನ್ನು ಈ ದೃಷ್ಟಿಕೋನದಿಂದ ನೋಡಬಹುದು: ಕೋವಿಡ್‌-19 ಡೆಲ್ಟಾ ಅಲೆಯ ವರ್ಷ 2021 ರಲ್ಲಿ ಸಂಭವಿಸಿದ ಸಾವುಗಳ ಸಂಖ್ಯೆಯು 2022 ರಲ್ಲಿ ಸಂಭವಿಸಿದ್ದಕ್ಕಿಂತ ಹೆಚ್ಚಿನದಾಗಿದೆ. ಆದ್ದರಿಂದ, 2021 ರಲ್ಲಿ ನೋಂದಾಯಿಸಲಾದ ಸಾವುಗಳ ಸಂಖ್ಯೆ 2022 ಕ್ಕಿಂತ ಹೆಚ್ಚಾಗಿದೆ.</p>



<p>2021 ರಲ್ಲಿ ಯಾವುದೇ ಸಾವುಗಳನ್ನು ಕಡಿಮೆ ಮಾಡಿ ಎಣಿಸಲಾಗಿಲ್ಲ ಎಂದು ಸರ್ಕಾರ ದೀರ್ಘಕಾಲದವರೆಗೆ ಹೇಳಿಕೊಂಡಿತ್ತು. ಆದರೆ 2021 ರಲ್ಲಿ ದಾಖಲಾದ ಸಾವುಗಳ ಸಂಖ್ಯೆ 2022 ರಲ್ಲಿ ಸಂಭವಿಸಿದ್ದಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ ಎಂಬ ಅಂಶವು ಸರ್ಕಾರದ ಪ್ರತಿಪಾದನೆಗಳನ್ನು ಪ್ರಶ್ನಿಸುವ ಮತ್ತೊಂದು ದತ್ತಾಂಶವಾಗಿದೆ.</p>



<p><em>ಸಿಆರ್‌ಎಸ್‌ನ 2022 ರ ದತ್ತಾಂಶದಿಂದ ದಾಖಲಾದ ಒಟ್ಟು</em> ಸಾವುಗಳ ಸಂಖ್ಯೆ ಸ್ಪಷ್ಟವಾದರೂ, ಎಷ್ಟು <em>ಶೇಕಡಾ</em> ಸಾವುಗಳು ನೋಂದಾಯಿಸಲ್ಪಟ್ಟಿಲ್ಲ ಎಂಬುದನ್ನು ಸೂಚಿಸಲು ಯಾವುದೇ ದತ್ತಾಂಶವಿಲ್ಲ, ಇದು ಸಾವುಗಳನ್ನು ದಾಖಲಿಸುವ ವ್ಯವಸ್ಥೆಯ ದೃಢತೆಯನ್ನು ಅರ್ಥಮಾಡಿಕೊಳ್ಳಲು ನಿರ್ಣಾಯಕ ಸೂಚಕವಾಗಿದೆ.</p>



<p>ಎರಡು ದತ್ತಾಂಶ ಮೂಲಗಳನ್ನು ಒಟ್ಟುಗೂಡಿಸಿ ಸಾವಿನ ಶೇಕಡಾವಾರು ಪ್ರಮಾಣವನ್ನು ಲೆಕ್ಕಹಾಕಬಹುದು:</p>



<ol class="wp-block-list">
<li>ಮಾದರಿ ನೋಂದಣಿ ವ್ಯವಸ್ಥೆ (sample registration system &#8211; SRS) ಪ್ರತಿ 1,000 ಜನಸಂಖ್ಯೆಗೆ ಸಾವಿನ ಪ್ರಮಾಣವನ್ನು ಅಂದಾಜು ಮಾಡುತ್ತದೆ ಮತ್ತು ಆದ್ದರಿಂದ, ಒಂದು ನಿರ್ದಿಷ್ಟ ವರ್ಷದಲ್ಲಿ (ಉದಾಹರಣೆಗೆ 2022) ಸಂಭವಿಸಿದ ಒಟ್ಟು ಸಾವುಗಳ <em>ಅಂದಾಜು</em> ಸಂಖ್ಯೆಯನ್ನು ನೀಡಬಹುದು .</li>



<li>ನಾಗರಿಕ ನೋಂದಣಿ ವ್ಯವಸ್ಥೆಯ ( civil registration system &#8211; CRS), ಇದು ಒಂದು ನಿರ್ದಿಷ್ಟ ವರ್ಷದಲ್ಲಿ (ಉದಾಹರಣೆಗೆ 2022) ದಾಖಲಾದ <em>ಒಟ್ಟು</em> ಸಾವುಗಳ ನಿಖರವಾದ ಸಂಖ್ಯೆಯನ್ನು ನೀಡುತ್ತದೆ.</li>
</ol>



<p>ಆದ್ದರಿಂದ, ನೋಂದಾಯಿತ ಸಾವುಗಳ ಶೇಕಡಾವಾರು = (ಒಟ್ಟು ನೋಂದಾಯಿತ ಸಾವುಗಳ ಸಂಖ್ಯೆ (CRS) / ಅಂದಾಜು ಸಾವುಗಳ ಸಂಖ್ಯೆ (SRS)) X 100.</p>



<p>ಸರ್ಕಾರವು 2022 ರ ಸಿಆರ್‌ಎಸ್ ಡೇಟಾವನ್ನು ಬಿಡುಗಡೆ ಮಾಡಿದ್ದರೂ, ಅದು 2022 ರ ಎಸ್‌ಆರ್‌ಎಸ್ ಡೇಟಾವನ್ನು ಬಿಡುಗಡೆ ಮಾಡಿಲ್ಲ. ಆದ್ದರಿಂದ, 2022 ರಲ್ಲಿ ದಾಖಲಾದ ಸಾವುಗಳ ಶೇಕಡಾವಾರು ಪ್ರಮಾಣವನ್ನು ಲೆಕ್ಕಹಾಕುವುದು ಅಸಾಧ್ಯ.</p>



<p>ಭಾರತದಲ್ಲಿ ಮರಣ ನೋಂದಣಿ ಸುಮಾರು 80% ರಷ್ಟಿದೆ, ಆದರೆ ರಾಜ್ಯವಾರು ವ್ಯತ್ಯಾಸಗಳನ್ನು ನೋಡುವುದು ಬಹಳ ಮುಖ್ಯ. 2022 ರಲ್ಲಿ ದಾಖಲಾದ ಸಾವಿನ ಶೇಕಡಾವಾರು ಇನ್ನೂ ತಿಳಿದಿಲ್ಲವಾದ್ದರಿಂದ, ಮೇಲೆ ತಿಳಿಸಿದ ಕಾರಣಗಳಿಂದಾಗಿ, ರಾಜ್ಯಗಳ ವೈಯಕ್ತಿಕ ಕಾರ್ಯಕ್ಷಮತೆಯನ್ನು ನೋಡಲು ಸಾಧ್ಯವಿಲ್ಲ.</p>



<p>ಮರಣ ನೋಂದಣಿ ಕಾನೂನಿನ ಅನುಷ್ಠಾನವು ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ. 1969 ರ ಜನನ ಮತ್ತು ಮರಣಗಳ ನೋಂದಣಿ ಕಾಯ್ದೆಯ ಪ್ರಕಾರ, ಪ್ರತಿಯೊಂದು ಸಾವನ್ನು ನೋಂದಾಯಿಸುವುದು ಕಡ್ಡಾಯವಾಗಿದೆ.</p>



<p>ನೋಂದಣಿಯಾದ ಸಾವುಗಳು ಮತ್ತು ಜನನಗಳ ನಿಜವಾದ ಸಂಖ್ಯೆಯನ್ನು ಒಳಗೊಂಡಿರುವ ಸಿಆರ್‌ಎಸ್ ಅನ್ನು ರಾಜ್ಯ ಸರ್ಕಾರಗಳು ನಡೆಸಬೇಕು. ಮತ್ತೊಂದೆಡೆ, ಅಂದಾಜು ಸಾವುಗಳು ಮತ್ತು ಜನನಗಳ ಸಂಖ್ಯೆಯನ್ನು ನೀಡುವ ಎಸ್‌ಆರ್‌ಎಸ್ ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ.</p>



<p>ನಿಜವಾದ ಸಾವುಗಳ ಸಂಖ್ಯೆಯನ್ನು ಕಳೆ ಹಾಕಲು ಸಾಧ್ಯವಾಗದೇ ಇದ್ದರೆ, ಈ ಸಮೀಕ್ಷೆಯ ಮೂಲಕ ಪ್ರತಿ 1,000 ಜನಸಂಖ್ಯೆಗೆ ಎಷ್ಟು ಸಾವುಗಳು ಸಂಭವಿಸಿವೆ ಎಂಬುದನ್ನು ಅಂದಾಜು ಮಾಡಬಹುದು, ಆದ್ದರಿಂದ SRS ಮುಖ್ಯವಾಗಿದೆ.</p>



<p>ಕೇಂದ್ರ ಸರ್ಕಾರವು CRS 2022 ಅನ್ನು ಬಿಡುಗಡೆ ಮಾಡಿದೆ, ಆದರೆ SRS 2022 ಅನ್ನು ತಡೆಹಿಡಿದಿದೆ.</p>



<p>ಮರಣ ನೋಂದಣಿಯಲ್ಲಿ ನಗರ-ಗ್ರಾಮೀಣ ಅಂತರವು ಸ್ಪಷ್ಟವಾಗಿ ಗೋಚರಿಸುತ್ತದೆ. ಎಷ್ಟೇ ಸಾವುಗಳು ದಾಖಲಾಗಿದ್ದರೂ, ಗ್ರಾಮೀಣ ಪ್ರದೇಶಗಳು ನಗರ ಪ್ರದೇಶಗಳಿಗಿಂತ ಸಾವುಗಳನ್ನು ದಾಖಲಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.</p>


<div class="wp-block-image">
<figure class="aligncenter size-full is-resized"><img fetchpriority="high" decoding="async" width="650" height="832" src="https://peepalmedia.com/wp-content/uploads/2025/06/image-7.png" alt="" class="wp-image-60675" style="width:377px;height:auto" srcset="https://peepalmedia.com/wp-content/uploads/2025/06/image-7.png 650w, https://peepalmedia.com/wp-content/uploads/2025/06/image-7-234x300.png 234w, https://peepalmedia.com/wp-content/uploads/2025/06/image-7-150x192.png 150w, https://peepalmedia.com/wp-content/uploads/2025/06/image-7-300x384.png 300w" sizes="(max-width: 650px) 100vw, 650px" /></figure></div>


<p>ಮರಣ ನೋಂದಣಿ ಕೇವಲ ಸರಳ ಅಂಕಿಅಂಶವಲ್ಲ.</p>



<p>ಇದು ದಾಖಲೆಗಳನ್ನು ಇಡುವ ಉದ್ದೇಶವಾದರೂ, ಸಾವಿನ ಕಾರಣವನ್ನು ಕಂಡುಹಿಡಿಯಲು ಸಹ ಇದು ಸಹಾಯ ಮಾಡುತ್ತದೆ &#8211; ಜನಸಂಖ್ಯಾ ಪರಿಭಾಷೆಯಲ್ಲಿ ಇದನ್ನು ವೈದ್ಯಕೀಯವಾಗಿ ಪ್ರಮಾಣೀಕೃತ ಸಾವಿನ ಕಾರಣ (medically certified cause of deaths &#8211; MCCD) ಎಂದು ಕರೆಯಲಾಗುತ್ತದೆ.</p>



<p>ರೋಗಗಳು ಮತ್ತು ಸಾವಿನ ಇತರ ಕಾರಣಗಳು ಸೇರಿದಂತೆ ಸಾವುಗಳನ್ನು 19 ವರ್ಗಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ.</p>



<p>2022 ರಲ್ಲಿ ಕೇವಲ 22.3% ಸಾವುಗಳಿಗೆ ಕಾರಣಗಳನ್ನು ವೈದ್ಯಕೀಯವಾಗಿ ಪ್ರಮಾಣೀಕರಿಸಲಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಆ ವರ್ಷದ ನಾಲ್ಕನೇ ಮೂರು ಭಾಗಕ್ಕಿಂತ ಹೆಚ್ಚಿನ ಸಾವುಗಳಿಗೆ ಇರುವ ಕಾರಣಗಳನ್ನು ವರ್ಗೀಕರಿಸಲಾಗಿಲ್ಲ.</p>



<p>ರಾಜ್ಯವಾರು ಅಸಮಾನತೆಗಳು ಕಂಡು ಬರುತ್ತವೆ. ಉದಾಹರಣೆಗೆ, 2022 ರಲ್ಲಿ ಬಿಹಾರದಲ್ಲಿ MCCD ದರವು 5.4%, ತಮಿಳುನಾಡಿನಲ್ಲಿ 43% ಮತ್ತು ಸಿಕ್ಕಿಂನಲ್ಲಿ 48.6% ರಷ್ಟಿತ್ತು.</p>



<p>ವೈದ್ಯಕೀಯ ಆರೈಕೆ ಪಡೆಯುವಲ್ಲಿ ದಾಖಲಾಗುವ ಅರ್ಧಕ್ಕಿಂತ ಕಡಿಮೆ ಸಾವುಗಳ ಪರಿಣಾಮವೆಂದರೆ ಕಡಿಮೆ MCCD ದರ. ಇಷ್ಟು ಹೆಚ್ಚಿನ ಪ್ರಮಾಣದ ಸಾವುಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡದಿದ್ದರೆ (2022 ರಲ್ಲಿ 50.7% ರಷ್ಟು), ಅವುಗಳ ಕಾರಣವನ್ನು ಗುರುತಿಸಲು ಯಾವುದೇ ಮಾರ್ಗವಿಲ್ಲ.</p>



<p>ಹಾಗಿದ್ದರೂ, ನೋಂದಾಯಿತ ಸಾವುಗಳಲ್ಲಿ ಉಳಿದವುಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ ಎಂಬ ಅಂಶವು ಅವುಗಳ ಕಾರಣವನ್ನು ಸರಿಯಾಗಿ ಗುರುತಿಸಲಾಗಿದೆ ಎಂದು ಅರ್ಥವಲ್ಲ. ಇದಕ್ಕೆ <a href="https://pmc.ncbi.nlm.nih.gov/articles/PMC11463844/">ಹಲವಾರು ಕಾರಣಗಳಿವೆ</a> , ಆದರೆ ಪ್ರಾಥಮಿಕ ಕಾರಣವೆಂದರೆ ಆರೋಗ್ಯ ಸೇವೆ ಒದಗಿಸುವವರು ಬಳಸುವ ತಪ್ಪು ಕಾರ್ಯವಿಧಾನಗಳು.</p>



<p><strong>ಮೃತ ಶಿಶುಗಳ ಜನನ</strong>  (<strong>Stillbirths</strong>)</p>



<p>ಗರ್ಭಾವಸ್ಥೆಯ 28 ವಾರಗಳ ಅವಧಿಯಲ್ಲಿ ಅಥವಾ ನಂತರ ಯಾವುದೇ ಜೀವನದ ಲಕ್ಷಣಗಳಿಲ್ಲದೆ ಜನಿಸಿದ ಮಗುವನ್ನು ನಿರ್ಜೀವ ಜನನ ಎಂದು WHO ವ್ಯಾಖ್ಯಾನಿಸುತ್ತದೆ. ನಿರ್ಜೀವ ಜನನ ದರವು 1,000 ಜೀವಂತ ಜನನಗಳಿಗೆ ಎಷ್ಟು ಜನಿಸುತ್ತವೆ ಎಂಬುದನ್ನು ಸೂಚಿಸುತ್ತದೆ.</p>



<p>ಭಾರತವು 2022 ರಲ್ಲಿ 1,000 ಜೀವಂತ ಜನನಗಳಿಗೆ 7.54 ಮೃತ ಶಿಶು ಜನನ ದರವನ್ನು ತೋರಿಸಿದ್ದು, ಭಾರತದ ನವಜಾತ ಶಿಶು ಕ್ರಿಯಾ ಯೋಜನೆಯ ಪ್ರಕಾರ ಈ ಸಂಖ್ಯೆಯನ್ನು ಏಕ ಅಂಕೆಗೆ ಇಳಿಸುವ ಗುರಿಯನ್ನು ತಲುಪಿದೆ.</p>



<p>ಆದಾಗ್ಯೂ, ಮೇಘಾಲಯದಂತಹ ರಾಜ್ಯಗಳು ಅತಿ ಹೆಚ್ಚು ಮೃತ ಶಿಶು ಜನನ ಪ್ರಮಾಣವನ್ನು 14.46 ರಷ್ಟು ದಾಖಲಿಸಿದ್ದು, ಇದು ಇನ್ನೂ ಕಳವಳಕಾರಿ ವಿಷಯವಾಗಿದೆ. ರಾಜಸ್ಥಾನ (1,000 ಜನನಗಳಿಗೆ 12.91) ಮತ್ತು ಗುಜರಾತ್ (1,000 ಜನನಗಳಿಗೆ 10.47) ನಂತರದ ಸ್ಥಾನಗಳಲ್ಲಿವೆ.</p>


<div class="wp-block-image">
<figure class="aligncenter size-full is-resized"><img decoding="async" width="648" height="641" src="https://peepalmedia.com/wp-content/uploads/2025/06/image-3.png" alt="" class="wp-image-60671" style="width:411px;height:auto" srcset="https://peepalmedia.com/wp-content/uploads/2025/06/image-3.png 648w, https://peepalmedia.com/wp-content/uploads/2025/06/image-3-300x297.png 300w, https://peepalmedia.com/wp-content/uploads/2025/06/image-3-150x148.png 150w" sizes="(max-width: 648px) 100vw, 648px" /></figure></div>

<div class="wp-block-image">
<figure class="aligncenter size-full is-resized"><img decoding="async" width="658" height="539" src="https://peepalmedia.com/wp-content/uploads/2025/06/image-5.png" alt="" class="wp-image-60673" style="width:398px;height:auto" srcset="https://peepalmedia.com/wp-content/uploads/2025/06/image-5.png 658w, https://peepalmedia.com/wp-content/uploads/2025/06/image-5-300x246.png 300w, https://peepalmedia.com/wp-content/uploads/2025/06/image-5-150x123.png 150w" sizes="(max-width: 658px) 100vw, 658px" /></figure></div>

<div class="wp-block-image">
<figure class="aligncenter size-full is-resized"><img loading="lazy" decoding="async" width="645" height="301" src="https://peepalmedia.com/wp-content/uploads/2025/06/image-6.png" alt="" class="wp-image-60674" style="width:411px;height:auto" srcset="https://peepalmedia.com/wp-content/uploads/2025/06/image-6.png 645w, https://peepalmedia.com/wp-content/uploads/2025/06/image-6-300x140.png 300w, https://peepalmedia.com/wp-content/uploads/2025/06/image-6-150x70.png 150w" sizes="auto, (max-width: 645px) 100vw, 645px" /></figure></div>


<p>ಕೆಲವು ಅಧ್ಯಯನಗಳು ಭಾರತದಲ್ಲಿ ಮೃತ ಶಿಶುಗಳ ಜನನ ಸರಿಯಾಗಿ ಎಣಿಸಲಾಗಿಲ್ಲ (ಕಡಿಮೆ ಎಣಿಸಲಾಗಿದೆ) ಎಂದು ಸೂಚಿಸುತ್ತವೆ.</p>



<p>ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ರಾಖಿ ದಂಡೋನಾ ಮತ್ತು ಅವರ ಸಹೋದ್ಯೋಗಿಗಳು ಬರೆದಿರುವ ಈ&nbsp;<a href="https://pmc.ncbi.nlm.nih.gov/articles/PMC9948498/">ಪ್ರಬಂಧವು</a>&nbsp;2016 ಮತ್ತು 2020 ರ ನಡುವಿನ ಮೃತ ಶಿಶುಗಳ ಜನನ ಪ್ರಮಾಣವನ್ನು ವಿಶ್ಲೇಷಿಸಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ಯಿಂದ (1,000 ಜನನಗಳಿಗೆ 9.7 ಮೃತ ಶಿಶುಗಳ ಜನನಗಳು) ಭಾರತದ ಮೃತ ಶಿಶುಗಳ ಜನನ ಪ್ರಮಾಣವು 2016-2020 ರ ಮಾದರಿ ನೋಂದಣಿ ವ್ಯವಸ್ಥೆಯಲ್ಲಿ ವರದಿಯಾದ ಸರಾಸರಿ ದರಕ್ಕಿಂತ 2.6 ಪಟ್ಟು ಹೆಚ್ಚಾಗಿದೆ ಎಂದು ಅದು ಹೇಳಿದೆ.</p>



<p>ಹೆಚ್ಚಿನ ಮೃತ ಶಿಶು ಜನನ ಪ್ರಮಾಣವು ತಾಯಿಯ ಆರೈಕೆಯ ಕೊರತೆಯ ಸೂಚಕವಾಗಿದೆ. &#8220;ಮೃತ ಶಿಶು ಜನನಕ್ಕೆ ಪ್ರಮುಖ ಕಾರಣಗಳಲ್ಲಿ ಗರ್ಭಧಾರಣೆ ಮತ್ತು ಹೆರಿಗೆಗೆ ಸಂಬಂಧಿಸಿದ ತೊಡಕುಗಳು [ಆರೋಗ್ಯ ಮೂಲಸೌಕರ್ಯ ಕಳಪೆಯಾಗಿರುವುದರಿಂದ]; ದೀರ್ಘಕಾಲದ ಗರ್ಭಧಾರಣೆ; ಮಲೇರಿಯಾ, ಸಿಫಿಲಿಸ್ ಮತ್ತು ಎಚ್ಐವಿ ತಾಯಿಯ ಪರಿಸ್ಥಿತಿಗಳು, ವಿಶೇಷವಾಗಿ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ತಾಯಿಯ ಸೋಂಕುಗಳು; ಮತ್ತು ಭ್ರೂಣದ ಬೆಳವಣಿಗೆಯ ನಿರ್ಬಂಧ [ಹುಟ್ಟಲಿರುವ ಮಗು ತನ್ನ ಬೆಳವಣಿಗೆಯ ಸಾಮರ್ಥ್ಯವನ್ನು ಸಾಧಿಸಲು ಸಾಧ್ಯವಾಗದಿದ್ದಾಗ ಮತ್ತು ಆದ್ದರಿಂದ ಅದು ಇರಬೇಕಾದಕ್ಕಿಂತ ಚಿಕ್ಕದಾಗಿದ್ದಾಗ] ಸೇರಿವೆ&#8221; ಎಂದು WHO ತಿಳಿಸಿದೆ.</p>



<p><strong>ಲಿಂಗ ಅನುಪಾತ</strong></p>



<p>ಸಿಆರ್‌ಎಸ್‌ನಲ್ಲಿ ಅತ್ಯಂತ ನಿರ್ಣಾಯಕ ಸೂಚಕಗಳಲ್ಲಿ ಒಂದು ಜನನದ ಸಮಯದಲ್ಲಿನ ಲಿಂಗ ಅನುಪಾತ, ಅಂದರೆ 1,000 ಪುರುಷರಿಗೆ ಮಹಿಳೆಯರ ಸಂಖ್ಯೆ. ಬಿಹಾರವು 891 ರ ಅತ್ಯಂತ ಕಡಿಮೆ ಲಿಂಗ ಅನುಪಾತವನ್ನು ದಾಖಲಿಸಿದೆ. ಇದರ ಲಿಂಗ ಅನುಪಾತವು 2021 ರಲ್ಲಿ 908 ರಿಂದ 2022 ರಲ್ಲಿ 891 ಕ್ಕೆ ಇಳಿದಿದೆ.</p>



<p>ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಎರಡು ದಶಕಗಳಿಗೂ ಹೆಚ್ಚಿನ ವೃತ್ತಿಜೀವನದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದ್ದಾರೆ, ಅವುಗಳಲ್ಲಿ &#8216;ಮುಖ್ಯಮಂತ್ರಿ ಕನ್ಯಾ ಸುರಕ್ಷಾ ಯೋಜನೆ&#8217; (ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಮೊದಲು ಜನಿಸಿದವರಿಗೆ ಆರ್ಥಿಕವಾಗಿ ಸಹಾಯ ಮಾಡಲು), &#8216;ಮುಖ್ಯಮಂತ್ರಿ ಬಾಲಿಕಾ ಸೈಕಲ್ ಯೋಜನೆ&#8217; (ಶಾಲೆಯಲ್ಲಿ ಹುಡುಗಿಯರ ದಾಖಲಾತಿಯನ್ನು ಸುಧಾರಿಸಲು), &#8216;ಮುಖ್ಯಮಂತ್ರಿ ಮಹಿಳಾ ಉದ್ಯಮಿ ಯೋಜನೆ&#8217; (ವ್ಯಾಪಾರ ಉದ್ಯಮಗಳನ್ನು ಪ್ರಾರಂಭಿಸಲು ಮಹಿಳೆಯರಿಗೆ 10 ಲಕ್ಷ ರೂ.ಗಳನ್ನು ಒದಗಿಸುತ್ತದೆ) ಮತ್ತು &#8216;ನಿಶ್ಚಯ್ ಆರಕ್ಷಿತ್ ರೋಜ್‌ಗಾರ್ ಮಹಿಳಾವೋಂ ಕಾ ಅಧಿಕಾರ್&#8217; (ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಮೀಸಲಾತಿ) ಸೇರಿವೆ.</p>



<p>ಈ ಯೋಜನೆಗಳು ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟುವುದು ಮತ್ತು ಮಹಿಳೆಯರ ಜೀವನದ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿವೆ. ಆದಾಗ್ಯೂ, 2022 ರಲ್ಲಿ ರಾಜ್ಯವು ದೇಶದಲ್ಲೇ ಅತ್ಯಂತ ಕೆಟ್ಟ ಲಿಂಗ ಅನುಪಾತವನ್ನು ದಾಖಲಿಸಿದೆ ಎಂಬ ಅಂಶವು ಈ ಯೋಜನೆಗಳ ವ್ಯಾಪಕ ವ್ಯಾಪ್ತಿಯನ್ನು ಮತ್ತು ವಿಶೇಷವಾಗಿ ಅವು ಸಮಾಜ ಮತ್ತು ಜನರ ಮನಸ್ಸಿನ ಮೇಲೆ ಬೀರುತ್ತಿರುವ ಪರಿಣಾಮವನ್ನು ಪ್ರಶ್ನಿಸುವಂತೆ ಮಾಡುತ್ತದೆ.</p>



<p>ಬಿಹಾರದ ಜೊತೆಗೆ, ಇತರ ಕೆಲವು ರಾಜ್ಯಗಳು ಸಹ ತಮ್ಮ ಲಿಂಗ ಅನುಪಾತದಲ್ಲಿ ಕುಸಿತವನ್ನು ದಾಖಲಿಸಿವೆ. ಅವುಗಳೆಂದರೆ: ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ತೆಲಂಗಾಣ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ.</p>


<div class="wp-block-image">
<figure class="aligncenter size-full is-resized"><img loading="lazy" decoding="async" width="645" height="604" src="https://peepalmedia.com/wp-content/uploads/2025/06/image-8.png" alt="" class="wp-image-60681" style="width:403px;height:auto" srcset="https://peepalmedia.com/wp-content/uploads/2025/06/image-8.png 645w, https://peepalmedia.com/wp-content/uploads/2025/06/image-8-300x281.png 300w, https://peepalmedia.com/wp-content/uploads/2025/06/image-8-150x140.png 150w" sizes="auto, (max-width: 645px) 100vw, 645px" /></figure></div>

<div class="wp-block-image">
<figure class="aligncenter size-full is-resized"><img loading="lazy" decoding="async" width="612" height="497" src="https://peepalmedia.com/wp-content/uploads/2025/06/image-9.png" alt="" class="wp-image-60682" style="width:391px;height:auto" srcset="https://peepalmedia.com/wp-content/uploads/2025/06/image-9.png 612w, https://peepalmedia.com/wp-content/uploads/2025/06/image-9-300x244.png 300w, https://peepalmedia.com/wp-content/uploads/2025/06/image-9-150x122.png 150w" sizes="auto, (max-width: 612px) 100vw, 612px" /></figure></div>

<div class="wp-block-image">
<figure class="aligncenter size-full is-resized"><img loading="lazy" decoding="async" width="641" height="203" src="https://peepalmedia.com/wp-content/uploads/2025/06/image-11.png" alt="" class="wp-image-60684" style="width:408px;height:auto" srcset="https://peepalmedia.com/wp-content/uploads/2025/06/image-11.png 641w, https://peepalmedia.com/wp-content/uploads/2025/06/image-11-300x95.png 300w, https://peepalmedia.com/wp-content/uploads/2025/06/image-11-150x48.png 150w" sizes="auto, (max-width: 641px) 100vw, 641px" /></figure></div>


<p>ಕೆಲವು ರಾಜ್ಯಗಳ ಲಿಂಗ ಅನುಪಾತವು ಕಳವಳಕಾರಿ ವಿಷಯವಾಗಿದ್ದರೂ, ಭಾರತದ ಒಟ್ಟಾರೆ ಸರಾಸರಿ ಲಿಂಗ ಅನುಪಾತವು ವರ್ಷಗಳಲ್ಲಿ ಸ್ಥಿರವಾಗಿ ಸುಧಾರಿಸಿದೆ ಎಂದು NFHS ಗಳ ದತ್ತಾಂಶವು ಸೂಚಿಸುತ್ತದೆ.</p>



<p>2015-16ರ ನಡುವೆ ನಡೆಸಿದ NFHS ನ ನಾಲ್ಕನೇ ಸುತ್ತಿನ ಅಡಿಯಲ್ಲಿ ನೋಂದಾಯಿಸಲಾದ ಲಿಂಗ ಅನುಪಾತವು 991 ಆಗಿದ್ದರೆ, 2020-21 ರಿಂದ ನಡೆಸಿದ ಐದನೇ ಸುತ್ತಿನ ಸಮೀಕ್ಷೆಯಲ್ಲಿ ಅದು 1,020 ಕ್ಕೆ ಏರಿದೆ.</p>



<p>ಹೀಗಾಗಿ, ಇತ್ತೀಚಿನ ವರ್ಷಗಳಲ್ಲಿ ಮೊದಲ ಬಾರಿಗೆ, ಹೆಣ್ಣು ಮಕ್ಕಳ ಜನನದ ಸಂಖ್ಯೆಯು ಪುರುಷರ ಜನನಕ್ಕಿಂತ ಹೆಚ್ಚಾಗಿದೆ.</p>



<p><strong>ಲೇಖನ: </strong>ಬಂಜೋತ್ ಕೌರ್, <a href="https://thewire.in/health/over-half-registered-deaths-2022-no-medical-attention">Over Half of Registered Deaths in 2022 Got No Medical Attention; Unregistered Deaths Not Even Counted</a></p>



<p></p>
]]></content:encoded>
					
		
		
			</item>
		<item>
		<title>ಇಂದಿನಿಂದ ರಾಜ್ಯಾದ್ಯಂತ &#8220;ಗೃಹ ಆರೋಗ್ಯ&#8221; ಯೋಜನೆ ವಿಸ್ತರಣೆ</title>
		<link>https://peepalmedia.com/home-health-scheme-to-be-expanded-across-the-state/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 02 Jun 2025 02:24:49 +0000</pubDate>
				<category><![CDATA[ಆರೋಗ್ಯ]]></category>
		<category><![CDATA[ಮೀಡಿಯಾ]]></category>
		<category><![CDATA[ರಾಜ್ಯ]]></category>
		<guid isPermaLink="false">https://peepalmedia.com/?p=60148</guid>

					<description><![CDATA[ರಾಜ್ಯದಲ್ಲಿ ‘ಗೃಹ ಆರೋಗ್ಯ’ ಯೋಜನೆ ಸೋಮವಾರದಿಂದ ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಪ್ರತೀ ಮನೆ ಮನೆಗೂ ಭೇಟಿ ನೀಡುವ ಮೂಲಕ 30 ವರ್ಷ ಮೇಲ್ಪಟ್ಟವರ ಸಾಂಕ್ರಾಮಿಕ ಅಲ್ಲದ ರೋಗಗಳ ತಪಾಸಣೆ ನಡೆಸುವುದು, ಔಷಧ ವಿತರಣೆ, ಅಗತ್ಯ ಚಿಕಿತ್ಸೆಗೆ ಸಹಕರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಸೋಮವಾರ ವಿಕಾಸಸೌಧದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಯೋಜನೆ ಕುರಿತು ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸುವ ಜೊತೆಗೆ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸುವುದಾಗಿ ಅಧಿಕೃತ ಘೋಷಣೆ [&#8230;]]]></description>
										<content:encoded><![CDATA[
<p>ರಾಜ್ಯದಲ್ಲಿ ‘ಗೃಹ ಆರೋಗ್ಯ’ ಯೋಜನೆ ಸೋಮವಾರದಿಂದ ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಪ್ರತೀ ಮನೆ ಮನೆಗೂ ಭೇಟಿ ನೀಡುವ ಮೂಲಕ 30 ವರ್ಷ ಮೇಲ್ಪಟ್ಟವರ ಸಾಂಕ್ರಾಮಿಕ ಅಲ್ಲದ ರೋಗಗಳ ತಪಾಸಣೆ ನಡೆಸುವುದು, ಔಷಧ ವಿತರಣೆ, ಅಗತ್ಯ ಚಿಕಿತ್ಸೆಗೆ ಸಹಕರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.</p>



<p>ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಸೋಮವಾರ ವಿಕಾಸಸೌಧದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಯೋಜನೆ ಕುರಿತು ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸುವ ಜೊತೆಗೆ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸುವುದಾಗಿ ಅಧಿಕೃತ ಘೋಷಣೆ ಮಾಡಲಿದ್ದಾರೆ.</p>



<p>ಈ ಕಾರ್ಯಕ್ರಮವನ್ನು ಗ್ರಾಮೀಣ ಪ್ರದೇಶಗಳಲ್ಲಿ ಜಾರಿಗೆ ತಂದು ಸಮುದಾಯ ಆರೋಗ್ಯ ಅಧಿಕಾರಿಗಳು ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತರು ಮತ್ತು ಸ್ವಯಂಸೇವಕರ ಸಹಾಯದಿಂದ ಮನೆ ಬಾಗಿಲಿಗೆ ತೆರಳಿ ತಪಾಸಣೆ ನಡೆಸುತ್ತಾರೆ. ಕಾಯಿಲೆಯನ್ನು ಮೊದಲೇ ಪತ್ತೆ ಹಚ್ಚುವುದು ಮತ್ತು ಚಿಕಿತ್ಸೆ ನೀಡುವುದು ಈ ಕಾರ್ಯಕ್ರಮ ಆರಂಭದ ಹಿಂದಿನ ಉದ್ದೇಶವಾಗಿದೆ.</p>



<p>ಸುಮಾರು 100 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ವಿಸ್ತರಿಸುತ್ತಿದ್ದು, ಪ್ರತಿ ಸಿಬ್ಬಂದಿ ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರದಂದು ಪ್ರತಿದಿನ ಸುಮಾರು 15 ಮನೆಗಳನ್ನು ಪರಿಶೀಲಿಸುವ ಗುರಿ ಹೊಂದಿದೆ. ಭೇಟಿ ಸಮಯದಲ್ಲಿ ಮೌಖಿಕ, ಗರ್ಭಕಂಠದ ಮತ್ತು ಸ್ತನ ಕ್ಯಾನ್ಸರ್‌ಗಳ ಮೌಲ್ಯಮಾಪನಗಳನ್ನು ಮಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>



<p>ಗೃಹ ಆರೋಗ್ಯ ಯೋಜನೆಯಡಿಯಲ್ಲಿ 14 ರೋಗಗಳ ತಪಾಸಣೆಗೆ ಆರೋಗ್ಯ ಇಲಾಖೆ ಮುಂದಾಗಲಿದೆ. ರಾಜ್ಯದ ಜನಸಂಖ್ಯೆಯ ಶೇ.26.9ಕ್ಕೂ ಅಧಿಕ ಮಂದಿ ರಕ್ತದ ಒತ್ತಡ, ಶೇ.15.6 ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಜನರು ರಕ್ತದೊತ್ತಡ ಮತ್ತು ಮಧುಮೇಹವನ್ನು ನಿರ್ಲಕ್ಷಿಸುತ್ತಿದ್ದು, ಖಾಯಿಲೆ ತಪಾಸಣೆ ಜೊತೆಗೆ ಅವುಗಳ ಬಗ್ಗೆ ಅರಿವು ಮೂಡಿಸುವುದೂ ಈ ಯೋಜನೆಯ ಉದ್ದೇಶ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಮಕ್ಕಳಿಗೆ ಶೀತ ಜ್ವರ ಇದ್ದರೆ ಶಾಲೆಗೆ ಕಳಿಸಬೇಡಿ; ಸಧ್ಯಕ್ಕೆ ಕೋವಿಡ್ ಮಾರ್ಗಸೂಚಿ ಇಲ್ಲ : ಸಚಿವ ಡಾ.ಶರಣಪ್ರಕಾಶ್ ಪಾಟೀಲ್</title>
		<link>https://peepalmedia.com/currently-there-is-no-covid-guideline/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 28 May 2025 03:33:52 +0000</pubDate>
				<category><![CDATA[ಆರೋಗ್ಯ]]></category>
		<category><![CDATA[ಮೀಡಿಯಾ]]></category>
		<category><![CDATA[ರಾಜ್ಯ]]></category>
		<guid isPermaLink="false">https://peepalmedia.com/?p=59887</guid>

					<description><![CDATA[ರಾಜ್ಯದಲ್ಲಿ ಈಗಾಗಲೇ ಶಾಲೆಗಳು ಪ್ರಾರಂಭವಾಗುತ್ತಿದ್ದು, ಪೋಷಕರಿಗೆ ಸಾಂಕ್ರಾಮಿಕ ಜ್ವರದ ಭೀತಿ ಎದುರಾಗಿದೆ. ಹೀಗಾಗಿ ಮಕ್ಕಳಿಗೆ ನೆಗಡಿ ಜ್ವರದ ರೀತಿಯ ಯಾವುದೇ ಸಾಂಕ್ರಾಮಿಕ ರೋಗ ಕಂಡುಬಂದರೆ ಶಾಲೆಗೆ ಕಳಿಸುವ ಅಗತ್ಯವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ. ಮಕ್ಕಳಿಗೆ ಕಂಡುಬರುವ ಶೀತ, ನೆಗಡಿ, ಜ್ವರದಂತಹ ಯಾವುದೇ ಸಾಂಕ್ರಾಮಿಕಕ್ಕೆ ಪೋಷಕರು ತಕ್ಷಣವೇ ಎಚ್ಚೆತ್ತುಕೊಂಡು, ಶಾಲೆಗೆ ತಿಳಿಸಿ ರಜೆ ತೆಗೆದುಕೊಳ್ಳಬೇಕು. ಶಾಲೆಗಳಲ್ಲೂ ಸಹ ಶಿಕ್ಷಕರು ಯಾವುದೇ ಮಕ್ಕಳಿಗೆ ಈ ಲಕ್ಷಣಗಳು ಕಂಡುಬಂದರೆ ತಕ್ಷಣ ಪೋಷಕರಿಗೆ ತಿಳಿಸಿ, ಅಂತಹ ಮಕ್ಕಳನ್ನು [&#8230;]]]></description>
										<content:encoded><![CDATA[
<p></p>



<p>ರಾಜ್ಯದಲ್ಲಿ ಈಗಾಗಲೇ ಶಾಲೆಗಳು ಪ್ರಾರಂಭವಾಗುತ್ತಿದ್ದು, ಪೋಷಕರಿಗೆ ಸಾಂಕ್ರಾಮಿಕ ಜ್ವರದ ಭೀತಿ ಎದುರಾಗಿದೆ. ಹೀಗಾಗಿ ಮಕ್ಕಳಿಗೆ ನೆಗಡಿ ಜ್ವರದ ರೀತಿಯ ಯಾವುದೇ ಸಾಂಕ್ರಾಮಿಕ ರೋಗ ಕಂಡುಬಂದರೆ ಶಾಲೆಗೆ ಕಳಿಸುವ ಅಗತ್ಯವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.</p>



<p>ಮಕ್ಕಳಿಗೆ ಕಂಡುಬರುವ ಶೀತ, ನೆಗಡಿ, ಜ್ವರದಂತಹ ಯಾವುದೇ ಸಾಂಕ್ರಾಮಿಕಕ್ಕೆ ಪೋಷಕರು ತಕ್ಷಣವೇ ಎಚ್ಚೆತ್ತುಕೊಂಡು, ಶಾಲೆಗೆ ತಿಳಿಸಿ ರಜೆ ತೆಗೆದುಕೊಳ್ಳಬೇಕು. ಶಾಲೆಗಳಲ್ಲೂ ಸಹ ಶಿಕ್ಷಕರು ಯಾವುದೇ ಮಕ್ಕಳಿಗೆ ಈ ಲಕ್ಷಣಗಳು ಕಂಡುಬಂದರೆ ತಕ್ಷಣ ಪೋಷಕರಿಗೆ ತಿಳಿಸಿ, ಅಂತಹ ಮಕ್ಕಳನ್ನು ಮನೆಗೆ ಕಳಿಸಬೇಕು ಎಂದು ಹೇಳಿದ್ದಾರೆ.</p>



<p>ಸಧ್ಯ ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕದ ಭೀತಿ ಎದುರಾಗಿದ್ದು, ಆತಂಕಪಡುವ ಅಗತ್ಯವಿಲ್ಲ. ಎಲ್ಲರೂ ಮಾಸ್ಕ್ ಧರಿಸುವ ಮಾರ್ಗಸೂಚಿಯನ್ನು ಸರ್ಕಾರ ಹೊರಡಿಸಿಲ್ಲ. ಗರ್ಭಿಣಿಯರು ಮಾಸ್ಕ್ ಬಳಕೆ ಮಾಡಬೇಕು. ಹಾಗೆಯೇ ನಮ್ಮ ವೈದ್ಯಕೀಯ ಕಾಲೇಜು, ಆಸ್ಪತ್ರೆಗಳ ಸಿಬಂದಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸಲಹೆ ನೀಡಿದ್ದೇವೆ ಎಂದರು.</p>
]]></content:encoded>
					
		
		
			</item>
		<item>
		<title>ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 47 ಕ್ಕೆ ಏರಿಕೆ ; ಮಾರ್ಗಸೂಚಿ ಪಾಲಿಸಲು ಆರೋಗ್ಯ ಇಲಾಖೆ ಮನವಿ</title>
		<link>https://peepalmedia.com/number-of-active-cases-rise-to-47/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 26 May 2025 01:26:55 +0000</pubDate>
				<category><![CDATA[ಆರೋಗ್ಯ]]></category>
		<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[ಮೀಡಿಯಾ]]></category>
		<guid isPermaLink="false">https://peepalmedia.com/?p=59716</guid>

					<description><![CDATA[ರಾಜ್ಯದಲ್ಲಿ ಕೊರೊನಾ ವೈರಸ್​ಗೆ ಮೊದಲ ಸಾವಿನ ಬೆನ್ನಲ್ಲೇ ಸರ್ಕಾರ ಹೈ ಅಲರ್ಟ್ ಘೋಷಣೆ ಮಾಡಿದೆ. ಆರೋಗ್ಯ ಇಲಾಖೆ ಕೂಡ ಇಂದು ಕೋವಿಡ್ ಗೈಡ್ ಲೈನ್ ಬಿಡುಗಡೆ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಇದರ ಜೊತೆ ಜೊತೆಗೇ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 47 ಕ್ಕೆ ಏರಿಕೆ ಕಂಡಿದೆ. ಕಳೆದ 24 ಗಂಟೆಯಲ್ಲಿ ಬೆಂಗಳೂರಲ್ಲಿ 9 ಮಂದಿಗೆ ಕೊರೋನಾ ಪಾಸಿಟಿವ್ ಇದೆ ಎಂದು ದೃಢಪಟ್ಟಿದೆ. ರಾಜ್ಯ ಆರೋಗ್ಯ ಇಲಾಖೆಯಿಂದ ಕೋವಿಡ್ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ [&#8230;]]]></description>
										<content:encoded><![CDATA[
<p></p>



<p>ರಾಜ್ಯದಲ್ಲಿ ಕೊರೊನಾ ವೈರಸ್​ಗೆ ಮೊದಲ ಸಾವಿನ ಬೆನ್ನಲ್ಲೇ ಸರ್ಕಾರ ಹೈ ಅಲರ್ಟ್ ಘೋಷಣೆ ಮಾಡಿದೆ. ಆರೋಗ್ಯ ಇಲಾಖೆ ಕೂಡ ಇಂದು ಕೋವಿಡ್ ಗೈಡ್ ಲೈನ್ ಬಿಡುಗಡೆ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಇದರ ಜೊತೆ ಜೊತೆಗೇ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 47 ಕ್ಕೆ ಏರಿಕೆ ಕಂಡಿದೆ.</p>



<p>ಕಳೆದ 24 ಗಂಟೆಯಲ್ಲಿ ಬೆಂಗಳೂರಲ್ಲಿ 9 ಮಂದಿಗೆ ಕೊರೋನಾ ಪಾಸಿಟಿವ್ ಇದೆ ಎಂದು ದೃಢಪಟ್ಟಿದೆ. ರಾಜ್ಯ ಆರೋಗ್ಯ ಇಲಾಖೆಯಿಂದ ಕೋವಿಡ್ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ RTPCR ಮೂಲಕ 96, RAT ಮೂಲಕ 8 ಮಂದಿ ಸೇರಿದಂತೆ 104 ಜನರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿದವರಲ್ಲಿ 9 ಮಂದಿಗೆ ಕೋವಿಡ್ ದೃಢವಾಗಿದೆ.</p>



<p>ರಾಜ್ಯದಲ್ಲಿ ಇದೀಗ 47 ಕೊರೋನಾ ಪಾಸಿಟಿವ್ ಕೇಸ್ ಇವೆ. 46 ಮಂದಿ ಹೋಂ ಐಸೋಲೇಷನ್​ನಲ್ಲಿ ಇದ್ದಾರೆ. ಒಬ್ಬರು ಮಾತ್ರವೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸರ್ಕಾರ ತಿಳಿಸಿದೆ.</p>
]]></content:encoded>
					
		
		
			</item>
	</channel>
</rss>
