<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ಸತ್ಯ ಶೋಧ &#8211; Peepal Media</title>
	<atom:link href="https://peepalmedia.com/category/more/fact-check/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sun, 05 Jan 2025 14:47:35 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>ಸತ್ಯ ಶೋಧ &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಮಹಿಳಾ ಶಿಕ್ಷಣಕ್ಕೆಹೆಚ್ಚಿನ ಆದ್ಯತೆ ನೀಡಬೇಕಿದೆ &#8211; ರಮೇಶ ಹಾಸನ್‌ </title>
		<link>https://peepalmedia.com/high-priority-should-be-given-to-womens-education-ramesh-haasan/</link>
		
		<dc:creator><![CDATA[ರಮೇಶ್‌ ಹಾಸನ್‌]]></dc:creator>
		<pubDate>Sun, 05 Jan 2025 14:24:14 +0000</pubDate>
				<category><![CDATA[ಸತ್ಯ ಶೋಧ]]></category>
		<category><![CDATA[ಹಾಸನ]]></category>
		<category><![CDATA[ಹೆಣ್ಣೋಟ]]></category>
		<category><![CDATA[india]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Savithribaipule]]></category>
		<guid isPermaLink="false">https://peepalmedia.com/?p=51682</guid>

					<description><![CDATA[ಹಾಸನದ ಹೊಳೆನರಸಿಪುರ ತಾಲ್ಲೂಕಿನ ಪೋಸ್ಟ್‌ ಮೆಟ್ರಿಕ್‌ ಹಾಸೆಲ್‌ ನಲ್ಲಿ ಸಾವಿತ್ರಿ ಬಾಯಿಪುಲೆ ರವರ ಜನ್ಮ ದಿನದ ಅಂಗವಾಗಿ ಎಸ್.ಎಫ್.ಐ ಸಂಘಟನೆಯ ವತಿಯಿಂದ  ವಿಚಾರ ಸಂಕೀರ್ಣವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಾಸ್ಥಾವಿಕವಾಗಿ ಮಾತನಾಡಿದ ಎಸ್.ಎಫ್.ಐ ನ ಜಿಲ್ಲಾ ಕಾರ್ಯದರ್ಶಿ ರಮೇಶ್‌ ಹಾಸನ್‌ ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಏಕೆಂದರೆ ಶತಮಾನಗಳಿಂದ ಶೋಷಣೆಗೆ ಒಳ ಪಟ್ಟು ಮಹಿಳಾ ಸಮುದಾಯ ಇಂದಿಗೂ ಅದೆ ಸಮಸ್ಯೆ ಎದುರಿಸುತ್ತಿದೆ, ಸಾವಿತ್ರಿಬಾಪುಲೆ ರವರು ಮಹಿಳಾ಼ ಶಿಕ್ಷಣಕ್ಕೆ ಒತ್ತು ಕೊಟ್ಟಷ್ಟು ಯಾರು ಕೊಟಿಟರುವುದಿಲ್ಲ, ನೂರಾರು ವರ್ಷಗಳ ಹಿಂದೆಯೆ ಅವರು [&#8230;]]]></description>
										<content:encoded><![CDATA[
<p>ಹಾಸನದ ಹೊಳೆನರಸಿಪುರ ತಾಲ್ಲೂಕಿನ ಪೋಸ್ಟ್‌ ಮೆಟ್ರಿಕ್‌ ಹಾಸೆಲ್‌ ನಲ್ಲಿ ಸಾವಿತ್ರಿ ಬಾಯಿಪುಲೆ ರವರ ಜನ್ಮ ದಿನದ ಅಂಗವಾಗಿ ಎಸ್.ಎಫ್.ಐ ಸಂಘಟನೆಯ ವತಿಯಿಂದ  ವಿಚಾರ ಸಂಕೀರ್ಣವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಾಸ್ಥಾವಿಕವಾಗಿ ಮಾತನಾಡಿದ ಎಸ್.ಎಫ್.ಐ ನ ಜಿಲ್ಲಾ ಕಾರ್ಯದರ್ಶಿ ರಮೇಶ್‌ ಹಾಸನ್‌ ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಏಕೆಂದರೆ ಶತಮಾನಗಳಿಂದ ಶೋಷಣೆಗೆ ಒಳ ಪಟ್ಟು ಮಹಿಳಾ ಸಮುದಾಯ ಇಂದಿಗೂ ಅದೆ ಸಮಸ್ಯೆ ಎದುರಿಸುತ್ತಿದೆ, ಸಾವಿತ್ರಿಬಾಪುಲೆ ರವರು ಮಹಿಳಾ಼ ಶಿಕ್ಷಣಕ್ಕೆ ಒತ್ತು ಕೊಟ್ಟಷ್ಟು ಯಾರು ಕೊಟಿಟರುವುದಿಲ್ಲ, ನೂರಾರು ವರ್ಷಗಳ ಹಿಂದೆಯೆ ಅವರು ಈ ವೈದಿಕಶಾಹಿ ಪರಂಪರೆ ಮಹಿಳೆಯನ್ನು ಅಸೃಷ್ಯಳಾಗಿ ನೋಡುವಪದ್ದತಿಗಳ ವಿರುದ್ಧ ಹೋರಾಟ ಮಾಡಿ ಬಂದ ಕಾರಂ ಇಂದು ಮಹಿಳೆಯರಿಗೆ ಸಮಾನವಾದ ಶಿಕ್ಷಣ ಸಿಗುತ್ತಿದೆ. ಸಾವಿತ್ರಿ ಬಾಯಿಪುಲೆ ರವರು ಮಾಡಿರುವುದು ಶಿಕ್ಷಣ ಕ್ರಾಂತಿ ‘‘ಸಾವಿತ್ರಿ ಬಾಯಿ ತುಂಬ ಉದಾರಿಯಾಗಿದ್ದರು. ಅವರ ಹೃದಯ ಕರುಣಾಭರಿತವಾಗಿತ್ತು. ಬಡವರು, ಅಸಹಾಯಕರ ಕುರಿತು ಬಹಳ ಅನುಭೂತಿ ಹೊಂದಿದ್ದರು. ಅಂಥ ಯಾರನ್ನಾಗಲೀ ನೋಡಿದರೆ ಅಲ್ಲೇ ತಿನ್ನಲು ಕೊಡುತ್ತಿದ್ದರು ಅಥವಾ ಅಡಿಗೆಯಾ ಗಿದ್ದರೆ ಊಟ ಕೊಡುತ್ತಿದ್ದರು. ಹರಿದ ಸೀರೆಯುಟ್ಟ ಹೆಣ್ಣುಮಕ್ಕಳನ್ನು ನೋಡಿದರೆ ತಮ್ಮದೇ ಒಂದು ಸೀರೆ ಮನೆಯಿಂದ ತಂದು ಕೊಟ್ಟು ಬಿಡುತ್ತಿದ್ದರು. ಇದರಿಂದ ಮನೆ ಖರ್ಚು ಹೆಚ್ಚುತ್ತ ಹೋಯಿತು. ತಾತ್ಯಾ ಒಮ್ಮೊಮ್ಮೆ ಹೇಳುತ್ತಿದ್ದರು, ‘‘ಇಷ್ಟು ಖರ್ಚು ಮಾಡಿದರೆ ಹೇಗೆ?’’ ಎಂದು. ಅದಕ್ಕೆ ಸಾವಿತ್ರಿಬಾಯಿ ನಸುನಗುತ್ತ, ‘‘ನಾವು ಸತ್ತು ಹೋಗುವಾಗ ಏನನ್ನಾದರೂ ಜೊತೆಗೆ ಒಯ್ಯುತ್ತೇವೆಯೇ?’’ ಎಂದು ಕೇಳುತ್ತಿದ್ದರು. ಮನೆಗೆ ಯಾರಾದರೂ ಅತಿಥಿಗಳು ಬಂದರೆ ಅವರಿಗೆ ತುಂಬ ಸಂತೋಷ, ತಾವೇ ಅಡಿಗೆ ಮಾಡಿ ಬಡಿಸುತ್ತಾರೆ. ಅವರು ಸದಾ ಮಹಿಳೆಯರ ಶಿಕ್ಷಣ ಮತ್ತು ಉನ್ನತಿಯ ಬಗ್ಗೆಯೇ ಯೋಚಿಸುತ್ತಾರೆ. ಸೌಂದರ್ಯ, ಸಿರಿಸಂಪತ್ತು ಕುರಿತಾದ ನಿಗ್ರಹವನ್ನು ಎಳೆಯ ವಯಸ್ಸಿನಲ್ಲೇ ದಕ್ಕಿಸಿಕೊಂಡ ಕಾರಣ ಹಾಗೂ ತಾನು ಮಾಡುವ ಕೆಲಸದಲ್ಲಿ ಅಚಲ ಶ್ರದ್ಧೆ ಬೆಳೆಸಿಕೊಂಡ ಕಾರಣ ಸಾವಿತ್ರಿ ತನ್ನ ಕಾಲದ ಉಳಿದ ಮಹಿಳೆಯರಿಗಿಂತ ತೀರಾ ಭಿನ್ನವಾಗಿ ಯೋಚಿಸಲು; ಕಾರ್ಯಪ್ರವೃತ್ತರಾಗಲು ಸಾಧ್ಯವಾಯಿತು. ಇಂತಹ ಮನೋಭಾವವೇ ಎಲ್ಲ ಮಕ್ಕಳನ್ನೂ ತನ್ನವೇ ಎಂದುಕೊಂಡು ಅವರಿಗೆ ಅಕ್ಷರದ ಅನ್ನ ಉಣಬಡಿಸಲು, ಎಲ್ಲರಿಗೂ ತಾಯಿಯಾಗಲು ಸಾಧ್ಯ ಎಂದು ಮಾತನಾಡಿದರು.</p>



<p>ಸಮಾಜ ಕಲ್ಯಾಣ ಅಧಿಕಾರಿಗಳಾದ ಮಂಜುನಾಥ್‌ ರವರು ಮಾತನಾಡಿ ಫುಲೆ ದಂಪತಿಗಳ ಕೊಡುಗೆಯನ್ನು ನಾವು ಸ್ಮರಿಸಬೇಕು ಮಹಿಳೆಯರಿಗೆ ಶಿಕ್ಷಣ ಸಿಗಬೇಕು ಅವರಿಗು ಘನೆತೆಯ ಬದುಕಿದೆ ಎಂಬುದನ್ನು ಒತ್ತಿ ಹೇಳಿದರು ಅಂದಿನ ಕಾಲದಲ್ಲಿ ಅವರು ಅಷ್ಟು ಕೆಲಸ ಮಾಡದೆ ಹೋಗಿದ್ದರೆ ಇಂದು ನಾವು ನೆಮ್ಮದಿಯಾಗಿ ಇಲ್ಲಿ ಕೂರಲು ಕೂಡ ಸಾದ್ಯವ ಆಗುತ್ತಿರಲಿಲ್ಲ ಹಾಗಾಗಿ ಅವರು ನಮಗೆ ಆದರ್ಶ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ವಿಚಾರ ಸಂಕೀರ್ಣದಲ್ಲಿ&nbsp; ನಿಲಯಪಾಲಕರಾದ ಚಂದ್ರಮ್ಮ ಕಾರ್ಯದರ್ಶಿ ರಮೇಶ್‌ ಹಾಸನ್‌, ತೇಜಸ್ವಿನಿ, ಸರಿತ, ಶಾಲಿನಿ ಇನ್ನಿತರು ಉಪಸ್ಥಿತಿರಿದ್ದರು.</p>



<p></p>
]]></content:encoded>
					
		
		
			</item>
		<item>
		<title>ರಾಮ ಮಂದಿರದಂತಹ ವಿವಾದವನ್ನು ಬೇರೆ ನಗರಗಳಲ್ಲಿ ಸೃಷ್ಟಿಸಬೇಡಿ: RSS ಮುಖ್ಯಸ್ಥ ಭಾಗವತ್</title>
		<link>https://peepalmedia.com/dont-create-controversy-like-ram-temple-in-other-cities-rss-chief-bhagwat/</link>
		
		<dc:creator><![CDATA[Peepal Media]]></dc:creator>
		<pubDate>Fri, 20 Dec 2024 07:57:50 +0000</pubDate>
				<category><![CDATA[ದೇಶ]]></category>
		<category><![CDATA[ಧರ್ಮ- ಸಂಸ್ಕೃತಿ]]></category>
		<category><![CDATA[ಸತ್ಯ ಶೋಧ]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=50976</guid>

					<description><![CDATA[ಪುಣೆ: ರಾಮ ಮಂದಿರದಂತೆ ವಿವಾದವನ್ನು ದೇಶದ ಬೇರೆ ನಗರಗಳಲ್ಲಿ ಸೃಷ್ಟಿಸಬೇಡಿ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ವಿವಿಧ ಸ್ಥಳಗಳಲ್ಲಿ ರಾಮಮಂದಿರದಂತಹ ವಿವಾದಗಳನ್ನು ಹುಟ್ಟುಹಾಕುವುದು ಸ್ವೀಕಾರಾರ್ಹವಲ್ಲ. ವಿಭಿನ್ನ ನಂಬಿಕೆಗಳು ಮತ್ತು ಸಿದ್ಧಾಂತಗಳಿದ್ದರೂ ಹೇಗೆ ಸಾಮರಸ್ಯದಿಂದ ಬದುಕಬಹುದು ಎಂಬುದಕ್ಕೆ ಭಾರತವು ಒಂದು ಉದಾಹರಣೆಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪುಣೆಯಲ್ಲಿ “ವಿಶ್ವಗುರು ಭಾರತ” ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್, ಭಾರತೀಯರು ಹಿಂದಿನ ತಪ್ಪುಗಳಿಂದ ಕಲಿಯಬೇಕು ಮತ್ತು ವಿವಾದವನ್ನು ತಪ್ಪಿಸುವ ಮೂಲಕ ತಮ್ಮ [&#8230;]]]></description>
										<content:encoded><![CDATA[
<p><strong>ಪುಣೆ:</strong>  ರಾಮ ಮಂದಿರದಂತೆ ವಿವಾದವನ್ನು ದೇಶದ ಬೇರೆ ನಗರಗಳಲ್ಲಿ ಸೃಷ್ಟಿಸಬೇಡಿ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. </p>



<p>ವಿವಿಧ ಸ್ಥಳಗಳಲ್ಲಿ ರಾಮಮಂದಿರದಂತಹ ವಿವಾದಗಳನ್ನು ಹುಟ್ಟುಹಾಕುವುದು ಸ್ವೀಕಾರಾರ್ಹವಲ್ಲ. ವಿಭಿನ್ನ ನಂಬಿಕೆಗಳು ಮತ್ತು ಸಿದ್ಧಾಂತಗಳಿದ್ದರೂ ಹೇಗೆ ಸಾಮರಸ್ಯದಿಂದ ಬದುಕಬಹುದು ಎಂಬುದಕ್ಕೆ ಭಾರತವು ಒಂದು ಉದಾಹರಣೆಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. </p>



<p>ಪುಣೆಯಲ್ಲಿ “ವಿಶ್ವಗುರು ಭಾರತ” ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್, ಭಾರತೀಯರು ಹಿಂದಿನ ತಪ್ಪುಗಳಿಂದ ಕಲಿಯಬೇಕು ಮತ್ತು ವಿವಾದವನ್ನು ತಪ್ಪಿಸುವ ಮೂಲಕ ತಮ್ಮ ದೇಶವನ್ನು ಜಗತ್ತಿಗೆ ಮಾದರಿಯನ್ನಾಗಿ ಮಾಡಲು ಶ್ರಮಿಸಬೇಕು. ರಾಮ ಮಂದಿರವು ನಂಬಿಕೆಯ ವಿಷಯವಾಗಿದೆ ಮತ್ತು ಹಿಂದೂಗಳು ಅದನ್ನು ನಿರ್ಮಿಸಬೇಕು ಎಂದು ಬಯಸಿದ್ದರು. ದ್ವೇಷದಿಂದ ಕೆಲವು ಧಾರ್ಮಿಕ ಕೇಂದ್ರಗಳಲ್ಲಿ ಹೊಸದಾಗಿ ವಿವಾದವು ಭುಗಿಲೆದ್ದಿರುವುದು ಸ್ವೀಕಾರಾರ್ಹವಲ್ಲ ಎಂದು ಅವರು ವಿನಂತಿಸಿಕೊಂಡಿದ್ದಾರೆ. </p>



<p>ಸಮಾಜದಲ್ಲಿನ ಘರ್ಷಣೆಯನ್ನು ಕಡಿಮೆ ಮಾಡಲು ಪ್ರಾಚೀನ ಸಂಸ್ಕೃತಿಗೆ ಮರಳುವುದು ಪರಿಹಾರವಾಗಿದೆ. ಉಗ್ರವಾದ, ಆಕ್ರಮಣಶೀಲತೆ, ಬಲವಂತಿಕೆ ಮತ್ತು ಇತರರ ದೇವರುಗಳನ್ನು ಅವಮಾನಿಸುವುದು ನಮ್ಮ ಸಂಸ್ಕೃತಿಯಲ್ಲ. ಇಲ್ಲಿ ಬಹುಸಂಖ್ಯಾತರು ಅಥವಾ ಅಲ್ಪಸಂಖ್ಯಾತರು ಎಂಬುವುದಿಲ್ಲ, ನಾವೆಲ್ಲರೂ ಒಂದು. ಪ್ರತಿಯೊಬ್ಬರೂ ಈ ದೇಶದಲ್ಲಿ ತಮ್ಮ ಆರಾಧನೆಗಳನ್ನು ಮಾಡಬಹುದು ಎಂದು ಮೋಹನ್ ಭಾಗವತ್ ತಿಳಿಸಿದ್ದಾರೆ. </p>



<p></p>
]]></content:encoded>
					
		
		
			</item>
		<item>
		<title>ಕಾಮಗಾರಿಯಲ್ಲಿ ಮುಸ್ಲಿಂರಿಗೆ ಮೀಸಲಾತಿ ನೀಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ &#8211; ಸಿಎಮ್‌ ಮಾಧ್ಯಮ ಕಚೇರಿ ಸ್ಪಷ್ಟನೆ</title>
		<link>https://peepalmedia.com/karnataka-govt-is-not-considering-proposal-for-muslim-quota-in-government-tenders/</link>
		
		<dc:creator><![CDATA[Peepal Media]]></dc:creator>
		<pubDate>Tue, 12 Nov 2024 06:56:13 +0000</pubDate>
				<category><![CDATA[ರಾಜ್ಯ]]></category>
		<category><![CDATA[ಸತ್ಯ ಶೋಧ]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=48801</guid>

					<description><![CDATA[ಇಂದು ಮತ್ತು ನಿನ್ನೆ ಹಲವು ಮಾಧ್ಯಮಗಳಲ್ಲಿ ಮುಸ್ಲಿಮರಿಗೆ ಕಾಮಗಾರಿ ಗುತ್ತಿಗಳಲ್ಲಿ ಮೀಸಲಾತಿ ನೀಡುವ ಕುರಿತು ಸರ್ಕಾರ ಯೋಚಿಸುತ್ತಿದೆ ಎಂದು ವರದಿಯಾಗಿತ್ತು. ಆದರೆ ಅಂತ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಕಚೇರಿಯ ಪ್ರಕಟಣೆ ಸ್ಪಷ್ಟಪಡಿಸಿದೆ. 1 ಕೋಟಿ ರೂ.ವರೆಗಿನ ನಿರ್ಮಾಣ (ಸಿವಿಲ್) ಕಾಮಗಾರಿಗಳಿಗೆ ಸಾರ್ವಜನಿಕ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವ ಪ್ರಸ್ತಾವನೆಯನ್ನು ಸಿದ್ದರಾಮಯ್ಯ ಆಡಳಿತ ಪರಿಶೀಲಿಸುತ್ತಿದೆ ಕರ್ನಾಟಕದ ಪ್ರಮುಖ ಪತ್ರಿಕೆಗಳಲ್ಲಿ ವರದಿಯಾಗಿತ್ತು. ತಮ್ಮ ಮೊದಲ ಅಧಿಕಾರಾವಧಿಯಲ್ಲಿ, ಸಿದ್ದರಾಮಯ್ಯನವರು ಎಸ್‌ಸಿ/ಎಸ್‌ಟಿಗಳಿಗೆ ಗುತ್ತಿಗೆಯಲ್ಲಿ ಮೀಸಲಾತಿಯನ್ನು ಪರಿಚಯಿಸಿದ್ದರು ಮತ್ತು [&#8230;]]]></description>
										<content:encoded><![CDATA[
<p>ಇಂದು ಮತ್ತು ನಿನ್ನೆ ಹಲವು ಮಾಧ್ಯಮಗಳಲ್ಲಿ ಮುಸ್ಲಿಮರಿಗೆ ಕಾಮಗಾರಿ ಗುತ್ತಿಗಳಲ್ಲಿ ಮೀಸಲಾತಿ ನೀಡುವ ಕುರಿತು ಸರ್ಕಾರ ಯೋಚಿಸುತ್ತಿದೆ ಎಂದು ವರದಿಯಾಗಿತ್ತು. ಆದರೆ ಅಂತ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಕಚೇರಿಯ ಪ್ರಕಟಣೆ ಸ್ಪಷ್ಟಪಡಿಸಿದೆ.</p>



<p>1 ಕೋಟಿ ರೂ.ವರೆಗಿನ ನಿರ್ಮಾಣ (ಸಿವಿಲ್) ಕಾಮಗಾರಿಗಳಿಗೆ ಸಾರ್ವಜನಿಕ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವ ಪ್ರಸ್ತಾವನೆಯನ್ನು ಸಿದ್ದರಾಮಯ್ಯ ಆಡಳಿತ ಪರಿಶೀಲಿಸುತ್ತಿದೆ ಕರ್ನಾಟಕದ ಪ್ರಮುಖ ಪತ್ರಿಕೆಗಳಲ್ಲಿ ವರದಿಯಾಗಿತ್ತು.</p>



<p>ತಮ್ಮ ಮೊದಲ ಅಧಿಕಾರಾವಧಿಯಲ್ಲಿ, ಸಿದ್ದರಾಮಯ್ಯನವರು ಎಸ್‌ಸಿ/ಎಸ್‌ಟಿಗಳಿಗೆ ಗುತ್ತಿಗೆಯಲ್ಲಿ ಮೀಸಲಾತಿಯನ್ನು ಪರಿಚಯಿಸಿದ್ದರು ಮತ್ತು ಈ ವರ್ಷದ ಆರಂಭದಲ್ಲಿ ಎರಡು ಒಬಿಸಿ ವರ್ಗಗಗಳಿಗೂ ಈ ಪ್ರಯೋಜನವನ್ನು ವಿಸ್ತರಿಸಲಾಗಿತ್ತು.</p>



<p>ಈ ನಡುವೆ ಮುಸ್ಲಿಂ ಸಮುದಾಯದಿಂದಲೂ ಮೀಸಲಾತಿಯ ಬೇಡಿಕೆ ಬಂದಿತ್ತು. ಆದರೆ ಮುಖ್ಯಮಂತ್ರಿಯವರ ಮಾಧ್ಯಮ ಕಚೇರಿಯು ಸದ್ಯಕ್ಕೆ ಅಂತಹ ಮೀಸಲಾತಿಯ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದೆ.</p>



<p>ಈ ಕುರಿತು ಪ್ರಕಟಣೆ ಹೊರಡಿಸಿರುವ ಕಚೇರಿಯು &#8220;ಕಾಮಗಾರಿಯಲ್ಲಿ ಮುಸ್ಲಿಂರಿಗೆ ಮೀಸಲಾತಿ ನೀಡುವ ಪ್ರಸ್ತಾವನೆ ಸರ್ಕಾರದ ಮುಂದೆ ಎಂಬ ವರದಿ ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.</p>



<p>ಮೀಸಲಾತಿ ನೀಡಬೇಕೆಂಬ ಬೇಡಿಕೆ ಬಂದಿರುವುದು ನಿಜ. ಆದರೆ, ಈ ಕುರಿತು ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ&#8221; ಎಂದು ಹೇಳಿದೆ. </p>
]]></content:encoded>
					
		
		
			</item>
		<item>
		<title>ಸಾಧುಗಳ ವೇಷದಲ್ಲಿದ್ದವರು ಮುಸಲ್ಮಾನರೇ? Fact Check</title>
		<link>https://peepalmedia.com/muslims-were-caught-in-surat-posing-as-sadhus-fact-check/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 08 Nov 2024 13:15:38 +0000</pubDate>
				<category><![CDATA[ಸತ್ಯ ಶೋಧ]]></category>
		<category><![CDATA[communal]]></category>
		<category><![CDATA[communal issues]]></category>
		<category><![CDATA[Fact check]]></category>
		<category><![CDATA[hindu]]></category>
		<category><![CDATA[hindutva]]></category>
		<category><![CDATA[Muslim]]></category>
		<category><![CDATA[viral]]></category>
		<guid isPermaLink="false">https://peepalmedia.com/?p=48572</guid>

					<description><![CDATA[ಸಾಧುಗಳಂತೆ ಕೇಸರಿ ಬಟ್ಟೆ ತೊಟ್ಟು ಮೂವರಲ್ಲಿ ಓರ್ವ ವ್ಯಕ್ತಿ ಹಿಂದೂ ಧರ್ಮದ ಬಗ್ಗೆ ಪ್ರಶ್ನೆ ಮಾಡುತ್ತಾನೆ. ಅವರು ಸರಿಯಾದ ಉತ್ತರವನ್ನು ನೀಡುವುದಿಲ್ಲ. ಹಾಗಾಗಿ ಈ ಹಿಂದೂ ಸನ್ಯಾಸಿಗಳಂತೆ ವೇಷ ಧರಿಸಿರುವವರು ಮುಸ್ಲಿಮರು ಎಂಬ ಒಂದು ವೀಡಿಯೋ ವೈರಲ್‌ ಆಗಿತ್ತು. ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಈ ಕೇಸರಿ ಬಟ್ಟೆ ತೊಟ್ಟಿರುವವರಲ್ಲಿ, &#8220;ಕನಿಷ್ಠ ಒಂದು&#160;ಶ್ಲೋಕವನ್ನು&#160;(ಸಂಸ್ಕೃತದಲ್ಲಿ ಒಂದು ಶ್ಲೋಕ) ಹೇಳಿ, ಅಥವಾ ನಾವು ನಿಮ್ಮನ್ನು ಹೋಗಲು ಬಿಡುವುದಿಲ್ಲ. ನಿಮಗೆ ಎಷ್ಟು ದೇವರ ಹೆಸರುಗಳು ಗೊತ್ತು?” ಎಂದು ಕೇಳುತ್ತಾನೆ. ಇದಕ್ಕೆ ಆ [&#8230;]]]></description>
										<content:encoded><![CDATA[
<p>ಸಾಧುಗಳಂತೆ ಕೇಸರಿ ಬಟ್ಟೆ ತೊಟ್ಟು ಮೂವರಲ್ಲಿ ಓರ್ವ ವ್ಯಕ್ತಿ ಹಿಂದೂ ಧರ್ಮದ ಬಗ್ಗೆ ಪ್ರಶ್ನೆ ಮಾಡುತ್ತಾನೆ. ಅವರು ಸರಿಯಾದ ಉತ್ತರವನ್ನು ನೀಡುವುದಿಲ್ಲ. ಹಾಗಾಗಿ ಈ ಹಿಂದೂ ಸನ್ಯಾಸಿಗಳಂತೆ ವೇಷ ಧರಿಸಿರುವವರು ಮುಸ್ಲಿಮರು ಎಂಬ ಒಂದು ವೀಡಿಯೋ ವೈರಲ್‌ ಆಗಿತ್ತು.</p>



<p>ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಈ ಕೇಸರಿ ಬಟ್ಟೆ ತೊಟ್ಟಿರುವವರಲ್ಲಿ, &#8220;ಕನಿಷ್ಠ ಒಂದು&nbsp;<em>ಶ್ಲೋಕವನ್ನು</em>&nbsp;(ಸಂಸ್ಕೃತದಲ್ಲಿ ಒಂದು ಶ್ಲೋಕ) ಹೇಳಿ, ಅಥವಾ ನಾವು ನಿಮ್ಮನ್ನು ಹೋಗಲು ಬಿಡುವುದಿಲ್ಲ. ನಿಮಗೆ ಎಷ್ಟು ದೇವರ ಹೆಸರುಗಳು ಗೊತ್ತು?” ಎಂದು ಕೇಳುತ್ತಾನೆ. ಇದಕ್ಕೆ ಆ ಮೂವರಲ್ಲಿ ಒಬ್ಬ ವ್ಯಕ್ತಿ, &#8220;ನಾವು&nbsp;<em>ಭೋಲೆನಾಥನನ್ನು</em>&nbsp;ಆರಾಧಿಸುತ್ತೇವೆ &#8221; ಎಂದು ಉತ್ತರಿಸುತ್ತಾನೆ. </p>



<p>ವೀಡಿಯೋ ಮಾಡುತ್ತಿರುವ ವ್ಯಕ್ತಿ, &#8220;ನಿಮಗೆ ಒಂದೇ ಒಂದು ಹಿಂದೂ ದೇವತೆಯ ಹೆಸರು ತಿಳಿಯದಿದ್ದರೆ ನಿಮ್ಮನ್ನು ನಿಜವಾದ ಸಾಧುಗಳು ಎಂದು ಹೇಗೆ ನಂಬುವುದು,&#8221; ಎಂದು ಕೇಳುತ್ತಾರೆ. ಅಷ್ಟು ಹೊತ್ತಗೆ ಸುತ್ತಮುತ್ತ ಜನ ಸೇರುತ್ತಾರೆ, ಈ ಮೂವರು ಖಾವಿದಾರಿಗಳನ್ನು &#8216;ಬಾಂಗ್ಲಾದೇಶಿ&#8217; ಮತ್ತು &#8216;ರೋಹಿಂಗ್ಯಾ&#8217; ಎಂದೆಲ್ಲಾ ಬೈಯುತ್ತಾರೆ, ಕೆಲವರು ಪೆಟ್ಟು ಹೊಡೆಯಲು ಹೇಳುತ್ತಾರೆ.</p>



<p>ಆಮೇಲೆ ಈ ವೀಡಿಯೋ ರೆಕಾರ್ಡ್ ಮಾಡುತ್ತಿರುವ ವ್ಯಕ್ತಿ ಈ ಮೂವರು ಸಾಧುಗಳಲ್ಲಿ ಒಬ್ಬನ ಹೆಸರು &#8216;ಸಲ್ಮಾನ್&#8217; ಎಂದು ಸುತ್ತಮುತ್ತ ಸೇರಿದವರಿಗೆ ಹೇಳುತ್ತಾನೆ, ಅದನ್ನು ಸಾಬೀತುಪಡಿಸಲು ಐಡಿ ಕಾರ್ಡ್‌ ಕೂಡ ತೋರಿಸುತ್ತಾನೆ. </p>



<p>ಗುಜರಾತಿ ನ್ಯೂಸ್ ಚಾನೆಲ್ Zee 24 Kalak (@Zee24Kalak) ನವೆಂಬರ್ 2 ರಂದು ಈ ಘಟನೆಯ ಕುರಿತು ಗುಜರಾತಿ ಭಾಷೆಯಲ್ಲಿ ಟ್ವೀಟ್ ಮಾಡಿದೆ: “ಸಾಧುವಿನ ವೇಷದಲ್ಲಿದ್ದ ಸಲ್ಮಾನ್ ಸಿಕ್ಕಿಬಿದ್ದಿದ್ದಾನೆ! ಸೂರತ್‌ನಲ್ಲಿ ಸಾಧು ಭಿಕ್ಷೆ ಬೇಡುತ್ತಿದ್ದ ಸತ್ಯವನ್ನು ಐಡಿ ಚೆಕ್‌ನಿಂದ ಬಯಲಾದ ವಂಚನೆ,&#8221; ಎಂದು ಟೈಟಲ್‌ ನೀಡಲಾಗಿದೆ. (&nbsp;<a href="https://archive.is/kQybb" target="_blank" rel="noreferrer noopener">ಆರ್ಕೈವ್</a>&nbsp;)</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="gu" dir="ltr">સાધુના વેશમાં સલમાનનાથ પકડાયો! સુરતમાં ભીક્ષા માગી રહેલા સાધુનું આઇડી ચેક કરાતા ફૂટ્યો ભાંડો<a href="https://twitter.com/hashtag/Gujarat?src=hash&amp;ref_src=twsrc%5Etfw">#Gujarat</a> <a href="https://twitter.com/hashtag/Viral?src=hash&amp;ref_src=twsrc%5Etfw">#Viral</a> <a href="https://twitter.com/hashtag/ViralVideo?src=hash&amp;ref_src=twsrc%5Etfw">#ViralVideo</a> <a href="https://twitter.com/hashtag/Trending?src=hash&amp;ref_src=twsrc%5Etfw">#Trending</a> <a href="https://twitter.com/hashtag/TrendingNow?src=hash&amp;ref_src=twsrc%5Etfw">#TrendingNow</a> <a href="https://twitter.com/hashtag/India?src=hash&amp;ref_src=twsrc%5Etfw">#India</a> <a href="https://twitter.com/hashtag/Surat?src=hash&amp;ref_src=twsrc%5Etfw">#Surat</a> <a href="https://t.co/891kz7qBdG">pic.twitter.com/891kz7qBdG</a></p>&mdash; Zee 24 Kalak (@Zee24Kalak) <a href="https://twitter.com/Zee24Kalak/status/1852752530348122214?ref_src=twsrc%5Etfw">November 2, 2024</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಗೋದಿ ಮೀಡಿಯಾ OpIndia (@OpIndia_in&nbsp;) ಕೂಡ Zee 24 Kalak ಅವರ ಟ್ವೀಟ್ ಇರುವ&nbsp;<a href="https://hindi.opindia.com/national/salman-was-begging-as-hindus-in-saffron-with-his-companions-in-surat-gujarat-video-viral/" target="_blank" rel="noreferrer noopener">ವರದಿಯನ್ನು</a>&nbsp;ಪ್ರಕಟಿಸಿದೆ.&nbsp;<br>ಜೊತಗೆ ತಮ್ಮ ಅಧಿಕೃತ X ಹ್ಯಾಂಡಲ್‌ನಲ್ಲಿ ಈ ವರದಿಯ ಲಿಂಕ್ ಅನ್ನು ಪೋಸ್ಟ್ ಮಾಡಿದೆ.  “ಸಲ್ಮಾನ್ ಮತ್ತು ಅವನ ಸಹಚರರು ಕೇಸರಿ ಬಟ್ಟೆಗಳನ್ನು ಧರಿಸಿ ಭಿಕ್ಷೆ ಬೇಡುತ್ತಿದ್ದರು. ಗುರುತಿನ ಚೀಟಿಯ ಮೂಲಕ ಅವರ ನಿಜವಾದ ಗುರುತು ಬಯಲಾಗಿದೆ. ಅವರಿಗೆ ಯಾವುದೇ ಶ್ಲೋಕವನ್ನು ಪಠಿಸಲು ಅಥವಾ ಹಿಂದೂ ದೇವರು ಮತ್ತು ದೇವತೆಗಳ ಹೆಸರನ್ನು ಸರಿಯಾಗಿ ಹೇಳಲು ಸಾಧ್ಯವಾಗಲಿಲ್ಲ,&#8221; ಎಂಬ ಟೈಟಲನ್ನು ಓಪ್‌ಇಂಡಿಯಾ ತನ್ನ X ನಲ್ಲಿ ಪೋಸ್ಟ್‌ ಮಾಡಿದೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="hi" dir="ltr">भगवा वस्त्र पहन सलमान और उसके साथी भीख माँग रहे थे। आईडी कार्ड से उनकी असली पहचान सामने आई। वे न कोई श्लोक सुना सके और न ही हिंदू देवी-देवताओं का ठीक से नाम बता सके।<a href="https://twitter.com/hashtag/surat?src=hash&amp;ref_src=twsrc%5Etfw">#surat</a> <a href="https://twitter.com/hashtag/Muslims?src=hash&amp;ref_src=twsrc%5Etfw">#Muslims</a> <a href="https://t.co/RpzS60uCZ7">https://t.co/RpzS60uCZ7</a></p>&mdash; ऑपइंडिया (@OpIndia_in) <a href="https://twitter.com/OpIndia_in/status/1853248297416135101?ref_src=twsrc%5Etfw">November 4, 2024</a></blockquote><script async src="https://platform.twitter.com/widgets.js" charset="utf-8"></script>
</div><figcaption class="wp-element-caption">ಹಿಂದಿಯಲ್ಲಿ ಇರುವ ಓಪ್‌ಇಂಡಿಯಾ ವರದಿಯ ಶೀರ್ಷಿಕೆಯಲ್ಲಿ ಹೀಗೆ ಹೇಳಲಾಗಿದೆ: “ಸಂಸ್ಕೃತ ಶ್ಲೋಕಗಳನ್ನು ಕೇಳಿದಾಗ, ಅವನು ಪ್ರಾರ್ಥಿಸಲು ಪ್ರಾರಂಭಿಸಿದನು, ಅವನಿಗೆ ಒಂದೇ ಒಂದು ಹಿಂದೂ ದೇವರ ಹೆಸರನ್ನು ಹೇಳಲು ಸಾಧ್ಯವಾಯಿತು: ಸಲ್ಮಾನ್ ಮತ್ತು ಗ್ಯಾಂಗ್ ಸೂರತ್‌ನಲ್ಲಿ &#8216;ಸಾಧು&#8217;ಗಳಂತೆ ಪೋಸು ಕೊಟ್ಟು ಭಿಕ್ಷೆ ಬೇಡುತ್ತಿದ್ದರು, ಈ ರಹಸ್ಯವು ಐಡಿ ಕಾರ್ಡ್‌ ಮೂಲಕ ಬಹಿರಂಗವಾಯಿತು.&#8221; <br><br>ತನ್ನ ವರದಿಯಲ್ಲಿ ಮೂವರು ವ್ಯಕ್ತಿಗಳು &#8216;ಸಾಧುಗಳ ವೇಷ ಧರಿಸಿ ತಿರುಗಾಡುತ್ತಿದ್ದ ಮುಸ್ಲಿಮರು&#8217; ಮತ್ತು ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು OpIndia ಹೇಳಿಕೊಂಡಿದೆ. (ಆರ್ಕೈವ್ <a href="https://archive.is/ozZlY" target="_blank" rel="noreferrer noopener">1</a>,&nbsp;<a href="https://archive.is/UL0TQ" target="_blank" rel="noreferrer noopener">2</a>,&nbsp;<a href="https://archive.is/KMBET" target="_blank" rel="noreferrer noopener">3</a>)</figcaption></figure>



<p>ಮತ್ತೊಂದು ಕೂಗುಮಾರಿ ಚಾನೆಲ್ , ಸುದರ್ಶನ್ ನ್ಯೂಸ್ (@SudarshanNewsTV), ಈ ಘಟನೆಯ ಕುರಿತು ವೀಡಿಯೊ ವರದಿಯನ್ನು ಈ  ರೀತಿಯ ಶೀರ್ಷಿಕೆಯ ಜೊತೆಗೆ ಹಂಚಿಕೊಂಡಿದೆ: &#8220;ಗುಜರಾತ್‌ನ ಸೂರತ್‌ನಲ್ಲಿ, &#8216;ಜಿಹಾದಿ&#8217; ಸಲ್ಮಾನ್ ಮತ್ತು ಅವನ ಗ್ಯಾಂಗ್ ಸಾಧುಗಳಂತೆ ಪೋಸ್ ಕೊಡುತ್ತಾ ಭಿಕ್ಷೆ ಬೇಡುತ್ತಿದ್ದರು &#8230; ಕೇಸರಿ ವಸ್ತ್ರಗಳನ್ನು ಧರಿಸಿ ಸಾಧುಗಳಂತೆ ಪೋಸು ಕೊಟ್ಟ ಈ ಮೂರು &#8216;ಜಿಹಾದಿಗಳು&#8217; ಬಂಧಿಸಲಾಗಿದೆ. (&nbsp;<a href="https://archive.is/EwDAJ" target="_blank" rel="noreferrer noopener">ಆರ್ಕೈವ್</a>&nbsp;)</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="hi" dir="ltr">गुजरात के सूरत में ‘साधु’ बन भीख मांग रहा था जिहादी सलमान और उसकी गैंग&#8230;<br><br>साधू वेश में भगवा वस्त्र पहन कर घूम रहे 3 जिहादी गिरफ्तार&#8230;<a href="https://twitter.com/hashtag/Surat?src=hash&amp;ref_src=twsrc%5Etfw">#Surat</a> <a href="https://twitter.com/hashtag/Gujarat?src=hash&amp;ref_src=twsrc%5Etfw">#Gujarat</a> <a href="https://t.co/RQDu5uWvIk">pic.twitter.com/RQDu5uWvIk</a></p>&mdash; Sudarshan News (@SudarshanNewsTV) <a href="https://twitter.com/SudarshanNewsTV/status/1853383294391636450?ref_src=twsrc%5Etfw">November 4, 2024</a></blockquote><script async src="https://platform.twitter.com/widgets.js" charset="utf-8"></script>
</div><figcaption class="wp-element-caption">ಆರೆಸ್ಸೆಸ್ ಮುಖವಾಣಿ ಪಾಂಚಜನ್ಯ (@epanchjanya) ಕೂಡ ಘಟನೆಯ ಬಗ್ಗೆ ಟ್ವೀಟ್ ಮಾಡಿದ್ದಾರೆ. ಹಿಂದಿಯಲ್ಲಿರುವ ಈ ಟ್ವೀಟ್‌ನಲ್ಲಿ, “ಸಾಧುಗಳ ವೇಷದಲ್ಲಿ ಸಿಕ್ಕಿಬಿದ್ದ ಮುಸ್ಲಿಮರು! ನೀವು ಸಾಧು ಆಗಬೇಕೆಂದಿದ್ದರೆ, ಹಿಂದೂವಾಗಿ ಯಾಕೆ ಬದಲಾಗಬಾರದು? ಸಲ್ಮಾನ್ ಎಂಬ ಮುಸ್ಲಿಂ ವ್ಯಕ್ತಿ ಕೇಸರಿ ವೇಷ ಧರಿಸಿ ಸಾಧುವಿನಂತೆ ಪೋಸು ಕೊಟ್ಟು ಭಿಕ್ಷೆ ಬೇಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನವೆಂಬರ್ 3, 2024 ರಂದು ನಡೆದಿದ್ದು, ನಂತರ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಇದೇ ಮೊದಲಲ್ಲ-ಸಾಧುಗಳ ವೇಷ ಧರಿಸಿದ ಮುಸ್ಲಿಮರು ಈ ಹಿಂದೆ 16 ಬಾರಿ ಸಿಕ್ಕಿಬಿದ್ದಿದ್ದಾರೆ!” (<a href="https://archive.is/6fh1t" target="_blank" rel="noreferrer noopener">ಆರ್ಕೈವ್</a>&nbsp;)</figcaption></figure>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="hi" dir="ltr">साधु भेष में पकड़े गए मुस्लिम!<br><br>साधु ही बनना है तो हिन्दू क्यों नहीं बन जाते!<br><br>भगवा वस्त्र पहना हुआ मुस्लिम युवक सलमान, साधु के भेष में भीख माँगते हुए पकड़ा गया।<br><br>गुजरात के सूरत में 3 नवंबर, 2024 को ये घटना हुई जिसके बाद पुलिस ने उसे गिरफ्तार किया।<br><br>ऐसा पहली बार नहीं 16 बार हो… <a href="https://t.co/3knDytJfXo">pic.twitter.com/3knDytJfXo</a></p>&mdash; Panchjanya (@epanchjanya) <a href="https://twitter.com/epanchjanya/status/1853426572537000040?ref_src=twsrc%5Etfw">November 4, 2024</a></blockquote><script async src="https://platform.twitter.com/widgets.js" charset="utf-8"></script>
</div><figcaption class="wp-element-caption">ಈ ವೀಡಿಯೋ ಫೇಸ್ಬುಕ್‌, X, ವಾಟ್ಸಾಪ್‌ ಗ್ರೂಪುಗಳಲ್ಲಿ ಜನರು ಹಂಚಿಕೊಂಡಿದ್ದಾರೆ. (ನೋಡಿ: <a href="https://archive.is/gFT8p" target="_blank" rel="noreferrer noopener">&nbsp;@ajaychauhan41</a>&nbsp;,&nbsp;<br><a href="https://archive.is/XTZVV" target="_blank" rel="noreferrer noopener">@Sudanshutrivedi</a>)</figcaption></figure>



<p><strong>ಸತ್ಯ ಏನು?</strong></p>



<p>ಸತ್ಯಾನ್ವೇಷಣೆಯ ನಂತರ ಈ ಮೂವರೂ ಸಂತರು ಹಿಂದೂಗಳು ಎಂಬುದು ಕಂಡುಬಂದಿದೆ. ದೈನಿಕ್ ಭಾಸ್ಕರ್ ಗ್ರೂಪ್‌ನ ಗುಜರಾತಿ ದಿನಪತ್ರಿಕೆ ದಿವ್ಯಾ ಭಾಸ್ಕರ್ ಈ ಬಗ್ಗೆ&nbsp;<a href="https://x.com/Divya_Bhaskar/status/1853390257640898813" target="_blank" rel="noreferrer noopener">ವರದಿ</a> ಮಾಡಿದೆ. ನವೆಂಬರ್ 4 ರಂದು, ಪೊಲೀಸ್ ತನಿಖೆಯ ನಂತರ ಇವರು&nbsp;ಮೂವರೂ ಹಿಂದೂಗಳು ಮತ್ತು ಜುನಾಗಢದಿಂದ ಬಂದವರು ಎಂದು&nbsp;<a href="https://www.divyabhaskar.co.in/amp/local/gujarat/surat/news/suspicion-of-a-person-of-another-religion-masquerading-as-a-monk-133906340.html" target="_blank" rel="noreferrer noopener">ತಿಳಿದುಬಂದಿದೆ</a>&nbsp;ಎಂದು ವರದಿ ಹೇಳುತ್ತದೆ.</p>



<p>ಸೂರತ್‌ನ ಅದಾಜನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆರ್‌ಬಿ ಗೋಜಿಯಾ ಅವರು ಮೂವರು ಸನ್ಯಾಸಿಗಳನ್ನು ಅನುಮಾನಾಸ್ಪದ ವ್ಯಕ್ತಿಗಳೆಂದು ವರದಿ ಮಾಡಿದ್ದಾರೆ ಮತ್ತು ನಂತರ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು&nbsp;<a href="https://www.divyabhaskar.co.in/amp/local/gujarat/surat/news/suspicion-of-a-person-of-another-religion-masquerading-as-a-monk-133906340.html" target="_blank" rel="noreferrer noopener">ವರದಿ</a>&nbsp;ಉಲ್ಲೇಖಿಸಿದೆ.&nbsp;ವಿಚಾರಣೆಯ ನಂತರ, ಪರಿಶೀಲನೆಗಾಗಿ, ಅವರ ನಿಜವಾದ ಗುರುತನ್ನು ನಿರ್ಧರಿಸಲು ಜುನಾಗಢದಲ್ಲಿ ತನಿಖೆಯನ್ನು ಪ್ರಾರಂಭಿಸಲಾಯಿತು. ಅವರು ನೀಡಿದ ಹೆಸರುಗಳು ಸತ್ಯವಾಗಿವೆ ಎಂದು ಕಂಡುಬಂದಿದೆ. ಒಬ್ಬ ವ್ಯಕ್ತಿಯ ಹೆಸರು ಸಲ್ಮನಾಥ್ ಆಗಿದ್ದು, ಆತನನ್ನು ಸಲ್ಮಾನ್‌, ಓರ್ವ ಮುಸಲ್ಮಾನ ಎಂದು ಹಿಂದೂಗಳು ಭಾವಿಸಿ ಆತನ ಮೇಲೆಗೆ ಹಲ್ಲೆಗೆ ಮುಂದಾಗಿದ್ದಾರೆ. ಆದರೆ, ಆತ ಹಿಂದೂ ಎಂಬುದು ದೃಢಪಟ್ಟಿದೆ.</p>



<p>Alt News ಈತನ ಮತದಾರ ಚೀಟಿಯನ್ನು ವರದಿ ಮಾಡಿದ್ದು, ಈ ಚೀಟಿಯಲ್ಲಿ ಈತನ ಹೆಸರು ಹೆಸರು ಸಲ್ಮನಾಥ್ ಪರ್ಮಾರ್ ಮತ್ತು ಅವನ ತಂದೆಯ ಹೆಸರು ಸೂರಮ್ನಾಥ್ ಪರ್ಮಾರ್ ಎಂದು ಉಲ್ಲೇಖಿಸಲಾಗಿದೆ.&nbsp;<br></p>



<p>ರಜಪೂತರಲ್ಲಿ <a href="https://forebears.io/surnames/parmar#meaning" target="_blank" rel="noreferrer noopener">ಪರ್ಮಾರ್</a>&nbsp;ಎಂಬ ಉಪನಾಮವಿದೆ. ಈ ಪರ್ಮಾರರು ಹೆಚ್ಚಾಗಿ ಉತ್ತರ ಮತ್ತು ಮಧ್ಯ ಭಾರತದಿಂದ, ವಿಶೇಷವಾಗಿ ರಾಜಸ್ಥಾನ, ಗುಜರಾತ್, ಪಂಜಾಬ್, ಹರಿಯಾಣ, ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಉತ್ತರ ಮಹಾರಾಷ್ಟ್ರದಿಂದ ಬಂದವರು.</p>



<p><em>ಆದ್ದರಿಂದ ಸಾಧುವಿನ ವೇಷ</em> ಧರಿಸಿದ ಮೂವರು ಮುಸ್ಲಿಮರು ಭಿಕ್ಷೆ ಬೇಡುತ್ತಿದ್ದಾರೆ ಎಂಬುದು ಹಸಿಹಸಿ ಸುಳ್ಳು, ಭಿಕ್ಷೆ ಬೇಡುತ್ತಿದ್ದವರು ಹಿಂದೂ ಸಾಧುಗಳೇ ಆಗಿದ್ದಾರೆ.</p>



<p>ಈ ರೀತಿ ಹಿಂದೂ ಸಾಧುಗಳನ್ನು ಮುಸಲ್ಮಾನರು ಎಂದು ಕರೆದು ಕಿರುಕುಳ ನೀಡಿದ್ದು ಇದೇ ಮೊದಲೇನಲ್ಲ. <a href="https://www.altnews.in/up-meerut-sadhus-thrashed-suspicion-of-being-child-kidnappers-video-viral-with-false-muslim-angle/" target="_blank" rel="noreferrer noopener">ಈ 2024 ರ ಜುಲೈನಲ್ಲಿ</a> ಮೀರತ್‌ನಲ್ಲಿ ಮೂವರು ಸಾಧುಗಳ ಗುಂಪಿಗೆ ಮುಸ್ಲಿಮರು ಎಂಬ ಹಣೆಪಟ್ಟಿ ಕಟ್ಟಲಾಯಿತು. ಸಂಚಾರಿ ಸನ್ಯಾಸಿಗಳನ್ನು ಮಕ್ಕಳ ಅಪಹರಣಕಾರರು ಎಂದು ಸುಳ್ಳು ಆರೋಪ ಹೊರಿಸಿದ ಘಟನೆಗಳೂ ನಡೆದಿವೆ. </p>



<p></p>
]]></content:encoded>
					
		
		
			</item>
		<item>
		<title>ಒಳಮೀಸಲಾತಿ ಹೋರಾಟದ ಸೈದ್ಧಾಂತಿಕ ಬೆನ್ನೆಲುಬು ಡಾ.ಕೆ.ಬಾಲಗೋಪಾಲ್</title>
		<link>https://peepalmedia.com/dr-k-balagopal-was-the-ideological-backbone-of-the-internal-reservation-struggle/</link>
		
		<dc:creator><![CDATA[Peepal Media]]></dc:creator>
		<pubDate>Sat, 24 Aug 2024 13:10:39 +0000</pubDate>
				<category><![CDATA[ಅಂಕಣ]]></category>
		<category><![CDATA[ಸತ್ಯ ಶೋಧ]]></category>
		<category><![CDATA[Ambedkar]]></category>
		<category><![CDATA[Ambedkar odu]]></category>
		<category><![CDATA[Ambedkar Parinirvan Day]]></category>
		<category><![CDATA[Bhimrao Ramji Ambedkar]]></category>
		<category><![CDATA[Dr BR Ambedkar]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=44426</guid>

					<description><![CDATA[-ವಿ.ಎಲ್.ನರಸಿಂಹಮೂರ್ತಿ ಒಳಮೀಸಲಾತಿ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಹೊರಬಂದ ಮೇಲೆ MRPS ನೇತಾರ ಮಂದಾಕೃಷ್ಣ ಮಾದಿಗ ಹಲವರನ್ನು ಬೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ. ಮಂದಾಕೃಷ್ಣ ಮಾದಿಗ ಭೇಟಿ ಮಾಡಿದ ಹಲವರಲ್ಲಿ ಒಳಮೀಸಲಾತಿ ಹೋರಾಟಕ್ಕೆ ನಿಜವಾಗಿಯೂ ಬೆಂಬಲ ಕೊಟ್ಟವರ ಜೊತೆಗೆ ಬಿಜೆಪಿ-ಸಂಘಪರಿವಾರದ ಹಲವರೂ ಇದ್ದಾರೆ. ಇವೆಲ್ಲವೂ ಅವರ ರಾಜಕೀಯ ಲೆಕ್ಕಾಚಾರ. ಆದರೆ ಇಂದು ಮಂದಾಕೃಷ್ಣ ಅವರು ಈಗ ಭೌತಿಕವಾಗಿ ನಮ್ಮ ನಡುವೆ ಇಲ್ಲದ ಚಿಂತಕ, ಮಾನವ ಹಕ್ಕುಗಳ ಹೋರಾಟಗಾರ ಡಾ. ಕೆ. ಬಾಲಗೋಪಾಲ್ ಅವರ ಮನೆಗೆ ಭೇಟಿ ಕೊಟ್ಟು [&#8230;]]]></description>
										<content:encoded><![CDATA[
<p><strong>-ವಿ.ಎಲ್.ನರಸಿಂಹಮೂರ್ತಿ</strong></p>



<p>ಒಳಮೀಸಲಾತಿ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಹೊರಬಂದ ಮೇಲೆ MRPS ನೇತಾರ ಮಂದಾಕೃಷ್ಣ ಮಾದಿಗ ಹಲವರನ್ನು ಬೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ. ಮಂದಾಕೃಷ್ಣ ಮಾದಿಗ ಭೇಟಿ ಮಾಡಿದ ಹಲವರಲ್ಲಿ ಒಳಮೀಸಲಾತಿ ಹೋರಾಟಕ್ಕೆ ನಿಜವಾಗಿಯೂ ಬೆಂಬಲ ಕೊಟ್ಟವರ ಜೊತೆಗೆ ಬಿಜೆಪಿ-ಸಂಘಪರಿವಾರದ ಹಲವರೂ ಇದ್ದಾರೆ. ಇವೆಲ್ಲವೂ ಅವರ ರಾಜಕೀಯ ಲೆಕ್ಕಾಚಾರ.</p>



<p>ಆದರೆ ಇಂದು ಮಂದಾಕೃಷ್ಣ ಅವರು ಈಗ ಭೌತಿಕವಾಗಿ ನಮ್ಮ ನಡುವೆ ಇಲ್ಲದ ಚಿಂತಕ, ಮಾನವ ಹಕ್ಕುಗಳ ಹೋರಾಟಗಾರ ಡಾ. ಕೆ. ಬಾಲಗೋಪಾಲ್ ಅವರ ಮನೆಗೆ ಭೇಟಿ ಕೊಟ್ಟು ಕೃತಜ್ಞತೆ ಸಲ್ಲಿಸಿ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ವೈಯಕ್ತಿಕವಾಗಿ ನನಗೆ ಮಂದಾಕೃಷ್ಣ ಅವರ ಈ ನಡೆ ತುಂಬಾ ಖುಷಿ ಕೊಟ್ಟಿದೆ.</p>



<p>ಒಳಮೀಸಲಾತಿ ಹೋರಾಟ ಶುರುವಾಗಿ ಅದು ಆಂಧ್ರಪ್ರದೇಶದಲ್ಲಿ ತಾರಕಕ್ಕೆ ಹೋದಾಗ ಅದನ್ನು ಬೌದ್ಧಿಕ ವಲಯ ಅಸಂವಿಧಾನಿಕ, ದಲಿತ ಚಳುವಳಿಗೆ ಮಾರಕ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಪರಿಕಲ್ಪನೆಗೆ ವಿರುದ್ಧ ಅಂತ ಬಿಂಬಿಸುವುದಕ್ಕೆ ಪ್ರಯತ್ನಿಸಿತು. ಒಳಮೀಸಲಾತಿ ಹೋರಾಟವೇ ಅಪ್ರಸ್ತುತ ಎಂದು ವಾದಿಸಿದ ಚಿಂತಕರಲ್ಲಿ ದಲಿತೇತರರು, ದಲಿತ ಚಿಂತಕರು ಎಲ್ಲರೂ ಇದ್ದರು.</p>



<p>ದಲಿತ ಸಮುದಾಯದ ನಡುವೆ ಎದ್ದ ಪ್ರಾತಿನಿಧ್ಯದ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಎಲ್ಲರೂ ಒದ್ದಾಡುತ್ತಿದ್ದಾಗ ಡಾ. ಕೆ. ಬಾಲಗೋಪಾಲ್ EPW ಪತ್ರಿಕೆ ಅಂಕಣದಲ್ಲಿ ಒಳಮೀಸಲಾತಿ ಕುರಿತು ಬರೆದರು. ಬಾಲಗೋಪಾಲ್ ಒಳಮೀಸಲಾತಿ ಹೋರಾಟದ ಅಗತ್ಯದ ಕುರಿತು ಬರೆದ A Tangled Web: Subdivision of SC Reservations in AP(2000) ಮತ್ತು ಒಳಮೀಸಲಾತಿಯನ್ನು ಅಸಿಂಧುಗೊಳಿಸಿ ಸುಪ್ರೀಂಕೋರ್ಟ್ ನೀಡಿದ ಇ.ವಿ. ಚಿನ್ನಯ್ಯ ಕೇಸಿನ ಕುರಿತು ಬರೆದ Justice for Dalits among Dalits: All the Ghosts Resurface(2005) ಈ ಎರಡೂ ಲೇಖನಗಳು<br>ಒಳಮೀಸಲಾತಿ ಹೋರಾಟಕ್ಕೆ ಸ್ಪಷ್ಟ ಮತ್ತು ಬಲಿಷ್ಠವಾದ ಸೈದ್ಧಾಂತಿಕ ಚೌಕಟ್ಟನ್ನು ಒದಗಿಸಿದವು.<br>ಒಳಮೀಸಲಾತಿ ಹೋರಾಟ ಕೇವಲ ರಾಜಕೀಯ ಸಂಚು, ನಾಯಕತ್ವದ ಪ್ರಶ್ನೆ, ಐಡೆಂಟಿಟಿ ರಾಜಕಾರಣದ ಅಪಾಯಕಾರಿ ಬೆಳವಣಿಗೆ ಎನ್ನುವ ನೆರೇಟಿವ್‌ ಅನ್ನು ಹೊಡೆದು ಉರುಳಿಸಿದ ಬಾಲಗೋಪಾಲ್ ಚಿಂತನೆ ದಲಿತ ಮತ್ತು ದಲಿತೇತರ ಬುದ್ದಿಜೀವಿಗಳನ್ನು ಅಲುಗಾಡಿಸಿತು. ಬಾಲಗೋಪಾಲ್ ತಮ್ಮ ಓರಿಜಿನಲ್ ಅಂಬೇಡ್ಕರ್‌ವಾದಿ ಕಣ್ಣೋಟದ ಮುಖಾಂತರ ಒಳಮೀಸಲಾತಿ ಹೋರಾಟವನ್ನು ವಿಶ್ಲೇಷಿಸಿದ ನಂತರ ಅದಕ್ಕೆ ಉತ್ತರ ಕೊಡಲಾಗದೆ ಬೌದ್ಧಿಕ ವಲಯ ಮೌನಕ್ಕೆ ಶರಣಾಯಿತು.</p>



<p>ಈಗ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟ ಮೇಲೂ ಬೌದ್ಧಿಕ ವಲಯ ಮೀಸಲಾತಿ ಕುರಿತು ಮೇಲ್ಜಾತಿಯ ಚಿಂತಕರು ಕಟ್ಟಿರುವ ಮಿಥ್‌ಗಳನ್ನೇ ಮುಂದುವರೆಸಿಕೊಂಡು ಒಳಮೀಸಲಾತಿ ಜಾರಿಯಾದರೆ ದಲಿತ ಸಮುದಾಯದ ಒಗ್ಗಟ್ಟು ಮುರಿಯುತ್ತದೆ, ಪ್ರತಿಭೆಗೆ ಅವಕಾಶವಿಲ್ಲದಂತಾಗುತ್ತದೆ, ಮೀಸಲಾತಿ ಅಪ್ರಸ್ತುತವಾಗುತ್ತದೆ, ಸರಿಯಾದ ಅಂಕಿಅಂಶಗಳಿಲ್ಲದ ಕಾರಣ ಒಳಮೀಸಲಾತಿ ಜಾರಿ ಅಸಂಭವ ಎನ್ನುವ ಅಡ್ಡಗೋಡೆಯ ಮೇಲೆ ದೀಪ ಇಡುವ ಮಾದರಿಯ ಜಾಣ ನಡೆ ಅನುಸರಿಸುತ್ತಿದೆ. ದಲಿತರೊಳಗಿನ ಬಲಾಢ್ಯ ಜಾತಿಗಳ ನಾಯಕರು ಇದನ್ನು ಮುಂದುಮಾಡಿ ಒಳಮೀಸಲಾತಿ ಜಾರಿಯಾಗದಂತೆ ಪ್ರಯತ್ನಿಸುತ್ತಿರುವಾಗ ಬಾಲಗೋಪಾಲ್ ಬದುಕಿದ್ದರೆ ಇವರೆಲ್ಲರಿಗೂ ಉತ್ತರಿಸುತ್ತಿದ್ದರು.</p>



<p>ತನ್ನ ಕಾಲದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದ ಬಾಲಗೋಪಾಲ್ ತರದ ಚಿಂತಕರಿಲ್ಲದೆ ಇವತ್ತು Intellectual void ಸೃಷ್ಟಿಯಾಗಿದೆ.</p>



<p>ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಕುರಿತಂತೆ ಡಾ.ಕೆ. ಬಾಲಗೋಪಾಲ್ ಅವರ ಕಾಣ್ಕೆಯನ್ನು ನೆನಪು ಮಾಡಿಕೊಳ್ಳುವುದು ಇವತ್ತಿನ ಬಿಕ್ಕಟ್ಟಿನ ಸಮಯದಲ್ಲಿ ಹೆಚ್ಚು ಪ್ರಸ್ತುತ.</p>



<p>ಜೈ ಭೀಮ್‌ ಡಾ. ಕೆ. ಬಾಲಗೋಪಾಲ್ ಸರ್…</p>
]]></content:encoded>
					
		
		
			</item>
		<item>
		<title>ಕುಸಿಯುತ್ತಿರುವ ಶಿಕ್ಷಣದ ಗುಣಮಟ್ಟ: ಪ್ರಜಾಪ್ರಭುತ್ವದ ಬುನಾದಿಗೆ ಪೆಟ್ಟು (ಅಂಕಣ)</title>
		<link>https://peepalmedia.com/declining-quality-of-education-a-blow-to-the-foundations-of-democracy/</link>
		
		<dc:creator><![CDATA[Peepal Media]]></dc:creator>
		<pubDate>Wed, 21 Aug 2024 06:25:41 +0000</pubDate>
				<category><![CDATA[ಅಂಕಣ]]></category>
		<category><![CDATA[ಜನ-ಗಣ-ಮನ]]></category>
		<category><![CDATA[ಸತ್ಯ ಶೋಧ]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=44180</guid>

					<description><![CDATA[ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಷ ಕನ್ನಡ ಮಾತೃಭಾಷೆಯ 9ರಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಎರಡನೇ ತರಗತಿಯ ಕನ್ನಡ ಪಠ್ಯಪುಸ್ತಕವನ್ನು ಕೊಟ್ಟು ಓದಲು ಹೇಳಿದಾಗ, ಶೇ 26.5ರಷ್ಟು ಮಂದಿಗೆ ಸರಾಗವಾಗಿ ಓದಲು ಬರಲಿಲ್ಲ. ಅದೇರೀತಿ, ಶೇ 43.7ರಷ್ಟು ಮಕ್ಕಳಿಗೆ ಇಂಗ್ಲಿಷ್ ವಾಕ್ಯಗಳನ್ನು ಓದಲು ಬರಲಿಲ್ಲ. ಓದಲು ಬಂದವರಲ್ಲಿಯೂ ಶೇ 26.7ರಷ್ಟು ಮಕ್ಕಳಿಗೆ ತಾವು ಓದಿದ ವಾಕ್ಯಗಳ ಅರ್ಥ ಗೊತ್ತಿರಲಿಲ್ಲ. ಮೂರಂಕಿಯ ಸಂಖ್ಯೆಯೊಂದನ್ನು ಒಂದಂಕಿಯ ಸಂಖ್ಯೆಯಿಂದ ಭಾಗಿಸಲು ಹೇಳಿದಾಗ, ಶೇ 56.7ರಷ್ಟು ಮಕ್ಕಳು ಮಾತ್ರ ಅದನ್ನು ಮಾಡುವುದರಲ್ಲಿ ಯಶಸ್ವಿಯಾದರು. ಯಾವ ಸಾಕ್ಷರತಾ [&#8230;]]]></description>
										<content:encoded><![CDATA[
<p><strong>ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಷ</strong></p>



<p>ಕನ್ನಡ ಮಾತೃಭಾಷೆಯ 9ರಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಎರಡನೇ ತರಗತಿಯ ಕನ್ನಡ ಪಠ್ಯಪುಸ್ತಕವನ್ನು ಕೊಟ್ಟು ಓದಲು ಹೇಳಿದಾಗ, ಶೇ 26.5ರಷ್ಟು ಮಂದಿಗೆ ಸರಾಗವಾಗಿ ಓದಲು ಬರಲಿಲ್ಲ. ಅದೇರೀತಿ, ಶೇ 43.7ರಷ್ಟು ಮಕ್ಕಳಿಗೆ ಇಂಗ್ಲಿಷ್ ವಾಕ್ಯಗಳನ್ನು ಓದಲು ಬರಲಿಲ್ಲ. ಓದಲು ಬಂದವರಲ್ಲಿಯೂ ಶೇ 26.7ರಷ್ಟು ಮಕ್ಕಳಿಗೆ ತಾವು ಓದಿದ ವಾಕ್ಯಗಳ ಅರ್ಥ ಗೊತ್ತಿರಲಿಲ್ಲ. ಮೂರಂಕಿಯ ಸಂಖ್ಯೆಯೊಂದನ್ನು ಒಂದಂಕಿಯ ಸಂಖ್ಯೆಯಿಂದ ಭಾಗಿಸಲು ಹೇಳಿದಾಗ, ಶೇ 56.7ರಷ್ಟು ಮಕ್ಕಳು ಮಾತ್ರ ಅದನ್ನು ಮಾಡುವುದರಲ್ಲಿ ಯಶಸ್ವಿಯಾದರು.</p>



<p>ಯಾವ ಸಾಕ್ಷರತಾ ಕೌಶಲಗಳನ್ನು, ಹೆಚ್ಚೆಂದರೆ ಮೂರನೇ ತರಗತಿಯಲ್ಲಿ ಕಲಿತು ಮುಗಿಸಬೇಕಾಗಿತ್ತೋ ಅವು ಸುಮಾರು ಮಕ್ಕಳಲ್ಲಿ ಹತ್ತನೇ ತರಗತಿಯಲ್ಲಿಯೂ ಕಂಡುಬರಲಿಲ್ಲ.</p>



<p>ಇವು ‘ಆ್ಯನ್ಯುಯಲ್ ಸ್ಟೇಟಸ್ ಆಫ್‌ ಎಜುಕೇಷನ್ ರಿಪೋರ್ಟ್ (ಏಸರ್)- ಬಿಯಾಂಡ್ ಬೇಸಿಕ್ಸ್’ ಎಂಬ ಸಮೀಕ್ಷಾ ವರದಿಯಲ್ಲಿ ಕಂಡುಬಂದ ಅಂಕಿಅಂಶಗಳು. ಈ ಸಮೀಕ್ಷೆಯನ್ನು ಪ್ರಥಮ್ ಎಂಬ ಸ್ವಯಂಸೇವಾ ಸಂಸ್ಥೆಯು 2005ರಿಂದ ಎರಡು ವರ್ಷಗಳಿಗೊಮ್ಮೆ ನಡೆಸುತ್ತಾ ಬಂದಿದೆ. 2023ರ ಸಮೀಕ್ಷೆಯಲ್ಲಿ ಕರ್ನಾಟಕವೂ ಸೇರಿದಂತೆ ದೇಶದ 26 ರಾಜ್ಯಗಳಲ್ಲಿನ 28 ಗ್ರಾಮಾಂತರ ಜಿಲ್ಲೆಗಳ 14-18ರ ವಯೋಮಾನದ 34,745 ವಿದ್ಯಾರ್ಥಿಗಳನ್ನು ಒಳಗೊಳ್ಳಲಾಗಿದೆ.</p>



<p>ಕೇಂದ್ರ ಶಿಕ್ಷಣ ಸಚಿವಾಲಯ ನಡೆಸುವ ನ್ಯಾಷನಲ್ ಅಚೀವ್‍ಮೆಂಟ್ ಸರ್ವೆ ಮತ್ತು ಏಸರ್ ನಡೆಸುವ ಸಮೀಕ್ಷೆಯ ಕಾರ್ಯವಿಧಾನಗಳು ಸ್ವಲ್ಪಮಟ್ಟಿಗೆ ಭಿನ್ನವಾಗಿದ್ದರೂ ಗ್ರಾಮೀಣ ಭಾರತದಲ್ಲಿನ ಶೈಕ್ಷಣಿಕ ಪರಿಸ್ಥಿತಿಯ ಕುರಿತು ಆ ಸಮೀಕ್ಷೆಯೂ ಇಂಥ ಕೊರತೆಗಳನ್ನು ಎತ್ತಿತೋರಿಸುತ್ತದೆ.</p>



<p>ರಾಜ್ಯ ಶಿಕ್ಷಣ ಇಲಾಖೆಯ ಶಾಲಾ ಪಠ್ಯಪುಸ್ತಕಗಳ ಮುನ್ನುಡಿಯಲ್ಲಿ, ‘ಶಾಲಾ ಕಲಿಕೆಯನ್ನು ಜೀವನದ ಅವಶ್ಯಕತೆಗಳೊಂದಿಗೆ ಜೋಡಿಸುವುದು’, ‘ಶಿಕ್ಷಣವನ್ನು ಇಂದಿನ ಮತ್ತು ಭವಿಷ್ಯದ ಜೀವನಾವಶ್ಯಕತೆಗಳಿಗೆ ಹೊಂದುವಂತೆ ಮಾಡುವುದು’, ‘ಶಾಲೆಯ ಹೊರಗಿನ ಬದುಕಿಗೆ ಜ್ಞಾನ ಸಂಯೋಜನೆ’, ‘ಮಕ್ಕಳಿಂದಲೇ ಜ್ಞಾನವನ್ನು ಅಭಿವೃದ್ಧಿಪಡಿಸುವುದು’ ಎಂಬಂತಹ ಮಹತ್ವಾಕಾಂಕ್ಷೆಯ ಧ್ಯೇಯಗಳನ್ನು ಘೋಷಿಸಲಾಗಿದೆ. ಆದರೆ, ಇಲಾಖೆಯು ರೂಪಿಸುವ ಪಠ್ಯಪುಸ್ತಕಗಳಲ್ಲಾಗಲೀ ಬೋಧನಾ ಕ್ರಮದಲ್ಲಾಗಲೀ ಈ<br>ಉದ್ದೇಶ ಈಡೇರಿಕೆಗೆ ಅಗತ್ಯವಾದ ತಂತ್ರಗಳು ಕಾಣಿಸುವುದಿಲ್ಲ.</p>



<p>ಉಲ್ಲೇಖಿತ ಸಮೀಕ್ಷೆಯಲ್ಲಿ ಹೇಳಿರುವ ಹಾಗೆ, 9ನೇ ತರಗತಿಯ ಕಾಲುಭಾಗದಷ್ಟು ವಿದ್ಯಾರ್ಥಿಗಳಿಗೆ 2ನೇ ತರಗತಿಯ ಕನ್ನಡ ಪಾಠವನ್ನೂ ಓದಲು ಬರುವುದಿಲ್ಲ. ಇಂಥ ದುರ್ಬಲವಾದ ಭಾಷಾ ಮಾಧ್ಯಮದ ಮೂಲಕವೇ ಈ ಮಕ್ಕಳು ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಗಣಿತದ ವಿಷಯಗಳನ್ನು ಕಲಿಯುತ್ತಾರೆ, ಪಾಸೂ ಆಗುತ್ತಾರೆ ಎನ್ನುವುದು ಒಂದು ‘ಪವಾಡ’ವೇ ಸರಿ.</p>



<p>ಇನ್ನು, ಶಾಲೆಯಲ್ಲಿನ ಕಲಿಕೆ ಮುಂದಿನ ಜೀವನದಲ್ಲಿ ಪ್ರಯೋಜನಕ್ಕೆ ಬರುವ ವಿಚಾರವನ್ನು ನೋಡೋಣ. ಏಸರ್ ಸಮೀಕ್ಷೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ, ಇಷ್ಟು ಗಂಟೆಗೆ ಮಲಗಿದ ಮಗು ಇಷ್ಟು ಗಂಟೆಗೆ ಎದ್ದಿತು ಎಂದಾದರೆ, ಅದು ಒಟ್ಟು ಎಷ್ಟು ಗಂಟೆ ನಿದ್ರೆ ಮಾಡಿತು ಎಂದು ಲೆಕ್ಕಹಾಕಿ ಹೇಳಲು ಶೇ 45ರಷ್ಟು ಮಕ್ಕಳಿಗೆ ಮಾತ್ರ ಸಾಧ್ಯವಾಯಿತು. ಒಂದು ಅಳತೆಪಟ್ಟಿಯ ಮೇಲೆ ಒಂದು ವಸ್ತುವನ್ನು ‘0’ಯಿಂದ ಇರಿಸಿ, ಅದು ಎಷ್ಟು ಇಂಚು ಉದ್ದ ಇದೆ ಹೇಳಿ ಎಂದರೆ, ಶೇ 85ರಷ್ಟು ಮಕ್ಕಳು ಸರಿಯಾಗಿ ಹೇಳಿದರು. ಅದೇ ವಸ್ತುವನ್ನು ಸ್ಕೇಲಿನ ಮೇಲೆ ಬೇರೆ ಕಡೆ ಇಟ್ಟು ಕೇಳಿದಾಗ, ಶೇ 40ರಷ್ಟು ಮಕ್ಕಳು ಮಾತ್ರ ಸರಿಯಾಗಿ ಹೇಳಿದರು. ನಿರ್ಜಲೀಕರಣ ನಿವಾರಣೆಗೆ (ಡೀಹೈಡ್ರೇಷನ್‌) ಕೊಡುವ ಓಆರ್‌ಎಸ್ ಪ್ಯಾಕೆಟ್‌ನ ಮೇಲೆ, ಅದನ್ನು ಬಳಸಲು ಕೊಟ್ಟಿರುವ ಸೂಚನೆಗಳನ್ನು ಓದಲು ಹೇಳಿದಾಗ, 11ನೇ ತರಗತಿಯ ವಿದ್ಯಾರ್ಥಿ<br>ಗಳಲ್ಲಿ ಶೇ 65.1ರಷ್ಟು ಮಕ್ಕಳಿಗೆ ಮಾತ್ರ ಓದಲು ಸಾಧ್ಯವಾಯಿತು.</p>



<p>ಯಾವುದೇ ದೇಶದ ಯುವಜನ, ಲೋಕತಂತ್ರದ ಪೋಷಕರು ಮತ್ತು ಸಂರಕ್ಷಕರು. ಒಂದು ಅಂದಾಜಿನ ಪ್ರಕಾರ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸುಮಾರು 15 ಕೋಟಿ ಯುವಜನ ತಮ್ಮ ಮೊದಲ ಮತಾಧಿಕಾರವನ್ನು ಚಲಾಯಿಸಲಿದ್ದಾರೆ. ಎಲ್ಲಾ ಪಕ್ಷದವರು ತಮ್ಮ ಗೆಲುವಿಗಾಗಿ ಈ ನಾಗರಿಕ ವರ್ಗದ ಮೇಲೆ ಕಣ್ಣಿಟ್ಟಿರುತ್ತಾರೆ. ಇವರನ್ನು ಓಲೈಸಲು ಹಲವಾರು ತಂತ್ರಗಳನ್ನು ಹೂಡುತ್ತಾರೆ. ಮೇಲೆ ಉಲ್ಲೇಖಿಸಿದ ಸಮೀಕ್ಷೆಯಲ್ಲಿ ಭಾಗವಹಿಸಿದ ಯುವಜನರಲ್ಲಿ ಲಕ್ಷಾಂತರ ಮಂದಿಗೆ ಮತದ ಹಕ್ಕು ದೊರಕುತ್ತದೆ. ಮೂಲಭೂತ ಶೈಕ್ಷಣಿಕ ಕೌಶಲದ ತೀವ್ರ ಕೊರತೆ ಇರುವ ಈ ಯುವಜನ ಚುನಾವಣೆಯಲ್ಲಿ ಅದ್ಯಾವ ವಿವೇಚನೆಯಿಂದ ಭಾಗವಹಿಸಲು ಸಾಧ್ಯ? ಇಂಥ ಮತದಾರರನ್ನು ಹಲವಾರು ಆಮಿಷಗಳಿಗೆ ಬಲಿಯಾಗಿಸಿ ವೋಟನ್ನು ಗಿಟ್ಟಿಸಲು ಪ್ರತಿಯೊಬ್ಬ ಅಭ್ಯರ್ಥಿ ಹೊಂಚುಹಾಕುತ್ತಾರೆ. ಶಾಲಾ ಶಿಕ್ಷಣವೇ ಇಷ್ಟೊಂದು ಅಧೋಗತಿಯಲ್ಲಿ ಇರುವಾಗ, ಇಂಥ ದುರ್ಬಲ ಬುನಾದಿಯ ಮೇಲೆ ಕಟ್ಟಲಾಗುವ ದೇಶದ ಲೋಕತಂತ್ರವು ಇನ್ನೆಷ್ಟು ಸದೃಢವಾಗಿರಲು ಸಾಧ್ಯ?</p>



<p>ಇದೆಲ್ಲ ಗೊತ್ತಿದ್ದರೂ ಸರ್ಕಾರಗಳು ವರ್ಷದಿಂದ ವರ್ಷಕ್ಕೆ ಶಿಕ್ಷಣ ಕ್ಷೇತ್ರಕ್ಕೆ ಒದಗಿಸಬೇಕಾದ ಹೆಚ್ಚು ಹೆಚ್ಚು ಅನುದಾನ, ಮೂಲ ಸೌಕರ್ಯಗಳ ಪೂರೈಕೆ, ಶಿಕ್ಷಕರ ತರಬೇತಿ ಮತ್ತು ನೇಮಕಾತಿಯ ಕಡೆಗೆ ಗಂಭೀರವಾಗಿ ಗಮನಹರಿಸದೇ ಇರುವುದು, ಇದ್ದಷ್ಟು ಅನುದಾನವನ್ನೇ ಕಡಿತಗೊಳಿಸುವುದು ದೀರ್ಘಾ<br>ವಧಿಯಲ್ಲಿ ಅತ್ಯಂತ ಅಪಾಯಕಾರಿ.</p>
]]></content:encoded>
					
		
		
			</item>
		<item>
		<title>ʼಓಲಂಪಿಕ್‌ʼನಲ್ಲಿ ಗೋಲ್ಡ್‌ ಮೇಡಲ್‌ ಗೆದ್ದ ʼನಮೋ&#8217;! (ಕಠಾರಿಯವರ ವಿಡಂಬನಾ ಬರಹ)</title>
		<link>https://peepalmedia.com/%ca%bcnamo-winning-gold-medal-in-chaddi-olympics-satire-by-kathari/</link>
		
		<dc:creator><![CDATA[Peepal Media]]></dc:creator>
		<pubDate>Mon, 12 Aug 2024 09:46:27 +0000</pubDate>
				<category><![CDATA[ಅಂಕಣ]]></category>
		<category><![CDATA[ದೇಶ]]></category>
		<category><![CDATA[ವಿಡಂಬನೆ]]></category>
		<category><![CDATA[ಸತ್ಯ ಶೋಧ]]></category>
		<category><![CDATA[bengalure]]></category>
		<category><![CDATA[bjp]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[modi]]></category>
		<category><![CDATA[modijí]]></category>
		<category><![CDATA[Narendra modhi road show]]></category>
		<category><![CDATA[olampic]]></category>
		<category><![CDATA[olempic]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[pm]]></category>
		<category><![CDATA[pm modi]]></category>
		<category><![CDATA[pm narendra modi]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[Vinesh pogat]]></category>
		<category><![CDATA[vineshpogat]]></category>
		<category><![CDATA[writing]]></category>
		<guid isPermaLink="false">https://peepalmedia.com/?p=43704</guid>

					<description><![CDATA[ಸದಾ ಚಪ್ಪಾಳೆ, ಹೊಗಳಿಕೆಯನ್ನು ಆನಂದಿಸುತ್ತ ಆತ್ಮರತಿಯಲ್ಲಿ ಸುಖಿಸುವ ಸಾಮ್ರಾಟ ನಮೋಗೆ ಬಹುಮತವಿಲ್ಲದ ಅಧಿಕಾರ ಹಿಡಿದಂದಿನಿಂದ ಖಿನ್ನತೆ ಆವರಿಸಿತ್ತು. ವಿಜ್ಞಾನ, ಗಣಿತ ಜ್ಞಾನವನ್ನೆಲ್ಲ ಅರೆದು ಕುಡಿದವನಂತೆ ಬೂಸಿ ಬಿಟ್ಟರೂ ಲೈಕ್ ಒತ್ತಿ, ಫಾರ್ವಡ್ ಮಾಡಿ ಹಾಡಿ ಹೊಗಳುತ್ತಿದ್ದ ಭಕ್ತರೇ ಹಾದಿಬೀದಿಯಲ್ಲಿ ನಿಂತು ಫೇಕು ಮಾಸ್ಟರ್, ಕಿಂಗ್ ಆಫ್ ಕರಪ್ಷನ್ ಎಂದು ಮುಖಕ್ಕೆ ಮಂಗಳಾರತಿ ಎತ್ತುತ್ತಿರುವ ರೀಲ್ಸ್ ಗಳು ನಮೋವನ್ನು ಕಂಗೆಡಿಸಿತ್ತು. ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮಗಳನ್ನು ಮಾಡಿ ಲೈಮ್ ಲೈಟಿನಲ್ಲಿರೋಣವೆಂದರೆ – ತಾನೇ ಉದ್ಘಾಟಿಸಿದ, ಪಾರ್ಟಿಯ ಖಜಾನೆ ತುಂಬಿಸಿದ ಏರ್ [&#8230;]]]></description>
										<content:encoded><![CDATA[
<p>ಸದಾ ಚಪ್ಪಾಳೆ, ಹೊಗಳಿಕೆಯನ್ನು ಆನಂದಿಸುತ್ತ ಆತ್ಮರತಿಯಲ್ಲಿ ಸುಖಿಸುವ ಸಾಮ್ರಾಟ ನಮೋಗೆ ಬಹುಮತವಿಲ್ಲದ ಅಧಿಕಾರ ಹಿಡಿದಂದಿನಿಂದ ಖಿನ್ನತೆ ಆವರಿಸಿತ್ತು. ವಿಜ್ಞಾನ, ಗಣಿತ ಜ್ಞಾನವನ್ನೆಲ್ಲ ಅರೆದು ಕುಡಿದವನಂತೆ ಬೂಸಿ ಬಿಟ್ಟರೂ ಲೈಕ್ ಒತ್ತಿ, ಫಾರ್ವಡ್ ಮಾಡಿ ಹಾಡಿ ಹೊಗಳುತ್ತಿದ್ದ ಭಕ್ತರೇ ಹಾದಿಬೀದಿಯಲ್ಲಿ ನಿಂತು ಫೇಕು ಮಾಸ್ಟರ್, ಕಿಂಗ್ ಆಫ್ ಕರಪ್ಷನ್ ಎಂದು ಮುಖಕ್ಕೆ ಮಂಗಳಾರತಿ ಎತ್ತುತ್ತಿರುವ ರೀಲ್ಸ್ ಗಳು ನಮೋವನ್ನು ಕಂಗೆಡಿಸಿತ್ತು.</p>



<p>ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮಗಳನ್ನು ಮಾಡಿ ಲೈಮ್ ಲೈಟಿನಲ್ಲಿರೋಣವೆಂದರೆ – ತಾನೇ ಉದ್ಘಾಟಿಸಿದ, ಪಾರ್ಟಿಯ ಖಜಾನೆ ತುಂಬಿಸಿದ ಏರ್ ಪೋರ್ಟಿನ ಚಾವಣಿಗಳು ಆಕಾಶಕ್ಕೆ ಹಾರಿ ಹೋಗುತ್ತಿದ್ದರೆ, ಹೈವೇಗಳು ಒಂದೇ ಮಳೆಗೆ ಬಿರುಕು ಬಿಟ್ಟು ಬಾಯ್ತೆರೆದಿದ್ದವು. ಒಂದು ವರ್ಷವೂ ತುಂಬಿರದ ಹೊಸ, ನಿರ್ಮಾಣ ಹಂತದ ಸೇತುವೆಗಳು ಸ್ಪರ್ಧೆಗೆ ಬಿದ್ದಂತೆ ಸಾಲುಸಾಲಾಗಿ ಧರೆಗುರುಳುತ್ತಿದ್ದವು. ಇನ್ನು ಪರೀಕ್ಷೆ ಹೊತ್ತಲ್ಲಿ ವಿದ್ಯಾರ್ಥಿಗಳನ್ನು ಗುಡ್ಡೆ ಹಾಕಿ ʼಎಕ್ಸಾಮ್ ಪೇ ಚರ್ಚಾʼ ಮಾಡಿ ಪುಕ್ಕಟೆ ಸಲಹೆ ಕೊಡೋಣವೆಂದರೆ ಪ್ರಶ್ನೆಪತ್ರಿಕೆಗಳು ಸೋರಿ ಹೋಗಿ ವಿದ್ಯಾರ್ಥಿಗಳು ರೊಚ್ಚಿಗೆದ್ದು ಬೀದೀಲಿ ಗಲಾಟೆ ಮಾಡುತ್ತಿದ್ದರು. ಮನೆಯಿಂದ ಹೊರ ಹೋಗುವ ಹಾಗೆ ಇರಲಿಲ್ಲ.</p>



<p>ರೂಮಲ್ಲೇ ಕೂತು &#8211; ಕಾಂತಿಯಿಂದ ಹೊಳೆಯುತ್ತಿದ್ದ ಮುಖಾರವಿಂದವು ಕಪ್ಪುಗಟ್ಟಿ, ಕನ್ನಡಿಯಲ್ಲಿನ ಪ್ರತಿಬಿಂಬ ನಮೋನನ್ನು ʼಗೆದ್ದು ಸೋತ ಸಾಮ್ರಾಟʼ ಎಂದು ಅಣಕಿಸುತ್ತಿತ್ತು. ಕಾರಿನಲ್ಲಿ ಮುಂದೆ ಆಸೀನವಾದರೆ ಪ್ರಭಾವಳಿಯಾಗಿದ್ದ ಚಾವಣಿ ಲೈಟನ್ನು ತೆಗೆಸಿ, ಜನರಿಗೆ ಹ್ಯಾಪು ಮೋರೆ ತೋರಿಸಲಾಗದೆ ಹಿಂಬದಿಗೆ ಕೂರುವ ದುರ್ದೆಶೆಯನ್ನು ಶಪಿಸುವುದು ಬಿಟ್ಟು ನಮೋಗೆ ಬೇರೆ ಪರಿಹಾರ ಕಾಣಲಿಲ್ಲ.</p>



<p>ಮನೆಯಲ್ಲೇ ಕೂತರೆ ಹುಚ್ಚು ಹಿಡಿಯುತ್ತದೆಂದು ಫಾರಿನ್ ಟೂರ್ ಹೊರಟರೆ ಅಲ್ಲೂ ನಿರಾಶೆ. ಏರ್ ಪೋರ್ಟಲ್ಲಿ ಸ್ವಾಗತ ಕೋರಲು ವಿದೇಶದಲ್ಲಿ ಗಣ್ಯರು ನಾಪತ್ತೆ. ಇನ್ನು ಸ್ವದೇಶಕ್ಕೆ ಮರಳಿದರೆ ತನ್ನ ಪಾರ್ಟಿಯ ಕಮಲಿಗಳೇ ಬೊಕ್ಕೆ ಹಿಡಿದು ನಿಲ್ಲಲು ಅಸಡ್ಡೆ ತೋರಿ ನೊಣ ಹೊಡೆಯುವುದಕ್ಕೂ ಯಾರೂ ಇರುತ್ತಿರಲಿಲ್ಲ.</p>



<p>ಯಾವುದಾದರೂ ಸನ್ನಿವೇಶವನ್ನು ಸೃಷ್ಟಿಸಿ ನಂದಿ ಹೋಗಿದ್ದ ಲೈಮ್ ಲೈಟನ್ನು ಹೇಗೆ ಹೊತ್ತಿಸುವುದೆಂಬ ದೇಶೋದ್ಧಾರದ ಚಿಂತನೆಯಲ್ಲಿ ಮುಳುಗಿದ್ದ ನಮೋಗೆ ಯಾರೋ ಕೂಗಿದಂತಾಯಿತು. “ವಿಶ್ವಗುರು ಚಿರಾಯುವಾಗಲಿ” ಎಂದು ಮುಖ್ಯ ಆಪ್ತಕಾರ್ಯದರ್ಶಿ ಸಂಘೀ ಸಲಾಮು ಮಾಡುತ್ತ ಎದುರಿಗೆ ನಿಂತಿದ್ದ.</p>



<p>“ಮಹಾಸ್ವಾಮಿಗಳೇ…ತಮಗೆ ಸಂತೋಷ ಸುದ್ದಿ. ಲೈಮ್ ಲೈಟಿಗೆ ಮತ್ತೆ ಬರಲು ಸುವರ್ಣಾವಕಾಶ!”</p>



<p>ತನ್ನ ಮನದ ತಳಮಳ ತಿಳಿದದ್ದು ಹೇಗೆ ಎಂದು ಅಚ್ಚರಿಗೊಂಡರೂ “ಲೈಮ್ ಲೈಟಲ್ಲಿ ಇರೋದೆ ನಂಗೆ ಕೆಲ್ಸನಾ? ಜನರೋದ್ಧಾರದ ವಿಚಾರಗಳು ಇಲ್ವಾ? ಅಧಿಕಪ್ರಸಂಗಿ…ಸರಿ…ಏನದು ಸಮಾಚಾರ?” ಎಂದು ಹುಸಿ ಕೋಪ ಪ್ರದರ್ಶಿಸಿದ.</p>



<p>“ಸ್ವಾಮಿಗಳೇ…ಒಲಂಪಿಕ್ ಗೇಮ್ಸ್ ಶೂಟಿಂಗಲ್ಲಿ ನಮಗೆ ಬ್ರಾಂಜ್ ಮೆಡಲ್ ಬಂದಿದೆ!”</p>



<p>“ಓಹ್…ಹೌದಾ! ಒಳ್ಳೆಯ ಸುದ್ದಿ ತಂದಿದ್ದೀಯ. ಇಷ್ಟು ವರ್ಷ ನಾನು ಕಷ್ಟಪಟ್ಟಿದ್ದಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ತಗೋ…” ಎಂದು ಕುತ್ತಿಗೆಯಲ್ಲಿದ್ದ ಕಂಠೀಹಾರವನ್ನು ಅವನತ್ತ ಒಗೆದು “ಬೇಗ ಕ್ಯಾಮೆರಾಮೆನ್ನ ಕರೆಸು. ಹಾಗೆ ಆ ಸ್ಪರ್ಧಿಗೆ ಫೋನು ಮಾಡು”</p>



<p>“ಹಲೋ…”</p>



<p>“ಹಲೋ…ಯಾರು?”</p>



<p>“ನಾನಮ್ಮ…ವಿಶ್ವಗುರು…ಭರತಖಂಡದಿಂದ”</p>



<p>“ಹ!…ಖಂಡ?…ಯಾವ ಆಶ್ರಮಕ್ಕೂ ನಾನು ಭಕ್ತೆಯಾಗಿಲ್ಲ….ರಾಂಗ್ ನಂಬರ್”</p>



<p>ಆ ಕಡೆಯಿಂದ ಫೋನ್ ಕಟ್ ಮಾಡಿದ್ದು ನಮೋಗೆ ಕಪಾಳಮೋಕ್ಷ ಆದಂತಾಯಿತು.</p>



<p>“ಮೇಡಮ್…ಪ್ರಧಾನಿ ನಮೋ ಮಾತಾಡ್ತಿರೋದು. ನಿಮ್ಗೆ ಕಂಗ್ರಾಟ್ಸ್ ಹೇಳೋಕೆ” ಮತ್ತೆ ಆಪ್ತಕಾರ್ಯದರ್ಶಿ ಕರೆ ಮಾಡಿದ.</p>



<p>“ಓಹ್…ಸಾರಿ ಸರ್, ಗೊತ್ತಾಗ್ಲಿಲ್ಲ. ಥ್ಯಾಂಕ್ಯು ಸರ್”</p>



<p>“ಪರವಾಗಿಲ್ಲ. ಶೂಟಿಂಗ್ ಅಂದ್ರೆ…ರೀಲ್ಸ… ಶಾರ್ಟ್ ಫಿಲ್ಮಾ ಅಥ್ವಾ ಫೂಚರ್ ಫಿಲ್ಮಾ?”</p>



<p>“ಇಲ್ಲಾ ಸಾರ್…ಅದು ಪಿಸ್ತೂಲ್ ಶೂಟಿಂಗ್….ಟೆನ್ ಮೀಟರ್ ರೇಂಜು”</p>



<p>“ಗನ್ ಶೂಟಿಂಗಾ…ಒಳ್ಳೇದು. ನಮ್ಮ ದೇಶಕ್ಕೆ ಮೆಡಲ್ ತಂದು ವರ್ಲ್ಡ್ ಫೇಮಸ್ ಮಾಡಿದ್ದೀಯ…ಬದಾಯಿ”</p>



<p>“ಥ್ಯಾಂಕ್ಯು ವೆರಿ ಮಚ್…ಸರ್”</p>



<p>“ಬೇಟಿ ಪಡಾವ್…ಬೇಟಿ ಬಚಾವ್…ನನ್ನ ಸ್ಲೋಗನ್ ಸಾರ್ಥಕ ಆಯ್ತು ನೋಡು, ವೆಲ್ ಡನ್…ಹ…ಒಂದ್ ವಿಷ್ಯ ನಿಂಗೆ ಗೊತ್ತಾ? ನಾನೂ ಒಲಂಪಿಕ್ಸ್ ನಲ್ಲಿ ಗೋಲ್ಡ್ ಮೆಡಲ್ ವಿನ್ನರ್!”</p>



<p>“ಗ್ರೇಟ್ ಸರ್…ಗೊತ್ತೇ ಇರಲಿಲ್ಲ!”</p>



<p>“ಹಳೇ ಮಾತು…ಯಂಗ್ ಆಗಿದ್ದಾಗ, ನನ್ನ ಪೂರ್ವಾಶ್ರಮ ಮಾ.ಕೃಪಾಕಟಾಕ್ಷ ಕುಟೀರದ ಅಂತರರಾಷ್ಟ್ರೀಯ ಚಡ್ಡಿ ಒಲಂಪಿಕ್ಸ್ ಕ್ರೀಡಾಸ್ಪರ್ಧೆಯಲ್ಲಿ ನಮ್ಮ ತಾಲ್ಲೂಕಿಗೆ ನಾನೇ ಮೂರು ಬಾರಿ ಗೋಲ್ಡ್ ಮೆಡಲ್ ಗೆದ್ದಿದ್ದೆ”</p>



<p>“ಸೂಪರ್…ಯಾವ ಗೇಮಲ್ಲಿ ಸರ್”</p>



<p>“ಬಹಳ ಟಫ್ ಗೇಮ್…ಹಳಿ ಇಲ್ಲದೆ ಬುಲೆಟ್ ಟ್ರೈನ್ ಬಿಡೋದು…”</p>



<p>ಬುರುಡೆ ಬಿಡುತ್ತಿದ್ದ ನಮೋನ ನಾನ್ ಸ್ಟಾಪ್ ಮಾತಿಗೆ ಆ ತುದಿಯಿಂದ ಪ್ರತಿಕ್ರಿಯೆ ಬರುವುದು ನಿಂತಾಗ, ಸಾಕಷ್ಟು ರೀಲು ಸುತ್ತಿಕೊಂಡ ಡೈರೆಕ್ಟರ್ ಕೊನೆಗೆ ʼಕಟ್…ಕಟ್ʼ ಎಂದಾಗಲೇ ನಮೋ ಮಾತು ನಿಲ್ಲಿಸಿದ.</p>



<p>ಬದಾಯಿ ಹೇಳಿದ ನಮೋನ ರೀಲ್ಸ್ ಸಿಕ್ಕಿದ್ದೇ ತಡ ವೈರಲ್ ಮಾಡಲು ಅಮಿತ ಮನೆಹಾಳ, ರಾಗಾನ ಸಂಸತ್ತು ಭಾಷಣ ನೋಡುವುದರಲ್ಲಿ ಮಗ್ನರಾಗಿದ್ದ ಕೇಸರಿ ಐಟಿ ಸೆಲ್ಲಿನ ಟು ರುಪೀಸ್ ಕೂಲಿಗಳನ್ನು ಕೆಲಸಕ್ಕೆ ಹಚ್ಚಿದ.</p>



<p>ಕನ್ನಡಿ ಮುಂದೆ ನಿಂತಾಗ ಮೈಮೇಲೆ ಮಂದ ಬೆಳಕು ಚೆಲ್ಲಿದ್ದನ್ನು ಕಂಡು ಮುಖವರಳಿಸಿ ʼಬ್ಯಾಕ್ ಟು ಲೈಮ್ ಲೈಟುʼ ಎಂದು ನಮೋ ಗಡ್ಡ ನೀವಿಕೊಳ್ಳುವ ಹೊತ್ತಿಗೆ, ಆಪ್ತಕಾರ್ಯದರ್ಶಿ “ಸ್ವಾಮಿಗಳೇ…. ಮತ್ತೊಂದು ಶುಭ ಸಮಾಚಾರ. ಕುಸ್ತಿಯಲ್ಲಿ ಗೋಲ್ಡ್ ಮೆಡಲ್ ಮಿಸ್ಸಾದರೆ….ಸಿಲ್ವರ್ ಮೆಡಲ್ ಅಂತೂ ಗ್ಯಾರಂಟಿ” ಅಂದ.</p>



<p>“ಕುಸ್ತಿ!” ಶಬ್ಧ ಕಿವಿಗೆ ಬಿದ್ದದ್ದೇ ಅರಳಿದ ನಮೋ ಮುಖ ಕಿವುಚಿದ ಹುಣಸೇ ಹಣ್ಣಾಯಿತು. ಕೈ ಸನ್ನೆ ಮಾಡಿ ಹೊರಡು ಎಂದದ್ದು ಆಪ್ತಕಾರ್ಯದರ್ಶಿಗೆ ʼತೊಲಗಾಚೆ!ʼ ಎನ್ನುವಂತಿತ್ತು.</p>



<p>ತನ್ನ ಬಲಗೈಬಂಟ, ಕುಖ್ಯಾತ ಕಚ್ಚೆಹರುಕ &#8211; ತ್ಯಾಜ್ಯ ಅವಲಕ್ಷಣ್ ವಿರುದ್ಧ ಮಹಿಳಾ ಲೈಂಗಿಕ ಶೋಷಣೆ ಆರೋಪ ಮಾಡಿದ್ದೇ ಅಲ್ಲದೇ ರಾಜಧಾನಿಯ ಮೈನ್ ರೋಡಲ್ಲಿ ಟೆಂಟಾಕಿ “ರೇಪಿಸ್ಟ್ ಅನ್ನು ಫೆಡರೇಷನ್ ನಿಂದ ಹೊರ ಹಾಕಿ, ಬೇಟಿ ಬಚಾವ್ ಮಾತನ್ನು ಉಳಿಸಿಕೊಳ್ಳಿ. ಇಲ್ಲಾ ಒಲಂಪಿಕ್ಸ್ ನಲ್ಲಿ ಗೆದ್ದು ನಿಮ್ಮ ಹಿಪಾಕ್ರಸಿಯನ್ನು, ದುರಹಂಕಾರವನ್ನು ಸೋಲಿಸಿಯೇ ಸೋಲಿಸುತ್ತೇನೆ” ಎಂದು ತನಗೆ ಸವಾಲು ಹಾಕಿದ ಮಹಿಳಾ ಪೈಲ್ವಾನರ ಪ್ರತಿಭಟನೆ ನಮೋನ ಕಣ್ಮುಂದೆ ಹಾದು ಹೋಗಿ, ದೇಹ ಬೆಂಕಿಯಾಗಿ, ಉರಿ ಅಸಹನೀಯವಾಯಿತು.</p>



<p>“ನನ್ನನ್ನು ಬೆದರಿಸುವಷ್ಟು ಧೈರ್ಯದ ವೈರಿಗೆ ಪದಕ ಸನ್ಮಾನವೇ? ಅದನ್ನು ತಡೆಯುವುದು ಹೇಗೆ? ಇಲ್ಲಿಯೇ ಆಗಿದ್ದರೆ ಕುತಂತ್ರಿಗೆ ಹೇಳಿ ಇಡಿ, ಐಟಿ, ಸಿಬಿಐಯನ್ನು ಛೂ ಬಿಡಬಹುದಿತ್ತು. ಆ ದೇಶದ ಪ್ರಧಾನಿಗೆ ಹೇಳಿದರೆ ಹೇಗೆ?” ಮುಷ್ಟಿ ಹಿಡಿದು ಯೋಚಿಸುತ್ತ ನಮೋ ಶತಪಥ ಹಾಕಿದ.</p>



<p>ಓಡೋಡಿ ಬಂದ ಆಪ್ತಕಾರ್ಯದರ್ಶಿ “ಘಾತವಾಯಿತು ಮಹಾಸ್ವಾಮಿ…ಪೈಲ್ವಾನ್ ತೂಕ ನೂರೇ ಗ್ರಾಮ್ ಹೆಚ್ಚಾಗಿ ಅವಳನ್ನು ಡಿಸ್ ಕ್ವಾಲಿಫೈ ಮಾಡಿದ್ದಾರೆ!” ಎಂದಾಗ, ನಮೋಗೆ ಕುಣಿಯಬೇಕು ಅನ್ನಿಸಿದರೂ “ಅಯ್ಯೋ…ಎಂಥಾ ದುರ್ವಿಧಿ. ಅದೆಂಥ ರೂಲ್ಸುಗಳು! ಹೋಗಲಿ…ನಾವೇನು ಮಾಡುವಂತಿಲ್ಲ. ಒಂದು ಚೊಂಬು ತಣ್ಣಗಿನ ಹಾಲು ತಗೊಂಬಾ. ಹೊಟ್ಟೆಗೆ ಬೆಂಕಿ ಬಿದ್ದಿದೆ” ಎಂದು, ಹಾಲು ಕುಡಿದು ದೇಹದ ತಾಪಮಾನ ಇಳಿಸಿಕೊಂಡ.</p>



<p>“ಮಗಳೇ…ನೀನು ಚಾಂಪಿಯನ್ನರ ಚಾಂಪಿಯನ್, ನಮ್ಮ ದೇಶದ ಹೆಮ್ಮೆ. ಪದಕ ಕೈತಪ್ಪಿದ್ದಕ್ಕಾಗಿ ನಿನಗಿಂತ ನನಗೆ ಎಷ್ಟು ನೋವಾಗಿದೆ ಎಂದರೆ ಅದನ್ನು ಪದಗಳಲ್ಲಿ ಬರೆಯಲಾಗುತ್ತಿಲ್ಲ. ಧೃತಿಗೆಡಬೇಡ…ನಾವೆಲ್ಲ ನಿನ್ನೊಂದಿಗಿದ್ದೇವೆ” ಎಂದು ತೋರಿಕೆ ಸಂದೇಶ ಹಾಕಿ, ಅತ್ತ ಕ್ರೀಡಾ ಮಂತ್ರಿ ಅಮಾನುಷ್ ಮಂಡೂಕನಿಗೆ ಪೈಲ್ವಾನಳಿಗೆ ವ್ಯಯಿಸಿದ ಖರ್ಚುವೆಚ್ಚವನ್ನು ಪ್ರಕಟಿಸಲು ಚಿತಾವಣೆ ಮಾಡಿದ.</p>



<p>ಪೊಲೀಸರಿಂದ ರಸ್ತೆಲೀ ದರದರ ಎಳೆದಾಡಿಸಿಕೊಂಡು ಅವಮಾನಕ್ಕೆ ಈಡಾಗಿದ್ದ ಕುಸ್ತಿಪಟುವಿನ ಪ್ರತಿಭಟನೆ ಮರೆಯದ ದೇಶದ ವಿವೇಕವಂತರು &#8211; ಗೆದ್ದಾಗ ಎಲ್ಲಾ ಸ್ಪರ್ಧಿಗಳಿಗೆ ಅಭಿನಂದಿಸುವಂತೆ ಕುಸ್ತಿಪಟುವಿಗೆ ಶುಭಾಶಯ ಹೇಳದೆ, ಅನರ್ಹಗೊಂಡಾಗ ಲೇವಡಿಸುವಂತೆ ಹಾಕಿದ ಮೊಸಳೆ ಕಣ್ಣೀರಿನ ಸಂದೇಶಕ್ಕೆ ನಮೋನ ಮೇಲೆ ಆಕ್ರೋಶಗೊಂಡರು. ಕ್ಷುಲ್ಲಕ ಕಾರಣಕ್ಕೆ ಪದಕ ಕೈತಪ್ಪಿದ್ದಕ್ಕಾಗಿ ಇಡೀ ದೇಶವೇ ನಿರಾಶಭಾವ ಹೊಂದಿರುವಾಗ, ಪೈಲ್ವಾನಳಿಗೆ ಸರ್ಕಾರ ವ್ಯಯಿಸಿದ್ದ ಹಣದ ಉಲ್ಲೇಖ ಮಾಡಿದ್ದು ನಮೋನ ಸೇಡಿನ ಕ್ರಮವೆಂದು ಖಂಡಿಸಿದರು.</p>



<p>“ಈ ನಮೋ ಒಬ್ಬ ಹೇಡಿ. ಅಸೂಕ್ಷ, ಕಿಡಿಗೇಡಿ. ಶೋಷಣೆಯ ವಿರುದ್ಧ ಸಿಡಿದೆದ್ದ ಕುಸ್ತಿಪಟುವಿಗೆ ಖರ್ಚು ಮಾಡಿರುವುದು ಜನರ ತೆರಿಗೆ ಹಣ. ಅದನ್ನು ಪ್ರಕಟಿಸಿದರೆ – ದಿನಕ್ಕೆ ಇಪ್ಪತ್ತು ಬಟ್ಟೆ ಬದಲಿಸಿ ಶೋಕಿ ಮಾಡುತ್ತ, ವಿಮಾನದಲ್ಲಿ ಫಾರಿನ್ ಸುತ್ತಿ ಮಜಾ ಮಾಡುವ ಖರ್ಚನ್ನು ಜನರ ಮುಂದಿಡಲಿ” ಎಂದು ಪ್ರಜ್ಞಾವಂತರು ನಮೋವನ್ನು ಛೇಡಿಸಿದರು.</p>



<p>ಮೂರು ಬಿಟ್ಟ ನಮೋಗೆ ಅದು ತಾಕುವುದೇ? ಉತ್ತರ ಸಿಗದೆ ಉಳಿವ ಪ್ರಶ್ನೆ.</p>



<p>ಚಂದ್ರಪ್ರಭ ಕಠಾರಿ<br>cpkatari@yahoo.com</p>
]]></content:encoded>
					
		
		
			</item>
		<item>
		<title>ಪಲ್ಟುಕುಮಾರ, ತೆಲುಗು ಬಾಬು ಹೊತ್ತ ಪಲ್ಲಕ್ಕಿಯಲ್ಲಿ ಅತಂತ್ರ ನಮೋ 3.0</title>
		<link>https://peepalmedia.com/atantari-namo-3-0-in-palanquin-carried-by-paltukumar-telugu-babu/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 09 Aug 2024 05:00:12 +0000</pubDate>
				<category><![CDATA[ಅಂಕಣ]]></category>
		<category><![CDATA[ಜನ-ಗಣ-ಮನ]]></category>
		<category><![CDATA[ದೇಶ]]></category>
		<category><![CDATA[ರಾಜಕೀಯ]]></category>
		<category><![CDATA[ವಿಡಂಬನೆ]]></category>
		<category><![CDATA[ಸತ್ಯ ಶೋಧ]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=43597</guid>

					<description><![CDATA[ಮೂರನೇ ಬಾರಿ ಪಟ್ಟಾಭಿಷಕ್ತನಾದ ಸಾಮ್ರಾಟ ನಮೋ, ಪಲ್ಲಕ್ಕಿಯಲ್ಲಿ ವಿರಾಜಮಾನನಾಗಿ ಮೆರವಣಿಗೆ ಹೊರಟಾಗ ಎಂದಿನ ಆತ್ಮವಿಶ್ವಾಸ ಇರಲಿಲ್ಲ. ಪಲ್ಲಕ್ಕಿ ಹೊತ್ತವರು ಯಾವ ಹೊತ್ತಿಗೆ ಹೆಗಲು ಸರಿಸಿ ನೆಲಕ್ಕೆ ಬೀಳಿಸಿ ಓಡುವರೋ ಎಂದು ಆಗಾಗ್ಗೆ ಪರದೆ ಸರಿಸಿ ಹೊರಗಡೆ ಇಣುಕು ಹಾಕುತ್ತಿದ್ದ. ಹೊರಗಡೆಯ ದೃಶ್ಯ ಅವನನ್ನು ಖಿನ್ನತೆಗೆ ತಳ್ಳುವಂತಿತ್ತು. ರಾಜಬೀದಿಯ ಎರಡೂ ಬದಿಯಲ್ಲಿ ಕಿಕ್ಕಿರಿದು ನಿಂತು ಜೈಕಾರ ಹಾಕಿ ಹೂಮಳೆಗೆರೆಯುತ್ತಿದ್ದ ಭಕ್ತಗಣ ಕರಗಿ ಹೋಗಿ, ಹತಾಶೆ ಆವರಿಸಿ ಪಲ್ಲಕ್ಕಿಯಾಚೆ ಮತ್ತೆ ತಲೆ ಹಾಕುವ ಧೈರ್ಯ ಮಾಡಲಿಲ್ಲ. ಮೆರವಣಿಗೆ ಮುಂದೆ ಸರಿದಂತೆ [&#8230;]]]></description>
										<content:encoded><![CDATA[
<p>ಮೂರನೇ ಬಾರಿ ಪಟ್ಟಾಭಿಷಕ್ತನಾದ ಸಾಮ್ರಾಟ ನಮೋ, ಪಲ್ಲಕ್ಕಿಯಲ್ಲಿ ವಿರಾಜಮಾನನಾಗಿ ಮೆರವಣಿಗೆ ಹೊರಟಾಗ ಎಂದಿನ ಆತ್ಮವಿಶ್ವಾಸ ಇರಲಿಲ್ಲ. ಪಲ್ಲಕ್ಕಿ ಹೊತ್ತವರು ಯಾವ ಹೊತ್ತಿಗೆ ಹೆಗಲು ಸರಿಸಿ ನೆಲಕ್ಕೆ ಬೀಳಿಸಿ ಓಡುವರೋ ಎಂದು ಆಗಾಗ್ಗೆ ಪರದೆ ಸರಿಸಿ ಹೊರಗಡೆ ಇಣುಕು ಹಾಕುತ್ತಿದ್ದ. ಹೊರಗಡೆಯ ದೃಶ್ಯ ಅವನನ್ನು ಖಿನ್ನತೆಗೆ ತಳ್ಳುವಂತಿತ್ತು. ರಾಜಬೀದಿಯ ಎರಡೂ ಬದಿಯಲ್ಲಿ ಕಿಕ್ಕಿರಿದು ನಿಂತು ಜೈಕಾರ ಹಾಕಿ ಹೂಮಳೆಗೆರೆಯುತ್ತಿದ್ದ ಭಕ್ತಗಣ ಕರಗಿ ಹೋಗಿ, ಹತಾಶೆ ಆವರಿಸಿ ಪಲ್ಲಕ್ಕಿಯಾಚೆ ಮತ್ತೆ ತಲೆ ಹಾಕುವ ಧೈರ್ಯ ಮಾಡಲಿಲ್ಲ. ಮೆರವಣಿಗೆ ಮುಂದೆ ಸರಿದಂತೆ ನೆರೆದಿದ್ದ ಕೆಲವೇ ಮಂದಿ ʼಹೋʼ ಎಂದು ಕೂಗಿದ ಶಬ್ಧ ಕೇಳಿಸಿತು. ನಂತರ, ರಾಜಭಟರು ʼಯಾರದು ಪಲ್ಲಕ್ಕಿ ಮೇಲೆ ಚಪ್ಪಲಿ ಎಸೆದದ್ದು?ʼ ಎಂದು ಅಬ್ಬರಿಸುವುದು ಕೇಳಿಸಿ ನಮೋ ಬೆವತು ಹೋದ.</p>



<p>ಕಳೆದ ಹತ್ತು ವರುಷಗಳಲ್ಲಿ ಮತಾಂಧತೆಯ ವಿಷ ಬೀಜ ಬಿತ್ತಿ ಜನರ ನಡುವೆ ಗೋಡೆಗಳನ್ನು ಕಟ್ಟಿ, ಸುಳ್ಳು ಹೊಸೆಯುವ ಐಟಿ ಸೆಲ್ ಕಾರ್ಖಾನೆಯಿಂದ ಭಕ್ತಗಣಗಳನ್ನು ಸೃಷ್ಟಿಸಿ, ದಂಗೆ ಎದ್ದ ಸಾಮಂತರಾಜರನ್ನು ಜೈಲಿಗೆ ಅಟ್ಟಿ, ದಿನನಿತ್ಯ ತರಾವರಿ ದಿರಿಸು ಧರಿಸಿ ಫೋಟೊ ಸೆಷೆನ್ನಿನಲ್ಲಿ ಮಜವಾಗಿದ್ದ ಸಾಮ್ರಾಟ ನಮೋನ ಸಿಂಹಾಸನದ ಬುಡ ಕಳೆದ ಕೆಲವೇ ತಿಂಗಳಲ್ಲಿ ಅಲುಗಾಡಿ ಹೋಗಿತ್ತು. ಪ್ರಜಾತಂತ್ರವನ್ನು ಹೊಸಕಿ ಹಾಕಲು ಸಾಧ್ಯವಾಗದೆ ಚುನಾವಣೆಯನ್ನು ಎದುರಿಸಲೇ ಬೇಕಾಗಿ ಬಂದ ಸನ್ನಿವೇಶವನ್ನು ಜೀರ್ಣಿಸಿಕೊಳ್ಳುವುದು ಕಷ್ಟಸಾಧ್ಯವಾಗಿತ್ತು.</p>



<p>ಸುದ್ದಿಭಟರು ದೇಶದೆಲ್ಲೆಡೆ ಜನರ ಅಭಿಪ್ರಾಯವನ್ನು ಸಂಗ್ರಹಿಸಿ, ಅರಮನೆಗೆ ವರ್ತಮಾನವನ್ನು ತಂದು ಸುರಿಯುತ್ತಿದ್ದರು. ಒಂದೊಂದು ದಿಕ್ಕಿನಿಂದ ಬರುತ್ತಿದ್ದ ಪ್ರತಿಯೊಂದು ಜನರ ಮಾತುಗಳು, ಸಾಮ್ರಾಟ ನೆಚ್ಚಿದಂತೆ ಅವನನ್ನು ಹಾಡಿ ಹೊಗಳದೆ, ಬೈಗುಳಗಳ ಮೂಟೆಯನ್ನೇ ಹೊತ್ತು ಬರುತ್ತಿದ್ದವು.</p>



<p>“ಬಡತನವನ್ನು ಅಣಗಿಸುವ ಇವನ್ಯಾವ ದರವೇಶಿ ಸಾಮ್ರಾಟ, ಮೂವತ್ತು ವರ್ಷ ಭಿಕ್ಷೆ ಬೇಡಿ ಬದುಕಿದವನಂತೆ! ಸಿಂಹಾಸನ ಏರಿದವನೇ ಸೂಟುಬೂಟು ಹಾಕ್ಕೊಂಡು ಮೆರೀತ್ತಿದ್ದಾನೆ. ಹಸಿದ ಬಡವರ ಹೊಟ್ಟೆಗೆ ಬರೆ ಹಾಕುವ ಅವನನ್ನು ಮೊದಲು ಅರಮನೆಯಿಂದ ಹೊರ ಹಾಕಿ!”</p>



<p>“ಕಾಳಧನಿಕರನ್ನು ಬಲಿಯಾಕಿ, ತಲೆಗೆ ಹದಿನೈದು ಲಕ್ಷ ವರಹ ಕೊಡುತ್ತೇನೆಂದು ಬೊಗಳೆ ಹೊಡೆಯುತ್ತಿದ್ದವನು ಈಗ ಕಳ್ಳ ವ್ಯಾಪಾರಿಗಳಿಗೆ ಬಂದರು, ರಸ್ತೆ, ರೈಲು ಎಲ್ಲವನ್ನೂ ಮಾರುತ್ತ, ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾನೆ. ಸಾಮಾನ್ಯ ಜನರ ತೆರಿಗೆ ಹೆಚ್ಚಿಸಿ, ಶ್ರೀಮಂತರ ಸಾಲ ಮನ್ನಾ ಮಾಡುತ್ತಿರುವ ಜನದ್ರೋಹಿ…ಈ ಸಾಮ್ರಾಟ…”</p>



<p>“ವರ್ಷಕ್ಕೆ ಎರಡು ಕೋಟಿ ಉದ್ಯೋಗ ಎಂದವನ ಮನೆಹಾಳಾಗಲಿ…ಕಣ್ಣಿಗೆ ಎಣ್ಣೆಬಿಟ್ಟುಕೊಂಡು ಹಗಲುರಾತ್ರಿ ಕಷ್ಟಪಟ್ಟು ಓದಿದರೆ ಪ್ರಶ್ನೆಪತ್ರಿಕೆಗಳು ಸಿರಿವಂತ ಮಕ್ಕಳಿಗೆ ಬಿಕರಿಯಾಗಿ ಪರೀಕ್ಷೆ ರದ್ದಾಗುತ್ತಿವೆ. ಯುವಕರಿಗೆ ಕೆಲಸವಿಲ್ಲ. ಕೇಳಿದರೆ ಪುಟ್ ಪಾತಿನಲ್ಲಿ ತಳ್ಳುಗಾಡಿಯಲ್ಲಿ ಬೊಂಡಬಜ್ಜಿ ಮಾರಿ, ಹಣ ಮಾಡಿ ಅನ್ನುತ್ತಿದ್ದಾನೆ…ಕಿರಾತಕ”</p>



<p>ಹೀಗೆ ಯುವಕರು, ಮಹಿಳೆಯರು, ಬಡವರು, ಸಮಾಜದ ಅಂಚಿಗೆ ತಳ್ಳಿದ ಅವಕಾಶ ವಂಚಿತ ದುರ್ಬಲರು – ಎಲ್ಲರ ಹೊಟ್ಟೆಯ ಸಿಟ್ಟು ಮಾತಿಗೆ ಬಂದು ಕೆಂಡ ಕಾರುತ್ತಿದ್ದವು. ಆ ಆಕ್ರೋಶ, ನೋವಿನ ಮಾತುಗಳ ಸುರಿಮಳೆಯಲ್ಲಿ ನಮೋ ಭಕ್ತರ ಉಧೋ ಉಧೋ ಭಜನೆಯು ಮಂಕಾಗಿ ಹೋಗಿತ್ತು.</p>



<p>ಮನುವಿಕೃತಿ ಸಿದ್ಧಾಂತವನ್ನು ಆರಾಧಿಸುವ, ಬೂಟ್ ನೆಕ್ಕಿಂಗ್ ಕುಖ್ಯಾತಿಯ ಸಾರಿವರ್ಕರ್ ಮನೋಧೋರಣೆಗೆ ಒಗ್ಗದ ಪ್ರಜಾಪ್ರಭುತ್ವ…ಸ್ವಾತಂತ್ರ್ಯ …ಸಮಾನತೆ…ಸೋದರತೆಗಳನ್ನು ಕಾಪಾಡುವ ಸಂವಿಧಾನವನ್ನು ಎತ್ತಂಗಡಿ ಮಾಡಲು ಹರಸಾಹಸ ಪಟ್ಟು ಸಾಧ್ಯವಾಗದೆ, ಆಳಕ್ಕೆ ಬೇರು ಬಿಟ್ಟ ಅದರ ಬುಡಕ್ಕೆ ಕೇಸರಿ ಗೆದ್ದಲುಗಳನ್ನು ಬಿಟ್ಟು, ಐವತ್ತಾರು ಇಂಚಿನೆದೆಯನ್ನು ತಟ್ಟುತ್ತ “ ಏಕ್ ಅಖೇಲ ಸಬ್ ಪಾರ್ ಬಾರಿ” ಎಂದು ಸಾಮ್ರಾಟ ನಮೋ ಹೂಂಕರಿಸುತ್ತಲ್ಲಿದ್ದ.</p>



<p>ದೇಶದಲ್ಲಿ ಚುನಾವಣೆಗಳನ್ನೇ ರದ್ದು ಮಾಡಿ ತಾನೇ ಏಕಾಧಿಪತ್ಯ ಸ್ಥಾಪಿಸಬೇಕೆಂದು ಒಂದು ದಿನ ನಿಶ್ಚಯಿಸಿದ್ದ ಕೂಡ. ಆದರೆ, ಚಡ್ಡಿಗೆಳೆಯ ಅಪರಿಮಿತ ಕುತಂತ್ರಿ “ಮಹಾಸ್ವಾಮಿಗಳು ಮನ್ನಿಸಬೇಕು. ಸಂವಿಧಾನಕ್ಕೆ ಕೇಸರಿ ಗೆದ್ದಲುಗಳನ್ನು ಈಗಷ್ಟೇ ಬಿಟ್ಟಿದ್ದೇವೆ. ಬುಡವನ್ನು ತಿನ್ನಲು ಸಮಯ ಕೊಡಬೇಕು. ಆಗ ಸಂವಿಧಾನ ತಾನಾಗೇ ಉರುಳಿ ಬೀಳುತ್ತದೆ. ಅಲ್ಲದೆ ತಮ್ಮ ಭಕ್ತಗಣಗಳ ಸಂಖ್ಯೆ ಸಾಕಷ್ಟಿಲ್ಲ. ಕಾಲ ಪಕ್ವವಾಗದೆ ಸಂವಿಧಾನಕ್ಕೆ ಕೈ ಹಾಕಿದರೆ ಜನ ದಂಗೆ ಎದ್ದಾರು! ಹೇಗೂ ಚುನಾವಣಾ ಪ್ರಧಾನರನ್ನಾಗಿ ನಮ್ಮ ಮಾ.ಕೃ.ಕುಟೀರ – ಪೂರ್ವಾಶ್ರಮದ ಚಡ್ಡಿ ಬಂಧುಗಳನ್ನೇ ನೇಮಿಸಿದ್ದೀರ. ಮತಗಳನ್ನು ಎಗರಿಸುವುದರಲ್ಲಿ ಅವರು ಮಹಾ ನಿಪುಣರು. ಅಂಥದ್ದರಲ್ಲಿ ಹಿಂಜರಿಕೆ ಯಾಕೆ? ಧೈರ್ಯದಿಂದ ಜನರ ಅಭಿಪ್ರಾಯ ಕೇಳಿ. ಅಯಾಗಾತೊ ನಮೋ ಸಾಮ್ರಾಟ್ ಹೇ” ಎಂದು ಅಪರಿಮಿತ ಕುತಂತ್ರಿ ಗಹಿಗಹಿಸಿ ನಕ್ಕ.</p>



<p>ʼಜನರಿಂದ ದಂಗೆಯೇ!ʼ ಕುತಂತ್ರಿಯ ವಿನೋದದ ಮಾತಿಗೆ ನಖಶಿಖಾಂತ ಉರಿ ಹತ್ತಿಸಿಕೊಂಡ ಸಾಮ್ರಾಟ ನಮೋನ ಕೆಕ್ಕರಿಸಿದ ನೋಟಕ್ಕೆ ಕುತಂತ್ರಿ ಹೆದರಿ ಬಾಯಿಗೆ ಬೀಗ ಜಡಿದ. “ಪದೇ ಪದೇ ಜನರಲ್ಲಿ ಮತಭಿಕ್ಷೆ ಮಾಡಿ ಸಾಕಾಗಿದೆ. ಇನ್ನೆಷ್ಟು ವರ್ಷ ಬೀದಿ, ಗಲ್ಲಿಗಳಲ್ಲಿ ರೋಡ್ ಶೊ ಮಾಡ್ತಾ ಜನರನ್ನು ಎಂಟರ್ ಟೈನ್ ಮಾಡ್ಬೇಕು? ಸಾಧ್ಯವಿಲ್ಲ…ಈ ಬಾರಿ ಸಂವಿಧಾನ ಖತಮ್ ಮಾಡ್ಲೇ ಬೇಕು. ಅದಕ್ಕೆ ಫೋರ್ ಟ್ವೆಂಟಿಗಳ ಸೀಟು ಬೇಕೇ ಬೇಕು” ಎಂದು ಹಲ್ಲು ಕಡಿದು “ಅಬ್ ಕಿ ಬಾರ್ 420 ಪಾರ್” ಎಂದು ಜೋರಾಗಿ ಕೂಗಿದ. ಅದು ದೇಶದೆಲ್ಲೆಡೆ ಪ್ರತಿಧ್ವನಿಸಿ – ಚಡ್ಡಿ ಕೊಡವಿ ಕೊಂಡು ಎದ್ದ ಕೇಸರಿಗ್ಯಾಂಗ್ ಕಾರ್ಯಕರ್ತರು, ಕಮಲೀ ಮಂತ್ರಿಗಳು, ಸಾಮಂತರು “ಸಂವಿಧಾನ ಖತಮ್ ಮಾಡಿ…ಸನಾತನ ಧರ್ಮ ಕಾಪಾಡಿ” ಎಂದು ಬೊಬ್ಬೆ ಹೊಡೆಯಲು ಪ್ರಾರಂಭಿಸಿದರು.</p>



<p>ಸಾಮ್ರಾಟ ನಮೋ ಮತ್ತವನ ಕೇಸರಿಗ್ಯಾಂಗ್ ನ ಅಂತಿಮ ಗುರಿಯನ್ನು ಮೊದಲೇ ಅರಿತಿದ್ದ ನಮೋ ವಿರೋಧಿಗಳು “ಸಂವಿಧಾನ ಉಳಿಸಿ …ದೇಶವನ್ನು ಕಾಪಾಡಿ” ಎಂದು ದೇಶಾದ್ಯಂತ ಬಿರುಸು ಪ್ರಚಾರ ಮಾಡಿದರು. ಬಡವರು, ದೀನದಲಿತರು, ಕಾರ್ಮಿಕರು, ಯುವಕರು, ಮಹಿಳೆಯರು – ಈ ಮೊದಲು ನಮೋವನ್ನು ದೇವರ ಅವತಾರ ಎಂದು ನಂಬಿ, ಭಜಿಸುತ್ತಿದ್ದವರು ಈಗ ಸಾಮ್ರಾಟನ ವಿರುದ್ಧ ತಿರುಗಿ ಬಿದ್ದರು. ಜನರ ಆಕ್ರೋಶ ಸಾಮ್ರಾಟನಿಗೆ ಅನಿರೀಕ್ಷಿತವಾಗಿತ್ತು. ಅದು ಹೆಚ್ಚಾದರೆ ಸಿಂಹಾಸನ ಕೈ ತಪ್ಪಿದಂತೆ! ಎಡವಟ್ಟಾಯಿತು ಎಂದು ಪರಿತಪಿಸಿದ ನಮೋ, ಸುಳ್ಳು ಟಂಕಿಸುವ ಕೇಸರಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮನೆಹಾಳನನ್ನು ಕರೆಸಿ ಸಲಹೆ ಕೇಳಿದ.</p>



<p>“ಮಹಾಸ್ವಾಮಿಗಳಿಗಿಂತ ನಮಗೇನು ತಿಳಿದಿದೆ! ದಶಕದಿಂದ ನಾವು ಜಪಿಸುತ್ತ ಬಂದ ಮಂದಿರ್, ಮಸ್ಜಿದ್ ಮಂತ್ರವನ್ನೇ ಸ್ವಲ್ಪ ಬದಲಾಯಿಸಿ ಹೇಳಿದರಾಯಿತು. ಜನರು ಸಂಪ್ರೀತರಾಗಿ ತಮ್ಮ ಪಾದಕ್ಕೆ ಎರಗುತ್ತಾರೆ” ಎಂದು ʼಮʼ ಅಕ್ಷರದ ಕೇಸರಿ ಪಂಚಾಕ್ಷರಿ ಮಂತ್ರವನ್ನು ಕಿವಿಯಲ್ಲಿ ಉಸುರಿದ.</p>



<p>ಕಾಲಿಗೆ ಚಕ್ರ ಕಟ್ಟಿಕೊಂಡ ಸಾಮ್ರಾಟ್ ನಮೋ “ಮೊಗಲ್, ಮುಸ್ಲಿಮ್, ಮಟನ್, ಮಚ್ಲಿ, ಮಂಗಲ್ ಸೂತ್ರ” ಎಂದು ಮನೆಹಾಳನ ಪಂಚಾಕ್ಷರಿ ಮಂತ್ರವನ್ನು ಜಪಿಸುತ್ತ ದೇಶಾದ್ಯಂತ ಸಂಚರಿಸಿದ. ಆದರೆ &#8211; ಬೆಲೆ ಏರಿಕೆ, ನಿರುದ್ಯೋಗ, ಧರ್ಮಾಂಧತೆಯಿಂದ ತತ್ತರಿಸಿದ್ದ ದೇಶವಾಸಿಗಳು, ಅದಕ್ಕೆ ಪರಿಹಾರ ಹೇಳದ ಸಾಮ್ರಾಟನ ವಿರುದ್ಧ ಮತ್ತಷ್ಟು ರೊಚ್ಚಿಗೆದ್ದರು. ಜನಾಭಿಪ್ರಾಯದ ಚುನಾವಣೆಲೀ ʼಬಡವರ ದ್ರೋಹಿ ಸಾಮ್ರಾಟ ನಮೋ ನಮಗೆ ಬೇಡʼ ಎಂದು ತೀರ್ಪಿತ್ತರು. ಆದರೆ, ಚಡ್ಡಿ ಚುನಾವಣಾಪ್ರಧಾನರು ಗೋಲ್ ಮಾಲ್ ಮಾಡಿ ಮತಗಳನ್ನು ಎಗರಿಸಿದ್ದರಿಂದ ನಮೋ ಸಿಂಹಾಸನದಲ್ಲೇ ಉಳಿದ.</p>



<p>ಪಟ್ಟಾಭಿಷೇಕವಾಗಿ ಮೆರವಣಿಗೆ ಸಾಗಿದಾಗ ಸಾಮಂತರಾದ ತೆಲುಗುಬಾಬು ಮತ್ತು ಪಲ್ಟುಕುಮಾರ ಪಲ್ಲಕ್ಕಿಗೆ ಹೆಗಲು ಕೊಟ್ಟರು. ಆದರೆ, ಯಾವ ಹೊತ್ತಿಗಾದರೂ ಪಲ್ಲಕ್ಕಿಯನ್ನು ಬೀಳಿಸಿ ಓಡುವ ಪ್ರವೃತ್ತಿಯ ಅವರಿಬ್ಬರಲ್ಲಿ, ವಿಧಿ ಇಲ್ಲದೆ ವಿಶ್ವಾಸ ಇಡುವ ದುರ್ಗತಿ ಬಂದದ್ದಕ್ಕಾಗಿ ನಮೋ ಪರಿತಪಿಸಿದ.</p>



<p>ಚಂದ್ರಪ್ರಭ ಕಠಾರಿ<br>cpkatari@yahoo.com</p>
]]></content:encoded>
					
		
		
			</item>
		<item>
		<title>ವಿನೇಶ್‌ ಪೋಗಟ್‌: ಈ ದಿಟ್ಟ ಹುಡುಗಿಯನ್ನು ಭಾರತದ ಬೀದಿಗಳಲ್ಲಿ ಅಕ್ಷರಶಃ ಎಳೆದಾಡಲಾಗಿತ್ತು!</title>
		<link>https://peepalmedia.com/vinesh-pogat-this-bold-girl-was-literally-dragged-on-the-streets-of-india/</link>
		
		<dc:creator><![CDATA[Hanumanth Halageri]]></dc:creator>
		<pubDate>Wed, 07 Aug 2024 08:30:40 +0000</pubDate>
				<category><![CDATA[ಅಂಕಣ]]></category>
		<category><![CDATA[ಆಟೋಟ]]></category>
		<category><![CDATA[ಜನ-ಗಣ-ಮನ]]></category>
		<category><![CDATA[ಸತ್ಯ ಶೋಧ]]></category>
		<category><![CDATA[bengalure]]></category>
		<category><![CDATA[Brij bhushan]]></category>
		<category><![CDATA[india]]></category>
		<category><![CDATA[Indian Olympic Association]]></category>
		<category><![CDATA[indiansports]]></category>
		<category><![CDATA[International Olympic Committee]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[modi]]></category>
		<category><![CDATA[news]]></category>
		<category><![CDATA[Olympic]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[sprots]]></category>
		<category><![CDATA[Vinesh pogat]]></category>
		<category><![CDATA[vineshpogat]]></category>
		<category><![CDATA[writing]]></category>
		<guid isPermaLink="false">https://peepalmedia.com/?p=43464</guid>

					<description><![CDATA[ “ನನ್ನ ಸಹ ಆಟಗಾರ್ತಿಯರ, ನನ್ನ ಗೆಳತಿಯರ ಮೇಲೆ ಕೆಲವು ತಿಂಗಳ  ಹಿಂದೆಯಷ್ಟೇ ನಮ್ಮವರಿಂದಲೇ ಲೈಂಗಿಕ ದೌರ್ಜನ್ಯ  ನಡಿತಲ್ಲ,  ಆಗ ಆದ ಅವಮಾನದ ಕೆಂಡ ಇನ್ನೂ ನನ್ನ ಎದೆಯಲ್ಲಿ ಹಾಗೆ ಉರಿಯುತ್ತಿದೆ. ಆಗ ನನಗೆ ಅನಿಸಿದ್ದು ಗೆಲುವೊಂದೆ ಇದಕ್ಕೆಲ್ಲ ಉತ್ತರ. ನಾನು ಒಲಂಪಿಕ್‌ನಲ್ಲಿ ಗೆಲುವು ದಾಖಲಿಸುವ ಮೂಲಕ ನಾವು ಮಹಿಳಾ ಕುಸ್ತಿ ಪಟುಗಳು ಅಂದ್ರೆ ಎಂಥ ತಾಕತ್ತು ಅನ್ನುವುದನ್ನುತೋರಿಸ್ತಿನಿ ನೋಡ್ತಿರಿ” ಎಂದಿದ್ದಳು ಈ ಹುಡುಗಿ ವಿನೇಶ್‌ ಪೊಗಟ್.‌ &#160;ಹೀಗಂತ ಟಿವಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಟೋಕಿಯೋದಲ್ಲಿ ಒಲಂಪಿಕ್‌ನಲ್ಲಿ ಕಂಚು ಗೆದ್ದು &#160;ತಂದಿರುವ [&#8230;]]]></description>
										<content:encoded><![CDATA[
<ul class="wp-block-list">
<li><strong>ಹನುಮಂತ ಹಾಲಿಗೇರಿ</strong> </li>
</ul>



<p> “ನನ್ನ ಸಹ ಆಟಗಾರ್ತಿಯರ, ನನ್ನ ಗೆಳತಿಯರ ಮೇಲೆ ಕೆಲವು ತಿಂಗಳ  ಹಿಂದೆಯಷ್ಟೇ ನಮ್ಮವರಿಂದಲೇ ಲೈಂಗಿಕ ದೌರ್ಜನ್ಯ  ನಡಿತಲ್ಲ,  ಆಗ ಆದ ಅವಮಾನದ ಕೆಂಡ ಇನ್ನೂ ನನ್ನ ಎದೆಯಲ್ಲಿ ಹಾಗೆ ಉರಿಯುತ್ತಿದೆ. ಆಗ ನನಗೆ ಅನಿಸಿದ್ದು ಗೆಲುವೊಂದೆ ಇದಕ್ಕೆಲ್ಲ ಉತ್ತರ. ನಾನು ಒಲಂಪಿಕ್‌ನಲ್ಲಿ ಗೆಲುವು ದಾಖಲಿಸುವ ಮೂಲಕ ನಾವು ಮಹಿಳಾ ಕುಸ್ತಿ ಪಟುಗಳು ಅಂದ್ರೆ ಎಂಥ ತಾಕತ್ತು ಅನ್ನುವುದನ್ನುತೋರಿಸ್ತಿನಿ ನೋಡ್ತಿರಿ” ಎಂದಿದ್ದಳು ಈ ಹುಡುಗಿ ವಿನೇಶ್‌ ಪೊಗಟ್.‌</p>



<p>&nbsp;ಹೀಗಂತ ಟಿವಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಟೋಕಿಯೋದಲ್ಲಿ ಒಲಂಪಿಕ್‌ನಲ್ಲಿ ಕಂಚು ಗೆದ್ದು &nbsp;ತಂದಿರುವ ಹೆಮ್ಮೆಯ ಕ್ರೀಡಾಪಟು ಭಜರಂಗ್‌ ಪೋನಿಯಾ. ಅಂಥ ದಿಟ್ಟ ಹುಡುಗಿಯ ಚಿನ್ನದ ಕನಸು ಈಗ ಭಗ್ನಗೊಂಡಿದೆ. ಈ ನೆಲದ ಮಗಳು ಚಿನ್ನ ತಂದೆ ತರುತ್ತಾಳೆ ಎಂದು ಕಾಯ್ತು ಕುಳಿತಿದ್ದ ಭಾರತೀಯರೆಲ್ಲರಿಗೂ ಸಹ ಈಗ ನಿರಾಶೆ ಮಡುವುಗಟ್ಟಿದೆ. ಕೇವಲ ತೂಕದಲ್ಲಿ 100 ಗ್ರಾಮ ವ್ಯತ್ಯಾಸವಾಯಿತೆಂಬ ಕ್ಷುಲ್ಲಕ ಕಾರಣಕ್ಕೆ ವಿನೇಶ್‌ ಪೊಗಟ್‌ ಅವರನ್ನು ಆಟದಿಂದ ಹೊರಗಿಟ್ಟಿರುವುದನ್ನು ಅನ್ಯಾಯ ಏನ್ನಬೇಕೋ, ವಿಧಿ ವಿಪರ್ಯಾಸವೆನ್ನಬೇಕೋ ಗೊತ್ತಾಗುತ್ತಿಲ್ಲ.</p>



<p>ಇತ್ತೀಚೆಗಷ್ಟೇ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಭಾರತೀಯ ಕುಸ್ತಿ ಸಂಸ್ಥೆ ವಿರುದ್ಧದ ದಿಲ್ಲಿಯ ಜಂತರ್‌ ಮಂತರ್‌ನಲ್ಲಿ ಮಹಿಳಾ ಕುಸ್ತಿಪಟುಗಳು ವಾರಗಟ್ಟಲೇ ಪ್ರತಿಭಟನೆ ನಡೆಸಿದ್ದರು. ಆಗ &nbsp;ಯಥಾಪ್ರಕಾರ ನಮ್ಮ ದೇಶದ ಕ್ಷುಲ್ಲಕ ರಾಜಕಾರಣಿಗಳ ಕುಮ್ಮಕ್ಕಿನಿಂದಾಗಿ ಪೊಲೀಸರು ಈ ವಿನೇಶ್‌ ಪೋಗಟ್‌ಪ್ರತಿಭಟನಾ ನಿರತ ಕ್ರೀಡಾಪಟುಗಳನ್ನು ದರದರನೆ ಎಳೆದೊಯ್ದಿದ್ದರು. ಆದರೆ, ಆಗ ಅವರ ಬೆಂಬಲಕ್ಕೆ ಯಾವ ಸರ್ಕಾರವೂ ಬರಲಿಲ್ಲ. ಕುಸ್ತಿ ಸಂಸ್ಥೆಯ ಅಧ್ಯಕ್ಷ ಮತ್ತು ಸಂಸದ ಬೃಜ್‌ ಭೂಷಣ್‌ ಶರಣ್‌ ಸಿಂಗ್‌ ತಮ್ಮ ಅಧಿಕಾರ ಬಳಸಿ ಕುಸ್ತಿಪಟುಗಳ ಧರಣಿಯನ್ನು ಬಲವಂತವಾಗಿ ಅಂತ್ಯಗೊಳಿಸಿದ್ದರು. ನ್ಯಾಯ ಸಿಗದೇ ಇದ್ದ ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆದ್ದ ಪದಕಗಳನ್ನೇ ಕುಸ್ತಿಪಟುಗಳು ನದಿಗೆ ಬಿಸಾಡಿದ್ದ ಹೀನಾಯ ಘಟನೆಗೆ ಅಂದು ದೆಹಲಿ ಸಾಕ್ಷಿಯಾಗಿತ್ತು.</p>



<p>ಆ ಪ್ರತಿಭಟನೆಯ ಸಂದರ್ಭದಲ್ಲಿ ಒಳಗೊಳಗೆ ಉರಿಯುತ್ತ ಕುಳಿತಿದ್ದ ವಿನೇಶ್‌ಗೆ ಅಂದೇ ನಮ್ಮಗಳ ಗೆಲುವೊಂದೆ ಇದಕ್ಕೆಲ್ಲ ಉತ್ತರ. ನಾನು ಗೆದ್ದು ತೋರಿಸುತ್ತೇನೆ. ಇವರ ದೌರ್ಜನ್ಯಕ್ಕೆ ಅದೇ ನನ್ನ ಉತ್ತರ ಎಂದು ಸಂಕಲ್ಪ ಮಾಡಿದ್ದರು. ಆ ಮೂಲಕ ಅವರು, ದೌರ್ಜನ್ಯದ ವಿರುದ್ಧ ಹೋರಾಟ ನಡೆಸಲು ವಿಭಿನ್ನ ಮಾರ್ಗ ತುಳಿಯಲು ಹಟ ತೊಟ್ಟಿದ್ದರು.</p>



<p>ವಿಶ್ವಚಾಂಪಿಯನ್‌ ಆಗಲು ಹೊರಟಿರುವ ಈ ಹುಡುಗಿಯನ್ನು ಅವಳ ದೇಶದಲ್ಲಿ ಕಾಲಿನಿಂದ ಒದೆಯಲಾಗಿತ್ತು, ಈ ಹುಡುಗಿಯನ್ನು ತನ್ನ ದೇಶದ ಬೀದಿಗಳಲ್ಲಿ ಎಳೆದಾಡಲಾಗಿತ್ತು. ಈ ಹುಡುಗಿ ಈಗ ಜಗತ್ತನ್ನು ಗೆಲ್ಲಲು ಹೊರಟಿದ್ದಾಳೆ. ಆದರೆ ಈ ದೇಶದ ವ್ಯವಸ್ಥೆ ವಿರುದ್ಧ ಹೋರಾಡಿ ಆಕೆ ಸೋತಿದ್ದಳು.&#8221; ಎಂದು ವಿನೇಶ್‌ ಫೋಗಾಟ್‌ ಅವರ ಭಾವ ಕೂಡ ಆಗಿರುವ ಬಜರಂಗ್ ಪುನಿಯಾ ಟ್ವೀಟ್‌ ಮಾಡಿದ್ದಾರೆ.  ಅಷ್ಟೇ ಅಲ್ಲದೇ ಇಎಸ್‌ಪಿಎನ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಬಜರಂಗ್ ಪುನಿಯಾ, ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ವಿನೇಶ್‌ ಫೋಗಾಟ್‌ ಭಾರತೀಯ ಯುವ ಮಹಿಳಾ ಕುಸ್ತಿಪಟುಗಳ ಭವಿಷ್ಯ ಸಲುವಾಗಿ ಪದಕ ಗೆಲ್ಲಲು ಹೊರಟಿದ್ದಾರೆ ಎಂದು ಹೇಳಿದ್ದಾರೆ.</p>



<p>&#8220;ನಾನು ಕುಸ್ತಿಪಟುಗಳ ಭವಿಷ್ಯ ಸಲುವಾಗಿ ಹೋರಾಡುತ್ತಿದ್ದೇನೆ. ಇದು ನನಗೋಸ್ಕರ ಅಲ್ಲ. ನನ್ನ ವೃತ್ತಿಬದುಕು ಮುಗಿದಿದೆ. ಇದು ನನ್ನ ಕೊನೆಯ ಒಲಿಂಪಿಕ್ಸ್‌. ನಾನು ಯುವ ಮಹಿಳಾ ಕುಸ್ತಿಪಟುಗಳ ಸಲುವಾಗಿ ಹೋರಾಡಬೇಕು. ದೇಶದಲ್ಲಿ ಯುವ ಮಹಿಳಾ ಕುಸ್ತಿಪಟುಗಳು ಯಾವುದೇ ಭಯ ಅಂಜಿಕೆ ಇಲ್ಲದೆ ಬಂದು ಕುಸ್ತಿ ಅಖಾಡದಲ್ಲಿ ಸುರಕ್ಷಿತವಾಗಿ ಹೋರಾಡುವಂತ್ತಾಗಬೇಕು. ಈ ಉದ್ದೇಶ ಸಲುವಾಗಿಯೇ ನಾನು ಜಂತರ್‌ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆ. ಈಗ ಇಲ್ಲಿದ್ದೇನೆ ಎಂದು ವಿನೇಶ್ ನನ್ನ ಬಳಿ ಹೇಳಿದ್ದರು,&#8221; ಎಂದು ಬಜರಂಗ್ ಪೂನಿಯಾ ಇಎಸ್‌ಪಿಎನ್‌ಗೆ ತಿಳಿಸಿದ್ದಾರೆ.</p>



<p>&nbsp;ವಿನೇಶ್‌ ಅವರ ಹಟ ಇನ್ನೇನು ಫಲಪ್ರದವಾಗುವುದರಲ್ಲಿತ್ತು. ಆ ಕ್ಷಣಕ್ಕಾಗಿ ಇಡೀ ಭಾರತ ಕಾಯ್ದು ಕುಳಿತಿತ್ತು. &nbsp;ನಿನ್ನೆಯಷ್ಟೆ ಸೆಮಿಫೈನಲ್‌ನಲ್ಲಿ ವಿಜಯ ಸಾಧಿಸಿ ಐತಿಹಾಸಿಕ &nbsp;ಬೆಳ್ಳಿ ಪದಕ ಖಾತರಿಪಡಿಸಿದ್ದ ವಿನೇಶ್‌ ಇವತ್ತು ಬೆಳಗ್ಗೆ ಮಾಡಿಕೊಂಡ ಸಣ್ಣ ಎಡವಟ್ಟಿನಿಂದ ಚಿನ್ನದ ಪದಕವನ್ನು ಜಸ್ಟ್‌ ಮಿಸ್‌ ಮಾಡಿಕೊಂಡಿರುವುದು ಭಾರತೀಯರೆಲ್ಲರ ಕಣ್ಣಲ್ಲಿ ನಿರಾಸೆ ಕವಿಯುವಂತಿದೆ ಮಾಡಿದೆ.</p>



<p>&#8220;ನಿನ್ನೆಯಷ್ಟೇ ನಡೆ ಬ್ಯಾಕ್ ಟು ಬ್ಯಾಕ್ ಪಂದ್ಯಗಳಲ್ಲಿ ಗೆದ್ದ ಭಾರತದ ಸಿಂಹಿಣಿ ವಿನೇಶ್ ಫೋಗಟ್, 4 ಬಾರಿಯ ವಿಶ್ವ ಚಾಂಪಿಯನ್ ಮತ್ತು ಪ್ರಸ್ತುತ ಒಲಿಂಪಿಕ್ ಚಾಂಪಿಯನ್ ಕುಸ್ತಿಪಟುಗಳನ್ನು ಸೋಲಿಸಿ ವಿಜಯದ ನಗೆ ಬೀರಿದ್ದರು. ಆ ನಂತರ ಕ್ವಾರ್ಟರ್ ಫೈನಲ್‌ನಲ್ಲಿ ಮಾಜಿ ವಿಶ್ವಚಾಂಪಿಯನ್‌ ಎದುರು ಜಯ ದಾಖಲಿಸಿದರು.</p>



<p>ಇಂದು,ಪ್ಯಾರಿಸ್‌ ಒಲಿಂಪಿಕ್ಸ್‌ನ ಮಹಿಳೆಯರ 50 ಕೆಜಿ ಫ್ರೀಸ್ಟೈಲ್‌ ಕುಸ್ತಿಯ ಫೈನಲ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಸಲುವಾಗಿ ವಿನೇಶ್‌ ಫೋಗಾಟ್‌ ಅಮೆರಿಕದ ರೆಸ್ಲರ್‌ ಸಾರಾ ಹಿಲ್‌ಡೆಬ್ರಾಂಟ್‌ ಎದುರು ಪೈಪೋಟಿ ನಡೆಸಲಿದ್ದರು. ಗೆದ್ದರೆ ಚಿನ್ನ ಸೋತರೆ ಬೆಳ್ಳಿ ಪದಕಕ್ಕೆ ಕೊರಳೊಡ್ಡವವರಿದ್ದರು. ಆದರೆ ತೂಕದಲ್ಲಾದ ಸಣ್ಣ ಎಡವಟ್ಟಿನಿಂದ ಈ ದಿಟ್ಟ ಹುಡುಗಿಯ ಕನಸು ಭಗ್ನಗೊಂಡಿರುವುದು ಭಾರತೀಯ ಕ್ರೀಡಾಜಗತ್ತಿಗಾದ ದೊಡ್ಡ ಗಾಯವೇ ಸರಿ.</p>



<ul class="wp-block-list">
<li><strong>ಹನುಮಂತ ಹಾಲಿಗೇರಿ</strong><br><br></li>
</ul>
]]></content:encoded>
					
		
		
			</item>
		<item>
		<title>ಭಾರತ ಸಂವಿಧಾನದಲ್ಲಿ ವೈಜ್ಞಾನಿಕ ಮನೋವೃತ್ತಿ (ಅಂಕಣ)</title>
		<link>https://peepalmedia.com/scientific-mind-in-indian-constitution-column/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 06 Aug 2024 10:46:10 +0000</pubDate>
				<category><![CDATA[ಅಂಕಣ]]></category>
		<category><![CDATA[ಜನ-ಗಣ-ಮನ]]></category>
		<category><![CDATA[ದೇಶ]]></category>
		<category><![CDATA[ಸತ್ಯ ಶೋಧ]]></category>
		<category><![CDATA[bengalure]]></category>
		<category><![CDATA[constitution]]></category>
		<category><![CDATA[india]]></category>
		<category><![CDATA[indian]]></category>
		<category><![CDATA[indian constitution]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=43409</guid>

					<description><![CDATA[Scientific Temper ಎಂಬ ಪದವನ್ನು ರೂಪಿಸಿ ಮೊಟ್ಟಮೊದಲು ಬಳಸಿದ್ದು ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು. ಅವರು ಇದನ್ನು 1946ರಲ್ಲಿ  ತಮ್ಮ “ಡಿಸ್ಕವರಿ ಆಫ್ ಇಂಡಿಯಾ” ಕೃತಿಯಲ್ಲಿ ಬಳಸಿದ್ದಾರೆ. ಅಲ್ಲಿ ಅವರು “ಸೈಂಟಿಫಿಕ್ ಟೆಂಪರ್” ಎಂದರೇನು ಎಂದೂ ವ್ಯಾಖ್ಯಾನಿಸಿದ್ದಾರೆ. “The Scientific Temper is a way of life (defined in this context as an individual and social process of thinking and acting) which uses the [&#8230;]]]></description>
										<content:encoded><![CDATA[
<ul class="wp-block-list">
<li><strong>ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಷ</strong></li>
</ul>



<p><strong><em>Scientific Temper </em></strong>ಎಂಬ ಪದವನ್ನು ರೂಪಿಸಿ ಮೊಟ್ಟಮೊದಲು ಬಳಸಿದ್ದು ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು. ಅವರು ಇದನ್ನು 1946ರಲ್ಲಿ  ತಮ್ಮ “ಡಿಸ್ಕವರಿ ಆಫ್ ಇಂಡಿಯಾ” ಕೃತಿಯಲ್ಲಿ ಬಳಸಿದ್ದಾರೆ. ಅಲ್ಲಿ ಅವರು “ಸೈಂಟಿಫಿಕ್ ಟೆಂಪರ್” ಎಂದರೇನು ಎಂದೂ ವ್ಯಾಖ್ಯಾನಿಸಿದ್ದಾರೆ.</p>



<p><em>“The Scientific Temper is a way of life (defined in this context as an individual and social process of thinking and acting) which uses the scientific method and which may, consequently, include questioning, observing physical reality, testing, hypothesizing, analyzing, and communicating (not necessarily in that order).</em></p>



<p>ಸರಳವಾಗಿ ಹೇಳುವುದಾದರೆ,<em>“ಪ್ರಶ್ನೆ, ಭೌತಿಕ ವಾಸ್ತವದ ಅವಲೋಕನ, ಪರೀಕ್ಷೆ, ಪರಿಕಲ್ಪನೆ, ವಿಶ್ಲೇಷಣೆ ಇವುಗಳನ್ನು ಒಳಗೊಂಡ ವಿಜ್ಞಾನ ವಿಧಾನವನ್ನು ಬಳಸುವ ಆಲೋಚನೆ ಮತ್ತು ಆಚರಣೆಯ ವೈಯಕ್ತಿಕ ಮತ್ತು ಸಾಮಾಜಿಕ ಪ್ರಕ್ರಿಯೆ.”</em>ಇಲ್ಲಿ ಆಲೋಚನೆ ಮತ್ತು ಆಚರಣೆ ಎರಡರಲ್ಲಿಯೂ ಇದು ಕಂಡುಬಂದ ವೈಜ್ಞಾನಿಕ ಮನೋವೃತ್ತಿ ಸಾರ್ಥಕ, ಮತ್ತು ಇದು ವೈಯಕ್ತಿಕ ನೆಲೆಯಲ್ಲಷ್ಟೇ ಅಲ್ಲ, ಸಾಮಾಜಿಕ, ರಾಜಕೀಯ ನೆಲೆಯಲ್ಲಿಯೂ ಕಂಡುಬರಬೇಕು ಎಂಬ ಮಾತನ್ನು ಹೇಳಿರುವುದು ಅರ್ಥಪೂರ್ಣವಾಗಿದೆ.</p>



<figure class="wp-block-image size-large"><img fetchpriority="high" decoding="async" width="1024" height="1024" src="https://peepalmedia.com/wp-content/uploads/2024/08/01-1024x1024.jpg" alt="" class="wp-image-43410" srcset="https://peepalmedia.com/wp-content/uploads/2024/08/01-1024x1024.jpg 1024w, https://peepalmedia.com/wp-content/uploads/2024/08/01-300x300.jpg 300w, https://peepalmedia.com/wp-content/uploads/2024/08/01-150x150.jpg 150w, https://peepalmedia.com/wp-content/uploads/2024/08/01-768x769.jpg 768w, https://peepalmedia.com/wp-content/uploads/2024/08/01-1534x1536.jpg 1534w, https://peepalmedia.com/wp-content/uploads/2024/08/01-2046x2048.jpg 2046w, https://peepalmedia.com/wp-content/uploads/2024/08/01-696x697.jpg 696w, https://peepalmedia.com/wp-content/uploads/2024/08/01-1068x1069.jpg 1068w, https://peepalmedia.com/wp-content/uploads/2024/08/01-1920x1922.jpg 1920w" sizes="(max-width: 1024px) 100vw, 1024px" /></figure>



<p>ನೆಹರು ಅವರು ಆರಂಭದಿಂದಲೂ ವೈಜ್ಞಾನಿಕ ಮನೋವೃತ್ತಿ ಉಳ್ಳವರಾಗಿದ್ದರು. ಅವರಿಗೆ ದೇವರಲ್ಲಿ ನಂಬಿಕೆ ಇರಲಿಲ್ಲ. ದೇವಸ್ಥಾನಗಳಿಂದ ಬಲುದೂರ. ಈ ಕುರಿತು ಮಹಾತ್ಮ ಗಾಂಧಿಯವರಿಗೆ ಇದ್ದ ನಂಬಿಕೆಗಳನ್ನೂ ಅವರು ಟೀಕಿಸುತ್ತಿದ್ದರು. ಹೀಗಾಗಿ ತಮ್ಮ “Discovery of India” – “ಭಾರತ ದರ್ಶನ”ದಲ್ಲಿ ಅವರು ವೈಜ್ಞಾನಿಕ ಮನೋವೃತ್ತಿಯ ಕುರಿತು ವಿಶದವಾಗಿ ವಿಶ್ಲೇಷಿಸಿದ್ದಾರೆ. 1928ರಲ್ಲಿ,&nbsp; ಮಸ್ಸೌರಿಯಲ್ಲಿ ಓದುತ್ತಿದ್ದ 10 ವರ್ಷದ ಮಗಳು ಇಂದಿರಾ ಪ್ರಿಯದರ್ಶಿನಿಗೆ ಅವರು 30 ಪತ್ರಗಳನ್ನು ಬರೆಯುತ್ತಾರೆ; ಅವು ಹೇಗಿದ್ದೀಯ, ಚೆನ್ನಾಗಿದ್ದೀಯಾ ಎನ್ನುವ ರೀತಿಯ ತಂದೆ ಮಗಳಿಗೆ ಬರೆದ ಮುದ್ದಿನ ಪತ್ರಗಳಲ್ಲ; ಬದಲಿಗೆ, “ಬುಕ್ ಆಫ್ ನೇಚರ್” ಎಂಬ ಮೊದಲ ಪತ್ರದಿಂದ ಆರಂಭಿಸಿ ನೆಹರು ಅವರು&nbsp; ಭೂಮಿಯಲ್ಲಿ ಜೀವದ ಉಗಮ ಹೇಗಾಯಿತು ಎಂದು ಬರೆಯುತ್ತಾರೆ. ನಂತರ ಒಂದೊಂದೇ ಪತ್ರದಲ್ಲಿ ಜೀವ ವಿಕಾಸ, ಪುರಾಣಗಳು, ಭಾಷೆಗಳು, ವಾಣಿಜ್ಯ, ಭೋಗೋಳ, ವಿಜ್ಞಾನ ಇತ್ಯಾದಿ ವಿವಿಧ ವಿಷಯಗಳ ಕುರಿತು ಬರೆಯುತ್ತಾರೆ. ಅವರ ಪತ್ರಗಳು ಒಬ್ಬ ಪ್ರಜ್ಞಾವಂತ ಶಿಕ್ಷಕ ಹತ್ತು ವರ್ಷದ ಮಗುವನ್ನು ಉದ್ದೇಶಿಸಿ ವಿಷಯಗಳನ್ನು ಹೇಗೆ ಕಲಿಸಬೇಕು ಎಂಬುದಕ್ಕೆ ಮಾದರಿಯಾಗಿವೆ. ಅವುಗಳಲ್ಲಿನ ಶೈಕ್ಷಣಿಕ ವಿಧಾನಗಳು, ಸರಳವಾದ ಭಾಷೆ, ನಿರೂಪಣಾ ಶೈಲಿಯ ಕುರಿತೇ, ಮಹಾರಾಷ್ಟ್ರದ ವೈಜಾಪುರದ ವಿನಾಯಕರಾವ್ ಪಾಟೀಲ್ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕರಾದ ಡಾ.ಡಿ.ಎಸ್.ಸಾಳುಂಕೆಯವರು ಒಂದು ಅಧ್ಯಯನವನ್ನೇ ಪ್ರಕಟಿಸಿದ್ದಾರೆ. ಬಹುಶಃ ಎಳೆಯರಿಗಾಗಿ ಶೈಕ್ಷಣಿಕ ವಿಷಯಗಳ ಬಗ್ಗೆ ಬರೆಯುವವರು, ಬೋಧಿಸುವವರು ಈ ಮೂವತ್ತು ಪತ್ರಗಳನ್ನು ಈ ದೃಷ್ಠಿಯಿಂದ ಅಧ್ಯಯನಿಸುವುದು ಪ್ರಯೋಜನವಾದೀತು.</p>



<p>ಸ್ವಾತಂತ್ರ್ಯ ಹೋರಾಟದಲ್ಲಿ, ಸುಮಾರು 1920 ರಿಂದ 27 ವರ್ಷಗಳ ಕಾಲ ಸಕ್ರಿಯವಾಗಿದ್ದಾಗಲೇ ನೆಹರು ಅವರು ಸ್ವತಂತ್ರ ಭಾರತಕ್ಕಾಗಿ ಹಲವು ಕನಸುಗಳನ್ನು ಕಂಡಿದ್ದರು. ಅವು ಭ್ರಾಮಕ ಕನಸುಗಳಾಗಿರದೇ ಐತಿಹಾಸಿಕ ವಾಸ್ತವಗಳನ್ನು ಆಧರಿಸಿದ ಯೋಜನೆಗಳಾಗಿದ್ದವು. ಸ್ವಾತಂತ್ರ್ಯ ಬಂದು ಅವರೇ ದೇಶದ ಪ್ರಥಮ ಪ್ರಧಾನಿಯಾದಾಗ, ದೇಶವನ್ನು ಕಾಡುತ್ತಿದ್ದ ಹಸಿವು, ಬಡತನ, ನಿರಕ್ಷರತೆ ಇತ್ಯಾದಿ ತುರ್ತು ಸಮಸ್ಯೆಗಳ ಪರಿಹಾರಕ್ಕಾಗಿ ನೆಚ್ಚಿಕೊಂಡಿದ್ದು ವಿಜ್ಞಾನ ಮತ್ತು ತಂತ್ರಜ್ಞಾನವನ್ನು. ಅವರು ಪ್ರಧಾನಿಯಾಗಿದ್ದ ಸುಮಾರು 15 ವರ್ಷಗಳಲ್ಲಿ 32 ಬೃಹತ್ ನೀರಾವರಿ/ವಿದ್ಯುತ್ ಯೋಜನೆಗಳು, ಉದ್ಯಮಗಳು, ಉನ್ನತ ದರ್ಜೆಯ ಶೈಕ್ಷಣಿಕ, ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಿದರು, ಈಗಿನ ಪ್ರಧಾನಿಯವರಿಗೆ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಕಟ್ಟುವುದೇ ರಾಷ್ಟ್ರೀಯ ಕಾರ್ಯ ಯೋಜನೆಯಾಗಿದೆ. ಆದರೆ, ಈ ಮೊದಲ ಪ್ರಧಾನಿ, 1948ರಲ್ಲಿ ಭಾಕ್ರಾ ನಂಗಲ್ ಅಣೆಕಟ್ಟಿಗೆ ಶಂಕುಸ್ಥಾಪನೆ ಮಾಡಿ ಮಾತಾಡಿದಾಗ, ಇವೇ “<strong>ಭಾರತದ ಆಧುನಿಕ ದೇವಾಲಯಗಳು”</strong> ಎಂಬ&nbsp; ಹೇಳಿಕೆಯನ್ನು ಕೊಟ್ಟರು. ಇಂಥ ವಿಷನರಿಯಾಗಿದ್ದ ಪ್ರಧಾನಿ ನೆಹರು ಅವರು ನಿರೂಪಿಸಿದ “ವೈಜ್ಞಾನಿಕ ಮನೋವೃತ್ತಿ”ಯ ವ್ಯಾಖ್ಯೆ ಈಗಲೂ ಪ್ರಚಲಿತ.</p>



<p><strong>ವೈಜ್ಞಾನಿಕ ಮನೋವೃತ್ತಿ ಮತ್ತು ಭಾರತ ಸಂವಿಧಾನ </strong><strong></strong></p>



<p>“ಭಾರತ ಸಂವಿಧಾನ ಎಂಥ ಗ್ರಂಥ” ಎಂದು ಕೇಳಿದರೆ ನಿಮ್ಮ ಉತ್ತರವೇನು? ಕೆಲವರಿಗೆ ಭಾರತ ಸಂವಿಧಾನ ಸಾರುವ ಸಮಾನತೆ, ಸಮತೆ ಮತ್ತು ಇತರ ಹಕ್ಕುಗಳ ಕುರಿತು ಗುನುಗು ಇದೆ, ಹೊರನೋಟಕ್ಕೆ ಅದನ್ನು ಗೌರವಿಸುತ್ತೇವೆ ಎಂದು ಆಲೋಚನೆಯಲ್ಲಿ ಹೇಳಿದರೂ ಆಚರಣೆಯಲ್ಲಿ ಅದನ್ನು ಅವಹೇಳನ ಮಾಡುತ್ತಾರೆ. 2018ರ ಆಗಸ್ಟ್ 9ರಂದು ಯೂತ್ ಫಾರ್ ಇಕ್ವಾಲಿಟಿ ಫೌಂಡೇಷನ್ (ಅಜಾದ್ ಸೇನಾ) ಮತ್ತು ಆರಕ್ಷಣ್ ವಿರೋಧಿ ಪಾರ್ಟಿ ಎಂಬ ಎರಡು ಸಂಘಟನೆಗಳು ಎಸ್.ಸಿ./ಎಸ್.ಟಿ (ದೌರ್ಜನ್ಯಗಳ ತಡೆಗಟ್ಟುವಿಕೆ) ಕಾಯ್ದೆಯಲ್ಲಿ ತರಲಾದ ತಿದ್ದುಪಡಿಯ ವಿರುದ್ಧ ಪ್ರತಿಭಟನೆಯ ವೇಳೆಯಲ್ಲಿ ಭಾರತ ಸಂವಿಧಾನದ ಪ್ರತಿಯನ್ನು ಸುಟ್ಟರು. ಅಪರಾಧಿಗಳನ್ನು ಬಂಧಿಸಿದರು, ಶಿಕ್ಷೆಯೂ ಆಗಿರಬಹುದು. ಇದು ಆಕ್ರೋಶದಲ್ಲಿ ಭೌತಿಕವಾಗಿ ಸಂವಿಧಾನದ ಪ್ರತಿಯನ್ನು ಸುಟ್ಟ ಪ್ರಕರಣ, ಆದರೆ ಸಂವಿಧಾನವನ್ನು ಗೌರವಿಸುತ್ತೇವೆ ಎಂದು ಸಂಭಾವಿತರ ಹಾಗೆ ಮಾತಾಡಿ, ಅದರ ಮೂಲಭೂತ ತತ್ತ್ವಗಳನ್ನೇ ದಿನವೂ ಸುಡುವ ಬಹುತೇಕ ಜನಪ್ರತಿನಿಧಿಗಳು ಈ ದೂಷಣೆಯಿಂದ ತಪ್ಪಿಸಿಕೊಳ್ಳುತ್ತಾರೆ. ಇರಲಿ.</p>



<p>ಇನ್ನೊಂದು ವರ್ಗವಿದೆ. ಅವರು, “ಭಾರತ ಸಂವಿಧಾನ ಒಂದು“ಪವಿತ್ರ” ಗ್ರಂಥ, ಪ್ರಜಾಪ್ರಭುತ್ವ ನಮ್ಮ ಧರ್ಮ, ಸಂವಿಧಾನ ನಮ್ಮ ಧರ್ಮಗ್ರಂಥ” ಎಂದು ಹೇಳುತ್ತಾರೆ, ಡಾ.ಅಂಬೇಡ್ಕರ್ ಜಯಂತಿಯಂದು ಸಂವಿಧಾನದ ಪ್ರತಿಗೆ ಹೂ ಹಾಕಿ ಶಾಸ್ತ್ರೋಕ್ತವಾಗಿ ಊದಿನ ಕಟ್ಟಿ ಹಚ್ಚಿ ಆರತಿ ಬೆಳಗಿ ಪೂಜೆ ಮಾಡುವವರೂ ಇದ್ದಾರೆ. ಅವರ ಅಭಿಮಾನವನ್ನು ಮೆಚ್ಚಬೇಕು. ಮೊದಲು ನಾನೂ ಹಾಗೇ ಹೇಳುತ್ತಿದ್ದೆ. ಆದರೆ ಹೆಚ್ಚು ತಿಳಿವಳಿಕೆ ಬಂದ ನಂತರ ನನ್ನ ಅಭಿಪ್ರಾಯ ಬೇರೆಯಾಯಿತು. ಕುರಾನ್, ಬೈಬಲ್, ಗೀತೆ ಇತ್ಯಾದಿ ಗ್ರಂಥಗಳನ್ನು ನಾವು ದೈವಿಕ, ಅಪೌರುಷೇಯ, ಅವತೀರ್ಣಗೊಂಡಿದ್ದು, ಪವಿತ್ರ ಎಂದೆಲ್ಲಾ ಭಾವಿಸುತ್ತೇವೆ. ಆದ್ದರಿಂದ ಅವುಗಳನ್ನು ಗೌರವಿಸುತ್ತೇವೆ, ಅವುಗಳಿಗೆ ಅವಮಾನವಾದರೆ ಜೀವ ಕೊಡುತ್ತೇವೆ, ಆದರೆ ತೆಗೆದು ಓದುವುದಿಲ್ಲ, ಅದರಲ್ಲಿ ವಾಸ್ತವವಾಗಿ ಏನು ಹೇಳಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ತಾವು ಓದಿದ್ದೇವೆ ಎಂದು ಹೇಳುವರು ಅದರಲ್ಲಿದೆ ಎಂದು ಹೇಳುವುದನ್ನು ಬುದ್ಧಿ ಮುಚ್ಚಿಕೊಂಡು ನಂಬುತ್ತೇವೆ. ಭಾರತ ಸಂವಿಧಾನದ ಕುರಿತು ಈ ಮಾದರಿಯ ಅಂಧವಿಶ್ವಾಸ, ಭಕ್ತಿಯೂ ಸಲ್ಲದು.</p>



<figure class="wp-block-image size-full"><img decoding="async" width="550" height="380" src="https://peepalmedia.com/wp-content/uploads/2024/08/02.jpg" alt="" class="wp-image-43411" srcset="https://peepalmedia.com/wp-content/uploads/2024/08/02.jpg 550w, https://peepalmedia.com/wp-content/uploads/2024/08/02-300x207.jpg 300w, https://peepalmedia.com/wp-content/uploads/2024/08/02-150x104.jpg 150w, https://peepalmedia.com/wp-content/uploads/2024/08/02-218x150.jpg 218w" sizes="(max-width: 550px) 100vw, 550px" /></figure>



<p>ವಾಸ್ತವವಾಗಿ ಭಾರತ ಸಂವಿಧಾನ ಇದ್ಯಾವುದೂ ಅಲ್ಲ. ಎಂದರೆ ಇದು ದೈವಿಕವಲ್ಲ, ಲೌಕಿಕ. ಇದು ಸ್ವತಃ ದೇವರಿಂದ ದೇವದೂತನ ಮೂಲಕ ಅವತೀರ್ಣಗೊಂಡಿಲ್ಲ, ಎಂದರೆ ಅಪೌರುಷೇಯವಲ್ಲ, ಇದನ್ನು ಮನುಷ್ಯರೇ ಬರೆದಿದ್ದು, ಇದು ಪವಿತ್ರವಲ್ಲ, ಮೌಲಿಕವಾದದ್ದು. ಡಾ.ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ, 6.12.1946 ರಿಂದ&nbsp; 24.1.1950ರ (2 ವರ್ಷ 11 ತಿಂಗಳು 18 ದಿನ) ವರೆಗೆ ನಡೆದ ಸಂವಿಧಾನ ರಚನಾ ಸಭೆಯಲ್ಲಿ ಇದರ ರಚನೆಯಾಯಿತು. ವಿವಿಧ ರಾಜ್ಯಗಳಿಂದ ಬಂದ, 15 ಜನ ಮಹಿಳೆಯರೂ ಸೇರಿದ ಹಾಗೆ 299 ಜನಪ್ರತಿನಿಧಿಗಳು ಇದರ ರಚನೆಯಲ್ಲಿ ಪಾಲ್ಗೊಂಡರು. 22 ಸಮಿತಿಗಳಲ್ಲಿ ಹಲವಾರು ವಿಷಯಗಳ ಸುದೀರ್ಘ ವಿಶ್ಲೇಷಣೆ ಮಾಡಿದರು. ಆಯಾ ಸಮಿತಿಗಳಲ್ಲಿ ಮೂಡಿದ ವರದಿಗಳನ್ನು ಸಂವಿಧಾನ ರಚನಾ ಸಭೆಯ 11 ಗೋಷ್ಠಿಗಳಲ್ಲಿ 166 ದಿನ ಎಲ್ಲರೂ ಸೇರಿ ಚರ್ಚಿಸಿ ಪರಿಷ್ಕರಿಸಲಾಯಿತು. 29.08.1947 ರಂದು ರಚನೆಯಾದ ’ಕರಡು ರಚನಾ ಸಮಿತಿ’ಯು ಅದಕ್ಕೆ ಒಂದು ಗ್ರಂಥದ ರೂಪವನ್ನು ನೀಡಿತು. ಈ ಸಮಿತಿಯ ಅಧ್ಯಕ್ಷರಾದ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿದ್ವತ್ತು, ಅನುಭವ, ನಿರಂತರದ ಪರಿಶ್ರಮದ ಫಲವಾಗಿ ಈಗಿನ ಸಂವಿಧಾನದ ಕರಡು ಸಿದ್ಧವಾಯಿತು.26.11.1949ರಂದು ಭಾರತ ಸಂಸತ್ತು ಇದನ್ನು ಅಂಗೀಕರಿಸಿ, 26.01.1950ರಂದು ಇದು ದೇಶದಲ್ಲಿ ಜಾರಿಗೆ ಬಂತು. ಇದರ ರಚನೆಯ ಪ್ರಕ್ರಿಯೆಯೇ ಅತ್ಯಂತ ಲೌಕಿಕವಾಗಿತ್ತು, ಜನತಂತ್ರಾತ್ಮಕವಾಗಿತ್ತು, ಆ ಕಾರಣಕ್ಕಾಗಿ ವೈಜ್ಞಾನಿಕವಾಗಿತ್ತು ಎಂಬುದನ್ನು ಗಮನಿಸಿ.</p>



<p><strong>ಸಂವಿಧಾನದ ಪ್ರಸ್ತಾವನೆ</strong><strong></strong></p>



<p>ಭಾರತ ಸಂವಿಧಾನದ ಮೊದಲ ಪುಟವೇ ಪ್ರಸ್ತಾವನೆ. Preamble of Constitution of India. ಇದು ಇಡೀ ಭಾರತ ಸಂವಿಧಾನದ ಮೂಲ ಆಶಯ, ತಾತ್ಪರ್ಯ, ದ್ಯೇಯೋದ್ಧೇಶದ ಹೇಳಿಕೆ, ಶಪಥ. ಇದರಲ್ಲಿರುವ ಅಂಶಗಳನ್ನು ನಾವು ಬಿಡಿಸಿ ಮನನ ಮಾಡಿಕೊಳ್ಳುವುದು, ಆಲೋಚನೆ ಮತ್ತು ಆಚರಣೆಯಲ್ಲಿ ಅಳವಡಿಸಿಕೊಳ್ಳುವುದು ಒಳ್ಳೆಯದು. ಸಂವಿಧಾನದ ಪ್ರಸ್ತಾವನೆ ಸಂವಿಧಾನದ ತಾತ್ಪರ್ಯವಿದ್ದಂತೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ವಾಸ್ತವವಾಗಿ ಪ್ರಸ್ತಾವನೆಯೇ ’ಸಂವಿಧಾನ’. ನಂತರ ಬರುವ 25 ಭಾಗಗಳ 448 ಅನುಚ್ಛೇದಗಳು, 12 ಅನುಸೂಚಿ ಸಹಿತವಾದ ಸುಮಾರು 250 ಪುಟಗಳ ಪಠ್ಯವು ಪ್ರಸ್ತಾವನೆಯಲ್ಲಿ ಬರುವ ಒಂದೊಂದು ಪದಕ್ಕೆ ನೀಡಿರುವ ’ಅಡಿಟಿಪ್ಪಣಿ’ ಅಥವಾ ’ವಿವರ’ ಎನ್ನಬಹುದು. ಅಷ್ಟು ಮುಖ್ಯ ಸಂವಿಧಾನದ ಪ್ರಸ್ತಾವನೆ. ಪ್ರಸ್ತಾವನೆಯ ಪಠ್ಯದ ಕೆಲವು ಅಂಶಗಳನ್ನು ನೋಡೋಣ;</p>



<p><img decoding="async" width="600" height="315" class="wp-image-43412" style="width: 600px;" src="https://peepalmedia.com/wp-content/uploads/2024/08/03-We-the-People-of-India.jpg" alt="" srcset="https://peepalmedia.com/wp-content/uploads/2024/08/03-We-the-People-of-India.jpg 1200w, https://peepalmedia.com/wp-content/uploads/2024/08/03-We-the-People-of-India-300x158.jpg 300w, https://peepalmedia.com/wp-content/uploads/2024/08/03-We-the-People-of-India-1024x538.jpg 1024w, https://peepalmedia.com/wp-content/uploads/2024/08/03-We-the-People-of-India-768x403.jpg 768w, https://peepalmedia.com/wp-content/uploads/2024/08/03-We-the-People-of-India-150x79.jpg 150w, https://peepalmedia.com/wp-content/uploads/2024/08/03-We-the-People-of-India-696x365.jpg 696w, https://peepalmedia.com/wp-content/uploads/2024/08/03-We-the-People-of-India-1068x561.jpg 1068w" sizes="(max-width: 600px) 100vw, 600px" /></p>



<p>1.ಇಡೀ ಭಾರತ ಸಂವಿಧಾನ ಆರಂಭವಾಗುವುದೇ <strong>We the People of India</strong>, “<strong>ಭಾರತ ಜನತೆಯಾದ ನಾವು”</strong>ಎಂಬ ಮಾತಿನಿಂದ<strong>&#8230;</strong>ಪ್ರಸ್ತಾವನೆ ಕೊನೆಗೊಳ್ಳುವುದು “<strong>ಈ ಸಂವಿಧಾನವನ್ನುನಮಗೆ ನಾವೇ ಅರ್ಪಿಸಿಕೊಂಡು ಅಂಗೀಕರಿಸಿ, ಶಾಸನವಾಗಿ ವಿಧಿಸಿಕೊಂಡಿದ್ದೇವೆ” </strong>ಎಂದು.ಎಂದರೆ ದೇವರಾಗಲೀ, ಪ್ರವಾದಿಗಳಾಗಲೀ, ಯಾವುದೇ ಶಾಹಿಗಳಾಗಲೀ ಇದನ್ನು ನಮ್ಮ ಮೇಲೆ ಹೇರಿಲ್ಲ.ನಮಗೆ ನಾವೇ ವಿಧಿಸಿಕೊಂಡಿದ್ದೇವೆ. ಈ ಪದಗಳನ್ನು ಮನನ ಮಾಡಿಕೊಂಡರೆ ಇದು ನಮ್ಮದೇ ಸಂವಿಧಾನ ಎಂಬ ಪ್ರೀತಿ, ಅಭಿಮಾನ, ಶ್ರದ್ಧೆ, ಜವಾಬ್ದಾರಿ ಮೂಡುತ್ತದೆ. ಮುಂದಿನದೆಲ್ಲ ಹೆಚ್ಚು ಸುಗಮವಾಗುತ್ತದೆ.&nbsp;</p>



<p>2.ಸ್ವತಂತ್ರ ಭಾರತವನ್ನು ಕಟ್ಟುವುದಕ್ಕಾಗಿ ನಮ್ಮ ಗುರಿಗಳೇನು ಎನ್ನುವುದನ್ನು ಪ್ರಸ್ತಾವನೆ Sovereign, Socialist, Secular, Democratic Republic ಎಂದು ಹೇಳಿದೆ. ಇದರಲ್ಲಿ ಎರಡು ಪದಗಳನ್ನು ಮಾತ್ರ ನಾನು ವಿಮರ್ಶೆಗೆ ತೆಗೆದುಕೊಳ್ಳುತ್ತೇನೆ.</p>



<p>ಪ್ರಸ್ತಾವನೆಯ ಇಂಗ್ಲಿಷ್ ಆವೃತ್ತಿಯಲ್ಲಿ <em>Secular </em>ಎಂಬ ಪದವನ್ನು ಬಳಸಿದೆ. ಕೇಂಬ್ರಿಜ್ ಇಂಗ್ಲಿಷ್ ನಿಘಂಟುವಿನಲ್ಲಿ ಇದರ ಅರ್ಥ, ’<em>not</em> connected with religion or spiritual matters’ ಮತ್ತು ‘not having <em>any</em> connection with religion’ ಎಂದಿದೆ. ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್-ಕನ್ನಡ ನಿಘಂಟುವಿನಲ್ಲಿ <em>Secular</em>ಎನ್ನುವ ಪದಕ್ಕೆ, “ಲೌಕಿಕ, ಜಾತ್ಯತೀತ, ಮತ ಧರ್ಮಾತೀತ, ರಾಷ್ಟ್ರನೀತಿ ಆಡಳಿತ ವ್ಯವಸ್ಥೆಯಲ್ಲಿ ಧರ್ಮದ ಪ್ರವೇಶ ಕೂಡದೆನ್ನುವ; ಧಾರ್ಮಿಕ ಕ್ಷೇತ್ರಕ್ಕೆ, ಚರ್ಚು, ಮಠ, ಮಸೀದಿ ಇತ್ಯಾದಿಗಳಿಗೆ ಸಂಬಂಧಿಸದೇ ಇರುವ&#8230;” ಎಂದಿದೆ.</p>



<p>ಇದನ್ನು ಅನುಸರಿಸಿ ಕೆಲವು ಭಾಷೆಗಳಲ್ಲಿ ಸೆಕ್ಯುಲರ್ ಎಂಬ ಪದವನ್ನು ಅನುವಾದ ಮಾಡಿಕೊಂಡಿರುವುದನ್ನು ನೋಡಿ: ಮೂಲ ಇಂಗ್ಲಿಷ್ ಆವೃತ್ತಿಯೊಂದಿಗೇ ರಚಿತವಾದ ಹಿಂದಿ ಆವೃತ್ತಿಯಲ್ಲಿ ’ಪಂಥ್ ನಿರಪೇಕ್ಷ್’ ಎಂಬ ಪದವಿದೆ, ಹಾಗೆಯೇ ತೆಲುಗು-ಲೌಕಿಕ, ಮರಾಠಿ-ಧರ್ಮ್ ನಿರಪೇಕ್ಷ್, ಬಂಗಾಲಿ-ಧರ್ಮ್ ನಿರಪೇಕ್ಷ್. ಆದರೆ ಕನ್ನಡದಲ್ಲಿ ಸರಕಾರದ ಅಧಿಕೃತ ಅನುವಾದದಲ್ಲಿ <strong><sup>[1]</sup></strong>ಸೆಕ್ಯುಲರ್ ಎಂಬ ಪದಕ್ಕೆ “ಸರ್ವಧರ್ಮ ಸಮಭಾವದ” ಎಂಬ ಪದವನ್ನು ಬಳಸಿದ್ದಾರೆ. ಈ ಅರ್ಥ ಎಲ್ಲಿಯೂ ಇಲ್ಲ ಅನ್ನುವುದಷ್ಟೆ ಅಲ್ಲ, ಮೂಲ ಅರ್ಥವನ್ನು ಇದು ಹಾದಿ ತಪ್ಪಿಸುತ್ತದೆ. ಸಂವಿಧಾನದ ಮೂಲ ಆಶಯಕ್ಕೆ ತದ್ವಿರುದ್ಧವಾಗಿದೆ. ಆದ್ದರಿಂದ ಸಂವಿಧಾನದ ಪ್ರಸ್ತಾವನೆಯನ್ನು ಅರ್ಥ ಮಾಡಿಕೊಳ್ಳುವಾಗ ನಾವು ಸೆಕ್ಯುಲರ್ ಎಂಬ ಪದವನ್ನು “ಮತಧರ್ಮ ನಿರಪೇಕ್ಷ” ಎಂದೇ ಅರ್ಥ ಮಾಡಿಕೊಳ್ಳಬೇಕು.</p>



<p>3. ಪ್ರಸ್ತಾವನೆಯಲ್ಲಿರುವ ಇನ್ನೊಂದು ಪದ, Democratic ಎನ್ನುವುದು. ಇದನ್ನು ಬಂಗಾಲಿಯಲ್ಲಿ ಜನತಾಂತ್ರಿಕ್, ಹಿಂದಿಯಲ್ಲಿ ಲೋಕತಂತ್ರಾತ್ಮಕ್, ಮರಾಠಿಯಲ್ಲಿ ಲೋಕಶಾಶಿ, ತಮಿಳಿನಲ್ಲಿ ಜನನಾಯಕ ಎಂದೆಲ್ಲಾ ಮಾಡಿಕೊಂಡಿದ್ದಾರೆ. ಇವು ಹೆಚ್ಚು ಸರಿ. ಆದರೆ ಕನ್ನಡದ ಅಧಿಕೃತ ಅನುವಾದದಲ್ಲಿ Democratic ಎನ್ನುವುದಕ್ಕೆ“ಪ್ರಜಾಸತ್ತಾತ್ಮಕ”ಎಂಬ ಪದವನ್ನು ಬಳಸಲಾಗಿದೆ (ಹೆಚ್ಚಿನವರು ಪ್ರಜಾಪ್ರಭುತ್ವ ಎಂಬ ಪದವನ್ನೇ ಬಳಸುತ್ತಾರೆ.) ಎಂದರೆ ಇಲ್ಲಿ ನಮ್ಮನ್ನು ’ಪ್ರಜೆ’ ಎಂದು ಕರೆಯಲಾಗಿದೆ. ಅನೇಕ ಬಗೆಯ ಪ್ರಭುಗಳು ಇದ್ದಾಗ ನಾವು ವಿನೀತ ಪ್ರಜೆಗಳಾಗಿದ್ದೆವು. ಈಗ ನಾವೇ ದೇಶದ ಸಮಷ್ಠಿ ಮಾಲೀಕರು, ಈಗ ಯಾರೂ ಪ್ರಭುಗಳಿಲ್ಲ, ನಾವೂ ಪ್ರಭುಗಳಾಗಬಾರದು. ನಾವು ಈ ದೇಶದ citizenಗಳು, ನಾಗರಿಕರು, ಜನರು. ಆದ್ದರಿಂದ ನಮ್ಮದು ಜನಸತ್ತಾತ್ಮಕ ಗಣರಾಜ್ಯ.</p>



<p>ಎಲ್ಲ ನಾಗರಿಕರಿಗೆ ನ್ಯಾಯ, ಸ್ವಾತಂತ್ರ್ಯ, ಸಮತೆ ದೊರೆಯುವಂತೆ ಮಾಡುವ ಮತ್ತು ವ್ಯಕ್ತಿ ಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭ್ರಾತೃತ್ವ ಭಾವನೆಯನ್ನು ಮೂಡಿಸುವ ದೃಢ ಸಂಕಲ್ಪ ಮಾಡಿದ್ದೇವೆ ಎಂದಿದೆ. ವಿಧಾನದ ಒಳಗಿನ ಯಾವುದೇ ಅನುಚ್ಛೇದ ಪ್ರಸ್ತಾವನೆಯಲ್ಲಿನ ಮೌಲ್ಯಗಳನ್ನು ಮೀರುವಂತಿಲ್ಲ, ಅದಕ್ಕೆ ಅನುಗುಣವಾಗಿಯೇ ಇರಬೇಕು ಎಂದಾದ ಮೇಲೆ ಇಡೀ ಸಂವಿಧಾನವು ಹೇಗೆ ವೈಚಾರಿಕತೆ, ತರ್ಕ, ಸಾಮಾಜಿಕ ನ್ಯಾಯ, ವೈಜ್ಞಾನಿಕ ಮನೋವೃತ್ತಿಯನ್ನು ಆಧರಿಸಿದೆ ಎಂಬುದನ್ನು ಪ್ರಸ್ತಾವನೆಯಲ್ಲಿಯೇ ದೃಢಪಡಿಸಲಾಗಿದೆ.</p>



<p><strong>ಸಂವಿಧಾನ ಸಾಕ್ಷರತೆ</strong><strong></strong></p>



<figure class="wp-block-image size-large"><img loading="lazy" decoding="async" width="1024" height="538" src="https://peepalmedia.com/wp-content/uploads/2024/08/04-C-of-I-1024x538.jpg" alt="" class="wp-image-43413" srcset="https://peepalmedia.com/wp-content/uploads/2024/08/04-C-of-I-1024x538.jpg 1024w, https://peepalmedia.com/wp-content/uploads/2024/08/04-C-of-I-300x158.jpg 300w, https://peepalmedia.com/wp-content/uploads/2024/08/04-C-of-I-768x403.jpg 768w, https://peepalmedia.com/wp-content/uploads/2024/08/04-C-of-I-150x79.jpg 150w, https://peepalmedia.com/wp-content/uploads/2024/08/04-C-of-I-696x365.jpg 696w, https://peepalmedia.com/wp-content/uploads/2024/08/04-C-of-I-1068x561.jpg 1068w, https://peepalmedia.com/wp-content/uploads/2024/08/04-C-of-I.jpg 1200w" sizes="auto, (max-width: 1024px) 100vw, 1024px" /></figure>



<p>ಸಂವಿಧಾನದ ಪ್ರಕಾರ ನಮ್ಮದು ಜನ ತಂತ್ರಾತ್ಮಕ ಗಣರಾಜ್ಯ. ಎಂದರೆ ಈ ದೇಶದ ನಾಗರಿಕರೇ ಇಡೀ ದೇಶದ ಸಮಷ್ಠಿ ಮಾಲೀಕರು; ದೇಶದ ಆಗುಹೋಗುಗಳಿಗೆ ಬಾಧ್ಯಸ್ಥರು, ಹೊಣೆಗಾರರು. ನಾಗರಿಕರು ಉತ್ಪಾದನೆ, ಸಂಶೋಧನೆ, ಸೇವೆ, ದುಡಿಮೆ ಇತ್ಯಾದಿ ಕಾರ್ಯಗಳಲ್ಲಿ ನಿರತರಾಗಿರುತ್ತಾರೆ. ಆದ್ದರಿಂದ ಅವರ ಪರವಾಗಿ ಈ ದೇಶವನ್ನು (ಆಳಲು ಅಲ್ಲ) ನಡೆಸಿಕೊಂಡು ಹೋಗಲು ಅವರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಚುನಾವಣೆಗಳಲ್ಲಿ (ಮತ’ದಾನ’ ಮಾಡಿ ಅಲ್ಲ) ಮತ (ಅಭಿಪ್ರಾಯ)ದ ಹಕ್ಕನ್ನು ಚಲಾಯಿಸುವ ಮೂಲಕ ಇದನ್ನು ಮಾಡುತ್ತಾರೆ. ಚುನಾಯಿಸಿ ಬರುವವರು ನಮ್ಮ ’ನಾಯಕರಲ್ಲ’, ಅವರು ನಮ್ಮ ಪ್ರತಿನಿಧಿಗಳು. ಅವರಿಗೆ ಸಮಯವಿದೆ, ಪರಿಣತಿ, ಅನುಭವ ಇದೆ ಎಂಬುದಕ್ಕಾಗಿ ನಾವು ಅವರನ್ನು ಆಯ್ಕೆ ಮಾಡುತ್ತೇವೆ. ಅವರಿಗೆ ಸಂವಿಧಾನ ಬದ್ಧವಾದ ಸ್ಥಾನಮಾನ, ಅಧಿಕಾರ, ಸಂಭಾವನೆ, ಸೌಕರ್ಯ, ಭತ್ಯ ಇತ್ಯಾದಿ ಎಲ್ಲವನ್ನೂ ಒದಗಿಸಿ, ನೀವು ಆಯ್ಕೆಯಾಗಿರುವ ಅವಧಿ ಮುಗಿಯುವ ವರೆಗೆ ಪ್ರಾಮಾಣಿಕವಾಗಿ ನಮ್ಮ ಅಭ್ಯುದಯಕ್ಕಾಗಿ ದುಡಿಯಿರಿ ಎಂದು ಕಳಿಸಿರುತ್ತೇವೆ. ಆದರೆ ಈ ಮಾದರಿಯಲ್ಲಿ ತಮ್ಮ ಅಧಿಕಾರವೇನು, ತಮ್ಮ ಮತದ ಮಹತ್ವವೇನು ಎಂಬುದು ನಾಗರಿಕರಿಗೆ ಗೊತ್ತಿದೆಯೇ? ಸಂವಿಧಾನ ಜಾರಿಯಾದ 1950ರ ವರ್ಷದ ಭಾರತೀಯರಿಗೆ ಹೋಗಲಿ, ಈಗಿನ 2020ರ ಸಾರ್ವಜನಿಕರಿಗಾದರೂ ಸಂವಿಧಾನ ಮತ್ತು ಅದರ ಮಹತ್ವದ ಕುರಿತು ಅರಿವಿದೆಯೇ? ಇಲ್ಲ.</p>



<p>ಹೀಗಾಗಿ, ಭಾರತ ಸಂವಿಧಾನದ ಮೂಲಭೂತ ಸಾಕ್ಷರತೆ ಭಾರತದ ನಾಗರಿಕರಿಗೆ ಇರಬೇಕಾಗುತ್ತದೆ; ಮುಖ್ಯವಾಗಿ ಮತವನ್ನು ಚಲಾಯಿಸಿ ದೇಶ ನಡೆಸುವವರನ್ನು ಆಯ್ಕೆ ಮಾಡುವ ವಯಸ್ಕರಿಗೆ ಸಂವಿಧಾನದ ಮೂಲಭೂತ ಅಂಶಗಳು ಗೊತ್ತಿರಬೇಕಾಗುತ್ತದೆ. ಆದರೆ, ಅದ್ಯಾಕೋ, ಅಷ್ಟೊಂದು ಕಾಳಜಿಯಿಂದ, ಸಾಮಾಜಿಕ ಹೊಣೆಗಾರಿಕೆಯಿಂದ ಸಂವಿಧಾನವನ್ನು ರಚಿಸಿ, ಜಾರಿಗೆ ತಂದ ಆಗಿನ ಹಿರಿಯರು, ನಂತರ ಅದರ ಕುರಿತು ದೇಶದ ನಾಗರಿಕರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಗೌಣವಾಗಿ ಕಂಡರು, ಜನಸತ್ತಾತ್ಮಕ ವ್ಯವಸ್ಥೆಯನ್ನು ಅಂಗೀಕರಿಸಿದ ಆರಂಭದಿಂದಲೇ ಆಗಿರುವ&nbsp; ಬಹುದೊಡ್ಡ ಪ್ರಮಾದವಿದು. ಜನರ ಪ್ರತಿನಿಧಿಗಳು ಎಂದು ಹೇಳಿಕೊಂಡು ಸಂವಿಧಾನ ರಚನಾ ಸಭೆಯಲ್ಲಿ ಕುಳಿತು ಪರಿಶ್ರಮ ವಹಿಸಿ ಅದ್ಭುತವಾದ ಸಂವಿಧಾನವನ್ನು ಸಾಕಾರಗೊಳಿಸಿದ ಆ ಹಿರಿಯರು, ಸಭಾಧ್ಯಕ್ಷರೂ, ತಾವೂ ಅದಕ್ಕೆ ’ಭಾರತದ ಜನತೆಯಾದ ನಮ್ಮ’ ಪರವಾಗಿ ಸಹಿ ಹಾಕಿ, 1950ರ ಜನವರಿ 26ರಂದು ಅದನ್ನು ಜಾರಿ ಮಾಡಿದ ನಂತರವಾದರೂ ಕೂಡಲೇ ಮಾಡಬೇಕಾದ ಒಂದು ಕೆಲಸವಿತ್ತು. ಆಗ ಭಾರತದ ಜನಸಂಖ್ಯೆ 36 ಕೋಟಿ ಇತ್ತು. ಅವರನ್ನು ಉದ್ದೇಶಿಸಿ, “ನೋಡಿಯಪ್ಪಾ, ನಿಮ್ಮ ಪರವಾಗಿ ಎಂದು ಹೇಳಿಕೊಂಡು ನಾವು ನಮ್ಮೆಲ್ಲರಿಗಾಗಿ ಈ ಸಂವಿಧಾನವನ್ನು ರಚಿಸಿದ್ದೇವೆ. ಇದರ ಅನುಷ್ಠಾನದಲ್ಲಿ ನೀವೂ ಕೂಡ ಸಮಸಮ ಭಾಧ್ಯಸ್ಥರು, ನೀವೂ ಇದರ ಕುರಿತು ಮೂಲಭೂತ ಅಂಶಗಳನ್ನು ತಿಳಿದುಕೊಳ್ಳುವುದು ಸೂಕ್ತ” ಎಂದು ಪ್ರಾಮಾಣಿಕವಾಗಿ ಹೇಳಬೇಕಾಗಿತ್ತು. ಸಂವಿಧಾನದ ಮೂಲ ತತ್ತ್ವಗಳು, ಹಕ್ಕುಗಳು, ಬಾಧ್ಯತೆಗಳು ಇತ್ಯಾದಿಗಳನ್ನು ಸರಳಗೊಳಿಸಿ, ಕೈಪಿಡಿ ರಚನೆ ಮಾಡಬೇಕಾಗಿತ್ತು. ಅದನ್ನು ಬಳಸಿ ಬೃಹತ್ ಪ್ರಮಾಣದಲ್ಲಿ “ಸಂವಿಧಾನ ಸಾಕ್ಷರತಾ” ಆಂದೋಲನವನ್ನು ನಡೆಸಬೇಕಾಗಿತ್ತು. ದೇಶದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಗಳನ್ನು ನಡೆಸುವ ಮುನ್ನ ದೇಶದ ಮಾಲೀಕರಿಗೆ ಅದರ ಕುರಿತು ಅರಿವನ್ನು ಮೂಡಿಸಬೇಕಾಗಿತ್ತು. ಕೊನೆಯ ಪಕ್ಷ, ಮೊದಲ ಪಂಚವಾರ್ಷಿಕ ಯೋಜನೆಯಲ್ಲಿಯಾದರೂ ಸಂವಿಧಾನ ಸಾಕ್ಷರತೆಗೆ ಪ್ರಪ್ರಥಮ ಆದ್ಯತೆಯನ್ನು ನೀಡಬೇಕಾಗಿತ್ತು. ಆಗಿನ ಸಂವಿಧಾನ ಸಭೆಯ 299 ಪ್ರತಿನಿಧಿಗಳ ಅನುಮೋದನೆ ಪಡೆದ ಹಾಗೆ ಜನರ ಸಹಮತಿಯನ್ನು ಪಡೆಯಬೇಕಾಗಿತ್ತು. ಜನರನ್ನು ಅವರ ಸಂವಿಧಾನದ ಕುರಿತು ಸಾಕ್ಷರರನ್ನಾಗಿ ಮಾಡಬೇಕಾಗಿತ್ತು; ಇದು ಅಕ್ಷರದ ಸಾಕ್ಷರತೆಗಿಂತ, ಬಡತನ ನಿವಾರಣೆಗಿಂತಲೂ ಮಹತ್ವದ್ದಾಗಿತ್ತು, ತುರ್ತಾಗಿತ್ತು. ಅದನ್ನು ಮಾಡದೇ ಇದ್ದದ್ದು, ಈಗಲೂ ಅಂಥ ಯಾವುದೇ ಪ್ರಯತ್ನ, ಯೋಜನೆ ಇಲ್ಲದಿರುವುದು ಭಾರತ ಇಂದು ಎದುರಿಸುತ್ತಿರುವ ಸಾಂವಿಧಾನಿಕ ಮೌಲ್ಯಗಳ ಅವನತಿಗೆ ಮೂಲ ಕಾರಣವಾಗಿದೆ. ಆಟವನ್ನು ಆಡುತ್ತೇವೆ, ಆದರೆ ನಾವು ಆಡುವ ಆಟದ ಮೂಲ ನಿಯಮಗಳೇ ಗೊತ್ತಿಲ್ಲ.</p>



<p><strong>ಹಕ್ಕುಗಳು ಮತ್ತು ಕರ್ತವ್ಯಗಳು</strong><strong></strong></p>



<p>ಬಹುಶಃ ಹಿಂದಿನ ಯಾವುದೇ ಆಳ್ವಿಕೆಗಳಲ್ಲಿ ಇಲ್ಲದೇ ಇದ್ದ ಮಾನವ ಹಕ್ಕುಗಳನ್ನು ಭಾರತ ಸಂವಿಧಾನವು ನಮಗೆ ನೀಡಿದೆ. ಸಂವಿಧಾನದ ಭಾಗ 3ರಲ್ಲಿ, ಅನುಚ್ಛೇದ 12 ರಿಂದ 35ರಲ್ಲಿ ಆರು ಬಗೆಯ ಮೂಲಭೂತ ಹಕ್ಕುಗಳನ್ನು ನೀಡಿದೆ. ಆದರೆ, ಜನತಂತ್ರ ಯಶಸ್ವಿಯಾಗಬೇಕು ಎಂದರೆ ನಾಗರಿಕರು ಬರೀ ತಮ್ಮ ಹಕ್ಕುಗಳನ್ನು ಚಲಾಯಿಸುವುದರಲ್ಲಿ, ಅವುಗಳನ್ನು ಅನುಭವಿಸುವುದರಲ್ಲಿ ಕಾಲ ಕಳೆದರೆ ಆಗುವುದಿಲ್ಲ. ಪ್ರತಿಯೊಬ್ಬ ನಾಕರಿಕರಿಗೂ ಕೆಲವು ಸಾಂವಿಧಾನಿಕ ಕರ್ತವ್ಯಗಳೂ ಇರಬೇಕು. ಇದು ಕಾಲಾಂತರದಲ್ಲಿ ನಮಗೆ ಮನನವಾಯಿತು.</p>



<p>1976ರಲ್ಲಿ ಸರ್ದಾರ್ ಸ್ವರಣ್ ಸಿಂಗ್ ಸಮಿತಿಯು ನೀಡಿದ ಶಿಫಾರಸ್ಸನ್ನು ಅನುಸರಿಸಿ ಅಗಿನ ಸರಕಾರವು ಸಂವಿಧಾನಕ್ಕೆ 42ನೇ ತಿದ್ದುಪಡಿಯನ್ನು ತಂದು ಮೊದಲ ಬಾರಿಗೆ ಭಾಗ 4 ಎ-ರಲ್ಲಿ ಪ್ರತಿಯೊಬ್ಬ ಭಾರತೀಯರೂ ನಿಭಾಯಿಸಬೇಕಾದ 10 ಮೂಲಭೂತ ಕರ್ತವ್ಯಗಳನ್ನು ಪಟ್ಟಿ ಮಾಡಲಾಯಿತು. ಮುಂದೆ 2002ರಲ್ಲಿ, 86ನೇ ಸಂವಿಧಾನ ತಿದ್ದುಪಡಿಯ ಮೂಲಕ ಹನ್ನೊಂದನೆಯ, “ಪ್ರತಿಯೊಬ್ಬ ಪೋಷಕರೂ ತಮ್ಮ 6 ರಿಂದ 14ರ ಒಳಗಿನ ಮಕ್ಕಳಿಗೆ ಶಿಕ್ಷಣದ ಅವಕಾಶವನ್ನು ಒದಗಿಸುವುದು” ಎಂಬ ಮೂಲಭೂತ ಕರ್ತವ್ಯವನ್ನು ಸೇರಿಸಲಾಗಿದೆ. ನನಗೆ ಪ್ರಸ್ತುತ ಮುಖ್ಯವಾಗಿರುವುದು ಇದರಲ್ಲಿನ ಒಂದು ಮೂಲಭೂತ ಕರ್ತವ್ಯ.</p>



<figure class="wp-block-image size-full"><img loading="lazy" decoding="async" width="698" height="402" src="https://peepalmedia.com/wp-content/uploads/2024/08/05.jpg" alt="" class="wp-image-43414" srcset="https://peepalmedia.com/wp-content/uploads/2024/08/05.jpg 698w, https://peepalmedia.com/wp-content/uploads/2024/08/05-300x173.jpg 300w, https://peepalmedia.com/wp-content/uploads/2024/08/05-150x86.jpg 150w, https://peepalmedia.com/wp-content/uploads/2024/08/05-696x401.jpg 696w" sizes="auto, (max-width: 698px) 100vw, 698px" /></figure>



<p>ಸಂವಿಧಾನದ ಭಾಗ 4 ಎ, ಅನುಚ್ಛೇದ 51 ಎ (ಎಚ್)ರ ಪ್ರಕಾರ <strong>“ವೈಜ್ಞಾನಿಕ ಮನೋವೃತ್ತಿ, ಮಾನವೀಯತೆ, ಜಿಜ್ಞಾಸೆ ಮತ್ತು ಸುಧಾರಣಾ ಮನೋಭಾವವನ್ನು ಬೆಳೆಸಿಕೊಳ್ಳುವುದು” </strong>ನಮ್ಮೆಲ್ಲರ ಮೂಲಭೂತ ಕರ್ತವ್ಯವಾಗಿದೆ.</p>



<p>ನಿಜವೆಂದರೆ ’ವೈಜ್ಞಾನಿಕ ಮನೋವೃತ್ತಿ’ ಎಂಬುದರಲ್ಲಿಯೇ ’ಮಾನವೀಯತೆ, ಜಿಜ್ಞಾಸೆ ಮತ್ತು ಸುಧಾರಣಾ ಮನೋಭಾವ”ಗಳು ಒಳಗೊಂಡಿವೆ, ಆದರೂ ಅವುಗಳನ್ನು ಇನ್ನೂ ಸ್ಪಷ್ಟವಾಗಿ ಮನಗಾಣಿಸಲು ಹೀಗೆ ಬರೆಯಲಾಗಿದೆ. ಇತರ ಹಲವು ದೇಶಗಳ ಸಂವಿಧಾನಗಳಲ್ಲಿ ಮೂಲಭೂತ ಕರ್ತವ್ಯಗಳನ್ನು ನಮೂದಿಸಲಾಗಿದ್ದರೂ, ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸಿಕೊಳ್ಳುವುದನ್ನು ಮೂಲಭೂತ ಕರ್ತವ್ಯವನ್ನಾಗಿ ವಿಧಿಸಿರುವುದು ನಮ್ಮ ಸಂವಿಧಾನದಲ್ಲಿ ಮಾತ್ರ ಎಂದು ಹೇಳಲಾಗುತ್ತದೆ.</p>



<p><strong>ಜನ ಏಕೆ ಕಂಗಾಲಾಗಿದ್ದಾರೆ?&nbsp;&nbsp; </strong><strong></strong></p>



<p>ನಮಗೆ ನಾವೇ ಸಂವಿಧಾನವನ್ನು ಕೊಟ್ಟುಕೊಂಡ ನಂತರದಿಂದ ಜನತಂತ್ರಾತ್ಮಕ ಗಣರಾಜ್ಯವಾದ ನಮ್ಮ ದೇಶದಲ್ಲಿ ಜನತೆಯೇ ದೇಶದ ಸಮಷ್ಟಿ ಒಡೆಯರು. ತಮ್ಮನ್ನು ತಾವೇ ಸಂವಿಧಾನದ ಅಡಿಯಲ್ಲಿ ನಿರ್ವಹಿಸಿಕೊಳ್ಳುವವರು. ಆದರೂ ನಮ್ಮ ದೇಶದ ಜನಸಾಮಾನ್ಯರು ಏಕೆ ಇಷ್ಟೊಂದು, ಅಸಹಾಯಕ, ದಯನೀಯ ಪರಿಸ್ಥಿತಿಯಲ್ಲಿದ್ದಾರೆ? ಏಕೆಂದರೆ, ಅವರಿಗೆ ತಮ್ಮ ಪಾತ್ರ, ತಮ್ಮ ಹೊಣೆಗಾರಿಕೆಯ ಅರಿವಿಲ್ಲ.</p>



<p>ಜನತಂತ್ರವು ಯಶಸ್ವಿಯಾಗುವುದು, ಸಬಲಗೊಳ್ಳುವುದು ಜನರ ಭಾಗವಹಿಸುವಿಕೆಯಿಂದ. ಭಾಗವಹಿಸುವುದು ಎಂದರೆ ಚುನಾವಣೆ ಬಂದಾಗ ಕೇವಲ ತಮ್ಮ ಓಟನ್ನು ಒತ್ತಿ ತೆಪ್ಪಗೆ ಕೂಡುವುದಲ್ಲ. ದೇಶದಲ್ಲಿ ಜಾರಿಯಾಗುವ ಪ್ರತಿಯೊಂದು ಯೋಜನೆ, ಅನುಷ್ಠಾನ, ಫಲಿತಾಂಶ ಎಲ್ಲದರಲ್ಲಿಯೂ ಸಕ್ರಿಯವಾಗಿ ಭಾಗವಹಿಸುವುದು, ಯಶಸ್ಸಿನ ಪ್ರಶಂಸೆಯನ್ನು ಪಡೆಯುವುದು, ಸೋಲಿನ ಹೊಣೆಯನ್ನು ಹೊರುವುದು. ಎಂದರೆ, ಜನರ ಮಾಹಿತಿ ಸಂಪನ್ನವಾದ, ವಿವೇಕಯುತ ಭಾಗವಹಿಸುವಿಕೆ ಜನತಂತ್ರದ ಯಶಸ್ಸಿನ ಗುಟ್ಟು. ಇಂಥ ಜನ ನಮ್ಮಲ್ಲಿ ಎಷ್ಟು ಪ್ರಮಾಣದಲ್ಲಿದ್ದಾರೆ? ಇದಕ್ಕಾಗಿ ಮೂಲಭೂತವಾಗಿ ಜನರಲ್ಲಿ ವೈಜ್ಞಾನಿಕ ಮನೋವೃತ್ತಿ, ಜಿಜ್ಹಾಸೆ ಮತ್ತು ಸುಧಾರಣಾ ಮನೋಭಾವ ಇರಬೇಕಾಗುತ್ತೆ, ಅದಕ್ಕೆ ಅಲ್ಲವೇ ಅದನ್ನು 1976ರ ನಂತರವಾದರೂ ನಾವು ನಮ್ಮ ಮೂಲಭೂತ ಕರ್ತವ್ಯವೆಂಬಂತೆ ಒಪ್ಪಿಕೊಂಡಿರುವುದು!</p>



<p>ಸಮಾನತೆ, ಸಮತೆ, ಸೌಹಾರ್ದಯುತವಾದ, ಅಂಧಶ್ರದ್ಧೆ ಮತ್ತು ಅತಾರ್ಕಿಕ ಆಚರಣೆಗಳಿಂದ ಮುಕ್ತವಾದ, ಅಲೌಕಿಕದ ಭ್ರಮೆಯಲ್ಲಿ ಬದುಕುವುದನ್ನು ಬಿಟ್ಟು ಸ್ವವಿಶ್ವಾಸದ ಮೇಲೆ ಭರವಸೆ ಇಡುವ, ಜನರ ಸಕ್ರಿಯವಾದ ಭಾಗವಹಿಸುವಿಕೆಯಿಂದಲೇ ದೇಶದ ಸುಸ್ಥಿರ ಅಭಿವೃದ್ಧಿ ಸಾಧ್ಯ. ಇದು ಸಾಧ್ಯವಾಗಬೇಕು ಎಂದರೆ ಜನತಂತ್ರದಲ್ಲಿ ಭಾಗವಹಿಸುವ ಎಲ್ಲರೂ ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ.</p>



<p><strong>ಮರೀಚಿಕೆಯಾಗಿರುವ ವೈಜ್ಞಾನಿಕ ಮನೋವೃತ್ತಿ</strong><strong></strong></p>



<p>ಶಿಕ್ಷಣ, ಆರ್ಥಿಕ ಅಭಿವೃದ್ಧಿ, ಆಧುನಿಕ ತಂತ್ರಜ್ಞಾನ ಇವುಗಳ ಬೆಳವಣಿಗೆಯಾದಾಗ ಅದರ ಪರಿಣಾಮವಾಗಿ ಸಹಜವಾಗಿಯೇ ಜನರಲ್ಲಿ ವೈಚಾರಿಕತೆ ಬೆಳೆಯುತ್ತದೆ ಎಂಬ ಒಂದು ನಂಬಿಕೆಯಿತ್ತು. ಇದೊಂದು ಮೂಢನಂಬಿಕೆ ಎಂದು ಸಾಬೀತಾಗಿದೆ. ಮೂಢನಂಬಿಕೆ ಕಡಿಮೆಯಾಗುವ ಬದಲು ಹೆಚ್ಚಾಗುತ್ತಿದೆ; ಹೆಚ್ಚು ಆಳವಾಗಿ ಬೇರೂರುತ್ತಿದೆ. ವಿಪರ್ಯಾಸದ ಸಂಗತಿಯೆಂದರೆ ದಟ್ಟವಾದ, ಅಖಂಡವಾದ, ಅಚಲವಾದ ಮೌಢ್ಯವನ್ನು ಜನರಲ್ಲಿ ಬಿತ್ತಿ ಬೆಳೆಸಲು ಆಧುನಿಕ ವಿಜ್ಞಾನ ತಂತ್ರಜ್ಞಾನದ ಸಾಧನಗಳನ್ನೇ ಬಳಸಿಕೊಳ್ಳುತ್ತಿರುವುದು. ಮೌಢ್ಯವನ್ನು ಬೆಳೆಸುವುದು, ಕಣ್ಣುಮುಚ್ಚಿ ಹೇಳಿದ್ದನ್ನು ನಂಬುವ ಮನೋದಾಸ್ಯವನ್ನು ಪೋಷಿಸುವುದು ಫಲಜ್ಯೋತಿಷ, ವಾಸ್ತು, ಸಂಖ್ಯಾಶಾಸ್ತ್ರ, ಮಾಂತ್ರಿಕ ಶಕ್ತಿಯ ವಸ್ತುಗಳನ್ನು ಮಾರುವಂಥ ಕೆಲವರಿಗೆ&nbsp; ಲಾಭದಾಯಕ ವ್ಯಾಪಾರವಾದರೆ, ಸ್ವಾರ್ಥಿ ರಾಜಕಾರಣಿಗಳಿಗೆ ಇದು ಶೋಷಣೆಯ ಸಾಧನವಾಗಿವೆ.</p>



<p>ಸಾಮಾಜಿಕ ಹೊಣೆಗಾರಿಕೆ ಎನ್ನುವುದರ ಮೂಲ ಕಾಗುಣಿತವೂ ಗೊತ್ತಿರದ ಮಾಧ್ಯಮಗಳು, ಅವುಗಳನ್ನು ಬಳಸಿಕೊಳ್ಳುವ ವಂಚಕರು, ಅವರ ಮಾತಿಗೆ ಮರುಳಾಗಿ ಕಂಗಾಲಾಗಿರುವ, ಭಯಗ್ರಸ್ಥರಾಗಿರುವ ಜನ ಸಾಮಾನ್ಯರು ಹೀಗೆ ಅತಾರ್ಕಿಕವಾಗಿ ಮಾತಾಡಿದರೆ, ಆಚರಿಸಿದರೆ ಅದೊಂದು ಮಾತು. ಆದರೆ, ನಮ್ಮ ಪರವಾಗಿ, ಪ್ರತಿನಿಧಿಗಳಾಗಿ ನಮ್ಮ ದೇಶವನ್ನು ನಿರ್ವಹಿಸಿ ಎಂದು ನಾವು ಗ್ರಾಮ ಮಟ್ಟದಿಂದ ಹಿಡಿದು ಸಂಸತ್ತಿನ ಮಟ್ಟದ ವರೆಗೆ ಆಯ್ಕೆ ಮಾಡಿ ಕಳಿಸುವ ರಾಜಕಾರಣಿಗಳೂ ಯಾವುದೇ ನಾಚಿಕೆಯಿಂದಲ್ಲದೇ ಮುಜುಗರವಿಲ್ಲದೇ ಮೂಢಾಚರಣೆಯಲ್ಲಿ ತೊಡಗಿರುವುದು ತುಂಬ ವಿಷಾದದ ಸಂಗತಿ.</p>



<p>ಸಂವಿಧಾನದ ಅನುಚ್ಛೇದ 25-28ರಲ್ಲಿ ಭಾರತದ ನಾಗರೀಕರು ತಮ್ಮ ಆಯ್ಕೆಯ ಧರ್ಮವನ್ನು ಅನುಸರಿಸುವ, ಬೋಧಿಸುವ, ಪ್ರಚಾರ ಮಾಡುವ ಹಕ್ಕು ಮತ್ತು ಸ್ವಾತಂತ್ರ್ಯವನ್ನು ನೀಡುತ್ತದೆ. ದೇಶದ ಬಹುಧರ್ಮೀಯ ಮತ್ತು ಬಹುತ್ವದ ಹಿನ್ನೆಲೆಯಲ್ಲಿ ಇದನ್ನು ಇನ್ನೊಂದು ಧರ್ಮವನ್ನು ಅನುಸರಿಸುವ ನಾಗರಿಕರ ಹಕ್ಕುಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ಮಾಡಬೇಕು ಎಂದು ನಿರೀಕ್ಷಿಸಲಾಗುತ್ತದೆ. ಆದರೆ, ಇದೆಲ್ಲಾ, ನಾಗರಿಕರ ವೈಯಕ್ತಿಕ ಹಕ್ಕಿನ ಪ್ರಶ್ನೆಯಾಯಿತು. ಆದರೆ ಇಡೀ ರಾಷ್ಟ್ರಕ್ಕೆ ತನ್ನದೇ ಆದ ಧರ್ಮ ಎಂಬುದಿಲ್ಲ.</p>



<p>ನವೆಂಬರ್ 5, 2019ರಂದು, 5ನೇ ಇಂಡಿಯಾ ಇಂಟರ್ ನ್ಯಾಷನಲ್ ಸೈನ್ಸ್ ಫೆಸ್ಟಿವಲನ್ನು ಉದ್ಘಾಟಿಸುತ್ತಾ,&nbsp;&nbsp;&nbsp; ಪ್ರಧಾನಿ ಮೋದಿಯವರು &nbsp;ಜನರಲ್ಲಿ ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸುವುದು ಎಷ್ಟೊಂದು ಮಹತ್ವದ ವಿಚಾರ ಎಂಬುದರ ಕುರಿತು ವಿದ್ವತ್ಪೂರ್ಣವಾಗಿ ಮಾತಾಡಿದರು, ಅದೇ ವರ್ಷ ಜನವರಿ 3ರಂದು ೧೦೬ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಉದ್ಘಾಟನೆಯೆ ವೇಳೆಯಲ್ಲಿ ಪುರಾಣದ ಉದಾಹರಣೆಗಳನ್ನು ಕೊಟ್ಟು ಪ್ಲ್ಯಾಸ್ಟಿಕ್ ಸರ್ಜರಿ, ಜೆನೆಟಿಕ್ ಇಂಜಿನಿಯರಿಂಗ್, ವಿಮಾನಯಾನ ಸಾವಿರಾರು ವರ್ಷಗಳ ಹಿಂದೆಯೆ ಭಾರತದಲ್ಲಿತ್ತು ಎಂದು ಹೇಳಿದರು. ಜುಲೈ 22ರಂದು ಗುಜರಾತಿನಲ್ಲಿರುವ ಕಕ್ರಪಾರ್ ಪರಮಾಣು ಶಕ್ತಿ ಕೇಂದ್ರ ಮಾಡಿದ ಪರಮ ಸಾಧನೆಯ ಆಚರಣೆಗಾಗಿ ಇದ್ದಲ್ಲಿಂದಲೇ ವಿಜ್ಞಾನಿಗಳಿಗೆ ಅಭಿನಂದನೆ ಹೇಳಿದರು, ಖುದ್ದಾಗಿ ಹೋಗಲಿಲ್ಲ; ಆದರೆ ಆಗಸ್ಟ್ 5ರಂದು ಅಯೋದ್ಯೆಯ ರಾಮ ಮಂದಿರ ಶಿಲಾನ್ಯಾಸ ಪೂಜೆಗೆ ಸಕಲ ಗೌರವಗಳೊಂದಿಗೆ ಹಾಜರಾದರು. ಇದು ಬೀಜದ ರೂಪದಲ್ಲಿ ನಮ್ಮ ದೇಶದಲ್ಲಿನ ವೈಜ್ಞಾನಿಕ ಮನೋವೃತ್ತಿಯ ಸ್ಥಿತಿಗತಿಯನ್ನು, ಎಡೆಬಿಡಂಗಿತನ, ಗೊಂದಲಗಲಿಬಿಯ ಸ್ಥಿತಿಯನ್ನು ಸೂಚಿಸುತ್ತದೆ. ಈ ಕುರಿತು ನಿಮ್ಮ ಜವಾಬ್ದಾರಿ ಏನು, ಅರಿತುಕೊಳ್ಳಿ.</p>



<p><strong>ಕೃಪೆ: “ಹೊಸರು” ಮಾಸಿಕ</strong></p>



<p></p>



<figure class="wp-block-table"><table class="has-fixed-layout"><tbody><tr><td></td></tr></tbody></table></figure>



<figure class="wp-block-table"><table class="has-fixed-layout"><tbody><tr><td>&nbsp;</td></tr></tbody></table></figure>



<figure class="wp-block-table"><table class="has-fixed-layout"><tbody><tr><td><strong> </strong> </td></tr></tbody></table></figure>



<figure class="wp-block-table"><table class="has-fixed-layout"><tbody><tr><td>&nbsp;</td></tr></tbody></table></figure>



<figure class="wp-block-table"><table class="has-fixed-layout"><tbody><tr><td>&nbsp;</td></tr></tbody></table></figure>



<figure class="wp-block-table"><table class="has-fixed-layout"><tbody><tr><td>&nbsp;</td></tr></tbody></table></figure>
]]></content:encoded>
					
		
		
			</item>
	</channel>
</rss>
