<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ವಿಡಂಬನೆ &#8211; Peepal Media</title>
	<atom:link href="https://peepalmedia.com/category/more/satire/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 12 Aug 2024 11:14:15 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>ವಿಡಂಬನೆ &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ʼಓಲಂಪಿಕ್‌ʼನಲ್ಲಿ ಗೋಲ್ಡ್‌ ಮೇಡಲ್‌ ಗೆದ್ದ ʼನಮೋ&#8217;! (ಕಠಾರಿಯವರ ವಿಡಂಬನಾ ಬರಹ)</title>
		<link>https://peepalmedia.com/%ca%bcnamo-winning-gold-medal-in-chaddi-olympics-satire-by-kathari/</link>
		
		<dc:creator><![CDATA[Peepal Media]]></dc:creator>
		<pubDate>Mon, 12 Aug 2024 09:46:27 +0000</pubDate>
				<category><![CDATA[ಅಂಕಣ]]></category>
		<category><![CDATA[ದೇಶ]]></category>
		<category><![CDATA[ವಿಡಂಬನೆ]]></category>
		<category><![CDATA[ಸತ್ಯ ಶೋಧ]]></category>
		<category><![CDATA[bengalure]]></category>
		<category><![CDATA[bjp]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[modi]]></category>
		<category><![CDATA[modijí]]></category>
		<category><![CDATA[Narendra modhi road show]]></category>
		<category><![CDATA[olampic]]></category>
		<category><![CDATA[olempic]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[pm]]></category>
		<category><![CDATA[pm modi]]></category>
		<category><![CDATA[pm narendra modi]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[Vinesh pogat]]></category>
		<category><![CDATA[vineshpogat]]></category>
		<category><![CDATA[writing]]></category>
		<guid isPermaLink="false">https://peepalmedia.com/?p=43704</guid>

					<description><![CDATA[ಸದಾ ಚಪ್ಪಾಳೆ, ಹೊಗಳಿಕೆಯನ್ನು ಆನಂದಿಸುತ್ತ ಆತ್ಮರತಿಯಲ್ಲಿ ಸುಖಿಸುವ ಸಾಮ್ರಾಟ ನಮೋಗೆ ಬಹುಮತವಿಲ್ಲದ ಅಧಿಕಾರ ಹಿಡಿದಂದಿನಿಂದ ಖಿನ್ನತೆ ಆವರಿಸಿತ್ತು. ವಿಜ್ಞಾನ, ಗಣಿತ ಜ್ಞಾನವನ್ನೆಲ್ಲ ಅರೆದು ಕುಡಿದವನಂತೆ ಬೂಸಿ ಬಿಟ್ಟರೂ ಲೈಕ್ ಒತ್ತಿ, ಫಾರ್ವಡ್ ಮಾಡಿ ಹಾಡಿ ಹೊಗಳುತ್ತಿದ್ದ ಭಕ್ತರೇ ಹಾದಿಬೀದಿಯಲ್ಲಿ ನಿಂತು ಫೇಕು ಮಾಸ್ಟರ್, ಕಿಂಗ್ ಆಫ್ ಕರಪ್ಷನ್ ಎಂದು ಮುಖಕ್ಕೆ ಮಂಗಳಾರತಿ ಎತ್ತುತ್ತಿರುವ ರೀಲ್ಸ್ ಗಳು ನಮೋವನ್ನು ಕಂಗೆಡಿಸಿತ್ತು. ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮಗಳನ್ನು ಮಾಡಿ ಲೈಮ್ ಲೈಟಿನಲ್ಲಿರೋಣವೆಂದರೆ – ತಾನೇ ಉದ್ಘಾಟಿಸಿದ, ಪಾರ್ಟಿಯ ಖಜಾನೆ ತುಂಬಿಸಿದ ಏರ್ [&#8230;]]]></description>
										<content:encoded><![CDATA[
<p>ಸದಾ ಚಪ್ಪಾಳೆ, ಹೊಗಳಿಕೆಯನ್ನು ಆನಂದಿಸುತ್ತ ಆತ್ಮರತಿಯಲ್ಲಿ ಸುಖಿಸುವ ಸಾಮ್ರಾಟ ನಮೋಗೆ ಬಹುಮತವಿಲ್ಲದ ಅಧಿಕಾರ ಹಿಡಿದಂದಿನಿಂದ ಖಿನ್ನತೆ ಆವರಿಸಿತ್ತು. ವಿಜ್ಞಾನ, ಗಣಿತ ಜ್ಞಾನವನ್ನೆಲ್ಲ ಅರೆದು ಕುಡಿದವನಂತೆ ಬೂಸಿ ಬಿಟ್ಟರೂ ಲೈಕ್ ಒತ್ತಿ, ಫಾರ್ವಡ್ ಮಾಡಿ ಹಾಡಿ ಹೊಗಳುತ್ತಿದ್ದ ಭಕ್ತರೇ ಹಾದಿಬೀದಿಯಲ್ಲಿ ನಿಂತು ಫೇಕು ಮಾಸ್ಟರ್, ಕಿಂಗ್ ಆಫ್ ಕರಪ್ಷನ್ ಎಂದು ಮುಖಕ್ಕೆ ಮಂಗಳಾರತಿ ಎತ್ತುತ್ತಿರುವ ರೀಲ್ಸ್ ಗಳು ನಮೋವನ್ನು ಕಂಗೆಡಿಸಿತ್ತು.</p>



<p>ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮಗಳನ್ನು ಮಾಡಿ ಲೈಮ್ ಲೈಟಿನಲ್ಲಿರೋಣವೆಂದರೆ – ತಾನೇ ಉದ್ಘಾಟಿಸಿದ, ಪಾರ್ಟಿಯ ಖಜಾನೆ ತುಂಬಿಸಿದ ಏರ್ ಪೋರ್ಟಿನ ಚಾವಣಿಗಳು ಆಕಾಶಕ್ಕೆ ಹಾರಿ ಹೋಗುತ್ತಿದ್ದರೆ, ಹೈವೇಗಳು ಒಂದೇ ಮಳೆಗೆ ಬಿರುಕು ಬಿಟ್ಟು ಬಾಯ್ತೆರೆದಿದ್ದವು. ಒಂದು ವರ್ಷವೂ ತುಂಬಿರದ ಹೊಸ, ನಿರ್ಮಾಣ ಹಂತದ ಸೇತುವೆಗಳು ಸ್ಪರ್ಧೆಗೆ ಬಿದ್ದಂತೆ ಸಾಲುಸಾಲಾಗಿ ಧರೆಗುರುಳುತ್ತಿದ್ದವು. ಇನ್ನು ಪರೀಕ್ಷೆ ಹೊತ್ತಲ್ಲಿ ವಿದ್ಯಾರ್ಥಿಗಳನ್ನು ಗುಡ್ಡೆ ಹಾಕಿ ʼಎಕ್ಸಾಮ್ ಪೇ ಚರ್ಚಾʼ ಮಾಡಿ ಪುಕ್ಕಟೆ ಸಲಹೆ ಕೊಡೋಣವೆಂದರೆ ಪ್ರಶ್ನೆಪತ್ರಿಕೆಗಳು ಸೋರಿ ಹೋಗಿ ವಿದ್ಯಾರ್ಥಿಗಳು ರೊಚ್ಚಿಗೆದ್ದು ಬೀದೀಲಿ ಗಲಾಟೆ ಮಾಡುತ್ತಿದ್ದರು. ಮನೆಯಿಂದ ಹೊರ ಹೋಗುವ ಹಾಗೆ ಇರಲಿಲ್ಲ.</p>



<p>ರೂಮಲ್ಲೇ ಕೂತು &#8211; ಕಾಂತಿಯಿಂದ ಹೊಳೆಯುತ್ತಿದ್ದ ಮುಖಾರವಿಂದವು ಕಪ್ಪುಗಟ್ಟಿ, ಕನ್ನಡಿಯಲ್ಲಿನ ಪ್ರತಿಬಿಂಬ ನಮೋನನ್ನು ʼಗೆದ್ದು ಸೋತ ಸಾಮ್ರಾಟʼ ಎಂದು ಅಣಕಿಸುತ್ತಿತ್ತು. ಕಾರಿನಲ್ಲಿ ಮುಂದೆ ಆಸೀನವಾದರೆ ಪ್ರಭಾವಳಿಯಾಗಿದ್ದ ಚಾವಣಿ ಲೈಟನ್ನು ತೆಗೆಸಿ, ಜನರಿಗೆ ಹ್ಯಾಪು ಮೋರೆ ತೋರಿಸಲಾಗದೆ ಹಿಂಬದಿಗೆ ಕೂರುವ ದುರ್ದೆಶೆಯನ್ನು ಶಪಿಸುವುದು ಬಿಟ್ಟು ನಮೋಗೆ ಬೇರೆ ಪರಿಹಾರ ಕಾಣಲಿಲ್ಲ.</p>



<p>ಮನೆಯಲ್ಲೇ ಕೂತರೆ ಹುಚ್ಚು ಹಿಡಿಯುತ್ತದೆಂದು ಫಾರಿನ್ ಟೂರ್ ಹೊರಟರೆ ಅಲ್ಲೂ ನಿರಾಶೆ. ಏರ್ ಪೋರ್ಟಲ್ಲಿ ಸ್ವಾಗತ ಕೋರಲು ವಿದೇಶದಲ್ಲಿ ಗಣ್ಯರು ನಾಪತ್ತೆ. ಇನ್ನು ಸ್ವದೇಶಕ್ಕೆ ಮರಳಿದರೆ ತನ್ನ ಪಾರ್ಟಿಯ ಕಮಲಿಗಳೇ ಬೊಕ್ಕೆ ಹಿಡಿದು ನಿಲ್ಲಲು ಅಸಡ್ಡೆ ತೋರಿ ನೊಣ ಹೊಡೆಯುವುದಕ್ಕೂ ಯಾರೂ ಇರುತ್ತಿರಲಿಲ್ಲ.</p>



<p>ಯಾವುದಾದರೂ ಸನ್ನಿವೇಶವನ್ನು ಸೃಷ್ಟಿಸಿ ನಂದಿ ಹೋಗಿದ್ದ ಲೈಮ್ ಲೈಟನ್ನು ಹೇಗೆ ಹೊತ್ತಿಸುವುದೆಂಬ ದೇಶೋದ್ಧಾರದ ಚಿಂತನೆಯಲ್ಲಿ ಮುಳುಗಿದ್ದ ನಮೋಗೆ ಯಾರೋ ಕೂಗಿದಂತಾಯಿತು. “ವಿಶ್ವಗುರು ಚಿರಾಯುವಾಗಲಿ” ಎಂದು ಮುಖ್ಯ ಆಪ್ತಕಾರ್ಯದರ್ಶಿ ಸಂಘೀ ಸಲಾಮು ಮಾಡುತ್ತ ಎದುರಿಗೆ ನಿಂತಿದ್ದ.</p>



<p>“ಮಹಾಸ್ವಾಮಿಗಳೇ…ತಮಗೆ ಸಂತೋಷ ಸುದ್ದಿ. ಲೈಮ್ ಲೈಟಿಗೆ ಮತ್ತೆ ಬರಲು ಸುವರ್ಣಾವಕಾಶ!”</p>



<p>ತನ್ನ ಮನದ ತಳಮಳ ತಿಳಿದದ್ದು ಹೇಗೆ ಎಂದು ಅಚ್ಚರಿಗೊಂಡರೂ “ಲೈಮ್ ಲೈಟಲ್ಲಿ ಇರೋದೆ ನಂಗೆ ಕೆಲ್ಸನಾ? ಜನರೋದ್ಧಾರದ ವಿಚಾರಗಳು ಇಲ್ವಾ? ಅಧಿಕಪ್ರಸಂಗಿ…ಸರಿ…ಏನದು ಸಮಾಚಾರ?” ಎಂದು ಹುಸಿ ಕೋಪ ಪ್ರದರ್ಶಿಸಿದ.</p>



<p>“ಸ್ವಾಮಿಗಳೇ…ಒಲಂಪಿಕ್ ಗೇಮ್ಸ್ ಶೂಟಿಂಗಲ್ಲಿ ನಮಗೆ ಬ್ರಾಂಜ್ ಮೆಡಲ್ ಬಂದಿದೆ!”</p>



<p>“ಓಹ್…ಹೌದಾ! ಒಳ್ಳೆಯ ಸುದ್ದಿ ತಂದಿದ್ದೀಯ. ಇಷ್ಟು ವರ್ಷ ನಾನು ಕಷ್ಟಪಟ್ಟಿದ್ದಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ತಗೋ…” ಎಂದು ಕುತ್ತಿಗೆಯಲ್ಲಿದ್ದ ಕಂಠೀಹಾರವನ್ನು ಅವನತ್ತ ಒಗೆದು “ಬೇಗ ಕ್ಯಾಮೆರಾಮೆನ್ನ ಕರೆಸು. ಹಾಗೆ ಆ ಸ್ಪರ್ಧಿಗೆ ಫೋನು ಮಾಡು”</p>



<p>“ಹಲೋ…”</p>



<p>“ಹಲೋ…ಯಾರು?”</p>



<p>“ನಾನಮ್ಮ…ವಿಶ್ವಗುರು…ಭರತಖಂಡದಿಂದ”</p>



<p>“ಹ!…ಖಂಡ?…ಯಾವ ಆಶ್ರಮಕ್ಕೂ ನಾನು ಭಕ್ತೆಯಾಗಿಲ್ಲ….ರಾಂಗ್ ನಂಬರ್”</p>



<p>ಆ ಕಡೆಯಿಂದ ಫೋನ್ ಕಟ್ ಮಾಡಿದ್ದು ನಮೋಗೆ ಕಪಾಳಮೋಕ್ಷ ಆದಂತಾಯಿತು.</p>



<p>“ಮೇಡಮ್…ಪ್ರಧಾನಿ ನಮೋ ಮಾತಾಡ್ತಿರೋದು. ನಿಮ್ಗೆ ಕಂಗ್ರಾಟ್ಸ್ ಹೇಳೋಕೆ” ಮತ್ತೆ ಆಪ್ತಕಾರ್ಯದರ್ಶಿ ಕರೆ ಮಾಡಿದ.</p>



<p>“ಓಹ್…ಸಾರಿ ಸರ್, ಗೊತ್ತಾಗ್ಲಿಲ್ಲ. ಥ್ಯಾಂಕ್ಯು ಸರ್”</p>



<p>“ಪರವಾಗಿಲ್ಲ. ಶೂಟಿಂಗ್ ಅಂದ್ರೆ…ರೀಲ್ಸ… ಶಾರ್ಟ್ ಫಿಲ್ಮಾ ಅಥ್ವಾ ಫೂಚರ್ ಫಿಲ್ಮಾ?”</p>



<p>“ಇಲ್ಲಾ ಸಾರ್…ಅದು ಪಿಸ್ತೂಲ್ ಶೂಟಿಂಗ್….ಟೆನ್ ಮೀಟರ್ ರೇಂಜು”</p>



<p>“ಗನ್ ಶೂಟಿಂಗಾ…ಒಳ್ಳೇದು. ನಮ್ಮ ದೇಶಕ್ಕೆ ಮೆಡಲ್ ತಂದು ವರ್ಲ್ಡ್ ಫೇಮಸ್ ಮಾಡಿದ್ದೀಯ…ಬದಾಯಿ”</p>



<p>“ಥ್ಯಾಂಕ್ಯು ವೆರಿ ಮಚ್…ಸರ್”</p>



<p>“ಬೇಟಿ ಪಡಾವ್…ಬೇಟಿ ಬಚಾವ್…ನನ್ನ ಸ್ಲೋಗನ್ ಸಾರ್ಥಕ ಆಯ್ತು ನೋಡು, ವೆಲ್ ಡನ್…ಹ…ಒಂದ್ ವಿಷ್ಯ ನಿಂಗೆ ಗೊತ್ತಾ? ನಾನೂ ಒಲಂಪಿಕ್ಸ್ ನಲ್ಲಿ ಗೋಲ್ಡ್ ಮೆಡಲ್ ವಿನ್ನರ್!”</p>



<p>“ಗ್ರೇಟ್ ಸರ್…ಗೊತ್ತೇ ಇರಲಿಲ್ಲ!”</p>



<p>“ಹಳೇ ಮಾತು…ಯಂಗ್ ಆಗಿದ್ದಾಗ, ನನ್ನ ಪೂರ್ವಾಶ್ರಮ ಮಾ.ಕೃಪಾಕಟಾಕ್ಷ ಕುಟೀರದ ಅಂತರರಾಷ್ಟ್ರೀಯ ಚಡ್ಡಿ ಒಲಂಪಿಕ್ಸ್ ಕ್ರೀಡಾಸ್ಪರ್ಧೆಯಲ್ಲಿ ನಮ್ಮ ತಾಲ್ಲೂಕಿಗೆ ನಾನೇ ಮೂರು ಬಾರಿ ಗೋಲ್ಡ್ ಮೆಡಲ್ ಗೆದ್ದಿದ್ದೆ”</p>



<p>“ಸೂಪರ್…ಯಾವ ಗೇಮಲ್ಲಿ ಸರ್”</p>



<p>“ಬಹಳ ಟಫ್ ಗೇಮ್…ಹಳಿ ಇಲ್ಲದೆ ಬುಲೆಟ್ ಟ್ರೈನ್ ಬಿಡೋದು…”</p>



<p>ಬುರುಡೆ ಬಿಡುತ್ತಿದ್ದ ನಮೋನ ನಾನ್ ಸ್ಟಾಪ್ ಮಾತಿಗೆ ಆ ತುದಿಯಿಂದ ಪ್ರತಿಕ್ರಿಯೆ ಬರುವುದು ನಿಂತಾಗ, ಸಾಕಷ್ಟು ರೀಲು ಸುತ್ತಿಕೊಂಡ ಡೈರೆಕ್ಟರ್ ಕೊನೆಗೆ ʼಕಟ್…ಕಟ್ʼ ಎಂದಾಗಲೇ ನಮೋ ಮಾತು ನಿಲ್ಲಿಸಿದ.</p>



<p>ಬದಾಯಿ ಹೇಳಿದ ನಮೋನ ರೀಲ್ಸ್ ಸಿಕ್ಕಿದ್ದೇ ತಡ ವೈರಲ್ ಮಾಡಲು ಅಮಿತ ಮನೆಹಾಳ, ರಾಗಾನ ಸಂಸತ್ತು ಭಾಷಣ ನೋಡುವುದರಲ್ಲಿ ಮಗ್ನರಾಗಿದ್ದ ಕೇಸರಿ ಐಟಿ ಸೆಲ್ಲಿನ ಟು ರುಪೀಸ್ ಕೂಲಿಗಳನ್ನು ಕೆಲಸಕ್ಕೆ ಹಚ್ಚಿದ.</p>



<p>ಕನ್ನಡಿ ಮುಂದೆ ನಿಂತಾಗ ಮೈಮೇಲೆ ಮಂದ ಬೆಳಕು ಚೆಲ್ಲಿದ್ದನ್ನು ಕಂಡು ಮುಖವರಳಿಸಿ ʼಬ್ಯಾಕ್ ಟು ಲೈಮ್ ಲೈಟುʼ ಎಂದು ನಮೋ ಗಡ್ಡ ನೀವಿಕೊಳ್ಳುವ ಹೊತ್ತಿಗೆ, ಆಪ್ತಕಾರ್ಯದರ್ಶಿ “ಸ್ವಾಮಿಗಳೇ…. ಮತ್ತೊಂದು ಶುಭ ಸಮಾಚಾರ. ಕುಸ್ತಿಯಲ್ಲಿ ಗೋಲ್ಡ್ ಮೆಡಲ್ ಮಿಸ್ಸಾದರೆ….ಸಿಲ್ವರ್ ಮೆಡಲ್ ಅಂತೂ ಗ್ಯಾರಂಟಿ” ಅಂದ.</p>



<p>“ಕುಸ್ತಿ!” ಶಬ್ಧ ಕಿವಿಗೆ ಬಿದ್ದದ್ದೇ ಅರಳಿದ ನಮೋ ಮುಖ ಕಿವುಚಿದ ಹುಣಸೇ ಹಣ್ಣಾಯಿತು. ಕೈ ಸನ್ನೆ ಮಾಡಿ ಹೊರಡು ಎಂದದ್ದು ಆಪ್ತಕಾರ್ಯದರ್ಶಿಗೆ ʼತೊಲಗಾಚೆ!ʼ ಎನ್ನುವಂತಿತ್ತು.</p>



<p>ತನ್ನ ಬಲಗೈಬಂಟ, ಕುಖ್ಯಾತ ಕಚ್ಚೆಹರುಕ &#8211; ತ್ಯಾಜ್ಯ ಅವಲಕ್ಷಣ್ ವಿರುದ್ಧ ಮಹಿಳಾ ಲೈಂಗಿಕ ಶೋಷಣೆ ಆರೋಪ ಮಾಡಿದ್ದೇ ಅಲ್ಲದೇ ರಾಜಧಾನಿಯ ಮೈನ್ ರೋಡಲ್ಲಿ ಟೆಂಟಾಕಿ “ರೇಪಿಸ್ಟ್ ಅನ್ನು ಫೆಡರೇಷನ್ ನಿಂದ ಹೊರ ಹಾಕಿ, ಬೇಟಿ ಬಚಾವ್ ಮಾತನ್ನು ಉಳಿಸಿಕೊಳ್ಳಿ. ಇಲ್ಲಾ ಒಲಂಪಿಕ್ಸ್ ನಲ್ಲಿ ಗೆದ್ದು ನಿಮ್ಮ ಹಿಪಾಕ್ರಸಿಯನ್ನು, ದುರಹಂಕಾರವನ್ನು ಸೋಲಿಸಿಯೇ ಸೋಲಿಸುತ್ತೇನೆ” ಎಂದು ತನಗೆ ಸವಾಲು ಹಾಕಿದ ಮಹಿಳಾ ಪೈಲ್ವಾನರ ಪ್ರತಿಭಟನೆ ನಮೋನ ಕಣ್ಮುಂದೆ ಹಾದು ಹೋಗಿ, ದೇಹ ಬೆಂಕಿಯಾಗಿ, ಉರಿ ಅಸಹನೀಯವಾಯಿತು.</p>



<p>“ನನ್ನನ್ನು ಬೆದರಿಸುವಷ್ಟು ಧೈರ್ಯದ ವೈರಿಗೆ ಪದಕ ಸನ್ಮಾನವೇ? ಅದನ್ನು ತಡೆಯುವುದು ಹೇಗೆ? ಇಲ್ಲಿಯೇ ಆಗಿದ್ದರೆ ಕುತಂತ್ರಿಗೆ ಹೇಳಿ ಇಡಿ, ಐಟಿ, ಸಿಬಿಐಯನ್ನು ಛೂ ಬಿಡಬಹುದಿತ್ತು. ಆ ದೇಶದ ಪ್ರಧಾನಿಗೆ ಹೇಳಿದರೆ ಹೇಗೆ?” ಮುಷ್ಟಿ ಹಿಡಿದು ಯೋಚಿಸುತ್ತ ನಮೋ ಶತಪಥ ಹಾಕಿದ.</p>



<p>ಓಡೋಡಿ ಬಂದ ಆಪ್ತಕಾರ್ಯದರ್ಶಿ “ಘಾತವಾಯಿತು ಮಹಾಸ್ವಾಮಿ…ಪೈಲ್ವಾನ್ ತೂಕ ನೂರೇ ಗ್ರಾಮ್ ಹೆಚ್ಚಾಗಿ ಅವಳನ್ನು ಡಿಸ್ ಕ್ವಾಲಿಫೈ ಮಾಡಿದ್ದಾರೆ!” ಎಂದಾಗ, ನಮೋಗೆ ಕುಣಿಯಬೇಕು ಅನ್ನಿಸಿದರೂ “ಅಯ್ಯೋ…ಎಂಥಾ ದುರ್ವಿಧಿ. ಅದೆಂಥ ರೂಲ್ಸುಗಳು! ಹೋಗಲಿ…ನಾವೇನು ಮಾಡುವಂತಿಲ್ಲ. ಒಂದು ಚೊಂಬು ತಣ್ಣಗಿನ ಹಾಲು ತಗೊಂಬಾ. ಹೊಟ್ಟೆಗೆ ಬೆಂಕಿ ಬಿದ್ದಿದೆ” ಎಂದು, ಹಾಲು ಕುಡಿದು ದೇಹದ ತಾಪಮಾನ ಇಳಿಸಿಕೊಂಡ.</p>



<p>“ಮಗಳೇ…ನೀನು ಚಾಂಪಿಯನ್ನರ ಚಾಂಪಿಯನ್, ನಮ್ಮ ದೇಶದ ಹೆಮ್ಮೆ. ಪದಕ ಕೈತಪ್ಪಿದ್ದಕ್ಕಾಗಿ ನಿನಗಿಂತ ನನಗೆ ಎಷ್ಟು ನೋವಾಗಿದೆ ಎಂದರೆ ಅದನ್ನು ಪದಗಳಲ್ಲಿ ಬರೆಯಲಾಗುತ್ತಿಲ್ಲ. ಧೃತಿಗೆಡಬೇಡ…ನಾವೆಲ್ಲ ನಿನ್ನೊಂದಿಗಿದ್ದೇವೆ” ಎಂದು ತೋರಿಕೆ ಸಂದೇಶ ಹಾಕಿ, ಅತ್ತ ಕ್ರೀಡಾ ಮಂತ್ರಿ ಅಮಾನುಷ್ ಮಂಡೂಕನಿಗೆ ಪೈಲ್ವಾನಳಿಗೆ ವ್ಯಯಿಸಿದ ಖರ್ಚುವೆಚ್ಚವನ್ನು ಪ್ರಕಟಿಸಲು ಚಿತಾವಣೆ ಮಾಡಿದ.</p>



<p>ಪೊಲೀಸರಿಂದ ರಸ್ತೆಲೀ ದರದರ ಎಳೆದಾಡಿಸಿಕೊಂಡು ಅವಮಾನಕ್ಕೆ ಈಡಾಗಿದ್ದ ಕುಸ್ತಿಪಟುವಿನ ಪ್ರತಿಭಟನೆ ಮರೆಯದ ದೇಶದ ವಿವೇಕವಂತರು &#8211; ಗೆದ್ದಾಗ ಎಲ್ಲಾ ಸ್ಪರ್ಧಿಗಳಿಗೆ ಅಭಿನಂದಿಸುವಂತೆ ಕುಸ್ತಿಪಟುವಿಗೆ ಶುಭಾಶಯ ಹೇಳದೆ, ಅನರ್ಹಗೊಂಡಾಗ ಲೇವಡಿಸುವಂತೆ ಹಾಕಿದ ಮೊಸಳೆ ಕಣ್ಣೀರಿನ ಸಂದೇಶಕ್ಕೆ ನಮೋನ ಮೇಲೆ ಆಕ್ರೋಶಗೊಂಡರು. ಕ್ಷುಲ್ಲಕ ಕಾರಣಕ್ಕೆ ಪದಕ ಕೈತಪ್ಪಿದ್ದಕ್ಕಾಗಿ ಇಡೀ ದೇಶವೇ ನಿರಾಶಭಾವ ಹೊಂದಿರುವಾಗ, ಪೈಲ್ವಾನಳಿಗೆ ಸರ್ಕಾರ ವ್ಯಯಿಸಿದ್ದ ಹಣದ ಉಲ್ಲೇಖ ಮಾಡಿದ್ದು ನಮೋನ ಸೇಡಿನ ಕ್ರಮವೆಂದು ಖಂಡಿಸಿದರು.</p>



<p>“ಈ ನಮೋ ಒಬ್ಬ ಹೇಡಿ. ಅಸೂಕ್ಷ, ಕಿಡಿಗೇಡಿ. ಶೋಷಣೆಯ ವಿರುದ್ಧ ಸಿಡಿದೆದ್ದ ಕುಸ್ತಿಪಟುವಿಗೆ ಖರ್ಚು ಮಾಡಿರುವುದು ಜನರ ತೆರಿಗೆ ಹಣ. ಅದನ್ನು ಪ್ರಕಟಿಸಿದರೆ – ದಿನಕ್ಕೆ ಇಪ್ಪತ್ತು ಬಟ್ಟೆ ಬದಲಿಸಿ ಶೋಕಿ ಮಾಡುತ್ತ, ವಿಮಾನದಲ್ಲಿ ಫಾರಿನ್ ಸುತ್ತಿ ಮಜಾ ಮಾಡುವ ಖರ್ಚನ್ನು ಜನರ ಮುಂದಿಡಲಿ” ಎಂದು ಪ್ರಜ್ಞಾವಂತರು ನಮೋವನ್ನು ಛೇಡಿಸಿದರು.</p>



<p>ಮೂರು ಬಿಟ್ಟ ನಮೋಗೆ ಅದು ತಾಕುವುದೇ? ಉತ್ತರ ಸಿಗದೆ ಉಳಿವ ಪ್ರಶ್ನೆ.</p>



<p>ಚಂದ್ರಪ್ರಭ ಕಠಾರಿ<br>cpkatari@yahoo.com</p>
]]></content:encoded>
					
		
		
			</item>
		<item>
		<title>ಪಲ್ಟುಕುಮಾರ, ತೆಲುಗು ಬಾಬು ಹೊತ್ತ ಪಲ್ಲಕ್ಕಿಯಲ್ಲಿ ಅತಂತ್ರ ನಮೋ 3.0</title>
		<link>https://peepalmedia.com/atantari-namo-3-0-in-palanquin-carried-by-paltukumar-telugu-babu/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 09 Aug 2024 05:00:12 +0000</pubDate>
				<category><![CDATA[ಅಂಕಣ]]></category>
		<category><![CDATA[ಜನ-ಗಣ-ಮನ]]></category>
		<category><![CDATA[ದೇಶ]]></category>
		<category><![CDATA[ರಾಜಕೀಯ]]></category>
		<category><![CDATA[ವಿಡಂಬನೆ]]></category>
		<category><![CDATA[ಸತ್ಯ ಶೋಧ]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=43597</guid>

					<description><![CDATA[ಮೂರನೇ ಬಾರಿ ಪಟ್ಟಾಭಿಷಕ್ತನಾದ ಸಾಮ್ರಾಟ ನಮೋ, ಪಲ್ಲಕ್ಕಿಯಲ್ಲಿ ವಿರಾಜಮಾನನಾಗಿ ಮೆರವಣಿಗೆ ಹೊರಟಾಗ ಎಂದಿನ ಆತ್ಮವಿಶ್ವಾಸ ಇರಲಿಲ್ಲ. ಪಲ್ಲಕ್ಕಿ ಹೊತ್ತವರು ಯಾವ ಹೊತ್ತಿಗೆ ಹೆಗಲು ಸರಿಸಿ ನೆಲಕ್ಕೆ ಬೀಳಿಸಿ ಓಡುವರೋ ಎಂದು ಆಗಾಗ್ಗೆ ಪರದೆ ಸರಿಸಿ ಹೊರಗಡೆ ಇಣುಕು ಹಾಕುತ್ತಿದ್ದ. ಹೊರಗಡೆಯ ದೃಶ್ಯ ಅವನನ್ನು ಖಿನ್ನತೆಗೆ ತಳ್ಳುವಂತಿತ್ತು. ರಾಜಬೀದಿಯ ಎರಡೂ ಬದಿಯಲ್ಲಿ ಕಿಕ್ಕಿರಿದು ನಿಂತು ಜೈಕಾರ ಹಾಕಿ ಹೂಮಳೆಗೆರೆಯುತ್ತಿದ್ದ ಭಕ್ತಗಣ ಕರಗಿ ಹೋಗಿ, ಹತಾಶೆ ಆವರಿಸಿ ಪಲ್ಲಕ್ಕಿಯಾಚೆ ಮತ್ತೆ ತಲೆ ಹಾಕುವ ಧೈರ್ಯ ಮಾಡಲಿಲ್ಲ. ಮೆರವಣಿಗೆ ಮುಂದೆ ಸರಿದಂತೆ [&#8230;]]]></description>
										<content:encoded><![CDATA[
<p>ಮೂರನೇ ಬಾರಿ ಪಟ್ಟಾಭಿಷಕ್ತನಾದ ಸಾಮ್ರಾಟ ನಮೋ, ಪಲ್ಲಕ್ಕಿಯಲ್ಲಿ ವಿರಾಜಮಾನನಾಗಿ ಮೆರವಣಿಗೆ ಹೊರಟಾಗ ಎಂದಿನ ಆತ್ಮವಿಶ್ವಾಸ ಇರಲಿಲ್ಲ. ಪಲ್ಲಕ್ಕಿ ಹೊತ್ತವರು ಯಾವ ಹೊತ್ತಿಗೆ ಹೆಗಲು ಸರಿಸಿ ನೆಲಕ್ಕೆ ಬೀಳಿಸಿ ಓಡುವರೋ ಎಂದು ಆಗಾಗ್ಗೆ ಪರದೆ ಸರಿಸಿ ಹೊರಗಡೆ ಇಣುಕು ಹಾಕುತ್ತಿದ್ದ. ಹೊರಗಡೆಯ ದೃಶ್ಯ ಅವನನ್ನು ಖಿನ್ನತೆಗೆ ತಳ್ಳುವಂತಿತ್ತು. ರಾಜಬೀದಿಯ ಎರಡೂ ಬದಿಯಲ್ಲಿ ಕಿಕ್ಕಿರಿದು ನಿಂತು ಜೈಕಾರ ಹಾಕಿ ಹೂಮಳೆಗೆರೆಯುತ್ತಿದ್ದ ಭಕ್ತಗಣ ಕರಗಿ ಹೋಗಿ, ಹತಾಶೆ ಆವರಿಸಿ ಪಲ್ಲಕ್ಕಿಯಾಚೆ ಮತ್ತೆ ತಲೆ ಹಾಕುವ ಧೈರ್ಯ ಮಾಡಲಿಲ್ಲ. ಮೆರವಣಿಗೆ ಮುಂದೆ ಸರಿದಂತೆ ನೆರೆದಿದ್ದ ಕೆಲವೇ ಮಂದಿ ʼಹೋʼ ಎಂದು ಕೂಗಿದ ಶಬ್ಧ ಕೇಳಿಸಿತು. ನಂತರ, ರಾಜಭಟರು ʼಯಾರದು ಪಲ್ಲಕ್ಕಿ ಮೇಲೆ ಚಪ್ಪಲಿ ಎಸೆದದ್ದು?ʼ ಎಂದು ಅಬ್ಬರಿಸುವುದು ಕೇಳಿಸಿ ನಮೋ ಬೆವತು ಹೋದ.</p>



<p>ಕಳೆದ ಹತ್ತು ವರುಷಗಳಲ್ಲಿ ಮತಾಂಧತೆಯ ವಿಷ ಬೀಜ ಬಿತ್ತಿ ಜನರ ನಡುವೆ ಗೋಡೆಗಳನ್ನು ಕಟ್ಟಿ, ಸುಳ್ಳು ಹೊಸೆಯುವ ಐಟಿ ಸೆಲ್ ಕಾರ್ಖಾನೆಯಿಂದ ಭಕ್ತಗಣಗಳನ್ನು ಸೃಷ್ಟಿಸಿ, ದಂಗೆ ಎದ್ದ ಸಾಮಂತರಾಜರನ್ನು ಜೈಲಿಗೆ ಅಟ್ಟಿ, ದಿನನಿತ್ಯ ತರಾವರಿ ದಿರಿಸು ಧರಿಸಿ ಫೋಟೊ ಸೆಷೆನ್ನಿನಲ್ಲಿ ಮಜವಾಗಿದ್ದ ಸಾಮ್ರಾಟ ನಮೋನ ಸಿಂಹಾಸನದ ಬುಡ ಕಳೆದ ಕೆಲವೇ ತಿಂಗಳಲ್ಲಿ ಅಲುಗಾಡಿ ಹೋಗಿತ್ತು. ಪ್ರಜಾತಂತ್ರವನ್ನು ಹೊಸಕಿ ಹಾಕಲು ಸಾಧ್ಯವಾಗದೆ ಚುನಾವಣೆಯನ್ನು ಎದುರಿಸಲೇ ಬೇಕಾಗಿ ಬಂದ ಸನ್ನಿವೇಶವನ್ನು ಜೀರ್ಣಿಸಿಕೊಳ್ಳುವುದು ಕಷ್ಟಸಾಧ್ಯವಾಗಿತ್ತು.</p>



<p>ಸುದ್ದಿಭಟರು ದೇಶದೆಲ್ಲೆಡೆ ಜನರ ಅಭಿಪ್ರಾಯವನ್ನು ಸಂಗ್ರಹಿಸಿ, ಅರಮನೆಗೆ ವರ್ತಮಾನವನ್ನು ತಂದು ಸುರಿಯುತ್ತಿದ್ದರು. ಒಂದೊಂದು ದಿಕ್ಕಿನಿಂದ ಬರುತ್ತಿದ್ದ ಪ್ರತಿಯೊಂದು ಜನರ ಮಾತುಗಳು, ಸಾಮ್ರಾಟ ನೆಚ್ಚಿದಂತೆ ಅವನನ್ನು ಹಾಡಿ ಹೊಗಳದೆ, ಬೈಗುಳಗಳ ಮೂಟೆಯನ್ನೇ ಹೊತ್ತು ಬರುತ್ತಿದ್ದವು.</p>



<p>“ಬಡತನವನ್ನು ಅಣಗಿಸುವ ಇವನ್ಯಾವ ದರವೇಶಿ ಸಾಮ್ರಾಟ, ಮೂವತ್ತು ವರ್ಷ ಭಿಕ್ಷೆ ಬೇಡಿ ಬದುಕಿದವನಂತೆ! ಸಿಂಹಾಸನ ಏರಿದವನೇ ಸೂಟುಬೂಟು ಹಾಕ್ಕೊಂಡು ಮೆರೀತ್ತಿದ್ದಾನೆ. ಹಸಿದ ಬಡವರ ಹೊಟ್ಟೆಗೆ ಬರೆ ಹಾಕುವ ಅವನನ್ನು ಮೊದಲು ಅರಮನೆಯಿಂದ ಹೊರ ಹಾಕಿ!”</p>



<p>“ಕಾಳಧನಿಕರನ್ನು ಬಲಿಯಾಕಿ, ತಲೆಗೆ ಹದಿನೈದು ಲಕ್ಷ ವರಹ ಕೊಡುತ್ತೇನೆಂದು ಬೊಗಳೆ ಹೊಡೆಯುತ್ತಿದ್ದವನು ಈಗ ಕಳ್ಳ ವ್ಯಾಪಾರಿಗಳಿಗೆ ಬಂದರು, ರಸ್ತೆ, ರೈಲು ಎಲ್ಲವನ್ನೂ ಮಾರುತ್ತ, ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾನೆ. ಸಾಮಾನ್ಯ ಜನರ ತೆರಿಗೆ ಹೆಚ್ಚಿಸಿ, ಶ್ರೀಮಂತರ ಸಾಲ ಮನ್ನಾ ಮಾಡುತ್ತಿರುವ ಜನದ್ರೋಹಿ…ಈ ಸಾಮ್ರಾಟ…”</p>



<p>“ವರ್ಷಕ್ಕೆ ಎರಡು ಕೋಟಿ ಉದ್ಯೋಗ ಎಂದವನ ಮನೆಹಾಳಾಗಲಿ…ಕಣ್ಣಿಗೆ ಎಣ್ಣೆಬಿಟ್ಟುಕೊಂಡು ಹಗಲುರಾತ್ರಿ ಕಷ್ಟಪಟ್ಟು ಓದಿದರೆ ಪ್ರಶ್ನೆಪತ್ರಿಕೆಗಳು ಸಿರಿವಂತ ಮಕ್ಕಳಿಗೆ ಬಿಕರಿಯಾಗಿ ಪರೀಕ್ಷೆ ರದ್ದಾಗುತ್ತಿವೆ. ಯುವಕರಿಗೆ ಕೆಲಸವಿಲ್ಲ. ಕೇಳಿದರೆ ಪುಟ್ ಪಾತಿನಲ್ಲಿ ತಳ್ಳುಗಾಡಿಯಲ್ಲಿ ಬೊಂಡಬಜ್ಜಿ ಮಾರಿ, ಹಣ ಮಾಡಿ ಅನ್ನುತ್ತಿದ್ದಾನೆ…ಕಿರಾತಕ”</p>



<p>ಹೀಗೆ ಯುವಕರು, ಮಹಿಳೆಯರು, ಬಡವರು, ಸಮಾಜದ ಅಂಚಿಗೆ ತಳ್ಳಿದ ಅವಕಾಶ ವಂಚಿತ ದುರ್ಬಲರು – ಎಲ್ಲರ ಹೊಟ್ಟೆಯ ಸಿಟ್ಟು ಮಾತಿಗೆ ಬಂದು ಕೆಂಡ ಕಾರುತ್ತಿದ್ದವು. ಆ ಆಕ್ರೋಶ, ನೋವಿನ ಮಾತುಗಳ ಸುರಿಮಳೆಯಲ್ಲಿ ನಮೋ ಭಕ್ತರ ಉಧೋ ಉಧೋ ಭಜನೆಯು ಮಂಕಾಗಿ ಹೋಗಿತ್ತು.</p>



<p>ಮನುವಿಕೃತಿ ಸಿದ್ಧಾಂತವನ್ನು ಆರಾಧಿಸುವ, ಬೂಟ್ ನೆಕ್ಕಿಂಗ್ ಕುಖ್ಯಾತಿಯ ಸಾರಿವರ್ಕರ್ ಮನೋಧೋರಣೆಗೆ ಒಗ್ಗದ ಪ್ರಜಾಪ್ರಭುತ್ವ…ಸ್ವಾತಂತ್ರ್ಯ …ಸಮಾನತೆ…ಸೋದರತೆಗಳನ್ನು ಕಾಪಾಡುವ ಸಂವಿಧಾನವನ್ನು ಎತ್ತಂಗಡಿ ಮಾಡಲು ಹರಸಾಹಸ ಪಟ್ಟು ಸಾಧ್ಯವಾಗದೆ, ಆಳಕ್ಕೆ ಬೇರು ಬಿಟ್ಟ ಅದರ ಬುಡಕ್ಕೆ ಕೇಸರಿ ಗೆದ್ದಲುಗಳನ್ನು ಬಿಟ್ಟು, ಐವತ್ತಾರು ಇಂಚಿನೆದೆಯನ್ನು ತಟ್ಟುತ್ತ “ ಏಕ್ ಅಖೇಲ ಸಬ್ ಪಾರ್ ಬಾರಿ” ಎಂದು ಸಾಮ್ರಾಟ ನಮೋ ಹೂಂಕರಿಸುತ್ತಲ್ಲಿದ್ದ.</p>



<p>ದೇಶದಲ್ಲಿ ಚುನಾವಣೆಗಳನ್ನೇ ರದ್ದು ಮಾಡಿ ತಾನೇ ಏಕಾಧಿಪತ್ಯ ಸ್ಥಾಪಿಸಬೇಕೆಂದು ಒಂದು ದಿನ ನಿಶ್ಚಯಿಸಿದ್ದ ಕೂಡ. ಆದರೆ, ಚಡ್ಡಿಗೆಳೆಯ ಅಪರಿಮಿತ ಕುತಂತ್ರಿ “ಮಹಾಸ್ವಾಮಿಗಳು ಮನ್ನಿಸಬೇಕು. ಸಂವಿಧಾನಕ್ಕೆ ಕೇಸರಿ ಗೆದ್ದಲುಗಳನ್ನು ಈಗಷ್ಟೇ ಬಿಟ್ಟಿದ್ದೇವೆ. ಬುಡವನ್ನು ತಿನ್ನಲು ಸಮಯ ಕೊಡಬೇಕು. ಆಗ ಸಂವಿಧಾನ ತಾನಾಗೇ ಉರುಳಿ ಬೀಳುತ್ತದೆ. ಅಲ್ಲದೆ ತಮ್ಮ ಭಕ್ತಗಣಗಳ ಸಂಖ್ಯೆ ಸಾಕಷ್ಟಿಲ್ಲ. ಕಾಲ ಪಕ್ವವಾಗದೆ ಸಂವಿಧಾನಕ್ಕೆ ಕೈ ಹಾಕಿದರೆ ಜನ ದಂಗೆ ಎದ್ದಾರು! ಹೇಗೂ ಚುನಾವಣಾ ಪ್ರಧಾನರನ್ನಾಗಿ ನಮ್ಮ ಮಾ.ಕೃ.ಕುಟೀರ – ಪೂರ್ವಾಶ್ರಮದ ಚಡ್ಡಿ ಬಂಧುಗಳನ್ನೇ ನೇಮಿಸಿದ್ದೀರ. ಮತಗಳನ್ನು ಎಗರಿಸುವುದರಲ್ಲಿ ಅವರು ಮಹಾ ನಿಪುಣರು. ಅಂಥದ್ದರಲ್ಲಿ ಹಿಂಜರಿಕೆ ಯಾಕೆ? ಧೈರ್ಯದಿಂದ ಜನರ ಅಭಿಪ್ರಾಯ ಕೇಳಿ. ಅಯಾಗಾತೊ ನಮೋ ಸಾಮ್ರಾಟ್ ಹೇ” ಎಂದು ಅಪರಿಮಿತ ಕುತಂತ್ರಿ ಗಹಿಗಹಿಸಿ ನಕ್ಕ.</p>



<p>ʼಜನರಿಂದ ದಂಗೆಯೇ!ʼ ಕುತಂತ್ರಿಯ ವಿನೋದದ ಮಾತಿಗೆ ನಖಶಿಖಾಂತ ಉರಿ ಹತ್ತಿಸಿಕೊಂಡ ಸಾಮ್ರಾಟ ನಮೋನ ಕೆಕ್ಕರಿಸಿದ ನೋಟಕ್ಕೆ ಕುತಂತ್ರಿ ಹೆದರಿ ಬಾಯಿಗೆ ಬೀಗ ಜಡಿದ. “ಪದೇ ಪದೇ ಜನರಲ್ಲಿ ಮತಭಿಕ್ಷೆ ಮಾಡಿ ಸಾಕಾಗಿದೆ. ಇನ್ನೆಷ್ಟು ವರ್ಷ ಬೀದಿ, ಗಲ್ಲಿಗಳಲ್ಲಿ ರೋಡ್ ಶೊ ಮಾಡ್ತಾ ಜನರನ್ನು ಎಂಟರ್ ಟೈನ್ ಮಾಡ್ಬೇಕು? ಸಾಧ್ಯವಿಲ್ಲ…ಈ ಬಾರಿ ಸಂವಿಧಾನ ಖತಮ್ ಮಾಡ್ಲೇ ಬೇಕು. ಅದಕ್ಕೆ ಫೋರ್ ಟ್ವೆಂಟಿಗಳ ಸೀಟು ಬೇಕೇ ಬೇಕು” ಎಂದು ಹಲ್ಲು ಕಡಿದು “ಅಬ್ ಕಿ ಬಾರ್ 420 ಪಾರ್” ಎಂದು ಜೋರಾಗಿ ಕೂಗಿದ. ಅದು ದೇಶದೆಲ್ಲೆಡೆ ಪ್ರತಿಧ್ವನಿಸಿ – ಚಡ್ಡಿ ಕೊಡವಿ ಕೊಂಡು ಎದ್ದ ಕೇಸರಿಗ್ಯಾಂಗ್ ಕಾರ್ಯಕರ್ತರು, ಕಮಲೀ ಮಂತ್ರಿಗಳು, ಸಾಮಂತರು “ಸಂವಿಧಾನ ಖತಮ್ ಮಾಡಿ…ಸನಾತನ ಧರ್ಮ ಕಾಪಾಡಿ” ಎಂದು ಬೊಬ್ಬೆ ಹೊಡೆಯಲು ಪ್ರಾರಂಭಿಸಿದರು.</p>



<p>ಸಾಮ್ರಾಟ ನಮೋ ಮತ್ತವನ ಕೇಸರಿಗ್ಯಾಂಗ್ ನ ಅಂತಿಮ ಗುರಿಯನ್ನು ಮೊದಲೇ ಅರಿತಿದ್ದ ನಮೋ ವಿರೋಧಿಗಳು “ಸಂವಿಧಾನ ಉಳಿಸಿ …ದೇಶವನ್ನು ಕಾಪಾಡಿ” ಎಂದು ದೇಶಾದ್ಯಂತ ಬಿರುಸು ಪ್ರಚಾರ ಮಾಡಿದರು. ಬಡವರು, ದೀನದಲಿತರು, ಕಾರ್ಮಿಕರು, ಯುವಕರು, ಮಹಿಳೆಯರು – ಈ ಮೊದಲು ನಮೋವನ್ನು ದೇವರ ಅವತಾರ ಎಂದು ನಂಬಿ, ಭಜಿಸುತ್ತಿದ್ದವರು ಈಗ ಸಾಮ್ರಾಟನ ವಿರುದ್ಧ ತಿರುಗಿ ಬಿದ್ದರು. ಜನರ ಆಕ್ರೋಶ ಸಾಮ್ರಾಟನಿಗೆ ಅನಿರೀಕ್ಷಿತವಾಗಿತ್ತು. ಅದು ಹೆಚ್ಚಾದರೆ ಸಿಂಹಾಸನ ಕೈ ತಪ್ಪಿದಂತೆ! ಎಡವಟ್ಟಾಯಿತು ಎಂದು ಪರಿತಪಿಸಿದ ನಮೋ, ಸುಳ್ಳು ಟಂಕಿಸುವ ಕೇಸರಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮನೆಹಾಳನನ್ನು ಕರೆಸಿ ಸಲಹೆ ಕೇಳಿದ.</p>



<p>“ಮಹಾಸ್ವಾಮಿಗಳಿಗಿಂತ ನಮಗೇನು ತಿಳಿದಿದೆ! ದಶಕದಿಂದ ನಾವು ಜಪಿಸುತ್ತ ಬಂದ ಮಂದಿರ್, ಮಸ್ಜಿದ್ ಮಂತ್ರವನ್ನೇ ಸ್ವಲ್ಪ ಬದಲಾಯಿಸಿ ಹೇಳಿದರಾಯಿತು. ಜನರು ಸಂಪ್ರೀತರಾಗಿ ತಮ್ಮ ಪಾದಕ್ಕೆ ಎರಗುತ್ತಾರೆ” ಎಂದು ʼಮʼ ಅಕ್ಷರದ ಕೇಸರಿ ಪಂಚಾಕ್ಷರಿ ಮಂತ್ರವನ್ನು ಕಿವಿಯಲ್ಲಿ ಉಸುರಿದ.</p>



<p>ಕಾಲಿಗೆ ಚಕ್ರ ಕಟ್ಟಿಕೊಂಡ ಸಾಮ್ರಾಟ್ ನಮೋ “ಮೊಗಲ್, ಮುಸ್ಲಿಮ್, ಮಟನ್, ಮಚ್ಲಿ, ಮಂಗಲ್ ಸೂತ್ರ” ಎಂದು ಮನೆಹಾಳನ ಪಂಚಾಕ್ಷರಿ ಮಂತ್ರವನ್ನು ಜಪಿಸುತ್ತ ದೇಶಾದ್ಯಂತ ಸಂಚರಿಸಿದ. ಆದರೆ &#8211; ಬೆಲೆ ಏರಿಕೆ, ನಿರುದ್ಯೋಗ, ಧರ್ಮಾಂಧತೆಯಿಂದ ತತ್ತರಿಸಿದ್ದ ದೇಶವಾಸಿಗಳು, ಅದಕ್ಕೆ ಪರಿಹಾರ ಹೇಳದ ಸಾಮ್ರಾಟನ ವಿರುದ್ಧ ಮತ್ತಷ್ಟು ರೊಚ್ಚಿಗೆದ್ದರು. ಜನಾಭಿಪ್ರಾಯದ ಚುನಾವಣೆಲೀ ʼಬಡವರ ದ್ರೋಹಿ ಸಾಮ್ರಾಟ ನಮೋ ನಮಗೆ ಬೇಡʼ ಎಂದು ತೀರ್ಪಿತ್ತರು. ಆದರೆ, ಚಡ್ಡಿ ಚುನಾವಣಾಪ್ರಧಾನರು ಗೋಲ್ ಮಾಲ್ ಮಾಡಿ ಮತಗಳನ್ನು ಎಗರಿಸಿದ್ದರಿಂದ ನಮೋ ಸಿಂಹಾಸನದಲ್ಲೇ ಉಳಿದ.</p>



<p>ಪಟ್ಟಾಭಿಷೇಕವಾಗಿ ಮೆರವಣಿಗೆ ಸಾಗಿದಾಗ ಸಾಮಂತರಾದ ತೆಲುಗುಬಾಬು ಮತ್ತು ಪಲ್ಟುಕುಮಾರ ಪಲ್ಲಕ್ಕಿಗೆ ಹೆಗಲು ಕೊಟ್ಟರು. ಆದರೆ, ಯಾವ ಹೊತ್ತಿಗಾದರೂ ಪಲ್ಲಕ್ಕಿಯನ್ನು ಬೀಳಿಸಿ ಓಡುವ ಪ್ರವೃತ್ತಿಯ ಅವರಿಬ್ಬರಲ್ಲಿ, ವಿಧಿ ಇಲ್ಲದೆ ವಿಶ್ವಾಸ ಇಡುವ ದುರ್ಗತಿ ಬಂದದ್ದಕ್ಕಾಗಿ ನಮೋ ಪರಿತಪಿಸಿದ.</p>



<p>ಚಂದ್ರಪ್ರಭ ಕಠಾರಿ<br>cpkatari@yahoo.com</p>
]]></content:encoded>
					
		
		
			</item>
		<item>
		<title>ದೊಡ್ಡಗೌಡ್ರಿಗೆ ಆತ್ಮಸಾಕ್ಷಿ ಅಂತ ಇದ್ದಿದ್ದರೆ ಅವರು ಹೀಗೆ ಪತ್ರ ಬರೆಯುತ್ತಿದ್ದರು (ಕಾಲ್ಪನಿಕ ಪತ್ರ)</title>
		<link>https://peepalmedia.com/had-dodgoudry-had-a-conscience-he-would-have-written-a-letter-like-this-fictional-letter/</link>
		
		<dc:creator><![CDATA[Hanumanth Halageri]]></dc:creator>
		<pubDate>Fri, 24 May 2024 08:13:58 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[ವಿಡಂಬನೆ]]></category>
		<category><![CDATA[#Kumaraswamy #JDS #ramanagara #mysore #kodagu #kannadaexpress9 #prathapsimha #Simha #SaRaMahesh #GTDevegowda #DeveGowda #HDK H D Kumaraswamy]]></category>
		<category><![CDATA[bengalure]]></category>
		<category><![CDATA[devegowda]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[pendrive]]></category>
		<category><![CDATA[politics]]></category>
		<category><![CDATA[Prajwal Revanna]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=39855</guid>

					<description><![CDATA[ಇಂದ ದೊಡ್ಡಗೌಡರು, ಬೆಂಗಳೂರು ಇವರಿಗೆ, ರಾಜ್ಯದ ಜನತೆಗೆ &#160;ಮಹಾಜನರೇ, ನಿನ್ನೆಯಿಂದ ನಾನು ಬರೆದಿರುವೇ ಎನ್ನಲಾದ ಪತ್ರ ಒಂದು ವೈರಲ್‌ ಆಗಿದೆ. ನಿಜ ಹೇಳಬೇಕೆಂದ್ರೆ ಅದು ನಾನು ಬರೆದದ್ದಲ್ಲ, ನನ್ನ ಮಕ್ಕಳು ತಮ್ಮ ರಾಜಕೀಯ ಷಡ್ಯಂತ್ರಕ್ಕಾಗಿ &#160;ನಮ್ಮ ಪಕ್ಷದ &#160;ಒಬ್ಬ ಒಳ್ಳೆಯ ವಂದಿಮಾಗದ ಆಸ್ಥಾನ ಲೇಖಕನಿಗೆ ದೊಡ್ಡ ಸಂಬಳ ಕೊಟ್ಟು ಹೀಗ್ಹೀಗೆ ಎಂದು ಹೇಳಿ ಬರೆಸಿದ ಪತ್ರವದು. ಅದು ಪ್ರಜ್ವಲ್‌ ರೇವಣ್ಣನಿಗೆ ಎಂದು ಹೇಳಲಾಗಿದ್ದರೂ ಅದರ ಒಳ ಉದ್ದೇಶ ರಾಜ್ಯ ಜನತೆಗೆ ತಲುಪಿಸುವುದೇ ಆಗಿತ್ತು. ಆ ಉದ್ದೇಶ ಈಡೇರಿಯಾಗಿದೆ. [&#8230;]]]></description>
										<content:encoded><![CDATA[
<p><strong>ಇಂದ</strong></p>



<p><strong>ದೊಡ್ಡಗೌಡರು, ಬೆಂಗಳೂರು</strong></p>



<p><strong>ಇವರಿಗೆ</strong>,</p>



<p><strong>ರಾಜ್ಯದ ಜನತೆಗೆ</strong></p>



<p>&nbsp;ಮಹಾಜನರೇ, ನಿನ್ನೆಯಿಂದ ನಾನು ಬರೆದಿರುವೇ ಎನ್ನಲಾದ ಪತ್ರ ಒಂದು ವೈರಲ್‌ ಆಗಿದೆ. ನಿಜ ಹೇಳಬೇಕೆಂದ್ರೆ ಅದು ನಾನು ಬರೆದದ್ದಲ್ಲ, ನನ್ನ ಮಕ್ಕಳು ತಮ್ಮ ರಾಜಕೀಯ ಷಡ್ಯಂತ್ರಕ್ಕಾಗಿ &nbsp;ನಮ್ಮ ಪಕ್ಷದ &nbsp;ಒಬ್ಬ ಒಳ್ಳೆಯ ವಂದಿಮಾಗದ ಆಸ್ಥಾನ ಲೇಖಕನಿಗೆ ದೊಡ್ಡ ಸಂಬಳ ಕೊಟ್ಟು ಹೀಗ್ಹೀಗೆ ಎಂದು ಹೇಳಿ ಬರೆಸಿದ ಪತ್ರವದು. ಅದು ಪ್ರಜ್ವಲ್‌ ರೇವಣ್ಣನಿಗೆ ಎಂದು ಹೇಳಲಾಗಿದ್ದರೂ ಅದರ ಒಳ ಉದ್ದೇಶ ರಾಜ್ಯ ಜನತೆಗೆ ತಲುಪಿಸುವುದೇ ಆಗಿತ್ತು. ಆ ಉದ್ದೇಶ ಈಡೇರಿಯಾಗಿದೆ.</p>



<p>ಕಳೆದೊಂದು ತಿಂಗಳಿನಿಂದ ನಾನು ಬಳಷ್ಟು ತೊಳಲಾಡಿದ್ದೇನೆ. ನಾವು ರಾಜಕಾರಣಿಗಳು. ನಮಗೂ ಒಂದು ಮನಸ್ಸಿರುತ್ತದೆ. ಆದರೆ, ನಮ್ಮ ಮನಸ್ಸಿನಲ್ಲಿ ಮೂಡುವ ಸತ್ಯವನ್ನು ನಮಗೆ ಹೇಳಲು ಸಾಧ್ಯವಾಗುದಿಲ್ಲ. ನಾವು ಏನಾದರೂ &nbsp;ನಮ್ಮೊಳಗೆ ಇರುವ ಸತ್ಯ ಹೇಳಿದರೆ ಅದ್ರಿಂದ ಪಕ್ಷದ ಕಾರ್ಯಕರ್ತರು ಮತದಾರರು ಏನೆಂದುಕೊಳ್ಳುತ್ತಾರೋ ಎಂದು ನಾವು ಅವರಿಗೆ ಬೇಕಾದಂತೆ ಸತ್ಯಕ್ಕೆ ತರಾವರಿ ಬಣ್ಣದ ಲೇಪ ಮಾಡಿಕೊಂಡೇ ಮಾತಾಡಬೇಕಾಗುತ್ತದೆ. ಆದರೆ, ಇವತ್ತು ತಡೆದುಕೊಳ್ಳಲಿಕ್ಕಾಗದೇ ಈ ಪತ್ರವನ್ನು ಬರೆಯುತ್ತಿದ್ದೇನೆ.</p>



<p>ನಾನು ಈ ದೇಶದ ಪ್ರಧಾನಿಯಾದುದು ನನ್ನ ಅದೃಷ್ಟ. ಇದ್ರಿಂದ ನನಗೆ ಮತ್ತು ನನ್ನ ಪಕ್ಷಕ್ಕೆ ಒಳ್ಳೆಯ ಹೆಸರು ಬಂತು. ಈ ನಾಡಿನ ಸೂಕ್ಷ್ಮ ಸಂವೇದನೆಯ ರಾಜಕಾರಣಿಗಳೆಲ್ಲ ನನ್ನ ಪಕ್ಷಕ್ಕೆ ಬಂದು ಸೇರಿಕೊಂಡರು. ದಕ್ಷಿಣ ಭಾರತದ ಹಿಂದಿವಾಲಾ ಪಕ್ಷಗಳ ವಿರುದ್ಧ ನಮ್ಮದೇ ನೆಲದ ಪ್ರಾದೇಶಿಕ ಪಕ್ಷವನ್ನು ಕಟ್ಟಿ ಬೆಳೆಸೋಣ ಅವರ ಕನಸಾಗಿತ್ತು. ಆರಂಭದಲ್ಲಿಯೇ ಎಲ್ಲವೂ ಚನ್ನಾಗಿಯೇ ಇತ್ತು. ಆದರೆ, ನನ್ನ ಪುತ್ರ ವಾತ್ಸಲ್ಯ ಮತ್ತು ಕುಟುಂಬ ಪ್ರೇಮ ನನ್ನನ್ನು ಕುರುಡನ್ನಾಗಿ ಮಾಡಿತ್ತು. ಅದೇ ನಾನು ಮಾಡಿದ ದೊಡ್ಡ ತಪ್ಪು.</p>



<p>ಇವನಿಗೆ ಸೀಟು ಕೊಟ್ಟರೆ ಅವನಿಗೆ ಸಿಟ್ಟು, ಅವನಿಗೆ ಕೊಟ್ರೆ ಇವನಿಗೆ ಸಿಟ್ಟು. ಹಾಗಾಗಿ ನಾನು ಬರಬರುತ್ತಾ ನನ್ನ ಮಕ್ಕಳಿಗೆ, ಸೊಸೆಯಂದಿರಿಗೆ, ಅಳಿಯಂದಿರಿಗೆ, ಮೊಮ್ಮಕ್ಕಳಿಗೆ ಇದ್ದುಬಿದ್ದ ಸಂಬಂಧಿಕರಿಗೆಲ್ಲ ನನ್ನ ಪಕ್ಷದ ಟಿಕೇಟ್‌ಗಳನ್ನು ಹಂಚುತ್ತಾ ಹೋದೆ. ಪ್ರಾದೇಶಿಕ ಪಕ್ಷ ಅಂತ ಬಂದವರೆಲ್ಲ ಒಬ್ಬೊಬ್ಬರು ಪಕ್ಷ ಬಿಟ್ಟು ಹೋದರು. ನಮ್ಮ ಪಕ್ಷ ಅನ್ನುವುದು ನನ್ನ ಕುಟುಂಬದ ಪಕ್ಷವಾಗಿ ಮಾತ್ರ ಉಳಿಯಿತು. ಹಾಗೆ ನೋಡಿದರೆ ನಾನು ಪ್ರಜಾಪ್ರಬುತ್ವ ವ್ಯವಸ್ಥೆಯ ವಿರೋಧಿ. ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ಇರುವ ಪ್ರಜಾ ರಾಜಕಾರಣವನ್ನು ನಮ್ಮ ಕರ್ನಾಟಕದಲ್ಲಿ ಕುಟುಂಬ ರಾಜಕಾರಣಕ್ಕೆ ಸೀಮಿತ ಮಾಡಿದ ಕುಖ್ಯಾತಿ ನನ್ನದೇ ಎನ್ನಬಹುದು. ಇದಷ್ಟೇ ಅಲ್ಲ, ನನ್ನ ಕುಟುಂಬದವರೆಲ್ಲ ಅವರವರ &nbsp;ಕ್ಷೇತ್ರಗಳಲ್ಲಿ ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿದರು. ರಾಜರಂತೆ ವರ್ತಿಸುತ್ತಾ ರಾಜಸತ್ತೆ ಸ್ಥಾಪಿಸತೊಡಗಿದರು. ತಮ್ಮ ತಮ್ಮ ಕ್ಷೇತ್ರಗಳನ್ನು, ಕ್ಷೇತ್ರದ ಜನರನ್ನು, ಹೆಂಗಸರನ್ನು ಆಸ್ತಿಯಂತೆ ಬಳಸತೊಡಗಿದರು. ಇದಕ್ಕೆ ನನ್ನ ದೊಡ್ಡ ಮಗ ಒಂದು ಸಿಂಪಲ್‌ ಉದಾಹರಣೆ.</p>



<p>ಇನ್ನೊಂದು ನನ್ನ ಮುಖ್ಯವಾದ ೨ನೇ ತಪ್ಪೆಂದರೆ ಪ್ರಜ್ವಲ್‌ ರೇವಣ್ಣ ಪ್ರಕರಣ ಐದಾರು ವರ್ಷಗಳ ಹಿಂದೆಯೇ ನನ್ನ ಗಮನಕ್ಕೆ ಬಂದಿದ್ದರೂ ನಾನು ನಿರ್ಲಕ್ಷ ಮಾಡಿದ್ದು. ಆಗ ನನ್ನ ಬುದ್ಧಿಗೆ ಮಂಕು ಕವಿದಿತ್ತು. ಪ್ರಜ್ವಲನ ಭಾಷಣ ಕೇಳುತ್ತಿದ್ದರೆ. ನಿಜ ಹೇಳಬೇಕೆಂದರೆ ಅವನ ಗತ್ತು ಗೈರತ್ತು ನೋಡುತ್ತಿದ್ದರೆ, ನನಗೆ ನನ್ನ ಕುಟುಂಬದ ಜೀನ್ಸ್‌ ಬಗ್ಗೆ ಬಹಳಷ್ಟು ಹೆಮ್ಮೆಯಾಗುತ್ತಿತ್ತು. ಈ ಪಜ್ವಲ ನಮ್ಮ ಪಕ್ಷವನ್ನು ಉಜ್ವಲಗೊಳಿಸುತ್ತಾನೆ ಎಂದೇ ನಾನು ನಂಬಿದ್ದೆ.</p>



<p>ರಾಜಕಾರಣಿಗಳ ಸುತ್ತಮುತ್ತಲೆಲ್ಲ ಸ್ವಜಾತಿಯ ಹೊಗಳುಭಟ್ಟ ವಂದಿ ಮಾಗದರೇ ತುಂಬಿಕೊಂಡಿರುತ್ತಾರೆ. ಅಂತ ವಂದಿಮಾಗದರು ಐದಾರು ವರ್ಷಗಳ ಹಿಂದೆಯೇ ಪ್ರಜ್ವಲನ ಕಾಮ ಕ್ರೀಡೋತ್ಸವಗಳನ್ನು ನನಗೆ ಹೇಳಿದ್ದರು. ಹೇಳಿದ ಮರುಗಳಿಗೆಯೇ ವಯಸ್ಸಿನ ಹುಡುಗ ಗೌಡ್ರೆ, ಅದರಲ್ಲೂ ನಮ್ಮಗೌಡ್ರ ಜಾತಿ ಹುಡುಗ, ಗಂಡು ಹುಡುಗ, ಇದೆಲ್ಲ ಕಾಮನ್ನು ಎಂದು ಅವರೇ ಸಮಾಧಾನ ಮಾಡಿದ್ದರು. ಸುಳ್ಳು ಯಾಕೆ ಹೇಳಲಿ ಆಗ ನನ್ನ ಸುತ್ತಲಿದ್ದವರ ಮಾತು ಕೇಳಿ ನನ್ನೊಳಗೂ ಗರ್ವ ತುಸು ಹೆಚ್ಚೇ ಇತ್ತು. &nbsp;ಅದು ನನ್ನನ್ನು ಮರುಳನನ್ನಾಗಿಸಿತು,</p>



<p>ಅವನ ಚಿಕ್ಕಪ್ಪ ಮಾಡಿದ ಪ್ರಕರಣ ಕಣ್ಮುಂದೆ ಇತ್ತಲ್ಲ. ಅವನ ಚಿಕ್ಕಪ್ಪನೂ ಹಾಗೆ ಒಂದಿಷ್ಟು ದಿನ ಹಾರಾಡಿ, ಊರೆಲ್ಲ ಸುತ್ತಾಡಿ ಆಮೇಲೆ ಮನೆಗೆ ಹತ್ತಿದವನು. ಇವನಿಗೂ ಮದುವೆ ಅನ್ನೋದೊಂದು ಮಾಡಿದ ಮೇಲೆ ಸರಿ ಹೋಗ್ತಾನೆ. ಅಲ್ಲಿಯವರೆಗೂ ಹಾರಾಡಿಕೊಂಡಿರಲಿ ಎಂದು ನಾನು ಸುಮ್ಮನಾಗಿದ್ದೆ.</p>



<p>ಬಹುಶಃ ಯಾರಿಗೆಲ್ಲ ಹಣ, ಅಧಿಕಾರ, ಕೀರ್ತಿ ಬರುತ್ತದೆಯೋ ಅವರೆಲ್ಲ ಹೀಗೆ ದಾರಿ ತಪ್ಪುತ್ತಾರೆ ಅನಿಸುತ್ತದೆ. &nbsp;ಈ ಕಾರಣಕ್ಕಾಗಿಯೇ ರಾಜರ ಅಂತಪುರಗಳಲ್ಲೆ ಎಲ್ಲ ಕಾಲದಲ್ಲೂ ತುಂಬಿ ತುಳುಕುತ್ತಿದ್ದವು. ಸಣ್ಣ ವಯಸ್ಸಿನ ಮಕ್ಕಳಿಗೆ ಅಧಿಕಾರ, ಸ್ಥಾನಮಾನ, ಟಿಕೇಟ್‌ ಕೊಡಲೇಬಾರದು ಎಂದು ಈಗನಿಸುತ್ತದೆ. ಇದು ನನ್ನ ಮೊಮ್ಮಕ್ಕಳದ್ದೇ ತಪ್ಪಲ್ಲ. ಎಲ್ಲೆಲ್ಲಿ ಕುಟುಂಬ ರಾಜಕಾರಣ ಇದೆಯO ಅಲ್ಲೆಲ್ಲ ಹಿರಿಯ ರಾಜಕಾರಣಿಗಳ ಮಕ್ಕಳು ಮೊಮ್ಮಕ್ಕಳು &nbsp;ಹಿಂಗೆ ಮೆರಿತಿದ್ದಾರೆ. ಆದರೆ, ಗುಂಡಿ ಒಳಗೆ ಬಿದ್ದೋನಿಗೆ ಆಳಿಗೊಂದು ಕಲ್ಲು.</p>



<p>ನನ್ನ ಸುತ್ತಲಿದ್ದ ಹೊಗಳುಭಟ್ಟರೆಲ್ಲ ನಮ್ಮನ್ನು ನೀವು ದೇಶ ಆಳಕ್ಕೆ ಬಂದವರು ಎಂದೆಲ್ಲ ಯಾವಾಗಲೂ ಹೇಳುತ್ತಲೇ ಇದ್ದರು. ನಾನು ನನ್ನ ಕುಟುಂಬದವರು ಕೂಡ ಅದನ್ನೆ ನಂಬಿ ಆಳುವುದಕ್ಕಾಗಿ ಹೋರಾಡುತ್ತಲೇ ಇದ್ದೇವು. ಆದರೆ, ದೇಶ ಆಳಕ್ಕೆ ಹೋಗಿ ನಮ್ಮ ನಮ್ಮ ಮನೆಯ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದರ ಕಡೆ ನಾವು ಗಮನ ಕೊಡಲೇ ಇಲ್ಲ. ಮಕ್ಕಳಿಗೆ ತುಸುವಾದರೂ ಸಂವೇದನೆ ಕಲಿಸಿದ್ದರೆ, ಸಮಾಜದ ಬಗ್ಗೆ ಅರ್ಥ ಮಾಡಿಸಿದ್ದರೆ ಹೀಗಾಗುತ್ತಿರಲಿಲ್ಲ.</p>



<p>&nbsp;ಅದರ ಪ್ರತಿಫಲವೇ ಈಗ ಇಷ್ಟೆಲ್ಲ ಆಗಿದೆ. &nbsp;ನನ್ನ ಎರಡನೇ ಮಗ ಎರಡು ಸಂಸಾರ ಕಟ್ಟಿಕೊಂಡಾಗ, ನನ್ನ ದೊಡ್ಡಮಗ ಕೊರೊನಾ ಕಾಲದಲ್ಲಿ ಜನರಿಗೆ ಕಿಟ್‌ ಹಂಚುವಾಗ ಬೀಕ್ಷುಕರಿಗೆ ಎಸೆಯುವಂತೆ &nbsp;ಕಿಟ್‌ ಎಸೆದಾಗ, ನನ್ನ ಸೊಸೆ ಒಂದು ಯಕಶ್ಚಿತ್‌ ಕಾರು ಡ್ಯಾಮೇಜ್‌ ಆದಾಗ ಗೌಡ್ರಾಳ್ವಿಕೆಯ ಪೊಗರಿನ ಮಾತಾಡಿದಾಗ, ಪ್ರಜ್ವಲನ ಕಾಮಕ್ರೀಡೆಗಳ ವಿಚಾರ ಕಿವಿಗೆ ಬಿದ್ದಾಗ… ಹೀಗೆ ಆಗಲೇ ಎಚೆತ್ತುಕೊಂಡು ಬುದ್ಧಿ ಹೇಳಿದ್ದರೆ ಇದೆಲ್ಲ ನಡೆಯುತ್ತಲೇ ಇರಲಿಲ್ಲ. ಈಗ ಕಾಲ ಮಿಂಚಿ ಹೋಗಿಬಿಟ್ಟಿದೆ. &nbsp;</p>



<p>ಇನ್ನು ನನ್ನ ಕಣ್ಣಾರೆ ಏನೇನೋ ನೋಡುವುದಿದೆಯೋ ಎಂದು ಅಲವತ್ತುಕೊಳ್ಳುತ್ತಾ ಕಾಲ ಕಳೆಯುವುದಷ್ಟೆ ಈಗ ನನಗೆ ಉಳಿದಿರುವುದು. ಇದನ್ನು ಕೂಡ ನೀವು ಸಹಾನುಭೂತಿ ಗಿಟ್ಟಿಸಿಕೊಳ್ಳಲು ದೊಡ್ಡಗೌಡರ ಗೋಳಾಟ ಎಂದುಕೊಂಡರೆ ನಾನೇನು ಮಾಡಲಾಗುವುದಿಲ್ಲ. &nbsp;ನಿಮಗೆ ಮನವರಿಕೆ ಮಾಡಲು ಸಾಧ್ಯವಿಲ್ಲವೆಂದು ನನಗೆ ಗೊತ್ತು. ನಾನು ನನ್ನ ಆತ್ಮಸಾಕ್ಷಿಗೆ ಹೆದರುತ್ತೇನೆ, ದೇವರಲ್ಲಿ ನನಗೆ ನಂಬಿಕೆ</p>



<p> ಇಂತಿ ನಿಮ್ಮ ದೊಡ್ಡಗೌಡ್ರು</p>



<ul class="wp-block-list">
<li><strong>ಹನುಮಂತ ಹಾಲಿಗೇರಿ </strong></li>
</ul>
]]></content:encoded>
					
		
		
			</item>
		<item>
		<title>ಮಾ.ಕೃ.ಕುಟೀರದ ಪೂಜಾರಿ ಮತ್ತು ಮ.ಮೀ.ಬಿಲ್‌ ಮಸಲತ್ತು</title>
		<link>https://peepalmedia.com/ma-kru-kutirada-pujari-and-m-m-bill-masalathu/</link>
		
		<dc:creator><![CDATA[Peepal Media]]></dc:creator>
		<pubDate>Tue, 26 Sep 2023 07:23:42 +0000</pubDate>
				<category><![CDATA[ವಿಡಂಬನೆ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=28531</guid>

					<description><![CDATA[ನಮೋ ಯಾರನ್ನೋ ಎದುರು ನೋಡುತ್ತ, ಶತಪಥ ಹಾಕುತ್ತ ಭಾರೀ &#160;ಗಡಿಬಿಡಿಯಲ್ಲಿದ್ದ. ಮುಖದಲ್ಲಿ ಎಂದಿನ ವೀರಾವೇಶವಿರದೆ ಆತಂಕ ತುಂಬಿತ್ತು. ಆಗಾಗ ತನ್ನ ಪರ್ಸನಲ್‌ ಸೆಕ್ರೆಟರೀನ ಕರೆದು “ಬಂದ್ರಾ….ಬಂದ್ರ” ಎಂದು ವಿಚಾರಿಸುತ್ತಿದ್ದ. ಹಿಂದಿನ ದಿನ ನಮೋ ಲ್ಯಾಪ್ ಟಾಪ್ ಹಿಡಿದು ತನ್ನ ವಿರೋಧಿಗಳಿಂದ ತನಗೆಷ್ಟು ಕೆಜಿ ಬೈಗುಳಗಳು ಬಂದಿದೆಯೆಂದು ಸಾಮಾಜಿಕ ಜಾಲತಾಣದಲ್ಲಿ ಹುಡುಕಾಟ ನಡೆಸಿ, ಕ್ಯಾಲುಕ್ಯುಲೇಟರ್ ರಲ್ಲಿ ಲೆಕ್ಕಾಚಾರ ಹಾಕುತ್ತಿದ್ದಾಗ&#160; ಮೊಬೈಲ್ &#160;“ನಮಸ್ತೇ…ಸದಾ ವತ್ಸಲೇ ಮಾತೃಭೂಮೇ…” ಎಂಬ ರಿಂಗ್ ಟೋನ್ ಗುಣಗುಣಿಸಿತು. ಮಾಧವ ಕೃಪಾಕಟಾಕ್ಷ ಕುಟೀರದ ಪುರೋಹಿತನ ಕರೆ ಅದಾದ್ದರಿಂದ [&#8230;]]]></description>
										<content:encoded><![CDATA[
<p>ನಮೋ ಯಾರನ್ನೋ ಎದುರು ನೋಡುತ್ತ, ಶತಪಥ ಹಾಕುತ್ತ ಭಾರೀ &nbsp;ಗಡಿಬಿಡಿಯಲ್ಲಿದ್ದ. ಮುಖದಲ್ಲಿ ಎಂದಿನ ವೀರಾವೇಶವಿರದೆ ಆತಂಕ ತುಂಬಿತ್ತು. ಆಗಾಗ ತನ್ನ ಪರ್ಸನಲ್‌ ಸೆಕ್ರೆಟರೀನ ಕರೆದು “ಬಂದ್ರಾ….ಬಂದ್ರ” ಎಂದು ವಿಚಾರಿಸುತ್ತಿದ್ದ.</p>



<p>ಹಿಂದಿನ ದಿನ ನಮೋ ಲ್ಯಾಪ್ ಟಾಪ್ ಹಿಡಿದು ತನ್ನ ವಿರೋಧಿಗಳಿಂದ ತನಗೆಷ್ಟು ಕೆಜಿ ಬೈಗುಳಗಳು ಬಂದಿದೆಯೆಂದು ಸಾಮಾಜಿಕ ಜಾಲತಾಣದಲ್ಲಿ ಹುಡುಕಾಟ ನಡೆಸಿ, ಕ್ಯಾಲುಕ್ಯುಲೇಟರ್ ರಲ್ಲಿ ಲೆಕ್ಕಾಚಾರ ಹಾಕುತ್ತಿದ್ದಾಗ&nbsp; ಮೊಬೈಲ್ &nbsp;“ನಮಸ್ತೇ…ಸದಾ ವತ್ಸಲೇ ಮಾತೃಭೂಮೇ…” ಎಂಬ ರಿಂಗ್ ಟೋನ್ ಗುಣಗುಣಿಸಿತು. ಮಾಧವ ಕೃಪಾಕಟಾಕ್ಷ ಕುಟೀರದ ಪುರೋಹಿತನ ಕರೆ ಅದಾದ್ದರಿಂದ ಅವಸರದಲ್ಲಿ ಫೋನ್ ಎತ್ತಿ “ಜೈಹಿಂದ್‌ ….ಜೈ ಭಾರತ್ ಮಾತಾ…ಜೈ ಅಖಂಡ ಭಾರತ್”ಎಂದ. ಆ ಕಡೆಯಿಂದ&nbsp; “ಸಾಹೇಬ್ರು ಏನ್&nbsp; ಕಿಸಿತಿದ್ದೀರ?” ಎಂಬ ಕುಹಕ ಧ್ವನಿ ಕೇಳಿ ಬಂದಾಗ, ಏನೋ ಎಡವಟ್ಟು ಆಗಿರಬಹುದೆಂದು ಎದ್ದು ನಮೋ ಅಟೆನ್ ಷೆನಲ್ಲಿ ನಿಂತ.</p>



<p>“ಏನಿಲ್ಲ…ಪುರೋಹಿತರೇ…ಈ ದಿನ ಎನಿಮಿಗಳ ಒಟ್ಟು ಎಷ್ಟು ಕೆಜಿ ಬೈಗುಳ ಬಂದಿದೆಯೆಂದು ಚೆಕ್‌ ಮಾಡ್ತಿದ್ದೆ”</p>



<p>“ಅದ್ಯಾಕಯ್ಯ….ನಿನಗೊಬ್ಬನಿಗೆ ಅಷ್ಟೊಂದು ಬೈಗುಳ…ಲೇವಡಿ ಬರುತ್ತೆ?”</p>



<p>“ನನ್ನ ಕಂಡ್ರೆ ಅವರಿಗೆಲ್ಲ ಹೊಟ್ಟೆಉರಿ. ನಾನು ಕುಂತ್ರು ಬೈಯ್ತಾರೆ…ನಿಂತ್ರು ಬೈಯ್ತಾರೆ…ಭಾಷಣ ಮಾಡಿದ್ರಂತೂ ಮೈಮೇಲೆ ಬರ್ತಾರೆ”</p>



<p>“ನೀನು ಪೆದ್ದುಪೆದ್ದಾಗಿ ಮಾತಾಡಿದ್ರೆ ಬೈದೇ ಏನ್‌ ಮಾಡ್ತಾರೆ! (a+b)̄2 ನಲ್ಲಿ 2ab ಎಕ್ಸ್ಟ್ರಾ ಸಿಗ್ತು ಅಂತೀಯಾ….ನೀನೇನು ಬೀಜಗಣಿತ ಪಂಡಿತನೋ? ಮತ್ತೊಂದು ಸಲ ಚರಂಡಿಯಲ್ಲಿ ಪೈಪ್‌ ಇಳಿಸಿ ಗ್ಯಾಸ್‌ ತೆಗೆದು ಟೀ ಮಾಡಬಹುದು ಅಂತೀಯ! ಮೋಡ ಇದ್ರೆ ರಾಡಾರ್‌ ಸಿಗ್ನಲ್‌ ನಿಂದ ಬಚಾವಾಗಬಹುದು ಅಂತೀಯ! ಏನೋ ನಮ್ಮ ಪೂರ್ವಾಶ್ರಮದ ಛಾನ್ಸೆಲರ್‌ ಇದ್ದದ್ದರಿಂದ ಕಷ್ಟಪಟ್ಟು ಯೂನಿವರ್ಸಿಟಿಲೀ ಮಾಸ್ಟರ್‌ ಡಿಗ್ರಿ ಸರ್ಟಿಫಿಕೇಟ್‌ ಕೊಡಿಸಿದ್ದೀನಿ. ಇಟ್ಕೊಂಡ್‌ ಸುಮ್ನಿರದೆ….ಈ ತರ ಕಂಬಿ ಇಲ್ಲದ ರೈಲು ಯಾಕಪ್ಪ ಬಿಡಬೇಕು?”</p>



<p>“ಅದು…ಅದು…ನನ್ನ ಅಭಿಮಾನಿಗಳು…ಭಕ್ತರನ್ನು ಮೆಚ್ಚಿಸೋಕೆ ಅಷ್ಟೇ”</p>



<p>“ಮುಚ್ಚಯ್ಯ ಬಾಯಿ…ಭಕ್ತರನ್ನ ಮೆಚ್ಚಿಸೋದಿರಲಿ…ವಿವೇಕವಂತರು ನಮ್ಮ ದೇಶದ ನಾಯಕ ಹಿಂಗೆ…. ಹೆಬ್ಬೆಟ್ಟು ಗಿರಾಕಿ ಅಂತ ಎಲ್ಲಾ ಕಡೆ ಮಾನ ಮಾರ್ಯಾದೆ ತೆಗೀತಿದ್ದಾರೆ. ನಿಂಗೆ ಎಷ್ಟು ಹೇಳಿದ್ರು ಬುದ್ಧಿ ಬರಲ್ಲ. ಅದು ಬಿಡು….ನಾಳೆ ಬರ್ತೀನಿ…ಬಿಲ್‌ ಎಲ್ಲಾ ರೆಡಿ ಮಾಡಿಟ್ಟಿರು”</p>



<p>ಬಿಲ್ಲು ಎಂದ ಕೂಡಲೇ ನಮೋ ಗಲಿಬಿಲಿಗೊಂಡ. ಯಾವ ಬಿಲ್‌ ಬಗ್ಗೆ ಕೇಳ್ತಿದ್ದಾರೆ ತಿಳಿಯದೆ ತಲೆ ಕೆರೆದುಕೊಂಡ.</p>



<p>“ಸ್ವಾಮಿ…ಬಿಲ್ಲನ್ನೆಲ್ಲ ನನ್ನ ಪರ್ಸನೆಲ್‌ ಸೆಕ್ರೆಟರಿನೇ ನೋಡೋದು. ಅದೆಲ್ಲ ಪೇ ಆಗಿದೆ. ಬಾಕಿ ಯಾವ್ದು ಉಳಿಸಿಕೊಂಡಿಲ್ಲ….” ಅಂತ ಏನೋ ಹೇಳುತ್ತಿದ್ದವನಿಗೆ ಆ ಕಡೆಯಿಂದ “ಆಯ್ತು…ಅಲ್ಲೇ ಬಂದು ಚೆಕ್ ಮಾಡ್ತೀನಿ. ಫೋನಲ್ಲೇ ಚೆಕ್‌ ಮಾಡೋಕೆ ಆಗುತ್ತಾ?” ಎಂದು ಫೋನು ಕುಕ್ಕಿದ ಶಬ್ದ ಕೇಳಿ ಬಂತು.</p>



<p>ಗಡ್ಡ ನೀವಿಕೊಳ್ಳುತ್ತ ಯಾವ ಬಿಲ್ಲು ಎಂದು ಚಿಂತಿಸುತ್ತಿದ್ದಾಗ, “ನಿಮ್‌ ಸಾಹೇಬಂದು ಭಾಳ ಷೋಕಿ ಆಯ್ತು! ಆಶ್ರಮದಲ್ಲಿದ್ದಾಗ ಮೂರೊತ್ತು ಉಪ್ಪಿಟ್ಟು ತಿಂದ್ಕೊಂಡ್….ವಾರಕ್ಕೊಮ್ಮೆ ಹಾಕಿದ್ದ ಚಡ್ಡಿನಾ ಬದಲಿಸುತ್ತಿದ್ದದ್ದನ್ನ, ಈಗ ಮೆಮೊರಿ ಫೋಮ್‌ ಬೆಡ್ ಸಿಕ್ತು ಅಂತ ಎಲ್ಲಾ ಮರೆತಿರಬೇಕು. ಮಜಾ ಮಾಡ್ತಿರೋದು &nbsp;ಜನರ ತೆರಿಗೆ ಹಣ ನೆನಪಿರಲಿ. ಎಲ್ಲವೂ ಮಿತಿಯಲ್ಲಿರಬೇಕು” ಎಂದು ಒಮ್ಮೆ ತನ್ನ ಪಿಎಗೆ ಪುರೋಹಿತ ಜಾಡಿಸಿದ್ದು ನೆನಪಿಗೆ ಬಂದು ಕೂಡಲೇ ಪಿಎಯನ್ನು ಬರಹೇಳಿದ. &nbsp;</p>



<p>“ನೋಡು…ನನ್ನ ಡ್ರೆಸ್‌ ಡಿಸೈನರ್‌, ಕ್ಯಾಪ್‌ ಡಿಸೈನರ್‌, ಪೇಟ ಡಿಸೈನರ್, ದಾಡಿ ಡಿಸೈನರ್‌, ಷೂ ಡಿಸೈನರ್‌…ಇನ್ನು ಯಾರ್ಯಾರಿದ್ದಾರೊ ಅವರಿಗೆ ಪೇ ಮಾಡಿರೋ ಬಿಲ್ಲನ್ನೆಲ್ಲ ತರಿಸು. ಎಲ್ಲಾ ವರ್ಷದ್ದು ತಗೊಂಬಾ. ಪೂಜಾರಿ ಸಿಡುಕ. ಯಾವ ವರ್ಷದ್ದು ಕೇಳ್ತಾನೊ ಗೊತ್ತಿಲ್ಲ”</p>



<p>ಪಿಎ ಹಲ್ಲು ಕಿರಿಯುತ್ತ ನಿಂತಾಗ….</p>



<p>“ಯಾಕಪ್ಪ….ಅಕೌಂಟ್‌ ಸರಿಯಾಗಿ ಇಟ್ಟಿಲ್ವ…ಗೋಲ್‌ ಮಾಲ್‌ ಏನಾದ್ರೂ….”</p>



<p>“ಅಯ್ಯೋ…ಅದೇನಿಲ್ಲ ಸಾರ್….ಕಳೆದ ಒಂಭತ್ತು ವರ್ಷದ್ದು ಅಂದ್ರೆ…ಸುಮಾರು ಒಂದೆರೆಡು ಟ್ರಕ್‌ ಆಗುತ್ತೆ. ಹಂಗೆ ತಂದ್ರು ಅದನ್ನ ಎಲ್ಲಿ ಜೋಡಿಸೋದು?”</p>



<p>“ಹ್ಞು…ಒಂದು ಕೆಲ್ಸ ಮಾಡು. ಕಳೆದ ಎರಡು ವರ್ಷದ್ದು ಮಾತ್ರ ತರಿಸು. ಆಮೇಲೆ ನೋಡೋಣ”</p>



<p>ಸರಿ. ನಮೋನ ಅಪಾದಮಸ್ತಕ&nbsp; ಷೋಕಿಗೆಂತ ಖರ್ಚು ಮಾಡಿದ ಬಿಲ್ಲುಗಳನ್ನು ತರಿಸಿ ಮನೆ ಆಫೀಸಿನ ರೂಮೊಂದರಲ್ಲಿ ಕಾಲಿಡಲು ಜಾಗವಿಲ್ಲದಂತೆ ಪಿಎ ಪೇರಿಸಿದ.</p>



<p>ಅತಿಥಿಗೃಹದ ಹೊರಗಡೆ ಯಾರೋ ಜೋರಾಗಿ ಮಾತನಾಡುವುದು ಕೇಳಿಬರುತ್ತಿದ್ದು, ಮೊದಲೇ ಟೆನ್ಶನಲ್ಲಿದ್ದ ನಮೋಗೆ ಪಿತ್ಥ ನೆತ್ತಿಗೇರಿ ಪಿಎಗೆ “ನನಗಿಂತ ಜೋರು ಬಾಯಿ!!….ಯಾರದು ನೋಡಿ ಬಾ” ಅಂದ. ಗೇಟಿನ ಬಳಿ ದೊಗಳೆ ಚಡ್ಡಿ ತೊಟ್ಟು, ಕೈಲಿ ಬಿದಿರು ಲಾಠಿ ಹಿಡಿದ ಒಬ್ಬ ಡೊಳ್ಳುಹೊಟ್ಟೆ ಆಸಾಮಿ ಪ್ರವೇಶ ನಿರಾಕರಿಸಿದ್ದಕ್ಕೆ ತಾರಮಾರ ಸೆಕ್ಯುರಿಟಿಯವರ ಮೇಲೆ ರೇಗುತ್ತಿದ್ದ. “ಚಡ್ಡಿ ಹಾಕ್ಕೊಂಡವ್ರನ್ನ ಒಳಗೆ ಬಿಡಲ್ಲ ಅಂತೀಯಾ? ಯಾವನಯ್ಯ ಅವ್ನು ನಿಮ್‌ ಸಾಮ್ರಾಟ…ಅವ್ನ ಕುರ್ಚಿಲೀ ಕೂಡಿಸಿದ್ದೇ ನಾನು…ಅವ್ನ ಹೊರಗೆ ಕರಿ…ನಾನ್ಯಾರು ಅಂತ ಗೊತ್ತಾಗುತ್ತೆ!” ಪಿಎಗೆ ಆದ ಎಡವಟ್ಟಿನ ಅರಿವಾಗಿ ಮಾ.ಕೃ.ಕುಟೀರದ ಪೂಜಾರಿಯ ಕ್ಷಮೆ ಕೇಳಿ ಒಳ ಬರಮಾಡಿಕೊಂಡ.</p>



<p>ಬುಸುಗುಡುತ್ತ, ಚಿತ್ಪಾವನ ಸಮುದ್ರಸಿಂಹ ಮೀಸೆ ತಿರುಗಿಸುತ್ತ ಒಳ ಬಂದ ಪೂಜಾರಿಗೆ ನಮೋ ನೆಲಕ್ಕುರಳಿ ಉದ್ದಂಡ ನಮಸ್ಕರಿಸಿದ. ಕುರ್ಚಿ ಮೇಲೆ ಕಾಲು ಮೇಲೆ ಕಾಲಾಕಿ ಕೂತ ಪೂಜಾರಿಗೆ ನಮೋನ ಜಗಮಗಿಸುವ ದಿರಿಸನ್ನು ನೋಡಿ ರೇಜಿಗೆ ಹುಟ್ಟಿತು.&nbsp; “ಏನಯ್ಯ…ನಿನ್‌ ಅವತಾರ. ಯಾವಾಗ್ಲೂ ಭಾಷಣ ಮಾಡೋಕೆ ರೆಡಿಯಾಗಿರ್ತೀಯ?” ಅಂದದ್ದಕ್ಕೆ, “ಒಂದೇ ನಿಮಷ…ಒಳಗೋಗಿ ಪೂರ್ವಾಶ್ರಮದ ಗಣವೇಷಧಾರಿಯಾಗಿ ಬರುತ್ತೇನೆ” ಎಂದು ನಮೋ ಹಲ್ಲು ಕಿರಿದ. “ಅದೆಲ್ಲ ಏನು ಬೇಡ. ಮೊದಲು ಬಿಲ್‌ ತೋರಿಸು. ಸದನಕ್ಕೆ ತೋರಿಸೊ ಮುಂಚೆ ಏನಾದರೂ ಕರೆಕ್ಷನ್‌ ಇದೆಯಾ ಒಮ್ಮೆ ನೋಡ್ತೇನೆ” ಅಂದ. ಅವನ ಮಾತಿಗೆ ನಮೋ ಹೌಹಾರಿದ. ಐಷಾರಾಮಿ ಬಟ್ಟೆಬರೆಗೆ ಆದ ಖರ್ಚನ್ನು ಸದನದಲ್ಲಿಟ್ಟರೆ ಪ್ರತಿಪಕ್ಷದವರು ತನ್ನನ್ನು ಸುಮ್ಮನೆ ಬಿಡುವರೇ? ಸಿಕ್ಕಿದ್ದೇ ಚಾನ್ಸೂಂತ ವಿರೋಧಿಗಳು ಪಾನ್‌ ಪರಾಗ್‌ ಪಾನ್‌ ಮಸಾಲ ಜಗಿಯುತ್ತ ಉಗಿಯಲು ಸಿದ್ದರಾಗುತ್ತಿರುವ ಟ್ರೈಲರ್‌ ಕಣ್ಮುಂದೆ ಹಾಗೆ ಹಾಯ್ದು ಕರ್ಚೀಫಲ್ಲಿ ಮುಖ ಒರೆಸಿಕೊಂಡ.</p>



<p>ಬಿಲ್ಲುಗಳನ್ನು ಒಟ್ಟಿದ್ದ ರೂಮಿಗೆ ಪೂಜಾರಿಯನ್ನು ಕರೆತಂದಾಗ, ತಾರಸಿವರೆಗೆ ಪೇರಿಸಿಟ್ಟ ಬಿಲ್ಲಿನ ಬೆಟ್ಟವನ್ನು ನೋಡಿ ಅವಾಕ್ಕಾದ ಪೂಜಾರಿ ಸಡನ್ನಾಗಿ ನಮೋ ಕಡೆಗೆ ತಿರುಗಿ ದುರುಗುಟ್ಟಿದ. ಪೂಜಾರಿಯ ಮೂಗಿನ ಹೊಳ್ಳೆ, ಕಿವಿಗಳಿಂದ ಹೊರಹೊಮ್ಮುತ್ತಿದ್ದ ಹೊಗೆಯನ್ನು ಕಂಡ ನಮೋಗೆ ಕೈಕಾಲು ನಡುಕ ಆರಂಭವಾಯಿತು.</p>



<p>“ಏನಯ್ಯ…ಇದು ಪೇಪರ್‌ ಗಳ ರಾಶಿ. ನಾನು ಕೇಳಿದ್ದು ಮಹಿಳಾ ಮೀಸಲಾತಿ ಬಿಲ್‌”</p>



<p>ನಮೋಗೆ ತಟ್ಟನೆ ಮುಖಭಂಗವಾದಂತಾಗಿ ಕೈಕೈ ಹಿಸುಕಿಕೊಂಡು “ಓಹ್…ಅದಾ…ವುಮೆನ್‌ ರಿಸೆರ್ವೇಶನ್‌ ಬಿಲ್”‌ ಎಂದು ತಡವರಿಸಿ, ಒಣಗಿದ ತುಟಿಗಳನ್ನು ನಾಲಿಗೆಯಿಂದ ಸವರುತ್ತ ಪಿಎಗೆ ಕರೆದು ಕಿವಿಯಲ್ಲಿ ಏನೋ ಉಸುರಿ ಬೇಗ ಬರುವಂತೆ ಸನ್ನೆ ಮಾಡಿದ.&nbsp;</p>



<p>“ಅದು ಸರಿ…ಪೂಜಾರ್ರೇ…ಈಗ್ಯಾಕೆ ಅದು ಅಂತ. ಪೂರ್ವಾಶ್ರಮದಲ್ಲಿ ನಮಗೆ ಹೆಣ್ಣು – ತಾಯಿ, ಹೆಂಡತಿ, ಮಗಳು, ಸೊಸೆ ಯಾರೇ ಆಗಿರಲಿ. ಅವರು ಗಂಡಿನ ಸೇವೆಗೆ ಮಾತ್ರ ಮೀಸಲು. ಅವರೆಲ್ಲಾ ಶೂದ್ರರಿಗೆ ಸಮಾನ…ಹಾಗೆಂದು ನಮ್ಮ ಸನಾತನ ಧರ್ಮದಲ್ಲೇ ಹೇಳಿದೆ ಅಂತೆಲ್ಲ ಪಾಠ ಮಾಡಿದ್ರೀ. ಈಗ ಅವ್ರಿಗೆ&nbsp;ರಿಸರ್ವೇಶನ್‌ ಅಂತಿದ್ದೀರಾ! ನಾಳೆ ನಮ್ಮ ತಲೆ ಮೇಲೆ ಬಂದು ಕೂತರೆ ಏನ್‌ ಮಾಡೋದು?”</p>



<p>“ಅದಕ್ಕೆ ನಿನ್ನ ತಲೆಯಲ್ಲಿ ನಿನ್ನ ಭಕ್ತರ ಹಾಗೆ ಮೆದುಳಿಲ್ಲ ಅನ್ನೋದು. ಅಲ್ಲಯ್ಯ…ಚುನಾವಣೆ ಹತ್ರ ಬರ್ತಿದೆ ಜನರನ್ನು ಮರುಳು ಮಾಡೋಕೆ ಏನಾದ್ರೂ ಹೊಸ ಪ್ಲಾನ್‌ ಮಾಡಿದ್ದೀಯ?”</p>



<p>“ಪ್ಲಾನ್‌ ಮಾಡೋದು ಏನಿದೆ? ಪಾಕಿಸ್ತಾನ, ಮುಸ್ಲಿಮ್‌, ರಾಮ ಮಂದಿರ, ಕಾಶ್ಮೀರ, ಪುಲ್ವಾಮ…ಎಲ್ಲಾ ರೆಡಿ ಇದೆಯಲ್ಲ!”</p>



<p>“ನೀನು ಫಾರಿನ್‌ ಟೂರ್‌ ಹೊಡ್ಕೊಂಡ್‌…ದೇಶದಲ್ಲಿ ಆಕ್ತಿರೋ ಡೆವಲಂಪ್‌ ಮೆಂಟ್ನ ಗಮನಿಸಿಲ್ಲ ಅನ್ಸುತ್ತೆ. ನಂಗೆ ಬಂದಿರೋ ಇಂಟೆಲಿಜೆನ್ಸ್‌ ರಿಪೋರ್ಟ್‌ ಪ್ರಕಾರ ಅವೆಲ್ಲಾ ಔಟ್‌ ಡೇಟೆಡ್‌ ಆಗಿವೆ. ಜನರಿಗೆ ಹೇಳಿದ್ದೇ ಹೇಳಿ ಹೇಳಿ ಅವರಿಗೂ ಸಾಕಾಗಿದೆ. ಈಗೇನಿದ್ರೂ ಹೊಸದನ್ನ ಹೊಸೀಬೇಕು”</p>



<p>“ಯುಸಿಸಿ, ಒನ್‌ ನೇಷನ್‌ ಒನ್‌ ಎಲೆಕ್ಷನ್‌&#8230;ಮತ್ತೆ ಭಾರತ ಅಂತ ಹೊಸನಾಮಕರಣ….ಸನಾತನ ಧರ್ಮ &nbsp;ರಕ್ಷಣೆ ಇದೆಯಲ್ಲ”</p>



<p>“ಅದು ವರ್ಕೌಟ್‌ ಆಗೋದು ಡೌಟು. ಯಾವುದಕ್ಕು ಮ.ಮೀ. ಬಿಲ್ನೂ‌ ತಂದ್ರೆ…ಚದುರಿ ಹೋಗಿರೊ ಜನರನ್ನ ಒಗ್ಗೂಡಿಸಿ ಅಭಿವೃದ್ಧಿಯ ಮುಖ್ಯವಾಹಿನಿಗೆ ತರಬಹುದು”</p>



<p>“ಅದು ಸರಿ…ಆದ್ರೆ ಮನುಸ್ಮೃತಿನಾ ಚೆನ್ನಾಗಿ ಕಂಠಪಾಠ ಮಾಡಿರೋ ನಮ್ಮ ಸಂಚಾಲಕರು, ನಮ್ಮ ಕಮಲಿಗಳು, ಎಲ್ಲಕ್ಕಿಂತ ಹೆಚ್ಚಾಗಿ ಯೋಗಿಬಾಬಾ ಈ ಮ.ಮೀ.ಬಿಲ್ಲನ್ನು ವಿರೋಧಿಸಿದರೆ ಪ್ರಚಾರಕ್ಕೆ ತೊಂದ್ರೆ ಆಗುತ್ತಲ್ವ…ಪುರೋಹಿತರೇ?”</p>



<p>“ಅದು ನಂಗೆ ಗೊತ್ತು…ಅದಕ್ಕೂ ಒಂದ್‌ ಐಡಿಯಾ ಮಾಡಿದ್ದೀನಿ. ಸಂವಿಧಾನದಲ್ಲಿ ಜಾತ್ಯತೀತ, ಸಮಾಜವಾದ, ಸಮಗ್ರತೆ ತೆಗೆದು ಹಾಕೋಣ”</p>



<p>“ಅಯ್ಯೋ! ಅದಷ್ಟು ಸುಲಭನಾ! ಜನ ತಿರುಗಿ ಬಿದ್ರೆ?”</p>



<p>“ಅದಕ್ಕೆ ನಿನ್ನ ಶತದಡ್ಡ ಅನ್ನೋದು. ನೋಡು…ಸಂವಿಧಾನದ ಅಪರಿಷ್ಕೃತ ಹಳೇ ಪಠ್ಯನ ಹಂಚೋದು. ವಿರೋಧಿಗಳು ಗೊಣಗಾಡಿದರೂ ಮೂಲ ಬದಲಾವಣೆಗೆ ಕೈ ಹಾಕಿಲ್ಲಾಂತ ಸಮಾಧಾನ ಪಡ್ತಾರೆ. ನಮ್ಮವರಿಗೆ ಸನಾತನಕ್ಕೆ ಒಗ್ಗದ ಜಾತ್ಯತೀತ, ಸಮಾಜವಾದ, ಸಮಗ್ರತೆನಾ ಎರೆಸ್‌ ಮಾಡಿದ್ದೀವಿ ಅಂತ ನಾನು ಹೇಳಿದ್ರೆ ನಂಬ್ತಾರೆ. ಅಲ್ಲಿಗೆ ಒಂದೇ ಬಲೆಲೀ ಇಬ್ಬರನ್ನು ಕೆಡವಿದ ಹಾಗಾಗುತ್ತೆ”</p>



<p>ಎಷ್ಟಾದರೂ ಪುರೋಹಿತನ ಬ್ರೈನ್…ನಮೋ ಅವನ ಮಾತಿಗೆ ಮೆಚ್ಚುಗೆಯಿಂದ ತಲೆದೂಗಿ, ಕೈ ಜೋಡಿಸಿ ತಲೆ ತಗ್ಗಿಸಿ&nbsp; ನಿಂತ. ಪುರೋಹಿತ &nbsp;ಜೋರಾಗಿ ನಗುತ್ತ ನಮೋ ತಲೆ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದ.</p>



<p><strong>ಚಂದ್ರಪ್ರಭ ಕಠಾರಿ</strong></p>



<p><strong><mark style="background-color:rgba(0, 0, 0, 0)" class="has-inline-color has-vivid-red-color">ಇದನ್ನೂ ಓದಿ-</mark></strong><a href="https://peepalmedia.com/vishwa-doddanna-and-vishwaguru/" data-type="post" data-id="27796"><mark style="background-color:rgba(0, 0, 0, 0)" class="has-inline-color has-vivid-red-color">ವಿಶ್ವ ದೊಡ್ಡಣ್ಣ ಮತ್ತು ವಿಶ್ವಗುರುವಿನ ವಾಯುವಿಹಾರ</mark></a></p>
]]></content:encoded>
					
		
		
			</item>
		<item>
		<title>ವಿಶ್ವ ದೊಡ್ಡಣ್ಣ ಮತ್ತು ವಿಶ್ವಗುರುವಿನ ವಾಯುವಿಹಾರ</title>
		<link>https://peepalmedia.com/vishwa-doddanna-and-vishwaguru/</link>
		
		<dc:creator><![CDATA[Peepal Media]]></dc:creator>
		<pubDate>Thu, 14 Sep 2023 12:27:53 +0000</pubDate>
				<category><![CDATA[ವಿಡಂಬನೆ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=27796</guid>

					<description><![CDATA[“ಬಾರಯ್ಯ ಬೇಗ….” ದೊಡ್ಡಣ್ಣ ನಮೋ ಮನೆ ಮುಂದು ನಿಂತು ವಾಕಿಂಗ್‌ ಹೋಗಲೆಂದು ಕೂಗಿದ. “ಬಂದೇ…ಬಂದೇ” ನಮೋ ಕೂಗುತ್ತ ಓಡಿಬಂದ. “ಯಾಕಪ…ಲೇಟು” “ನವಿಲಿಗೆ ಕಾಳು ಹಾಕ್ತಿದ್ದೆ. ಫೋಟೊಗ್ರಾಫರ್‌ ಬೇರೆ ಬಂದಿರಲಿಲ್ಲ” “ಅದೇನ್‌ ಫೋಟೊ ಹುಚ್ಚು ನಿಂದು…ಸರಿ ನಡಿ” ಹಂಗೆ ವಾಕಿಂಗ್‌ ಮಾಡ್ತ….. ದೊಡ್ಡಣ್ಣ:&#8211; ನೋಡು…ನಾನು ವಿಶ್ವಕ್ಕೆ ಬರೀ ದೊಡ್ಡಣ್ಣ. ನೀನು ವಿಶ್ವಗುರು ಆಗಬೇಕು ಅಂತಿದ್ದೀಯಾ…. ನಮೋ (ತಟ್ಟನೆ) :- ನಾನಾಗಲೇ ವಿಶ್ವಗುರು ಆಗಿದ್ದೀನಿ. ದೊಡ್ಡಣ್ಣ (ನಗುತ್ತ) :- ಹಂಗಂತ ಯಾರು ಹೇಳಿದ್ದು? ನಮೋ :- ನಾನು ಫಾರಿನ್‌ ಟೂರ್ಗೆ [&#8230;]]]></description>
										<content:encoded><![CDATA[
<p></p>



<p></p>



<p>“ಬಾರಯ್ಯ ಬೇಗ….” ದೊಡ್ಡಣ್ಣ ನಮೋ ಮನೆ ಮುಂದು ನಿಂತು ವಾಕಿಂಗ್‌ ಹೋಗಲೆಂದು ಕೂಗಿದ.</p>



<p>“ಬಂದೇ…ಬಂದೇ” ನಮೋ ಕೂಗುತ್ತ ಓಡಿಬಂದ.</p>



<p>“ಯಾಕಪ…ಲೇಟು”</p>



<p>“ನವಿಲಿಗೆ ಕಾಳು ಹಾಕ್ತಿದ್ದೆ. ಫೋಟೊಗ್ರಾಫರ್‌ ಬೇರೆ ಬಂದಿರಲಿಲ್ಲ”</p>



<p>“ಅದೇನ್‌ ಫೋಟೊ ಹುಚ್ಚು ನಿಂದು…ಸರಿ ನಡಿ”</p>



<p>ಹಂಗೆ ವಾಕಿಂಗ್‌ ಮಾಡ್ತ…..</p>



<p><strong>ದೊಡ್ಡಣ್ಣ:</strong>&#8211; ನೋಡು…ನಾನು ವಿಶ್ವಕ್ಕೆ ಬರೀ ದೊಡ್ಡಣ್ಣ. ನೀನು ವಿಶ್ವಗುರು ಆಗಬೇಕು ಅಂತಿದ್ದೀಯಾ….</p>



<p><strong>ನಮೋ</strong> (ತಟ್ಟನೆ) :- ನಾನಾಗಲೇ ವಿಶ್ವಗುರು ಆಗಿದ್ದೀನಿ.</p>



<p><strong>ದೊಡ್ಡಣ್ಣ </strong>(ನಗುತ್ತ) :- ಹಂಗಂತ ಯಾರು ಹೇಳಿದ್ದು?</p>



<p><strong>ನಮೋ</strong> :- ನಾನು ಫಾರಿನ್‌ ಟೂರ್ಗೆ ಹೋದಲೆಲ್ಲ….ಅಲ್ದೆ…ಇಂಡಿಯಾ ಅಲ್ಲಾ…..ಭಾರತ್‌ ದಲ್ಲಿ <strong>ಎಲ್ರೂ</strong>….ಮೀಡಿಯಾದವ್ರು ನನ್ನ ಹಂಗೇ ಕರಿಯೋದು</p>



<p><strong>ದೊಡ್ಡಣ್ಣ</strong>:- ಎಲ್ರೂ ಅಂದ್ರೆ….ಯಾರು? ಫಾರಿನ್‌ ಟೂರ್‌ ಬಿಡು. ಅವರೆಲ್ಲ ನಿನ್ನನ್ನು ಎಂಟೈರ್‌ ಎಂಟರ್‌ ಟೈನ್‌ ಮೆಂಟ್‌ ಪಿಎಚ್‌ ಡಿ ಹೋಲ್ಡರ್‌ ಅಂದ್ಕೊಂಡಿದ್ದಾರೆ. ಇನ್ನು ಉಳಿದವರು…. ನಿನ್ನ ಟುರುಪೀಸ್ ಪೇಯ್ಡ್‌ ಲಂಡಭಕ್ತರು‌ ಮತ್ತೆ… ಮೂರೊತ್ತು ನೀನು ಹಾಕೊ ಪೆಡಿಗ್ರಿ ಡಾಗ್‌ ಬಿಸ್ಕತ್‌ ತಿನ್ನೋ ಗೋದಿ ಮೀಡಿಯಾದವ್ರು….</p>



<p><strong>ನಮೋ</strong> (ಮುನಿಸಿಕೊಂಡು) :- ಸರಿ….ಅದಕ್ಕೇನೀಗ?</p>



<p><strong>ದೊಡ್ಡಣ್ಣ</strong>:- ನೋಡು….. ಬರೀ ಗಾಂಧೀಜಿ ಸಮಾಧಿ ಮುಂದೆ ಕ್ಯಾಮೆರಾಕ್ಕೆ ಪೋಸು ಕೊಟ್ಟರೆ ಸಾಲದು. ವಿಶ್ವಗುರು ಆಗಬೇಕಾದ್ರೆ ಗಾಂಧೀಜಿ ಹಂಗೆ ನಡ್ಕೊಬೇಕು. ಮಾನವ ಹಕ್ಕುಗಳು ಮತ್ತು ಮಾಧ್ಯಮ ಸ್ವಾತಂತ್ರ್ಯಕ್ಕೆ ಜಾಸ್ತಿ ಗೌರವ ಕೊಡ್ಬೇಕು.&nbsp;</p>



<p><strong>ನಮೋ</strong> (ತಲೆ ಕೆರೆದುಕೊಳ್ಳುತ್ತ) :- ಹಂಗಂದ್ರೆ ಏನು? ನಾನು ಸನಾತನ ಚಡ್ಡಿಧಾರಿ.</p>



<p><strong>ದೊಡ್ಡಣ್ಣ</strong> (ಮುಖ ಸಿಂಡರಿಸಿ, ಮೂಗು ಮುಚ್ಚಿಕೊಂಡು):- ಅದು ನಂಗೆ ಗೊತ್ತು ಕಣಯ್ಯ….ಎತ್ತಿ ತೋರಿಸ್ಬೇಡ. ಅದೇ ಪ್ರಾಬ್ಲಮ್‌ ಆಗಿರೋದು. ನಿಮ್ಮ ದೇಶದಲ್ಲಿ ಎಲ್ಲೆಲ್ಲೂ ಬೀದೀಲಿ ಸನಾತನ ಗಬ್ಬುವಾಸನೆ ರಾಚುತ್ತೆ. ನಮ್ಮಲ್ಲೂ ಅಂತ ವಾಸನೆ ಚೂರುಪಾರು ಇದೆ. ಆದರೆ ಅದು ಚರ್ಚಲ್ಲಿದೆ. ಬೀದಿಲೀ ಇಲ್ಲ. ನೋಡು….ನಾಗರಿಕ ಸಮಾಜದಲ್ಲಿ ಮಾನವ ಹಕ್ಕುಗಳು ಬಹಳ ಮಹತ್ವದ್ದು. ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಮುಖವಾದದ್ದು……</p>



<p><strong>ನಮೋ</strong> (ಸ್ವಗತ) :- ಇವನದ್ದು ಯಾಕೋ ಜಾಸ್ತಿಯಾಯ್ತು. ಹೋಗಲಿ ಪಾಪಾಂತ ಡಿನ್ನರ್ ಗೆ ಬೀಫ್‌ ಬಿರಿಯಾನಿ ಮಾಡಿಸಿದ್ದು ತಪ್ಪಾಯಿತು.</p>



<p>ದೊಡ್ಡಣ್ಣ ಬಾಲಬೋಧೆ ಮುಂದುವರೆಸಿದ್ದ……</p>



<p>ನಿಮ್ಮ ದೇಶದಲ್ಲಿ ಮೈನಾರಿಟಿಸ್‌ ಕಮ್ಯೂನಿಟಿ ಮೇಲೆ ದೌರ್ಜನ್ಯ, ಹಿಂಸೆ ಹೆಚ್ಚುತ್ತಿದೆ. ಪೊಲೀಸ್‌ ಮತ್ತು ಬಂದೀಖಾನೆ ಇಲಾಖೆಯ ಅಧಿಕಾರಿಗಳು ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ……</p>



<p><strong>ನಮೋ</strong>(ಸ್ವಗತ):- ಇವನ್ಯಾವನೋ ದೊಣ್ಣೆನಾಯಕ ನಂಗೆ ಪಾಠ ಮಾಡ್ತವ್ನೆ….ಇವ್ನು ಮಾತ್ನ ಕೇಳ್ತಾ ಕೂತರೆ ಮಾಧವ ಕೃಪಾಕಟಾಕ್ಷ ಕುಟೀರದ ಪೂಜಾರಿ ನನ್ನ ಮುಖಕ್ಕೆ ಮಂಗಳಾರತಿ ಎತ್ತಿ….ಕುರ್ಚಿಯಿಂದ ಕೆಳಗೆ ಇಳಿ ಅಂತಾನೆ…ಮೂವತ್ತು ವರ್ಷ ಭಿಕ್ಷೆ ಬೇಡಿಕೊಂಡು ತಿಂದು ಸಾಕಾಗಿತ್ತು. ಹೆಂಗೊ ಈಗ ಮಜವಾಗಿದ್ದೀನಿ….</p>



<p>ದೊಡ್ಡಣ್ಣನ ಮಾತಿನಿಂದ ಹೇಗಾದರೂ ತಪ್ಪಿಸಿಕೊಳ್ಳಬೇಕಲ್ಲ ಎಂದು ನಮೋ ಯೋಚಿಸುತ್ತಿರುವಾಗಲೇ, ಅಲ್ಲೊಬ್ಬ ತೋಟದ ಮಾಲಿ “ಸಾಹೇಬ್‌…ಸಾಹೇಬ್‌” ಆತಂಕದಿಂದ ಕೂಗುತ್ತ ಓಡಿ ಬರುತ್ತಿದ್ದ.</p>



<p><strong>ಮಾಲಿ:-</strong> ಸಾಹೇಬ್‌….ಮೊಸಳೆ ಫೌಂಟೆನ್ ನಿಂದ ಆಚೆ ಬಂತು. ಸಾಹೇಬ್ರರಿಗೆ ಕಂಪ್ಲೇಂಟ್‌&nbsp; ಮಾಡ್ತೀನಿ…ವಾಪಸ್‌ ಒಳಗೋಗು ಅಂದ್ರೆ ಮಾತು ಕೇಳ್ತಿಲ್ಲ. ತಿರುಗಿ ನೋಡುವಷ್ಟರಲ್ಲಿ&nbsp; ಮಾಯವಾಗಿದೆ. ಎಲ್ಲೋ ತಪ್ಪಿಸಿಕೊಂಡಿದೆ.</p>



<p>ಅದಕ್ಕೆ ಕಾಯುತ್ತಿದ್ದವನಂತೆ “ಅಣ್ಣ ಸ್ವಲ್ಪ ಬರ್ತೀನಿ. ಮೊಸಳೆ ಮಾಯವಾಗಿದೆಯಂತೆ” ಎಂದು ದೊಡ್ಡಣ್ಣನ ಉತ್ತರಕ್ಕೆ ಕಾಯದೆ&nbsp; ಅಲ್ಲಿಂದ ಬುಲೆಟ್‌ ಟ್ರೈನ್‌ ಬಿಟ್ಟ.</p>



<p>ನಮೋ ಕಳ್ಳಾಟ ಗೊತ್ತಿದ್ದ ದೊಡ್ಡಣ್ಣ “ಇವ್ನು ಉದ್ದಾರ ಆಗೊಲ್ಲ….ನೊ ವೇ…ವಾಟ್‌ ಎ ಫಕ್“&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp; ಎನ್ನುತ್ತ ಒಬ್ಬಂಟಿ ವಾಕಿಂಗ್‌ ಹೊರಟ.&nbsp;</p>



<p><strong>ಚಂದ್ರಪ್ರಭ ಕಠಾರಿ</strong></p>



<p>cpkatari@yahoo̤.com</p>
]]></content:encoded>
					
		
		
			</item>
	</channel>
</rss>
