<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ಸಿನಿಮಾ &#8211; Peepal Media</title>
	<atom:link href="https://peepalmedia.com/category/movie/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 20 Jan 2026 11:14:49 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.9</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>ಸಿನಿಮಾ &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ನಟ ಕಿಚ್ಚ ಸುದೀಪ್ ಹಾಗೂ ಚಕ್ರವರ್ತಿ ಚಂದ್ರಚೂಡ ವಿರುದ್ಧ ವಂಚನೆ ಆರೋಪ: ಕಾಫಿ ತೋಟದ ಮಾಲೀಕ ದೂರು</title>
		<link>https://peepalmedia.com/sudeep-and-chakravarthy-chandrachud-accused-of-fraud/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 20 Jan 2026 11:14:47 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[ಸಿನಿಮಾ]]></category>
		<guid isPermaLink="false">https://peepalmedia.com/?p=72737</guid>

					<description><![CDATA[ಬೆಂಗಳೂರು: ನಟ ಕಿಚ್ಚ ಸುದೀಪ್ ಹಾಗೂ ಚಕ್ರವರ್ತಿ ಚಂದ್ರಚೂಡ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಕಾಫಿ ತೋಟದ ಮಾಲೀಕ ದೀಪಕ್ ಮಯೂರ್ ಎಂಬವರು ಇಬ್ಬರ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ದೂರು ಸಲ್ಲಿಸಿದ್ದಾರೆ. ವಾರಸ್ಥಾ ಎಂಬ ಧಾರವಾಹಿ ಚಿತ್ರೀಕರಣಕ್ಕಾಗಿ ತಮ್ಮ ಕಾಫಿ ತೋಟವನ್ನು ಬಳಸಿಕೊಳ್ಳಲು ಎರಡು ವರ್ಷಗಳ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಚಿತ್ರೀಕರಣದ ವೇಳೆ ತೋಟದಲ್ಲಿನ ಮರಗಳು ಹಾಗೂ ಆಸ್ತಿಗೆ ಹಾನಿಯಾಗಿದೆ ಎಂದು ದೀಪಕ್ ಆರೋಪಿಸಿದ್ದಾರೆ. ಇದಕ್ಕಾಗಿ ಅವರು 95 ಲಕ್ಷ ರೂ. ಪರಿಹಾರ ನೀಡುವಂತೆ [&#8230;]]]></description>
										<content:encoded><![CDATA[
<p>ಬೆಂಗಳೂರು: ನಟ ಕಿಚ್ಚ ಸುದೀಪ್ ಹಾಗೂ ಚಕ್ರವರ್ತಿ ಚಂದ್ರಚೂಡ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಕಾಫಿ ತೋಟದ ಮಾಲೀಕ ದೀಪಕ್ ಮಯೂರ್ ಎಂಬವರು ಇಬ್ಬರ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ದೂರು ಸಲ್ಲಿಸಿದ್ದಾರೆ.</p>



<p>ವಾರಸ್ಥಾ ಎಂಬ ಧಾರವಾಹಿ ಚಿತ್ರೀಕರಣಕ್ಕಾಗಿ ತಮ್ಮ ಕಾಫಿ ತೋಟವನ್ನು ಬಳಸಿಕೊಳ್ಳಲು ಎರಡು ವರ್ಷಗಳ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಚಿತ್ರೀಕರಣದ ವೇಳೆ ತೋಟದಲ್ಲಿನ ಮರಗಳು ಹಾಗೂ ಆಸ್ತಿಗೆ ಹಾನಿಯಾಗಿದೆ ಎಂದು ದೀಪಕ್ ಆರೋಪಿಸಿದ್ದಾರೆ. ಇದಕ್ಕಾಗಿ ಅವರು 95 ಲಕ್ಷ ರೂ. ಪರಿಹಾರ ನೀಡುವಂತೆ ಕಾನೂನು ಕ್ರಮಕ್ಕೆ ಮುಂದಾಗಿದ್ದರು ಎನ್ನಲಾಗಿದೆ.</p>



<p>ಈ ಪ್ರಕರಣವನ್ನು ವಾಪಸ್ ಪಡೆಯುವಂತೆ ನಟ ಕಿಚ್ಚ ಸುದೀಪ್ ಅವರು 60 ಲಕ್ಷ ರೂ. ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು ಎಂದು ದೀಪಕ್ ಆರೋಪಿಸಿದ್ದಾರೆ. ಆದರೆ ಕೇಸ್ ವಾಪಸ್ ಪಡೆದ ಬಳಿಕ ಭರವಸೆ ನೀಡಿದ ಹಣವನ್ನು ನೀಡದೇ ವಂಚನೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.</p>



<p>ಜನವರಿ 16ರಂದು ದೀಪಕ್ ಮಯೂರ್ ಅವರು ಅಧಿಕೃತವಾಗಿ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದು, ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಈ ಆರೋಪಗಳ ಬಗ್ಗೆ ನಟ ಕಿಚ್ಚ ಸುದೀಪ್ ಹಾಗೂ ಚಕ್ರವರ್ತಿ ಚಂದ್ರಚೂಡ ಅವರಿಂದ ಇನ್ನೂ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ.</p>
]]></content:encoded>
					
		
		
			</item>
		<item>
		<title>ಕರ್ನಾಟಕದ &#8216;ಬಿಗ್&#8217; ದುರಂತ: ನಕಲಿ ಹೀರೋಗಿರಿಯ ಮೆರವಣಿಗೆ ಮತ್ತು ನಿಜವಾದ ಸಾಧಕರ ಅನಾಥ ಪ್ರಜ್ಞೆ!</title>
		<link>https://peepalmedia.com/karnatakas-big-tragedy-big-boss/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 20 Jan 2026 08:58:33 +0000</pubDate>
				<category><![CDATA[ಅಂಕಣ]]></category>
		<category><![CDATA[ವಿಶೇಷ]]></category>
		<category><![CDATA[ಸಿನಿಮಾ]]></category>
		<guid isPermaLink="false">https://peepalmedia.com/?p=72724</guid>

					<description><![CDATA[&#8220;..ನಾವು &#8220;ರೀಲ್&#8221; ಹೀರೋಗಳನ್ನು ಮೆರೆಸುವುದರಲ್ಲಿ ಎಷ್ಟು ಮಗ್ನರಾಗಿದ್ದೇವೆ ಎಂದರೆ, &#8220;ರಿಯಲ್&#8221; ಹೀರೋಗಳು ನಮ್ಮ ಕಣ್ಣಮುಂದೆಯೇ ಕಳೆದುಹೋಗುತ್ತಿದ್ದಾರೆ. ಇದು ದೇಶದ ನೈತಿಕತೆಯ ಮೇಲೆ, ಪ್ರಜ್ಞೆಯ ಮೇಲೆ ಬಿದ್ದ ದೊಡ್ಡ ಏಟು..&#8221; ಲೇಖಕರಾದ ವಿ.ಆ‌ರ್.ಕಾರ್ಪೆಂಟರ್ ಅವರ ವಿಮರ್ಶೆಯಲ್ಲಿ.. ತಪ್ಪದೇ ಓದಿ ಕರ್ನಾಟಕ ಇಂದು ಒಂದು ವಿಚಿತ್ರವಾದ ಸಂಕಟದ ಎದುರು ನಿಂತಿದೆ. ಕುವೆಂಪು, ಕಾರಂತರು, ಮತ್ತು ಬೇಂದ್ರೆಯವರು ಕಟ್ಟಿ ಬೆಳೆಸಿದ ನಾಡು ಇದು ಎಂದು ಹೇಳಿಕೊಳ್ಳಲು ಕೆಲವೊಮ್ಮೆ ಸಂಕೋಚವಾಗುವಂತಹ ಸನ್ನಿವೇಶಗಳು ನಮ್ಮ ಕಣ್ಣಮುಂದೆ ನಡೆಯುತ್ತಿವೆ. ಇತ್ತೀಚಿನ ಕೆಲವು ದಿನಗಳ ವಿದ್ಯಮಾನಗಳನ್ನು ಗಮನಿಸಿದರೆ, [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>&#8220;..ನಾವು &#8220;ರೀಲ್&#8221; ಹೀರೋಗಳನ್ನು ಮೆರೆಸುವುದರಲ್ಲಿ ಎಷ್ಟು ಮಗ್ನರಾಗಿದ್ದೇವೆ ಎಂದರೆ, &#8220;ರಿಯಲ್&#8221; ಹೀರೋಗಳು ನಮ್ಮ ಕಣ್ಣಮುಂದೆಯೇ ಕಳೆದುಹೋಗುತ್ತಿದ್ದಾರೆ. ಇದು ದೇಶದ ನೈತಿಕತೆಯ ಮೇಲೆ, ಪ್ರಜ್ಞೆಯ ಮೇಲೆ ಬಿದ್ದ ದೊಡ್ಡ ಏಟು..&#8221; ಲೇಖಕರಾದ ವಿ.ಆ‌ರ್.ಕಾರ್ಪೆಂಟರ್ ಅವರ ವಿಮರ್ಶೆಯಲ್ಲಿ.. ತಪ್ಪದೇ ಓದಿ</p>
</blockquote>



<p>ಕರ್ನಾಟಕ ಇಂದು ಒಂದು ವಿಚಿತ್ರವಾದ ಸಂಕಟದ ಎದುರು ನಿಂತಿದೆ. ಕುವೆಂಪು, ಕಾರಂತರು, ಮತ್ತು ಬೇಂದ್ರೆಯವರು ಕಟ್ಟಿ ಬೆಳೆಸಿದ ನಾಡು ಇದು ಎಂದು ಹೇಳಿಕೊಳ್ಳಲು ಕೆಲವೊಮ್ಮೆ ಸಂಕೋಚವಾಗುವಂತಹ ಸನ್ನಿವೇಶಗಳು ನಮ್ಮ ಕಣ್ಣಮುಂದೆ ನಡೆಯುತ್ತಿವೆ. ಇತ್ತೀಚಿನ ಕೆಲವು ದಿನಗಳ ವಿದ್ಯಮಾನಗಳನ್ನು ಗಮನಿಸಿದರೆ, ನಮ್ಮ ಸಮಾಜದ ಹೀರೋ&#8217; ಯಾರು ಮತ್ತು &#8216;ಹೀರೋಯಿಸಂ&#8217; ಅಂದರೆ ಏನು ಎಂಬ ವ್ಯಾಖ್ಯಾನಗಳೇ ತಲೆಕೆಳಗಾಗಿರುವುದು ಸ್ಪಷ್ಟವಾಗುತ್ತದೆ.</p>



<p>ಒಂದೆಡೆ, ಮನರಂಜನೆಯ ಹೆಸರಿನಲ್ಲಿ ನಡೆಯುವ ಒಂದು ರಿಯಾಲಿಟಿ ಶೋ ವಿಜೇತನ ಕಾರಿನ ಹಿಂದೆ ನಮ್ಮ ರಾಜ್ಯದ ಕಾನೂನು ಪಾಲಕರು ಅಸಹಾಯಕರಾಗಿ ಓಡುತ್ತಾರೆ. ಇನ್ನೊಂದೆಡೆ, ಸಾಹಿತ್ಯ ಲೋಕದ ಅತ್ಯುನ್ನತ ಶಿಖರ ಏರಿದ ಕನ್ನಡತಿಯೊಬ್ಬರು ಎಲೆಮರೆಯ ಕಾಯಿಯಂತೆ ಉಳಿಯುತ್ತಾರೆ. ದೇಶಕ್ಕಾಗಿ ವಿಶ್ವಕಪ್ ಗೆದ್ದ ಅಂಧ ಹೆಣ್ಣುಮಕ್ಕಳು ಸದ್ದಿಲ್ಲದೆ ಬಂದು ಹೋಗುತ್ತಾರೆ. ಈ ವೈರುಧ್ಯವೇ ಇಂದಿನ ಕರ್ನಾಟಕದ ಸಾಂಸ್ಕೃತಿಕ ದಿವಾಳಿತನದ (Cultural Bankruptcy) ಅಪ್ಪಟ ಸಾಕ್ಷಿ.</p>



<p><strong>ರಿಯಾಲಿಟಿ ಶೋ ಉನ್ಮಾದ ಮತ್ತು &#8216;ಪಾಪದ&#8217; ಪೊಲೀಸರು</strong><br>ಮೊದಲಿಗೆ, ಮಂಡ್ಯದ ಪ್ರತಿಭೆ ಗಿಲ್ಲಿ ನಟರಾಜ್ (ಗಿಲ್ಲಿ ನಟ) ಅವರ ಗೆಲುವನ್ನೇ ತೆಗೆದುಕೊಳ್ಳೋಣ. ಒಬ್ಬ ಸಾಮಾನ್ಯ ಹಿನ್ನೆಲೆಯ ಹುಡುಗ ಗೆದ್ದಾಗ ಸಂಭ್ರಮಿಸುವುದು ತಪ್ಪಲ್ಲ. ಆದರೆ, ಆ ಸಂಭ್ರಮವು ಒಂದು <a href="https://www.deccanherald.com/entertainment/bigg-boss-12-kannada-gilli-nata-wins-title-rakshita-shetty-emerges-as-runner-up-3866758" data-type="link" data-id="https://www.deccanherald.com/entertainment/bigg-boss-12-kannada-gilli-nata-wins-title-rakshita-shetty-emerges-as-runner-up-3866758">ಸಾಮೂಹಿಕ ಉನ್ಮಾದದ (Mass Hysteria)</a> ರೂಪ ಪಡೆದಾಗ ಅದು ಆತಂಕಕಾರಿಯಾಗುತ್ತದೆ.</p>



<p>ಗಿಲ್ಲಿ ನಟರಾಜ್ ಅವರ ಮೆರವಣಿಗೆಯ ದೃಶ್ಯಗಳನ್ನು ನೋಡಿದ ಯಾರೇ ಆದರೂ ಬೆಚ್ಚಿ ಬೀಳಲೇಬೇಕು. ತೆರೆದ ವಾಹನದಲ್ಲಿ ಅವರು ಕೈಬೀಸುತ್ತಿದ್ದರೆ, ಆ ವಾಹನದ ಅಕ್ಕಪಕ್ಕದಲ್ಲಿ ನಮ್ಮ ರಾಜ್ಯದ ಪೊಲೀಸ್ ಸಿಬ್ಬಂದಿ ಭದ್ರತೆಗಾಗಿ ಓಡುತ್ತಿದ್ದರು. ಯಾರಿಗಾಗಿ ಈ ಭದ್ರತೆ? ಗಡಿಯಲ್ಲಿ ಯುದ್ದೆ ಗೆದ್ದು ಬಂದ ಯೋಧನಿಗಲ್ಲ, ಅಥವಾ ದೇಶವನ್ನು ಕಾಪಾಡುವ ವಿಜ್ಞಾನಿಗಲ್ಲ. ಕೇವಲ 100 ದಿನಗಳ ಕಾಲ ಒಂದು ಮನೆಯಲ್ಲಿದ್ದು, ಮನರಂಜನೆ ನೀಡಿದ ಒಬ್ಬ ವ್ಯಕ್ತಿಗೆ!</p>



<p>ಪೊಲೀಸರು ವಾಹನದ ಹಿಂದೆ ಓಡುತ್ತಿರುವ ದೃಶ್ಯವು ಆಡಳಿತ ವ್ಯವಸ್ಥೆಯ ದಯನೀಯ ಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಸಮವಸ್ತ್ರಧಾರಿಗಳು, &#8216;ಜನಪ್ರಿಯತೆ&#8217; ಎಂಬ ಮಾಯೆಯ ಮುಂದೆ ಎಷ್ಟರಮಟ್ಟಿಗೆ ಮಂಡಿಯೂರಿದ್ದಾರೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ. ಇವತ್ತು ಯುವಜನತೆಗೆ ಭಗತ್ ಸಿಂಗ್ ಅಥವಾ ಸಂಗೊಳ್ಳಿ ರಾಯಣ್ಣರಿಗಿಂತ, ಟಿವಿಯಲ್ಲಿ ಕಾಣುವ &#8220;ರೀಲ್ ಹೀರೋ&#8221;ಗಳೇ (Reel Heroes) ಆದರ್ಶವಾಗುತ್ತಿರುವುದು ದುರಂತವಲ್ಲದೇ ಮತ್ತೇನು?</p>



<p><strong>ಭಾಷೆಯ ಹೆಸರಿನಲ್ಲಿ ಜಾತಿ ಅಜೆಂಡಾ: ಅಶ್ವಿನಿ ಗೌಡರ ವಿವಾದ</strong><br>ಬಿಗ್ ಬಾಸ್ ಮನೆಯ ಒಳಗೆ ನಡೆದಿದ್ದು ಇದಕ್ಕಿಂತಲೂ ಹೇಯವಾದ ಕೃತ್ಯ. ಕನ್ನಡ ಪರ ಹೋರಾಟಗಾರ್ತಿ ಎಂದು ಗುರುತಿಸಿಕೊಳ್ಳುವ ಅಶ್ವಿನಿ ಗೌಡ ಅವರು, ಸಹ ಸಹ ಸ್ಪರ್ಧಿ ಸ್ಪರ್ಧಿ ರಕ್ಷಿತಾ ರಕ್ಷಿತಾ ಶೆಟ್ಟಿ ಅವರನ್ನು ಉದ್ದೇಶಿಸಿ ಆಡಿದ ಮಾತುಗಳು ಕೇವಲ ವ್ಯಕ್ತಿಗತ ನಿಂದನೆಯಲ್ಲ, ಅದು ವ್ಯವಸ್ಥಿತವಾದ ಜಾತಿ ಅಹಂಕಾರದ ಪ್ರದರ್ಶನ.</p>



<p>&#8220;ನೀನು ಯಾವ ಕೆಟಗರಿ ಎಂದು ಗೊತ್ತು, ಆ &#8216;ಎಸ್-ಕೆಟಗರಿ&#8217; (S-Category) ಯವಳು&#8221; ಎಂಬ ಅಶ್ವಿನಿ ಅವರ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಯಿತು. ಇಲ್ಲಿ &#8216;ಎಸ್&#8217; ಎಂಬುದು ಸ್ಲಮ್ ಅಥವಾ ಪರಿಶಿಷ್ಟ ಜಾತಿಯನ್ನು (SC/ST) ಹೀಯಾಳಿಸುವ ಸಂಕೇತವಾಗಿ ಬಳಸಲಾಗಿದೆ ಎಂಬುದು <a href="https://timesofindia.indiatimes.com/tv/news/kannada/police-complaint-filed-against-ashwini-gowda-for-caste-based-remark-on-the-show/articleshow/124762230.cms" data-type="link" data-id="https://timesofindia.indiatimes.com/tv/news/kannada/police-complaint-filed-against-ashwini-gowda-for-caste-based-remark-on-the-show/articleshow/124762230.cms">ಪೊಲೀಸ್ ದೂರಿನ ಸಾರಾಂಶವಾಗಿದೆ</a>. ಭಾಷೆ ಮತ್ತು ನಾಡಿನ ರಕ್ಷಣೆಗಾಗಿ ಹೋರಾಡಬೇಕಾದವರು, ಜಾತಿ ಮತ್ತು ತಾರತಮ್ಯದ ವಿಷಬೀಜ ಬಿತ್ತುವುದು ಯಾವ ಸೀಮೆಯ ಹೋರಾಟ?</p>



<p>ಇದಕ್ಕೆ ತುಪ್ಪ ಸುರಿದದ್ದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಗೌಡರ ಸಮರ್ಥನೆ. &#8220;<a href="https://kannada.asianetnews.com/tv-talk/ta-narayana-gowda-warning-trolls-ashwini-gowda-bigg-boss-kannada-support-san/articleshow-08fgws3" data-type="link" data-id="https://kannada.asianetnews.com/tv-talk/ta-narayana-gowda-warning-trolls-ashwini-gowda-bigg-boss-kannada-support-san/articleshow-08fgws3">ಅಶ್ವಿನಿ ಗೌಡ ಕನ್ನಡಕ್ಕಾಗಿ ಜೈಲಿಗೆ ಹೋದವರು. ಅವರನ್ನು ಬೆಂಬಲಿಸುವುದು ನಮ್ಮ ದರ್ಮ</a>&#8221; ಎಂಬ ನಾರಾಯಣಗೌಡರ ಹೇಳಿಕೆ ಆಘಾತಕಾರಿಯಾಗಿದೆ. ಕನ್ನಡಕ್ಕಾಗಿ ಜೈಲಿಗೆ ಹೋದರೆ, ಜಾ ಜಾತಿ ನಿಂದನೆ ಮಾಡುವ ಲೈಸೆನ್ಸ್ ಸಿಗುತ್ತದೆಯೇ? ಇಲ್ಲಿ &#8220;ಕನ್ನಡ&#8221; ಎಂಬ ಪವಿತ್ರವಾದ ಹೆಸರನ್ನು ಗುರಾಣಿಯಾಗಿ ಬಳಸಿಕೊಂಡು, ಅದರ ಹಿಂದಿನಿಂದ ತಮ್ಮ ಸಮುದಾಯದ (ಒಕ್ಕಲಿಗ) ವ್ಯಕ್ತಿಯನ್ನು ಸಮರ್ಥಿಸಿಕೊಳ್ಳುವ &#8220;ಜಾತಿ ಪ್ರೇಮ'&#8221; ಎದ್ದು ಕಾಣುತ್ತದೆ. ಹೋರಾಟಗಾರರು ತಪ್ಪು ಮಾಡಿದಾಗ ತಿದ್ದಬೇಕಾದ ನಾಯಕರೆ, ತಪ್ಪುಗಳನ್ನು ಸಮರ್ಥಿಸಿಕೊಂಡರೆ ಸಮಾಜಕ್ಕೆ ಉಳಿಗಾಲವಿದೆಯೇ?</p>



<p><strong>ಬೂಕ‌ರ್ ಪ್ರಶಸ್ತಿ ಮತ್ತು ಬೌದ್ಧಿಕ ಮೌನ</strong><br>ಇದೆಲ್ಲದರ ನಡುವೆ, ಹಾಸನದ ಮೂಲೆಯಲ್ಲೊಂದು ಅದ್ಭುತ ಸಂಭವಿಸಿತು. ಕನ್ನಡದ ಹಿರಿಯ ಸಾಹಿತಿ ಬಾನು ಮುಷ್ಕಾಕ್ ಅವರು ಸಾಹಿತ್ಯ ಲೋಕದ ಅತ್ಯುನ್ನತ ಗೌರವಗಳಲ್ಲಿ ಒಂದಾದ &#8216;ಅಂತರಾಷ್ಟ್ರೀಯ ಬೂಕ‌ರ್ ಪ್ರಶಸ್ತಿ&#8217;ಯನ್ನು (International Booker Prize) ಮುಡಿಗೇರಿಸಿಕೊಂಡರು. ಇದು ಕೇವಲ ಬಾನು ಅವರ ಗೆಲುವಲ್ಲ, ಕನ್ನಡ ಸಾಹಿತ್ಯಕ್ಕೆ ಸಿಕ್ಕ ಜಾಗತಿಕ ಮನ್ನಣೆ. ಅವರ &#8216;<a href="https://thebookerprizes.com/media-centre/press-releases/heart-lamp-wins-the-international-booker-prize-2025" data-type="link" data-id="https://thebookerprizes.com/media-centre/press-releases/heart-lamp-wins-the-international-booker-prize-2025">ಹಾರ್ಟ್ ಲ್ಯಾಂಪ್&#8217; (Heart Lamp)</a> ಕಥಾಸಂಕಲನವು ಮುಸ್ಲಿಂ ಮಹಿಳೆಯರ ಬದುಕು, ನೋವು ಮತ್ತು ಪ್ರತಿರೋಧವನ್ನು ಜಗತ್ತಿಗೆ ಪರಿಚಯಿಸಿತು.</p>



<p>ಆದರೆ, ಗಿಲ್ಲಿ ನಟರಾಜ್‌ಗೆ ಸಿಕ್ಕ ಜನಪ್ರಿಯತೆ, ಮಾಧ್ಯಮದ ಪ್ರಚಾರ ಅಥವಾ ಮೆರವಣಿಗೆಯ ಭಾಗ್ಯ ಬಾನು ಮುಷ್ಕಾಕ್ ಅವರಿಗೆ ಸಿಕ್ಕಿತೇ? ಇಲ್ಲ. ರಾಜ್ಯದ ಬಹುತೇಕ ಯುವಜನರಿಗೆ ಬಾನು ಮುಷ್ಕಾಕ್ ಯಾರೆಂದೇ ತಿಳಿದಿಲ್ಲ. <a href="https://www.deccanherald.com/india/karnataka/havent-managed-to-write-anything-since-booker-win-banu-mushtaq-3864162" data-type="link" data-id="https://www.deccanherald.com/india/karnataka/havent-managed-to-write-anything-since-booker-win-banu-mushtaq-3864162">&#8220;ಪ್ರಶಸ್ತಿ ಬಂದ ನಂತರ ಬರೆಯಲು ಸಮಯವೇ ಸಿಗುತ್ತಿಲ್ಲ&#8221;</a> ಎಂದು ಅವರು ಹೇಳಿಕೊಳ್ಳುವ ಸನ್ಮಾನಗಳ ಸುದ್ದಿಗಳು ಕೇವಲ ಸಾಹಿತ್ಯ ವಲಯಕ್ಕೆ ಸೀಮಿತವಾಗಿದ್ದವು.</p>



<p>ಯಾಕೆ ಈ ತಾರತಮ್ಯ? ಏಕೆಂದರೆ ಬಾನು ಮುಷ್ಕಾಕ್ ಅವರು ಮನರಂಜನೆ ನೀಡುವ ಸರಕು ಅಲ್ಲ. ಅವರು ಸಮಾಜದ ತ ಓರೆಕೋರೆಗಳನ್ನು ಪ್ರಶ್ನಿಸುವ &#8220;ಬುದ್ಧಿಜೀವಿ&#8221;. . ನಮ್ಮ ನಮ್ಮ ಸಮಾಜಕ್ಕೆ ಸಮಾಜಕ್ಕೆ ಈಗ ಬೇಕಿರುವುದು ಪ್ರಶ್ನಿಸುವವರಲ್ಲ, ಮಂಜರಂಜಿಸುವವರು. ಅದಕ್ಕಾಗಿಯೇ ಬೂಕರ್ &#8211; ಬೂಕರ್ ಪ್ರಶಸ್ತಿ ತಂದವರ ಮನೆ ಮುಂದೆ ಮೌನವಿದೆ, ಬಿಗ್ ಬಾಸ್ ಗೆದ್ದವರ ಮನೆ ಮುಂದೆ ಜಾತ್ರೆಯಿದೆ.</p>



<p><strong>ಕತ್ತಲಲ್ಲಿ ಗೆದ್ದವರು ಮತ್ತು ಕಣ್ಣಿದ್ದೂ ಕುರುಡಾದವರು</strong><br>ನೈತಿಕತೆಯ ಪತನದ ಮತ್ತೊಂದು ಉದಾಹರಣೆ ಎಂದರೆ ಭಾರತೀಯ ಅಂಧ ಮಹಿಳಾ ಕ್ರಿಕೆಟ್ ತಂಡದ ವಿಶ್ವಕಪ್ ವಿಜಯ. ಕಣ್ಣು ಕಾಣದಿದ್ದರೂ, ಛಲವೊಂದನ್ನೇ ನಂಬಿ ಈ ಹೆಣ್ಣುಮಕ್ಕಳು <a href="https://samarthanam.org/events/the-world-champion-indian-womens-cricket-team-for-the-blind-was-felicitated-by-honble-chief-minister-of-karnataka-shri-siddaramaiah/" data-type="link" data-id="https://samarthanam.org/events/the-world-champion-indian-womens-cricket-team-for-the-blind-was-felicitated-by-honble-chief-minister-of-karnataka-shri-siddaramaiah/">ಟಿ-20 ವಿಶ್ವಕಪ್ ಗೆದ್ದು ತಂದರು</a>. ಅದರಲ್ಲಿ ಕರ್ನಾಟಕದ ದೀಪಿಕಾ, ಸುಷ್ಮಾ ಅವರಂತಹ ಪ್ರತಿಭೆಗಳಿದ್ದರು.</p>



<p>ವಿಮಾನ ನಿಲ್ದಾಣದಲ್ಲಿ ಇಳಿದಾಗ ಇವರಿಗೆ ಸಿಕ್ಕ ಸ್ವಾಗತಕ್ಕೂ, ರಿಯಾಲಿಟಿ ಶೋ ತಾರೆಯರಿಗೆ ಸಿಗುವ ಸ್ವಾಗತಕ್ಕೂ ಇರುವ ವ್ಯತ್ಯಾಸವೇ ನಮ್ಮ ಸಮಾಜದ ನಿಜವಾದ ಬಣ್ಣವನ್ನು ಬಯಲು ಮಾಡುತ್ತದೆ. ಅಂಧ ಕ್ರಿಕೆಟಿಗರ ವಾಹನದ ಹಿಂದೆ ಓಡಲು ನಮ್ಮ ಪೊಲೀಸರಿಗೆ ಸಮಯವಿರಲಿಲ್ಲ, ಅವರ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ &#8216;ಫ್ಯಾನ್ ವಾರ್&#8217; ಮಾಡಲು ನಮ್ಮ ಯುವಜನರಿಗೆ ಆಸಕ್ತಿ ಇರಲಿಲ್ಲ.</p>



<p><strong>ಕೊನೆಯ ಮಾತು: ಎಚ್ಚೆತ್ತುಕೊಳ್ಳುವ ಸಮಯ</strong><br>ಗೆಳೆಯರೆ, ಇಲ್ಲಿ ಸಮಸ್ಯೆ ಬಿಗ್ ಬಾಸ್ ಕಾರ್ಯಕ್ರಮದ್ದಲ್ಲ. ಸಮಸ್ಯೆ ಇರುವುದು ಅದನ್ನು ನೋಡುವ ನಮ್ಮ ದೃಷ್ಟಿಕೋನದಲ್ಲಿ ಮತ್ತು ನಾವು ಆರಿಸಿಕೊಳ್ಳುವ ಆದ್ಯತೆಗಳಲ್ಲಿ.</p>



<ul class="wp-block-list">
<li>ಗಿಲ್ಲಿ ನಟರಾಜ್ ಗೆದ್ದಿದ್ದು ಒಂದು ಆಟದಲ್ಲಿ.</li>



<li>ಅಶ್ವಿನಿ ಗೌಡ ಮಾಡಿದ್ದು ಟಿವಿ ರಂಪಾಟ.</li>



<li>ಆದರೆ ಬಾನು ಮುಷ್ಕಾಕ್ ಮತ್ತು ಅಂಧ ಕ್ರಿಕೆಟ್ ತಂಡ ಗೆದ್ದಿದ್ದು ಬದುಕಿನ ಯುದ್ಧದಲ್ಲಿ.</li>
</ul>



<p>ನಾವು &#8220;ರೀಲ್&#8221; ಹೀರೋಗಳನ್ನು ಮೆರೆಸುವುದರಲ್ಲಿ ಎಷ್ಟು ಮಗ್ನರಾಗಿದ್ದೇವೆ ಎಂದರೆ, &#8220;ರಿಯಲ್&#8221; ಹೀರೋಗಳು ನಮ್ಮ ಕಣ್ಣಮುಂದೆಯೇ ಕಳೆದುಹೋಗುತ್ತಿದ್ದಾರೆ. ಇದು ದೇಶದ ನೈತಿಕತೆಯ ಮೇಲೆ, ಪ್ರಜ್ಞೆಯ ಮೇಲೆ ಬಿದ್ದ ದೊಡ್ಡ ಏಟು. ಇನ್ನಾದರೂ ನಮ್ಮ ಮೆರವಣಿಗೆಗಳು ಸಾಧಕರಿಗೆ ಸಲ್ಲಲಿ, ಕೇವಲ ಮನರಂಜಕರಿಗಲ್ಲ. ಇಲ್ಲದಿದ್ದರೆ, ಕುವೆಂಪು ಅವರ ನಾಡು ಸಾಂಸ್ಕೃತಿಕವಾಗಿ ಬರಿದಾಗುವುದರಲ್ಲಿ ಸಂಶಯವಿಲ್ಲ.</p>
]]></content:encoded>
					
		
		
			</item>
		<item>
		<title>ಕನ್ನಡದ ಬಿಗ್‌ಬಾಸ್: ಮನರಂಜನೆಯ ಮುಖವಾಡದಲ್ಲಿ ಜಾತಿ ರಾಜಕಾರಣದ ಅಂತರಾಳ</title>
		<link>https://peepalmedia.com/depths-of-caste-politics-under-the-mask/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 14 Jan 2026 14:22:38 +0000</pubDate>
				<category><![CDATA[ಅಂಕಣ]]></category>
		<category><![CDATA[ಮೀಡಿಯಾ]]></category>
		<category><![CDATA[ಸಿನಿಮಾ]]></category>
		<category><![CDATA[big boss rakshitha]]></category>
		<category><![CDATA[bigboss ashwini]]></category>
		<category><![CDATA[bigboss kannada]]></category>
		<category><![CDATA[biggboss kannada]]></category>
		<category><![CDATA[gilli nata]]></category>
		<category><![CDATA[rakshitha shetty]]></category>
		<guid isPermaLink="false">https://peepalmedia.com/?p=72410</guid>

					<description><![CDATA[&#8220;..ಬಿಗ್‌ಬಾಸ್ ನಲ್ಲಿ ಹೊರಗಿನ ಪ್ರಭಾವವನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಲಾದರೂ, ವಾಸ್ತವದಲ್ಲಿ ಅದೂ ಭಾರತದಂತಹ ಜಾತಿ ಕೇಂದ್ರಿತ ದೇಶದಲ್ಲಿ ಅವರ ಜಾತಿ ಹಿನ್ನೆಲೆಯು ಅವರ ವರ್ತನೆಯನ್ನು ಮತ್ತು ಇತರರು ಅವರನ್ನು ನೋಡುವ ರೀತಿಯನ್ನು ಪ್ರಭಾವಿಸುತ್ತದೆ..&#8221; ಲೇಖಕರಾದ ವಿಆರ್ ಕಾರ್ಪೆಂಟರ್ ಅವರ ಬರಹದಲ್ಲಿ ದೃಶ್ಯ ಮಾಧ್ಯಮದ ಇತಿಹಾಸದಲ್ಲಿ &#8216;ರಿಯಾಲಿಟಿ ಶೋ&#8217;ಗಳು ಕೇವಲ ಮನರಂಜನೆಯ ಸಾಧನಗಳಲ್ಲ; ಅವು ಒಂದು ಸಮಾಜದ ಸಾಂಸ್ಕೃತಿಕ ಮತ್ತು ಸಾಮಾಜಿಕ ಮನಸ್ಥಿತಿಯನ್ನು ಅಳೆಯುವ ಮಾಪಕಗಳಾಗಿವೆ. ನೆದರ್‌ಲ್ಯಾಂಡ್‌ನ &#8216;ಬಿಗ್ ಬ್ರದರ್&#8217; ಪರಿಕಲ್ಪನೆಯಿಂದ ಪ್ರೇರಿತವಾಗಿ ಭಾರತಕ್ಕೆ ಕಾಲಿಟ್ಟ &#8216;ಬಿಗ್ ಬಾಸ್&#8217;, [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>&#8220;..ಬಿಗ್‌ಬಾಸ್ ನಲ್ಲಿ ಹೊರಗಿನ ಪ್ರಭಾವವನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಲಾದರೂ, ವಾಸ್ತವದಲ್ಲಿ ಅದೂ ಭಾರತದಂತಹ ಜಾತಿ ಕೇಂದ್ರಿತ ದೇಶದಲ್ಲಿ ಅವರ ಜಾತಿ ಹಿನ್ನೆಲೆಯು ಅವರ ವರ್ತನೆಯನ್ನು ಮತ್ತು ಇತರರು ಅವರನ್ನು ನೋಡುವ ರೀತಿಯನ್ನು ಪ್ರಭಾವಿಸುತ್ತದೆ..&#8221; ಲೇಖಕರಾದ ವಿಆರ್ ಕಾರ್ಪೆಂಟರ್ ಅವರ ಬರಹದಲ್ಲಿ</p>
</blockquote>



<p>ದೃಶ್ಯ ಮಾಧ್ಯಮದ ಇತಿಹಾಸದಲ್ಲಿ &#8216;ರಿಯಾಲಿಟಿ ಶೋ&#8217;ಗಳು ಕೇವಲ ಮನರಂಜನೆಯ ಸಾಧನಗಳಲ್ಲ; ಅವು ಒಂದು ಸಮಾಜದ ಸಾಂಸ್ಕೃತಿಕ ಮತ್ತು ಸಾಮಾಜಿಕ ಮನಸ್ಥಿತಿಯನ್ನು ಅಳೆಯುವ ಮಾಪಕಗಳಾಗಿವೆ. ನೆದರ್‌ಲ್ಯಾಂಡ್‌ನ &#8216;ಬಿಗ್ ಬ್ರದರ್&#8217; ಪರಿಕಲ್ಪನೆಯಿಂದ ಪ್ರೇರಿತವಾಗಿ ಭಾರತಕ್ಕೆ ಕಾಲಿಟ್ಟ &#8216;ಬಿಗ್ ಬಾಸ್&#8217;, ಕರ್ನಾಟಕದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಆದರೆ, ಈ ಕಾರ್ಯಕ್ರಮದ ಜನಪ್ರಿಯತೆಯ ಆಳವನ್ನು ಶೋಧಿಸಿದಾಗ, ನ್ನು ಶೋಧಿಸಿದಾಗ, ಅಲ್ಲಿ ಕಾಣಸಿಗುವುದು ಕೇವಲ ಆಟ, ಸ್ಪರ್ಧೆ ಅಥವಾ ತಂತ್ರಗಾರಿಕೆಯಲ್ಲ; ಬದಲಾಗಿ ಕರ್ನಾಟಕದ ಆಳವಾದ ಜಾತಿ ವ್ಯವಸ್ಥೆ, ಪ್ರಾದೇಶಿಕ ಅಸಮಾನತೆ ಮತ್ತು ಗುರುತಿನ ರಾಜಕಾರಣದ ಪ್ರತಿಬಿಂಬವಾಗಿದೆ.</p>



<p>ಬಿಗ್ ಬಾಸ್ ಮನೆಯನ್ನು &#8216;ಗ್ಲಾಸ್‌ಹೌಸ್&#8217; ಎಂದು ಕರೆಯಲಾಗುತ್ತದೆ. ಇದು ಪಾರದರ್ಶಕತೆಯ ಸಂಕೇತವೆಂದು ಹೇಳಲಾದರೂ, ಇದರೊಳಗೆ ನಡೆಯುವ ಸೂಕ್ಷ್ಮ ಜಾತಿ ರಾಜಕಾರಣ ಮತ್ತು ಸಾಮಾಜಿಕ ಶ್ರೇಣೀಕರಣವು ಅನೇಕ ಬಾರಿ ಹೊರಗಿನ ಸಮಾಜಕ್ಕಿಂತ ಹೆಚ್ಚು ಸಂಕೀರ್ಣವಾಗಿರುತ್ತದೆ. ಹನ್ನೆರಡು ಸೀಸನ್‌ಗಳ ಸುದೀರ್ಘ ಪಯಣದಲ್ಲಿ, ಸ್ಪರ್ಧಿಗಳ ಆಯ್ಕೆ, ಮನೆಯೊಳಗಿನ ಗುಂಪುಗಾರಿಕೆ, ಮತ್ತು ಅಂತಿಮವಾಗಿ ಪ್ರೇಕ್ಷಕರ ಮತದಾನದ ಮಾದರಿಗಳನ್ನು (Voting Patterns) ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲಿ ಜಾತಿ ರಾಜಕಾರಣವು ಒಂದು ಪ್ರಬಲ ಶಕ್ತಿಯಾಗಿ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗುತ್ತದೆ.</p>



<p>ಇಂಡಿಯಾದಲ್ಲಿ ಜಾತಿ ಎಂಬುದು ಸೂರ್ಯಸತ್ಯ! ಇಲ್ಲಿ ಜಾತಿ ಇಲ್ಲದ ಒಂದೇ ಒಂದು ಹುಲ್ಲುಕಡ್ಡಿಯೂ ಇಲ್ಲ. ಅದನ್ನು ಮೀರಲು ಎಷ್ಟೋ ಕಾರ್ಯಕ್ರಮಗಳು ಆಗ್ಗಾಗ್ಗೆ ನಡೆಯುತ್ತವೆ. ಬಿಗ್ ಬಾಸ್ ಥರದ ಕಾರ್ಯಕ್ರಮದ ಮೂಲ ಉದ್ದೇಶವು ವಿಭಿನ್ನ ಹಿನ್ನೆಲೆಯ ವ್ಯಕ್ತಿಗಳನ್ನು ಒಂದೇ ಸೂರಿನಡಿ ತಂದು, ಅವರ ಸಹಬಾಳ್ವೆಯನ್ನು ಪರೀಕ್ಷಿಸುವುದಾಗಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ, &#8220;ಆದರ್ಶ ಸಮಾಜವು ಮುಕ್ತವಾಗಿರಬೇಕು ಮತ್ತು ಸಾಮಾಜಿಕವಾಗಿ ಒಳಗೊಳ್ಳುವಂತೆ (Social Endosmosis) ಇರಬೇಕು&#8221;. ಆದರೆ, ಬಿಗ್ ಬಾಸ್ ಮನೆಯಲ್ಲಿ ಈ &#8216;ಭ್ರಾತೃತ್ವ&#8217;ವು ಅನೇಕ ಬಾರಿ ಜಾತಿ ಪ್ರಜ್ಞೆಯ ಅಡೆತಡೆಗಳನ್ನು ಎದುರಿಸುತ್ತಲೇ ಬಂದಿದೆ. ಇಲ್ಲಿನ ಜಾತಿಯನ್ನು ಮೀರಲು ಬಿಗ್ ಬಾಸ್ ಅನೇಕಬಾರಿ ಸೋತುಹೋಗಿದೆ.</p>



<p>ಈ ಮನೆಯೊಳಗೆ ಪ್ರವೇಶಿಸಿದ ನಂತರ ಸ್ಪರ್ಧಿಗಳು ತಮ್ಮ ಹೊರಗಿನ ಪ್ರಭಾವವನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಲಾದರೂ, ವಾಸ್ತವದಲ್ಲಿ ಅವರ ಜಾತಿ ಹಿನ್ನೆಲೆಯು ಅವರ ವರ್ತನೆಯನ್ನು ಮತ್ತು ಇತರರು ಅವರನ್ನು ನೋಡುವ ರೀತಿಯನ್ನು ಪ್ರಭಾವಿಸುತ್ತದೆ. ಅಡುಗೆ ಮನೆಯ ಕೆಲಸದಿಂದ ಹಿಡಿದು, ನಾಯಕತ್ವದ ಆಯ್ಕೆಯವರೆಗೆ, ಜಾತಿ ಆಧಾರಿತ ಶ್ರೇಣೀಕರಣವು ಸೂಕ್ಷ್ಮವಾಗಿ ಕೆಲಸ ಮಾಡುತ್ತದೆ. ಉದಾಹರಣೆಗೆ, &#8216;ಒಕ್ಕಲಿಗ&#8217;, &#8216;ಶೆಟ್ಟಿ&#8217; ಅಥವಾ &#8216;ಲಿಂಗಾಯತ&#8217; ಸಮುದಾಯದ ಸ್ಪರ್ಧಿಗಳು ನಾಯಕತ್ವದ ಗುಣಗಳನ್ನು ಪ್ರದರ್ಶಿಸಿದಾಗ ಅದನ್ನು &#8216;ಸ್ವಾಭಾವಿಕ&#8217; ಎಂದು ಸ್ವೀಕರಿಸುವ ಪ್ರೇಕ್ಷಕ ವರ್ಗ, ದಲಿತ ಅಥವಾ ಅಲ್ಪಸಂಖ್ಯಾತ ಸಮುದಾಯದ ಸ್ಪರ್ಧಿ ಅದೇ ಆಕ್ರಮಣಶೀಲತೆಯನ್ನು ತೋರಿದಾಗ ಅದನ್ನು &#8216;ಅಹಂಕಾರ&#8217; ಅಥವಾ &#8216;ದುರ್ವತ್ರನೆ&#8217; ಎಂದು ಟೀಕಿಸುವುದು ಕಂಡುಬರುತ್ತದೆ.</p>



<p><strong>ಮತದಾನದ </strong><strong>ರಾಜಕೀಯ </strong><strong>ಮತ್ತು ಜಾತಿ</strong><br>ಕರ್ನಾಟಕದ ಚುನಾವಣಾ ರಾಜಕೀಯದಲ್ಲಿ ಜಾತಿ ಹೇಗೆ ಪ್ರಮುಖ ಪಾತ್ರ ವಹಿಸುತ್ತದೆಯೋ, ಅದೇ ಮಾದರಿಯು ಬಿಗ್ ಬಾಸ್ ಮತದಾನದಲ್ಲೂ ಕಾಣಿಸುತ್ತದೆ. ಪ್ರೇಕ್ಷಕರು ಸ್ಪರ್ಧಿಗಳನ್ನು ಕೇವಲ ಅವರ ಆಟದ ಆಧಾರದ ಮೇಲೆ ಮೌಲ್ಯಮಾಪನ 3 ಮೌಲ್ಯಮಾಪನ ಮಾಡುವುದಿಲ್ಲ; ಬದಲಾಗಿ, &#8220;ನಮ್ಮ &#8220;ನಮ್ಮ ಹುಡುಗ ಹುಡುಗ&#8221; ಅಥವಾ “ನಮ್ಮ ಸಮುದಾಯದ ಪ್ರತಿನಿಧಿ&#8221; ಎಂಬ ಭಾವನಾತ್ಮಕ ನೆಲೆಯಲ್ಲಿ ಮತ ಚಲಾಯಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿನ &#8216;ಫ್ಯಾನ್ ಪೇಜ್&#8217;ಗಳು (Fan Pages) ಪರೋಕ್ಷವಾಗಿ ಜಾತಿ ಸಂಘಟನೆಗಳಂತೆ ಕಾರ್ಯನಿರ್ವಹಿಸುತ್ತವೆ. ಒಕ್ಕಲಿಗ ಪ್ರಾಬಲ್ಯದ ಹಳೆ ಮೈಸೂರು ಭಾಗದ ಸ್ಪರ್ಧಿಗಳಿಗೆ ಒಂದು ರೀತಿಯ ಬೆಂಬಲ ಸಿಕ್ಕರೆ, ಉತ್ತರ ಕರ್ನಾಟಕದ ಲಿಂಗಾಯತ ಅಥವಾ ಕುರುಬ ಸಮುದಾಯದ ಸ್ಪರ್ಧಿಗಳಿಗೆ ಬೇರೆಯದೇ ಆದ ಮತಬ್ಯಾಂಕ್ ಕೆಲಸ ಮಾಡುತ್ತದೆ. ಇದು ಕರಾವಳಿ ಭಾಗಕ್ಕೂ ಅನ್ವಯವಾಗುತ್ತದೆ.</p>



<p><strong>&#8220;</strong><strong>ಎಸ್ ಕೆಟಗರಿ</strong><strong>&#8221; </strong><strong>ವಿವಾದ</strong><strong>: </strong><strong>ಬಿಗ್‌ಬಾಸ್</strong><strong> </strong><strong>ಮನೆಯಲ್ಲಿನ </strong><strong>ಅಸ್ಪೃಶ್ಯತೆಯ </strong><strong>ಆಧುನಿಕ </strong><strong>ರೂಪ</strong><br>ಬಿಗ್ ಬಾಸ್ ಇತಿಹಾಸದಲ್ಲೇ ಅತ್ಯಂತ ಗಂಭೀರವಾದ ಮತ್ತು ನೇರವಾದ ಜಾತಿ ನಿಂದನೆಯ ಆರೋಪ ಕೇಳಿಬಂದಿದ್ದು 12ನೇ ಸೀಸನ್‌ನಲ್ಲಿ ಇದು ಕಾರ್ಯಕ್ರಮದ ಮನರಂಜನಾ ಸ್ವರೂಪವನ್ನು ಮೀರಿ, ಕಾನೂನಾತ್ಮಕ ಹೋರಾಟಕ್ಕೆ ದಾರಿ ಮಾಡಿಕೊಟ್ಟಿತು. ಸ್ಪರ್ಧಿ ಅಶ್ವಿನಿ ಗೌಡ ಅವರು ಸಹ-ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರನ್ನು ಉದ್ದೇಶಿಸಿ ಮಾತನಾಡುತ್ತಾ, &#8220;ವೆಸ್ ಕೆಟಗರಿ&#8221; (S Category) ಎಂಬ ಪದವನ್ನು ಬಳಸಿದರು. ಮೇಲ್ನೋಟಕ್ಕೆ ಇದು ಇಂಗ್ಲಿಷ್ ಪದದಂತೆ ಕಂಡರೂ, ಕರ್ನಾಟಕದ ಸಾಮಾಜಿಕ ಮತ್ತು ರಾಜಕೀಯ ಸಂದರ್ಭದಲ್ಲಿ ಇದು ಪರಿಶಿಷ್ಟ ಜಾತಿ (SC) ಅಥವಾ ಪರಿಶಿಷ್ಟ ಪಂಗಡಗಳನ್ನು (ST) ಹೀಯಾಳಿಸಲು ಬಳಸುವ ಒಂದು ಸಾಂಕೇತಿಕ ಪದವಾಗಿದೆ. &#8220;ನಿನ್ನ ಯೋಗ್ಯತೆ ನನಗೆ ಗೊತ್ತು,&#8221; &#8220;ನೀನು ಎಲ್ಲಿಂದ ಬಂದಿದ್ದೀಯಾ ಅಂತ ಗೊತ್ತು&#8221; ಎಂಬಂತಹ ಮಾತುಗಳೊಂದಿಗೆ ಎಸ್ ಕೆಟಗರಿ&#8217; ಪದವನ್ನು ಜೋಡಿಸಿದಾಗ, ಅದು ಕೇವಲ ವೈಯಕ್ತಿಕ ನಿಂದನೆಯಾಗದೆ, ಇಡೀ ಸಮುದಾಯದ ಮೇಲಿನ ದಾಳಿಯಾಗಿ ಪರಿಣಮಿಸುತ್ತದೆ.</p>



<figure class="wp-block-image size-large"><img fetchpriority="high" decoding="async" width="1024" height="576" src="https://peepalmedia.com/wp-content/uploads/2026/01/rakshitha-shetty-1024x576.jpg" alt="" class="wp-image-72419" srcset="https://peepalmedia.com/wp-content/uploads/2026/01/rakshitha-shetty-1024x576.jpg 1024w, https://peepalmedia.com/wp-content/uploads/2026/01/rakshitha-shetty-300x169.jpg 300w, https://peepalmedia.com/wp-content/uploads/2026/01/rakshitha-shetty-768x432.jpg 768w, https://peepalmedia.com/wp-content/uploads/2026/01/rakshitha-shetty-1536x864.jpg 1536w, https://peepalmedia.com/wp-content/uploads/2026/01/rakshitha-shetty-150x84.jpg 150w, https://peepalmedia.com/wp-content/uploads/2026/01/rakshitha-shetty-696x392.jpg 696w, https://peepalmedia.com/wp-content/uploads/2026/01/rakshitha-shetty-1068x601.jpg 1068w, https://peepalmedia.com/wp-content/uploads/2026/01/rakshitha-shetty.jpg 1600w" sizes="(max-width: 1024px) 100vw, 1024px" /></figure>



<p>ಜಾತಿ ವ್ಯವಸ್ಥೆಯಲ್ಲಿ, , ಒಬ್ಬ ವ್ಯಕ್ತಿಯ ಅರ್ಹತೆಯನ್ನು ಅವನ/ಅವಳ ಹುಟ್ಟಿನ ಆಧಾರದ ಮೇಲೆ ಳೆಯಲಾಗುತ್ತದೆ. ಅಶ್ವಿನಿ ಗೌಡ ಗೌಡ ಅವರು ಈ ಪದವನ್ನು ಬಳಸುವ ಮೂಲಕ, ರಕ್ಷಿತಾ ಅವರ ಸಾಮಾಜಿಕ ಹಿನ್ನೆಲೆಯನ್ನು ಕೆದಕಿ, ಅವರನ್ನು ಕೀಳಾಗಿ ಕಾಣುವ ಮನಸ್ಥಿತಿಯನ್ನು ಪ್ರದರ್ಶಿಸಿದರು. ಇದು ಆಧುನಿಕ ಸಮಾಜದಲ್ಲಿ ಅಸ್ಪೃಶ್ಯತೆ ಹೇಗೆ ಭಾಷೆಯ ಮೂಲಕ, ಸಂಕೇತಗಳ ಮೂಲಕ ಜೀವಂತವಾಗಿದೆ&#8217; ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.</p>



<p>ದಲಿತಪರ ಸಂಘಟನೆಗಳು ಮತ್ತು ಪ್ರಗತಿಪರ ಚಿಂತಕರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದರು. &#8220;ಒಂದು ಸಾರ್ವಜನಿಕ ವೇದಿಕೆಯಲ್ಲಿ, ಲಕ್ಷಾಂತರ ಜನರು ನೋಡುತ್ತಿರುವಾಗ ಇಂತಹ ಜಾತಿ ಸೂಚಕ ಪದಗಳನ್ನು ಬಳಸುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ&#8221; ಎಂದು ಮಹಿಳಾ ಆಯೋಗಕ್ಕೂ ದೂರು ನೀಡಲಾಯಿತು. ಇದು ಬಿಗ್ ಬಾಸ್ ಮನೆಯು ಕೇವಲ ಆಟದ ಮೈದಾನವಲ್ಲ, ಬದಲಾಗಿ ಜಾತಿ ಪೂರ್ವಗ್ರಹಗಳು ಪ್ರದರ್ಶನಗೊಳ್ಳುವ ತಾಣವಾಗಿದೆ ಎಂಬುದನ್ನು ಸಾಬೀತುಪಡಿಸಿತು.</p>



<p>ಇದರ ನಡುವೆ ಕಾರ್ಯಕ್ರಮದ ನಿರೂಪಕರಾದ ಕಿಚ್ಚ ಸುದೀಪ್ ಅವರು ವಾಲ್ಮೀಕಿ ನಾಯಕ (ಪರಿಶಿಷ್ಟ ಪಂಗಡ) ಸಮುದಾಯಕ್ಕೆ ಸೇರಿದವರಾಗಿದ್ದು, ಇಂತಹ ಘಟನೆಗಳು ನಡೆದಾಗ ಅವರ ಪ್ರತಿಕ್ರಿಯೆ ಅತ್ಯಂತ ನಿರ್ಣಾಯಕವಾಗಿರುತ್ತದೆ. ಹಿಂದೆ ಹುಚ್ಚ ವೆಂಕಟ್ ಅವರು ಸಹ-ಸ್ಪರ್ಧಿಯ ಮೇಲೆ ಹಲ್ಲೆ ಮಾಡಿದಾಗ ಸುದೀಪ್ ಅವರು ತೆಗೆದುಕೊಂಡ ಕಠಿಣ ನಿಲುವು ಜನಮೆಚ್ಚುಗೆಗಳಿಸಿತ್ತು. ಆದರೆ, ಜಾತಿ ನಿಂದನೆಯ ವಿಷಯ ಬಂದಾಗ ಅವರು ಬಹುತೇಕ ಸುಮ್ಮನಾದರೆನ್ನಿಸುತ್ತದೆ. ಈ ವಿವಾದವು ಟಿಆ‌ಪಿ (TRP) ಹೆಚ್ಚಿಸುವ ತಂತ್ರವೋ ಅಥವಾ ನಿಜವಾಗಿಯೂ ಸಮಾಜದ ಕನ್ನಡಿಯೋ ಎಂಬ ಸಂಶಯವನ್ನು ಹುಟ್ಟುಹಾಕಿದ್ದಂತೂ ನಿಜ.</p>



<p><strong>ಒಕ್ಕಲಿಗ </strong><strong>ಮತ್ತು </strong><strong>ಲಿಂಗಾಯತ </strong><strong>ರಾಜಕಾರಣ</strong><br>ಕರ್ನಾಟಕದ ರಾಜಕಾರಣದಂತೆಯೇ, ಬಿಗ್ ಬಾಸ್ ಮನೆಯಲ್ಲೂ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ಸ್ಪರ್ಧಿಗಳು ಹೆಚ್ಚಿನ ಪ್ರಾಬಲ್ಯವನ್ನು ಎಲ್ಲಾ ಸೀಸನ್‌ ಗಳಲ್ಲೂ ಹೊಂದಿರುತ್ತಾರೆ. ಈ ಸಮುದಾಯಗಳ ಸ್ಪರ್ಧಿಗಳು ಗೆಲ್ಲುವಲ್ಲಿ ಜಾತಿ ರಾಜಕಾರಣ ಕೆಲಸ ಮಾಡುತ್ತದೆ</p>



<p>ಹಳೆ ಮೈಸೂರು ಭಾಗದಲ್ಲಿ (ಮಂಡ್ಯ, ಹಾಸನ, ಮೈಸೂರು, ಬೆಂಗಳೂರು ಗ್ರಾಮಾಂತರ) ಒಕ್ಕಲಿಗ ಸಮುದಾಯವು ಪ್ರಬಲವಾಗಿದೆ. ಬಿಗ್ ಬಾಸ್‌ನಲ್ಲಿ &#8216;ಗೌಡ&#8217; ಎಂಬ ಉಪನಾಮದೊಂದಿಗೆ ಬರುವ ಸ್ಪರ್ಧಿಗಳು (ಉದಾಹರಣೆಗೆ ವಿನಯ್ ಗೌಡ, ಅಶ್ವಿನಿ ಗೌಡ, ಭವ್ಯಾ ಗೌಡ) ಆರಂಭದಿಂದಲೇ ಒಂದು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುತ್ತಾರೆ.</p>



<p>ಸೀಸನ್ 10ರಲ್ಲಿ ಭಾಗವಹಿಸಿದ್ದ ವಿನಯ್ ಗೌಡ ಎಂಬ ಸ್ಪರ್ಧಿಯನ್ನು &#8216;ಆನೆ&#8217;, &#8216;ಹುಲಿ&#8217; ಎಂದೆಲ್ಲಾ ಬಿಂಬಿಸಲಾಯಿತು. ಅವರ ಆಕ್ರಮಣಕಾರಿ ವರ್ತನೆಯನ್ನು &#8216;ಗೌಡ್ರ ಗತ್ತು&#8217; ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈಭವೀಕರಿಸಲಾಯಿತು. ಪುಲ್ವಾಮಾ ದಾಳಿಯ ಕುರಿತು ಅವರು ನೀಡಿದ ಹೇಳಿಕೆ ಮತ್ತು ಸೈನಿಕನ ಪಾತ್ರದ ಮೂಲಕ ಅವರು ಗಳಿಸಿದ ಜನಪ್ರಿಯತೆ, ಒಕ್ಕಲಿಗ ಸಮುದಾಯದ &#8216;ಯೋಧ/ರಕ್ಷಕ&#8217; ಎಂಬ ಇಮೇಜ್ ಅಡಿಯಲ್ಲಿ ಕ್ರೋಢೀಕರಣಗೊಂಡಿತು. ಅವರು ಜೈಲಿಗೆ ಹೋದ ಸಂದರ್ಭದಲ್ಲೂ (ಮಚ್ಚು ಪ್ರದರ್ಶನ ಪ್ರಕರಣ), ಅವರ ಅಭಿಮಾನಿಗಳು ಅದನ್ನು ಸಮರ್ಥಿಸಿಕೊಂಡ ರೀತಿ, ಜಾತಿ ಬೆಂಬಲವು ತಪ್ಪುಗಳನ್ನು ಹೇಗೆ ಮರೆಮಾಚುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ.</p>



<p>ಅಶ್ವಿನಿ ಗೌಡ ಅವರು &#8216;ಎಸ್ ಕೆಟಗರಿ&#8217; ಪದ ಬಳಸಿದಾಗ, ಅವರ ಸಮುದಾಯದ ಕೆಲವು ಬೆಂಬಲಿಗರು ಅವರನ್ನು “ದಿಟ್ಟ ಕನ್ನಡತಿ&#8221; ಎಂದು ಸಮರ್ಥಿಸಿಕೊಂಡರು. ಇಲ್ಲಿ &#8216;ಕನ್ನಡ&#8217; ಅಸ್ಮಿತೆಯನ್ನು ಬಳಸಿ ಜಾತಿವಾದವನ್ನು ಮುಚ್ಚಿಹಾಕುವ ದುಷ್ಟ ಪ್ರಯತ್ನ ನಡೆಯಿತು.</p>



<p>ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದ ಪ್ರಾಬಲ್ಯವಿದ್ದರೂ, ಬಿಗ್ ಬಾಸ್ ಇತಿಹಾಸದಲ್ಲಿ ಈ ಭಾಗದ ಸ್ಪರ್ಧಿಗಳು ತಮ್ಮ ಭಾಷೆ ಮತ್ತು ಶೈಲಿಯ ಕಾರಣದಿಂದಾಗಿ ತಾರತಮ್ಯವನ್ನು ಎದುರಿಸಿದ್ದಾರೆ.</p>



<p>ಹಿರಿಯ ನಟಿ ಶ್ರುತಿ ಅವರು ಲಿಂಗಾಯತ ಸಮುದಾಯದವರು ಎಂದು ಗುರುತಿಸಲ್ಪಟ್ಟಿದ್ದಾರೆ. ಅವರ ಗೆಲುವಿನಲ್ಲಿ (ಸೀಸನ್ 3) ಅವರ ಸಿನಿಮಾಗಳ ಜನಪ್ರಿಯತೆಯ ಜೊತೆಗೆ, ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಲಿಂಗಾಯತ ಮತಬ್ಯಾಂಕ್‌ಗಳ ಪಾತ್ರವೂ ಮಹತ್ವದ್ದಾಗಿತ್ತು. ಅವರು ಮನೆಯೊಳಗೆ ಪ್ರದರ್ಶಿಸಿದ &#8216;ಭಾವನಾತ್ಮಕ ತಾಯಿ&#8217; (Emotional Mother) ಪಾತ್ರವು ಸಾಂಪ್ರದಾಯಿಕ ಮತದಾರರನ್ನು ಸೆಳೆಯಿತು.</p>



<figure class="wp-block-image size-full"><img decoding="async" width="399" height="225" src="https://peepalmedia.com/wp-content/uploads/2026/01/1000772870.jpg" alt="" class="wp-image-72416" srcset="https://peepalmedia.com/wp-content/uploads/2026/01/1000772870.jpg 399w, https://peepalmedia.com/wp-content/uploads/2026/01/1000772870-300x169.jpg 300w, https://peepalmedia.com/wp-content/uploads/2026/01/1000772870-150x85.jpg 150w" sizes="(max-width: 399px) 100vw, 399px" /></figure>



<p>ಇನ್ನು ಸೀಸನ್ 4ರ ವಿಜೇತ ಪ್ರಥಮ್ ಯಾವುದೇ ನಿರ್ದಿಷ್ಟ ಜಾತಿಯ ಹಣೆಪಟ್ಟಿಯೊಂದಿಗೆ ಗುರುತಿಸಿಕೊಳ್ಳದಿದ್ದರೂ, ಅವರ ವರ್ತನೆ ಮತ್ತು ಭಾಷಾ ಶೈಲಿಯು ಬ್ರಾಹ್ಮಣ ಅಥವಾ ಮೇಲ್ವರ್ಗದ ಹಿನ್ನೆಲೆಯನ್ನು ಸೂಚಿಸುತ್ತಿತ್ತು. ಆದರೆ, ಅವರು ತಮ್ಮನ್ನು &#8216;ಒಳ್ಳೆ ಹುಡುಗ&#8217; ಎಂದು ಬಿಂಬಿಸಿಕೊಳ್ಳುವ ಮೂಲಕ, ಜಾತಿ ಮೀರಿದ ಇಮೇಜ್ ಸೃಷ್ಟಿಸಿದರು. ಇದು ಮಧ್ಯಮ ವರ್ಗದ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.</p>



<p><strong>&#8216;</strong><strong>ಶೆಟ್ಟಿ</strong><strong>&#8216; </strong><strong>ಸಮುದಾಯದ </strong><strong>ಅನಿರೀಕ್ಷಿತ </strong><strong>ಪ್ರಾಬಲ್ಯ</strong><br>ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲಿ ಅತ್ಯಂತ ಕುತೂಹಲಕಾರಿ ಸಂಗತಿಯೆಂದರೆ &#8216;ಬಂಟ&#8217; (ಶೆಟ್ಟಿ) ಸಮುದಾಯದ ಸ್ಪರ್ಧಿಗಳ ಸತತ ಗೆಲುವು. ಕರ್ನಾಟಕದ ಜನಸಂಖ್ಯೆಯಲ್ಲಿ ಬಂಟ ಸಮುದಾಯದ ಪ್ರಮಾಣ ಕಡಿಮೆಯಿದ್ದರೂ, ಬಿಗ್ ಬಾಸ್ನಲ್ಲಿ ಅವರ ಸಾಧನೆ ಅಸಾಧಾರಣವಾಗಿದೆ.<br>* ಚಂದನ್ ಶೆಟ್ಟಿ (ಸೀಸನ್ 5): ಸಂಗೀತ ನಿರ್ದೇಶಕ ಮತ್ತು ಗಾಯಕ.<br>* ಶೈನ್ ಶೆಟ್ಟಿ (ಸೀಸನ್ 7): ಕಿರುತೆರೆ ನಟ ಮತ್ತು ಉದ್ಯಮಿ.<br>* ರೂಪೇಶ್ ಶೆಟ್ಟಿ (ಸೀಸನ್ 9/OTT): ಕರಾವಳಿಯ ಬಹುಭಾಷಾ ನಟ.</p>



<p>ಈ ಸ್ಪರ್ಧಿಗಳ ಗೆಲುವಿಗೆ ಕೇವಲ ಅವರ ವೈಯಕ್ತಿಕ ಪ್ರತಿಭೆ ಕಾರಣವಲ್ಲ. ಇದರ ಹಿಂದೆ ಒಂದು ಪ್ರಬಲವಾದ ಸಾಮಾಜಿಕ-ಆರ್ಥಿಕ ತಂತ್ರಗಾರಿಕೆ ಇದೆ:</p>



<p><strong>1. ಆರ್ಥಿಕ </strong><strong>ಸಾಕ್ಷರತೆ </strong><strong>ಮತ್ತು </strong><strong>ಡಿಜಿಟಲ್ ಪ್ರಾಬಲ್ಯ</strong><strong>:</strong> ಕರಾವಳಿ ಭಾಗದ (ದಕ್ಷಿಣ ಕನ್ನಡ, ಉಡುಪಿ) ಜನರು ಹೆಚ್ಚಿನ ಸಾಕ್ಷರತೆ ಮತ್ತು ಇಂಟರ್ನೆಟ್ ಬಳಕೆಯನ್ನು ಹೊಂದಿದ್ದಾರೆ. ಆನ್‌ಲೈನ್ ವೋಟಿಂಗ್ ಪ್ರಕ್ರಿಯೆಯಲ್ಲಿ ಇದು ನಿರ್ಣಾಯಕವಾಗುತ್ತದೆ.<br><strong>2. </strong><strong>ಸಮುದಾಯದ </strong><strong>ಒಗ್ಗಟ್ಟು</strong><strong>:</strong> ಬಂಟ ಸಮುದಾಯವು ಮುಂಬೈ, ಬೆಂಗಳೂರು ಮತ್ತು ವಿದೇಶಗಳಲ್ಲಿ ಪ್ರಬಲವಾಗಿದೆ. ತಮ್ಮ ಸಮುದಾಯದ ಸ್ಪರ್ಧಿ ಅಂತಿಮ ಹಂತಕ್ಕೆ ಬಂದಾಗ, ಇಡೀ ಸಮುದಾಯವು ಸಂಘಟಿತವಾಗಿ ಮತ ಚಲಾಯಿಸುತ್ತದೆ (Block Voting).<br><strong>3. </strong><strong>ಸಾಂಸ್ಕೃತಿಕ </strong><strong>ಹೈಬ್ರಿಡಿಟಿ</strong><strong>:</strong> ಈ ಸ್ಪರ್ಧಿಗಳು ತುಳು ಸಂಸ್ಕೃತಿಯನ್ನು ಪ್ರತಿನಿಧಿಸುತ್ತಲೇ, ಬೆಂಗಳೂರಿನ ಆಧುನಿಕ ಜೀವನಶೈಲಿಗೂ ಒಗ್ಗಿಕೊಳ್ಳುತ್ತಾರೆ. ಇದರಿಂದ ಅವರು ಕರಾವಳಿಯ ಪ್ರಾದೇಶಿಕ ಮತಗಳು ಮತ್ತು ಬೆಂಗಳೂರಿನ ಅರ್ಬನ್ ಮತಗಳನ್ನು ಏಕಕಾಲದಲ್ಲಿ ಪಡೆಯುತ್ತಾರೆ.</p>



<p><strong>ಉತ್ತರ </strong><strong>ಕರ್ನಾಟಕ </strong><strong>vs </strong><strong>ದಕ್ಷಿಣ </strong><strong>ಕರ್ನಾಟಕ</strong><br>ಬಿಗ್ ಬಾಸ್ ಮನೆಯಲ್ಲಿ ಆಗಾಗ್ಗೆ ಕೇಳಿಬರುವ ದೂರು ಎಂದರೆ ಉತ್ತರ ಕರ್ನಾಟಕದ ಭಾಷೆಯನ್ನು ಹೀಯಾಳಿಸುವುದು. ಇದು ಕೇವಲ ಭಾಷೆಯ ವಿಷಯವಲ್ಲ; ಇದು ಪ್ರಾದೇಶಿಕ ಮತ್ತು ವರ್ಗ ತಾರತಮ್ಯದ ಸಂಕೇತವಾಗಿದೆ.<br>* <strong>ಆಡುಭಾಷೆಯ </strong><strong>ಅವಹೇಳನ</strong><strong>:</strong> ಉತ್ತರ ಕರ್ನಾಟಕದ ಶೈಲಿಯನ್ನು &#8216;ರಗಡ್&#8217; ಅಥವಾ &#8216;ಅಸಭ್ಯ&#8217; ಎಂದು ಬಿಂಬಿಸಲಾಗುತ್ತದೆ. ಮೈಸೂರು ಭಾಗದ ಕನ್ನಡವನ್ನು &#8216;ಶುದ್ಧ&#8217; ಅಥವಾ &#8216;ಶ್ರೇಷ್ಠ&#8217; ಎಂದು ಪರಿಗಣಿಸುವ ಮನಸ್ಥಿತಿ ಮನೆಯ ಸ್ಪರ್ಧಿಗಳಲ್ಲಿ ಎದ್ದು ಕಾಣುತ್ತದೆ.<br>* <strong>ಶಶಿಕುಮಾ‌ರ್ </strong><strong>(</strong><strong>ಸೀಸನ್‌</strong><strong>6 </strong><strong>ವಿಜೇತೆ</strong><strong>):</strong> ಕೃಷಿ ಪದವೀಧರ ಮತ್ತು ನೃತ್ಯಪಟು ಶಶಿಕುಮಾ‌ರ್ ಅವರ ಗೆಲುವು ಈ ತಾರತಮ್ಯಕ್ಕೆ ಒಂದು ಉತ್ತರವಾಗಿತ್ತು. ಅವರು &#8216;ರೈತ&#8217; ಅಸ್ಮಿತೆಯನ್ನು ಬಳಸಿಕೊಂಡು, ಉತ್ತರ ಮತ್ತು ದಕ್ಷಿಣದ ನಡುವಿನ ಕಂದಕವನ್ನು ಮುಚ್ಚಿದರು. ಆದರೆ, ಅವರಿಗೂ ಆರಂಭದಲ್ಲಿ ಭಾಷೆಯ ಕಾರಣಕ್ಕೆ ಮುಜುಗರ ಎದುರಿಸಬೇಕಾಯಿತು.<br>* <strong>ಹನುಮಂತ </strong><strong>(</strong><strong>ಸೀಸನ್</strong><strong>11 </strong><strong>ವಿಜೇತೆ</strong><strong>):</strong> ಹನುಮಂತ ಅವರ ಗೆಲುವು ಈ ಪ್ರಾದೇಶಿಕ ರಾಜಕಾರಣಕ್ಕೆ ದೊಡ್ಡ ಪೆಟ್ಟು ನೀಡಿತು. ಹಾವೇರಿ ಜಿಲ್ಲೆಯ ಲಂಬಾಣಿ ತಾಂಡಾದಿಂದ ಬಂದ ಹನುಮಂತ, ತಮ್ಮ ಮುಗ್ಧತೆ ಮತ್ತು ಅಪ್ಪಟ ಗ್ರಾಮೀಣ ಭಾಷೆಯಿಂದಲೇ ಜನರ ಮನ ಗೆದ್ದರು. ನಗರ ಕೇಂದ್ರಿತ ಸ್ಪರ್ಧಿಗಳು ಅವರನ್ನು ಗೇಲಿ ಮಾಡಿದ್ದು, ಅಂತಿಮವಾಗಿ ಅವರಿಗೆ ಅನುಕಂಪದ ಅಲೆಯಾಗಿ ಪರಿವರ್ತನೆಯಾಯಿತು.</p>



<p><strong>ಹನುಮಂತ ಲಮಾಣಿ: ಅಹಿಂದ ಮತಗಳ ಧ್ರುವೀಕರಣ ಮತ್ತು ಐತಿಹಾಸಿಕ ಗೆಲುವು</strong><br>ಸೀಸನ್ 11ರ ವಿಜೇತ ಹನುಮಂತ ಲಮಾಣಿ ಅವರ ಗೆಲುವು ಬಿಗ್ ಬಾಸ್ ಇತಿಹಾಸದಲ್ಲೇ ಒಂದು ಕ್ರಾಂತಿಕಾರಿ ಅಧ್ಯಾಯವಾಗಿದೆ. ಲಂಬಾಣಿ ಸಮುದಾಯವು ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ (SC) ಪಟ್ಟಿಯಲ್ಲಿ ಬರುತ್ತದೆ. ಸಾಮಾನ್ಯವಾಗಿ ಗ್ಲಾಮರ್, ಫ್ಯಾಷನ್ ಮತ್ತು ಇಂಗ್ಲಿಷ್ ಭಾಷೆಯ ಪ್ರಾಬಲ್ಯವಿರುವ ಈ ಶೋನಲ್ಲಿ, ಕುರಿ ಕಾಯುವ ಹಿನ್ನೆಲೆಯ ಒಬ್ಬ ಯುವಕ ಗೆದ್ದಿದ್ದು ಸಾಮಾನ್ಯ ವಿಷಯವಲ್ಲ. ಹನುಮಂತ ಅವರ ಗೆಲುವನ್ನು ಕೇವಲ &#8216;ಸಿಂಪಥಿ&#8217; ಎಂದು ಕರೆಯಲಾಗದು. ಇದು &#8216;ಅಹಿಂದ&#8217; (ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು) ವರ್ಗದ ಮತಗಳ ಧ್ರುವೀಕರಣದ ಫಲಿತಾಂಶವಾಗಿದೆ.</p>



<figure class="wp-block-image size-large"><img decoding="async" width="1024" height="576" src="https://peepalmedia.com/wp-content/uploads/2026/01/1000772881-1024x576.jpg" alt="" class="wp-image-72417" srcset="https://peepalmedia.com/wp-content/uploads/2026/01/1000772881-1024x576.jpg 1024w, https://peepalmedia.com/wp-content/uploads/2026/01/1000772881-300x169.jpg 300w, https://peepalmedia.com/wp-content/uploads/2026/01/1000772881-768x432.jpg 768w, https://peepalmedia.com/wp-content/uploads/2026/01/1000772881-150x84.jpg 150w, https://peepalmedia.com/wp-content/uploads/2026/01/1000772881-696x392.jpg 696w, https://peepalmedia.com/wp-content/uploads/2026/01/1000772881-1068x601.jpg 1068w, https://peepalmedia.com/wp-content/uploads/2026/01/1000772881.jpg 1280w" sizes="(max-width: 1024px) 100vw, 1024px" /></figure>



<p>* <strong>ವೈಲ್ಡ್ಕಾರ್ಡ್ ಎಂಟ್ರಿ:</strong> ಸಾಮಾನ್ಯವಾಗಿ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಗೆಲ್ಲುವುದಿಲ್ಲ. ಆದರೆ ಹನುಮಂತ ಅವರು ಬಂದ ರೀತಿ ಮತ್ತು ಅವರು ಪ್ರತಿನಿಧಿಸಿದ &#8216;ಕೆಳವರ್ಗದ&#8217; ಧ್ವನಿ, ಅವರನ್ನು ಜನಸಾಮಾನ್ಯರ ಹೀರೋ ಮಾಡಿತು.<br>* <strong>ತ್ರಿವಿಕ್ರಮ್vs ಹನುಮಂತ:</strong> ರನ್ನರ್ ಅಪ್ ಆದ ತ್ರಿವಿಕ್ರಮ್ ಅವರು ಸುಶಿಕ್ಷಿತ, ಅರ್ಬನ್ ಹಿನ್ನೆಲೆಯ ನಟ. ಅಂತಿಮ ಹಣಾಹಣಿಯು &#8216;ಶ್ರೀಮಂತ vs ಬಡವ&#8217; ಅಥವಾ &#8216;ಮೇಲ್ಟಾತಿ ವರ್ತನೆ vs ಕೆಳವರ್ಗದ ಮುಗ್ಧತೆ&#8217; ಎಂಬ ಸ್ವರೂಪ ಪಡೆಯಿತು. ಹನುಮಂತ ಅವರಿಗೆ ಬಿದ್ದ 5 ಕೋಟಿಗೂ ಅಧಿಕ ಮತಗಳು, ಕರ್ನಾಟಕದ ಗ್ರಾಮೀಣ ಮತ್ತು ದಲಿತ ವರ್ಗವು ಅವರನ್ನು ತಮ್ಮ ಪ್ರತಿನಿಧಿಯಾಗಿ ಸ್ವೀಕರಿಸಿದ್ದನ್ನು ತೋರಿಸುತ್ತದೆ.</p>



<p><strong>ಅಭಿಮಾನಿ </strong><strong>ಸಂಘಗಳು </strong><strong>ಅಥವಾ ಜಾತಿ </strong><strong>ಸೇನೆಗಳು</strong><strong>?</strong><br>ಬಿಗ್ ಬಾಸ್ ಹೊರಗಿನ ಪ್ರಪಂಚದಲ್ಲಿ, ನಟ ದರ್ಶನ್ ತೂಗುದೀಪ (ಡಿ-ಬಾಸ್) ಅವರ ಅಭಿಮಾನಿ ಸಂಘಗಳು ಮತದಾನದ ಮೇಲೆ ಬಲವಾದ ಪ್ರಭಾವ ಬೀರುತ್ತವೆ. ದರ್ಶನ್ ಅವರ ಅಭಿಮಾನಿ ಬಳಗವು ಒಂದು ನಿರ್ದಿಷ್ಟ ವರ್ಗ ಮತ್ತು ಸಮುದಾಯದ (ಕುರುಬ/ಬಲಿಜ/ಒಕ್ಕಲಿಗ ಮಿಶ್ರಿತ ಹಿಂದುಳಿದ ವರ್ಗಗಳ) ಬೆಂಬಲವನ್ನು ಹೊಂದಿದೆ.</p>



<p>ಮನೆಯೊಳಗೆ ಯಾರಾದರೂ ದರ್ಶನ್ ಅವರನ್ನು ಹೊಗಳಿದರೆ ಅಥವಾ ಅವರ ಡೈಲಾಗ್ ಹೊಡೆದರೆ, ಹೊರಗೆ &#8216;ಡಿ-ಬಾಸ್‌ ಆರ್ಮಿ&#8217; ಅವರಿಗೆ ಓಟ್ ಹಾಕಲು ಶುರು ಮಾಡುತ್ತದೆ. ವಿನಯ್ ಗೌಡ ಅವರು ದರ್ಶನ್ ಅವರ ಪರವಾಗಿ ಮಾತನಾಡಿದ್ದು ಮತ್ತು ಅವರ ಶೈಲಿಯನ್ನು ಅನುಕರಿಸಿದ್ದು ಅವರಿಗೆ ಮತಗಳನ್ನು ತಂದುಕೊಟ್ಟಿತು.</p>



<figure class="wp-block-image size-full"><img loading="lazy" decoding="async" width="800" height="450" src="https://peepalmedia.com/wp-content/uploads/2026/01/1000772882.jpg" alt="" class="wp-image-72418" srcset="https://peepalmedia.com/wp-content/uploads/2026/01/1000772882.jpg 800w, https://peepalmedia.com/wp-content/uploads/2026/01/1000772882-300x169.jpg 300w, https://peepalmedia.com/wp-content/uploads/2026/01/1000772882-768x432.jpg 768w, https://peepalmedia.com/wp-content/uploads/2026/01/1000772882-150x84.jpg 150w, https://peepalmedia.com/wp-content/uploads/2026/01/1000772882-696x392.jpg 696w" sizes="auto, (max-width: 800px) 100vw, 800px" /></figure>



<p>ದರ್ಶನ್ ಅಥವಾ ಅವರ ಬೆಂಬಲಿತ ಸ್ಪರ್ಧಿಗಳ ವಿರುದ್ಧ ಮಾತನಾಡುವವರನ್ನು (ವಿಶೇಷವಾಗಿ ಮಹಿಳೆಯರನ್ನು) ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಕೀಳಾಗಿ ನಿಂದಿಸಲಾಗುತ್ತದೆ. ರೇಣುಕಾಸ್ವಾಮಿ ಕೊಲೆ ಪ್ರಕರಣವು ಈ ಅಭಿಮಾನಿ ಸಂಘಗಳಲ್ಲಿರುವ ಕೆಲವರ ಹಿಂಸಾತ್ಮಕ ಮನಸ್ಥಿತಿಯನ್ನು ಜಗಜ್ಜಾಹೀರು ಮಾಡಿದೆ. ಬಿಗ್ ಬಾಸ್ ಮತದಾನದಲ್ಲೂ ಕೂಡಾ ಇದೇ &#8216;ಗ್ಯಾಂಗ್ ಮೆಂಟಾಲಿಟಿ&#8217; ಕೆಲಸ ಮಾಡುತ್ತದೆ.</p>



<p><strong>ಬಿಡದಿ </strong><strong>ಸ್ಟುಡಿಯೋ </strong><strong>ಸೀಲ್ ಮತ್ತು</strong><strong> </strong><strong>ಸೇಡಿನ </strong><strong>ರಾಜಕಾರಣ</strong><br>ಬಿಗ್ ಬಾಸ್ ಸೀಸನ್ 12ರಲ್ಲಿ ನಡೆದ &#8216;ಜಾಲಿವುಡ್ ಸ್ಟುಡಿಯೋ&#8217; (Jollywood Studio) ಸೀಲ್ ಮಾಡಿದ ಘಟನೆ ಕಾರ್ಯಕ್ರಮದ ಮೇಲೆ ರಾಜಕೀಯ ಹಿಡಿತವನ್ನು ತೋರಿಸುತ್ತದೆ. ಮಾಲಿನ್ಯ ನಿಯಂತ್ರಣ ಮಂಡಳಿಯು ಪರಿಸರ ಹಾನಿಯ ನೆಪವೊಡ್ಡಿ ಸ್ಟುಡಿಯೋಗೆ ಬೀಗಮುದ್ರೆ ಹಾಕಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ದ್ವೇಷದ ಭಾಗ ಎಂದು ಬಿಜೆಪಿ ಆರೋಪಿಸಿತು.</p>



<p>ಈ ಘಟನೆಯು ರಾಮನಗರ ಜಿಲ್ಲೆಯ (ಈಗ ಬೆಂಗಳೂರು ದಕ್ಷಿಣ) ರಾಜಕೀಯ ಮೇಲಾಟದ ಭಾಗವಾಗಿತ್ತು. ಸ್ಟುಡಿಯೋ ಮಾಲೀಕರು ಮತ್ತು ಶೋ ಆಯೋಜಕರು ಯಾವ ರಾಜಕೀಯ ಪಕ್ಷಕ್ಕೆ ಅಥವಾ ನಾಯಕರಿಗೆ ನಿಷ್ಠರಾಗಿದ್ದಾರೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಸ್ಪರ್ಧಿಗಳನ್ನು ರಾತ್ರೋರಾತ್ರಿ ರೆಸಾರ್ಟ್‌ಗೆ ಸ್ಥಳಾಂತರಿಸಿದ್ದು, ಮನರಂಜನಾ ಉದ್ಯಮವು ರಾಜ್ಯದ ಪ್ರಬಲ ಜಾತಿ ನಾಯಕರ (Vokkaliga Strongmen) ಕಪಿಮುಷ್ಠಿಯಲ್ಲಿ ಸಿಲುಕಿರುವುದನ್ನು ತೋರಿಸುತ್ತದೆ.</p>



<p>ಕೆಳಗಿನ ಕೋಷ್ಟಕವು ಬಿಗ್ ಬಾಸ್ ವಿಜೇತರ ಹಿನ್ನೆಲೆ ಮತ್ತು ಅವರ ಗೆಲುವಿಗೆ ಕಾರಣವಾದ ಸಾಮಾಜಿಕ ಅಂಶಗಳನ್ನು ವಿವರಿಸುತ್ತದೆ:</p>



<figure class="wp-block-image size-large"><img loading="lazy" decoding="async" width="1024" height="355" src="https://peepalmedia.com/wp-content/uploads/2026/01/1000772859-1024x355.jpg" alt="" class="wp-image-72412" srcset="https://peepalmedia.com/wp-content/uploads/2026/01/1000772859-1024x355.jpg 1024w, https://peepalmedia.com/wp-content/uploads/2026/01/1000772859-300x104.jpg 300w, https://peepalmedia.com/wp-content/uploads/2026/01/1000772859-768x266.jpg 768w, https://peepalmedia.com/wp-content/uploads/2026/01/1000772859-150x52.jpg 150w, https://peepalmedia.com/wp-content/uploads/2026/01/1000772859-696x241.jpg 696w, https://peepalmedia.com/wp-content/uploads/2026/01/1000772859-1068x370.jpg 1068w, https://peepalmedia.com/wp-content/uploads/2026/01/1000772859.jpg 1080w" sizes="auto, (max-width: 1024px) 100vw, 1024px" /></figure>



<figure class="wp-block-image size-large"><img loading="lazy" decoding="async" width="794" height="1024" src="https://peepalmedia.com/wp-content/uploads/2026/01/1000772860-794x1024.jpg" alt="" class="wp-image-72413" srcset="https://peepalmedia.com/wp-content/uploads/2026/01/1000772860-794x1024.jpg 794w, https://peepalmedia.com/wp-content/uploads/2026/01/1000772860-233x300.jpg 233w, https://peepalmedia.com/wp-content/uploads/2026/01/1000772860-768x991.jpg 768w, https://peepalmedia.com/wp-content/uploads/2026/01/1000772860-150x193.jpg 150w, https://peepalmedia.com/wp-content/uploads/2026/01/1000772860-300x387.jpg 300w, https://peepalmedia.com/wp-content/uploads/2026/01/1000772860-696x898.jpg 696w, https://peepalmedia.com/wp-content/uploads/2026/01/1000772860-1068x1378.jpg 1068w, https://peepalmedia.com/wp-content/uploads/2026/01/1000772860.jpg 1080w" sizes="auto, (max-width: 794px) 100vw, 794px" /></figure>



<figure class="wp-block-image size-large"><img loading="lazy" decoding="async" width="1024" height="240" src="https://peepalmedia.com/wp-content/uploads/2026/01/1000772861-1024x240.jpg" alt="" class="wp-image-72414" srcset="https://peepalmedia.com/wp-content/uploads/2026/01/1000772861-1024x240.jpg 1024w, https://peepalmedia.com/wp-content/uploads/2026/01/1000772861-300x70.jpg 300w, https://peepalmedia.com/wp-content/uploads/2026/01/1000772861-768x180.jpg 768w, https://peepalmedia.com/wp-content/uploads/2026/01/1000772861-150x35.jpg 150w, https://peepalmedia.com/wp-content/uploads/2026/01/1000772861-696x163.jpg 696w, https://peepalmedia.com/wp-content/uploads/2026/01/1000772861-1068x250.jpg 1068w, https://peepalmedia.com/wp-content/uploads/2026/01/1000772861.jpg 1080w" sizes="auto, (max-width: 1024px) 100vw, 1024px" /></figure>



<p><strong>ವಾಸ್ತವದ </strong><strong>ಆಚೆಗೆ </strong><strong>ಇರುವ </strong><strong>ಕಟು</strong><strong>ಸತ್ಯ</strong><br>ಬಿಗ್ ಬಾಸ್ ಕನ್ನಡ ಕಾರ್ಯಕ್ರಮದ ಹನ್ನೆರಡು ಸೀಸನ್‌ಗಳ ಕೂಲಂಕುಷ ಪರಿಶೀಲನೆಯು ಒಂದು ಆಘಾತಕಾರಿ ಸತ್ಯವನ್ನು ಬಯಲು ಮಾಡುತ್ತದೆ: <strong>ಗ್ಲಾಸ್‌ಹೌಸ್ </strong><strong>ಒಳಗಿನ </strong><strong>ಪ್ರಜಾಪ್ರಭುತ್ವವು </strong><strong>ಹೊರಗಿನ </strong><strong>ಜಾತಿ </strong><strong>ರಾಜಕಾರಣದಿಂದ </strong><strong>ಮುಕ್ತವಾಗಿಲ್ಲ</strong><strong>.</strong></p>



<p><strong>1. </strong><strong>ಜಾತಿಯೇ </strong><strong>ಬಂಡವಾಳ</strong><strong>:</strong> ಸ್ಪರ್ಧಿಯೊಬ್ಬರು &#8216;ಗೌಡ&#8217; ಅಥವಾ &#8216;ಶೆಟ್ಟಿ&#8217; ಆಗಿದ್ದರೆ, ಅವರಿಗೆ ಆರಂಭಿಕ ಬೆಂಬಲ (Initial Capital) ಸಿಗುವುದು ಸುಲಭ. ಆದರೆ ಹನುಮಂತ ಅವರಂತಹ ದಲಿತ/ಗಿರಿಜನ ಸಮುದಾಯದ ಸ್ಪರ್ಧಿಗಳು ಗೆಲ್ಲಬೇಕಾದರೆ, ಅವರು ಅಸಾಧಾರಣವಾದ ಸಹನೆ ಮತ್ತು ಪ್ರತಿಭೆಯನ್ನು ತೋರಬೇಕಾಗುತ್ತದೆ.<br><strong>2. </strong><strong>ಅಸ್ಪೃಶ್ಯತೆಯ </strong><strong>ರೂಪಾಂತರ</strong><strong>:</strong> &#8220;ಎಸ್ ಕೆಟಗರಿ&#8221;ಯಂತಹ ಪದಗಳ ಬಳಕೆ ತೋರಿಸುವುದೇನೆಂದರೆ, ಅಸ್ಪೃಶ್ಯತೆ ಮತ್ತು ಜಾತಿ ನಿಂದನೆಯು ಈಗ ಹೊಸ ರೂಪ ಪಡೆದುಕೊಂಡಿದೆ. ನೇರವಾಗಿ ಜಾತಿ ಹೆಸರು ಹಿಡಿದು ಬೈಯುವ ಬದಲು, ಸಂಕೇತಗಳ ಮೂಲಕ (Coded Language) ಅವಮಾನಿಸಲಾಗುತ್ತದೆ.<br><strong>3. </strong><strong>ಪ್ರಾದೇಶಿಕ </strong><strong>ಅಸಮತೋಲನ</strong><strong>:</strong> ಮೈಸೂರು ಭಾಗದ ಮತ್ತು ಕರಾವಳಿ ಭಾಗದ ಸ್ಪರ್ಧಿಗಳು ಗೆದ್ದಷ್ಟು ಸುಲಭವಾಗಿ ಉತ್ತರ ಕರ್ನಾಟಕದ ಸ್ಪರ್ಧಿಗಳು ಗೆಲ್ಲಲು ಸಾಧ್ಯವಾಗುತ್ತಿಲ್ಲ. ಅವರ ಭಾಷೆಯನ್ನು ಹಾಸ್ಯದ ವಸ್ತುವಾಗಿ ನೋಡುವ ಪ್ರವೃತ್ತಿ ಇಂದಿಗೂ ಇದೆ.<br><strong>4. </strong><strong>ರಾಜಕೀಯ</strong><strong>ದಾಳ</strong><strong>:</strong> ಬಿಗ್ ಬಾಸ್ ಸೆಟ್ಗೆ ಬೀಗ ಹಾಕುವುದು ಅಥವಾ ಸ್ಪರ್ಧಿಗಳ ಮೇಲೆ ಕೇಸ್ ಹಾಕುವುದು ಕೇವಲ ಕಾನೂನು ಕ್ರಮವಲ್ಲ; ಅದು ರಾಜಕೀಯ ನಾಯಕರು ತಮ್ಮ ಅಧಿಕಾರ ಪ್ರದರ್ಶಿಸಲು ಬಳಸುವ ತಂತ್ರವಾಗಿದೆ.</p>



<p>ಅಂತಿಮವಾಗಿ, ಬಿಗ್ ಬಾಸ್ ಕನ್ನಡದಲ್ಲಿ <strong>&#8220;</strong><strong>ಯಾರು </strong><strong>ಬೇಕಾದರೂ </strong><strong>ಗೆಲ್ಲಬಹುದು</strong><strong>&#8220;</strong> ಎಂಬುದು ಕೇವಲ ಘೋಷವಾಕ್ಯವಷ್ಟೇ. ವಾಸ್ತವದಲ್ಲಿ, ಗೆಲುವು ಎಂಬುದು ಜಾತಿ ಬಲ, ಪ್ರಾದೇಶಿಕ ಬೆಂಬಲ ಮತ್ತು ರಾಜಕೀಯ ಸಮೀಕರಣಗಳ ಸಂಕೀರ್ಣ ಲೆಕ್ಕಾಚಾರದ ಮೇಲೆ ನಿಂತಿದೆ. ಪ್ರೇಕ್ಷಕರು ತಮ್ಮ ಅರಿವಿಲ್ಲದೆಯೇ ಈ ಜಾತಿ ರಾಜಕಾರಣದ ಭಾಗವಾಗುತ್ತಿದ್ದಾರೆ ಮತ್ತು ತಮ್ಮ ಮತಗಳ ಮೂಲಕ ಸಮಾಜದಲ್ಲಿರುವ ಅಸಮಾನತೆಯನ್ನು ಮತ್ತೊಮ್ಮೆ ದೃಢೀಕರಿಸುತ್ತಿದ್ದಾರೆ.</p>
]]></content:encoded>
					
		
		
			</item>
		<item>
		<title>ಟಾಕ್ಸಿಕ್ ಟೀಸರ್ ವಿವಾದ: ಯಶ್ ಮನೆ ಮುಂದೆ ಬ್ಯಾನರ್ ಪ್ರಕರಣಕ್ಕೂ ಎಫ್‌ಐಆರ್, ಮಹಿಳಾ ಆಯೋಗಕ್ಕೆ ಎಎಪಿ ದೂರು</title>
		<link>https://peepalmedia.com/fir-for-banner-case-in-front-of-yashs-house/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 13 Jan 2026 08:37:34 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[ಸಿನಿಮಾ]]></category>
		<guid isPermaLink="false">https://peepalmedia.com/?p=72298</guid>

					<description><![CDATA[ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಟೀಸರ್‌ನಲ್ಲಿ ಅಶ್ಲೀಲ ಹಾಗೂ ವಯಸ್ಕ ದೃಶ್ಯಗಳಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಾಲುಸಾಲು ದೂರುಗಳು ದಾಖಲಾಗುತ್ತಿರುವ ನಡುವೆಯೇ, ಇದೀಗ ನಟ ಯಶ್ ಮನೆ ಮುಂದೆ ಅಳವಡಿಸಲಾಗಿದ್ದ ಬ್ಯಾನರ್ ಹಾಗೂ ಫ್ಲೆಕ್ಸ್ ವಿಚಾರಕ್ಕೂ ಎಫ್‌ಐಆರ್ ದಾಖಲಾಗಿದೆ. ಬೆಂಗಳೂರಿನ ಗಾಲ್ಫ್ ಕ್ಲಬ್ ಎದುರು ಇರುವ ನಟ ಯಶ್ ನಿವಾಸದ ಮುಂದೆ ಅವರ ಹುಟ್ಟುಹಬ್ಬದ ಶುಭಾಶಯ ಕೋರಿ ಅಭಿಮಾನಿಗಳು ಬ್ಯಾನರ್ ಹಾಗೂ ಫ್ಲೆಕ್ಸ್ ಅಳವಡಿಸಿದ್ದರು. ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಬ್ಯಾನರ್ ಹಾಕಲಾಗಿದೆ [&#8230;]]]></description>
										<content:encoded><![CDATA[
<p>ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಟೀಸರ್‌ನಲ್ಲಿ ಅಶ್ಲೀಲ ಹಾಗೂ ವಯಸ್ಕ ದೃಶ್ಯಗಳಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಾಲುಸಾಲು ದೂರುಗಳು ದಾಖಲಾಗುತ್ತಿರುವ ನಡುವೆಯೇ, ಇದೀಗ ನಟ ಯಶ್ ಮನೆ ಮುಂದೆ ಅಳವಡಿಸಲಾಗಿದ್ದ ಬ್ಯಾನರ್ ಹಾಗೂ ಫ್ಲೆಕ್ಸ್ ವಿಚಾರಕ್ಕೂ ಎಫ್‌ಐಆರ್ ದಾಖಲಾಗಿದೆ.</p>



<p>ಬೆಂಗಳೂರಿನ ಗಾಲ್ಫ್ ಕ್ಲಬ್ ಎದುರು ಇರುವ ನಟ ಯಶ್ ನಿವಾಸದ ಮುಂದೆ ಅವರ ಹುಟ್ಟುಹಬ್ಬದ ಶುಭಾಶಯ ಕೋರಿ ಅಭಿಮಾನಿಗಳು ಬ್ಯಾನರ್ ಹಾಗೂ ಫ್ಲೆಕ್ಸ್ ಅಳವಡಿಸಿದ್ದರು. ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಬ್ಯಾನರ್ ಹಾಕಲಾಗಿದೆ ಎಂಬ ಆರೋಪದ ಮೇಲೆ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಬಿಎ ವಿಭಾಗದ ಪೂಜಾರಪ್ಪ ಎಂಬುವವರು ನೀಡಿದ ದೂರಿನ ಮೇರೆಗೆ, ವೇಣು ಕ್ರಿಯೇಶನ್ಸ್ ವಿರುದ್ಧ ಕೇಸ್ ದಾಖಲಿಸಲಾಗಿದ್ದು, ನಟ ಯಶ್ ಅವರ ಹೆಸರನ್ನೂ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.</p>



<p>ಇದರ ನಡುವೆಯೇ ಟಾಕ್ಸಿಕ್ ಟೀಸರ್ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಸೋಮವಾರ ಆಮ್ ಆದ್ಮಿ ಪಕ್ಷದ (ಎಎಪಿ) ಮಹಿಳಾ ಘಟಕದ ಸದಸ್ಯರು ರಾಜ್ಯ ಮಹಿಳಾ ಆಯೋಗದ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಎಪಿ ರಾಜ್ಯ ಕಾರ್ಯದರ್ಶಿ ಉಷಾ ಮೋಹನ್, “ಟೀಸರ್‌ನಲ್ಲಿರುವ ಅಶ್ಲೀಲ ಹಾಗೂ ಪ್ರೌಢ ದೃಶ್ಯಗಳು ಮಹಿಳೆಯರು ಹಾಗೂ ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟುಮಾಡುತ್ತಿವೆ. ಯಾವುದೇ ವಯೋಮಿತಿ ಅಥವಾ ಮುನ್ನೆಚ್ಚರಿಕೆ ಇಲ್ಲದೆ ಸಾರ್ವಜನಿಕವಾಗಿ ಬಿಡುಗಡೆಯಾಗಿರುವ ದೃಶ್ಯಗಳು ಮಹಿಳೆಯರ ಘನತೆಗೆ ಕುಂದು ತರುವಂತಿವೆ. ಇದು ಕನ್ನಡದ ಐತಿಹಾಸಿಕ ಸಾಂಸ್ಕೃತಿಕ ಪರಂಪರೆಯ ಮೇಲೆ ನಡೆದಿರುವ ತೀವ್ರ ಅಪಮಾನ” ಎಂದು ಆಕ್ರೋಶ ವ್ಯಕ್ತಪಡಿಸಿದರು.</p>



<p>ಸಮಾಜದ ಮೇಲೆ, ವಿಶೇಷವಾಗಿ ಅಪ್ರಾಪ್ತ ವಯಸ್ಕರ ಮೇಲೆ ಈ ದೃಶ್ಯಗಳು ಗಂಭೀರ ದುಷ್ಪರಿಣಾಮ ಬೀರುತ್ತಿವೆ ಎಂದು ತಿಳಿಸಿದ ಅವರು, ರಾಜ್ಯ ಮಹಿಳಾ ಆಯೋಗವು ತಕ್ಷಣ ಮಧ್ಯಪ್ರವೇಶಿಸಿ ಟೀಸರ್ ಅನ್ನು ರದ್ದುಗೊಳಿಸುವಂತೆ ಹಾಗೂ ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕುವಂತೆ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.</p>



<p>ಮಹಿಳೆಯರ ಸಾಂಸ್ಕೃತಿಕ ಮತ್ತು ನೈತಿಕ ಮೌಲ್ಯಗಳನ್ನು ರಕ್ಷಿಸುವುದು ಮಹಿಳಾ ಆಯೋಗದ ಸಾಂವಿಧಾನಿಕ ಕರ್ತವ್ಯವಾಗಿದ್ದು, ಈ ವಿಚಾರದಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು. ಜೊತೆಗೆ ಸರ್ಕಾರವು ಇಂತಹ ಪ್ರಕರಣಗಳನ್ನು ತಡೆಗಟ್ಟಲು ಕಠಿಣ ಕಾನೂನುಗಳನ್ನು ರೂಪಿಸಬೇಕೆಂದು ಉಷಾ ಮೋಹನ್ ಒತ್ತಾಯಿಸಿದರು.</p>
]]></content:encoded>
					
		
		
			</item>
		<item>
		<title>&#8220;ಟಾಕ್ಸಿಕ್&#8221; ಟೀಸರ್‌ಗೆ ವಿರೋಧದ ಬೆಂಕಿ: ಅಶ್ಲೀಲತೆ ಆರೋಪ, ಸೆನ್ಸಾರ್ ಮಂಡಳಿಗೆ ದೂರು</title>
		<link>https://peepalmedia.com/toxic-teaser-faces-backlash-accusations-of-obscenity/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 10 Jan 2026 06:34:10 +0000</pubDate>
				<category><![CDATA[ಸಿನಿಮಾ]]></category>
		<guid isPermaLink="false">https://peepalmedia.com/?p=72125</guid>

					<description><![CDATA[ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಟೀಸರ್ ಬಿಡುಗಡೆಗೊಂಡು ಕೇವಲ 24 ಗಂಟೆಗಳಲ್ಲೇ ಸುಮಾರು 5 ಕೋಟಿಗೂ ಅಧಿಕ ವೀಕ್ಷಣೆಗಳನ್ನು ಪಡೆದು ದಾಖಲೆ ಬರೆದಿದೆ. ಆದರೆ ಟೀಸರ್‌ಗೆ ದೊರೆತ ಭಾರೀ ಪ್ರತಿಕ್ರಿಯೆಯ ನಡುವೆಯೇ ಇದೀಗ ಸಿನಿಮಾ ಸಂಕಷ್ಟಕ್ಕೆ ಸಿಲುಕಿದ್ದು, ಟಾಕ್ಸಿಕ್ ಟೀಸರ್ ಕುರಿತು ಪರ–ವಿರೋಧ ಚರ್ಚೆ ತೀವ್ರಗೊಂಡಿದೆ. ಟಾಕ್ಸಿಕ್ ಟೀಸರ್‌ನಲ್ಲಿ ಅಶ್ಲೀಲ ಅಂಶಗಳಿವೆ ಎಂಬ ಆರೋಪದೊಂದಿಗೆ, ವಕೀಲ ಲೋಹಿತ್ ಹನುಮಪುರ ಅವರು ಕೇಂದ್ರ ಚಲನಚಿತ್ರ ಪ್ರಮಾಣಿಕರಣ ಮಂಡಳಿ (CBFC) ಅಧ್ಯಕ್ಷರಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ. [&#8230;]]]></description>
										<content:encoded><![CDATA[
<p>ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಟೀಸರ್ ಬಿಡುಗಡೆಗೊಂಡು ಕೇವಲ 24 ಗಂಟೆಗಳಲ್ಲೇ ಸುಮಾರು 5 ಕೋಟಿಗೂ ಅಧಿಕ ವೀಕ್ಷಣೆಗಳನ್ನು ಪಡೆದು ದಾಖಲೆ ಬರೆದಿದೆ. ಆದರೆ ಟೀಸರ್‌ಗೆ ದೊರೆತ ಭಾರೀ ಪ್ರತಿಕ್ರಿಯೆಯ ನಡುವೆಯೇ ಇದೀಗ ಸಿನಿಮಾ ಸಂಕಷ್ಟಕ್ಕೆ ಸಿಲುಕಿದ್ದು, ಟಾಕ್ಸಿಕ್ ಟೀಸರ್ ಕುರಿತು ಪರ–ವಿರೋಧ ಚರ್ಚೆ ತೀವ್ರಗೊಂಡಿದೆ.</p>



<p>ಟಾಕ್ಸಿಕ್ ಟೀಸರ್‌ನಲ್ಲಿ ಅಶ್ಲೀಲ ಅಂಶಗಳಿವೆ ಎಂಬ ಆರೋಪದೊಂದಿಗೆ, ವಕೀಲ ಲೋಹಿತ್ ಹನುಮಪುರ ಅವರು ಕೇಂದ್ರ ಚಲನಚಿತ್ರ ಪ್ರಮಾಣಿಕರಣ ಮಂಡಳಿ (CBFC) ಅಧ್ಯಕ್ಷರಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ. ಟೀಸರ್‌ನಲ್ಲಿರುವ ಕೆಲವು ದೃಶ್ಯಗಳು ಸಾರ್ವಜನಿಕ ನೈತಿಕತೆಗೆ ಧಕ್ಕೆಯಾಗುವಂತಿವೆ, ವಿಶೇಷವಾಗಿ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.</p>



<p>ಈ ಹಿನ್ನೆಲೆಯಲ್ಲಿ, ಟಾಕ್ಸಿಕ್ ಚಿತ್ರವನ್ನು ‘A’ ಪ್ರಮಾಣಪತ್ರದೊಂದಿಗೆ ಮಾತ್ರ ಬಿಡುಗಡೆ ಮಾಡುವುದು ಸೂಕ್ತ ಎಂದು ಅವರು ಒತ್ತಾಯಿಸಿದ್ದಾರೆ. ಜೊತೆಗೆ, ವಯಸ್ಕ ವಿಷಯ ಹೊಂದಿರುವ ಟೀಸರ್ ಅನ್ನು ತಕ್ಷಣವೇ ತೆಗೆದುಹಾಕಲು ಅಥವಾ ಸೂಕ್ತ ತಿದ್ದುಪಡಿ ಮಾಡಲು ನಿರ್ಮಾಪಕರಿಗೆ ನಿರ್ದೇಶನ ನೀಡಬೇಕು ಎಂದು ಸೆನ್ಸಾರ್ ಮಂಡಳಿಗೆ ಮನವಿ ಮಾಡಲಾಗಿದೆ.</p>



<p>ಒಂದೆಡೆ, ಚಿತ್ರತಂಡದಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಮತ್ತೊಂದೆಡೆ, ಈ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಸೆನ್ಸಾರ್ ಮಂಡಳಿಯ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ಕೂಡ ನೀಡಲಾಗಿದೆ.</p>



<p>ಭಾರೀ ನಿರೀಕ್ಷೆಯೊಂದಿಗೆ ಬಿಡುಗಡೆಯಾಗಿರುವ ಟಾಕ್ಸಿಕ್ ಟೀಸರ್ ಇದೀಗ ವಿವಾದದ ಕೇಂದ್ರಬಿಂದುವಾಗಿದ್ದು, ಮುಂದಿನ ದಿನಗಳಲ್ಲಿ ಸೆನ್ಸಾರ್ ಮಂಡಳಿ ಯಾವ ರೀತಿಯ ನಿರ್ಧಾರ ಕೈಗೊಳ್ಳಲಿದೆ ಎಂಬುದೇ ಕುತೂಹಲಕ್ಕೆ ಕಾರಣವಾಗಿದೆ.</p>



<p></p>
]]></content:encoded>
					
		
		
			</item>
		<item>
		<title>‘ಟಾಕ್ಸಿಕ್’ ಟ್ರೈಲರ್: ರಾಕಿಂಗ್ ಸ್ಟಾರ್ ಯಶ್‌ನ ಹೊಸ ಅವತಾರ, ಕನ್ನಡ ಚಿತ್ರರಂಗಕ್ಕೆ ಹಾಲಿವುಡ್ ಟಚ್</title>
		<link>https://peepalmedia.com/toxic-trailer-a-new-avatar-of-rocking-star-yash/</link>
		
		<dc:creator><![CDATA[Pragath K R]]></dc:creator>
		<pubDate>Thu, 08 Jan 2026 06:09:47 +0000</pubDate>
				<category><![CDATA[ವಿಶೇಷ]]></category>
		<category><![CDATA[ಸಿನಿಮಾ]]></category>
		<guid isPermaLink="false">https://peepalmedia.com/?p=71972</guid>

					<description><![CDATA[ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದೆ. ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ, ಯಶ್ ಅವರ ಸಿನಿಜೀವನದ ಮತ್ತೊಂದು ಮಹತ್ವದ ಮೈಲಿಗಲ್ಲಾಗಲಿದೆ ಎಂಬ ನಿರೀಕ್ಷೆಯನ್ನು ಟ್ರೈಲರ್ ಮತ್ತಷ್ಟು ಬಲಪಡಿಸಿದೆ. ಯಶ್ ಅವರ ಜನ್ಮದಿನದ ಪ್ರಯುಕ್ತ ಜನವರಿ 8ರಂದು ಬೆಳಗ್ಗೆ 10 ಗಂಟೆ 10 ನಿಮಿಷಕ್ಕೆ ಟ್ರೈಲರ್ ಬಿಡುಗಡೆಗೊಂಡಿದ್ದು, ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ [&#8230;]]]></description>
										<content:encoded><![CDATA[
<p>ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದೆ. ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ, ಯಶ್ ಅವರ ಸಿನಿಜೀವನದ ಮತ್ತೊಂದು ಮಹತ್ವದ ಮೈಲಿಗಲ್ಲಾಗಲಿದೆ ಎಂಬ ನಿರೀಕ್ಷೆಯನ್ನು ಟ್ರೈಲರ್ ಮತ್ತಷ್ಟು ಬಲಪಡಿಸಿದೆ.</p>



<figure class="wp-block-image size-full"><img loading="lazy" decoding="async" width="686" height="386" src="https://peepalmedia.com/wp-content/uploads/2026/01/1000760335.jpg" alt="" class="wp-image-71973" srcset="https://peepalmedia.com/wp-content/uploads/2026/01/1000760335.jpg 686w, https://peepalmedia.com/wp-content/uploads/2026/01/1000760335-300x169.jpg 300w, https://peepalmedia.com/wp-content/uploads/2026/01/1000760335-150x84.jpg 150w" sizes="auto, (max-width: 686px) 100vw, 686px" /></figure>



<p>ಯಶ್ ಅವರ ಜನ್ಮದಿನದ ಪ್ರಯುಕ್ತ ಜನವರಿ 8ರಂದು ಬೆಳಗ್ಗೆ 10 ಗಂಟೆ 10 ನಿಮಿಷಕ್ಕೆ ಟ್ರೈಲರ್ ಬಿಡುಗಡೆಗೊಂಡಿದ್ದು, ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಟ್ರೈಲರ್ ನೋಡುತ್ತಿದ್ದಂತೆಯೇ ಇದು ಸಾಮಾನ್ಯ ಮಾಸ್ ಸಿನಿಮಾ ಅಲ್ಲ, ಬದಲಾಗಿ ವಿಷಯಾಧಾರಿತ, ವಿಭಿನ್ನ ಶೈಲಿಯ ಪ್ರಯತ್ನ ಎನ್ನುವುದು ಸ್ಪಷ್ಟವಾಗುತ್ತದೆ.</p>



<p><strong>ಬೋಲ್ಡ್ ಕಥನ, ರೆಟ್ರೋ ಲೋಕದ ನೋಟ</strong><br>‘ಟಾಕ್ಸಿಕ್’ ಟ್ರೈಲರ್ ಆರಂಭದಲ್ಲೇ ಬೋಲ್ಡ್ ಹಾಗೂ ಅಚ್ಚರಿಯ ದೃಶ್ಯಗಳಿಂದ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತದೆ. ಕಥನ ಶೈಲಿ, ದೃಶ್ಯ ಸಂಯೋಜನೆ ಮತ್ತು ಕಲರ್ ಪ್ಯಾಲೆಟ್ ಎಲ್ಲವೂ ಸೇರಿ ಸಿನಿಮಾವನ್ನು ರೆಟ್ರೋ ವಾತಾವರಣದಲ್ಲಿ ಕಟ್ಟಿಕೊಟ್ಟಿರುವುದು ಗಮನಸೆಳೆಯುತ್ತದೆ. ಈ ರೀತಿಯ ಮೇಕಿಂಗ್ ಕನ್ನಡ ಚಿತ್ರರಂಗದಲ್ಲಿ ಅಪರೂಪ ಎನ್ನುವ ಬದಲು ಈವರೆಗೆ ಬಂದೇ ಇಲ್ಲ ಎನ್ನುವಂತೆ ಹಾಲಿವುಡ್ ಸಿನಿಮಾಗಳ ನೆನಪು ತರಿಸುತ್ತದೆ.</p>



<p><strong>ಮಾಸ್ ಜೊತೆ ಕ್ಲಾಸ್ ಮಿಶ್ರಣ: </strong><strong>ಯಶ್‌ನ</strong><strong> ಪ್ರಭಾವ ಪ್ರಸ್ತುತಿ</strong><br>ಟ್ರೈಲರ್‌ನ ಪ್ರಮುಖ ಆಕರ್ಷಣೆಯೇ ಯಶ್ ಅವರ ಪರಿವರ್ತಿತ ಅವತಾರ. ಮಾತು ಕಡಿಮೆ, ಕಣ್ಣುಗಳ ಮೂಲಕ ಮಾತನಾಡುವ ಅಭಿನಯ, ಗಟ್ಟಿಯಾದ ದೇಹಭಾಷೆ ಮತ್ತು ತೀವ್ರತೆಯ ಲುಕ್ ಎಲ್ಲವೂ ಸೇರಿ ಯಶ್ ಅವರನ್ನು ಇನ್ನೊಂದು ಮಟ್ಟದಲ್ಲಿ ತೋರಿಸುತ್ತಿವೆ. ಆ್ಯಕ್ಷನ್ ದೃಶ್ಯಗಳಲ್ಲಿ ಅವರ ಪ್ರೆಸೆನ್ಸ್ ಸಖತ್ ಮಾಸ್ ಆಗಿದ್ದರೆ, ಮೌನದ ಕ್ಷಣಗಳಲ್ಲಿ ಕ್ಲಾಸ್ ಟಚ್ ಸ್ಪಷ್ಟವಾಗಿ ಕಾಣಿಸುತ್ತದೆ.</p>



<p><strong>ನಾಯಕಿಯರ ಪಾತ್ರಕ್ಕೆ ತೂಕ</strong><br>ಟ್ರೈಲರ್‌ನಲ್ಲಿ ನಯನತಾರಾ, ರುಕ್ಮಿಣಿ ವಸಂತ್ ಸೇರಿದಂತೆ ನಾಯಕಿಯರ ಪಾತ್ರಗಳು ಕೇವಲ ಅಲಂಕಾರಕ್ಕೆ ಸೀಮಿತವಾಗಿಲ್ಲ ಎನ್ನುವ ಸೂಚನೆ ಸಿಗುತ್ತಿದೆ. ಪ್ರತಿಯೊಬ್ಬರಿಗೂ ಕಥೆಯೊಳಗಿನ ಪ್ರಾಮುಖ್ಯತೆ ಇರುವಂತೆ ಟ್ರೈಲರ್ ಕಟ್ಟಿಕೊಟ್ಟಿದ್ದು, ಮಹಿಳಾ ಪಾತ್ರಗಳಿಗೆ ಬಲ ನೀಡುವ ಗೀತು ಮೋಹನ್‌ದಾಸ್ ಶೈಲಿಯನ್ನು ಪ್ರತಿಬಿಂಬಿಸುತ್ತದೆ.</p>



<p><strong>ತಾಂತ್ರಿಕವಾಗಿ ಶ್ರೀಮಂತ ಸಿನಿಮಾ</strong><br>‘ಟಾಕ್ಸಿಕ್’ ಸಿನಿಮಾಗೆ ಕೆವಿಎನ್ ಪ್ರೊಡಕ್ಷನ್ಸ್ ಭಾರಿ ಬಂಡವಾಳ ಹೂಡಿದ್ದು, ಅದರ ಪ್ರತಿಫಲನ ಟ್ರೈಲರ್‌ನ ಪ್ರತಿಯೊಂದು ಫ್ರೇಮ್‌ನಲ್ಲೂ ಕಾಣಿಸುತ್ತದೆ. ಛಾಯಾಗ್ರಹಣ, ಹಿನ್ನೆಲೆ ಸಂಗೀತ, ಆ್ಯಕ್ಷನ್ ಕೊರಿಯೋಗ್ರಫಿ ಮತ್ತು ಆರ್ಟ್ ಡಿಸೈನ್ ಎಲ್ಲವೂ ಹೈ ಸ್ಟ್ಯಾಂಡರ್ಡ್‌ನಲ್ಲಿ ರೂಪುಗೊಂಡಿವೆ. ಹಿನ್ನೆಲೆ ಸಂಗೀತವು ಟ್ರೈಲರ್‌ಗೆ ತೀವ್ರತೆಯನ್ನು ಹೆಚ್ಚಿಸಿ, ಪ್ರೇಕ್ಷಕರನ್ನು ಕಥೆಯೊಳಗೆ ಎಳೆದುಕೊಳ್ಳುತ್ತದೆ.</p>



<p><strong>ಕಥೆಗೆ </strong><strong>ಯಶ್‌ಗೂ</strong><strong> ಪಾಲು</strong><br>ಈ ಚಿತ್ರದ ಕಥೆಯನ್ನು ಗೀತು ಮೋಹನ್‌ದಾಸ್ ಜೊತೆ ಯಶ್ ಕೂಡ ಸಹ-ರಚನೆ ಮಾಡಿದ್ದಾರೆ ಎಂಬ ಅಂಶ ಟ್ರೈಲರ್‌ಗೆ ಮತ್ತಷ್ಟು ಕುತೂಹಲ ಸೇರಿಸಿದೆ. ಇದು ಯಶ್ ಕೇವಲ ನಟನಾಗಿ ಮಾತ್ರವಲ್ಲ, ಕಥನದ ಭಾಗವಾಗಿಯೂ ಈ ಸಿನಿಮಾಗೆ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ಸೂಚಿಸುತ್ತದೆ.</p>



<p>ಬಾಕ್ಸ್ ಆಫೀಸ್‌ನಲ್ಲಿ ಕಠಿಣ ಪೈಪೋಟಿ<br>‘ಟಾಕ್ಸಿಕ್’ ಸಿನಿಮಾ ಬಿಡುಗಡೆ ವೇಳೆ ಹಿಂದಿಯ ಸೂಪರ್ ಹಿಟ್ ಸಿನಿಮಾ ‘ಧುರಂಧರ್’ ಚಿತ್ರದ ಸೀಕ್ವೆಲ್ ‘ಧುರಂಧರ್ 2’ ಜೊತೆ ನೇರ ಸ್ಪರ್ಧೆ ಎದುರಿಸಲಿದೆ. ಆದರೂ, ವಿಭಿನ್ನ ಕಥನ, ಅಂತಾರಾಷ್ಟ್ರೀಯ ಮಟ್ಟದ ಮೇಕಿಂಗ್ ಮತ್ತು ಯಶ್ ಅವರ ಬೃಹತ್ ಅಭಿಮಾನಿ ಬಳಗ ‘ಟಾಕ್ಸಿಕ್’ಗೆ ಬಲವಾಗಲಿದೆ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗದ ಈವರೆಗಿನ ಯಾವ ಸಿನಿಮಾ ಕೂಡಾ ಈ ಮೇಕಿಂಗ್ ಮೀರಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಇದೆ.</p>



<p>ಒಟ್ಟಾರೆ, ‘ಟಾಕ್ಸಿಕ್’ ಟ್ರೈಲರ್ ಕನ್ನಡ ಚಿತ್ರರಂಗಕ್ಕೆ ಹೊಸ ದಿಕ್ಕು ತೋರಿಸುವ ಪ್ರಯತ್ನವಾಗಿದ್ದು, ಮಾಸ್ ಮತ್ತು ಕ್ಲಾಸ್ ಎರಡನ್ನೂ ಸಮತೋಲನವಾಗಿ ಒಟ್ಟುಗೂಡಿಸಿರುವ ಸಿನಿಮಾ ಎಂಬ ಭರವಸೆಯನ್ನು ನೀಡುತ್ತದೆ. ರಾಕಿಂಗ್ ಸ್ಟಾರ್ ಯಶ್ ಅವರ ವಿಭಿನ್ನ ಪ್ರಯೋಗ, ಗೀತು ಮೋಹನ್‌ದಾಸ್ ಅವರ ಗಂಭೀರ ನಿರ್ದೇಶನ ಮತ್ತು ಅದ್ದೂರಿ ನಿರ್ಮಾಣ ಎಲ್ಲವೂ ಸೇರಿ ‘ಟಾಕ್ಸಿಕ್’ ಅನ್ನು 2026ರ ಬಹುನಿರೀಕ್ಷಿತ ಚಿತ್ರಗಳ ಸಾಲಿಗೆ ಸೇರಿಸಿದೆ.</p>



<p>ಮಾರ್ಚ್ 19ರಂದು ‘ಟಾಕ್ಸಿಕ್’ ತೆರೆ ಮೇಲೆ ಯಾವ ಮಟ್ಟದ ಪ್ರಭಾವ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.</p>
]]></content:encoded>
					
		
		
			</item>
		<item>
		<title>ಬಾಂಗ್ಲಾದೇಶ ಹಿಂಸಾಚಾರಕ್ಕೆ ಧ್ವನಿ, ಭಾರತದಲ್ಲಿನ ಜಾತಿ ಹತ್ಯೆಗಳಿಗೆ ಮೌನ? ; ಬಾಲಿವುಡ್ ಸೆಲೆಬ್ರಿಟಿಗಳ ಬೂಟಾಟಿಕೆ ಮತ್ತೆ ಚರ್ಚೆಗೆ</title>
		<link>https://peepalmedia.com/hypocrisy-of-bollywood-celebrities-is-under-discussion-again/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 27 Dec 2025 09:19:38 +0000</pubDate>
				<category><![CDATA[ಕೋಮುವಾದ]]></category>
		<category><![CDATA[ದಲಿತ ನೋಟ]]></category>
		<category><![CDATA[ದೇಶ]]></category>
		<category><![CDATA[ವಿಶೇಷ]]></category>
		<category><![CDATA[ಸಿನಿಮಾ]]></category>
		<guid isPermaLink="false">https://peepalmedia.com/?p=71308</guid>

					<description><![CDATA[ಬಾಂಗ್ಲಾದೇಶದಲ್ಲಿ ಹಿಂದೂ ಕಾರ್ಮಿಕ ದೀಪು ಚಂದ್ರ ದಾಸ್ ಅವರ ಗುಂಪು ಹತ್ಯೆಯನ್ನು ಖಂಡಿಸಿ ಭಾರತೀಯ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ನಡುವೆಯೇ, ಭಾರತದೊಳಗೆ ನಡೆಯುತ್ತಿರುವ ಜಾತಿ ಆಧಾರಿತ ಮರ್ಯಾದಾ ಹತ್ಯೆಗಳು ಮತ್ತು ದೌರ್ಜನ್ಯಗಳ ಬಗ್ಗೆ ಅವರ ಮೌನ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂ ದೀಪು ಚಂದ್ರ ದಾಸ್ ಹತ್ಯೆಯನ್ನು ಅಮಾನವೀಯ ಕೃತ್ಯ ಎಂದು ಖಂಡಿಸಿದ ಬಾಲಿವುಡ್ ಹಾಗೂ ದಕ್ಷಿಣ ಭಾರತದ ಹಲವು ನಟ-ನಟಿಯರು, ಅಲ್ಪಸಂಖ್ಯಾತರ ರಕ್ಷಣೆಯ ವಿಚಾರವನ್ನು ಎತ್ತಿಹಿಡಿದಿದ್ದರು. ಆದರೆ [&#8230;]]]></description>
										<content:encoded><![CDATA[
<p>ಬಾಂಗ್ಲಾದೇಶದಲ್ಲಿ ಹಿಂದೂ ಕಾರ್ಮಿಕ ದೀಪು ಚಂದ್ರ ದಾಸ್ ಅವರ ಗುಂಪು ಹತ್ಯೆಯನ್ನು ಖಂಡಿಸಿ ಭಾರತೀಯ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ನಡುವೆಯೇ, ಭಾರತದೊಳಗೆ ನಡೆಯುತ್ತಿರುವ ಜಾತಿ ಆಧಾರಿತ ಮರ್ಯಾದಾ ಹತ್ಯೆಗಳು ಮತ್ತು ದೌರ್ಜನ್ಯಗಳ ಬಗ್ಗೆ ಅವರ ಮೌನ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ.</p>



<p>ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂ ದೀಪು ಚಂದ್ರ ದಾಸ್ ಹತ್ಯೆಯನ್ನು ಅಮಾನವೀಯ ಕೃತ್ಯ ಎಂದು ಖಂಡಿಸಿದ ಬಾಲಿವುಡ್ ಹಾಗೂ ದಕ್ಷಿಣ ಭಾರತದ ಹಲವು ನಟ-ನಟಿಯರು, ಅಲ್ಪಸಂಖ್ಯಾತರ ರಕ್ಷಣೆಯ ವಿಚಾರವನ್ನು ಎತ್ತಿಹಿಡಿದಿದ್ದರು. ಆದರೆ ಇದೇ ವೇಳೆ, ಭಾರತದೊಳಗೆ ದಲಿತರು ಮತ್ತು ಕೆಳಜಾತಿಯವರ ಮೇಲೆ ನಡೆಯುತ್ತಿರುವ ಹೀನಾಯ ಹಿಂಸಾಚಾರಗಳು, ಮರ್ಯಾದೆ ಹತ್ಯೆಗಳು ರಾಷ್ಟ್ರಮಟ್ಟದಲ್ಲಿ ಸೆಲೆಬ್ರಿಟಿಗಳ ಗಮನ ಸೆಳೆಯದಿರುವುದು ಬಾಲಿವುಡ್ ಸೆಲೆಬ್ರಿಟಿಗಳ ಬೂಟಾಟಿಕೆಯ ಕಣ್ಣೊರೆಸುವಿಕೆಯ ಬೆತ್ತಲು ಮಾಡಿದೆ.</p>



<p><strong>ಹುಬ್ಬಳ್ಳಿಯ ಮರ್ಯಾದಾ ಹತ್ಯೆ ಪ್ರಕರಣ</strong><br>ಇದಕ್ಕೆ ಸ್ಪಷ್ಟ ಉದಾಹರಣೆಯಾಗಿ ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆದ ಮಾನ್ಯ ಎಂಬ ಯುವತಿಯ ಮರ್ಯಾದಾ ಹತ್ಯೆ ಪ್ರಕರಣವನ್ನು ಉಲ್ಲೇಖಿಸಲಾಗುತ್ತಿದೆ. ಅಂತರಜಾತಿ ವಿವಾಹ ಮಾಡಿಕೊಂಡಿದ್ದ ಕಾರಣಕ್ಕೆ ಮಾನ್ಯಳನ್ನು ಆಕೆಯ ಕುಟುಂಬಸ್ಥರೇ ಹತ್ಯೆಗೈದಿದ್ದು ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಪ್ರಕರಣದಲ್ಲಿ ಆಕೆಯ ಪತಿ ವಿವೇಕಾನಂದ ಮತ್ತು ಅವರ ಕುಟುಂಬದ ಮೇಲೂ ಹಲ್ಲೆ, ಬೆದರಿಕೆ ಹಾಗೂ ಸಾಮಾಜಿಕ ಬಹಿಷ್ಕಾರ ನಡೆದಿರುವ ಆರೋಪಗಳು ಕೇಳಿಬಂದಿವೆ.</p>



<p>ಸ್ಥಳೀಯ ಪೊಲೀಸ್ ಮೂಲಗಳ ಪ್ರಕಾರ, ಈ ಹತ್ಯೆಯ ಹಿಂದಿನ ಪ್ರಮುಖ ಕಾರಣ ಜಾತಿ ಅಸಹಿಷ್ಣುತೆ ಎಂಬುದು ತನಿಖೆಯಿಂದ ಹೊರಬಂದಿದೆ. ಆದರೆ ಈ ಅಮಾನವೀಯ ಘಟನೆಯು ದೇಶವ್ಯಾಪಿ ಸೆಲೆಬ್ರಿಟಿಗಳ ಪ್ರತಿಕ್ರಿಯೆ ನೀಡದೇ ಉಳಿದಿರುವುದು ಗಮನಾರ್ಹ.</p>



<p><strong>ಜಾತಿ ಹಿಂಸಾಚಾರ – ನಿರಂತರ ಸತ್ಯ</strong><br>ಮಾನ್ಯ ಪ್ರಕರಣ ಒಂದೇ ಅಲ್ಲ. ದೇಶದ ಹಲವು ರಾಜ್ಯಗಳಲ್ಲಿ ಅಂತರಜಾತಿ ವಿವಾಹ, ಪ್ರೀತಿ ಅಥವಾ ಸ್ವತಂತ್ರ ಆಯ್ಕೆ ಮಾಡಿಕೊಂಡ ಯುವಕರು ಮರ್ಯಾದೆ ಹತ್ಯೆ, ದೇವಾಲಯ ಪ್ರವೇಶ ನಿಷೇಧ, ಹಲ್ಲೆ, ಸಾಮಾಜಿಕ ದೌರ್ಜನ್ಯ, ಜಾತಿಯ ಕಾರಣಕ್ಕೆ ನಡೆಯುವ ಬಹಿಷ್ಕಾರದಂತಹ ಅಮಾನವೀಯಕ್ಕೆ ಒಳಗಾಗುತ್ತಿರುವ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗಿಯೇ ವರದಿಯಾಗುತ್ತಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಪ್ರಕಾರವೂ, ದಲಿತರ ಮೇಲಿನ ಅಪರಾಧಗಳು ಗಣನೀಯವಾಗಿ ಹೆಚ್ಚುತ್ತಿರುವುದು ಆತಂಕಕಾರಿ ಅಂಶವಾಗಿದೆ.</p>



<p><strong>ಸೆಲೆಬ್ರಿಟಿಗಳ ನಿಲುವು ಪ್ರಶ್ನೆಗೆ</strong><br>ಬಾಲಿವುಡ್ ನಟಿ ಜಾಹ್ನವಿ ಕಪೂರ್ &#8216;ಇದೊಂದು ಅನಾಗರಿಕ ಮತ್ತು ಅಮಾನವೀಯ ಘಟನೆಯಾಗಿದೆ.ಇನ್ನೂ ಸಹ ನಿಮಗೆ ಈ ಅಮಾನವೀಯ ಗುಂಪು ಹತ್ಯೆಯ ಬಗ್ಗೆ ತಿಳಿದಿಲ್ಲದಿದ್ದರೆ, ಅದರ ಬಗ್ಗೆ ಸುದ್ದಿಗಳನ್ನ , ವೀಡಿಯೋವನ್ನು ನೋಡಿ, ಅದರ ಬಗ್ಗೆ ಪ್ರಶ್ನೆಗಳನ್ನ ಕೇಳಿ.ಇದೆಲ್ಲದರ ಹೊರತಾಗಿಯೂ ನಿಮಗೆ ಇಂತಹ ಘಟನೆಯ ಬಗ್ಗೆ ಸ್ವಲ್ಪವೂ ಕೋಪ ಬರದಿದ್ದರೆ, ಇದನ್ನ ನಿಜವಾಗಿಯೂ ಬೂಟಾಟಿಕೆ ಅಂತಾನೆ ಹೇಳಬಹುದು.ನಮ್ಮ ಸ್ವಂತ ಸಹೋದರ ಸಹೋದರಿಯರನ್ನ ಬೇರೆ ದೇಶಗಳಲ್ಲಿ ಹತ್ಯೆ ಮಾಡಲಾಗುತ್ತಿದೆ ಮತ್ತು ನಾವು ಏನು ಸಹ ಆಗಿಲ್ಲ ಎಂಬಂತೆ ಇರುತ್ತೇವೆ,&#8217; ಅಂತ ನಟಿ ತಮ್ಮ ಪ್ರತಿಕ್ರಿಯೆಯಲ್ಲಿ ಕಟುವಾಗಿ ಟೀಕಿಸಿದ್ದಾರೆ.</p>



<p>ಮತ್ತೋರ್ವ ನಟಿ ಕಾಜಲ್ ಅಗರ್ವಾಲ್ ಸಹ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿ ತಮ್ಮ ಇನ್‌ಸ್ಟಾಗ್ರಾಮ್ ಕಥೆಯಲ್ಲಿ &#8216;ಎಲ್ಲರ ಕಣ್ಣುಗಳು ಈಗ ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಮೇಲೆ&#8217; ಎಂಬ ಅರ್ಥ ಕೊಡುವ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.</p>



<p>ನಟಿ ಮತ್ತು ಮಾಜಿ ಸಂಸದೆ ಜಯಪ್ರದಾ &#8216;ಈ ಕ್ರೂರ ಘಟನೆ ನನ್ನ ಮನಸ್ಸಿಗೆ ತುಂಬಾನೇ ನೋವುಂಟು ಮಾಡಿದೆ&#8217; ಅಂತ ಪೋಸ್ಟ್ ಮಾಡಿದ್ದಾರೆ.&#8217;ಇದು ಸಾಮಾನ್ಯವಾದ ಹಿಂಸೆಯಲ್ಲ, ಇದು ಗುಂಪು ಹತ್ಯೆ, ಇದು ಹಿಂದೂ ಧರ್ಮದ ಮೇಲಿನ ದಾಳಿ, ನಮ್ಮ ದೇವಾಲಯಗಳನ್ನು ಕೆಡವಲಾಗುತ್ತಿದೆ, ಮಹಿಳೆಯರ ಮೇಲೆ ದಾಳಿ ನಡೆಯುತ್ತಿದೆ, ನಾವು ಎಷ್ಟು ದಿನ ಮೌನವಾಗಿರಬೇಕು? ನಾವು ಜಾತ್ಯತೀತತೆಯ ಹೆಸರಿನಲ್ಲಿ ಮೌನವಾಗಿದ್ದೇವೆ, ನಾವು ನಮ್ಮ ಧ್ವನಿ ಎತ್ತಬೇಕು, ಅಲ್ಲಿನ ಜನರಿಗೆ ಸಹಾಯ ಮಾಡಬೇಕು&#8230; ನಾವೆಲ್ಲರೂ ಒಟ್ಟಾಗಿ ಅವರಿಗೆ ನ್ಯಾಯವನ್ನು ಪಡೆಯಲು ಪ್ರಯತ್ನಿಸಬೇಕು,&#8217; ಅಂತ ಕಾಮೆಂಟ್ ಮಾಡಿದ್ದಾರೆ.</p>



<p>ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಭಾವ ಹೊಂದಿರುವ ಚಿತ್ರರಂಗದ ತಾರೆಯರು ಅಂತರರಾಷ್ಟ್ರೀಯ ಘಟನೆಗಳಿಗೆ ತಕ್ಷಣ ಪ್ರತಿಕ್ರಿಯಿಸುವುದಾದರೂ, ದೇಶದೊಳಗಿನ ಜಾತಿ ಆಧಾರಿತ ಹಿಂಸಾಚಾರಗಳ ವಿಷಯದಲ್ಲಿ ಮೌನ ವಹಿಸುವುದು ಇಬ್ಬಗೆಯ ನೀತಿಯಂತೆ ಕಾಣುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಮಾತ್ರವಲ್ಲದೆ ಭಾರತದ ಮಾಧ್ಯಮಗಳು ಅಂತರರಾಷ್ಟ್ರೀಯ ವಿಚಾರಗಳ ಬಗ್ಗೆ ಸೆಲೆಬ್ರಿಟಿಗಳ ಅಭಿಪ್ರಾಯ ದಾಖಲಿಸುವುದರ ಜೊತೆಗೆ ಭಾರತದೊಳಗಿನ ಜಾತಿ ದೌರ್ಜನ್ಯ, ಅಸಹಿಷ್ಣುತೆ ಬಗ್ಗೆಯೂ ಕನ್ನಡಿ ಹಿಡಿಯಬೇಕು ಎಂದು ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗಿದೆ.</p>



<p>“ಮಾನವ ಹಕ್ಕುಗಳ ಹೋರಾಟ ಗಡಿಗಳಲ್ಲಿ ನಿಲ್ಲಬಾರದು. ಅಷ್ಟೇ ತೀವ್ರವಾಗಿ ದೇಶದೊಳಗಿನ ದೌರ್ಜನ್ಯಗಳನ್ನೂ ಖಂಡಿಸಬೇಕು” ಎಂದು ದಲಿತ ಸಂಘಟನೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.</p>



<p><strong>ಸಾಮಾಜಿಕ ಜವಾಬ್ದಾರಿ ಅಗತ್ಯ</strong><br>ವಿಶ್ಲೇಷಕರ ಅಭಿಪ್ರಾಯದಂತೆ, ಸೆಲೆಬ್ರಿಟಿಗಳ ಧ್ವನಿ ಕೇವಲ ರಾಜಕೀಯ ಅಥವಾ ಅಂತರರಾಷ್ಟ್ರೀಯ ವಿಚಾರಗಳಿಗೆ ಮಾತ್ರ ಸೀಮಿತವಾಗದೆ, ಭಾರತದೊಳಗಿನ ಜಾತಿ ವ್ಯವಸ್ಥೆ, ಅಸಮಾನತೆ ಮತ್ತು ಹಿಂಸಾಚಾರಗಳ ವಿರುದ್ಧವೂ ಸಮಾನವಾಗಿ ಎದ್ದೇಳಬೇಕು. ಇಲ್ಲವಾದಲ್ಲಿ ಮಾನವೀಯತೆ ಮತ್ತು ನ್ಯಾಯದ ಬಗ್ಗೆ ಅವರ ನಿಲುವು ಪ್ರಶ್ನೆಗೆ ಒಳಗಾಗುವುದು ಅನಿವಾರ್ಯ.</p>



<p>ಬಾಂಗ್ಲಾದೇಶದ ಗುಂಪು ಹತ್ಯೆ ಖಂಡನೆ ಅಗತ್ಯವೇ ಸರಿ. ಆದರೆ ಅದೇ ಸಮಯದಲ್ಲಿ, ಭಾರತದ ನೆಲದಲ್ಲಿ ನಡೆಯುತ್ತಿರುವ ಮರ್ಯಾದೆ ಹತ್ಯೆಗಳು ಮತ್ತು ಜಾತಿ ದೌರ್ಜನ್ಯಗಳ ವಿರುದ್ಧ ಮೌನ ಮುರಿಯುವ ಅಗತ್ಯವೂ ಅಷ್ಟೇ ತೀವ್ರವಾಗಿದೆ ಎಂಬುದು ಈಗ ಸಾರ್ವಜನಿಕ ಚರ್ಚೆಯ ಕೇಂದ್ರಬಿಂದು ಆಗಿದೆ.</p>
]]></content:encoded>
					
		
		
			</item>
		<item>
		<title>&#8217;45&#8217; ಚಿತ್ರ ವಿಮರ್ಶೆ: ಅರ್ಜುನ್ ಜನ್ಯ ಎಂಬ ಮಾಂತ್ರಿಕನ &#8216;ಮಾಸ್&#8217; ಅವತಾರ; ಉಪ್ಪಿ-ಶಿವಣ್ಣನ ಜುಗಲ್‌ಬಂದಿಗೆ ಸ್ಯಾಂಡಲ್‌ವುಡ್ ಫಿದಾ!</title>
		<link>https://peepalmedia.com/sandalwood-fida-for-uppi-shivannas-juggalbandi/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 25 Dec 2025 11:32:50 +0000</pubDate>
				<category><![CDATA[ಅಂಕಣ]]></category>
		<category><![CDATA[ಸಿನಿಮಾ]]></category>
		<guid isPermaLink="false">https://peepalmedia.com/?p=71187</guid>

					<description><![CDATA[&#8220;..ಒಂದೇ ಮಾತಲ್ಲಿ ಹೇಳಬೇಕೆಂದರೆ, &#8217;45&#8217; ಕೇವಲ ಸಿನಿಮಾ ಅಲ್ಲ; ಇದೊಂದು ಸ್ಟೈಲ್, ಫಿಲಾಸಫಿ ಮತ್ತು ಮಾಸ್ ಅಂಶಗಳ ಮಹಾಸಂಗಮ..&#8221; ಸಿನಿ ವಿಮರ್ಶಕ ನಿತಿನ್ ಕೃಷ್ಣ ಅವರ ಕಣ್ಣಲ್ಲಿ ಕಂಡ &#8220;45&#8221; ತಪ್ಪದೇ ಓದಿ ಸಿನೆಮಾ: 45ನಿರ್ದೇಶನ: ಅರ್ಜುನ್ ಜನ್ಯತಾರಾಗಣ: ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ. ಶೆಟ್ಟಿ, ಕೌಸ್ತುಭ ಮಣಿ. ಕನ್ನಡ ಚಿತ್ರರಂಗದಲ್ಲಿ (KFI) ವಿಪರೀತ ಕುತೂಹಲ ಕೆರಳಿಸಿದ್ದ ಸಿನಿಮಾ &#8217;45&#8217;. ಕರುನಾಡ ಚಕ್ರವರ್ತಿ ಶಿವಣ್ಣ, ರಿಯಲ್ ಸ್ಟಾರ್ ಉಪ್ಪಿ ಮತ್ತು ಮಾಡರ್ನ್ ಮ್ಯಾವರಿಕ್ ರಾಜ್ ಬಿ. ಶೆಟ್ಟಿ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>&#8220;..ಒಂದೇ ಮಾತಲ್ಲಿ ಹೇಳಬೇಕೆಂದರೆ, &#8217;45&#8217; ಕೇವಲ ಸಿನಿಮಾ ಅಲ್ಲ; ಇದೊಂದು ಸ್ಟೈಲ್, ಫಿಲಾಸಫಿ ಮತ್ತು ಮಾಸ್ ಅಂಶಗಳ ಮಹಾಸಂಗಮ..&#8221; ಸಿನಿ ವಿಮರ್ಶಕ ನಿತಿನ್ ಕೃಷ್ಣ ಅವರ ಕಣ್ಣಲ್ಲಿ ಕಂಡ &#8220;45&#8221; ತಪ್ಪದೇ ಓದಿ</p>
</blockquote>



<p>ಸಿನೆಮಾ: 45<br>ನಿರ್ದೇಶನ: ಅರ್ಜುನ್ ಜನ್ಯ<br>ತಾರಾಗಣ: ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ. ಶೆಟ್ಟಿ, ಕೌಸ್ತುಭ ಮಣಿ.</p>



<p>ಕನ್ನಡ ಚಿತ್ರರಂಗದಲ್ಲಿ (KFI) ವಿಪರೀತ ಕುತೂಹಲ ಕೆರಳಿಸಿದ್ದ ಸಿನಿಮಾ &#8217;45&#8217;. ಕರುನಾಡ ಚಕ್ರವರ್ತಿ ಶಿವಣ್ಣ, ರಿಯಲ್ ಸ್ಟಾರ್ ಉಪ್ಪಿ ಮತ್ತು ಮಾಡರ್ನ್ ಮ್ಯಾವರಿಕ್ ರಾಜ್ ಬಿ. ಶೆಟ್ಟಿ ಒಂದೇ ಫ್ರೇಮ್‌ನಲ್ಲಿ ಬರುತ್ತಾರೆ ಎಂದಾಗ ಸಹಜವಾಗಿಯೇ ನಿರೀಕ್ಷೆ ಮುಗಿಲು ಮುಟ್ಟಿತ್ತು. ಸಂಗೀತ ನಿರ್ದೇಶಕನಾಗಿ ಗೆದ್ದಿದ್ದ ಅರ್ಜುನ್ ಜನ್ಯ, ನಿರ್ದೇಶಕನಾಗಿ ಆ &#8216;ಮ್ಯಾಜಿಕ್&#8217; ಉಳಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.</p>



<p>ಒಂದೇ ಮಾತಲ್ಲಿ ಹೇಳಬೇಕೆಂದರೆ, &#8217;45&#8217; ಕೇವಲ ಸಿನಿಮಾ ಅಲ್ಲ; ಇದೊಂದು ಸ್ಟೈಲ್, ಫಿಲಾಸಫಿ ಮತ್ತು ಮಾಸ್ ಅಂಶಗಳ ಮಹಾಸಂಗಮ.</p>



<p>ಕ್ಲೈಮ್ಯಾಕ್ಸ್ ಹಿಂದಿನ ಆ ಸಣ್ಣ ಎಡವಟ್ಟು ಬಿಟ್ಟರೆ, ಇದೊಂದು ಪಕ್ಕಾ ಪೈಸಾ ವಸೂಲ್ ಎಂಟರ್‌ಟೈನರ್!</p>



<p><strong>ಕಥಾವಸ್ತು: ಹೇಳಲು ಸಿಂಪಲ್ &#8211; ಆದರೂ ನೋಡಲು &#8220;ಸ್ಮಾರ್ಟ್&#8221; ಮತ್ತು &#8220;ಕಾಂಪ್ಲಿಕೇಟೆಡ್&#8221; :</strong><br>ಐಟಿ ಟೆಕ್ಕಿ ವಿನಯ್ (ರಾಜ್ ಬಿ. ಶೆಟ್ಟಿ) – ಒಂದು ಸಾಮಾನ್ಯ ಮಧ್ಯಮವರ್ಗದ ಯುವಕ. ಅವನ ಜೀವನವೂ ಅವನಂತೆ, ‘ಕೋಡ್’ನಂತೆ, ನೇರವಾಗಿಯೇ ಹೋಗುತ್ತಿರೋದರ ನಡುವೆ ಸಂಭವಿಸುವ ಒಂದು ಸಣ್ಣ ಅಪಘಾತ ಅವನ ಬದುಕಿನ ಸೂತ್ರವನ್ನೇ ಬದಲಿಸುತ್ತದೆ.</p>



<p>ಈ ಒಂದು &#8216;ಸಣ್ಣ&#8217; ತಪ್ಪು, ಅವನ ಜೀವಕ್ಕೆ, ಆತ್ಮಕ್ಕೆ, ಅದಕ್ಕಿಂತಲೂ ಹೆಚ್ಚು ಅವನ ಬುದ್ಧಿ &#8211; ನೆಮ್ಮದಿಗೆ ಎಷ್ಟು ದೊಡ್ಡ ಬೆಲೆ ಕಟ್ಟಬೇಕಾಗಿ ಬರುತ್ತದೆ ಎಂಬುದೇ ‘45’ ಚಿತ್ರದ ನಾಭಿ.</p>



<p>ಕಥೆ ಸರಳವಾದರೂ ಅದನ್ನು ಪ್ರಸ್ತುತಪಡಿಸುವ ರೀತಿ ಅತ್ಯಂತ ವಿಭಿನ್ನ. ಉಪೇಂದ್ರರ ಥೇಟ್ ಶೈಲಿಯ ನೆನಪನ್ನು ತರುವಷ್ಟು ಕ್ಯಾಚಿ ಸ್ಕ್ರೀನ್‌ಪ್ಲೇ, ತತ್ತ್ವ ಮತ್ತು ತಮಾಷೆಯ ಸಮನ್ವಯ ಈ ಚಿತ್ರದಲ್ಲಿ ಗಟ್ಟಿಯಾಗಿ ಕಂಡುಬರುತ್ತದೆ.</p>



<p>ರಾಯಪ್ಪನ ಪಾತ್ರದರಿ ಉಪೇಂದ್ರ ಅವರ ಕೆಂಗಣ್ಣಿಗೆ, ಟೆಕ್ಕಿ ವಿನಯ್ ಏಕೆ ಗುರಿಯಾದ? ರಾಯಪ್ಪನಿಂಗ ತಪ್ಪಿಸಿಕೊಳ್ಳಲು ಟೆಕ್ಕಿ ವಿನಯ್ ಏನೆಲ್ಲಾ ಮಾಡುತ್ತಾನೆ!?<br>ಯಾರು ಈ ಶಿವಪ್ಪ (ಶಿವರಾಜ್ ಕುಮಾರ್)!? ಈ ಕತೆಗೂ ಗರುಡ ಪುರಾಣಕ್ಕೂ ಏನು ಸಂಬಂಧ!?</p>



<p>ಈ ಎಲ್ಲ ಪ್ರಶ್ನೆಗಳೂ ಪ್ರೇಕ್ಷಕರ ಮೈ ನೆವಿರೇಳುವಷ್ಟು ಕುತೂಹಲ ಮೂಡಿಸುತ್ತವೆ, ಆದರೆ ಅವಕ್ಕೆ ಉತ್ತರ ಸಿಗುವುದು ಸಿನಿಮಾ ಹಾಲಿನ ಒಳಗೆ ಮಾತ್ರ!</p>



<p><strong>ಕ್ಯಾಪ್ಟನ್ ಆಫ್ ದಿ ಶಿಪ್: ಅರ್ಜುನ್ ಜನ್ಯ</strong><br>ಇದು ಅರ್ಜುನ್ ಜನ್ಯ ಅವರ ಮೊದಲ ನಿರ್ದೇಶನದ ಸಿನಿಮಾ ಎಂದು ಯಾರೂ ಊಹಿಸಲು ಕೂಡ ಸಾಧ್ಯವಿಲ್ಲ. ಸಂಗೀತ ನಿರ್ದೇಶನದಿಂದ ಆಕ್ಷನ್ ಕಟ್ ಹೇಳಲು ಇಳಿದಿರುವ ಜನ್ಯ, ಈ ಚಿತ್ರದ &#8220;ರಿಯಲ್ ಹೀರೋ&#8221;. ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ಸಂಗೀತ ಮತ್ತು ಹಿನ್ನೆಲೆ ಸಂಗೀತ &#8211; ಹೀಗೆ ಎಲ್ಲವನ್ನೂ ಹೆಗಲ ಮೇಲೆ ಹೊತ್ತುಕೊಂಡಿರುವ ಅವರು, ಮೂವರು ಘಟಾನುಘಟಿ ಸ್ಟಾರ್‌ಗಳ ಇಮೇಜ್ ಅನ್ನು ಬ್ಯಾಲೆನ್ಸ್ ಮಾಡಿರುವ ರೀತಿ ನಿಜಕ್ಕೂ ಅದ್ಭುತ.</p>



<p>ಪ್ರತಿ ಸನ್ನಿವೇಶದಲ್ಲೂ ಅವರ ಸೆನ್ಸ್ ಆಫ್ ಟೈಮಿಂಗ್, ಸೌಂಡ್‌ಸ್ಕೇಪ್‌ಗಳ ಮ್ಯಾಜಿಕ್, ಮತ್ತು ತಾತ್ವಿಕ ಡೈಲಾಗ್‌ಗಳ ಗಾಢತೆ – ಎಲ್ಲವೂ ಆಳವಾಗಿ ತಟ್ಟುತ್ತದೆ.</p>



<p><strong>ನಿರ್ಮಾಪಕ ರಾಮೇಶ್ ರೆಡ್ಡಿಯ ವೈಭವದ ನಿರ್ಮಾಣ:</strong><br>ಸೂರಜ್ ಪ್ರೊಡಕ್ಷನ್‌ನ ಅಡಿಯಲ್ಲಿ ರಾಮೇಶ್ ರೆಡ್ಡಿ ನಿರ್ಮಿಸಿರುವ ಈ ಸಿನಿಮಾ, ಪ್ರತಿ ಫ್ರೇಮ್ನಲ್ಲೂ ಆರ್ಥಿಕ ಶಕ್ತಿ ಮತ್ತು ಕಲಾತ್ಮಕ ನೈಪುಣ್ಯ ಎದುರಾಗುತ್ತದೆ.</p>



<p>ಹೈಸ್ಕೇಲ್ ಆಕ್ಷನ್ ಸೀಕ್ವೆನ್ಸ್‌ಗಳಿಂದ ಹಿಡಿದು, ಕ್ಲಾಸ್ ಮತ್ತು ವೈಭವದ ಸೆಟ್ ಡಿಸೈನ್ಗಳವರೆಗೆ – ಎಲ್ಲವೂ ಅಚ್ಚಳಿಯಾದ ಉತ್ಪಾದನಾ ಮೌಲ್ಯಗಳೊಂದಿಗೆ ಮೂಡಿ ಬಂದಿವೆ.</p>



<p>ಶಿವಣ್ಣ ಮತ್ತು ಉಪ್ಪಿ ಮುಖಾಮುಖಿಯಾಗುವ ಸನ್ನಿವೇಶಗಳಲ್ಲಿ ಲೈಟಿಂಗ್ ಮತ್ತು ಸೆಟ್‌ನ ಡ್ರಾಮಾಟಿಕ್ ಮೂಡ್ ಸಿನಿಮಾ ನೋಡುತ್ತಿರುವ ಪ್ರೇಕ್ಷಕರನ್ನು ಮೆಸ್ಮೆರೈಜ್ ಮಾಡುತ್ತದೆ.</p>



<p>ರಾಮೇಶ್ ರೆಡ್ಡಿ ಅವರ ನಿರ್ಮಾಣ ತಂತ್ರದಲ್ಲಿ ಖರ್ಚು ಕಾಣುವುದಿಲ್ಲ, ಕಲೆ ಕಾಣುತ್ತದೆ.</p>



<p><strong>ಅಭಿನಯ: ದಿಗ್ಗಜರ ದರ್ಬಾರ್</strong><br><strong>ಉಪೇಂದ್ರ: ರಿಯಲ್ ಶೋ ಸ್ಟೀಲರ್</strong><br>ನೇರವಾಗಿ ಹೇಳಬೇಕೆಂದರೆ, ಇಡೀ ಸಿನಿಮಾವನ್ನು ಆವರಿಸಿಕೊಳ್ಳುವುದು ರಿಯಲ್ ಸ್ಟಾರ್ ಉಪೇಂದ್ರ!</p>



<p>ಶಿವಣ್ಣನಂತಹ ಲೆಜೆಂಡ್ ಪಕ್ಕದಲ್ಲಿ ನಿಂತು ಸ್ಕ್ರೀನ್ ಪ್ರೆಸೆನ್ಸ್‌ನಲ್ಲಿ ಡಾಮಿನೇಟ್ ಮಾಡುವುದು ಸುಲಭದ ಮಾತಲ್ಲ. &#8216;ಜೈಲರ್&#8217; ಸಿನಿಮಾದಲ್ಲಿ ರಜಿನಿಕಾಂತ್ ಎದುರೇ ಸ್ಕ್ರೀನ್ ಡಾಮಿನೆಟ್ ಮಾಡಿ ನಿಂತು ನಟಿಸಿ ತೋರಿಸಿದವರು ಶಿವಣ್ಣ,</p>



<p>ಆದರೆ ಇಲ್ಲಿ &#8216;ರಾಯಪ್ಪ&#8217;ನಾಗಿ ಉಪ್ಪಿ ಅಕ್ಷರಶಃ ಅಬ್ಬರಿಸಿದ್ದಾರೆ. ಅವರ ಎಂಟ್ರಿ ಸೀನ್, &#8216;ರೋಸಿ&#8217; ನಾಯಿಯ ಜೊತೆಗಿನ ದೃಶ್ಯಗಳು, ತಮಿಳು ನಟರು ಜಾಫರ್ ಸಾದಿಕ್ ಮತ್ತು ಮೊಟ್ಟ ರಾಜೇಂದ್ರನ್&nbsp; ಜೊತೆಗಿನ ಕಾಂಬಿನೇಷನ್ ಸೀನ್‌ಗಳು ಥಿಯೇಟರ್‌ನಲ್ಲಿ ಶಿಳ್ಳೆ ಗಿಟ್ಟಿಸುತ್ತವೆ. &#8220;ರಿಯಲ್ ಸ್ಟಾರ್&#8221; ಯಾರು ಎಂಬುದನ್ನು ಉಪ್ಪಿ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.</p>



<p><strong>ರಾಜ್ ಬಿ. ಶೆಟ್ಟಿ: ಕಥೆಯ ಬೆನ್ನೆಲುಬು</strong><br>&#8216;ವಿನಯ್&#8217; ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಜ್ ಬಿ. ಶೆಟ್ಟಿ ಚಿತ್ರದ ಕಥೆಯ ಕೇಂದ್ರಬಿಂದು. ಇಡೀ ಕಥೆ ಸಾಗುವುದೇ ಇವರ ಸುತ್ತ. ಹಿರಿಯ ನಟರ ಎದುರು ನಿಂತು, ತಮ್ಮ ಪಾತ್ರದ ತೂಕವನ್ನು ಕಾಪಾಡಿಕೊಳ್ಳುವಲ್ಲಿ ರಾಜ್ ಗೆದ್ದಿದ್ದಾರೆ.</p>



<p><strong>ಇಲ್ಲಿ ರಾಜ್ ಬಿ. ಶೆಟ್ಟಿ ಪ್ರತಿ ಪ್ರೇಕ್ಷಕನ ದೃಷ್ಟಿಕೋನ.</strong><br>ಇಡೀ ಸಿನಿಮಾ ಭಯಬೀತನಾಗಿ ಓಡುವ ರಾಜ್. ಬಿ. ತನ್ನ ಪ್ರೇಯಸಿಗೋಸ್ಕರ ಮಾಡುವ ಒಂದು ಫೈಟ್,<br>&#8216;ಗರುಡ ಗಮನ ವೃಷಭ ವಾಹನ&#8217; ಸಿನಿಮಾದ ರೆಫರೆನ್ಸ್ ಮತ್ತು ಬಿಜಿಎಂ (BGM) ಬರುವ ಆ ಸೋಲೋ ಫೈಟ್ ಸೀನ್ ಚಿತ್ರದ ಪ್ರಮುಖ ಹೈಲೈಟ್‌ಗಳಲ್ಲಿ ಒಂದು.</p>



<p><strong>ಶಿವಣ್ಣ: ದಿ &#8216;ರಿಯಲ್&#8217; ಪ್ರೊಟ್ಯಾಗನಿಸ್ಟ್</strong></p>



<p>ಶಿವಣ್ಣ ಎಂದರೆ ಲಾಂಗು ಮಚ್ಚು ಎಂದುಕೊಂಡವರಿಗೆ ಇಲ್ಲಿ ಸರ್ಪ್ರೈಸ್ ಇದೆ. ಇಲ್ಲಿ ಅವರು ಫೆರೋಶಿಯಸ್ ಆಗಿಲ್ಲ, ಬದಲಾಗಿ ಫಿಲಾಸಫಿಕಲ್ ಆಗಿದ್ದಾರೆ! ಶಾಂತವಾಗಿ, ಬೌದ್ಧಿಕವಾಗಿ (Intellectual) ಯೋಚಿಸುವ ಶಿವಣ್ಣನ ಪಾತ್ರವೇ ಕಥೆಯ ನಿಜವಾದ ಆತ್ಮ. ಉಪ್ಪಿಯ ಆರ್ಭಟಕ್ಕೆ ಶಿವಣ್ಣನ ಈ ಕ್ಲಾಸಿ ಮತ್ತು ಆ ಕ್ಲಾಸ್ ಒಳಗಿನ ಮಾಸ್ ಲುಕ್ ಸರಿಯಾದ ಕೌಂಟರ್ ಕೊಡುತ್ತದೆ.</p>



<p>ರಾಜ್ ಬಿ ಮತ್ತು ಶಿವಣ್ಣನ ಕಂಬಿನೆಷನ್ ಸೀನ್ಸ್, ಉಪ್ಪಿ ಶಿವಣ್ಣನ ಮುಖಮುಖಿ, ಅದ್ಭುತವಾಗಿ ಮೂಡಿಬಂದಿದೆ.</p>



<p>ಇಷ್ಟೇ ಅಲ್ಲದೆ, ಪ್ರೀ ಕ್ಲೈಮ್ಯಾಕ್ಸ್ ನಲ್ಲಿನ ಶಿವಣ್ಣನ ರುಧ್ರತಂಡವ, ಹೊಸ ಶಿವಣ್ಣನನ್ನು ಪರಿಚಯಿಸುತ್ತದೆ!</p>



<p><strong>ಟೆಕ್ನಿಕಲ್ ಮತ್ತು ನಾಸ್ಟಾಲ್ಜಿಯಾ</strong><br>ಚಿತ್ರದ ತೆರೆ ಹಿಂದಿನ ಹೀರೋಗಳು ಎಂದರೆ ಸಿನಿಮಾಟೋಗ್ರಫರ್ ಸತ್ಯ ಹೆಗ್ಡೆ ಮತ್ತು ಪೋಸ್ಟ್ ಪ್ರೊಡಕ್ಷನ್ ಕಲರ್ ಗ್ರೇಡಿಂಗ್ ನಡೆಸಿದ ಪತಾಜ್ ಕಲರ್ ಬಾರ್ ಸಂಸ್ಥೆ. ಕಲರ್ ಗ್ರೇಡಿಂಗ್ ದೇಶದ ಅತ್ಯುತ್ತಮ ಸಿನಿಮಾಗಳಿಗೆ ಸೆಡ್ಡು ಹೊಡೆಯುವಂತಿದೆ. ಉಪ್ಪಿ ಬರುವ ದೃಶ್ಯಗಳಿಗೆ ಒಂದು ಥೀಮ್ ಕಲರ್ ಇಟ್ಟು, ಇದಕ್ಕೆ ವಿತರೆಕದ ಥೀಮ್ ಶಿವಣ್ಣನಿಗಿಟ್ಟು, ಇಬ್ಬರು ಮುಖಾಮುಖಿಯಾದಾಗ ಆ ಇಬ್ಬರ ಥೀಮ್&#8217;ಗಳನ್ನು ಸಾಂಬಾಲಿಸಿ ಮರ್ಜ್ ಮಾಡಿರುವ ರೀತಿ ಬ್ರಿಲಿಯೆಂಟ್!</p>



<p>ಇನ್ನು &#8216;ಓಂ&#8217; ಸಿನಿಮಾದ ರೆಫರೆನ್ಸ್, ಶಿವಣ್ಣ ಮತ್ತು ರಾಜ್ ಬಿ ಶೆಟ್ಟಿ ನಡುವೆ ಬರುವ &#8216;ಲಾಂಗ್&#8217; ಕುರಿತಾದ ಮಾತುಕತೆಗಳು, ಮತ್ತು ಶಿವಣ್ಣ-ಉಪ್ಪಿ ಮುಖಾಮುಖಿಯಾಗುವ ದೃಶ್ಯಗಳು ಅಭಿಮಾನಿಗಳಿಗೆ ಹಬ್ಬವೋ ಹಬ್ಬ!</p>



<p><strong>ಕಾಸ್ಟ್ಯೂಮ್ ಡಿಸೈನ್ – ಪುಟ್ಟರಾಜು ಅವರ ಕಲೆ :</strong><br>ಉಪ್ಪಿಯ ಲುಕ್ ಬಗ್ಗೆ ವಿಶೇಷವಾಗಿ ಹೇಳಲೇಬೇಕು. ಕಾಸ್ಟ್ಯೂಮ್ ಡಿಸೈನರ್ ಪುಟ್ಟರಾಜು ಅವರು ಮಾಡಿದ ಕೆಲಸ ಚಿತ್ರದ ಸ್ಟೈಲ್ ಫ್ಯಾಕ್ಟರ್‌ನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ.</p>



<p>ರಾಯಪ್ಪನ ಉಗ್ರ ವ್ಯಕ್ತಿತ್ವಕ್ಕೆ ತಕ್ಕ ರೀತಿಯ ಲೆದರ್ ಜಾಕೆಟ್, ಮೆಟಾಲಿಕ್ ಆಕ್ಸೆಸರಿ, ಮತ್ತು ಕ್ಲಾಸಿಕ್ ಸನ್‌ಗ್ಲಾಸ್‌ಗಳ ಕಂಬಿನೇಷನ್ ಉಪ್ಪಿಯನ್ನು “ಅರ್ಬನ್ ಗ್ಯಾಂಗ್&#8217;ಸ್ಟರ್ ” ಆಗಿ ತೋರಿಸುತ್ತದೆ.</p>



<p>ಶಿವಣ್ಣನ ಮ್ಯೂಟೆಡ್ ಕೋರಿಯನ್ ಜೊತೆಗಿನ ಟ್ರೇಡಿಷನಲ್ ಅಟ್ಟೈರ್ ಹಾಗೂ ರಾಜ್ ಬಿ. ಶೆಟ್ಟಿಯ ಫಾರ್ಮಲ್ಸ್ ಪಾತ್ರದ ಕುತೂಹಲವನ್ನು ಬಲಪಡಿಸುತ್ತವೆ. ಎಲ್ಲ ಪಾತ್ರಗಳ ಉಡುಪಿನಲ್ಲಿ ಒಂದು ಕಥೆ ಇದೆ ಎಂದರೆ ಅದು ಪುಟ್ಟರಾಜು ಅವರ ವಿನ್ಯಾಸ ಮತ್ತು ಅರ್ಜುನ್ ಜನ್ಯ ರವರ ಮಾಡರ್ನ್ ಟಚ್ ನೀಡುವ ಬಲವಾದ ಕಲಾತ್ಮಕ ದೃಷ್ಟಿಯಿಂದಲೇ ಸರಿ.</p>



<p><strong>ಮೈನಸ್ ಪಾಯಿಂಟ್ ಯಾವುದು?</strong><br>ಸಿನಿಮಾ ಅದ್ಭುತವಾಗಿ ಸಾಗುವಾಗ ಸ್ಪೀಡ್ ಬ್ರೇಕರ್ ಆಗುವುದು &#8220;ಪ್ರಿ-ಕ್ಲೈಮ್ಯಾಕ್ಸ್&#8221; (Pre-climax). ಕೊನೆಯ 15-20 ನಿಮಿಷಗಳ ಆ ಫೈಟ್ ದೃಶ್ಯ ಸಾಮಾನ್ಯ ಪ್ರೇಕ್ಷಕನ ಸಹನೆ ಪರೀಕ್ಷಿಸುತ್ತದೆ. ಇಲ್ಲಿನ ವಿಎಫ್‌ಎಕ್ಸ್ (VFX) ಕೆಲಸ ತುಂಬಾನೇ ಕಳಪೆಯಾಗಿದೆ ಮತ್ತು ಅನಗತ್ಯವಾಗಿ ಎಳೆಯಲಾಗಿದೆ ಎನಿಸುತ್ತದೆ. ಶಿವಣ್ಣನ ಅಭಿಮಾನಿಗಳಿಗೆ ಈ ಫೈಟ್ ಇಷ್ಟವಾಗಬಹುದು, ಆದರೆ ಕಾಮನ್ ಆಡಿಯನ್ಸ್‌ಗೆ ಇದು ಸಿನಿಮಾದ &#8216;ಲ್ಯಾಗ್&#8217; ಎನಿಸುವುದು ಸುಳ್ಳಲ್ಲ.</p>



<p><strong>ಒಟ್ಟಾರೆ</strong>:<br>ಆ ಕೊನೆಯ 20 ನಿಮಿಷದ ಪ್ರಿ-ಕ್ಲೈಮ್ಯಾಕ್ಸ್ ಅನ್ನು ಸ್ವಲ್ಪ ತಿದ್ದಿದ್ದರೆ, &#8217;45&#8217; ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತ್ಯುತ್ತಮ ಕಮರ್ಷಿಯಲ್ ಮಲ್ಟಿ-ಸ್ಟಾರರ್ ಸಿನಿಮಾ ಆಗಿರುತ್ತಿತ್ತು. ಆದರೂ ಚಿಂತೆಯಿಲ್ಲ, ಉಪ್ಪಿಯ ಸ್ಟೈಲ್, ರಗಡ್ ಲುಕ್, ಶಿವಣ್ಣನ ಕ್ಲಾಸ್ ಜೊತೆಗಿನ ಮಾಸ್ ಮಿಶ್ರಣ ಮತ್ತು ರಾಜ್ ಬಿ. ಶೆಟ್ಟಿಯ ಕನ್ಫ್ಯೂಸ್ಡ್ ಫಿಲೊಸೋಫಿಕಲ್ ಆಂಗಲ್ ಹಾಗೂ ಅರ್ಜುನ್ ಜನ್ಯರ ಚೊಚ್ಚಲ ನಿರ್ದೇಶನದ ತಾಕತ್ತಿಗಾಗಿ ಈ ಸಿನಿಮಾವನ್ನು ಮಿಸ್ ಮಾಡದೇ ನೋಡಲೇಬೇಕು.</p>



<p><strong>ಒಟ್ಟು ರೇಟಿಂಗ್ :- 3.75 &#8211; 4 out of 5 ಸ್ಟಾರ್ಸ್</strong></p>
]]></content:encoded>
					
		
		
			</item>
		<item>
		<title>17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಪ್ರಕಾಶ್ ರಾಜ್ ರಾಯಭಾರಿ</title>
		<link>https://peepalmedia.com/prakash-raj-is-the-ambassador-for-the-17th-bangalore-international-film-festival/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 24 Dec 2025 07:03:38 +0000</pubDate>
				<category><![CDATA[ವಿಶೇಷ]]></category>
		<category><![CDATA[ಸಿನಿಮಾ]]></category>
		<guid isPermaLink="false">https://peepalmedia.com/?p=71143</guid>

					<description><![CDATA[ಜನವರಿ 29ರಿಂದ ಫೆಬ್ರವರಿ 6ರವರೆಗೆ ಉತ್ಸವ – ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್‌ನಲ್ಲಿ ಉದ್ಘಾಟನೆ ಬೆಂಗಳೂರು: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಪ್ರಕಾಶ್ ರಾಜ್ ಅವರನ್ನು ರಾಯಭಾರಿಯಾಗಿ (Brand Ambassador) ಆಯ್ಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ತಮ್ಮ ನೇತೃತ್ವದಲ್ಲಿ ನಡೆದ ಚಲನಚಿತ್ರೋತ್ಸವದ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಸಿಎಂ, “ಸಮಿತಿ ತೆಗೆದುಕೊಂಡ ನಿರ್ಧಾರದಂತೆ ಪ್ರಕಾಶ್ ರಾಜ್ ಅವರನ್ನು ರಾಯಭಾರಿಯಾಗಿ ನೇಮಿಸಲಾಗಿದೆ. ಈ ಬಾರಿ ಉತ್ಸವವನ್ನು ನಾನು ಸ್ವತಃ ಉದ್ಘಾಟನೆ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>ಜನವರಿ 29ರಿಂದ ಫೆಬ್ರವರಿ 6ರವರೆಗೆ ಉತ್ಸವ – ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್‌ನಲ್ಲಿ ಉದ್ಘಾಟನೆ</p>
</blockquote>



<p>ಬೆಂಗಳೂರು: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಪ್ರಕಾಶ್ ರಾಜ್ ಅವರನ್ನು ರಾಯಭಾರಿಯಾಗಿ (Brand Ambassador) ಆಯ್ಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.</p>



<p>ವಿಧಾನಸೌಧದಲ್ಲಿ ತಮ್ಮ ನೇತೃತ್ವದಲ್ಲಿ ನಡೆದ ಚಲನಚಿತ್ರೋತ್ಸವದ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಸಿಎಂ, “ಸಮಿತಿ ತೆಗೆದುಕೊಂಡ ನಿರ್ಧಾರದಂತೆ ಪ್ರಕಾಶ್ ರಾಜ್ ಅವರನ್ನು ರಾಯಭಾರಿಯಾಗಿ ನೇಮಿಸಲಾಗಿದೆ. ಈ ಬಾರಿ ಉತ್ಸವವನ್ನು ನಾನು ಸ್ವತಃ ಉದ್ಘಾಟನೆ ಮಾಡುತ್ತೇನೆ” ಎಂದು ಘೋಷಿಸಿದರು.</p>



<p>ಜನವರಿ 29ರಿಂದ ಫೆಬ್ರವರಿ 6ರವರೆಗೆ ನಡೆಯಲಿರುವ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ವಿಧಾನಸೌಧದ ಮುಂಭಾಗದ ಭವ್ಯ ಮೆಟ್ಟಿಲುಗಳ ಮೇಲೆ ಉದ್ಘಾಟನೆಯಾಗಲಿದೆ. ಈ ಬಾರಿ ಮಹಿಳಾ ಸಬಲೀಕರಣವೇ ಚಿತ್ರೋತ್ಸವದ ಮುಖ್ಯ ಥೀಮ್ ಆಗಿರಲಿದೆ. ಥೀಮ್ ಅನ್ನು ಇದೇ ದಿನ ಸಂಜೆ ಬಿಡುಗಡೆ ಮಾಡುವುದಾಗಿ ಸಿಎಂ ತಿಳಿಸಿದರು.</p>



<p>ಉತ್ಸವದಲ್ಲಿ 60ಕ್ಕೂ ಹೆಚ್ಚು ದೇಶಗಳ 200 ಚಲನಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ಒಟ್ಟು 400ಕ್ಕೂ ಹೆಚ್ಚು ಪ್ರದರ್ಶನಗಳು ನಡೆಯಲಿವೆ. ರಾಜಾಜಿನಗರದ ಲುಲು ಮಾಲ್‌ನಲ್ಲಿರುವ ಸಿನಿಪೊಲಿಸ್‌ನ 11 ಸ್ಕ್ರೀನ್‌ಗಳಲ್ಲಿ ಪ್ರಮುಖ ಪ್ರದರ್ಶನಗಳು ನಡೆಯಲಿವೆ. ಜೊತೆಗೆ ಡಾ. ರಾಜ್‌ಕುಮಾರ್ ಭವನ, ಕಲಾವಿದರ ಸಂಘ, ಚಾಮರಾಜಪೇಟೆ ಹಾಗೂ ಬನಶಂಕರಿಯ ಸುಚಿತ್ರ ಫಿಲಂ ಸೊಸೈಟಿಯಲ್ಲೂ ಚಿತ್ರ ಪ್ರದರ್ಶನ ಇರಲಿದೆ.</p>



<p>ಈ ಬಾರಿ ಆಸ್ಕರ್ ಪ್ರಶಸ್ತಿಗಳಿಗೆ ಶಾರ್ಟ್‌ಲಿಸ್ಟ್ ಆಗಿರುವ ವಿವಿಧ ದೇಶಗಳ ಚಿತ್ರಗಳು ಸಹ ಉತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಕಾನ್ಸ್, ಬರ್ಲಿನ್, ವೆನಿಸ್, ಟೊರಂಟೋ, ರೋಟರ್‌ಡ್ಯಾಮ್, ಬುಸಾನ್ ಸೇರಿದಂತೆ ವಿಶ್ವದ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಹಾಗೂ ಮೆಚ್ಚುಗೆ ಪಡೆದ ಚಲನಚಿತ್ರಗಳು ಒಂದೇ ವೇದಿಕೆಯಲ್ಲಿ ಸಿನಿಮಾ ಪ್ರೇಕ್ಷಕರಿಗೆ ಲಭ್ಯವಾಗಲಿವೆ.</p>



<p>ಇತ್ತೀಚೆಗೆ ಅಗಲಿದ ಧರ್ಮೇಂದ್ರ, ಸರೋಜಾದೇವಿ, ಉಮೇಶ್, ಶಾಜಿ ಎನ್. ಕರುಣ್, ರಘು ಸೇರಿದಂತೆ ಹಲವು ಗಣ್ಯರ ಸ್ಮರಣಾರ್ಥವಾಗಿ ವಿಶೇಷ ಶ್ರದ್ಧಾಂಜಲಿ ಹಾಗೂ ರೆಟ್ರೋಸ್ಪೆಕ್ಟಿವ್ ವಿಭಾಗದಲ್ಲಿ ಚಿತ್ರ ಪ್ರದರ್ಶನ ನಡೆಯಲಿದೆ. ಪೋಲಿಷ್ ಕಲ್ಚರಲ್ ಸೆಂಟರ್ ಸಹಯೋಗದಲ್ಲಿ ಖ್ಯಾತ ನಿರ್ದೇಶಕ ಅಂದ್ರೆ ವಾಜ್ದಾ ಅವರ ಶತಮಾನೋತ್ಸವದ ಅಂಗವಾಗಿ ವಿಶೇಷ ಪುನರಾವಲೋಕನ ಆಯೋಜಿಸಲಾಗಿದೆ. ಜೊತೆಗೆ ಆಫ್ರಿಕಾ ಸಿನಿಮಾಗಳ ಇತಿಹಾಸ ದಾಖಲಿಸುವ ವಿಶೇಷ ಸರಣಿಯೂ ಪ್ರದರ್ಶನಗೊಳ್ಳಲಿದೆ.</p>



<p>ಏಷಿಯನ್, ಭಾರತೀಯ ಮತ್ತು ಕನ್ನಡ ಸಿನಿಮಾ ಸ್ಪರ್ಧಾತ್ಮಕ ವಿಭಾಗಗಳಿಗೆ ಇದುವರೆಗೆ 110ಕ್ಕೂ ಹೆಚ್ಚು ಚಿತ್ರಗಳು ಸಲ್ಲಿಕೆಯಾಗಿದ್ದು, ಡಿಸೆಂಬರ್ 31, 2025 ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವಾಗಿದೆ.</p>



<p>ಚಿತ್ರೋತ್ಸವದ ಅಕಾಡೆಮಿಕ್ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಗಳು ಭಾಗವಹಿಸಲು ಪ್ರಧಾನ ಕೇಂದ್ರದಲ್ಲಿ ವಿಶೇಷ ವೇದಿಕೆ ಕಲ್ಪಿಸಲಾಗಿದ್ದು, ಕನ್ನಡ ಚಿತ್ರರಂಗದ 91 ವರ್ಷಗಳ ಇತಿಹಾಸವನ್ನು ಪ್ರತಿಬಿಂಬಿಸುವ ಛಾಯಾಚಿತ್ರ ಪ್ರದರ್ಶನವೂ ಏರ್ಪಡಿಸಲಾಗಿದೆ.</p>



<p><a href="tel:202526">2025–26</a>ನೇ ಸಾಲಿನಲ್ಲಿ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ರೂ.7 ಕೋಟಿ ಅನುದಾನ ಒದಗಿಸಲಾಗಿದೆ. ಸಮಾರೋಪ ಸಮಾರಂಭದಲ್ಲಿ ಅತ್ಯುತ್ತಮ ಚಲನಚಿತ್ರಗಳು ಹಾಗೂ ಜೀವಮಾನ ಸಾಧನೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಮಸ್ತ್ ಮಲೈಕಾಗೆ ಸಾನ್ವಿ ಸುದೀಪ್ ಧ್ವನಿ…ಮಗಳ ಧ್ವನಿಗೆ ಕಿಚ್ಚನ ಜರ್ಬದಸ್ತ್ ಕುಣಿತ</title>
		<link>https://peepalmedia.com/saanvi-sudeeps-voice-kicchans-heart-skipped-a-beat-to-his-daughters-voice/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 17 Dec 2025 11:03:04 +0000</pubDate>
				<category><![CDATA[ಸಿನಿಮಾ]]></category>
		<guid isPermaLink="false">https://peepalmedia.com/?p=70792</guid>

					<description><![CDATA[ಮಾರ್ಕ್ ಮಸ್ತ್ ಮಲೈಕಾಗೆ ಕಂಠ ಕುಣಿಸಿದ ಕಿಚ್ಚ ಪುತ್ರಿ..ಸಾನ್ವಿ ಸುದೀಪ್ ಹಾಡಿಗೆ ಬಾದ್ ಷಾ ಬೊಂಬಾಟ್ ಸ್ಟೆಪ್ಸ್ ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು ಮಾರ್ಕ್ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಮ್ಯಾಕ್ಸ್ ಸಕ್ಸಸ್ ಬಳಿಕ‌ ಕಿಚ್ಚ ಸುದೀಪ್ ಹಾಗೂ ವಿಜಯ್ ಕಾರ್ತಿಕೇಯ ಈ ಪ್ರಾಜೆಕ್ಟ್ ಗಾಗಿ ಕೈ ಜೋಡಿಸಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕ ಅಭಿಮಾನಿ ವಲಯದಲ್ಲಿ ನಿರೀಕ್ಷೆ ಹೆಚ್ಚಿಸಿರುವ ಮ್ಯಾಕ್ಸ್ ಚಿತ್ರದ ಪಾರ್ಟಿ ಹಾಡು ಭರ್ಜರಿ ಸೌಂಡ್ ಮಾಡ್ತಿದೆ. ಮಾರ್ಕ್ ಸಿನಿಮಾದ ಮಸ್ತ್ ಮಲೈಕಾ ಸಾಂಗ್ ಗೆ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>ಮಾರ್ಕ್ ಮಸ್ತ್ ಮಲೈಕಾಗೆ ಕಂಠ ಕುಣಿಸಿದ ಕಿಚ್ಚ ಪುತ್ರಿ..ಸಾನ್ವಿ ಸುದೀಪ್ ಹಾಡಿಗೆ ಬಾದ್ ಷಾ ಬೊಂಬಾಟ್ ಸ್ಟೆಪ್ಸ್</p>
</blockquote>



<p>ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು ಮಾರ್ಕ್ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಮ್ಯಾಕ್ಸ್ ಸಕ್ಸಸ್ ಬಳಿಕ‌ ಕಿಚ್ಚ ಸುದೀಪ್ ಹಾಗೂ ವಿಜಯ್ ಕಾರ್ತಿಕೇಯ ಈ ಪ್ರಾಜೆಕ್ಟ್ ಗಾಗಿ ಕೈ ಜೋಡಿಸಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕ ಅಭಿಮಾನಿ ವಲಯದಲ್ಲಿ ನಿರೀಕ್ಷೆ ಹೆಚ್ಚಿಸಿರುವ ಮ್ಯಾಕ್ಸ್ ಚಿತ್ರದ ಪಾರ್ಟಿ ಹಾಡು ಭರ್ಜರಿ ಸೌಂಡ್ ಮಾಡ್ತಿದೆ.</p>



<p>ಮಾರ್ಕ್ ಸಿನಿಮಾದ ಮಸ್ತ್ ಮಲೈಕಾ ಸಾಂಗ್ ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಅದರಲ್ಲಿಯೂ ಸಾನ್ವಿ ಸುದೀಪ್ ಕಂಠಕ್ಕೆ‌ ಸಂಗೀತ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮಸ್ತ್ ಮಲೈಕಾ ಹಾಡಿಗೆ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಧ್ವನಿ ನೀಡಿದ್ದಾರೆ. ಮಗಳ ಕಂಠಕ್ಕೆ ಕಿಚ್ಚ‌ ಬೊಂಬಾಟ್ ಸ್ಟೆಪ್ಸ್ ಹಾಕಿದ್ದಾರೆ.</p>



<p><strong>ಸಾನ್ವಿ ಸುದೀಪ್ ಮೊದಲ ಹಾಡು</strong><br>ಮಸ್ತ್ ಮಲೈಕಾ ಸಾನ್ವಿ ಅವರ ಮೊದಲ ಹಾಡು ಅನ್ನೋದು ವಿಶೇಷ. ಸಿನಿಮಾ ರಂಗದಲ್ಲಿ ಅಥವಾ ಸಂಗೀತ ಕ್ಷೇತ್ರದಲ್ಲಿ ಏನಾದರೂ ಮಾಡಬೇಕು ಎಂಬುವುದು ಸಾನ್ವಿ ಕನಸಂತೆ. ಆ ಕನಸಿನಂತೆ ಅವರು ಸಾಗುತ್ತಿದ್ದಾರೆ. ಅದು ಅಪ್ಪನ ಚಿತ್ರದ ಮೂಲಕ ಪೂರ್ಣ ಪ್ರಮಾಣದ ಗಾಯಕಿಯಾಗಿ ಸಾನ್ವಿ ಹೊರ ಹೊಮ್ಮಿದ್ದಾರೆ.</p>



<p><strong>ತೆಲುಗಿನ ನಾನಿ‌ ಚಿತ್ರಕ್ಕೂ ಸಾನ್ವಿ ಗಾಯನ</strong><br>ಈ ಹಿಂದೆ ನಟ ನಾನಿ ಅಭಿನಯದ &#8216;ಹಿಟ್ 3&#8217; ಚಿತ್ರದ ಮೂಲಕ ಸಾನ್ವಿ ಸುದೀಪ್ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಹಿಟ್ 3 ರ ಥೀಮ್ ಸಾಂಗ್ &#8216;ಪೊರಟಮೆ 3.0&#8217; ಗೆ ಸಾನ್ವಿ ಧ್ವನಿ ನೀಡಿದ್ದಾರೆ. ಇದೀಗ ತನ್ನ ತಂದೆ ನಟಿಸಿರುವ ಚಿತ್ರದ ಮೂಲಕವೇ ಸಾನ್ವಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ.‌</p>



<p>ಈ ಹಾಡು ಬಿಡುಗಡೆ ಕುರಿತು ನಟ ಕಿಚ್ಚ ಸುದೀಪ್, ನನ್ನ ಎಲ್ಲಾ ಬಾದ್‌ಶಾಗಳಿಗೆ..ನಿಮ್ಮ ಕುಟುಂಬದ ಸದಸ್ಯರಾದ ಸಾನ್ವಿ ಅವರ ಮೊದಲ ಹಾಡನ್ನು ಪ್ರಸ್ತುತಪಸುತ್ತಿದ್ದೇವೆ. ಮಾರ್ಕ್ ಚಿತ್ರತಂಡಿಂದ ಈ ಹಾಡನ್ನು&nbsp; ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಉಡುಗೊರೆಯಾಗಿ ನೀಡುತ್ತಿದ್ದೇವೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.</p>



<p>‘ಸತ್ಯ ಜ್ಯೋತಿ ಫಿಲ್ಮ್ಸ್’ ಮತ್ತು ‘ಕಿಚ್ಚ ಕ್ರಿಯೇಷನ್’ ಮೂಲಕ&nbsp; ಮಾರ್ಕ್ ಸಿನಿಮಾ ನಿರ್ಮಾಣ ಆಗಿದೆ. ಸುದೀಪ್ ಜೊತೆ ದೀಪ್ಷಿಕಾ, ನವೀನ್ ಚಂದ್ರ, ರೋಶಿನಿ ಪ್ರಕಾಶ್, ಗುರು ಸೋಮಸುಂರಂ, ಗೋಪಾಲಕೃಷ್ಣ ದೇಶಪಾಂಡೆ, ಡ್ರ್ಯಾಗನ್ ಮಂಜು, ಅರ್ಚನಾ ಕೊಟ್ಟಿಗೆ, ಮಹಾಂತೇಶ್ ಹಿರೇಮಠ್, ಶೈನ್ ಟಾಮ್ ಚಾಕೋ , ಯೋಗಿ ಬಾಬು ಮುಂತಾದವರು ನಟಿಸಿದ್ದಾರೆ.</p>
]]></content:encoded>
					
		
		
			</item>
	</channel>
</rss>
