<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ಅಂಕಣ &#8211; Peepal Media</title>
	<atom:link href="https://peepalmedia.com/category/opinion-articles/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Wed, 03 Jun 2026 08:15:06 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>ಅಂಕಣ &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಬೊಗಸೆಗೆ ದಕ್ಕಿದ್ದು-82 : ಮೋದಿ ಹೇಳಿದಂತೆ ಬದುಕಿ ಕುರಿಗಳೇ! ಆತ ಬದುಕುವಂತೆ ಅಲ್ಲ!</title>
		<link>https://peepalmedia.com/live-like-modi-said-sheep-not-like-he-lives/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 03 Jun 2026 08:14:46 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://peepalmedia.com/?p=79319</guid>

					<description><![CDATA[&#8220;..&#8217;ಹೇಳುವುದು ಶಾಸ್ತ್ರ, ಇಕ್ಕುವುದು ಗಾಳ&#8217; : ತಾನು ಮಾಡಬಾರದ್ದೆಂದು ಬೇರೆಯವರಿಗೆ ಹೇಳುವುದನ್ನು ತಾನೇ ತನ್ನ “ರಾಜಸವಲತ್ತು” ಎಂಬಂತೆ ಮಾಡುವ ಪ್ರಧಾನಿ ನರೇಂದ್ರ ಮೋದಿಗೆ ಈ ಗಾದೆ ಸರಿಯಾಗಿ ಹೊಂದಿಕೆಯಾಗುತ್ತದೆ..&#8221; ನಿಖಿಲ್ ಕೋಲ್ಪೆಯವರ ಬರಹದಲ್ಲಿ “ಹೇಳುವುದು ಶಾಸ್ತ್ರ; ಇಕ್ಕುವುದು ಗಾಳ!” ಎಂಬುದೊಂದು ಜಾತಿ ಮೇಲ್ಮೆಯ ಗಾದೆಯೂ ಹೌದು, ಮೇಲ್ಜಾತಿ ಆಷಾಢಭೂತಿತನವನ್ನು ಟೀಕಿಸುವ ಗಾದೆಯೂ ಹೌದು! ತಾನು ಮಾಡಬಾರದ್ದೆಂದು ಬೇರೆಯವರಿಗೆ ಹೇಳುವುದನ್ನು ತಾನೇ ತನ್ನ “ರಾಜಸವಲತ್ತು” ಎಂಬಂತೆ ಮಾಡುವ ಪ್ರಧಾನಿ ನರೇಂದ್ರ ಮೋದಿಗೆ ಈ ಗಾದೆ ಸರಿಯಾಗಿ ಹೊಂದಿಕೆಯಾಗುತ್ತದೆ. ಜೊತೆಗೆ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p class="wp-block-paragraph">&#8220;..&#8217;ಹೇಳುವುದು ಶಾಸ್ತ್ರ, ಇಕ್ಕುವುದು ಗಾಳ&#8217; : ತಾನು ಮಾಡಬಾರದ್ದೆಂದು ಬೇರೆಯವರಿಗೆ ಹೇಳುವುದನ್ನು ತಾನೇ ತನ್ನ “ರಾಜಸವಲತ್ತು” ಎಂಬಂತೆ ಮಾಡುವ ಪ್ರಧಾನಿ ನರೇಂದ್ರ ಮೋದಿಗೆ ಈ ಗಾದೆ ಸರಿಯಾಗಿ ಹೊಂದಿಕೆಯಾಗುತ್ತದೆ..&#8221; ನಿಖಿಲ್ ಕೋಲ್ಪೆಯವರ ಬರಹದಲ್ಲಿ</p>
</blockquote>



<p class="wp-block-paragraph">“ಹೇಳುವುದು ಶಾಸ್ತ್ರ; ಇಕ್ಕುವುದು ಗಾಳ!” ಎಂಬುದೊಂದು ಜಾತಿ ಮೇಲ್ಮೆಯ ಗಾದೆಯೂ ಹೌದು, ಮೇಲ್ಜಾತಿ ಆಷಾಢಭೂತಿತನವನ್ನು ಟೀಕಿಸುವ ಗಾದೆಯೂ ಹೌದು! ತಾನು ಮಾಡಬಾರದ್ದೆಂದು ಬೇರೆಯವರಿಗೆ ಹೇಳುವುದನ್ನು ತಾನೇ ತನ್ನ “ರಾಜಸವಲತ್ತು” ಎಂಬಂತೆ ಮಾಡುವ ಪ್ರಧಾನಿ ನರೇಂದ್ರ ಮೋದಿಗೆ ಈ ಗಾದೆ ಸರಿಯಾಗಿ ಹೊಂದಿಕೆಯಾಗುತ್ತದೆ. ಜೊತೆಗೆ ಆತನಿಗೆ ಸರಿಯಾಗಿ ಹೊಂದಿಕೆಯಾಗುವ ಮಾತೆಂದರೆ: ಡಾ. ರಾಜ್‌ಕುಮಾರ್ ಅವರ “ಜ್ವಾಲಾಮುಖಿ” ಚಿತ್ರದ “ಹೇಳುವುದು ಒಂದು; ಮಾಡುವುದು ಇನ್ನೊಂದು!” ಹಾಡು! “ರಾಷ್ಟ್ರಪಿತ” ಮಹಾತ್ಮಾ ಗಾಂಧಿಯವರು ಸರಳತೆಯನ್ನು ಬೋಧಿಸುವ ಮೊದಲು- ಸರಳತೆಯನ್ನು ಅನುಸರಿಸಿ, ಸರಳತೆಯನ್ನೇ ಬಾಳಿದರು. ಕೋಟು ಬೂಟಿನಿಂದ ಇಳಿದು, “ಬರಿಮೈ ಫಕೀರ” ಎನಿಸಿಕೊಂಡರೆ, “ಭಕ್ತಪಿತ” ಮೋದಿ- ತಾನೇ (ಸುಳ್ಳು) ಹೇಳಿದಂತೆ ಮೂವತ್ತು ವರ್ಷ ಭಿಕ್ಷೆಬೇಡಿ ಬದುಕಿದವರು- ದಿನಕ್ಕೆ ಮೂರುಮೂರು ವಿದೇಶಿ ಸೂಟು ಬದಲಿಸುವ, ಶ್ರೀಮಂತಿಕೆಯನ್ನೇ ಬಾಳುವ- ಸಾಮಾನ್ಯ ಜನರಿಗೆ ಮಾತ್ರವೇ ತ್ಯಾಗ ಮತ್ತು ಸರಳತೆಯನ್ನು ಬೋಧಿಸುವ “ಷೋಕಿಲಾಲ ಫಕೀರ” ಎನಿಸಿಕೊಂಡಿದ್ದಾರೆ!</p>



<p class="wp-block-paragraph">ಈಗಿನ ಭಾರತೀಯ ಆಡಳಿತದ ಭವ್ಯವಾದ, ನಿಯಾನ್-ಲೈಟ್ ಕಾರ್ಖಾನೆಯಲ್ಲಿ, “ತ್ಯಾಗ”ವು ಹೆಚ್ಚು ಉತ್ಪಾದನೆಯಲ್ಲಿರುವ ಸರಕು. ಇದನ್ನು ಸರಕಾರವು ಪ್ಯಾಕ್ ಮಾಡುತ್ತದೆ, ಸಾರ್ವಜನಿಕ ಸಂಪರ್ಕ ಸಂಸ್ಥೆಗಳ ಮೂಲಕ ಜನಸಾಮಾನ್ಯರಿಗೆ ಆಕ್ರಮಣಕಾರಿಯಾಗಿ ಮಾರಾಟ ಮಾಡುತ್ತದೆ! ಮೋದಿಯೇ ಅದರ ಬ್ರಾಂಡ್ ಅಂಬಾಸಡರ್. ತಾವು ವಿದೇಶಿ ಬಳಸುತ್ತಾ, ಕೋಟಿಗಟ್ಟಲೆ ಸಂಪಾದಿಸಿ, ಜಾಹೀರಾತಿನ ಮೂಲಕ ಇಲ್ಲಿನ ನಾಯಿಬೆಕ್ಕು ಬ್ರಾಂಡ್‌ಗಳನ್ನು ಜನರ ತಲೆಗೆ ಹಿಡಿಸುವ ಸಿನಿಮಾ ತಾರೆಯಂತೆಯೇ ಮೋದಿ! ನಟ ಚತುರ ಮಾರ್ತಾಂಡ!</p>



<p class="wp-block-paragraph">ದುಬಾರಿ ಖರ್ಚಿನ ಶೋಕಿಲಾಲ ಫಕೀರ!<br>ಮೋದಿಯನ್ನು ಹಿಂದಿನಿಂದಲೂ ಎಲ್ಲಾ ಬಿಟ್ಟ ಯಾವುದೋ ಋಷಿಯೋ, ಮುನಿಯೋ ಎಂಬಂತೆ ರೋಮ್ಯಾಂಟಿಕ್ ಆಗಿ ಚಿತ್ರಿಸಲಾಗುತ್ತಿದೆ. ಕನಿಷ್ಟ ನಿದ್ದೆ ಮಾಡುವ, 18 ಗಂಟೆ ಕೆಲಸ ಮಾಡುವ, ಯಾವುದೇ ಆಸ್ತಿಯನ್ನು ಹೊಂದಿರದ, ಒಂದು ಬಟ್ಟೆ ಚೀಲವನ್ನು ಮಾತ್ರ ಹೊಂದಿರುವ, ಯಾವಾಗ ಬೇಕಾದರೂ ಹೊರಡಲು ಸಿದ್ಧನಾದ ಫಕೀರ ಮನುಷ್ಯ ಎಂಬಂತೆ ಚಿತ್ರಿಸಲಾಗುತ್ತಿದೆ. ಈ ಮಹಾ ಸುಳ್ಳನ್ನು ಆತ ಸಾರ್ವಜನಿಕವಾಗಿ ನಾಚಿಕೆ ಬಿಟ್ಟು ಹಲವು ಸಲ ಹೇಳಿಕೊಂಡಿದ್ದಾರೆ. (ಮೈ ತೋ ಫಕೀರ್ ಆದ್ಮಿ ಹೂಂ, ಜೋಲಾ ಲೇಕರ್ ನಿಕಲ್ ಪಡೂಂಗಾ!). ಆದರೂ, ಆತನ ಭೌತಿಕ ಜೀವನವು ಹೇಸಿಗೆ ಬರಿಸುವ ವಿರೋಧಾಭಾಸವನ್ನು ತೋರಿಸುತ್ತದೆ.</p>



<p class="wp-block-paragraph">ಸಾಮಾನ್ಯ ನಾಗರಿಕರು ತಮ್ಮ ಸೊಂಟಪಟ್ಟಿ ಬಿಗಿಗೊಳಿಸಲು, ಮಧ್ಯವರ್ಗದ ಕುಟುಂಬಗಳು ತಮ್ಮ ಸೌಕರ್ಯಗಳನ್ನು ಕಡಿತಗೊಳಿಸಲು ಮತ್ತು ದೇಶಭಕ್ತಿಯ ಹೆಸರಿನಲ್ಲಿ ಆರ್ಥಿಕ ಸಂಕಷ್ಟಗಳನ್ನು, ಬೆಲೆ ಏರಿಕೆಯನ್ನು, ಅನಿಲ ಕೊರತೆಯನ್ನು, ದುರಾಡಳಿತವನ್ನು ಮರುಮಾತಿಲ್ಲದೆ ಸಹಿಸಿಕೊಳ್ಳಬೇಕು ಎಂದು ಆತ ಕರೆ ನೀಡುತ್ತಾರೆ! ಆದರೆ, ಸರಕಾರಿ ಯಂತ್ರವು ಒಬ್ಬ ಟೊಳ್ಳು ವ್ಯಕ್ತಿಯನ್ನು ಸಂಪೂರ್ಣ ಐಷಾರಾಮಿ, ಹೈಪರ್-ಶೈಲೀಕೃತ, ಬಹು-ಪದರಗಳ ಭ್ರಮೆಯ ಗುಳ್ಳೆಯೊಳಗೆ ಇರಿಸಿ, ಪ್ರದರ್ಶನ ಮಾಡಲು ನೂರಾರು ಕೋಟಿಗಳನ್ನು ಖರ್ಚು ಮಾಡುತ್ತದೆ. ಈಗಿನ ಭಾರತೀಯ ರಾಜಕಾರಣದ ಮೂಲ ಸಂದೇಶ ಒಂದೇ: ನೀವು ದೇಶಪ್ರೇಮಿ ಆಗಿದ್ದರೆ ಆರ್ಥಿಕ ಸಂಕಷ್ಟ ಸಹಿಸಬೇಕು- ಯಾಕೆಂದರೆ ನೀವು ಪ್ರಜೆ; ನಾವು ಸಕಲ ಸುಖ ಸೌಭಾಗ್ಯ ಅನುಭವಿಸಬೇಕು- ಯಾಕೆಂದರೆ, ನಾವು ಮಹಾರಾಜರು! ಬಿಜೆಪಿಯ ಕಲ್ಪನೆಯ ಪ್ರಜಾಪ್ರಭುತ್ವ ಎಂದರೆ, ಜಾತಿ-ವರ್ಗ ತಾರತಮ್ಯದ ರಾಜಪ್ರಭುತ್ವದ ಆಧುನಿಕ ರೂಪ.</p>



<p class="wp-block-paragraph">ಹೇಳುವುದು ಒಂದು; ಮಾಡುವುದು ಇನ್ನೊಂದು!<br>ದೇಶವನ್ನುದ್ದೇಶಿಸಿ ಮೋದಿ ಮಾಡಿದ ಸರಳತೆಯ, ಕಷ್ಟ ಸಹಿಷ್ಣುತೆಯ ಸಂದೇಶವನ್ನು ಬಹಳ ಪ್ರಚಾರ ಮಾಡಲಾಯಿತು. ಜಾಗತಿಕ ಮಾರುಕಟ್ಟೆ ಅಸ್ಥಿರತೆಗಳ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೆ ರಚನಾತ್ಮಕ ಆರ್ಥಿಕ ಪರಿಹಾರವನ್ನು ನೀಡಲಾಗಿಲ್ಲ. ಬದಲಾಗಿ, ದೊಡ್ಡ ದೊಡ್ಡ ನೈತಿಕ ಪಾಠಗಳನ್ನು ಹೇಳಲಾಗಿದೆ. ಇದರ ಇಬ್ಬಗೆ ನೀತಿಯು ಕಣ್ಣುಕುಕ್ಕುವಂತಿದೆ. ಒಂದು ಕಡೆ ಸಾಮಾನ್ಯ ನಾಗರಿಕನಿಗೆ ಚಿನ್ನ ಖರೀದಿ ಮಾಡಬೇಡಿ, ಸ್ವಂತ ಕಾರು ಬಳಸಬೇಡಿ, ಸಾರ್ವಜನಿಕ ಸಾರಿಗೆ ಬಳಸಿ, ವಿದೇಶ ಪ್ರಯಾಣ ಮಾಡಬೇಡಿ, ವಿದೇಶಿ ವಸ್ತುಗಳನ್ನು ಬಳಸಬೇಡಿ, ಇಂಧನ ಬಳಕೆಯನ್ನು ಕಡಿತಗೊಳಿಸಿ ಮತ್ತು ದೇಶವು ಬಾಹ್ಯ ಒತ್ತಡಗಳನ್ನು ನಿಭಾಯಿಸಲು ಮನೆಯಿಂದ ಕೆಲಸ ಮಾಡಿ ಇತ್ಯಾದಿಯಾಗಿ- ತಾನು ಅನುಸರಿಸದ ಬಿಟ್ಟಿ ಸಲಹೆಗಳನ್ನು ಮೋದಿ ನೀಡಿದ್ದಾರೆ. ಇದೇ ಹೊತ್ತಿಗೆ ಭಾರತವು ಯುಎಸ್ಎಯಿಂದ ವರ್ಷಕ್ಕೆ 43 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಸರಕುಗಳನ್ನು ಕೊಳ್ಳಲಿದೆ ಎಂದು ಭಾರತಕ್ಕೆ ಭೇಟಿ ನೀಡಿದ ಯುಎಸ್ಎಯ ರಾಜ್ಯಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೋ ಹೇಳಿಕೆ ನೀಡುತ್ತಾರೆ!</p>



<p class="wp-block-paragraph">ಇನ್ನೊಂದು ಕಡೆಯಲ್ಲಿ, ಯಾವುದೇ ಬಿಕ್ಕಟ್ಟು ನಮ್ಮ ನಾಯಕನನ್ನು ವೈಯಕ್ತಿಕವಾಗಿ ಬಾಧಿಸುವುದಿಲ್ಲ. ಕೋಟಿಗಟ್ಟಲೆ ಮೌಲ್ಯದ ಕಸ್ಟಮ್ ಮೇಡ್ ಸೂಟ್‌ಗಳು, ವಿವಿಐಪಿ ಬೋಯಿಂಗ್ 777 ವಿಮಾನಗಳ ಬೃಹತ್ ಫ್ಲೀಟ್, 40ರಿಂದ 50 ಕಾರುಗಳ ಭದ್ರತಾ ಬೆಂಗಾವಲುಗಳು ಮತ್ತು ಅಂತ್ಯವಿಲ್ಲದ, ಸಾರ್ವಜನಿಕ ತೆರಿಗೆ ಹಣವನ್ನು ಹೀರುವ ಪ್ರಾದೇಶಿಕ ಚುನಾವಣಾ ಪ್ರಚಾರ ಸಭೆಗಳಿಗೆ ಇದೆಲ್ಲಾ ಅನ್ವಯಿಸುವುದಿಲ್ಲ. ಚಿನ್ನದ ಬೆಲೆಯು ಆಕಾಶಕ್ಕೆ ಏರುತ್ತಿರುವ ಸಂದರ್ಭದಲ್ಲಿ- ಚಿನ್ನವನ್ನು ತ್ಯಜಿಸುವ ಸಲಹೆಯು ಮಧ್ಯಮ ವರ್ಗದ ಮೇಲೆ ನೇರ ದಾಳಿಯಾಗಿದ್ದು, ಸಾಂಪ್ರದಾಯಿಕ ಕುಟುಂಬ ಆಚರಣೆಗಳು, ಮದುವೆಗಳು ಮತ್ತು ಆಳವಾಗಿ ಬೇರೂರಿರುವ ಆರ್ಥಿಕ ಭದ್ರತೆಯ ಭಾವನೆಗಳನ್ನು ಬುಡಮೇಲು ಮಾಡುತ್ತದೆ. ಯಾಕೆಂದರೆ, ಭಾರತೀಯರು ಮುಂದಿನ ಜೀವನದ ಭದ್ರತೆಗಾಗಿ ನಂಬುವುದು ಚಿನ್ನವನ್ನೇ. ಜೊತೆಗೆ ಲಕ್ಷಾಂತರ ಸ್ಥಳೀಯ ಕುಶಲಕರ್ಮಿಗಳನ್ನು ನೇಮಿಸಿಕೊಳ್ಳುವ ದೇಶೀಯ ಆಭರಣ ಉದ್ಯಮವು ಈ ಹುಚ್ಚಾಟಗಳ ಆಘಾತವನ್ನು ಹೀರಿಕೊಳ್ಳಬೇಕಾಗಿದೆ. ಜತೆಗೆ ಸರಕಾರವು ಈಗಾಗಲೇ ಚಿನ್ನದ ಆಮದಿನ ಮೇಲೆ ಮಿತಿ, ನಿಯಂತ್ರಣಗಳನ್ನು ಹೇರಿದೆ.</p>



<p class="wp-block-paragraph">ಹೀಗಿದ್ದರೂ, ಜನಸಾಮಾನ್ಯರು ಚಿನ್ನದ ಖರೀದಿಯೇ ರಾಷ್ಟ್ರೀಯ ಭದ್ರತೆಗೆ ಅಪಾಯ ಎಂದು ಭಾವಿಸಿರುವಾಗ, ಮೋದಿಯ ಸ್ವಂತ ಉಡುಗೆತೊಡುಗೆಗಳ ಆಯ್ಕೆ ಬೇರೆಯೇ ಆರ್ಥಿಕ ವಾಸ್ತವದ ಜೊತೆಗೆ- ಮಹಾರಾಜರಂತೆ ಬದುಕಬೇಕೆಂಬ ಆತನ ಒಳಮನದಾಸೆಯನ್ನು ಬಿಂಬಿಸುತ್ತದೆ. ಕೊನೆಗೂ ಇದು- ಲಕ್ಷಗಟ್ಟಲೆ ಮೌಲ್ಯದ (ನಂತರ 4 ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತಕ್ಕೆ ಹರಾಜಾದ) ಮೊನೊಗ್ರಾಮ್ ಮಾಡಿದ ಪಿನ್‌ಸ್ಟ್ರೈಪ್ ಸೂಟ್‌ಗಳು, ಡಿಸೈನರ್ ಐಷಾರಾಮಿ ಸನ್‌ಗ್ಲಾಸುಗಳು, ಲಕ್ಷ ಬೆಲೆಬಾಳುವ ವಿದೇಶಿ ಪೆನ್ನು, ಪಾದರಕ್ಷೆಗಳು ಮತ್ತು ನಿರ್ದಿಷ್ಟ ಟೆಲಿವಿಷನ್ ಫ್ರೇಮ್‌ಗಳಿಗೆ ಎಚ್ಚರಿಕೆಯಿಂದ ಆಯ್ಕೆಮಾಡಿದ ಹೆಚ್ಚಿನ ಬೆಲೆಯ ಸಾಂಪ್ರದಾಯಿಕ ಶಾಲುಗಳ ಮೂಲಕ- ಸಾರ್ವಜನಿಕ ನೌಕರನಾದ ನಕಲಿ “ಚಾಯ್‌ವಾಲಾ”ನ ಡೌಲುದೌಲತ್ತು, ಐಷಾರಾಮಿ, ಶೋಕಿಲಾಲತನವನ್ನು ನಿರ್ಲಜ್ಜವಾಗಿ ಪ್ರದರ್ಶಿಸುತ್ತದೆ. ಕಟ್ಟುನಿಟ್ಟಾಗಿ ನಿಗದಿಪಡಿಸಲಾದ ಪ್ರಾದೇಶಿಕ ಭೇಟಿಗಳ ಸಮಯದಲ್ಲಿ ಮೋದಿ ದಿನಕ್ಕೆ ಮೂರು ಬಾರಿ ವೇಷಭೂಷಣಗಳನ್ನು ಬದಲಾಯಿಸುವುದನ್ನು ಮತ್ತೆ ಮತ್ತೆ ನೋಡಿಯೂ ಸಾರ್ವಜನಿಕರು ಇದರ ಹಿಂದಿನ ಅಶ್ಲೀಲತೆ ಮತ್ತು ಅನೈತಿಕತೆಗಳನ್ನು ನೋಡುವುದಿಲ್ಲ! ಈತನ ಪ್ರಾದೇಶಿಕವಾದ ಮತ್ತು ಹೆಚ್ಚಿನ ಸಲ ನಗೆಪಾಟಲಾಗುವ ಛದ್ಮವೇಷಗಳಿಗೆ ಎಷ್ಟು ವೆಚ್ಚವಾಗುತ್ತದೆ ಎಂದು ಪ್ರಶ್ನಿಸುವುದಿಲ್ಲ! ಆತನ ಪ್ರವಾಸಗಳು ಸರಕಾರಿ ವೆಚ್ಚದಲ್ಲಿ ನಡೆಯುವ ಫ್ಯಾಷನ್ ಶೋಗಳಾಗಿವೆ. ನಾಗರಿಕರು ದಿನಸಿ, ತರಕಾರಿ, ಪೆಟ್ರೋಲ್, ಡೀಸೆಲ್, ಅನಿಲ, ಔಷಧಿ ಮುಂತಾದವುಗಳ ಏರುತ್ತಿರುವ ಬೆಲೆಯನ್ನು ಲೆಕ್ಕ ಹಾಕುತ್ತಿದ್ದರೆ, ಸರಕಾರವು ಒಬ್ಬ ನಕಲಿ ಫಕೀರನ “ಸೌಂದರ್ಯೋಪಾಸನೆ”ಗಾಗಿ ವಿಶೇಷವಾದ ಲಾಜಿಸ್ಟಿಕ್ ವ್ಯವಸ್ಥೆಗಳಿಗೆ ಉದಾರವಾಗಿ ಸಾರ್ವಜನಿಕ ಹಣವನ್ನು ಖರ್ಚು ಮಾಡುತ್ತದೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೊದಲು ಗಂಟೆಗಟ್ಟಲೆ ಮೇಕಪ್ ಮಾಡಿಸಿಕೊಳ್ಳುವ, ತಮಿಳುನಾಡಿಗೆ ಭೇಟಿ ನೀಡುವಾಗ “ದ್ರಾವಿಡರಂತೆ ಕಪ್ಪಾದ” ಈತನೇ ಬ್ಯೂಟಿ ಪಾರ್ಲರ್‌ಗಳಿಗೆ ಹೋಗಬೇಡಿರೆಂದು ಮಹಿಳೆಯರಿಗೆ ಕರೆ ನೀಡುತ್ತಾರೆ ಎಂದರೆ, ಇದಕ್ಕಿಂತ ದೊಡ್ಡ ಆಷಾಢಭೂತಿತನ ಬೇರೆ ಬೇಕೆ!?</p>



<p class="wp-block-paragraph">&#8216;ಫಕೀರ&#8217;ನನ್ನು ಆರಾಮವಾಗಿ ಇಡುವ ವೆಚ್ಚ<br>ಮೋದಿಯ “​ಸಂಪೂರ್ಣ ತ್ಯಾಗ”ದ ಈ ಚಿತ್ರಣವನ್ನು ಕಾಪಾಡಿಕೊಳ್ಳಲು ಬೇಕಾಗುವ ಆರ್ಥಿಕ ವೆಚ್ಚವು ದಿಗ್ಭ್ರಮೆಗೊಳಿಸುವಂತಿದೆ. ವಾರ್ಷಿಕ ಬಜೆಟ್ ಹಂಚಿಕೆ ಸುಮಾರು 500 ಕೋಟಿ ರೂಪಾಯಿಗಳಿರುವ ಗಣ್ಯರ ವಿಶೇಷ ರಕ್ಷಣಾ ಗುಂಪು (SPG) ಭದ್ರತಾ ವ್ಯವಸ್ಥೆಯನ್ನು ಪರಿಗಣಿಸಿ. ಪ್ರಧಾನ ಮಂತ್ರಿ ಮಾತ್ರವೇ ಪ್ರಸ್ತುತ ಈ ರಕ್ಷಣೆಯ ಅಡಿಯಲ್ಲಿ ಇರುವುದರಿಂದ ವೈಯಕ್ತಿಕ ರಕ್ಷಣೆಯ ಲೆಕ್ಕಾಚಾರವು ದಿನಕ್ಕೆ ಸರಿಸುಮಾರು 1.3ರಿಂದ 1.6 ಕೋಟಿ ರೂಪಾಯಿ ಅಥವಾ ನಿಮಿಷಕ್ಕೆ 11,000 ರೂಪಾಯಿಗಳಿಗಿಂತ ಹೆಚ್ಚಾಗುತ್ತದೆ.</p>



<p class="wp-block-paragraph">​ಈ ಭದ್ರತಾ ತಂಡವು 40ರಿಂದ 50 ಪ್ರೀಮಿಯಂ ಐಷಾರಾಮಿ ವಾಹನಗಳ ಬೃಹತ್ ಬೆಂಗಾವಲು ಪಡೆಯೊಂದಿಗೆ ಪ್ರಯಾಣ ಮಾಡುತ್ತದೆ. ಇವುಗಳಲ್ಲಿ ಹೆಚ್ಚಿನವು ವಿಶೇಷವಾಗಿ ತಯಾರಿಸಲಾದ ಇಂಧನವನ್ನು ನೀರಿನಂತೆ ಕುಡಿಯುವ ಮರ್ಸಿಡಿಸ್-ಮೇಬ್ಯಾಕ್ ಮತ್ತು ಶಸ್ತ್ರಸಜ್ಜಿತ ರೇಂಜ್ ರೋವರ್ ಮಾಡೆಲ್‌ಗಳು. ಈ ರಾಜಕೀಯ ರೋಡ್‌ಶೋಗಳಲ್ಲಿ ಒಂದರ ಇಂಗಾಲದ ಹೆಜ್ಜೆಗುರುತು (carbon footprint) ಮತ್ತು ಇಂಧನ ಬಳಕೆಯೇ ವಾರಗಳವರೆಗೆ ಒಂದು ಟೈಯರ್-2 ಭಾರತೀಯ ಪಟ್ಟಣದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಸರಿಸಮನಾಗಿದೆ. ಆದರೂ, ಈ ವ್ಯಂಗ್ಯದ ಸುಳಿವು ಇಲ್ಲದೆ, ನಮ್ಮ ನಾಯಕ- ಈ ಶಸ್ತ್ರಸಜ್ಜಿತ, ಹವಾಮಾನ-ನಿಯಂತ್ರಿತ ವಾಹನಗಳಿಂದ ಹೊರಬಂದು, ನೇರವಾಗಿ ಟಿವಿ ಕ್ಯಾಮೆರಾವನ್ನು ನೋಡಿ ನಾಗರಿಕರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡಲು, ಸ್ವಂತ ವಾಹನ ಬಳಸದಿರಲು ಹೇಳುತ್ತಾನೆ!</p>



<p class="wp-block-paragraph">ಫೋಟೋ ಶೂಟ್ ಪುರಾಣ!<br>ಮೋದಿ ಸಕಲ ಗುಣ ಸಂಪನ್ನ ಎಂದು ಕೃತಕವಾಗಿ ಯೋಜಿಸಲಾದ, ಪ್ರಚಾರಕ್ಕೆಂದೇ ನಿರ್ಮಿಸಲಾಗುವ ಹಲವಾರು ಫೋಟೋ ಶೂಟ್‌ಗಳನ್ನು ಓದುಗರು ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿರುವುದರಿಂದ ಈ ಕುರಿತು ಹೆಚ್ಚೇನೂ ಹೇಳಬೇಕಾಗಿಲ್ಲ. ಹತ್ತು ರೂಪಾಯಿಯ ಜುಲ್‌ಮುರಿ ತಿನ್ನಲು ಕೋಟಿಗಟ್ಟಲೆ ಖರ್ಚುಮಾಡಿದ್ದು ಇತ್ತೀಚೆಗೆ ಹೆಚ್ಚು ಪ್ರಚಾರ ಪಡೆಯಿತು. ರಸ್ತೆಯಲ್ಲಿ ಇರಲಿ, ದೋಣಿಯಲ್ಲಿ ಇರಲಿ- ಅಂಬ್ಯೂಲೆನ್ಸ್ ಒಂದು ತಪ್ಪದೇ ಬರುತ್ತದೆ. ಅದಕ್ಕೆ ಮೋದಿಯ ರಕ್ಷಣೆಯ ವಾಹನಗಳೆಲ್ಲಾ ದಾರಿ ಮಾಡಿಕೊಟ್ಟು “ಮಾನವೀಯತೆ” ಮೆರೆಯುತ್ತವೆ! ಬಿಟ್ಟಿ ಪ್ರಚಾರ ಸಿಗುತ್ತದೆ. ಅದೇ ಹೊತ್ತಿಗೆ ಅಂಬ್ಯುಲೆನ್ಸ್ ಇಲ್ಲದೇ ಶವವನ್ನು ಹೊತ್ತು ಸಾಗುವ ಬಡವರ ಚಿತ್ರಗಳು ಪ್ರಚಾರ ಪಡೆಯುವುದಿಲ್ಲ. ಪಡೆದರೂ ಅಮಾನವೀಯ ಭಕ್ತಗಣಗಳಿಂದ ಟ್ರೋಲ್‌ಗೆ ಗುರಿಯಾಗುತ್ತವೆ.</p>



<p class="wp-block-paragraph">ಮೋದಿಯು ಆಧ್ಯಾತ್ಮಿಕ ಏಕಾಂತತೆಯನ್ನು ಬಯಸಿದಾಗ, ಅದು ಶಾಂತ, ಏಕಾಂತತೆಯಲ್ಲಿ ನಡೆಯುವುದಿಲ್ಲ. ಇದು ಬಹು-ಕ್ಯಾಮೆರಾಗಳ ಸೆಟಪ್ ಮುಂದೆ ಸಂಭವಿಸುತ್ತದೆ. ಅದು ಹೆಚ್ಚು ಪ್ರಚಾರ ಪಡೆದ ದೋಣಿ ವಿಹಾರವಾಗಲಿ- ವಿದ್ಯುತ್ ಔಟ್‌ಲೆಟ್‌ಗಳು ಮತ್ತು ಐಷಾರಾಮಿ ಕಾರ್ಪೆಟ್‌ಗಳನ್ನು ಹೊಂದಿರುವ ಗುಹೆಯಲ್ಲಿ ಧ್ಯಾನ ಮಾಡುತ್ತಿರಲಿ ಅಥವಾ “ನವಾಮಿ ಗಂಗಾ” ಹೆಸರಿನಲ್ಲಿ ಕೋಟಿಗಟ್ಟಲೆ ನುಂಗಿ “ಶುದ್ಧೀಕರಿಸಲಾದ” ಪರಮ ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಲು ಹಿಂಜರಿದು, ಕೃತಕ ಈಜುಕೊಳ ನಿರ್ಮಿಸಿದ ವಂಚಕತನ- ಅಪ್ರಾಮಾಣಿಕತೆಯಿರಲಿ, ಖಾಲಿ ಪರ್ವತಕ್ಕೆ ಕೈಬೀಸುವುದಿರಲಿ, ಡೋಲು ಜಾಗಟೆ ತಮ್ಮಟೆ ಬಾರಿಸುವುದಿರಲಿ, ತ್ರಿಶೂಲ ಪ್ರದರ್ಶನ, ಪೂಜೆಗೀಜೆ ಇತ್ಯಾದಿ ಛದ್ಮವೇಷಗಳಿರಲಿ- ಎಲ್ಲವೂ ಕೃತಕ ಆಡಂಬರ. ಪ್ರಾಮಾಣಿಕತೆಯ ಲವಲೇಶವೂ ಅದರಲ್ಲಿ ಕಾಣಿಸುವುದಿಲ್ಲ. “ಆಧ್ಯಾತ್ಮಿಕ” ಎಂಬ ಪದವೇ ನಾಚಿ ಆತ್ಮಹತ್ಯೆ ಮಾಡಿಕೊಳ್ಳಬೇಕು! ಕ್ಯಾಮರಾ ಹಿಡಿದವನ ಫೋಟೋ ತೆಗೆಯಲೆಂದೇ ಸುತ್ತಲೂ ಕ್ಯಾಮರಾಗಳು! ಪ್ರಕೃತಿ, ಧರ್ಮ ಅಥವಾ ಸಾರ್ವಜನಿಕರ ಜೊತೆ ಕೃತಕವಾದ, ಮೊದಲೇ ಚಿತ್ರಕತೆ, ಸಂಭಾಷಣೆ ಬರೆದ ಪ್ರತಿಯೊಂದು ಸಂವಹನವನ್ನು ವೃತ್ತಿಪರರ ತಂಡಗಳು ಸಿನಿಮಾ ಮಾದರಿಯಲ್ಲಿ ಶೂಟಿಂಗ್ ಮಾಡಿ, ಪ್ರಚಾರ ಮಾಡುತ್ತವೆ. ಗೋದಿ ಮಾಧ್ಯಮಗಳು ಹೊಗಳಿ ಗುಣಗಾನ ಮಾಡುತ್ತವೆ. ಸ್ವಂತ ತಾಯಿಯ ಜೊತೆ ಊಟ ಮಾಡುವ ಖಾಸಗಿ ಕ್ಷಣವನ್ನೂ, ಹಲ್ಲಿಲ್ಲದ ಬಾಯಿಗೆ ಪರೋಟ ತುರುಕುವ ಫೋಟೋ ಶೂಟ್ ಮಾಡಿಸಿ ಪ್ರಚಾರ ಗಿಟ್ಟಿಸಿದ, ಬಿಹಾರದ ಚುನಾವಣೆಯಲ್ಲಿ ಲಾಭಪಡೆಯಲು ವರ್ಷದ ಹಿಂದೆ ಸತ್ತ ತಾಯಿಗೆ ಪಿಂಡ ಬಿಡಲು ಹೊರಟ ಪ್ರಚಾರ ವ್ಯಸನಿಯಿಂದ ಬೇರೇನನ್ನು ನಿರೀಕ್ಷಿಸಲು ಸಾಧ್ಯ!?</p>



<p class="wp-block-paragraph">ಸಾರ್ವಜನಿಕ ಹಣ; ಎಲ್ಲಪ್ಪನ ಜಾತ್ರೆ!<br>ಆದರೆ, ಸರಕಾರದ ಸ್ವತ್ತುಗಳನ್ನು, ನೌಕರರು, ಸಿಬ್ಬಂದಿಯನ್ನು ಪಕ್ಷಪಾತದ ರಾಜಕೀಯ ಲಾಭಕ್ಕಾಗಿ ಸಕ್ರಿಯವಾಗಿ ನಿಯೋಜಿಸಿದಾಗ ಈ ಜೀವನಶೈಲಿಯು ಕೇವಲ ವೈಯುಕ್ತಿಕ ತೆವಲಿನ ಮಟ್ಟವನ್ನು ಮೀರಿ ಪ್ರಜಾಪ್ರಭುತ್ವಕ್ಕೆ ಮಾಡುವ ಗಂಭೀರ ಅನ್ಯಾಯವಾಗುತ್ತದೆ. ಅಧಿಕೃತ ರಾಜ್ಯ ಭೇಟಿಗಳು, ಧಾರ್ಮಿಕ ದೇವಾಲಯ ಉದ್ಘಾಟನೆಗಳು ಮತ್ತು ಚುನಾವಣಾ ಪ್ರಚಾರ ಸಭೆಗಳ, ರೋಡ್ ಶೋಗಳ ನಡುವಿನ ಗೆರೆಗಳನ್ನು ಸಂಪೂರ್ಣವಾಗಿ ಅಳಿಸಿಹಾಕಲಾಗಿದೆ. ಸರಕಾರಿ ಖರ್ಚಿನಲ್ಲಿ ಬಿಜೆಪಿಯ ಪ್ರಚಾರ ನಡೆದರೂ, ಗುಲಾಮಿ ಚುನಾವಣಾ ಆಯೋಗ ಪ್ರಶ್ನಿಸುವುದಿಲ್ಲ! ಯಾವಯಾವುದಕ್ಕೋ ಸ್ವಯಂಪ್ರೇರಿತ ನಿರ್ದೇಶನಗಳನ್ನು ನೀಡುವ ನ್ಯಾಯಾಲಯಗಳು ಈ ಕುರಿತು ಏನೂ ಮಾಡುವುದಿಲ್ಲ!</p>



<p class="wp-block-paragraph">​ಪ್ರಧಾನಿ ಐದು ರಾಜ್ಯಗಳಲ್ಲಿ ಮಿಂಚಿನ, ಪಕ್ಷಪಾತದ ಚುನಾವಣಾ ಭಾಷಣಗಳನ್ನು ನೀಡಲು ಪ್ರಯಾಣಿಸಿದಾಗ, ಇಡೀ ವ್ಯವಸ್ಥೆ ಆತನೊಂದಿಗೆ ಪ್ರಯಾಣಿಸುತ್ತದೆ. ವಿವಿಐಪಿ ಬೋಯಿಂಗ್ 777-300ER ವಿಮಾನಗಳು, ವಾಯುಪಡೆಯ ಹೆಲಿಕಾಪ್ಟರ್‌ಗಳು, ಬೃಹತ್ ಎಸ್‌ಪಿಜಿ ತುಕಡಿಗಳು, ಸ್ಥಳೀಯ ಜಿಲ್ಲಾ ಆಡಳಿತ ಯಂತ್ರಗಳು ಮತ್ತು ಸಂವಹನ ನಿರ್ಬಂಧಗಳು ಇವೆಲ್ಲವೂ “ಅಧಿಕೃತ” ಪ್ರಧಾನ ಮಂತ್ರಿ ಪ್ರಯಾಣದ ಸೋಗಿನಲ್ಲಿ ಸಾರ್ವಜನಿಕ ಹಣದಿಂದ ನಡೆಯುತ್ತವೆ. ಆದರೆ, ಆತ ಮಾಡುವುದು ಮಾತ್ರ ಸರಕಾರಿ ಕೆಲಸವಲ್ಲ; ಪಕ್ಷದ ಪ್ರಚಾರ ಮತ್ತು ಪ್ರತಿಪಕ್ಷಗಳ ಮೇಲೆ ಕುಹಕ, ಕುತ್ಸಿತ ದಾಳಿ!</p>



<p class="wp-block-paragraph">​ಇದು ಆಳವಾದ ಪ್ರಜಾಪ್ರಭುತ್ವ ವಿರೋಧಿ ಆಟದ ಬಯಲನ್ನು ಸೃಷ್ಟಿಸುತ್ತದೆ. ಆಳುವ ಪಕ್ಷ ಹಲವು ಪಟ್ಟು ಶ್ರೀಮಂತವಾಗಿದ್ದರೂ ಸರಕಾರಿ ಸೌಲಭ್ಯ, ಸಾರ್ವಜನಿಕ ಹಣವನ್ನು ಬಳಸಿದರೆ, ವಿರೋಧ ಪಕ್ಷಗಳ ನಾಯಕರು ನಿಯಮಿತ ವಾಣಿಜ್ಯ ವಿಮಾನ ವೇಳಾಪಟ್ಟಿಗಳು, ಬಾಡಿಗೆ ಹೆಲಿಕಾಪ್ಟರ್‌ಗಳು ಮತ್ತು ಸ್ಥಳೀಯ ಪೊಲೀಸ್ ಅನುಮತಿಗಳಿಗೆ ಪಕ್ಷದ ಸೊರಗಿದ ಖಜಾನೆಯಿಂದ ಪಾವತಿಸಬೇಕಾಗುತ್ತದೆ. ಈ ರೀತಿ ದುರುಪಯೋಗವಾಗುವ ಹಣವನ್ನು, ಮೋದಿಯ ಶೋಕಿಯ ವೆಚ್ಚವನ್ನು ಭರಿಸುವವರು ಯಾರು? ತೆರಿಗೆ ಭರಿಸುವ, ದೇಶ ಪ್ರೇಮದ ಹೆಸರಿನಲ್ಲಿ ಹೊಟ್ಟೆಕಟ್ಟಿ, ಕಷ್ಟ ಸಹಿಸಿ ಎಂದು ಅದೇ ಮೋದಿಯಿಂದ ಹೇಳಿಸಿಕೊಳ್ಳುವ ಅದೇ ನಾಗರಿಕರು!</p>



<p class="wp-block-paragraph">​&#8221;ಮೋದಿ ಎಂಬಾತ- ನೀವು ತಾನು ಹೇಳುವಂತೆ ಬದುಕಬೇಕೆಂದು ಬಯಸುತ್ತಾನೆ, ಆತ ಸ್ವತಃ ಬದುಕುವಂತೆ ಅಲ್ಲ!&#8221; ಎಂಬುದೇ ಬೂಟಾಟಿಕೆಯ ಅರ್ಥವಾಗಿದೆ. “ಅಮೃತ ಕಾಲ ಬರಲಿದೆ, ಅಚ್ಛೇದಿನ್ ಬರಲಿದೆ” ಎಂದು ಜನರ ಮುಂಗೈಗೆ ಬೆಲ್ಲ ಸವರಿದ ಮೋದಿ, ಈಗ ಏಕಾಏಕಿಯಾಗಿ ಕೈಕಾಲು ಬಿಟ್ಟು, “ಕಠಿಣ ಬಡತನದ ದಿನಗಳು ಬರಲಿವೆ” ಎಂದು ಅದೇ ನಾಲಗೆಯಿಂದ ಹೇಳುತ್ತಿರುವುದು ಸ್ವಂತ ವೈಫಲ್ಯದ ಮತ್ತು ದೇಶವನ್ನು ಪ್ರಪಾತದ ಅಂಚಿಗೆ ತಲಪಿಸಿರುವ ಸೂಚನೆಯೇ?! ಮುಖ್ಯ ಪ್ರಶ್ನೆ ಎಂದರೆ, ಪಾಕಿಸ್ತಾನವನ್ನು ಹಾಗೆ ಮಾಡುತ್ತೇವೆ, ಬಲಿಷ್ಟ ಚೀನಾಕ್ಕೆ ಹೀಗೆ ಮಾಡುತ್ತೇವೆ ಎಂದು ಬೊಗಳೆ ಬಿಡುವ ಮೋದಿ ಸರಕಾರವು- ಭಾರತ ನೇರವಾಗಿ ಭಾಗಿಯಾಗದ ಒಂದು ಯುದ್ಧದಿಂದಲೇ ಮೋದಿ ಇಷ್ಟು ಕಂಗಾಲಾದರೆ, ಒಂದು ವೇಳೆ ದೇಶವು ಇರಾನ್ ಅಥವಾ ಉಕ್ರೇನಿನಂತೆ ದೀರ್ಘಕಾಲದ ಯುದ್ಧವನ್ನು ಎದುರಿಸಬೇಕಾಗಿ ಬಂದರೆ ಏನು ಮಾಡಬಹುದು ಎಂದು- ಯುದ್ಧವನ್ನು ಕಂಪ್ಯೂಟರ್ ಆಟದಂತೆ ಸಂಭ್ರಮಿಸುವ ಗೋದಿ ಮಾಧ್ಯಮಗಳು ಮತ್ತು ಮೋದಿಯ ಅಂಧ ಭಕ್ತರು ಹೇಳಬೇಕು. ಯಾಕೆಂದರೆ, ದೇಶ ಮತ್ತು ದೇಶಪ್ರೇಮ ಯಾರೊಬ್ಬನ, ಯಾವುದೇ ಪಕ್ಷ ಅಥವಾ ಸಂಘಟನೆಯ ಸ್ವಂತ ಪಿತ್ರಾರ್ಜಿತ ಆಸ್ತಿಯಲ್ಲ. ಅದು ಪ್ರತಿಯೊಬ್ಬ ಭಾರತೀಯರದ್ದು!</p>
]]></content:encoded>
					
		
		
			</item>
		<item>
		<title>ಸಂಸತ್ತಿನ ಪೂರ್ವಸೂರಿಗಳು &#8211; 24 : ಪಿಲೂ ಮೋದಿ: ಹಾಸ್ಯಪ್ರಜ್ಞೆ ಮತ್ತು ಮೇಧಾವಿತನದ ಸಮ್ಮಿಲನದಿಂದ ಕೂಡಿದ್ದ ಸಂಸದ</title>
		<link>https://peepalmedia.com/pilu-modi-an-mp-with-a-blend-of-genius/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 02 Jun 2026 09:54:28 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://peepalmedia.com/?p=79255</guid>

					<description><![CDATA[ಈ ಲೇಖನ ಸರಣಿಯು &#8216;ದಿ ಅರ್ಲಿ ಪಾರ್ಲಿಮೆಂಟರಿಯನ್ಸ್&#8217; ಎಂಬ ಶೀರ್ಷಿಕೆಯ &#8216;ದಿ ವೈರ್&#8217; ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಇಪ್ಪತ್ತ ನಾಲ್ಕನೇ ಲೇಖನ ಸ್ವತಂತ್ರ ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದ ಪಿಲೂ ಮೋದಿ ಅವರು ವಾಸ್ತುಶಿಲ್ಪಿಯಾಗಿದ್ದರು. ರಾಜಕಾರಣಿಯಾಗಿ ಬೆಳೆದ ಅವರು ಅನುಭವೀ ಸಂಸದರಾಗಿ ಗುರುತಿಸಿಕೊಂಡಿದ್ದರು. ನಾಲ್ಕು ಮತ್ತು ಐದನೇ ಲೋಕಸಭೆಗೆ ಚುನಾಯಿತರಾಗಿದ್ದ ಅವರು 1978 ರಿಂದ 1983 ರಲ್ಲಿ ತನ್ನ ಕೊನೆಗಾಲದವರೆಗೂ ರಾಜ್ಯಸಭೆಯ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p class="wp-block-paragraph">ಈ ಲೇಖನ ಸರಣಿಯು &#8216;ದಿ ಅರ್ಲಿ ಪಾರ್ಲಿಮೆಂಟರಿಯನ್ಸ್&#8217; ಎಂಬ ಶೀರ್ಷಿಕೆಯ &#8216;ದಿ ವೈರ್&#8217; ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಇಪ್ಪತ್ತ ನಾಲ್ಕನೇ ಲೇಖನ</p>
</blockquote>



<pre class="wp-block-code"><code>ಮೋದಿ ಅವರ ಹಾಸ್ಯಪ್ರಜ್ಞೆಯು ಭಾಷಣಗಳಲ್ಲಿ ಮಾತ್ರವಲ್ಲದೆ ಬರಹಗಳಲ್ಲಿಯೂ ಎದ್ದು ಕಾಣುತ್ತಿತ್ತು.</code></pre>



<p class="wp-block-paragraph">ಸ್ವತಂತ್ರ ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದ ಪಿಲೂ ಮೋದಿ ಅವರು ವಾಸ್ತುಶಿಲ್ಪಿಯಾಗಿದ್ದರು. ರಾಜಕಾರಣಿಯಾಗಿ ಬೆಳೆದ ಅವರು ಅನುಭವೀ ಸಂಸದರಾಗಿ ಗುರುತಿಸಿಕೊಂಡಿದ್ದರು. ನಾಲ್ಕು ಮತ್ತು ಐದನೇ ಲೋಕಸಭೆಗೆ ಚುನಾಯಿತರಾಗಿದ್ದ ಅವರು 1978 ರಿಂದ 1983 ರಲ್ಲಿ ತನ್ನ ಕೊನೆಗಾಲದವರೆಗೂ ರಾಜ್ಯಸಭೆಯ ಸದಸ್ಯರಾಗಿದ್ದರು. ಒಬ್ಬ ಸಂಸದರಾಗಿದ್ದುಕೊಂಡು ವಿನೋದಾವಳಿಗಳ ಮೂಲಕವೇ ತನ್ನ ಗುರುತನ್ನು ಮೂಡಿಸಿದವರು.</p>



<p class="wp-block-paragraph">1926 ನವೆಂಬರ್‌ 14 ರಂದು ಶ್ರೀಮಂತ ಪಾರ್ಸಿ ಕುಟುಂಬದ ಸರ್‌ ಹೋಮಿ ಮೋದಿ ಅವರ ಮಗನಾಗಿ ಪಿಲೂ ಮೋದಿಯವರ ಜನನ. ಅವರಿಗೆ ಇಬ್ಬರು ಸಹೋದರರಿದ್ದರು. ಭಾರತದಲ್ಲಿ ಕ್ರೆಡಿಟ್‌ ಕಾರ್ಡ್‌ ಸೇವೆಗಳ ಆದ್ಯ ಪ್ರವರ್ತಕರಾದ ಕಾಲಿ ಮೋದಿ ಮತ್ತು ಟಿಸ್ಕೋ ಲಿಮಿಟೆಡ್‌ನ ಮಾಜಿ ಅಧ್ಯಕ್ಷ ರುಸ್ಸಿ ಮೋದಿ ಆ ಸಹೋದದರು.</p>



<p class="wp-block-paragraph">ಪಿಲೂ ಅವರು ಡೆಹ್ರಾಡೂನಿನ ಡೂನ್‌ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಾರೆ. ನಂತರ, ಬಾಂಬೆಯ (ಈಗಿನ ಮುಂಬೈ) ಸರ್‌ ಜೆಜೆ ಕಾಲೇಜ್‌ ಆಫ್‌ ಆರ್ಕಿಟೆಕ್ಚರಲ್ಲಿ ವಾಸ್ತುಶಿಲ್ಪ ಕಲಿಯುತ್ತಾರೆ. ಅಲ್ಲಿಂದ ಬ್ಯಾಚುಲರ್‌ ಆಫ್‌ ಆರ್ಕಿಟೆಕ್ಚರ್‌ ಪದವಿ ಪಡೆದುಕೊಳ್ಳುತ್ತಾರೆ. ವಾಸ್ತುಶಿಲ್ಪದಲ್ಲಿ ಸ್ನಾತಕೋತ್ರ ಪದವಿಗಾಗಿ ಅವರು ಅಮೇರಿಕಾದ ಬರ್ಕ್ಲಿಯಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಸೇರುತ್ತಾರೆ. 1970 ರ ದಶಕದಲ್ಲಿ ಪಾಕಿಸ್ತಾನದ ಪ್ರಧಾನಿಯಾಗಿದ್ದ ಜುಲ್ಫಿಕರ್‌ ಅಲಿ ಭುಟ್ಟೋ ಆಗ ಅವರ ಕಾಲೇಜಿನ ರೂಮ್‌ಮೇಟ್‌ ಮತ್ತು ಆಪ್ತ ಸ್ನೇಹಿತರಾಗಿದ್ದರು. ಕಲಿಕೆಯನ್ನು ಪೂರ್ಣಗೊಳಿಸಿದ ನಂತರ ತನ್ನ ಸಹಪಾಠಿಯಾಗಿದ್ದ ಸ್ವಿಸ್‌ ಮೂಲದ ಅಮೆರಿಕನ್‌ ಲವಿನಾ (ವಿನಾ) ಕೊಲ್ಗನ್‌ ಅವರನ್ನು 1953 ಜನವರಿ 3 ರಂದು ವಿವಾಹವಾಗುತ್ತಾರೆ.</p>



<p class="wp-block-paragraph">ಬರ್ಕ್ಲಿಯ ಕೆಲಸ ಮುಗಿಸಿಕೊಂಡು ಅವರು ಭಾರತಕ್ಕೆ ಮರಳುತ್ತಾರೆ. ಲೆ ಕಾರ್ಬೂಸಿಯರ್ ಅವರೊಂದಿಗೆ ಸೇರಿಕೊಂಡು ಚಂಡೀಗಢ ಕ್ಯಾಪಿಟಲ್ ಪ್ರಾಜೆಕ್ಟ್‌ನಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡುತ್ತಾರೆ. ಅವರು ವಿನ್ಯಾಸ ಮಾಡಿದ ಇನ್ನೊಂದು ಪ್ರಮುಖ ಕಟ್ಟಡವೆಂದರೆ ದುರ್ಗಾ ಬಾಜಪೇಯಿ ಜೊತೆಗೆ ಸೇರಿಕೊಂಡು ವಿನ್ಯಾಸ ಮಾಡಿದ ದೆಹಲಿಯ ಓಬೆರಾಯ್‌ ಹೋಟೆಲ್.‌ ಲಾರ್ಸೆನ್ &amp; ಟೂಬ್ರೊ ಲಿಮಿಟೆಡ್‌ನ ಹಿಂದಿನ ಅಂಗಸಂಸ್ಥೆಯಾಗಿದ್ದ ಎಂಜಿನಿಯರಿಂಗ್ ಕನ್ಸ್ಟ್ರಕ್ಷನ್ ಕಾರ್ಪೊರೇಷನ್ನಿನ ಚೆನ್ನೈಯ ಪ್ರಧಾನ ಕಚೇರಿಯನ್ನು ವಿನ್ಯಾಸ ಮಾಡಿದ್ದು ಕೂಡ ಪಿಲೂ ಮೋದಿ. ಅದು ಫೆಡರೇಶನ್ ಇಂಟರ್ನ್ಯಾಷನಲ್ ಡೆ ಲಾ ಪ್ರಿಕಾಂಟ್ರೇನ್ಟ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.</p>



<p class="wp-block-paragraph">ದಂಪತಿಗಳು ಜಂಟಿಯಾಗಿ 1953 ರಲ್ಲಿ ಚರ್ಚ್‌ಗೇಟ್‌ನ ಸ್ಟೇಡಿಯಂ ಹೌಸ್‌ನಲ್ಲಿ ಮೋದಿ ಮತ್ತು ಕೋಲ್ಗನ್ ಎಂಬ ವಾಸ್ತುಶಿಲ್ಪ ಕಂಪೆನಿಯೊಂದನ್ನು ಆರಂಭಿಸುತ್ತಾರೆ. ಟಿಸ್ಕೋದ ಹಿರಿಯ ಅಧಿಕಾರಿಗಳಿಗಾಗಿ ಮರೈನ್‌ ಲೈನ್ಸಿನಲ್ಲಿ ಒಂದು ಅಪಾರ್ಟ್‌ಮೆಂಟ್‌ ಕಟ್ಟುವುದು ಅವರ ಮೊದಲ ಯೋಜನೆಯಾಗಿತ್ತು. ವೋಲ್ಟಾಸ್‌ ಕಂಪೆನಿಯ ಏರ್‌ ಕಂಡಿಷನರ್‌ನ ಒಂದು ಮಾದರಿಗೆ ಅದರ ಮುಂಭಾಗದ ಕವಚವನ್ನು ಸಹ ಅವರು ವಿನ್ಯಾಸಗೊಳಿಸಿದ್ದರು.</p>



<p class="wp-block-paragraph">ಒಲಿಂಪಸ್‌, ಮೂರು ಟೆಲ್ಕೋ ಕಛೇರಿಗಳು, ಭಾರತ್‌ ಬಿಜ್ಲಿಯ ಪ್ರಧಾನ ಕಛೇರಿ, ಮುಕಂದ್ ಐರನ್ ಮತ್ತು ಸ್ಟೀಲ್, ಸ್ಯಾಂಡೋಜ್‌, ವೋಲ್ಟಾಸ್ ಮತ್ತು ಡೈನರ್ಸ್ ಕ್ಲಬ್ ಮತ್ತು ಬಿಸಿನೆಸ್‌ ಸರ್ವಿಸ್‌ ಸೆಂಟರ್‌ಗಳು ಮೋದಿ ಅವರ ಇತರ ಯೋಜನೆಗಳಾಗಿದ್ದವು.</p>



<p class="wp-block-paragraph">ತನ್ನ ರಾಜಕೀಯ ಬುದುಕಿನಲ್ಲಿ ಮೋದಿ ಅವರು ಉದಾರವಾದ ಮತ್ತು ಸ್ವಾತಂತ್ರ್ಯದ ಪ್ರತಿಪಾದಕರಾಗಿದ್ದರು. ಸ್ವತಂತ್ರ ಪಕ್ಷದ ಸ್ಥಾಪಕ ಸದಸ್ಯರಾಗಿದ್ದ ಅವರು ನಂತರದಲ್ಲಿ ಅದರ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿದ್ದರು.</p>



<p class="wp-block-paragraph"><strong>ಸಂಸದರಾಗಿ</strong><br>1967 ರ 4 ನೇ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಗುಜರಾತಿನ ಗೋಧ್ರಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲುತ್ತಾರೆ. 1971 ರಲ್ಲಿ ಪುನಹ ಚುನಾಯಿತರಾಗಿ ಮಾರ್ಚ್‌ 1977 ರ ತನಕ ಐದನೇ ಲೋಕಸಭೆಯಲ್ಲಿ ಸಂಸದರಾಗಿ ಸೇವೆ ಸಲ್ಲಿಸುತ್ತಾರೆ. ಆದರೆ 1977 ರಲ್ಲಿ ಕೆಲವೇ ಮತಗಳ ಅಂತರದಿಂದ ಸೋಲುತ್ತಾರೆ. 1974 ರಲ್ಲಿ ಮೋದಿ ಅವರು ತನ್ನ ಸ್ವತಂತ್ರ ಪಕ್ಷವನ್ನು ಚರಣ್‌ ಸಿಂಗ್‌ ಅವರ ಭಾರತೀಯ ಕ್ರಾಂತಿ ದಳದೊಂದಿಗೆ ವಿಲೀನಗೊಳಿಸುತ್ತಾರೆ. 1977 ರಲ್ಲಿ ಅದು ಜನತಾ ಪಕ್ಷದೊಂದಿಗೆ ವಿಲೀನವಾಗುತ್ತದೆ. ಒಂದು ವರ್ಷದ ವಿರಾಮದ ನಂತರ ಅವರು 1978 ಏಪ್ರಿಲ್‌ 10 ರಂದು ರಾಜ್ಯಸಭೆ ಪ್ರವೇಶಿಸುತ್ತಾರೆ. 1983 ರಲ್ಲಿ ತನ್ನ ಸಾವಿನ ತನಕವೂ ಅಲ್ಲಿ ಸೇವೆ ಸಲ್ಲಿಸುತ್ತಾರೆ.</p>



<p class="wp-block-paragraph">ತನ್ನ ವೃತ್ತಿ ಬದುಕಿನ ಜೊತೆಗೆ, ಸಂಸತ್ತಿನ ಭಾಷಣಗಳಲ್ಲಿ ವಿನೋದ ಮತ್ತು ಹಾಸ್ಯವನ್ನು ಯಥೇಚ್ಚವಾಗಿ ಬಳಸುವ ಮೂಲಕ ಅವರು ಹೆಸರುವಾಸಿಯಾಗಿದ್ದರು. ತನ್ನ ಸಂಪ್ರದಾಯವಾದಿ ಮತ್ತು ಅಮೇರಿಕಾ ಪರವಾದ ದೃಷ್ಟಿಕೋನಗಳಿಂದಾಗಿ ಕಾಂಗ್ರೆಸ್‌ ಸಂಸದರು ಅವರನ್ನು “ವಾಷಿಂಗ್ಟನ್‌ ಗಿಣಿ” ಎಂದು ಗೇಲಿ ಮಾಡುತ್ತಿದ್ದರು.</p>



<p class="wp-block-paragraph">ಅವರನ್ನು ಕೆಣಕಲೆಂದು ಒಂದು ದಿನ ಅವರು “ನಾನು CIA ಏಜೆಂಟ್‌” ಎಂಬ ಫಲಕ ನೇತುಹಾಕಿಕೊಂಡು ಸದನಕ್ಕೆ ಆಗಮಿಸಿದ್ದರು. ಸಭಾಧ್ಯಕ್ಷರು ಅದನ್ನು ತೆಗೆಯಲು ಸೂಚಿಸಿದಾಗ, “ನಾನು ಇನ್ನು ಮುಂದೆ CIA ಏಜೆಂಟ್‌ ಅಲ್ಲ” ಎಂದು ಹೇಳುತ್ತಲೇ ಫಲಕವನ್ನು ತೆಗೆಯುತ್ತಾರೆ.</p>



<p class="wp-block-paragraph">ಒಂದು ದಿನ ಸದನದಲ್ಲಿ ಚರ್ಚೆ ನಡೆಯುತ್ತಿದ್ದಾಗ ಆಡಳಿತ ಪಕ್ಷದ ಜೆ.ಸಿ. ಜೈನ್‌ ಅವರು ಮೋದಿಯವರನ್ನು ಕೆಣಕಲು ಶುರು ಮಾಡುತ್ತಾರೆ. ಆಗ ಕೋಪಗೊಳ್ಳುವ ಅವರು ಜೈನ್‌ ಅವರಿಗೆ “ಬೊಗಳುವುದನ್ನು ನಿಲ್ಲಿಸಿ” (Stop barking) ಎಂದು ಜೋರು ದನಿಯಲ್ಲಿ ಹೇಳುತ್ತಾರೆ. ಆಗ ಜೈನ್‌ ಅವರು ಎದ್ದು ನಿಂತು “ಸರ್‌, ಅವರು ನನ್ನನ್ನು ನಾಯಿ ಎಂದು ಕರೆಯುತ್ತಿದ್ದಾರೆ, ಇದು ಅಸಂವಿಧಾನಿಕ ಭಾಷೆ” ಎಂದು ಪೀಠದ ಮುಂದೆ ಕೂಗಾಡುತ್ತಾರೆ.</p>



<p class="wp-block-paragraph">ಆಗ ಪೀಠದಲ್ಲಿದ್ದ ಹಿದಾಯತುಲ್ಲಾ ಅವರು ಅದಕ್ಕೆ ಸಮ್ಮತಿಸಿ, “ಇದು ದಾಖಲೆಯಲ್ಲಿ ಉಳಿಸಲಾಗುವುದಿಲ್ಲ” ಎಂದು ಹೇಳುತ್ತಾರೆ. ತಕ್ಷಣವೇ ಮೋದಿ ಅವರು ಚೂರೇ ಚೂರು ಭಾವ ವ್ಯತ್ಯಾಸವಿಲ್ಲದೆ, “ಸರಿ, ಹಾಗಾದರೆ ಕಿರುಚುವುದನ್ನು ನಿಲ್ಲಿಸಿ” (All right then, stop braying) ಎಂದು ಹೇಳಿ ತನ್ನ ಅಸಂವಿಧಾನಿಕ ಮಾತನ್ನು ತಿದ್ದಿಕೊಳ್ಳುತ್ತಾರೆ. ಆ ಮಾತಿನ ಮರ್ಮ ಅರಿಯದ ಜೈನ್‌ ಸುಮ್ಮನಾಗುತ್ತಾರೆ ಮತ್ತು ಅದು ದಾಖಲೆಯಲ್ಲಿ ಸೇರಿಕೊಳ್ಳುತ್ತದೆ.</p>



<p class="wp-block-paragraph">ಒಮ್ಮೆ ಸಚಿವರೊಬ್ಬರು ಬಿಸಿಯೇರಿದ ಚರ್ಚೆಯ ಹೊತ್ತಿನಲ್ಲಿ “ಬೊಗಳುವ ಎಲ್ಲ ನಾಯಿಗಳಿಗೂ ಉತ್ತರ ಕೊಡಬೇಕಾದ ಅಗತ್ಯ ಇಲ್ಲ” ಎಂದು ಹೇಳಿ ಬಿಡುತ್ತಾರೆ. ಆಗ ಎದ್ದು ನಿಲ್ಲುವ ಮೋದಿಯವರು “ಸ್ಪೀಕರ್‌ ಸರ್‌, ಟ್ರೆಶರಿ ಬೆಂಚಿನಲ್ಲಿ ಮಹಾನ್‌ ಮನುಷ್ಯರುಗಳು ಕುಳಿತಿದ್ದಾರೆ. ಅವರು ಸರಕಾರದ ಪಿಲ್ಲರ್‌ಗಳು, ಪ್ರಜಾಪ್ರಭುತ್ವದ ಪಿಲ್ಲರ್‌ಗಳು. ಮತ್ತೆ ನಾವೆಲ್ಲ ನಾಯಿಗಳು. ನಾಯಿಗಳು ಪಿಲ್ಲರ್‌ಗಳ ಜೊತೆಗೆ ಹೇಗೆ ವರ್ತಿಸುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ.” ಎಂದು ಹೇಳುತ್ತಾರೆ. ಒಟ್ಟು ಸದನವೇ ಆಗ ನಗೆಗಡಲಲ್ಲಿ ತೇಳುತ್ತದೆ.</p>



<p class="wp-block-paragraph">ಗ್ಯಾನಿ ಜೈಲ್‌ ಸಿಂಗ್‌ ಅವರು ಗೃಹ ಸಚಿವರಾಗಿದ್ದಾಗ ರಾಜ್ಯಸಭೆಯಲ್ಲಿ ಅವರು ಒಂದು ಮಸೂದೆಯನ್ನು ಮಂಡಿಸುತ್ತಿದ್ದರು. ಆ ಚರ್ಚೆಯಲ್ಲಿ ಮೋದಿಯವರು ಕೂಡ ಭಾಗವಹಿಸಿದ್ದರು. ಮೋದಿ ಅವರ ಟೀಕೆಗೆ ಉತ್ತರಿಸುತ್ತಾ ಜೈಲ್‌ ಸಿಂಗ್‌ ಅವರು ಹಿಂದಿಯಲ್ಲಿ “ಪಿಲೂ ಮೋದಿ ತೋ ಬಡೇ ಸೀಸನಲ್‌ ಮೆಂಬರ್‌ ಹೇ” (ಪಿಲೂ ಮೋದಿ ಅವರು ದೊಡ್ಡ ಸೀಸನಲ್‌ ಮೆಂಬರ್)‌ ಎಂದು ಹೇಳುತ್ತಾರೆ.</p>



<p class="wp-block-paragraph">ಒಟ್ಟು ಸಭೆ ಆಗ ನಗಲು ಶುರು ಮಾಡುತ್ತದೆ. ಆಗ ಜೈಲ್‌ ಸಿಂಗ್‌ ಅವರ ಪಕ್ಕದಲ್ಲಿದ್ದ ಮಂತ್ರಿಯೊಬ್ಬರು ಅದು ಸೀಸನಲ್‌ ಅಲ್ಲ ಸೀಸನ್ಡ್‌ ಎಂದು ಅವರ ಕಿವಿಯಲ್ಲಿ ಉಸುರುತ್ತಾರೆ.</p>



<p class="wp-block-paragraph">ಆಗ ಜೈಲ್‌ ಸಿಂಗ್‌ ಅವರು “ನನಗೆ ಇಂಗ್ಲಿಷ್‌ ಚೂರುಪಾರು ಮಾತ್ರ ಗೊತ್ತು. ಅವರಿಗೆ ಅವರ ಹೆಂಡತಿ ಚೆನ್ನಾಗಿ ಇಂಗ್ಲಿಷ್‌ ಕಲಿಸಿದ್ದಾರೆ.” ಎಂದು ಹೇಳುತ್ತಾರೆ. ಇದನ್ನು ಕೇಳಿದ ಮೋದಿ ಅವರು ಮೇಜು ತಟ್ಟಿ ಆಕ್ಷೇಪ ಎತ್ತುತ್ತಾರೆ. ಇಡೀ ಸದನವೇ ಆಗ ಮೋದಿಯವರನ್ನು ನೋಡುತ್ತಿತ್ತು. ಉಪಸಭಾಪತಿಗಳು “ನಿಮ್ಮ ತಕರಾರು ಏನು?” ಎಂದು ಕೇಳತ್ತಾರೆ. ಆಗ ಮೋದಿ “ಗ್ಯಾನಿಜೀ ಅವರಿಗೆ ಮಾಹಿತಿ ಕೊರತೆ ಇದೆ. ನನ್ನ ಹೆಂಡತಿ ನನಗೆ ಇಂಗ್ಲಿಷ್‌ ಕಲಿಸಿ ಕೊಟ್ಟಿಲ್ಲ. ಬದಲಿಗೆ ನಾನೇ ಆಕೆಗೆ ಇಂಗ್ಲಿಷ್‌ ಕಲಿಸಿ ಕೊಟ್ಟಿರುವುದು.” ಎಂದು ಹೇಳುತ್ತಾರೆ. ಮತ್ತೆ ಸದನವು ನಗೆಗಡಲಲ್ಲಿ ತೇಲುತ್ತದೆ. ಮೋದಿ ಅವರ ಪತ್ನಿ ಸ್ವಿಸ್‌ ಆಗಿದ್ದರು.</p>



<p class="wp-block-paragraph">ಹಾಗೆಯೇ ಒಂದು ದಿನ ರೈಲ್ವೇ ಹಳಿಗಳು ಮತ್ತು ಬೋಗಿಗಳನ್ನು ವೇಗವಾಗಿ ಬದಲಾಯಿಸಲು ಸುಲಭವಾಗುವಂತೆ ಅವುಗಳನ್ನು ಆಮದು ಮಾಡಿಕೊಳ್ಳುವ ಕುರಿತು ಸದನದಲ್ಲಿ ಚರ್ಚೆ ನಡೆಯುತ್ತಿತ್ತು. ವಿರೋಧ ಪಕ್ಷದ ಸಂಸದರಾಗಿದ್ದ ಇಂದ್ರದೀಪ್‌ ಸಿನ್ಹಾ ಅವರು ಆಮದು ಮಾಡಿಕೊಳ್ಳುವ ಬದಲಾಗಿ ಸ್ಥಳೀಯವಾಗಿ ತಯಾರಿಸುವ ಕುರಿತು ಮಾತನಾಡುತ್ತಾರೆ. ಆಮದಿನಲ್ಲಿ ಮತ್ತಷ್ಟು ವಿಳಂಬವೆಂದು ಅವರು ನಂಬಿದ್ದರು. ಆಗ ಮಧ್ಯಪ್ರವೇಶ ಮಾಡುವ ಮೋದಿ ಅವರು, ಆಮದು ಮಾಡುವಿದರಿಂದ ಅಲ್ಲ, ಬದಲಿಗೆ ಅವುಗಳನ್ನು ಇಲ್ಲೇ ತಯಾರಿಸುವ ಕಾರಣದಿಂದ ವಿಳಂಬ ಆಗುತ್ತದೆ ಎಂದು ಹೇಳುತ್ತಾರೆ. ಮೋದಿಯವರ ಮಾತಿಗೆ ಉತ್ತರಿಸುವ ಸಿನ್ಹಾ “ಆಮದು ಮಾಡಿಕೊಳ್ಳುವ ಏಜೆಂಟ್‌ ನೀವೊಬ್ಬರೇ ಅಲ್ಲ, ಇಲ್ಲಿ ಬಹಳಷ್ಟು ಜನ ಇದ್ದಾರೆ” ಎಂದು ಹೇಳುತ್ತಾರೆ. ಸಭಾಧ್ಯಕ್ಷರು ತಕ್ಷಣವೇ “ಅವರು ಆಮದು ಏಜೆಂಟ್‌ ಅಲ್ಲ, ಅವರೊಬ್ಬ ರಫ್ತು ಏಜೆಂಟ್” ಎಂದು ಹೇಳಿ ಸಿನ್ಹಾ ಅವರ ಮಾತನ್ನು ತಿದ್ದುತ್ತಾರೆ. ಅದಕ್ಕೆ ಮೋದಿಯವರ ಉತ್ತರ ಹೀಗಿತ್ತು. “ನಾನು ಖಾಲಿ ಮಾರುಕಟ್ಟೆಯಲ್ಲಿ ಐಡಿಯಾಗಳನ್ನು ರಫ್ತು ಮಾಡುತ್ತೇನೆ.”</p>



<p class="wp-block-paragraph">ಶ್ಯಾಮ್‌ ಲಾಲ್‌ ಯಾದವ್‌ ಅವರು ರಾಜ್ಯಸಭೆಯ ಉಪಸಭಾಪತಿಯಾಗಿ ಆಯ್ಕೆಯಾದಾಗ, ಸದನದ ಎಲ್ಲ ರಾಜಕೀಯ ಪಕ್ಷಗಳು ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದರು. ಮೋದಿಯವರು ಕೂಡ ಹೊಸ ಉಪಸಭಾಪತಿಗಳನ್ನು ಅಭಿನಂದಿಸುತ್ತಾ ಹೀಗೆ ಎಚ್ಚರಿಸಿದರು, “ನನ್ನ ಗೆಳೆಯರಾದ ಶ್ರೀ ಶ್ಯಾಮ್‌ ಲಾಲ್‌ ಅವರಿಗೆ ಅಭಿನಂದನೆ ಸಲ್ಲಿಸುವಂತೆ ಎಲ್ಲರ ಬಳಿ ಕೇಳಿಕೊಳ್ಳುತ್ತೇನೆ. ನನ್ನ ಆತ್ಮೀಯ ಗೆಳೆಯ ಈ ಹಿಂದಿನಂತೆಯೇ ಮುಂದೆಯೂ ಪಕ್ಷಪಾತಿಯಾಗಿಯೇ ಮುಂದುವರಿಯುತ್ತಾರೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ. ನನ್ನ ಗೆಳೆಯರೂ, ನೆರೆಯವರೂ ಮತ್ತು ಸಹೋದ್ಯೋಗಿಯೂ ಆದ ಅವರು ಯಾವುದೇ ಸಂಕಷ್ಟಗಳಿಲ್ಲದೆ, ಆರಾಮವಾಗಿ ಪೀಠದಲ್ಲಿರಲಿ ಎಂದು ನಾನು ಹಾರೈಸುತ್ತೇನೆ. ಜೊತೆಗೆ, ಅವರು ಪೀಠದಲ್ಲಿ ಸರಿಯಾಗಿ ವರ್ತಿಸದಿದ್ದರೆ ನಾನು ಅವರ ಸೀಟಿನಲ್ಲಿ ಕೂತು ಬಿಡುತ್ತೇನೆ.” ಉಪಸಭಾಪತಿಗಳು ಸಭಾಧ್ಯಕ್ಷ ಪೀಠದಲ್ಲಿರದಿದ್ದಾಗ ವಿರೋಧ ಪಕ್ಷದ ನಾಯಕನ ಪಕ್ಕದಲ್ಲಿಯೇ ಕೂತಿರುತ್ತಾರೆ.</p>



<p class="wp-block-paragraph">ಮೋದಿ ಅವರ ಹಾಸ್ಯ ಪ್ರಜ್ಞೆಯು ಕೇವಲ ಅವರ ಭಾಷಣಗಳಲ್ಲಿ ಮಾತ್ರವಲ್ಲ, ಬರವಣಿಗೆಯಲ್ಲಿಯೂ ಎದ್ದು ಕಾಣುತ್ತಿತ್ತು. ಅವರು ತಮ್ಮ ಪತ್ರಗಳಲ್ಲಿ ಇಂದಿರಾ ಗಾಂಧಿಯವರನ್ನು IG ಎಂದು ಸಂಬೋಧಿಸುತ್ತಿದ್ದರು. ಹಾಗೆಯೇ ತಮ್ಮ ಹೆಸರನ್ನು PM ಎಂದು ನಮೂದಿಸಿ ಸಹಿ ಹಾಕುತ್ತಿದ್ದರು. ಅವರು ಇಂದಿರಾ ಗಾಂಧಿಯವರ ಬಳಿ “ನೀವು ಬರೀ ತಾತ್ಕಾಲಿಕ ಪ್ರಧಾನಿ, ನಾನೇ ಶಾಶ್ವತ ಪ್ರಧಾನಿ” ಎಂದು ಹೇಳಿಕೊಳ್ಳುತ್ತಿದ್ದರು.</p>



<p class="wp-block-paragraph">1975 ರಲ್ಲಿ ಇಂದಿರಾ ಗಾಂಧಿ ಸರಕಾರ ಹೇರಿದ್ದ ತುರ್ತು ಪರಿಸ್ಥಿತಿಯಲ್ಲಿ MISA ಅಡಿಯಲ್ಲಿ ಅವರನ್ನು ಬಂಧಿಸಲಾಗಿತ್ತು. ಹಾಗೆ ಬಂಧನಕ್ಕೊಳಗಾಗಿ ಸುಮಾರು 16 ತಿಂಗಳುಗಳ ಕಾಲ ತಿಹಾರ್‌ ಮತ್ತು ರೋಹ್ಟಕ್‌ ಜೈಲುಗಳಲ್ಲಿ ಕಳೆದಿದ್ದರು.</p>



<p class="wp-block-paragraph">ಒಬ್ಬ ವಿನೋದಪ್ರಿಯ ಸಂಸದ ಮತ್ತು ಅದ್ಭುತ ವಾಸ್ತುಶಿಲ್ಪಿ ಎಂಬುದರ ಜೊತೆಗೆ, ಮೋದಿ ಒಬ್ಬ ಜನಪ್ರಿಯ ಲೇಖಕರಾಗಿಯೂ ಗುರುತಿಸಿಕೊಂಡಿದ್ದರು. ಅವರು ಬರೆದ ಎರಡು ಪುಸ್ತಕಗಳಿವೆ.</p>



<p class="wp-block-paragraph">ಮೊದಲ ಪುಸ್ತಕ, ಜುಲ್ಫಿಕರ್‌ ಅಲಿ ಅವರ ಕಾಲ ಮತ್ತು ಬದುಕಿನ ಬಗ್ಗೆ ಬರೆದ ಪುಸ್ತಕ“ಜುಲ್ಫಿ, ಮೈ ಫ್ರೆಂಡ್‌” (1973). ಎರಡನೇ ಪುಸ್ತಕ, “ಡೆಮಾಕ್ರಸಿ ಮೀನ್ಸ್‌ ಬ್ರೆಡ್‌ ಆಂಡ್‌ ಫ್ರೀಡಂ” (1979). ಇದನ್ನು ಅವರು ಬರೆದದ್ದು ತನ್ನ 16 ತಿಂಗಳುಗಳ ಕಾಲದ ಜೈಲುವಾಸದ ಸಮಯದಲ್ಲಿ. ಈ ಪುಸ್ತಕವು ಪ್ರಜಾಪ್ರಭುತ್ವ ಆಶಯದ ಉಗಮ ಮತ್ತು ಅದನ್ನು ಉಳಿಸಿಕೊಳ್ಳುವ ಕೆಲಸಕಾರ್ಯಗಳು ಹಾಗೂ ಸಂಸ್ಥೆಗಳ ಬಗೆಗಿನ ಹುಡುಕಾಟದ ಒಂದು ಪ್ರಯತ್ನವಾಗಿತ್ತು.</p>



<p class="wp-block-paragraph">ಬಾಂಬೆಯಿಂದ ಪ್ರಕಟವಾಗುತ್ತಿದ್ದ ಮಾರ್ಚ್‌ ಆಫ್‌ ದಿ ನೇಷನ್‌ ಎಂಬ ಇಂಗ್ಲಿಷ್‌ ವಾರಪತ್ರಿಕೆಯ ಸಂಪಾದಕರಾಗಿ ಕೂಡ ಅವರು ಕೆಲಸ ಮಾಡಿದ್ದರು. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಿಗೆ ಹಲವು ಲೇಖನಗಳನ್ನು ಬರೆದಿದ್ದರು.</p>



<p class="wp-block-paragraph">ಒಂದು ದಶಕಕ್ಕಿಂತಲೂ ಹೆಚ್ಚು ಕಾಲ ಭಾರತದ ರಾಜಕಾರಣಕ್ಕೆ ವಿಶೇಷವಾದ ವಿನೋದ, ತೆಳುಹಾಸ್ಯ ಮತ್ತು ಪ್ರಬುದ್ಧತೆಯ ಲೇಪನವನ್ನು ನೀಡಿದ್ದ ಪಿಲೂ ಮೋದಿ ಅವರು ನಿದ್ದೆಯಲ್ಲಿದ್ದಾಗಲೇ ಮರಣ ಹೊಂದಿದರು. ಅವರ ಸಾವಿಗಿಂತ ಕೆಲದಿನಗಳ ಮುಂಚೆ ಇಂಡಿಯಾ ಟುಡೇ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೀಗೆ ಹೇಳುತ್ತಾರೆ, “ಜಗತ್ತು ಒಂದು ಐಡಿಯಾದ ಸುತ್ತ ಸುತ್ತುತ್ತಿದೆ. ಶುದ್ಧ ಹೃದಯ, ಒಳ್ಳೆಯ ಉದ್ದೇಶ ಮತ್ತು ದೃಢಸಂಕಲ್ಪವಿದ್ದರೆ ಪ್ರತಿಯೊಂದು ಸಮಸ್ಯೆಗೂ ಇಲ್ಲಿ ಪರಿಹಾರವಿದೆ.” ಅವತ್ತು ತಾನೊಂದು ಹೊಸ ರಾಜಕೀಯ ಪಕ್ಷವನ್ನು ಆರಂಭಿಸುವ ಕುರಿತು ಕೂಡ ಮಾಹಿತಿ ನೀಡಿದ್ದರು. ಆದರೆ 1983 ಜನವರಿ 29 ರಂದು ಅವರು ನಿಧನರಾದರು. ಆಗ ಅವರ ಪ್ರಾಯ 57.</p>



<p class="wp-block-paragraph"><strong><em>ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.</em></strong></p>
]]></content:encoded>
					
		
		
			</item>
		<item>
		<title>ದೇವರ ನಾಡಿನ ಕರುಳು ಸುಡುವ ಹಸಿವಿಗೆ ಬಲಿಯಾದ ಅಟ್ಟಪ್ಪಾಡಿಯ ಮಧುವಿನ ಕಥೆ!</title>
		<link>https://peepalmedia.com/bowels-of-gods-country-have-succumbed-to-the-burning-hunger/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 26 May 2026 11:48:35 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://peepalmedia.com/?p=78948</guid>

					<description><![CDATA[&#8220;ಒಂದು ಹಿಡಿ ಅಕ್ಕಿ ಕದ್ದಿದ್ದಕ್ಕೆ ಹೊಡೆದು ಕೊಂದರು, ಈಗ ಕೇರಳ ಹೈಕೋರ್ಟ್ 12 ಜನರಿಗೆ ಲೈಫ್ ಟೈಮ್ ಜೈಲು ಶಿಕ್ಷೆ ಕೊಟ್ಟಿದೆ&#8221; ಎಂದು ಇಂದು ಅನೇಕ ಮಾಧ್ಯಮಗಳು ಸುದ್ದಿ ಮಾಡಿವೆ! ಮೇಲ್ನೋಟಕ್ಕೆ ಇದೊಂದು ಕಳ್ಳತನ ಮತ್ತು ಕೊಲೆಯ ಸ್ಟೋರಿ ತರಹ ಕಾಣುತ್ತದೆ. ನಾವೆಲ್ಲರೂ &#8220;ಪಾಪ, ತಪ್ಪು ಮಾಡಿದವರಿಗೆ ಶಿಕ್ಷೆಯಾಯ್ತು” ಎಂದುಕೊಂಡು ಎಂದುಕೊಂಡು ಫೇಸ್ಟುಕ್ಕಿನಲ್ಲಿ ಒಂದು ಲೈಕ್ ಒತ್ತಿ ಸ್ಕಾಲ್ ಮಾಡಿಕೊಂಡು ಹೋಗುತ್ತೇವೆ. ಆದರೆ, ಸ್ವಲ್ಪ ನಿಲ್ಲಿ. ಈ ಮಧು ಅನ್ನೋ ಅಮಾಯಕನ ಸಾವಿನ ಹಿಂದೆ ಒಂದು ಇಡೀ [&#8230;]]]></description>
										<content:encoded><![CDATA[
<pre class="wp-block-code"><code>"..ಮಧು ಅನ್ನೋ ಅಮಾಯಕನ ಸಾವಿನ ಹಿಂದೆ ಒಂದು ಇಡೀ ಬುಡಕಟ್ಟು ಜನಾಂಗದ ಸಮಾಧಿಯಿದೆ. ನೂರಾರು ವರ್ಷಗಳ ವಂಚನೆಯ ಕರಾಳ ಇತಿಹಾಸವಿದೆ. ಒಂದು ದಟ್ಟವಾದ ಕಾಡು, ಅಲ್ಲಿನ ಡೆಮೋಗ್ರಫಿ ಮತ್ತು ಜಿಯಾಗ್ರಫಿ ಹೇಗೆ ಕೆಲವು ದುರಾಸೆಯ ವಲಸಿಗರಿಂದ ಸಂಪೂರ್ಣವಾಗಿ ನಾಶವಾಯ್ತು ಅನ್ನೋದರ ರಕ್ತಸಿಕ್ತ ಕಥೆಯಿದು.." ಲೇಖಕರಾದ ವಿಆರ್ ಕಾರ್ಪೆಂಟರ್ ಅವರ ಬರಹದಲ್ಲಿ </code></pre>



<p class="wp-block-paragraph">&#8220;ಒಂದು ಹಿಡಿ ಅಕ್ಕಿ ಕದ್ದಿದ್ದಕ್ಕೆ ಹೊಡೆದು ಕೊಂದರು, ಈಗ ಕೇರಳ ಹೈಕೋರ್ಟ್ 12 ಜನರಿಗೆ ಲೈಫ್ ಟೈಮ್ ಜೈಲು ಶಿಕ್ಷೆ ಕೊಟ್ಟಿದೆ&#8221; ಎಂದು ಇಂದು ಅನೇಕ ಮಾಧ್ಯಮಗಳು ಸುದ್ದಿ ಮಾಡಿವೆ! ಮೇಲ್ನೋಟಕ್ಕೆ ಇದೊಂದು ಕಳ್ಳತನ ಮತ್ತು ಕೊಲೆಯ ಸ್ಟೋರಿ ತರಹ ಕಾಣುತ್ತದೆ. ನಾವೆಲ್ಲರೂ &#8220;ಪಾಪ, ತಪ್ಪು ಮಾಡಿದವರಿಗೆ ಶಿಕ್ಷೆಯಾಯ್ತು” ಎಂದುಕೊಂಡು ಎಂದುಕೊಂಡು ಫೇಸ್ಟುಕ್ಕಿನಲ್ಲಿ ಒಂದು ಲೈಕ್ ಒತ್ತಿ ಸ್ಕಾಲ್ ಮಾಡಿಕೊಂಡು ಹೋಗುತ್ತೇವೆ.</p>



<p class="wp-block-paragraph">ಆದರೆ, ಸ್ವಲ್ಪ ನಿಲ್ಲಿ. ಈ ಮಧು ಅನ್ನೋ ಅಮಾಯಕನ ಸಾವಿನ ಹಿಂದೆ ಒಂದು ಇಡೀ ಬುಡಕಟ್ಟು ಜನಾಂಗದ ಸಮಾಧಿಯಿದೆ. ನೂರಾರು ವರ್ಷಗಳ ವಂಚನೆಯ ಕರಾಳ ಇತಿಹಾಸವಿದೆ. ಒಂದು ದಟ್ಟವಾದ ಕಾಡು, ಅಲ್ಲಿನ ಡೆಮೋಗ್ರಫಿ (Demography) ಮತ್ತು ಜಿಯಾಗ್ರಫಿ (Geography) ಹೇಗೆ ಕೆಲವು ದುರಾಸೆಯ ವಲಸಿಗರಿಂದ ಸಂಪೂರ್ಣವಾಗಿ ನಾಶವಾಯ್ತು ಅನ್ನೋದರ ರಕ್ತಸಿಕ್ತ ಕಥೆಯಿದು. ಬನ್ನಿ, ಕೇರಳದ &#8216;ದೇವಭೂಮಿ&#8217; ಅಟ್ಟಪ್ಪಾಡಿಯ ಕಣ್ಣೀರಿನ ಕಥೆಯನ್ನು, ಯಾವುದನ್ನೂ ಮುಚ್ಚಿಡದೆ ಅರ್ಥಮಾಡಿಕೊಳ್ಳೋಣ. ಇದು ಕೇವಲ ಮಧುವಿನ ಕಥೆಯಲ್ಲ. ಇದು ನಮ್ಮ ಸಿಸ್ಟಮ್ನ. ನಮ್ಮ &#8216;ನಾಗರಿಕ ಸಮಾಜದ ಕ್ರೌರ್ಯದ ಕಥೆ.</p>



<p class="wp-block-paragraph"><strong>ಅಟ್ಟಪ್ಪಾಡಿಯ ಡೆಮೋಗ್ರಫಿ ಮತ್ತು ಜಿಯಾಗ್ರಫಿಯ ವಿನಾಶ</strong><br>ನಾನು ಹೇಳುತ್ತಿರುವುದು ಕೇರಳದ ಪಾಲಕ್ಕಾಡ್ ಜಿಲ್ಲೆಯ &#8216;ಅಟ್ಟಪ್ಪಾಡಿ&#8217; ಬಗ್ಗೆ ಸುಮಾರು 745 ಚದರ ಕಿಲೋಮೀಟರ್ ವಿಸ್ತೀರ್ಣ ಇರುವ ಈ ಜಾಗೆ, ಕೇರಳದ ಮೊಟ್ಟಮೊದಲ ಟ್ರೈಬಲ್ ಬ್ಲಾಕ್. ಇದು ಕೇವಲ ಒಂದು ಕಾಡಲ್ಲ, ಇರುಳ (Irula), ಮುಡುಗ (Muduga) ಮತ್ತು ಕುರುಂಬ (Kurumba) ಎಂಬ ಮೂರು ಪುರಾತನ ಬುಡಕಟ್ಟು ಸಮುದಾಯಗಳ ಪಾಲಿಗೆ ಇದೊಂದು ದೇವಭೂಮಿ. ಸ್ವಾತಂತ್ರ್ಯ ಬಂದ ಹೊಸತರಲ್ಲಿ, ಅಂದರೆ 1951ರ ಸುಮಾರಿಗೆ ಈ ಪ್ರದೇಶದ ಶೇಕಡಾ 90 ಕ್ಕೂ ಹೆಚ್ಚು ಭಾಗ ದಟ್ಟವಾದ ಅರಣ್ಯದಿಂದ ಕೂಡಿತ್ತು. ಅಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 90-91 ರಷ್ಟು ಮಂದಿ ಈ ಮೂಲನಿವಾಸಿಗಳೇ ಆಗಿದ್ದರು.</p>



<p class="wp-block-paragraph">ಆದರೆ, ಇವತ್ತಿನ ಪರಿಸ್ಥಿತಿ ಏನಾಗಿದೆ ಗೊತ್ತಾ? ಅದೇ ಅಟ್ಟಪ್ಪಾಡಿಯಲ್ಲಿ ವಾಸಿಸುತ್ತಿರುವ ಅಂದಾಜು 70,000 ಜನಸಂಖ್ಯೆಯಲ್ಲಿ, ಆದಿವಾಸಿಗಳು ಕೇವಲ ಶೇಕಡಾ 41ಕ್ಕೆ ಕುಸಿದಿದ್ದಾರೆ. ಎಲ್ಲಿಂದಲೋ ಉದ್ಯೋಗ ಅರಸಿಕೊಂಡು, ಕೇರಳದ ಇತರ ಭಾಗಗಳಿಂದ, ತಮಿಳುನಾಡಿನಿಂದ ಬಂದ ವಲಸಿಗರ (Settlers) ಜನಸಂಖ್ಯೆ ಶೇಕಡಾ 9 ರಿಂದ ಶೇಕಡಾ 59 ಕ್ಕೆ ಏರಿಕೆಯಾಗಿದೆ. ಜಸ್ಟ್ ಇಮ್ಯಾಜಿನ್ ಮಾಡಿ, ತಮ್ಮದೇ ನೆಲದಲ್ಲಿ, ಕಾಡಿನ ಒಡೆಯರಾಗಿದ್ದವರು ಇವತ್ತು ಅಲ್ಪಸಂಖ್ಯಾತರಾಗಿದ್ದಾರೆ!</p>



<p class="wp-block-paragraph">ಇದಕ್ಕೆ ಪ್ರಮುಖ ಕಾರಣ 1967 ರಲ್ಲಿ ಕೇರಳ ಸರ್ಕಾರ ತಂದ &#8216;ಕೇರಳ ಪ್ರೈವೇಟ್ ಫಾರೆಸ್ಟ್ ಆಕ್ಟ್&#8217;. ಈ ಕಾಯ್ದೆಯ ಪ್ರಕಾರ ಒಬ್ಬ ವ್ಯಕ್ತಿ ಕೇವಲ 15 ಎಕರೆ ಭೂಮಿಯನ್ನು ಮಾತ್ರ ಹೊಂದಿರಬಹುದು ಎಂಬ ರೂಲ್ ಬಂತು. ಇದರಿಂದ ತಪ್ಪಿಸಿಕೊಳ್ಳಲು ದೊಡ್ಡ ಭೂಮಾಲೀಕರು ತಮ್ಮ ಜಾಗವನ್ನು ಕವಡೆ ಕಾಸಿಗೆ ಹೊರಗಿನಿಂದ ಬಂದ ಗುತ್ತಿಗೆದಾರರಿಗೆ, ಮರಮುಟ್ಟುಗಳ ವ್ಯಾಪಾರಿಗಳಿಗೆ ಮಾರಿದರು. ಈ ಹೊಸ ಬಂಡವಾಳಶಾಹಿಗಳು, ಭ್ರಷ್ಟ ರಾಜಕಾರಣಿಗಳ ಜೊತೆ ಸೇರಿ, ಇಡೀ ಕಾಡನ್ನು ನಾಶ ಮಾಡಿದರು. ಶೇಕಡಾ 90 ರಷ್ಟಿದ್ದ ಕಾಡು, ಕೇವಲ 15 ವರ್ಷಗಳಲ್ಲಿ ಶೇಕಡಾ 82 ಕ್ಕೆ ಕುಸಿದು, ಇವತ್ತು ಕೇವಲ ಶೇಕಡಾ 20 ಕ್ಕೆ ಬಂದು ನಿಂತಿದೆ. 1980 ರ ದಶಕದಲ್ಲಿ &#8216;ಸೈಲೆಂಟ್ ವ್ಯಾಲಿ&#8217; ವಿವಾದ ಬರುವವರೆಗೂ ಈ ಮರಗಳ ಮಾರಣಹೋಮ ನಿರಂತರವಾಗಿ ನಡೆಯುತ್ತಲೇ ಇತ್ತು.</p>



<p class="wp-block-paragraph"><strong>ಮೂರು ಕಾಸಿಗೆ ಬಿಕರಿಯಾದ ಬದುಕು: ವ್ಯವಸ್ಥಿತ ಭೂಗಳ್ಳತನ</strong><br>ಯುವಜನರೇ, ಒಂದು ವಿಷಯ ನೆನಪಿಡಿ. ಒಂದು ಸಮುದಾಯವನ್ನು ನಾಶ ಮಾಡಬೇಕು ಅಂದರೆ, ಮೊದಲು ಅವರ ನೆಲವನ್ನು ಕಸಿಯಬೇಕು. ಭಾರತಕ್ಕೆ ವಲಸೆ ಬಂದ ಆರ್ಯರು ಮಾಡಿದ್ದೂ ಅದನ್ನೇ… ಅಟ್ಟಪ್ಪಾಡಿಯಲ್ಲಿ ಆಗಿದ್ದೂ ಅದೇ. ವಲಸಿಗರು ಅಟ್ಟಪ್ಪಾಡಿಗೆ ಕಾಲಿಟ್ಟಾಗಿನಿಂದ, ಬರೋಬ್ಬರಿ 10472 ಎಕರೆಗೂ ಹೆಚ್ಚು ಆದಿವಾಸಿ ಭೂಮಿಯನ್ನು ವ್ಯವಸ್ಥಿತವಾಗಿ ಕಬಳಿಸಲಾಗಿದೆ.</p>



<ul class="wp-block-list">
<li><strong>ಇರುಳ ಸಮುದಾಯ: 8996.14 ಎಕರೆ ಕಳೆದುಕೊಂಡಿತು.</strong></li>



<li><strong>ಮುಡುಗ ಸಮುದಾಯ: 1083.17 ಎಕರೆ ಕಳೆದುಕೊಂಡಿತು.</strong></li>



<li><strong>ಕುರುಂಬ ಸಮುದಾಯ: 26.00 ಎಕರೆ ಕಳೆದುಕೊಂಡಿತು.</strong></li>
</ul>



<p class="wp-block-paragraph">ಹೇಗೆ ಕದ್ದರು ಈ ಭೂಮಿಯನ್ನ? ಕೇಳಿದರೆ ನಿಮ್ಮ ರಕ್ತ ಕುದಿಯುತ್ತದೆ. ಕಾಡನ್ನೇ ನಂಬಿದ್ದ ಈ ಮುಗ್ಧಜನರಿಗೆ ದುಡ್ಡು, ಪ್ರಾಪರ್ಟಿ, ಡಾಕ್ಯುಮೆಂಟ್ ಅಂದರೆ ಏನು ಅಂತಾನೇ ಗೊತ್ತಿರಲಿಲ್ಲ. ವಲಸಿಗರು ಇವರಿಗೆ ಸಣ್ಣಪುಟ್ಟ ಸಾಲ ಕೊಟ್ಟು, ಅದಕ್ಕೆ ಪ್ರತಿಯಾಗಿ ಅವರ ನೂರಾರು ಎಕರೆ ಭೂಮಿಯನ್ನು ಜಪ್ತಿ ಮಾಡಿಕೊಂಡರು. ಹಲವರಂತೂ ಕೇವಲ ಒಂದೆರಡು ಬಾಟಲಿ ಮದ್ಯ ಕುಡಿಸಿ, ಖಾಲಿ ಪೇಪರ್‌ಗಳ ಮೇಲೆ ಹೆಬ್ಬೆಟ್ಟು ಒತ್ತಿಸಿಕೊಂಡು ಜಾಗ ಕಿತ್ತುಕೊಂಡರು. ಇನ್ನು ಕೆಲವು ವಿಕೃತ ವಲಸಿಗರು, ಆದಿವಾಸಿ ಮಹಿಳೆಯರನ್ನು ಮದುವೆಯಾಗುವ ನಾಟಕವಾಡಿ, ಅವರ ಹೆಸರಿನಲ್ಲಿ ಭೂಮಿ ಖರೀದಿಸಿ, ಆಮೇಲೆ ಆ ಹೆಣ್ಣುಮಕ್ಕಳನ್ನು ನಡುಬೀದಿಗೆ ತಳ್ಳಿದರು.</p>



<p class="wp-block-paragraph">ಇದೇ ಇರುಳ ಸಮುದಾಯದ ವೃದ್ಧ &#8216;ಕಾಳಿಮೂಪ್ಪನ್&#8217; ಅನ್ನೋ ಅಜ್ಜನ ಕಥೆ ಕೇಳಿ. ಭೂತಿವಾಳಿ ಹಳ್ಳಿಯ ಈತನ ಬಳಿ 9 ಎಕರೆ 10 ಸೆಂಟ್ಸ್ ಕೃಷಿ ಭೂಮಿ ಇತ್ತು. ಮೇಲ್ಟಾತಿಯ ವಲಸಿಗನೊಬ್ಬ ಇದನ್ನ ಬಲವಂತವಾಗಿ ಕಸಿದುಕೊಂಡ. 1990 ರಿಂದ ಸತತ ಮೂರು ದಶಕಗಳ ಕಾಲ, ಅಕ್ಷರ ಬಾರದ ಈ ವಯಸ್ಸಾದ ಜೀವ ತನ್ನ ಭೂಮಿಗಾಗಿ ಕೋರ್ಟು ಮೆಟ್ಟಿಲೇರಿದ.</p>



<p class="wp-block-paragraph">ವಕೀಲರ ಫೀಸ್ ಕಟ್ಟಲು ತನ್ನಲ್ಲಿದ್ದ ದನಗಳನ್ನೂ ಮಾರಿದ. 2005 ರಲ್ಲಿ 13 ದಿನ ಉಪವಾಸ ಸತ್ಯಾಗ್ರಹ ಮಾಡಿದಾಗ, ಅಧಿಕಾರಿಗಳು ಭೂಮಿ ವಾಪಸ್ ಕೊಡಲು ಆದೇಶ ಮಾಡಿದರು. ಆದರೆ, ಆತ ತನ್ನದೇ ಹೊಲ ಉಳುಮೆ ಮಾಡಲು ಹೋದಾಗ, ವಲಸಿಗರು ಆತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದರು. ಅಷ್ಟೇ ಅಲ್ಲ, ಭ್ರಷ್ಟ ಪೊಲೀಸರಿಗೆ ಲಂಚ ಕೊಟ್ಟು, ಆಸ್ಪತ್ರೆಯಲ್ಲಿದ್ದ ಕಾಳಿಮೂಪ್ಪನ್ ಮೇಲೆಯೇ ಸುಳ್ಳು ಮರ್ಡರ್&#8221; ಅಟೆಂಪ್ಟ್ ಕೇಸ್ ಹಾಕಿ 2 ತಿಂಗಳು ಜೈಲಿಗೆ ತಳ್ಳಿದರು! 2007 ರಲ್ಲಿ ಕೋರ್ಟ್ 5 ಎಕರೆ ಭೂಮಿ ಮರಳಿಸಲು ಹೇಳಿದರೂ, ಜಿಲ್ಲಾಡಳಿತ ಇವತ್ತಿಗೂ ಆ ಆದೇಶ ಜಾರಿ ಮಾಡಿಲ್ಲ.</p>



<p class="wp-block-paragraph">ರಾಷ್ಟ್ರಪ್ರಶಸ್ತಿ ವಿಜೇತ ಆದಿವಾಸಿ ಗಾಯಕಿ ನಂಜಿಯಮ್ಮ ಅವರ ಪೂರ್ವಜರ ಭೂಮಿಯನ್ನೂ ಹೀಗೆಯೇ ಕಬಳಿಸಲಾಗಿದೆ. ಆಕೆಯೂ ಇಂದಿಗೂ ನ್ಯಾಯಕ್ಕಾಗಿ ಕೋರ್ಟ್ ಅಲೆಯುತ್ತಿದ್ದಾಳೆ. ದಾಖಲಾದ 2523 ಪ್ರಕರಣಗಳಲ್ಲಿ, ಕೇವಲ 13 ಕೇಸ್‌ಗಳನ್ನು ಇತ್ಯರ್ಥ ಮಾಡಿ ಬರೀ 44.77 ಎಕರೆ ಭೂಮಿಯನ್ನು ಮಾತ್ರ ಸರ್ಕಾರ ವಾಪಸ್‌ ಕೊಡಿಸಿದೆ ಎಂದರೆ, ನಮ್ಮ ಸಿಸ್ಟಮ್ ಎಷ್ಟರ ಮಟ್ಟಿಗೆ ಫೇಲ್ ಆಗಿದೆ ಅಂತ ನೀವೇ ಯೋಚಿಸಿ.</p>



<p class="wp-block-paragraph"><strong>ಹಸಿವು, ಅಪೌಷ್ಟಿಕತೆ ಮತ್ತು ಆಡಳಿತ ಯಂತ್ರದ ಕುರುಡುತನ</strong><br>ಕಾಡು ನಾಶವಾಯ್ತು, ಭೂಮಿ ರೂಮಿ ಹೋಯ್ತು. ರಾಗಿ, ಜೋಳ ಬೆಳೆದುಕೊಂಡು ನೆಮ್ಮದಿಯಾಗಿದ್ದ ಜನ, ಇವತ್ತು ತಮ್ಮದೇ ಭೂಮಿಯಲ್ಲಿ ದಿನಗೂಲಿ ಕಾರ್ಮಿಕರಾದರು.ಸರ್ಕಾರದ ಅವೈಜ್ಞಾನಿಕ ನೀತಿಗಳು ಇವರ ಹೊಟ್ಟೆಗೆ ದೊಡ್ಡ ಕಲ್ಲು ಹಾಕಿದವು. 1995ರಲ್ಲಿ ಜಪಾನ್ ಬ್ಯಾಂಕ್ (JBIC) ಆರ್ಥಿಕ ನೆರವಿನೊಂದಿಗೆ &#8216;ಅಹಡ್ಸ್&#8217; (AHADS) ಅನ್ನೋ ಪ್ರಾಜೆಕ್ಟ್ ಬಂತು. ಪರಿಸರ ಸಂರಕ್ಷಣೆಯ ನೆಪದಲ್ಲಿ ಆದಿವಾಸಿಗಳು ದನ, ಮೇಕೆ ಸಾಕುವುನ್ನೇ ನಿಷೇಧ ಮಾಡಿದರು. ಹಾಲಿಲ್ಲ, ಜೇನುತುಪ್ಪವಿಲ್ಲ, ಕಾಡಿನ ಮದ್ದಿಲ್ಲ. ಜೊತೆಗೆ ಮದ್ಯ ನಿಷೇಧ ಮಾಡಿದ ತಕ್ಷಣ, ಹೊರಗಿನ ಅಕ್ರಮ ಮದ್ಯ ಮಾಫಿಯಾ ಮತ್ತು ಗಾಂಜಾ ಬೆಳೆಗಾರರು ಕಾಡಿಗೆ ನುಗ್ಗಿದರು. ಪೊಲೀಸರ ಏಟು ಮಾತ್ರ ಈ ಮುಗ್ಧ ಆದಿವಾಸಿಗಳಿಗೆ ಬಿತ್ತು.</p>



<p class="wp-block-paragraph">ಇದರ ರಿಸಲ್ಟ್ ಏನಾಯ್ತು ಗೊತ್ತಾ? ಅಪೌಷ್ಟಿಕತೆ (Malnutrition)! ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ (NIN) ಸ್ಟಡಿ ಪ್ರಕಾರ, ಕೇರಳದ ಉಳಿದ ಕಡೆ ಶಿಶು ಮರಣ ಪ್ರಮಾಣ (IMR) ಕೇವಲ 12 ಆಗಿದ್ದರೆ, ಅಟ್ಟಪ್ಪಾಡಿಯಲ್ಲಿ ಅದು 66 ಕ್ಕೆ ತಲುಪಿತ್ತು! ಇದು ಆಫ್ರಿಕಾದ ಸೊಮಾಲಿಯಾ ದೇಶದ ಪರಿಸ್ಥಿತಿಗೆ ಸಮನಾಗಿತ್ತು.</p>



<ul class="wp-block-list">
<li><strong>2010 ರಿಂದ 2012 ರವರೆಗೆ 81 ಮಕ್ಕಳು ಹಸಿವಿನಿಂದ ಸತ್ತರು.</strong></li>



<li><strong>2012-2013 ರಲ್ಲಿ 63 ಸಾವು.</strong></li>



<li><strong>2014 ರಲ್ಲಿ 30, 2015 ರಲ್ಲಿ 14 ಶಿಶುಗಳು ಬಲಿಯಾದವು.</strong></li>
</ul>



<p class="wp-block-paragraph">ಆದರೆ, ನಮ್ಮ ಸರ್ಕಾರಗಳು ಎಷ್ಟು ಬ್ಲೆಂಡ್, ಎಷ್ಟು ಕ್ರೂರ ಎಂದರೆ, ಮಧುವಿನ ಹತ್ಯೆಯಾದಾಗ ಕೇರಳ ಸರ್ಕಾರದ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಪಿ. ಪುಗಝಂಡಿ ಹೈಕೋರ್ಟ್‌ಗೆ ಒಂದು ಅಫಿಡವಿಟ್ ಸಲ್ಲಿಸ್ತಾರೆ. ಅದರಲ್ಲಿ ಅವರು ಹೇಳ್ತಾರೆ: &#8220;ಮಧುವಿನ ಸಾವಿಗೆ ಹಸಿವು ಕಾರಣವಲ್ಲ. ಆತನ ತಾಯಿ ಮತ್ತು ಸಹೋದರಿ ಅಂಗನವಾಡಿಯಲ್ಲಿ ಕೆಲಸ ಮಾಡ್ತಾರೆ. ಅವರಿಗೆ ತಿಂಗಳಿಗೆ 35 ಕೆಜಿ ಉಚಿತ ರೇಷನ್ ಸಿಗುತ್ತೆ. ಹೀಗಿರುವಾಗ ಅವನು ಹಸಿವಿನಿಂದ ಅಕ್ಕಿ ಕದ್ದ ಅಂತ ಹೇಳಕ್ಕಾಗಲ್ಲ. ಇದೊಂದು ಕೇವಲ (Social Intolerance) : &#8221; .</p>



<p class="wp-block-paragraph">ಎಂತಹ ನಾಚಿಕೆಗೇಡು ಇದು! ಮಧು ಒಬ್ಬ ಮಾನಸಿಕ ಅಸ್ವಸ್ಥ ಯುವಕ. ಅವನು ಫ್ಯಾಮಿಲಿ ಬಿಟ್ಟು, ಕಾಡಿನ ಗುಹೆಯಲ್ಲಿ ಒಂಟಿಯಾಗಿ ಅನಾಥನಾಗಿ ಬದುಕ್ತಿದ್ದ. ಕಾಡಿನಲ್ಲಿದ್ದವನಿಗೆ ಅವನ ಮನೆಯವರ ರೇಷನ್ ಹೇಗೆ ತಲುಪುತ್ತೆ? ಒಂದು ಸರ್ಕಾರ ತನ್ನ ತಪ್ಪು ಮುಚ್ಚಿಕೊಳ್ಳಲು, ಹಸಿದು ಸತ್ತವನ ಸಾವನ್ನೂ ಹೇಗೆ ತಿರುಚುತ್ತೆ ಅನ್ನೋದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ?</p>



<p class="wp-block-paragraph"><strong>ಮಧು: ನಾಗರಿಕ ಸಮಾಜದ ಕ್ರೌರ್ಯಕ್ಕೆ ಬಲಿಯಾದ ಅಮಾಯಕ ಜೀವ</strong><br>ಹಸಿವು ಮತ್ತು ನಮ್ಮ ಈ &#8216;ನಾಗರಿಕ&#8217; ಸಮಾಜದ ರಕ್ತಪಿಪಾಸು ಕ್ರೌರ್ಯ ಒಟ್ಟಿಗೆ ಸೇರಿದಾಗ ಆಗಿದ್ದೇ 2018 ರ ಫೆಬ್ರವರಿ 22 ರ ದುರಂತ. ಅಟ್ಟಪ್ಪಾಡಿಯ ಚಿಂಡಾಕ್ಕೆ ಹಳ್ಳಿಯ 34 ವರ್ಷದ ಯುವಕ ಮಧು&#8217;. ಆಗಲೇ ಹೇಳಿದಂತೆ, ಮಾನಸಿಕ ಸ್ಥಿಮಿತ ಇಲ್ಲದೆ, ಮುಕ್ಕಾಲಿ ಸಮೀಪದ ಅರಣ್ಯದ ಗುಹೆಯಲ್ಲಿ ಪ್ರಕೃತಿ ಜೊತೆ ಬದುಕ್ತಿದ್ದವನು. ಅವನಿಗೆ ನಿಮ್ಮ ಮ್ಮ ಈ ದುಡ್ಡು, ಆಸ್ತಿ, ಪ್ರಾಪರ್ಟಿ, ಜಾತಿ ಯಾವುದರ ಅರಿವೂ ರಿವೂ ಇರಲಿಲ್ಲ. ಅವನಿಗೆ ಗೊತ್ತಿದ್ದದ್ದು ಒಂದೇ ಸತ್ಯ- ಕರುಳು • ಕರುಳು ಸುಡುವ ಹಸಿವು!</p>



<p class="wp-block-paragraph">ಒಂದು ದಿನ ಹಸಿವು ತಾಳಲಾರದೆ ಒಂದು ಕಿರಾಣಿ ಅಂಗಡಿಯಲ್ಲಿ ಸ್ವಲ್ಪ ಅಕ್ಕಿ, ಮೆಣಸಿನ ಪುಡಿ ಕದ್ದ ಅನ್ನೋ ಆರೋಪ ಬಂತು. ಯೋಚಿಸಿ, ಸಾವಿರಾರು ಎಕರೆ ಆದಿವಾಸಿಗಳ ಜಮೀನನ್ನ ಕದ್ದ ಈ ವಲಸಿಗರಿಗೆ, ತಮ್ಮದೇ ಕಾಡಿನಲ್ಲಿ ಬದುಕುತ್ತಿದ್ದ ಒಬ್ಬ ಅಸ್ವಸ್ಥಯುವಕ ಒಂದು ಹಿಡಿ ಅಕ್ಕಿ ಕದ್ದದ್ದು ಜಗತ್ತಿನ ಅತಿದೊಡ್ಡ ಅಪರಾಧವಾಗಿ ಕಂಡಿತು. ಉದ್ರಿಕ್ತ ಗುಂಪು ಕಾಡಿಗೆ ನುಗ್ಗಿಸಿ, ಅವನನ್ನ ಗುಹೆಯಿಂದ ಎಳೆದು ತಂದು, ಅವನದೇ ಲುಂಗಿಯಿಂದ ಅವನ ಕೈಗಳನ್ನ ಹಿಂದಕ್ಕೆ ಕಟ್ಟೆ, ಅರೆಬೆತ್ತಲೆಯಾಗಿ ರಸ್ತೆಯಲ್ಲಿ ಮೆರವಣಿಗೆ ಮಾಡಿದರು.</p>



<p class="wp-block-paragraph">ಮನಬಂದಂತೆ ಥಳಿಸಿದರು, ಕಾಲಿನಿಂದ ಎದೆಗೆ ಒದ್ದರು, ತಲೆಯನ್ನ ಗೋಡೆಗೆ ಅಪ್ಪಳಿಸಿದರು. ಇದಕ್ಕಿಂತ ವಿಕೃತಿ ಏನಂದ್ರೆ, ರಕ್ತಸಿಕ್ತವಾಗಿ, ಭಯದಿಂದ ನಡುಗುತ್ತಿದ್ದ ಆ ಮುಗ್ಧನ ಸುತ್ತ ನಿಂತು, ಈ ರಾಕ್ಷಸರು ನಗುನಗುತ್ತಾ ಸೆಲ್ಪಿ (Selfie) ತೆಗೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕಿಕೊಂಡರು! ಆ ಏಟಿನಿಂದ, ಆ ಹಸಿವಿನಿಂದ ಮಧು ಆಸ್ಪತ್ರೆ ತಲುಪುವಷ್ಟರಲ್ಲೇ ಪ್ರಾಣ ಬಿಟ್ಟ. ಒಂದು ಹಿಡಿ ಅಕ್ಕಿಗೆ, ಒಂದು ಜೀವ ಬಲಿಯಾಯ್ತು. ದೇವರ ಸ್ವಂತ ನಾಡಿನ ಎಲ್ಲರೂ ವಿದ್ಯಾವಂತರಂತೆ! ಮಾಡಿದ್ದು ಮಾತ್ರ ಹೀನ ಕೆಲಸ!</p>



<p class="wp-block-paragraph"><strong>ನ್ಯಾಯಾಲಯದ ಅಂಗಳದಲ್ಲಿ: ತೀರ್ಪು ಮತ್ತು ವಿಶ್ಲೇಷಣೆ</strong><br>ಆ ವಿಕೃತರು ತೆಗೆದುಕೊಂಡ ಸೆಲ್ಪಿಗಳೇ ಕಡೆಗೆ ಅವರಿಗೆ ಮುಳುವಾದವು. ಡಿಜಿಟಲ್ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು 16 ಮಂದಿ ಮೇಲೆ ಎಸ್‌ಸಿ/ಎಸ್‌ಟಿ ಕಾಯ್ದೆ ಮತ್ತು ಕೊಲೆ ಕೇಸ್ ಹಾಕಿದರು. ಆದರೆ ಆರೋಪಿಗಳ ಬಳಿ ದುಡ್ಡಿನ ಪವರ್ ಇತ್ತು. ಸಾಕ್ಷಿಗಳು ಕೋರ್ಟಿನಲ್ಲಿ ಉಲ್ಟಾ ಹೊಡೆದರು (Hostile Witnesses).</p>



<p class="wp-block-paragraph">2023 ರಲ್ಲಿ ಮನ್ನಾರ್ಕ್ಕಾಡ್‌ನ ವಿಚಾರಣಾ ನ್ಯಾಯಾಲಯ, 13 ಆರೋಪಿಗಳಿಗೆ 7 ವರ್ಷ ಕಠಿಣ ಶಿಕ್ಷೆ ಕೊಟ್ಟಿತ್ತು. 4 ನೇ ಮತ್ತು 11 ನೇ ಆರೋಪಿಯನ್ನು ಬಿಡುಗಡೆ ಮಾಡಿತ್ತು. ಆದರೆ ಮಧುವಿನ ತಾಯಿ &#8216;ಮಲ್ಲಿ&#8217; ಮತ್ತು ಸಹೋದರಿ &#8216;ಸರಸು&#8217; ಬಿಡಲಿಲ್ಲ. ರಾಜ್ಯ ಸರ್ಕಾರದ ಜೊತೆ ಸೇರಿ ಹೈಕೋರ್ಟ್ ಮೆಟ್ಟಿಲೇರಿದರು. ಈ ಸುದೀರ್ಘ ಹೋರಾಟದಲ್ಲಿ ಅವರು ಅನುಭವಿಸಿದ ಬೆದರಿಕೆ. ನೋವು ಅಷ್ಟಿಷ್ಟಲ್ಲ.</p>



<p class="wp-block-paragraph">ನಿನ್ನೆ ಕೇರಳ ಹೈಕೋರ್ಟ್ನ ವಿಭಾಗೀಯ ಪೀಠ ಐತಿಹಾಸಿಕ ತೀರ್ಪು ಕೊಟ್ಟಿತು. ವಿಚಾರಣಾ ನ್ಯಾಯಾಲಯ ಕೊಟ್ಟಿದ್ದ 7 ವರ್ಷದ ಶಿಕ್ಷೆಯನ್ನು ರದ್ದು ಮಾಡಿ, 12 ಅಪರಾಧಿಗಳಿಗೆ (ಮರಕ್ಕಾರ್, ಶಂಶುದ್ದೀನ್, ರಾಧಾಕೃಷ್ಣನ್, ಅಬೂಬಕ್ಕರ್ ಸಿದ್ದೀಕ್, ಉಬೈದ್, ನಜೀಬ್, ಜೈಜುಮನ್, ಸಜೀವ್, ಸತೀಶ್, ಹರೀಶ್, ಮತ್ತು ಬಿಜು) &#8216;ಜೀವಾವಧಿ ಶಿಕ್ಷೆ&#8217; (Life Imprisonment) ಮತ್ತು ತಲಾ 2 ಲಕ್ಷ ರೂಪಾಯಿ ದಂಡ ವಿಧಿಸಿತು. 16 ನೇ ಆರೋಪಿ ಮುನೀರ್‌ಗೂ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಕಠಿಣ ಶಿಕ್ಷೆ ಎತ್ತಿಹಿಡಿಯಿತು. ತಾಯಿಗೆ 30 ಲಕ್ಷ ರೂಪಾಯಿ ಪರಿಹಾರ ಘೋಷಿಸಿತು.</p>



<p class="wp-block-paragraph">ಆದರೆ, ಇಲ್ಲೊಂದು ಅತಿದೊಡ್ಡ ಆಘಾತವಿತ್ತು! ಪ್ರಕರಣದ ಮೊದಲನೇ ಆರೋಪಿ &#8216;ಹುಸೇನ್‌&#8217;ನನ್ನು ಹೈಕೋರ್ಟ್ ಸಂಪೂರ್ಣವಾಗಿ ಖುಲಾಸೆಗೊಳಿಸಿತು. ಪ್ರಾಸಿಕ್ಯೂಷನ್ ಪ್ರಕಾರ, ಹಲ್ಲೆ ಮಾಡುವಾಗ ಮಧುವಿನ ಎದೆಗೆ ಬಲವಾಗಿ ಒದ್ದಿದ್ದೇ ಈ ಹುಸೇನ್. ಇದರಿಂದ ತಲೆ ಗೋಡೆಗೆ ಬಡಿದು ರಕ್ತಸ್ರಾವವಾಗಿತ್ತು ಅಂತ ಫೋರೆನ್ಸಿಕ್ ತಜ್ಞರು ಕೂಡಾ ಹೇಳಿದ್ದರು. ಆದರೆ, ಕಾಡಿನಿಂದ ಎಳೆದುತಂದ ಆರಂಭಿಕ ಗುಂಪಿನಲ್ಲಿ ಆತ ಇರಲಿಲ್ಲ ಮತ್ತು ಆತನ ವಿರುದ್ಧ ನಿಖರವಾದ ನಿಖರವಾದ ಡಿಜಿಟಲ್ ವಿಡಿಯೋ ಸಾಕ್ಷ್ಯ ಇಲ್ಲ ಅನ್ನೋ &#8216;ಟೆಕ್ನಿಕಲ್&#8217; ಕಾರಣ ಕೊಟ್ಟು ಆತನನ್ನು ಬಿಡುಗಡೆ ಮಾಡಲಾಯ್ತು.</p>



<p class="wp-block-paragraph">ತೀರ್ಪಿನ ನಂತರ ಅಳುತ್ತಾ ಮಾಧ್ಯಮಗಳ ಮುಂದೆ ಬಂದ ತಾಯಿ ಮಲ್ಲಿ ಹೇಳಿದ್ದು ಇಷ್ಟೇ: &#8220;12 ಜನರಿಗೆ ಜೀವಾವಧಿ ಶಿಕ್ಷೆಯಾಗಿದ್ದು ನೆಮ್ಮದಿಯಿದೆ. ಆದರೆ ನನ್ನ ಮಗನ ಎದೆಗೆ ಒದ್ದು ಸಾವಿಗೆ ಕಾರಣನಾದ ಮೊದಲ ಆರೋಪಿಯನ್ನು ಹೇಗೆ ಬಿಟ್ಟರು ಅನ್ನೋದೆ ನನಗೆ ಅರ್ಥವಾಗ್ತಿಲ್ಲ. ಇದು ನಮ್ಮ ನ್ಯಾಯಾಂಗ ವ್ಯವಸ್ಥೆಯ ವಾಸ್ತವ. ಇದೀಗ ಆ ಕುಟುಂಬ ಸುಪ್ರೀಂ ಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸಿದೆ.</p>



<p class="wp-block-paragraph"><strong>ದೇಶಾದ್ಯಂತ ವ್ಯಾಪಿಸುತ್ತಿರುವ &#8216;ಗುಂಪು ಹತ್ಯೆ&#8217;ಯ ಕ್ಯಾನ್ಸ‌ರ್!</strong><br>ನೀವು ಅಂದುಕೊಳ್ಳಬಹುದು, ಇದೊಂದು ಕೇರಳದಲ್ಲಿ ನಡೆದ ಸಣ್ಣ ಇನ್ಸಿಡೆಂಟ್ ಅಂತ. ಖಂಡಿತಾ ಅಲ್ಲ. ಇದು ಇಡೀ ಭಾರತಕ್ಕೆ ಅಂಟಿರುವ ಕ್ಯಾನ್ಸರ್! ಹಸಿವಿಗಾಗಿ, ಕಳ್ಳತನದ ಶಂಕೆಯ ಮೇಲೆ, ಜಾತಿಯ ಹೆಸರಿನಲ್ಲಿ ಅಮಾಯಕರನ್ನು ಗುಂಪು ಸೇರಿ ಥಳಿಸಿ ಕೊಲ್ಲುವ Mob Lynching ಎಂಬ ವಿಕೃತ ಮನಸ್ಥಿತಿ ದೇಶದಲ್ಲಿ ಬೇರೂರಿದೆ.</p>



<p class="wp-block-paragraph">ಉದಾಹರಣೆ 1: ಡಿಸೆಂಬರ್ 17, 2025 ರಂದು, ಕೇರಳದ ಪಾಲಕ್ಕಾಡ್ ಜಿಲ್ಲೆಯ ವಾಳಯಾರ್ (Walayar) ಬಳಿ, ಛತ್ತೀಸ್‌ಗಢದಿಂದ ಕೇವಲ 4 ದಿನದ ಹಿಂದಷ್ಟೇ ಉದ್ಯೋಗರಸಿಕೊಂಡು ಬಂದಿದ್ದ 31 ವರ್ಷದ ದಲಿತ ಕಾರ್ಮಿಕ &#8216;ರಾಮನಾರಾಯಣ್ ಬಮೇಲ್&#8217; ಎಂಬಾತನನ್ನು. ಕಳ್ಳತನದ ಶಂಕೆಯ ಮೇಲೆ ಸ್ಥಳೀಯರು ಬಡಿದು ಕೊಂದರು. ನೋಡಲು ಬೇರೆ ತರಹ ಇದ್ದಾನೆ. ಇವನೊಬ್ಬ ಬಾಂಗ್ಲಾದೇಶಿ&#8217; ಇರಬೇಕು ಅನ್ನೋ ಕೈನೋಫೋಬಿಕ್ (Xenophobic) ದ್ವೇಷಕ್ಕೆ ಆತನನ್ನು ಬಲಿಪಡೆದರು. ವಿಪರ್ಯಾಸ ನೋಡಿ, ಕೇರಳದವರು ಅಟ್ಟಪ್ಪಾಡಿಗೆ ಹೋಗಿ ಮೂಲನಿವಾಸಿಗಳನ್ನ ಶೋಷಿಸ್ತಾರೆ, ಆದರೆ ಬೇರೆ ರಾಜ್ಯದ ಬಡ ಕಾರ್ಮಿಕ ಕೇರಳಕ್ಕೆ ಬಂದರೆ ಅವನನ್ನ ಕಳ್ಳ ಅಂತ ಕಾಯ್ದು ಕೊಲ್ತಾರೆ!</p>



<p class="wp-block-paragraph">ಉದಾಹರಣೆ 2: ಪಶ್ಚಿಮ ಬಂಗಾಳದ ಸಬಾಂಗ್ ಪ್ರದೇಶದಲ್ಲಿ ನಡೆದದ್ದು ಇನ್ನೂ ಘೋರ. ಅಳಿವಿನಂಚಿನಲ್ಲಿರುವ &#8216;ಲೋಧಾ ಶಬರ್&#8217; ಬುಡಕಟ್ಟು ಸಮುದಾಯದ ಕೇವಲ 13 ವರ್ಷದ ಬಾಲಕನನ್ನು, ಸ್ಥಳೀಯ ಟಿಎಂಸಿ ಪಂಚಾಯತ್ ಸದಸ್ಯ ಮನೋರಂಜನ್ ಮಾಲ್ ನೇತೃತ್ವದ ಗುಂಪು, ಆಹಾರ ಕದ್ದ ಅನ್ನೋ ಒಂದೇ ಕಾರಣಕ್ಕೆ ಹೊಡೆದು ಕೊಂದಿತು. ಬ್ರಿಟಿಷರ ಕಾಲದಿಂದಲೂ &#8216;ಕ್ರಿಮಿನಲ್ ಟ್ರೈಬ್&#8217; ಅಂತ ಹಣೆಪಟ್ಟಿ ಕಟ್ಟಿಕೊಂಡು ಇಂದಿಗೂ ಊರ ಹೊರಗೆ ಬದುಕುತ್ತಿರುವ ಇವರ ಹಸಿವು. ಸಮಾಜಕ್ಕೆ ಕಳ್ಳತನವಾಗಿ ಮಾತ್ರ ಕಾಣುತ್ತೆ.</p>



<p class="wp-block-paragraph">ಇನ್ನು ಗೋರಕ್ಷಣೆಯ (Cow Vigilante Violence) ಹೆಸರಿನಲ್ಲಿ ನಡೆಯುತ್ತಿರುವ ಕೊಲೆಗಳಿಗೆ ಲೆಕ್ಕವೇ ಇಲ್ಲ. 2015 5ರಲ್ಲಿ ದಾದ್ರಿಯಲ್ಲಿ ಮೊಹಮ್ಮದ್ ಅಖ್ಯಾಕ್ ಹತ್ಯೆ, 2017 ರಲ್ಲಿ ಹರಿಯಾಣದ ಹೈನುಗಾರಿಕೆ ರೈತ 55 ವರ್ಷದ ಪೆದ್ದು ಖಾನ್‌ನನ್ನು 200 ಜನರ ಗುಂಪು ಥಳಿಸಿ ಕೊಂದಿದ್ದು, ಇವೆಲ್ಲವೂ ಕಣ್ಣ ಮುಂದೆಯೇ ಇವೆ. NCRB ಮತ್ತು ಫ್ಯಾಕ್ಟ್‌ಚೆಕ್ಕರ್ ಡೇಟಾ ಪ್ರಕಾರ, 2014 ರಲ್ಲಿ 03 ಗೋ-ಸಂಬಂಧಿತ ಹಿಂಸಾಚಾರಗಳಿದ್ದರೆ, 2015 ರಲ್ಲಿ 13, 2016 ರಲ್ಲಿ 30, ಮತ್ತು 2017 ರಲ್ಲಿ ಅದು 43 ಕ್ಕೆ ಏರಿಕೆಯಾಗಿತ್ತು. ಸಾಯುತ್ತಿರುವವರಲ್ಲಿ ಬಹುಪಾಲು ಮುಸ್ಲಿಮರು ಮತ್ತು ದಲಿತರೇ ಆಗಿದ್ದಾರೆ.</p>



<p class="wp-block-paragraph">ಗುಂಪು ಹತ್ಯೆ ಅನ್ನೋದು ಕೇವಲ ಪೊಲೀಸ್ ಫೇಲ್ಯೂರ್ ಅಲ್ಲ. ಇದು ಬಡವರನ್ನ, ಅಲ್ಪಸಂಖ್ಯಾತರನ್ನ, ದಲಿತರನ್ನ ಮನುಷ್ಯರೆಂದೇ ಪರಿಗಣಿಸದ ನಮ್ಮ ಅಹಂಕಾರದ ದ್ಯೋತಕ. ಕಠಿಣ ಆಂಟಿ-ಲಿಂಚೆಂಗ್ (Anti-lynching) ಕಾನೂನುಗಳಿಲ್ಲದೆ ಇರೋದು ಈ ದುಷ್ಕರ್ಮಿಗಳಿಗೆ ಇನ್ನಷ್ಟು ಧೈರ್ಯ ಕೊಟ್ಟಿದೆ. ಅಟ್ಟಪ್ಪಾಡಿಯಲ್ಲಿ ಆಗಿದ್ದು ಕೇವಲ ಒಂದು ಜಾಗದ ಬದಲಾವಣೆಯಲ್ಲ, ಅದೊಂದು ಪರಂಪರೆಯ ಮಾರಣಹೋಮ. ಆಶ್ರಯ ಕೊಟ್ಟವರನ್ನೇ ಒಕ್ಕಲೆಬ್ಬಿಸಿ ಅವರ ಮಣ್ಣನ್ನೇ ಕಿತ್ತುಕೊಂಡಿದ್ದು ಮನುಷ್ಯನ ದುರಾಸೆಯ ಪರಮಾವಧಿ.</p>



<p class="wp-block-paragraph">ಕಾಳಿಮೂಪ್ಪನ್ ತನ್ನ 9 ಎಕರೆಗಾಗಿ ಇವತ್ತಿಗೂ ಕಾಯ್ತಿದ್ದಾನೆ. ನಂಜಿಯಮ್ಮ ತನ್ನ ಹಕ್ಕಿಗಾಗಿ ಹೋರಾಡ್ತಿದ್ದಾಳೆ. ಮಧು ಒಂದು ಹಿಡಿ ಅಕ್ಕಿಗೆ ಪ್ರಾಣ ಬಿಟ್ಟಿದ್ದಾನೆ. ಹೈಕೋರ್ಟ್ 12 ಜನರಿಗೆ ಜೀವಾವಧಿ ಶಿಕ್ಷೆ ಕೊಟ್ಟಿರಬಹುದು. ತಾಯಿಗೆ 30 ಲಕ್ಷ ರೂಪಾಯಿ ಪರಿಹಾರ ಸಿಕ್ಕಿರಬಹುದು. ಆದರೆ ಮಧುವಿನ ಸಾವಿಗೆ ಆ 12 ಜನ ಮಾತ್ರ ಕಾರಣರಾ? ಖಂಡಿತ ಅಲ್ಲ. ಅವನ ಕಾಡನ್ನು ಕಬಳಿಸಿದ ಸಿಸ್ಟಮ್, ಅವನ ಹೊಟ್ಟೆಗೆ ಬೆಂಕಿ ಇಟ್ಟ ಆರ್ಥಿಕ ಅಸಮಾನತೆ, ಸರ್ಕಾರಿ ಫೈಲ್‌ಗಳಲ್ಲಿ ಅವನ ಹಸಿವನ್ನೇ ಮುಚ್ಚಿಹಾಕಿದ ರಾಜಕಾರಣ, ಮತ್ತು ಅವನು ನರಳುವಾಗ ಸೆಲ್ಪಿ ತೆಗೆದುಕೊಂಡ ನಮ್ಮ ಸಾಮಾಜಿಕ ಮನಸ್ಥಿತಿ.. ಇವೆಲ್ಲವೂ ಅಷ್ಟೇ ದೊಡ್ಡ ಅಪರಾಧಿಗಳು!</p>



<p class="wp-block-paragraph">ಅಟ್ಟಪ್ಪಾಡಿಯ ಸಾವಿರಾರು ಮಧುಗಳಿಗೆ ಅವರ ಜಮೀನು ವಾಪಸ್ ಸಿಗುವವರೆಗೆ, ಅವರ ಫಾರೆಸ್ಟ್ ರೈಟ್ಸ್ (Forest Rights) ಸಿಗುವವರೆಗೆ, ಹಸಿವಿನಿಂದ ಕದ್ದವನನ್ನ ಕಳ್ಳನೆಂದು ನೋಡದೆ ಹಸಿದ ಮನುಷ್ಯನೆಂದು ನೋಡುವ ಮಾನವೀಯತೆ ನಮ್ಮಲ್ಲಿ ಬರುವವರೆಗೆ ಈ ನ್ಯಾಯ ಅಪೂರ್ಣ.</p>



<p class="wp-block-paragraph">ನೆನಪಿಡಿ, ಹಸಿವು ಮತ್ತು ಬಡತನ ಯಾವತ್ತೂ ಅಪರಾಧವಲ್ಲ ; ಆದರೆ ಹಸಿದವರನ್ನು, ನಿರ್ಗತಿಕರನ್ನು ಕ್ರೂರವಾಗಿ ಕೊಲ್ಲುವ ಮತ್ತು ಆ ಕೊಲೆಯನ್ನು ನ್ಯಾಯ ಅಂತ ಸಂಭ್ರಮಿಸುವ ಸಮಾಜ ಇದೆಯಲ್ಲ, ಅದು ನಿಜವಾದ ಅಪರಾಧಿ!&#8217;ದೇವಭೂಮಿ&#8217;ಯಾಗಬೇಕಿದ್ದ ಅಟ್ಟಪ್ಪಾಡಿ, ಮಧುವಿನ ರಕ್ತದಿಂದ ನರಕವಾಗಿರುವುದು ನಮ್ಮ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ. ಈ ಕಥೆ ನಿಮ್ಮನ್ನ ಕಾಡಲಿ, ನಮ್ಮಸತ್ತುಹೋದ ಮಾನವೀಯತೆಯನ್ನ ಬಡಿದೆಬ್ಬಿಸಲಿ.</p>
]]></content:encoded>
					
		
		
			</item>
		<item>
		<title>ದಳಪತಿ ಕ್ಯಾಬಿನೆಟ್; ಕ್ಯಾಸ್ಟ್ ಕೆಮಿಸ್ಟ್ರಿಯ ಹೊಸ ಅಧ್ಯಾಯ!</title>
		<link>https://peepalmedia.com/thalapathy-cabinet-a-new-chapter-in-cast-chemistry/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 23 May 2026 06:13:04 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://peepalmedia.com/?p=78874</guid>

					<description><![CDATA[&#8220;..ವಿಜಯ್ ಅವರು ರಚಿಸಿರುವ 35 ಮಂದಿಯ ಹೊಸ ಕ್ಯಾಬಿನೆಟ್ ಇದೆಯಲ್ಲ… ಇದು ಇಡೀ ಇಂಡಿಯನ್ ಪಾಲಿಟಿಕ್ಸ್‌ಗೆ ಹೊಸ ಬೆಂಚ್‌ಮಾರ್ಕ್! ದಲಿತರಿಗೆ, ಯುವಕರಿಗೆ, ಮಹಿಳೆಯರಿಗೆ ಮತ್ತು ಅಲ್ಪಸಂಖ್ಯಾತರಿಗೆ ಅವರು ಕೊಟ್ಟಿರೋ ಪ್ರಾತಿನಿಧ್ಯದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ..&#8221; ಲೇಖಕರಾದ ವಿಆರ್ ಕಾರ್ಪೆಂಟರ್ ಅವರ ಬರಹದಲ್ಲಿ ತಮಿಳುನಾಡು ಪಾಲಿಟಿಕ್ಸ್‌ನಲ್ಲಿ ಈಗ ಬರೀ ಒಂದೇ ಹೆಸರು ಟ್ರೆಂಡಿಂಗ್-ಅದೇ &#8216;ದಳಪತಿ&#8217; ಸಿ. ಜೋಸೆಫ್ ವಿಜಯ್! ಸ್ಟೀನ್ ಮೇಲೆ ಬ್ಲಾಕ್ ಆ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿದ್ದ ವಿಜಯ್, ಈಗ ರಿಯಲ್ ಲೈಫ್ ರಾಜಕಾರಣದಲ್ಲೂ ಅಕ್ಷರಶಃ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p class="wp-block-paragraph">&#8220;..ವಿಜಯ್ ಅವರು ರಚಿಸಿರುವ 35 ಮಂದಿಯ ಹೊಸ ಕ್ಯಾಬಿನೆಟ್ ಇದೆಯಲ್ಲ… ಇದು ಇಡೀ ಇಂಡಿಯನ್ ಪಾಲಿಟಿಕ್ಸ್‌ಗೆ ಹೊಸ ಬೆಂಚ್‌ಮಾರ್ಕ್! ದಲಿತರಿಗೆ, ಯುವಕರಿಗೆ, ಮಹಿಳೆಯರಿಗೆ ಮತ್ತು ಅಲ್ಪಸಂಖ್ಯಾತರಿಗೆ ಅವರು ಕೊಟ್ಟಿರೋ ಪ್ರಾತಿನಿಧ್ಯದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ..&#8221; ಲೇಖಕರಾದ ವಿಆರ್ ಕಾರ್ಪೆಂಟರ್ ಅವರ ಬರಹದಲ್ಲಿ </p>
</blockquote>



<p class="wp-block-paragraph">ತಮಿಳುನಾಡು ಪಾಲಿಟಿಕ್ಸ್‌ನಲ್ಲಿ ಈಗ ಬರೀ ಒಂದೇ ಹೆಸರು ಟ್ರೆಂಡಿಂಗ್-ಅದೇ &#8216;ದಳಪತಿ&#8217; ಸಿ. ಜೋಸೆಫ್ ವಿಜಯ್! ಸ್ಟೀನ್ ಮೇಲೆ ಬ್ಲಾಕ್ ಆ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿದ್ದ ವಿಜಯ್, ಈಗ ರಿಯಲ್ ಲೈಫ್ ರಾಜಕಾರಣದಲ್ಲೂ ಅಕ್ಷರಶಃ &#8216;ಮಾಸ್ಟರ್ ಸ್ಟೋಕ್ ಕೊಟ್ಟಿದ್ದಾರೆ. ಬರೋಬ್ಬರಿ 59 ವರ್ಷಗಳ ಹಳೇ ದ್ರಾವಿಡ ರಾಜಕಾರಣದ ರೆಕಾರ್ಡ್‌ಗಳನ್ನು ಒಂದೇ ಏಟಿಗೆ ಧೂಳಿಪಟ ಮಾಡಿ, 2026 ರ ಎಲೆಕ್ಷನ್‌ನಲ್ಲಿ ತಮ್ಮ &#8216;ತಮಿಳಗ ವೆಟ್ರಿ ಕಳಗಂ&#8217; (TVK) ಪಾರ್ಟಿಯನ್ನು ಅಧಿಕಾರದ ಗದ್ದುಗೆಗೆ ತಂದು ಕೂರಿಸಿದ್ದಾರೆ.</p>



<p class="wp-block-paragraph">ಆದರೆ, ಇಲ್ಲಿ ಅಸಲಿ ಮ್ಯಾಜಿಕ್ ಇರೋದು ಕೇವಲ ಎಲೆಕ್ಷನ್ ಗೆಲುವಿನಲ್ಲಿ ಮಾತ್ರವಲ್ಲ! ವಿಜಯ್ ಅವರು ರಚಿಸಿರುವ 35 ಮಂದಿಯ ಹೊಸ ಕ್ಯಾಬಿನೆಟ್ (ಸಚಿವ ಸಂಪುಟ) ಇದೆಯಲ್ಲ… ಇದು ಇಡೀ ಇಂಡಿಯನ್ ಪಾಲಿಟಿಕ್ಸ್‌ಗೆ ಹೊಸ ಬೆಂಚ್‌ಮಾರ್ಕ್! ದಲಿತರಿಗೆ, ಯುವಕರಿಗೆ, ಮಹಿಳೆಯರಿಗೆ ಮತ್ತು ಅಲ್ಪಸಂಖ್ಯಾತರಿಗೆ ಅವರು ಕೊಟ್ಟಿರೋ ಪ್ರಾತಿನಿಧ್ಯದ ಕಂಪ್ಲೀಟ್ ಡೀಟೇಲ್ಸ್ ಮತ್ತು ಕ್ಯಾಸ್ಟ್ ಕೆಮಿಸ್ಟ್ರಿಯ ಕಂಪ್ಲಿಟ್ ಡೀಟೈಲ್ಸ್ ಇಲ್ಲಿದೆ. ಸ್ಕಿಪ್ ಮಾಡದೆ ಓದಿ!</p>



<p class="wp-block-paragraph"><strong>ದ್ರಾವಿಡ ಕೋಟೆ ಪುಡಿಪುಡಿ, ವಿಜಯ್ ಸುನಾಮಿ ಎಂಟ್ರಿ!</strong><br>ಏಪ್ರಿಲ್ 2026 ರಲ್ಲಿ ನಡೆದ ಎಲೆಕ್ಷನ್‌ನಲ್ಲಿ ತಮಿಳುನಾಡು ಜನತೆ ಶೇ. 85.1 ರಷ್ಟು ಬಂಪರ್ ವೋಟಿಂಗ್ ಮಾಡಿದ್ದರು. ಪೊಲಿಟಿಕಲ್ ಪಂಡಿತರೆಲ್ಲ ಶಾಕ್ ಆಗುವಂತೆ ಒಟ್ಟು 234 ಸೀಟುಗಳ ಪೈಕಿ ಟಿವಿಕೆ (TVK) ಏಕಾಂಗಿಯಾಗಿ 108 ಸೀಟುಗಳನ್ನು ಗೆದ್ದು ಬಿಗ್ ಬಾಸ್ ಆಗಿ ಹೊರಹೊಮ್ಮಿತು!. ಈ ಮೂಲಕ ಶೇ. 34.92 ರಷ್ಟು ವೋಟ್ ಶೇರ್ ವಿಜಯ್ ಪಾಲಾಯಿತು.</p>



<p class="wp-block-paragraph">ದಶಕಗಳಿಂದ ಆಳುತ್ತಿದ್ದ ಎಂ.ಕೆ. ಸ್ಟಾಲಿನ್ ನೇತೃತ್ವದ DMK ಕೇವಲ 59 ಸೀಟುಗಳಿಗೆ ಕುಸಿದರೆ, AIADMK 47 ಸೀಟುಗಳಿಗೆ ತೃಪ್ತಿಪಡಬೇಕಾಯಿತು. ಇದರಲ್ಲಿ ಅತಿ ದೊಡ್ಡ ಟ್ವಿಸ್ಟ್ ಎಂದರೆ, ಸಾಕ್ಷಾತ್ ಮುಖ್ಯಮಂತ್ರಿ ಸ್ಟಾಲಿನ್ ಅವರೇ ತಮ್ಮ ಭದ್ರಕೋಟೆ &#8216;ಕೊಳತ್ತೂರ್&#8217; ಕ್ಷೇತ್ರದಲ್ಲಿ ಟಿವಿಕೆ ಅಭ್ಯರ್ಥಿ ಎದುರು ಸೋಲು ಕಂಡಿದ್ದು!.</p>



<p class="wp-block-paragraph">ಈ ಲೆವೆಲ್‌ನ ಸುನಾಮಿಗೆ ಕಾರಣ ಯಾರು ಗೊತ್ತಾ? ಮವ್ವತ್ತರಿಂದ ನಲವತ್ತು ವರ್ಷದೊಳಗಿನ ಯುವಕರು, ಅರ್ಥಾತ್ &#8216;ಜೆನ್-ಝೀ&#8217; (Gen-Z) ವೋಟರ್ಸ್, ಮತ್ತು ದಲಿತ ಸಮುದಾಯ! ತಮಿಳುನಾಡಿನಲ್ಲಿರುವ 46 ಮೀಸಲು (SC/ST) ಕ್ಷೇತ್ರಗಳಲ್ಲಿ ಟಿವಿಕೆ ಬರೋಬ್ಬರಿ 24 ಕ್ಷೇತ್ರಗಳನ್ನು ಗೆದ್ದು ಹೊಸ ಇತಿಹಾಸ ಬರೆದಿದೆ.</p>



<p class="wp-block-paragraph"><strong>&#8216;ಸೆಂಟರ್-ಲೆಫ್ಟ್&#8217; ಮತ್ತು ಸಾಮಾಜಿಕ ನ್ಯಾಯದ ರಿಯಲ್ ಆಟ!</strong><br>ಯಾವುದೇ ಪಾರ್ಟಿ ಸ್ಟ್ರಾಂಗ್ ಆಗಿ ನಿಲ್ಲೋದು ಅದರ ಸಿದ್ದಾಂತದ ಮೇಲೆ. ವಿಜಯ್ ಪಾರ್ಟಿಯ ಘೋಷವಾಕ್ಯ ರಾಕ್ಯ &#8220;ಪಿರಪ್ಪೋಕ್ಕುಂ ಎಲ್ಲಾ ಉಯಿರ್ಕ್ಕುಂ&#8221; (ಹುಟ್ಟುವ ಎಲ್ಲಾ ಜೀವಿಗಳೂ ಸಮಾನ), ಫೆಬ್ರವರಿ 2025 ರಲ್ಲೇ ವಿಜಯ್ ಅವರು ಪೆರಿಯಾರ್, ಅಂಬೇಡ್ಕರ್, ಮತ್ತು ಕಾಮರಾಜ್ ಅವರ ಪ್ರತಿಮೆಗಳನ್ನು ಅನಾವರಣಗೊಳಿಸಿ ತಮ್ಮ ಪಾರ್ಟಿಯ ಐಡಿಯಾಲಜಿಯನ್ನು &#8216;ಸೆಂಟರ್-ಲೆಫ್ಟ್&#8217; (Centre-left) ಅಂತ ಕ್ಲಿಯರ್ ಆಗಿ ಹೇಳಿದ್ದರು. ಬಲಪಂಥೀಯ ರಾಜಕಾರಣದಿಂದ ಅಂತರ ಕಾಯ್ದುಕೊಂಡಿರುವ ಟಿವಿಕೆ, ಈಗ ಆ ಸಾಮಾಜಿಕ ನ್ಯಾಯವನ್ನು ತಮ್ಮ ಕ್ಯಾಬಿನೆಟ್‌ನಲ್ಲಿ ರಿಯಲ್ ಆಗಿ ಜಾರಿಗೆ ತಂದಿದೆ.</p>



<p class="wp-block-paragraph"><strong>ಮೈತ್ರಿಧರ್ಮದ ಹೊಸ ಟ್ರೆಂಡ್: 35 ಮಂತ್ರಿಗಳ ಮೆಗಾ ಕ್ಯಾಬಿನೆಟ್</strong><br>ಸಂವಿಧಾನದ ಪ್ರಕಾರ ಗರಿಷ್ಠ 35 ಮಂದಿ ಮಂತ್ರಿಗಳಾಗಬಹುದು. ವಿಜಯ್ ತಮ್ಮ ಈ ಕಂಪ್ಲೇಟ್ ಕೋಟಾವನ್ನು ಯೂಸ್ ಮಾಡಿಕೊಂಡು ಮೇ 10, ಮೇ 21, ಮತ್ತು ಮೇ 22 ರಂದು ಮೂರು ಹಂತಗಳಲ್ಲಿ ಸಂಪುಟ ವಿಸ್ತರಣೆ ಮಾಡಿದರು.</p>



<p class="wp-block-paragraph">ವಿಶೇಷವೆಂದರೆ, ಟಿವಿಕೆ ಪಾರ್ಟಿಯ 31 ಮಂತ್ರಿಗಳ ಜೊತೆಗೆ, 59 ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರಿಗೆ ಮಂತ್ರಿ ಸ್ಥಾನ ನೀಡಲಾಗಿದೆ!. ಜೊತೆಗೆ, DMK ಜೊತೆಯಲ್ಲಿದ್ದ VCK ಮತ್ತು IUML ಪಾರ್ಟಿಗಳು ಕೂಡ ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಿ ತಲಾ ಒಂದೊಂದು ಮಂತ್ರಿ ಸ್ಥಾನ ಪಡೆದಿವೆ. ಇದು ಪಕ್ಕಾ &#8216;ಸಮ್ಮಿಶ್ರ ಸರ್ಕಾರ&#8217;ದ (Coalition Government) ಹೊಸ ಮಾಡೆಲ್!.</p>



<p class="wp-block-paragraph"><strong>2026 ರ ತಮಿಳುನಾಡು ಸಚಿವ ಸಂಪುಟದ ಪೂರ್ಣ ಪಟ್ಟಿ (ಕ್ಯಾಬಿನೆಟ್ ಡೀಟೇಲ್ಸ್)</strong></p>



<p class="wp-block-paragraph">ಯಾರಿಗೆ ಯಾವ ಪವರ್ ಸಿಕ್ಕಿದೆ ಅಂತ ಒಮ್ಮೆ ಕಣ್ಣಾಡಿಸಿ:</p>



<figure class="wp-block-image size-full"><img fetchpriority="high" decoding="async" width="1022" height="870" src="https://peepalmedia.com/wp-content/uploads/2026/05/1001062521.jpg" alt="" class="wp-image-78876" srcset="https://peepalmedia.com/wp-content/uploads/2026/05/1001062521.jpg 1022w, https://peepalmedia.com/wp-content/uploads/2026/05/1001062521-300x255.jpg 300w, https://peepalmedia.com/wp-content/uploads/2026/05/1001062521-768x654.jpg 768w, https://peepalmedia.com/wp-content/uploads/2026/05/1001062521-150x128.jpg 150w, https://peepalmedia.com/wp-content/uploads/2026/05/1001062521-696x592.jpg 696w" sizes="(max-width: 1022px) 100vw, 1022px" /></figure>



<figure class="wp-block-image size-large"><img decoding="async" width="797" height="1024" src="https://peepalmedia.com/wp-content/uploads/2026/05/1001062522-797x1024.jpg" alt="" class="wp-image-78877" srcset="https://peepalmedia.com/wp-content/uploads/2026/05/1001062522-797x1024.jpg 797w, https://peepalmedia.com/wp-content/uploads/2026/05/1001062522-234x300.jpg 234w, https://peepalmedia.com/wp-content/uploads/2026/05/1001062522-768x986.jpg 768w, https://peepalmedia.com/wp-content/uploads/2026/05/1001062522-150x193.jpg 150w, https://peepalmedia.com/wp-content/uploads/2026/05/1001062522-300x385.jpg 300w, https://peepalmedia.com/wp-content/uploads/2026/05/1001062522-696x894.jpg 696w, https://peepalmedia.com/wp-content/uploads/2026/05/1001062522.jpg 1042w" sizes="(max-width: 797px) 100vw, 797px" /></figure>



<figure class="wp-block-image size-large"><img decoding="async" width="956" height="1024" src="https://peepalmedia.com/wp-content/uploads/2026/05/1001062525-956x1024.jpg" alt="" class="wp-image-78878" srcset="https://peepalmedia.com/wp-content/uploads/2026/05/1001062525-956x1024.jpg 956w, https://peepalmedia.com/wp-content/uploads/2026/05/1001062525-280x300.jpg 280w, https://peepalmedia.com/wp-content/uploads/2026/05/1001062525-768x823.jpg 768w, https://peepalmedia.com/wp-content/uploads/2026/05/1001062525-150x161.jpg 150w, https://peepalmedia.com/wp-content/uploads/2026/05/1001062525-300x321.jpg 300w, https://peepalmedia.com/wp-content/uploads/2026/05/1001062525-696x745.jpg 696w, https://peepalmedia.com/wp-content/uploads/2026/05/1001062525.jpg 1042w" sizes="(max-width: 956px) 100vw, 956px" /></figure>



<p class="wp-block-paragraph"><strong>ದಲಿತರ ದರ್ಬಾರ್: ಸೋಶಿಯಲ್ ಜಸ್ಟೀಸ್ ಅಂದ್ರೆ ಇದು!</strong><br>ಇದು ವಿಜಯ್ ಅವರ ಅತಿ ದೊಡ್ಡ ಗೇಮ್ ಚೇಂಜರ್. ಹಿಂದಿನ ಸ್ಟಾಲಿನ್ ಅವರ DMK ಸರ್ಕಾರದಲ್ಲಿ ಗರಿಷ್ಠ ಅಂದರೆ 4 ಜನ ದಲಿತ ಸಚಿವರಿದ್ದರು. ಆದರೆ ವಿಜಯ್ ಸಂಪುಟದಲ್ಲಿ ಬರೋಬ್ಬರಿ 8 ದಲಿತ (SC) ಶಾಸಕರಿಗೆ ಕ್ಯಾಬಿನೆಟ್ ದರ್ಜೆಯ ಮಂತ್ರಿಗಿರಿ ನೀಡಲಾಗಿದೆ!. ಇದು 74 ವರ್ಷಗಳ ರಾಜ್ಯದ ಇತಿಹಾಸದಲ್ಲೇ ಬಿಗ್ಗೆಸ್ಟ್ ರೆಕಾರ್ಡ್.</p>



<p class="wp-block-paragraph">ಆ 8 ಮಂತ್ರಿಗಳು ಯಾರು ಅಂದರೆ:</p>



<ol class="wp-block-list">
<li><strong>ಪಿ. ವಿಶ್ವನಾಥನ್ (ಕಾಂಗ್ರೆಸ್)</strong>: ದಲಿತರಾದರೂ &#8216;ಮೇಲೂರು&#8217; ಜನರಲ್ ಕ್ಷೇತ್ರದಿಂದ ಗೆದ್ದವರು. ಇವರಿಗೆ &#8216;ಉನ್ನತ ಶಿಕ್ಷಣ&#8217; ಖಾತೆ.</li>



<li><strong>ಡಿ. ಲೋಗೇಶ್ ತಮಿಳ್ ಸೆಲ್ವನ್</strong>: ವಾಣಿಜ್ಯ ತೆರಿಗೆ ಮತ್ತು ನೋಂದಣಿ ಖಾತೆ.</li>



<li><strong>ಎ.ರಾಜ್‌ಮೋಹನ್</strong>: ಶಾಲಾ ಶಿಕ್ಷಣ ಸಚಿವೆ.</li>



<li><strong>ಪಿ. ಮಥನ್ ರಾಜಾ</strong>: MSME (ಸಣ್ಣ ಮತ್ತು ಮಧ್ಯಮ ಕೈಗಾರಿಕೆ) ಖಾತೆ.</li>



<li><strong>ವಿ. ಗಾಂಧೀರಾಜ್</strong>: ಸಹಕಾರ ಖಾತೆ.</li>



<li><strong>ಎಸ್. ಕಮಲಿ</strong>:28 ವರ್ಷದ ಯುವತಿ. ಕೇಂದ್ರ ಸಚಿವರನ್ನೇ ಸೋಲಿಸಿ ಪಶುಸಂಗೋಪನೆ ಸಚಿವೆಯಾಗಿದ್ದಾರೆ.</li>



<li><strong>ಕೆ. ತೇನ್ನರಸು</strong>: ಅನಿವಾಸಿ ತಮಿಳರ ಕಲ್ಯಾಣ ಖಾತೆ.</li>



<li><strong>ವನ್ನಿ ಅರಸು (VCK)</strong>: ಆದಿ ದ್ರಾವಿಡ ಕಲ್ಯಾಣ (ಸಾಮಾಜಿಕ ನ್ಯಾಯ) ಸಚಿವ.</li>
</ol>



<p class="wp-block-paragraph">ಸ್ಟಾರ್ ಡೈರೆಕ್ಟರ್ ಪಾ. ರಂಜಿತ್ ಅವರೇ ಹೇಳಿದ ಹಾಗೆ, <strong>&#8220;ಇದು ಪ್ರತಿನಿಧಿಕ ರಾಜಕಾರಣದ ಐತಿಹಾಸಿಕ ಹೆಜ್ಜೆ!&#8221;</strong>.</p>



<p class="wp-block-paragraph"><strong>ವುಮನ್ ಪವ‌ರ್, ಯೂತ್‌ ಫೋರ್ಸ್‌ &amp; ಎಐ (AI) ಮಿನಿಸ್ಟಿ!</strong><br>ಪಾಲಿಟಿಕ್ಸ್ ಅಂದರೆ ಬರೀ ವಯಸ್ಸಾದವರ ಜಾಗ ಅಂತ ಅಂದುಕೊಂಡಿದ್ದ ಜನರಿಗೆ ಇದು ಬಿಗ್ ಶಾಕ್. ಸಂಪುಟದ 35 ಸಚಿವರಲ್ಲಿ 22 ಮಂದಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು!. ಇದು ಪಕ್ಕಾ &#8216;Generational Shift&#8217;.</p>



<p class="wp-block-paragraph">ಮಹಿಳಾ ಸಬಲೀಕರಣದಲ್ಲಿ ಕೂಡ ರೆಕಾರ್ಡ್ ಬ್ರೇಕ್! ತಮಿಳುನಾಡು ಇತಿಹಾಸದಲ್ಲಿ ಇದೇ ಮೊದಲು 4 ಮಹಿಳೆಯರಿಗೆ ಕ್ಯಾಬಿನೆಟ್ ಮಂತ್ರಿ ಸ್ಥಾನ ಒಲಿದಿದೆ. 29 ವರ್ಷದ ಎಸ್.ಕೀರ್ತನಾ (ಕೈಗಾರಿಕೆ).ಸಿ. ವಿಜಯಲಕ್ಷ್ಮಿ (ಡೈರಿ ಅಭಿವೃದ್ಧಿ), 28 ವರ್ಷದ ಎಸ್. ಕಮಲಿ (ಪಶುಸಂಗೋಪನೆ) ಮತ್ತು 40 ವರ್ಷದ ಕೆ. ಜಗದೀಶ್ವರಿ (ಸಮಾಜ ಕಲ್ಯಾಣ) ಅವರು ಈ ಪವರ್‌ಫುಲ್‌ ಸ್ಥಾನದಲ್ಲಿದ್ದಾರೆ.</p>



<p class="wp-block-paragraph">ಯುವಕರಿಗೆ ಸ್ಕಿಲ್ ಡೆವಲಪ್ರೈಂಟ್ ಮಾಡಲು 31 ವರ್ಷದ ಜೆ. ಮೊಹಮ್ಮದ್ ಫರ್ವಾಸ್ ಅವರನ್ನು ಕಾರ್ಮಿಕ ಕಲ್ಯಾಣ ಸಚಿವರನ್ನಾಗಿ ಮಾಡಲಾಗಿದೆ. ಹಾಗೆಯೇ IIM ನಲ್ಲಿ ಓದಿರುವ ಆರ್. ಕುಮಾರ್ ಅವರಿಗೆ ತಮಿಳುನಾಡಿನ ಪ್ಯೂಚರ್ ದೃಷ್ಟಿಯಿಂದ &#8216;ಕೃತಕ ಬುದ್ಧಿಮತ್ತೆ (AI), ಐಟಿ ಮತ್ತು ಡಿಜಿಟಲ್ ಸೇವೆಗಳ&#8217; ಹೊಸ ಇಲಾಖೆಯನ್ನೇ ಸೃಷ್ಟಿಸಿ ನೀಡಲಾಗಿದೆ!. ಬಹುಶಃ ಈ ಖಾತೆ ಇಂಡಿಯಾದ ಇತಿಹಾಸದಲ್ಲಿ ಮೊದಲ ಸ್ಥಾನ ಪಡೆಯುತ್ತದೆ.</p>



<p class="wp-block-paragraph"><strong>ಬ್ರಾಹ್ಮಣರು, ಪ್ರಬಲ ಜಾತಿಗಳು &amp; ಅಲ್ಪಸಂಖ್ಯಾತರು: ಎಲ್ಲರಿಗೂ ಲೆವೆಲ್ ಪ್ಲೇಯಿಂಗ್ ಫೀಲ್ಡ್!</strong><br>ವಿಜಯ್ ಅವರ &#8220;ಎಲ್ಲರಿಗೂ ಎಲ್ಲವೂ&#8221; ಸಿದ್ಧಾಂತ ಇಲ್ಲೇ ವರ್ಕ್ ಆಗಿರೋದು. ದ್ರಾವಿಡ ರಾಜಕಾರಣದಲ್ಲಿ ಬ್ರಾಹ್ಮಣರಿಗೆ ಸ್ಥಾನ ಸಿಗುವುದು ತೀರಾ ವಿರಳ. ಆದರೆ ಟಿವಿಕೆ ಕ್ಯಾಬಿನೆಟ್‌ ನಲ್ಲಿ ಪಿ. ವೆಂಕಟರಮಣನ್ (ಆಹಾರ ಮತ್ತು ನಾಗರಿಕ ಸರಬರಾಜು) ಮತ್ತು ರಮೇಶ್ (HR&amp;CE) ಅವರಿಗೆ ಮಂತ್ರಿಗಿರಿ ನೀಡಲಾಗಿದೆ. ಹಾಗೆಯೇ, ರಾಜ್ಯದ ಆರ್ಥಿಕತೆಯನ್ನು ಕಂಟ್ರೋಲ್ ಮಾಡುವ ಗೌಂಡರ್, ವನ್ನಿಯಾರ್ ಮತ್ತು ಮುಕ್ಕುಲಥೋರ್ ಸಮುದಾಯಗಳನ್ನೂ ಕರೆಕ್ಟ್ ಆಗಿ ಬ್ಯಾಲೆನ್ಸ್ ಮಾಡಲಾಗಿದೆ. ಗೌಂಡ‌ರ್ ಮುಖಂಡ ಕೆ.ಎ. ಸೆಂಗೊಟ್ಟೆಯನ್ ಅವರಿಗೆ ಕಂದಾಯ ಇಲಾಖೆ, ಡೇಟಾ-ಡ್ರಿವನ್ ಸ್ಟ್ರಾಟಜಿಸ್ಟ್ ಆಧವ್ ಅರ್ಜುನ ಅವರಿಗೆ PWD ಮತ್ತು ಕ್ರೀಡೆ ಮತ್ತು ಯುವ ನಾಯಕ ಸಿ.ಟಿ.ಆರ್.ನಿರ್ಮಲ್‌ಕುಮಾ‌ರ್ ಅವರಿಗೆ ಇಂಧನ ಹಾಗೂ ಕಾನೂನು ಖಾತೆ ನೀಡಲಾಗಿದೆ.</p>



<p class="wp-block-paragraph">ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮತಬ್ಯಾಂಕ್ ಈ ಬಾರಿ ಡಿಎಂಕೆಯಿಂದ ಶಿಫ್ಟ್ ಆಗಿ ವಿಜಯ್ ಕೈಹಿಡಿದಿದೆ. ಡಾ. ಎನ್.ಮೇರಿ ವಿಲ್ಸನ್ ಅವರಿಗೆ ರಾಜ್ಯದ ಖಜಾನೆಯ ಕೀಲಿ ಕೈ, ಅಂದರೆ &#8216;ಹಣಕಾಸು&#8217; (Finance) ಖಾತೆಯನ್ನು ನೀಡಲಾಗಿದೆ!. ಎ.ಎಂ. ಷಹಜಹಾನ್ ಅವರಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಿಕ್ಕಿದೆ.</p>



<p class="wp-block-paragraph">ಕಡೆಯದಾಗಿ, ಕೇವಲ ಒಬ್ಬ ಸಿನಿಮಾ ಸ್ಟಾರ್ ಆಗಿ ಎಂಟ್ರಿ ಕೊಟ್ಟು, 59 ವರ್ಷದ ದ್ರಾವಿಡ ಕೋಟೆಯನ್ನು ಒಡೆದು, ದಲಿತರು, ಮಹಿಳೆಯರು, ಯುವಕರು, ಅಲ್ಪಸಂಖ್ಯಾತರು ಮತ್ತು ಬ್ರಾಹ್ಮಣರನ್ನು ಒಟ್ಟಿಗೆ ಸೇರಿಸಿ 35 ಮಂದಿಯ ಈ ಯಂಗ್ &amp; ಎನರ್ಜಿಟಿಕ್ ಟೀಮ್ ಕಟ್ಟಿರುವ ವಿಜಯ್ ಅವರ ಈ ನಡೆ ನಿಜಕ್ಕೂ ರಾಜಕೀಯದ &#8216;ಮಾಸ್ಟರ್ ಸ್ಟೋಕ್. DMK ನಾಯಕರು ಮೈತ್ರಿ ಪಕ್ಷಗಳನ್ನು &#8220;ಬಾಗಿದ ತೆಂಗಿನಮರ&#8221; ಅಂತ ಲೇವಡಿ ಮಾಡಿದಾಗ, ಟಿವಿಕೆ &#8220;ನಮ್ಮ ಪವರ್-ಶೇರಿಂಗ್ ಫಾರ್ಮುಲಾ ನೋಡಿ DMK ಯ ಕೌಟುಂಬಿಕ ರಾಜಕಾರಣಕ್ಕೆ ನಡುಕ ಶುರುವಾಗಿದೆ&#8221; ಅಂತ ಸ್ಟ್ರಾಂಗ್ ಕೌಂಟರ್ ಕೊಟ್ಟಿತ್ತು. ಇದು ಟ್ರೆಂಡ್ ಸೆಟ್ಟರ್ ಆಗೋದ್ರಲ್ಲಿ ಡೌಟೇ ಇಲ್ಲ!</p>



<p class="wp-block-paragraph"></p>
]]></content:encoded>
					
		
		
			</item>
		<item>
		<title>ಬೊಗಸೆಗೆ ದಕ್ಕಿದ್ದು-81 : ವಾಷಿಂಗ್ ಮೆಷಿನಲ್ಲಿ ತೊಳೆದು ಹಿಮದಂತೆ ಬೆಳಗುತ್ತಿರುವ ಹಿಮಂತ ಬಿಸ್ವ ಶರ್ಮಾ!</title>
		<link>https://peepalmedia.com/himanta-biswa-sharma-shining-like-snow/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 19 May 2026 11:06:42 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://peepalmedia.com/?p=78695</guid>

					<description><![CDATA[&#8220;..ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ರಾಜಕೀಯ ಜೀವನವು ಗೋಸುಂಬೆ ರಾಜಕಾರಣ, ಕಪಟ ಸಿದ್ಧಾಂತ, ಅವಕಾಶವಾದ, ಕ್ರಿಮಿನಲ್ ಹಿನ್ನೆಲೆ ಮತ್ತು ಬಿಜೆಪಿಯ &#8220;ವಾಷಿಂಗ್ ಮೆಷಿನ್&#8221; ಪರಿಣಾಮದ ಝಗಮಗಿಸುವ ನಿದರ್ಶನ!..&#8221; ನಿಖಿಲ್ ಕೋಲ್ಪೆಯವರ ಬರಹದಲ್ಲಿ ​ಭಾರತೀಯ ರಾಜಕೀಯದ ಆಧುನಿಕ ರಂಗಭೂಮಿಯಲ್ಲಿ, ನರೇಂದ್ರ ಮೋದಿಯನ್ನು ಬಿಟ್ಟರೆ, ಕೆಲವೇ ನಟರು ಹಿಮಂತ ಬಿಸ್ವಾ ಶರ್ಮಾ (ಸರ್ಮ) ಅವರಷ್ಟು ಪರಿಣಾಮಕಾರಿಯಾಗಿ ಏಣಿಹತ್ತುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಒಂದು ಕಾಲದಲ್ಲಿ ಅಸ್ಸಾಂನಲ್ಲಿ ಕಾಂಗ್ರೆಸ್‌ನ “ನೀಲಿ ಕಣ್ಣಿನ ಹುಡುಗ” (Blue eyed boy), ಈಗ ಈಶಾನ್ಯದಲ್ಲಿ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p class="wp-block-paragraph">&#8220;..ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ರಾಜಕೀಯ ಜೀವನವು ಗೋಸುಂಬೆ ರಾಜಕಾರಣ, ಕಪಟ ಸಿದ್ಧಾಂತ, ಅವಕಾಶವಾದ, ಕ್ರಿಮಿನಲ್ ಹಿನ್ನೆಲೆ ಮತ್ತು ಬಿಜೆಪಿಯ &#8220;ವಾಷಿಂಗ್ ಮೆಷಿನ್&#8221; ಪರಿಣಾಮದ ಝಗಮಗಿಸುವ ನಿದರ್ಶನ!..&#8221; ನಿಖಿಲ್ ಕೋಲ್ಪೆಯವರ ಬರಹದಲ್ಲಿ</p>
</blockquote>



<p class="wp-block-paragraph">​ಭಾರತೀಯ ರಾಜಕೀಯದ ಆಧುನಿಕ ರಂಗಭೂಮಿಯಲ್ಲಿ, ನರೇಂದ್ರ ಮೋದಿಯನ್ನು ಬಿಟ್ಟರೆ, ಕೆಲವೇ ನಟರು ಹಿಮಂತ ಬಿಸ್ವಾ ಶರ್ಮಾ (ಸರ್ಮ) ಅವರಷ್ಟು ಪರಿಣಾಮಕಾರಿಯಾಗಿ ಏಣಿಹತ್ತುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಒಂದು ಕಾಲದಲ್ಲಿ ಅಸ್ಸಾಂನಲ್ಲಿ ಕಾಂಗ್ರೆಸ್‌ನ “ನೀಲಿ ಕಣ್ಣಿನ ಹುಡುಗ” (Blue eyed boy), ಈಗ ಈಶಾನ್ಯದಲ್ಲಿ ಬಿಜೆಪಿಯ ಕೇಸರಿ ಹೊದಿಕೆಯ ಮುಂಚೂಣಿಯಲ್ಲಿರುವ “ಬ್ರಾಹ್ಮಣ ಚತುರ” ಶರ್ಮಾ ಅವರ ವೃತ್ತಿಜೀವನವು- ಕಾನೂನು ದುರ್ಬಲತೆಗಳನ್ನು ರಾಜಕೀಯ ಏಳಿಗೆಗೆ ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬುದರ ಬಹಿರಂಗ ಪ್ರದರ್ಶನವಾಗಿದೆ. ಬಿಜೆಪಿ ತನ್ನ &#8220;ವಾಷಿಂಗ್ ಮೆಷಿನ್&#8221; ಕುಖ್ಯಾತಿಯನ್ನು ಹೇಗೆ ಸಾಬೀತು ಮಾಡುತ್ತಿದೆ; ಆ ಪಕ್ಷಕ್ಕೆ ಸೇರಿದ ಕೂಡಲೇ- ಅದೇ ಮಾಡಿದ್ದ ಹಿಂದಿನ ಭಾರೀ ಆರೋಪಗಳ ಕಲೆಗಳೆಲ್ಲವೂ ಹೇಗೆ ಮಂಗಮಾಯವಾಗುತ್ತವೆ ಎಂಬುದಕ್ಕೆ ಈತ ದೊಡ್ಡ ನಿದರ್ಶನ. ಬಿಹಾರದಲ್ಲಿ ಸಾಮ್ರಾಟ್ ಚೌಧರಿ ಮತ್ತು ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿಯಂತಹ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳನ್ನು ಒಳಗೊಂಡ ಬಿಜೆಪಿ ನಾಯಕತ್ವದ “ಹೊಸ ಯುಗ”ಕ್ಕೆ ಈ ಶರ್ಮಾ ಸರ್ವೋತ್ಕೃಷ್ಟ ಪೂರ್ವಮಾದರಿ!</p>



<p class="wp-block-paragraph">“ಉಲ್ಫಾ”, “ಟಾಡಾ” ಮತ್ತು ಕಾಣೆಯಾದ ಫೈಲ್‌ಗಳು!<br>​ಶರ್ಮಾ ಎಂಬ ಈ ವ್ಯಕ್ತಿಯ ರಾಜಕೀಯ ಮೂಲದ ಕಥೆಯು 1990ರ ಅಸ್ಸಾಂನಲ್ಲಿ ವ್ಯಾಪಕ ಪ್ರಕ್ಷುಬ್ಧತೆಯ ಜೊತೆಗೆ ಬೇರ್ಪಡಿಸಲಾಗದ ಸಂಬಂಧ ಹೊಂದಿದೆ. ಅಧಿಕಾರಕ್ಕೆ ಬರುವ ಬಹಳ ಹಿಂದೆಯೇ, ಆತ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್ (ULFA) ಉಗ್ರಗಾಮಿ ಸಂಘಟನೆಯ ಜೊತೆಗೆ ಸಂಬಂಧ ಹೊಂದಿದ್ದು, ಗಂಭೀರ ಕ್ರಿಮಿನಲ್ ಆರೋಪಗಳನ್ನು ಎದುರಿಸಿದ್ದರು.</p>



<p class="wp-block-paragraph">ಸುಲಿಗೆ ಮತ್ತು ಭಯೋತ್ಪಾದನಾ ಆರೋಪಗಳು: 1991ರಲ್ಲಿ, ಅವರ ವಿರುದ್ಧ ಎರಡು ಪ್ರಕರಣಗಳು (77/1991-ಚಾಂದ್‌ಮರಿ ಮತ್ತು 15/1991-ಪನ್‌ಬಜಾರ್‌) ದಾಖಲಾಗಿದ್ದವು. ಆತ “ಉಲ್ಫಾ”ಗಾಗಿ 10 ಲಕ್ಷ ರೂ. ಸಂಗ್ರಹಿಸುವಾಗ &#8220;ರೆಡ್ ಹ್ಯಾಂಡ್&#8221; ಆಗಿ ಸಿಕ್ಕಿಬಿದ್ದ ಆರೋಪವಿತ್ತು. ನಂತರ ಆತನ ಮೇಲೆ ಭಯೋತ್ಪಾದಕ ಮತ್ತು ವಿಧ್ವಂಸಕ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (TADA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.</p>



<p class="wp-block-paragraph">ಶಸ್ತ್ರಾಸ್ತ್ರ ಕಾಯ್ದೆ: ಗುವಾಹಟಿಯ ಕಾಟನ್ ಕಾಲೇಜು ಹಾಸ್ಟೆಲ್‌ನ ಅಡುಗೆಮನೆಯ ಹಿಂದೆ ಈತ ಅಡಗಿಸಿಟ್ಟಿದ್ದನೆನ್ನಲಾದ ರಿವಾಲ್ವರ್ ಮತ್ತು 25 ಸುತ್ತು ಮದ್ದುಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈತನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.</p>



<p class="wp-block-paragraph">ಫೈಲುಗಳ ಕಣ್ಮರೆ ಪ್ರಕರಣ: ಬಹುಶಃ ಅತ್ಯಂತ ವಿವಾದಾತ್ಮಕವೆಂದರೆ, 2009ರ ಗುವಾಹಟಿ ಹೈಕೋರ್ಟ್‌ನ ಹಸ್ತಕ್ಷೇಪ. ಈ ಪ್ರಕರಣಗಳನ್ನು ಮತ್ತೆ ತೆರೆಯಲು ಪಿಐಎಲ್ ಅರ್ಜಿಯೊಂದು ಕೋರಿದಾಗ, ಪೊಲೀಸರ ಸುಪರ್ದಿಯಿಂದ ಪ್ರಕರಣದ ದಿನಚರಿ ಫೈಲುಗಳು ಕಾಣೆಯಾಗಿವೆ ಎಂಬುದು ಹೈಕೋರ್ಟ್ ವಿಚಾರಣೆ ವೇಳೆ ತಿಳಿದು ಬಂತು. ಆತನನ್ನು ಅಂತಿಮವಾಗಿ ಖುಲಾಸೆಗೊಳಿಸಲಾದರೂ, ಉನ್ನತ ಹುದ್ದೆಯ ಸಚಿವನಾಗಿದ್ದ ಅವಧಿಯಲ್ಲಿ ನಿರ್ಣಾಯಕ ಸಾಕ್ಷ್ಯಗಳ &#8220;ಕಣ್ಮರೆ&#8221; ಕೇವಲ ಕಾಕತಾಳೀಯವಲ್ಲ ಎಂಬ ಟೀಕೆ ಈತನನ್ನು ಹಿಂಬಾಲಿಸಿಕೊಂಡು ಬಂದಿದೆ.</p>



<p class="wp-block-paragraph">ಕಾಂಗ್ರೆಸ್ ಒಳವಲಯದಿಂದ ಮೋದಿ ಕೂಟಕ್ಕೆ ನೆಗೆತ<br>ಪ್ರಸಿದ್ಧಿಗೇರಲು ಬಳಸಿದ್ದ “ಉಲ್ಫಾ” ಸಂಘಟನೆಗೆ ಕೈಕೊಟ್ಟ ​ಶರ್ಮಾ, ಕಾಂಗ್ರೆಸ್‌ನಲ್ಲಿ 22 ವರ್ಷಗಳ ಕಾಲ ಕಳೆದರು; ಪಕ್ಷದ ಹಿರಿಯ ನಾಯಕ ತರುಣ್ ಗೊಗೊಯ್‌ಗೆ ಪ್ರಬಲ ಬಲಗೈ ಬಂಟನಾಗಿ ಸೇವೆ ಸಲ್ಲಿಸಿದರು. 2015ರಲ್ಲಿ ಆತ ಕಾಂಗ್ರೆಸ್ ತೊರೆದುದಕ್ಕೆ ನಾಯಕತ್ವದ ಮಹತ್ವಾಕಾಂಕ್ಷೆ ಮತ್ತು ಭ್ರಷ್ಟಾಚಾರದ ವಿಷಯದಲ್ಲಿ ರಾಹುಲ್ ಗಾಂಧಿ ಜೊತೆಗೆ ಘರ್ಷಣೆ ಮುಖ್ಯ ಕಾರಣ. ರಾಹುಲ್ ಅಸ್ಸಾಂನ ರಾಜಕೀಯ ಬಿಕ್ಕಟ್ಟನ್ನು ಚರ್ಚಿಸುವುದಕ್ಕಿಂತ ತಮ್ಮ ನಾಯಿ ಪೀಡಿಗೆ ಆಹಾರ ನೀಡುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ಶರ್ಮಾ ಬಹಿರಂಗವಾಗಿ ಟೀಕಿಸಿದ್ದರು. ರಾಹುಲ್ ಭ್ರಷ್ಟಾಚಾರ ಆರೋಪ ಹೊತ್ತ ಆತನನ್ನು ಉದ್ದೇಶಪೂರ್ವಕವಾಗಿ ಅವಗಣಿಸಿದ್ದರು.</p>



<p class="wp-block-paragraph">ಆದರೆ, ಆತನ &#8220;ಸೈದ್ಧಾಂತಿಕ&#8221; ಜ್ಞಾನೋದಯದ ಸಮಯ ಮಾತ್ರ ತುಂಬಾ ಅನುಕೂಲಕರವಾಗಿತ್ತು. ಆತ ಕಾಂಗ್ರೆಸ್ ಬಿಡುವ ಸಮಯದಲ್ಲಿ, “​ಲೂಯಿಸ್ ಬರ್ಗರ್ ನೀರಿನ ಹಗರಣ” ನಡೆದಿತ್ತು. 2015ರಲ್ಲಿ, ಯುಎಸ್ ಮೂಲದ ಸಂಸ್ಥೆ “ಲೂಯಿಸ್ ಬರ್ಗರ್”, ನೀರು ಸರಬರಾಜು ಯೋಜನೆಗಳನ್ನು ಪಡೆಯಲು ಅಸ್ಸಾಂನ &#8220;ಅಧಿಕಾರಿಗಳಿಗೆ&#8221; ಲಂಚ ನೀಡಿತ್ತು ಎಂದು ಯುಎಸ್ಎಯ ನ್ಯಾಯ ಇಲಾಖೆ (Department of Justice) ಪತ್ತೆ ಹಚ್ಚಿತ್ತು. ಈ ಹಗರಣದಲ್ಲಿ ಶರ್ಮಾ &#8220;ಪ್ರಮುಖ ಶಂಕಿತ&#8221; ಎಂದು ನಿರ್ದಿಷ್ಟವಾಗಿ ಹೆಸರಿಸುವ “ಗೋವಾ ಮತ್ತು ಅಸ್ಸಾಂನಲ್ಲಿ ನೀರಿನ ಹಗರಣ” ಎಂಬ ಕಿರುಪುಸ್ತಕವನ್ನು ಬಿಜೆಪಿ ಪ್ರಕಟಿಸಿತ್ತು. ಆದರೆ, ಆತ ಕೇಸರಿ ಶಾಲು ಧರಿಸಿದ ಕ್ಷಣ, ತನಿಖೆಗಳು ನಿಧಾನವಾದವು ಮತ್ತು ಬಿಜೆಪಿಯ ಸುಳ್ಳು ಕಥಾನಕವು ಆತನನ್ನು ಕೊಳಕಾದ &#8220;ಭ್ರಷ್ಟ ಕಾಂಗ್ರೆಸಿಗ&#8221;ನಿಂದ- ತೊಳೆದು ಬೆಳ್ಳಗೆ ಹೊಳೆಯುವ &#8220;ಕ್ರಿಯಾತ್ಮಕ ನಾಯಕ&#8221;ನನ್ನಾಗಿ ಬದಲಿಸಿತು! ಅಂದಿನಿಂದ ಕೇಂದ್ರ ತನಿಖಾ ಸಂಸ್ಥೆಗಳು ಆತನ ಮೇಲೆ ಔಪಚಾರಿಕವಾಗಿ ಯಾವುದೇ ಆರೋಪ ಹೊರಿಸಿಲ್ಲ ಎಂದರೆ, ಇಲ್ಲೇ ಕೆಲವು ಕಂತುಗಳಲ್ಲಿ ಹಿಂದೆ ವಿವರಿಸಿರುವ ಬಿಜೆಪಿ ಭ್ರಷ್ಟಾಚಾರದ ಮಾಫಿಯಾ ಅರ್ಥವಾಗಬಹುದು.</p>



<p class="wp-block-paragraph">ಪಿಪಿಇ ಕಿಟ್ ವಿವಾದ (2022): “ದಿ ವೈರ್” ಮತ್ತು “ದಿ ಕ್ರಾಸ್‌ಕರೆಂಟ್‌”ನ ತನಿಖಾ ವರದಿಗಳು 2020ರ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ, ಶರ್ಮಾ ನೇತೃತ್ವದ ಅಸ್ಸಾಂ ಆರೋಗ್ಯ ಇಲಾಖೆಯು- ಆತನ ಪತ್ನಿ ರಿನಿಕಿ ಭುಯಾನ್ ಶರ್ಮಾ ಮತ್ತು ಕುಟುಂಬ ವ್ಯವಹಾರದ ಸಹೋದ್ಯೋಗಿಗೆ ಸಂಬಂಧಿಸಿದ ಕಂಪನಿಗಳಿಗೆ ಪಿಪಿಇ ಕಿಟ್‌ಗಳಿಗಾಗಿ ತುರ್ತು ಗುತ್ತಿಗೆಗಳನ್ನು ನೀಡಿತ್ತು ಎಂದು ಆರೋಪಿಸಿತ್ತು. ಈ ಕಂಪನಿಗಳು ಇತರ ಪೂರೈಕೆದಾರರಿಗಿಂತ ಬಹಳಷ್ಟು ಹೆಚ್ಚಿನ ದರದಲ್ಲಿ ಕಿಟ್‌ಗಳನ್ನು ಪೂರೈಸಿವೆ ಮತ್ತು ಈ ಕಂಪನಿಗಳಿಗೆ ವೈದ್ಯಕೀಯ ಉಪಕರಣಗಳ ವ್ಯವಹಾರದಲ್ಲಿ ಯಾವುದೇ ಪೂರ್ವ ಅನುಭವವಿರಲಿಲ್ಲ ಎಂದು ಆರೋಪಗಳು ಸೂಚಿಸಿವೆ. ಶರ್ಮಾ ಇದನ್ನು ನಿರಾಕರಿಸಿ, ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಆದರೆ, ಮೂಲ ಆರೋಪದ ಬಗ್ಗೆ ಮಾತ್ರ ತನಿಖಾ ಸಂಸ್ಥೆಗಳು ಯಾವುದೇ ತನಿಖೆ ನಡೆಸಿಲ್ಲ!</p>



<p class="wp-block-paragraph">ಆದಾಯ ಮತ್ತು ಸಂಪತ್ತಿನ ವ್ಯತ್ಯಾಸಗಳು: ಚುನಾವಣಾ ಅಫಿಡವಿಟ್‌ಗಳಲ್ಲಿ ಘೋಷಿಸಲಾದ ಶರ್ಮಾ ಅವರ ವೈಯಕ್ತಿಕ ಆಸ್ತಿಗಳು ಸ್ಥಿರವಾದ ದೊಡ್ಡ ಬೆಳವಣಿಗೆಯನ್ನು ತೋರಿಸುತ್ತವೆಯಾದರೂ, ಆತನ ಪತ್ನಿಯ ನಿಯಂತ್ರಣದಲ್ಲಿರುವ ವಂದ್ಯ ಇಂಟರ್‌ನ್ಯಾಷನಲ್ ಸ್ಕೂಲ್ ಮತ್ತು ಪ್ರೈಡ್ ಈಸ್ಟ್ ಎಂಟರ್‌ಟೈನ್‌ಮೆಂಟ್ಸ್ ಎಂಬ ಮಾಧ್ಯಮ ಸಾಮ್ರಾಜ್ಯದ ಹಣಕಾಸಿನ ವಿವರಗಳನ್ನು- ಅವು ಕುಟುಂಬದ ಮೂಲ ಆದಾಯದ ಭಾಗವಾಗಿದ್ದರೂ- ನೀಡಿಲ್ಲ. ಮೇಲಾಗಿ, ಈ ಉದ್ಯಮಗಳಿಗಾಗಿ ನಡೆದ ಭೂಸ್ವಾಧೀನವು ಹಲವಾರು ಆಡಳಿತಾತ್ಮಕ &#8220;ವೈಪರೀತ್ಯಗಳನ್ನು&#8221; ಒಳಗೊಂಡಿವೆ ಎಂದು ವಿರೋಧ ಪಕ್ಷದ ನಾಯಕರು ಮತ್ತೆ ಮತ್ತೆ ಆರೋಪಿಸಿದ್ದರೂ, ಯಾವದೇ ತನಿಖೆ ನಡೆಸಿಲ್ಲ; ಯಾರೂ ಕೇಳುವವರಿಲ್ಲ. ಇದರಲ್ಲಿ ಕೈಗಾರಿಕಾ ಅಥವಾ ಶೈಕ್ಷಣಿಕ ಬಳಕೆಗಾಗಿ ಕೃಷಿ ಭೂಮಿಯನ್ನು ದಾಖಲೆಯ ಸಮಯದಲ್ಲಿ ಪರಿವರ್ತಿಸಿರುವುದು ಸೇರಿದೆ.</p>



<p class="wp-block-paragraph">ಆಡಳಿತದ ಮೂಲ ಸಾಧನವಾಗಿ ವಿವಾದ<br>​ಬಿಜೆಪಿಯಲ್ಲಿ, ಶರ್ಮಾ ತಮ್ಮ ವರಸೆಯನ್ನು ತೆರೆಮರೆಯ ಕುತಂತ್ರದಿಂದ- ಬೊಬ್ಬೆ ಹೊಡೆಯುವ ಜನಮರುಳು ಕೋಮು ವಾಕ್ಚಾತುರ್ಯಕ್ಕೆ ಬದಲಾಯಿಸಿಕೊಂಡಿದ್ದಾರೆ. ಅವರು dog whistle (ನಾಯಿಗಳಿಗೆ ಮಾತ್ರ ಕೇಳಿಸುವ ನಾಯಿ-ಶಿಳ್ಳೆ) ರಾಜಕೀಯದಲ್ಲಿ ಪರಿಣಿತರಾಗಿದ್ದು, ಆಗಾಗ್ಗೆ ಕೋಮು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಾರೆ. ಪರೋಕ್ಷ ದ್ವೇಷ ಭಾಷಣಗಳನ್ನು ಮಾಡಿದಾಗ ಈತನ ದ್ವೇಷ ಸಂದೇಶ ಏನು ಎಂದು ಹಿಂಬಾಲಕರಿಗೆ ಗೊತ್ತಾಗುತ್ತದೆ. ಅವರು ಅಲ್ಪಸಂಖ್ಯಾತರನ್ನು ಗುರಿಮಾಡುತ್ತಾರೆ.</p>



<p class="wp-block-paragraph">​&#8221;ಮಿಯಾ&#8221; ಅಣಕ: ಅವರು ಬಂಗಾಳಿ ಮಾತನಾಡುವ ಮುಸ್ಲಿಮರಿಗೆ (&#8220;ಮಿಯಾ&#8221;) &#8220;ಅಕ್ರಮ ಬಾಂಗ್ಲಾದೇಶಿಗಳು&#8221; ಎಂದು ಪದೇ ಪದೇ ಹಣೆಪಟ್ಟಿ ಕಟ್ಟಿದ್ದಾರೆ. ತಾನು ಮುಖ್ಯಮಂತ್ರಿಯಾಗಿರುವವರೆಗೆ ಅವರು &#8220;ಸಮಸ್ಯೆ&#8221; ಎದುರಿಸಬೇಕಾಗುತ್ತದೆ ಎಂದು ಆತ ಬಹಿರಂಗ ಬೆದರಿಕೆ ಹಾಕಿದ್ದಾರೆ. ಆದರೆ, ಅವರೆಲ್ಲಾ ಪಶ್ಚಿಮ ಬಂಗಾಳದ ಮುಸ್ಲಿಮರಲ್ಲದೆ, ಬಾಂಗ್ಲಾದೇಶದಿಂದ ಬಂದವರೆಂದು ಸಾಬೀತಾದ ಪ್ರಕರಣಗಳು ತೀರಾ ಕಡಿಮೆ. ವಾಸ್ತವದಲ್ಲಿ ಬಂಗಾಳದ ಹಿಂದೂಗಳೂ ದೊಡ್ಡ ಪ್ರಮಾಣದಲ್ಲಿ ಅಸ್ಸಾಮಿಗೆ ವಲಸೆ ಹೋಗಿದ್ದು, ಮೂಲತಃ ಆ ಕಾರಣದಿಂದಲೇ ಅಸ್ಸಾಂನಲ್ಲಿ ಮೂಲ ಅಸ್ಸಾಮಿಗರ ಪ್ರಕ್ಷೋಭೆ ಆರಂಭವಾಗಿತ್ತು.</p>



<p class="wp-block-paragraph">​ಕೋಮು ವಾಕ್ಚಾತುರ್ಯ: &#8220;ಹಿಂದೂಗಳು ಸಾಮಾನ್ಯವಾಗಿ ಗಲಭೆಗಳಲ್ಲಿ ತೊಡಗುವುದಿಲ್ಲ&#8221; ಎಂದು ಹೇಳಿಕೊಳ್ಳುವುದರಿಂದ ಹಿಡಿದು, ನಿರ್ದಿಷ್ಟ ಸಮುದಾಯದ ಜನರ ಮೇಲೆ ಅವರು ರೈಫಲ್ ಗುರಿಯಿಟ್ಟ ಇತ್ತೀಚಿನ ವೈರಲ್ ವೀಡಿಯೊದವರೆಗೆ (ಇದು ಪ್ರಸ್ತುತ ಸುಪ್ರೀಂ ಕೋರ್ಟ್ ಪರಿಶೀಲನೆಯಲ್ಲಿರುವ ಪ್ರಕರಣ)- ಶರ್ಮಾ ತನ್ನ ನೆಲೆಯನ್ನು ಬಲಪಡಿಸಲು ಹಿಂದೂ ಮುಸ್ಲಿಂ, ಅಸ್ಸಾಂ ಅಸ್ಸಾಮೇತರ ಧ್ರುವೀಕರಣವನ್ನು ಯಾವುದೇ ಲಗಾಮಿಲ್ಲದೇ ಬಳಸುತ್ತಾರೆ.</p>



<p class="wp-block-paragraph">​ಬೇಜವಾಬ್ದಾರಿಯುತ ಹೇಳಿಕೆಗಳು: ಈತನ ಹೇಳಿಕೆಗಳು ಬಿಜೆಪಿಯ ಕೂಗುಮಾರಿ ಸಂಬಿತ್ ಪಾತ್ರನಂತೆ ತರ್ಕರಹಿತ, ಅವೈಜ್ಞಾನಿಕ ಮತ್ತು ಮಾನಗೇಡಿಯಾಗಿವೆ. ಕ್ಯಾನ್ಸರ್ ಎಂಬುದು ಹಿಂದಿನ ಪಾಪಗಳಿಗೆ ದೇವರು ನೀಡಿದ ಶಿಕ್ಷೆ ಎಂಬ ವಿವಾದಾತ್ಮಕ ಹೇಳಿಕೆ ಅಥವಾ &#8220;ರಸಗೊಬ್ಬರ ಜಿಹಾದ್&#8221; ಮತ್ತು ಹೊಸ ಹೊಸ ಜೆಹಾದ್ ಸಿದ್ಧಾಂತಗಳ ಲಗಾಮಿಲ್ಲದ ನಾಲಿಗೆ, ನಾಚಿಕೆಯಿಲ್ಲದ ವರ್ತನೆಯ ಮೂಲಕ ಶರ್ಮಾ ತನ್ನ ಹುದ್ದೆಯ ಸಾಂವಿಧಾನಿಕ ಗೌರವವನ್ನು ಚರಂಡಿಪಾಲು ಮಾಡುತ್ತಾರೆ. ಅಸ್ಸಾಮಿಗೆ ಸೀಮಿತವಾಗಿದ್ದರೂ, ದೇಶದಾದ್ಯಂತದ ಪ್ರತಿಪಕ್ಷಗಳ ನಾಯಕರ ಬಗ್ಗೆ ಅಸಂಬದ್ಧ ಹೇಳಿಕೆಗಳನ್ನು ಉದುರಿಸಿ, ಪ್ರಚಾರದಲ್ಲಿರುತ್ತಾರೆ.</p>



<p class="wp-block-paragraph">&#8220;ವಾಷಿಂಗ್ ಮೆಷಿನ್&#8221; ಮತ್ತು “ಹೊಸ” ನಾಯಕತ್ವ<br>​ಬಹಿರಂಗವಾದ ಕೋಮುವಿಭಜನೆ ಮತ್ತು ದ್ವೇಷದ ರಾಜಕಾರಣವೇ ಅಧಿಕೃತವಾಗಿರುವಾಗ, ಶರ್ಮಾ ಇನ್ನು ಮುಂದೆ ಹೊರಗಿನವನಲ್ಲ; ಅವರೇ ಪಕ್ಷದ ಭವಿಷ್ಯದ ನಾಯಕರ ನೀಲನಕ್ಷೆ. ​ಆದರೆ ಆತ ಮೊದಲಿಗನಲ್ಲ! ಬಿಜೆಪಿಯ &#8220;ವಾಷಿಂಗ್ ಮೆಷಿನ್&#8221; ವಿದ್ಯಮಾನಕ್ಕೆ ಬಹುಶಃ ಯೋಗಿ ಆದಿತ್ಯನಾಥ್ ಎಂದು ಸಾರ್ವಜನಿಕರಿಗೆ ಪರಿಚಿತನಾಗಿರುವ ಅಜಯ್ ಸಿಂಗ್ ಬಿಶ್ತ್ ಉತ್ತಮ ಉದಾಹರಣೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗುವುದಕ್ಕೆ ಬಹಳ ಹಿಂದೆಯೇ, ಬಿಶ್ತ್ “ಹಿಂದೂ ಯುವ ವಾಹಿನಿ”ಯ ಸ್ಥಾಪಕರಾಗಿದ್ದರು, ಇದು ಕೋಮು ಘರ್ಷಣೆಯನ್ನು ಪ್ರಚೋದಿಸುವ ಖಾಸಗಿ ಸೇನೆ. ಆತನ ಕ್ರಿಮಿನಲ್ ದಾಖಲೆಯು ಒಂದು ಕಾಲದಲ್ಲಿ ಭಯಾನಕವಾಗಿತ್ತು. ಅದರಲ್ಲಿ ಕೊಲೆ ಯತ್ನ, ಗಲಭೆ ಮತ್ತು ಮತೀಯ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪಗಳು ಸೇರಿವೆ. 2007ರಲ್ಲಿ, ಗೋರಖ್‌ಪುರ ಗಲಭೆಯಲ್ಲಿ ಆತನ ಪಾತ್ರಕ್ಕಾಗಿ ಆತನನ್ನು ಜೈಲಿಗೆ ಹಾಕಲಾಯಿತು. ಹೀಗಿದ್ದರೂ, ಆತನ ರಾಜಕೀಯ &#8220;ಪುನಃಸ್ಥಾಪನೆ&#8221;ಯ ವಾಷಿಂಗ್ ಮೆಷಿನ್ ಪ್ರಕ್ರಿಯೆ 2017ರಲ್ಲಿ ಸಂಭವಿಸಿತು. ಅಧಿಕಾರ ವಹಿಸಿಕೊಂಡ ಸ್ವಲ್ಪ ಸಮಯದ ನಂತರ, ಆತನ ಸ್ವಂತ ಸರಕಾರವು ನಿಷೇಧಾಜ್ಞೆಗಳನ್ನು ಧಿಕ್ಕರಿಸಿದ್ದಕ್ಕಾಗಿ ಆತನ ವಿರುದ್ಧದ 22 ವರ್ಷಗಳ ಹಳೆಯ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ಆದೇಶ ಹೊರಡಿಸಿತು. 2019ರ ಹೊತ್ತಿಗೆ, ಕೋಮು ಘಟನೆಗಳನ್ನು ಒಳಗೊಂಡಂತೆ ಹಲವಾರು ಇತರ ಗಂಭೀರ ಆರೋಪಗಳನ್ನು ವ್ಯವಸ್ಥಿತವಾಗಿ ವಜಾಗೊಳಿಸಲಾಯಿತು ಅಥವಾ ಹೂತು ಹಾಕಲಾಯಿತು. ಬಿಶ್ತ್ ಮಾದರಿಯಲ್ಲಿಯೇ ಶರ್ಮಾ &#8220;ಬುಲ್ಡೋಜರ್ ಜಸ್ಟೀಸ್&#8221; ಎಂಬ ಬ್ರ್ಯಾಂಡನ್ನು ಮಾಮೂಲಿ ಎಂಬಂತೆ ಬಳಸುತ್ತಿದ್ದಾರೆ. ಇದು ನಿರ್ದಿಷ್ಟ ಜನ ವಿಭಾಗವನ್ನು ಗುರಿಯಾಗಿಸಲು ನ್ಯಾಯಾಲಯಗಳನ್ನು ಸಂಪೂರ್ಣವಾಗಿ ಬೈಪಾಸ್ ಮಾಡುವ ನ್ಯಾಯಬಾಹಿರ ಶಿಕ್ಷೆಯ ವಿಧಾನವಾಗಿದೆ. ಆದರೆ, ಈ ವಿಷಯದಲ್ಲಿ ಸುಪ್ರೀಂಕೋರ್ಟ್ ಆದೇಶವನ್ನೂ ಬಿಜೆಪಿ ಆಡಳಿತದ ಸರಕಾರಗಳು ಅವಗಣಿಸುತ್ತಿವೆ.</p>



<p class="wp-block-paragraph">ಹಿಂದಿನ ಕಾಲದ ಕ್ರಿಮಿನಲ್ ನಾಯಕರನ್ನು ಹೀರಿಕೊಳ್ಳುವ ಮತ್ತು &#8220;ಶುದ್ಧೀಕರಿಸುವ&#8221; ಬಿಜೆಪಿಯ ತಂತ್ರವು 2026ರಲ್ಲಿ ಉತ್ತುಂಗಕ್ಕೇರಿದೆ. ಯೋಗಿಯೊಬ್ಬ ತಿಳುವಳಿಕೆಯಿಲ್ಲದ ಒರಟ ಮತ್ತು ತೀವ್ರ ಹಿಂದೂವಾದಿ ಎಂದು ಗೊತ್ತಿದ್ದರೂ- ಎಲ್ಲರನ್ನೂ ಒಟ್ಟಿಗೆ ಒಯ್ಯುವ ಬಿಜೆಪಿಯ ಮೋದಿ ಮತ್ತು ಆರೆಸ್ಸೆಸ್ಸಿನ ಭಾಗವತರ ನಾಟಕದ ಹೊರತಾಗಿಯೂ ಯೋಗಿ, ಶರ್ಮಾರಂತ ಕ್ರಿಮಿನಲ್ ಹಿನ್ನೆಲೆಯವರನ್ನೇ ಬಿಜೆಪಿ ತೊಳೆದು ಶುದ್ಧ ಮಾಡಿ ಮುನ್ನೆಲೆಗೆ ತರುತ್ತಿದೆ. ಇವರಿಗೆಲ್ಲಾ ಮಾಜಿ ಜೈಲುವಾಸಿ, ಗೃಹ ಸಚಿವ ಅಮಿತ್ ಶಾ ಕುಲಗುರು. ಇತ್ತೀಚಿನ ಉದಾಹರಣೆಗಳನ್ನು ಗಮನಿಸಬಹುದು.</p>



<p class="wp-block-paragraph">​ಸಾಮ್ರಾಟ್ ಚೌಧರಿ (ಬಿಹಾರ): ಇತ್ತೀಚೆಗೆ ಬಿಹಾರದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕ್ರಿಮಿನಲ್ ಹಿನ್ನೆಲೆಯ ಮೆಟ್ರಿಕ್ ಫೇಲ್‌ ಚೌಧರಿ &#8211; ಹಲವು ಪಕ್ಷಗಳ ನೀರು ಕುಡಿದ ಮತ್ತು ಹಲವಾರು ಕ್ರಿಮಿನಲ್ ಕೇಸು ಎದುರಿಸಿದ ವ್ಯಕ್ತಿ. ಅದೇ ಬ್ರಾಂಡಿನ ಉಗ್ರವಾದಿ, ಆಕ್ರಮಣಕಾರಿ, ಅವಕಾಶವಾದಿ ನಾಯಕತ್ವವನ್ನು ಪ್ರತಿನಿಧಿಸುತ್ತಾರೆ. ಈತನ ವಿವರಗಳನ್ನು ಮುಂದೊಮ್ಮೆ ಪರಿಶೀಲಿಸೋಣ.</p>



<p class="wp-block-paragraph">ಸುವೇಂದು ಅಧಿಕಾರಿ (ಪಶ್ಚಿಮ ಬಂಗಾಳ): ಅಧಿಕಾರಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ವಹಿಸಿಕೊಳ್ಳಲು ಸಿದ್ಧರಾಗುತ್ತಿದ್ದಂತೆ, ಹೋಲಿಕೆಗಳು ಗಮನಾರ್ಹವಾಗಿವೆ. ಶರ್ಮಾನಂತೆಯೇ ಈ ಅಧಿಕಾರಿ ಟಿಎಂಸಿಯಲ್ಲಿದ್ದಾಗ “ನಾರದ ಸ್ಟಿಂಗ್ ಅಪರೇಷನ್” ಮತ್ತು ಮತ್ತು “ಶಾರದ ಚಿಟ್ ಫಂಡ್ ಹಗರಣ”ದ ತನಿಖೆಗಳ ಮುಖ್ಯ ಪಾತ್ರಧಾರಿ. ಸುವೇಂದು ಅಧಿಕಾರಿ ತನ್ನ ಕೊಳಕುಬಾಯಿ, ಪಾಳೇಗಾರಿ ವರ್ತನೆಗೆ ಕುಖ್ಯಾತ. ತೃಣಮೂಲ ಕಾಂಗ್ರೆಸ್‌ನಲ್ಲಿ ಇದ್ದಾಗಲೇ ಆತ ಗೂಂಡಾಗಿರಿಯ ಆರೋಪ ಹೊತ್ತಿದ್ದರು. (ಮರೆತಿರುವವರಿಗಾಗಿ: “ನಾರದ ನ್ಯೂಸ್” ಎಂಬ ಸುದ್ದಿ ಚಾನೆಲ್ ಬಿಡುಗಡೆ ಮಾಡಿದ್ದ ವೀಡಿಯೊ ತುಣುಕಿನಲ್ಲಿ, ಸುವೇಂದು ಅಧಿಕಾರಿ ಸೇರಿದಂತೆ ಹಲವಾರು ಉನ್ನತ ಟಿಎಂಸಿ ನಾಯಕರು ರಾಜಕೀಯ ಲಾಭಕ್ಕಾಗಿ ಕಾಲ್ಪನಿಕ ಕಂಪನಿಯ ಪ್ರತಿನಿಧಿಯಿಂದ ಹಣ ಸ್ವೀಕರಿಸುತ್ತಿರುವುದನ್ನು ತೋರಿಸಲಾಗಿತ್ತು. ಮತ್ತು ಶಾರದಾ ಗ್ರೂಪ್‌ನ ಚಿಟ್ ಫಂಡ್ ಹಗರಣವು ಒಂದು ಪ್ರಮುಖ ಹಣಕಾಸು ವಂಚನೆಯಾಗಿದ್ದು, 2013ರಲ್ಲಿ ಅದು ಕುಸಿದು ಬಿದ್ದು ಲಕ್ಷಾಂತರ ಸಣ್ಣ ಹೂಡಿಕೆದಾರರ ಉಳಿತಾಯವನ್ನು ಅಳಿಸಿಹಾಕಿತ್ತು.) ಬಿಜೆಪಿಗೆ ಆತನ ಪಕ್ಷಾಂತರವು ಆತನಿಗೆ ಉತ್ತರ ಪ್ರದೇಶ ಮತ್ತು ಅಸ್ಸಾಂನಲ್ಲಿ ಕಂಡುಬಂದ ಅದೇ &#8220;ನ್ಯಾಯಾಂಗ ವಿನಾಯಿತಿ&#8221; ಮತ್ತು ರಾಜಕೀಯ ಉನ್ನತಿಯನ್ನು ಪಶ್ಚಿಮ ಬಂಗಾಳದಲ್ಲಿ ಒದಗಿಸಿತು. ಈತಕ ಕುರಿತೂ ಮುಂದೆ ವಿವರವಾಗಿ ಪರಿಶೀಲಿಸೋಣ.</p>



<p class="wp-block-paragraph">ಗೋಸುಂಬೆಯ ನೇತೃತ್ವದಲ್ಲಿ ಗೋಸುಂಬೆಗಳ ಆಡಳಿತ<br>ಹಿಮಂತ ಬಿಸ್ವಾ ಶರ್ಮಾ ಅವರ ಸಾರ್ವಜನಿಕ ಜೀವನದ ಹಾದಿಯು- ಪ್ರಸ್ತುತ ಬಿಜೆಪಿ ಆಡಳಿತದಲ್ಲಿ &#8220;ಅಪರಾಧ&#8221;ದ ಹಿನ್ನೆಲೆ ಅಥವಾ ಅವಕಾಶವಾದದ ಇತಿಹಾಸವು ಒಂದು ಹಿನ್ನಡೆಯಲ್ಲ; ಬದಲಾಗಿ ಅದೊಂದು ಅನುಕೂಲತೆ ಎಂದು ಸೂಚಿಸುತ್ತದೆ. ವಿವಾದಾತ್ಮಕ ಹೇಳಿಕೆಗಳ ಮೂಲಕ, “ಹಿಂದೂತ್ವ”ದ ನಿರೂಪಣೆಯ ಮೂಲಕ, ಕಾನೂನಿನ ದುರ್ಬಳಕೆ ಮತ್ತು ಹಿಂದಿನ ತನಿಖೆಗಳನ್ನು ಹೂತುಹಾಕಲು ಸರಕಾರಿ ಯಂತ್ರಗಳನ್ನು ಬಳಸುವ ಮೂಲಕ- ಶರ್ಮಾ ತಾನು ಬದುಕುಳಿಯುವು ಮಾತ್ರವೇ ತನ್ನ ಅಂತಿಮ ಸಿದ್ಧಾಂತ ಎಂದು ಸಾಬೀತುಪಡಿಸಿದ್ದಾರೆ. ಜನರು ಬೇಕಾದರೆ, ಹಾಳುಗುಂಡಿಗೆ ಬೀಳಲಿ!</p>



<p class="wp-block-paragraph">ಮೋದಿ ಆಡಳಿತದಲ್ಲಿ &#8220;ವಾಷಿಂಗ್ ಮೆಷಿನ್&#8221; ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ- ಕಾನೂನು ರೂಪಿಸುವ &#8220;ಶಾಸಕ&#8221;, ಜನಪ್ರತಿನಿಧಿ ಮತ್ತು ಕಾನೂನು ಉಲ್ಲಂಘಿಸುವ “ಕ್ರಿಮಿನಲ್&#8221; ನಡುವಿನ ವ್ಯತ್ಯಾಸವು ಹೆಚ್ಚು ಹೆಚ್ಚು ಮಸುಕಾಗುತ್ತಿದೆ. ಸಾಮಾನ್ಯ ನಾಗರಿಕರ ನ್ಯಾಯದ ಗುರಾಣಿ ಹಿಂದೆಂದಿಗಿಂತಲೂ ತೆಳುವಾಗುತ್ತಿದೆ. ಶರ್ಮಾ, ಚೌಧರಿ ಮತ್ತು ಅಧಿಕಾರಿಗಳಿಗೆ, ತಮ್ಮ ಕರಾಳ ಭೂತಕಾಲವು ರಾಜಕೀಯ ಜೀವನದಲ್ಲಿ ಕೇವಲ ಒಂದು ಅಡಿಟಿಪ್ಪಣಿಯಾಗಿದೆ. ಈಗಿನ ರಾಜಕಾರಣದಲ್ಲಿ ಬೊಗಳಬಲ್ಲ, ಕಚ್ಚಬಲ್ಲ, ಬಣ್ಣಬದಲಿಸಬಲ್ಲ ಭ್ರಷ್ಟ, ವಂಚಕ ಗೋಸುಂಬೆಗಳಿಗೇ ಅಧಿಕಾರ, ಗೌರವ, ಸ್ಥಾನಮಾನ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಈ ವ್ಯವಸ್ಥೆಯ ಪರಮೋಚ್ಚ “ಸ್ಯಾಂಪಲ್” ಈ ವಿದ್ಯಮಾನದ ನೇತೃತ್ವ ವಹಿಸಿದೆ.</p>
]]></content:encoded>
					
		
		
			</item>
		<item>
		<title>ಕೇಸರಿ ಶಾಲಿನವರು ತಲೆಕೆಡಿಸಿಕೊಳ್ಳಬೇಕಿರೋದು ಜನಿವಾರದ ಬಗ್ಗೆಯೇ ಹೊರತು ಹಿಜಾಬ್ ಬಗ್ಗೆಯಲ್ಲ!</title>
		<link>https://peepalmedia.com/what-you-need-to-worry-about-is-january-not-the-hijab/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 15 May 2026 15:15:03 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://peepalmedia.com/?p=78574</guid>

					<description><![CDATA[&#8220;ಹಿಜಾಬಿಗೆ ಅವಕಾಶ ಉಂಟು, ಕೇಸರಿ ಶಲ್ಯಕ್ಕೆ ಅವಕಾಶ ಇಲ್ಲ. ನಾನಂತೂ ಕೇಸರಿ ಶಲ್ಯ ಹಾಕಿಯೇ ಹಾಕುತ್ತೇನೆ&#8221; ಎಂದು ಕೆಲ ಕಾಲೇಜಿನ ವಿದ್ಯಾರ್ಥಿಗಳು ಪೋಸ್ಟರ್ ಶೇರ್ ಮಾಡಿಕೊಂಡಿದ್ದಾರೆ. ಆದರೆ ಅದೇ ವಿದ್ಯಾರ್ಥಿಗಳು ಕಾಲೇಜಿನೊಳಗೆ ಜನಿವಾರಕ್ಕೆ ಅಧಿಕೃತ ಮಾನ್ಯತೆ ನೀಡಲಾಗಿದೆ ಎಂಬುದನ್ನು ಮರೆಯುತ್ತಾರೆ. ಕೇಸರಿ ಶಾಲು ಧರಿಸುವ ಹಿಂದುಳಿದ ವರ್ಗದ ಹಿಂದೂ ಯುವಕರಿಗೆ ಹಿಜಾಬ್ ಗಿಂತಲೂ ಅವರ ಪಾಲಿಗೆ ಜನಿವಾರ ಅಪಾಯಕಾರಿ ಎಂಬುದು ಇನ್ನೂ ಅರಿವಿಗೆ ಬಂದಿಲ್ಲ ! ಶಾಲೆಗಳಲ್ಲಿ ವಿದ್ಯಾರ್ಥಿನಿಯರ ಹಿಜಾಬ್ ಜೊತೆಗೆ ಜನಿವಾರಕ್ಕೂ ಅಧಿಕೃತತೆ ನೀಡಿದ್ದು ಸರ್ಕಾರವೇ [&#8230;]]]></description>
										<content:encoded><![CDATA[
<pre class="wp-block-code"><code>* ಕೇಸರಿ ಶಾಲಿನ ಹಿಂದುಳಿದ ವರ್ಗದ ಯುವಕರಿಗೆ ಹಿಜಾಬ್ ಗಿಂತ ಜನಿವಾರ ಅಪಾಯಕಾರಿ!
* ಹಿಜಾಬ್ ಕೇವಲ ವಸ್ತ್ರವಷ್ಟೇ.. ಜನಿವಾರ ಮೇಲು ಕೀಳಿನ ಸಂಕೇತ!
* ಜನಿವಾರ ಎಂಬುದು ಹಿಂದುತ್ವದ ಸ್ಲೋಗನ್ 'ಹಿಂದೂ ನಾವೆಲ್ಲ ಒಂದು' ಸಂಕೇತದಲ್ಲೇ ಬರೋದಿಲ್ಲ..
ಪತ್ರಕರ್ತರಾದ ನವೀನ್ ಸೂರಿಂಜೆಯವರ ಬರಹದಲ್ಲಿ</code></pre>



<p class="wp-block-paragraph">&#8220;ಹಿಜಾಬಿಗೆ ಅವಕಾಶ ಉಂಟು, ಕೇಸರಿ ಶಲ್ಯಕ್ಕೆ ಅವಕಾಶ ಇಲ್ಲ. ನಾನಂತೂ ಕೇಸರಿ ಶಲ್ಯ ಹಾಕಿಯೇ ಹಾಕುತ್ತೇನೆ&#8221; ಎಂದು ಕೆಲ ಕಾಲೇಜಿನ ವಿದ್ಯಾರ್ಥಿಗಳು ಪೋಸ್ಟರ್ ಶೇರ್ ಮಾಡಿಕೊಂಡಿದ್ದಾರೆ. ಆದರೆ ಅದೇ ವಿದ್ಯಾರ್ಥಿಗಳು ಕಾಲೇಜಿನೊಳಗೆ ಜನಿವಾರಕ್ಕೆ ಅಧಿಕೃತ ಮಾನ್ಯತೆ ನೀಡಲಾಗಿದೆ ಎಂಬುದನ್ನು ಮರೆಯುತ್ತಾರೆ. ಕೇಸರಿ ಶಾಲು ಧರಿಸುವ ಹಿಂದುಳಿದ ವರ್ಗದ ಹಿಂದೂ ಯುವಕರಿಗೆ ಹಿಜಾಬ್ ಗಿಂತಲೂ ಅವರ ಪಾಲಿಗೆ ಜನಿವಾರ ಅಪಾಯಕಾರಿ ಎಂಬುದು ಇನ್ನೂ ಅರಿವಿಗೆ ಬಂದಿಲ್ಲ !</p>



<p class="wp-block-paragraph">ಶಾಲೆಗಳಲ್ಲಿ ವಿದ್ಯಾರ್ಥಿನಿಯರ ಹಿಜಾಬ್ ಜೊತೆಗೆ ಜನಿವಾರಕ್ಕೂ ಅಧಿಕೃತತೆ ನೀಡಿದ್ದು ಸರ್ಕಾರವೇ ವಿದ್ಯಾರ್ಥಿ ಸಮುದಾಯದ ಮಧ್ಯೆ&nbsp; ಅಸಮಾನತೆಯನ್ನು ಬಿತ್ತಿದಂತಾಗುತ್ತದೆ. ಹಿಜಾಬ್ ಎನ್ನುವುದು ಒಂದು ವಸ್ತ್ರವೇ ಹೊರತು, ಅದರ ಹಿಂದೆ ಮೇಲು-ಕೀಳು, ಶ್ರೇಷ್ಠ ನೀಚ ಎಂಬ ಅಜೆಂಡಾಗಳು ಇರುವುದಿಲ್ಲ. ಜನಿವಾರ ಎನ್ನುವುದು ವಿದ್ಯಾರ್ಥಿಗಳ ಮಧ್ಯೆ ಮೇಲು-ಕೇಳು, ಶ್ರೇಷ್ಠ ಕನಿಷ್ಠ ಭಾವನೆಗಳನ್ನು ಮೂಡಿಸುತ್ತದೆ. ಜನಿವಾರ ಎನ್ನುವುದು ಅವರವರ ವೈಯಕ್ತಿಕ ನಂಬಿಕೆ ಮತ್ತು ಆಚರಣೆಯಾಗಿದ್ದಷ್ಟೂ ಒಳ್ಳೆಯದು. ಜನಿವಾರಕ್ಕೆ ಸಾರ್ವಜನಿಕ ಮಾನ್ಯತೆ ನೀಡುವುದು ಅಸಮಾನತೆಯನ್ನು ಸಮಾಜದಲ್ಲಿ ಪೋಷಿಸಿದಂತಾಗುತ್ತದೆ.</p>



<p class="wp-block-paragraph">ಹಿಜಾಬ್ ಎನ್ನುವುದು ಧರ್ಮದ ವಸ್ತ್ರ ಸಂಕೇತ. ಜನಿವಾರ ಎನ್ನುವುದು ಹಿಂದೂ ಧರ್ಮದ ಸಂಕೇತವಲ್ಲ. ಅದು ಕೇವಲ ಬ್ರಾಹ್ಮಣರಿಗೆ ಮಾತ್ರ ಸೀಮಿತವಾದ ಸಂಕೇತ. ಅದಲ್ಲದೇ, ಅದು ಹಿಂದೂ ಧರ್ಮವನ್ನು ಜಾತಿಗಳ ಆಧಾರದಲ್ಲಿ ಒಡೆಯುವುದರ ಸಂಕೇತವಾಗಿದೆ. ಜನಿವಾರದ ಸಾರ್ವಜನಿಕ ಚರ್ಚೆ ಮತ್ತು ಮಾನ್ಯತೆಯು ಆರ್ ಎಸ್ ಎಸ್ ಪ್ರತಿಪಾದಿಸುವ &#8216;ಹಿಂದೂ ನಾವೆಲ್ಲ ಒಂದು&#8217; ಎಂಬ ಆಶಯಕ್ಕೂ ವಿರುದ್ಧವಾಗಿದೆ.&nbsp; ಜನಿವಾರ ಕಂಡಾಕ್ಷಣ ಅಥವಾ ಅದರ ಹೆಸರು ಕೇಳಿದ ತಕ್ಷಣ ಮುಜುಗರಕ್ಕೆ ಒಳಗಾಗುವುದು ಮತ್ತು ಕೀಳರಿಮೆಗೆ ಒಳಗಾಗುವುದು ಹಿಂದುಳಿದ ಹಿಂದೂ ವಿದ್ಯಾರ್ಥಿಗಳೇ ಹೊರತು ಮುಸ್ಲೀಮರಲ್ಲ. ಹಾಗಾಗಿ ಜನಿವಾರ ಹಾಕಿದ ವಿದ್ಯಾರ್ಥಿಗಳು ಅವರ ಪಾಡಿಗೆ ಹಾಕಿಕೊಂಡು ಬರಲಿ. ಜನಿವಾರವನ್ನು &#8216;ಮಾನ್ಯತೆ&#8217; ರೀತಿ ಸರ್ಕಾರ ಘೋಷಿಸುವುದು ಅಸಮಾನತೆಯ ಪೋಷಣೆಯಾಗಿದೆ. ಇದು ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಮತ್ತು ಬ್ರಾಹ್ಮಣ ವಿದ್ಯಾರ್ಥಿಗಳ ಮಧ್ಯೆ ಕಂದಕ ಸೃಷ್ಟಿಸುತ್ತದೆ.</p>



<p class="wp-block-paragraph">ಹಿಜಾಬ್ ಎಂದರೆ ಶಿರವಸ್ತ್ರ. ಹಿಜಾಬ್ ಮತ್ತು ಬುರ್ಕಾ ಎರಡೂ ಒಂದೇ ಅಲ್ಲ. ಹಿಂದೂ ಸಮುದಾಯದ ಹಲವು ಜಾತಿಗಳಲ್ಲಿ ಹುಡುಗಿಯರು ಶಿರವಸ್ತ್ರ ಧರಿಸುತ್ತಾರೆ. ಇಂತಹ ಶಿರವಸ್ತ್ರಕ್ಕೆ ಎದುರಾಗಿ ನಾವು ಕೇಸರಿ ಶಾಲು ಹಾಕಿಕೊಂಡು ಬರುತ್ತೇವೆ ಎನ್ನುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳು, ಹಿಜಾಬ್ ವಿಷಯ ಬಿಟ್ಟು ಜನಿವಾರದ ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು. ಜನಿವಾರ ಹಾಕಿದ ವಿದ್ಯಾರ್ಥಿಗಳಿಗೆ ಇರುವ ಸವಲತ್ತುಗಳು ಕೇಸರಿ ಶಾಲು ಹಾಕಿಕೊಂಡ ವಿದ್ಯಾರ್ಥಿಗಳಿಗೆ ಇದೆಯೆ ಎಂಬ ಪ್ರಶ್ನೆಗೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಉತ್ತರ ಕಂಡುಕೊಳ್ಳಬೇಕು.</p>



<p class="wp-block-paragraph">ಉದಾಹರಣೆಗಾಗಿ 2020 ರ ದಾಖಲೆಗಳನ್ನು ಪರಿಶೀಲಿಸೋಣಾ. 2020 ರಲ್ಲಿ ಜನಿವಾರಧಾರಿ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಚಾಣಕ್ಯ ಆಡಳಿತ ತರಬೇತಿ ಯೋಜನೆಯಡಿಯಲ್ಲಿ ಐಎಎಸ್, ಐಪಿಎಸ್ ಪರೀಕ್ಷೆ ಬರೆಯಲು ತರಬೇತಿ‌ ನೀಡಲಾಗುತ್ತದೆ. ತರಬೇತಿಗಾಗಿ ಒಂದು ವರ್ಷದಲ್ಲಿ 535 ಬ್ರಾಹ್ಮಣ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು.ಈ ಪೈಕಿ 166 ಅಭ್ಯರ್ಥಿಗಳನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿ ದೆಹಲಿಯ ಪ್ರತಿಷ್ಠಿತ ಸಂಕಲ್ಪ ಐಎಎಸ್ ಅಕಾಡೆಮಿಯಲ್ಲಿ ತರಬೇತಿ ನೀಡಲಾಯಿತು. ಚಾಣಕ್ಯ ಆಡಳಿತ ತರಬೇತಿ ಯೋಜನೆ ಇರುವುದು &#8220;EWS ಬ್ರಾಹ್ಮಣ ವಿದ್ಯಾರ್ಥಿ&#8221;ಗಳಿಗೆ ಮಾತ್ರ. ಅಂದರೆ ಆರ್ಥಿಕವಾಗಿ ಹಿಂದುಳಿದ ಬಡ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಮಾತ್ರ ಈ ಯೋಜನೆ ಮೀಸಲು. ಆದರೆ ಸರ್ಕಾರ ಆಯ್ಕೆ ಮಾಡುವಾಗ ಬಡ ಬ್ರಾಹ್ಮಣರನ್ನು ಮಾತ್ರ ಹುಡುಕಲಿಲ್ಲ.‌ 166 ಅಭ್ಯರ್ಥಿಗಳ ಪೈಕಿ 80 ಅಭ್ಯರ್ಥಿಗಳು ಶ್ರೀಮಂತ ಬ್ರಾಹ್ಮಣ ಕುಟುಂಬದಿಂದ (NO EWS)ಬಂದ ವಿದ್ಯಾರ್ಥಿಗಳು ಎಂಬುದನ್ನು ಸರ್ಕಾರಿ ದಾಖಲೆಗಳು ಹೇಳುತ್ತವೆ !</p>



<p class="wp-block-paragraph">ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದರೆ ಅವರ ಜಾತಿ ಸಂಘಟನೆಗಳು ಕಾರ್ಯಕ್ರಮ ಮಾಡಿ&nbsp; 5 ಸಾವಿರವೋ, ಹತ್ತು ಸಾವಿರವೋ ಪ್ರೋತ್ಸಾಹಧನ ನೀಡಿ ಸನ್ಮಾನಿಸಿ ಫೋಟೋ ಹಾಕಿಸಿಕೊಳ್ಳುತ್ತಾರೆ. ಆದರೆ ಬ್ರಾಹ್ಮಣ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿಯಲ್ಲಿ ಅಧಿಕ ಅಂಕ ಪಡೆದುಕೊಂಡರೆ 15 ಸಾವಿರ, 10 ಸಾವಿರ, 05 ಸಾವಿರ ಜೊತೆಗೆ ಬೆಳ್ಳಿ ಪದಕ ನೀಡಿ ರಾಜ್ಯ ಸರ್ಕಾರ ಗೌರವಿಸುತ್ತದೆ.&nbsp; ಉದಾಹರಣೆಗೆ 2019-20 ರ ದಾಖಲೆಯ ಪ್ರಕಾರ, ಪ್ರತೀ ವರ್ಷ ಇದಕ್ಕಾಗಿ ರಾಜ್ಯ ಸರ್ಕಾರವು 1,355,000.00 ರೂಗಳನ್ನು ವ್ಯಯಿಸಿದೆ‌.</p>



<p class="wp-block-paragraph">ಮೆಟ್ರಿಕ್‌ ಪೂರ್ವ ಮತ್ತು ಮೆಟ್ರಿಕ್‌ ನಂತರದ ಕೋರ್ಸ್ ಗಳನ್ನು ಕಲಿಯುತ್ತಿರುವ ಅರ್ಹ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳನ್ನು ಪಾವತಿ ಮಾಡಲು ಸಾಂಧೀಪಿನಿ ಶಿಷ್ಯ ವೇತನ ಯೋಜನೆ ರಾಜ್ಯ ಸರ್ಕಾರದಲ್ಲಿ ಜಾರಿಯಲ್ಲಿದೆ. ಭಾರತದಲ್ಲಿ ಹಾಗೂ ಹೊರ ದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯಲಿಚ್ಛಿಸುವ ಅರ್ಹ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಅತೀ ಕಡಿಮೆ / ಶೂನ್ಯ ಬಡ್ಡಿ ದರದಲ್ಲಿ ಶೈಕ್ಷಣಿಕ ಸಾಲ ಒದಗಿಸಲಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಅರ್ಹ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ನಿರ್ವಹಣಾ ವೆಚ್ಚ(Day Scholar/ hosteller Maintenance) ಹಾಗೂ ಶುಲ್ಕ ಮರುಪಾವತಿ(Fee Reimbursement) ಒದಗಿಸಲಾಗುತ್ತದೆ. ಇವೆಲ್ಲವೂ ಜನಿವಾರವಿಲ್ಲದೇ ಕೇಸರಿ ಶಾಲು ಹಾಕಿಕೊಂಡ ವಿದ್ಯಾರ್ಥಿಗಳಿಗೆ ಇವೆಯೇ ?</p>



<p class="wp-block-paragraph">ಆಚಾರ್ಯತ್ರಯ ವೇದ ಶಿಷ್ಯವೇತನ ಯೋಜನೆ ಅಡಿಯಲ್ಲಿ ಬ್ರಾಹ್ಮಣ ಸಮುದಾಯದ ವೇದ ವಿದ್ಯಾರ್ಥಿಗಳಿಗೆ/ಆಗಮ ವಿದ್ಯಾರ್ಥಿಗಳಿಗೆ /ಆಗಮಿಕರಿಗೆ ಮತ್ತು ಸಂಸ್ಕೃತ ವಿದ್ಯಾರ್ಥಿಗಳಿಗೆ/ವಿದ್ವಾಂಸರಿಗೆ ಶಿಷ್ಯ ವೇತನ ನೀಡಲಾಗುತ್ತದೆ. ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ ಯೋಜನೆ ಅಡಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳ ಬ್ರಾಹ್ಮಣ ಸಾಧಕರಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಗುತ್ತದೆ. ಸನ್ನಿಧಿ ಯೋಜನೆ ಅಡಿಯಲ್ಲಿ&nbsp; ಅರ್ಹ ಪ್ರಿ ಮೆಟ್ರಿಕ್ ಮತ್ತು ಪೋಸ್ಟ್ ಮೆಟ್ರಿಕ್ ಬ್ರಾಹ್ಮಣ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತ್ಯೇಕ &amp; ಉಚಿತ ಹಾಸ್ಟಲ್ ನಿರ್ಮಾಣ/ ಹಾಸ್ಟೆಲ್‌ ಸೌಲಭ್ಯ ಕಲ್ಪಿಸುವುದು / ಹಾಸ್ಟಲ್ ಶುಲ್ಕವನ್ನು ಮರು ಪಾವತಿಲಾಗುತ್ತದೆ. ಸರ್ ಎಂ. ವಿಶ್ವೇಶ್ವರಯ್ಯ ಕೌಶಲ್ಯಾಭಿವೃದ್ಧಿ ಯೋಜನೆ ಅಡಿಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಚಾರ್ಟೆಡ್ ಅಕೌಂಟೇನ್ಸಿ, ಕಂಪನಿ ಸೆಕ್ರೇಟರಿ ಇನ್ನಿತರ ವೃತ್ತಿಪರ ಪರೀಕ್ಷೆಗಳಿಗೆ ಉಚಿತ ಶಿಕ್ಷಣ / ತರಬೇತಿ, ಸಿ.ಇ.ಟಿ, ಜೆ.ಇ.ಇ, ನೀಟ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ತರಬೇತಿ ನಡೆಸಲಾಗುತ್ತದೆ.</p>



<p class="wp-block-paragraph">ಕರ್ನಾಟಕ ರಾಜ್ಯ ಸರ್ಕಾರವು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದ ವೇಳೆಯಲ್ಲಿ, ಸಾಂದೀಪನಿ ಶಿಷ್ಯ ವೇತನ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳಗೆ ವೃತ್ತಿಪರ ಅಥವಾ ಉನ್ನತ ಶಿಕ್ಷಣ ವ್ಯಾಸಂಗ ಮಾಡಲು (ಸರ್ಕಾರದ ಆದೇಶ ಸಂಖ್ಯೆ: ಕಂಇ 99 ಮುಅಬಿ 2020 ದಿನಾಂಕ: 20-11-2020) ಸಹಾಯಧನವಾಗಿ 15 ಸಾವಿರ ರೂಗಳನ್ನು ನೀಡಲಾಗುತ್ತಿತ್ತು.‌ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು 06.01.2024 ರಂದು ಈ ಮೊತ್ತವನ್ನು ಒಂದು ಲಕ್ಷ ರೂಗಳಿಗೆ ಏರಿಸಿದೆ. ಈಗ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳು ಇಂಜಿನಿಯರಿಂಗ್, ವೈದ್ಯಕೀಯ, ದಂತವೈದ್ಯಕೀಯ ಇತ್ಯಾದಿ ವೃತ್ತಿಪರ ಪದವಿ, ಸ್ನಾತಕೋತ್ತರ ಮತ್ತು ಪಿ.ಎಚ್.ಡಿ ಇತ್ಯಾದಿ ಕೋರ್ಸ್ ಗಳ ವ್ಯಾಸಾಂಗಕ್ಕೆ ಪ್ರವೇಶ ಪರೀಕ್ಷಾ ಪ್ರಾಧಿಕಾರದಿಂದ (CET ಅಥವಾ PG entrance exams) ಸೀಟು ಪಡೆದು ಕಾಲೇಜಿಗೆ ಸೇರ್ಪಡೆಯಾದ ಅರ್ಹ ವಿದ್ಯಾರ್ಥಿಗಳಿಗೆ ವ್ಯಾಸಂಗ ಮುಂದುವರೆಸಲು ಸಹಾಯಧನ ರೂಪದಲ್ಲಿ 1.00 ಲಕ್ಷ ರೂಪಾಯಿ ಸಿಗಲಿದೆ.‌ ಇದೆಲ್ಲವೂ ಸಿಗುವುದು ಜನಿವಾರಧಾರಿ ವಿದ್ಯಾರ್ಥಿಗಳಿಗೇ ಹೊರತು ಕೇಸರಿ ಶಾಲು ಹಾಕಿಕೊಂಡವರಿಗಲ್ಲ !</p>



<p class="wp-block-paragraph">ತಲೆಗೆ ಶಿರವಸ್ತ್ರ ಹಾಕುವುದರಿಂದ ಅಥವಾ ತೆಗೆಯುವುದರಿಂದ ಯಾವ ಅವಕಾಶಗಳೂ ಸಿಗುವುದಿಲ್ಲ. ಅದೊಂದು ಅವರವರ ಇಚ್ಚೆಯ ಕಂಫರ್ಟೇಬಲ್ ವಸ್ತ್ರವಷ್ಟೆ. ಇಂತಹ ವಸ್ತ್ರವನ್ನು ಹಾಕಲೇಬೇಕು ಅಥವಾ ತೆಗೆಯಲೇಬೇಕು ಎಂದು ಹೇಳುವುದು ಮೂಲಭೂತವಾದವಾಗುತ್ತದೆ. ಜನಿವಾರ ಹಾಗಲ್ಲ, ಅದು ಹಾಕುವವರಿಗೆ ಮಾತ್ರ ಸೀಮಿತವಲ್ಲ. ಜನಿವಾರವನ್ನು ಹಾಕುವ ಮೂಲಕ ಎದುರಿರುವ ಜನಿವಾರ ರಹಿತ ವ್ಯಕ್ತಿ &#8216;ಕನಿಷ್ಠ&#8217; ಎಂದು ಪರೋಕ್ಷವಾಗಿ ಘೋಷಿಸಲಾಗುತ್ತದೆ. ಇದು &#8216;ಹಿಂದೂ ನಾವೆಲ್ಲ ಒಂದು&#8217; ಎಂಬ ಹಿಂದುತ್ವದ ಘೋಷಣೆಗೆ ವಿರುದ್ದವಾಗಿದೆ.&nbsp; ಅದಕ್ಕಿಂತಲೂ ಮುಖ್ಯವಾಗಿ ಎಲ್ಲಾ ಹುದ್ದೆಗಳಲ್ಲಿ ಬ್ರಾಹ್ಮಣರೇ ಯಾಕಿದ್ದಾರೆ ? ಹಿಂದುಳಿದ ಹಿಂದೂ ಯುವಕರು&nbsp; ಯಾಕಿಲ್ಲ ಎಂದು ಯೋಚಿಸಿದರೆ ಕಾಲೇಜು ಶಿಕ್ಷಣದಲ್ಲಿ &#8216;ಜನಿವಾರಧಾರಿಗಳು ಬಳಸುವ ಮೀಸಲಾತಿ&#8217; ಗಮನ ಸೆಳೆಯುತ್ತದೆ. ಹಿಜಾಬ್ ಗೆ ಎದುರಾಗಿ ಕೇಸರಿ ಶಾಲು ಹಾಕಿಕೊಂಡು ಬರುತ್ತೇವೆ ಎನ್ನುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಜನಿವಾರದ ಬಗ್ಗೆ ಚಿಂತಿಸಬೇಕಿದೆ.</p>
]]></content:encoded>
					
		
		
			</item>
		<item>
		<title>‌ಬೊಗಸೆಗೆ ದಕ್ಕಿದ್ದು-80 : ಹಂಗೆರಿಯ “ವಿಶ್ವಗುರು”, ಕಸದ ಬುಟ್ಟಿಗೆ: ಭಾರತ ಕಲಿಯಬೇಕಾದ ಪಾಠ!</title>
		<link>https://peepalmedia.com/to-the-trash-a-lesson-india-needs-to-learn/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 13 May 2026 08:52:42 +0000</pubDate>
				<category><![CDATA[ಅಂಕಣ]]></category>
		<category><![CDATA[ರಾಜಕೀಯ]]></category>
		<guid isPermaLink="false">https://peepalmedia.com/?p=78423</guid>

					<description><![CDATA[&#8220;ಪುರಾಣ- ಕಟ್ಟುಕತೆಗಳನ್ನೇ ಇತಿಹಾಸ ಮಾಡಿ, ನಮ್ಮ ಭ್ರಮೆಗಳ ಸಮರ್ಥನೆಗಾಗಿ- ಅವುಗಳು ಸುಳ್ಳೆಂದು ಒಳಗೊಳಗೇ ಗೊತ್ತಿದ್ದರೂ ನಿಜವೆಂದು ಜೋತು ಬೀಳುವವರು ನಾವು. ಅದನ್ನೇ ಚತುರ, ದುಷ್ಟ ರಾಜಕಾರಣಿಗಳು ಬಳಸಿಕೊಂಡು ಸರ್ವಾಧಿಕಾರಿಗಳಾಗುತ್ತಾರೆ&#8230;&#8221; ನಿಖಿಲ್ ಕೋಲ್ಪೆಯವರ ಬರಹದಲ್ಲಿ ​ಇತಿಹಾಸದಿಂದ ಪಾಠ ಕಲಿಯಬೇಕೆಂಬ ವಿವೇಕದಿಂದ ಜನರು ಯಾವತ್ತೂ ದೂರ. ಸದಾ ಭ್ರಮಾಲೋಕದಲ್ಲೇ ತೇಲಾಡಬಯಸುವ, ಸದಾ ಮಹಾರಾಜ, ಸುಪ್ರೀಂ ಲೀಡರ್, ವಿಶ್ವಗುರು, ಮಹಾನಾಯಕ, ಸೂಪರ್ ಮ್ಯಾನ್, ಸೂಪರ್ ಹೀರೋಗಳ ಅಡಿಯಲ್ಲಿ ಬದುಕಬಯಸುವ, ವ್ಯಕ್ತಿಪೂಜೆ ಮಾಡುವ ಮಾನಸಿಕ ಗುಲಾಮರು ನಾವು. ನಮ್ಮ ಭ್ರಮೆಗಳಿಗೆ ಕೇವಲ ತೆರೆಗಳಲ್ಲಿ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p class="wp-block-paragraph">&#8220;ಪುರಾಣ- ಕಟ್ಟುಕತೆಗಳನ್ನೇ ಇತಿಹಾಸ ಮಾಡಿ, ನಮ್ಮ ಭ್ರಮೆಗಳ ಸಮರ್ಥನೆಗಾಗಿ- ಅವುಗಳು ಸುಳ್ಳೆಂದು ಒಳಗೊಳಗೇ ಗೊತ್ತಿದ್ದರೂ ನಿಜವೆಂದು ಜೋತು ಬೀಳುವವರು ನಾವು. ಅದನ್ನೇ ಚತುರ, ದುಷ್ಟ ರಾಜಕಾರಣಿಗಳು ಬಳಸಿಕೊಂಡು ಸರ್ವಾಧಿಕಾರಿಗಳಾಗುತ್ತಾರೆ&#8230;&#8221; ನಿಖಿಲ್ ಕೋಲ್ಪೆಯವರ ಬರಹದಲ್ಲಿ</p>
</blockquote>



<p class="wp-block-paragraph">​ಇತಿಹಾಸದಿಂದ ಪಾಠ ಕಲಿಯಬೇಕೆಂಬ ವಿವೇಕದಿಂದ ಜನರು ಯಾವತ್ತೂ ದೂರ. ಸದಾ ಭ್ರಮಾಲೋಕದಲ್ಲೇ ತೇಲಾಡಬಯಸುವ, ಸದಾ ಮಹಾರಾಜ, ಸುಪ್ರೀಂ ಲೀಡರ್, ವಿಶ್ವಗುರು, ಮಹಾನಾಯಕ, ಸೂಪರ್ ಮ್ಯಾನ್, ಸೂಪರ್ ಹೀರೋಗಳ ಅಡಿಯಲ್ಲಿ ಬದುಕಬಯಸುವ, ವ್ಯಕ್ತಿಪೂಜೆ ಮಾಡುವ ಮಾನಸಿಕ ಗುಲಾಮರು ನಾವು. ನಮ್ಮ ಭ್ರಮೆಗಳಿಗೆ ಕೇವಲ ತೆರೆಗಳಲ್ಲಿ ಅಭಿವ್ಯಕ್ತಿ ನೀಡಿ ಕೋಟಿಗಟ್ಟಲೆ ಸಂಪಾದಿಸುವ ಯಕಶ್ಚಿತ್ ಸಿನಿಮಾ ನಟರನ್ನೇ- ನಮ್ಮ ನಿಮ್ಮಂತಾ ಸಾಮಾನ್ಯ ಮನುಷ್ಯರಿಂದ- ದೈವತ್ವಕ್ಕೇರಿಸಿ ಆರಾಧಿಸುವುದು ನಮ್ಮ ಜಾಯಮಾನ! ಮೇಲಾಗಿ ನಾವು ಪುರಾಣ- ಕಟ್ಟುಕತೆಗಳನ್ನೇ ಇತಿಹಾಸ ಮಾಡಿ, ನಮ್ಮ ಭ್ರಮೆಗಳ ಸಮರ್ಥನೆಗಾಗಿ- ಅವುಗಳು ಸುಳ್ಳೆಂದು ಒಳಗೊಳಗೇ ಗೊತ್ತಿದ್ದರೂ ನಿಜವೆಂದು ಜೋತು ಬೀಳುವವರು. ಅದನ್ನೇ ಚತುರ, ದುಷ್ಟ ರಾಜಕಾರಣಿಗಳು ಬಳಸಿಕೊಂಡು ಸರ್ವಾಧಿಕಾರಿಗಳಾಗುತ್ತಾರೆ.</p>



<p class="wp-block-paragraph">ಮೇಲಾಗಿ, ವಿಶ್ವದ ಬಹುತೇಕ ಜನರಿಗೆ ತಮ್ಮ ದೇಶದಲ್ಲೇ ಏನಾಗುತ್ತಿದೆ ಎಂದು ಗೊತ್ತಿಲ್ಲದಾಗ, ಯುಎಸ್ಎ, ರಷ್ಯಾ, ಚೀನಾ, ಕೆಲವು ಯುರೋಪ್ ಮತ್ತು ಕೊಲ್ಲಿ ರಾಷ್ಟ್ರಗಳ ಬಗ್ಗೆ ಅಲ್ಪಸ್ವಲ್ಪ ಅಲ್ಲಿ ಇಲ್ಲಿ ಕೇಳಿದ ಅಲ್ಪಸ್ವಲ್ಪ ಸುಳ್ಳು, ಸತ್ಯಗಳು, ಕಟ್ಟುಕತೆಗಳು ಗೊತ್ತೇ ಹೊರತು ಜಗತ್ತಿನ ಬಹುಸಂಖ್ಯಾತ ಜನರು ಬದುಕುವ ಹಿಂಸೆಯ, ಕ್ರೌರ್ಯದ, ಕೇವಲ ಉಳಿವಿನ- ಸಾಮಾಜಿಕ, ಆರ್ಥಿಕ, ರಾಜಕೀಯ ಬಿಕ್ಕಟ್ಟಿನ ಪರಿಸ್ಥಿತಿಯ ಬಗ್ಗೆ ಗೊತ್ತಿಲ್ಲ. ಆದರೂ, ಇತಿಹಾಸದ ಉದ್ದಕ್ಕೂ ಹಲವಾರು ದೇಶಗಳು ಸಾಮೂಹಿಕವಾಗಿ ಎಚ್ಚೆತ್ತು ಮೈಕೊಡವಿಕೊಳ್ಳುತ್ತವೆ. ಅವು ನಮಗೆ ಮೈಮರೆಯದಂತೆ ಎಚ್ಚರವನ್ನೂ, ಎಚ್ಚೆತ್ತುಕೊಳ್ಳಲು ಪ್ರೇರಣೆಯನ್ನೂ ನೀಡಬೇಕು. ಹಾಗಾಗಿ, ಭಾರತಕ್ಕೆ ಹೋಲಿಸಿದಾಗ ಚಿಕ್ಕದಾದ, ಜನಸಂಖ್ಯೆಯಲ್ಲಿ ಪುಟಾಣಿಯಾದ ಹಂಗೆರಿ ದೇಶದ ಇತ್ತೀಚಿನ ವಿದ್ಯಮಾನಗಳನ್ನು ನೋಡಿ ನಾವು ಕಲಿಯಬಹುದಾದುದು ಏನು ಎಂಬುದನ್ನು ತಿಳಿಯೋಣ.</p>



<p class="wp-block-paragraph">ಹಂಗೇರಿಯನ್ ಮತದಾರರು ಪ್ರಜಾಪ್ರಭುತ್ವದ ಸೋಗಿನ ಸರ್ವಾಧಿಕಾರಿ ವಿಕ್ತೋರ್ ಓರ್ಬನ್‌ನ 16 ವರ್ಷಗಳ ಅಧಿಕಾರವನ್ನು ಇತ್ತೀಚಿನ ಚುನಾವಣೆಗಳಲ್ಲಿ ಕೊನೆಗೊಳಿಸಿದ್ದಾರೆ. ಇದು ಎಪ್ರಿಲ್‌ನಲ್ಲಿ ಯುರೋಪಿನ ರಾಜಕೀಯ ವಲಯದಲ್ಲಿ ಭೂಕಂಪವನ್ನೇ ಉಂಟುಮಾಡಿತು, ಒಂದು ದೊಡ್ದ ಬದಲಾವಣೆಗೆ ಸಾಕ್ಷಿಯಾಯಿತು. ಜಾಗತಿಕ ಪ್ರಜಾಪ್ರಭುತ್ವದ ವೀಕ್ಷಕರಿಗೆ, ಈ ಬದಲಾವಣೆಯು ಕೇವಲ ನಾಯಕತ್ವದ ಬದಲಾವಣೆಗಿಂತ ಹೆಚ್ಚಿನದನ್ನು ಸಂಕೇತಿಸುತ್ತದೆ. ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರವಾದ ಹಂಗೆರಿಯ ಈ ಬದಲಾವಣೆಯಿಂದ ರಷ್ಯಾ- ಯುಎಸ್ಎಯಂತ ದೊಡ್ಡ ದೇಶಗಳಿಗೆ ಆದ ಲಾಭನಷ್ಟದ ಬಗ್ಗೆ ಚರ್ಚಿಸುವ ಬದಲು, ಓರ್ಬನ್‌ ಮಾದರಿ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಅಡಿಯಲ್ಲಿ ಭಾರತದಲ್ಲಿರುವ ಮೋದಿ ಮಾದರಿಯಲ್ಲಿ ಇರುವ ಪ್ರಸ್ತುತ ರಾಜಕೀಯ ವಾತಾವರಣದ ನಡುವೆ ಸಮಾನಾಂತರಗಳನ್ನು ನೋಡೋಣ. ಇವು ಜಗತ್ತಿನಾದ್ಯಂತದ ಸರ್ವಾಧಿಕಾರಿಗಳು ಮತ್ತು ಅದರ ಆಕಾಂಕ್ಷಿಗಳು ಅನುಸರಿಸುತ್ತಾ ಬಂದಿರುವ ತಂತ್ರಗಳ ಒಂದು ಪರಿಚಯ ಅಷ್ಟೇ. ಈ ಹೋಲಿಕೆಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ- ಬರೇ ರಾಜಕೀಯ ವಾದಕ್ಕಾಗಿ ಅಲ್ಲ; ಬದಲಿಗೆ ಪ್ರಜಾಪ್ರಭುತ್ವದ ಸಂರಚನೆಯನ್ನು ವ್ಯವಸ್ಥಿತವಾಗಿ ಒಳಗಿನಿಂದ ಹೊಸಕಿಹಾಕಿದಾಗ ಹೊರಹೊಮ್ಮುವ ಎಚ್ಚರಿಕೆಯ ಚಿಹ್ನೆಗಳನ್ನು ಗುರುತಿಸಲು.</p>



<p class="wp-block-paragraph">​<strong>ಸಾರ್ವಜನಿಕ ವೇದಿಕೆಗಳ ಕಬ್ಜಾ!</strong><br>​ಈ ಆಡಳಿತ ಶೈಲಿಯ ಅತ್ಯಂತ ಸ್ಪಷ್ಟವಾದ ಲಕ್ಷಣವೆಂದರೆ, ಸ್ವತಂತ್ರ ಮಾಧ್ಯಮದ ವ್ಯವಸ್ಥಿತವಾದ ಕತ್ತು ಹಿಸುಕುವಿಕೆ.&nbsp; ಹಂಗೇರಿಯಲ್ಲಿ, ಓರ್ಬನ್‌ನ ಫಿಡೆಜ್ ಪಕ್ಷವು ಒಂದು ಸರಕಾರ ಪರ, ವ್ಯಕ್ತಿ ಕೇಂದ್ರಿತ ಮಾಧ್ಯಮ ಪರಿಸರ ಸೃಷ್ಟಿಸಿತು. ಅಲ್ಲಿ ಸರಕಾರ ಪ್ರಾಯೋಜಿತ ಮಾಧ್ಯಮಗಳು ಪ್ರಾಬಲ್ಯ ಸಾಧಿಸಿದವು. ಪರಿಣಾಮಕಾರಿಯಾಗಿ ಸರಕಾರದ ಪರ ಸುಳ್ಳು ನಿರೂಪಣೆಗಳು ಮತ್ತು ಕಥಾನಕಗಳ ಒಂದು ಜಾಲವನ್ನೇ ಬೀಸಲಾಯಿತು. ಸ್ವತಂತ್ರ ಪತ್ರಿಕೋದ್ಯಮವನ್ನು &#8220;ವಿದೇಶಿ-ಪ್ರಭಾವಿತ&#8221; ಅಥವಾ &#8220;ರಾಷ್ಟ್ರವಿರೋಧಿ&#8221; ಎಂದು ಬ್ರಾಂಡ್ ಮಾಡಲಾಯಿತು. ಇದು ಭಿನ್ನಾಭಿಪ್ರಾಯವನ್ನು ದಮನಿಸಿ, ಕಾನೂನುಬಾಹಿರಗೊಳಿಸಿ ಭಯದ ವಾತಾವರಣವನ್ನು ಉಂಟುಮಾಡಿತು. ಸ್ವತಂತ್ರ ಪತ್ರಕರ್ತರನ್ನು ಜೈಲಿಗೆ ತಳ್ಳಲಾಯಿತು.</p>



<p class="wp-block-paragraph">ಭಾರತೀಯ ಮಾಧ್ಯಮದಲ್ಲಿ ನಾವು ಇದಕ್ಕೆ ಗಮನಾರ್ಹ ಸಮಾನಾಂತರಗಳನ್ನು ನೋಡುತ್ತೇವೆ. ಇದನ್ನು ಸಾಮಾನ್ಯವಾಗಿ &#8220;ಗೋದಿ ಮೀಡಿಯಾ&#8221; ಎಂದು ಕರೆಯಲಾಗುತ್ತದೆ. ಓದುಗರಿಗೆ ಇದು ಪರಿಚಿತವೇ ಆಗಿದೆ. ಅಕ್ರಮ ಕಾರ್ಪೊರೇಟ್ ಸಂಬಂಧಗಳು ಮತ್ತು ಸರಕಾರದ ಪ್ರಭಾವವನ್ನು ಬಳಸಿಕೊಳ್ಳುವ ಮೂಲಕ, ದೊಡ್ಡ ಮಾಧ್ಯಮ ಸಂಸ್ಥೆಗಳಿಗೆ ಲಂಚ ನೀಡುವ ಮೂಲಕ ಜನರು ಏನು ತಿಳಿದುಕೊಳ್ಳಬೇಕು ಎಂಬುದನ್ನು ಸರಕಾರ ನಿರ್ಧರಿಸುತ್ತದೆ. ಭಾರತದಲ್ಲಿ ಹೆಚ್ಚಿನ ಮಾಧ್ಯಮಗಳು ಅದಾನಿ, ಅಂಬಾನಿಗಳಂತವರ ಒಡೆತನದಲ್ಲಿ ಇರುವಾಗ, ಸರಕಾರವೇ ಅವರಿಗಾಗಿ ನಡೆಯುತ್ತಿರುವಾಗ, ಬಹುತೇಕ ಸಂಪಾದಕರು, ಸುದ್ದಿ ನಿರ್ವಾಹಕರು ಹಿಂದೂತ್ವ ಬೆಂಬಲಿಸುವ ಬ್ರಾಹ್ಮಣರಾಗಿರುವಾಗ, ನೀವು ಅವುಗಳಿಂದ ಯಾವ ಸತ್ಯವನ್ನು ನಿರೀಕ್ಷಿಸಲು ಸಾಧ್ಯ? ಯೋಚಿಸಿ ನೋಡಿ. ಮೋದಿ ಅಥವಾ ಬಿಜೆಪಿ ಆಡಳಿತದ ವಿರುದ್ಧ ವಿಮರ್ಶಾತ್ಮಕ ಟೀಕೆಯನ್ನು ಮತ್ತೆಮತ್ತೆ &#8220;ರಾಷ್ಟ್ರವಿರೋಧಿ&#8221; ಅಥವಾ &#8220;ನಗರ ನಕ್ಸಲ್&#8221; ಎಂದು ಲೇಬಲ್ ಮಾಡುವ ಪರಿಪಾಠವನ್ನು ವ್ಯವಸ್ಥಿತವಾಗಿ ಬೆಳೆಸಲಾಗಿದೆ ಎಂದು ನೀವು ನೋಡಿದ್ದೀರಿ.</p>



<p class="wp-block-paragraph"><strong>ಬೇಟೆ ನಾಯಿಗಳಾಗಿ ತನಿಖಾ ಸಂಸ್ಥೆಗಳು</strong><br>ಈ ಮಾದರಿಯ ಅತ್ಯಂತ ಅಪಾಯಕಾರಿ ಅಂಶವೆಂದರೆ, ಸರಕಾರಿ ಸಂಸ್ಥೆಗಳ ಪಾತ್ರವನ್ನು- ನಿಷ್ಪಕ್ಷಪಾತ ತನಿಖೆದಾರರು, ತೀರ್ಪುಗಾರರಿಂದ ರಾಜಕೀಯ ದ್ವೇಷ ಸಾಧನೆಯ, ಬೆದರಿಕೆ ಒಡ್ಡುವ ಬೇಟೆ ನಾಯಿಗಳಾಗಿ ಬದಲಿಸುವುದು. ವಿಕ್ತೊರ್ ಓರ್ಬನ್ ನೇತೃತ್ವದಲ್ಲಿ ಸರಕಾರಿ ತನಿಖಾ ಸಂಸ್ಥೆಗಳು ರಾಜಕೀಯ ಪ್ರತಿಸ್ಪರ್ಧಿಗಳು, ವಿರೋಧಿ ಉದ್ಯಮಿಗಳು ಮತ್ತು ನಾಗರಿಕ ಸಮಾಜದ ಸಂಸ್ಥೆಗಳ ವಿರುದ್ಧ ಅಸ್ತ್ರಗಳನ್ನು ಬಳಸಿದ ಆರೋಪ ವ್ಯಾಪಕವಾಗಿತ್ತು. ಇದು ಕಾನೂನನ್ನು ನಾಗರಿಕರಿಗೆ ಗುರಾಣಿಯಾಗಿ ಬಳಸುವ ಬದಲು ಭಿನ್ನಮತೀಯರ ವಿರುದ್ಧ ಕತ್ತಿಯಾಗಿ ಬಳಸಲಾಗುತ್ತಿದ್ದ ಭಯದ ಸಂಸ್ಕೃತಿಯನ್ನು ಸೃಷ್ಟಿಸಿತ್ತು.</p>



<p class="wp-block-paragraph">ಭಾರತದಲ್ಲಿ, ವಿರೋಧ ಪಕ್ಷದ ನಾಯಕರ ವಿರುದ್ಧ ಜಾರಿ ನಿರ್ದೇಶನಾಲಯ (ED) ಮತ್ತು ಕೇಂದ್ರೀಯ ತನಿಖಾ ದಳ (CBI) ಮತ್ತಿತರ ಸಂಸ್ಥೆಗಳ ನಡವಳಿಕೆಯು ಇದೇ ರೀತಿ ಇರುವುದನ್ನು ನಾವು ನೋಡುತ್ತಿದ್ದೇವೆ. ತನಿಖೆಗಳು, ದಾಳಿಗಳ ಸಮಯವು- ಚುನಾವಣಾ ವೇಳಾಪಟ್ಟಿ ಅಥವಾ ರಾಜಕೀಯ ಘರ್ಷಣೆಯೊಂದಿಗೆ ನಿರಂತರವಾಗಿ ಹೊಂದಿಕೆಯಾದಾಗ, ಅದು ಕಾನೂನಿನ ಆಳ್ವಿಕೆಯಲ್ಲಿ ಸಾರ್ವಜನಿಕ ನಂಬಿಕೆಯನ್ನು ಸವಕಲುಗೊಳಿಸುತ್ತದೆ. ಇತ್ತೀಚಿನ ಉದಾಹರಣೆ ಎಂದರೆ, ರಾಘವ ಚಡ್ಡಾ ಸಹಿತ ಏಳು ಆಪ್ ಸಂಸದರ ಪಕ್ಷಾಂತರ. ರಾಜ್ಯಸಭೆಯಲ್ಲಿ ಪಕ್ಷದ ಉಪನಾಯಕನ ಸ್ಥಾನಕ್ಕೆ ಚಡ್ಡಾ ಬದಲು ನೇಮಿಸಲಾಗಿದ್ದ ಅಶೋಕ್ ಮಿತ್ತಲ್ ಅವರ ಸಂಸ್ಥೆಗಳಿಗೆ ಪಕ್ಷಾಂತರಕ್ಕೆ ಒಂದು ವಾರಕ್ಕೆ ಮೊದಲಷ್ಟೇ ಇ.ಡಿ. ದಾಳಿ ನಡೆದದ್ದು ಕಾಕತಾಳೀಯ ಎಂದು ನಂಬುವಷ್ಟು ಜನರು ಮೂರ್ಖರೆ?</p>



<p class="wp-block-paragraph"><strong>​&#8221;ನಾವು vs. ಅವರು&#8221; ನಿರೂಪಣೆ</strong><br>​ಸರ್ವಾಧಿಕಾರಿ ಆಕಾಂಕ್ಷೆಗಳು ಎಲ್ಲಾ ರೀತಿಯ ಧ್ರುವೀಕರಣದ ಮೇಲೆ ಬೆಳೆಯುತ್ತವೆ. ಸಮಾಜವನ್ನು &#8220;ನಿಜವಾದ ದೇಶಭಕ್ತರು&#8221; ಮತ್ತು &#8220;ರಾಷ್ಟ್ರದ ಶತ್ರುಗಳು&#8221; ಎಂದು ವಿಭಜಿಸುವ ಮೂಲಕ, ಈ ಆಡಳಿತಗಳು ಅಸಾಧಾರಣವಾದ ದಂಡನಾ ಕ್ರಮಗಳನ್ನು ಸಮರ್ಥಿಸುವಂತಾ ಶಾಶ್ವತ ಬಿಕ್ಕಟ್ಟಿನ ಸ್ಥಿತಿಯನ್ನು ಸೃಷ್ಟಿಸುತ್ತವೆ. ವಲಸಿಗರು ಮತ್ತು ಉದಾರವಾದಿ ಎನ್‌ಜಿಒಗಳ ಬಗ್ಗೆ ಓರ್ಬನ್ ಜನಮರುಳು ಭಾಷಣಗಳು ಮೋದಿಯಂತೆಯೇ ಸದಾ ಬಿಕ್ಕಟ್ಟನ್ನು, ಗುಪ್ತ ಭಯವನ್ನು ಶಾಶ್ವತವಾಗಿ ಜೀವಂತ ಇರಿಸುವಂತೆ ಸೂಕ್ಷ್ಮವಾಗಿ ಪ್ರಚೋದಕವಾಗಿದ್ದವು. (ಬಟ್ಟೆ ನೋಡಿ ಜನ ಯಾರೆಂದು ಗೊತ್ತಾಗುತ್ತದೆ!)</p>



<p class="wp-block-paragraph">​ಅದೇ ರೀತಿ, ಭಾರತದಲ್ಲಿನ ಪ್ರಸ್ತುತ ಬಿಜೆಪಿಯ ರಾಜಕೀಯ ಚರ್ಚೆಯು ಆಗಾಗ್ಗೆ ಬೈನರಿ ಚೌಕಟ್ಟುಗಳನ್ನು ಬಳಸುತ್ತದೆ. (ಅವರು-ನಾವು, ಹಿಂದೂಗಳು-ಮುಸ್ಲಿಮರು, ದೇಶಪ್ರೇಮ -ದೇಶದ್ರೋಹ, ಭಾರತ-ಪಾಕಿಸ್ತಾನ ಇತ್ಯಾದಿಗಳು ಪರಸ್ಪರ ಸ್ವಯಂಸಿದ್ಧ ಸಂಬಂಧ ಇರುವಂತವು ಎಂಬಂತೆ ಬಿಂಬಿಸುವುದು). ಧಾರ್ಮಿಕ ಗುರುತು, ರಾಷ್ಟ್ರೀಯ ಭದ್ರತೆ ಅಥವಾ ಐತಿಹಾಸಿಕ ಕುಂದುಕೊರತೆಗಳ ಸುತ್ತಲಿನ ಜನಮರುಳು ಮಾತುಗಳು, ಕೂಗಾಟಗಳು, ಕಟ್ಟುಕತೆಗಳು ಏನೇ ಇರಲಿ, ತಂತ್ರ ಮಾತ್ರ ಸ್ಥಿರವಾಗಿರುತ್ತದೆ: ಮುಸ್ಲಿಮರು ಹೊರಗಿನವರು, ಹಿಂದೂಗಳು ಅಪಾಯದಲ್ಲಿ, ಪಾಕಿಸ್ತಾನ, ಬಾಂಗ್ಲಾ , ವಲಸಿಗರು, ಭಾರತದ ಭವ್ಯತೆ, ರಾಮ, ದೂಮ, ಸನಾತನ ಸಂಸ್ಕೃತಿ, ಋಷಿ ಮುನಿಗಳು… ಎಂದು ಜನರ ಗಮನವನ್ನು ಬೇರೆಡೆ ತಿರುಗಿಸುವ ಮೂಲಕ- ಆರ್ಥಿಕ ಅಥವಾ ವ್ಯವಸ್ಥೆಯ ವೈಫಲ್ಯಗಳು, ವ್ಯವಸ್ಥಿತ ಭ್ರಷ್ಟಾಚಾರ, ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ, ವೋಟ್ ಚೋರಿ ಮುಂತಾದ ನೈಜ ಸಮಸ್ಯೆಗಳನ್ನು ಅವರು ನೋಡದಂತೆ ಮಾಡುತ್ತದೆ. ಜನರನ್ನು ಭಾವನಾತ್ಮಕವಾಗಿ ಉದ್ರೇಕಿಸಿ ನಿಷ್ಟಾವಂತ ಮತದಾರರ ನೆಲೆಯನ್ನು ಉಳಿಸಿಕೊಳ್ಳುವ ಉದ್ದೇಶವನ್ನು ಇದು ಹೊಂದಿದೆ. ನೀತಿ, ಧೋರಣೆಗಳ ಚರ್ಚೆಗಳು- ಮತ, ಧರ್ಮಗಳ ಗುರುತಿನ ಆಧಾರದಲ್ಲಿ ನಡೆಯುವ ಘರ್ಷಣೆಗಳಾಗಿ ಬದಲಾದಾಗ, ವಿವೇಕಯುತ ಆಡಳಿತ ಇಲ್ಲವಾಗುತ್ತವೆ. ವಿರೋಧವು ಹೆಚ್ಚಿದಾಗ, ಬಹುಸಂಖ್ಯಾತ ಸರ್ವಾಧಿಕಾರಕ್ಕೆ ಅವಕಾಶ ಹೆಚ್ಚಾಗುತ್ತದೆ.</p>



<p class="wp-block-paragraph">​<strong>ಸಾಂವಿಧಾನಿಕ ಚೌಕಟ್ಟನ್ನು ದುರ್ಬಲಗೊಳಿಸುವುದು</strong><br>​ಪ್ರಜಾಪ್ರಭುತ್ವದ ಹಿನ್ನಡೆಯು ರಾತ್ರೋರಾತ್ರಿ ದಂಗೆಯ ಮೂಲಕ ಸಂಭವಿಸುವುದು ದೊಡ್ಡ ದೇಶಗಳಲ್ಲಿ ಅಪರೂಪ. ಅದು ಸಾಮಾನ್ಯವಾಗಿ ನಿಧಾನವಾಗಿ ಸಂಭವಿಸುತ್ತದೆ- ಸಾಂವಿಧಾನಿಕ ರಕ್ಷಣೆಗಳನ್ನು ದುರ್ಬಲಗೊಳಿಸುವ &#8220;ಕಾನೂನು&#8221; ಬದಲಾವಣೆಗಳ ಸರಣಿಯ ಮೂಲಕ ನಡೆಯುತ್ತದೆ. ಹಂಗೇರಿಯಲ್ಲಿ ಚುನಾವಣಾ ಕ್ಷೇತ್ರಗಳ ಪುನರ್ ರಚನೆ, ನ್ಯಾಯಾಂಗದಲ್ಲಿ ತನ್ನ ಬೆಂಬಲಿಗರನ್ನು ತುಂಬಿಸುವುದು ಮತ್ತು ಓರ್ಬನ್‌ನ ಫಿಡೆಜ್ ಪಕ್ಷದ ಅಧಿಕಾರದ ಹಿಡಿತವನ್ನು ಬಲಪಡಿಸಲು ಸಂವಿಧಾನವನ್ನು ತಿದ್ದುಪಡಿ ಮಾಡುವುದು ಮುಂತಾದವುಗಳ ಮೂಲಕ ಇದು ನಡೆದಿತ್ತು.</p>



<p class="wp-block-paragraph">ಭಾರತದಲ್ಲಿ ಸಾಂಸ್ಥಿಕ ದುರ್ಬಲಗೊಳಿಸುವ ಇದೇ ರೀತಿಯ ಪ್ರಕ್ರಿಯೆ ನಡೆಯುತ್ತಿದೆ ಎಂಬುದು ಅಂಧ ಭಕ್ತರ ಹೊರತು, ಎಳ್ಳಷ್ಟು ಬುದ್ಧಿ ಇರುವ ಯಾರಿಗಾದರೂ ತಿಳಿಯುತ್ತದೆ. ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯನ್ನು ದುರ್ಬಲಗೊಳಿಸುವುದರಿಂದ ಹಿಡಿದು- ಚುನಾವಣಾ ಆಯೋಗದಂತಾ ಪ್ರಮುಖ ಸಾಂವಿಧಾನಿಕ ಸಂಸ್ಥೆಗಳಿಗೆ ನೇಮಕಾತಿ ಪ್ರಕ್ರಿಯೆಗಳವರೆಗೆ, ಉನ್ನತ ನ್ಯಾಯಾಂಗ ಅಧಿಕಾರಿಗಳು ಬಹಿರಂಗವಾಗಿ ಮನುಸ್ಮೃತಿಯನ್ನು ಬೆಂಬಲಿಸುವ ವರೆಗೆ- ಬೇರೆ ಬೇರೆ ವಿದ್ಯಮಾನಗಳಲ್ಲಿ ಇದು ಸ್ಪಷ್ಟವಾಗಿ ಕಾಣುತ್ತದೆ. ಇವುಗಳಲ್ಲಿ ಸದ್ಯದ ಅತ್ಯಂತ ಆತಂಕಕಾರಿ ವಿಷಯವೆಂದರೆ, ರಾಹುಲ್ ಗಾಂಧಿ ಹೇಳುತ್ತಿರುವ “ಬಹಿರಂಗ, ನಿರ್ಲಜ್ಜ ಓಟ್ ಚೋರಿ”. ದೇಶದ ಇತಿಹಾಸದಲ್ಲೇ ಈಗಿನ ಚುನಾವಣಾ ಆಯುಕ್ತರಷ್ಟು ಆರೋಪಕ್ಕೆ, ಟೀಕೆಗೆ, ನಿಂದನೆಗೆ ಗುರಿಯಾದ ಇನ್ನೊಬ್ಬನಿರಲಾರರು. ಭಾರತದಲ್ಲಿ ಕಳಂಕಿತ ಮತದಾರರ ತೀವ್ರ ಪರಿಷ್ಕರಣೆ, ಕ್ಷೇತ್ರಗಳ ಮರುವಿಂಗಡನೆ ಪ್ರಯತ್ನ ಇತ್ಯಾದಿ ಹಂಗೆರಿಯಂತೆ ಇಲ್ಲಿಯೂ ನಡೆಯುತ್ತಿದೆ.</p>



<p class="wp-block-paragraph"><strong>ಹಂಗೇರಿಯ ಪಾಠ ಮತ್ತು ಎಚ್ಚರಿಕೆ!</strong><br>​ವಿಕ್ಟರ್ ಓರ್ಬನ್‌ನ ಸೋಲು ಅತ್ಯಂತ &#8220;ಬಾಳಿಕೆಯ&#8221; ಸರ್ವಾಧಿಕಾರಿ ವ್ಯವಸ್ಥೆಗಳು ಕೂಡಾ ಶಾಶ್ವತವಲ್ಲ ಎಂಬುದರ ಸ್ಪಷ್ಟ ಸೂಚನೆಯಾಗಿದೆ. ಮತದಾರರು ಅಂತಿಮವಾಗಿ ಒಂದು ನಿರ್ಣಾಯಕ, ಸ್ಫೋಟಕ ಹಂತವನ್ನು ತಲಪಿಯೇ ತಲುಪುತ್ತಾರೆ. ಆರ್ಥಿಕ ಸ್ಥಾಗಿತ್ಯ, ಹಣದುಬ್ಬರ, ದಬ್ಬಾಳಿಕೆ , ಭ್ರಷ್ಟಾಚಾರ ಮತ್ತು ನಿರಂತರ ಸಾಮಾಜಿಕ ಘರ್ಷಣೆಯ ಸ್ಥಿತಿಯಲ್ಲಿ ಬದುಕುವ ಕಷ್ಟ ಅನುಭವಿಸಿದ ಹಂಗೇರಿಯನ್ ಜನರು ಒಬ್ಬ ಸ್ವಯಂಮೋಹಿ ಅಧಿಕಾರದಾಹಿಯನ್ನು ಒದ್ದೋಡಿಸಿದ್ದಾರೆ. ಹದಿನಾರು ವರ್ಷಗಳ ಪ್ರಜಾಪ್ರಭುತ್ವದ ಸಾಂಸ್ಥಿಕ ಅಪಹರಣವು ಆಳವಾದ ಗಾಯಗಳನ್ನು ಬಿಟ್ಟುಹೋಗಿದೆ. ಹೊಸ ಸರಕಾರವು ಇದನ್ನು ಗುಣಪಡಿಸಲು ದಶಕಗಳಲ್ಲದಿದ್ದರೂ, ವರ್ಷಗಳೇ ಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.</p>



<p class="wp-block-paragraph">ಓರ್ಬನ್‌ನ ಹಂಗೇರಿ ಮತ್ತು ಮೋದಿಯ ಭಾರತದ ನಡುವಿನ ಹೋಲಿಕೆಯು ಮುಂದಾಗಬಹುದಾದುದರ ಭವಿಷ್ಯವಾಣಿಯಲ್ಲ; ಬದಲಾಗಿ, ಇದು ಒಂದು ಎಚ್ಚರಿಕೆ. ಇಲ್ಲಿರುವ ನಡವಳಿಕೆಯಲ್ಲಿನ ಹೋಲಿಕೆಗಳು &#8211; ಮಾಧ್ಯಮ ನಿಯಂತ್ರಣದ ಗೀಳು, ಸರಕಾರಿ ಏಜೆನ್ಸಿಗಳ ದುರ್ಬಳಕೆ ಮತ್ತು ಉದ್ರೇಕಕಾರಿ ಕಥಾನಕಗಳು- ಇತ್ಯಾದಿ ಕಾಕತಾಳೀಯವಲ್ಲ. ಅವು ಉದ್ದೇಶಪೂರ್ವಕವೆಂಬುದು ಸ್ಪಷ್ಟ. ಯಾವುದೇ ಪ್ರಜಾಪ್ರಭುತ್ವಕ್ಕೆ, ಪಾಠ ಸ್ಪಷ್ಟವಾಗಿದೆ: ರಾಷ್ಟ್ರದ ಆರೋಗ್ಯವನ್ನು ಅದರ ಯಾವುದೇ ಸ್ವಯಂಘೋಷಿತ ದೊಣ್ಣೆನಾಯಕನ ಬಲದಿಂದ ಅಳೆಯಲಾಗುವುದಿಲ್ಲ; ಆದರೆ, ಅದರ ಪ್ರಜಾತಾಂತ್ರಿಕ ಸಂಸ್ಥೆಗಳ ದೃಢತೆ ಮತ್ತು ಅದರ ನಾಗರಿಕರು ಭಯವಿಲ್ಲದೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಹೊಂದಿರುವ ಸ್ವಾತಂತ್ರ್ಯದಿಂದ ಅಳೆಯಲಾಗುತ್ತದೆ. ಪ್ರಭುತ್ವವು ತನ್ನ ಸ್ವಂತ ನಾಗರಿಕರನ್ನು ತಾನು ಸೇವೆ ಸಲ್ಲಿಸಬೇಕಾದ ನಿಜವಾದ ಪ್ರಭುಗಳೆಂದು ನೋಡದೇ, ತನ್ನ ದುಷ್ಟ ಉದ್ದೇಶಕ್ಕೆ ಅಡೆತಡೆಗಳಾಗಿ, ಅಥವಾ ಸುಲಭವಾಗಿ ಮರುಳು ಮಾಡಬಹುದಾದ ಕುರಿಗಳಾಗಿ ನೋಡಲು ಪ್ರಾರಂಭಿಸಿದಾಗ, ನಿರಂಕುಶಾಧಿಕಾರದ ಕಡೆಗೆ ನಮ್ಮ ಜಾರುವಿಕೆಯು ಈಗಾಗಲೇ ಪ್ರಾರಂಭವಾಗಿದೆ ಎಂದೇ ಅರ್ಥ. ಅದಕ್ಕಾಗಿಯೇ ಹಂಗೆರಿಯ ವಿದ್ಯಮಾನಗಳು ನಮಗೊಂದು ಪಾಠ ಮಾತ್ರವಲ್ಲ; ಎಚ್ಚರಿಕೆಯೂ ಹೌದು! ಹಂಗೆರಿಯಲ್ಲಿ ಚುನಾವಣೆ ಮೂಲಕವೇ ಬದಲಾವಣೆ ನಡೆಯಿತು. ಚುನಾವಣೆಯಲ್ಲಿ ಮೋಸದ ಮೂಲಕ ಜನರ ಭಾವನೆಗಳನ್ನು ಅದುಮಿದರೆ ಅದು ಹಿಂಸಾತ್ಮಕವಾಗಿ ಸ್ಫೋಟಗೊಳ್ಳುವ ಅಪಾಯವಿದೆ.</p>
]]></content:encoded>
					
		
		
			</item>
		<item>
		<title>ಬಾಲಕಿ ಜೊತೆ ಬಿಎಸ್ ವೈ ಹೀನಕೃತ್ಯ; ಪೋಕ್ಸೋ ಆರೋಪಿ ಬಿಎಸ್ ವೈ ಅಭಿಮಾನೋತ್ಸವ! ಮೇ 20 ರಂದು ಸುಪ್ರಿಂ ಕೋರ್ಟ್ ನಲ್ಲಿ ಭವಿಷ್ಯ ನಿರ್ಧಾರ?</title>
		<link>https://peepalmedia.com/bsy-commits-atrocities-on-a-girl-pocso-accused/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 08 May 2026 05:41:34 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://peepalmedia.com/?p=78226</guid>

					<description><![CDATA[ಅಭಿಮಾನೋತ್ಸವದ ಬೆನ್ನಲ್ಲೇ ಬಿಎಸ್‌ವೈ ಪೋಕ್ಸೋ ಕೇಸ್ ಮತ್ತೆ ಜೀವಂತ! ಪತ್ರಕರ್ತ ನವೀನ್ ಸೂರಿಂಜೆಯವರ ಬರಹದಲ್ಲಿ ನವೀನ್ ಸೂರಿಂಜೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ 50 ವರ್ಷಗಳ ರಾಜಕೀಯ ಜೀವನವನ್ನು ಪೂರೈಸಿದ ಹಿನ್ನಲೆಯಲ್ಲಿ ಮೇ 9, 2026 ರಂದು ಚಿತ್ರದುರ್ಗದ ಮಾದಾರ ಚೆನ್ನಯ್ಯನವರ ಗುರುಪೀಠದ ಮೈದಾನದಲ್ಲಿ &#8220;ಬಿಎಸ್‌ವೈ ಅಭಿಮಾನೋತ್ಸವ&#8221; ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಇದಾಗಿ ಸರಿಯಾಗಿ 11 ದಿನಗಳ ನಂತರ, ಅಂದರೆ ಮೇ 20 ರಂದು ಬಿ ಎಸ್ ಯಡಿಯೂರಪ್ಪ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p class="wp-block-paragraph">ಅಭಿಮಾನೋತ್ಸವದ ಬೆನ್ನಲ್ಲೇ ಬಿಎಸ್‌ವೈ ಪೋಕ್ಸೋ ಕೇಸ್ ಮತ್ತೆ ಜೀವಂತ! <br>ಪತ್ರಕರ್ತ ನವೀನ್ ಸೂರಿಂಜೆಯವರ ಬರಹದಲ್ಲಿ ನವೀನ್ ಸೂರಿಂಜೆ</p>
</blockquote>



<p class="wp-block-paragraph">ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ 50 ವರ್ಷಗಳ ರಾಜಕೀಯ ಜೀವನವನ್ನು ಪೂರೈಸಿದ ಹಿನ್ನಲೆಯಲ್ಲಿ ಮೇ 9, 2026 ರಂದು ಚಿತ್ರದುರ್ಗದ ಮಾದಾರ ಚೆನ್ನಯ್ಯನವರ ಗುರುಪೀಠದ ಮೈದಾನದಲ್ಲಿ &#8220;ಬಿಎಸ್‌ವೈ ಅಭಿಮಾನೋತ್ಸವ&#8221; ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಇದಾಗಿ ಸರಿಯಾಗಿ 11 ದಿನಗಳ ನಂತರ, ಅಂದರೆ ಮೇ 20 ರಂದು ಬಿ ಎಸ್ ಯಡಿಯೂರಪ್ಪ ವಿರುದ್ದದ ಪೋಕ್ಸೋ ಪ್ರಕರಣ ಸುಪ್ರಿಂ ಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ. ಬಿ ಎಸ್ ಯಡಿಯೂರಪ್ಪರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿ ಪರವಾಗಿ ಹಿರಿಯ ವಕೀಲ ಎಸ್ ಬಾಲನ್ ಅವರು &#8216;ತಡೆಯಾಜ್ಞೆ ತೆರವು ಅರ್ಜಿ&#8217; ಸಲ್ಲಿಸಿದ್ದು ಮೇ 20 ರಂದೇ ವಿಚಾರಣೆಗೆ ಬರುವ ಸಾಧ್ಯತೆ ಇದೆ.</p>



<p class="wp-block-paragraph">2024 ಮಾರ್ಚ್ 14 ರಂದು, ಬೆಂಗಳೂರಿನ ಸದಾಶಿವನಗರ ಪೊಲೀಸರು 17 ವರ್ಷದ ಬಾಲಕಿಯ ಪರವಾಗಿ ಆಕೆಯ ತಾಯಿ ನೀಡಿದ&nbsp; ಲೈಂಗಿಕ ದೌರ್ಜನ್ಯ ಆರೋಪದ ದೂರಿನ ಆಧಾರದಲ್ಲಿ ಮಾಜಿ ಸಿಎಂ ಬಿ ಎಸ್ ವೈ ವಿರುದ್ದ ಎಫ್ಐಆರ್ ದಾಖಲಿಸಿದ್ದರು. ಪ್ರಾರಂಭದಲ್ಲಿ ಎಫ್ಐಆರ್ ದಾಖಲಿಸಲು ನಿರಾಕರಿಸಿದ್ದ ಪೊಲೀಸರು, ಪತ್ರಕರ್ತ ಶ್ರೇಯಸ್ ಮಧ್ಯಪ್ರವೇಶದ ಬಳಿಕ ಅನಿವಾರ್ಯವಾಗಿ ಎಫ್ಐಆರ್ ದಾಖಲಿಸಬೇಕಾಯಿತು. ನಂತರ ಪ್ರಕರಣವನ್ನು ಸಿಐಡಿ ವರ್ಗಾಯಿಸಲಾಯಿತು. ಆದರೆ ಸಿಐಡಿ ಪೊಲೀಸರು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ವಿರುದ್ದ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಸಂತ್ರಸ್ತ ಬಾಲಕಿಯ ತಾಯಿ ಜನವಾದಿ‌ ಮಹಿಳಾ ಸಂಘಟನೆಯ ಮೂಲಕ ನನ್ನನ್ನು ಸಂಪರ್ಕಿಸಿದರು. ನಾನು ವಕೀಲ ಎಸ್ ಬಾಲನ್ ಅವರೊಂದಿಗೆ ತಾಯಿಯನ್ನು ಭೇಟಿ ಮಾಡಿಸಿ, ಪೋಕ್ಸೋ ಪ್ರಕರಣದ ತನಿಖೆಗೆ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಯಿತು. ರಿಟ್ ಅರ್ಜಿ ಸಲ್ಲಿಸಿದ ಎರಡೇ ದಿನದಲ್ಲಿ ಸಂತ್ರಸ್ತೆ ಬಾಲಕಿಯ ತಾಯಿ ನಿಗೂಢವಾಗಿ ಸಾವನ್ನಪ್ಪಿದ್ದರು. ಈ ಬಗ್ಗೆ ಜನವಾದಿ ಮಹಿಳಾ ಸಂಘಟನೆಯು ಪ್ರತ್ಯೇಕ ದೂರು ದಾಖಲಿಸಿದೆ.</p>



<p class="wp-block-paragraph">ಹೈಕೋರ್ಟ್ ನಲ್ಲಿ ಎಸ್ ಬಾಲನ್ ಅವರು ರಿಟ್ ಅರ್ಜಿ ಸಲ್ಲಿಸುತ್ತಿದ್ದಂತೆ, ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಪೊಲೀಸರು ಬಿ ಎಸ್ ಯಡಿಯೂರಪ್ಪಗೆ ನೋಟಿಸ್ ನೀಡಿದರು‌. ಸಿಐಡಿ ನೀಡಿದ ನೋಟಿಸ್ ಆಧಾರದಲ್ಲಿ ಪ್ರಕರಣ ರದ್ದುಕೋರಿ ಬಿ ಎಸ್ ಯಡಿಯೂರಪ್ಪ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಪ್ರಾರಂಭದಲ್ಲಿ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದರೂ ಪೋಕ್ಸೋ ಪ್ರಕರಣ ರದ್ದುಗೊಳಿಸಲು ನಿರಾಕರಿಸಿ, ನವೆಂಬರ್ 2025 ರಂದು ರದ್ದು ಅರ್ಜಿಯನ್ನು ವಜಾಗೊಳಿಸಿತ್ತು. ಹಾಗಾಗಿ ಬಿ ಎಸ್ ವೈ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ 24 ನವೆಂಬರ್ 2025 ರಂದು ಸುಪ್ರಿಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ ಬಿ ಎಸ್ ಯಡಿಯೂರಪ್ಪ ಸಧ್ಯ ಪ್ರಕರಣಕ್ಕೆ ತಡೆಯಾಜ್ಞೆ ಪಡೆದುಕೊಂಡಿದ್ದಾರೆ.</p>



<p class="wp-block-paragraph">ಸುಪ್ರಿಂ ಕೋರ್ಟ್ ನೀಡಿದ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಕೋರಿ ಸಂತ್ರಸ್ತ ಬಾಲಕಿಯ ಪರವಾಗಿ ಎಸ್ ಬಾಲನ್ ಸುಪ್ರಿಂ‌ ಕೋರ್ಟ್ ನಲ್ಲಿ ವಕಾಲತ್ತು ಸಲ್ಲಿಸಿದ್ದಾರೆ. ಈಗಾಗಲೇ ವಿವರವಾದ ತಡೆಯಾಜ್ಞೆ ತೆರವು ಅರ್ಜಿ ಸಿದ್ದಗೊಳಿಸಿದ್ದಾರೆ. ಮೇ 20 ರಂದು ಅದು ವಿಚಾರಣೆಗೆ ಬರುವ ಸಾಧ್ಯತೆ ಇದೆ.</p>



<p class="wp-block-paragraph">&#8220;ತನ್ನ ಪುತ್ರಿಯ ವಿರುದ್ಧ ಪೋಕ್ಸೊ ಅಪರಾಧ ಎಸಗಿದ ಸಂಬಂಧಿ ವಿರುದ್ಧ ಎಫ್‌ಐಆರ್&#8221; ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸರಿಯಾದ ತನಿಖೆ ನಡೆಸುತ್ತಿಲ್ಲ. ಹಾಗಾಗಿ ಸಹಾಯ ಮಾಡಿ&nbsp; ಎಂದು ತನ್ನ ಮಗಳನ್ನು ಕರೆದುಕೊಂಡು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪರ ಮನೆಗೆ ಹೋದಾಗ, ಅಲ್ಲಿ ಬಿಎಸ್ ವೈ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು.</p>



<p class="wp-block-paragraph">2024ರ ಫೆಬ್ರವರಿ 2ರಂದು, ಅಪ್ರಾಪ್ತ ಬಾಲಕಿಯ ತಾಯಿಯು ತನ್ನ ಅಪ್ರಾಪ್ತ ಮಗಳ ಜೊತೆ ಆರೋಪಿಯಾದ ಯಡಿಯೂರಪ್ಪ ಅವರ ಮನೆಗೆ ಹೋಗುತ್ತಾರೆ. 9 ನಿಮಿಷಗಳ ಚರ್ಚೆಯ ಬಳಿಕ, ಯಡಿಯೂರಪ್ಪ ನವರು ಸಂತ್ರಸ್ತೆ ಬಾಲಕಿಯನ್ನು ಕೋಣೆಯ ಒಳಗಡೆ ಕರೆಯುತ್ತಾರೆ. ಮಗಳ ಜೊತೆ ತಾಯಿಯೂ ಎದ್ದು ನಿಂತಾಗ, ತಾಯಿಗೆ ಹೊರಗಡೆ ನಿಲ್ಲಲು ಹೇಳುತ್ತಾರೆ. 5 ನಿಮಿಷಗಳ ನಂತರ ಸಂತ್ರಸ್ತೆ ಬಾಲಕಿಯು ಯಡಿಯೂರಪ್ಪರ ಕೋಣೆಯಿಂದ ಹೊರ ಬಂದು&nbsp; &#8220;ಅವರು (ಬಿಎಸ್ ವೈ) ತಮ್ಮ ಕೈ ನನ್ನ ಶರ್ಟಿನ ಒಳಗೆ ಹಾಕಿದರು&#8221;&nbsp; ಎಂದು ತಾಯಿಗೆ ಹೇಳುತ್ತಾಳೆ.</p>



<p class="wp-block-paragraph">&#8216;ನನ್ನ ಮಗಳಿಗೆ ಯಾಕೆ ಹೀಗೆ ಮಾಡಿದಿರಿ ?&#8217; ಎಂದು ಸಂತ್ರಸ್ತ ಬಾಲಕಿಯ ತಾಯಿ ಬಿಎಸ್ ಯಡಿಯೂರಪ್ಪರನ್ನು ಪ್ರಶ್ನಿಸಿದಾಗ &#8216;ನಾನು ಆಕೆಯ ಮೇಲೆ ರೇಪ್ ಆಗಿದ್ದು ನಿಜವೇ ಎಂದು ಪರೀಕ್ಷಿಸಿದೆ ಅಷ್ಟೆ&#8217; ಎಂದು ಬಿ ಎಸ್ ಯಡಿಯೂರಪ್ಪ ಉತ್ತರಿಸಿದ್ದಾರೆ.</p>



<p class="wp-block-paragraph">15/03/2024 ರಂದು ಸಂತ್ರಸ್ತ ಬಾಲಕಿ ವೈದ್ಯಕೀಯ ತಪಾಸಣೆಯ ಸಂದರ್ಭದ ಹೇಳಿಕೆ ನೀಡಿದ್ದು ಅದು ಹೀಗಿದೆ&nbsp; :<br>&#8220;ಯಡಿಯೂರಪ್ಪ ಅವರು ಕೊಠಡಿಗೆ ಕರೆಯಿಸಿಕೊಂಡು ಒಳಗಡೆ ಚಿಲಕ ಹಾಕಿದರು. ಅಲ್ಲಿ ಕೆಲವು ಪ್ರಶ್ನೆಗಳು ಕೇಳಿದರು. ನಂತರ ಎಡಗೈಯನ್ನು ನನ್ನ ಬಟ್ಟೆಯೊಳಗೆ ಹಾಕಿದರು. ನಾನು ತಳ್ಳಿದ ಮೇಲೆ ಅವರು ಬಾಗಿಲು ತೆರೆಯಲು ಒಪ್ಪಿಕೊಂಡರು. ತಾಯಿಯ ಬಳಿಗೆ ಬಂದು ಈ ವಿಷಯ ತಿಳಿಸಿದೆ.&#8221; ಎಂದು ವೈದ್ಯರ ಮುಂದೆ ಹೆಣ್ಣು ಮಗು ಹೇಳಿದ್ದು ಅದು ದಾಖಲಾಗಿದೆ.</p>



<p class="wp-block-paragraph">16/03/2024 ರಂದು ಸಂತ್ರಸ್ತ ಬಾಲಕಿಯು ಸಿಐಡಿ ಡಿವೈಎಸ್ ಪಿ&nbsp; ಮುಂದೆ ಹಾಜರಾಗಿ&nbsp; 161 ಸಿಆರ್ ಪಿಸಿ ಅಡಿಯಲ್ಲಿ ಹೇಳಿಕೆ ನೀಡಿದ್ದು, ಅದು ಹೀಗಿದೆ :<br>&#8220;02.02.2024 ರಂದು ಬೆಳಿಗ್ಗೆ 11 ರಿಂದ 12.30 ರ ಮಧ್ಯೆ ಯಡಿಯೂರಪ್ಪ ಅವರು ಬಾಗಿಲಿನ ಬಳಿ ನಿಂತು ನನಗೆ ಒಳಗೆ ಹೋಗಲು ಸೂಚಿಸಿದರು. ನಂತರ ಅವರೇ ಒಳಗೆ ಬಂದು ಬಾಗಿಲು ಬೀಗ ಹಾಕಿದರು. ಆ ಕೋಣೆಯಲ್ಲಿ ಸೋಫಾ ಮತ್ತು ಟೀ ಟೇಬಲ್ ಇತ್ತು. ನಾನು ನಿಂತಿದ್ದಾಗ ಅವರು ನನ್ನ ಹತ್ತಿರ ಬಂದು, ಹಿಂದಿನ ಪೋಕ್ಸೊ ಪ್ರಕರಣದ ಬಗ್ಗೆ ಪ್ರಶ್ನೆ ಮಾಡಿದರು. ಈ ನಡುವೆ, ಅವರ ಎಡಗೈ ನನ್ನ ಶರ್ಟಿನೊಳಗೆ ಹಾಕಿ, ನನ್ನ ಬಲ ಬದಿಯ ಎದೆಯನ್ನು ಕಿವುಚಿದರು. ನಾನು ಅವರ ಕೈ ತಳ್ಳಿದ ನಂತರ, ಅವರು ಬಾಗಿಲು ತೆರೆದರು. ಹೊರಬಂದು ತಾಯಿಯ ಬಳಿ ಅಳುತ್ತಾ ಹೇಳಿದೆನು&#8221;&nbsp; ಎಂದು ದಾಖಲಾಗಿದೆ.</p>



<p class="wp-block-paragraph">ಸಂತ್ರಸ್ತ ಬಾಲಕಿಯ ತಾಯಿ ನೀಡಿದ್ದು, ಯಡಿಯೂರಪ್ಪ ಅವರೊಂದಿಗೆ ತಾನು ಮಾತನಾಡಿದ್ದು, ಅದನ್ನು ರೆಕಾರ್ಡ್ ಮಾಡಿಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. &#8220;ಅಪ್ಪಾಜಿ, ಏನು ಮಾಡಿದ್ದೀರಿ? ನೀವು ನನ್ನ ಮಗಳನ್ನು ಏನು ಮಾಡಿದಿರಿ?&#8221; ಎಂದು ಬಾಲಕಿಯ ತಾಯಿ ಪ್ರಶ್ನಿಸಿದ್ದಾರೆ.<br>ಯಡಿಯೂರಪ್ಪನವರು ಇದಕ್ಕೆ ಉತ್ತರಿಸುತ್ತಾ, &#8216;ನಿಮ್ಮ ಮಗಳಿಗೆ ರೇಪ್ ಆಗಿದೆಯೋ, ಇಲ್ಲವೋ ಎಂದು ಚೆಕ್ ಮಾಡಿದೆ&#8221; ಎಂದಿದ್ದಾರೆ. ತಾಯಿಯು ಸ್ವಲ್ಪ ಜೋರಾದ ಸ್ವರದಲ್ಲಿ ಕೇಳಿದಾಗ, &#8216;ಬನ್ನಿ ಕುಳಿತುಕೊಳ್ಳಿ, ಮಾತಾಡೋಣ&#8217;&nbsp; ಎಂದು ಯಡಿಯೂರಪ್ಪ ಹೇಳಿದರು.</p>



<p class="wp-block-paragraph">ಈ ಮಧ್ಯೆ ಯಡಿಯೂರಪ್ಪ ಆಪ್ತ ರುದ್ರೇಶ್ ಎಂಬಾತ ತನ್ನ ಮೊಬೈಲ್ ಸಂಖ್ಯೆ 9945849*** ಸಂಖ್ಯೆಯಿಂದ ಸಂತ್ರಸ್ತೆ ಬಾಲಕಿಯ ತಾಯಿಗೆ ಕರೆ ಮಾಡಿ ಭೇಟಿಯಾಗಿ ಮಾತನಾಡಲು ಹೇಳಿದರು. ರುದ್ರೇಶ್ ನನ್ನು ಭೇಟಿಯಾದಾಗ ಆತನ ಬಿ ಎಸ್ ಯಡಿಯೂರಪ್ಪನವರ ಪುತ್ರರಾದ ಬಿ ವೈ ವಿಜಯೇಂದ್ರ ಮತ್ತು ಬಿ ವೈ ರಾಘವೇಂದ್ರರನ್ನು ಭೇಟಿಯಾಗುವಂತೆ ಒತ್ತಾಯಿಸಿದರು. ನಂತರ ರುದ್ರೇಶ್ ಮತ್ತು ಮರಿಸ್ವಾಮಿಯವರು ಹಣದ ಕಂತೆಗಳನ್ನು ಸಂತ್ರಸ್ತ ಬಾಲಕಿಯ ತಾಯಿಗೆ ನೀಡಲು ಮುಂದಾಗಿದ್ದು, ತಾಯಿ ಹಣ ಪಡೆಯಲು ನಿರಾಕರಿಸಿದ್ದಾರೆ. ಇವೆಲ್ಲವೂ ವಿಡಿಯೋ ಚಿತ್ರೀಕರಣಗೊಂಡಿದೆ.</p>



<p class="wp-block-paragraph">ಎಲ್ಲಾ ದಾಖಲೆಗಳೊಂದಿಗೆ ಸುಪ್ರಿಂ‌ಕೊರ್ಟ್ ನಲ್ಲಿ ತಡೆಯಾಜ್ಞೆ ತೆರವು ಅರ್ಜಿ ಸಲ್ಲಿಸಲಿದ್ದು, ಈಗಾಗಲೇ ಎಸ್ ಬಾಲನ್ ವಕಾಲತ್ತು ಸಲ್ಲಿಸಿದ್ದಾರೆ. ಮೇ 09 ರಂದು ನಡೆಯುವ ಅಭಿಮಾನೋತ್ಸವ ಬಿಎಸ್ ವೈ ರಾಜಕೀಯದ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲ.‌ ಆದರೆ 11 ದಿನಗಳ ಅಂತರದಲ್ಲಿ ನಡೆಯುವ ಸುಪ್ರಿಂ ಕೋರ್ಟ್ ವಿಚಾರಣೆಯೇ ಬಿ ಎಸ್ ವೈ ಮತ್ತು ಬಿಜೆಪಿ ಮೇಲೆ ಪರಿಣಾಮ‌ ಬೀರುವ ಸಾಧ್ಯತೆ ಇದೆ.</p>
]]></content:encoded>
					
		
		
			</item>
		<item>
		<title>ನಿಮ್ಮ ನಿದ್ದೆ ಕೆಡಿಸುವ ಇತಿಹಾಸದ ಅತ್ಯದ್ಭುತ ಎಸ್ಕೇಪ್‌ಗಳು</title>
		<link>https://peepalmedia.com/amazing-escapes-from-history-that-will/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 06 May 2026 11:19:19 +0000</pubDate>
				<category><![CDATA[ಅಂಕಣ]]></category>
		<category><![CDATA[ಸಿನಿಮಾ]]></category>
		<guid isPermaLink="false">https://peepalmedia.com/?p=78124</guid>

					<description><![CDATA[&#8220;..ಇದು ಕೇವಲ ಡಾಕ್ಯುಮೆಂಟರಿ ಅಲ್ಲ – ಬದಲಾಗಿ ಇದು ಮನುಷ್ಯನ ಚಾತುರ್ಯ, ಧೈರ್ಯ, ಚಾಣಾಕ್ಷತನ ಮತ್ತು ಬದುಕುಳಿಯುವ ಹಠ ಹೇಗೆಲ್ಲಾ ತಮ್ಮ ಬದುಕಿನ ದಾರಿಗಳನ್ನು ಸಾಗಿಸುತ್ತವೆ ಎಂಬುದಾಗಿದೆ&#8230;&#8221; ಪತ್ರಕರ್ತ ಮುರಳಿ ಮಾಲೂರು ಅವರ ಬರಹದಲ್ಲಿ ಹಾಗೆಯೇ ಒಮ್ಮೆ ಯೋಚಿಸಿ. ನೀವು ಒಂದು ಕತ್ತಲು ಕೋಣೆಯಲ್ಲಿ ಕುಳಿತಿದ್ದೀರಿ. ನೀವು ಹೊರಬರಲು ಸಾಧ್ಯವೇ ಇಲ್ಲದಂತಹ ಕೋಣೆಯದು, “ಇಲ್ಲಿಂದ ಹೇಗೆ ಹೊರಗೆ ಹೋಗಬಹುದು?” ಎಂಬ ಯೋಚನೆ ನಿಮ್ಮನ್ನು ಕಾಡುತ್ತದೆ. ಅದೊಂದು ನರಕದ ಕೂಪವಾಗಿ ಕಾಣುತ್ತಿರುತ್ತದೆ.&#160; ದಪ್ಪ ಗೋಡೆಗಳು, ಬಲಿಷ್ಠವಾದ ಕಬ್ಬಿಣದ ಬಾರ್‌ಗಳು, [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p class="wp-block-paragraph">&#8220;..ಇದು ಕೇವಲ ಡಾಕ್ಯುಮೆಂಟರಿ ಅಲ್ಲ – ಬದಲಾಗಿ ಇದು ಮನುಷ್ಯನ ಚಾತುರ್ಯ, ಧೈರ್ಯ, ಚಾಣಾಕ್ಷತನ ಮತ್ತು ಬದುಕುಳಿಯುವ ಹಠ ಹೇಗೆಲ್ಲಾ ತಮ್ಮ ಬದುಕಿನ ದಾರಿಗಳನ್ನು ಸಾಗಿಸುತ್ತವೆ ಎಂಬುದಾಗಿದೆ&#8230;&#8221; ಪತ್ರಕರ್ತ ಮುರಳಿ ಮಾಲೂರು ಅವರ ಬರಹದಲ್ಲಿ</p>
</blockquote>



<p class="wp-block-paragraph">ಹಾಗೆಯೇ ಒಮ್ಮೆ ಯೋಚಿಸಿ. ನೀವು ಒಂದು ಕತ್ತಲು ಕೋಣೆಯಲ್ಲಿ ಕುಳಿತಿದ್ದೀರಿ. ನೀವು ಹೊರಬರಲು ಸಾಧ್ಯವೇ ಇಲ್ಲದಂತಹ ಕೋಣೆಯದು, “ಇಲ್ಲಿಂದ ಹೇಗೆ ಹೊರಗೆ ಹೋಗಬಹುದು?” ಎಂಬ ಯೋಚನೆ ನಿಮ್ಮನ್ನು ಕಾಡುತ್ತದೆ. ಅದೊಂದು ನರಕದ ಕೂಪವಾಗಿ ಕಾಣುತ್ತಿರುತ್ತದೆ.&nbsp; ದಪ್ಪ ಗೋಡೆಗಳು, ಬಲಿಷ್ಠವಾದ ಕಬ್ಬಿಣದ ಬಾರ್‌ಗಳು, ಕೋಣೆಯ ಸುತ್ತಲೂ ಹೆಜ್ಜೆ ಹೆಜ್ಜೆಗೂ ಕಾವಲುಗಾರರು. ಇಷ್ಟೆಲ್ಲಾ ತಿಳಿದಿದ್ದೂ ಎಲ್ಲೋ ಒಂದು ಕಡೆ ಮನಸ್ಸು, ಆ ಕೋಣೆಯಿಂದ ಹೇಗಾದರೂ ಮಾಡಿ ಹೊರಗೆ ನಡೆಯಬೇಕು ಎಂಬುದನ್ನು ಎಚ್ಚರಿಸುತ್ತಾ ಇರುತ್ತದೆ. ಎಲ್ಲಾದರೂ ಸಣ್ಣ ಅವಕಾಶ ಸಿಗಬಹುದೇ ಎಂದು ಕಾತರಿಸುತ್ತಿರುತ್ತದೆ. History’s Greatest Escapes with Morgan Freeman ಈ ಸರಣಿ ಸಾಕ್ಷ್ಯಚಿತ್ರ ಇದೇ ಮನಸ್ಸಿನ ಆಳಕ್ಕೆ ನಿಮ್ಮನ್ನು ಸೀದಾ ಕರೆದೊಯ್ಯುತ್ತದೆ.</p>



<p class="wp-block-paragraph">ಆಸ್ಕರ್ ವಿಜೇತ ನಟ ಮಾರ್ಗನ್ ಫ್ರೀಮನ್ ಅವರ ಗಂಭೀರವಾದ, ರೋಮಾಂಚಕ ಧ್ವನಿ ನಿಮ್ಮ ಕಿವಿಯಲ್ಲಿ ಪ್ರತಿಧ್ವನಿಸುತ್ತಾ ಈ ಸರಣಿಯ ಪ್ರತಿಯೊಂದು ಎಪಿಸೋಡ್ ಪ್ರಾರಂಭವಾಗುತ್ತದೆ. ಇದು ಕೇವಲ ಡಾಕ್ಯುಮೆಂಟರಿ ಅಲ್ಲ – ಬದಲಾಗಿ ಇದು ಮನುಷ್ಯನ ಚಾತುರ್ಯ, ಧೈರ್ಯ, ಚಾಣಾಕ್ಷತನ ಮತ್ತು ಬದುಕುಳಿಯುವ ಹಠ ಹೇಗೆಲ್ಲಾ ತಮ್ಮ ಬದುಕಿನ ದಾರಿಗಳನ್ನು ಸಾಗಿಸುತ್ತವೆ ಎಂಬುದಾಗಿದೆ. ಇಲ್ಲಿ ಬರುವ ನಿಜವಾದ ಕಥೆಗಳು ನಿಮ್ಮ ಬೆನ್ನು ಹುರಿಯನ್ನು ನೆಟ್ಟಗೆ ಮಾಡಿ ಕಣ್‌ ರೆಪ್ಪೆಯನ್ನು ಮಿಟುಕಿಸದಂತೆ ಮಾಡುತ್ತವೆ.</p>



<p class="wp-block-paragraph">ಮೊದಲ ಎಪಿಸೋಡ್‌ನಲ್ಲೇ Alcatraz ದ್ವೀಪದ ಅತ್ಯಂತ ಭಯಂಕರವಾದ ಜೈಲಿನಿಂದ ನಾಲ್ವರು ಖೈದಿಗಳ ಎಸ್ಕೇಪ್‌ ಪ್ಲಾನ್.‌ ಅಲ್ಲಿ ಚಮಚಗಳನ್ನು ಬಳಸಿ ಗೋಡೆ ಕೊರೆಯುವಂತದ್ದು, ಕಾಗದದಿಂದ ತಯಾರಿಸುವ ಲೈಫ್‌ ಜಾಕೆಟ್‌ ಗಳು, ತಣ್ಣಗಿನ ಸಾಗರದಲ್ಲಿ ಮೂರು ಖೈದಿಗಳು ಮರೆಯಾಗುವುದು. ಆ ಮೂರೂ ಖೈದಿಗಳು ಇವತ್ತಿಗೂ ಏನಾದರು? ಎಂಬ ಸತ್ಯ ರಹಸ್ಯವಾಗೇ ಉಳಿದಿರುವುದು. ಈ ಒಂದು ಕಥೆಯೇ ನಿಮ್ಮ ನಿದ್ದೆಯನ್ನು ಕೆಡಿಸುತ್ತದೆ.</p>



<p class="wp-block-paragraph">ಇನ್ನು El Chapoನ ಕಥೆ! ಈ ಕಥೆಯಂತೂ ನಿಮ್ಮನ್ನು ಅಚ್ಚರಿಗೆ ತಳ್ಳುತ್ತದೆ. ಮೆಕ್ಸಿಕೋದ ಅತ್ಯಂತ ಭದ್ರವಾದ ಜೈಲಿನಿಂದ ಅವನು ಹೇಗೆ ಟನಲ್ ಮೂಲಕ ತಪ್ಪಿಸಿಕೊಂಡ? ಮತ್ತು ಈ ಟನಲ್‌ ಕೊರೆಯುವುದನ್ನು ತಿಳಿಯುವಾಗ ರೋಮಾಂಚನವೆನಿಸುತ್ತದೆ. ಒಂದು ಮೋಟಾರ್‌ಸೈಕಲ್ ಎಂಜಿನ್ ಬಳಸಿ ಕೀಮೀ ಉದ್ದದ ಸುರಂಗ ಕೊರೆಯುವ ಮರು&nbsp; ಸೃಷ್ಟಿಯ ವಿಶ್ಯುಯಲ್‌ ಗಳು ನಿಮ್ಮ ಕಣ್ಣ ಮುಂದೆ ಬರುತ್ತಿರುತ್ತವೆ. ಹಿಂದೆ ಮಾರ್ಗನ್‌ ಅವರ ಧ್ವನಿ ಕೇಳಿಸುತ್ತಿರುತ್ತದೆ. ಇವೆರಡೂ ಒಮ್ಮೆಲೆಗೆ ನಿಮ್ಮನ್ನು ಆ ಟನಲ್‌ ಒಳಗಡೆಗೆ ಕರೆದೊಯ್ಯುತ್ತವೆ. ಪ್ರತೀ ಹಂತದಲ್ಲೂ ಮುಂದೇನಾಗಬಹುದು ಎಂಬ ಕಾತುರ ನಿಮ್ಮನ್ನು ಕಾಡಲಾರಂಭಿಸುತ್ತದೆ.</p>



<p class="wp-block-paragraph">Dannemora ಜೈಲಿನಿಂದ ಇಬ್ಬರು ಖೈದಿಗಳ ಎಸ್ಕೇಪ್‌ ಪ್ಲಾನ್‌ ಅದ್ಭುತವೆನಿಸುತ್ತದೆ. ಪೊಲೀಸರನ್ನೇ ಮರಳು ಮಾಡಿ ಟೂಲ್‌ ಕಿಟ್‌ ಬಳಸಿ ಜೈಲಿನಿಂದ ಪರಾರಿಯಾಗುತ್ತಾರೆ. ಸುಮಾರು 23 ದಿನಗಳು ಕಡಿನಲ್ಲಿ ತಮ್ಮ ಜೀವನ ಕಳೆಯುತ್ತಾರೆ. ಈ ಎಪಿಸೋಡ್‌ ನಿಮ್ಮ ಕ್ಯೂರಿಯಾಸಿಟಿಯನ್ನು ಹತ್ತು ಪಟ್ಟು ಹೆಚ್ಚಿಸುತ್ತದೆ.</p>



<p class="wp-block-paragraph">Parchman ಫಾರ್ಮ್‌ನಿಂದ ಒಬ್ಬ ಏಕಾಂಗಿಯಾಗಿ ಎಸ್ಕೇಪ್ ಆಗುವುದು, Sobibor ನಲ್ಲಿ ನಡೆಯುವ ಸಾಮೂಹಿಕ ದಂಗೆ, Devil’s Islandನ ಭಯಾನಕ ಕಥೆಗಳು, ವಿಯೆಟ್ನಾಮ್ ಯುದ್ಧದ ಸಮಯದಲ್ಲಿ POW ಎಸ್ಕೇಪ್…‌ ಹೀಗೆ ಪ್ರತಿ ಎಪಿಸೋಡ್ ನಿಮ್ಮನ್ನು ಅಲುಗಾಡಲು ಬಿಡುವುದಿಲ್ಲ. ಈ ಸರಣಿಯ ವಿಶೇಷತೆ ಏನೆಂದರೆ – ಕೇವಲ ಮಾತುಗಳಷ್ಟೇ ಅಲ್ಲ ಆಧುನಿಕ ತಂತ್ರಜ್ಞಾನ ಬಳಸಿ ಜೈಲುಗಳನ್ನು ಅದ್ಭುತವಾಗಿ ಪುನರ್ನಿರ್ಮಾಣ ಮಾಡಲಾಗಿದೆ. ಹಾಗೆಯೇ ಗ್ರಾಫಿಕ್ಸ್‌ ಬಹಳ ಅದ್ಭುತವೆನಿಸುತ್ತದೆ. ನೋಡುಗರು ಖೈದಿಗಳ ಜೊತೆಗೆ ಸುರಂಗದಲ್ಲಿ ನಡೆಯುತ್ತಿರುವಂತೆ, ಅವರು ತಪ್ಪಿಸಿಕೊಳ್ಳುವ ಪ್ರತಿ ಹೆಜ್ಜೆಯಲ್ಲೂ ಪ್ರೇಕ್ಷಕ ಇರುವಂತೆ ಭಾಸವಾಗುತ್ತದೆ. ಆ ಖೈದಿಗಳ ಕುಟುಂಬದವರು, ಸೆಲ್‌ಮೇಟ್‌ಗಳು ಮತ್ತು ಅಲ್ಲಿನ ಕಾವಲುಗಾರರ ಸಂದರ್ಶನ ಇಡೀ ಸರಣಿಗೆ ಮತ್ತಷ್ಟು ಜೀವ ತುಂಬುತ್ತಾ ಸಾಗಿದೆ.</p>



<p class="wp-block-paragraph">ಮಾರ್ಗನ್ ಫ್ರೀಮನ್ ಬಗ್ಗೆ ಹೇಳಲೇಬೇಕು ಈ ವ್ಯಕ್ತಿ ಇಲ್ಲಿ ಕೇವಲ ಹೋಸ್ಟ್, ಯಾಂಕರ್‌ ಅಲ್ಲ. ಮಾರ್ಗನ್ ನಿಮ್ಮನ್ನು ಆ‌ ಘಟನಾ ಸ್ಥಳಕ್ಕೆ, ಆ ಕ್ಷಣಕ್ಕೆ ಕರೆದೊಯ್ಯುತ್ತಾರೆ. ಅವರ ಧ್ವನಿ ನಿಮ್ಮಲ್ಲಿ ಆಸಕ್ತಿಯನ್ನು ಹುಟ್ಟಿಸುತ್ತಾ, “ಮುಂದೇನಾಗುತ್ತದೆ?” ಎಂಬ ತುಡಿತವನ್ನು ಹೆಚ್ಚಿಸುತ್ತದೆ. ಈ ಸರಣಿ ಒಂದು ಎಪಿಸೋಡ್ ಮುಗಿದರೆ ನಂತರದ ಎಪಿಸೋಡ್‌ ಗೆ ತಾನಾಗೇ ಕರೆದೊಯ್ಯುತ್ತದೆ.</p>



<p class="wp-block-paragraph">ಈ ಸರಣಿ ನಿಮಗೆ ಕೇವಲ ಎಂಟರ್‌ಟೈನ್‌ಮೆಂಟ್ ಮಾತ್ರ ನೀಡುವುದಿಲ್ಲ. ಮಾನವ ಸ್ವಭಾವ ಹೇಗೆ? ಎಂಬ ಸತ್ಯವನ್ನು ತೋರಿಸುತ್ತದೆ – ಧೃಡವಾಗಿ ನಿಶ್ಚಯಿಸಿದರೆ ಯಾವುದೂ ನಿಮ್ಮನ್ನು ತಡೆಯಲಾರದು ಎಂಬುದನ್ನು ಈ ಸರಣಿ ನಿಮಗೆ ಅರ್ಥೈಸುವಂತಹ ಕೆಲಸ ಮಾಡುತ್ತದೆ.</p>



<p class="wp-block-paragraph">ಕೊನೆಯದಾಗಿ ಹೇಳುವುದಾದರೆ. ಈ ಸರಣಿ ನೋಡಿದ ನಂತರ ಜಗತ್ತಿನಲ್ಲಿ ಆಗಿರುವಂತಹ ಮತ್ತಷ್ಟು ಗ್ರೇಟೆಸ್ಟ್‌ ಎಸ್ಕೇಪ್‌ ಗಳು ಯಾವುವು? ಎಂಬುದನ್ನು ಗೂಗಲ್‌ ಮಾಡುವಷ್ಟು ಕುತೂಹಲವನ್ನು ನಮ್ಮಲ್ಲಿ ಹುಟ್ಟಿಸುತ್ತದೆ. ವರ್ಥ್‌ ಟು ವಾಚ್‌ ಎನ್ನುವಂತಹ ಡಾಕ್ಯುಮೆಂಟರಿ ಇದು. ತಪ್ಪದೇ ನೋಡಿ. ಡಿಸ್ಕವರಿ ಪ್ಲಸ್‌ ಓಟಿಟಿ ಪ್ಲಾಟ್‌ಫಾರ್ಮ್‌ ನಲ್ಲಿದೆ. ನಂತರ ನಿಮ್ಮ ಅಭಿಪ್ರಾಯವನ್ನೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.</p>
]]></content:encoded>
					
		
		
			</item>
		<item>
		<title>ಎಚ್‌ಡಿಕೆ ಬಾಯಿಂದ ಇದೆಂಥಾ ಅಸೂಕ್ಷ್ಮ ಮಾತು!?</title>
		<link>https://peepalmedia.com/this-such-an-insensitive-remark-coming-from-hdk/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 29 Apr 2026 07:50:17 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://peepalmedia.com/?p=77799</guid>

					<description><![CDATA[“ಛೇ..ಛೇ… ಈ ಕುಮಾರಸ್ವಾಮಿ ಹಿಂಗ್ಯಾಕಾದ್ರು?” “ಹೊಸದಾಗಿ ಆಗಿದ್ದಲ್ಲ…. ಅವ್ರು ಮೊದ್ಲಿಂದನೂ ಇರೋದೆ ಹಿಂಗೆ”.. ಸಚಿವ ಡಿ ಸುಧಾಕರ್ ಆಸ್ಪತ್ರೆಯಲ್ಲಿ ಪ್ರಜ್ಞೆ ಕಳೆದುಕೊಂಡು ಮಲಗಿರುವಾಗ ಕೇಂದ್ರ ಸಚಿವ ಕುಮಾರಸ್ವಾಮಿ ನೀಡಿದ ತೀರಾ ಅಸೂಕ್ಷ್ಮ ಹೇಳಿಕೆಯ ಸುತ್ತ ಈ ಬರಹ.. ಮಾಚಯ್ಯ ಎಂ ಹಿಪ್ಪರಿಗಿ ಅವರ ಬರಹದಲ್ಲಿ ಮೊದಲನೆಯ ನನ್ನ ಪ್ರಶ್ನೆಗೆ ಗೆಳೆಯ ಹೀಗೆ ಉತ್ತರಿಸಿದಾಗ, ನನಗೆ ಥಟ್ಟನೆ ಒಂದು ತೀರ್ಮಾನಕ್ಕೆ ಬರಲಾಗಲಿಲ್ಲ. ಯಾಕೆಂದರೆ, ದೇವೇಗೌಡರನ್ನು ಈ ನಾಡು ಸುದೀರ್ಘ ಕಾಲದಿಂದ ನೋಡುತ್ತಾ ಬಂದಿದೆ. ರಾಜಕೀಯ ತಂತ್ರಗಾರಿಕೆ, ಸೈದ್ದಾಂತಿಕ ರಾಜಿತನ, [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p class="wp-block-paragraph">“ಛೇ..ಛೇ… ಈ ಕುಮಾರಸ್ವಾಮಿ ಹಿಂಗ್ಯಾಕಾದ್ರು?” “ಹೊಸದಾಗಿ ಆಗಿದ್ದಲ್ಲ…. ಅವ್ರು ಮೊದ್ಲಿಂದನೂ ಇರೋದೆ ಹಿಂಗೆ”.. ಸಚಿವ ಡಿ ಸುಧಾಕರ್ ಆಸ್ಪತ್ರೆಯಲ್ಲಿ ಪ್ರಜ್ಞೆ ಕಳೆದುಕೊಂಡು ಮಲಗಿರುವಾಗ ಕೇಂದ್ರ ಸಚಿವ ಕುಮಾರಸ್ವಾಮಿ ನೀಡಿದ ತೀರಾ ಅಸೂಕ್ಷ್ಮ ಹೇಳಿಕೆಯ ಸುತ್ತ ಈ ಬರಹ.. ಮಾಚಯ್ಯ ಎಂ ಹಿಪ್ಪರಿಗಿ ಅವರ ಬರಹದಲ್ಲಿ</p>
</blockquote>



<p class="wp-block-paragraph">ಮೊದಲನೆಯ ನನ್ನ ಪ್ರಶ್ನೆಗೆ ಗೆಳೆಯ ಹೀಗೆ ಉತ್ತರಿಸಿದಾಗ, ನನಗೆ ಥಟ್ಟನೆ ಒಂದು ತೀರ್ಮಾನಕ್ಕೆ ಬರಲಾಗಲಿಲ್ಲ. ಯಾಕೆಂದರೆ, ದೇವೇಗೌಡರನ್ನು ಈ ನಾಡು ಸುದೀರ್ಘ ಕಾಲದಿಂದ ನೋಡುತ್ತಾ ಬಂದಿದೆ. ರಾಜಕೀಯ ತಂತ್ರಗಾರಿಕೆ, ಸೈದ್ದಾಂತಿಕ ರಾಜಿತನ, ಕುಟುಂಬ ವಾತ್ಸಲ್ಯದಂತಹ ದೋಷಗಳನ್ನು ಹೊರತುಪಡಿಸಿದರೆ ವ್ಯಕ್ತಿಗತವಾಗಿ ವ್ಯವಹರಿಸುವಾಗ ತುಂಬಾ ನಾಜೂಕಿನಿಂದ ನಡೆದುಕೊಂಡು ಬಂದವರು. ತನ್ನ ಸ್ಥಾನದ ಘನತೆಗೆ ಮುಕ್ಕು ಬರುವಂತೆ ವರ್ತಿಸಿದ್ದು ತೀರಾ ವಿರಳ. ನೆನಪಿರುವಂತೆ, ಒಮ್ಮೆ ಆವೇಶದಲ್ಲಿ ಯಡಿಯೂರಪ್ಪನವರಿಗೆ “ಬೋ…ಮಗ” ಎಂದು ಹೇಳಿ, ಆನಂತರ, ಅದಕ್ಕೆ ವಿಷಾದವನ್ನೂ ವ್ಯಕ್ತಪಡಿಸಿದ್ದುಂಟು. ಅಂತವರ ಮಗನಾದ ಕುಮಾರಸ್ವಾಮಿಯವರು ರಾಜಕೀಯವಾಗಿ ಅದೇನೆ ಯಡವಟ್ಟುಗಳನ್ನು ಮಾಡಿಕೊಳ್ಳಲಿ, ಆದರೆ ಸಾರ್ವಜನಿಕವಾಗಿ ವ್ಯವಹರಿಸುವಾಗ ಇಷ್ಟು ಅಸೂಕ್ಷ್ಮತೆಯಿಂದ ಮಾತಾಡುವಷ್ಟು ಸಡಿಲ ವ್ಯಕ್ತಿತ್ವದವರೇ?</p>



<p class="wp-block-paragraph">ಕರ್ನಾಟಕದ ಸಚಿವ ಡಿ ಸುಧಾಕರ್‍‌ ಅವರು ತೀವ್ರ ಅನಾರೋಗ್ಯಕ್ಕೆ ತುತ್ತಾಗಿರೋದು, ಅವರಿಗೆ ಐಸಿಯು ಘಟಕದಲ್ಲಿಟ್ಟು ಚಿಕಿತ್ಸೆ ನೀಡುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ತಮ್ಮ ಕುಟುಂಬದ ವ್ಯಕ್ತಿಯೊಬ್ಬರನ್ನು, ಅದರಲ್ಲೂ ಆಧಾರಸ್ತಂಭವಾಗಿರುವ ಜೀವವನ್ನು ಹೀಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿಟ್ಟು ದೇವರಮೇಲೆ ಭಾರ ಹಾಕಿ ಕ್ಷಣಗಣನೆ ಮಾಡುವುದು ಆ ಕುಟುಂಬಸ್ಥರ ಪಾಲಿಗೆ ಎಂಥಾ ಆತಂಕದ್ದಾಗಿರುತ್ತೆ ಅನ್ನೋದು ಪ್ರತಿಯೊಬ್ಬರಿಗೂ ಗೊತ್ತು. ಒಮ್ಮೊಮ್ಮೆ ಡಾಕ್ಟರನ್ನು ಕಂಡು ಮಾತಾಡುವಾಗಲೂ, ಒಳಿತಿಗಿಂತ ಹೆಚ್ಚು ಕೆಡುಕಿನ ಊಹೆಗಳೇ ಕುಟುಂಬದ ಜೀವ ಹಿಂಡುತ್ತಿರುತ್ತವೆ. ಮತ್ತ್ಯಾವ ಹೊಸ ಕೆಟ್ಟ ಸುದ್ದಿ ಹೇಳುವರೋ? ಎನ್ನುವ ಅಂಜಿಕೆ ಅವರನ್ನು ಬೇಟೆಯಾಡುತ್ತಿರುತ್ತದೆ. ಆದರೂ ಗುಣಮುಖರಾಗಿ ಬರುತ್ತಾರೆಂಬ ಭರಸವೆ ಹೊತ್ತು ಆಸ್ಪತ್ರೆಯ ಆವರಣದಲ್ಲಿ ಊಟ, ನಿದ್ರೆ, ನೀರು ತೊರೆದು ಕಣ್ಣೀರು ಬಸಿಯುತ್ತಾ ಘಳಿಗೆಗಳ ಜೊತೆ ಸೆಣೆಸುತ್ತಿರುತ್ತಾರೆ. ಒಳಗಿರುವ ರೋಗಿಗೆ ಇದರ ಪರಿವೆ ಇರುತ್ತದೋ, ಇಲ್ಲವೋ ತಿಳಿಯದು. ಆದರೆ ಹೊರಗಿರುವವರ ವೇದನೆ, ಅನಿಶ್ಚಿತತೆ ಹೇಳತೀರದು. ಅಂತಹ ಸಮಯದಲ್ಲಿ ಆ ನೊಂದ ಕುಟುಂಬಕ್ಕೆ ಸಾಂತ್ವನ ಹೇಳುವುದು ತುಂಬಾ ಅಗತ್ಯವಿರುತ್ತದೆ. ಒಂದುವೇಳೆ, ಯಾವ್ಯಾವುದೋ ಕಾರಣದಿಂದ, ನಮಗೆ ಸಾಂತ್ವನ ಹೇಳಲು ಸಾಧ್ಯವಾಗದಿದ್ದರೆ; ಕಡೇಪಕ್ಷ, ಅವರ ಅಧೀರತೆಯನ್ನು ಮತ್ತಷ್ಟು ಹೆಚ್ಚಿಸುವ ಅಥವಾ ಅವರ ನೈತಿಕ ಸ್ಥೈರ್ಯವನ್ನು ಕುಸಿಯುವಂತೆ ಮಾಡುವ ಅಮಾನವೀಯ ಕೆಲಸವನ್ನು ಯಾರೂ ಮಾಡಬಾರದು.</p>



<p class="wp-block-paragraph">ಆದರೆ ಒಬ್ಬ ಹಿರಿಯ ರಾಜಕಾರಣಿಯಾಗಿ, ಮಾಜಿ ಮುಖ್ಯಮಂತ್ರಿಯಾಗಿ, ಹಾಲಿ ಕೇಂದ್ರ ಸಚಿವರೂ ಆದ ಕುಮಾರಸ್ವಾಮಿಯವರು ಈ ಕನಿಷ್ಠ ಸೌಜನ್ಯವನ್ನೂ ಕಳೆದುಕೊಂಡವರಂತೆ “ಆಸ್ಪತ್ರೆಯಲ್ಲಿರುವ ಸಚಿವರ ಆರೋಗ್ಯ ಸ್ಥಿತಿ ಯಾಕೆ ಮುಚ್ಚಿಟ್ಟಿದ್ದೀರಿ? ಅವರಿಂದ ಹೆಬ್ಬೆಟ್ಟು ಒತ್ತಿಸಿಕೊಳ್ಳುವುದಕ್ಕಾ?” ಎಂದು ಕೇಳಿದ್ದಾರೆ. ಈ ಮಾತಿನಲ್ಲಿ ರಾಜಕಾರಣದ ಕಾಲೆಳೆಯುವಿಕೆಯನ್ನು ಬಿಟ್ಟರೆ, ಸಾಮಾಜಿಕ ಕಾಳಜಿಯಾಗಲಿ, ಮಾನವೀಯ ಸೌಜನ್ಯವಾಗಲಿ ಕಾಣಿಸದು. ಒಬ್ಬ ವ್ಯಕ್ತಿ ಸಾವುಬದುಕಿನ ನಡುವೆ ಆಸ್ಪತ್ರೆಯಲ್ಲಿ ನರಳುತ್ತಿರುವಾಗ; ಆತನ ಕುಟುಂಬಸ್ಥರು ಆತನನ್ನು ಬದುಕಿಸಿಕೊಳ್ಳಲು ಹಗಲಿರುಳೆನ್ನದೆ ಪರಿತಪಿಸುತ್ತಿರುವಾಗ, ಸನ್ಮಾನ್ಯ ಕುಮಾರಸ್ವಾಮಿಯವರಿಗೆ ರಾಜಕೀಯವೇ ಮುಖ್ಯವಾಯ್ತಾ?</p>



<p class="wp-block-paragraph">ಸ್ವತಃ ಕುಮಾರಸ್ವಾಮಿಯವರೇ ಹೇಳಿಕೊಳ್ಳುವಂತೆ, ಅವರಿಗೆ ಎರಡೆರಡು ಬಾರಿ ಓಪನ್‌ ಹಾರ್ಟ್‌ ಸರ್ಜರಿಯಾಗಿದೆ. ಕೆಲ ದಿನಗಳ ಹಿಂದಷ್ಟೇ ಸ್ಟ್ರೋಕ್‌ಗೆ ತುತ್ತಾಗಿ ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆಯ ಬದುಕು, ಆತಂಕ, ಭರವಸೆಗಳು ಅವರಿಗೆ ಹೊಸದೇನೂ ಅಲ್ಲ. ದೇವರ ದಯೆಯಿಂದ, ಪ್ರತಿ ಸಲವೂ ಅವರು ಚೇತರಿಸಿಕೊಂಡು ಹೊರಬಂದಿದ್ದಾರೆ. ಇನ್ನೂ ಹಲವು ಕಾಲ ಅವರು ಇಷ್ಟೇ ಆರೋಗ್ಯದಿಂದ ನಳನಳಿಸುತ್ತಿರಲಿ ಎಂದೇ ಪ್ರತಿಯೊಬ್ಬರು ಹಾರೈಸೋಣ. ಅಷ್ಟೆಲ್ಲ ಅನುಭವ ಇದ್ದಾಗ್ಯೂ ಸಚಿವ ಸುಧಾಕರ್‍‌ ಅವರ ಕುಟುಂಬದ ಆತ್ಮಸ್ಥೈರ್ಯವನ್ನು ಉಡುಗಿಸುವಂತಹ ಈ ಆರೋಪ ಮಾಡುತ್ತಾರೆಂದರೆ ಏನೆನ್ನಬೇಕು?</p>



<p class="wp-block-paragraph">ರಾಜಕಾರಣದ ಕೆಸರೆರಚಾಟ ಎಷ್ಟೇ ಅತಿರೇಕಕ್ಕೆ ಹೋದರೂ, ವೈಯಕ್ತಿಕ ಬದುಕಿನಲ್ಲಿ ಕಹಿಗಳು ಕಾಳುಗಟ್ಟದಂತೆ ನಡೆದುಕೊಂಡು ಬಂದ ಮೇಲ್ಪಂಕ್ತಿ ಉದಾಹರಣೆಗಳು ಸಾಕಷ್ಟಿವೆ. ರಾಜಕಾರಣ ಇವತ್ತು ಸಂಪೂರ್ಣ ಬದಲಾಗಿದೆ; ಬದಲಾಗಿದೆ ಎನ್ನುವುದಕ್ಕಿಂತ, ಹೊಲಸಾಗಿದೆ ಎನ್ನುವುದೇ ಸೂಕ್ತವೇನು. ಆದಾಗ್ಯೂ ಸಾವು-ನೋವಿನ ಸಂದರ್ಭದಲ್ಲಿ ಸ್ಪಂದಿಸುವ ಗುಣಗಳನ್ನು ಇವತ್ತಿಗೂ ರಾಜಕಾರಣಿಗಳಲ್ಲಿ ಕಾಣುತ್ತೇವೆ. ಸಿದ್ದರಾಮಯ್ಯನವರ ಪುತ್ರ ಅಕಾಲಿಕ ಮರಣಕ್ಕೆ ತುತ್ತಾದಾಗ, ರಾಜಕೀಯ ಕಡು ಎದುರಾಳಿಯಾದ ಯಡಿಯೂರಪ್ಪನವರು ಪಾರ್ಥಿವ ಶರೀರದ ಮುಂದೆಯೇ ತಬ್ಬಿ ಸಂತೈಸಿದ ಚಿತ್ರ ಕಣ್ಣಿಗೆ ಕಟ್ಟಿದಂತಿದೆ. ಸೈದ್ದಾಂತಿಕವಾಗಿ ಕಡು ಕೋಮುವಾದಿಯಂತೆ ವರ್ತಿಸುವ ಬಸನಗೌಡ ಯತ್ನಾಳರು, ಸದನದಲ್ಲಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಸಂದರ್ಭದಲ್ಲಿ, ಕಲಾಪ ಮುಗಿಯುತ್ತಿದ್ದಂತೆ ಸಿದ್ದರಾಮಯ್ಯ ಆಸ್ಪತ್ರೆಗೆ ಭೇಟಿ ಕೊಟ್ಟು ವಿಚಾರಿಸಿದ್ದುಂಟು. ಸಿದ್ದರಾಮಯ್ಯನವರು ಕಾಲಿಗೆ ಏಟು ಮಾಡಿಕೊಂಡು ವ್ಹೀಲ್‌ ಚೇರ್‍‌ನಲ್ಲಿದ್ದ ಅವಧಿಯ ಒಂದು ಸಭೆಯಲ್ಲಿ ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ವೇದಿಕೆಗೆ ಬಂದಾಗ, ತ್ರಾಸಿನಿಂದ ಏಳಲು ಮುಂದಾದಾದರು. ಆಗ ರಾಜನಾಥರು ತಾವೇ ಖುದ್ದಾಗಿ ಅವರ ಬಳಿಹೋಗಿ, ಕುರ್ಚಿಯಲ್ಲೇ ಕೂತಿರುವಂತೆ ಒತ್ತಾಯಿಸಿ, ಆರೋಗ್ಯ ವಿಚಾರಿಸಿ “ನಿಮ್ಮಂತವರು ಬೇಗ ಗುಣಮುಖರಾಗಿ ರಾಜಕೀಯಕ್ಕೆ ಮರಳಬೇಕು” ಎಂದು ಹಾರೈಸಿದ್ದರು. ಅಷ್ಟೇ ಯಾಕೆ, ದೇವೇಗೌಡರು ತಮ್ಮ ಕಚೇರಿಗೆ ಬಂದಾಗಲೆಲ್ಲ ಪ್ರಧಾನಿ ಮೋದಿಯವರು ತಾವೇ ಎದ್ದು ಹೋಗಿ ಅವರನ್ನು ಸ್ವಾಗತಿಸಿ, ಅವರಿಗೆ ಕಂಫರ್ಟ್‌ ಮಾಡಿಕೊಡುತ್ತಿರೋದನ್ನೂ ನಾವು ಕಂಡಿದ್ದೇವೆ. ಒಳಗಿನ ಲೆಕ್ಕಾಚಾರಗಳು ಏನೇ ಇರಲಿ, ಆದರೆ ಮಾನವೀಯವಾಗಿ ಪ್ರಕಟಗೊಳ್ಳಬೇಕಾದ ಸಂದರ್ಭಗಳು ಎದುರಾದಾಗ ರಾಜಕಾರಣಿಯಾದವನು ಬಹಳ ಎಚ್ಚರಿಕೆಯಿಂದ ಅಭಿವ್ಯಕ್ತಗೊಳ್ಳಬೇಕಾಗುತ್ತದೆ. ಆಗಲೇ ಒಂದು ಸೌಜನ್ಯಮಯ ವಾತಾವರಣದ ಪಳೆಯುಳಿಕೆಯನ್ನು ಮುಂದಿನ ಪೀಳಿಗೆಗೆ ಬಿಟ್ಟುಹೋಗಲು ಸಾಧ್ಯ. ಒಂದುವೇಳೆ, ಮತ್ತೊಬ್ಬರ ಸಾವು-ನೋವು-ಆರೋಗ್ಯದ ಕುರಿತು ಖಚಿತ ಮಾಹಿತಿ ಇದ್ದಾಗ್ಯೂ, ಅದನ್ನು ರಾಜಕೀಯ ಲಾಭಕ್ಕೋಸ್ಕರ ಬಳಸಿಕೊಳ್ಳಬಾರದೆನ್ನುವ ಎಚ್ಚರಿಕೆ ಒಬ್ಬ ರಾಜಕಾರಣಿಗೆ ಇರಲೇಬೇಕಾದ ಮಿನಿಮಮ್‌ ಕನ್ಸರ್ನ್‌.</p>



<p class="wp-block-paragraph">ಆದರೆ ಕುಮಾರಸ್ವಾಮಿಯವರ ಆ ರಾಜಕೀಯ ಆರೋಪದಲ್ಲಿ ಅಂತಹ ಹೊಣೆಗಾರಿಕೆಯೂ ಇರಲಿಲ್ಲ, ಕಾಳಜಿಯೂ ಇರಲಿಲ್ಲ. ಇದ್ದುದು ಕೇವಲ ರಾಜಕಾರಣದ ಜಿದ್ದು ಮಾತ್ರ!!</p>



<p class="wp-block-paragraph">ಒಂದುಕ್ಷಣ ಸುಧಾಕರ್‍‌ ಅವರ ಕುಟುಂಬ ಸದಸ್ಯರ ಸ್ಥಾನದಲ್ಲಿ ನಿಂತು ಕುಮಾರಸ್ವಾಮಿಯವರ ಮಾತುಗಳನ್ನು ಜೀರ್ಣಿಸಿಕೊಳ್ಳಲು ಯತ್ನಿಸಿ ನೋಡಿ, ಮನಸ್ಸಿಗೆ ಅದೆಷ್ಟು ಹಿಂಸೆಯಾಗುತ್ತದೆ. ಕುಮಾರಸ್ವಾಮಿಯವರು ಕಡೇಪಕ್ಷ, ತಾವು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾಗ ತಮ್ಮ ಕುಟುಂಬಸ್ಥರು ಅನುಭವಿಸಿದ ಯಾತನೆಯನ್ನು ನೆನಪಿಸಿಕೊಂಡಿದ್ದರೂ ಇಂತಹ ಮಾತುಗಳನ್ನಾಡುತ್ತಿರಲಿಲ್ಲವೆನಿಸುತ್ತೆ. ಆಸ್ಪತ್ರೆಯಲ್ಲಿದ್ದಾಗ ಮಾತ್ರವಲ್ಲ,&nbsp; ರಾಜಕೀಯ ವಾಗ್ವಾದ- ಸಂಘರ್ಷಗಳು ಅತಿರೇಕಕ್ಕೆ ಹೋದಾಗಲೆಲ್ಲ ಕುಮಾರಸ್ವಾಮಿಯವರ ಆರೋಗ್ಯದ ಬಗ್ಗೆ ಆತಂಕಕ್ಕೆ ಒಳಗಾಗುವ ಅವರ ಕುಟುಂಬಸ್ಥರು ಅವರನ್ನು ದಿಢೀರ್‍‌ ವಿದೇಶ ಪ್ರವಾಸಕ್ಕೆ ಕರೆದೊಯ್ದು, ಟೆನ್ಷನ್ನುಗಳಿಂದ ದೂರ ಮಾಡುವುದನ್ನೂ ನಾವು ನೋಡಿದ್ದೇವೆ. ಇದೇ ಒತ್ತಡದಲ್ಲಿದ್ದರೆ, ಅವರ ಆರೋಗ್ಯದ ಮೇಲೆ ಎಂಥಾ ದುಷ್ಪರಿಣಾಮ ಉಂಟಾಗುತ್ತದೋ ಎಂಬ ಆತಂಕ ಅದಕ್ಕೆ ಕಾರಣ. ಇದೆಲ್ಲವನ್ನು ಅರ್ಥ ಮಾಡಿಕೊಳ್ಳದಷ್ಟು ಅಸೂಕ್ಷ್ಮರಾ ಈ ಕುಮಾರಸ್ವಾಮಿಯವರು?</p>



<p class="wp-block-paragraph">ಸಾಮಾನ್ಯವಾಗಿ ಬೇರೆ ಯಾರೋ ನಮ್ಮ ಮೇಲೆ ಆರೋಪ ಹೊರಿಸಿ, ಆ ಆರೋಪಕ್ಕೆ ನಾವು ಪ್ರತಿಕ್ರಿಯಿಸುವಾಗ ಉದ್ವೇಗದಲ್ಲೋ, ಆವೇಶದಲ್ಲೋ ನಮ್ಮ ನಾಲಿಗೆ ಅಸೂಕ್ಷ್ಮತೆಯ ಮಾತುಗಳಿಂದ ಜಾರಿಬಿಡುವ ಸಂದರ್ಭ ಇರುತ್ತದೆ. ಅದನ್ನು ನಾವು ಮನ್ನಿಸಬಹುದು. ಆದರೆ ನಾವೇ ಬೇರೊಬ್ಬರ ಮೇಲೆ ಆರೋಪ ಹೊರಿಸುವಾಗ ಅಂತಹ ಉದ್ವೇಗ, ಆವೇಶಗಳಿಗೆ ಆಸ್ಪದವಿರುವುದಿಲ್ಲ. ಬಹಳ ಕಂಪೋಸ್ಡ್‌ ರೀತಿಯಲ್ಲಿ ನಮ್ಮ ಮಾತುಗಳಿರುತ್ತವೆ; ನಮ್ಮ ಮನಸ್ಸಿನ ಮೇಲೂ ಒತ್ತಡವಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಆಡುವ ಅಸೂಕ್ಷ್ಮ ಮಾತುಗಳಿಗೆ ರಿಯಾಯಿತಿ ಕೊಡಲಾಗದು. ಕುಮಾರಸ್ವಾಮಿಯವರು, ಸಚಿವ ಸುಧಾಕರ್‍‌ ಅವರ ಆರೋಗ್ಯ ಪರಿಸ್ಥಿತಿಯನ್ನು ಕೇಂದ್ರೀಕರಿಸಿಕೊಂಡು ಆಡಿದ ಆ ಮಾತು ಪ್ರತಿಕ್ರಿಯೆ ರೂಪದಲ್ಲ, ಆರೋಪದ ರೂಪದ್ದು. ಹಾಗಾಗಿ ಕುಮಾರಸ್ವಾಮಿಯವರ ಈ ವರ್ತನೆ ರಾಜಕೀಯ ಪುಟಗಳಲ್ಲಿ ಕೆಟ್ಟ ಉದಾಹರಣೆಯಾಗಿ ದಾಖಲಾಗಲಿದೆ.</p>



<p class="wp-block-paragraph">ಇವರು ಇತ್ತೀಚೆಗೆ ಹೀಗೆ ಬದಲಾದದ್ದೋ, ಅಥವಾ ನನ್ನ ಗೆಳೆಯ ಹೇಳಿದಂತೆ ಮೊದಲಿನಿಂದಲೂ ಇದ್ದುದೇ ಹೀಗಾ?</p>
]]></content:encoded>
					
		
		
			</item>
	</channel>
</rss>
