<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ಅಂಕಣ &#8211; Peepal Media</title>
	<atom:link href="https://peepalmedia.com/category/opinion-articles/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 16 Jun 2026 09:34:05 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>ಅಂಕಣ &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಬೊಗಸೆಗೆ ದಕ್ಕಿದ್ದು- 84 : ಶೃಂಗೇರಿ ರೈಲು ಮಾರ್ಗದ ಹಿಂದಿನ ಕಾರ್ಪೊರೇಟ್ ದೋಚು ಯೋಜನೆ!</title>
		<link>https://peepalmedia.com/corporate-takeover-scheme-behind-the-sringeri-railway-line/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 16 Jun 2026 09:34:04 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://peepalmedia.com/?p=80068</guid>

					<description><![CDATA[&#8220;..ಇತಿಹಾಸ ಮತ್ತು ಸಾಮಾನ್ಯ ಜ್ಞಾನ ಹೊಂದಿರುವ ಯಾರಿಗಾದರೂ, ಜನರ ಅಭಿವೃದ್ಧಿಗಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂಬ ವಾದವು ಟೊಳ್ಳಾಗಿ ಕಾಣಿಸುತ್ತದೆ..&#8221; ನಿಖಿಲ್ ಕೋಲ್ಪೆಯವರ ಬರಹದಲ್ಲಿ ಒಟ್ಟು 332 ಕಿಲೋಮೀಟರ್ ಇರಲಿರುವ, 3,300 ಕೋಟಿ ರೂ. ವೆಚ್ಚದ ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲು ಯೋಜನೆಗೆ ಕೇಂದ್ರ ರೈಲ್ವೇ ಸಚಿವಾಲಯವು ಅಂತಿಮ ಸ್ಥಳ ಸಮೀಕ್ಷೆಗೆ ಹಸಿರು ನಿಶಾನೆ ತೋರಿದಾಗ, ಅದನ್ನು ಸಾರಿಗೆ ಸಂಪರ್ಕದ ಒಂದು ಭಾರೀ ಕೊಡುಗೆಯಾಗಿ ಸಾರ್ವಜನಿಕರಿಗೆ ತೋರಿಸಲಾಯಿತು. ರೈಲು ರಾಜ್ಯ ಸಚಿವ ವಿ. ಸೋಮಣ್ಣ ಕರ್ನಾಟಕದವರೇ ಆಗಿದ್ದು, ಈ ಭಾಗದ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p class="wp-block-paragraph">&#8220;..ಇತಿಹಾಸ ಮತ್ತು ಸಾಮಾನ್ಯ ಜ್ಞಾನ ಹೊಂದಿರುವ ಯಾರಿಗಾದರೂ, ಜನರ ಅಭಿವೃದ್ಧಿಗಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂಬ ವಾದವು ಟೊಳ್ಳಾಗಿ ಕಾಣಿಸುತ್ತದೆ..&#8221; ನಿಖಿಲ್ ಕೋಲ್ಪೆಯವರ ಬರಹದಲ್ಲಿ</p>
</blockquote>



<p class="wp-block-paragraph">ಒಟ್ಟು 332 ಕಿಲೋಮೀಟರ್ ಇರಲಿರುವ, 3,300 ಕೋಟಿ ರೂ. ವೆಚ್ಚದ ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲು ಯೋಜನೆಗೆ ಕೇಂದ್ರ ರೈಲ್ವೇ ಸಚಿವಾಲಯವು ಅಂತಿಮ ಸ್ಥಳ ಸಮೀಕ್ಷೆಗೆ ಹಸಿರು ನಿಶಾನೆ ತೋರಿದಾಗ, ಅದನ್ನು ಸಾರಿಗೆ ಸಂಪರ್ಕದ ಒಂದು ಭಾರೀ ಕೊಡುಗೆಯಾಗಿ ಸಾರ್ವಜನಿಕರಿಗೆ ತೋರಿಸಲಾಯಿತು. ರೈಲು ರಾಜ್ಯ ಸಚಿವ ವಿ. ಸೋಮಣ್ಣ ಕರ್ನಾಟಕದವರೇ ಆಗಿದ್ದು, ಈ ಭಾಗದ ಜನರಿಗೆ ಈ ಯೋಜನೆ ತಂದು ಭಾರೀ ಸಾಧನೆ ಮಾಡಿದ್ದಾರೆ ಎಂದು ಮಾಧ್ಯಮಗಳು ರಂಜಿಸಿ ಬರೆದವು. ಈ ರೈಲು ಮಾರ್ಗವು ಕರ್ನಾಟಕ ಕರಾವಳಿ ಮತ್ತು ಮಲೆನಾಡಿನ ನಾಲ್ಕೈದು ಜಿಲ್ಲೆಗಳಿಗೆ ಸ್ವರ್ಗದ ಬಾಗಿಲನ್ನೇ ತೆರೆಯಲಿದೆ ಎಂದು ಬಿಂಬಿಸಲಾಯಿತು. ಸರಕಾರಿ ಯಂತ್ರ ಮತ್ತು ಸ್ಥಳೀಯ ಪ್ರತಿನಿಧಿಗಳು ಸೇರಿ, ಈ ಮಾರ್ಗಕ್ಕೆ- ಕರಾವಳಿಯ ಜೊತೆಗೆ ಮಲೆನಾಡು ಮತ್ತು ಒಳನಾಡನ್ನು ಸಂಪರ್ಕಿಸಿ, ಆಧುನೀಕರಿಸುವ ಸೇತುವೆ ಎಂದು- ಅವಸರವಸರವಾಗಿ ಚಾಲನೆ ನೀಡಿದರು. ಇದು ಐತಿಹಾಸಿಕ ದೇವಾಲಯವಾದ ಶೃಂಗೇರಿಗೆ ಸುಗಮ ತೀರ್ಥಯಾತ್ರೆ ಮತ್ತು ಕಾಫಿ, ಭತ್ತ, ಅಡಿಕೆ ಬೆಳೆಯುವ ಒಳನಾಡಿನ ಪ್ರದೇಶಗಳಿಗೆ ಆರ್ಥಿಕ ಲಾಭ ತರುವುದೆಂದು ಭಕ್ತರಿಗೆ ಮತ್ತು ರೈತರಿಗೆ ಒಟ್ಟಾಗಿ ಗಾಳ ಹಾಕಲಾಯಿತು. ರೈತರು ತಮ್ಮ ಬೆಳೆಗಳನ್ನು ಸುಲಭವಾಗಿ ಬಂದರುಗಳಿಗೆ ಸಾಗಿಸಬಹುದು ಎಂಬ ಕಲ್ಪನಾ ಜಾಲವನ್ನು ಬೀಸಲಾಯಿತು. ಆದರೆ, ಹಾಗಾಗುವುದೇ? ಅಥವಾ ಅದು ಕರಾವಳಿ ಮತ್ತು ಮಲೆನಾಡು ಮಾತ್ರವಲ್ಲ; ಇಡೀ ಪ್ರದೇಶದ ಮೇಲೆ ಪ್ರಭಾವ ಬೀರುವ ಜೀವನಾಧಾರವಾದ ಪಶ್ಚಿಮ ಘಟ್ಟಗಳ ಸೂಕ್ಷ್ಮವಾದ ಪರಿಸರ ವ್ಯವಸ್ಥೆಗೇ ಸರಿಪಡಿಸಲಾಗದ ವಿನಾಶವನ್ನು ತರಲಿದೆಯೆ? ಪರಿಸರ ಪ್ರೇಮಿಗಳು ಈಗಾಗಲೇ ತಮ್ಮ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ ಮತ್ತು ತಮ್ಮ ವಾದಗಳನ್ನು ಮುಂದಿರಿಸಿದ್ದಾರೆ.</p>



<p class="wp-block-paragraph">ನಾನೇನೂ ಪರಿಸರ ಪತ್ರಕರ್ತನೂ ಅಲ್ಲ; ಪರಿಸರ ತಜ್ಞನೂ ಅಲ್ಲ. ಆದರೆ, ದೇಶ ವಿದೇಶಗಳಲ್ಲಿ ಬಂಡವಾಳವಾದಿಗಳು ಅಭಿವೃದ್ಧಿಯ ಹೆಸರಿನಲ್ಲಿ ನಡೆಸಿದ ಪರಿಸರ ವಿನಾಶಗಳನ್ನು, ಅದರಿಂದ ಸಾಮಾನ್ಯ ಬಡಜನರು, ರೈತರ ಜೀವನದ ಮೇಲಾದ ಆರ್ಥಿಕ, ಸಾಮಾಜಿಕ ಪರಿಣಾಮಗಳು ಮತ್ತು ಸಾಂಸ್ಕೃತಿಕ ಆಘಾತಗಳು, ಅವರು ಅನುಭವಿಸಿದ ಸಂಕಷ್ಟಗಳನ್ನು ಸ್ವಲ್ಪ ಮಟ್ಟಿಗಾದರೂ ತಿಳಿದುಕೊಂಡಿದ್ದೇನೆ. ಹಾಗಾಗಿ ಇದು ಅಧಿಕಾರಯುತ ಪ್ರತಿಪಾದನೆಯಲ್ಲ; ಕೇವಲ ಜನ ಸಾಮಾನ್ಯರ ಚಿಂತನೆಗಾಗಿ ಮತ್ತು ನಿರ್ಧಾರಕ್ಕಾಗಿ ಮುಂದಿಡುತ್ತಿರುವ ಕೆಲವು ಮೂಲಭೂತ ಮತ್ತು ವಾಸ್ತವಿಕ ಅಂಶಗಳ ವಿವರಗಳು, ಪ್ರಶ್ನೆಗಳು ಅಷ್ಟೇ. ಈ ಯೋಜನೆಯಿಂದ ಆಗಬಹುದಾದ ಪಾರಿಸರಿಕ, ಸಾಮಾಜಿಕ, ಸಾಂಸ್ಕೃತಿಕ ಹಾನಿಯನ್ನು ತಜ್ಞರೇ ಅಂದಾಜು ಮಾಡಿ ಜನರಿಗೆ ತಿಳುವಳಿಕೆ ನೀಡಬೇಕು.</p>



<p class="wp-block-paragraph">ಅದೇನೇ ಇರಲಿ; ಇತಿಹಾಸ ಮತ್ತು ಸಾಮಾನ್ಯ ಜ್ಞಾನ ಹೊಂದಿರುವ ಯಾರಿಗಾದರೂ, ಜನರ ಅಭಿವೃದ್ಧಿಗಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂಬ ವಾದವು ಟೊಳ್ಳಾಗಿ ಕಾಣಿಸುತ್ತದೆ. ಈ ಯೋಜನೆಯ ಅಡಿಪಾಯವೇ ಈ ಉಪಖಂಡದಲ್ಲಿ ಹಾಕಲಾದ ಮೊದಲ ರೈಲು ಹಳಿಗಳಷ್ಟೇ ಹಳೆಯದಾದ ಕುತಂತ್ರವನ್ನು ಅನುಸರಿಸುತ್ತಿದೆ. ಅದೆಂದರೆ, ಕೈಗಾರಿಕಾ ಪ್ರಮಾಣದ ಗಣಿಗಾರಿಕೆ ಮತ್ತು ಕೈಗಾರಿಕಾ ಸಾರಿಗೆಯ ಬೃಹತ್ ಕಾರಿಡಾರ್ ರಚನೆಯನ್ನು ಮರೆಮಾಚಲು ಸಾರ್ವಜನಿಕ ಸಾರಿಗೆ ಸಂಪರ್ಕ, ಪ್ರಯಾಣಿಕರ ಸೌಲಭ್ಯ ಮತ್ತು “ಅಭಿವೃದ್ಧಿ” ಎಂಬ ಬಣ್ಣದ ಕೊಡೆಯನ್ನು ಬಿಡಿಸುವುದು. ಬ್ರಿಟಿಷರು ಮಾಡಿದ್ದು ಇದನ್ನೇ, ಬಂಡವಾಳಶಾಹಿಗಳು ಜಗತ್ತಿನಾದ್ಯಂತ ಮಾಡಿರುವುದು ಇದನ್ನೇ ಮತ್ತು ಸ್ವಾತಂತ್ರ್ಯೋತ್ತರದಲ್ಲಿ ನಮ್ಮದೇ ಸರಕಾರಗಳು ಮಾಡಿರುವುದು ಇದನ್ನೇ ಮತ್ತು ಈಗಿನ ಕೇಂದ್ರ ಸರಕಾರ ಮಾಡುತ್ತಿರುವುದೂ ಇದನ್ನೇ.</p>



<p class="wp-block-paragraph">ಸಾಮ್ರಾಜ್ಯಶಾಹಿ ಶೋಷಣೆಯ ಭೂತ<br>ಶೃಂಗೇರಿ ರೈಲು ಜೋಡಣೆ ಯೋಜನೆಯ ನಿಜವಾದ ಪೂರ್ವಜರನ್ನು ಪತ್ತೆಹಚ್ಚಲು, ಬ್ರಿಟಿಷ್ ವಸಾಹತುಶಾಹಿ ಆಡಳಿತವು ಭಾರತದಾದ್ಯಂತ ರೈಲ್ವೇಗಳನ್ನು ನಿರ್ಮಾಣ ಪ್ರಾರಂಭಿಸಿದ 1850ರ ದಶಕವನ್ನು ಹಿಂತಿರುಗಿ ನೋಡಬೇಕು. ಭಾರತೀಯ ಪ್ರಯಾಣಿಕರಿಗಾಗಿ ಸಾಮ್ರಾಜ್ಯಶಾಹಿ ಯೋಜಕರು ಜನಹಿತ ಚಿಂತನೆಯಿಂದ ರೈಲು ಹಳಿಗಳನ್ನು ಹಾಕಲಿಲ್ಲ; ಈ ವ್ಯವಸ್ಥೆಯನ್ನು ಎರಡು ವ್ಯಾಪಾರಿ ಲೆಕ್ಕಾಚಾರ ಮತ್ತು ಕಾರ್ಯತಂತ್ರಗಳ ಅನಿವಾರ್ಯ ಅಗತ್ಯಗಳಿಗಾಗಿ ನಿರ್ಮಾಣ ಮಾಡಲಾಯಿತು. ಸ್ಥಳೀಯ ರಾಜರ ರಾಜ್ಯ, ಸಂಸ್ಥಾನಗಳ ಸುತ್ತ ಮಿಲಿಟರಿ ಬಲವರ್ಧನೆ ಮತ್ತು ಸರಕುಗಳು, ಅಧಿಕಾರಿಗಳು ಮತ್ತು ಸೈನಿಕರ ತ್ವರಿತ ಸಾಗಾಟ. ದಟ್ಟವಾದ ಮರದ ಕಾಡುಗಳು, ಕಲ್ಲಿದ್ದಲು ಗಣಿಗಳನ್ನು ಮತ್ತು ಹತ್ತಿ ಮುಂತಾದ ಕಚ್ಚಾವಸ್ತು ಬೆಳೆಪ್ರದೇಶಗಳನ್ನು ಸಂಪರ್ಕಿಸುವ &#8211; ಸಂಪನ್ಮೂಲ ಸಮೃದ್ಧ ಒಳಪ್ರದೇಶಗಳನ್ನು ಭೇದಿಸಿ ಅವುಗಳನ್ನು ಪ್ರಮುಖ ಪ್ರೆಸಿಡೆನ್ಸಿಗಳ ಅಧೀನದಲ್ಲಿದ್ದ ಬಂದರುಗಳಿಗೆ ನೇರವಾಗಿ ಸಾಗಿಸಲು ಈ ಜಾಲವನ್ನು ವ್ಯವಸ್ಥಿತವಾಗಿ ರೂಪಿಸಲಾಗಿದೆ. ಇದು ಇಂಗ್ಲೆಂಡಿನ ಕೈಗಾರಿಕೆಗೆಗಳಿಗೆ ಅಗತ್ಯವಾಗಿತ್ತು. ಹಾಗಾಗಿ ಅವರು ಬಂಡವಾಳ ಹೂಡಿದರು. ಕಾಡುಗಳನ್ನು ಯದ್ವಾತದ್ವಾ ಕಡಿದು ಭಾರೀ ದಿಮ್ಮಿಗಳನ್ನು ರೈಲ್ವೇ ಸ್ಲೀಪರ್ ಮಾಡಲು, ಅಧಿಕಾರಿ ವರ್ಗಕ್ಕೆ ಐಷಾರಾಮಿ ಬಂಗಲೆಗಳನ್ನು ಕಟ್ಟಲು, ಭಾರತದ ಒಡಲನ್ನು ದೋಚಿದ ಸರಕುಗಳನ್ನು ರಫ್ತು ಮಾಡಲು ರೈಲ್ವೇಯನ್ನು ಬಳಸಲಾಯಿತು.</p>



<p class="wp-block-paragraph">ಜೊತೆಗೆ ಇದು ಆಂತರಿಕ ಸಾರಿಗೆ ವೆಚ್ಚವನ್ನು ಕಡಿಮೆ ಮಾಡಿತು, ಕ್ಷಿಪ್ರ ಪ್ರಯಾಣ ಸಾಧ್ಯ ಮಾಡಿತು. ಹೌದು. ಆದರೆ, ಯಾರಿಗೆ? ಬ್ರಿಟಿಷ್ ಪ್ರಭುತ್ವ, ವ್ಯಾಪಾರಿಗಳು ಮತ್ತು ಭಾರತೀಯ ಶ್ರೀಮಂತರಿಗೆ,ಮಾತ್ರಜಮೀನ್ದಾರರಿಗೆ! ಒಳನಾಡಿನ ಸಂಪತ್ತನ್ನು ಪರಿಣಾಮಕಾರಿಯಾಗಿ ದೋಚಿ ಬರಿದಾಗಿಸಬಹುದು ಮತ್ತು ಸಮುದ್ರಗಳಾದ್ಯಂತ ಸಾಗಿಸಬಹುದು ಎಂದು ಈ ವ್ಯಾಪಾರಿ ಮತ್ತು ಆಳುವ ವರ್ಗಗಳು ಕಂಡುಕೊಂಡವು. ಐಷಾರಾಮಿ ಬೋಗಿಗಳನ್ನು ಹೊಂದಿದ ರೈಲುಗಳಲ್ಲಿ- ಕಣ್ಣುಕಟ್ಟಿಗೆ ಕುರಿಗಳಂತೆ ಕಿಕ್ಕಿರಿದು ತುಂಬಿರುತ್ತಿದ್ದ ಒಂದೆರಡು ಡಬ್ಬಿಗಳನ್ನು ಸಾಮಾನ್ಯ ಭಾರತೀಯರಿಗಾಗಿ ಓಡಿಸಲಾಯಿತು. ಡಬ್ಬಿಗಳಲ್ಲಿ ತಾರತಮ್ಯದ ವರ್ಗಗಳನ್ನು ಪರಿಚಯಿಸಲಾಯಿತು. (ಈಗಲೂ ಭಾರತೀಯ ರೈಲ್ವೇಯು ಇದೇ ಮಾದರಿಯಲ್ಲಿ ಮುಂದುವರಿಯುತ್ತಿದ್ದು, ವಂದೇ ಭಾರತ್ ರೈಲು ಮತ್ತು ಬುಲೆಟ್ ಟ್ರೈನ್‌ಗಳ ಪ್ರಚಾರದ ಹಿನ್ನೆಲೆಯಲ್ಲಿ ಈ ಕುರಿತು ಮುಂದೊಮ್ಮೆ ಆಪ್ತವಾಗಿ ಬರೆಯುತ್ತೇನೆ.)</p>



<p class="wp-block-paragraph">​ಈ ನಿರ್ದಿಷ್ಟ ಪ್ರಾದೇಶಿಕ ಭೌಗೋಳಿಕತೆಯೊಳಗೆ ಕೂಡಾ ಇತಿಹಾಸವು ಬ್ರಿಟಿಷ್ ವಸಾಹತುಶಾಹಿಗಳ ಒಂದು ನೀಲನಕ್ಷೆಯನ್ನು ಬಿಟ್ಟುಹೋಗಿತ್ತು. ಬ್ರಿಟಿಷ್ ವಸಾಹತುಶಾಹಿ ಕುರುಹುಗಳನ್ನು ಅಳಿಸಲಾಗುವುದು ಎಂದು ಹೇಳಿಕೊಳ್ಳುವ ಸರಕಾರವೇ ಅದನ್ನು ಮತ್ತೆ ಜೀವಂತಗೊಳಿಸುತ್ತಿದೆ. 1907ರಲ್ಲಿ ತೆರೆಯಲಾದ ಹಳೆಯ ಶಿವಮೊಗ್ಗ ಟ್ರಾಮ್‌ವೇಯಂತಹ ಮಲೆನಾಡಿನ 20ನೇ ಶತಮಾನದ ಆರಂಭದ ಸಾರಿಗೆ ಮಾರ್ಗಗಳನ್ನು ಗ್ರಾಮಸ್ಥರಿಗಾಗಿ ನಿರ್ಮಿಸಲಾಗಿಲ್ಲ. ಕುದುರೆಮುಖ, ಶಂಕರಗುಡ್ಡ ಮತ್ತು ಕುಂಸಿ ಶ್ರೇಣಿಗಳಿಂದ ಮ್ಯಾಂಗನೀಸ್ ಮತ್ತು ಕಬ್ಬಿಣದ ಅದಿರನ್ನು ನೇರವಾಗಿ ಬಂದರುಗಳಿಗೆ ಸಾಗಿಸಲು ಈ ಯೋಜನೆಗಳಿಗೆ ಭಾರೀ ಕೈಗಾರಿಕಾ ಸಿಂಡಿಕೇಟ್‌ಗಳು ಹಣಕಾಸು ಒದಗಿಸಿದವು. ಶೃಂಗೇರಿ ಮತ್ತು ಕಾರ್ಕಳದ ಮೂಲಕ ಪ್ರಸ್ತಾವಿತ ಆಧುನಿಕ ಕಾರಿಡಾರ್ ಈ ನಿರ್ದಿಷ್ಟವಾದ ವಸಾಹತುಶಾಹಿ ಮಾರ್ಗ ಸಮೀಕ್ಷೆಯನ್ನು ಅನುಸರಿಸುತ್ತದೆ. ಅದು ನೇರವಾಗಿ ನವ ಮಂಗಳೂರು ಬಂದರಿಗೆ ಭಾರೀ-ಸಾಗಾಟ ಸಂಪರ್ಕವನ್ನು ಸ್ಥಾಪಿಸುತ್ತದೆ.</p>



<p class="wp-block-paragraph">ಅರ್ಥಿಕ ಲೆಕ್ಕಾಚಾರ: ಹಾನಿಯ ಮೌಲ್ಯ ಏನು?<br>ಯೋಜನೆಯ ಹಣಕಾಸು ವ್ಯವಸ್ಥೆಯನ್ನು ಸಾಮಾನ್ಯ ಜ್ಞಾನದಿಂದ ಲೆಕ್ಕಾಚಾರ ಹಾಕಿದರೂ ಅದರ ಕಾರ್ಪೊರೇಟ್ ಉದ್ದೇಶವು ಕೂಡಲೇ ಬಹಿರಂಗವಾಗುತ್ತದೆ. ಪಶ್ಚಿಮ ಘಟ್ಟಗಳ ಕಡಿದಾದ, ಭೌಗೋಳಿಕವಾಗಿ ಅಸ್ಥಿರವಾದ ಭೂಪ್ರದೇಶವನ್ನು ಕತ್ತರಿಸುವ ರೈಲು ಯೋಜನೆಯು ಆಳವಾದ ಸುರಂಗ ಮಾರ್ಗ, ಭೂ-ರಚನೆ ಮತ್ತು ಚಲನೆಗಳಿಗೆ ಅನುಗುಣವಾದ ನಿರ್ಮಾಣಗಳು, ಸೇತುವೆಗಳು ಮತ್ತು ಬೃಹತ್ ವಯಾಡಕ್ಟ್‌ಗಳಿಗೆ ಅಪಾರ ಬಂಡವಾಳ ಬೇಕಾಗುತ್ತದೆ. 3,300 ಕೋಟಿ ರೂ.ಗಳ ಆರಂಭಿಕ ಅಂದಾಜು ಒಂದು ಮೂಲ ಮಾದರಿಯಾಗಿದ್ದು, ಎಂಜಿನಿಯರಿಂಗ್ ಸವಾಲುಗಳು ಹೊರಹೊಮ್ಮುತ್ತಿದ್ದಂತೆ ಇದು ಅನಿವಾರ್ಯವಾಗಿ ಗಗನಕ್ಕೇರಲಿದೆ. ಭಾರತದ ಅನೇಕ ಯೋಜನೆಗಳು ಈ ಅನುಭವವನ್ನು ತೋರಿಸಿಕೊಟ್ಟಿವೆ.</p>



<p class="wp-block-paragraph">​ರೈಲು ಸಾರಿಗೆಯ ಅರ್ಥಶಾಸ್ತ್ರದಲ್ಲಿ, ಪ್ರಯಾಣ ದರವು ಸಾಮಾನ್ಯ ನಾಗರಿಕರಿಗೆ ಕೈಗೆಟುಕುವಂತೆ ಉಳಿಯಲು ಪ್ರಯಾಣಿಕರ ಟಿಕೆಟ್ ಆದಾಯದ ಮೇಲೆ ಸರಕಾರವು ಭಾರೀ ಪ್ರಮಾಣದಲ್ಲಿ ಸಬ್ಸಿಡಿ ನೀಡುತ್ತದೆ. ಗ್ರಾಮೀಣ ಪ್ರಯಾಣಿಕರು ಮತ್ತು ಪ್ರವಾಸಿ ಇತ್ಯಾದಿ ಕಾಲೋಚಿತ (seasonal) ಪ್ರಯಾಣಿಕರಿಗೆ ಟಿಕೆಟ್ ಮಾರಾಟದಿಂದ ಸಾವಿರಾರು ಕೋಟಿ ರೂ.ಗಳ ಬಂಡವಾಳ ಹೂಡಿಕೆಗಳನ್ನು ಮರಳಿ ಪಡೆಯಲು ಸಾಧ್ಯವೇ ಇಲ್ಲ. ಅಥವಾ ಮುಂಗಾರು ಮಳೆಯ ವೇಳೆ ಮಣ್ಣಿನ ಕುಸಿತ, ಗುಡ್ಡ ಜರಿತದಿಂದ ಮತ್ತೆಮತ್ತೆ ಹೂತುಹೋಗುವ ಹಳಿಗಳನ್ನು ತೆರವುಗೊಳಿಸಲು ಅಗತ್ಯವಿರುವ ನಿರ್ವಹಣೆಯ ವೆಚ್ಚವನ್ನೂ ಅದು ಭರಿಸಲು ಸಾಧ್ಯವಿಲ್ಲ. ಹಾಗಾಗಿ- ಆರ್ಥಿಕವಾಗಿ, ಈ ಮಾರ್ಗದಲ್ಲಿ ಪ್ರಯಾಣಿಕ ಕೇಂದ್ರಿತ ರೈಲು ಸಂಚಾರವು ಸಂಪೂರ್ಣವಾಗಿ ಕಾರ್ಯಸಾಧುವಲ್ಲ. ಅದು ಸಮತಟ್ಟಾದ ಬಯಲು ಪ್ರದೇಶಗಳಲ್ಲಿ ಮಾತ್ರ ಸಾಧ್ಯ.</p>



<p class="wp-block-paragraph">ಹಾಗಾದರೆ, ಯೋಜಕರು ಈ ಭಾರಿ ವೆಚ್ಚವನ್ನು ಹೇಗೆ ಹೊಂದಿಸುತ್ತಾರೆ? ಉತ್ತರವೆಂದರೆ, ಬ್ರಿಟಿಷರಿಂದ ಕಲಿತ ಸರಕು ಸಾಗಣೆಯ ಅಡ್ಡ-ಸಬ್ಸಿಡಿಯ ಮಾದರಿಯಲ್ಲಿದೆ. ಅಂದರೆ, ಭಾರೀ ತೂಕದ, ಬೃಹತ್ ಸರಕುಗಳನ್ನು ಸಾಗಿಸಲು ಕಾರ್ಪೊರೇಟ್ ಗಿರಾಕಿಗಳಿಗೆ ಹೆಚ್ಚಿನ ಶುಲ್ಕವನ್ನು ವಿಧಿಸುವ ಮೂಲಕ ವಿಧಿಸುವ ಮೂಲಕ ಭಾರತೀಯ ರೈಲ್ವೇ ತನ್ನ ಪ್ರಾಥಮಿಕ ಲಾಭಾಂಶವನ್ನು ನಿರೀಕ್ಷಿಸುತ್ತದೆ. ಹಣಕಾಸಿನ ಅನುಮತಿಯನ್ನು ಪಡೆಯಲು, ಯೋಜನೆಯು ಕೈಗಾರಿಕಾ ಸರಕುಗಳಿಂದ ಖಾತರಿಪಡಿಸಿದ, ಹೆಚ್ಚಿನ ಪ್ರಮಾಣದ ಆದಾಯವನ್ನು ತೋರಿಸಲೇಬೇಕು. ಈಗ ಅಂತಿಮ ಸಮೀಕ್ಷೆಗೆ ಅನುಮತಿ ಸಿಕ್ಕಿರುವ ಅರ್ಥವೆಂದರೆ, ಆ ರೀತಿಯ ಪ್ರಸ್ತಾಪ ಮತ್ತು ಖಾತರಿಯನ್ನು ಈಗಾಗಲೇ ನೀಡಲಾಗಿದೆ. ಆ ಸರಕು ಈಗ ತೋರಿಕೆಗೆ ಹೇಳಿಕೊಳ್ಳಲಾಗುವಂತೆ ಅಡಿಕೆ, ಭತ್ತ ಅಥವಾ ರೈತರ ಉತ್ಪನ್ನಗಳು ಅಲ್ಲ ಎಂಬುದು ಪೆದ್ದರಿಗೂ ಅರ್ಥವಾದೀತು.</p>



<p class="wp-block-paragraph">ಈ ಯೋಜನೆಯ ಹಣಕಾಸಿನ ಅಡಿಪಾಯವನ್ನು ಪ್ರಮುಖ ಕೈಗಾರಿಕಾ ಒಕ್ಕೂಟಗಳಾದ ಉಕ್ಕು ತಯಾರಕರು, ಕಲ್ಲಿದ್ದಲು ಆಮದುದಾರರು, ಸಿಮೆಂಟ್ ದೈತ್ಯರು ಮತ್ತು ವಾಣಿಜ್ಯ ಮರದ ವ್ಯಾಪಾರಿಗಹ ಬೆನ್ನಿನ ಮೇಲೆ ಹಾಕಲಾಗಿದೆ. ಅದಕ್ಕೆ ಬದಲಾಗಿ ಅವರು ಅಸ್ತಿತ್ವದಲ್ಲಿರುವ ಪಶ್ಚಿಮ ಘಟ್ಟಗಳ ರಸ್ತೆ ಜಾಲಗಳ ಕಟ್ಟುನಿಟ್ಟಾದ ತೂಕದ ಮಿತಿಗಳು, ನಿಯಂತ್ರಕ ಪರಿಶೀಲನೆಗಳು ಮತ್ತು ನಿಧಾನಗತಿ ನಿಯಮ ಮುಂತಾದ ಎಲ್ಲವನ್ನೂ ಉಲ್ಲಂಘಿಸಲು ಪರವಾನಿಗೆಯನ್ನು ಈ ರೈಲ್ವೇ ಮೂಲಕ ಪಡೆಯುತ್ತಾರೆ. ದೈನಂದಿನ ಪ್ರಯಾಣಿಕರು, ಪ್ರವಾಸೋದ್ಯಮ ಇತ್ಯಾದಿಗಳು ಭಾರೀ ವಾಣಿಜ್ಯ ಸರಕು ಸಾಗಣೆಗೆಂದೇ ರೂಪಿಸಲಾಗುತ್ತಿರುವ ಈ ಯೋಜನೆಯನ್ನು ಸಮರ್ಥಿಸಲು ಬಳಸಲಾಗುತ್ತಿರುವ ಒಂದು ಮುಖವಾಡ ಮಾತ್ರ. ಬರೇ ಪ್ರಯಾಣಿಕರನ್ನು ಸಾಗಿಸುವ, ನಷ್ಟ ಖಾತರಿಯಾದ ದುಬಾರಿ ಯೋಜನೆಗೆ ಖಾಸಗಿಯವರು ಏಕೆ ಹಣ ಹಾಕುತ್ತಾರೆ? ಹಿಂದೆ ಇಂಗ್ಲೆಂಡಿನ ಕೈಗಾರಿಕಾ ಹೂಡಿಕೆದಾರರು ನಮ್ಮ ದೇಶವನ್ನು ದೋಚಲು ಬ್ರಿಟಿಷರ ಖಾಸಗಿ ರೈಲು ಯೋಜನೆಗಳಿಗೆ ಬಂಡವಾಳ ಹಾಕಿದಂತೆ, ಭಾರತೀಯ “ಬ್ರಿಟಿಷ್” ಹೂಡಿಕೆದಾರರೂ ನಮ್ಮದೇ ದೇಶವನ್ನು ದೋಚಲು ಸರಕಾರಿ ಹೆಸರಿನ ಖಾಸಗಿ ಬಂಡವಾಳದ ರೈಲು ಯೋಜನೆಗಳಿಗೆ ಬಂಡವಾಳ ಹಾಕುತ್ತಾರೆ. ಯೋಚಿಸಿ ನೋಡಿ: ಶಿವಮೊಗ್ಗ, ಚಿಕ್ಕಮಗಳೂರು ಪ್ರದೇಶದಲ್ಲಿ ಭಾರೀ ವೆಚ್ಚದ ದುಬಾರಿ ರೈಲು ಬೇಕೇ ಬೇಕು ಎನ್ನುವಷ್ಟು ಪ್ರಯಾಣಿಕರ ಒತ್ತಡ ಇದೆಯೇ?</p>



<p class="wp-block-paragraph">ಗಣಿಗಾರಿಕೆಯ ಒಳಸುಳಿ, ಒಳಸುರಿ!<br>ಮಲೆನಾಡು ಮತ್ತು ಮಧ್ಯ ಕರ್ನಾಟಕದ ಕೆಲವು ಪ್ರದೇಶಗಳ ಖನಿಜ ಸಂಪತ್ತನ್ನು ದೋಚುವ ದೀರ್ಘಕಾಲದ ಕಾರ್ಪೊರೇಟ್ ಆಸೆಗಳಿಗೆ ಹೊಂದಿಕೊಂಡು ಈ ರೈಲ್ವೇ ಯೋಜನೆಯ ಭೌಗೋಳಿಕ ಮಾರ್ಗವು ನೇರವಾಗಿ ಸಾಗುತ್ತಿದೆ. ಈ ಪ್ರದೇಶವು ಕಬ್ಬಿಣದ ಅದಿರು ಮತ್ತು ಮ್ಯಾಂಗನೀಸ್‌ನ ಬಹಳಷ್ಟು ಮತ್ತು ಹೆಚ್ಚು ಲಾಭದಾಯಕ ನಿಕ್ಷೇಪಗಳನ್ನು ಹೊಂದಿದೆ. ದಶಕಗಳಿಂದ, ಈ ಬೆಟ್ಟಗಳ ಮೇಲೆ ಭಾರೀ ಗಣಿಗಾರಿಕೆಯ ಕರಿ ನೆರಳು ಆವರಿಸಿದೆ. ಸರಕಾರಿ ಸ್ವಾಮ್ಯದ ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ (KIOCL) ಐತಿಹಾಸಿಕವಾಗಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಬೃಹತ್ ಪ್ರಮಾಣದಲ್ಲಿ ಗುಡ್ಡಗಳ ಮೇಲ್ಮೈಯನ್ನು ಬೆತ್ತಲು ಮಾಡುವ ತೆರೆದ-ಪಟ್ಟಿ-ಗಣಿಗಾರಿಕೆ ಅಂದರೆ, ದೊಡ್ಡ ಪದರಗಳಲ್ಲಿ ಮೆಟ್ಟಲು ಮೆಟ್ಟಲಾಗಿ ಮಣ್ಣನ್ನು ತೆಗೆಯುವ (open-cast strip-mining) ಗಣಿಗಾರಿಕೆ ನಡೆಸುತ್ತಿತ್ತು. ಇದು ನದಿ ಹೂಳು ಮತ್ತು ಅರಣ್ಯ ನಾಶದ ಪರಂಪರೆಯನ್ನೇ ಬಿಟ್ಟುಹೋಯಿತು. 2002ರಲ್ಲಿ ಸುಪ್ರೀಂ ಕೋರ್ಟ್‌ನ ಒಂದು ಮೈಲಿಗಲ್ಲು ತೀರ್ಪು- ಭದ್ರಾ ನದಿಯ ಜಲಾನಯನ ಪ್ರದೇಶವನ್ನು ರಕ್ಷಿಸಲು ಆ ನಿರ್ದಿಷ್ಟ ಪ್ರಮುಖ ಗಣಿಗಾರಿಕೆ ಕಾರ್ಯಾಚರಣೆಗಳನ್ನು ಮುಚ್ಚುವಂತೆ ಆದೇಶಿಸಿದರೂ, ಮಂಗಳೂರಿನಲ್ಲಿರುವ ಅದರ ಬೃಹತ್ ಸಂಸ್ಕರಣಾ ಘಟಕಗಳು, ಬಂದರು ಸೌಲಭ್ಯಗಳು ಮತ್ತು ಪೈಪ್‌ಲೈನ್‌ಗಳು ಸಕ್ರಿಯವಾಗಿವೆ.</p>



<p class="wp-block-paragraph">​ಈ ಖನಿಜಗಳ ಮೇಲಿನ ಕಾರ್ಪೊರೇಟ್ ಹಸಿವು ಎಂದಿಗೂ ಮಾಯವಾಗಿಲ್ಲ. ನೆರೆಯ ಜಿಲ್ಲೆಗಳಾದ ಚಿತ್ರದುರ್ಗ ಮತ್ತು ಬಳ್ಳಾರಿಯಲ್ಲಿ ಖಾಸಗಿ ಗಣಿಗಾರಿಕೆ ಕಂಪನಿಗಳು ಮತ್ತು ಭಾರೀ ಕೈಗಾರಿಕಾ ಸ್ಥಾವರಗಳು ದೊಡ್ಡದಾದ ಲಾಜಿಸ್ಟಿಕ್ ಅಡಚಣೆಯನ್ನು ಎದುರಿಸುತ್ತಿವೆ: ಘಟ್ಟಗಳ ದುರ್ಬಲವಾದ, ಅಂಕುಡೊಂಕಾದ, ಮಳೆಗಾಲದಲ್ಲಿ ಕುಸಿಯುವ ರಸ್ತೆಗಳ ಮೂಲಕ ಭಾರೀ ಕಚ್ಚಾ ವಸ್ತುಗಳನ್ನು ಸಾಗಿಸುವುದು ನಿಧಾನ, ದುಬಾರಿ ಮತ್ತು ಕಾನೂನುಬದ್ಧವಾಗಿ ನಿಯಂತ್ರಣಕ್ಕೆ ಒಳಪಟ್ಟಂತದ್ದು. ಚಿಕ್ಕಮಗಳೂರು ಮತ್ತು ಶಿವಮೊಗ್ಗ ಅರಣ್ಯ ಗಡಿಗಳ ಹೃದಯಭಾಗದ ಮೂಲಕ ಬ್ರಾಡ್-ಗೇಜ್ ರೈಲು ಮಾರ್ಗವನ್ನು ಚಾಲನೆ ಮಾಡುವ ಮೂಲಕ, ಸರಕಾರವು ಖಾಸಗಿ ಉದ್ದಿಮೆಗಳ ಲಾಭಕ್ಕಾಗಿ ಹೆಚ್ಚಿನ ಸಾಮರ್ಥ್ಯದ ಲಾಜಿಸ್ಟಿಕ್ಸ್ ಜಾಲವನ್ನು ವ್ಯವಸ್ಥಿತವಾಗಿ ಬೀಸುತ್ತಿದೆ. ಈ ಮೂಲಸೌಕರ್ಯವು ಕಚ್ಚಾ ಅದಿರನ್ನು ಸಾಗಿಸಿ, ರಫ್ತು ಮಾಡುವ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಬಂದರಿನಿಂದ ಆಮದು ಮಾಡಿಕೊಳ್ಳುವ- ಮುಖ್ಯವಾಗಿ ಅದಾನಿ, ಅಂಬಾನಿಗಳ ಕೈಗಾರಿಕಾ ಕಲ್ಲಿದ್ದಲು ಮತ್ತು ಪೆಟ್ರೋಲಿಯಂನ ಒಳನಾಡಿನ ಸಾಗಣೆಯನ್ನು ಸುಗಮಗೊಳಿಸುತ್ತದೆ. ಈ ಯೋಜನೆಯನ್ನು ಮಲೆನಾಡಿನ ಜನರನ್ನು ಸಾಗಿಸಲು ನಿರ್ಮಿಸಲಾಗುತ್ತಿಲ್ಲ; ಅವರು ಬದುಕುತ್ತಿರುವ ಕಾಲ ಕೆಳಗಿರುವ ಮಣ್ಣನ್ನು ಸಾಗಿಸಲು ಇದನ್ನು ನಿರ್ಮಿಸಲಾಗುತ್ತಿದೆ. ಹಾಗಾಗಿ, ಪ್ರಯಾಣಿಕರಿಗಾಗಿ, ರೈತರಿಗಾಗಿ, ಅಭಿವೃದ್ಧಿಗಾಗಿ ಈ ಯೋಜನೆ ಎಂಬ ಹಸಿಹಸಿ ಸುಳ್ಳನ್ನು ಬಿಟ್ಟುಬಿಡಿ! ಕಾರ್ಪೋರೇಟ್ ಲಾಭಕ್ಕಾಗಿ ಸರಕಾರವು ಈ ಪ್ರದೇಶದ ಜೀವಾಳವಾದ ಪಶ್ಚಿಮ ಘಟ್ಟಗಳನ್ನು ನಾಶಮಾಡುವ ಈ ಮುಂದಾಲೋಚನೆ ಇಲ್ಲದ, ದುರಾಸೆ ಮತ್ತು ದುರಾಲೋಚನೆಗಳ ಯೋಜನೆಗೆ ಕೈಹಾಕಿದೆ ಮತ್ತು ಜನಪ್ರತಿನಿಧಿಗಳು ಜನರ ದೀರ್ಘಕಾಲೀನ ಹಿತಾಸಕ್ತಿಗಳನ್ನು ಮರೆತು, ಕಾರ್ಪೋರೇಟ್ ಹಿತಾಸಕ್ತಿಗಳನ್ನು ರಕ್ಷಿಸಲು, ಎಲೆ ಅಡಿಕೆ ಜಗಿಯುತ್ತಾ ಅಭಿವೃದ್ಧಿಯ ಸಕ್ಕರೆಯಂತ ಮಾತುಗಳನ್ನು ಆಡುತ್ತಿದ್ದಾರೆ.</p>



<p class="wp-block-paragraph">ನಾವೀಗ ಪ್ರಯಾಣಿಕರ ಹಿತದ ಸೋಗಿನ ಹಿಂದಿರುವ ಕಾರ್ಪೋರೇಟ್ ಹಿತಾಸಕ್ತಿಗಳ ಕುರಿತು ಸ್ಥೂಲವಾಗಿ ನೋಡಿದೆವು. ಮುಂದೆ ಈ ಯೋಜನೆಯ ಲಾಜಿಸ್ಟಿಕ್ಸ್ ಮತ್ತು ಅದು ಪಶ್ಚಿಮ ಘಟ್ಟಗಳ ಜೀವವೈವಿಧ್ಯಮಯ ದಟ್ಟ ಹಸಿರು ಕಾಡುಗಳಿಗೆ ತರುವ ಅಪಾಯಗಳನ್ನು, ಇಂತಾ ರೈಲು ಯೋಜನೆಗಳು ಪರಿಸರ ಮತ್ತು ಸಮಾಜಕ್ಕೆ ತಂದ ಜಾಗತಿಕ ದುರಂತ ಅನುಭವಗಳ ಹಿನ್ನೆಲೆಯಲ್ಲಿ ನೋಡೋಣ.</p>
]]></content:encoded>
					
		
		
			</item>
		<item>
		<title>ಬೊಗಸೆಗೆ ದಕ್ಕಿದ್ದು-83 : ಸುವೇಂದು ಅಧಿಕಾರಿ ಎಂಬ ಕುಟಿಲ ಕೌಟಿಲ್ಯ!</title>
		<link>https://peepalmedia.com/crooked-kautilya-who-is-called-suvendu-adhikari/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 12 Jun 2026 13:31:07 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://peepalmedia.com/?p=79837</guid>

					<description><![CDATA[&#8220;..ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ, ಬಂಗಾಳ ರಾಜ್ಯದ ಆಧುನಿಕ ಇತಿಹಾಸದಲ್ಲಿ ಅತ್ಯಂತ ಲಜ್ಜೆಗೆಟ್ಟ, ಲೆಕ್ಕಾಚಾರದ ರಾಜಕೀಯದ ತಿರುವನ್ನು ಪಡೆಯಿತು..&#8221; ನಿಖಿಲ್ ಕೋಲ್ಪೆಯವರ ಬರಹದಲ್ಲಿ ಬಂಗಾಳವನ್ನೂ ಒಳಗೊಂಡ ಮಗಧ ಸಾಮ್ರಾಜ್ಯದ ಸಾಮ್ರಾಟ ಚಂದ್ರಗುಪ್ತ ಮೌರ್ಯನ ಕುಲಗುರು ಕೌಟಿಲ್ಯನಿಗೆ ಆಧುನಿಕ “ಹಿಂದೂ ಸಾಮ್ರಾಜ್ಯ”ದ ಹಳಸಲು ಕನಸು ಮತ್ತು ಅದರ ಹಿಟ್ಲರ್‌ವಾದಿ ಅನುಷ್ಟಾನ ಯತ್ನದಲ್ಲಿ ಒಂದು ದೊಡ್ಡ ಸ್ಥಾನಮಾನ ನೀಡಲಾಗಿದೆ. ಈ ಜಿಗುಟು ಬ್ರಾಹ್ಮಣನ ಜನಪ್ರಿಯ, ರಂಜಕ ಕಥಾನಕದಲ್ಲಿ ಬ್ರಾಹ್ಮಣ ಶ್ರೇಷ್ಟತೆಯ ಹಳಸಲು ಮೌಲ್ಯಗಳಿಗೆ ಒಂದು ರೀತಿಯ ಅಧಿಕೃತತೆ ಮತ್ತು [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p class="wp-block-paragraph">&#8220;..ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ, ಬಂಗಾಳ ರಾಜ್ಯದ ಆಧುನಿಕ ಇತಿಹಾಸದಲ್ಲಿ ಅತ್ಯಂತ ಲಜ್ಜೆಗೆಟ್ಟ, ಲೆಕ್ಕಾಚಾರದ ರಾಜಕೀಯದ ತಿರುವನ್ನು ಪಡೆಯಿತು..&#8221; ನಿಖಿಲ್ ಕೋಲ್ಪೆಯವರ ಬರಹದಲ್ಲಿ</p>
</blockquote>



<p class="wp-block-paragraph">ಬಂಗಾಳವನ್ನೂ ಒಳಗೊಂಡ ಮಗಧ ಸಾಮ್ರಾಜ್ಯದ ಸಾಮ್ರಾಟ ಚಂದ್ರಗುಪ್ತ ಮೌರ್ಯನ ಕುಲಗುರು ಕೌಟಿಲ್ಯನಿಗೆ ಆಧುನಿಕ “ಹಿಂದೂ ಸಾಮ್ರಾಜ್ಯ”ದ ಹಳಸಲು ಕನಸು ಮತ್ತು ಅದರ ಹಿಟ್ಲರ್‌ವಾದಿ ಅನುಷ್ಟಾನ ಯತ್ನದಲ್ಲಿ ಒಂದು ದೊಡ್ಡ ಸ್ಥಾನಮಾನ ನೀಡಲಾಗಿದೆ. ಈ ಜಿಗುಟು ಬ್ರಾಹ್ಮಣನ ಜನಪ್ರಿಯ, ರಂಜಕ ಕಥಾನಕದಲ್ಲಿ ಬ್ರಾಹ್ಮಣ ಶ್ರೇಷ್ಟತೆಯ ಹಳಸಲು ಮೌಲ್ಯಗಳಿಗೆ ಒಂದು ರೀತಿಯ ಅಧಿಕೃತತೆ ಮತ್ತು ಪರೋಕ್ಷ ಒಪ್ಪಿಗೆಯನ್ನು ರೂಪಿಸಲಾಗುತ್ತಿದೆ. ಆತನ ಅರ್ಥಶಾಸ್ತ್ರ ಮತ್ತು ರಾಜಕೀಯ “ಕುಟಿಲ” ನೀತಿಗಳ ಹೆಸರಿನಲ್ಲಿ ಹಲವಾರು ಜಾಣತನದ ಟಕ್ಕು ಮಾತುಗಳನ್ನು, ಕಟ್ಟು ಕತೆಗಳನ್ನು ಸೇರಿಸಲಾಗಿದೆ. ರಾಜಪ್ರಭುತ್ವದ ಕನವರಿಕೆಯಲ್ಲಿರುವ “ಹಿಂದೂ ಸರ್ವಾಧಿಕಾರ”ದ ಸಮರ್ಥಕರು ಭಾರತದಲ್ಲಿ “ಮನುಸ್ಮೃತಿಯನ್ನು ಸಂವಿಧಾನ ಮಾಡಬೇಕು; ಕೌಟಿಲ್ಯನ ಅರ್ಥಶಾಸ್ತ್ರವನ್ನು ನಮ್ಮ ಆರ್ಥಿಕತೆಯಲ್ಲಿ ಅಳವಡಿಸಬೇಕು” ಎಂಬ ಮಾತುಗಳನ್ನು- ಅವರಿಬ್ಬರು ಏನು ಬರೆದಿದ್ದಾರೆ ಎಂದು ತಿಳಿಯುವ ಗೋಜಿಗೇ ಹೋಗದೆ, ಬೇಕಾಬಿಟ್ಟಿ ಆಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಎಂಬ ಬ್ರಾಹ್ಮಣ ಕುತಂತ್ರಿ ಆ ಕೌಟಿಲ್ಯನನ್ನು ನೆನಪಿಗೆ ತರುತ್ತಾರೆ.</p>



<p class="wp-block-paragraph">ದಶಕಗಳವರೆಗೆ, ರಾಜಕೀಯ ವಿಮರ್ಶಕರು- ಕೇರಳ ಮತ್ತು ತಮಿಳುನಾಡಿನಂತೆ &#8220;ಬಂಗಾಳಿ ಅನನ್ಯತೆ&#8221;ಯ ಕಲ್ಪನೆಯನ್ನು ಪ್ರೀತಿಯಿಂದ ಪೋಷಿಸಿದರು. ಭಾರತದ ಉಳಿದ ಭಾಗವು ಅರೆಬೆಂದ ಹಿಂದೂತ್ವದ ಬಹುಸಂಖ್ಯಾತವಾದಿ ಲೆಕ್ಕಾಚಾರಕ್ಕೆ ಬಲಿಯಾಗಬಹುದು; ಆದರೆ ಪಶ್ಚಿಮ ಬಂಗಾಳವು ತನ್ನ ವಿಶಿಷ್ಟ ಸಾಂಸ್ಕೃತಿಕ ರಕ್ಷಾಕವಚದಿಂದ ರಕ್ಷಿಸಲ್ಪಟ್ಟಿದೆ ಎಂಬ ಆಪ್ತ ನಂಬಿಕೆ ಅವರಲ್ಲಿ ಇತ್ತು. ಈ ಮಿಥ್ಯೆಯು ಕೇವಲ ಬಿರುಕು ಬಿಡಲಿಲ್ಲ; ಅದು ಕೋಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಸಂಪೂರ್ಣವಾಗಿ ಛಿದ್ರವಾಯಿತು. ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ, ಅದು ರಾಜ್ಯದ ಆಧುನಿಕ ಇತಿಹಾಸದಲ್ಲಿ ಅತ್ಯಂತ ಲಜ್ಜೆಗೆಟ್ಟ, ಲೆಕ್ಕಾಚಾರದ ರಾಜಕೀಯದ ತಿರುವನ್ನು ಪಡೆಯಿತು.</p>



<p class="wp-block-paragraph">ಮಹತ್ವಾಕಾಂಕ್ಷೆಯ ನಾಯಕನೊಬ್ಬ ತನ್ನ ವಿರುದ್ಧದ ಗಂಭೀರ ಭ್ರಷ್ಟಾಚಾರ ತನಿಖೆಗಳನ್ನು ಹೇಗೆ ಬಳಸಿಕೊಳ್ಳಬಹುದು, ಹಳೆಯ ಮಿತ್ರರನ್ನು ಹೇಗೆ ಕೈಬಿಡಬಹುದು ಮತ್ತು ರಾಜ್ಯದ ಅತ್ಯುನ್ನತ ಹುದ್ದೆಯನ್ನು ವಶಪಡಿಸಿಕೊಳ್ಳಲು ಕೋಮು ಧ್ರುವೀಕರಣದ ಗುರುತಿನ ರಾಜಕೀಯವನ್ನು ಹೇಗೆ ಬಳಸಬಹುದು ಎಂಬುದಕ್ಕೆ ಈ ಅಧಿಕಾರಿಯ ರಾಜಕೀಯ ಯಾತ್ರೆಯು ಒಂದು ಮಾನಗೇಡಿ ನಿದರ್ಶನ ಒದಗಿಸುತ್ತದೆ.</p>



<p class="wp-block-paragraph">ಅವಕಾಶವಾದಿಯ ನೀಲನಕ್ಷೆ<br>ಸುವೇಂದು ಅಧಿಕಾರಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು, ಆತ ತನ್ನ ದೊಡ್ಡ ಕಾನೂನು ದೌರ್ಬಲ್ಯಗಳನ್ನು ಹೇಗೆ ನಿರ್ವಹಿಸಿ, ಪಾರಾಗಿ ಮೇಲೇರಿದರು ಎಂಬುದನ್ನು ನೋಡಬೇಕು. ವರ್ಷಗಳ ಕಾಲ, ಅವರು ತೃಣಮೂಲ ಕಾಂಗ್ರೆಸ್ (ಟಿಎಂಸಿ)ಯ ಪ್ರಬಲ ಸಂಘಟನಾ ಸ್ತಂಭವಾಗಿದ್ದರು. 2007ರ ನಂದಿಗ್ರಾಮ ಭೂ ಚಳುವಳಿಯ ಸಮಯದಲ್ಲಿ ಜನಪ್ರಿಯತೆ ಹೆಚ್ಚಿಸಿಕೊಂಡರು. ಈ ಸಮಯದಲ್ಲಿ ಆತ ಆಗಾಗ್ಗೆ ಜಾತ್ಯತೀತ, ಗ್ರಾಮೀಣ ಜನರ ಒಗ್ಗಟ್ಟಿನ ಭಾಷೆಯನ್ನೇ ಮಾತನಾಡುತ್ತಿದ್ದರು. ಆದರೆ, ಈ ಸಂದರ್ಭದಲ್ಲಿ ಅವರ ವೃತ್ತಿಜೀವನಕ್ಕೆ ಬೆದರಿಕೆಯೊಡ್ಡಿದ ಎರಡು ಬೃಹತ್ ಭ್ರಷ್ಟಾಚಾರ ಹಗರಣಗಳಿಂದಾಗಿ ಆತ ತನ್ನ ರಾಜಕೀಯ ಉಳಿವಿನ ಪರೀಕ್ಷೆಗೆ ಒಳಗಾದರು. ಅವುಗಳೆಂದರೆ:<br>​ನಾರದ ಸ್ಟಿಂಗ್ ಆಪರೇಷನ್ (2016): ಇದು ರಾಷ್ಟ್ರೀಯ ಟಿವಿಗಳಲ್ಲಿ ಪ್ರಸಾರವಾದ ಆತನ ಭ್ರಷ್ಟ ವ್ಯಕ್ತಿತ್ವದ ಸ್ಫೋಟಕ ಸುದ್ದಿ. ಗುಪ್ತ-ಕ್ಯಾಮೆರಾ ದೃಶ್ಯಗಳಲ್ಲಿ- ಒಬ್ಬ ಉದ್ಯಮಿಯಂತೆ ನಟಿಸುತ್ತಿರುವ ತನಿಖಾ ಪತ್ರಕರ್ತರಿಂದ ಅಧಿಕಾರಿಯು ಪತ್ರಿಕೆಯಲ್ಲಿ ಸುತ್ತಿದ ದಪ್ಪನೆಯ ಹಣದ ಕಟ್ಟನ್ನು ಸ್ವೀಕರಿಸುತ್ತಿರುವುದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿತ್ತು. ಕೇಂದ್ರ ತನಿಖಾ ದಳ (ಸಿಬಿಐ) ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರಕ್ಕಾಗಿ ಎಫ್‌ಐಆರ್ ದಾಖಲಿಸಿತ್ತು.</p>



<p class="wp-block-paragraph">​ಶಾರದಾ ಚಿಟ್ ಫಂಡ್ ಹಗರಣ: ಈ ಬಹು-ಶತಕೋಟಿ ರೂಪಾಯಿಗಳ ಪೊಂಜಿ ಯೋಜನೆ 2013ರಲ್ಲಿ ಕುಸಿದು, ಬಂಗಾಳದಾದ್ಯಂತ ಲಕ್ಷಾಂತರ ಬಡ ಹಳ್ಳಿಯ ಕುಟುಂಬಗಳ ಜೀವನದ ಉಳಿತಾಯವನ್ನು ನಾಶಪಡಿಸಿತ್ತು. ಆಡಳಿತಾತ್ಮಕ ರಕ್ಷಣೆಗಾಗಿ ಪೂರ್ವ ಮಿಡ್ನಾಪುರದಲ್ಲಿ ತಮ್ಮಿಂದ ಅಪಾರ ಹಣಕಾಸಿನ ಪಾವತಿಗಳನ್ನು ಪಡೆದುಕೊಂಡ ಸುವೇಂದು ಅಧಿಕಾರಿಯೇ ಪ್ರಮುಖ ಫಲಾನುಭವಿ ಎಂದು ಅನೇಕ ಬಂಧಿತ ಸಹ-ಸಂಚುಕೋರರು ನೇರವಾಗಿ ಆರೋಪಿಸಿದ್ದರು.</p>



<p class="wp-block-paragraph">ವರ್ಷಗಳ ಕಾಲ, ಬಿಜೆಪಿಯೇ ಆತನಿಗೆ ಬಂಗಾಳದ ಅಂತರ್ಗತ ಭ್ರಷ್ಟ ಮುಖ ಎಂದು ಹಣೆಪಟ್ಟಿ ಕಟ್ಟಿತ್ತು. ಆತನ ವಿರುದ್ಧ ವ್ಯಾಪಕ ಪ್ರತಿಭಟನೆಗಳನ್ನೂ ನಡೆಸಿತ್ತು. ಆದರೂ, 2021ರ ಚುನಾವಣೆಗೆ ಮುನ್ನ, ಕೇಂದ್ರೀಯ ಸಂಸ್ಥೆಯ ದಾಳಿಗಳ ನಿಜವಾದ ಬೆದರಿಕೆಯನ್ನು ಎದುರಿಸಿದ ಕುಟಿಲ ಸುವೇಂದು ಅಧಿಕಾರಿ- ಟಿಎಂಸಿ ಕೊಂಬೆಯಿಂದ ಬಿಜೆಪಿ ಕೊಂಬೆಗೆ ಒಂದು ಲೆಕ್ಕಾಚಾರದ ಕಪಿ ಜಿಗಿತ ಮಾಡಿದರು. ತಕ್ಷಣವೇ, ಈ ಭಾರೀ ವಂಚನಾ ಹಗರಣದಲ್ಲಿ ಆತನ ಶಾಮೀಲಾತಿ ಬಗ್ಗೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ED) ತನಿಖೆಗಳ ಆಕ್ರಮಣಕಾರಿ ಆವೇಗ ನಿಧಾನವಾಯಿತು. ಬಿಜೆಪಿಯ ವಾಷಿಂಗ್ ಮೆಷೀನಿನಲ್ಲಿ ಆತನ ಭ್ರಷ್ಟಾಚಾರದ ಕೊಳೆಯನ್ನು ತೊಳೆಯಲಾಯಿತು.</p>



<p class="wp-block-paragraph">​ಬ್ರಾಹ್ಮಣ ಗುರುತಿನ ತಂತ್ರ<br>​ಅಧಿಕಾರಿಯ ರಾಜಕೀಯ ರೂಪಾಂತರಕ್ಕೆ ಆತನ ಸಾರ್ವಜನಿಕ ವ್ಯಕ್ತಿತ್ವದ ಸಂಪೂರ್ಣ ಪರಿಷ್ಕರಣೆಯ ಅಗತ್ಯವಿತ್ತು. ಮಿಡ್ನಾಪುರದ ಪ್ರಭಾವಿ, ಉನ್ನತ ಜಾತಿಯ ಭೂಮಾಲೀಕ ಕುಟುಂಬದಿಂದ ಬಂದ ಆತ, ಬಂಗಾಳದಲ್ಲಿ ದೀರ್ಘಕಾಲ ಪ್ರಾಬಲ್ಯ ಹೊಂದಿದ್ದ ವರ್ಗ ಹೋರಾಟದ ಎಡ-ಒಲವಿನ ತನ್ನ ಭಾಷೆಯಿಂದ ಹಿಂದೂತ್ವದ ಸಾಮಾಜಿಕ-ಧಾರ್ಮಿಕ ಶ್ರೇಣೀಕರಣದ ನಿರ್ದಿಷ್ಟ ಬ್ರಾಂಡಿನ ಭಾಷೆಗೆ ಹೆಚ್ಚು ಒಲವು ತೋರಿದರು.</p>



<p class="wp-block-paragraph">​ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಅಥವಾ ಮೂಲಸೌಕರ್ಯದ ಮೇಲೆ ಚುನಾವಣೆಗಳಲ್ಲಿ ಹೋರಾಡುವ ಬದಲು, ಸುವೇಂದು ಅಧಿಕಾರಿ ಕಟ್ಟರ್ ಕೋಮುವಾದದ ಇಬ್ಬಗೆ ಗುಣವನ್ನು ಪರಿಚಯಿಸಿದರು. ಆತನ ಓತಿಕ್ಯಾತ ಬುದ್ಧಿ ಬಯಲಾದರೂ, “ಅಲ್ಪಸಂಖ್ಯಾತರ ಓಲೈಕೆ” ಎಂಬ ತನ್ನದೇ ಗುಮ್ಮನ ವಿರುದ್ಧ ಸಾಂಪ್ರದಾಯಿಕ ಶ್ರೇಣೀಕರಣದ ರಕ್ಷಕನಾಗಿ ತಮ್ಮನ್ನು ತಾವು ಬಿಂಬಿಸಿಕೊಳ್ಳಲು ಪ್ರಾರಂಭಿಸಿದರು.</p>



<p class="wp-block-paragraph">ಚುನಾವಣಾ ಪ್ರಚಾರದ ಹಾದಿಯಲ್ಲಿ, ಅವರು ಮಮತಾ ಬ್ಯಾನರ್ಜಿಯನ್ನು &#8220;ಬೇಗಂ&#8221;ನಂತಹ ಸಾಂಕೇತಿಕ, ಬೇರ್ಪಡಿಸುವ ಪದಗಳನ್ನು ಬಳಸಿ ನಿಂದಿಸಿದರು. ಸ್ಥಳೀಯ ಮುಸ್ಲಿಂ ಮತದಾರರ ವಿಶಾಲ ಜನವಿಭಾಗಗಳಿಗೆ &#8220;ಆಂತರಿಕ ರಾಷ್ಟ್ರೀಯ ಭದ್ರತಾ ಬೆದರಿಕೆ&#8221; ಅಥವಾ &#8220;ಅಕ್ರಮ ನುಸುಳುಕೋರರು&#8221; ಎಂದು ಬಹಿರಂಗವಾಗಿ ಹಣೆಪಟ್ಟಿ ಕಟ್ಟಿದರು. ಅವರನ್ನು “ಮಿಯಾಂ”ಗಳೆಂದು ಅವಹೇಳನಕಾರಿ ಅರ್ಥದಲ್ಲಿ ಹೀಯಾಳಿಸಿದರು. ಈ ತಂತ್ರವು ಸಾಂಪ್ರದಾಯಿಕ ಪ್ರಾದೇಶಿಕ ಸಮಸ್ಯೆಗಳ ಜಾಗದಲ್ಲಿ ಕೋಮುವಿಭಜನೆಗೆಂದೇ ಉದ್ದೇಶಪೂರ್ವಕವಾಗಿ ರೂಪಿಸಲಾದ ಬಹುಸಂಖ್ಯಾತ ಕಾರ್ಯಸೂಚಿಯನ್ನು ಇರಿಸಿತು. ಸುಳ್ಳುಗಳು ಸತ್ಯವೆನಿಸಿವು. ಜನರು ಮೋಸಹೋದರು. ಸುವೇಂದು ಎಂಬ ಭ್ರಷ್ಟಾಚಾರದ ಆರೋಪಿ ಶುದ್ಧಾಂಗ ಸಂಪನ್ನ ಹಿಂದೂ ನಾಯಕನಾಗುವ ಕಾರ್ಯ ಪೂರ್ಣಗೊಂಡಿತು.</p>



<p class="wp-block-paragraph">ಮುಸ್ಲಿಮರ ಜೀವನೋಪಾಯವೇ ಗುರಿ<br>ಅಧಿಕಾರಿ ಔಪಚಾರಿಕವಾಗಿ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಆತನ ಆಡಳಿತದ ನಿಜ ಬಣ್ಣ ಸ್ಪಷ್ಟವಾಯಿತು. ಅಧಿಕಾರ ವಹಿಸಿಕೊಂಡ ತಕ್ಷಣ, ಆಡಳಿತವು ಸಾಮಾನ್ಯ ನೀತಿ, ಪ್ರಕ್ರಿಯೆಗಳನ್ನು ಬದಿಗೆ ತಳ್ಳಿ, ರಾಜ್ಯಾದ್ಯಂತ ಆಕ್ರಮಣಕಾರಿ ಕ್ರಮಗಳನ್ನು ಪ್ರಾರಂಭಿಸಿತು.</p>



<p class="wp-block-paragraph">ಹೊಸ ಸರಕಾರವು ಎಲ್ಲಾ ಪರವಾನಗಿ ಪಡೆಯದ ಜಾನುವಾರು ಮಾರುಕಟ್ಟೆಗಳನ್ನು ತಕ್ಷಣ ಮುಚ್ಚಲು ಆದೇಶಿಸಿತು ಮತ್ತು ಪಶ್ಚಿಮ ಬಂಗಾಳದಾದ್ಯಂತ ಜಾನುವಾರು ಸಾಗಣೆ ಕಾರಿಡಾರ್‌ಗಳನ್ನು ಪ್ರತಿಬಂಧಿಸಲು ಭಾರೀ ಪೊಲೀಸ್ ಪಡೆಗಳನ್ನು ನಿಯೋಜಿಸಿತು. ಅಕ್ರಮ ಕಳ್ಳಸಾಗಣೆ ನಿಲ್ಲಿಸಲು ಆಡಳಿತಾತ್ಮಕ ಪ್ರಯತ್ನವಾಗಿ ನೀತಿಯನ್ನು ಅಧಿಕೃತವಾಗಿ ರೂಪಿಸಲಾಗಿದ್ದರೂ, ಅದರ ಸಮಯ ಮತ್ತು ಆಯ್ದ ಜಾರಿಯು ಸ್ಪಷ್ಟ ರಾಜಕೀಯ ಸಂದೇಶವನ್ನು ನೀಡಿತು. ಬಂಗಾಳದಲ್ಲಿ, ಜಾನುವಾರು ವ್ಯಾಪಾರ ಮತ್ತು ಅದರ ಆಶ್ರಿತವಾದ ಚಮ್ಮಾರಿಕೆ ಮುಂತಾದ ಕೈಗಾರಿಕೆಗಳು ಲಕ್ಷಾಂತರ ಗ್ರಾಮೀಣ ಮುಸ್ಲಿಮರು ಮತ್ತು ಅಂಚಿನಲ್ಲಿರುವ ಪರಿಶಿಷ್ಟ ಜಾತಿ ಸಮುದಾಯಗಳ ಆರ್ಥಿಕ ಉಳಿವಿಗೆ ನಿರ್ಣಾಯಕವಾಗಿವೆ. ಈ ನಿರ್ದಿಷ್ಟ ಮಾರುಕಟ್ಟೆಗಳ ಮೇಲೆ ತಮ್ಮ ಮೊದಲ ಕಾರ್ಯಕಾರಿ ಆದೇಶಗಳನ್ನು ಕೇಂದ್ರೀಕರಿಸುವ ಮೂಲಕ, ಅಧಿಕಾರಿ- ಅಲ್ಪಸಂಖ್ಯಾತ ಗುಂಪುಗಳು ಮತ್ತು ದಲಿತರ ಆರ್ಥಿಕ ಸ್ವಾತಂತ್ರ್ಯಕ್ಕೆ ಲೆಕ್ಕಾಚಾರದ ಹೊಡೆತ ನೀಡಿದರು. “ಹಿಂದೂತ್ವ” ಮತದಾರರ ನೆಲೆಗೆ ತಮ್ಮ ಪ್ರಮುಖ ಪ್ರಚಾರ ಭರವಸೆಗಳನ್ನು ಈಡೇರಿಸಿದರು.</p>



<p class="wp-block-paragraph">&#8220;ಗೀತಾ&#8221; ಸಮರ್ಥನೆ ಮತ್ತು ಸಾಂಸ್ಕೃತಿಕ ಘರ್ಷಣೆ<br>ಆತನ ಮುಂದಿನ ಗುರಿಯು ಆಹಾರ ಪದ್ಧತಿಯಾಗಿರುವುದನ್ನು ಸೂಚಿಸುವ ಅಂಶಗಳು ಬಯಲಾಗಿವೆ. ಬ್ರಾಹ್ಮಣರೂ ಮೀನು ತಿನ್ನುವ ಮತ್ತು ಮಾಂಸಾಹಾರ ಪ್ರಮುಖವಾಗಿರುವ ಬಂಗಾಳದ ಕೆಲವು ಭಾಗಗಳಲ್ಲಿ ಗೋಮಾಂಸದ ಐತಿಹಾಸಿಕ ಸೇವನೆಯನ್ನು ಗುರಿಯಾಗಿಸಿಕೊಂಡು ಸ್ಥಳೀಯ ಆಹಾರ ಪದ್ಧತಿಯ ಆಯ್ಕೆಗಳ ಕುರಿತು ಅಧಿಕಾರಿ ತೀಕ್ಷ್ಣವಾದ, ಅವಹೇಳನಕಾರಿ ಸಂಭಾಷಣೆಯಲ್ಲಿ ತೊಡಗಿದ್ದಾರೆ ಎಂದು ಹೇಳಲಾದ ಆಡಿಯೋ ಕ್ಲಿಪ್ ಸೋರಿಕೆಯಾದ ಬಗ್ಗೆ ವರದಿಗಳು ಮತ್ತು ಸಾಮಾಜಿಕ ಮಾಧ್ಯಮಗಳು ಬಹಳಷ್ಟು ಸದ್ದು ಮಾಡಿದವು. “ಗೋಮಾಂಸ ತಿನ್ನುವುದಿದ್ದರೆ, ಕದ್ದು ಮುಚ್ಚಿ ತಿನ್ನಿ” ಎಂದು ಹೇಳುವುದು ಒಬ್ಬ ವ್ಯಕ್ತಿಯ ಆಷಾಢಭೂತಿತನ, ಇಬ್ಬಗೆ ನೀತಿ, ಅಪ್ರಾಮಾಣಿಕ ವಂಚಕ ವ್ಯಕ್ತಿತ್ವಕ್ಕೆ ಸಾಕ್ಷಿ ಒದಗಿಸುತ್ತದೆ.</p>



<p class="wp-block-paragraph">ಈ ಆಕ್ರಮಣಕಾರಿ ನೀತಿಗಳಿಂದ ಉಂಟಾದ ಸಾಮಾಜಿಕ ವಿಭಜನೆಯ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಅಧಿಕಾರಿ- ಸಾಂವಿಧಾನಿಕ ಅಥವಾ ಆರ್ಥಿಕ ಸಮರ್ಥನೆಗಳನ್ನು ಸಂಪೂರ್ಣವಾಗಿ ಕೈಬಿಟ್ಟು- ಧಾರ್ಮಿಕ ಪಠ್ಯಗಳಿಂದ ಸಮರ್ಥಿಸಿ, ಅದನ್ನು &#8220;ಗೀತಾ ಕಿ ವಾಣಿ&#8221; (ಭಗವದ್ಗೀತೆಯ ಧ್ವನಿ) ಎಂದು ಸಾರ್ವಜನಿಕವಾಗಿ ಉಲ್ಲೇಖಿಸಿದರು. ತನ್ನ ಆಡಳಿತಾತ್ಮಕ ಕ್ರಮಗಳಿಗೆ ನಿರ್ದಿಷ್ಟ ಧಾರ್ಮಿಕ ಮೌಲ್ಯಗಳನ್ನು ರಕ್ಷಿಸುವ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕರ್ತವ್ಯವು ಮಾರ್ಗದರ್ಶನ ಮಾಡುತ್ತದೆ ಎಂದು ಆತ ವಾದಿಸಿದರು. ಅಧಿಕಾರ ವಹಿಸಿಕೊಂಡ ತಕ್ಷಣ ‘ತನ್ನ ಕೆಲಸ ಏನಿದ್ದರೂ ಹಿಂದೂಗಳಿಗೆ; ಮುಸ್ಲಿಮರು ಬಿಜೆಪಿಗೆ ಮತನೀಡಿಲ್ಲ’ ಎಂದು- ಸಮಾನತೆಯನ್ನು ಖಾತರಿ ಪಡಿಸುವ ಸಂವಿಧಾನವನ್ನು ಎತ್ತಿ ಹಿಡಿಯುವ ಪ್ರಮಾಣ ವಚನ ಸ್ವೀಕರಿಸಿದ ಈತ ಹೇಳಬೇಕಾದರೆ, ಪ್ರಜಾಪ್ರಭುತ್ವ ಯಾವ ರೀತಿಯ ಅಪಾಯದಲ್ಲಿದೆ ಎಂದು ಊಹಿಸಬಹುದು. ಸರಕಾರಿ ಬೆಂಬಲಿತ ಆರ್ಥಿಕ ದಮನಗಳನ್ನು ಸಮರ್ಥಿಸಲು ಒಂದು ಧರ್ಮದ “ಪವಿತ್ರ” ಗ್ರಂಥಗಳನ್ನು ಬಳಸುವುದು ಬಂಗಾಳದ ಆಡಳಿತ ಶೈಲಿಯಲ್ಲಿ ಪ್ರಮುಖ ಬದಲಾವಣೆಯನ್ನು ಸೂಚಿಸುತ್ತದೆ. ಆಡಳಿತವು ಸಾಂಸ್ಕೃತಿಕ, ಸಾಮಾಜಿಕ ಘರ್ಷಣೆಯ ಅಂಶಗಳನ್ನು ಆಡಳಿತದ ಪ್ರಾಥಮಿಕ ಸಾಧನವಾಗಿ ಬಳಸುವ ಉದ್ದೇಶ ಹೊಂದಿದೆ ಎಂಬುದನ್ನು ಇದು ತೋರಿಸುತ್ತದೆ.</p>



<p class="wp-block-paragraph">ಈ ಬಹುಸಂಖ್ಯಾತವಾದಿ ಕಾರ್ಯಾಂಗದ ಉದಯದಿಂದ ಬೀದಿ ಮಟ್ಟದಲ್ಲಿ ಬಲಪಂಥೀಯ ಗೂಂಡಾಗಳು ಕಾನೂನು ಸುವ್ಯವಸ್ಥೆಯನ್ನು ಹೆಚ್ಚು ಹೆಚ್ಚಾಗಿ ತಮ್ಮ ಕೈಗೆತ್ತಿಕೊಳ್ಳುತ್ತಿದ್ದಾರೆ. ಈ ಗುಂಪುಗಳು ಗ್ರಾಮೀಣ ಮತ್ತು ಉಪನಗರಗಳಲ್ಲಿ ಬಂಗಾಳದಾದ್ಯಂತ (ಅ)ನೈತಿಕ ಮತ್ತು ಸಾಮಾಜಿಕ ಪೊಲೀಸ್‌ಗಿರಿಯಲ್ಲಿ ತೊಡಗಿವೆ, ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗುತ್ತಿವೆ, ಅಂತರ-ನಂಬಿಕೆಯ ದಂಪತಿಗಳನ್ನು ಗುರಿಯಾಗಿಸಿಕೊಂಡಿವೆ ಮತ್ತು &#8220;ಸಂಪ್ರದಾಯದ ರಕ್ಷಣೆ&#8221; ಎಂಬ ಸೋಗಿನಲ್ಲಿ ಆಹಾರ ಮತ್ತು ಸಾಂಸ್ಕೃತಿಕ ಏಕರೂಪತೆಯನ್ನು ಜಾರಿಗೊಳಿಸುತ್ತಿವೆ.</p>



<p class="wp-block-paragraph">ಈ ಆಕ್ರಮಣಕಾರಿ ನಿಲುವು ನೇರವಾಗಿ ಉದ್ದೇಶಿತ ರಾಜಕೀಯ ಹಿಂಸಾಚಾರಕ್ಕೆ ತಿರುಗಿದೆ. ಅಭಿಷೇಕ್ ಬ್ಯಾನರ್ಜಿ ಸಹಿತ ಉನ್ನತ ಮಟ್ಟದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸತ್ ಸದಸ್ಯರು ಮತ್ತು ಪ್ರಾದೇಶಿಕ ನಾಯಕರು ಸಾರ್ವಜನಿಕ ಸಭೆಗಳ ಸಮಯದಲ್ಲಿ ದೈಹಿಕ ದಿಗ್ಬಂಧನಗಳು, ಬೆಂಗಾವಲಿನ ಮೇಲಿನ ದಾಳಿಗಳು, ಹಲ್ಲೆ ಮತ್ತು ಹಿಂಸಾತ್ಮಕ ಬೆದರಿಕೆಗಳನ್ನು ಎದುರಿಸಿದ್ದಾರೆ. ಇವೆಲ್ಲವೂ ಪೊಲೀಸರ ಎದುರೇ ಅಥವಾ ಕಾಟಾಚಾರದ ಕರ್ತವ್ಯ ನಿರ್ವಹಣೆಯಲ್ಲಿ ನಡೆದಿವೆ. ಈ ಹಿಂಸಾಚಾರಗಳನ್ನು ಖಂಡಿಸುವ, ನಿಯಂತ್ರಿಸುವ ಬದಲು- ರಾಜ್ಯದ ಬಿಜೆಪಿ ನಾಯಕತ್ವವು ನಿರಂತರವಾಗಿ ಈ ಆಕ್ರಮಣಗಳನ್ನು ಸಮರ್ಥಿಸಿಕೊಂಡಿದೆ. ಅವರು ಹಿಂಸಾಚಾರವನ್ನು ಹಿಂದಿನ ಭ್ರಷ್ಟಾಚಾರದ ವಿರುದ್ಧ &#8220;ಸಾರ್ವಜನಿಕ ಕೋಪದ ಸ್ವಯಂಪ್ರೇರಿತ ಪರಿಣಾಮ&#8221; ಎಂದು ತಳ್ಳಿಹಾಕಿ, ಬೀದಿ ಮಟ್ಟದ ಗೂಂಡಾಗಿರಿ ಮಾಮೂಲಿ ಎಂಬಂತೆ ಬಿಂಬಿಸುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಉಳಿದಿರುವ ಯಾವುದೇ ಸಾಂಸ್ಥಿಕ ವಿರೋಧವನ್ನು ಹತ್ತಿಕ್ಕಲು ಹಿಂಸಾಚಾರವನ್ನು ಬಳಸಲು ಬಿಜೆಪಿ ಸಂಪೂರ್ಣ ಸಿದ್ಧವಾಗಿರುವಂತಿದೆ.</p>



<p class="wp-block-paragraph">ಬಿಜೆಪಿಯಲ್ಲಿ ಭ್ರಷ್ಟಾಚಾರಕ್ಕೆ ಶಿಕ್ಷೆ ಬಹಮಾನ!<br>ತನ್ನ ಅಧಿಕೃತ ಚುನಾವಣಾ ಅಫಿಡವಿಟ್‌ಗಳ ಪ್ರಕಾರ, ಅಧಿಕಾರಿ- ಕ್ರಿಮಿನಲ್ ಬೆದರಿಕೆ ಮತ್ತು ಸಾರ್ವಜನಿಕ ಕಿಡಿಗೇಡಿತನದಿಂದ ಹಿಡಿದು ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಪ್ರಚೋದಿಸುವವರೆಗೆ ಡಜನುಗಟ್ಟಲೆ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ. ಆದರೂ, ಅವರ ತ್ವರಿತ ರಾಜಕೀಯ ಏಳಿಗೆಯು ಪ್ರಸ್ತುತ ವ್ಯವಸ್ಥೆಯ ಅಡಿಯಲ್ಲಿ- ಗಂಭೀರ ಕಾನೂನು ಮತ್ತು ಭ್ರಷ್ಟಾಚಾರದ ಆರೋಪಗಳನ್ನು ರಾಜಕೀಯ ಶಕ್ತಿಯಾಗಿ ಪರಿವರ್ತಿಸಬಹುದು ಎಂಬ ದುರಂತವನ್ನು ತೋರಿಸುತ್ತದೆ.</p>



<p class="wp-block-paragraph">​ಬಿಜೆಪಿಯ &#8220;ವಾಷಿಂಗ್ ಮೆಷಿನ್&#8221;ನ ರಾಜಕೀಯ ರಕ್ಷಣೆಯಲ್ಲಿ ಆಕ್ರಮಣಕಾರಿ ಗುರುತಿನ ರಾಜಕೀಯ ಮತ್ತು ತಕ್ಷಣದ ಕಾರ್ಯಕಾರಿ ಆಕ್ರಮಣಗಳನ್ನು ಸಂಯೋಜಿಸುವ ಮೂಲಕ, ಅಧಿಕಾರಿ ಬಂಗಾಳದಲ್ಲಿ ಹೊಸ ಶೈಲಿಯ ನಾಯಕತ್ವವನ್ನು ಸ್ಥಾಪಿಸಿದ್ದಾರೆ. ರಾಜಕೀಯ ಅವಕಾಶವಾದಿತನ, ಸಾಮಾಜಿಕ ವಿಭಜನೆಗಳನ್ನು ಬಳಸಿಕೊಳ್ಳುವ ನಿರ್ಲಜ್ಜತನದಿಂದ ರಾಜ್ಯದ ರಾಜಕೀಯ ವಾತಾವರಣವನ್ನೇ ಯಶಸ್ವಿಯಾಗಿ ಮರುರೂಪಿಸಬಹುದು ಎಂದು ಸುವೇಂದು ಅಧಿಕಾರಿಯ ರಾಜಕೀಯ ಉನ್ನತಿಯು ತೋರಿಸುತ್ತಿದೆ.</p>
]]></content:encoded>
					
		
		
			</item>
		<item>
		<title>ಮೋದಿ ಮತ್ತು ನೆಹರೂ : ಹದಿನೇಳಕ್ಕಿಂತ ಹನ್ನೆರಡು ದೊಡ್ಡದಾದ ಕತೆ!</title>
		<link>https://peepalmedia.com/twelve-is-a-bigger-story-than-seventeen/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 12 Jun 2026 12:39:54 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://peepalmedia.com/?p=79832</guid>

					<description><![CDATA[&#8220;..1947ರಲ್ಲಿ ಭಾರತದ ಪ್ರಥಮ ಪ್ರಧಾನಿಯಾಗಿ ಆಯ್ಕೆಯಾಗಲು ನೆಹರೂ ಅವರಿಗೆ ಅರ್ಹತೆಯಿತ್ತು, ಯೋಗ್ಯತೆಯಿತ್ತು, ನಿಯಮಗಳೂ ಜೊತೆಗೂಡಿದ್ದವು. ಹಾಗಿರುವಾಗ ಅವರ ಆ ಐದು ವರ್ಷಗಳನ್ನು ಹೊರಗಿಟ್ಟು, ತಮ್ಮ ಭುಜ ತಟ್ಟಿಕೊಳ್ಳುವುದು ಆತ್ಮರತಿಯಲ್ಲದೆ ಇನ್ನೇನು?..&#8221; ಚಿಂತಕರಾದ ಮಾಚಯ್ಯ ಹಿಪ್ಪರಿಗಿ ಅವರ ಬರಹದಲ್ಲಿ‌ ಪ್ರಧಾನಿ ಮೋದಿಯವರು ಸತತವಾಗಿ ಹನ್ನೆರಡು ವರ್ಷ ಅಧಿಕಾರ ನಡೆಸುವ ಮೂಲಕ ಜವಾಹರ ಲಾಲ್‌ ನೆಹರೂ ಅವರ ದಾಖಲೆಯನ್ನು ಮುರಿದಿದ್ದಾರೆ ಎಂದು ಸಂಭ್ರಮಿಸಲಾಗುತ್ತಿದೆ. ಹೀಗೆ ಹೇಳುವವರು ನೆಹರೂ ಅಧಿಕಾರಾವಧಿಯನ್ನು 1952 ರಿಂದ 1964ರವರೆಗೆ ಪರಿಗಣಿಸುತ್ತಿದ್ದಾರೆ. ನಮಗೆ ಸ್ವಾತಂತ್ಯ್ರ ಲಭಿಸಿದ 1947 [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p class="wp-block-paragraph">&#8220;..1947ರಲ್ಲಿ ಭಾರತದ ಪ್ರಥಮ ಪ್ರಧಾನಿಯಾಗಿ ಆಯ್ಕೆಯಾಗಲು ನೆಹರೂ ಅವರಿಗೆ ಅರ್ಹತೆಯಿತ್ತು, ಯೋಗ್ಯತೆಯಿತ್ತು, ನಿಯಮಗಳೂ ಜೊತೆಗೂಡಿದ್ದವು. ಹಾಗಿರುವಾಗ ಅವರ ಆ ಐದು ವರ್ಷಗಳನ್ನು ಹೊರಗಿಟ್ಟು, ತಮ್ಮ ಭುಜ ತಟ್ಟಿಕೊಳ್ಳುವುದು ಆತ್ಮರತಿಯಲ್ಲದೆ ಇನ್ನೇನು?..&#8221; ಚಿಂತಕರಾದ ಮಾಚಯ್ಯ ಹಿಪ್ಪರಿಗಿ ಅವರ ಬರಹದಲ್ಲಿ‌</p>
</blockquote>



<p class="wp-block-paragraph">ಪ್ರಧಾನಿ ಮೋದಿಯವರು ಸತತವಾಗಿ ಹನ್ನೆರಡು ವರ್ಷ ಅಧಿಕಾರ ನಡೆಸುವ ಮೂಲಕ ಜವಾಹರ ಲಾಲ್‌ ನೆಹರೂ ಅವರ ದಾಖಲೆಯನ್ನು ಮುರಿದಿದ್ದಾರೆ ಎಂದು ಸಂಭ್ರಮಿಸಲಾಗುತ್ತಿದೆ. ಹೀಗೆ ಹೇಳುವವರು ನೆಹರೂ ಅಧಿಕಾರಾವಧಿಯನ್ನು 1952 ರಿಂದ 1964ರವರೆಗೆ ಪರಿಗಣಿಸುತ್ತಿದ್ದಾರೆ. ನಮಗೆ ಸ್ವಾತಂತ್ಯ್ರ ಲಭಿಸಿದ 1947 ರಿಂದ 1952ರವರೆಗಿನ ಅವರ ಪ್ರಧಾನಿ ಅವಧಿಯನ್ನು ಉದ್ದೇಶಪೂರ್ವಕವಾಗಿ ಕೈಬಿಡುತ್ತಿದ್ದಾರೆ. 1947 ರಿಂದ ಪರಿಗಣಿಸಿ, ಹುದ್ದೆಯಲ್ಲಿದ್ದಾಗಲೇ ಹೃದಯಾಘಾತದಿಂದ ನಿಧನರಾದ 1964ರವರೆಗಿನ ಆಳ್ವಿಕೆಯನ್ನು ಗಣನೆಗೆ ತೆಗೆದುಕೊಂಡರೆ ನೆಹರೂ ಅವರು ಒಟ್ಟು 16 ವರ್ಷ, 286 ದಿನಗಳ ಕಾಲ (ಒಟ್ಟಾರೆ 6130 ದಿನಗಳು) ಅಧಿಕಾರ ನಡೆಸಿದ್ದರು. ಅಂದರೆ ಹೆಚ್ಚೂಕಮ್ಮಿ ಹದಿನೇಳು ವರ್ಷಗಳು! ನಿಜ ಹೇಳಬೇಕೆಂದರೆ, ಸ್ವಾತಂತ್ಯ್ರಪೂರ್ವದಲ್ಲಿ ಅಧಿಕಾರ ಹಸ್ತಾಂತರ ಹಂಚಿಕೆಯ ಭಾಗವಾಗಿ ಬ್ರಿಟಿಷರು ರಚಿಸಿದ್ದ ಮಧ್ಯಂತರ ಸರ್ಕಾರದ ಅವಧಿಯಲ್ಲೂ (ಸೆಪ್ಟೆಂಬರ್ 2, 1946 – ಆಗಸ್ಟ್‌ 15, 1947) ನೆಹರೂ ಅವರು ಮಧ್ಯಂತರ ಸರ್ಕಾರದ ಹಂಗಾಮಿ ಪ್ರಧಾನಿಯಾಗಿದ್ದರು. ಅದನ್ನೂ ಪರಿಗಣಿಸಿದರೆ ನೆಹರೂ ಅವರ ಆಡಳಿತ ಮತ್ತಷ್ಟೂ ಲಂಭಿಸುತ್ತದೆ. ಅದು ಸ್ವಾತಂತ್ಯ್ರ ಬರುವುದಕ್ಕು ಹಿಂದಿನ ಮಾತು. ಹಾಗಾಗಿ ಬಿಟ್ಟುಬಿಡೋಣ. ಆದರೆ ಸ್ವಾತಂತ್ಯ್ರ ಸಿಕ್ಕ ನಂತರದ 1947-1952 ಅವಧಿಯನ್ನೂ ಗಣಿಸದೆ ಇರಲಾದೀತೆ?</p>



<p class="wp-block-paragraph">‘ಅದು ಸಾರ್ವತ್ರಿಕ ಚುನಾವಣೆಯ ಮೂಲಕ ಚುನಾಯಿತವಾದ ಸರ್ಕಾರ ಆಗಿರಲಿಲ್ಲ. ಮೊದಲ ಸಾರ್ವತ್ರಿಕ ಚುನಾವಣೆ ನಡೆದದ್ದು 1952ರಲ್ಲಿ. ಹಾಗಾಗಿ ಅಲ್ಲಿಂದಾಚೆಗಿನ ಅಧಿಕಾರಾವಧಿಯನ್ನು ಮಾತ್ರ ಪರಿಗಣಿಸುತ್ತೇವೆ’ ಎಂದು ಮೋದಿ ಬೆಂಬಲಿಗರು ಮೋದಿಯವರ ಸೋಕಾಲ್ಡ್‌ ದಾಖಲೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಚುನಾವಣಾ ಪ್ರಕ್ರಿಯೆಯ ಕಾರಣಕ್ಕೆ ನೀವು ಆ ಐದು ವರ್ಷಗಳನ್ನು (1947-1952) ಸ್ವತಂತ್ರ ಭಾರತದ ಚರಿತ್ರೆಯಿಂದ ಹೊರಗಿಡುತ್ತೀರೆಂದಾದರೆ, ಆಗ ನೀವು ಪ್ರಧಾನಿ ಹುದ್ದೆಯ ಅವಧಿಯನ್ನೂ ನಿರ್ಲಕ್ಷಿಸಬಹುದು. ಆದರೆ ಹಾಗೆ ಮಾಡಲು ಸಾಧ್ಯವೇ? ಯಾಕೆಂದರೆ, ಆ ಐದು ವರ್ಷವು ಭಾರತದ ಒಟ್ಟಾರೆ ಭವಿಷ್ಯವನ್ನು ರೂಪಿಸಿದ ನಿರ್ಣಾಯಕ ಕಾಲಘಟ್ಟವಾಗಿತ್ತು. ನಮ್ಮ ಸಂವಿಧಾನ ರಚನೆಯಾಗಿ, ಅಂಗೀಕರವಾಗಿದ್ದೇ ಆ ಅವಧಿಯಲ್ಲಿ. ಅದು ಸಾರ್ವತ್ರಿಕ ಚುನಾಯಿತ ಸರ್ಕಾರದ ಅವಧಿಯಲ್ಲಿ ರಚನೆಯಾದ ಸಂವಿಧಾನವಲ್ಲ, ಹಾಗಾಗಿ ಪ್ರಸ್ತುತ ಸಂವಿಧಾನವನ್ನು ನಾವು ಪರಿಗಣಿಸುವುದಿಲ್ಲ ಎನ್ನಲು ಸಾಧ್ಯವೇ? ಅದು ಸಾಧ್ಯ ಎನ್ನುವುದಾದರೆ, ನೆಹರೂ ಅವರ ಪ್ರಧಾನಿ ಅವಧಿಯನ್ನೂ ಆ ಐದು ವರ್ಷಗಳ ಕಾಲ ಕಡಿತ ಮಾಡಲು ಅಡ್ಡಿಯಿಲ್ಲ.</p>



<p class="wp-block-paragraph">ಇನ್ನು ಪ್ರಧಾನಿ ಹುದ್ದೆ ಎನ್ನುವುದು ಕೇವಲ ಚುನಾವಣಾ ಹೊಣೆಗಾರಿಕೆಯನ್ನೊತ್ತ ಹುದ್ದೆಯಲ್ಲ, ಅದು ದೇಶವನ್ನು ಮುನ್ನಡೆಸುವ ನಾಯಕತ್ವದ ಹೊಣೆ ಹೊತ್ತ ಹುದ್ದೆ. ಆ ಹುದ್ದೆಯ ಆಯ್ಕೆಗೆ ಚುನಾವಣಾ ಪ್ರಕ್ರಿಯೆಯನ್ನು ಮಾನದಂಡವಾಗಿ ಬಳಸಲಾಗುತ್ತದೆ ಎಂದ ಮಾತ್ರಕ್ಕೆ, ಆ ಹುದ್ದೆಯ ಹೊಣೆಗಾರಿಕೆಯನ್ನು ಚುನಾವಣೆಗಳಿಂದಲೇ ಅಳೆಯುವುದು ತಪ್ಪಾಗುತ್ತದೆ. ಯಾಕೆಂದರೆ, ಐ ಕೆ ಗುಜ್ರಾಲ್‌, ದೇವೇಗೌಡರು ಮತ್ತು ಮನಮೋಹನ್‌ ಸಿಂಗ್‌ ಅವರು ಪ್ರಧಾನಿಗಳಾದಾಗ ಅವರು ಸಾರ್ವತ್ರಿಕ ಚುನಾವಣೆಯಲ್ಲಿ ಜನರಿಂದ ನೇರವಾಗಿ ಆಯ್ಕೆಯಾದ ಸಂಸದರಾಗಿರಲಿಲ್ಲ; ಬದಲಿಗೆ, ರಾಜ್ಯಸಭಾ ಸದಸ್ಯರುಗಳಾಗಿದ್ದರು. ರಾಜ್ಯಸಭಾ ಸದಸ್ಯರೂ ಪ್ರಧಾನಿಯಾಗುವ ಅವಕಾಶವನ್ನು ನಮ್ಮ ಸಂವಿಧಾನ ಕಲ್ಪಿಸಿದೆ. ಹಾಗಾಗಿ ಇವರ್‍ಯಾರೂ, ಪ್ರಧಾನಿಯಾಗುವ ಉದ್ದೇಶದಿಂದಲೇ ತಮ್ಮತಮ್ಮ ನಾಯಕತ್ವಗಳಲ್ಲಿ ಚುನಾವಣೆಗಳನ್ನು ಎದುರಿಸಿದವರಲ್ಲ. ಆ ಪೈಕಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ ನಮ್ಮ ದೇವೇಗೌಡರು ರಾಜ್ಯಸಭಾ ಸದಸ್ಯರೂ ಆಗಿರಲಿಲ್ಲ. ಎಂಎಲ್‌ಎ ಆಗಿ, ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಆದರೆ ಸಂವಿಧಾನದ ಪ್ರಕಾರ ಸಂಸತ್ತಿನ ಉಭಯ ಸದನದ ಸದಸ್ಯರಲ್ಲದಿದ್ದರೂ ಪ್ರಧಾನಿಯಾಗಬಹುದು, ಆದರೆ ಪ್ರಧಾನಿಯಾದ ಆರು ತಿಂಗಳ ಒಳಗೆ ರಾಜ್ಯಸಭೆ ಅಥವಾ ಲೋಕಸಭೆ ಸದಸ್ಯರಾಗಿ ಆಯ್ಕೆಯಾಗಬೇಕು ಎಂಬ ನಿಯಮವಿದೆ. ಅದರ ಪ್ರಕಾರ ಪ್ರಧಾನಿಯಾದ ನಂತರ, ಎಂಎಲ್‌ಎ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು! ಪ್ರಧಾನಿ ಹುದ್ದೆಗೇರಲು ಬೇಕಾದ ಬಹುಮತವು ನಿಬಂಧನೆಗೊಳಪಟ್ಟು ಅವರಿಗೆ ಲಭಿಸಿದ್ದರಿಂದ ಇವರೆಲ್ಲ ಪ್ರಧಾನಿಗಳಾದರು. ಆಯಾ ಕಾಲಘಟ್ಟದಲ್ಲಿರುವ ಮಾನದಂಡಗಳ ಅರ್ಹತೆ ಪೂರೈಸಿ ಅವರು ಪ್ರಧಾನಿಯಾದರೋ? ಇಲ್ಲವೋ? ಎಂಬುದನ್ನು ನಾವು ಪರಿಗಣಿಸಬೇಕೆ ಹೊರತು, ಈಗಿನ ನಮ್ಮ ಮಾನಡಂಗಳನ್ನಿಟ್ಟು ನಮ್ಮ ಮೂಗಿನ ನೇರಕ್ಕೆ ಅಂದಾಜಿಸುವುದಲ್ಲ. ಉದಾಹರಣೆಗೆ, ಇವತ್ತಿನ ನಮ್ಮ ನಿಯಮಗಳು ರಾಜ್ಯಸಭಾ ಸದಸ್ಯರೂ ಪ್ರಧಾನಿಯಾಗಬಹುದು ಎಂದಿದೆ. ಅದರಂತೆ ಮೇಲೆ ವಿವರಿಸಿದ ಹಲವರು ಪ್ರಧಾನಿಗಳಾಗಿದ್ದಾರೆ. ಅಕಸ್ಮಾತ್ ಮುಂದೆ, ಈ ನಿಯಮಕ್ಕೆ ಯಾರಾದರೂ ತಿದ್ದುಪಡಿ ತಂದು, ಕೇವಲ ಲೋಕಸಭಾ ಚುನಾವಣೆಗಳಲ್ಲಿ ನೇರವಾಗಿ ಜನರಿಂದ ಚುನಾಯಿತರಾದ ಸಂಸದರು ಮಾತ್ರ ಪ್ರಧಾನಿಗಳಾಗಬೇಕು ಎಂದು ನಿಯಮ ಬದಲಿಸಿದರು ಅಂತಿಟ್ಟುಕೊಳ್ಳಿ. ಅಲ್ಲಿಂದಾಚೆಗಿನ ಪ್ರಧಾನಿಗಳನ್ನು ನಾವು ಅದರಂತೆಯೇ ಆಯ್ಕೆ ಮಾಡಿಕೊಳ್ಳುತ್ತೇವೆ. ಹಾಗಂತ, ಅದಕ್ಕೂ ಮೊದಲು ರಾಜ್ಯಸಭಾ ಸದಸ್ಯರಾಗಿ ಪ್ರಧಾನಿಯಾಗಿದ್ದವರ ಅವಧಿಗಳನ್ನೇ ಅಸಿಂಧುಗೊಳಿಸುತ್ತೇವೆಯೇ?</p>



<p class="wp-block-paragraph">1947ರಲ್ಲಿ ನೆಹರೂ ಪ್ರಧಾನಿಯಾದದ್ದು ಕೂಡಾ ಆಗ ಚಾಲ್ತಿಯಲ್ಲಿದ್ದ ಗವರ್ನಮೆಂಟ್ ಆಫ್‌ ಇಂಡಿಯಾ ಆಕ್ಟ್‌ 1935ರ ನಿಯಮಗಳ ಅನ್ವಯವೆ! ಈಗ ಹಲವರು ವಾದಿಸುತ್ತಿರುವಂತೆ ಬ್ರಿಟಿಷರು ಮನಸ್ಸಿಗೆ ಬಂದಂತೆ, ಒಂದಷ್ಟು ಜನರ ನಡುವೆ ನೆಹರೂ ಅವರನ್ನು ಆಯ್ಕೆ ಮಾಡಿ ಪ್ರಧಾನಿಯಾಗಿ ಪಟ್ಟ ಕಟ್ಟಿ ಹೋಗಿದ್ದಲ್ಲ. ಆಗ ಕೂಡಾ ಚುನಾವಣೆ ಎದುರಿಸಿ, ಕಾಂಗ್ರೆಸ್‌ ಪಕ್ಷ ಬಹುಮತ ಪಡೆದು, ನೆಹರೂ ಅವರು ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಆದರೆ ಆಗಿನ ಚುನಾವಣಾ ಪ್ರಕ್ರಿಯೆ ಈಗಿನಂತಿರಲಿಲ್ಲ ಅಷ್ಟೆ. ನಿಯಮಗಳು ಈಗ ಬದಲಾಗಿವೆಯೆಂದ ಮಾತ್ರಕ್ಕೆ, ಆಗಿನ ನಿಯಮಗಳ ಅನ್ವಯವೇ ಆಯ್ಕೆಯಾದ ವ್ಯಕ್ತಿಯ ಸ್ಥಾನವನ್ನು ನಾವು ಅಸಿಂಧುಗೊಳಿಸಲಾದೀತೆ?</p>



<p class="wp-block-paragraph">ಎರಡನೇ ವಿಶ್ವಯುದ್ಧದ ನಂತರ ಆರ್ಥಿಕವಾಗಿ ಹೈರಾಣಾದ ಬ್ರಿಟಿಷರಿಗೆ ಭಾರತದಂತಹ ಬೃಹತ್‌ ರಾಷ್ಟ್ರವನ್ನು ನಿಭಾಯಿಸುವ ಚೈತನ್ಯವಾಗಲಿ, ಆಸಕ್ತಿಯಾಗಲಿ ಉಳಿದಿರಲಿಲ್ಲ. ಆದಷ್ಟು ಬೇಗ ಅಧಿಕಾರ ಹಸ್ತಾಂತರ ಮಾಡಿ ತೊಲಗಲು ಆತುರವಾಗಿದ್ದರು. ಆದರೆ ಅಧಿಕಾರ ಹಸ್ತಾಂತರ ಎಂದರೆ, ರಾತ್ರೋರಾತ್ರಿ ಸ್ವಾತಂತ್ಯ್ರ ಕೊಟ್ಟಿದ್ದೇವೆ ಎಂದು ಗಂಟುಮೂಟೆ ಕಟ್ಟಿಕೊಂಡು ಹೊರಟುಹೋಗುವುದಲ್ಲ. ಅದೊಂದು diplomatic exit. ಅದಕ್ಕಾಗಿ ಇಲ್ಲೊಂದು ಮಧ್ಯಂತರ ಸರ್ಕಾರ ರಚನೆ ಮಾಡಿ, ಅದರ ಸುಪರ್ದಿಗೆ ಅಧಿಕಾರ ಕೊಟ್ಟು ನಿರ್ಗಮಿಸುವುದು ಬ್ರಿಟಿಷರ ಉದ್ದೇಶವಾಗಿತ್ತು. ಹಾಗಾಗಿ 1946ರಲ್ಲಿ ಪ್ರಾಂತೀಯ ಚುನಾವಣೆಗಳನ್ನು ನಡೆಸುತ್ತಾರೆ.</p>



<p class="wp-block-paragraph">ಆದರೆ ಆ ಚುನಾವಣಾ ಪ್ರಕ್ರಿಯೆ ಈಗಿನಂತಿರಲಿಲ್ಲ. ಗವರ್ನಮೆಂಟ್ ಆಫ್‌ ಇಂಡಿಯಾ ಆಕ್ಟ್‌ 1935ರ ಪ್ರಕಾರ ಎಲ್ಲರಿಗೂ ಮತದಾನ ಮಾಡುವ ಹಕ್ಕಿರಲಿಲ್ಲ. ಸರ್ಕಾರಕ್ಕೆ ತೆರಿಗೆ ಕಟ್ಟುವ, ಕನಿಷ್ಠ ಅರ್ಹತೆಯಷ್ಟು ಭೂ ಒಡೆತನ ಹೊಂದಿರುವ, ನಿಗದಿತ ಕನಿಷ್ಠ ಶೈಕ್ಷಣಿಕ ಅರ್ಹತೆ ಹೊಂದಿದ ಮತ್ತು ಸರ್ಕಾರಕ್ಕೆ ನೇರವಾಗಿ ತೆರಿಗೆ ಪಾವತಿಸುವವರಿಗೆ ಮಾತ್ರ ಮತಚಲಾಯಿಸುವ ಹಕ್ಕು ನೀಡಲಾಗಿತ್ತು. 1935ರಲ್ಲಿ ಈ ನಿಯಮವನ್ನು ಬ್ರಿಟಿಷರು ಜಾರಿಗೆ ತಂದಾಗ ಕಾಂಗ್ರೆಸ್‌ ಪಕ್ಷ ಒಕ್ಕೊರಲಿನಿಂದ ವಿರೋಧಿಸಿತ್ತು. ಪ್ರತಿಯೊಬ್ಬ ವಯಸ್ಕರಿಗೆ ಮತದಾನದ ಹಕ್ಕು ನೀಡದೆ, ಕೇವಲ ಮೇಲ್ವರ್ಗದ ಮತ್ತು ಬ್ರಿಟಿಷ್‌ ವಸಾಹತು ಪರ ಒಲವುಳ್ಳವರಿಗೆ ಮತದಾನದ ಹಕ್ಕು ನೀಡಿರುವ ಈ ಕಾಯ್ದೆಯನ್ನು ತಿರಸ್ಕರಿಸುವುದಾಗಿ ನೆಹರೂ ಅಧ್ಯಕ್ಷತೆಯಲ್ಲಿ ನಡೆದ ಲಖ್ನೋ ಕಾಂಗ್ರೆಸ್‌ ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ವೈಯಕ್ತಿಕವಾಗಿ ನೆಹರೂ ಆ ಅರೆಬರೆ ಮತದಾನದ ನೀತಿಯ ವಿರುದ್ಧವಿದ್ದರು. “ಬಲಿಷ್ಠ ಬ್ರೇಕ್‌ಗಳನ್ನು ಹೊಂದಿದ, ಆದರೆ ಎಂಜಿನ್ನೇ ಇಲ್ಲದ ಮೋಟಾರ್‍‌ ಗಾಡಿ ಇದು” ಎಂದು ಅವರು ಲೇವಡಿ ಮಾಡಿದ್ದರು. ಬಾಬಾಸಾಹೇಬ್‌ ಅಂಬೇಡ್ಕರರಂತೂ ದುಂಡುಮೇಜಿನ ಸಮ್ಮೇಳನದಲ್ಲೆ ಇಂತಹ ಪ್ರಸ್ತಾವನೆಯ ವಿರುದ್ಧ ಕಿಡಿಕಾರಿದ್ದರು. ಶಿಕ್ಷಣ, ಭೂಒಡೆತನ ಮತ್ತು ಆರ್ಥಿಕ ಸ್ವಾವಲಂಬನೆಯಿಂದ ಚಾರಿತ್ರಿಕವಾಗಿ ವಂಚನೆಗೆ ಒಳಗಾದ ದಲಿತರಿಗೆ ಬ್ರಿಟಿಷರ ಈ ನೀತಿ ಮತ್ತೊಂದು ದೊಡ್ಡ ವಂಚನೆ ಎಂದು ವಾದಿಸಿದ್ದರು.</p>



<p class="wp-block-paragraph">ಆದರೂ ಬ್ರಿಟಿಷರು ಆ ಮತದಾನ ಪದ್ಧತಿಯನ್ನು ಜಾರಿಗೆ ತಂದರು. ಆಗ ಮತದಾನವನ್ನು ಬಹಿಷ್ಕರಿಸಿ ಪ್ರತಿಭಟಿಸಬೇಕೆಂದು ನೆಹರೂ ಮುಂದಾದರು. ಆದರೆ ಸರ್ದಾರ್‍‌ ವಲ್ಲಬ್‌ ಭಾಯ್‌ ಪಟೇಲ್‌ ಅದಕ್ಕೆ ಒಪ್ಪಲಿಲ್ಲ. ಒಂದುವೇಳೆ ಈಗ, ಕಾಂಗ್ರೆಸ್‌ ಚುನಾವಣೆಗಳನ್ನು ಬಹಿಷ್ಕರಿಸಿದರೆ ಮೂಲಭೂತವಾದಿ ಮತ್ತು ವಸಾಹತುಶಾಹಿ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಸಂಸತ್‌ ಪ್ರವೇಶಿಸುತ್ತಾರೆ, ಆಗ ನಾವು ನಮ್ಮ ಧ್ವನಿಯನ್ನು ಕಳೆದುಕೊಳ್ಳಬೇಕಾಗುತ್ತೆ; ಅದರ ಬದಲು, ಚುನಾವಣೆಗೆ ಸ್ಪರ್ಧಿಸಿ ಸಂಸತ್ತಿನಲ್ಲಿ ನಮ್ಮ ಧ್ವನಿ ಉಳಿಸಿಕೊಳ್ಳೋಣ, ಸಂಪೂರ್ಣ ಸ್ವಾತಂತ್ಯ್ರದ ನಂತರ ನಮ್ಮ ಇಚ್ಛೆಯಂತೆ, ಎಲ್ಲರಿಗೂ ಮತದಾನದ ಹಕ್ಕನ್ನು ಖಾತ್ರಿ ಮಾಡಿಕೊಳ್ಳೋಣ ಎಂದು ವಾದಿಸಿದರು. ಹಾಗಾಗಿ 1937 ಮತ್ತು 1946 ಪ್ರಾಂತೀಯ ಚುನಾವಣೆಗಳಲ್ಲಿ ಕಾಂಗ್ರೆಸ್‌ ಸ್ಪರ್ಧಿಸಿತು. ಬಹುಶಃ ಇದೇ ಉದ್ದೇಶದಿಂದಲೇ ಬಾಬಾ ಸಾಹೇಬರು ಕೂಡಾ, ಎಲ್ಲರಿಗೂ ಮತದಾನದ ಹಕ್ಕು ಇಲ್ಲದ ನಿಯಮವನ್ನು ವಿರೋಧಿಸಿದ್ದರೂ, ಈ ಎರಡು ಚುನಾವಣೆಗಳಲ್ಲಿ ಕ್ರಮವಾಗಿ ತಮ್ಮ ಇಂಡಿಪೆಂಡೆಂಟ್ ಲೇಬರ್ ಪಾರ್ಟಿ (ಐಎಲ್‌ಪಿ) ಹಾಗೂ ಶೆಡ್ಯೂಲ್ಡ್ ಕಾಸ್ಟ್‌ ಫೆಡರೇಷನ್‌ (ಎಸ್‌ ಸಿ ಎಫ್‌) ಮೂಲಕ ಸ್ಪರ್ಧಿಸಿದ್ದರು.</p>



<p class="wp-block-paragraph">1946ರ ಪ್ರಾಂತೀಯ ಚುನಾವಣೆಯಲ್ಲಿ ಒಟ್ಟು 1585 ಸ್ಥಾನಗಳ ಪೈಕಿ 923 ಸ್ಥಾನಗಳಲ್ಲಿ (58.3%) ಗೆಲ್ಲುವ ಮೂಲಕ ಭರ್ಜರಿ ಬಹುಮತ ಪಡೆಯಿತು. ಅಲ್ಲದೇ ಹನ್ನೊಂದು ಪ್ರಾಂತ್ಯಗಳ ಪೈಕಿ ಎಂಟು ಪ್ರಾಂತ್ಯಗಳಲ್ಲಿ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಿತು. ಅಧಿಕಾರ ಹಸ್ತಾಂತರ ಮಾಡುವ ಉದ್ದೇಶದಿಂದಲೇ ಬ್ರಿಟಿಷರು 1946ರಲ್ಲಿ ನಡೆಸಿದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಬಹುತದಿಂದ ಗೆದ್ದ ಕಾರಣಕ್ಕೆ, ಕಾಂಗ್ರೆಸ್‌ ಪಕ್ಷವನ್ನು ಮಧ್ಯಂತರ ಸರ್ಕಾರ ರಚನೆ ಮಾಡಲು ವೈಸ್‌ರಾಯ್‌ ಲಾರ್ಡ್‌ ವೆವ್ವೆಲ್ ಆಹ್ವಾನಿಸಿದರು ಮತ್ತು ಅದರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ನೆಹರೂ ಅವರು ಮಧ್ಯಂತರ ಪ್ರಧಾನಿಯಾದರು. 1947ರ ಆಗಸ್ಟ್‌ 15ರಂದು ಸ್ವಾತಂತ್ಯ್ರ ಘೋಷಣೆಯಾದಾಗ, ಬಹುಮತವಿದ್ದ ನೆಹರೂ ಮಧ್ಯಂತರ ಸರ್ಕಾರ, ಪೂರ್ಣಾವಧಿ ಸರ್ಕಾರವಾಗಿ ರೂಪಾಂತರಗೊಂಡಿತು. ಆಗಿನ ಮಧ್ಯಂತರ ಸಂಸತ್ತು, ಸಂವಿಧಾನ ರಚನಾ ಸಭೆಯಾಗಿ ಪರಿವರ್ತನೆಯಾಯಿತು.</p>



<p class="wp-block-paragraph">ಅಂಗೀಕಾರವಾಗಿ ಜಾರಿಯಲ್ಲಿದ್ದ ನಿಯಮಗಳ ಪ್ರಕಾರ ನಡೆದ ಚುನಾವಣೆಯಲ್ಲಿ (ಆ ನಿಯಮಗಳನ್ನು ಕಾಂಗ್ರೆಸ್‌ ಕೂಡಾ ವಿರೋಧಿಸಿದ್ದರೂ) ಗೆದ್ದು, ಬಹುಮತದೊಂದಿಗೆ ಸರ್ಕಾರ ರಚಿಸಿ ಪ್ರಧಾನಿಯಾದ ನೆಹರೂ ಅವರ ಆ ಐದು ವರ್ಷಗಳ ಅವಧಿಯನ್ನು ಹೇಗೆ ತಾನೇ ಅಸಿಂಧುಗೊಳಿಸಿ ಲೆಕ್ಕಹಾಕುವಿರಿ?</p>



<p class="wp-block-paragraph">ಎಲ್ಲವನ್ನೂ ದ್ವೇಷ ಮತ್ತು ಸೇಡಿನ ತಕ್ಕಡಿಯಲ್ಲಿಟ್ಟು ತೂಗುವ ಹಾಗೂ ನಮ್ಮ ಸ್ವಾತಂತ್ಯ್ರ ಚರಿತ್ರೆಯ ಬಗ್ಗೆ ಗೌರವಾದರಗಳು ಇಲ್ಲದವರು ಮಾತ್ರ ಹೀಗೆ ತಮ್ಮ ಹೆಚ್ಚುಗಾರಿಕೆಯನ್ನು ಸಂಭ್ರಮಿಸಲು ಕ್ಷುಲ್ಲಕ ನೆಪಗಳನ್ನು ಹುಡುಕಿ `ನೆಹರೂ ದಾಖಲೆ ಮುರಿದ’ ಆತ್ಮರತಿ ಅನುಭವಿಸಬೇಕೆ ಹೊರತು; ಅದು ಚರಿತ್ರೆಯ ವಾಸ್ತವವಾಗಿ ದಾಖಲಾಗುವುದಿಲ್ಲ. ನಾವು ಶ್ರೇಷ್ಠ ಎಂದು ಸಾರಿಕೊಳ್ಳುವ ಆತುರದ ಮನಸ್ಥಿತಿಯ ಅನಾವರಣ ಇದು! ಆ ಆತುರವು ಅವರು ನರಳುತ್ತಿರುವ ಚಾರಿತ್ರಿಕ ಕೀಳರಿಮೆಯನ್ನೂ ಅನಾವರಣಗೊಳಿಸುತ್ತಿದೆ…</p>



<p class="wp-block-paragraph">ಕೊನೆಯ ಮಾತು: ನೆಹರೂ ಅವರು ಪಟೇಲರನ್ನು ವಂಚಿಸಿ, ಮಹಾತ್ಮಗಾಂಧಿಯವರ ಒತ್ತಾಸೆಯಿಂದ ಕಾಂಗ್ರೆಸ್‌ನ ಅಧ್ಯಕ್ಷರಾಗಿ, ನಂತರ ಪ್ರಧಾನಿಯಾಗಿ ಆಯ್ಕೆಯಾದರು ಎಂಬ ಅರ್ಧಸತ್ಯದಂತಹ ಸುಳ್ಳಿ ಕಥೆಯನ್ನೂ ಕೆಲವರು ಹೇಳುವುದುಂಟು. ಪಟೇಲರ ಬದಲು ನೆಹರೂ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲು ಕಾಂಗ್ರೆಸ್‌ ಬಳಿ, ಗಾಂಧಿ ಬಳಿ ಅವರದೇ ಕಾರಣಗಳಿದ್ದವು. ಆ ಕಾರಣಗಳಿಗೆ ಸ್ವತಃ ಪಟೇಲರ ಸಮ್ಮತಿ, ಸಹಕಾರಗಳೂ ಇದ್ದವು. ಗೃಹಮಂತ್ರಿಯಾಗಿ ಮುಂದೆ ನೆಹರೂ ಜೊತೆ ಪಟೇಲರು ಹೆಗಲುಕೊಟ್ಟು ದುಡಿದಿದ್ದೇ ಇದಕ್ಕೆ ಸಾಕ್ಷಿ. ಅದೇನೆ ಆಗಲಿ, ಅದು ಕಾಂಗ್ರೆಸ್‌ ಪಕ್ಷದೊಳಗಿನ ಆಂತರಿಕ ಸಂಗತಿ. 1946ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಬಹುಮತ ಸಿಕ್ಕಿತ್ತೇ ವಿನಾ, ಅಧ್ಯಕ್ಷ ಅಥವಾ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎಂಬುದಕ್ಕಲ್ಲ. ಹಾಗಾಗಿ ಆ ಪಕ್ಷದ ಆಂತರಿಕ ನಿರ್ಣಯವನ್ನು ಚುನಾವಣೆಯ ಫಲಿತಾಂಶದ ಜೊತೆ ಹೆಣೆದು ನೋಡಲಾಗದು. ಒಟ್ಟಾರೆ ಹೇಳುವುದಾದರೆ, 1947ರಲ್ಲಿ ಭಾರತದ ಪ್ರಥಮ ಪ್ರಧಾನಿಯಾಗಿ ಆಯ್ಕೆಯಾಗಲು ನೆಹರೂ ಅವರಿಗೆ ಅರ್ಹತೆಯಿತ್ತು, ಯೋಗ್ಯತೆಯಿತ್ತು, ನಿಯಮಗಳೂ ಜೊತೆಗೂಡಿದ್ದವು. ಹಾಗಿರುವಾಗ ಅವರ ಆ ಐದು ವರ್ಷಗಳನ್ನು ಹೊರಗಿಟ್ಟು, ತಮ್ಮ ಭುಜ ತಟ್ಟಿಕೊಳ್ಳುವುದು ಆತ್ಮರತಿಯಲ್ಲದೆ ಇನ್ನೇನು?</p>
]]></content:encoded>
					
		
		
			</item>
		<item>
		<title>ಸಂಸತ್ತಿನ ಪೂರ್ವಸೂರಿಗಳು &#8211; 26: ತನ್ನ ಭಾಷಣಗಳು ಮತ್ತು ತತ್ವಗಳಿಂದಲೇ ಸ್ಮರಣೀಯರಾದ ಸಮಾಜವಾದಿ ನಾಯಕ ನಾಥ್‌ ಪೈ</title>
		<link>https://peepalmedia.com/nath-pai-a-socialist-leader-remembered-for-his-principles/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 12 Jun 2026 01:46:17 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://peepalmedia.com/?p=79762</guid>

					<description><![CDATA[ಈ ಲೇಖನ ಸರಣಿಯು &#8216;ದಿ ಅರ್ಲಿ ಪಾರ್ಲಿಮೆಂಟರಿಯನ್ಸ್&#8217; ಎಂಬ ಶೀರ್ಷಿಕೆಯ &#8216;ದಿ ವೈರ್&#8217; ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಇಪ್ಪತ್ತಾರನೇ ಲೇಖನ ವಕೀಲರಾಗಿದ್ದ ನಾಥ್‌ ಪೈ ಅವರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅಪ್ರತಿಮ ಭಾಷಣಕಾರರೂ ಆಗಿದ್ದರು. ಪ್ರಜಾ ಸೋಷಿಯಲಿಸ್ಟ್‌ ಪಕ್ಷದ ಪ್ರಮುಖ ಮುಖವಾಗಿದ್ದ ಅವರು 13 ವರ್ಷಗಳ ಕಾಲ ಸಂಸದರಾಗಿದ್ದರು. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ವೆಂಗುರ್ಲಾದಲ್ಲಿ ಪೋಸ್ಟ್ ಮಾಸ್ಟರ್‌ ಒಬ್ಬರ ಕಿರಿಯ ಮಗನಾಗಿ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p class="wp-block-paragraph">ಈ ಲೇಖನ ಸರಣಿಯು &#8216;ದಿ ಅರ್ಲಿ ಪಾರ್ಲಿಮೆಂಟರಿಯನ್ಸ್&#8217; ಎಂಬ ಶೀರ್ಷಿಕೆಯ &#8216;ದಿ ವೈರ್&#8217; ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಇಪ್ಪತ್ತಾರನೇ ಲೇಖನ</p>
</blockquote>



<pre class="wp-block-code"><code>ಸಂಸದರಾಗಿ ತನ್ನ ಮೊಟ್ಟ ಮೊದಲ ಅವಧಿಯಲ್ಲಿಯೇ ಅವರ ಪ್ರತಿಭೆ ಮತ್ತು ಅಪ್ರತಿಮ ಮಾತುಗಾರಿಕೆಯು ಎದ್ದು ಕಾಣುವಂತಿತ್ತು.</code></pre>



<p class="wp-block-paragraph">ವಕೀಲರಾಗಿದ್ದ ನಾಥ್‌ ಪೈ ಅವರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅಪ್ರತಿಮ ಭಾಷಣಕಾರರೂ ಆಗಿದ್ದರು. ಪ್ರಜಾ ಸೋಷಿಯಲಿಸ್ಟ್‌ ಪಕ್ಷದ ಪ್ರಮುಖ ಮುಖವಾಗಿದ್ದ ಅವರು 13 ವರ್ಷಗಳ ಕಾಲ ಸಂಸದರಾಗಿದ್ದರು.</p>



<p class="wp-block-paragraph">ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ವೆಂಗುರ್ಲಾದಲ್ಲಿ ಪೋಸ್ಟ್ ಮಾಸ್ಟರ್‌ ಒಬ್ಬರ ಕಿರಿಯ ಮಗನಾಗಿ 1922 ರಲ್ಲಿ ನಾಥ್‌ ಪೈ ಅವರ ಜನನ. ವೆಂಗುರ್ಲಾದಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಪೂರ್ತಿಗೊಳಿಸಿದ ನಂತರ ಉನ್ನತ ಶಿಕ್ಷಣಕ್ಕಾಗಿ ಅವರು ಬೆಳಗಾವಿಗೆ ತೆರಳುತ್ತಾರೆ. 1942 ರಲ್ಲಿ ಕ್ವಿಟ್‌ ಇಂಡಿಯಾ ಹೋರಾಟದ ಸಂದರ್ಭದಲ್ಲಿ ನಾಥ್‌ ಪೈ ಮತ್ತು ಗೆಳೆಯರು ಸೇರಿಕೊಂಡು ಬೆಳಗಾವಿಯ ಪೊಲೀಸ್‌ ಠಾಣೆಯ ಮೇಲೆ ದಾಳಿ ನಡೆಸಿದ್ದರು. ಅದರ ನಂತರ ತಲೆಮರೆಸಿಕೊಂಡಿದ್ದ ಅವರು ಕೊನೆಗೆ ಬಂಧಿತರಾಗಿದ್ದರು. ಪೊಲೀಸರಿಂದ ದೌರ್ಜನ್ಯಕ್ಕೊಳಗಾಗಿ ಸುಮಾರು 19 ತಿಂಗಳ ಕಾಲ ಅವರು ಜೈಲಿನಲ್ಲಿ ಕಳೆದಿದ್ದರು. ಹಾಗಾಗಿ ಅವರ ಶಿಕ್ಷಣಕ್ಕೂ ತೊಡಕುಂಟಾಗಿತ್ತು. 1940 ರಲ್ಲಿ ಅವರು ಮೆಟ್ರಿಕ್ಯುಲೇಷನ್‌ ಮುಗಿಸಿದ್ದರು. 1945 ರಲ್ಲಿ ಇಂಟರ್ಮೀಡಿಯೇಟ್‌ ಕಾಲೇಜು ಮುಗಿಸುವ ಅವರು 1947 ರಲ್ಲಿ ಪದವಿ ಪಡೆಯುತ್ತಾರೆ. ಅದರ ನಂತರ ತನ್ನ 25 ನೇ ಹರೆಯದಲ್ಲಿ ಬ್ಯಾರಿಸ್ಟರ್‌ ಅಟ್‌ ಲಾ ಪೂರ್ತಿ ಮಾಡಲೆಂದು ಲಂಡನ್‌ಗೆ ತೆರಳುತ್ತಾರೆ. ಮುಂದಿನ ನಾಲ್ಕು ವರ್ಷಗಳನ್ನು ಅವರು ಅಲ್ಲಿಯೇ ಕಳೆಯುತ್ತಾರೆ.</p>



<p class="wp-block-paragraph">ಲಂಡನ್ನಿನಲ್ಲಿ ಅವರು ಇಂಡಿಯನ್‌ ಮಜ್ಲಿಸ್‌ನ ಅಧ್ಯಕ್ಷರಾಗಿ ಮತ್ತು ಲೀಗ್‌ ಅಗೈನ್ಸ್ಟ್‌ ಇಂಪೀರಿಯಲಿಸಂನ ಉಪಾಧ್ಯಕ್ಷರಾಗುತ್ತಾರೆ. 1951 ರಲ್ಲಿ ಲಂಡನ್ನಿನಲ್ಲಿ “ಬ್ರಿಟಿಷ್‌ ಏಷ್ಯನ್‌ ಸೋಷಿಯಲಿಸ್ಟ್‌ ಫೆಲೋಶಿಪ್‌” ಆಯೋಜಿಸಲ್ಪಟ್ಟಾಗ ಕ್ಲೆಮೆಂಟ್‌ ಆಟ್ಲೀ ಅದರ ಅಧ್ಯಕ್ಷ ಮತ್ತು ನಾಥ್‌ ಪೈ ಉಪಾಧ್ಯಕ್ಷರಾಗುತ್ತಾರೆ. ಲೇಬರ್‌ ಪಾರ್ಟಿ ನಡೆಸುತ್ತಿದ್ದ ಸುಧಾರಿತ ಆಡಳಿತವನ್ನು ಹತ್ತಿರದಿಂದ ಕಾಣುವ ಅವರು, ಆ ಪಕ್ಷದ ಸಹಾನುಭೂತಿ ಭರಿತ ರಾಜಕಾರಣದಿಂದ ಪ್ರಭಾವಿತರಾಗುತ್ತಾರೆ. ಈ ಕಾಲದಲ್ಲಿ ಸಂಸದೀಯ ಪ್ರಜಾಪ್ರಭುತ್ವದ ಮೇಲಿನ ಅವರ ನಂಬಿಕೆ ಬಹಳವೇ ಗಟ್ಟಿಗೊಳ್ಳುತ್ತದೆ.</p>



<p class="wp-block-paragraph">ಸೋಷಿಯಲಿಸ್ಟ್‌ ಇಂಟರ್ನ್ಯಾಷನಲ್‌ ಸಂಘಟನೆಯ ಯುವ ಘಟಕವಾದ ಇಂಟರ್ನ್ಯಾಷನಲ್‌ ಯೂನಿಯನ್‌ ಆಫ್‌ ಸೋಷಿಯಲಿಸ್ಟ್‌ ಯೂತ್‌ 1954 ರಲ್ಲಿ ಕೋಪನ್‌ ಹೇಗನ್‌ನಲ್ಲಿ ಸಮ್ಮೇಳನ ನಡೆಸಿದಾಗ ನಾಥ್‌ ಪೈ ಅವರನ್ನು ಅದರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ. ನಂತರದ ನಾಲ್ಕು ವರ್ಷಗಳ ಕಾಲ ಅವರು ಆ ಸ್ಥಾನದಲ್ಲಿದ್ದರು. ಅಲ್ಲಿಯೇ ಅವರು ಆಸ್ಟ್ರಿಯಾದ ಯುವ ಸಮಾಜವಾದಿ ಕ್ರಿಸ್ಟೆಲ್‌ ಅವರನ್ನು ಭೇಟಿಯಾಗುವುದು. ನಂತರ ಅವರಿಬ್ಬರು ವಿವಾಹಿತರಾಗುತ್ತಾರೆ. ನಾಥ್‌ ಪೈ ಅವರು ಜರ್ಮನ್‌ ಮತ್ತು ಫ್ರೆಂಚ್‌ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದರು.</p>



<p class="wp-block-paragraph">ಸಂಸದರಾಗಿ<br>ನಾಥ್‌ ಪೈ ಅವರು ತನ್ನ ಸಣ್ಣ ಪ್ರಾಯದಲ್ಲಿಯೇ ಉನ್ನತ ಸ್ಥಾನಕ್ಕೆ ಏರಿದ್ದರು. 1957 ರಿಂದ 1971 ರವರೆಗೆ ಸತತವಾಗಿ ಮೂರು ಅವಧಿಗೆ ಅವರು ವಿರೋಧ ಪಕ್ಷದ ಪ್ರಮುಖ ಧ್ವನಿಯಾಗಿದ್ದರು. ರಾಜಾಪುರ ಲೋಕಸಭಾ ಕ್ಷೇತ್ರದಿಂದ 1957, 1962 ಮತ್ತು 1967 ರ ಚುನಾವಣೆಗಳಲ್ಲಿ ಅವರು ಗೆದ್ದಿದ್ದರು.</p>



<p class="wp-block-paragraph">ಸಂಸದರಾಗಿ ತನ್ನ ಮೊಟ್ಟ ಮೊದಲ ಅವಧಿಯಲ್ಲಿಯೇ ಅವರ ಪ್ರತಿಭೆ ಮತ್ತು ಅಪ್ರತಿಮ ಮಾತುಗಾರಿಕೆಯು ಎದ್ದು ಕಾಣುವಂತಿತ್ತು. 1957 ರಲ್ಲಿ ಲೋಕಸಭೆಯಲ್ಲಿ ತನ್ನ ಚೊಚ್ಚಲ ಭಾಷಣ ಮಾಡುವ ಪೈ ಅವರನ್ನು ಸ್ವತಃ ಸ್ಪೀಕರ್‌ ಸರ್ದಾರ್‌ ಹುಕುಂ ಸಿಂಗ್‌ ಅವರು ಅಭಿನಂದಿಸಿದ್ದರು. ಅವರ ಭಾಷಣದಿಂದ ಪ್ರಭಾವಿತರಾಗಿದ್ದ ಪ್ರಧಾನಿ ನೆಹರೂ, ಅವರನ್ನು ತನ್ನ ಕೊಠಡಿಗೆ ಕರೆಸಿಕೊಂಡು ಧ್ವನಿಯಿಲ್ಲದ ಜನರಿಗೆ ಧ್ವನಿಯಾಗಲು ಮತ್ತು ಅಂಚಿಗೆ ತಳ್ಳಲ್ಪಟ್ಟವರ ಆಸರೆಯಾಗಲು ಲೋಕಸಭೆಯನ್ನು ವೇದಿಕೆಯಾಗಿ ಬಳಸಿಕೊಳ್ಳಬೇಕೆಂದು ಹೇಳಿದ್ದರು. ಬೆಳಗಿನ ಉಪಹಾರಕ್ಕೆ ನೆಹರೂ ಅವರು ಪೈಯನ್ನು ಆಮಂತ್ರಿಸುತ್ತಿದ್ದರು. ಯುವ ಸಂಸದರೊಂದಿಗೆ ನೆಹರೂ ಹಲವಾರು ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳನ್ನು ಚರ್ಚಿಸುತ್ತಿದ್ದರು.</p>



<p class="wp-block-paragraph">ನಮ್ಮ ಲೋಕಸಭೆಯ ಕುರಿತು ಅಧ್ಯಯನ ನಡೆಸುವ ವಿದ್ವಾಂಸರುಗಳ ಪ್ರಕಾರ, ಒಟ್ಟು ಸಾಮರ್ಥ್ಯ ಮತ್ತು ಕಾರ್ಯದಕ್ಷತೆಯನ್ನು ಮಾನದಂಡನವಾಗಿ ಪರಿಗಣಿಸುವುದೇ ಆದರೆ, ಮೂರನೇ ಮತ್ತು ನಾಲ್ಕನೇ ಲೋಕಸಭೆಗಳು ಭಾರತೀಯ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದವು. ಹಿರೇನ್ ಮುಖರ್ಜಿ, ಎ.ಕೆ. ಗೋಪಾಲನ್, ಇಂದ್ರಜಿತ್ ಗುಪ್ತಾ, ಆಚಾರ್ಯ ಕೃಪಲಾನಿ, ನಾಥ್ ಪೈ, ರಾಮಮನೋಹರ ಲೋಹಿಯಾ, ಮಿನೂ ಮಸಾನಿ, ಮಧು ಲಿಮಾಯೆ, ಅಟಲ್ ಬಿಹಾರಿ ವಾಜಪೇಯಿ, ಪಿಲೂ ಮೋದಿ ಮತ್ತಿತರ ದಿಗ್ಗಜರು ಆ ಕಾಲದಲ್ಲಿ ವಿರೋಧ ಪಕ್ಷದಲ್ಲಿದ್ದರು. ಟ್ರೆಷರಿ ಬೆಂಚ್‌ಗಳನ್ನು ಅತಿ ಕಠಿಣ ವಿಮರ್ಶೆಗೆ ಒಳಪಡಿಸುವಲ್ಲಿ ನಾಥ್‌ ಪೈ ತಮ್ಮದೇ ಆದ ಗುರುತನ್ನು ಮೂಡಿಸಿದ್ದರು.</p>



<p class="wp-block-paragraph">“ನಾಥ್‌ ಪೈ ವಿದೇಶಾಂಗ ನೀತಿಯ ಬಗ್ಗೆ ತನ್ನ ವಾದ ಮಂಡಿಸುವಾಗ ಸದನವು ಮಂತ್ರಮುಗ್ದವಾಗಿತ್ತು.” ಎಂದು ಪತ್ರಕರ್ತ ಎಚ್‌.ಕೆ. ದುವಾ ಹೇಳುತ್ತಾರೆ. ಕೆಲವರು ಸಂಸತ್ತಿನಲ್ಲಿ ಅವರು ಮಾಡುವ ಭಾಷಣಗಳನ್ನು ಸುಂದರವಾದ ಸಭೆ ಎಂಬರ್ಥದ “ಇಕೆಬಾನಾ” ಎಂದು ಕರೆಯುತ್ತಿದ್ದರು. 2012 ಏಪ್ರಿಲ್‌ 17 ರಂದು ದಿ ಹಿಂದೂ ಪತ್ರಿಕೆಯಲ್ಲಿ ಗೋಪಾಲಕೃಷ್ಣ ಗಾಂಧಿ ಅವರು ನಾಥ್‌ ಪೈ ಅವರ ಭಾಷಣಗಳ ಕುರಿತು “ಬಿಚ್ಚನೆ ಹಳಿಯುವುದು” ಎಂಬ ಪದ ಬಳಸಿದ್ದರು. ಪತ್ರಕರ್ತರೊಬ್ಬರು ಅವರನ್ನು “ನೆಹರೂಗೆ ತಕ್ಕ ಶಾಸ್ತಿ” ಎಂಬರ್ಥದಲ್ಲಿ ಗುರುತಿಸಿದ್ದರು. ಆದರೆ ಈ ಶಾಸ್ತಿ ಮಾತ್ರ ಕ್ರೂರವಾಗಿರಲಿಲ್ಲ. ಸೌಮ್ಯವೂ ದ್ವೇಷರಹಿತವೂ ಆಗಿತ್ತದು. ಸ್ವತಃ ನೆಹರೂ ಪೈ ಅವರನ್ನು “ಸಜ್ಜನ ರಾಜಕಾರಣಿ” ಎಂದು ಕರೆದಿದ್ದರು.</p>



<p class="wp-block-paragraph">ಪೈ ಅವರು ಇಂಗ್ಲಿಷ್‌ ಮಾತ್ರವಲ್ಲದೆ ಮರಾಠಿಯಲ್ಲೂ ಅತ್ಯುತ್ತಮ ಭಾಷಣಗಾರರೆಂದು ಹೆಸರು ಪಡೆದಿದ್ದರು.</p>



<p class="wp-block-paragraph">1962 ರ ಚೀನಾ ಆಕ್ರಮಣದ ಕುರಿತ ಚರ್ಚೆಯಲ್ಲಿ ಪೈ ಅವರು ಹೀಗೆ ಹೇಳಿದ್ದರು, “ನಮ್ಮ ಕೆಲವು ನಾಯಕರಿಗೆ ಇಚ್ಛಾಶಕ್ತಿ ಹೆಪ್ಪುಗಟ್ಟಿತ್ತು. ನಾಡಿಗಳಲ್ಲಿ ಭಾವನಾತ್ಮಕತೆಯು ಆವರಿಸಿತ್ತು. ನಮ್ಮ ದೇಶಕ್ಕೆ ಬಂದೆರಗಿದ ಈ ಎಲ್ಲ ಆಪತ್ತುಗಳಿಗೆ, ದುರಾದೃಷ್ಟಕ್ಕೆ ಮತ್ತು ದುರಂತಕ್ಕೆ ಇದುವೇ ಕಾರಣವಾಗಿತ್ತು.”</p>



<p class="wp-block-paragraph">ಪೈ ಅವರು ಸಂಸತ್ತಿನಲ್ಲಿ ಹಲವು ಖಾಸಗಿ ಮಸೂದೆಗಳನ್ನು ಮಂಡಿಸಿದ್ದರು. ರಾಜ್ಯಗಳ ಭಾಷಾವಾರು ಪುನರ್ವಿಂಗಡಣೆಗೆ ಸಂಬಂಧಿಸಿದ ಹಾಗೆ ಕೆಲವು ಕುಂದು ಕೊರತೆಗಳನ್ನು ಪರಿಹರಿಸಲು ಒಂದು ಶಾಶ್ವತ ಆಯೋಗವನ್ನು ಸ್ಥಾಪಿಸುವ ಕುರಿತು ಮಸೂದೆಯೊಂದನ್ನು ಅವರು ಮಂಡಿಸಿದ್ದರು. ರಾಜ್ಯಪಾಲರ ನೇಮಕಾತಿಗೆ ಬೇಕಾದ ಮಾರ್ಗಸೂಚಿಗಳನ್ನು ನಿಗದಿಪಡಿಸುವ ಮಸೂದೆಯನ್ನು ಸಹ ಅವರು ಮಂಡಿಸಿದ್ದರು. 1970 ಆಗಸ್ಟ್ 28 ರಂದು, ಸಂವಿಧಾನದ ಮೂಲಭೂತ ಹಕ್ಕುಗಳ ಅಧ್ಯಾಯದಲ್ಲಿ “ಉದ್ಯೋಗದ ಹಕ್ಕನ್ನು” ಸೇರಿಸುವ ಮಸೂದೆಯನ್ನು ಅವರು ಮಂಡಿಸಿದ್ದರು. ಒಂದು ವೇಳೆ “ತುರ್ತು ಪರಿಸ್ಥಿತಿ” ಬಂದರೆ, ಆಗ ಅಧಿಕಾರದ ದುರುಪಯೋಗದ ಸಾಧ್ಯತೆಯನ್ನು ಮನಗಂಡಿದ್ದ ಅವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲೂ ಮೂಲಭೂತ ಹಕ್ಕುಗಳ ಸಂರಕ್ಷಣೆಗಾಗಿ ಒಂದು ಮಸೂದೆಯನ್ನು ಅವರು ಮುಂದಿಟ್ಟಿದ್ದರು. ಅವರು ವಿದೇಶಾಂಗ ವ್ಯವಹಾರಗಳಲ್ಲಿ ಅತಿ ಹೆಚ್ಚು ಆಸಕ್ತಿ ಹೊಂದಿದ್ದರಾದರೂ ಅವರು ಮಂಡಿಸಿದ ಸಂವಿಧಾನ ತಿದ್ದುಪಡಿ ಮಸೂದೆಯಿಂದ ಬಹಳ ಹೆಸರುವಾಸಿಯಾಗಿದ್ದರು.</p>



<p class="wp-block-paragraph">ಸಂಸತ್ತು ಮತ್ತು ಸುಪ್ರೀಂ ಕೋರ್ಟ್‌ ನಡುವಿನ ಆಸ್ತಿ ಹಕ್ಕುಗಳ ಕುರಿತ ಜಟಾಪಟಿ ಯಾವುದೇ ಕಾನೂನು ವಿದ್ಯಾರ್ಥಿಗೂ ಗೊತ್ತಿರುತ್ತದೆ. ಹೆನ್ರಿ ಮತ್ತು ವಿಲಿಯಂ ಗೋಲಕ್‌ ನಾಥ್‌ ಅವರ ಕುಟುಂಬವು ಸುಮಾರು 500 ಎಕರೆಯಷ್ಟು ಕೃಷಿ ಭೂಮಿಯನ್ನು ಹೊಂದಿತ್ತು. ಆದರೆ 1953 ರ ಪಂಜಾಬ್‌ ಸೆಕ್ಯೂರಿಟಿ ಆಂಡ್‌ ಲ್ಯಾಂಡ್‌ ಟೆನ್ಯೂರ್ಸ್‌ ಆಕ್ಟ್‌ ಪ್ರಕಾರ ಕುಟುಂಬದ ಸದಸ್ಯರಿಗೆ ತಲಾ 30 ಎಕರೆಗಿಂತ ಭೂಮಿಯ ಹಕ್ಕು ಇರಲಿಲ್ಲ. ಉಳಿದ ಭೂಮಿಯನ್ನು ಸರಕಾರ ಸ್ವಾಧೀನ ಪಡಿಸಿಕೊಂಡಿತ್ತು. ಭೂಮಿಯನ್ನು ಹೊಂದುವ ತಮ್ಮ ಸಾಂವಿಧಾನಿಕ ಹಕ್ಕನ್ನು ಪಂಜಾಬಿನಲ್ಲಿ ಮೊಟಕುಗೊಳಿಸಲಾಗಿದೆ ಎಂದು ಗೋಲಕ್‌ ನಾಥ್‌ ಕುಟುಂಬವು ಆ ಕಾನೂನನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿತು. 1967 ಫೆಬ್ರವರಿ 27 ರಂದು ಸಂಸತ್ತಿಗೆ ಮೂಲಭೂತ ಹಕ್ಕುಗಳಿಗೆ ತಿದ್ದುಪಡಿ ತರುವ ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿತು. ಆ ಮೂಲಕ ಅವರ ಆಸ್ತಿಯ ಹಕ್ಕನ್ನು ರಕ್ಷಿಸಿತು.</p>



<p class="wp-block-paragraph">ಅದರ ನಂತರ, 1967 ಏಪ್ರಿಲ್‌ 7 ರಂದು ಪೈ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸುತ್ತಾರೆ. ಅದರಲ್ಲಿ ಸುಪ್ರೀಂ ಕೋರ್ಟಿನ ಆದೇಶವನ್ನು ರದ್ದುಗೊಳಿಸಿ ಮೂಲಭೂತ ಹಕ್ಕುಗಳಿಗೆ ತಿದ್ದುಪಡಿ ಮಾಡುವ ಅವಕಾಶವನ್ನು ಸಂಸತ್ತಿನ ಸುಪರ್ದಿಗೆ ತರುತ್ತಾರೆ.</p>



<p class="wp-block-paragraph">ಮಸೂದೆಯನ್ನು ಸದನದಲ್ಲಿ ಮತ್ತು ಆಯ್ಕೆ ಸಮಿತಿಯಲ್ಲಿಯೂ ಚರ್ಚಿಸಲಾಗುತ್ತದೆ. ಈ ಚರ್ಚೆಗಳು ಪೈ ಅವರ ಪಾಂಡಿತ್ಯವನ್ನು ಜಾಹೀರು ಮಾಡುತ್ತವೆ. ಕೆಲವು ವಿಮರ್ಶಕರು ಈ ಮಸೂದೆ ಅಂಗೀಕಾರವಾದರೆ ಸರ್ವಾಧಿಕಾರಕ್ಕೆ ಬಾಗಿಲು ತೆರೆದು ಕೊಟ್ಟಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಅದಕ್ಕೆ ಪೈ ನೀಡಿದ ಉತ್ತರ ಹೀಗಿತ್ತು:<br>“ಇಲ್ಲಿ ಸರ್ವಾಧಿಕಾರ ಬರುವುದನ್ನು ತಡೆಯಲು ಸಾಧ್ಯವಿರುವುದು ಸುಪ್ರೀಂ ಕೋರ್ಟ್‌ ಇರುವ ಕಾರಣಕ್ಕಲ್ಲ. ಬದಲಿಗೆ ನನ್ನ ದೇಶವಾಸಿಗಳು ಪ್ರಜಾಪ್ರಭುತ್ವಕ್ಕೆ ಬದ್ಧರಾಗಿರುವುದರಿಂದ. ನಾವು ಪ್ರಜಾಪ್ರಭುತ್ವವಾಗಿಯೇ ಉಳಿಯುತ್ತೇವೆ. ಅದು ಬಹುಷ ನ್ಯಾಯಾಲಯದ ಕೃಪೆ ಅಥವಾ ವ್ಯಾಖ್ಯಾನದ ಕಾರಣದಿಂದ ಅಲ್ಲ.”</p>



<p class="wp-block-paragraph">ಪೈ ಅವರ ಈ ರಾಜಕೀಯ ಭವಿಷ್ಯವಾಣಿಯು ನಂತರದಲ್ಲಿ ಸಾಬೀತಾಯಿತು.<br>ಕೊನೆಗೆ, ಆಗಿನ ಸರ್ಕಾರವು ಡಿಸೆಂಬರ್ 10, 1968 ರಂದು ಪೈ ಮಂಡಿಸಿದ ಮಸೂದೆಯನ್ನು ಅಂಗೀಕರಿಸುತ್ತದೆ. ಅದಾಗಲೇ ನೀಡಿದ್ದ ಭರವಸೆಯಂತೆ ಮಸೂದೆಯನ್ನು ಸರಕಾರ ಬೆಂಬಲಿಸಬೇಕೆಂದು ಸಚಿವ ಸಂಪುಟ ಸಭೆ ತೀರ್ಮಾನಿಸುತ್ತದೆ.</p>



<p class="wp-block-paragraph">ಪೈ ಒಬ್ಬ ಪ್ರಜಾಪ್ರಭುತ್ವವಾದಿ ಮಾತ್ರವಲ್ಲ, ಅವರೊಬ್ಬ ಸಮಾಜವಾದಿಯೂ ಆಗಿದ್ದರು. ಅವರು ಅಂಚೆ ನೌಕರರ ಸಂಘ ಮತ್ತು ಉತ್ತರ ರೈಲ್ವೆ ಕಾರ್ಮಿಕರ ಸಂಘದ ನಾಯಕರಾಗಿದ್ದರು. 1960 ರಲ್ಲಿ ಕೇಂದ್ರ ಸರ್ಕಾರಿ ನೌಕರರ ಮುಷ್ಕರದ ನೇತೃತ್ವವನ್ನೂ ಅವರು ವಹಿಸಿದ್ದರು. ಗೋವಾವನ್ನು ಪೋರ್ಚುಗೀಸ್ ಆಳ್ವಿಕೆಯಿಂದ ಮುಕ್ತಗೊಳಿಸುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು.</p>



<p class="wp-block-paragraph">ಕೊಂಕಣ ಪ್ರದೇಶದ ಒಟ್ಟು ಅಭಿವೃದ್ಧಿಯ ಭಾಗವಾಗಿ “ಕೊಂಕಣ ರೈಲ್ವೇ”ಯ ಕನಸು ಕಂಡವರು ಪೈ. ಸಂಸದರಾಗಿದ್ದುಕೊಂಡು ಅವರು ಅದಕ್ಕಾಗಿ ದನಿಯೆತ್ತಿದ್ದರು. ಭಾರತದ ಪಶ್ಚಿಮ ಕರಾವಳಿ ರೈಲು ಮಾರ್ಗಕ್ಕಾಗಿ ನಿರಂತರವಾಗಿ ದನಿಯೆತ್ತಿದವರು ಕೂಡ ಹೌದು.</p>



<p class="wp-block-paragraph">ಅವರ ಕನಸು ಕೈಗೂಡುವುದು 1970 ರಲ್ಲಿ. ಆಗಿನ ರೈಲ್ವೇ ಸಚಿವರಾಗಿದ್ದ ಗೋವಿಂದ ಮೆನನ್‌ ಅವರು “ಆಪ್ಟಾ-ಮಂಗಳೂರು” ನಡುವೆ ರೈಲು ಮಾರ್ಗದ ಕುರಿತಾಗಿ ಸರ್ವೇ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆಯೆಂದೂ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದೆಂದೂ ಪೈ ಅವರಿಗೆ ಪತ್ರ ಬರೆದಿದ್ದರು. ನಂತರ 1977 ರಲ್ಲಿ ಪೈ ಅವರ ರಾಜಕೀಯ ಉತ್ತರಾಧಿಕಾರಿಯಂತಿದ್ದ ಮಧು ದಂಡಾವತೆ ಅವರು ರೈಲ್ವೇ ಸಚಿವರಾಗಿದ್ದಾಗ ಕೊಂಕಣ ರೈಲ್ವೇ ಕಾರ್ಯರೂಪಕ್ಕೆ ಬರುತ್ತದೆ.</p>



<p class="wp-block-paragraph">ಭಾಷಾವಾರು ಪ್ರಾಂತ್ಯಗಳ ಪುನರ್ವಿಂಗಡನೆಯಾದಾಗ, ಬೆಳಗಾವಿಯ ಮರಾಠೀ ಭಾಷಿಗರ ಒತ್ತಾಯದಂತೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸದೆ ಕರ್ನಾಟಕಕ್ಕೆ ಸೇರಿಸಲಾಗಿತ್ತು. ಅವರ ಪರವಾಗಿ ವಾದಿಸುವ ಪೈ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಹೋರಾಟ ನಡೆಸುತ್ತಾರೆ.</p>



<p class="wp-block-paragraph">ಬೆಳಗಾವಿಯಲ್ಲಿ ನಡೆದ ಹೋರಾಟದಲ್ಲಿ ಪೊಲೀಸ್‌ ಗುಂಡೇಟಿಗೆ ಕೆಲವು ಮರಾಠಿ ಹೋರಾಟಗಾರರು ಸಾವನ್ನಪ್ಪಿದ್ದರು. ಜನವರಿ 17, 1971 ರ ಆ ಹುತಾತ್ಮರ ದಿನದಂದು ಪೈ ತಮ್ಮ ಅನಾರೋಗ್ಯದ ಹೊರತಾಗಿಯೂ, ವೈದ್ಯರ ಸಲಹೆಯನ್ನು ನಿರ್ಲಕ್ಷಿಸಿಕೊಂಡು ಬೆಳಗಾವಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಸುಮಾರು ಒಂದು ಗಂಟೆ ಕಾಲ ಮಾತನಾಡುತ್ತಾರೆ. ಅಲ್ಲಿ ಅವರು ಸಂಸತ್ತಿನ ಒಳಗೆ ಮತ್ತು ಹೊರಗೆ ಹೋರಾಡಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಮರಾಠಿ ಭಾಷಿಕ ಜನರು ತನ್ನ ಮೇಲೆ ಸುರಿಸಿದ ಪ್ರೀತಿ ಮತ್ತು ಮಮತೆಯ ಋಣವನ್ನು ತಾನು ತೀರಿಸಿದ್ದೇನೆ ಎಂದು ಹೇಳುವ ಅವರು, ವೇದಿಕೆಯಲ್ಲಿ ಕುಸಿದು ಬೀಳುತ್ತಾರೆ. ಮರುದಿನ, ಅಂದರೆ ಜನವರಿ 18, 1971 ರಂದು ಅವರು ನಿಧನರಾಗುತ್ತಾರೆ. ಬರಲಿದ್ದ ಸಾರ್ವತ್ರಿಕ ಚುನಾವಣೆಯ ಕೆಲವೇ ದಿನಗಳ ಮೊದಲು ತಮ್ಮ 48 ನೇ ವಯಸ್ಸಿನಲ್ಲಿ ಹೀಗೆ ಅವರು ತನ್ನ ಯಾತ್ರೆ ಮುಗಿಸುತ್ತಾರೆ. ಸಮಾಜವಾದಿ ಗೆಳೆಯರಾಗಿದ್ದ ಮಧು ದಂಡಾವತೆ ನಂತರದಲ್ಲಿ ರಾಜಾಪುರ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾಗುತ್ತಾರೆ.</p>



<p class="wp-block-paragraph"><strong><em>ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.</em></strong></p>
]]></content:encoded>
					
		
		
			</item>
		<item>
		<title>ಬೆಳ್ಳಿಪರದೆಗೆ &#8216;ಮಣ್ ವಾಸನೈ&#8217; ತಂದ &#8216;ಇಯಕ್ಕುನಾಥ್‌ ಇಮಯಂ&#8217; ಭಾರತಿರಾಜ!</title>
		<link>https://peepalmedia.com/iyakkunath-imayam-is-bharathirajas-man-vasanai-which/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 10 Jun 2026 14:44:36 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://peepalmedia.com/?p=79657</guid>

					<description><![CDATA[&#8220;ಭಾರತೀಯ ಚಿತ್ರರಂಗದ ಇತಿಹಾಸದ ಪುಟಗಳನ್ನು ತಿರುವಿದರೆ, ಅಲ್ಲಿ ಕೃತಕ ಬಣ್ಣಗಳಿಲ್ಲದ, ಪೌಡರ್-ಮೇಕಪ್‌ಗಳ ಹಂಗಿಲ್ಲದ, ಬೆವರಿನ ಮತ್ತು ಹಳ್ಳಿಯ ಮಣ್ಣಿನ ನೈಜ ವಾಸನೆ ಬೀರುವ ಒಂದು ಹೆಸರಿದೆ. ಆ ಹೆಸರೇ &#8216;ಇಯಕ್ಕುನಾಥ್ ಇಮಯಂ&#8217; ಭಾರತಿರಾಜ..&#8221; ವಿಆರ್ ಕಾರ್ಪೆಂಟರ್ ಅವರ ಬರಹದಲ್ಲಿ ಭಾರತೀಯ ಚಿತ್ರರಂಗದ ಇತಿಹಾಸದ ಪುಟಗಳನ್ನು ತಿರುವಿದರೆ, ಅಲ್ಲಿ ಕೃತಕ ಬಣ್ಣಗಳಿಲ್ಲದ, ಪೌಡರ್-ಮೇಕಪ್‌ಗಳ ಹಂಗಿಲ್ಲದ, ಬೆವರಿನ ಮತ್ತು ಹಳ್ಳಿಯ ಮಣ್ಣಿನ ನೈಜ ವಾಸನೆ ಬೀರುವ ಒಂದು ಹೆಸರಿದೆ. ಆ ಹೆಸರೇ &#8216;ಇಯಕ್ಕುನಾಥ್ ಇಮಯಂ&#8217; (ನಿರ್ದೇಶಕರ ಹಿಮಾಲಯ) ಭಾರತಿರಾಜ. ಕೇವಲ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p class="wp-block-paragraph">&#8220;ಭಾರತೀಯ ಚಿತ್ರರಂಗದ ಇತಿಹಾಸದ ಪುಟಗಳನ್ನು ತಿರುವಿದರೆ, ಅಲ್ಲಿ ಕೃತಕ ಬಣ್ಣಗಳಿಲ್ಲದ, ಪೌಡರ್-ಮೇಕಪ್‌ಗಳ ಹಂಗಿಲ್ಲದ, ಬೆವರಿನ ಮತ್ತು ಹಳ್ಳಿಯ ಮಣ್ಣಿನ ನೈಜ ವಾಸನೆ ಬೀರುವ ಒಂದು ಹೆಸರಿದೆ. ಆ ಹೆಸರೇ &#8216;ಇಯಕ್ಕುನಾಥ್ ಇಮಯಂ&#8217; ಭಾರತಿರಾಜ..&#8221; ವಿಆರ್ ಕಾರ್ಪೆಂಟರ್ ಅವರ ಬರಹದಲ್ಲಿ </p>
</blockquote>



<p class="wp-block-paragraph">ಭಾರತೀಯ ಚಿತ್ರರಂಗದ ಇತಿಹಾಸದ ಪುಟಗಳನ್ನು ತಿರುವಿದರೆ, ಅಲ್ಲಿ ಕೃತಕ ಬಣ್ಣಗಳಿಲ್ಲದ, ಪೌಡರ್-ಮೇಕಪ್‌ಗಳ ಹಂಗಿಲ್ಲದ, ಬೆವರಿನ ಮತ್ತು ಹಳ್ಳಿಯ ಮಣ್ಣಿನ ನೈಜ ವಾಸನೆ ಬೀರುವ ಒಂದು ಹೆಸರಿದೆ. ಆ ಹೆಸರೇ &#8216;ಇಯಕ್ಕುನಾಥ್ ಇಮಯಂ&#8217; (ನಿರ್ದೇಶಕರ ಹಿಮಾಲಯ) ಭಾರತಿರಾಜ. ಕೇವಲ ಮನರಂಜನೆಯ ಸಾಧನವಾಗಿದ್ದ ಕ್ಯಾಮೆರಾವನ್ನು ಸಮಾಜದ ಕನ್ನಡಿಯನ್ನಾಗಿ ಪರಿವರ್ತಿಸಿ, ಕೃತಕ ಸ್ಟುಡಿಯೋಗಳ ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿದ್ದ ಚಿತ್ರರಂಗವನ್ನು ಧೂಳು ಹಿಡಿದ ಹಳ್ಳಿಗಳ ಮಣ್ಣಿನತ್ತ ಕೈಹಿಡಿದು ನಡೆಸಿದ ಅವರು, ಇಂದು ಬಾರದ ಲೋಕಕ್ಕೆ ಪಯಣಿಸಿದ್ದಾರೆ.</p>



<p class="wp-block-paragraph">ಶೂನ್ಯ ಆವರಿಸಿದ ಆ ಕರಾಳ ದಿನ ಮತ್ತು ಪುತ್ರಶೋಕದ ಕಣ್ಣೀರು<br>ಜೂನ್ 10, 2026. ಆ ದಿನ ಬೆಳಗಾಗಿದ್ದು ಒಂದು ಭೀಕರ ಮೌನದೊಂದಿಗೆ. ಚೆನ್ನೈನ ತಮ್ಮ ನಿವಾಸದಲ್ಲಿ 84 ವರ್ಷದ ಆ ಹಿರಿಯ ಜೀವ ಕೊನೆಯುಸಿರೆಳೆದಾಗ, ಇಡೀ ದಕ್ಷಿಣ ಭಾರತದ ಚಿತ್ರರಂಗವೇ ಬಿಕ್ಕಿ ಬಿಕ್ಕಿ ಅತ್ತಿತು. ವಯೋಸಹಜ ಕಾಯಿಲೆಗಳು, ಉಸಿರಾಟದ ತೊಂದರೆ ಅವರ ದೇಹವನ್ನು ಬಳಲಿಸಿದ್ದರೂ, ವಾಸ್ತವವಾಗಿ ಅವರನ್ನು ಒಳಗಿನಿಂದಲೇ ಕೊಂದು ಹಾಕಿದ್ದು ತಡೆಯಲಾರದ &#8216;ಪುತ್ರಶೋಕ&#8217;.</p>



<p class="wp-block-paragraph">ಹೌದು, ಮಾರ್ಚ್ 25, 2025 ರಂದು ತಮ್ಮ ಪ್ರೀತಿಯ ಮಗ, ಕೇವಲ 48 ವರ್ಷದ ಮನೋಜ್ ಭಾರತಿರಾಜ ಅವರನ್ನು ಹೃದಯಾಘಾತದಿಂದ ಕಳೆದುಕೊಂಡಾಗ ಆ ತಂದೆಯ ಹೃದಯ ಛಿದ್ರವಾಗಿತ್ತು. ಮಗನ ಅಗಲಿಕೆಯ ಆಘಾತದಿಂದ ಅವರು ತೀವ್ರ ಖಿನ್ನತೆಗೆ ಒಳಗಾಗಿದ್ದರು. ಡಿಸೆಂಬರ್ 2025 ರಲ್ಲಿ ಉಸಿರಾಟದ ತೊಂದರೆಯಿಂದ ಎಂಜಿಎಂ ಆಸ್ಪತ್ರೆಯ ಐಸಿಯು ಸೇರಿದ್ದ ಅವರನ್ನು, ಮಗನ ನೆನಪುಗಳಿಂದ ದೂರವಿಡಲು ಮಲೇಶಿಯಾದಲ್ಲಿದ್ದ ಮಗಳ ಬಳಿಗೂ ಕಳುಹಿಸಲಾಗಿತ್ತು. ಆದರೂ ಆ ತಂದೆಯ ಕರುಳು ಮಗನ ಸಾವಿನ ನೋವಿನಿಂದ ಹೊರಬರಲೇ ಇಲ್ಲ. ಅಂತಿಮವಾಗಿ ಅದೇ ಕೊರಗಿನಲ್ಲಿ ಅವರು ಇಹಲೋಕ ತ್ಯಜಿಸಿದರು. &#8220;ಅವರ ಜೊತೆ ಎರಡು ಜಡೆ ಹಾಕಿಕೊಂಡು ಒಂದು ಸಿನಿಮಾ ಮಾಡಬೇಕು ಅನ್ನೋ ನನ್ನ ಕನಸು ನನಸಾಗಲೇ ಇಲ್ಲ” ಎಂದು ನಟಿ ಖುಷ್ಟೂ ಕಣ್ಣೀರು ಹಾಕಿದರೆ, ಮುಖ್ಯಮಂತ್ರಿ ವಿಜಯ್ ಹಾಗೂ ನಟ, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸೇರಿದಂತೆ ಇಡೀ ದೇಶವೇ ಆ ಮಹಾನ್ ಚೇತನಕ್ಕೆ ಅಂತಿಮ ನಮನ ಸಲ್ಲಿಸಿತು.</p>



<p class="wp-block-paragraph"><strong>ಹಳ್ಳಿಯ ಮಣ್ಣಿನಿಂದ ಕಲಾ ಪ್ರಪಂಚದೆಡೆಗೆ</strong><br>ಅವರ ಕಥೆ ಶುರುವಾಗೋದು ಜುಲೈ 17, 1941 ರಲ್ಲಿ ಅಂದಿನ ಮದ್ರಾಸ್ ಪ್ರೆಸಿಡೆನ್ಸಿಯ ಮಧುರೈ ಜಿಲ್ಲೆಯ (ಇಂದಿನ ಥೇಣಿ) ಅಲ್ಲಿನಗರಂ ಅನ್ನೋ ಸುಂದರ ಹಳ್ಳಿಯಿಂದ. ತಂದೆ ಪೆರಿಯಮಾಯ ತೇವರ್, ತಾಯಿ ಕರುತಮ್ಮಾಳ್ ಅವರ ಮಡಿಲಲ್ಲಿ ಜನಿಸಿದ &#8216;ಚಿನ್ನಸಾಮಿ&#8217;ಯೇ ಮುಂದಿನ ಭಾರತಿರಾಜ. ತಾಯಿಯ ಮೇಲಿನ ಅಪಾರ ಪ್ರೀತಿಯಿಂದಲೇ ತಮ್ಮ ಹೆಸರಿನ ಜೊತೆ ತಾಯಿಯ ಹೆಸರಿನ ಮೊದಲ ಅಕ್ಷರ &#8216;K&#8217; ಯನ್ನು ಸೇರಿಸಿಕೊಂಡರು.</p>



<p class="wp-block-paragraph">ಕಾಡು-ಮೇಡು ಅಲೆಯುವುದು, ಬೇಟೆಯಾಡೋದು, ತಮಿಳು ಸಾಹಿತ್ಯದ ಓದು ಅವರ ಬಾಲ್ಯವನ್ನು ಆವರಿಸಿತ್ತು. ವೇದಿಕೆ ಮೇಲೆ ನಿಂತು ಹಳ್ಳಿ-ಹಳ್ಳಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದ ಆ ಅದ್ಭುತ ಭಾಷಣಕಾರ, ಹೊಟ್ಟೆಪಾಡಿಗಾಗಿ 1963 ರಲ್ಲಿ ತಿಂಗಳಿಗೆ ಕೇವಲ 75 ರೂಪಾಯಿ ಸಂಬಳಕ್ಕೆ ಹೆಲ್ತ್ ಡಿಪಾರ್ಟ್‌ ಮೆಂಟ್‌ನಲ್ಲಿ ಸ್ಯಾನಿಟರಿ ಮತ್ತು ಮಲೇರಿಯಾ ಇನ್ಸ್‌ಪೆಕ್ಟರ್ ಆಗಿ ಕೆಲಸಕ್ಕೆ ಸೇರಿದ್ದರು. ಆ ಕೆಲಸದ ನಿಮಿತ್ತ ಮೈಲುಗಟ್ಟಲೆ ಹಳ್ಳಿಗಳನ್ನು ಕಾಲ್ನಡಿಗೆಯಲ್ಲಿ ಸುತ್ತಿದ ಅವರು, ಬಡ ಜನರ ಕಷ್ಟ, ಪ್ರೀತಿ-ದ್ವೇಷಗಳನ್ನು ಅಕ್ಷರಶಃ ಕಂಡು ಬೆಳೆದರು. ಇದೇ ಸಮಯದಲ್ಲಿ ಪಪುರಂನಲ್ಲಿ ಅವರಿಗೆ ಇಳಯರಾಜ ಮತ್ತು ಗಂಗೈ ಅಮರನ್ ಅವರ ಸ್ನೇಹವಾಯಿತು. ಆ ಗೆಳೆತನ ಮುಂದೆ ಇತಿಹಾಸವನ್ನೇ ಸೃಷ್ಟಿಸಿತು.</p>



<p class="wp-block-paragraph"><strong>ಪುಟ್ಟಣ್ಣ ಕಣಗಾಲ್ ಗರಡಿ</strong><br>ಭಾರತಿರಾಜ ಅವರ ಕಲಾತ್ಮಕ ಒಳನೋಟಗಳ ಬಗ್ಗೆ ಮಾತಾಡುವಾಗ ಕನ್ನಡಿಗರಾದ ನಮ್ಮ ಎದೆ ಹೆಮ್ಮೆಯಿಂದ ಉಬ್ಬುತ್ತದೆ. ಏಕೆಂದರೆ, ಅವರೊಳಗಿನ ಕಥೆಗಾರನಿಗೆ ನೀರೆರೆದು ಪೋಷಿಸಿದ್ದು ನಮ್ಮ ಕನ್ನಡದ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್. ಜಿ.ಕೆ.ವೆಂಕಟೇಶ್ ಅವರ ನೆರವಿನಿಂದ ಪುಟ್ಟಣ್ಣ ಅವರಿಗೆ ಸಹಾಯಕರಾಗಿ ಸೇರಿದ ಭಾರತಿರಾಜ, ಪಾತ್ರಗಳ ಮನೋವೈಜ್ಞಾನಿಕ ವಿಶ್ಲೇಷಣೆ, ಪ್ರಕೃತಿಯನ್ನು ಒಂದು ಪಾತ್ರವನ್ನಾಗಿಸುವ ಕಲೆ ಮತ್ತು ಮಹಿಳೆಗೆ ನೀಡಬೇಕಾದ ಘನತೆಯನ್ನು ಪುಟ್ಟಣ್ಣ ಅವರಿಂದಲೇ ಕಲಿತರು.</p>



<p class="wp-block-paragraph">1970 ರ ದಶಕದಲ್ಲಿ ತಮಿಳು ಸಿನಿಮಾ ಕೃತಕ ಸೆಟ್‌ಗಳ, ಬಣ್ಣ-ಬಣ್ಣದ ಸೂಟ್-ಬೂಟ್‌ಗಳ ಮಾಯಾಲೋಕದಲ್ಲಿ ಕಳೆದುಹೋಗಿತ್ತು. ಆ ಕಾಲದಲ್ಲಿ 35 ವರ್ಷದ ಯುವಕನೊಬ್ಬ &#8216;ಮಯಿಲು&#8217; ಎಂಬ ಕಥೆ ಹಿಡಿದುಕೊಂಡು ನಿರ್ಮಾಪಕರಿಗಾಗಿ ಅಲೆಯುತ್ತಿದ್ದ. ಹೀರೋಗೆ ದೈಹಿಕ ನ್ಯೂನತೆಯಿದೆ, ಇದರಲ್ಲಿ ಗ್ಲಾಮರ್ ಇಲ್ಲ ಎಂದು ಎಲ್ಲರೂ ತಿರಸ್ಕರಿಸಿದರು. ಅಂತಿಮವಾಗಿ ಎಸ್.ಎ. ರಾಜ್‌ಕಣ್ಣು ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದರು.</p>



<p class="wp-block-paragraph">ಸೆಪ್ಟೆಂಬರ್ 5, 1977 ರಂದು ಬಿಡುಗಡೆಯಾದ 16 ವಯದಿನಿಲೆ&#8217; ಕೇವಲ ಚಿತ್ರವಾಗಿರಲಿಲ್ಲ. ಅದೊಂದು ಭೂಕಂಪವಾಗಿತ್ತು. ಕ್ಯಾಮೆರಾವನ್ನು ನೇರವಾಗಿ ಹಳ್ಳಿಯ ದೂಳಿನ ರಸ್ತೆಗಳಿಗೆ ತಂದಿಟ್ಟರು. ಕುಂಟುವ &#8216;ಚಪ್ಪಾಣಿ&#8217;ಯಾಗಿ ಕಮಲ್ ಹಾಸನ್, &#8220;ಇದು ಎಪ್ಪಿಡಿ ಇರುಕ್ಕು?” ಎನ್ನುವ ಕ್ರೂರ &#8216;ಪರಟ್ಟೆ&#8217; ಆಗಿ ರಜನಿಕಾಂತ್ ಮತ್ತು ಮುಗ್ಧ &#8216;ಮಯಿಲ್&#8217; ಆಗಿ ಶ್ರೀದೇವಿ ಬೆಳ್ಳಿಪರದೆಯ ಮೇಲೆ ಜೀವಿಸಿದರು. ಈ ಚಿತ್ರ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ್ದಲ್ಲದೆ, ನೈಜ ಸಿನಿಮಾಗಳ ಮಹಾಪೂರವನ್ನೇ ಸೃಷ್ಟಿಸಿತು.</p>



<p class="wp-block-paragraph">ಅಲ್ಲಿಂದ ಮುಂದೆ ಅವರದ್ದು ಹಿಂತಿರುಗಿ ನೋಡದ ಪಯಣ</p>



<ul class="wp-block-list">
<li>1978 ರ &#8216;ಕಿಳಕ್ಕೆ ಪೋಗುಂ ರೈಲ್&#8217; ಹಳ್ಳಿಯ ಪ್ರೇಮ ಮತ್ತು ಮೂಢನಂಬಿಕೆಗಳನ್ನು ತೆರೆದಿಟ್ಟರೆ, ಅದೇ ವರ್ಷ ಬಂದ ಕಮಲ್ ಹಾಸನ್ ಅಭಿನಯದ &#8216;ಸಿಗಪ್ಪು ರೋಜಾಕ್ಕಳ್&#8217; ಸೈಕೋಪಾತಿಕ್ ಕಿಲ್ಲರ್ ಕಥೆಯ ಮೂಲಕ ವಿಮರ್ಶಕರ ಬಾಯಿ ಮುಚ್ಚಿಸಿತು.</li>



<li>1981 ರ &#8216;ಅಲೈಗಲ್ ಒಯುವತಿ&#8217; ಧರ್ಮ-ಜಾತಿಗಳನ್ನು ಮೀರಿದ ಪ್ರೇಮಕಾವ್ಯವಾಯಿತು. ಗ್ಲಾಮರ್ ಗೊಂಬೆಯಾಗಿದ್ದ ಸಿಲ್ಕ್ ಸ್ಮಿತಾಗೆ ಅತ್ಯಂತ ಭಾವನಾತ್ಮಕ ಪಾತ್ರ ನೀಡಿದ್ದು ಇವರ ಹೆಗ್ಗಳಿಕೆ.</li>



<li>1985 ರ &#8216;ಮುದಲ್ ಮರಿಯಾ&#8217; ಅಂತೂ ಭಾರತೀಯ ಚಿತ್ರರಂಗದ ಕಲ್ಟ್ ಕ್ಲಾಸಿಕ್. ಲೆಜೆಂಡ್ ಶಿವಾಜಿ ಗಣೇಶನ್ ಅವರ ಅತಿರಂಜಿತ ನಟನೆಯನ್ನು ಬಿಡಿಸಿ, ಅತ್ಯಂತ ಶಾಂತ, ಮೌನ ನಟನೆಯನ್ನು ಹೊರತೆಗೆದರು. ಹಳ್ಳಿಯ ಮುಖಂಡ ಮತ್ತು ಬಡ ಹುಡುಗಿಯ ನಡುವಿನ ಆ ಪ್ಲಾಟೋನಿಕ್ ಸಂಬಂಧ ಇಂದಿಗೂ ರೋಮಾಂಚನ ಮೂಡಿಸುತ್ತದೆ.</li>
</ul>



<p class="wp-block-paragraph"><strong>ಸಮಾಜವನ್ನು ಎಚ್ಚರಿಸಿದ ಸಿನಿಮಾ ಅಸ್ತ್ರಗಳು (1988-1995)</strong><br>ಸಿನಿಮಾ ಎಂಬುದು ಕೇವಲ ದುಡ್ಡು ಮಾಡುವ ಯಂತ್ರವಲ್ಲ, ಅದೊಂದು ಸಾಮಾಜಿಕ ಜವಾಬ್ದಾರಿ ಎಂದು ಅವರು ನಂಬಿದ್ದರು. 1988 ರ &#8216;ವೇದಂ ಪುದಿದು&#8217; ಚಿತ್ರದಲ್ಲಿ ಜಾತಿ ವ್ಯವಸ್ಥೆಯ ಕ್ರೂರ ಮುಖಗಳನ್ನು ಎತ್ತಿ ತೋರಿಸಿದರು. 1994 ರಲ್ಲಿ ಬಂದ &#8216;ಕರುತಮ್ಮ&#8217; ಚಿತ್ರ ಹೆಣ್ಣು ಭ್ರೂಣ ಹತ್ಯೆಯೆಂಬ ಅಮಾನುಷ ಪದ್ದತಿಯ ವಿರುದ್ಧ ಸಿಡಿದೆದ್ದು, ಇಡೀ ದೇಶದ ಕಣ್ಣು ತೆರೆಸಿತು ಮತ್ತು ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. 1993 ರ &#8216;ಕಿಳಕ್ಕು ಚೀಮಯಿಲೆ&#8217; ಅಣ್ಣ-ತಂಗಿಯ ಪವಿತ್ರ ಬಾಂಧವ್ಯದ ಕಾವ್ಯವಾಯಿತು.</p>



<p class="wp-block-paragraph"><strong>&#8220;ಎನ್ ಇನಿಯ ತಮಿಳ್ ಮಕ್ಕಳೇ”</strong><br>ಪ್ರತಿ ಚಿತ್ರದ ಆರಂಭದಲ್ಲಿ ಪರದೆಯ ಮೇಲೆ ಬಂದು, ನಗುಮೊಗದಿಂದ ಕೈಮುಗಿದು &#8220;ಎನ್ ಇನಿಯ ತಮಿಳ್ ಮಕ್ಕಳೇ&#8221; ಎಂದು ತಮ್ಮ ಕಂಚಿನ ಕಂಠದಲ್ಲಿ ಪ್ರೇಕ್ಷಕರೊಂದಿಗೆ ಮಾತನಾಡುತ್ತಿದ್ದ ಅವರು, ಪ್ರೇಕ್ಷಕ ಮತ್ತು ನಿರ್ದೇಶಕನ ನಡುವಿನ ಗೋಡೆಯನ್ನು ಒಡೆದುಹಾಕಿದರು.</p>



<p class="wp-block-paragraph">ಹೊಸ ಪ್ರತಿಭೆಗಳನ್ನು ಹುಡುಕುವುದರಲ್ಲಿ ಅವರು ಸಿದ್ಧಹಸ್ತರು. ತಮ್ಮ ನಾಯಕಿಯರಿಗೆ &#8216;R&#8217; ಅಕ್ಷರದಿಂದ ಶುರುವಾಗುವ ಹೆಸರಿಡುವ ಅವರ ಸೆಂಟಿಮೆಂಟ್ ಇತಿಹಾಸ ಸೃಷ್ಟಿಸಿತು. ರಾಧಿಕಾ, ರಾಧಾ, ರೇವತಿ, ರೇಖಾ, ರಂಜಿತಾ &#8211; ಇವರೆಲ್ಲರೂ ದಕ್ಷಿಣ ಭಾರತದ ಚಿತ್ರರಂಗವನ್ನು ಆಳಿದರು. ಕೇವಲ ನಟರಷ್ಟೇ ಅಲ್ಲ, ಕೆ. ಭಾಗ್ಯರಾಜ್. ಮಣಿವಣ್ಣನ್, ಪಾರ್ಥಿಬನ್ ಅವರಂತಹ ದಿಗ್ಗಜ ನಿರ್ದೇಶಕರ ಪಡೆಯನ್ನೇ ಸೃಷ್ಟಿಸಿ, &#8216;ಭಾರತಿರಾಜ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೆನೆಮಾ&#8217; (BRIIC) ಮೂಲಕ ಕಿರಿಯರಿಗೆ ದಾರಿದೀಪವಾದರು.</p>



<p class="wp-block-paragraph"><strong>ಇಳಯರಾಜ-ಭಾರತಿರಾಜ: ನಾದ ಮತ್ತು ದೃಶ್ಯದ ದೈವಿಕ ಸಮ್ಮಿಲನ</strong><br>ಭಾರತಿರಾಜ ಅವರ ಕಣ್ಣುಗಳಿಗೆ ಇಳಯರಾಜ ಅವರೇ ಉಸಿರಾಗಿದ್ದರು. ಇಬ್ಬರೂ ಸೇರಿ ಜಾನಪದ ಶೈಲಿಯನ್ನು ಚಿತ್ರರಂಗಕ್ಕೆ ತಂದರು. ಇವರ ಮ್ಯಾಜಿಕ್ ಎಷ್ಟಿತ್ತೆಂದರೆ, 1981 ರ ಅಲೈಗಲ್‌ ಒಯುವತಿ&#8217; ಚಿತ್ರದ &#8216;ವಿಳಿಯಿಲೆ ಮಣಿ ವಿಳಿಯಿಲ್ ಹಾಡಿನ ಟ್ಯೂನ್ ಅನ್ನೇ ನಮ್ಮ ಕನ್ನಡದ ಮೇರು ನಟ ಶಂಕ‌ರ್ ನಾಗ್ ಅವರ &#8216;ಗೀತಾ&#8217; ಚಿತ್ರದ &#8216;ಜೊತೆಯಲಿ ಜೊತೆ ಜೊತೆಯಲಿ&#8217; ಹಾಡಿಗೆ ಬಳಸಿಕೊಳ್ಳಲಾಯಿತು. ಈ ಎರಡೂ ಹಾಡುಗಳು ಇಂದಿಗೂ ಅಜರಾಮರ.</p>



<p class="wp-block-paragraph">ಅವರ ಪ್ರಭಾವ ಕನ್ನಡ, ತೆಲುಗು, ಹಿಂದಿ ಚಿತ್ರರಂಗದ ಮೇಲೂ ದಟ್ಟವಾಗಿತ್ತು. ಅವರ &#8216;ಕಡಲೋರ ಕವಿತೈಗಲ್&#8217; ಕನ್ನಡದಲ್ಲಿ &#8216;ಕೌರವ&#8217; (1998) ಆಗಿ, &#8217;16 ವಯದಿನಿಲೆ&#8217; ಚಿತ್ರವನ್ನು ಗೋಲ್ಡನ್ ಸ್ಟಾರ್ ಗಣೇಶ್ 2009 ರಲ್ಲಿ ರಿಮೇಕ್ ಹಕ್ಕು ಪಡೆದರು. ತೆಲುಗಿನಲ್ಲಿ &#8216;ಸೀತಾಕೋಕ ಚಿಲುಕ&#8217;, &#8216;ಜಮದಗ್ನಿ&#8217;, ಹಿಂದಿಯಲ್ಲಿ &#8216;ರೆಡ್ ರೋಸ್, &#8216;ಸೋಲ್ವಾ ಸಾವನ್&#8217; ಹೀಗೆ ಎಲ್ಲೆಡೆಯೂ ಅವರ ಕಲಾ ಪತಾಕೆ ಹಾರಾಡಿತು.</p>



<p class="wp-block-paragraph"><strong>ನಟನಾಗಿ ಎರಡನೇ ಇನ್ನಿಂಗ್ಸ್</strong><br>ಕ್ಯಾಮೆರಾ ಹಿಂದಷ್ಟೇ ಅಲ್ಲ, ಕ್ಯಾಮೆರಾ ಮುಂದೆಯೂ ಅವರು ಮಾಂತ್ರಿಕರು. &#8216;ಕಲ್ಲುಕ್ಕುಳ್ ಈರಂ&#8217; ಚಿತ್ರದಲ್ಲಿ ಹೀರೋ ಆದವರು, ಇಳಿವಯಸ್ಸಿನಲ್ಲಿ ನಟನೆಯ ಮೂಲಕ ಪ್ರೇಕ್ಷಕರನ್ನು ಅಳಿಸಿದರು, ನಗಿಸಿದರು. ವಿಶಾಲ್ ಅವರ &#8216;ಪಾಂಡಿಯನಾಡು&#8217; (2013), ಧನುಷ್ ಅವರ &#8216;ತಿರುಚಿತ್ರಂಬಲಂ&#8217; (2022) ನಲ್ಲಿನ ಅಜ್ಜನ ಪಾತ್ರ, ಇತ್ತೀಚಿನ ವಿಜಯ್ ಸೇತುಪತಿಯ &#8216;ಮಹಾರಾಜ&#8217; (2024) ಸಿನಿಮಾಗಳಲ್ಲಿ ಅವರ ನಟನೆ ಅಮೋಘವಾಗಿತ್ತು. 2020 ರ &#8216;ಮೀಂಡುಂ ಒರು ಮರಿಯಾ&#8217; ಅವರ ಕೊನೆಯ ನಿರ್ದೇಶನವಾದರೆ, &#8216;ಪುಲವ‌ರ್&#8217; ಅವರ ನಟನೆಯ ಕಡೆಯ ಕುರುಹು.</p>



<p class="wp-block-paragraph"><strong>ಮುಡಿಗೇರಿದ ರಾಷ್ಟ್ರೀಯ ಕಿರೀಟಗಳು ಮತ್ತು ಅಮರ ಪರಂಪರೆ</strong><br>ಭಾರತ ಸರ್ಕಾರ 2004 ರಲ್ಲಿ ಅವರಿಗೆ &#8216;ಪದ್ಮಶ್ರೀ&#8217; ನೀಡಿ ಗೌರವಿಸಿತು. 6 ಬಾರಿ ರಾಷ್ಟ್ರಪ್ರಶಸ್ತಿ, 4 ಬಾರಿ ಫಿಲ್ಮಫೇರ್, 6 ಬಾರಿ ರಾಜ್ಯ ಪ್ರಶಸ್ತಿಗಳು ಅವರ ಪಾದ ಮುದ್ದಿಸಿದವು. ಭಾರತಿರಾಜ ಎಂಬುದು ಕೇವಲ ಮನುಷ್ಯನ ಹೆಸರಲ್ಲ, ಅದೊಂದು ಕಲಾ ಶಾಲೆಯ ಹೆಸರು. ಕಪ್ಪು-ಕುರೂಪಿಗಳೆಲ್ಲರೂ ಚಿತ್ರರಂಗದಲ್ಲಿ ಬದುಕಬಹುದು, ನೈಜವಾಗಿ ನಟಿಸಬಹುದು ಎಂದು ತೋರಿಸಿಕೊಟ್ಟ ದೇವಮಾನವ ಅವರು. ಅವರ ಮಗನ ಅಕಾಲಿಕ ಮರಣ ಅವರ ಭೌತಿಕ ದೇಹವನ್ನು ನಮ್ಮಿಂದ ಕಸಿದುಕೊಂಡಿರಬಹುದು. ಆದರೆ, ದಕ್ಷಿಣ ಭಾರತದ ಹಳ್ಳಿಗಳ ಆ &#8216;ಮಣ್ಣಿನ ವಾಸನೆ&#8217;ಯನ್ನು ಬೆಳ್ಳಿಪರದೆಗೆ ತಂದ ಅವರ ಸಾಧನೆ, ಅವರು ಸೃಷ್ಟಿಸಿದ ಸಾವಿರಾರು ಪಾತ್ರಗಳು ಮತ್ತು ಆ ಕಣ್ಮುಚ್ಚಿ ಕೈಮುಗಿಯುವ &#8220;ಎನ್ ಇನಿಯ ತಮಿಳ್ ಮಕ್ಕಳೇ&#8221; ಎಂಬ ಧ್ವನಿ, ಈ ಭೂಮಿ ಇರುವವರೆಗೂ, ಸಿನೆಮಾ ಇರುವವರೆಗೂ ಪ್ರತಿಧ್ವನಿಸುತ್ತಲೇ ಇರುತ್ತದೆ. ವಿದಾಯ, ಇಮಯಂ!</p>
]]></content:encoded>
					
		
		
			</item>
		<item>
		<title>ಫಹಾದ್ ಭಯೋತ್ಪಾದಕನೇ? ತನಿಖಾಧಿಕಾರಿಯ ಕ್ರಾಸ್ ಎಕ್ಸಾಮಿನೇಶನ್ ಏನು ಹೇಳುತ್ತದೆ?</title>
		<link>https://peepalmedia.com/is-fahad-a-terrorist-cross-examination-by-the-investigating-officer/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 09 Jun 2026 06:47:06 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://peepalmedia.com/?p=79576</guid>

					<description><![CDATA[ಫಹಾದ್ ಎಂಬ 24 ವರ್ಷದ ಯುವಕನನ್ನು ಮೈಸೂರು ಪೊಲೀಸರು ಭಯೋತ್ಪಾದನೆಯ ಆರೋಪದಲ್ಲಿ 2006 ರಂದು ಅರೆಸ್ಟ್ ಮಾಡಿದ್ದರು. ಆತನ ಸಹಚರರು ಎಂದು ಹೇಳಿ ಇನ್ನಿಬ್ಬರನ್ನು ಅರೆಸ್ಟ್ ಮಾಡಿದ್ದರು. ಫಹಾದ್ ಬಳಿ ಎಕೆ-47 ಕೂಡಾ ವಶಪಡಿಸಿಕೊಂಡು ಚಾರ್ಜ್ಶೀಟ್ ದಾಖಲಿಸಿದ್ದರು. ಫಹಾದ್ ಎಂಬ ಈ ಯುವಕ ಪಾಕಿಸ್ತಾನದವನು. ಆತನ ತಾಯಿ ಮೂಲತಃ ಕೇರಳದವರು. ಮೈಸೂರು-ಕೇರಳದ ಗಡಿಗಳಲ್ಲಿ ಸಂಬಂಧಿಕರನ್ನು ಹೊಂದಿರುವ ಫಹಾದ್ ತನ್ನ ಸಂಬಂಧಿಕರನ್ನು ಕಾಣಲು ಮೈಸೂರಿಗೆ ಬಂದಿದ್ದನು. ಇಲ್ಲಿಯೇ ಸಂಬಂಧಿಕ ಹುಡುಗಿಯೊಬ್ಬಳ ಜೊತೆ ಪ್ರೇಮಾಂಕುರವಾಗಿ ಮೈಸೂರಿನಲ್ಲೇ ಉಳಿಯಬೇಕು ಎಂದು ನಿರ್ಧರಿಸಿ [&#8230;]]]></description>
										<content:encoded><![CDATA[
<pre class="wp-block-code"><code>ನಕಲಿ ಆಧಾರ್ ಕಾರ್ಡ್ ಪ್ರಕರಣ, ಭಯೋತ್ಪಾದಕ ಕೃತ್ಯಕ್ಕೆ ಸಮವೇ?<br>ಸಂಬಂಧಿಕರನ್ನು ಕಾಣಲು ಬಂದ ಫಹಾದ್‌ಗೆ, ಭಯೋತ್ಪಾದಕ ಪಟ್ಟ ಕಟ್ಟಿದ್ದು ಹೇಗೆ?<br>20 ವರ್ಷಗಳ ಜೈಲು ಹಕ್ಕಿ ಫಹಾದ್ ಪ್ರಕರಣದಲ್ಲಿ ಪಾಟಿ ಸವಾಲಿನ ದಾಖಲೆ ಇಲ್ಲಿದೆ.. ನವೀನ್ ಸೂರಿಂಜೆಯವರ ಬರಹದಲ್ಲಿ</code></pre>



<p class="wp-block-paragraph">ಫಹಾದ್ ಎಂಬ 24 ವರ್ಷದ ಯುವಕನನ್ನು ಮೈಸೂರು ಪೊಲೀಸರು ಭಯೋತ್ಪಾದನೆಯ ಆರೋಪದಲ್ಲಿ 2006 ರಂದು ಅರೆಸ್ಟ್ ಮಾಡಿದ್ದರು. ಆತನ ಸಹಚರರು ಎಂದು ಹೇಳಿ ಇನ್ನಿಬ್ಬರನ್ನು ಅರೆಸ್ಟ್ ಮಾಡಿದ್ದರು. ಫಹಾದ್ ಬಳಿ ಎಕೆ-47 ಕೂಡಾ ವಶಪಡಿಸಿಕೊಂಡು ಚಾರ್ಜ್ಶೀಟ್ ದಾಖಲಿಸಿದ್ದರು. ಫಹಾದ್ ಎಂಬ ಈ ಯುವಕ ಪಾಕಿಸ್ತಾನದವನು. ಆತನ ತಾಯಿ ಮೂಲತಃ ಕೇರಳದವರು. ಮೈಸೂರು-ಕೇರಳದ ಗಡಿಗಳಲ್ಲಿ ಸಂಬಂಧಿಕರನ್ನು ಹೊಂದಿರುವ ಫಹಾದ್ ತನ್ನ ಸಂಬಂಧಿಕರನ್ನು ಕಾಣಲು ಮೈಸೂರಿಗೆ ಬಂದಿದ್ದನು. ಇಲ್ಲಿಯೇ ಸಂಬಂಧಿಕ ಹುಡುಗಿಯೊಬ್ಬಳ ಜೊತೆ ಪ್ರೇಮಾಂಕುರವಾಗಿ ಮೈಸೂರಿನಲ್ಲೇ ಉಳಿಯಬೇಕು ಎಂದು ನಿರ್ಧರಿಸಿ ಸಣ್ಣ ಅಂಗಡಿ ತೆರೆದು ಜೀವನ ಸಾಗಿಸುತ್ತಿದ್ದನು. ಅದಕ್ಕಾಗಿ ಸ್ಥಳೀಯರ ಸಹಾಯದಿಂದ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿಕೊಂಡಿದ್ದನು. ಒಂದು ನಕಲಿ ಆಧಾರ್ ಕಾರ್ಡ್ ಪ್ರಕರಣವನ್ನು ಪಾಕಿಸ್ತಾನದ ಪ್ರಜೆ ಎಂಬ ಕಾರಣಕ್ಕಾಗಿ ‘ಭಯೋತ್ಪಾಧನಾ ಪ್ರಕರಣ’ವನ್ನಾಗಿ ಪರಿವರ್ತಿಸಲಾಯಿತು.</p>



<p class="wp-block-paragraph">2006 ರಿಂದ 2026 ರವರೆಗೂ ಜೈಲಿನಲ್ಲಿ ಇದ್ದ ಫಹಾದ್ 20 ವರ್ಷಗಳ ಬಳಿಕ ಹೈಕೋರ್ಟ್ ನಿಂದ ಬಿಡುಗಡೆ ಭಾಗ್ಯ ಪಡೆದುಕೊಂಡಿದ್ದಾನೆ. ಯಾವ ರೀತಿ ಭಯೋತ್ಪಾದನಾ ಪ್ರಕರಣಗಳಲ್ಲಿ ಯುವಕರನ್ನು ಸಿಲುಕಿಸಲಾಗುತ್ತದೆ ಎಂಬುದಕ್ಕೆ ತನಿಖಾಧಿಕಾರಿಯನ್ನು ಬೆಂಗಳೂರಿನ ಹಿರಿಯ ವಕೀಲ ಎಸ್ ಬಾಲನ್ ನಡೆಸಿದ ಪಾಟಿ ಸವಾಲಿನ ದಾಖಲೆಗಳನ್ನು ಓದಬೇಕು.</p>



<p class="wp-block-paragraph">ಹಿರಿಯ ವಕೀಲ ಎಸ್ ಬಾಲನ್ ಅವರು ತನಿಖಾಧಿಕಾರಿಯನ್ನು ನಡೆಸಿದ ಕ್ರಾಸ್ ಎಕ್ಸಾಮಿನೇಶನ್ ಇಲ್ಲಿದೆ :</p>



<p class="wp-block-paragraph">ಎಸ್ ಬಾಲನ್ : ಗುಂಡು ಹಾರಿಸಿದಾಗ ಗನ್‌ಶಾಟ್ ರೆಸಿಡ್ಯೂ (Gun Shot Residue /GSR) ಉಂಟಾಗುತ್ತದೆ ಎಂಬುದು ನಿಜವೇ? ಅಂದರೆ ಗುಂಡು ಬಂದೂಕಿನಿಂದ ಹಾರಿದಾಗ ಅದರೊಳಗಿನ ಸೂಕ್ಷ್ಮ ಕಣಗಳು, ಅನಿಲಗಳು ಮತ್ತು ಸುಟ್ಟು ಹೋಗದ ಗನ್‌ಪೌಡರ್ ಇತ್ಯಾದಿಗಳುಇರುತ್ತವೆ. ವಿಧಿವಿಜ್ಞಾನದಲ್ಲಿ, ಇದು ಶಂಕಿತನೊಬ್ಬ ಆಯುಧದಿಂದ ಗುಂಡು ಹಾರಿಸಿದ್ದಾನೆಯೇ ಎಂದು ನಿರ್ಧರಿಸಲು, ಅಪರಾಧದ ದೃಶ್ಯಗಳನ್ನು ಪುನರ್ನಿರ್ಮಿಸಲು ಮತ್ತು ಗುಂಡು ಹಾರಿಸುವ ದೂರವನ್ನು ಅಂದಾಜು ಮಾಡಲು ಬಳಸುವ ನಿರ್ಣಾಯಕ ಸಾಕ್ಷ್ಯವಾಗಿದೆ. ಹೌದು ತಾನೆ ?</p>



<p class="wp-block-paragraph">ತನಿಖಾಧಿಕಾರಿ : ಹೌದು. ಗನ್‌ಶಾಟ್ ರೆಸಿಡ್ಯೂಗಳಲ್ಲಿ ಸಾವಯವ (Organic) ಮತ್ತು ಅಜೈವಿಕ (Inorganic) ಅಂಶಗಳು ಇರುತ್ತವೆ.</p>



<p class="wp-block-paragraph">ಎಸ್ ಬಾಲನ್: ನೋಡಿ, ನೀವು ಭಯೋತ್ಪಾಧಕರು ಮತ್ತು ನಿಮ್ಮ ಮಧ್ಯೆ ಗುಂಡಿನ ಚಕಮಕಿ ನಡೆಯಿತು ಅಂತ ಹೇಳ್ತೀರಿ.ಗುಂಡು ಹಾರಾಟ ನಡೆದ ಘಟನಾ ಸ್ಥಳದಿಂದ ಗನ್‌ಶಾಟ್ ರೆಸಿಡ್ಯೂ ಸಂಗ್ರಹಿಸಲು ನೀವು ಪ್ರಯತ್ನಿಸಿದ್ದೀರಾ?</p>



<p class="wp-block-paragraph">ತನಿಖಾಧಿಕಾರಿ : ಹೌದು, ಪ್ರಯತ್ನಿಸಿದೆ. ಆದರೆ ಅದು ದೊರೆಯಲಿಲ್ಲ.</p>



<p class="wp-block-paragraph">ಎಸ್ ಬಾಲನ್ : ಗನ್‌ಶಾಟ್ ರೆಸಿಡ್ಯೂ ಸಂಗ್ರಹಿಸಲು ನೀವು ಯಾವ ಕ್ರಮ ಕೈಗೊಂಡಿರಿ?</p>



<p class="wp-block-paragraph">ತನಿಖಾಧಿಕಾರಿ : ನನ್ನ ಕಣ್ಣಿಗೆ ಗೋಚರವಾದುದನ್ನು ಮಾತ್ರ ಘಟನಾ ಸ್ಥಳದಿಂದ ಸಂಗ್ರಹಿಸಿದೆ.</p>



<p class="wp-block-paragraph">ಎಸ್ ಬಾಲನ್ : ಗುಂಡು ಹಾರಾಟ ನಡೆದಾಗ, ಅದೂ ಭಯೋತ್ಪಾದಕರ ಪ್ರಕರಣದಲ್ಲಿ ಗುಂಡು ಹಾರಾಟದ ತನಿಖೆ ನಡೆಸಲು ತಜ್ಞರು ಬರುತ್ತಾರೆ. ನೀವು ಉದ್ದೇಶಪೂರ್ವಕವಾಗಿ ತಜ್ಞರ ಸಹಾಯ ಪಡೆಯಲಿಲ್ಲವೇ?</p>



<p class="wp-block-paragraph">ತನಿಖಾಧಿಕಾರಿ : ಸುಳ್ಳು</p>



<p class="wp-block-paragraph">ಎಸ್ ಬಾಲನ್ : ತಜ್ಞರ ಸಹಾಯ ಪಡೆಯಲು ಪ್ರಯತ್ನಿಸಿದ್ದೀರಾ?</p>



<p class="wp-block-paragraph">ತನಿಖಾಧಿಕಾರಿ : ಆ ಸಮಯದಲ್ಲಿ ಮೈಸೂರಿನಲ್ಲಿ ತಜ್ಞರು ಲಭ್ಯವಿರಲಿಲ್ಲ. ಆದ್ದರಿಂದ ಅವರ ಸಹಾಯ ಪಡೆಯಲಿಲ್ಲ. ನಂತರ 27.10.2006 ರಂದು ಗನ್‌ಶಾಟ್ ರೆಸಿಡ್ಯೂ ಸಂಗ್ರಹಿಸಲು ತಜ್ಞರಿಗೆ ಮನವಿ ಕಳುಹಿಸಿದ್ದೆ. ಆದರೆ ಆ ಮನವಿಯ ಪ್ರತಿಯನ್ನು ಚಾರ್ಜ್‌ಶೀಟ್ ಜೊತೆ ಸಲ್ಲಿಸಿಲ್ಲ.</p>



<p class="wp-block-paragraph">ಎಸ್ ಬಾಲನ್ : ಗುಂಡು ಹಾರಾಟದ ಸಮಯದಲ್ಲಿ ಗುಂಡುಹಾರಿಸಿದ ವ್ಯಕ್ತಿಯ ಕೈ, ಬಟ್ಟೆ, ಗುಂಡು ಬಿದ್ದ ಜಾಗ ಇವು ಪ್ರಮುಖ ಸಾಕ್ಷಿಯ ಸ್ಥಳಗಳು. ನಿಜ ತಾನೆ?</p>



<p class="wp-block-paragraph">ತನಿಖಾಧಿಕಾರಿ : ಹೌದು. ಗುಂಡು ಹಾರಿಸಿದ ವ್ಯಕ್ತಿಯ ಬಟ್ಟೆ, ಕೈಗಳು, ಗುಂಡು ತಗುಲಿದ ಗುರಿಯ ಸ್ಥಳ ಹಾಗೂ ಗುಂಡು ಬಿದ್ದ 3 ರಿಂದ 5 ಅಡಿ ವ್ಯಾಪ್ತಿಯ ಪ್ರದೇಶವು ಪ್ರಮುಖ ಸಾಕ್ಷ್ಯಗಳಾಗಿವೆ ಎಂಬುದು ನಿಜ.</p>



<p class="wp-block-paragraph">ಎಸ್ ಬಾಲನ್ : ನಿಮ್ಮ ಪ್ರಕಾರ ಆರೋಪಿಗಳ ಗುಂಡು ಎಲ್ಲಿಗೆ ಬಿದ್ದಿತ್ತು ?</p>



<p class="wp-block-paragraph">ತನಿಖಾಧಿಕಾರಿ : ಈ ಪ್ರಕರಣದಲ್ಲಿ ಗುಂಡು ಪೊಲೀಸ್ ಜೀಪ್‌ಗೆ ತಗುಲಿತ್ತು.</p>



<p class="wp-block-paragraph">ಎಸ್ ಬಾಲನ್ : ನೀವೇ ಹೇಳಿದ್ರಿ, ಗುಂಡು ಬಿದ್ದ ಸ್ಥಳ, ಗುರಿಯ ಅಂತರ ಪ್ರಮುಖ ಸಾಕ್ಷ್ಯ ಎಂದು ಹೇಳಿದ್ದೀರಿ. ಗುಂಡು ಹಾರುತ್ತಲ್ಲಾ, ಗನ್ನ ಮೂತಿ (Muzzle End ) ಆ ಸ್ಥಳದಿಂದ ಗುಂಡು ಬಿದ್ದ ಪೊಲೀಸ್ ಜೀಪ್ ನಡುವಿನ ಅಂತರ ತನಿಖೆ ಮಾಡಿದ್ದೀರಾ ?</p>



<p class="wp-block-paragraph">ತನಿಖಾಧಿಕಾರಿ : ಗನ್‌ನ ಮೂತಿ (Muzzle End) ಮತ್ತು ಗುಂಡು ತಗುಲಿದ ಪೊಲೀಸ್ ಜೀಪ್ ನಡುವಿನ ಅಂತರವನ್ನು ನಾನು ತನಿಖೆ ಮಾಡಿಲ್ಲ.</p>



<p class="wp-block-paragraph">ಎಸ್ ಬಾಲನ್ : ಗುಂಡು ಹಾರಿಸಿದ ಸ್ಥಳದಿಂದ ಗುಂಡು ಬಿದ್ದ ಪೊಲೀಸ್ ಜೀಪ್ ನಡುವಿನ ಅಂತರವನ್ನು ತನಿಖೆ ಮಾಡುವುದು ಅಗತ್ಯವೆಂದು ತನಿಖಾಧಿಕಾರಿಯಾಗಿ ನಿಮಗೆ ಅನಿಸಿತೇ?</p>



<p class="wp-block-paragraph">ತನಿಖಾಧಿಕಾರಿ : ಹೌದು, ಅದು ಅಗತ್ಯವಾಗಿತ್ತು.</p>



<p class="wp-block-paragraph">ಎಸ್ ಬಾಲನ್ : ಅಂದರೆ, ನೀವು ಉದ್ದೇಶಪೂರ್ವಕವಾಗಿ ಅಂತರ ತನಿಖೆ ಮಾಡಲಿಲ್ಲ.</p>



<p class="wp-block-paragraph">ತನಿಖಾಧಿಕಾರಿ : ನಾನು ಉದ್ದೇಶಪೂರ್ವಕವಾಗಿ ತನಿಖೆ ಮಾಡಲಿಲ್ಲ ಎಂಬುದು ತಪ್ಪು. ನಾನು ಅಳತೆ ಮಾಡಲಿಲ್ಲ ನಿಜ. ಆ ಸಮಯದಲ್ಲಿ ಅದು ನನ್ನ ಜ್ಞಾನದಲ್ಲಿರಲಿಲ್ಲ.</p>



<p class="wp-block-paragraph">ಎಸ್ ಬಾಲನ್ : ಗುಂಡು ಹಾರಿಸಿದ ವ್ಯಕ್ತಿಯ ಬಟ್ಟೆಯಲ್ಲಿ ಕೂಡಾ ಜಿಎಸ್ಆರ್(Gun Shot Residue) ಇರುತ್ತದೆ ಎಂದು ನೀವುಆಗಲೇ ಒಪ್ಪಿಕೊಂಡಿದ್ದೀರಿ. ಹಾಗಾಗಿ ಗುಂಡು ಹಾರಿಸಿದ ಆರೋಪಿಯ ಬಟ್ಟೆಯಿಂದ ಜಿಎಸ್ಆರ್ ಸಂಗ್ರಹಿಸಲು ಯತ್ನಿಸಿದ್ರಾ ?</p>



<p class="wp-block-paragraph">ತನಿಖಾಧಿಕಾರಿ : ಗುಂಡು ಹಾರಿಸಿದ ವ್ಯಕ್ತಿಯ ದೇಹದಿಂದ ಯಾವುದೇ ಸಾಕ್ಷ್ಯ ಸಂಗ್ರಹಿಸಲು ನಾನು ಪ್ರಯತ್ನಿಸಲಿಲ್ಲ.</p>



<p class="wp-block-paragraph">ಎಸ್ ಬಾಲನ್ : ಯಾಕೆಂದರೆ ಗುಂಡು ಹಾರಿಸಿದ್ದಾನೆ ಎನ್ನಲಾದ ಆರೋಪಿಯ ದೇಹದಲ್ಲಿ, ಬಟ್ಟೆಯಲ್ಲಿ ಜಿಎಸ್ಆರ್ ಸಿಗಲ್ಲ</p>



<p class="wp-block-paragraph">ತನಿಖಾಧಿಕಾರಿ : ಗುಂಡು ಹಾರಿಸಿದ ವ್ಯಕ್ತಿಯ ದೇಹದಲ್ಲಿ GSR ಸಿಗದೇ ಇರಬಹುದು ಎಂಬುದು ಸತ್ಯವಾಗಿರಬಹುದು.</p>



<p class="wp-block-paragraph">ಎಸ್ ಬಾಲನ್ : ಗುಂಡು ಹಾರಿಸಿದ ಆರೋಪಿಯ ಬಟ್ಟೆಯಲ್ಲಿ ಜಿಎಸ್ಆರ್ ಇರಲಿಲ್ಲ. ಹಾಗಾಗಿ ಸಂಗ್ರಹಿಸಿಲ್ಲ</p>



<p class="wp-block-paragraph">ತನಿಖಾಧಿಕಾರಿ : ಗುಂಡು ಹಾರಿಸಿದ ವ್ಯಕ್ತಿಯ ಬಟ್ಟೆಗಳಲ್ಲಿ GSR ಇರುವುದಿಲ್ಲ ಎಂಬ ಕಾರಣಕ್ಕೆ ನಾನು ಸಂಗ್ರಹಿಸಲಿಲ್ಲ ಎನ್ನುವುದು ತಪ್ಪು.</p>



<p class="wp-block-paragraph">ಎಸ್ ಬಾಲನ್ : ಮತ್ತೆ ಯಾಕೆ ಗುಂಡುಹಾರಿಸಿದ್ದಾನೆ ಎನ್ನಲಾದ ಆರೋಪಿಯ ಬಟ್ಟೆಯಿಂದ ಜಿಎಸ್ಆರ್ ಸಂಗ್ರಹಿಸಿಲ್ಲ ?</p>



<p class="wp-block-paragraph">ತನಿಖಾಧಿಕಾರಿ : ಗುಂಡು ಹಾರಿಸಿದ ವ್ಯಕ್ತಿಯ ಬಟ್ಟೆಗಳಿಂದ GSR ಸಂಗ್ರಹಿಸಲಿಲ್ಲ. ಏಕೆಂದರೆ ಅದರ ಬಗ್ಗೆ ನನಗೆ ತಿಳಿದಿರಲಿಲ್ಲ.</p>



<p class="wp-block-paragraph">ಎಸ್ ಬಾಲನ್ : ನೋಡಿ, ಚಾರ್ಜ್ ಶೀಟ್ ಪ್ರಕಾರ, ಭಯೋತ್ಪಾದಕರು ಅಂತಹೇಳುವ ಆರೋಪಿಗಳತ್ತಾ ಗುಂಡು ಹಾರಿಸಿದ ಪೊಲೀಸ್ ಅಧಿಕಾರಿ ಯಾರು ?</p>



<p class="wp-block-paragraph">ತನಿಖಾಧಿಕಾರಿ : ಡಿಸಿಪಿ (ಕಾನೂನು) ಕೆ.ಟಿ. ಬಾಲಕೃಷ್ಣನ್ ಅವರು ತಮ್ಮ ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿದ್ದರು.</p>



<p class="wp-block-paragraph">ಎಸ್ ಬಾಲನ್ : ಡಿಸಿಪಿ ಕೆ ಟಿ ಬಾಲಕೃಷ್ಣನ್ ಅವರ ಕೈ, ಬಟ್ಟೆಗಳಲ್ಲಾದರೂ ಗನ್ಪೌಡರ್, ರಾಸಾಯನಿಕ, ಗುಂಡಿನ ಸೂಕ್ಷ್ಮ ಅವಶೇಷ ಸಿಗುತ್ತದೆ. ಅದನ್ನಾದರೂ ಸಂಗ್ರಹಿಸಿದ್ದೀರಾ ?</p>



<p class="wp-block-paragraph">ತನಿಖಾಧಿಕಾರಿ : ಇಲ್ಲ. ಡಿಸಿಪಿ ಬಾಲಕೃಷ್ಣನ್ ಅವರ ಕೈ ಹಾಗೂ ಬಟ್ಟೆಗಳಿಂದ GSR ಸಂಗ್ರಹಿಸಲಿಲ್ಲ.</p>



<p class="wp-block-paragraph">ಎಸ್ ಬಾಲನ್ : ಯಾಕೆಂದರೆ, ಜಿಎಸ್ಆರ್ ಸಿಗುವುದಿಲ್ಲ ಅಂತ ನಿಮಗೆ ಗೊತ್ತಿತ್ತು.</p>



<p class="wp-block-paragraph">ತನಿಖಾಧಿಕಾರಿ : GSR ದೊರೆಯುವುದಿಲ್ಲ ಎಂದು ತಿಳಿದಿದ್ದರಿಂದ ಸಂಗ್ರಹಿಸಲಿಲ್ಲ ಎನ್ನುವುದು ತಪ್ಪು.</p>



<p class="wp-block-paragraph">ಎಸ್ ಬಾಲನ್ : ಮತ್ತೆ ಯಾಕೆ ಅವರಬಟ್ಟೆ, ಕೈಯಿಂದ ಜಿಎಸ್ಆರ್ ಸಂಗ್ರಹಿಸಲಿಲ್ಲ ಅಂತ ಕಾರಣ ಹೇಳಬಹುದಾ ?</p>



<p class="wp-block-paragraph">ತನಿಖಾಧಿಕಾರಿ : ನಾನು ಯಾಕೆ ಡಿಸಿಪಿ ಅವರ ಕೈ ಹಾಗೂ ಬಟ್ಟೆಗಳಿಂದ GSR ಸಂಗ್ರಹಿಸಲಿಲ್ಲ ಎಂಬುದನ್ನು ಹೇಳಲು ಸಾಧ್ಯವಿಲ್ಲ.</p>



<p class="wp-block-paragraph">ಎಸ್ ಬಾಲನ್: ಗುಂಡು ಹಾರಾಟದ ಜಾಗದಲ್ಲಿ ಸುಟ್ಟ ಅವಶೇಷ(burnt pieces) ಇರುತ್ತದೆ. ಅದನ್ನು ಸಂಗ್ರಹಿಸಿದ್ದೀರಿ.</p>



<p class="wp-block-paragraph">ತನಿಖಾಧಿಕಾರಿ : ಇಲ್ಲ. ಗುಂಡು ಹಾರಾಟದ ಘಟನಾ ಸ್ಥಳದ ಸುತ್ತಮುತ್ತ ಸುಟ್ಟ ಅವಶೇಷಗಳನ್ನು (burnt pieces) ಸಂಗ್ರಹಿಸಲಿಲ್ಲ, ಏಕೆಂದರೆ ಅವು ದೊರೆಯಲಿಲ್ಲ.</p>



<p class="wp-block-paragraph">ಎಸ್ ಬಾಲನ್ : ನೋಡಿ, ನೀವು ಭಯೋತ್ಪಾದಕರು ಎಂದು ಆರೋಪಿಸಿರುವ ಈ ಹುಡುಗರ ಕೈಯ್ಯಲ್ಲಿ ಎಕೆ-47 ಇತ್ತು. ಎಕೆ-47 ಸೇರಿದಂತೆ ಯಾವುದೇ ವಸ್ತು ಆರೋಪಿ ಕೈಯ್ಯಲ್ಲಿ ಇದ್ದರೆ ಅದರಫಿಂಗರ್ ಪ್ರಿಂಟ್ತೆಗೆದುಕೊಳ್ಳಬೇಕು ಎನ್ನುವುದು ತೀರಾ ಸಹಜವಾದ ಪೊಲೀಸ್ ತನಿಖೆ. ಅದಕ್ಕೇನು ವಿಶೇಷ ಜ್ಞಾನ ಬೇಡ.ನೀವು ಆರೋಪಿಗಳ ಕೈಯ್ಯಲ್ಲಿದ್ದ ಎಕೆ-47 ಮತ್ತು ಗನ್ನ ಫಿಂಗರ್ ಪ್ರಿಂಟ್ ತಗೊಂಡ್ರಾ ?</p>



<p class="wp-block-paragraph">ತನಿಖಾಧಿಕಾರಿ : ಗನ್ ಹಾಗೂ AK-47 ನಿಂದ ಫಿಂಗರ್‌ಪ್ರಿಂಟ್‌ಗಳನ್ನು ಸಂಗ್ರಹಿಸಲಿಲ್ಲ.</p>



<p class="wp-block-paragraph">ಎಸ್ ಬಾಲನ್ : ಆರೋಪಿಯ ಕೈಯ್ಯಲ್ಲಿ ಎಕೆ-47 ಇದ್ದಿದ್ದರೆ ಅವರ ಫಿಂಗರ್ ಫ್ರಿಂಟ್ ತಗೊಳ್ಳುತ್ತಿದ್ರಿ. ಉದ್ದೇಶಪೂರ್ವಕವಾಗಿ ಫಿಂಗರ್ ಪ್ರಿಂಟ್ ತೆಗೆದುಕೊಂಡಿಲ್ಲ.</p>



<p class="wp-block-paragraph">ತನಿಖಾಧಿಕಾರಿ : ನಾನು ಉದ್ದೇಶಪೂರ್ವಕವಾಗಿ ಗನ್ ಮತ್ತು AK-47 ಮೇಲೆ ಫಿಂಗರ್‌ಪ್ರಿಂಟ್‌ಗಳನ್ನು ತೆಗೆದುಕೊಳ್ಳಲಿಲ್ಲ ಎನ್ನುವುದು ತಪ್ಪು.</p>



<p class="wp-block-paragraph">ಎಸ್ ಬಾಲನ್ : ಎಕೆ-47 ಆರೋಪಿಗಳ ಕೈಯ್ಯಲ್ಲಿ ಇರಲಿಲ್ಲ. ಇದ್ದಿದ್ದರೆ ಯಾಕೆ ಫಿಂಗರ್ ಪ್ರಿಂಟ್ ಸಂಗ್ರಹಿಸಲಿಲ್ಲ ?</p>



<p class="wp-block-paragraph">ತನಿಖಾಧಿಕಾರಿ : ಯಾಕೆ ಫಿಂಗರ್‌ಪ್ರಿಂಟ್‌ಗಳನ್ನು ಸಂಗ್ರಹಿಸಲಿಲ್ಲ ಎಂಬುದನ್ನು ಹೇಳಲು ಸಾಧ್ಯವಿಲ್ಲ.</p>



<p class="wp-block-paragraph">ಎಸ್ ಬಾಲನ್ : ಒಬ್ಬ ಆರೋಪಿಯ ಕೈಯ್ಯಲ್ಲಿ ಎಕೆ -47 ಇದ್ದರೆ, ಆ ಎಕೆ-47 ಎಲ್ಲಿಂದ ಬಂತು ? ಅದರ ಮೂಲ ಯಾವುದು ? ಯಾರು ತಯಾರಕರು ಎಂಬುದು ತನಿಖೆ ಮಾಡುವುದು ಪೊಲೀಸರ ಸಹಜ ತನಿಖಾ ಪ್ರಕ್ರಿಯೆ. ನೀವು ಈ ನಿಟ್ಟಿನಲ್ಲಿ ತನಿಖೆ ಮಾಡಿದ್ರಾ ?</p>



<p class="wp-block-paragraph">ತನಿಖಾಧಿಕಾರಿ : ಇಲ್ಲ. ಆರೋಪಿಯ ಕೈಯ್ಯಲ್ಲಿದ್ದ AK-47 ಹಾಗೂ ಗನ್‌ನ ತಯಾರಕರು ಮತ್ತು ಮೂಲದ ಬಗ್ಗೆ ನಾನು ತನಿಖೆ ನಡೆಸಿಲ್ಲ.</p>



<p class="wp-block-paragraph">ಎಸ್ ಬಾಲನ್ : ಯಾಕೆಂದರೆ, ನೀವೇ ಘಟನೆಯನ್ನು ಸೃಷ್ಟಿಸಿ, ಆರೋಪಿ ಬಳಿ ಎಕೆ-47 ಇಟ್ಟು (planted) ಪ್ರಕರಣ ದಾಖಲಿಸಿದ್ದೀರಿ. ಹಾಗಾಗಿ ಎಕೆ-47 ಮೂಲದ ಬಗ್ಗೆ ತನಿಖೆ ನಡೆಸಲಿಲ್ಲ.</p>



<p class="wp-block-paragraph">ತನಿಖಾಧಿಕಾರಿ : ಎಕೆ-47 (planted) ಇಟ್ಟಿದ್ದರಿಂದ ತನಿಖೆ ಮಾಡಲಿಲ್ಲ ಎನ್ನುವುದು ತಪ್ಪು.</p>



<p class="wp-block-paragraph">ಎಸ್ ಬಾಲನ್ : AK-47 ಮತ್ತು ಗನ್‌ನಲ್ಲಿ ಬಳಸುವ ಕಾರ್ಟ್ರಿಡ್ಜ್‌ಗಳು ಹಾಗೂ ಗುಂಡುಗಳು ಆರ್ಡಿನನ್ಸ್ ಫ್ಯಾಕ್ಟರಿಗಳಲ್ಲಿ ತಯಾರಾಗುತ್ತವೆ.</p>



<p class="wp-block-paragraph">ತನಿಖಾಧಿಕಾರಿ : ನಿಜ.</p>



<p class="wp-block-paragraph">ಎಸ್ ಬಾಲನ್ : ಗನ್ ನ ಪ್ರತಿಯೊಂದು ಕಾರ್ಟ್ರಿಡ್ಜ್ ಮತ್ತು ಗುಂಡಿನ ಮೇಲೆ ತಯಾರಿಕಾ ಸಂಖ್ಯೆ ಇರುತ್ತದೆ.</p>



<p class="wp-block-paragraph">ತನಿಖಾಧಿಕಾರಿ : ಸತ್ಯ. ಕಾರ್ಟ್ರಿಡ್ಜ್ ಮತ್ತು ಗುಂಡಿನ ಮೇಲೆ ತಯಾರಿಕಾ ಸಂಖ್ಯೆ ಇರುತ್ತದೆ.</p>



<p class="wp-block-paragraph">ಎಸ್ ಬಾಲನ್: ಕಾರ್ಟ್ರಿಡ್ಜ್ ಮತ್ತು ಗುಂಡಿನ ಮೇಲೆ ತಯಾರಿಕಾ ಸಂಖ್ಯೆ, ಬ್ಯಾಚ್ ಆಧರಿಸಿ ಗುಂಡು ಎಲ್ಲಿ ತಯಾರಾಗಿದೆ ಎಂದು ಸುಲಭವಾಗಿ ಪತ್ತೆ ಹಚ್ಚಬಹುದು?</p>



<p class="wp-block-paragraph">ತನಿಖಾಧಿಕಾರಿ : ಬ್ಯಾಚ್ ನಂಬರ್ ಆಧರಿಸಿ ಯಾವ ಕಾರ್ಖಾನೆಯಲ್ಲಿ ತಯಾರಿಸಲಾಗಿದೆ ಎಂದು ಸುಲಭವಾಗಿ ಪತ್ತೆಹಚ್ಚಬಹುದು ಎಂಬುದು ಸತ್ಯ.</p>



<p class="wp-block-paragraph">ಎಸ್ ಬಾಲನ್: ಎಕೆ 47 ಮತ್ತು ಗನ್ ನ ಜೀವಂತ ಕಾರ್ಟ್ರಿಡ್ಜ್‌ಗಳು ಮತ್ತು ಗುಂಡುಗಳು ಎಲ್ಲಿ ತಯಾರಾಗಿದೆ ಎಂದು ಸುಲಭವಾಗಿ ಪತ್ತೆಯಾಗಬಹುದಾದರೂ ನೀವು ಆ ಬಗ್ಗೆ ತನಿಖೆ ನಡೆಸಿಲ್ಲ</p>



<p class="wp-block-paragraph">ತನಿಖಾಧಿಕಾರಿ : ಹೌದು. AK-47 ಹಾಗೂ ಗನ್‌ನಲ್ಲಿ ಪತ್ತೆಯಾದ ಜೀವಂತ ಕಾರ್ಟ್ರಿಡ್ಜ್‌ಗಳು ಮತ್ತು ಗುಂಡುಗಳು ಯಾವ ಕಾರ್ಖಾನೆಯಲ್ಲಿ ತಯಾರಾಗಿವೆ ಎಂಬುದರ ಬಗ್ಗೆ ತನಿಖೆ ನಡೆಸಿಲ್ಲ.</p>



<p class="wp-block-paragraph">ಎಸ್ ಬಾಲನ್ : ಯಾವುದೇ ಆರೋಪಿಯಿಂದ ಸ್ಯಾಟಲೈಟ್ ಮೊಬೈಲ್ ರಿಕವರಿ ಮಾಡಿದ್ರೆ ಅದರ IMEI ಸಂಖ್ಯೆ ಸಂಗ್ರಹಿಸ್ತೀರಿ. ಆರೋಪಿ ಫಹಾದ್ ನಿಂದ ವಶಪಡಿಸಿಕೊಂಡ ಸ್ಯಾಟಲೈಟ್ ಮೊಬೈಲ್ ನ IMEI ಸಂಗ್ರಹಿಸಿದ್ದೀರಾ ?</p>



<p class="wp-block-paragraph">ತನಿಖಾಧಿಕಾರಿ : ಆರೋಪಿತ ನಂ.1ರಿಂದ ವಶಪಡಿಸಿಕೊಂಡ ಸ್ಯಾಟಲೈಟ್ ಮೊಬೈಲ್‌ನ IMEI ಸಂಖ್ಯೆಯನ್ನು ಸಂಗ್ರಹಿಸಲಿಲ್ಲ.</p>



<p class="wp-block-paragraph">ಎಸ್ ಬಾಲನ್ : ಹೋಗಲಿ. ಆರೋಪಿಯ ಮೊಬೈಲ್ SIM ಕಾರ್ಡ್‌ನ IMSI ಸಂಖ್ಯೆಯನ್ನು ಸಂಗ್ರಹಿಸಿದ್ದೀರಾ ?</p>



<p class="wp-block-paragraph">ತನಿಖಾಧಿಕಾರಿ : ಇಲ್ಲ.</p>



<p class="wp-block-paragraph">ಎಸ್ ಬಾಲನ್ : ಆರೋಪಿ ಬಳಿ ಇದ್ದ ಸ್ಯಾಟಲೈಟ್ ಫೋನ್ ಮತ್ತು SIM ಕಾರ್ಯನಿರ್ವಹಿಸುತ್ತಿವೆಯೇ ಎಂದು ಪರೀಕ್ಷಿಸಿದ್ರಾ ?</p>



<p class="wp-block-paragraph">ತನಿಖಾಧಿಕಾರಿ : ಇಲ್ಲ. ಪರೀಕ್ಷೆ ನಡೆಸಲಿಲ್ಲ.</p>



<p class="wp-block-paragraph">ಎಸ್ ಬಾಲನ್ : ನೋಡಿ, ನೀವು ಫಹಾದ್ ಭಯೋತ್ಪಾಧಕ ಅಂತೀರಿ. ಅವನ ಬಳಿ ಎಕೆ -47 ಸಿಕ್ತು ಅಂತೀರಿ, ಆತ ಗುಂಡು ಹಾರಿಸಿದ ಅಂತೀರಿ. ಅವನ ಮೊಬೈಲ್ ಮೆಮೋರಿ ಡೇಟಾ ತೆಗೆದ್ರೆ ಇನ್ನಷ್ಟೂ ಮಾಹಿತಿ ಸಿಗುತ್ತೆ. ಅವನ ಮೊಬೈಲ್ ಡೇಟಾ ತೆಗೆದ್ರಾ ನೀವು ?</p>



<p class="wp-block-paragraph">ತನಿಖಾಧಿಕಾರಿ : ಇಲ್ಲ. ಫೋನ್‌ನ ಒಳಗಿನ ಮೆಮೊರಿಯ ಡೇಟಾವನ್ನು ಸಂಗ್ರಹಿಸಲಿಲ್ಲ.</p>



<p class="wp-block-paragraph">ಎಸ್ ಬಾಲನ್ : ಒಬ್ಬ ಸಾಮಾನ್ಯ ಅರೋಪಿಯನ್ನು ಬಂಧಿಸಿದಾಗ ಆತನ ಮೊಬೈಲ್ ಸಿಡಿಆರ್ ತೆಗೆದುಕೊಳ್ಳುತ್ತೀರಿ. ಭಯೋತ್ಪಾಧನೆಯ ಆರೋಪಿಯ ಸಿಡಿಆರ್ ತೆಗೆದ್ರಾ ?</p>



<p class="wp-block-paragraph">ತನಿಖಾಧಿಕಾರಿ : ಕಾಲ್ ಡೀಟೈಲ್ ರೆಕಾರ್ಡ್ (CDR) ಪಡೆಯಲಿಲ್ಲ.</p>



<p class="wp-block-paragraph">ಎಸ್ ಬಾಲನ್ : Nokia ಮೊಬೈಲ್ ಮತ್ತು ಅದರ ಎರಡು SIM ಕಾರ್ಡ್‌ಗಳ IMEI ಹಾಗೂ IMSI ಸಂಖ್ಯೆಗಳನ್ನು ಸಂಗ್ರಹಿಸಿದ್ರಾ ?</p>



<p class="wp-block-paragraph">ತನಿಖಾಧಿಕಾರಿ : ಇಲ್ಲ.</p>



<p class="wp-block-paragraph">ಎಸ್ ಬಾಲನ್ : Nokia ಫೋನ್ ಹಾಗೂ SIM ಕಾರ್ಡ್‌ಗಳು ಕಾರ್ಯನಿರ್ವಹಿಸುತ್ತಿವೆಯೇ ಎಂಬುದರ ಬಗ್ಗೆ ತನಿಖೆ ನಡೆಸಿದ್ದೀರಾ ?</p>



<p class="wp-block-paragraph">ತನಿಖಾಧಿಕಾರಿ : ಇಲ್ಲ.</p>



<p class="wp-block-paragraph">ಎಸ್ ಬಾಲನ್ : ಆರೋಪಿ ಮನೆಯಿಂದ 3 ಕುರಾನ್ ಪುಸ್ತಕ ವಶಕ್ಕೆ ತೆಗೆದುಕೊಂಡಿದ್ದೀರಿ ಅಂತ ಚಾರ್ಜ್ಶೀಟ್ ನಲ್ಲಿ ಹಾಕಿದ್ದೀರಿ. ಅದಕ್ಕೂ ಘಟನೆಗೂ ಏನು ಸಂಬಂಧ ?</p>



<p class="wp-block-paragraph">ತನಿಖಾಧಿಕಾರಿ : ಆರೋಪಿತನ ಮನೆಯಿಂದ ವಶಪಡಿಸಿಕೊಂಡ 3 ಕುರಾನ್ ಪುಸ್ತಕಗಳು, Osama Bin Laden I Know ಹಾಗೂ Guerrillas ಪುಸ್ತಕಗಳ ಲೇಖಕರು ಯಾರು ಮತ್ತು ಅವುಗಳಿಗೆ ಘಟನೆಯೊಂದಿಗೆ ಏನು ಸಂಬಂಧ ಎಂಬುದರ ಬಗ್ಗೆ ನಾನು ತನಿಖೆ ನಡೆಸಿಲ್ಲ.</p>



<p class="wp-block-paragraph">ಎಸ್ ಬಾಲನ್ : ಆರೋಪಿ ಫಹಾದ್ ಅಲ್ ಬದರ್ ಸಂಘಟನೆಗೆ ಸೇರಿದವನು ಎನ್ನುತ್ತೀರಿ. ಇದರ ಬಗ್ಗೆ ಏನು ಮಾಹಿತಿ ಇದೆ ? ಅದರ ಸ್ಥಾಪಕ ಯಾರು ? ನಾಯಕ ಯಾರು ?</p>



<p class="wp-block-paragraph">ತನಿಖಾಧಿಕಾರಿ : ‘ಅಲ್-ಬದರ್’ ಸಂಘಟನೆ ಭಾರತದಲ್ಲಿ ನಿಷೇಧಿತ ಸಂಘಟನೆ ಎಂಬ ದಾಖಲೆಗಳನ್ನು ಮಾತ್ರ ಸಂಗ್ರಹಿಸಿದ್ದೇನೆ. ಆದರೆ ಅದರ ಸ್ಥಾಪಕ ಯಾರು, ನಾಯಕ ಯಾರು ಮತ್ತು ಮುಖ್ಯ ಕಚೇರಿ ಎಲ್ಲಿದೆ ಎಂಬುದು ನನಗೆ ತಿಳಿದಿಲ್ಲ.</p>



<p class="wp-block-paragraph">ಎಸ್ ಬಾಲನ್ : ಆರೋಪಿ ‘ಅಲ್-ಬದರ್’ ಸಂಘಟನೆಗೆ ಸೇರಿದವನು ಎಂದು ಹೇಗೆ ತನಿಖೆ ನಡೆಸಿದ್ರಿ ?</p>



<p class="wp-block-paragraph">ತನಿಖಾಧಿಕಾರಿ : ಆರೋಪಿಯು ‘ಅಲ್-ಬದರ್’ ಸಂಘಟನೆಯ ಸದಸ್ಯನಾಗಿದ್ದಾನೆ ಎಂಬ ಬಗ್ಗೆ ನಾನು ಯಾವುದೇ ತನಿಖೆ ನಡೆಸಿಲ್ಲ. ಅದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಯನ್ನು ನಾನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ.</p>



<p class="wp-block-paragraph">ಎಸ್ ಬಾಲನ್ : ಆರೋಪಿ ‘ಅಲ್-ಬದರ್’ ಸಂಘಟನೆಯ ಲೆಟರ್ ಹೆಡ್ ಹೊಂದಿದ್ದ ಎಂದು ಚಾರ್ಜ್ಶೀಟ್ ನಲ್ಲಿ ಹೇಳಿದ್ರಿ. ಅದು ಎಲ್ಲಿ ಮುದ್ರಿಸಲಾಗಿತ್ತು ?</p>



<p class="wp-block-paragraph">ತನಿಖಾಧಿಕಾರಿ : ಅಲ್-ಬದರ್ ಸಂಘಟನೆಯ ಲೆಟರ್‌ಹೆಡ್‌ಗಳನ್ನು ಎಲ್ಲಿ ಮುದ್ರಿಸಲಾಗಿದೆ ಎಂಬ ಬಗ್ಗೆ ತನಿಖೆ ನಡೆಸಿಲ್ಲ.</p>



<p class="wp-block-paragraph">ಎಸ್ ಬಾಲನ್ : AK-47, 9 ಮಿ.ಮೀ. ಪಿಸ್ತೂಲ್, AK-47 ರೈಫಲ್‌ನ 90 ಜೀವಂತ ಕಾರ್ಟ್ರಿಡ್ಜ್‌ಗಳು ಮತ್ತು 9 ಮಿ.ಮೀ. ಪಿಸ್ತೂಲ್‌ನ 7 ಜೀವಂತ ಕಾರ್ಟ್ರಿಡ್ಜ್‌ಗಳು ಮೈಸೂರಿಗೆ ಹೇಗೆ ಬಂದವು ಮತ್ತು ಅವುಗಳ ಮೂಲ ಏನು ಎಂಬ ಬಗ್ಗೆ ತನಿಖೆ ನಡೆಸಿಲ್ಲ.</p>



<p class="wp-block-paragraph">ತನಿಖಾಧಿಕಾರಿ : ಹೌದು. ತನಿಖೆ ನಡೆಸಿಲ್ಲ.</p>



<p class="wp-block-paragraph">ಎಸ್ ಬಾಲನ್ : ಆರೋಪಿಯಿಂದ ವಶಕ್ಕೆ ತೆಗೆದುಕೊಂಡ ಲ್ಯಾಪ್‌ಟಾಪ್ ಚಾರ್ಜರ್, ಕಾರ್ಡ್ ರೀಡರ್, DVD ರೀಡರ್, ಡಿಸ್ಕ್ ಡ್ರೈವ್ ಮಾಡ್ಯುಲರ್, ಕೀಪ್ಯಾಡ್, ಮೌಸ್, ವೆಬ್ ಕ್ಯಾಮೆರಾ, ಪವರ್ ಸಪ್ಲೈ ಕಾರ್ಡ್, ರಿಲಯನ್ಸ್ ವೈರ್‌ಲೆಸ್ ಮಾಡ್ಯೂಲ್, CD ಮತ್ತು ಹೆಡ್‌ಫೋನ್‌ಗಳು ಈ ಪ್ರಕರಣಕ್ಕೆ ಹೇಗೆ ಸಂಬಂಧಪಟ್ಟಿವೆ ಎಂಬ ಬಗ್ಗೆ ತನಿಖೆ ನಡೆಸಿಲ್ಲ. ನಡೆಸಿದ್ರೆ ತೋರಿಸಿ</p>



<p class="wp-block-paragraph">ತನಿಖಾಧಿಕಾರಿ : ಹೌದು. ಈ ಬಗ್ಗೆ ತನಿಖೆ ನಡೆಸಿಲ್ಲ</p>



<p class="wp-block-paragraph">ಎಸ್ ಬಾಲನ್ : ಭಯೋತ್ಪಾನೆ ಅಂದರೆ ಅಲ್ಲಿ ಸಂಚು (Conspiracy) ಇರುತ್ತದೆ. ಈ Conspiracyಯ ಸ್ಥಳದ ಮಹಜರು ನಡೆಸಿದ್ದೀರಾ ?</p>



<p class="wp-block-paragraph">ತನಿಖಾಧಿಕಾರಿ : ಆರೋಪಿ ನಂ.1 ಮತ್ತು ಇತರರು ನಡೆಸಿದ ಸಂಚು (Conspiracy) ನಡೆದ ಸ್ಥಳದ ಬಗ್ಗೆ ಯಾವುದೇ ಮಹಜರು ರಚಿಸಿಲ್ಲ.</p>



<p class="wp-block-paragraph">ಎಸ್ ಬಾಲನ್ : ಈ ಹಿಂದೆ ಆರೋಪಿ ವಿರುದ್ಧ ಭಯೋತ್ಪಾದನೆಯ ಕೇಸುಗಳು ಇದ್ದುವಾ ?</p>



<p class="wp-block-paragraph">ತನಿಖಾಧಿಕಾರಿ : ಮೈಸೂರಿನಲ್ಲಿ IPC 121, 121A ಮತ್ತು 122ರ ಅಡಿಯಲ್ಲಿ ಆರೋಪಿ ನಂ.1 ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿರಲಿಲ್ಲ.</p>



<p class="wp-block-paragraph">ಎಸ್ ಬಾಲನ್ : ಆರೋಪಿ ನಿಷೇದಿತ ಭಯೋತ್ಪಾಧನಾ ಸಂಘಟನೆಯಲ್ಲಿ ಇದ್ದ, ಅದಕ್ಕಾಗಿ ಹಣ ಸಂಗ್ರಹಿಸುತ್ತಿದ್ದ ಎಂದು ಚಾರ್ಜ್ಶೀಟ್ ನಲ್ಲಿ ಹೇಳಿದ್ದೀರಿ. ಈ ಬಗ್ಗೆ ತನಿಖೆಯ ಡಿಟೇಲ್ಸ್ ಅನ್ನು ಚಾರ್ಜ್ಶೀಟ್ ನಲ್ಲಿ ತೋರಿಸಿ.</p>



<p class="wp-block-paragraph">ತನಿಖಾಧಿಕಾರಿ : ಆರೋಪಿ ನಂ.1 ಯಾವುದೇ ನಿಷೇಧಿತ ಅಥವಾ ಇತರ ಸಂಘಟನೆಗಳ ಸಭೆಗಳಲ್ಲಿ ಭಾಗವಹಿಸಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆಸಿಲ್ಲ. ಮೈಸೂರಿನಲ್ಲಿ ಅಥವಾ ಬೇರೆಡೆ ಆರೋಪಿ ನಂ.1 ಸಾರ್ವಜನಿಕರಿಂದ ಚಂದಾ ಸಂಗ್ರಹಿಸಿದ್ದಾನೆ ಎಂಬ ಆರೋಪಗಳಿರಲಿಲ್ಲ.</p>



<p class="wp-block-paragraph"><strong><em>(ಇದು ನ್ಯಾಯಾಲಯದ ಕ್ರಾಸ್ ಎಕ್ಸಾಮಿನೇಷನ್ ದಾಖಲೆಗಳನ್ನು ಆಧರಿಸಿದ ಲೇಖನ. ಪೂರ್ತಿ ಕ್ರಾಸ್ ಎಕ್ಸಾಮಿನೇಶನ್ ಅಂಶಗಳು ಇದರಲ್ಲಿ ಇಲ್ಲ. ಮುಖ್ಯವಾದ ಭಾಗವನ್ನು ಮಾತ್ರ ಆಯ್ದುಕೊಂಡು ಮಾಹಿತಿಗಾಗಿ ನೀಡಲಾಗಿದೆ. ಇದರ ಸರಣಿ ಮುಂದುವರೆಯುತ್ತದೆ. ಆಸಕ್ತರು, ಕಾನೂನು ವಿದ್ಯಾರ್ಥಿಗಳು ಗಮನಿಸಬಹುದು &#8211; ನವೀನ್ ಸೂರಿಂಜೆ)</em></strong></p>
]]></content:encoded>
					
		
		
			</item>
		<item>
		<title>ಸಂಸತ್ತಿನ ಪೂರ್ವಸೂರಿಗಳು &#8211; 25: ಸಂವಿಧಾನ ಸಭೆಯಿಂದ ಸಂಸತ್ತಿನವರೆಗೆ ಎನ್‌. ಗೋಪಾಲಸ್ವಾಮಿ ಅಯ್ಯಂಗಾರ್‌ ಬಿಟ್ಟು ಹೋದ ಹೆಜ್ಜೆ ಗುರುತುಗಳು</title>
		<link>https://peepalmedia.com/footprints-left-by-n-gopalaswami-iyengar/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 08 Jun 2026 07:21:59 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://peepalmedia.com/?p=79531</guid>

					<description><![CDATA[ಈ ಲೇಖನ ಸರಣಿಯು &#8216;ದಿ ಅರ್ಲಿ ಪಾರ್ಲಿಮೆಂಟರಿಯನ್ಸ್&#8217; ಎಂಬ ಶೀರ್ಷಿಕೆಯ &#8216;ದಿ ವೈರ್&#8217; ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಇಪ್ಪತ್ತೈದನೆಯ ಲೇಖನ ನರಸಿಂಹ ಗೋಪಾಲಸ್ವಾಮಿ ಅಯ್ಯಂಗಾರ್ ಭಾರತೀಯ ನಾಗರಿಕ ಸೇವೆಯಲ್ಲಿದ್ದ ವ್ಯಕ್ತಿ. ನಂತರ ರಾಜಕಾರಣಿಯಾಗಿ, ಸಂಸದರಾಗಿ ಮತ್ತು ರಾಜಪ್ರಭುತ್ವವಿದ್ದ ಕಾಶ್ಮೀರ ರಾಜ್ಯದ ಪ್ರಧಾನ ಮಂತ್ರಿಯಾಗಿ (1937–1943) ಕೆಲಸ ಮಾಡಿದ್ದರು. ಸ್ವತಂತ್ರ ಭಾರತದ ಮೊಟ್ಟ ಮೊದಲ ಸಚಿವ ಸಂಪುಟದಲ್ಲಿ ಅವರು ಸಚಿವರಾಗಿದ್ದರು. 1943 ರಲ್ಲಿ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p class="wp-block-paragraph">ಈ ಲೇಖನ ಸರಣಿಯು &#8216;ದಿ ಅರ್ಲಿ ಪಾರ್ಲಿಮೆಂಟರಿಯನ್ಸ್&#8217; ಎಂಬ ಶೀರ್ಷಿಕೆಯ &#8216;ದಿ ವೈರ್&#8217; ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಇಪ್ಪತ್ತೈದನೆಯ ಲೇಖನ</p>
</blockquote>



<pre class="wp-block-code"><code>ಸಮರ್ಥ ಆಡಳಿತಗಾರ ಮತ್ತು ನಾಗರಿಕ ಸೇವಕರಾಗಿದ್ದ ಅಯ್ಯಂಗಾರ್‌ ಅವರು 1947 ತ ತನಕ, ಬ್ರಿಟಿಷ್‌ ವೈಸ್‌ರಾಯ್‌ ನೀಡುವ ಅತ್ಯುನ್ನತ ಬಿರುದಾಗಿದ್ದ ದಿವಾನ್‌ ಬಹದ್ದೂರ್‌ ಸಹಿತ ಏಳು ಬಿರುದುಗಳನ್ನು ಪಡೆದುಕೊಂಡಿದ್ದರು.</code></pre>



<p class="wp-block-paragraph">ನರಸಿಂಹ ಗೋಪಾಲಸ್ವಾಮಿ ಅಯ್ಯಂಗಾರ್ ಭಾರತೀಯ ನಾಗರಿಕ ಸೇವೆಯಲ್ಲಿದ್ದ ವ್ಯಕ್ತಿ. ನಂತರ ರಾಜಕಾರಣಿಯಾಗಿ, ಸಂಸದರಾಗಿ ಮತ್ತು ರಾಜಪ್ರಭುತ್ವವಿದ್ದ ಕಾಶ್ಮೀರ ರಾಜ್ಯದ ಪ್ರಧಾನ ಮಂತ್ರಿಯಾಗಿ (1937–1943) ಕೆಲಸ ಮಾಡಿದ್ದರು. ಸ್ವತಂತ್ರ ಭಾರತದ ಮೊಟ್ಟ ಮೊದಲ ಸಚಿವ ಸಂಪುಟದಲ್ಲಿ ಅವರು ಸಚಿವರಾಗಿದ್ದರು.</p>



<p class="wp-block-paragraph">1943 ರಲ್ಲಿ ಸ್ಟೇಟ್‌ ಕೌನ್ಸಿಲ್‌ಗೆ ಆಯ್ಕೆಯಾಗಿದ್ದ ಅಯ್ಯಂಗಾರ್‌ 1947 ರವರೆಗೆ ಸೇವೆ ಸಲ್ಲಿಸಿದ್ದರು. ತನ್ನ ಸೇವಾವಧಿಯಲ್ಲಿ “ಸೇನೆಯ ಭಾರತೀಕರಣ ಸಮಿತಿ”ಯ ಅಧ್ಯಕ್ಷರಾಗಿ ಕೂಡ ಕೆಲಸ ಮಾಡಿದ್ದರು. 1945 ರಲ್ಲಿ ಪ್ರಕಟಗೊಂಡ ಸಾಂವಿಧಾನಿಕ ಸುಧಾರಣೆಗಳ ಕುರಿತ ಸಪ್ರು ಸಮಿತಿ ವರದಿಯ ಸಹ ಲೇಖಕರಾಗಿದ್ದರು.</p>



<p class="wp-block-paragraph">1946 ರಲ್ಲಿ ಅವರು ಮದರಾಸು ರಾಜ್ಯದಿಂದ ಭಾರತದ ಸಂವಿಧಾನ ಸಭೆಗೆ ಆಯ್ಕೆಯಾಗಿದ್ದರು. 1946 ಡಿಸೆಂಬರ್‌ ತಿಂಗಳಲ್ಲಿ ಅದು ಸಭೆ ಸೇರಿತ್ತು. ಭಾರತದ ಸಂವಿಧಾನವನ್ನು ರಚಿಸಿದ ಏಳು ಸದಸ್ಯರಿದ್ದ ಸಮಿತಿಗೆ ಕೂಡ ಅವರನ್ನು ನೇಮಿಸಲಾಗಿತ್ತು.</p>



<p class="wp-block-paragraph">ಆರಂಭ ಜೀವನ<br>1882 ರಂದು ಮದ್ರಾಸ್ ಪ್ರೆಸಿಡೆನ್ಸಿಯ ತಂಜಾವೂರು ಜಿಲ್ಲೆಯಲ್ಲಿ ಜನನ. ಅವರು ವೆಸ್ಲಿ ಶಾಲೆ ಮತ್ತು ಮದರಾಸಿನ ಪ್ರೆಸಿಡೆನ್ಸಿ ಆಂಡ್‌ ಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸುತ್ತಾರೆ. 1904 ರಲ್ಲಿ ಕೆಲಕಾಲ ಪಾಚ್ಚಿಯಪ್ಪ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಾರೆ.</p>



<p class="wp-block-paragraph">1905 ರಲ್ಲಿ ಅವರು ಮದರಾಸ್‌ ನಾಗರಿಕ ಸೇವೆಗೆ ಸೇರುತ್ತಾರೆ. 1919 ರವರೆಗೆ ಅವರು ಡೆಪ್ಯುಟಿ ಕಲೆಕ್ಟರ್‌ ಆಗಿ ಕೆಲಸ ಮಾಡುತ್ತಾರೆ. 1920 ರಲ್ಲಿ ಅವರಿಗೆ ಕಲೆಕ್ಟರ್‌ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಆಗಿ ಭಡ್ತಿ ನೀಡಲಾಗುತ್ತದೆ. 1921 ರಿಂದ ಏಳು ವರ್ಷಗಳ ಅವಧಿಯಲ್ಲಿ ಪಂಚಾಯತುಗಳ ರಿಜಿಸ್ಟ್ರಾರ್‌ ಜನರಲ್‌ ಮತ್ತು ಸ್ಥಳೀಯಾಡಳಿತ ಮಂಡಳಿಗಳ ಇನ್ಸ್‌ಪೆಕ್ಟರ್‌ ಆಗಿದ್ದರು. ಈ ಅವಧಿಯಲ್ಲಿ ಅವರು ರಾಮನಾಡು ಮತ್ತು ಗುಂಟೂರು ಜಿಲ್ಲೆಗಳಲ್ಲಿ ಹಲವು ಗ್ರಾಮ ಪಂಚಾಯತ್‌ಗಳನ್ನು ಸಂಘಟಿಸಿದ್ದರು. ನಂತರ ಮೂರು ವರ್ಷಗಳ ಕಾಲ ಅನಂತಪುರದಲ್ಲಿ ಕಲೆಕ್ಟರ್‌ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಆಗಿ ಕೆಲಸ ಮಾಡಿದ್ದರು.</p>



<p class="wp-block-paragraph">ಅದರ ನಂತರ 1932 ರವರೆಗೆ ಅಯ್ಯಂಗಾರ್‌ ಅವರು ಪುರಸಭೆ ಮತ್ತು ಸ್ಥಳೀಯಾಡಳಿತ ಮಂಡಳಿಗಳ ಇನ್ಸ್‌ಪೆಕ್ಟರ್ ಆಗಿದ್ದರು. 1932 ರಿಂದ 1934 ರವರೆಗೆ ಲೋಕೋಪಯೋಗಿ ಇಲಾಖೆಯಲ್ಲಿ ಸರಕಾರದ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಾರೆ. ಕೊನೆಗೆ 1937 ರವರೆಗೆ ಕಂದಾಯ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.</p>



<p class="wp-block-paragraph">ಸಮರ್ಥ ಆಡಳಿತಗಾರ ಮತ್ತು ನಾಗರಿಕ ಸೇವಕರಾಗಿದ್ದ ಅಯ್ಯಂಗಾರ್‌ 1947 ರವರೆಗೆ, ಬ್ರಿಟಿಷ್‌ ವೈಸ್‌ರಾಯ್‌ ನೀಡುವ ಅತ್ಯುನ್ನತ ಬಿರುದಾಗಿದ್ದ ದಿವಾನ್‌ ಬಹದ್ದೂರ್‌ ಸಹಿತ ಏಳು ಬಿರುದುಗಳನ್ನು ಪಡೆದುಕೊಂಡಿದ್ದರು. ಬ್ರಿಟಿಷ್‌ ಸರಕಾರ ಅವರಿಗೆ ನೀಡಿದ್ದ ಇತರ ಬಿರುದುಗಳೆಂದರೆ, 1935 ರ ರಜತ ಮಹೋತ್ಸವ ಮತ್ತು ಹುಟ್ಟುಹಬ್ಬದ ಗೌರವ ಪಟ್ಟಿಯಲ್ಲಿ ಕಂಪಾನಿಯನ್‌ ಆಫ್‌ ದಿ ಆರ್ಡರ್‌ ಆಫ್‌ ದಿ ಇಂಡಿಯನ್‌ ಎಂಪೈರ್‌ (CIE), 1937 ರ ಕೊರೊನೇಷನ್‌ ಗೌರವ ಪಟ್ಟಿಯಲ್ಲಿ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಇಂಡಿಯಾ (CSI) ಮತ್ತು 1941 ರ ಹೊಸ ವರ್ಷದ ಗೌರವ ಪಟ್ಟಿಯಲ್ಲಿ ನೈಟ್‌ಹುಡ್.</p>



<p class="wp-block-paragraph">ಕಾಶ್ಮೀರದ ಕುರಿತು ಮಾಡಿದ ಕೆಲಸ<br>1947-48 ರಲ್ಲಿ ಜವಹರ್‌ಲಾಲ್ ನೆಹರೂ ಅವರ ಮೊದಲ ಸಂಪುಟದಲ್ಲಿ ಸಚಿವರಾಗಿದ್ದ ಅವರಿಗೆ ಯಾವುದೇ ಖಾತೆಯನ್ನು ನೀಡದೆ ಕಾಶ್ಮೀರದ ವ್ಯವಹಾರಗಳ ಜವಾಬ್ದಾರಿಯನ್ನು ವಹಿಸಲಾಗಿತ್ತು. ಸ್ವತಃ ನೆಹರೂ ಅವರೇ ಕಾಶ್ಮೀರದ ಒಟ್ಟು ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಇದು ಆಗ ಗೃಹ ಸಚಿವರಾಗಿದ್ದ ಸರ್ದಾರ್‌ ಪಟೇಲರೊಂದಿಗೆ ಸಣ್ಣ ಮಟ್ಟದ ಸಂಘರ್ಷಕ್ಕೂ ಕಾರಣವಾಗಿತ್ತು. ಯಾಕೆಂದರೆ, ರಾಜಪ್ರಭುತ್ವವಿದ್ದ ಇತರ ಸಂಸ್ಥಾನಗಳ ಜವಾಬ್ದಾರಿ ಗೃಹ ಸಚಿವರಾಗಿತ್ತು. 1947 ಅಕ್ಟೋಬರ್‌ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಲೀನದ ನಂತರ 1948 ರಲ್ಲಿ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ನಿಯೋಗಕ್ಕೆ ಅಯ್ಯಂಗಾರ್‌ ನೇತೃತ್ವ ವಹಿಸಿದ್ದರು. ಅದರ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ಸ್ವಾಯತ್ತತೆಯನ್ನು ಕಲ್ಪಿಸುವ 370 ನೇ ವಿಧಿಯನ್ನು ರಚಿಸುವುದು ಕೂಡ ಅಯ್ಯಂಗಾರ್‌ ಅವರೇ ಆಗಿದ್ದರು.</p>



<p class="wp-block-paragraph">ಅಯ್ಯಂಗಾರ್‌ ಅವರಿಗಿದ್ದ ಕಾಶ್ಮೀರ ನಂಟು ಕೊನೆಗಾಲದರೆಗೂ ಮುಂದುವರಿದಿತ್ತು. 1952 ರಲ್ಲಿ ಜಿನಿವಾದ ಲೇಕ್‌ ಸಕ್ಸಸ್‌ನಲ್ಲಿ ನಡೆದಿದ್ದ ಕಾಶ್ಮೀರ ಕುರಿತ ಮಾತುಕತೆಗಳು ಮತ್ತು ಚರ್ಚೆಗಳಿಗೆ ಭಾರತದ ಪ್ರತಿನಿಧಿಯಾಗಿ ಅಯ್ಯಂಗಾರ್‌ ಅವರನ್ನು ನೆಹರೂ ನೇಮಿಸಿದ್ದರು. ಅಲ್ಲಿ ಮತ್ತು ಇತರ ಎಲ್ಲ ಕಡೆಗಳಲ್ಲಿಯೂ ಅವರು ಭಾರತದ ನಿಲುವನ್ನು ಸ್ಪಷ್ಟವಾಗಿ ಮತ್ತು ಗಟ್ಟಿಯಾಗಿ ವಿವರಿಸಿದ್ದರು.</p>



<p class="wp-block-paragraph">ಕಾಶ್ಮೀರದ ದಿವಾನರಾಗಿದ್ದ ಅವಧಿಯು ಅವರಿಗೆ ಕ್ಲಿಷ್ಟಕರ ಸಮಯವಾಗಿತ್ತು. ಕಾಶ್ಮೀರ ಸಮಿತಿಯು ಮಹಾರಾಜನನ್ನು ಕಿತ್ತು ಹಾಕಲು ನಡೆಸಿದ ಪ್ರಯತ್ನವು ಕೊನೆಗೆ ದಂಗೆಯಾಗಿ, ಕೋಮುವಾದಿ ತಿರುವು ಪಡೆದುಕೊಂಡಿತ್ತು.</p>



<p class="wp-block-paragraph">2023 ರ ಆಗಸ್ಟ್‌ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ 370 ನೇ ವಿಧಿಯ ರದ್ದತಿ ಕುರಿತು ವಿಚಾರಣೆ ನಡೆಸುತ್ತಿದ್ದಾಗ, ಭಾರತದ ಸಂವಿಧಾನ ರಚನಾ ಸಭೆಯಲ್ಲಿ ಅಯ್ಯಂಗಾರ್‌ ಅವರು ಜಮ್ಮು ಮತ್ತು ಕಾಶ್ಮೀರದ ಜನತೆಯ ಜೊತೆಗೆ ಹೊಂದಿದ್ದ ಬದ್ಧತೆಯ ಕುರಿತು ಕೂಡ ಉಲ್ಲೇಖಿಸಿತ್ತು.</p>



<p class="wp-block-paragraph">ಸಂಸದೀಯ ಬದುಕು<br>1948-1952 ರ ಅವಧಿಯಲ್ಲಿ ಅಯ್ಯಂಗಾರ್‌ ಅವರು ರೈಲ್ವೇ ಮತ್ತು ಸಾರಿಗೆ ರಾಜ್ಯ ಸಚಿವರಾಗಿ ಮತ್ತು ಕೊನೆಗೆ 1952-1953 ರವರೆಗೆ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದರು. 1952 ರಲ್ಲಿ ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದರು. 1952 ಮೇ 13 ರಿಂದ 1953 ಫೆಬ್ರವರಿ 10 ರ ತನಕ ಅವರು ರಾಜ್ಯಸಭೆಯಲ್ಲಿ ಸದನದ ನಾಯಕರಾಗಿದ್ದರು.</p>



<p class="wp-block-paragraph">ಅವರು ರೈಲ್ವೇ ಸಚಿವರಾಗಿದ್ದ ಅವಧಿಯಲ್ಲಿ ರೈಲ್ವೇ ಸೇವೆಗಳು ಮತ್ತು ಸಲಕರಣೆಗಳಲ್ಲಿ ಗಣನೀಯ ಬೆಳವಣಿಗೆ ಮತ್ತು ವಿಸ್ತರಣೆ ಕಂಡಿತ್ತು. ಭಾರತೀಯ ರೈಲ್ವೆಯನ್ನು ಮಧ್ಯ, ಪೂರ್ವ, ಉತ್ತರ, ಈಶಾನ್ಯ, ದಕ್ಷಿಣ ಮತ್ತು ಪಶ್ಚಿಮ ಎಂದು ಆರು ವಲಯಗಳಾಗಿ ಮರುಸಂಘಟಿಸುವಲ್ಲಿ ಅವರು ಪ್ರಮುಖ ಶಕ್ತಿಯಾಗಿ ಕೆಲಸ ಮಾಡಿದ್ದರು. ಈ ಅವಧಿಯಲ್ಲಿ ರೈಲ್ವೇ ಹೆಚ್ಚುವರಿ ಗಳಿಕೆಯನ್ನು ಕೂಡ ದಾಖಲಿಸಿತ್ತು.</p>



<p class="wp-block-paragraph">1949 ರಲ್ಲಿ ಸರಕಾರಿ ಸೇವೆಗಳನ್ನು ಸವ್ಯವಸ್ಥೆಗೊಳಿಸುವ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ದಕ್ಷತೆಯನ್ನು ತರುವ ಪ್ರಯತ್ನವಾಗಿ ಅವರು “ಸರಕಾರಿ ಯಂತ್ರದ ಮರುಸಂಘಟನೆ” ಎಂಬ ವರದಿಯನ್ನು ಮಂಡಿಸಿದ್ದರು.</p>



<p class="wp-block-paragraph">ಅದರಲ್ಲಿ ಅವರು ನಾಲ್ಕು ಸ್ಥಾಯಿ ಸಮಿತಿಗಳನ್ನು ರೂಪಿಸಲು ಶಿಫಾರಸ್ಸು ಮಾಡಿದ್ದರು. ಅವರ ವರದಿಯ ಪರಿಣಾಮವಾಗಿ ಕೇಂದ್ರ ಸರಕಾರವು ನಾಲ್ಕು ಸಮಿತಿಗಳನ್ನು ರಚಿಸುತ್ತದೆ. ಅವುಗಳು: ರಕ್ಷಣಾ ಸಮಿತಿ, ಆರ್ಥಿಕ ಸಮಿತಿ, ಸಂಸದೀಯ ಮತ್ತು ಕಾನೂನು ವ್ಯವಹಾರಗಳ ಸಮಿತಿ ಹಾಗೂ ಆಡಳಿತಾತ್ಮಕ ಸಂಘಟನಾ ಸಮಿತಿ.</p>



<p class="wp-block-paragraph">1953 ಫೆಬ್ರವರಿ 10 ರಂದು ರಕ್ಷಣಾ ಸಚಿವರಾಗಿದ್ದ ಅವಧಿಯಲ್ಲಿ, ತಮ್ಮ 71 ನೇ ವಯಸ್ಸಿನಲ್ಲಿ ಮದರಾಸಿನಲ್ಲಿ ಅಯ್ಯಂಗಾರ್‌ ನಿಧನರಾಗುತ್ತಾರೆ. ಅವರು ಪತ್ನಿ, ಮಗಳು ಮತ್ತು ಮಗನನ್ನು ಅಗಲಿದ್ದರು. ಮಗ ಜಿ. ಪಾರ್ಥಸಾರಥಿ ದಿ ಹಿಂದೂ ಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು ಮತ್ತು ನಂತರದಲ್ಲಿ ಒಬ್ಬ ನಿಪುಣ ರಾಜತಾಂತ್ರಿಕನಾಗಿ ಹೆಸರು ಪಡೆದವರು.</p>



<p class="wp-block-paragraph">1953 ಫೆಬ್ರವರಿ 11ರಂದು ಪ್ರಧಾನ ಮಂತ್ರಿ ಜವಹರ್‌ಲಾಲ್‌ ನೆಹರೂ ಅವರು ಅಯ್ಯಂಗಾರ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾ ಭಾವುಕರಾಗಿ ಮಾತನಾಡಿದರು. “ನಾವು ಹಲವಾರು ವಿಷಯಗಳಲ್ಲಿ ಅವರನ್ನು ಅವಲಂಬಿಸಿದ್ದೆವು. ಸರಕಾರದ ಒಳಗಡೆ ಅವರು ತಮ್ಮದೇ ಶೈಲಿಯಲ್ಲಿ ಸ್ವತಃ ಒಂದು ಸಂಸ್ಥೆಯಾಗಿ ಬದಲಾಗಿದ್ದರು. ನಾವು ಯಾವಾಗಲೂ, ಯಾವುದೇ ಸಮಸ್ಯೆ ಎದುರಾದಾಗಲೂ ಅವರ ಕಡೆಗೆ ತಿರುಗಿ ನೋಡುತ್ತಿದ್ದೆವು. ಹಾಗಾಗಿಯೇ ಬಹುಷ ಆ ಸಂಸ್ಥೆಯನ್ನು ನಾವು ಬಹಳ ಲಘುವಾಗಿ ಪರಿಗಣಿಸಿದೆವು ಕೂಡ. ಅನಪೇಕ್ಷಿತ ಘಟನೆಗಳು ಘಟಿಸುವಾಗ, ಅದು ಒಟ್ಟು ಸಂರಚನೆಯನ್ನೇ ಅಲ್ಲಾಡಿಸುತ್ತವೆ. ಅದು ಇಲ್ಲೀಗ ಸಂಭವಿಸಿದೆ. ನಾವು ಅವರ ಅಗಲಿಕೆಗಾಗಿ ದುಃಖಿಸುತ್ತಿದ್ದರೂ, ವಾಸ್ತವದಲ್ಲಿ ನಾವು ನಮಗಾಗಿಯೇ ದುಃಖಿಸುತ್ತಿದ್ದೇವೆ. ಯಾಕೆಂದರೆ, ಅವರಿನ್ನು ನಮ್ಮ ಸಹಾಯಕ್ಕೆ ಒದಗಿ ಬರುವುದಿಲ್ಲ.”</p>



<p class="wp-block-paragraph">ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.</p>
]]></content:encoded>
					
		
		
			</item>
		<item>
		<title>ಡಿಕೆ ಶಿವಕುಮಾರ್ ಪ್ರೆಸ್ ಮೀಟ್ ಮತ್ತು ಪ್ರಮುಖ ಯೋಜನೆಗಳ ಅವಲೋಕನ</title>
		<link>https://peepalmedia.com/dk-shivakumar-press-meet-and-overview-of-major-projects/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 08 Jun 2026 06:29:17 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://peepalmedia.com/?p=79522</guid>

					<description><![CDATA[&#8220;ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ಬೆನ್ನೆಲೆ ಇತ್ತೀಚಿನ ಪ್ರೆಸ್ ಮೀಟ್‌ನಲ್ಲಿ ಪ್ರಸ್ತಾಪಿಸಿದ ಪ್ರಮುಖ ಯೋಜನೆಗಳು/ಕಾರ್ಯಕ್ರಮಗಳ ಒಂದು ಅವಲೋಕನ&#8221; ಕಾನೂನು ವಿದ್ಯಾರ್ಥಿ ಸಚಿನ್ ಒಕ್ಕಲಿಗ ಅವರ ಬರಹದಲ್ಲಿ ಇನ್ನು ವಿಸ್ತೃತವಾಗಿ ನೋಡೋದಾದ್ರೆ ನನ್ನ ಅನಿಸಿಕೆ ಮತ್ತು ಅಭಿಪ್ರಾಯಗಳು :- ಒಟ್ಟಾರೆಯಾಗಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ಹಿನ್ನೆಲೆಯಲ್ಲಿ ಅವರ ಸರ್ಕಾರದ ಮೊದಲ ಘೋಷಣೆಗಳು ಇವಾಗಿದ್ದು ಇವುಗಳು ಎಷ್ಟರಮಟ್ಟಿಗೆ ಸಾಮಾನ್ಯ ಜನರ ಕೈಗೆ ಏಟುಗುತ್ತವೆ, ಸಿಗುತ್ತವೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ… ಏಕೆಂದರೆ ಡಿಕೆ ಶಿವಕುಮಾರ್ ಅವರ ಮೇಲೆ ಜನರು ಯಾವುದೇ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p class="wp-block-paragraph">&#8220;ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ಬೆನ್ನೆಲೆ ಇತ್ತೀಚಿನ ಪ್ರೆಸ್ ಮೀಟ್‌ನಲ್ಲಿ ಪ್ರಸ್ತಾಪಿಸಿದ ಪ್ರಮುಖ ಯೋಜನೆಗಳು/ಕಾರ್ಯಕ್ರಮಗಳ ಒಂದು ಅವಲೋಕನ&#8221; ಕಾನೂನು ವಿದ್ಯಾರ್ಥಿ ಸಚಿನ್ ಒಕ್ಕಲಿಗ ಅವರ ಬರಹದಲ್ಲಿ </p>
</blockquote>



<ul class="wp-block-list">
<li>ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆ.</li>



<li>ಎ-ಖಾತಾ ಮತ್ತು ಬಿ-ಖಾತಾ ಸಮಸ್ಯೆಗಳ ಶೀಘ್ರ ಪರಿಹಾರ.</li>



<li>ಬೆಂಗಳೂರು ಹಾಗೂ ರಾಜ್ಯದ ರಸ್ತೆ ಅಭಿವೃದ್ಧಿ ಕಾರ್ಯಕ್ರಮ.</li>



<li>10,000 ಭಾರತ್ ಜೋಡೋ ಯುವಕರ ಕ್ಲಬ್‌ಗಳ ಸ್ಥಾಪನೆ.</li>



<li>ಎನ್‌ಆರ್‌ಐ (ವಿದೇಶಿ ಕನ್ನಡಿಗರ) ಇಲಾಖೆ ಸ್ಥಾಪನೆ.</li>



<li>ಸಾರ್ವಜನಿಕ ದೂರು ನಿವಾರಣಾ ಇಲಾಖೆ ಆರಂಭ.</li>



<li>ಯುವಕರಿಗೆ ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ.</li>



<li>ಹೂಡಿಕೆ ಆಕರ್ಷಣೆ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಕ್ರಮಗಳು.</li>
</ul>



<p class="wp-block-paragraph">ಇನ್ನು ವಿಸ್ತೃತವಾಗಿ ನೋಡೋದಾದ್ರೆ ನನ್ನ ಅನಿಸಿಕೆ ಮತ್ತು ಅಭಿಪ್ರಾಯಗಳು :-</p>



<ol class="wp-block-list">
<li>ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್:-<br>ರಾಜ್ಯದ ಎಲ್ಲಾ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸರ್ಕಾರಿಯ ಸಾಮಾನ್ಯ ಬಸ್‌ಗಳಲ್ಲಿ ಉಚಿತವಾಗಿ ಬಸ್ ಪಾಸ್ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಅನುಕೂಲಕರವಾಗಿದೆ. ಆದ್ರೆ ಇವರುಗಳು ಇದನ್ನೇ ಇನ್ನೊಂದು ರೀತಿಯಲ್ಲೂ ಮಾಡಬಹುದಿತ್ತು ಅದೇನೆಂದರೆ ಕನ್ನಡ ಮತ್ತು ಸರ್ಕಾರಿ ಶಾಲಾ ಕಾಲೇಜಲ್ಲಿ ಮಾತ್ರ ಕಲಿತಿರುವ ವಿದ್ಯಾರ್ಥಿಗಳಿಗೆ ಮಾತ್ರ ಈ ಯೋಜನೆಯನ್ನು ಕೊಟ್ಟಿದ್ದರೆ ಚೆನ್ನಾಗಿತ್ತು ಏಕೆಂದರೆ ಸರ್ಕಾರಿ ಶಾಲಾ ಕಾಲೇಜುಗಳ ದಾಖಲಾತಿ ಸಂಖ್ಯೆಯು ಇದರಿಂದ ಸ್ವಲ್ಪ ಹೆಚ್ಚಾಗುವ ಸಾಧ್ಯತೆ ಇತ್ತೇನೋ ಅದರಿಂದ.</li>



<li>10,000 ಭಾರತ್ ಜೋಡೋ ಯುವಕರ ಸಂಘಗಳ ಸ್ಥಾಪನೆ:-<br>ರಾಜ್ಯದಾದ್ಯಂತ 10,000 ಯುವಕರ ಸಂಘಗಳನ್ನು ಆರಂಭಿಸಿ ಕ್ರೀಡೆ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ನಾಯಕತ್ವ ಗುಣಗಳನ್ನು ಬೆಳೆಸಲು ಯೋಜನೆ ರೂಪಿಸುತ್ತೇವೆ ಎಂದು ಹೇಳಿದ್ದಾರೆ. ಇದು ಒಳ್ಳೆಯದೇ ಆದರೆ ಕುತಂತ್ರ ಸಂಸ್ಕೃತದ ಭಾರತ ಜೋಡೊ ಎಂಬ ಹೆಸರನ್ನ ಬದಲಿಸಿ &#8220;ಕನ್ನಡ ನಾಡು ಯುವ ಬಳಗ&#8221; ಎಂದು ಇಡುವುದು ಒಳ್ಳೆಯದು…ಕನ್ನಡ ನುಡಿ ಆಧಾರಿತ ಕರ್ನಾಟಕದಲ್ಲಿ ಪ್ರತಿಯೊಬ್ಬರನ್ನು ಕನ್ನಡಕರಣಗೊಳಿಸುವುದು ಸರಿಯಾದ ಕ್ರಮ ವಿನಃ ಭಾರತ ರಾಷ್ಟ್ರೀಕರಣಗೊಳಿಸುವುದು ನಾಡದ್ರೋಹದ ಕ್ರಮವಾಗುತ್ತದೆ. ಮೇಲಾಗಿ ಭಾರತ ಎಂಬುದು ಹಲವು ರಾಜ್ಯಗಳ ಒಕ್ಕೂಟ ವ್ಯವಸ್ಥೆ ಮಾತ್ರ ಅದೊಂದು ದೇಶವಲ್ಲ ರಾಷ್ಟ್ರವಲ್ಲ. ಸಂವಿಧಾನದ ಆರ್ಟಿಕಲ್ 1 ಕೂಡ ಇಂಡಿಯಾ ಯಾವಾಗಲೂ ಒಕ್ಕೂಟವಾಗೆ ಇರಬೇಕು ಎಂದು ಹೇಳುತ್ತದೆ.</li>



<li>ಎ-ಖಾತಾ ಮತ್ತು ಬಿ-ಖಾತಾ ಸಮಸ್ಯೆ ಪರಿಹಾರ:-<br>ಬೆಂಗಳೂರಿಗೆ ಮಾತ್ರ ಈ ಕಾರ್ಯಕ್ರಮ ಇತ್ತು ಇದನ್ನು ಈಗ ರಾಜ್ಯಾದ್ಯಂತ ಇದನ್ನು ಮಾಡ್ತೀವಿ ಅಂತ ಹೇಳಿದ್ದಾರೆ. ಇನ್ನು ಮನೆ ನಿರ್ಮಾಣ ಮತ್ತು ಆಸ್ತಿ ನೋಂದಣಿ ಸಂಬಂಧಿತ ಎ-ಖಾತಾ ಹಾಗೂ ಬಿ-ಖಾತಾ ಸಮಸ್ಯೆಗಳನ್ನು ಸರಳವಾಗಿ ಮತ್ತು ಶೀಘ್ರವಾಗಿ ಪರಿಹರಿಸಲು ಸರ್ಕಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದು ಒಂದು ರೀತಿಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರವಾಗಿದ್ದು, ಇಲ್ಲಿ ಎಷ್ಟೋ ಅಕ್ರಮಗಳನ್ನು ಸಕ್ರಮ ಮಾಡಲು ಹೊರಟಿದ್ದಾರೆ. ಇದನ್ನು ಎಷ್ಟು ದಿನ ಅಥವಾ ಎಷ್ಟರಮಟ್ಟಿಗೆ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.</li>



<li>ರಸ್ತೆ ಅಭಿವೃದ್ಧಿ ಕಾರ್ಯಕ್ರಮ:-<br>ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳ ಹದಗೆಟ್ಟ ರಸ್ತೆಗಳನ್ನು ಸುಧಾರಿಸಿ,ಗುಂಡಿ ಮುಕ್ತ ರಸ್ತೆಗಳ ನಿರ್ಮಾಣ ಮಾಡಲು ಸುಮಾರು 2000 ಸಾವಿರ ಕೋಟಿಯನ್ನು ನೀಡಲಾಗುವುದು ಎಂದು ಹೇಳಿದ್ದಾರೆ. ಕಮಿಷನ್ ಆಸೆಗೆ ಕಳಪೆ ಕಾಮಗಾರಿ ಮಾಡದಂತೆ ಜನರು ಕಾಯಬೇಕು.</li>



<li>ಖಾಸಗಿ ಉದ್ಯೋಗ ವಿನಿಮಯ ಕೇಂದ್ರ:-<br>ನಿರುದ್ಯೋಗಿ ಯುವಕರಿಗೆ ಖಾಸಗಿ ವಲಯದಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸಲು ವಿಶೇಷ ಉದ್ಯೋಗ ವಿನಿಮಯ (Employment Exchange) ವ್ಯವಸ್ಥೆ ಆರಂಭಿಸುವುದಾಗಿ ಹೇಳಿದಾರೆ. ಇದು ಒಳ್ಳೆಯ ಕಾರ್ಯಕ್ರಮವೇ,ಈ ಕಾರ್ಯಕ್ರಮ ಜಾರಿಯಾದರೆ ಕನ್ನಡನಾಡಿನ ಸಾಕಷ್ಟು ಲಕ್ಷ ನಿರುದ್ಯೋಗಿ ಯುವಕ ಯುವತಿರಿಗೆ ಅನುಕೂಲ ಆಗುತ್ತದೆ ಆದ್ರೆ ಇದು ಎಷ್ಟರ ಮಟ್ಟಿಗೆ ಜಾರಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ, ಯಾಕೆಂದ್ರೆ ಖಾಸಗಿ ವಲಯಗಳಲ್ಲಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಅಥವಾ ಅಲ್ಲಿ ಉದ್ಯೋಗಗಳು ಲಭಿಸುವಂತೆ ಮಾಡುತ್ತೀವಿ ಅಂತ ಹೇಳಿ ನಮ್ಮ ಸರ್ಕಾರಿ ಸೌಮ್ಯದಲ್ಲಿರುವ ಸಂಸ್ಥೆಗಳನ್ನು ಖಾಸಗಿಯವರ ತೆಕ್ಕೆಗೆ ಹಾಕಿಬಿಟ್ಟರೆ ಏನು ಮಾಡೋದು ಅನ್ನುವ ಭಯ ಇದೆ ನನಗೆ. ನೋಡೋಣ ಏನಾಗುತ್ತದೆ ಎಂದು.</li>



<li>ಸರ್ಕಾರಿ ನೇಮಕಾತಿ ಕ್ಯಾಲೆಂಡರ್ :-<br>ಸರ್ಕಾರಿ ಉದ್ಯೋಗಗಳ ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸಲು ನೇಮಕಾತಿ ವೇಳಾಪಟ್ಟಿಯನ್ನು (Recruitment Calendar) ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಇದು ನಮ್ಮ ನಾವು Dravida ಕನ್ನಡಿಗರು ಚಳುವಳಿಯ Yallappa Hegade, ಅಬಿ ಒಕ್ಕಲಿಗ ರವರ ನೇತೃತ್ವದಲ್ಲಿ ಜನ ಸಾಮಾನ್ಯರ ವೇದಿಕೆ ಅಂತ ಮಾಡಿಕೊಂಡು ನಮ್ಮ ಕನ್ನಡನಾಡಿನಲ್ಲಿ ಯುಪಿಎಸ್ಸಿ ಮಾದರಿಯಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡುವ ಮೂಲಕ ಸರ್ಕಾರಿ ಹುದ್ದೆಗಗಳಿಗೆ ನೇಮಕಾತಿಗಳನ್ನು ಮಾಡಿಕೊಳ್ಳಬೇಕೆಂದು ಒಂದು ಬೇಡಿಕೆಯನ್ನು ಸಹ ಸರ್ಕಾರದ ಮುಂದಿಟ್ಟಿದ್ದರು ಅದು ಸಕರವಾಗುತ್ತಿದೆ. ಜೊತೆಗೆ ಕನ್ನಡನಾಡಿನಲ್ಲಿ ಖಾಲಿಯಿರುವ 2,80,000 ಉದ್ಯೋಗಗಳನ್ನು ಭರ್ತಿ ಮಾಡಬೇಕೆಂದು ಇವರುಗಳೇ ಡಿಸೆಂಬರ್ 1 2025 ರಂದು ಧಾರವಾಡ ನಗರದಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ಒಗ್ಗೂಡಿಸಿಕೊಂಡು ಬೃಹತ್ ಪ್ರತಿಭಟನೆಯನ್ನು ಮಾಡಿದರು. ಇದರ ಬೆನ್ನೆಲೆ ಈ ತಿಂಗಳಿನೊಳಗೆ ಶೀಘ್ರವೇ 56,000 ಉದ್ಯೋಗಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.</li>



<li>ಎನ್‌ಆರ್‌ಐ ಇಲಾಖೆ ಸ್ಥಾಪನೆ:-<br>ವಿದೇಶದಲ್ಲಿರುವ ಕನ್ನಡಿಗರ ಹೂಡಿಕೆ ಮತ್ತು ಸಂಪರ್ಕವನ್ನು ಹೆಚ್ಚಿಸಲು ವಿಶೇಷ ಎನ್‌ಆರ್‌ಐ ಇಲಾಖೆಯನ್ನು ಸ್ಥಾಪಿಸಲು ನಿರ್ಧರಿಸಿದ್ದಾರೆ ಇದು ಒಳ್ಳೆಯ ನಡೆ ಪ್ರಪಂಚಾದ್ಯಂತ ಇರುವ ಸುಮಾರು 200 ದೇಶಗಳಲ್ಲಿರುವ ಕನ್ನಡಿಗರನ್ನು ಒಂದೇ ವೇದಿಕೆಯಡಿ ತರಲು ಮುಂದಾಗಿರುವುದು ಸರಿಯಾಗಿದೆ. ವಿದೇಶದಲ್ಲಿ ವಾಸಿಸುತ್ತಿರುವ ಕನ್ನಡಿಗರ ಅಂಕಿ ಸಂಖ್ಯೆಗಳು ಅವರ ಕಷ್ಟ ಸುಖಗಳು ಜೊತೆಗೆ ನಮ್ಮನಾಡಿನ ಕನ್ನಡ ನುಡಿ, ಸಾಹಿತ್ಯ, ಕಲೆ ಸಂಸ್ಕೃತಿಯನ್ನು ವಿದೇಶಗಳಲ್ಲಿ ಪಸರಿಸಲು ಸಹಕಾರಿಯಾಗಲಿದೆ ಎಂಬುದು ನನ್ನ ಅಭಿಪ್ರಾಯ ಇದರ ಜೊತೆಗೆ ಹಿಂದಿ ಭಾಷೆಗೆ ವಿದೇಶಗಳಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವಂತೆ ಕನ್ನಡ ಬೆಳವಣಿಗೆಗೂ ಪ್ರಾಮುಖ್ಯತೆ ಕೊಟ್ಟಂತಾಗುತ್ತದೆ. ಹಾಗೆಯೇ ಜನವರಿ 10 ರಂದು ವಿಶ್ವ ಹಿಂದಿ ದಿವಸ ಎಂದು ಆಚರಣೆ ಮಾಡುತ್ತಾರೋ ಅದೇ ರೀತಿಯಲ್ಲಿ ಅದೇ ದಿನ ಪ್ರಪಂಚಾದ್ಯಂತ 200 ದೇಶಗಳಲ್ಲೂ #ವಿಶ್ವಕನ್ನಡದಿನ ಎಂದು ಆಚರಣೆ ಮಾಡುವಂತೆ ಆಗಲಿ….ಜೊತೆಗೆ ವಿದೇಶಗಳಲ್ಲಿರುವ ಕನ್ನಡಿಗರು ಕನ್ನಡ ನಾಡಿನಲ್ಲಿ ಹೂಡಿಕೆ ಮಾಡಲು ಇಚ್ಚಿಸಿದರೆ ಆದಷ್ಟು ಬೆಂಗಳೂರು ನಗರವನ್ನು ಬಿಟ್ಟು ಕನ್ನಡ ನಾಡಿನ ಸಮಗ್ರ ಬೆಳವಣಿಗೆಗಾಗಿ ಉತ್ತರ ಕರ್ನಾಟಕದ ಭಾಗಗಳ ಅಭಿವೃದ್ಧಿಗಾಗಿ ಅಲ್ಲಿ ಹೂಡಿಕೆ ಮಾಡಲು ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡುವುದು ಒಳ್ಳೆಯದು….</li>



<li>ಸಾರ್ವಜನಿಕ ದೂರು ನಿವಾರಣಾ ಇಲಾಖೆ:-<br>ಜನರ ಸಮಸ್ಯೆಗಳನ್ನು ತ್ವರಿತವಾಗಿ ಆಲಿಸಿ ಪರಿಹರಿಸಲು ಪ್ರತ್ಯೇಕ ಸಾರ್ವಜನಿಕ ದೂರು ನಿವಾರಣಾ ಇಲಾಖೆಯನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ. ನೋಡಬೇಕಿದೆ ಇದು ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತದೆ ಎಂದು…. ಒಂದು ಸೂರಿನಡಿ ದೂರು ಸಲ್ಲಿಸಬೇಕು ಅದನ್ನು ನೋಡಲು ಒಂದು ಇಲಾಖೆ ಒಂದು ಮಂತ್ರಿ ಆದರೆ ಬೇರೆ ಎಲ್ಲಾ ಮಂತ್ರಿಗಳ ಸಂಪರ್ಕಿಸುವಂತೆಯೇ ಇಲ್ಲ ಜನ ಸಾಮಾನ್ಯರು. ಅವರುಗಳು ಆರಾಮಾಗಿ ವೈಯಕ್ತಿಕ ವ್ಯವಹಾರ ಮಾಡಿಕೊಂಡಿರಲು ಇನ್ನೂ ಅನುಕೂಲ. ಆದುದ್ದರಿಂದ ಇದನ್ನು ಕೈ ಬಿಟ್ಟು ಶಾಸಕರಿಗೆ ಮಂತ್ರಿಗಳಿಗೆ ಟೈಂ ಟೇಬಲ್ ನಿಗದಿಗೊಳಿಸಿ ಜನರು ಭೇಟಿ ಮಾಡಲು appointment ಪಡೆದುಕೊಳ್ಳಲು ಅನುಕೂಲ ಕಲ್ಪಿಸಿಕೊಡುವುದು ಒಳ್ಳೆಯದು.</li>



<li>ರೈತರ ವಲಸೆ ತಡೆ ಕ್ರಮ:-<br>ರೈತರು ಕೃಷಿಯನ್ನು ಬಿಟ್ಟು ವಲಸೆ ಹೋಗುವ ಪರಿಸ್ಥಿತಿಯನ್ನು ತಡೆಯಲು ವಿಶೇಷ ಯೋಜನೆಗಳನ್ನು ರೂಪಿಸುವುದಾಗಿ ಸರ್ಕಾರ ತಿಳಿಸಿದ್ದಾರೆ. ಈಗಾಗಲೇ ರೈತರು ವ್ಯವಸಾಯವನ್ನು ಬಿಟ್ಟು ಬೇರೆ ಬೇರೆ ಉದ್ಯೋಗಗಳನ್ನು ಬಯಸಿ ಎಲ್ಲರೂ ದೊಡ್ಡ ದೊಡ್ಡ ನಗರ, ಪಟ್ಟಣಗಳನ್ನು ಸೇರುತ್ತಿದ್ದಾರೆ. ರೈತರ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ವ್ಯವಸಾಯ ಮಾಡಲು ಸರಿಯಾದ ಸಮಯಕ್ಕೆ ನೀರಿನ ಕೊರತೆ, ಮಳೆಯ ಸಮಸ್ಯೆ, ಬಿತ್ತನೆ ಬೀಜ ಸಮಸ್ಯೆ, ರಸ ಗೊಬ್ಬರಗಳ ಬೆಲೆ ಏರಿಕೆ, ಬೆಂಬಲ ಬೆಲೆ ಇಲ್ಲದಿರುವುದು, ಮಾರುಕಟ್ಟೆ ಸಮಸ್ಯೆ,ರೈತ ಯುವಕರಿಗೆ ಮದುವೆಗೆ ಆಗಲು ಹೆಣ್ಣು ಸಿಗದೇ ಇರುವುದು, ಅನಿಶ್ಚಿತ ಮಳೆ, ಕಾಡು ಪ್ರಾಣಿಗಳ ಕಾಟ, ಸಾಲದ ಸುಳಿ ಹೀಗೆ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ….ವ್ಯವಸಾಯ ಎಂದರೆ ನಾನು ಸಾಯ ಮನೆ ಮಂದಿ ಎಲ್ಲಾ ಸಾಯ ಎಂಬಂತಾಗಿದೆ ರೈತನ ಪ್ರಸ್ತುತ ಸ್ಥಿತಿಗತಿ ನೋಡೋಣ ಇದಕ್ಕೆಲ್ಲ ಯಾವ ರೀತಿ ಕಾರ್ಯಕ್ರಮಗಳನ್ನು ರೂಪಿಸುತ್ತಾರೆ ಎಂದು…. ಅಷ್ಟೇ!</li>
</ol>



<p class="wp-block-paragraph">ಒಟ್ಟಾರೆಯಾಗಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ಹಿನ್ನೆಲೆಯಲ್ಲಿ ಅವರ ಸರ್ಕಾರದ ಮೊದಲ ಘೋಷಣೆಗಳು ಇವಾಗಿದ್ದು ಇವುಗಳು ಎಷ್ಟರಮಟ್ಟಿಗೆ ಸಾಮಾನ್ಯ ಜನರ ಕೈಗೆ ಏಟುಗುತ್ತವೆ, ಸಿಗುತ್ತವೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ… ಏಕೆಂದರೆ ಡಿಕೆ ಶಿವಕುಮಾರ್ ಅವರ ಮೇಲೆ ಜನರು ಯಾವುದೇ ನಿರೀಕ್ಷೆ ಇಟ್ಟುಕೊಳ್ಳದ ಕಾರಣದಿಂದ ಸುಮಾರು ಎರಡು ವರ್ಷದ ಮುಖ್ಯಮಂತ್ರಿ ಅವಧಿಯನ್ನು ಇಂತಹ ಯೋಜನೆಗಳನ್ನು ಘೋಷಣೆ ಮಾಡಿ ದುಡ್ಡನ್ನು ಬಿಡುಗಡೆ ಮಾಡುವ ಮೂಲಕ ದೋಚಿಕೊಂಡರು ಅಥವಾ ಲಪಟಾಯಿಸಿದರು ಆಶ್ಚರ್ಯಪಡಬೇಕಿಲ್ಲ.</p>
]]></content:encoded>
					
		
		
			</item>
		<item>
		<title>SALO or 120 days of Sodom; ವಿಶ್ವದ ಅತ್ಯಂತ ವಿವಾದಾತ್ಮಕ ಸಿನಿಮಾ</title>
		<link>https://peepalmedia.com/salo-or-120-days-of-sodom-the-most-controversial-movie/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 04 Jun 2026 11:48:33 +0000</pubDate>
				<category><![CDATA[ಅಂಕಣ]]></category>
		<category><![CDATA[ಸಿನಿಮಾ]]></category>
		<guid isPermaLink="false">https://peepalmedia.com/?p=79376</guid>

					<description><![CDATA[&#8220;ಕೆಲವು ಸಿನಿಮಾಗಳೇ ಹಾಗೆ. ಒಂದು ಕ್ಷಣ ಪ್ರೇಕ್ಷಕನ ಹೃದಯವನ್ನು ಸಿಡಿಯುವಂತೆ ಮಾಡಿ ಬಿಡುತ್ತವೆ. ಅಂತಹಾ ಸಿನಿಮಾಗಳ ಸಾಲಿಗೆ ಸೇರುವ ಸಿನಿಮಾ &#8220;Salò, or the 120 Days of Sodom&#8221;…&#8221; ಮುರಳಿ ಮಾಲೂರು ಅವರ ಬರಹದಲ್ಲಿ ಸರಿಸುಮಾರು 50 ವರ್ಷಗಳಾದರೂ ಈ ಸಿನಿಮಾ ಚರ್ಚೆಯಲ್ಲಿದೆ ಎಂಬುದು ಸಿನಿಮಾ ನೋಡಿದ ನಂತರ ಒಂದಷ್ಟು ಸಿನಿಮಾ ಬಗ್ಗೆ ಓದುವಾಗ ತಿಳಿಯಿತು. ಖಂಡಿತ ಸತ್ಯವೂ ಸಹ. ಏಕೆಂದರೆ ಈ ಸಿನಿಮಾ ಮನರಂಜನೆಯ ಸಿನಿಮಾ ಅಲ್ಲ ಬದಲಾಗಿ ಒಂದು ವ್ಯವಸ್ಥೆಯನ್ನು ಸಂಪೂರ್ಣವಾಗಿ ಬೆತ್ತಲಾಗಿಸಿದೆ. [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p class="wp-block-paragraph">&#8220;ಕೆಲವು ಸಿನಿಮಾಗಳೇ ಹಾಗೆ. ಒಂದು ಕ್ಷಣ ಪ್ರೇಕ್ಷಕನ ಹೃದಯವನ್ನು ಸಿಡಿಯುವಂತೆ ಮಾಡಿ ಬಿಡುತ್ತವೆ. ಅಂತಹಾ ಸಿನಿಮಾಗಳ ಸಾಲಿಗೆ ಸೇರುವ ಸಿನಿಮಾ &#8220;Salò, or the 120 Days of Sodom&#8221;…&#8221; ಮುರಳಿ ಮಾಲೂರು ಅವರ ಬರಹದಲ್ಲಿ</p>
</blockquote>



<p class="wp-block-paragraph">ಸರಿಸುಮಾರು 50 ವರ್ಷಗಳಾದರೂ ಈ ಸಿನಿಮಾ ಚರ್ಚೆಯಲ್ಲಿದೆ ಎಂಬುದು ಸಿನಿಮಾ ನೋಡಿದ ನಂತರ ಒಂದಷ್ಟು ಸಿನಿಮಾ ಬಗ್ಗೆ ಓದುವಾಗ ತಿಳಿಯಿತು. ಖಂಡಿತ ಸತ್ಯವೂ ಸಹ. ಏಕೆಂದರೆ ಈ ಸಿನಿಮಾ ಮನರಂಜನೆಯ ಸಿನಿಮಾ ಅಲ್ಲ ಬದಲಾಗಿ ಒಂದು ವ್ಯವಸ್ಥೆಯನ್ನು ಸಂಪೂರ್ಣವಾಗಿ ಬೆತ್ತಲಾಗಿಸಿದೆ.</p>



<p class="wp-block-paragraph">ಬಹುಶಃ ಆ ಕಾರಣದಿಂದಲೇ ನಿರ್ದೇಶಕನ ಕೊಲೆಯಾಗಿರಬಹುದು ಎಂಬ ಅನುಮಾನ ಬಹಳಷ್ಟು ಪ್ರಜ್ಞಾವಂತರಲ್ಲಿ ಮೂಡಿದೆ!</p>



<p class="wp-block-paragraph">ಮೊದಲಿಗೆ ಈ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡ ಎಲ್ಲಾ ನಟ, ನಟಿಯರಿಗೆ ಶರಣು ಶರಣಾರ್ಥಿ. ಈ ರೀತಿಯ ಸಿನಿಮಾ ಎಂಬುದನ್ನ ತಿಳಿದ ಮೇಲೂ ಒಪ್ಪಿಗೆಯನ್ನು ಸೂಚಿಸಿ ನಡಿಸಿರುವುದು ಖಂಡಿತ ಸಣ್ಣ ವಿಚಾರ ಅಲ್ಲವೇ ಅಲ್ಲ, ಅವರ ಧೈರ್ಯಕ್ಕೆ ಮೆಚ್ಚಲೇಬೇಕಿದೆ.</p>



<p class="wp-block-paragraph">1975ರಲ್ಲಿ ಬಿಡುಗಡೆಯಾದ &#8220;Salò, or the 120 Days of Sodom&#8221; ಸಿನಿಮಾ ವಿಶ್ವ ಸಿನೆಮಾ ಇತಿಹಾಸದ ಅತ್ಯಂತ ವಿವಾದಾತ್ಮಕ ಚಿತ್ರಗಳಲ್ಲಿ ಒಂದು. ಇಟಾಲಿಯನ್ ನಿರ್ದೇಶಕ ಪಿಯರ್ ಪೌಲೊ ಪಾಸೋಲಿನಿ (Pier Paolo Pasolini) ನಿರ್ದೇಶಿಸಿರುವ ಈ ಸಿನಿಮಾ, ಫ್ರೆಂಚ್ ಲೇಖಕ ಮಾರ್ಕ್ವಿಸ್ ಡಿ ಸಾಡ್ ಅವರ The 120 Days of Sodom ಎಂಬ ಕೃತಿಯನ್ನು ಆಧರಿಸಿ ಮಾಡಿರುವಂತದ್ದು. ಬಿಡುಗಡೆಯಾದ ತಕ್ಷಣವೇ ಅನೇಕ ದೇಶಗಳಲ್ಲಿ ನಿಷೇಧಕ್ಕೆ ಒಳಗಾದ ಕೀರ್ತಿಯೂ ಈ ಸಿನಿಮಾಗೆ ಇದೆ ಮತ್ತು ನಿಷೇಧಕ್ಕೆ ಒಳಗಾದರೂ ಇಂದಿಗೂ ಚರ್ಚೆಯಲ್ಲಿದೆ.</p>



<p class="wp-block-paragraph">ಚಿತ್ರದ ಕಥೆ ಶುರುವಾಗುವುದು ಎರಡನೇ ವಿಶ್ವಯುದ್ಧದ ಕೊನೆಯ ಹಂತದ ಇಟಲಿಯ ಫ್ಯಾಸಿಸ್ಟ್ ಆಡಳಿತದ ಹಿನ್ನೆಲೆಯಲ್ಲಿದೆ. ಅಧಿಕಾರ ಮತ್ತು ಹಣದ ಬಲ ಹೊಂದಿರುವ ನಾಲ್ವರು ಪ್ರಭಾವಿ ವ್ಯಕ್ತಿಗಳು, ಕೆಲ ಯುವ ಹುಡುಗರು ಮತ್ತು ಹುಡುಗಿಯರನ್ನು ಅಪಹರಣ ಮಾಡಿ ಒಂದು ಪ್ರತ್ಯೇಕವಾದ ಮನೆಯಲ್ಲಿ ಬಂಧಿಸುತ್ತಾರೆ. ಇವರ ನಿಯಂತ್ರಣದಲ್ಲಿ ಇರಿಸಿಕೊಳ್ಳುತ್ತಾರೆ.</p>



<p class="wp-block-paragraph">ಸಿನಿಮಾದಲ್ಲಿ ಯುವಕರ ಮೇಲೆ ಮಾನಸಿಕ ಹಿಂಸೆ, ಕ್ರೂರವಾದ ಶಿಕ್ಷೆಗಳು, ಬಲವಂತವಾಗಿ ಅವರನ್ನು ಬಳಸಿಕೊಳ್ಳುವುದು, ದೈಹಿಕ ಹಿಂಸೆಯ ಜೊತೆಗೆ ಅವರಿಗೆ ಮಲ ಮೂತ್ರವನ್ನು ಬಲವಂತವಾಗಿ ತಿನ್ನಿಸುವುದು ಸೇರಿದಂತೆ ಹಲವು ರೀತಿಯ ಅಮಾನವೀಯ ದೌರ್ಜನ್ಯಗಳನ್ನ ಕಣ್ಣಿಗೆ ಕಟ್ಟುವಂತೆ ನಿರ್ದೇಶಕ ಯಾವುದೇ ರೀತಿಯ ಫಿಲ್ಟರ್‌ ಇಲ್ಲದೆ ತೋರಿಸಿದ್ದಾರೆ. ಈ ದೃಶ್ಯಗಳು ಬಹಳ ತೀವ್ರವಾಗಿ ಕಾಡುವುದರಿಂದ ಈ ಸಿನಿಮಾ ಇಂದಿಗೂ ಸಹಾ ಪ್ರೇಕ್ಷಕರಲ್ಲಿ ಆಕ್ರೋಶವನ್ನಷ್ಟೇ ಅಲ್ಲದೆ ಚಿಂತೆಗೀಡು ಮಾಡುತ್ತದೆ.</p>



<p class="wp-block-paragraph">ಪಾಸೋಲಿನಿ ಈ ಹಿಂಸೆಯನ್ನ ಖಂಡಿತವಾಗಿಯೂ ಮನರಂಜನೆಗಾಗಿ ತೋರಿಸಿಲ್ಲ; ಅಧಿಕಾರದ ದುರುಪಯೋಗ ಮತ್ತು ಫ್ಯಾಸಿಸ್ಟ್ ವ್ಯವಸ್ಥೆಯ ಕ್ರೌರ್ಯವನ್ನು ಪ್ರತಿನಿಧಿಸುವ ರೂಪಕವಾಗಿ ಬಳಸಿದ್ದಾರೆ ಎಂಬುದಾಗಿ ಸಿನಿಮಾ ವಿಮರ್ಶಕರು ವಿಶ್ಲೇಷಿಸಿದ್ದಾರೆ.</p>



<p class="wp-block-paragraph">Catherine Breillat ಎಂಬ ಫ್ರೆಂಚ್ ನಿರ್ದೇಶಕಿ “Salò ಎಂಬ ಸಿನಿಮಾ ಅತ್ಯಂತ ಧೈರ್ಯಶಾಲಿ ಮತ್ತು ನಿರ್ಭೀತ ಚಿತ್ರಗಳಲ್ಲಿ ಒಂದು, ಈ ಸಿನಿಮಾ ಸಮಾಜದ ಕಪಟ ನೈತಿಕತೆಯನ್ನು ಬಯಲಿಗೆಳೆಯುತ್ತದೆ” ಎಂದು ಆಭಿಪ್ರಾಯ ಪಟ್ಟಿದ್ದಾರೆ.</p>



<p class="wp-block-paragraph">ಪಾಸೋಲಿನಿಯ ಪ್ರಕಾರ, ಫ್ಯಾಸಿಸಂ ಎಂಬುದು ಕೇವಲ ರಾಜಕೀಯವಲ್ಲ; ಅದು ಮನುಷ್ಯನನ್ನು ವಸ್ತುವನ್ನಾಗಿ ಪರಿವರ್ತಿಸುವ ವ್ಯವಸ್ಥೆ. ಸಿನಿಮಾದಲ್ಲಿರುವ ಯುವಕರು ಸಾಮಾನ್ಯ ಜನರನ್ನ ಪ್ರತಿನಿಧಿಸಿದರೆ, ಶೋಷಣೆ ಮಾಡುವ ನಾಲ್ಕು ಜನ ನಟರು ರಾಜಕೀಯ, ಧಾರ್ಮಿಕ, ಆರ್ಥಿಕ ಮತ್ತು ನ್ಯಾಯಾಂಗ ಅಧಿಕಾರದ ಸಂಕೇತಗಳಾಗಿದ್ದಾರೆ. ಹೀಗಾಗಿ ಈ ಸಿನಿಮಾವು ಅಧಿಕಾರವು ನಿಯಂತ್ರಣವಿಲ್ಲದೆ ಬೆಳೆಯುವಾಗ, ಮನುಷ್ಯನ ಗೌರವ ಹೇಗೆ ನಾಶವಾಗುತ್ತದೆ ಎಂಬುದನ್ನ ತೋರಿಸುವ ರಾಜಕೀಯ ರೂಪಕವಾಗಿದೆ ಎಂಬುದಾಗಿ ಅಭಿಪ್ರಾಯ ಪಟ್ಟಿದ್ದಾರೆ.</p>



<p class="wp-block-paragraph">ಚಿತ್ರ ಬಿಡುಗಡೆಯಾಗುವ ಕೆಲವೇ ದಿನಗಳ ಮೊದಲು, ಅಂದರೆ 1975ರ ನವೆಂಬರ್ 2ರಂದು ಪಾಸೋಲಿನಿ ರೋಮ್ ಸಮೀಪದ ಒಸ್ಟಿಯಾ ಪ್ರದೇಶದಲ್ಲಿ ಶವವಾಗಿ ಸಿಗುತ್ತಾರೆ. ಅವರ ಮೃತದೇಹದ ಮೇಲೆ ತೀವ್ರವಾದ ಹಲ್ಲೆಯ ಗುರುತುಗಳು ಕಂಡುಬಂದಿರುತ್ತವೆ. ತನಿಖೆಯ ಆರಂಭದಲ್ಲಿ ಒಬ್ಬ ಯುವಕ ಕೊಲೆಯ ಹೊಣೆಯನ್ನು ಒಪ್ಪಿಕೊಂಡಿದ್ದರೂ, ತದನಂತರ ನೀಡಿದ ಹೇಳಿಕೆಗಳಿಂದ ಪ್ರಕರಣದ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಮೊದಲಿಗೆ ತಾನೊಬ್ಬನೇ ಕೊಂದಿರುವುದಾಗಿ ಹೇಳಿಕೆಯನ್ನು ಕೊಟ್ಟು ನಂತರ ತನ್ನ ಜೊತೆ ಇನ್ನೂ ಇಬ್ಬರು ಇದ್ದರು ಎಂಬ ಹೇಳಿಕೆಯ್ನು ನೀಡುತ್ತಾನೆ. ರಾಜಕೀಯ ಕಾರಣಗಳಿಗಾಗಿ ಅವರನ್ನು ಕೊಲ್ಲಲಾಯಿತೇ? ಎಂಬ ಪ್ರಶ್ನೆ ಇವತ್ತಿಗೂ ಸಹ ಚರ್ಚೆಗೆ ಗ್ರಾಸವಾಗಿದೆ. ಆದರೆ ಅದರ ಬಗ್ಗೆ ಸ್ಪಷ್ಟವಾದ ಸಾಕ್ಷ್ಯಗಳು ಇದುವರೆಗೂ ದೊರೆತಿಲ್ಲ..</p>



<p class="wp-block-paragraph">‘ಸಾಲೋ’ ಸಿನಿಮಾ ನೋಡುವಾಗ ಪ್ರೇಕ್ಷಕರಿಗೆ ಕ್ರೌರ್ಯ ಕಾಣಬಹುದು. ಆದರೆ ಅದರ ಮೂಲ ಉದ್ದೇಶ ಅಧಿಕಾರ, ಫ್ಯಾಸಿಸಂ ಮತ್ತು ಮಾನವನ ಕ್ರೌರ್ಯ ಹೇಗೆಲ್ಲಾ ಇದೆ ಎಂಬ ಜಗತ್ತನ್ನು ಪ್ರೇಕ್ಷಕನಿಗೆ ಪರಿಚಯಿಸುತ್ತಾ ಸಾಗುತ್ತದೆ.</p>



<p class="wp-block-paragraph">ನಿರ್ದೇಶಕ ಪಾಸೋಲಿನಿ ತಮ್ಮ ಕೊನೆಯ ದಿನಗಳ ಸಂದರ್ಶನಗಳಲ್ಲಿ, ಆಧುನಿಕ ಸಮಾಜದಲ್ಲಿ ಅಧಿಕಾರವು ಜನರನ್ನು &#8220;ಉಪಭೋಗಿಸಬಹುದಾದ ವಸ್ತುಗಳನ್ನಾಗಿ&#8221; ಪರಿವರ್ತಿಸುತ್ತಿದೆ ಎಂಬ ಮಾತುಗಳನ್ನು ಆಡಿದ್ದಾರೆ. ಇವತ್ತಿಗೂ ಸಹಾ ಈ ಮಾತು ಪ್ರಸ್ತುತವೆನಿಸುತ್ತದೆ.</p>



<p class="wp-block-paragraph">ಈ ಸಿನಿಮಾ ನೋಡಬಹುದೇ? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿದರೆ, ಖಂಡಿತವಗಿಯೂ ನೋಡಬಹುದು. ಆದರೆ ಕ್ರೌರ್ಯವನ್ನು ತಡೆದುಕೊಳ್ಳಬಲ್ಲ ಶಕ್ತಿ ನಿಮ್ಮಲ್ಲಿ ಇದ್ದರೆ ಮಾತ್ರ. ಈ ಮಟ್ಟಗಿನ ಕ್ರೌರ್ಯವನ್ನು ನೀವೂ ಯಾವುದೇ ಸಿನಿಮಾದಲ್ಲಿ ನೋಡಿರಲಾರಿರಿ.</p>
]]></content:encoded>
					
		
		
			</item>
		<item>
		<title>ದಿ ಬ್ರೋಕನ್ ಕ್ರೌನ್‌: ಡಿಕೆಶಿ ಮುಂದಿರುವ ಚಕ್ರವ್ಯೂಹ ಮತ್ತು 18 ತಿಂಗಳ &#8216;ಡೆತ್ ಮ್ಯಾಚ್&#8217;!</title>
		<link>https://peepalmedia.com/maze-ahead-of-dk-and-the-18-month-death-match/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 04 Jun 2026 08:02:32 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://peepalmedia.com/?p=79364</guid>

					<description><![CDATA[&#8220;ಇದು ಡಿಕೆ ಶಿವಕುಮಾರ್ ಪಾಲಿನ ಅಂತಿಮ ಹೋರಾಟ. ಇದು ಮಾಡು ಇಲ್ಲವೇ ಮಡಿ ಪಂದ್ಯ! ಇಷ್ಟು ದಿನ ಟ್ರಬಲ್ ಶೂಟ‌ರ್ ಆಗಿ ಬೇರೆಯವರ ಸಂಕಷ್ಟಗಳನ್ನು ಪರಿಹರಿಸಿದವರು, ಈಗ ತಮ್ಮದೇ ಕುರ್ಚಿಗೆ, ತಮ್ಮದೇ ಸರ್ಕಾರಕ್ಕೆ, ತಮ್ಮದೇ ಪಕ್ಷಕ್ಕೆ ಎದುರಾಗಿರುವ ಟ್ರಬಲ್‌ಗಳನ್ನು ಹೇಗೆ ಶೂಟ್ ಮಾಡ್ತಾರೆ?..&#8221; ಓದಿ ವಿಆರ್ ಕಾರ್ಪೆಂಟರ್ ಅವರ ಬರಹದಲ್ಲಿ 2023ರ ಮೇ ತಿಂಗಳಲ್ಲಿ ಶುರುವಾಗಿದ್ದ &#8216;ಕುರ್ಚಿ&#8217;ಯ ಮ್ಯೂಸಿಕಲ್ ಚೇರ್ ಆಟಕ್ಕೀಗ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ದೆಹಲಿ ಹೈಕಮಾಂಡ್‌ನ ಪಕ್ಕಾ ಕಮರ್ಷಿಯಲ್ ಡೀಲ್ ಪ್ರಕಾರ, ಸಿದ್ದರಾಮಯ್ಯ ಕೆಳಗಿಳಿದಿದ್ದಾರೆ. [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p class="wp-block-paragraph">&#8220;ಇದು ಡಿಕೆ ಶಿವಕುಮಾರ್ ಪಾಲಿನ ಅಂತಿಮ ಹೋರಾಟ. ಇದು ಮಾಡು ಇಲ್ಲವೇ ಮಡಿ ಪಂದ್ಯ! ಇಷ್ಟು ದಿನ ಟ್ರಬಲ್ ಶೂಟ‌ರ್ ಆಗಿ ಬೇರೆಯವರ ಸಂಕಷ್ಟಗಳನ್ನು ಪರಿಹರಿಸಿದವರು, ಈಗ ತಮ್ಮದೇ ಕುರ್ಚಿಗೆ, ತಮ್ಮದೇ ಸರ್ಕಾರಕ್ಕೆ, ತಮ್ಮದೇ ಪಕ್ಷಕ್ಕೆ ಎದುರಾಗಿರುವ ಟ್ರಬಲ್‌ಗಳನ್ನು ಹೇಗೆ ಶೂಟ್ ಮಾಡ್ತಾರೆ?..&#8221; ಓದಿ ವಿಆರ್ ಕಾರ್ಪೆಂಟರ್ ಅವರ ಬರಹದಲ್ಲಿ</p>
</blockquote>



<p class="wp-block-paragraph">2023ರ ಮೇ ತಿಂಗಳಲ್ಲಿ ಶುರುವಾಗಿದ್ದ &#8216;ಕುರ್ಚಿ&#8217;ಯ ಮ್ಯೂಸಿಕಲ್ ಚೇರ್ ಆಟಕ್ಕೀಗ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ದೆಹಲಿ ಹೈಕಮಾಂಡ್‌ನ ಪಕ್ಕಾ ಕಮರ್ಷಿಯಲ್ ಡೀಲ್ ಪ್ರಕಾರ, ಸಿದ್ದರಾಮಯ್ಯ ಕೆಳಗಿಳಿದಿದ್ದಾರೆ. ಡಿ.ಕೆ. ಶಿವಕುಮಾ‌ರ್ ಸಿಎಂ ಗದ್ದುಗೆ ಏರಿದ್ದಾರೆ. ಕನಕಪುರದ ಬಂಡೆ ಈಗ ವಿಧಾನಸೌಧದ ಮೂರನೇ ಮಹಡಿಯಲ್ಲಿ ವಿರಾಜಮಾನವಾಗಿದೆ. &#8220;ನಮ್ಮ ಸಾಹೇಬ್ರು ಸಿಎಂ ಆದ್ರು&#8221; ಅಂತ ಅವರ ಅಭಿಮಾನಿಗಳು ರಾಜ್ಯಾದ್ಯಂತ ಕಟೌಟ್ ನಿಲ್ಲಿಸಿ, ಹಾಲಿನ ಅಭಿಷೇಕ ಮಾಡುತ್ತಿದ್ದಾರೆ.</p>



<p class="wp-block-paragraph">ಆದರೆ, ಆ ಕಟೌಟ್‌ಗಳ ಹಿಂದಿರುವ ಕಟು ವಾಸ್ತವವೇ ಬೇರೆ. ಡಿಕೆಶಿ ತಲೆ ಮೇಲಿರುವುದು ಹೂವಿನ ಕಿರೀಟ ಅಲ್ಲ, ಅದು ರಕ್ತ ಹೀರುವ ಮುಳ್ಳಿನ ಕಿರೀಟ!</p>



<p class="wp-block-paragraph"><strong>ಮುಳ್ಳಿನ ಕಿರೀಟ ಮತ್ತು ಕರಗುತ್ತಿರುವ ಕಾಲಾವಕಾಶ</strong><br>ಲೆಕ್ಕಾಚಾರ ಬಹಳ ಸಿಂಪಲ್ ಆಗಿದೆ, ಆದರೆ ಡೇಂಜರಸ್ ಆಗಿದೆ. ಡಿಕೆಶಿಗೆ ಸಿಕ್ಕಿರುವುದು ಐದು ವರ್ಷದ ಫುಲ್ ಟೈಮ್ ಅಧಿಕಾರ ಅಲ್ಲ, ಕೇವಲ ಎರಡು ವರ್ಷದ &#8216;ಪಾರ್ಟ್ ಟೈಮ್&#8217; ಕಾಂಟ್ರಾಕ್ಟ್. ಈ 24 ತಿಂಗಳಲ್ಲಿ ಕಡೆಯ ಆರು ತಿಂಗಳು ಸಂಪೂರ್ಣವಾಗಿ ಎಲೆಕ್ಷನ್ ಜ್ವರ. ನೀತಿ ಸಂಹಿತೆ, ಟಿಕೆಟ್ ಹಂಚಿಕೆ, ಪ್ರಚಾರದ ಗದ್ದಲ. ಅಂದರೆ ಆಡಳಿತ ನಡೆಸಲು ಉಳಿಯುವುದು ಬರೀ ಹದಿನೆಂಟು ತಿಂಗಳು.</p>



<p class="wp-block-paragraph">ಈ 18 ತಿಂಗಳಲ್ಲಿ ಏನಾಗಬೇಕು? ಹೊಸ ಸಿಎಂ ಬಂದ ತಕ್ಷಣ ತಮ್ಮದೇ ಆದ ಅಧಿಕಾರಿಗಳ ಪಡೆಯನ್ನು ಕಟ್ಟಿಕೊಳ್ಳಬೇಕು. ಚೀಫ್ ಸೆಕ್ರೆಟರಿಯಿಂದ ಹಿಡಿದು, ಡಿಜಿಪಿ, ಐಜಿಪಿ, ಜಿಲ್ಲಾಧಿಕಾರಿಗಳು, ಎಸ್ಪಿಗಳ ತನಕ &#8216;ತಮಗೆ ಬೇಕಾದವರನ್ನು&#8217; ಕೂರಿಸಿಕೊಳ್ಳಲು ಕನಿಷ್ಠ ಮೂರು ತಿಂಗಳು ಬೇಕು. ಆಮೇಲೆ ಬಜೆಟ್ ಮಂಡನೆ, ಹಳೆ ಯೋಜನೆಗಳ ರಿವ್ಯೂ… ನೋಡನೋಡುತ್ತಿದ್ದಂತೆಯೇ ಒಂದು ವರ್ಷ ಕಳೆದುಹೋಗುತ್ತದೆ!</p>



<p class="wp-block-paragraph">ಇನ್ನು ಡಿಕೆಶಿಯವರ ಡೀಮ್ ಪ್ರಾಜೆಕ್ಟ್ &#8216;ಬ್ರಾಂಡ್ ಬೆಂಗಳೂರು&#8217; ಕಥೆ ಏನಾಗಬೇಕು? ಟನೆಲ್ ರಸ್ತೆಗಳು, ಹೊಸ ಪ್ರೈಓವರ್‌ಗಳು, ಮೆಟ್ರೋ ವಿಸ್ತರಣೆ… ಇವೆಲ್ಲಾ 18 ತಿಂಗಳಲ್ಲಿ ಆಗುವ ಮ್ಯಾಜಿಕ್ ಅಲ್ಲ. ಈ ಪ್ರಾಜೆಕ್ಟ್‌ಗಳಿಗೆ ಟೆಂಡ‌ರ್ ಕರೆದು, ವರ್ಕ್ ಆರ್ಡರ್ ಕೊಡುವಷ್ಟರಲ್ಲಿ ಎಲೆಕ್ಷನ್ ಬಂದುಬಿಡುತ್ತದೆ. ಜನರ ಕಣ್ಣಿಗೆ ಕಾಣುವಂತಹ, &#8220;ಇದು ಡಿಕೆಶಿ ಮಾಡಿದ್ದು&#8221; ಅಂತ ಎದೆತಟ್ಟಿ ಹೇಳಿಕೊಳ್ಳುವಂತಹ ಒಂದೇ ಒಂದು ಬೃಹತ್ ಯೋಜನೆಯನ್ನು ಕಂಪ್ಲೇಟ್ ಮಾಡುವುದು ಅಕ್ಷರಶಃ ಅಸಾಧ್ಯ.</p>



<p class="wp-block-paragraph">ಅಂದರೆ, ಡಿಕೆಶಿ ಈಗ ಓಡಬೇಕಾಗಿರುವುದು ಟೆಸ್ಟ್ ಮ್ಯಾಚ್ ಪಿಚ್ ಮೇಲಲ್ಲ, ಇದು ಟಿ-20ಯ ಡೆತ್ ಓವರ್‌ಗಳು! ಪ್ರತಿ ಬಾಲ್‌ಗೂ ಸಿಕ್ಸ್ ಹೊಡೆಯಲೇಬೇಕಾದ ಅನಿವಾರ್ಯತೆ ಅವರ ಮುಂದಿದೆ.</p>



<p class="wp-block-paragraph"><strong>ಖಾಲಿ ಖಜಾನೆ ಮತ್ತು &#8220;ಗ್ಯಾರಂಟಿ&#8221; ಎಂಬ ರಾಕ್ಷಸ!</strong><br>ಸಮಯದ ಅಭಾವ ಒಂದು ಕಡೆಯಾದರೆ, ಅದಕ್ಕಿಂತ ದೊಡ್ಡ ಶತ್ರು ಡಿಕೆಶಿಯವರ ಕಚೇರಿಯ ಒಳಗೇ ಇದೆ. ಅದೇ ಆರ್ಥಿಕ ಇಲಾಖೆ! ನೀವು ಎಷ್ಟೇ ದೊಡ್ಡ ಟ್ರಬಲ್ ಶೂಟರ್ ಆಗಿರಬಹುದು, ಪವರ್‌ಫುಲ್ ಮ್ಯಾನೇಜ‌ರ್ ಆಗಿರಬಹುದು… ಆದರೆ ಜೇಬಲ್ಲಿ ಕಾಸಿಲ್ಲ ಅಂದರೆ ಯಾರು ತಾನೇ ಏನು ಮಾಡಲು ಸಾಧ್ಯ?</p>



<p class="wp-block-paragraph">ಇವತ್ತು ಕರ್ನಾಟಕದ ಬಜೆಟ್ ಗಾತ್ರ ಸುಮಾರು 3.7 ಲಕ್ಷ ಕೋಟಿ. ಅದರಲ್ಲಿ ಬರೋಬ್ಬರಿ 50 ರಿಂದ 60 ಸಾವಿರ ಕೋಟಿ ರೂಪಾಯಿಗಳು ಈ ಐದು ಗ್ಯಾರಂಟಿಗಳಿಗೆ ಸ್ವಾಹಾ ಆಗುತ್ತಿದೆ. ಇನ್ನು ಸರ್ಕಾರಿ ನೌಕರರ ಸಂಬಳ, ಪಿಂಚಣಿ, ಹಳೇ ಸಾಲದ ಬಡ್ಡಿ ತೀರಿಸುವುದರಲ್ಲೇ ಸರ್ಕಾರದ ಮುಕ್ಕಾಲು ಪಾಲು ಆದಾಯ ಖಾಲಿಯಾಗುತ್ತಿದೆ. ಇಲ್ಲೇ ಇರೋದು ಅಸಲಿ ಟ್ವಿಸ್ಟ್! ಶಾಸಕರು ತಮ್ಮ ಕ್ಷೇತ್ರಕ್ಕೆ ರಸ್ತೆ ಮಾಡಬೇಕು, ಚರಂಡಿ ಕಟ್ಟಬೇಕು, ಆಸ್ಪತ್ರೆ ಕಟ್ಟಬೇಕು ಅಂತ ಸಿಎಂ ಬಳಿ ಬಂದರೆ, ಸಿಎಂ ಕೊಡುವ ಉತ್ತರ ಒಂದೇ &#8211; &#8220;ದುಡ್ಡಿಲ್ಲ, ಕಾಯ್ತಾ ಇರಿ!&#8221;</p>



<p class="wp-block-paragraph"><strong>ಈಗ ಡಿಕೆಶಿ ಮುಂದಿರುವ ಆಯ್ಕೆಗಳೇನು?</strong></p>



<ul class="wp-block-list">
<li>ಆಯ್ಕೆ 1: ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದು ಅಥವಾ ಕಂಡೀಷನ್ ಹಾಕಿ ಕಡಿತಗೊಳಿಸುವುದು. ಆದರೆ ಹಾಗೆ ಮಾಡಿದರೆ, &#8220;ಡಿಕೆಶಿ ಬಂದು ನಮ್ಮ ಅನ್ನ ಕಿತ್ತುಕೊಂಡ&#8221; ಅಂತ ಜನ ಹಿಡಿಶಾಪ ಹಾಕುತ್ತಾರೆ. 2028ರ ಎಲೆಕ್ಷನ್‌ನಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲದಂತೆ ಆಗುತ್ತದೆ.</li>
</ul>



<ul class="wp-block-list">
<li>ಆಯ್ಕೆ 2: ಅಭಿವೃದ್ಧಿಯನ್ನು ಸಂಪೂರ್ಣವಾಗಿ ಬದಿಗೊತ್ತಿ, ಸಾಲದ ಮೇಲೆ ಸಾಲ ಮಾಡಿ ಗ್ಯಾರಂಟಿ ಮುಂದುವರಿಸುವುದು. ಆಗ ವಿರೋಧ ಪಕ್ಷಗಳು, &#8220;ನೋಡಿ, ಇವರಿಂದ ರಾಜ್ಯ ದಿವಾಳಿಯಾಯ್ತು&#8221; ಅಂತ ಕ್ಯಾಂಪೇನ್ ಶುರು ಮಾಡುತ್ತವೆ.</li>
</ul>



<p class="wp-block-paragraph">ಸಿದ್ದರಾಮಯ್ಯನವರು ಬಹಳ ಚಾಣಾಕ್ಷರು. ಗ್ಯಾರಂಟಿಗಳನ್ನು ತಂದು &#8216;ಜನನಾಯಕ&#8217; ಅನ್ನಿಸಿಕೊಂಡು, ಖಜಾನೆ ಖಾಲಿಯಾದ ಟೈಮ್‌ಗೆ, ಎಲ್ಲಾ ಜವಾಬ್ದಾರಿಗಳನ್ನು ಡಿ.ಕೆ.ಶಿ. ಅವರ ತಲೆಯ ಮೇಲೆ ಹೊರಿಸಿ ಎಕ್ಸಿಟ್ ಆಗಿಬಿಟ್ಟರು. ಈಗ ಖಾಲಿ ಪಾತ್ರೆಯನ್ನು ಇಟ್ಟುಕೊಂಡು ಮೃಷ್ಟಾನ್ನ ಭೋಜನ ಬಡಿಸುವ ಜವಾಬ್ದಾರಿ ಡಿಕೆಶಿಯವರದ್ದು! ಇದೊಂದು ಪಕ್ಕಾ ರಾಜಕೀಯ ಚಕ್ರವ್ಯೂಹ. ಬಹುಶಃ ಅವರ ಅರಿವು ಡಿಕೆಶಿ ಅವರಿಗೂ ಇದ್ದೇ ಇರುತ್ತದೆ.</p>



<p class="wp-block-paragraph"><strong>ಒಳೇಟುಗಳು ಮತ್ತು ಅತೃಪ್ತರ ಬ್ಲಾಕ್ ಮೇಲ್ ಪಾಲಿಟಿಕ್ಸ್‌</strong><br>ಡಿಕೆಶಿಗೆ ಅಸಲಿ ವಿರೋಧ ಪಕ್ಷ ಇರೋದು ಆರ್.ಎಸ್.ಎಸ್ ನಲ್ಲೋ ಅಥವಾ ಜೆಡಿಎಸ್ ಕಚೇರಿಯಲ್ಲೋ ಅಲ್ಲ… ಅದು ಇರೋದು ಸ್ವತಃ ಕಾಂಗ್ರೆಸ್ ಭವನದ ಒಳಗೆ!</p>



<p class="wp-block-paragraph">ನಿಮಗೆ ನೆನಪಿರಲಿ, ಕಾಂಗ್ರೆಸ್‌ನಲ್ಲಿರುವ 135ಕ್ಕೂ ಹೆಚ್ಚು ಶಾಸಕರಲ್ಲಿ, ಬಹುಪಾಲು ಶಾಸಕರು ಸಿದ್ದರಾಮಯ್ಯನವರ ಕ್ಯಾಂಪ್‌ನವರು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಈ ಶಾಸಕರು ಸುಮ್ಮನಿದ್ದರು. ಈಗ ಡಿಕೆಶಿ ಗದ್ದುಗೆ ಏರಿದ ತಕ್ಷಣ ಇವರೆಲ್ಲಾ ಸನ್ಯಾಸಿಗಳ ತರಹ ಸುಮ್ಮನೆ ಕೂರುತ್ತಾರಾ? ಚಾನ್ನೇ ಇಲ್ಲ!</p>



<p class="wp-block-paragraph">ಮಂತ್ರಿಗಿರಿಗಾಗಿ ಕಿತ್ತಾಟ, ನಿಗಮ ಮಂಡಳಿಗಳಿಗಾಗಿ ಪೈಪೋಟಿ ಈಗ ತಾರಕಕ್ಕೇರುತ್ತದೆ. &#8220;ನಮಗೆ ಬೇಕಾದ ಖಾತೆ ಕೊಡದಿದ್ದರೆ ನಾವು ಬಂಡಾಯ ಏಳುತ್ತೇವೆ&#8221; ಅಂತ ಬೆದರಿಸುವ ಬ್ಲಾಕ್ ಮೇಲ್ ಪಾಲಿಟಿಕ್ಸ್ ಶುರುವಾಗುತ್ತದೆ. ಡಿಕೆಶಿಯವರ ಕಾರ್ಯಶೈಲಿ ಸಿದ್ದರಾಮಯ್ಯನವರ ತರಹ ಸಾಫ್ಟ್ ಅಲ್ಲ. ಅವರು ಪಕ್ಕಾ ಕಾರ್ಪೊರೇಟ್ ಸಿಇಒ ತರಹ, &#8216;ನಾನು ಹೇಳಿದ್ದೇ ಫೈನಲ್ ಎನ್ನುವ ಮೈಕ್ರೋ-ಮ್ಯಾನೇಜರ್.</p>



<p class="wp-block-paragraph">ಇದು ಈ ಹಿರಿಯ ಶಾಸಕರಿಗೆ ಅರಗಿಸಿಕೊಳ್ಳಲು ಕಷ್ಟವಾಗುತ್ತದೆ. ಶಾಸಕರು ಮತ್ತು ಸಿಎಂ ನಡುವಿನ ಇಂತಹ ಸಣ್ಣಪುಟ್ಟ ಇಗೋ ಕ್ಯಾಶ್‌ಗಳೇ ನಾಳೆ ಬೃಹತ್ ಬಂಡಾಯವಾಗಿ ಸ್ಫೋಟಗೊಳ್ಳುವ ಅಪಾಯವಿದೆ. ಈ ಅತೃಪ್ತರನ್ನು ನಿಭಾಯಿಸುವ ಟ್ರಬಲ್ ಶೂಟಿಂಗ್‌ನಲ್ಲೇ ಡಿಕೆಶಿಯವರ ಅರ್ಧ ಎನರ್ಜಿ ಖರ್ಚಾಗಿ ಹೋದರೆ ಅಚ್ಚರಿಯಿಲ್ಲ.</p>



<p class="wp-block-paragraph"><strong>&#8216;ಗೌಡ&#8217; ಪ್ರೈಡ್ ಮತ್ತು ಕಂಬಾಲಪಲ್ಲಿಯ ಭೂತ!</strong><br>ಈಗ ಅತಿ ಮುಖ್ಯವಾದ, ಆದರೆ ಯಾರೂ ಓಪನ್ ಆಗಿ ಚರ್ಚೆ ಮಾಡದ ಒಂದು ವಿಚಾರದ ಬಗ್ಗೆ ಮಾತಾಡೋಣ. ಅದೇ ಜಾತಿ ಲೆಕ್ಕಾಚಾರ ಮತ್ತು ಸಾಮಾಜಿಕ ಸಮತೋಲನ. ಡಿಕೆಶಿ ಸಿಎಂ ಆಗಿದ್ದಾರೆ ಅಂದರೆ, ಅದು ಕೇವಲ ಒಬ್ಬ ಕಾಂಗ್ರೆಸ್ ನಾಯಕನ ಗೆಲುವಲ್ಲ. ಅದು ಇಡೀ ಒಕ್ಕಲಿಗ ಸಮುದಾಯದ ಎರಡು ದಶಕಗಳ ಹಂಬಲ. ಎಸ್.ಎಂ. ಕೃಷ್ಣ ನಂತರ ನಮ್ಮ ಸಮುದಾಯದ ಒಬ್ಬ ಪವರ್‌ಫುಲ್ ಲೀಡ‌ರ್ ಸಿಎಂ ಆದರು ಎನ್ನುವ ಹೆಮ್ಮೆ ಆ ಸಮುದಾಯಕ್ಕಿದೆ. ಅದು ತಪ್ಪಲ್ಲ.</p>



<p class="wp-block-paragraph">ಆದರೆ, ಅಧಿಕಾರದ ಕೇಂದ್ರ ಒಂದು ನಿರ್ದಿಷ್ಟ ಸಮುದಾಯದ ಕೈಗೆ ಹೋದಾಗ, ಸ್ಥಳೀಯ ಮಟ್ಟದಲ್ಲಿ ಏನಾಗುತ್ತದೆ ಎನ್ನುವುದನ್ನು ನಾವು ಇತಿಹಾಸದಿಂದ ಕಲಿಯಬೇಕಿದೆ. ಅಧಿಕಾರದ ಮದ ಸ್ಥಳೀಯ ಪುಡಾರಿಗಳ ನೆತ್ತಿಗೇರಿದರೆ ಏನಾಗುತ್ತದೆ? 2000ನೇ ಇಸವಿಯಲ್ಲಿ ಕೋಲಾರ ಜಿಲ್ಲೆಯ ಕಂಬಾಲಪಲ್ಲಿಯಲ್ಲಿ ದಲಿತರನ್ನು ಜೀವಂತ ದಹಿಸಿದ ಆ ಭೀಕರ ಘಟನೆ ನಮ್ಮ ಕಣ್ಣ ಮುಂದಿದೆ. ಆಗಲೂ ರಾಜ್ಯದಲ್ಲಿ ಎಸ್.ಎಂ. ಕೃಷ್ಣ ಅವರದ್ದೇ ಸರ್ಕಾರವಿತ್ತು! ಪ್ರಬಲ ಜಾತಿಗಳ ದರ್ಪ ಮಿತಿಮೀರಿದಾಗ, ವ್ಯವಸ್ಥೆ ಕಣ್ಣುಮುಚ್ಚಿ ಕೂತಾಗ ಇಂತಹ ಮಾರಣಹೋಮಗಳು ನಡೆಯುತ್ತವೆ.</p>



<p class="wp-block-paragraph">ಈಗ 2026! ಕಂಬಾಲಪಲ್ಲಿಯ ಕಾಲಕ್ಕೂ ಇಂದಿಗೂ ಅಜಗಜಾಂತರ ವ್ಯತ್ಯಾಸವಿದೆ. ಈಗಿನ ಯುವಜನತೆ ಸುಮ್ಮನೆ ಕೂರುವವರಲ್ಲ. ಕೂರುವವರಲ್ಲ. ದಲಿತ ಸಂಘಟನೆಗಳು, ಪ್ರಗತಿಪರರು ಈಗ ಹಿಂದೆಂದಿಗಿಂತಲೂ ಹೆಚ್ಚು ಜಾಗೃತರಾಗಿದ್ದಾರೆ. ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಇದೆ, ಎಕ್ಸ್ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ಗಳಂತಹ ಅಸ್ತ್ರಗಳಿವೆ. ರಾಜ್ಯದ ಯಾವುದೇ ಮೂಲೆಯಲ್ಲಿ, ಯಾವುದೇ ಒಂದು ಹಿಂದುಳಿದ ವರ್ಗದ ಅಥವಾ ದಲಿತನ ಮೇಲೆ ಸಣ್ಣದೊಂದು ದೌರ್ಜನ್ಯ ನಡೆದರೂ, ಆ ವಿಡಿಯೋ ಕ್ಷಣಾರ್ಧದಲ್ಲಿ ವೈರಲ್ ಆಗುತ್ತದೆ. &#8220;ಇದು ಒಕ್ಕಲಿಗರ ದರ್ಪ, ಡಿಕೆಶಿಯವರ ಕುಮ್ಮಕ್ಕು&#8221; ಅಂತ ಒಂದೇ ನಿಮಿಷದಲ್ಲಿ ನ್ಯರೇಟಿವ್ ಸೆಟ್ ಆಗಿಬಿಡುತ್ತದೆ!</p>



<p class="wp-block-paragraph">ಈ ಜಾತಿ ಸಂಘರ್ಷದ ಕಿಡಿಯನ್ನು ಆರಿಸುವುದು ಡಿಕೆಶಿ ಮುಂದಿರುವ ಅತಿ ದೊಡ್ಡ ಅಗ್ನಿಪರೀಕ್ಷೆ. ತಾನು ಕೇವಲ ಒಕ್ಕಲಿಗರ ನಾಯಕನಲ್ಲ, ಇಡೀ ರಾಜ್ಯದ ನಾಯಕ ಎಂದು ಅವರು ಸಾಬೀತುಪಡಿಸಲೇಬೇಕು. ದಲಿತ ಮತ್ತು ಅಹಿಂದ ವರ್ಗದ ಮತಗಳಿಲ್ಲದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವೇ ಇರಲಿಲ್ಲ ಎನ್ನುವ ಸತ್ಯ ಅವರಿಗೆ ಗೊತ್ತಿದೆ. ಹೀಗಾಗಿ, ಪೊಲೀಸ್ ಇಲಾಖೆಯನ್ನು ಸಂಪೂರ್ಣವಾಗಿ ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಬಿಡುವುದು, ತಪ್ಪು ಮಾಡಿದರೆ ತಮ್ಮದೇ: ತಮ್ಮದೇ ಜಾತಿಯವರಾದರೂ ನಿರ್ದಾಕ್ಷಿಣ್ಯವಾಗಿ ಜೈಲಿಗಟ್ಟುವ ಇಚ್ಛಾಶಕ್ತಿಯನ್ನು ಡಿಕೆಶಿ ತೋರಲೇಬೇಕು. ಇಲ್ಲದಿದ್ದರೆ, ಸಿದ್ದರಾಮಯ್ಯನವರು ಕಟ್ಟಿದ ಅಹಿಂದ ವೋಟ್ ಬ್ಯಾಂಕ್ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮರ್ಮಾಘಾತ ನೀಡುವುದು ಗ್ಯಾರಂಟಿ.</p>



<p class="wp-block-paragraph"><strong>2028ರ ಮಾಡು ಇಲ್ಲವೇ ಮಡಿ!</strong><br>ಇದೆಲ್ಲದರ ಲೆಕ್ಕಾಚಾರ ಬಂದು ನಿಲ್ಲುವುದು ಎಲ್ಲಿಗೆ? ಅದೇ 2028ರ ಮಹಾಚುನಾವಣೆಗೆ. ಬೀದಿಬೀದಿಯಲ್ಲಿ ಈಗಲೇ ಒಂದು ಮಾತು ಕೇಳಿಬರುತ್ತಿದೆ… &#8220;ಕಾಂಗ್ರೆಸ್ ಮುಂದಿನ ಬಾರಿ ಅಧಿಕಾರಕ್ಕೆ ಬರೋದು ಭಾರಿ ಡೌಟು!&#8221;</p>



<p class="wp-block-paragraph">ಆಡಳಿತ ವಿರೋಧಿ ಅಲೆ (Anti-incumbency) ಈಗಲೇ ಶುರುವಾಗಿದೆ. ಈ ಅಲೆಯನ್ನು ತಡೆಯಲು ಡಿಕೆಶಿ ಬಳಿ ಇರುವ ಏಕೈಕ ಅಸ್ತ್ರಅಂದರೆ ಅವರ &#8216;ಸಂಘಟನಾ ಚಾತುರ್ಯ&#8217;. ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವುದು, ಕಾರ್ಯಕರ್ತರಿಗೆ ಬೂಸ್ಟ್ ಕೊಡುವುದು, ಚುನಾವಣಾ ರಣತಂತ್ರ ಹೆಣೆಯುವುದರಲ್ಲಿ ಡಿಕೆಶಿಯನ್ನು ಮೀರಿಸುವವರಿಲ್ಲ. ಆದರೆ, ಪಾರ್ಟಿ ಆಫೀಸ್‌ನಲ್ಲಿ ಕೂತು ಪ್ಲಾನ್ ಮಾಡುವುದು ಬೇರೆ, ಸಿಎಂ ಸೀಟಲ್ಲಿ ಕೂತು ಇಡೀ ರಾಜ್ಯವನ್ನು ಇಡೀ ರಾಜ್ಯವನ್ನು ಮ್ಯಾನೇಜ್ ಮಾಡುವುದು ಬೇರೆ.</p>



<p class="wp-block-paragraph">ಕೇವಲ &#8216;ಮ್ಯಾನೇಜೆಂಟ್&#8217; ನಿಂದ ಚುನಾವಣೆ ಗೆಲ್ಲಲು ಆಗುವುದಿಲ್ಲ. ಜನರಿಗೆ ಕುಡಿಯೋಕೆ ನೀರು ಬೇಕು, ಓಡಾಡೋಕೆ ರಸ್ತೆ ಬೇಕು, ಯುವಕರಿಗೆ ಉದ್ಯೋಗ ಬೇಕು. ಇವೆಲ್ಲವನ್ನು ಈ 18 ತಿಂಗಳಲ್ಲಿ, ಖಾಲಿ ಖಜಾನೆಯನ್ನು ಇಟ್ಟುಕೊಂಡು ಡಿಕೆಶಿ ಹೇಗೆ ಸಾಧಿಸುತ್ತಾರೆ?</p>



<p class="wp-block-paragraph">ಇದು ಡಿಕೆ ಶಿವಕುಮಾರ್ ಪಾಲಿನ ಅಂತಿಮ ಹೋರಾಟ. ಇದು ಮಾಡು ಇಲ್ಲವೇ ಮಡಿ ಪಂದ್ಯ! ಇಷ್ಟು ದಿನ ಟ್ರಬಲ್ ಶೂಟ‌ರ್ ಆಗಿ ಬೇರೆಯವರ ಸಂಕಷ್ಟಗಳನ್ನು ಪರಿಹರಿಸಿದವರು, ಈಗ ತಮ್ಮದೇ ಕುರ್ಚಿಗೆ, ತಮ್ಮದೇ ಸರ್ಕಾರಕ್ಕೆ, ತಮ್ಮದೇ ಪಕ್ಷಕ್ಕೆ ಎದುರಾಗಿರುವ ಟ್ರಬಲ್‌ಗಳನ್ನು ಹೇಗೆ ಶೂಟ್ ಮಾಡ್ತಾರೆ? ಅವರು ಈ ಸವಾಲುಗಳನ್ನು ಮೀರಿ ನಿಂತರೆ, ಇತಿಹಾಸ ಅವರನ್ನು ಒಬ್ಬ &#8216;ಮಾಸ್ ಲೀಡರ್&#8217; ಆಗಿ ನೆನಪಿಟ್ಟುಕೊಳ್ಳುತ್ತದೆ. ಎಡವಿದರೆ…ಕಾಂಗ್ರೆಸ್ ಮತ್ತೊಂದು ದಶಕಗಳ ಕಾಲ ವಿರೋಧ ಪಕ್ಷದ ಸಾಲಿನಲ್ಲಿ ಕೂರಬೇಕಾಗುತ್ತದೆ. ನಿಮ್ಮ ಪ್ರಕಾರ ಡಿಕೆಶಿ ಈ ಚಕ್ರವ್ಯೂಹವನ್ನು ಭೇದಿಸುತ್ತಾರಾ? ಅಥವಾ ಈ ರಾಜಕೀಯ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಾರಾ? ಇದು ಕೇವಲ ರಾಜಕಾರಣದ ಆಟವಲ್ಲ. ಇದು ಕರ್ನಾಟಕದ ಭವಿಷ್ಯದ ಪ್ರಶ್ನೆ!</p>



<pre class="wp-block-code"><code>ಸಿದ್ದರಾಮಯ್ಯನವರು ಬಹಳ ಚಾಣಾಕ್ಷರು. ಗ್ಯಾರಂಟಿಗಳನ್ನು ತಂದು 'ಜನನಾಯಕ' ಅನ್ನಿಸಿಕೊಂಡು, ಖಜಾನೆ ಖಾಲಿಯಾದ ಟೈಮ್‌ಗೆ, ಎಲ್ಲಾ ಜವಾಬ್ದಾರಿಗಳನ್ನು ಡಿ.ಕೆ.ಶಿ. ಅವರ ತಲೆಯ ಮೇಲೆ ಹೊರಿಸಿ ಎಕ್ಸಿಟ್ ಆಗಿಬಿಟ್ಟರು. ಈಗೆ ಖಾಲಿ ಪಾತ್ರೆಯನ್ನು ಇಟ್ಟುಕೊಂಡು ಮೃಷ್ಟಾನ್ನ ಭೋಜನ ಬಡಿಸುವ ಜವಾಬ್ದಾರಿ ಡಿಕೆಶಿಯವರದ್ದು! ಇದೊಂದು ಪಕ್ಕಾ ರಾಜಕೀಯ ಚಕ್ರವ್ಯೂಹ. ಬಹುಶಃ ಅವರ ಅರಿವು ಡಿಕೆಶಿ ಅವರಿಗೂ ಇದ್ದೇ ಇರುತ್ತದೆ.</code></pre>
]]></content:encoded>
					
		
		
			</item>
	</channel>
</rss>
