<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ಅಂಕಣ &#8211; Peepal Media</title>
	<atom:link href="https://peepalmedia.com/category/opinion-articles/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 16 Feb 2026 09:40:53 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.9.1</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>ಅಂಕಣ &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಜೆನ್ನಿ ವಾನ್ ವೆಸ್ಟ್‌ಫ್ಯಾಲೆನ್, ಅವಳು ಕ್ರಾಂತಿಯನ್ನೇ ಪ್ರೀತಿಸಿದಳು!</title>
		<link>https://peepalmedia.com/jenny-von-westphalen-she-loved-the-revolution-itself/</link>
		
		<dc:creator><![CDATA[Peepal Media]]></dc:creator>
		<pubDate>Mon, 16 Feb 2026 09:40:53 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://peepalmedia.com/?p=74185</guid>

					<description><![CDATA[ಇಂದು ಜೆನ್ನಿ ವಾನ್ ವೆಸ್ಟ್‌ಫ್ಯಾಲೆನ್ ಅವರ ಪುಣ್ಯತಿಥಿ. ಅಂದು ಮತ್ತು ಇಂದು ಕೂಡ ಬಂಡವಾಳಶಾಹಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಹೆಸರುಗಳಲ್ಲಿ ಜೆನ್ನಿ ಮಾರ್ಕ್ಸ್ ಅವರ ಹೆಸರು ಪ್ರಮುಖವಾದುದು. ಜೆನ್ನಿ ಮಾರ್ಕ್ಸ್ ಅವರನ್ನು ಪ್ರೀತಿಸಿದರು. ಅವರು ಮಾರ್ಕ್ಸ್ ಅವರ ಜೀವನ ಸಂಗಾತಿಯಾದರು. ರಾಜಕೀಯದಲ್ಲೂ ಸಹಚರ್ಯ ನೀಡಿದರು. ಅವರ ಪ್ರೀತಿಯು ಮಹಾಕವಿ ಶ್ರೀಶ್ರೀ ಹೇಳಿದಂತೆ ಮಹಾರಾಜರ ಪ್ರೇಮಗಾಥೆಯಲ್ಲ ಅಥವಾ ಪುರಾಣ ಕಥೆಯೂ ಅಲ್ಲ. ತಾಜ್‌ಮಹಲ್ ಕಟ್ಟಿಸಿದ ಷಹಜಹಾನ್ ಮತ್ತು ಮುಮ್ತಾಜರ ಪ್ರೀತಿಯಂತೂ ಮೊದಲೇ ಅಲ್ಲ. &#8220;ತಾಜ್‌ಮಹಲ್ ನಿರ್ಮಾಣದಲ್ಲಿ ಕಲ್ಲು ಹೊತ್ತ [&#8230;]]]></description>
										<content:encoded><![CDATA[
<p>ಇಂದು ಜೆನ್ನಿ ವಾನ್ ವೆಸ್ಟ್‌ಫ್ಯಾಲೆನ್ ಅವರ ಪುಣ್ಯತಿಥಿ. ಅಂದು ಮತ್ತು ಇಂದು ಕೂಡ ಬಂಡವಾಳಶಾಹಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಹೆಸರುಗಳಲ್ಲಿ ಜೆನ್ನಿ ಮಾರ್ಕ್ಸ್ ಅವರ ಹೆಸರು ಪ್ರಮುಖವಾದುದು. ಜೆನ್ನಿ ಮಾರ್ಕ್ಸ್ ಅವರನ್ನು ಪ್ರೀತಿಸಿದರು.</p>



<p>ಅವರು ಮಾರ್ಕ್ಸ್ ಅವರ ಜೀವನ ಸಂಗಾತಿಯಾದರು. ರಾಜಕೀಯದಲ್ಲೂ ಸಹಚರ್ಯ ನೀಡಿದರು. ಅವರ ಪ್ರೀತಿಯು ಮಹಾಕವಿ ಶ್ರೀಶ್ರೀ ಹೇಳಿದಂತೆ ಮಹಾರಾಜರ ಪ್ರೇಮಗಾಥೆಯಲ್ಲ ಅಥವಾ ಪುರಾಣ ಕಥೆಯೂ ಅಲ್ಲ. ತಾಜ್‌ಮಹಲ್ ಕಟ್ಟಿಸಿದ ಷಹಜಹಾನ್ ಮತ್ತು ಮುಮ್ತಾಜರ ಪ್ರೀತಿಯಂತೂ ಮೊದಲೇ ಅಲ್ಲ. &#8220;ತಾಜ್‌ಮಹಲ್ ನಿರ್ಮಾಣದಲ್ಲಿ ಕಲ್ಲು ಹೊತ್ತ ಕೂಲಿಗಳು ಯಾರು?&#8221; ಎಂದು ಶ್ರೀಶ್ರೀ ಪ್ರಶ್ನಿಸುತ್ತಾರೆ. ಆ ಕೂಲಿಗಳನ್ನು ಶ್ರಮದ ಶೋಷಣೆಯಿಂದ ಮುಕ್ತಗೊಳಿಸಲು ಸಮರ್ಪಿತವಾದ ಪ್ರೀತಿ ಜೆನ್ನಿ ಮತ್ತು ಮಾರ್ಕ್ಸ್ ಅವರದ್ದು.</p>



<p>ಈ ಭೂಮಿಯ ಮೇಲೆ ಕೆಲವು ಜನರು ತಮ್ಮ ಸುಖ-ವಿಲಾಸಗಳಿಗಾಗಿ ಬದುಕುತ್ತಾರೆ. ಇನ್ನು ಕೆಲವರು ಜನರಿಗಾಗಿ ಬದುಕುತ್ತಾರೆ. ಮಾನವಕುಲಕ್ಕೆ ಅಪಾರ ಒಳಿತು ಮಾಡಿದ ಅನೇಕ ತತ್ವಜ್ಞಾನಿಗಳು, ವಿಜ್ಞಾನಿಗಳು ಮತ್ತು ರಾಜಕೀಯ ವ್ಯಕ್ತಿಗಳಿದ್ದಾರೆ. ಅಂತಹ ತತ್ವಜ್ಞಾನಿಗಳಲ್ಲಿ ಶ್ರೇಷ್ಠ ತತ್ವಜ್ಞಾನಿ ಕಾರ್ಲ್ ಮಾರ್ಕ್ಸ್. ಮಾರ್ಕ್ಸ್ ಅವರ ಸಿದ್ಧಾಂತವು ಶ್ರಮಿಕರನ್ನು ಅಧಿಕಾರದ ಪೀಠದ ಮೇಲೆ ಕುಳ್ಳಿರಿಸಿತು. ಅಂತಹ ಮಾರ್ಕ್ಸ್ ಅವರನ್ನು ಜೆನ್ನಿ ವರಿಸಿದರು. ಜೆನ್ನಿ ಇಲ್ಲದೆ ಮಾರ್ಕ್ಸ್ ಇಲ್ಲ, ಮಾರ್ಕ್ಸ್ ಇಲ್ಲದೆ ಮಾರ್ಕ್ಸ್‌ವಾದವಿಲ್ಲ. ಮಾರ್ಕ್ಸ್‌ವಾದವಲ್ಲದ್ದು ಕಾರ್ಮಿಕ ವರ್ಗದ ಸಿದ್ಧಾಂತವಲ್ಲ. ಆ ಸಿದ್ಧಾಂತವಿಲ್ಲದೆ ಶ್ರಮದ ಶೋಷಣೆಯಿಂದ ಕಾರ್ಮಿಕ ವರ್ಗಕ್ಕೆ ಮುಕ್ತಿ ಇಲ್ಲ. ಆ ಸಿದ್ಧಾಂತದ ಕರ್ತೃವನ್ನು ಮತ್ತು ಅವರ ಜೊತೆಗಿನ ಕಷ್ಟಗಳನ್ನು ವರಿಸಿದ ಜೆನ್ನಿ ಅವರ ಜೀವನದ ವಿಶೇಷಗಳನ್ನು ನಾವು ತಿಳಿದುಕೊಳ್ಳಬೇಕು.</p>



<p>ಜೆನ್ನಿ ಅವರ ಪೂರ್ಣ ಹೆಸರು ಜೊಹಾನ್ನಾ ಬರ್ತಾ ಜೂಲಿ ಜೆನ್ನಿ ವಾನ್ ವೆಸ್ಟ್‌ಫ್ಯಾಲೆನ್. ಅವರು 1814 ಫೆಬ್ರವರಿ 12ರಂದು ಜರ್ಮನಿಯಲ್ಲಿ ಜನಿಸಿದರು. 1881 ಡಿಸೆಂಬರ್ 2ರಂದು ತಮ್ಮ 67 ನೇ ವಯಸ್ಸಿನಲ್ಲಿ ಲಂಡನ್‌ನಲ್ಲಿ ನಿಧನರಾದರು. ಜೆನ್ನಿ ಅವರ ತಂದೆ-ತಾಯಿ ಶ್ರೀಮಂತರಾಗಿದ್ದರು. ಆಗ ಜರ್ಮನಿಯನ್ನು ಪ್ರುಸ್ಸಿಯಾ ಎಂದು ಕರೆಯಲಾಗುತ್ತಿತ್ತು. ಜೆನ್ನಿ ತಂದೆ ಲುಡ್ವಿಗ್ ವಾನ್ ವೆಸ್ಟ್‌ಫ್ಯಾಲೆನ್ ಒಬ್ಬ ಸರ್ಕಾರಿ ಉನ್ನತ ಅಧಿಕಾರಿ. ಜೆನ್ನಿ ಸಹೋದರ ಎಡ್ಗರ್ ಕಾರ್ಲ್ ಮಾರ್ಕ್ಸ್ ಸ್ನೇಹಿತರಾಗಿದ್ದರು. ಇನ್ನೊಬ್ಬ ಸಹೋದರ ಫರ್ಡಿನಾಂಡ್ ಪ್ರಶ್ಯ ರಾಜನಿಗೆ ಅತ್ಯಂತ ಆಪ್ತ ಸಚಿವನಾಗಿದ್ದನು.</p>



<p>ಜೆನ್ನಿ ಮತ್ತು ಕಾರ್ಲ್ ಮಾರ್ಕ್ಸ್ ಇಬ್ಬರೂ ಬಾಲ್ಯದ ಸ್ನೇಹಿತರು. ಇಬ್ಬರೂ ವಿದ್ಯಾಭ್ಯಾಸದಲ್ಲಿ ನಿಪುಣರು. ಜೆನ್ನಿ ಮಹಾನ್ ಸುಂದರಿಯಾಗಿದ್ದರು. ಮಾರ್ಕ್ಸ್ ಅವರ ತಂದೆ ಅದೇ ಪಟ್ಟಣದ ಪ್ರಮುಖ ವಕೀಲರಾಗಿದ್ದರು. ಅವರು ಮತ್ತು ಜೆನ್ನಿ ಅವರ ತಂದೆ ಲುಡ್ವಿಗ್ ಆಪ್ತ ಮಿತ್ರರು. ಜೆನ್ನಿ ಮಾರ್ಕ್ಸ್ ಅವರಿಗಿಂತ ನಾಲ್ಕೈದು ವರ್ಷ ದೊಡ್ಡವರಾಗಿದ್ದರು. ಆದರೂ ಅವರ ವಿಚಾರಗಳು ಅವರನ್ನು ಹತ್ತಿರ ತಂದವು. ಅದೇ ಅವರ ನಡುವಿನ ಪ್ರೀತಿಗೆ ದಾರಿಯಾಯಿತು. ಅವರ ಪ್ರೀತಿಯು ನಮ್ಮ ಸಿನಿಮಾಗಳಲ್ಲಿರುವಂತೆ ಕೇವಲ ರಸವತ್ತಾದ ಪ್ರೇಮಕಥೆಯಲ್ಲ; ಅದು ಶ್ರಮಿಕ ವರ್ಗದ ವಿಮುಕ್ತಿಗಾಗಿ ಸಮರ್ಪಿತವಾದ ಪ್ರೀತಿ. ಕಾಲಕ್ರಮೇಣ ಅವರು ವಿವಾಹವಾದರು. ಕಾರ್ಲ್ ಮತ್ತು ಜೆನ್ನಿ ದಂಪತಿಗೆ ಏಳು ಜನ ಮಕ್ಕಳು. ನಾಲ್ವರು ಮಕ್ಕಳು ಜನಿಸಿದ ಕೆಲವೇ ದಿನಗಳಲ್ಲಿ ತೀರಿಕೊಂಡರು. ಉಳಿದವರು ಮೂವರು ಪುತ್ರಿಯರು: ಜೆನ್ನಿ, ಲಾರಾ ಮತ್ತು ಎಲಿಯಾನರ್. ಅವರು ತಮ್ಮ ತಂದೆ-ತಾಯಿಯಂತೆ ಕಾರ್ಮಿಕ ಮತ್ತು ರಾಜಕೀಯ ಚಳವಳಿಗಳಲ್ಲಿ ಸೇರಿ ಸಹ-ಕಾರ್ಯಕರ್ತರನ್ನೇ ವಿವಾಹವಾದರು.</p>



<p>ಈಗ ನಾವು ಹೇಳುತ್ತಿರುವ ಕಥೆಯು 1810-1890 ರ ನಡುವಿನ ಕಾಲಘಟ್ಟದ್ದು. ಅಂದಿನ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳು ನಮಗೆ ಅರ್ಥವಾಗದಿದ್ದರೆ ಜೆನ್ನಿ ಮತ್ತು ಮಾರ್ಕ್ಸ್ ಅವರ ಜೀವನವೂ ಅರ್ಥವಾಗುವುದಿಲ್ಲ. 1750 ರಲ್ಲಿ ಫ್ರೆಂಚ್ ಕ್ರಾಂತಿ ಸಂಭವಿಸಿತು. ಲಕ್ಷಾಂತರ ಶ್ರಮಿಕ ಜನರ ಹೋರಾಟದ ಫಲವಾಗಿ ರಾಜಪ್ರಭುತ್ವವು ಕುಸಿಯಿತು. ಸಾಮಾನ್ಯ ಜನರೇ ದಂಗೆ ಎದ್ದು ರಾಜನಿಗೆ ಮರಣದಂಡನೆ ವಿಧಿಸಿದರು. ಆ ದಂಗೆಯು ಇಡೀ ಜಗತ್ತಿನಲ್ಲಿ ಶೋಷಣೆ ಮತ್ತು ದಬ್ಬಾಳಿಕೆಯ ವಿರುದ್ಧ ಹೋರಾಡಬೇಕೆಂಬ ವಿಚಾರಗಳನ್ನು ಜಾಗೃತಗೊಳಿಸಿತು. ಸ್ವಾತಂತ್ರ್ಯ, ಸಮಾನತೆಯ ಘೋಷಣೆಗಳು ಆಗಲೇ ಆರಂಭವಾದವು. ಫ್ರಾನ್ಸ್‌ನ ಪಕ್ಕದಲ್ಲೇ ಇದ್ದ ಪ್ರಶ್ಯ ರಾಜಪ್ರಭುತ್ವದಲ್ಲೇ ಇತ್ತು. ಆದರೂ ರಾಜಪ್ರಭುತ್ವ ಮತ್ತು ಸರ್ವಾಧಿಕಾರದ ವಿರುದ್ಧ ಜನರಲ್ಲಿ ಆಲೋಚನೆಗಳು ಶುರುವಾದವು. ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್, ಬೆಲ್ಜಿಯಂನಂತಹ ದೇಶಗಳಲ್ಲಿ ಸೋಷಿಯಲಿಸ್ಟ್ ವಿಚಾರಗಳು ಪ್ರಚಾರಕ್ಕೆ ಬಂದವು. ಕೈಗಾರಿಕೀಕರಣದೊಂದಿಗೆ ಕಾರ್ಮಿಕ ವರ್ಗ ಅಥವಾ ಕ್ರಾಂತಿಕಾರಿ ವರ್ಗವು ಉದಯಿಸಿತು.</p>



<p>ಮಹಾ ಮೇಧಾವಿ ಮಾರ್ಕ್ಸ್ ಅವರ ಮೇಲೆ ಈ ಹೊಸ ಆಲೋಚನೆಗಳ ಪ್ರಭಾವ ಬೀರಿತು. ವಕೀಲರ ಮಗನಾಗಿದ್ದ ಅವರು ಅಧಿಕಾರ ಅಥವಾ ವಿಲಾಸಿ ಜೀವನವನ್ನು ಬಯಸಲಿಲ್ಲ. ಬದಲಾಗಿ ತಮ್ಮ ಮೇಧಾಶಕ್ತಿಯನ್ನು ಹರಿತಗೊಳಿಸಿದರು, ಅಧ್ಯಯನವನ್ನು ಹೆಚ್ಚಿಸಿದರು. ಕಾರ್ಮಿಕರ ಹೋರಾಟಗಳನ್ನು ಮತ್ತು ಸರ್ವಾಧಿಕಾರಿ ಸರ್ಕಾರಗಳ ವಿರುದ್ಧ ನಡೆಯುವ ಪ್ರತಿರೋಧಗಳನ್ನು ಗಮನಿಸಿದರು. ಕ್ರಮೇಣ ಅವುಗಳೊಂದಿಗೆ ಬೆರೆತು ಕೆಲಸ ಮಾಡಲು ಪ್ರಾರಂಭಿಸಿದರು. ತಮ್ಮ ಬರವಣಿಗೆಯನ್ನೇ ಆಯುಧವನ್ನಾಗಿ ಮಾಡಿಕೊಂಡರು. ಕಾರ್ಮಿಕ ವರ್ಗದ ವಿಮುಕ್ತಿಯನ್ನು ತಮ್ಮ ಜೀವನದ ಗುರಿಯನ್ನಾಗಿಸಿಕೊಂಡರು. ಬಂಡವಾಳಶಾಹಿ ಸರ್ಕಾರಗಳು ಅವರ ಮೇಲೆ ದ್ವೇಷ ಬೆಳೆಸಿಕೊಂಡವು. ಅವರನ್ನು ಎಲ್ಲೂ ನೆಲೆಸಲು ಬಿಡಲಿಲ್ಲ. ಸ್ವಂತ ದೇಶವಾದ ಜರ್ಮನಿಯಿಂದ ಹೊರಹಾಕಿದರು. ಅವರು ಪ್ಯಾರಿಸ್‌ನಲ್ಲಿ ಆಶ್ರಯ ಪಡೆದರು, ಅಲ್ಲಿಯೂ ಇರಲು ಬಿಡಲಿಲ್ಲ. ಬ್ರಸೆಲ್ಸ್ ತಲುಪಿದಾಗ ಅಲ್ಲಿನ ಸರ್ಕಾರವೂ ಹೊರಹಾಕಿತು. ಕೊನೆಗೆ ಲಂಡನ್ ನಗರದ ಕೊಳಗೇರಿಗಳಲ್ಲಿ, ಕಾರ್ಮಿಕರ ವಸತಿಗಳಲ್ಲಿ ವಾಸ ಮಾಡಿದರು.</p>



<p>ಈ ಕಾಲದಲ್ಲಿ ಜೆನ್ನಿ ಮತ್ತು ಮಾರ್ಕ್ಸ್ ಅವರ ಸಂಸಾರ ಸಾಗಿದ ರೀತಿ ಊಹಾತೀತವಾದುದು. ಜೆನ್ನಿ ರಾಜವಂಶದ ಕುಡಿಯಾಗಿದ್ದರು. ಆಕೆ ಬಯಸಿದ್ದರೆ ರಾಜಪುತ್ರನೇ ಪತಿಯಾಗಿ ಸಿಗುತ್ತಿದ್ದನು. ಆದರೆ ಆಕೆಯ ಜೀವನದ ಆಶಯವೇ ಬೇರೆಯಾಗಿತ್ತು. ಆಕೆ ಮಾರ್ಕ್ಸ್ ಅವರನ್ನು ಪ್ರೀತಿಸಿದರು ಮತ್ತು ಮಾರ್ಕ್ಸ್ ಅವರ ವಿಚಾರಗಳನ್ನು ಪ್ರೀತಿಸಿದರು. ಎಂತಹ ಕಷ್ಟಗಳನ್ನಾದರೂ ಸಹಿಸಿದರು. ಬಡತನವು ಅವರ ಮೇಲೆ ಸೇಡು ತೀರಿಸಿಕೊಂಡಂತಿತ್ತು. ಸ್ಥಿರವಾದ ನಿವಾಸವಿಲ್ಲದೆ ದೇಶಭ್ರಷ್ಟರಾಗಬೇಕಾಯಿತು. ವಲಸೆ ಹಕ್ಕಿಗಳಂತೆ ಎಷ್ಟು ದೇಶಗಳನ್ನು ಅಲೆದರೋ? ಹೆತ್ತ ಮಕ್ಕಳಿಗೆ ಹೊಟ್ಟೆತುಂಬಾ ಅನ್ನ ನೀಡಲಾಗದೆ, ಚಿಕಿತ್ಸೆ ಕೊಡಿಸುವ ಶಕ್ತಿ ಇಲ್ಲದೆ ನಾಲ್ವರು ಮಕ್ಕಳನ್ನು ಕಳೆದುಕೊಂಡರು.</p>



<p>&#8220;ಪಾಪ, ಆ ಪುಟ್ಟ ಮಗು ಮೂರು ದಿನ ಸಾವು-ಬದುಕಿನ ನಡುವೆ ಹೋರಾಡಿತು. ಅತ್ಯಂತ ದಾರುಣ ಬಡತನದ ನಡುವೆ ಆ ಮಗು ಮರಣ ಹೊಂದಿತು. ಆಗ ನಮ್ಮ ಜರ್ಮನ್ ಮಿತ್ರರೂ ಹತ್ತಿರವಿರಲಿಲ್ಲ, ನಮ್ಮನ್ನು ಆದುರಿಸುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ನಡುಗುವ ಎದೆಯಿಂದ ಪಕ್ಕದ ಉಪನಗರದಲ್ಲಿದ್ದ ಒಬ್ಬ ಫ್ರೆಂಚ್ ವಲಸಿಗನ ಬಳಿಗೆ ಹೋದೆ. ಅವರು ನಮಗೆ ಪರಿಚಯಸ್ಥರಾಗಿದ್ದರು. ಅವರು ಅತ್ಯಂತ ಸ್ನೇಹಭಾವ ಮತ್ತು ಸಹಾನುಭೂತಿಯಿಂದ ಎರಡು ಪೌಂಡ್‌ಗಳನ್ನು ನೀಡಿದರು. ಅದರಿಂದ ಶವಪೆಟ್ಟಿಗೆಯನ್ನು ಖರೀದಿಸಿದೆವು. ಇಗೋ, ಅಲ್ಲಿ ವಿಶ್ರಾಂತಿ ಪಡೆಯುತ್ತಿರುವುದು ನನ್ನ ಮಗು! ಮಗು ಹುಟ್ಟಿದಾಗ ಉಯ್ಯಾಲೆ ಕೊಡಲು ಸಾಧ್ಯವಾಗಲಿಲ್ಲ, ಕೊನೆಗೆ ಅದರ ಮಣ್ಣಿನ ಮನೆಗೂ (ಶವಪೆಟ್ಟಿಗೆ) ಬಹಳ ಹೊತ್ತು ಕಾಯಬೇಕಾಯಿತು&#8221; ಎಂದು ಮಾರ್ಕ್ಸ್ ತಮ್ಮ ಮಿತ್ರನಿಗೆ ಬರೆದ ಪತ್ರದ ಮಾತುಗಳು ಸಾಮಾನ್ಯ ಕಣ್ಣೀರಿನ ಕಥೆಯಲ್ಲ.</p>



<p>ಲಾಕ್‌ಡೌನ್ ಕಾಲದಲ್ಲಿ ವಲಸೆ ಕಾರ್ಮಿಕರ ಕಷ್ಟಗಳನ್ನು ನಾವು ನೋಡಿದ್ದೇವೆ. ಜೆನ್ನಿ-ಮಾರ್ಕ್ಸ್ ಅವರ ಜೀವನ ಅದಕ್ಕಿಂತ ಸುಲಭವಾದುದೇನೂ ಆಗಿರಲಿಲ್ಲ. ಶತ್ರುಗಳಿಗೂ ಬೇಡವೆನ್ನಿಸುವಂತಹ ಕಷ್ಟಗಳನ್ನು ಅವರು ಅನುಭವಿಸಿದರು. ಮಾರ್ಕ್ಸ್ ಕುಟುಂಬಕ್ಕೆ ಎಂಗೆಲ್ಸ್ ಅವರ ಸ್ನೇಹವು ಬೆಟ್ಟದಂತಹ ಬೆಂಬಲವಾಗಿತ್ತು. ಮಾರ್ಕ್ಸ್ ಅವರ ಮರಣದ ನಂತರವೂ ಎಂಗೆಲ್ಸ್ ಮಾರ್ಕ್ಸ್ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡರು.</p>



<p>&#8220;ಗೆಲ್ಲಲು ಇಡೀ ಪ್ರಪಂಚವೇ ಇದೆ&#8221; ಎಂದು ಶ್ರಮಿಕ ವರ್ಗಕ್ಕೆ ಕರ್ತವ್ಯ ಬೋಧನೆ ಮಾಡಿದ ಕಮ್ಯುನಿಸ್ಟ್ ಪ್ರಣಾಳಿಕೆಯು 1848 ರಲ್ಲಿ ಪ್ರಕಟವಾಯಿತು. ಅದು ಕಾರ್ಮಿಕ ವರ್ಗಕ್ಕೆ ಒಂದು ದಿಕ್ಸೂಚಿಯಾಯಿತು. ಅಂದಿನಿಂದ ಅನೇಕ ದೇಶಗಳಲ್ಲಿ ಪ್ರತಿರೋಧಗಳು ಮತ್ತು ಹೋರಾಟಗಳು ನಡೆದವು. ರಾಜಪ್ರಭುತ್ವ, ಸರ್ವಾಧಿಕಾರ, ವಲಸೆಶಾಹಿ ಮತ್ತು ಸಾಮ್ರಾಜ್ಯಶಾಹಿ ವಿರುದ್ಧ ದಂಗೆ ಏಳದ ದೇಶವೇ ಇಲ್ಲದಂತಾಯಿತು. ಮಾರ್ಕ್ಸ್ ಹುಟ್ಟಿದ ದೇಶದಲ್ಲೇ ಹಿಟ್ಲರ್ ಹುಟ್ಟಿದನು. ಆದರೆ ಆತ ಸೋವಿಯತ್ ಸೈನ್ಯದ ಕೈಯಲ್ಲಿ ನಾಯಿ ಸಾವು ಸತ್ತಿದ್ದು ನಮಗೆ ತಿಳಿದೇ ಇರುವ ಇತಿಹಾಸ. ತಾತ್ಕಾಲಿಕವಾಗಿ ಕ್ರಾಂತಿಕಾರಿ ಚಳವಳಿಗಳಿಗೆ ಹಿನ್ನಡೆಯಾಗುತ್ತಲೇ ಇರುತ್ತದೆ. ಮಾರ್ಕ್ಸ್ ಕಾಲದಲ್ಲೂ ಹಿನ್ನಡೆಯಾಗಿತ್ತು. ಕ್ರಾಂತಿಕಾರಿ ಶಕ್ತಿಗಳು ಸೋತು ಪ್ರತಿಗಾಮಿ ಶಕ್ತಿಗಳು ವಿಜೃಂಭಿಸಿದಾಗಲೆಲ್ಲಾ ಮಾರ್ಕ್ಸ್ ದೇಶಭ್ರಷ್ಟರಾಗಬೇಕಾಯಿತು. ಆದರೂ ರಾಜಕೀಯ ಅರ್ಥಶಾಸ್ತ್ರದ &#8216;ದಾಸ್ ಕ್ಯಾಪಿಟಲ್&#8217; ಗ್ರಂಥ ರಚನೆ ಮತ್ತು ಕಾರ್ಮಿಕ ವರ್ಗದ ಹೋರಾಟವನ್ನು ಉತ್ತುಂಗಕ್ಕೆ ಕೊಂಡೊಯ್ಯುವುದು ಅವರ ಜೀವನದ ಉದ್ದೇಶವಾಗಿತ್ತು.</p>



<p>ಜೆನ್ನಿ ಕೇವಲ ಸಾಮಾನ್ಯ ಗೃಹಿಣಿಯಾಗಿರಲಿಲ್ಲ. ಆಕೆ ಮಾರ್ಕ್ಸ್ ಅವರನ್ನು ಮಾತ್ರವಲ್ಲದೆ ಕ್ರಾಂತಿಯನ್ನೇ ಪ್ರೀತಿಸಿದರು. ಆಕೆ ಕೇವಲ ತನ್ನ ಮಕ್ಕಳನ್ನಷ್ಟೇ ಅಲ್ಲದೆ, ರಾಜಕೀಯ ಕಾರ್ಯಕರ್ತರನ್ನೂ ಪೋಷಿಸಿದರು. ಕಮ್ಯುನಿಸ್ಟರ ಮೇಲೆ ಅಪಪ್ರಚಾರ ಅಂದೂ ಇತ್ತು, ಇಂದೂ ಇದೆ, ಮತ್ತು ಕಮ್ಯುನಿಸಂ ಬರುವವರೆಗೂ ಇರುತ್ತದೆ. &#8220;ಅಯ್ಯೋ, ಇಷ್ಟಕ್ಕೇ ಸುಸ್ತಾದರೆ ಹೇಗೆ?&#8221; ಎಂದು ಸಣ್ಣಪುಟ್ಟ ಕೆಲಸಗಳಿಗೇ ಬೇಸರಗೊಂಡರೆ, ಪ್ರಖ್ಯಾತ ಲೇಖಕ ತೆನ್ನೆಟಿ ಸೂರಿ ಒಂದು ಹಾಡಿನಲ್ಲಿ ಕೇಳುವಂತೆ &#8220;ಅಸಲಿಗೆ ನೀನು ಇದನ್ನು ಏಕೆ ಶುರು ಮಾಡಿದೆ?&#8221; ಎಂದು ಪ್ರಶ್ನೆ ಮಾಡಿಕೊಳ್ಳಬೇಕು. ಆದರೆ ಒಮ್ಮೆ ಶುರು ಮಾಡಿದ ಮೇಲೆ ಮಾಡುವಂತದ್ದೇನಿದೆ? ಶೋಷಣೆ ಮತ್ತು ದೌರ್ಜನ್ಯಗಳನ್ನು ಸಹಿಸೋಣವೇ? ಇಂದು ದೇಶದ ರಾಜಧಾನಿಯಲ್ಲಿ ಲಕ್ಷಾಂತರ ರೈತರು ಹೋರಾಡುತ್ತಿದ್ದಾರೆ. ಶೋಷಣೆ ಎಲ್ಲಿದೆಯೋ ಅಲ್ಲಿ ಹೋರಾಟ ಇದ್ದೇ ಇರುತ್ತದೆ. ನಾವು ಒಂದು ಹೆಜ್ಜೆ ಮುಂದೆ ಇಡೋಣ. ಶೋಷಣೆಯನ್ನು ಅಂತ್ಯಗೊಳಿಸೋಣ. ಜೆನ್ನಿ-ಮಾರ್ಕ್ಸ್-ಎಂಗೆಲ್ಸ್ ಅವರ ತ್ಯಾಗಗಳನ್ನು ಮರೆಯದೆ ಅವರ ಕನಸುಗಳನ್ನು ನನಸು ಮಾಡೋಣ.<br><br><strong>ತೆಲುಗು ಮೂಲ: ಎಸ್‌. ಪುಣ್ಯವತಿ</strong></p>
]]></content:encoded>
					
		
		
			</item>
		<item>
		<title>ವಂದೇ ಮಾತರಂ, ಇಸ್ಲಾಂ ಮತ್ತು ಬಿಜೆಪಿ!</title>
		<link>https://peepalmedia.com/vande-mataram-islam-and-bjp/</link>
		
		<dc:creator><![CDATA[Peepal Media Desk]]></dc:creator>
		<pubDate>Sun, 15 Feb 2026 10:19:46 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://peepalmedia.com/?p=74150</guid>

					<description><![CDATA[&#8220;..ಈ ದೇಶವನ್ನು ಆಳಲು ಬಿಜೆಪಿ ಎಂಬ ಪಕ್ಷಕ್ಕೆ ಸಾಧ್ಯವಾಗಿದ್ದೆ ಒಡೆದು ಆಳುವ ನೀತಿಯಿಂದ. ಬಾಬರಿ ಮಸೀದಿ ದ್ವಂಸದಿಂದ ಪ್ರಾರಂಭಿಸಿ ಈಗಿನ ವಂದೇ ಮಾತರಂ ಕೂಡ ಅಲ್ಪಸಂಖ್ಯಾತರನ್ನು ಬಹುಸಂಖ್ಯಾತರಿಂದ ಬೇರ್ಪಡಿಸುವ ತಂತ್ರಗಳು..&#8221; ಅಬ್ಬಾಸ್ ಕಿಗ್ಗ ಅವರ ಬರಹದಲ್ಲಿ ಎಲ್ಲಾವೂ&#160;&#160; ಚೆನ್ನಾಗಿದೆ‌. ಈ ದೇಶದ ಪ್ರಸ್ತುತ ರಾಷ್ಟ್ರಗೀತೆ, ರಾಷ್ಟ್ರಧ್ವಜ, ಸಂವಿಧಾನ ಯಾರಿಗೂ ಸಮಸ್ಯೆ ಇಲ್ಲ. ನಮ್ಮದು ಎಂಬ ಭಕ್ತಿ ಮತ್ತು ಪ್ರೇಮದಿಂದ ಪ್ರತಿಯೊಬ್ಬರು ಈ ದೇಶವನ್ನು, ದೇಶದ ಮೌಲ್ಯವನ್ನು ಗೌರವಿಸುತ್ತಿದ್ದಾರೆ. ಆದರೆ ದೇಶದ ಆಡಳಿತ ಚುಕ್ಕಾಣಿ ಹಿಡಿದವರ ಹಣೆ ಬರಹ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>&#8220;..ಈ ದೇಶವನ್ನು ಆಳಲು ಬಿಜೆಪಿ ಎಂಬ ಪಕ್ಷಕ್ಕೆ ಸಾಧ್ಯವಾಗಿದ್ದೆ ಒಡೆದು ಆಳುವ ನೀತಿಯಿಂದ. ಬಾಬರಿ ಮಸೀದಿ ದ್ವಂಸದಿಂದ ಪ್ರಾರಂಭಿಸಿ ಈಗಿನ ವಂದೇ ಮಾತರಂ ಕೂಡ ಅಲ್ಪಸಂಖ್ಯಾತರನ್ನು ಬಹುಸಂಖ್ಯಾತರಿಂದ ಬೇರ್ಪಡಿಸುವ ತಂತ್ರಗಳು..&#8221; ಅಬ್ಬಾಸ್ ಕಿಗ್ಗ ಅವರ ಬರಹದಲ್ಲಿ</p>
</blockquote>



<p>ಎಲ್ಲಾವೂ&nbsp;&nbsp; ಚೆನ್ನಾಗಿದೆ‌. ಈ ದೇಶದ ಪ್ರಸ್ತುತ ರಾಷ್ಟ್ರಗೀತೆ, ರಾಷ್ಟ್ರಧ್ವಜ, ಸಂವಿಧಾನ ಯಾರಿಗೂ ಸಮಸ್ಯೆ ಇಲ್ಲ. ನಮ್ಮದು ಎಂಬ ಭಕ್ತಿ ಮತ್ತು ಪ್ರೇಮದಿಂದ ಪ್ರತಿಯೊಬ್ಬರು ಈ ದೇಶವನ್ನು, ದೇಶದ ಮೌಲ್ಯವನ್ನು ಗೌರವಿಸುತ್ತಿದ್ದಾರೆ. ಆದರೆ ದೇಶದ ಆಡಳಿತ ಚುಕ್ಕಾಣಿ ಹಿಡಿದವರ ಹಣೆ ಬರಹ ಸರಿ ಇದ್ದಂತೆ ಕಾಣುತ್ತಿಲ್ಲ. ಟ್ರಂಪ್ ಎಂಬ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳನ್ನು ಹೊಂದಿದ ವ್ಯಕ್ತಿ ಜಗತ್ತಿನ ದೊಡ್ಡಣ್ಣ ಅನಿಸಿದ ಅಮೇರಿಕಾದ ಚುಕ್ಕಾಣಿಯ ಅಧ್ಯಕ್ಷ. ಹೇಳಿ ಕೇಳಿ ಜಗತ್ತನ್ನು ಕಪಿ ಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳುವ ತವಕ. ಆ ತವಕಕ್ಕೆ ಆತ ಪದೇ ಪದೇ ಎತ್ತುವ ಹೆಸರು ಭಾರತ. ಭಾರತ ಮತ್ತು&nbsp;&nbsp; ಪಾಕಿಸ್ತಾನದ ಯುದ್ಧವನ್ನು ನಾನೇ ನಿಲ್ಲಿಸಿದ್ದು ಅನ್ನುವ ವಾಕ್ಯ ಆತ ಹೇಳಿ ಹೇಳಿ ಸುಸ್ತಾಗಿದ್ದರೂ ನಮ್ಮವರ ಮೌನ ಅಚ್ಚರಿ ಹುಟ್ಟಿಸುವಂತದ್ದು.</p>



<p>ಈಗ ಆತ ಮುಂದುವರೆದು ನಮ್ಮ ಪ್ರಧಾನಿ ಕೊಡಬಹುದಾದ ವರದಿಗಳನ್ನು ಆತನೇ ನಿಭಾಯಿಸುತ್ತಿದ್ದಾನೆ! ಭಾರತದ ಸಂಸತ್ತು ಹೊರಡಿಸಬೇಕಾದ ವರದಿಗಳನ್ನು ಶ್ವೇತಭವನ ಹೊರಡಿಸುತ್ತಿದೆ. ಇದು ನಮ್ಮನ್ನು ಆಳುವವರನ್ನು ದೇಶದ ಒಳಗೂ ಹೊರಗು ಪೇಚಿಗೆ ಸಿಕ್ಕಿಸುತ್ತಿದೆ. ದೇಶದ ಸುತ್ತಲೂ ಮಿತ್ರರಿಗಿಂತಲೂ ಶತ್ರುಗಳೆ ಹೆಚ್ಚಾದಂತೆ ಬಾಸವಾಗುತ್ತಿದೆ. ಚೀನಾ ಪಾಕಿಸ್ತಾನದ ಜೊತೆಗೆ ಬಾಂಗ್ಲಾದೇಶ ಹೊಸ ಸೇರ್ಪಡೆ ಅನಿಸುತ್ತದೆ. ಇಂತಹ ಸಮಯದಲ್ಲಿ ನಮ್ಮ ನಂಬಿಕಾರ್ಹ ಸ್ನೇಹಿತನಾಗಿ ಜೊತೆಗಾರನಾಗಿ ನಿಲ್ಲಬಹುದಾದ ರಷ್ಯಾದ ಸಂಬಂಧವನ್ನು ಟ್ರಂಪ್ ನ ಅನತಿಯ ಪ್ರಕಾರ ದೂರ ತಳ್ಳಲಾಗುತ್ತಿದೆ. ಒಟ್ಟಿನಲ್ಲಿ ಭಾರತದ ರಾಜತಾಂತ್ರಿಕತೆ ಅತ್ಯಂತ ಕಳಪೆ ಮಟ್ಟದ್ದು ಅನ್ನುವ ಅಭಿಪ್ರಾಯ ದೇಶದ ಒಳಗೂ ಪಸರಿಸಿ ಮೋದಿ ಎಂಬ ಐವತ್ತಾರು ಇಂಚಿನ ಎದೆಯನ್ನು ಸೀಳುತ್ತಿದೆ.</p>



<p>ಈ ದೇಶವನ್ನು ಆಳಲು ಬಿಜೆಪಿ ಎಂಬ ಪಕ್ಷಕ್ಕೆ ಸಾಧ್ಯವಾಗಿದ್ದೆ ಒಡೆದು ಆಳುವ ನೀತಿಯಿಂದ. ಬಾಬರಿ ಮಸೀದಿ ದ್ವಂಸದಿಂದ ಪ್ರಾರಂಭಿಸಿ ಈಗಿನ ವಂದೇ ಮಾತರಂ ಕೂಡ ಅಲ್ಪಸಂಖ್ಯಾತರನ್ನು ಬಹುಸಂಖ್ಯಾತರಿಂದ ಬೇರ್ಪಡಿಸುವ ತಂತ್ರಗಳು. ದೇಶದ ಹದಿನಾಲ್ಕು ಪರ್ಷೆಂಟ್ ಇರುವ ಮುಸ್ಲಿಮರಿಂದ ಇಡೀ ಹಿಂದೂ ಸಮಾಜಕ್ಕೆ ಕಂಟಕ ಇದೆ ಅನ್ನುವುದು ನಂಬಿಸಲು ಸಂಘ ಪರಿವಾರ ಮತ್ತು ಬಿಜೆಪಿ ಹಗಲಿರುಳು ಶ್ರಮಿಸಿದ ಕಾರಣ ಈ ದಿನ ಬಿಜೆಪಿ ಇಷ್ಟು ದೊಡ್ಡ ಮಟ್ಟದಲ್ಲಿ ಅಧಿಕಾರ ಹಿಡಿದಿದೆ. ಆದರೇ ಅಧಿಕಾರವನ್ನು ನಿಭಾಯಿಸಲು ಅದಕ್ಕೆ ಇನ್ನಷ್ಟು ವಿವಾದಗಳು ಬೇಕು. ರಾಮಮಂದಿರ ಈಗ ತಾರ್ಕಿಕ ಅಂತ್ಯ ಕಂಡಿರುವ ಕಾರಣ ಈಗ ಮುಸ್ಲಿಮರನ್ನು ಖಳನಾಯಕನ್ನಾಗಿಸಲು ವಂದೇ ಮಾತರಂ ನೆಪವಷ್ಟೆ ಅಲ್ಲದೇ ಯಾವ ದೇಶಪ್ರೇಮವೂ ಇಲ್ಲ.</p>



<p>ಜಗತ್ತಿನ ಅತ್ಯಂತ ಸುಂದರ, ವಿವಿಧತೆಯಲ್ಲಿ ಏಕತೆಯನ್ನು ಮೈಗೂಡಿಸಕೊಂಡ ದೇಶ. ಇಂತಹ ದೇಶದಲ್ಲಿ ಎಲ್ಲಾರಿಗೂ ಒಪ್ಪುವಂತಹ ಒಂದು ಸಮಾನತೆಯ ರಾಷ್ಟ್ರಧ್ವಜ, ರಾಷ್ಟ್ರಗೀತೆ&nbsp; ಸಂವಿಧಾನ ಅಷ್ಟು ಸುಲಭದ ಮಾತಲ್ಲ. ನಮ್ಮ ರಾಷ್ಟ್ರಧ್ವಜದಲ್ಲಿ ಒಂದೇ ಒಂದು ಪ್ರಾಣಿಯ ಚಿತ್ರವಿದ್ದರೂ ಸಹ ಮುಸ್ಲಿಮರು ಅದನ್ನು ಮನೆಯ ಗೋಡೆಗೆ ತೂಗು ಹಾಕಲು ಹಿಂಜರಿಯುತ್ತಿದ್ದರು‌. ಆದರೇ ಅಗಿನ ಕಾಲದವರ ದೂರದೃಷ್ಟಿ ಮತ್ತು ವಿವಾದ ರಹಿತವಾದ ಭಾರತಕ್ಕಾಗಿ ಎಲ್ಲಾರೂ ಒಪ್ಪುವಂತೆ ಭಾರತವನ್ನು ಸೃಷ್ಟಿಲಾಯಿತು.</p>



<p>ವಂದೇ ಮಾತರಂ ಕೂಡ ಆ ಕಾಲದ ಜನಪ್ರಿಯ ಗೀತೆಯಾದರೂ ಸಹ ರಾಷ್ಟ್ರಗೀತೆಯಾಗದೇ ಉಳಿಯಲು ಕಾರಣ ಧಾರ್ಮಿಕ ಸೂಕ್ಷ್ಮತೆ. ಪ್ರತಿಯೊಬ್ಬರೂ ಸಹ ರಾಷ್ಟ್ರಗೀತೆಯನ್ನು ಯಾವುದೇ ವಿವಾದವಿಲ್ಲದೆ ಅಂಗಿಕರಿಸಲು 1950 ಜನವರಿ 24ರಂದು ಜನಗಣಮನ ರಾಜೇಂದ್ರ ಪ್ರಸಾದ್ ಅಧಿಕೃತವಾಗಿ ಘೋಷಿಸಿದರು.</p>



<p>ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳು ಭಾರತಮಾತೆಯ ಸೌಂದರ್ಯವನ್ನು ವರ್ಣಿಸುತ್ತವೆಯಾದರೂ, ನಂತರದ ಚರಣಗಳಲ್ಲಿ ದುರ್ಗೆ, ಲಕ್ಷ್ಮಿ ಮುಂತಾದ ಹಿಂದೂ ದೇವತೆಗಳ ಉಲ್ಲೇಖವಿದೆ. ಇದು ಇಸ್ಲಾಂನ ಏಕದೇವತಾ ನಂಬಿಕೆಗೆ ವಿರುದ್ಧ. ಇದನ್ನೆ ಮುಸ್ಲಿಮರು ವಿರೋಧ ಮಾಡುತ್ತಿರುವುದೇ ಹೊರತು ದೇಶವನ್ನಲ್ಲ. ಈ ಹಿಂದೆಯೇ ದೇಶ ಕಟ್ದುವಾಗಲೇ ಇದು ದೊಡ್ಡ ವಿವಾದ ಆದ ಕಾರಣ ರವೀಂದ್ರನಾಥ ಠಾಗೋರ್, ಮಹಾತ್ಮಾ ಗಾಂಧೀಜಿ ಮತ್ತು ಇತರ ನಾಯಕರು ಸೇರಿದ ಸಮಿತಿ ಈ ಗೀತೆಯನ್ನು ಸಂಪೂರ್ಣವಾಗಿ ಅಂಗೀಕರಿಸದೆ, ಮೊದಲ ಎರಡು ಚರಣಗಳನ್ನು ಮಾತ್ರ ರಾಷ್ಟ್ರೀಯ ಗೀತೆ (national song) ಎಂದು ಆಯ್ಕೆ ಮಾಡಿತು. ಇದರ ಹಿಂದೆ ಎಲ್ಲ ಸಮುದಾಯಗಳನ್ನು ಒಗ್ಗೂಡಿಸುವ ಉದ್ದೇಶವಿತ್ತು.</p>



<p>1948ರಲ್ಲಿ ನೆಹರೂ ಅವರು &#8216;ವಂದೇ ಮಾತರಂ’ನ ಸ್ವರ ಮತ್ತು ಲಯವು ಆರ್ಕೆಸ್ಟ್ರಾ/ಬ್ಯಾಂಡ್‌ಗೆ ಸುಲಭವಾಗಿ ಹೊಂದಿಕೊಳ್ಳುವುದಿಲ್ಲ. ಅದು ಸ್ವಲ್ಪ ದುಃಖಮಯ, ಪುನರಾವರ್ತನೆಯಿಂದ ಕೂಡಿದೆ.</p>



<p>ವಿದೇಶಿಯರಿಗೆ ಅರ್ಥವಾಗುವುದು ಕಷ್ಟ.</p>



<p>ಭಾಷೆ ಸಾಮಾನ್ಯ ಜನರಿಗೆ ಕಷ್ಟಕರ.<br>ಇದಕ್ಕೆ ವಿರುದ್ಧವಾಗಿ ‘ಜನ ಗಣ ಮನ’ ಸರಳ, ಜಯಕಾರದ ಸ್ವರವನ್ನು ಹೊಂದಿದೆ ಮತ್ತು ಸಂಗೀತಕ್ಕೆ ಹೆಚ್ಚು ಸೂಕ್ತವೆಂದು ನೆಹರು ಪ್ರತಿಪಾದಿಸಿದರು.</p>



<p>ಹೀಗೆ ವಿವಾದ ರಹಿತವಾಗಿ ನಡೆಯುತ್ತಿದ್ದ ದೇಶವನ್ನು , ಕೇವಲ ಒಡೆದಾಳುವ ನೀತಿಯ ಕಾರಣಕ್ಕಾಗಿ ಬಿಜೆಪಿ ವಂದೇ ಮಾತರಂ ಮುನ್ನಲೆಗೆ ತಂದಿದೆ.</p>



<p>ಇನ್ನೂ ವಂದೇ ಮಾತರಂ ವಿರೋಧಿಸಲು ಮುಸ್ಲಿಮರಿಗೆ ಇರುವ ಕಾರಣ ಸಾಮಾನ್ಯ ಹಿಂದೂಗಳು ಅರಿತರೇ ಈ ಕುರಿತು ಅನುಮಾನಗಳು ಪರಿಹಾರವಾಗಿ ಆಳುವವರ ಕುತಂತ್ರವೂ ಬಯಲಾಗಬಹುದು‌.</p>



<p>ಭಾರತವನ್ನು ದೇಶ ಅಂತಲೂ , ತಾಯಿ ಅಂತಲೂ ಯಾವುದೇ ತಕರಾರು ಇಲ್ಲದೇ ಒಪ್ಪಿಕೊಳ್ಳುವ ಮುಸ್ಲಿಮರಿಗೆ ದೇಶವನ್ನು ದೇವರು ಎಂದು ವಂದಿಸಲು ತಕರಾರು ಇದೆ.</p>



<p>ಇಸ್ಲಾಂ ಧರ್ಮ ಇರುವುದೇ ಹಾಗೆ ಮುಸ್ಲಿಮರ ಮನೆಗಳಲ್ಲಿ ಹುಟ್ಟಿಸಿದ ತಂದೆ ತಾಯಿಯ ಪೋಟೋ ಕಾಣಲು ಸಾಧ್ಯವಿಲ್ಲ ಆಂದರೆ ಭಾರತದ ಭೂಪಟ ಕಾಣಬಹುದು. ಅಂದರೇ ತಂದೆ ತಾಯಿಯ ಫೋಟೋಗಳನ್ನು ತೂಗು ಹಾಕುವುದು ಧಾರ್ಮಿಕವಾಗಿ ನಿಷಿದ್ಧ‌. ಇನ್ನೂ ಹುಟ್ಟಿಸಿದ ತಂದೆ ತಾಯಿ ಆಗಲಿ ಗುರು ಹಿರಿಯರೇ ಗೌರವಕ್ಕೆ ಅರ್ಹರೇ ಹೊರತು ದೇವರಂತೆ ಪೂಜಿಸಲು ಅಲ್ಲ. ಸ್ವತಃ ತಂದೆ ತಾಯಿಗೆ ಕಾಲಿಗೆರಗಲು ಇಸ್ಲಾಂ ಅನುಮತಿ ನೀಡುವುದಿಲ್ಲ‌.‌ ಇದು ಏಕ ದೇವ ವಿಶ್ವಾಸ.</p>



<p>ಈ ಕಾರಣಕ್ಕಾಗಿ ಮುಸ್ಲಿಮರು ವಂದೇ ಮಾತರಂ ವಿರೋಧ ಮಾಡುತ್ತಾರೆ&nbsp; ದೇಶವನ್ನು ದೇವರು ಅನ್ನೋದಿಲ್ಲ ಹೊರತು ತನ್ನ ದೇಶವನ್ನು ತನ್ನ ತಾಯಿಯಷ್ಟೆ ಪ್ರೀತಿಸಬಲ್ಲರು, ಗೌರವಿಸ ಬಲ್ಲರು.</p>



<p>ಆದರೆ ಕುತಂತ್ರಿಗಳಿಗೆ ಇದರ ಸ್ಪಷ್ಟವಾದ ಅರಿವಿದೆ. ಹಾಗಾಗಿ‌ ರಾಷ್ಟ್ರಗೀತೆಯಿಂದ ಯಾವುದೇ ವಿಧವಾದ ವಿವಾದಗಳು ಇಲ್ಲ ಅಂದ ತಕ್ಷಣ ವಂದೇ ಮಾತರಂ ಕಡ್ಡಾಯ ಮಾತುಗಳು ಬರುತ್ತದೆ. ಸಹಜವಾಗಿ ಮುಸ್ಲಿಂ ಸಮುದಾಯ ವಿರೋಧ ವ್ಯಕ್ತ ಪಡಿಸುತ್ತದೆ. ದೇಶದ ಮುಸ್ಲಿಮರನ್ನು ಖಳನಾಯಕರಾಗಿ, ದೇಶದ್ರೋಹಿಗಳಾಗಿ ಚಿತ್ರಿಸಿ ಇನ್ನೊಂದಿಷ್ಡು ಒಡೆದು ಆಳುವ ದುಷ್ಟ ತಂತ್ರವೇ ಹೊರತು ದೇಶದ ಮೇಲಿಟ್ಟ ಪ್ರೀತಿ ಖಂಡಿತ ಅಲ್ಲ.</p>
]]></content:encoded>
					
		
		
			</item>
		<item>
		<title>ಬೊಗಸೆಗೆ ದಕ್ಕಿದ್ದು-70 : ರಾಜ್ಯಪಾಲರು ಸಂವಿಧಾನದ ಪ್ರತಿನಿಧಿಯೇ? ಕೇಂದ್ರದ ಏಜೆಂಟರೆ?</title>
		<link>https://peepalmedia.com/is-the-governor-a-representative-of-the-constitution/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 12 Feb 2026 13:39:19 +0000</pubDate>
				<category><![CDATA[ಅಂಕಣ]]></category>
		<category><![CDATA[ರಾಜಕೀಯ]]></category>
		<guid isPermaLink="false">https://peepalmedia.com/?p=74031</guid>

					<description><![CDATA[&#8220;..ರಾಜ್ಯಪಾಲರ ಕಚೇರಿಯು ರಾಜ್ಯಗಳಲ್ಲಿ&#160; ಕೇಂದ್ರದ ಪ್ರಾಬಲ್ಯ ಸ್ಥಾಪನೆಗೆ ಒಂದು ಸಾಧನವಾಗಿ ಮುಂದುವರಿದರೆ, ಅದು ಕೇವಲ &#8220;ವಿವಾದಾತ್ಮಕ ಪಾತ್ರ&#8221;ವಾಗುವುದಿಲ್ಲ &#8211; ಅದು ಭಾರತೀಯ ಒಕ್ಕೂಟ ವ್ಯವಸ್ಥೆಯ ಸಮಾಧಿಯಾಗಿರುತ್ತದೆ&#8221; ನಿಖಿಲ್ ಕೋಲ್ಪೆಯವರ ಬರಹದಲ್ಲಿ ಸಂವಿಧಾನ ಸಭೆಯ ಪವಿತ್ರ ಸ್ಥಳದಲ್ಲಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ರಾಜ್ಯಪಾಲರನ್ನು &#8220;ಸಾಂಕೇತಿಕ&#8221; ಮುಖ್ಯಸ್ಥ &#8211; ಒಕ್ಕೂಟ ಮತ್ತು ರಾಜ್ಯಗಳ ನಡುವಿನ ಬೆಳ್ಳಿ ಸೇತುವೆ ಎಂದು ಕಲ್ಪಿಸಿಕೊಂಡರು. ಅಂತೆಯೇ ಸಂವಿಧಾನವು ವಿಧಿಸಿದೆ. ಅಲ್ಲಿಂದ ನೇರವಾಗಿ ನಾವು ಕಳೆದ ದಶಕಕ್ಕೆ ಬಂದಾಗ, ಆ ಸೇತುವೆ ಹೆಚ್ಚು ಹೆಚ್ಚಾಗಿ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>&#8220;..ರಾಜ್ಯಪಾಲರ ಕಚೇರಿಯು ರಾಜ್ಯಗಳಲ್ಲಿ&nbsp; ಕೇಂದ್ರದ ಪ್ರಾಬಲ್ಯ ಸ್ಥಾಪನೆಗೆ ಒಂದು ಸಾಧನವಾಗಿ ಮುಂದುವರಿದರೆ, ಅದು ಕೇವಲ &#8220;ವಿವಾದಾತ್ಮಕ ಪಾತ್ರ&#8221;ವಾಗುವುದಿಲ್ಲ &#8211; ಅದು ಭಾರತೀಯ ಒಕ್ಕೂಟ ವ್ಯವಸ್ಥೆಯ ಸಮಾಧಿಯಾಗಿರುತ್ತದೆ&#8221; ನಿಖಿಲ್ ಕೋಲ್ಪೆಯವರ ಬರಹದಲ್ಲಿ</p>
</blockquote>



<p>ಸಂವಿಧಾನ ಸಭೆಯ ಪವಿತ್ರ ಸ್ಥಳದಲ್ಲಿ, ಡಾ. <a href="http://ಬಿ.ಆರ್">ಬಿ.ಆರ್</a>. ಅಂಬೇಡ್ಕರ್ ಅವರು ರಾಜ್ಯಪಾಲರನ್ನು &#8220;ಸಾಂಕೇತಿಕ&#8221; ಮುಖ್ಯಸ್ಥ &#8211; ಒಕ್ಕೂಟ ಮತ್ತು ರಾಜ್ಯಗಳ ನಡುವಿನ ಬೆಳ್ಳಿ ಸೇತುವೆ ಎಂದು ಕಲ್ಪಿಸಿಕೊಂಡರು. ಅಂತೆಯೇ ಸಂವಿಧಾನವು ವಿಧಿಸಿದೆ. ಅಲ್ಲಿಂದ ನೇರವಾಗಿ ನಾವು ಕಳೆದ ದಶಕಕ್ಕೆ ಬಂದಾಗ, ಆ ಸೇತುವೆ ಹೆಚ್ಚು ಹೆಚ್ಚಾಗಿ ಬ್ಯಾರಿಕೇಡ್‌ನಂತೆ ಕಾಣಲು ಪ್ರಾರಂಭಿಸಿದೆ. ಚೆನ್ನೈನ ರಾಜಭವನದಿಂದ ಕೋಲ್ಕತ್ತಾದವರೆಗೆ ಮತ್ತು ಬೆಂಗಳೂರಿನಿಂದ ಚಂಡೀಗಢದವರೆಗೆ, ರಾಜ್ಯಪಾಲರ ಕಚೇರಿಯು ಸಾಂವಿಧಾನಿಕ ಕಾವಲುಗಾರನ ಪಾತ್ರದಿಂದ- ಕೇಂದ್ರ ಪಕ್ಷಪಾತಿ ಮತ್ತು ವಿವಾದ ಪ್ರಚೋದಕನ ಪಾತ್ರಕ್ಕೆ ರೂಪಾಂತರಗೊಂಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ನಾವು ಈಗ ನೋಡುತ್ತಿರುವುದು ಕೇವಲ ವ್ಯಕ್ತಿತ್ವಗಳ ಘರ್ಷಣೆಯಲ್ಲ. ಅದು &#8220;ಕೇಂದ್ರದ ಏಜೆಂಟ್&#8221; ಅಂತಿಮವಾಗಿ ತನ್ನ ಮುಸುಕನ್ನು ಕಳಚಿ ನೇರವಾಗಿ ವಿರೋಧ ಪಕ್ಷಗಳು ಆಳುತ್ತಿರುವ ರಾಜ್ಯಗಳ ಜೊತೆ ನಡೆಸುತ್ತಿರುವ ನೇರ ಸಂಘರ್ಷ. ಇದು ಒಕ್ಕೂಟವಾದದ ಬುಡಮೇಲಿಗಾಗಿ ನಡೆಯುತ್ತಿರುವ ವ್ಯವಸ್ಥಿತ ಸಂಚಿನಂತೆ ಗೋಚರಿಸುತ್ತಿದೆ.</p>



<p><strong>ಸಾಂವಿಧಾನಿಕ ಚಿತ್ರಕತೆ ಮೀರಿದ ರಾಜಕೀಯ ನಾಟಕ</strong><br>ಸಂವಿಧಾನದ ವಿಧಿ 154ರ ಅಡಿಯಲ್ಲಿ, ರಾಜ್ಯದ ಸಾಂಕೇತಿಕ ಕಾರ್ಯನಿರ್ವಾಹಕ ಅಧಿಕಾರವನ್ನು ರಾಜ್ಯಪಾಲರಿಗೆ ವಹಿಸಲಾಗಿದೆ, ಆದರೆ, 163ನೇ ವಿಧಿಯು ರಾಜ್ಯಪಾಲರ ಪಾತ್ರವನ್ನು ಸ್ಪಷ್ಟಪಡಿಸುತ್ತದೆ: ಈ ಅಧಿಕಾರವನ್ನು ಮಂತ್ರಿ ಮಂಡಳಿಯ &#8220;ಸಹಾಯ ಮತ್ತು ಸಲಹೆ&#8221;ಯ ಮೇಲೆ ಚಲಾಯಿಸಬೇಕು.&nbsp; ರಾಜ್ಯದಲ್ಲಿ ರಾಜ್ಯಪಾಲರು ರಾಷ್ಟ್ರಪತಿಯವರ ಕಣ್ಣುಗಳಾಗಿರಬೇಕು (ಕೇಂದ್ರ ಸರಕಾರ ಅಥವಾ ಪ್ರಧಾನಿಯ ಕಣ್ಣುಗಳಲ್ಲ!) ಮತ್ತು ಸರಕಾರದ ಯಂತ್ರವು ಸಂವಿಧಾನಕ್ಕೆ ಬದ್ಧವಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಉದ್ದೇಶ ಸ್ಪಷ್ಟ: ರಾಜ್ಯಗಳು ಸಂವಿಧಾನ ಮೀರಿ ಹೋಗದಂತೆ ನೋಡಿಕೊಳ್ಳಬೇಕು; ತಾವೇ ಸಂವಿಧಾನ ಉಲ್ಲಂಘಿಸಿ, ರಾಜ್ಯಗಳಿಗೆ ಅಡಚಣೆ ಉಂಟುಮಾಡಿ, ಕೇಂದ್ರದ ತಮ್ಮ ಧಣಿಗಳನ್ನು ಕುಶಿಪಡಿಸುವುದು ಅಲ್ಲ.</p>



<p>ಹೀಗಿದ್ದರೂ, ಕಳೆದ ಹತ್ತು ವರ್ಷಗಳಲ್ಲಿ ರಾಜ್ಯಪಾಲರ &#8220;ವಿವೇಚನೆ&#8221; ಎಂಬುದು &#8220;ಅಡಚಣೆ&#8221; ಎಂಬ ಪದಕ್ಕೆ ಬದಲಿ ಪದವಾಗಿಬಿಟ್ಟಿದೆ. ರಾಜ್ಯಪಾಲರು ನಿರ್ಣಾಯಕ ಮಸೂದೆಗಳನ್ನು ಅಡಿಗೆ ಹಾಕಿ ಕುಳಿತುಕೊಳ್ಳುವುದನ್ನು ಈಗ ನಾವು ವರ್ಷಗಳಿಂದ ನೋಡುತ್ತಿದ್ದೇವೆ &#8211; ಸುಪ್ರೀಂ ಕೋರ್ಟ್ ಇತ್ತೀಚೆಗೆ ತಮಿಳುನಾಡು ರಾಜ್ಯ vs ತಮಿಳುನಾಡು ರಾಜ್ಯಪಾಲರು (2025) ಪ್ರಕರಣದಲ್ಲಿ ಈ ಪರಿಪಾಠವನ್ನು ಟೀಕಿಸಿತು. ರಾಜ್ಯಪಾಲರು ಸಾಮಾನ್ಯ ಕಾನೂನು ರಚನೆಗೆ ಅಡ್ಡಿಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಹೇಳಿದರು. ಶಾಸನವೊಂದನ್ನು (ಶಾಸನ ಸಭೆಯಲ್ಲಿ ಅಂಗೀಕೃತವಾದ ಮಸೂದೆ) ಅನಿರ್ದಿಷ್ಟವಾಗಿ ತಡೆಯಲು ಸಂವಿಧಾನದ 200ನೇ ವಿಧಿಯನ್ನು &#8220;ಪಾಕೆಟ್ ವೀಟೋ&#8221;ದಂತೆ ಬಳಸಲಾಗುತ್ತಿದೆ ಅಥವಾ 356ನೇ ವಿಧಿಯನ್ನು ಬಳಸಿಕೊಂಡು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡುವ ಮೂಲಕ (2016ರಲ್ಲಿ ಉತ್ತರಾಖಂಡ ಮತ್ತು ಅರುಣಾಚಲ ಪ್ರದೇಶದಲ್ಲಿ ಕಂಡುಬಂದಂತೆ), ವಿರೋಧ ಪಕ್ಷದ ನೇತೃತ್ವದ ಜನಾದೇಶಗಳನ್ನು ಅಸ್ಥಿರಗೊಳಿಸಲು ರಾಜ್ಯಪಾಲ ಕಚೇರಿಯನ್ನು ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ.</p>



<p>ಹಾಗೆಂದು ಈ ಪರಿಪಾಠ ತುರ್ತುಪರಿಸ್ಥಿತಿಯ ಆರಂಭಕ್ಕೆ ಮಂಚಿನ ದಿನಗಳಲ್ಲಿಯೇ ಆರಂಭವಾಗಿತ್ತು. ಆದರೂ, ಅಂದಿನ ದಿನಗಳಲ್ಲಿ ನೇರಾನೇರವಾಗಿ ಸಂವಿಧಾನಕ್ಕೆ ಸವಾಲು ಎಸೆಯುವ ಕೆಲಸಗಳನ್ನು ಮಾಡಲಾಗುತ್ತಿರಲಿಲ್ಲ. ಕಳೆದ ದಶಕದಿಂದ ಅದು “ರಾಜ್ಯಪಾಲಾರೋಷ”ದಿಂದ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲನಾಗಿ ಕೇಂದ್ರದ ಏಜೆಂಟನಾಗಿ ರಾಜ್ಯದೊಂದಿಗೆ ನಿರಂತರವಾಗಿ ಬೀದಿಜಗಳಕ್ಕಿಳಿದು ಕುಖ್ಯಾತಿ ಪಡೆದು, ಉಡುಗೊರೆಯಾಗಿ ಉಪರಾಷ್ಟ್ರಪತಿಯಾಗಿ ಆಯ್ಕೆಯಾದರೂ ಬಿಜೆಪಿ ಮತ್ತು ಕೇಂದ್ರ ಸರಕಾರದ ವಕೀಲರಂತೆ ವರ್ತಿಸುತ್ತಿದ್ದ ಜಗದೀಪ್ ಧನ್ಕರ್- ಸರಕಾರದ ವಿರುದ್ಧ ಮಾಡಿದ ಒಂದೇ ಒಂದು ಟೀಕೆಗಾಗಿ ಮನೆಗೆ ಹೋಗಿ, ಅಜ್ಞಾತವಾಸ ಅನುಭವಿಸಬೇಕಾದ ಘಟನಾ ಸರಣಿಯನ್ನು ನೆನಪಿಸಬೇಕು.</p>



<p><strong>ಹಿಂದಿನ ಉಪಕಾರಕ್ಕೆ &#8220;ಉಡುಗೊರೆ&#8221;</strong><br>ಈ ದಶಕದಲ್ಲಿ ರಾಜ್ಯಪಾಲರಾಗಿ ನೇಮಕರಾದವರ ವ್ಯಕ್ತಿ ಹಿನ್ನೆಲೆಗಳು ಬಹುಶಃ ಹೆಚ್ಚು ಆತಂಕಕಾರಿಯಾಗಿವೆ. ರಾಜಭವನವು ಹಿಂದಿನಂತೆ ಹಿರಿಯ ರಾಜಕಾರಣಿಗಳಿಗೆ ಮಾತ್ರವೇ ನಿವೃತ್ತಿ ಮನೆಯಾಗಿಲ್ಲ; ಇದು ತಾವು ಅಧಿಕಾರದಲ್ಲಿ ಇರುವಾಗ ಸರಕಾರಕ್ಕೆ, ಆಡಳಿತ ಪಕ್ಷಕ್ಕೆ ಸಲ್ಲಿಸಿದ “ಸೇವೆ”ಗಳಿಗೆ, ಮಾಡಿದ ಉಪಕಾರಗಳಿಗೆ ಸರಕಾರ ಉಡುಗೊರೆಯಾಗಿ ನೀಡುತ್ತಿರುವ ನಿವೃತ್ತರ &#8220;ಪ್ರತಿಫಲ ಕೇಂದ್ರ&#8221;ವಾಗಿದೆ.</p>



<p>ನ್ಯಾಯಮೂರ್ತಿ ಪಿ. ಸದಾಶಿವಂ (ಕೇರಳ) ಮತ್ತು ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ (ಆಂಧ್ರಪ್ರದೇಶ) ಅವರಂತಹ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರ ನೇಮಕವು ನ್ಯಾಯಾಂಗಕ್ಕೆ ಒಂದು ಭಯಾನಕ ಸಂದೇಶವನ್ನು ರವಾನಿಸುತ್ತದೆ. ಅಯೋಧ್ಯೆ ಮತ್ತು ರಫೆಲ್ ಹಗರಣದಂತ ಹಲವಾರು ಪ್ರಕರಣಗಳಲ್ಲಿ ವಿವಾದಾತ್ಮಕ ತೀರ್ಪುಗಳ ನಂತರ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಲಾಯಿತು. ಅವರೂ ಯಾವುದೇ ಸಂಕೋಚಗಳಿಲ್ಲದೆ ಅದನ್ನು ಒಪ್ಪಿಕೊಂಡರು. ರಾಜಕೀಯ ಚೌಕಾಸಿಯ ಬಲಿಪೀಠದಲ್ಲಿ ನೈತಿಕತೆಯನ್ನು ಬಲಿಕೊಟ್ಟಾಗ, ನಮ್ಮ ಪ್ರಜಾಪ್ರಭುತ್ವದ ಆತ್ಮವಾದ ನ್ಯಾಯಾಂಗದ ಸ್ವಾತಂತ್ರ್ಯವನ್ನು ರಾಜಿ ಮಾಡಿಕೊಂಡಂತಾಗುತ್ತದೆ. ನ್ಯಾಯಾಧೀಶರು ರಾಜ್ಯಪಾಲರ ನಿವಾಸವನ್ನು &#8220;ಪಿಂಚಣಿ ಯೋಜನೆ&#8221;ಯಾಗಿ ಎದುರು ನೋಡಬಹುದಾದರೆ, ಸಾಮಾನ್ಯ ನಾಗರಿಕರು ತಮ್ಮ ರಾಜ್ಯಪಾಲರ ನಿಷ್ಪಕ್ಷಪಾತತೆಯನ್ನು ನಿಜವಾಗಿಯೂ ನಂಬಬಹುದೇ?</p>



<p><strong>ಪಕ್ಷಪಾತದ ನಡವಳಿಕೆಯ ಮೂರು ಪ್ರಕರಣಗಳು</strong><br>ಸಾಂವಿಧಾನಿಕ ಸಿದ್ಧಾಂತ ಮತ್ತು ರಾಜಭವನದ ವಾಸ್ತವತೆಯ ನಡುವಿನ ಅಂತರವನ್ನು ರಾಜ್ಯಪಾಲರು ರಾಜ್ಯಸರಕಾರಗಳ ಒಡೆಯರಂತೆ, ಕೇಂದ್ರದ ಏಜೆಂಟರಂತೆ ಕಾರ್ಯನಿರ್ವಹಿಸಿದಂತೆ ಕಂಡುಬಂದ ಮೂರು ಪ್ರಕರಣಗಳನ್ನು ಉದಾಹರಣೆಗಾಗಿ ನೋಡಬಹುದು.</p>



<p><strong>1. ಕರ್ನಾಟಕ ಬಿಕ್ಕಟ್ಟು: ರಾಜ್ಯಪಾಲ ಗೆಹ್ಲೋಟ್ vs. ರಾಜ್ಯ ಸರಕಾರ</strong><br>ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಮತ್ತು ಸಿದ್ದರಾಮಯ್ಯ ಸರಕಾರವನ್ನು ಒಳಗೊಂಡ ಇತ್ತೀಚಿನ ಘರ್ಷಣೆಯು ರಾಜ್ಯಪಾಲರ ಹಸ್ತಕ್ಷೇಪದ ಆಧುನಿಕ ಪಠ್ಯಪುಸ್ತಕದಲ್ಲಿ&nbsp; ಪಾಠವಾಗಿ ಸೇರಬಲ್ಲ ಅರ್ಹತೆ ಹೊಂದಿದೆ.&nbsp; ​</p>



<p>ಪ್ರಾಸಿಕ್ಯೂಷನ್‌ಗೆ ಅನುಮತಿ: ಪ್ರಮಾಣಿತ ಆಡಳಿತಾತ್ಮಕ ಕಾರ್ಯವಿಧಾನಗಳನ್ನು ಮೀರಿದ ಕ್ರಮದಲ್ಲಿ, ರಾಜ್ಯಪಾಲ ಗೆಹ್ಲೋಟ್ ಅವರು ಖಾಸಗಿ ದೂರುಗಳ ಆಧಾರದ ಮೇಲೆ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಭೂ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಿದರು. ಇದು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17A ನೆಪದಲ್ಲಿ ಚುನಾಯಿತ ಸರಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ &#8220;ಆತುರದಿಂದ” ಕೈಗೊಳ್ಳಲಾದ “ವಿವೇಚನಾ ಕ್ರಮ”ವಾಗಿತ್ತು. ನಂತರ ನ್ಯಾಯಾಲಯವೇ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ಕೈಬಿಟ್ಟದ್ದೇ ಇದಕ್ಕೆ ಸಾಕ್ಷಿ.<br><br>​ಶಾಸಕಾಂಗ ಅಡೆತಡೆಗಳು: ಇತ್ತೀಚೆಗೆ, 2026ರ ಆರಂಭದಲ್ಲಿ, ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ಮಸೂದೆಯನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸುವ ರಾಜ್ಯಪಾಲರ ನಿರ್ಧಾರವನ್ನು ರಾಜ್ಯಮಟ್ಟದ ಸಾಮಾಜಿಕ ಸುಧಾರಣೆಗಳನ್ನು ತಡೆಯುವ ತಂತ್ರವೆಂದು ಪರಿಗಣಿಸಲಾಗಿದೆ. ಕೇಂದ್ರವನ್ನು ಟೀಕಿಸುವ ಭಾಗಗಳನ್ನು ಓದಬೇಕಾಗುತ್ತದೆ ಎಂದು ರಾಜ್ಯ ಸಂಪುಟ ಅನುಮೋದಿಸಿದ ಭಾಷಣವನ್ನು ನಿಯಮದಂತೆ ವಿಧಾನ ಮಂಡಲದಲ್ಲಿ ಓದರೆ, ಎರಡು ಸಾಲು ಓದಿ ಅವಸರದಲ್ಲಿ ರಾಷ್ಟ್ರಗೀತೆಗೂ ಕಾಯದೇ ಹೊರನಡೆಯುವ ಮೂಲಕ- “ರಾಜ್ಯಪಾಲರು ರಾಜ್ಯ ಸರ್ಕಾರದ ಧ್ವನಿ”ಯೇ ಹೊರತು, ರಾಜ್ಯದ ಭಾಷಣಕ್ಕೆ, ಕಾಯಿದೆಗಳಿಗೆ ಕತ್ತರಿ ಹಾಕುವ ಕೇಂದ್ರದ&nbsp; ಸೆನ್ಸಾರ್ ಮಂಡಳಿ ಅಲ್ಲ ಎಂಬ ಮೂಲ ತತ್ವವನ್ನೇ ಪ್ರಶ್ನಿಸಿದರು.</p>



<p><strong>2. ಮಹಾರಾಷ್ಟ್ರದ ಮಧ್ಯರಾತ್ರಿ ದಂಗೆ (2019)</strong><br>​ಆಗಿನ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರ ಕ್ರಮಗಳು ಭಾರತೀಯ ರಾಜಕೀಯ ಇತಿಹಾಸದಲ್ಲಿ ಅತ್ಯಂತ ವಿವಾದಾತ್ಮಕ ಅಧ್ಯಾಯಗಳಲ್ಲಿ ಒಂದಾಗಿ ಉಳಿದಿವೆ. ಚುನಾವಣೆಯಲ್ಲಿ ಮಿಶ್ರ ಫಲಿತಾಂಶ ಬಂದ ನಂತರ, ರಾಜ್ಯಪಾಲರು ಬೆಳಿಗ್ಗೆ 5:47ಕ್ಕೆ ರಾಷ್ಟ್ರಪತಿ ಆಳ್ವಿಕೆಯನ್ನು ತೆಗೆದುಹಾಕಲು ಶಿಫಾರಸು ಮಾಡಿ, ಸೂರ್ಯ ಸಂಪೂರ್ಣವಾಗಿ ಉದಯಿಸುವ ಮೊದಲೇ ಮುಖ್ಯಮಂತ್ರಿಗೆ ಪ್ರಮಾಣ ವಚನ ಬೋಧಿಸುವ ನಾಚಿಕೆಗೇಡಿನ ಕ್ರಮ ಅನುಸರಿಸಿದರು. ಈ &#8220;ಮಾನಗೇಡಿ&#8221; ಪ್ರಮಾಣ ವಚನವನ್ನು ಅಂತಿಮವಾಗಿ ಸುಪ್ರೀಂ ಕೋರ್ಟ್ ತಡೆಹಿಡಿದು, ಬಹುಮತ ಪರೀಕ್ಷೆಗೆ ಆದೇಶಿಸಿತು. ರಾಜಭವನವನ್ನು “ಕತ್ತಲೆಯ ಹೊದಿಕೆಯಡಿಯಲ್ಲಿ ರಾಜಕೀಯ ಎಂಜಿನಿಯರಿಂಗ್&#8221; ನಡೆಸಲು ಬಳಸಬಾರದು ಎಂದು ಕೋರ್ಟ್ ತಾಕೀತು ಮಾಡಿತು.</p>



<p><strong>​3. ಅರುಣಾಚಲ ಪ್ರದೇಶ ಪುನಃಸ್ಥಾಪನೆ (2016)</strong><br>ಅರುಣಾಚಲ ಪ್ರದೇಶದ ನಬಮ್ ರೆಬಿಯಾ ವಿರುದ್ಧ ಉಪ ಸ್ಪೀಕರ್ ಪ್ರಕರಣದಲ್ಲಿ, ಸ್ಪೀಕರ್ ಮತ್ತು ಸರಕಾರವನ್ನು ಒಂದೇ ಏಟಿಗೆ ಕಿತ್ತುಹಾಕಲು ಅನುಕೂಲವಾಗುವಂತೆ ವಿಧಾನಸಭೆಯ ಅಧಿವೇಶನವನ್ನು ಏಕಪಕ್ಷೀಯವಾಗಿ ಮುಂದಕ್ಕೆ ತಂದ ರಾಜ್ಯಪಾಲ ಜ್ಯೋತಿ ಪ್ರಸಾದ್ ರಾಜ್‌ಖೋವಾ ಅವರ ನಿರ್ಧಾರವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು. ಆ ಸಂದರ್ಭದಲ್ಲಿ ನೀಡಲಾದ ಮೈಲಿಗಲ್ಲು ತೀರ್ಪು ಒಂದು ತೀಕ್ಷ್ಣವಾದ ಛೀಮಾರಿಯಾಗಿತ್ತು. “ಸಚಿವ ಸಂಪುಟದ &#8220;ಸಹಾಯ ಮತ್ತು ಸಲಹೆ&#8221; ಇಲ್ಲದೆ ರಾಜ್ಯಪಾಲರು ಸದನವನ್ನು ಕರೆಯುವ ಅಥವಾ ಮುಂದೂಡುವ ಅಧಿಕಾರವನ್ನು ಹೊಂದಿಲ್ಲ” ಎಂದು ಅದು ಹೇಳಿತ್ತು.&nbsp; ಸಮಾನಾಂತರ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸುವ ರಾಜ್ಯಪಾಲರ ವಿರುದ್ಧ ಈ ಪ್ರಕರಣವು ಈಗಲೂ ಒಂದು ನಿರ್ಣಾಯಕ ಕಾನೂನು ರಕ್ಷಣೆಯಾಗಿ ಉಳಿದಿದೆ.</p>



<p>ಇದರ ಜೊತೆಗೆ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಮತ್ತು ಪಂಜಾಬ್‌ನಂತ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಈಗಿನ ರಾಜ್ಯಪಾಲರ ಉದ್ದೇಶಪೂರ್ವಕವಾಗಿ ಕಾಣುವ ವಿವಾದಾಸ್ಪದ ನಡವಳಿಕೆಗಳನ್ನು ನೀವು ನಿರಂತರವಾಗಿ ನೋಡಬಹುದು.</p>



<p>​<strong>ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಪೂರ್ವನಿದರ್ಶನ</strong><br>​ಗೆಹ್ಲೋಟ್ ಅಥವಾ ಕೊಶ್ಯಾರಿಯಂತಹ ರಾಜ್ಯಪಾಲರು ರಾಜ್ಯದ ನೀತಿ ಅಥವಾ ರಾಜಕೀಯ ಉಳಿವಿನ ವಿಷಯಗಳಲ್ಲಿ ಕ್ಯಾಬಿನೆಟ್‌ನ ಸಲಹೆಯನ್ನು ಲೆಕ್ಕಿಸದೆ ತಮಗಿಷ್ಟ ಬಂದಂತೆ ಕಾರ್ಯನಿರ್ವಹಿಸಿದಾಗ, ಅವರು ರಾಜ್ಯಪಾಲರ &#8220;ವಿಧ್ಯುಕ್ತ ಕಚೇರಿ&#8221;ಯನ್ನು &#8220;ರಾಜಕೀಯ ಕಚೇರಿ&#8221;ಯಾಗಿ ದುರುಪಯೋಗಪಡಿಸಿಕೊಂಡಂತಾಗುತ್ತದೆ</p>



<p>​ಯಾವ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಅನುಮತಿ ನೀಡಬೇಕು (ಸಾಮಾನ್ಯವಾಗಿ ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಂಡು) ಅಥವಾ ರಾಜ್ಯದಲ್ಲಿ ಯಾವ ಕಾನೂನುಗಳನ್ನು ಜಾರಿಗೆ ತರಲು ಅನುಮತಿ ನೀಡಬೇಕು ಎಂಬುದನ್ನು ನಿರ್ಧರಿಸಲು ಕೇಂದ್ರ ಸರಕಾರವು &#8220;ಗೇಟ್ ಕೀಪರ್&#8221; ಆಗಿ ರಾಜ್ಯಪಾಲರ ಕಚೇರಿಯನ್ನು ಬಳಸಿದರೆ, ಅದು ರಾಜ್ಯದ ಸ್ವಾಯತ್ತತೆಯ ಕತ್ತು ಹಿಸುಕಿ, ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಾದ ಏಕಪಕ್ಷೀಯ ಕೇಂದ್ರೀಕರಣವನ್ನು&nbsp; ಸೃಷ್ಟಿಸುತ್ತದೆ. ನಾವು ಕೇಳಲೇಬೇಕು: ಇಂದು ರಾಜಭವನವು ಸಂವಿಧಾನದ ರಕ್ಷಣೆಯ ತಾಣವೇ? ಅಥವಾ ಆಡಳಿತ ಪಕ್ಷದ ರಾಷ್ಟ್ರೀಯ ಹಿತಾಸಕ್ತಿಗಳಿಗಳನ್ನು ಕಾಯುವ ಹೊರಠಾಣೆಯೇ?</p>



<p>​<strong>ಸಹಕಾರಿ ಒಕ್ಕೂಟದ ಸಾವು?</strong><br>​ರಾಜ್ಯಪಾಲರು ಕೇಂದ್ರ ಸರಕಾರದ ಕೈಗೊಂಬೆಯಾಗಿ ಕಾರ್ಯನಿರ್ವಹಿಸಿದಾಗ- “ರಾಜ್ಯಪಾಲರು ಸ್ಥಳೀಯ ರಾಜಕೀಯದಲ್ಲಿ ಭಾಗಿಯಾಗದ ‘ಪ್ರತ್ಯೇಕ ವ್ಯಕ್ತಿ’ ಆಗಿರಬೇಕು” ಎಂಬ ಸರ್ಕಾರಿಯಾ ಆಯೋಗದ ಶಿಫಾರಸನ್ನು ಉಲ್ಲಂಘಿಸಿದಂತಾಗುತ್ತದೆ. ಈ ಪಕ್ಷಪಾತದ ನಡವಳಿಕೆಯು &#8220;ಕೇಂದ್ರ-ರಾಜ್ಯ ಸಂಘರ್ಷ&#8221;ದ ಶಾಶ್ವತ ಸ್ಥಿತಿಯನ್ನು ಸೃಷ್ಟಿಸುತ್ತದೆ. ಅಲ್ಲಿ&nbsp; ಜನಾಡಳಿತವು ಮೊದಲ ಬಲಿಪಶುವಾಗುತ್ತದೆ.</p>



<p>​ನಾವು ಒಕ್ಕೂಟದ ವೇಷದಲ್ಲಿ &#8220;ಕೇಂದ್ರೀಕೃತ ದೇಶ&#8221;ವಾಗುವತ್ತ ಸಾಗುತ್ತಿದ್ದೇವೆಯೇ? ರಾಜ್ಯಪಾಲರು ಸಮಾನಾಂತರ ಅಧಿಕಾರ ಕೇಂದ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದರೆ, ರಾಜ್ಯ ವಿಧಾನಸಭೆಯ ಮೂಲಕ ವ್ಯಕ್ತಪಡಿಸಲಾಗುವ &#8220;ಜನರ ಆಶಯ&#8221;, “ಜನಾದೇಶ” ಮತ್ತು ಪ್ರಜಾಪ್ರಭುತ್ವದಲ್ಲಿ ಉಳಿಯುವುದಾದರೂ ಏನು?</p>



<p>​<strong>ಆತಂಕಕಾರಿ ಪ್ರಶ್ನೆಗಳು</strong><br>​ಮುಂದಿನ ದಶಕದತ್ತ ಸಾಗುವಾಗ ನಾವು ಈ ಪ್ರಶ್ನೆಗಳನ್ನು ಕೇಳಲೇಬೇಕು:</p>



<p>​ನಿವೃತ್ತ ನ್ಯಾಯಾಧೀಶರು ಮತ್ತು ಅಧಿಕಾರಿಗಳು ರಾಜಭವನವನ್ನು ಆಕ್ರಮಿಸಿಕೊಳ್ಳುವ ಮೊದಲು ಅವರಿಗೆ ಕನಿಷ್ಟ ಐದು ವರ್ಷಗಳ “ಕೂಲಿಂಗ್-ಆಫ್” ಅವಧಿ ಕಡ್ಡಾಯವಾಗಬೇಕೇ?</p>



<p>​ಮಸೂದೆಗಳಿಗೆ ರಾಜ್ಯಪಾಲರು ಅಥವಾ ರಾಷ್ಟ್ರಪತಿ ಒಪ್ಪಿಗೆ ನೀಡಲು ಕಟ್ಟುನಿಟ್ಟಾದ ಕಾಲಮಿತಿಯನ್ನು ವಿಧಿಸುವಂತೆ ಸಂವಿಧಾನದ 200ನೇ ವಿಧಿಯನ್ನು ತಿದ್ದುಪಡಿ ಮಾಡುವ ಸಮಯ ಬಂದಿದೆಯೇ? (ಈ ವಿಧಿಯು ಕಾಲಮಿತಿ ವಿಧಿಸಿಲ್ಲ. ಆದರೆ, ಇದರ ಅರ್ಥ ಅವರು ಸಹಿ ಹಾಕದೇ ಅನಿರ್ದಿಷ್ಟಾವಧಿ ಮಸೂದೆಗಳನ್ನು ಇಟ್ಟುಕೊಳ್ಳಬಹುದು ಎಂದು ಅರ್ಥವಲ್ಲ ಎಂದು ತಮಿಳುನಾಡು ಸರಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.)</p>



<p>​ರಾಜ್ಯಪಾಲರ ಪಾತ್ರಗಳ ಬಗ್ಗೆಯೇ ನೇಮಿಸಲಾಗಿದ್ದ ಸುಪ್ರೀಂ ಕೋರ್ಟಿನ ನಿವೃತ್ತ&nbsp; ನ್ಯಾಯಾಧೀಶ <a href="http://ಎಂ.ಎಂ">ಎಂ.ಎಂ</a>. ಪುಂಚಿ ಆಯೋಗವು 2010ರ ತನ್ನ ವರದಿಯಲ್ಲಿ 272 ಶಿಫಾರಸುಗಳನ್ನು ಮಾಡಿತ್ತು. ಅವುಗಳಲ್ಲಿ ಒಂದಾದ ರಾಜ್ಯಪಾಲರ ನೇಮಕಕ್ಕೆ ರಾಜ್ಯದ ಮುಖ್ಯಮಂತ್ರಿಯ ಔಪಚಾರಿಕ ಒಪ್ಪಿಗೆಯ ಅಗತ್ಯ ಎಂಬ ಶಿಫಾರಸನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆಯೇ? ಈ ಕುರಿತು ಗಂಭೀರ ಚಿಂತನೆ ನಡೆಯಬೇಕು.</p>



<p>​ರಾಜ್ಯಪಾಲರ ಕಚೇರಿಯು ರಾಜ್ಯಗಳಲ್ಲಿ&nbsp; ಕೇಂದ್ರದ ಪ್ರಾಬಲ್ಯ ಸ್ಥಾಪನೆಗೆ ಒಂದು ಸಾಧನವಾಗಿ ಮುಂದುವರಿದರೆ, ಅದು ಕೇವಲ &#8220;ವಿವಾದಾತ್ಮಕ ಪಾತ್ರ&#8221;ವಾಗುವುದಿಲ್ಲ &#8211; ಅದು ಭಾರತೀಯ ಒಕ್ಕೂಟ ವ್ಯವಸ್ಥೆಯ ಸಮಾಧಿಯಾಗಿರುತ್ತದೆ.</p>
]]></content:encoded>
					
		
		
			</item>
		<item>
		<title>ಅಸ್ತಿತ್ವವೇ ಹಸುವಾಗುವ ಕ್ಷಣ &#8216;ವಲವಾರ&#8217;</title>
		<link>https://peepalmedia.com/moment-when-existence-itself-becomes-a-cow-valavar/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 07 Feb 2026 09:32:07 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://peepalmedia.com/?p=73798</guid>

					<description><![CDATA[&#8220;..ಇತ್ತೀಚಿನ ವರ್ಷಗಳಲ್ಲಿ ಗೋವು ಹೆಸರು ಕೇಳಿದಾಗಲೇ ಧರ್ಮ, ದ್ವೇಷ, ಹಿಂಸೆ, ಕಾನೂನು, ಗುಂಪು ದಾಳಿ ಇವೆಲ್ಲ ನೆನಪಿಗೆ ಬರುತ್ತವೆ. ಆದರೆ ವಲವಾರ ಚಿತ್ರ ಗೋವನ್ನ ಮತ್ತೆ ಅದರ ಮೂಲ ಸ್ಥಾನಕ್ಕೆ ತಂದು ನಿಲ್ಲಿಸುತ್ತದೆ..&#8221; ಪತ್ರಕರ್ತ ನವೀನ್ ಸೂರಿಂಜೆಯವರ ಬರಹದಲ್ಲಿ ರಾಷ್ಟ್ರದ ರಾಜಕಾರಣದ ಅಸ್ತ್ರವಾಗಿರುವ ಹಸು ಈ ದೇಶದಲ್ಲಿ ಸದ್ಯಕ್ಕೆ ಅಸ್ತಿತ್ವದಲ್ಲಿದೆ. ಹೈನುಗಾರಿಕೆಯಿಂದಲೇ ಬದುಕು ಸಾಗಿಸಬೇಕು ಅಂದುಕೊಂಡಿರುವ ಒಂದು ಬಡ ಮದ್ಯಮ ಕುಟುಂಬವೊಂದು ಹಸುವನ್ನು ಹೇಗೆ ಅವಲಂಬಿತವಾಗಿದೆ ಒಂದು ಸಣ್ಣ ಕುಟುಂಬದ ಕತೆಯ ಮೂಲಕ &#8216;ವಲವಾರ&#8217; ಚಿತ್ರ ( [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>&#8220;..ಇತ್ತೀಚಿನ ವರ್ಷಗಳಲ್ಲಿ ಗೋವು ಹೆಸರು ಕೇಳಿದಾಗಲೇ ಧರ್ಮ, ದ್ವೇಷ, ಹಿಂಸೆ, ಕಾನೂನು, ಗುಂಪು ದಾಳಿ ಇವೆಲ್ಲ ನೆನಪಿಗೆ ಬರುತ್ತವೆ. ಆದರೆ ವಲವಾರ ಚಿತ್ರ ಗೋವನ್ನ ಮತ್ತೆ ಅದರ ಮೂಲ ಸ್ಥಾನಕ್ಕೆ ತಂದು ನಿಲ್ಲಿಸುತ್ತದೆ..&#8221; ಪತ್ರಕರ್ತ ನವೀನ್ ಸೂರಿಂಜೆಯವರ ಬರಹದಲ್ಲಿ</p>
</blockquote>



<p>ರಾಷ್ಟ್ರದ ರಾಜಕಾರಣದ ಅಸ್ತ್ರವಾಗಿರುವ ಹಸು ಈ ದೇಶದಲ್ಲಿ ಸದ್ಯಕ್ಕೆ ಅಸ್ತಿತ್ವದಲ್ಲಿದೆ. ಹೈನುಗಾರಿಕೆಯಿಂದಲೇ ಬದುಕು ಸಾಗಿಸಬೇಕು ಅಂದುಕೊಂಡಿರುವ ಒಂದು ಬಡ ಮದ್ಯಮ ಕುಟುಂಬವೊಂದು ಹಸುವನ್ನು ಹೇಗೆ ಅವಲಂಬಿತವಾಗಿದೆ ಒಂದು ಸಣ್ಣ ಕುಟುಂಬದ ಕತೆಯ ಮೂಲಕ &#8216;ವಲವಾರ&#8217; ಚಿತ್ರ ( Valavaara Movie) ಹೇಳುತ್ತದೆ.</p>



<p>ಸಕಲೇಶಪುರ/ಮಲೆನಾಡಿನ ಹಳ್ಳಿಯ ಕಥೆ ಹೇಳುವ ವಲವಾರ, ಹಾಗೆ ನೋಡಿದರೆ ಈ ಜಗತ್ತಿನ ಯಾವುದಾದರೂ ದೇಶದ ಕತೆಯೂ ಹೌದು. ಹೈನುಗಾರಿಕೆಗಾಗಿ ದನವನ್ನು ಸಾಕಿದ ಪ್ರತಿಯೊಬ್ಬ ಹಳ್ಳಿಯ ರೈತರ ಕತೆ ಹೇಳುವಂತೆ ನಮ್ಮ ಹೃದಯದ ಆಳಕ್ಕೆ ಇಳಿಯುತ್ತದೆ. ರೈತರ ಮಕ್ಕಳಿಗೆ ತನ್ನದೇ ಕತೆ ಬೆಳ್ಳಿ ಪರದೆಯ ಮೇಲೆ ಬರುತ್ತಿದೆ ಎಂಬಂತೆ ಭಾಸವಾಗುತ್ತದೆ.</p>



<p>ಹಿಂದೊಮ್ಮೆ ಬೆಂಗಳೂರು ಫಿಲಂ ಫೆಸ್ಟಿವಲ್ ನಲ್ಲಿ ಇರಾನಿಯನ್ ಸಿನಿಮಾ &#8216;ದಿ ಕೌ&#8217; (ದ ಕೌ) ನೋಡಿದ್ದ ನೆನಪು ವಲವಾರ ನೋಡಿದಾಗ ಮರುಕಳಿಸುತ್ತದೆ. ಇರಾನಿನ ಹಳ್ಳಿಯ ಬಡತನವನ್ನು ಸಾರುತ್ತದೆ ಎಂಬ ಕಾರಣಕ್ಕಾಗಿ ದಿ ಕೌ ಸಿನಿಮಾವನ್ನು ಇರಾನ್ ರಾಜಪ್ರಭುತ್ವ ನಿಷೇದಿಸಿತು. ದಿ ಕೌ ಸಿನಿಮಾದ ಕತೆಯಲ್ಲಿ ಗರ್ಭಿಣಿ ಹಸು ಸತ್ತು ಹೋದರೆ, ವಲವಾರ ಸಿನಿಮಾ ಕತೆಯಲ್ಲಿ ಗರ್ಭಿಣಿ ಹಸು ಕಳೆದು ಹೋಗಿ ಮತ್ತೆ ಮರಳಿ ಸಿಗುತ್ತದೆ. ಎರಡೂ ಸಿನಿಮಾಗಳಲ್ಲಿ ಗರ್ಭಿಣಿ ಹಸುವನ್ನು ಹುಡುಕುವ ಕತೆಯು ಹಳ್ಳಿ ಬದುಕು, ಹಸುವನ್ನು ಅವಲಂಬಿಸಿರುವ ಕುಟುಂಬಗಳ ಸಂಕಷ್ಟ ನಮ್ಮ ಮುಂದೆ ತೆರೆದಿಡುತ್ತದೆ.</p>



<p>ಭಾರತದ ಗ್ರಾಮೀಣ ಸಮಾಜದಲ್ಲಿ ಹೈನುಗಾರಿಕೆ ಕೇವಲ ಉದ್ಯೋಗವಲ್ಲ; ಅದು ಬದುಕಿನ ಭದ್ರತೆ. ಹಾಲು, ಮೊಸರು, ತುಪ್ಪ-ಇವುಗಳು ಆಹಾರ ಸರಪಳಿಯ ಅವಿಭಾಜ್ಯ ಅಂಗಗಳಾಗಿ, ಗೋವು ಮತ್ತು ಎಮ್ಮೆ ಲಕ್ಷಾಂತರ ರೈತ ಕುಟುಂಬಗಳ ದಿನನಿತ್ಯದ ಆದಾಯದ ಮೂಲ. ಆದರೆ ಇದೆ ಗೋವು ರಾಜಕೀಯ ಅಂಗಳಕ್ಕೆ ಕಾಲಿಟ್ಟಾಗ, ಅದರ ಅರ್ಥ ಬದಲಾಗುತ್ತದೆ. ಬದುಕನ್ನು ಪೋಷಿಸುವ ಪ್ರಾಣಿ, ಅಧಿಕಾರದ ಸಂಕೇತವಾಗಿ ಮಾರ್ಪಡುತ್ತದೆ. ಇಲ್ಲಿಯೇ ಹುಟ್ಟುವುದು ಗೋವು ರಾಜಕಾರಣ .</p>



<p>ಭಾರತ ಇಂದು ವಿಶ್ವದ ಅತಿ ದೊಡ್ಡ ಹಾಲು ಉತ್ಪಾದಕ ದೇಶ. ದೊಡ್ಡ ದೊಡ್ಡ ಹಾಲು ಉತ್ಪಾದಕ ಕಂಪನಿಯ ಸಾಧನೆಗಳ ಹಿಂದೆ ರೈತರು, ಮಹಿಳೆಯರು, ಭೂಹೀನ ಕಾರ್ಮಿಕರ ಶ್ರಮ ಇದೆ. ಹಾಲು ಸಹಕಾರಿ ಸಂಸ್ಥೆಗಳು ಗ್ರಾಮೀಣ ಸ್ವಾವಲಂಬನೆಗೆ ಮಾದರಿಯಾಗಿವೆ. ರೈತನು ಗೋವನ್ನು ಸಾಕುವುದು ಧರ್ಮಕ್ಕಾಗಿ ಅಲ್ಲ—ಬದುಕಿಗಾಗಿ. ಹೈನುಗಾರಿಕೆ ಆರ್ಥಿಕ ಚಟುವಟಿಕೆ; ಅದಕ್ಕೆ ನೀತಿ, ಮಾರುಕಟ್ಟೆ ಪ್ರವೇಶ ಮತ್ತು ಭದ್ರ ಆದಾಯ ಅಗತ್ಯ.</p>



<p>ಯಾವುದೇ ಹಳ್ಳಿಗರ ಬದುಕಿನಲ್ಲಿ ಗೋವು ಪವಿತ್ರತೆ, ದೇವರು, ಪೂಜನೀಯ ಸ್ಥಾನವನ್ನೂ ವರ್ಷಪೂರ್ತಿ ಹೊಂದಿರುವುದಿಲ್ಲ. ರೈತರಿಗೆ ದನ ಮನೆಯ ಸದಸ್ಯನಂತೆಯೇ ಪ್ರಾಣಿಯಾಗಿದ್ದರೂ ಅದರ ಹಿಂದೆ ರಾಜಕೀಯ ಇರುವುದಿಲ್ಲ. ರೈತರ ಕುಟುಂಬ ಮತ್ತು ಗೋವಿನ ಮಧ್ಯೆ ಇರುವ ಈ ಸಿದ್ದಾಂತವಿಲ್ಲದ ಪ್ರೀತಿಯನ್ನು ವಲವಾರ ಸಿನಿಮಾ ಕಟ್ಟಿಕೊಡುತ್ತದೆ.&nbsp; ರಾಜಕೀಯದಲ್ಲಿ ದನ ಎಂಬುದು ಮತ ಧ್ರುವೀಕರಣದ ಸಾಧನವಾಗಿದೆ. ಗೋವು ರಕ್ಷಣೆಯ ಹೆಸರಿನಲ್ಲಿ ಕಠಿಣ ಕಾನೂನುಗಳು, ನಿಗಾ ವ್ಯವಸ್ಥೆ, ಗುಂಪು ಹಿಂಸೆಯೂ ಇರುತ್ತದೆ. ಆಹಾರ ಆಯ್ಕೆ, ಸಾಗಣೆ, ವ್ಯಾಪಾರ ಎಲ್ಲವೂ ರಾಜಕೀಯ ವಿವಾದಗಳಾಗಿ ಪರಿವರ್ತಿಸುತ್ತವೆ. ಹಾಗಾಗಿಯೇ ರೈತರ ಗೋವು ಧಾರ್ಮಿಕ ಭಾವನೆಯಿಂದ ಹೊರಬಂದು ಅಧಿಕಾರದ ಚಿಹ್ನೆಯಾಗಿ ಬದಲಾಗಿದೆ. ವಲವಾರ ಚಿತ್ರದಲ್ಲಿ ಗೋವು ಹೇಗೆ ಬದುಕಿನ ಚಿಹ್ನೆ ಎಂದು ನಮಗೆ ಮನದಟ್ಟು ಮಾಡಿಕೊಡುತ್ತದೆ.</p>



<p>&#8216;ವಲವಾರ&#8217; ಸಿನಿಮಾದಲ್ಲಿ ಮಕ್ಕಳೇ ಹೀರೋಗಳು. ಇದು ಕಮರ್ಷಿಯಲ್ ನಂತೆ ಕಾಣುವ ಆರ್ಟ್ ಸಿನಿಮಾ. ಹಾಗಂತ ಕಮರ್ಷಿಯಲ್ ಮತ್ತು ಆರ್ಟ್ ಸಿನಿಮಾಗಳೆರಡರ ಸಿದ್ಧ ಸೂತ್ರಗಳು ಇಲ್ಲಿಲ್ಲ. ದನ ಸಾಕುವ, ದನ ಸಾಕಿದ, ಮಕ್ಕಳಾಗಿದ್ದಾಗ ದನ ಸಾಕಿದ ಎಲ್ಲರಿಗೂ ಭಾವನಾತ್ಮಕವಾಗಿ &#8216;ವಲವಾರ&#8217; ಇಷ್ಟವಾಗುತ್ತದೆ. ಕುಂಡೇಸಿ (ಮಾಸ್ಟರ್ ವೇದಿಕ್ ಕುಶಾಲ್) ಹಾಗೂ ಕೊಸುಡಿ (ಮಾಸ್ಟರ್ ಶಯನ್) ಅಣ್ಣ-ತಮ್ಮಂದಿರು. ಇವರ ತಂದೆ (ಮಾಲತೇಶ್ ಎಚ್‌ವಿ) ಬಡ ರೈತ. ತುಂಡು ಜಮೀನು ಮತ್ತು ಒಂದೇ ಒಂದು ದನ ಇವನ ಆಸ್ತಿ. ಇಷ್ಟರಲ್ಲೇ ಆತ ಇಬ್ಬರು ಮಕ್ಕಳು, ಪತ್ನಿಯ ಸಣ್ಣ ಸಂಸಾರವನ್ನು ನಿಭಾಯಿಸಬೇಕು. ದೊಡ್ಡ ಮಗನಲ್ಲಿ ತನ್ನ ಕೋಪಿಷ್ಟ ತಂದೆಯನ್ನು ಕಂಡು ದ್ವೇಷಿಸುತ್ತಾನೆ. ಆದರೆ ತಾಯಿಗೆ (ಹರ್ಷಿತಾ ಗೌಡ) ಇಬ್ಬರು ಮಕ್ಕಳೆಂದರೆ ಪ್ರೀತಿ. ಬಡತನದ ನಡುವಿನ ಇವರ ಜೀವನ ಪ್ರೀತಿಯನ್ನು ಕಣ್ಣಿಗೆ ಕಟ್ಟುವಂತೆ, ನಟನೆಯೇ ಅಲ್ಲವೆಂಬಂತೆ ನಟಿಸಿದ್ದಾರೆ. ಇವರು ಮನೆಯ ಕೊಟ್ಟಿಗೆಯಲ್ಲಿದ್ದ ಏಕೈಕ ಗರ್ಭಿಣಿ ಹಸು ಗೌರ(ಗೌರಿ), ಜಡೇಜಾ ಎಂಬ ಹೆಸರಿನ ಹುಂಜ ಕೂಡ ಮನೆಯ ಸದಸ್ಯರೇ ಆಗಿ ಹೋಗುತ್ತಾರೆ.</p>



<p>ನಿರ್ದೇಶಕ ಸುತನ್ ಗೌಡ ಹೇಳಿರುವ &#8216;ದನ&#8217;ದ ಕಥೆ ಇಲ್ಲಿನ ಗ್ರಾಮೀಣ ಮೂಲದ ಮನೆಮನೆಯ ಕತೆಯಾಗಿದೆ. ಯಾವ ಹೆಚ್ಚಿನ ಅಬ್ಬರಗಳೂ, ಟ್ವಿಸ್ಟ್​ಗಳೂ ಇಲ್ಲದೆ ದೃಶ್ಯಕಾವ್ಯವನ್ನು ಕಟ್ಟಿಕೊಟ್ಟ ರೀತಿಯಿಂದಾಗಿ ಪ್ರೇಕ್ಷಕನನ್ನು ಸಿನಿಮಾ ಸಂಪೂರ್ಣವಾಗಿ ಆವರಿಸಿಕೊಳ್ಳುತ್ತದೆ. ಪೂರ್ತಿ ಸಿನಿಮಾದಲ್ಲಿ ಕುಂಡೇಸಿ ಪಾತ್ರದಲ್ಲಿ ಆತನ ಸಹಜ ಅಭಿನಯ, ನಗು, ಅಳು ಎಲ್ಲವೂ ನಿಮ್ಮದೇ ಪಾತ್ರ ಎಂದು ಅನ್ನಿಸಲು ಆರಂಭ ಆಗುತ್ತದೆ. ತನ್ನ ವಯಸ್ಸಿಗೂ ಮೀರಿ ಮಾಸ್ಟರ್ ವೇದಿಕ್ ಅವರು ಕುಂಡೇಸಿ ಪಾತ್ರವನ್ನು ನಟಿಸಿದ್ದಾರೆ. ಮಾಸ್ಟರ್ ಶಯನ್ ಕೂಡ ಕುಂಡೇಸಿಯ ತಮ್ಮನ ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸಿದ್ದಾರೆ. ಸಮುದಾಯದ ರಂಗಕರ್ಮಿ ಮಾಲತೇಶ್​ ಈ ಹಿಂದೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು, ವಲವಾರ ಸಿನಿಮಾದ ನಟನೆ ಅವರ ನಟನಾ ಕೌಶಲ್ಯದ ಮೈಲಿಗಲ್ಲಿನಂತೆ ಕಾಣಿಸುತ್ತದೆ. ತಾಯಿಯಾಗಿ ನಟಿಸಿರುವ ಹರ್ಷಿತಾ, ನಮ್ಮೊಳಗೆ ಸದಾ ತಾಯಿಭಾವವನ್ನು ಉಳಿಸುತ್ತಾರೆ. ಯದು ಕುಮಾರನ ಪಾತ್ರ ಮಾಡಿರುವ ಅಭಯ್​ ಇಡೀ ಚಿತ್ರವನ್ನು ರೊಮ್ಯಾಂಟಿಕ್ ಆಗಿ ಇರಿಸಿದ್ದಾರೆ.</p>



<p>ಚಿತ್ರದ ಕ್ಯಾಮೆರಾ ಕೆಲಸವೂ ವಲವಾರದ ಜೀವ. ಮಲೆನಾಡಿನ ಮಬ್ಬಾದ ಬೆಳಕು, ಮಳೆ–ಮಣ್ಣು–ಹಸಿರು ಇವುಗಳ ಮಧ್ಯೆ ನಡೆಯುವ ದೃಶ್ಯಗಳು ಪ್ರೇಕ್ಷಕನಿಗೆ ಸಿನೇಮಾ ನೋಡುತ್ತಿದ್ದೇನೆ ಎಂಬುದನ್ನೇ ಮರೆಸುತ್ತದೆ. ಇದು ನೋಡುತ್ತಿರುವ ಕತೆ ಅಲ್ಲ, ಅನುಭವಿಸುತ್ತಿರುವ ಬದುಕು ಎಂಬ ಭಾವನೆ ಮೂಡುತ್ತದೆ. ಹಳ್ಳಿ ಕಾಡು ಬದುಕಿನ ಹಲವಾರು ಹಿಟ್ ಸಿನಿಮಾದಲ್ಲಿ ಇರುವಂತೆ ಇಲ್ಲಿ ಕ್ಯಾಮೆರಾ ಹಳ್ಳಿಯ ಮೇಲೆ ಹಾರುವುದಿಲ್ಲ; ಹಳ್ಳಿಯ ಜೊತೆ ನಡೆದು ಬರುತ್ತದೆ. ದನದ ಕಣ್ಣು, ಮಕ್ಕಳ ಮುಖ, ಕೊಟ್ಟಿಗೆಯ ಕತ್ತಲೆ, ಮಣ್ಣಿನ ವಾಸನೆ ಇವೆಲ್ಲವೂ ದೃಶ್ಯಭಾಷೆಯಾಗಿ ಪರಿವರ್ತಿತವಾಗಿವೆ.</p>



<p>ಹಿನ್ನಲೆ ಸಂಗೀತ ಚಿತ್ರಕ್ಕೆ ಮೆರಗು ತರುವುದಕ್ಕಿಂತ, ಅದರೊಳಗೆ ಬೆರೆತು ಹೋಗುತ್ತದೆ. ಎಲ್ಲಿ ಸಂಗೀತ ಬೇಕೋ ಅಲ್ಲಿ ಮಾತ್ರ ಅದು ಬರುತ್ತದೆ. ಉಳಿದ ಕಡೆ ಮೌನವೇ ಮಾತಾಡುತ್ತದೆ. ಹಸು ಕಳೆದು ಹೋಗುವ ಕ್ಷಣದ ಮೌನ, ಮಕ್ಕಳ ಅಸಹಾಯಕತೆ, ತಂದೆಯ ಕೋಪದ ಹಿಂದೆ ಇರುವ ಅಸಮಾಧಾನ ಇವೆಲ್ಲವನ್ನೂ ಸಂಗೀತಕ್ಕಿಂತ ಮೌನವೇ ಚೆನ್ನಾಗಿ ಹೇಳುತ್ತದೆ. ಇದು ವಲವಾರದ ದೊಡ್ಡ ಶಕ್ತಿ.</p>



<p>ವಲವಾರ ಚಿತ್ರ ರಾಜಕೀಯ ಘೋಷಣೆ ಕೂಗುವುದಿಲ್ಲ. ಆದರೆ ರಾಜಕೀಯ ಪ್ರಶ್ನೆಗಳನ್ನು ನಮ್ಮ ಮನಸ್ಸಿನಲ್ಲಿ ಬಿತ್ತುತ್ತದೆ.&nbsp; ಹಸು ಬದುಕಿನ ಸಾಧನವೇ? ಅಥವಾ ರಾಜಕೀಯ ಅಸ್ತ್ರವೇ? ರೈತನಿಗೆ ಗೋವು ದೇವರೇ? ಅಥವಾ ಹಸಿವು ನಿವಾರಣೆಯ ಭದ್ರತೆಯೇ?&nbsp; ಗೋವು ಕಳೆದು ಹೋದರೆ ರೈತನ ಬದುಕು ಎಷ್ಟು ಅಸ್ಥಿರವಾಗುತ್ತದೆ?&nbsp; ಈ ಪ್ರಶ್ನೆಗಳಿಗೆ ನಿರ್ದೇಶಕ ಉತ್ತರ ಕೊಡುವುದಿಲ್ಲ; ಉತ್ತರ ಹುಡುಕುವ ಹೊಣೆ ಪ್ರೇಕ್ಷಕನಿಗೆ ಬಿಡುತ್ತಾರೆ. ಧರ್ಮ ರಾಜಕಾರಣದ ಭ್ರಮೆಗಳಿಲ್ಲದ ಉತ್ತರ ಪ್ರೇಕ್ಷಕನಿಗೆ ಸಿಗುತ್ತದೆ. ಇದುವೇ ಒಳ್ಳೆಯ ರಾಜಕೀಯ ಸಿನಿಮಾ ಮಾಡುವ ನಿಜವಾದ ವಿಧಾನ.</p>



<p>ಇತ್ತೀಚಿನ ವರ್ಷಗಳಲ್ಲಿ ಗೋವು ಹೆಸರು ಕೇಳಿದಾಗಲೇ ಧರ್ಮ, ದ್ವೇಷ, ಹಿಂಸೆ, ಕಾನೂನು, ಗುಂಪು ದಾಳಿ ಇವೆಲ್ಲ ನೆನಪಿಗೆ ಬರುತ್ತವೆ. ಆದರೆ ವಲವಾರ ಚಿತ್ರ ಗೋವನ್ನ ಮತ್ತೆ ಅದರ ಮೂಲ ಸ್ಥಾನಕ್ಕೆ ತಂದು ನಿಲ್ಲಿಸುತ್ತದೆ: ಅದು ಬದುಕಿನ ಆಧಾರ.&nbsp; ಈ ದೇಶದ ಬಹುಪಾಲು ರೈತರಿಗೆ ಗೋವು ಎಂದರೆ ಅದು ಬೆಳಗಿನ ಹಾಲು, ಮಕ್ಕಳ ಶಾಲಾ ಫೀಸ್, ಔಷಧಿ ಖರ್ಚು, ಬದುಕಿನ ನಾಳೆ. ಹಾಗಾಗಿ, ಹಸುವಿನ ಮೇಲಿನ ಪ್ರೀತಿ ಇನ್ನೊಬ್ಬರ ಮೇಲೆ ದ್ವೇಷವನ್ನು ಹುಟ್ಟಿಸಬೇಕಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸಿನಿಮಾ ನೀಡುತ್ತದೆ.</p>



<p>ವಲವಾರದಲ್ಲಿ ಗೋವು ಕಳೆದು ಹೋಗುವ ಘಟನೆಯೇ ದೊಡ್ಡ ದುರಂತವಲ್ಲ; ಅದರಿಂದ ಹುಟ್ಟುವ ಅಸ್ಥಿರತೆಯೇ ನಿಜವಾದ ದುರಂತ. ಒಂದು ಹಸು ಕಳೆದು ಹೋದರೆ, ಒಂದು ಕುಟುಂಬದ ಭವಿಷ್ಯವೇ ಅಲುಗಾಡುತ್ತದೆ ಎಂಬ ಸತ್ಯವನ್ನು ಚಿತ್ರ ಬಹಳ ಸೌಮ್ಯವಾಗಿ ಆದರೆ ತೀವ್ರವಾಗಿ ಹೇಳುತ್ತದೆ. ಈ ಸೌಮ್ಯತೆಯಲ್ಲೇ ಅದರ ರಾಜಕೀಯ ತೀಕ್ಷ್ಣತೆ ಅಡಗಿದೆ.</p>



<p>ಇಂದಿನ ಕಾಲದ ಅತಿರೇಕ, ಹೀರೋಯಿಸಂ, ಡೈಲಾಗ್‌ ಗಳು, ಅಬ್ಬರದ ಹಿನ್ನಲೆ ಸಂಗೀತಗಳ ನಡುವೆ ವಲವಾರ ಒಂದು ಧೈರ್ಯದ ಪ್ರಯತ್ನ. ಇದು ಮಕ್ಕಳನ್ನು ಹೀರೋಗಳಾಗಿಸುವ ಮೂಲಕ, ಹಳ್ಳಿಯ ಬದುಕನ್ನು ಕೇಂದ್ರವಾಗಿಟ್ಟುಕೊಂಡು, ಸಿನೇಮಾ ಇನ್ನೂ ಮಾನವೀಯವಾಗಿರಬಹುದು ಎಂದು ನೆನಪಿಸುತ್ತದೆ. ಅಸ್ತಿತ್ವವೇ ಹಸುವಾಗುವ ಕ್ಷಣದಲ್ಲಿ, ಮನುಷ್ಯನ ಅಸಹಾಯಕತೆಯೂ, ಪ್ರೀತಿಯೂ, ರಾಜಕೀಯವೂ ಒಟ್ಟಾಗಿ ಕಾಣಿಸಿಕೊಳ್ಳುತ್ತವೆ. ಎಲ್ಲರೂ ನೋಡಿ ಅನುಭವಿಸಲೇಬೇಕಾದ ಉತ್ತಮ ಚಿತ್ರ ವಲವಾರ!</p>
]]></content:encoded>
					
		
		
			</item>
		<item>
		<title>ವಿವಾದದ ಗಾಂಧಿ ಜಾಹೀರಾತು: ಇದು ಯಾರ ಶ್ರದ್ಧಾಂಜಲಿ?</title>
		<link>https://peepalmedia.com/controversial-gandhi-ad-whose-tribute-is-this/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 06 Feb 2026 13:47:08 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://peepalmedia.com/?p=73733</guid>

					<description><![CDATA[&#8220;..ಇಡೀ ಜಗತ್ತು ಗಾಂಧಿಯನ್ನು ಅಹಿಂಸಾ ಮೂರ್ತಿಯಾಗಿ ಕೊಂಡಾಡುತ್ತದೆ, ಗೌರವಿಸುತ್ತದೆ. ಆದರೆ ಆ ಜಗತ್ತಿನಲ್ಲಿ ಸಂಘ ಪರಿವಾರ ಮತ್ತು ಬಿಜೆಪಿಗಳು ಇಲ್ಲ. ಅವರದು ಬೇರೆಯದೇ ಜಗತ್ತು. ಅವರ ಆ ಜಗತ್ತಿನಲ್ಲಿ ಹಿಂಸೆ, ದ್ವೇಷ, ಜೀವವಿರೋಧಿ ಚಿಂತನೆಗಳದ್ದೇ ಪಾರಮ್ಯ..&#8221; ಮಾಚಯ್ಯ ಎಂ ಹಿಪ್ಪರಿಗಿಯವರ ಬರಹದಲ್ಲಿ ಒಮ್ಮೆ ಗಾಂಧಿ ತಮ್ಮ ಸಬರಮತಿ ಆಶ್ರಮದಲ್ಲಿ ಒಡನಾಡಿಗಳ ಜೊತೆ ಚರ್ಚೆಯಲ್ಲಿ ತಲ್ಲೀನರಾಗಿದ್ದರು. ಆಗ ಇದ್ದಕ್ಕಿದ್ದಂತೆ ಒಂದು ಚೇಳು ಅವರತ್ತ ಹರಿದುಬರಲು ಆರಂಭಿಸಿತು. ಗಾಬರಿಯಾದ ಸಹಚರರು, ಗಲಾಟೆಯೆಬ್ಬಿಸುತ್ತಾ, ಅದನ್ನು ಕೊಲ್ಲಲು ಮುಂದಾದರು. ಆ ಗಲಭೆಯ ನಡುವೆಯೂ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>&#8220;..ಇಡೀ ಜಗತ್ತು ಗಾಂಧಿಯನ್ನು ಅಹಿಂಸಾ ಮೂರ್ತಿಯಾಗಿ ಕೊಂಡಾಡುತ್ತದೆ, ಗೌರವಿಸುತ್ತದೆ. ಆದರೆ ಆ ಜಗತ್ತಿನಲ್ಲಿ ಸಂಘ ಪರಿವಾರ ಮತ್ತು ಬಿಜೆಪಿಗಳು ಇಲ್ಲ. ಅವರದು ಬೇರೆಯದೇ ಜಗತ್ತು. ಅವರ ಆ ಜಗತ್ತಿನಲ್ಲಿ ಹಿಂಸೆ, ದ್ವೇಷ, ಜೀವವಿರೋಧಿ ಚಿಂತನೆಗಳದ್ದೇ ಪಾರಮ್ಯ..&#8221; ಮಾಚಯ್ಯ ಎಂ ಹಿಪ್ಪರಿಗಿಯವರ ಬರಹದಲ್ಲಿ</p>
</blockquote>



<p>ಒಮ್ಮೆ ಗಾಂಧಿ ತಮ್ಮ ಸಬರಮತಿ ಆಶ್ರಮದಲ್ಲಿ ಒಡನಾಡಿಗಳ ಜೊತೆ ಚರ್ಚೆಯಲ್ಲಿ ತಲ್ಲೀನರಾಗಿದ್ದರು. ಆಗ ಇದ್ದಕ್ಕಿದ್ದಂತೆ ಒಂದು ಚೇಳು ಅವರತ್ತ ಹರಿದುಬರಲು ಆರಂಭಿಸಿತು. ಗಾಬರಿಯಾದ ಸಹಚರರು, ಗಲಾಟೆಯೆಬ್ಬಿಸುತ್ತಾ, ಅದನ್ನು ಕೊಲ್ಲಲು ಮುಂದಾದರು. ಆ ಗಲಭೆಯ ನಡುವೆಯೂ ಶಾಂತಮೂರ್ತಿಯಾಗಿದ್ದ ಗಾಂಧಿ ಕೈಸನ್ನೆಯಲ್ಲೆ ಅವರನ್ನು ತಡೆದು ನಿಲ್ಲಿಸಿದರು. ಪಕ್ಕದಲ್ಲಿದ್ದ ಕಾಗದದ ರೊಟ್ಟಿನ ಚೂರೊಂದನ್ನು ಕೈಗೆತ್ತಿಕೊಂಡು ಚೇಳಿಗೆ ಅಡ್ಡನಾಗಿ ಹಿಡಿದರು. ಚೇಳು ಅದರ ಮೇಲೆ ಏರಿತು. ಚೂರಿನ ಸಮೇತ ಅದನ್ನು ಹೊರೆಗೆಸೆದು ಬರುವಂತೆ ತಮ್ಮ ಸಹಚರನೊಬ್ಬನ ಕೈಗೆ ಕೊಟ್ಟರು.</p>



<p>ಆಗ ಅಲ್ಲಿದ್ದವರು ಕೇಳುತ್ತಾರೆ, “ಬಾಪೂ, ಆ ಚೇಳು ನಿಮಗೆ ಕಚ್ಚಿದ್ದರೆ ಏನು ಮಾಡುತ್ತಿದ್ದಿರಿ? ನೀವೇಕೆ ಅಷ್ಟು ಅಪಾಯವನ್ನು ಮೇಲೆಳೆದುಕೊಂಡಿರಿ? ಅದನ್ನು ಹೊಡೆದು ಕೊಲ್ಲಬಹುದಿತ್ತಲ್ಲವೇ?”</p>



<p>ಗಾಂಧಿ ಉತ್ತರಿಸುತ್ತಾರೆ, “ಆ ಚೇಳಿಗೆ ನನ್ನ ಮೇಲೆ ದ್ವೇಷ ಸಾಧಿಸುವಂತದ್ದೇನಿದೆ? ಅದಕ್ಕೆ ತಿಳಿದಿರುವ ಭಾಷೆ ಒಂದೇ, ಆತ್ಮರಕ್ಷಣೆಗೆ ಆಕ್ರಮಣಶೀಲನಾಗುವುದು. ಅದರ ಪ್ರಾಣಕ್ಕೆ ಅಪಾಯವಿಲ್ಲದಿದ್ದರೆ, ಅದು ಕೂಡಾ ಯಾರನ್ನೂ ಕುಟುಕಲಾರದು. ಹಾಗಿರುವಾಗ ವಿನಾ ಕಾರಣ ನಮ್ಮ ಭಯದಿಂದಾಗಿ ಯಾಕೆ ಅದನ್ನು ಕೊಲ್ಲಬೇಕು?”</p>



<p>ಈ ಘಟನೆ ಮಹಾತ್ಮ ಗಾಂಧಿಯವರ ಸೋದರ ಸಂಬಂಧಿ ಮೊಮ್ಮಗನಾದ ಪ್ರಭುದಾಸ್‌ ಗಾಂಧಿಯವರ My Childhood with Gandhiji ಕೃತಿಯಲ್ಲಿ ಉಲ್ಲೇಖವಾಗಿದೆ. ಗಾಂಧಿಯವರ ಆತ್ಮೀಯರಾಗಿದ್ದ ಮಹಾದೇವ ದೇಸಾಯಿಯವರ ಮಗ ನಾರಾಯಣ ದೇಸಾಯಿ (ಗಾಂಧಿಯವರ ತೊಡೆ ಮೇಲೆ ಆಡಿ ಬೆಳೆದ ಬಾಲಕ) ಅವರು ತಮ್ಮ ಅನುಭವದ Maru Jeevan Ej Mari Vani (The Fire and the Rose) ಕೃತಿಯಲ್ಲೂ ಈ ಘಟನೆಯನ್ನು ಉಲ್ಲೇಖಿಸಿದ್ದಾರೆ.</p>



<p>ಗಾಂಧಿಯವರ ಅಹಿಂಸಾ ತತ್ವ, ನ್ಯಾಯಬದ್ಧತೆ, ಹೋರಾಟದ ಮಾರ್ಗಗಳಿಗೆ ಮಾರುಹೋಗಿ ಇಂಗ್ಲೆಂಡ್‌ ನೆಲವನ್ನು ತೊರೆದು ಸಬರಮತಿ ಆಶ್ರಮದಲ್ಲಿ ಗಾಂಧಿ ಹೋರಾಟದ ಒಡನಾಡಿಯಾಗಿ ಗುರುತಿಸಿಕೊಂಡಿದ್ದವರು ಮೆಡಲೀನ್‌ ಸ್ಲೇಡ್‌. ಗಾಂಧಿ ಇವರಿಗೆ ಮೀರಾ ಬೆಹನ್‌ ಎಂದು ಮರುನಾಮಕರಣ ಮಾಡಿದ್ದರು. ಅವರು ಕೂಡಾ ತಮ್ಮ ಒಂದು ಕೃತಿಯಲ್ಲಿ ಇಂತದ್ದೇ ಇನ್ನೊಂದು ಪ್ರಸಂಗವನ್ನು ಸ್ಮರಿಸಿದ್ದಾರೆ. ಒಮ್ಮೆ, ಒಂದು ಹಾವು ಆಶ್ರಮವನ್ನು ಪ್ರವೇಶಿಸಿರುತ್ತದೆ. ಆಗ ಹಾವು ಹಿಡಿಯುವವರನ್ನು ಕರೆಸಲಾಗುತ್ತೆ. ಆ ಹಾವಾಡಿಗನನ್ನು ಕರೆದು ಗಾಂಧಿ ನೀಡುವ ಒಂದು ನಿರ್ದೇಶನ ನೀಡುತ್ತಾರೆ, “ಯಾವುದೇ ಕಾರಣಕ್ಕೂ ಹಾವಿಗೆ, ಅದರ ಪ್ರಾಣಕ್ಕೆ ಅಪಾಯವಾಗದಂತೆ ಜೋಪಾನವಾಗಿ ಅದನ್ನು ಹಿಡಿದು ಹೊರಬಿಡಬೇಕು!”.</p>



<p>ಇಂತಹ ಬಿಡಿಬಿಡಿ ಘಟನೆಗಳಿಂದ ನಮಗೆ ಒಂದು ಸಂಗತಿ ಅರ್ಥವಾಗುತ್ತೆ, ಮಹಾತ್ಮನಿಗೆ ಅಹಿಂಸೆ ಎನ್ನುವುದು ಕೇವಲ ಬ್ರಿಟಿಷರ ವಿರುದ್ಧ ಹೋರಾಡುವ ಒಂದು ರಾಜಕೀಯ ಮಾರ್ಗವಾಗಿರಲಿಲ್ಲ; ಅವರ ಬದುಕಿನ ಆಧ್ಯಾತ್ಮವಾಗಿತ್ತು. ಹಾಗಾಗಿಯೇ, ಬಂಗಾಳದ ನೌಖಾಲಿಯಲ್ಲಿ ಕೋಮುಜ್ವಾಲೆ ಉಲ್ಬಣಿಸಿ ರಕ್ತದ ಕೋಡಿ ಹರಿಯುತ್ತಿದ್ದಾಗ, ಆ ಮುದಿಜೀವ ಯಾರ ಹಂಗೂ ಇಲ್ಲದೆ ಏಕಾಂಗಿಯಾಗಿ ಆ ನೆಲದಲ್ಲಿ ಸಂಚರಿಸಿ, ಶಾಂತಿ ಮೂಡಿಸಲು ಸಾಧ್ಯವಾಯ್ತು. ಆ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ನೌಖಾಲಿಗೆ ಹೋಗದಂತೆ ನೆಹರೂ, ಸರ್ದಾರರು ಗಾಂಧಿಗೆ ಎಷ್ಟು ದಂಬಾಲು ಬಿದ್ದರೂ ಕಿವಿಗೊಡದೆ ಆ ಬೆಂಕಿಯ ಜ್ವಾಲೆಗಳ ನಡುವೆ ಸಂಚರಿಸಿ ತಣ್ಣಗಾಗಿಸಿದರು. ಅಹಿಂಸೆಯ ಮೇಲೆ ಗಾಂಧಿಗಿದ್ದ ಅಚಲ ನಂಬಿಕೆ, ವ್ರತನಿಷ್ಠೆ ಇಂತದ್ದು.</p>



<p>ಹಣ, ಖ್ಯಾತಿ, ಅಧಿಕಾರ ಎಲ್ಲರಿಗೂ ಮುಖ್ಯ. ಹಾಗಂತ ನಾವಂದುಕೊಂಡಿದ್ದೇವೆ. ಅದಕ್ಕಿಂತಲೂ ಮುಖ್ಯವಾದುದು ಯಾವುದು? ನಮ್ಮ ಪ್ರಾಣ! ಅದೇ ಇಲ್ಲದೆ ಹೋದರೆ ಮಿಕ್ಕೆಲ್ಲವೂ ಇದ್ದು ಏನು ಪ್ರಯೋಜನ. ಆದರೆ ಒಬ್ಬ ವ್ಯಕ್ತಿ ಆ ಪ್ರಾಣದ ಹಂಗನ್ನೂ ತೊರೆದು ಬದುಕುತ್ತಾನೆಂದರೆ, ಆತನಿಗೆ ಅದಕ್ಕಿಂತಲೂ ಮುಖ್ಯವಾದುದು ಮತ್ತೇನೋ ಇದೆ ಎಂದರ್ಥ. ಗಾಂಧಿಯ ವಿಚಾರದಲ್ಲಿ ಆ ಮತ್ತೊಂದು ಎನ್ನುವ ಸಂಗತಿ `ಅಹಿಂಸೆ’ಯೇ ಆಗಿತ್ತು. ಹಾಗಾಗಿ ಆರು ಬಾರಿ ತನ್ನ ಹತ್ಯೆಗೆ ಯತ್ನ ನಡೆದರೂ ಆ ಮನುಷ್ಯ, ತಲೆಕೆಡಿಸಿಕೊಳ್ಳದೆ ಗೋಡ್ಸೆಗೆ ಇನ್ನೊಂದು ಅವಕಾಶ ಕೊಟ್ಟರು! ಹೋಗುವ ಪ್ರಾಣಕ್ಕಿಂತ ನೆಲೆಗೊಳ್ಳಬೇಕಿರುವ ಅಹಿಂಸೆ ಗಾಂಧಿಗೆ ಮುಖ್ಯವಾಗಿತ್ತು.</p>



<p>ಈ ಕಾರಣದಿಂದಲೇ ಇಡೀ ಜಗತ್ತು ಗಾಂಧಿಯನ್ನು ಅಹಿಂಸಾ ಮೂರ್ತಿಯಾಗಿ ಕೊಂಡಾಡುತ್ತದೆ, ಗೌರವಿಸುತ್ತದೆ. ಆದರೆ ಆ ಜಗತ್ತಿನಲ್ಲಿ ಸಂಘ ಪರಿವಾರ ಮತ್ತು ಬಿಜೆಪಿಗಳು ಇಲ್ಲ. ಅವರದು ಬೇರೆಯದೇ ಜಗತ್ತು. ಅವರ ಆ ಜಗತ್ತಿನಲ್ಲಿ ಹಿಂಸೆ, ದ್ವೇಷ, ಜೀವವಿರೋಧಿ ಚಿಂತನೆಗಳದ್ದೇ ಪಾರಮ್ಯ. ಅಂತಹ ದುಷ್ಟ ಜಗತ್ತಿಗೆ ಈಗ ನಮ್ಮ ಘನತೆವೆತ್ತ ಪತ್ರಿಕೆಗಳೂ ಪ್ರವೇಶ ಪಡೆದಿವೆ. ಇವತ್ತು ಕೆಲವು ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ಕೀಳು ಅಭಿರುಚಿಯ ಜಾಹೀರಾತು ಅದನ್ನು ಪ್ರಕಟಿಸಿರುವ ಬಿಜೆಪಿಯ ನೀಚತನವನ್ನು ಮಾತ್ರವಲ್ಲ, ವ್ಯಾಪಾರೋದ್ಯಮದ ಹೆಸರಿನಲ್ಲಿ ಅದನ್ನು ಮುದ್ರಿಸಿರುವ ಪತ್ರಿಕೆಗಳ ಅಂತರ್ಮುಖಿ ನೀಚತನವನ್ನೂ ಬಯಲು ಮಾಡಿದೆ.</p>



<p>ರಾಜಕಾರಣ ಏನೇ ಇರಲಿ, ರಾಜಕೀಯ ಪ್ರತಿಸ್ಪರ್ಧಿಗಳ ಮೇಲೆ ಕೆಸರೆರಚಾಟ ಎಂತದ್ದೇ ಇರಲಿ, ಅದಕ್ಕಾಗಿ ಮಹಾತ್ಮನನ್ನು ಆತನ ಜೀವನದ ಮೌಲ್ಯದಿಂದಲೇ ದೂರ ಮಾಡಿ, ಹಿಂಸಾರೂಪಿಯಾಗಿ ಚಿತ್ರಿಸುವುದು ಕೇವಲ ಕೀಳು ಅಭಿರುಚಿಯಲ್ಲ, ನಿಜವಾದ ದೇಶದ್ರೋಹ! ಗಾಂಧಿ ತಮ್ಮ ಕೈಯಲ್ಲಿರುವ ಕೋಲನ್ನು ಸದಾ ಆಸರೆಯಾಗಿ, ಊರುಗೋಲಾಗಿ ಬಳಸುತ್ತಾ ಬಂದವರು. ಆ `ಆಸರೆ’ಯ ಸಂಕೇತವನ್ನು ‘ಹಿಂಸೆ’ಯ ಸಂಕೇತವಾಗಿ ಚಿತ್ರಿಸಲಾಗಿದೆ. ಇದನ್ನು ನೀವು ಜಾಹೀರಾತೆಂದು ಪ್ರಕಟಿಸುತ್ತೀರೆಂದರೆ, ಅದಕ್ಕಾಗಿ ವ್ಯಾಪಾರೋದ್ಯಮವನ್ನು ಸಮರ್ಥನೆಯನ್ನಾಗಿ ಬಳಸಿಕೊಳ್ಳುತ್ತೀರಿಂದರೆ ಅದಕ್ಕಿಂತ ನೈತಿಕ ಅಧಃಪತನ ಮತ್ತೊಂದಿರಲಿಕ್ಕಿಲ್ಲ.</p>



<p>ಗ್ರಾಮೀಣ ಜನರ ಭದ್ರತೆಗೆ ಅಪಾಯವಾಗುವಂತೆ ಉದ್ಯೋಗ ಖಾತ್ರಿಗೆ ತಿದ್ದುಪಡಿ ತಂದು, ಗಾಂಧಿಯ ಹೆಸರನ್ನೂ ಯೋಜನೆಯಿಂದ ಕೈಬಿಟ್ಟ ಕೇಂದ್ರ ಸರ್ಕಾರದ ವಿರುದ್ಧ ಕೆಲ ದಿನಗಳ ಹಿಂದೆ ರಾಜ್ಯ ಸರ್ಕಾರ ಪ್ರಕಟಿಸಿದ್ದ ಜಾಹೀರಾತಿಗೆ ಪ್ರತಿಯಾಗಿ ಬಿಜೆಪಿ ಇದನ್ನು ಪ್ರಕಟಿಸಿದೆ ಎಂದು ಕೆಲವರು ವಾದಿಸುತ್ತಾರೆ. ಇವೆರಡೂ ಜಾಹೀರಾತುಗಳನ್ನು ಪರಸ್ಪರ ತುಲನೆ ಮಾಡಿ ನೋಡಿದರೆ, ಆ ಎರಡೂ ಸಿದ್ದಾಂತಗಳ ನಡುವಿನ ವ್ಯತ್ಯಾಸ ನಮಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ರಾಜ್ಯ ಸರ್ಕಾರ ನೀಡಿದ್ದ ಜಾಹೀರಾತಿನಲ್ಲಿ ಮಹಾತ್ಮ ಗಾಂಧಿ ಒಬ್ಬ ವ್ಯಕ್ತಿಯ ಜೊತೆ ಸಂವಾದಿಸುತ್ತಿರುವ ಸರಣಿ ಚಿತ್ರ ರೂಪಣೆಗಳಿದ್ದವು. ಬಿಜೆಪಿ ಪ್ರಕಟಿಸಿರುವ ಜಾಹೀರಾತಿನಲ್ಲಿ ಮಹಾತ್ಮ ಗಾಂಧಿ ತನ್ನ ದೊಣ್ಣೆಯೆತ್ತಿ ಸಿದ್ದರಾಮಯ್ಯ, ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ರೂಪವನ್ನು ಹೋಲುವವರಿಗೆ ಹೊಡೆಯುತ್ತಿರುವಂತೆ ಚಿತ್ರಿಸಲಾಗಿದೆ. ರಾಜ್ಯ ಸರ್ಕಾರದ ಜಾಹೀರಾತಿನಲ್ಲಿ ತನ್ನ ವಿರೋಧಿಯ ಜೊತೆಗೂ ಸಂವಾದ ನಡೆಸುವ ವಿಶಾಲತೆ ನಮಗೆ ಗೋಚರವಾಗುತ್ತದೆ. ಆ ಸಂವಾದವೇ ನಿಜವಾದ ಗಾಂಧಿತತ್ವ. ಇನ್ನು ಬಿಜೆಪಿ ನೀಡಿರುವ ಜಾಹೀರಾತಿನಲ್ಲಿ ಮಹಾತ್ಮ ಗಾಂಧಿ ತಮ್ಮ ತತ್ವಸಿದ್ದಾಂತಿಗಳ ಮೇಲೆಯೇ ಹಲ್ಲೆ ಮಾಡುತ್ತಿದ್ದಾರೆ. ಇಲ್ಲಿ ಹಿಂಸೆ ವಿಜೃಂಭಿಸುತ್ತಿದೆ. ಸಂವಾದಕ್ಕೆ ಆಸ್ಪದವಿಲ್ಲ. ಇದು ನಿಜವಾದ ಗೋಡ್ಸೆವಾದ!</p>



<p>ಬಿಜೆಪಿಯವರು ಈ ಬಗೆಯ ಜಾಹೀರಾತು ನೀಡಿರುವುದರಲ್ಲಿ ಅಚ್ಚರಿಯಿಲ್ಲ. ಯಾಕೆಂದರೆ ಅವರ ಆಲೋಚನೆಯೆ ಹಿಂಸೆಯಿಂದ ಆವೃತವಾದುದು; ಗಾಂಧಿಯ ತತ್ವವನ್ನು ವಿರೋಧಿಸುವಂತದ್ದು. ಆದರೆ ಅದನ್ನು ಪ್ರಕಟಿಸಿದ ಪತ್ರಿಕೆಗಳ ಸೂಕ್ಷ್ಮತೆಗೆ ಏನಾಯ್ತು? ಕೇವಲ ಹಣದಾಸೆಗೆ ಪತ್ರಿಕೆಗಳು ಈ ಮಟ್ಟಕ್ಕೆ ಇಳಿದಿವೆ ಎನ್ನುವುದು ಸುಳ್ಳು. ಅವುಗಳು ಸಹಾ ಕೋಮುವಾದಿ ಮನಸ್ಥಿತಿಯ ಕುಲುಮೆಗಳಾಗಿ ರೂಪಾಂತರವಾಗಿವೆ. ಬಹುತ್ವದ ಜೀವಂತಿಕೆಯನ್ನು ಕಳೆದುಕೊಂಡಿವೆ. ಅದು ಈ ಜಾಹೀರಾತಿನಲ್ಲಿ ಜಗಜ್ಜಾಹೀರಾಗಿದೆ. ನಿಜ ಹೇಳಬೇಕೆಂದರೆ, ಅದು ಗಾಂಧಿಯನ್ನು ವಿರೂಪಗೊಳಿಸುವ, ಹಿಂಸೆಯನ್ನು ವಿಜೃಂಭಿಸುವ ಅಥವಾ ರಾಜಕೀಯ ಲೇವಡಿ ಮಾಡುವ ಜಾಹೀರಾತಲ್ಲ; ಪತ್ರಿಕೆಗಳು ತಮಗೆ ತಾವೇ ಪ್ರಕಟಿಸಿಕೊಂಡ ಶ್ರದ್ದಾಂಜಲಿ ಜಾಹೀರಾತು!</p>
]]></content:encoded>
					
		
		
			</item>
		<item>
		<title>ಬೊಗಸೆಗೆ ದಕ್ಕಿದ್ದು-69 : ನ್ಯಾಯಾಂಗದಲ್ಲಿ ಮನುಸ್ಮೃತಿಗೆ ಏನು ಕೆಲಸ?</title>
		<link>https://peepalmedia.com/what-is-the-role-of-manusmriti-in-the-judiciary/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 04 Feb 2026 06:05:55 +0000</pubDate>
				<category><![CDATA[ಅಂಕಣ]]></category>
		<category><![CDATA[ಕೋರ್ಟು - ಕಾನೂನು]]></category>
		<guid isPermaLink="false">https://peepalmedia.com/?p=73589</guid>

					<description><![CDATA[&#8220;..ಸುಪ್ರೀಂ ಕೋರ್ಟ್ ಈ ಹಿಂದೆಯೇ ಸ್ಪಷ್ಟವಾಗಿ ಹೇಳಿದೆ, ತೀರ್ಪು ಎಂಬುದು ಒಂದು ಪ್ರಬಂಧವಲ್ಲ, ಸಾಹಿತ್ಯದ ಭಾಗವಲ್ಲ ಅಥವಾ ಧರ್ಮೋಪದೇಶಕ್ಕೆ ವೇದಿಕೆಯಲ್ಲ ಎಂದು..&#8221; ನಿಖಿಲ್ ಕೋಲ್ಪೆಯವರ ಬರಹದಲ್ಲಿ ನ್ಯಾಯದ “ದೇವಾಲಯ”ದಲ್ಲಿ- ಮುಖ್ಯವಾದ ಮತ್ತು ಏಕೈಕ &#8220;ಧರ್ಮಗ್ರಂಥ&#8221; ಎಂದರೆ ಭಾರತದ ಸಂವಿಧಾನ ಮಾತ್ರ. ನಮ್ಮ ಪ್ರಜಾಪ್ರಭುತ್ವ ಉಳಿಯಬೇಕಾದರೆ ಇದು ಪ್ರಶ್ನಾತೀತವಾಗಿ ಉಳಿಯಬೇಕಾದರೂ, ಬಲಪಂಥೀಯ ರಾಜಕೀಯ ಶಕ್ತಿಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಇದನ್ನು ಪ್ರಶ್ನಿಸುತ್ತಿರುವ ಇತ್ತೀಚಿನ ದಿನಗಳಲ್ಲಿ- ನ್ಯಾಯಾಂಗದ ಕೆಲವು ಅವಲೋಕನಗಳು ಮತ್ತು ಘೋಷಣೆಗಳು&#160; (observations and pronouncements) ಅದಕ್ಕಿಂತಲೂ ಆತಂಕಕಾರಿಯಾದ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>&#8220;..ಸುಪ್ರೀಂ ಕೋರ್ಟ್ ಈ ಹಿಂದೆಯೇ ಸ್ಪಷ್ಟವಾಗಿ ಹೇಳಿದೆ, ತೀರ್ಪು ಎಂಬುದು ಒಂದು ಪ್ರಬಂಧವಲ್ಲ, ಸಾಹಿತ್ಯದ ಭಾಗವಲ್ಲ ಅಥವಾ ಧರ್ಮೋಪದೇಶಕ್ಕೆ ವೇದಿಕೆಯಲ್ಲ ಎಂದು..&#8221; ನಿಖಿಲ್ ಕೋಲ್ಪೆಯವರ ಬರಹದಲ್ಲಿ</p>
</blockquote>



<p>ನ್ಯಾಯದ “ದೇವಾಲಯ”ದಲ್ಲಿ- ಮುಖ್ಯವಾದ ಮತ್ತು ಏಕೈಕ &#8220;ಧರ್ಮಗ್ರಂಥ&#8221; ಎಂದರೆ ಭಾರತದ ಸಂವಿಧಾನ ಮಾತ್ರ. ನಮ್ಮ ಪ್ರಜಾಪ್ರಭುತ್ವ ಉಳಿಯಬೇಕಾದರೆ ಇದು ಪ್ರಶ್ನಾತೀತವಾಗಿ ಉಳಿಯಬೇಕಾದರೂ, ಬಲಪಂಥೀಯ ರಾಜಕೀಯ ಶಕ್ತಿಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಇದನ್ನು ಪ್ರಶ್ನಿಸುತ್ತಿರುವ ಇತ್ತೀಚಿನ ದಿನಗಳಲ್ಲಿ- ನ್ಯಾಯಾಂಗದ ಕೆಲವು ಅವಲೋಕನಗಳು ಮತ್ತು ಘೋಷಣೆಗಳು&nbsp; (observations and pronouncements) ಅದಕ್ಕಿಂತಲೂ ಆತಂಕಕಾರಿಯಾದ ಒಂದು ಪ್ರಶ್ನೆಯನ್ನು ಹುಟ್ಟುಹಾಕಿವೆ: ನ್ಯಾಯಾಧೀಶರ ವೈಯಕ್ತಿಕ ನಂಬಿಕೆ ಮತ್ತು ಅವರ ಸಾಂವಿಧಾನಿಕ ಕರ್ತವ್ಯದ ನಡುವಿನ &#8220;ಪ್ರತ್ಯೇಕತೆಯ ಗೋಡೆ&#8221;ಯು ಬಿರುಕು ಬಿಡಲು ಪ್ರಾರಂಭಿಸುತ್ತಿದೆಯೇ? ನ್ಯಾಯಾಧೀಶರು- ಕಾನೂನು ವಿದ್ವಾಂಸರೂ, ತೀರ್ಪುಗಾರರೂ ಆಗುವ ಬದಲು ನೈತಿಕ ಮಠಾಧೀಶರೋ, ಧಾರ್ಮಿಕ ಪ್ರವಚನಕಾರರೋ ಆಗಿಬಿಟ್ಟಾಗ ಅಥವಾ ಸಂವಿಧಾನ, ಕಾಯಿದೆ ಮತ್ತು ಶಾಸನಬದ್ಧ ತರ್ಕಕ್ಕೆ ಬದಲಾಗಿ ಧಾರ್ಮಿಕ ಪಠ್ಯಗಳನ್ನು ಅವಲಂಬಿಸಿದಾಗ ನಮ್ಮ ಜಾತ್ಯತೀತ ಪ್ರಜಾಪ್ರಭುತ್ವದ ಅಡಿಪಾಯವೇ ಅಲುಗಾಡುತ್ತದೆ. ಇದನ್ನು ಭಾರತದ ಸಂವಿಧಾನದ ಚೌಕಟ್ಟಿನಲ್ಲಿ ಬದುಕುತ್ತಿರುವ ನಿಮ್ಮಂತ ಸಾಮಾನ್ಯ ಪ್ರಜೆಯಾದ ನಾನು ಹೇಳುತ್ತಿರುವುದಲ್ಲ. ಸುಪ್ರೀಂ ಕೋರ್ಟ್ ಹಾಗೆ ಹೇಳಿದೆ.</p>



<p><strong>​&#8221;ನ್ಯಾಯಾಂಗದ ಧರ್ಮೋಪದೇಶ&#8221;</strong><br>​ಹಿಂದೆಯೇ ಭಾರತದ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ: ತೀರ್ಪು ಎಂಬುದು ಒಂದು ಪ್ರಬಂಧವಲ್ಲ, ಸಾಹಿತ್ಯದ ಭಾಗವಲ್ಲ ಅಥವಾ ಧರ್ಮೋಪದೇಶಕ್ಕೆ ವೇದಿಕೆಯಲ್ಲ. ಉದಾಹರಣೆಗೆ ಹೇಳಬೇಕೆಂದರೆ, ಆಗಸ್ಟ್ 2024ರಲ್ಲಿ, ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು &#8220;ನ್ಯಾಯಾಧೀಶರು ಪ್ರಕರಣವನ್ನು ನಿರ್ಧರಿಸಬೇಕು ಮತ್ತು ಧರ್ಮೋಪದೇಶ ಮಾಡಬಾರದು&#8221; ಎಂದು ಒತ್ತಿ ಹೇಳಿದ್ದರು, ತೀರ್ಪುಗಳು ವೈಯಕ್ತಿಕ ಅಭಿಪ್ರಾಯಗಳು ಅಥವಾ &#8220;ಅನಗತ್ಯ ಧರ್ಮೋಪದೇಶಗಳನ್ನು&#8221; ಹೊಂದಿರಬಾರದು ಎಂದು ಸೂಚಿಸಿದ್ದರು. ಇಂತಾ ನಿರ್ದೇಶನಗಳ ಹೊರತಾಗಿಯೂ, &#8220;ನ್ಯಾಯಾಂಗ ನೈತಿಕೀಕರಣ&#8221;ದ (judicial moralizing) ಪ್ರವೃತ್ತಿ ಬೆಳೆಯುತ್ತಿರುವುದನ್ನು ನಾವು ನೋಡುತ್ತೇವೆ.</p>



<p>“ಹೆತ್ತವರ ಮಾರ್ಗದರ್ಶನವಿಲ್ಲದೇ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಲು ಯುವತಿಯರಿಗೆ ಪ್ರಬುದ್ಧತೆಯ ಕೊರತೆಯಿದೆ” ಎಂದು ಕರ್ನಾಟಕ ಹೈಕೋರ್ಟ್ ಈ ಹಿಂದೆ- ಸಂವಿಧಾನವು ವಯಸ್ಕರಿಗೆ ನೀಡಿದ ಸಮಾನ ಹಕ್ಕಿಗೆ ವ್ಯತಿರಿಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಿ ತೀರ್ಪು ನೀಡಿದ್ದರಿಂದ ಹಿಡಿದು, ಸಾಂಪ್ರದಾಯಿಕ ನೈತಿಕತೆಯ ಪಾಲಕರಂತೆ ಕಾರ್ಯನಿರ್ವಹಿಸುವ ನ್ಯಾಯಾಧೀಶರವರೆಗೆ, ಕಾನೂನು ಆದೇಶಗಳಲ್ಲಿ ಹುದುಗಿರುವ ಈ &#8220;ಸಲಹೆಯ ಒಕ್ಕಣೆಗಳು&#8221;- ಕಾನೂನು ಮತ್ತು ವೈಯಕ್ತಿಕ ಅಭಿಪ್ರಾಯದ ಪಕ್ಷಪಾತದ ನಡುವಿನ ರೇಖೆಯನ್ನು ಮಸುಕುಗೊಳಿಸುತ್ತವೆ. ಕೆಲವು ನ್ಯಾಯಾಧೀಶರು ಯೂಟ್ಯೂಬ್‌ನಲ್ಲಿ ಪ್ರಖ್ಯಾತರಾಗಿದ್ದು, ತಾವು ಗುರುಗಳು- ಫಿರ್ಯಾದಿಗಳು ಶಿಷ್ಯರು ಎಂಬ ಶೈಲಿಯಲ್ಲಿ ಕಾಲೇಜು ಪ್ರಾಧ್ಯಾಪಕರಂತೆ ಉದ್ದುದ್ದದ ನೈತಿಕ ಪ್ರವಚನವನ್ನು ಮಾಡುತ್ತಾರೆ.</p>



<p><strong>ವಿವಾದಾತ್ಮಕ ಮನುಸ್ಮೃತಿಯ ಪ್ರಕರಣ</strong><br>​ಬಹುಶಃ ನ್ಯಾಯಾಲಯದಲ್ಲಿ ನಡೆದ ಅತ್ಯಂತ ಧ್ರುವೀಕರಣದ ಬೆಳವಣಿಗೆಯೆಂದರೆ, ಮಾನವ ವಿರೋಧಿ&nbsp; ಮನುಸ್ಮೃತಿಯಂತಹ ಪ್ರಾಚೀನ ಗ್ರಂಥಗಳ ಆಯ್ದ ಪಠ್ಯಗಳನ್ನು ಉಲ್ಲೇಖಿಸುವುದು. ಜಾತಿ ಮತ್ತು ಲಿಂಗ ದಬ್ಬಾಳಿಕೆಯ ಸಂಕೇತವಾಗಿ 1927ರಲ್ಲಿ ಡಾ. <a href="http://ಬಿ.ಆರ್">ಬಿ.ಆರ್</a>. ಅಂಬೇಡ್ಕರ್ ಅವರು ಸುಟ್ಟುಹಾಕಿದ ಈ ಪಠ್ಯವು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಸಮಾನತಾ ತತ್ವಗಳ ವಿರುದ್ಧತೆಯನ್ನು ಪ್ರತಿನಿಧಿಸುತ್ತದೆ. ಆದರೂ, ಇತ್ತೀಚೆಗೆ 2026ರ ಆರಂಭದಲ್ಲಿ, ವಿಧವೆ ಸೊಸೆಗೆ ಜೀವನಾಂಶ ನೀಡುವ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್, &#8220;ನೈತಿಕ ಕರ್ತವ್ಯ&#8221;ವನ್ನು ಒತ್ತಿಹೇಳಲು ಮನುಸ್ಮೃತಿಯನ್ನು (ಅಧ್ಯಾಯ 8, ಶ್ಲೋಕ 389) ಉಲ್ಲೇಖಿಸಿತು. ಈ ತೀರ್ಪು ನಿಜಕ್ಕೂ ಪ್ರಗತಿಪರವಾಗಿದ್ದರೂ, ಮನುಸ್ಮೃತಿಯ ಉಲ್ಲೇಖವು ಅನಗತ್ಯವಾಗಿತ್ತು. ಕ್ರೂರವಾದ ಸಾಮಾಜಿಕ ಶ್ರೇಣೀಕರಣದ ಪ್ರತಿಪಾದನೆಗೆ ಇನ್ನೊಂದು ಹೆಸರಾದ ಮನುಸ್ಮೃತಿಯನ್ನು ಉಲ್ಲೇಖಿಸುವ ಮೂಲಕ, ನ್ಯಾಯಾಲಯವು ತನ್ನ ಅಜಾಗರೂಕತೆಯ ಮೂಲಕ- ಭಾರತೀಯ ಗಣರಾಜ್ಯವನ್ನು ಕೆಡವಲೆಂದೇ ರೂಪಿಸಲಾಗಿರುವ “ಧಾರ್ಮಿಕ” ಚಿಂತನೆ ಮತ್ತು ವಾದಗಳಿಗೆ ಕಾನೂನುಬದ್ಧತೆಯನ್ನು ನೀಡಿದಂತಾಗಿದೆ ಎಂದು ವಿಮರ್ಶಕರು ವಾದಿಸುತ್ತಾರೆ. ಇಲ್ಲಿ ಉತ್ತರ ಬಯಸುವ ಪ್ರಶ್ನೆ ಸರಳ: ಭಾರತದ ಸಂವಿಧಾನ ಜಾತ್ಯತೀತ ಮತ್ತು ಧರ್ಮ ನಿರಪೇಕ್ಷ. ಅಲ್ಲಿ ಯಾವುದೇ ಧರ್ಮಗಳಿಗೆ ಪ್ರಭುತ್ವದ ಆಶ್ರಯವಿಲ್ಲ. ಅದು ಸಂವಿಧಾನದ ರಕ್ಷಕನಾದ ನ್ಯಾಯಾಂಗಕ್ಕೂ ಅನ್ವಯಿಸುತ್ತದೆ. ಹೀಗಿರುವಾಗ ನ್ಯಾಯಾಧೀಶರು ಸಂವಿಧಾನಕ್ಕೆ ತದ್ವಿರುದ್ಧವಾದ ಕೊಳಕು ಮನಸ್ಸಿನ ಮನುಸ್ಮೃತಿಯನ್ನು ಯಾಕೆ ಉಲ್ಲೇಖಿಸಬೇಕಿತ್ತು? ಸಂವಿಧಾನದ, ಕಾನೂನಿನ ಆಧಾರದಲ್ಲಿಯೇ ತೀರ್ಪು ನೀಡಬಹುದಿತ್ತಲ್ಲವೆ? ಅದುವೇ ಸಾಕಾಗುತ್ತಿರಲಿಲ್ಲವೆ? ನ್ಯಾಯಾಧೀಶರು ಮನುಸ್ಮೃತಿಯ ದಮನಕಾರಿ ಅಂಶಗಳನ್ನೂ ಒಪ್ಪುತ್ತಾರೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಲು ನ್ಯಾಯಾಲಯವೇ ಅವಕಾಶ ಮಾಡಿಕೊಟ್ಟಂತಾಗುವುದಿಲ್ಲವೆ?</p>



<p>ಇದಕ್ಕೆ ಉದಾಹರಣೆ ಎಂದರೆ, ದಿಲ್ಲಿ ಹೈಕೋರ್ಟ್ ನ್ಯಾಯಾಧೀಶೆ ಪ್ರತಿಭಾ ಎಂ. ಸಿಂಗ್ ಅವರು ಮನುಸ್ಮೃತಿಯು ಮಹಿಳೆಯರಿಗೆ ಗೌರವಾರ್ಹ ಸ್ಥಾನವನ್ನು ನೀಡಿದೆ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿ ವ್ಯಾಪಕವಾಗಿ ಟೀಕೆಗೆ ಗುರಿಯಾಗಿದ್ದರು. ಯಾಕೆಂದರೆ, ಮನುಸ್ಮೃತಿಯು ಮಹಿಳೆಯರ ಕೀಳುಮಟ್ಟದ ಶೋಷಣೆಯನ್ನು ಪ್ರತಿಪಾದಿಸಿದೆ ಎಂಬ ಸತ್ಯಕ್ಕೆ ಇದು ತದ್ವಿರುದ್ಧವಾಗಿತ್ತು.</p>



<p>​<strong>ಸೈದ್ಧಾಂತಿಕ ಒಳನುಸುಳುವಿಕೆಯ ನೆರಳು</strong><br>​ನ್ಯಾಯಾಧೀಶರು ನಿರ್ದಿಷ್ಟ ಸಿದ್ಧಾಂತಗಳೊಂದಿಗೆ ಸಾರ್ವಜನಿಕವಾಗಿ ತಮ್ಮನ್ನು ತಾವು ಗುರುತಿಸಿಕೊಂಡಾಗ, ನ್ಯಾಯಾಂಗದ ಸ್ವಾತಂತ್ರ್ಯವನ್ನು ಮತ್ತಷ್ಟು ಸಂಶಯದಿಂದ ನೋಡುವಂತಾಗುತ್ತದೆ.&nbsp; ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶ <a href="http://ಜಿ.ಆರ್.ಸ್ವಾಮಿನಾಥನ್">ಜಿ.ಆರ್.ಸ್ವಾಮಿನಾಥನ್</a> ಅವರು ಇಂತಹ ವಿವಾದಗಳಿಗೆ “ಹೆಸರುವಾಸಿ” ಆಗುತ್ತಿದ್ದಾರೆ. &#8220;ತನ್ನ ಸೇವೆಗೆ ಸನಾತನ ಧರ್ಮ ಮಾರ್ಗದರ್ಶನ ನೀಡುತ್ತದೆ&#8221; ಮತ್ತು “ಡಿಎಂಕೆ “ನೂರು” ವರ್ಷಗಳಿಂದ ಸನಾತನವನ್ನು ಟೀಕಿಸುವುದನ್ನು ಚಾಳಿ ಮಾಡಿಕೊಂಡಿದೆ” ಎಂಬಂತ ಹೇಳಿಕೆಗಳನ್ನು ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. (ಪೆರಿಯಾರ್ ದ್ರಾವಿಡ ಕಳಗಂ ಸ್ಥಾಪನೆ ಮಾಡಿದ್ದು 1938ರಲ್ಲಿ ಅಣ್ಣಾದುರೈ ಡಿಎಂಕೆ ಸ್ಥಾಪನೆ ಮಾಡಿದ್ದು 1949ರಲ್ಲಿ!). ಇಲ್ಲಿ ಈ ನ್ಯಾಯಾಧೀಶರ ವೈಯುಕ್ತಿಕ ಪ್ರಾಮಾಣಿಕತೆಯನ್ನು ಪ್ರಶ್ನೆ ಮಾಡುತ್ತಿಲ್ಲ. ಪ್ರತೀ ನ್ಯಾಯಾಲಯದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಕಡ್ಡಾಯವಾಗಿ ಇಡಬೇಕೆಂಬಂತ ತೀರ್ಪುಗಳನ್ನೂ ಇವರು ನೀಡಿದ್ದಾರೆ. ಆದರೆ, ಇಂತಾ ಸನಾತನ ಪರ ನಿಲುವನ್ನು ಇಟ್ಟುಕೊಂಡ, ಅದಕ್ಕಾಗಿ ತನ್ನನ್ನು ಕೆಲಸದಿಂದ ತೆಗೆಯಲಾರರು ಎಂದು ಹೇಳುವ ನ್ಯಾಯಾಧೀಶರ ತೀರ್ಪುಗಳಲ್ಲಿ ಆ ಕುರಿತ ಪಕ್ಷಪಾತ ಗೊತ್ತಿಲ್ಲದಂತೆ ನುಸುಳುವುದಿಲ್ಲವೆ ಎಂಬ ಪ್ರಶ್ನೆ ಏಳುತ್ತದೆ. ಹಲವರು ವ್ಯಾಪಕವಾಗಿ ಇಂತಾ ಪ್ರಶ್ನೆಗಳನ್ನು ಈಗಾಗಲೇ ಕೇಳಿದ್ದಾರೆ.</p>



<p>ಇದಲ್ಲದೆ, 2002ರ ನಂತರದ ಗಲಭೆ ವಿಚಾರಣೆಯ ಸಮಯದಲ್ಲಿ ಗುಜರಾತ್ ನ್ಯಾಯಾಂಗದ ಬಗ್ಗೆ ಸುಪ್ರೀಂ ಕೋರ್ಟ್ ಸೇರಿದಂತೆ ಕಾನೂನು ಮತ್ತು ಸಾರ್ವಜನಿಕ ವಲಯಗಳಲ್ಲಿ ವ್ಯಕ್ತಪಡಿಸಲಾದ ಐತಿಹಾಸಿಕ ಕಳವಳಗಳು ನಮಗೊಂದು ಕಠೋರವಾದ ಪಾಠಗಳಾಗಿವೆ. ಇಲ್ಲಿ ನ್ಯಾಯಬದ್ಧ ವಿಚಾರಣೆ ನಡೆಸಲು ಗುಜರಾತಿನ ಸಾಮರ್ಥ್ಯದ ಬಗ್ಗೆಯೇ ಸಂಶಯ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಪ್ರಕರಣಗಳನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಿದ್ದು ದೇಶದ ನ್ಯಾಯಾಂಗ ಇತಿಹಾಸದಲ್ಲೇ ಒಂದು ಕರಾಳ ನೆನಪು. ಈ ಪಾಠಗಳೆಂದರೆ, ಹಿಂದೂತ್ವ ಅಥವಾ ಬೇರಾವುದೇ ಸೈದ್ಧಾಂತಿಕ ನಿರ್ಬಂಧವು ಒಂದು ನ್ಯಾಯಪೀಠದ ಮೇಲೆ ಪ್ರಭಾವ ಬೀರುತ್ತದೆ ಎಂದು ಗ್ರಹಿಸಿದಾಗ, ಪಕ್ಷಪಾತದ ಚಿಕ್ಕ ಸಂಶಯ ಮಾತ್ರವೇ ನ್ಯಾಯಾಂಗದ ಮೇಲಿನ ಸಾರ್ವಜನಿಕ ನಂಬಿಕೆಯನ್ನು ನಾಶಮಾಡಲು ಸಾಕು.</p>



<p><strong>ಆಂತರಿಕ ಪುನರುಜ್ಜೀವನ: ನ್ಯಾಯಾಂಗದ ಸ್ವಯಂ ತಿದ್ದುಪಡಿ</strong><br>​ನಿರ್ಣಾಯಕವಾಗಿ ಹೇಳಬೇಕೆಂದರೆ, ಭಾರತೀಯ ನ್ಯಾಯಾಂಗವು ಏಕಶಿಲೆಯಲ್ಲ. ಮೇಲೆ ಹೇಳಿರುವ &#8220;ದೇವಪ್ರಭುತ್ವವಾದಿ&#8221; ಅಥವಾ ಧಾರ್ಮಿಕ ವಾಲುವಿಕೆಯ ವಿರುದ್ಧ ನ್ಯಾಯಾಂಗದ ಒಳಗೆಯೇ ಗಮನಾರ್ಹ ಪ್ರತಿರೋಧವಿದೆ. ನ್ಯಾಯಾಧೀಶರ ನೈತಿಕ ಪೋಲೀಸ್‌ಗಿರಿ ವಿರುದ್ಧ&nbsp; ಮಾತನಾಡಿರುವ ನ್ಯಾಯಮೂರ್ತಿ ಅಭಯ್ ಎಸ್. ಓಕಾ ಅವರು, ತಮ್ಮ ಸಹೋದ್ಯೋಗಿಗಳ ಬೋಧನಾ ಪ್ರವೃತ್ತಿಯ ಬಗ್ಗೆ ತೀವ್ರ ಟೀಕೆ ಮಾಡಿದ್ದಾರೆ. ಗಮನಾರ್ಹವಾದ ನ್ಯಾಯಾಂಗ ಹಸ್ತಕ್ಷೇಪವೊಂದರಲ್ಲಿ ಅವರು, ಹದಿಹರೆಯದವರ ಲೈಂಗಿಕ ನಡವಳಿಕೆಯ ಬಗ್ಗೆ ಕಲ್ಕತ್ತಾ ಹೈಕೋರ್ಟ್ ನೀಡಿದ್ದ ಅಭಿಪ್ರಾಯದ ಟೀಕೆಯನ್ನು ಕಿತ್ತು ಹಾಕಿದ್ದರು. &#8220;ನ್ಯಾಯಾಲಯದ ಕೆಲಸ ನೈತಿಕ ಪೋಲೀಸಿಂಗ್ ಮಾಡುವುದು ಅಲ್ಲ. ನ್ಯಾಯಾಧೀಶರು ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ತಡೆಯಬೇಕು” ಎಂದು ಅವರು ದೃಢವಾಗಿ ಹೇಳಿದ್ದರು.</p>



<p>ಸ್ವತಃ ಟೀಕೆಗಳಿಗೆ ಒಳಗಾಗಿದ್ದ ಮಾಜಿ ಮುಖ್ಯ ನ್ಯಾಯಮೂರ್ತಿ <a href="http://ಡಿ.ವೈ">ಡಿ.ವೈ</a>. ಚಂದ್ರಚೂಡ್, ಸ್ವತಃ ನಂಬಿಕೆಯ ವ್ಯಕ್ತಿಯಾಗಿದ್ದುಕೊಂಡು- “ನ್ಯಾಯಾಧೀಶರ ಆತ್ಮಸಾಕ್ಷಿಯು ಕಟ್ಟುನಿಟ್ಟಾಗಿ ಕಾನೂನು ಮತ್ತು ಸಂವಿಧಾನದಿಂದ ಮಾತ್ರವೇ ಮಾರ್ಗದರ್ಶನ ಪಡೆಯಬೇಕು&#8221; ಎಂದು ಆಗಾಗ್ಗೆ ಒತ್ತಿ ಹೇಳಿದ್ದರು. ವಿವಿಧ ಭಿನ್ನಾಭಿಪ್ರಾಯದ ಪ್ರಕರಣಗಳಲ್ಲಿ, &#8220;ಅಗತ್ಯ ಧಾರ್ಮಿಕ ಆಚರಣೆಗಳು&#8221; ಎಂಬ ತರ್ಕವನ್ನು ಮೂಲಭೂತ ಹಕ್ಕುಗಳನ್ನು ಬೈಪಾಸ್ ಮಾಡಲು ಬಳಸಿದಾಗ ಅವರು ಅದನ್ನು ವಿರೋಧಿಸಿದ್ದರು. ನ್ಯಾಯಾಲಯಗಳು &#8220;ಸುಧಾರಣಾವಾದಿ ಧಾರ್ಮಿಕ ಪಾತ್ರ&#8221;ವನ್ನು ವಹಿಸಿಕೊಳ್ಳಬಾರದು; ಬದಲಿಗೆ, ವಿಶ್ಲೇಷಣಾತ್ಮಕ ಸಾಂವಿಧಾನಿಕ ಪಾತ್ರವನ್ನು ವಹಿಸಬೇಕು ಎಂದು ಅವರು ವಾದಿಸಿದ್ದರು.</p>



<p>2024ರ ಕೊನೆಯಲ್ಲಿ, ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಮಾಡಿದ ವಿವಾದಾತ್ಮಕ ಹೇಳಿಕೆಗಳನ್ನು ವಿವರಿಸುವಂತೆ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ರೋಹಿತ್ ರಂಜನ್ ಅಗರ್ವಾಲ್ ಅವರನ್ನು ಕರೆಸಿಕೊಳ್ಳುವ ಅಪರೂಪದ ಹೆಜ್ಜೆಯನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ತೆಗೆದುಕೊಂಡಿತು. ಈತ ಆರೆಸ್ಸೆಸ್ ಸಭೆಗಳಲ್ಲಿ ಬಹಿರಂಗವಾಗಿ ಭಾಗವಹಿಸಿದ್ದ ವ್ಯಕ್ತಿ. ಈ ಕ್ರಮದ ಮೂಲಕ ಸುಪ್ರೀಂ ಕೋರ್ಟ್- ನ್ಯಾಯಾಂಗದ ಉನ್ನತ ಅಧಿಕಾರಿಗಳು ತಮ್ಮ ಪೂರ್ವಗ್ರಹವನ್ನು ಬಹಿರಂಗವಾಗಿ ಪ್ರದರ್ಶನ ಮಾಡುವುದನ್ನು ನಿರ್ಲಕ್ಷಿಸಲು ತನಗೆ ಇಷ್ಟವಿಲ್ಲ ಎಂದು ಸೂಚಿಸಿತು.</p>



<p>​<strong>ನ್ಯಾಯಾಂಗ ನಿಂದನೆ: ಭಯ ಮತ್ತು ವಾಸ್ತವ</strong><br>ಕೊಲೆ- ಅತ್ಯಾಚಾರ ಮುಂತಾದ ಆರೋಪಿಗಳಿಗೆ ಜಾಮೀನು, ಪ್ರಭಾವಿ ಮತ್ತು ಧಾರ್ಮಿಕ ಪ್ರಚೋದನೆಯ ದ್ವೇಷ ಭಾಷಣದ ಆರೋಪಿಗಳ ವಿರುದ್ಧ “ಬಲವಂತದ ಕ್ರಮ ಬೇಡ” ಎಂಬ ತಡೆಗಳು, ಆಧಾರ ಸಾಬೀತಾಗದೆ “ದೇಶದ್ರೋಹಿ” ಎಂಬ ಹಣೆಪಟ್ಟಿಯನ್ನು ಹೊತ್ತವರಿಗೆ ವರ್ಷಗಳ ಕಾಲ ಜಾಮೀನು ನಿರಾಕರಣೆ ಮುಂತಾದ ಹಲವು ನ್ಯಾಯಾಂಗ ಕ್ರಮಗಳು ಭಾರೀ ಸಾರ್ವಜನಿಕ ಟೀಕೆಗೆ ಗುರಿಯಾಗಿವೆ. ಇಂದಿನ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಪ್ರಕರಣಗಳಲ್ಲಿ ಗೊತ್ತುಗುರಿಯಿಲ್ಲದೇ ನ್ಯಾಯಾಲಯವನ್ನೂ, ವೈಯಕ್ತಿಕವಾಗಿ ನ್ಯಾಯಾಧೀಶರನ್ನೂ ಅವಹೇಳನಕಾರಿಯಾಗಿ ನಿಂದಿಸಲಾಗಿದೆ. ಈ ನಿಟ್ಟಿನಲ್ಲಿ ನ್ಯಾಯಾಂಗ ನಿಂದನೆಯ ಕಾಯಿದೆಯನ್ನು ಅನುಷ್ಟಾನಗೊಳಿಸುವುದು ತೀರಾ ಕಷ್ಟ. ಯಾಕೆಂದರೆ, ಲಕ್ಷಾಂತರ ಜನರ ಮೇಲೆ ಕೇಸು ದಾಖಲಿಸಬೇಕಾಗುತ್ತದೆ. ಈ ನಿಂದನಾ ಪ್ರವೃತ್ತಿ ಪ್ರಜಾಪ್ರಭುತ್ವಕ್ಕೆ ಮಾರಕ. ಹಾಗಾಗಿಯೇ ನ್ಯಾಯಾಧೀಶರು ನ್ಯಾಯಾಂಗದ ಬಗ್ಗೆ ಜನರ ನಂಬಿಕೆಯನ್ನು ಅಸ್ಥಿರಗೊಳಿಸಲು ಕಾರಣರಾಗಬಾರದು.</p>



<p>​ಆದರೆ, ಮೇಲೆ ಹೇಳಿದ ಪ್ರವೃತ್ತಿಗಳನ್ನು ಟೀಕಿಸುವುದು ಎಂದರೆ, ಇಡೀ ನ್ಯಾಯಾಂಗವನ್ನು ಒಂದು ಸಂಸ್ಥೆಯಾಗಿ ಆಕ್ರಮಣ ಮಾಡುವುದು ಅಲ್ಲ, ಬದಲಾಗಿ ಅದನ್ನು ರಕ್ಷಿಸುವುದು. 1971ರ ನ್ಯಾಯಾಲಯಗಳ ತಿರಸ್ಕಾರ ಅಧವಾ ನಿಂದನೆ ಕಾಯ್ದೆಯ ಅಡಿಯಲ್ಲಿ ವ್ಯಾಖ್ಯಾನಿಸಲಾದ ಪ್ರಕಾರ ನ್ಯಾಯಾಲಯದ ತಿರಸ್ಕಾರ ಅಥವಾ ನಿಂದನೆಯು ಸಾಮಾನ್ಯವಾಗಿ &#8220;ನಾಗರಿಕ ತಿರಸ್ಕಾರ/ನಿಂದನೆ&#8221; (ತೀರ್ಪುಗಳನ್ನು ಅನುಸರಿಸದಿರುವುದು) ಮತ್ತು &#8220;ಕ್ರಿಮಿನಲ್ ತಿರಸ್ಕಾರ/ನಿಂದನೆ&#8221; (ನ್ಯಾಯಾಲಯವನ್ನು ನಿಂದಿಸಿ, ಆರೋಪ, ಹಗರಣ ಮಾಡುವುದು) ಒಳಗೊಂಡಿದೆ.</p>



<p>ಈ ಕುರಿತ ಕಾನೂನಿನ ಸ್ಪಷ್ಟತೆಗಾಗಿ ಸುಪ್ರೀಂ ಕೋರ್ಟ್ (ವಿಶೇಷವಾಗಿ <a href="http://ಪಿ.ಎನ್">ಪಿ.ಎನ್</a>. ದುಡಾ ವರ್ಸಸ್ ಪಿ. ಶಿವಶಂಕರ್ ಪ್ರಕರಣದಲ್ಲಿ) ತೀರ್ಪನ್ನು ನೋಡಬಹುದು. ಅದರಲ್ಲಿ&nbsp; &#8220;ನ್ಯಾಯಯುತ ಮತ್ತು ಸಮತೋಲಿತ ಟೀಕೆ&#8221; ಅಥವಾ “ಅನುಚಿತ ಉದ್ದೇಶಗಳನ್ನು ಆರೋಪಿಸದ” ನ್ಯಾಯಾಂಗ ನಡವಳಿಕೆಯ ವಿಶ್ಲೇಷಣೆಯನ್ನು ನ್ಯಾಯಾಂಗದ ತಿರಸ್ಕಾರ ಅಥವಾ ನಿಂದನೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಬದಲಾಗಿ, ನ್ಯಾಯಾಧೀಶರ ಸಾರ್ವಜನಿಕವಾದ ಧಾರ್ಮಿಕ ಹೇಳಿಕೆಗಳ ಸಾಂವಿಧಾನಿಕ ಔಚಿತ್ಯವನ್ನು ವಿಶ್ಲೇಷಿಸುವುದು ನಾಗರಿಕ ಭಾಗವಹಿಸುವಿಕೆಯ ಒಂದು ರೂಪವಾಗಿದೆಯೇ ಹೊರತು ಕಾನೂನು ಅಪರಾಧವಲ್ಲ. ಈ ಬರಹವೂ ಅದೇ ನಿಟ್ಟಿನಲ್ಲಿ ಇದೆ ಮತ್ತು ಅದೇ ಸದುದ್ದೇಶವನ್ನು ಹೊಂದಿದೆ.</p>



<p>​<strong>ಕಾನೂನಿನ ಶ್ರೇಷ್ಟತೆ</strong><br>​ಅಷ್ಟಕ್ಕೂ, ಭಾರತವು ಜಾತ್ಯತೀತ ಗಣರಾಜ್ಯ. ನಮ್ಮ ನ್ಯಾಯಾಂಗದ &#8220;ತರ್ಕ&#8221;ವು 14ನೇ ವಿಧಿ (ಸಮಾನತೆ) ಮತ್ತು ಕಾನೂನಿನ ಆಳ್ವಿಕೆಯಲ್ಲಿ ಬೇರೂರಿರಬೇಕು. ನ್ಯಾಯಾಧೀಶರು ನ್ಯಾಯಾಲಯಕ್ಕೆ ಪ್ರವೇಶಿಸಿದಾಗ, ಅವರ ವೈಯಕ್ತಿಕ ನಂಬಿಕೆಗಳನ್ನು ಬಾಗಿಲಿನಲ್ಲೇ ಬಿಡಬೇಕು. ನ್ಯಾಯಾಂಗದ ಪಾವಿತ್ರ್ಯವನ್ನು ಕಾಪಾಡಿಕೊಳ್ಳುವ ಏಕೈಕ ಮಾರ್ಗವೆಂದರೆ ತೀರ್ಪಿನ ಸಂಕ್ಷಿಪ್ತತೆ, ತಟಸ್ಥತೆ ಮತ್ತು ದೇಶದ ಕಾನೂನುಗಳ ಕಟ್ಟುನಿಟ್ಟಿನ ಅನುಸರಣೆ. ನ್ಯಾಯಾಧೀಶರಿಗೆ ತಕ್ಕಂತ ಸಾರ್ವಜನಿಕ ನಡವಳಿಕೆ. ಸಂವಿಧಾನವನ್ನು ರಕ್ಷಿಸುವ ಹೊಣೆ ಇರುವ ನ್ಯಾಯಾಂಗವನ್ನು ರಕ್ಷಿಸುವ ಹೊಣೆಗಾರಿಕೆ ಅಂತಿಮವಾಗಿ ಜನರದ್ದು.</p>
]]></content:encoded>
					
		
		
			</item>
		<item>
		<title>ಅನಿಷ್ಟಕ್ಕೆಲ್ಲ ಸಂಸ್ಕೃತವೇ ಕಾರಣ: ಇದುವೇ ನೈಜ ಚಿತ್ರಣ</title>
		<link>https://peepalmedia.com/sanskrit-is-the-cause-of-all-evil-this-is-the-real-picture/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 03 Feb 2026 15:08:28 +0000</pubDate>
				<category><![CDATA[ಅಂಕಣ]]></category>
		<category><![CDATA[ನಾಡು-ನುಡಿ]]></category>
		<guid isPermaLink="false">https://peepalmedia.com/?p=73551</guid>

					<description><![CDATA[&#8220;..ಇಂಡಿಯಾ ಒಕ್ಕೂಟಕ್ಕೆ ಬ್ರಿಟಿಷರಿಂದ ಬಿಡುಗಡೆ ದೊರೆತು, ಸಂವಿಧಾನ ರಚನೆಯಾದಾಗ ಅದರ ಅನುಷ್ಠಾನ ಸಮಯದಲ್ಲಿ ಸಂಸ್ಕೃತ ಕುತಂತ್ರಿಗಳೇ ಹೆಚ್ಚಿದ್ದು, ಸಂಸ್ಕೃತ ಹೇರಿಕೆಗೆ ಸಂವಿಧಾನದಲ್ಲಿ ಅವಕಾಶ ಬರುವ ಹಾಗೆ ಮಾಡಿಕೊಂಡಿದ್ದಾರೆ..&#8221; ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ ದರ್ಶನ್ ಕುರುಬಾಸ್ ಅವರ ಬರಹದಲ್ಲಿ ಸಂಸ್ಕೃತವನ್ನು ಕುತಂತ್ರ ಭಾಷೆ, ಅನಿಷ್ಠ ತಂದೊಡ್ಡಿದ ಭಾಷೆ ಎಂದರೆ ತಪ್ಪಾಗುವುದಿಲ್ಲ ಅದುವೇ ಕರಾಳ ಸತ್ಯ. ಇಂದು ನಾವು ಅನುಭವಿಸುತ್ತಿರುವ ಪಿತೃ ಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿನ ದೌರ್ಜನ್ಯ, ಸಾಮಾಜಿಕ ವ್ಯವಸ್ಥೆಯಲ್ಲಿ ಮೇಲ್ವರ್ಗದವರ ದಬ್ಬಾಳಿಕೆಗೆ ಸಂಸ್ಕೃತವೆ ಮೂಲ ಕಾರಣ. ಸಾಂಕ್ರಾಮಿಕ ರೋಗಗಳಾದ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>&#8220;..ಇಂಡಿಯಾ ಒಕ್ಕೂಟಕ್ಕೆ ಬ್ರಿಟಿಷರಿಂದ ಬಿಡುಗಡೆ ದೊರೆತು, ಸಂವಿಧಾನ ರಚನೆಯಾದಾಗ ಅದರ ಅನುಷ್ಠಾನ ಸಮಯದಲ್ಲಿ ಸಂಸ್ಕೃತ ಕುತಂತ್ರಿಗಳೇ ಹೆಚ್ಚಿದ್ದು, ಸಂಸ್ಕೃತ ಹೇರಿಕೆಗೆ ಸಂವಿಧಾನದಲ್ಲಿ ಅವಕಾಶ ಬರುವ ಹಾಗೆ ಮಾಡಿಕೊಂಡಿದ್ದಾರೆ..&#8221; ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ ದರ್ಶನ್ ಕುರುಬಾಸ್ ಅವರ ಬರಹದಲ್ಲಿ</p>
</blockquote>



<p>ಸಂಸ್ಕೃತವನ್ನು ಕುತಂತ್ರ ಭಾಷೆ, ಅನಿಷ್ಠ ತಂದೊಡ್ಡಿದ ಭಾಷೆ ಎಂದರೆ ತಪ್ಪಾಗುವುದಿಲ್ಲ ಅದುವೇ ಕರಾಳ ಸತ್ಯ. ಇಂದು ನಾವು ಅನುಭವಿಸುತ್ತಿರುವ ಪಿತೃ ಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿನ ದೌರ್ಜನ್ಯ, ಸಾಮಾಜಿಕ ವ್ಯವಸ್ಥೆಯಲ್ಲಿ ಮೇಲ್ವರ್ಗದವರ ದಬ್ಬಾಳಿಕೆಗೆ ಸಂಸ್ಕೃತವೆ ಮೂಲ ಕಾರಣ. ಸಾಂಕ್ರಾಮಿಕ ರೋಗಗಳಾದ ಕಾಲಾರ, ರೂಬೆಲ್ಲ, ಪ್ಲೇಗ್, ಕರೋನ ಬಂದು ಆಕ್ರಮಿಸಿದರಿಂದ ಕೋಟ್ಯಾನುಕೋಟಿ ಪ್ರಾಣ ಹಾನಿಯಾದುದು, ಸಮಾಜದ ಸ್ವಾಸ್ಥ್ಯ ಹಾಳಾದದ್ದು ಲೆಕ್ಕವಿಲ್ಲದಷ್ಟು. ಅದೇ ತರಹ ಅಸ್ಪೃಶ್ಯತೆ ಎಂಬ ಸಾಂಕ್ರಾಮಿಕ ರೋಗವನ್ನು ಜನಸಾಮಾನ್ಯದ ಜನರ ತಲೆಗೆ ತುಂಬಿ, ಸಾವಿರಾರು ವರ್ಷಗಳಿಂದ ಶ್ರೀಸಾಮಾನ್ಯರನ್ನು ಕ್ರಿಮಿ ಕೀಟಗಳಂತೆ ಕಂಡು, ಅದೇ ರೀತಿ ನಡೆಸಿಕೊಳ್ಳಲು ಇದೇ ಸಂಸ್ಕೃತ ಕಾರಣ. ಇದೇ ಸಂಸ್ಕೃತದಲ್ಲಿ ರಚನೆಯಾದ ಭಗವದ್ಗೀತೆ, ವೇದಗಳು, ಶಾಸ್ತ್ರಗಳೆ ಅಕ್ಷರಸಃ ಕಾರಣ.</p>



<p>ಒಂದು ಕಡೆ ಹಿಂದೂ ಧರ್ಮದ ದರ್ಮಗ್ರಂಥ ಭಗವದ್ಗೀತೆಯೆಂದು&nbsp; ಬಾಯಿ ಬಡೆದುಕೊಳ್ಳುತ್ತಿರುವ ಶೂದ್ರ ಅಂಧಭಕ್ತರು, ಭಗವದ್ಗೀತೆಯ ಮುಖಪುಟ ಚಿತ್ರಕ್ಕೆ ಮಾರುಹೋಗಿ ಹಾಗೆ ಹೇಳುತ್ತಿರಬೇಕು. ಚಾತುರ್ವರ್ಣ ವ್ಯವಸ್ಥೆಯೆಂಬುದು&nbsp; ಭಗವದ್ಗೀತೆಯಲ್ಲಿದೆ ಎಂಬುದು ಹಿಂದೂ ಧರ್ಮದ ಶೂದ್ರ ಅಭಿಮಾನಿಗಳಿಗೆ ಗೊತ್ತಿಲ್ಲ. ಮನುಸ್ಮೃತಿಯಲ್ಲಿ ಈ ನಾಡಿನ ಮೂಲ ನಿವಾಸಿ ಜನರಿಗೆ ಕೆಳವರ್ಗದವರು ಎಂಬ ಹಣೆಪಟ್ಟಿ ಕಟ್ಟಿ ಅವರಿಗೆ ವಿಧಿಸಿದ ಕಟ್ಟುಪಾಡುಗಳು ಅಮಾನವೀಯ. ಅವುಗಳನ್ನು ಪಾಲಿಸದ್ದಿದ್ದರೆ ಅಗೋರವಾದಂತಹ ಶಿಕ್ಷೆಗಳು. ಇದೆಲ್ಲವನ್ನು ಪ್ರವಚನಗಳಲ್ಲಿ ಹೇಳುವುದಿಲ್ಲ, ಇಂತಹ ವಿಷಯಗಳನ್ನು ಬಚ್ಚಿಡಲಾಗುತ್ತದೆ. ಆದರೆ ಇಂತಹ ಅನಿಷ್ಟ ಪದ್ದತಿಗಳು ಜನಗಳ ತಲೆಯಲ್ಲಿ ಶಾಶ್ವತವಾಗಿ ಕುಳಿತು ಬಿಟ್ಟಿವೆ, ಅದರ ಪರಿಣಾಮ ತಾಯಿಯಾದವಳು ಮಗುವಿಗೆ ತನ್ನ ಎದೆಹಾಲಿನ ಜೊತೆ ಈ ಜಾತಿಯತೆ, ಅಸ್ಪೃಶ್ಯತೆಯನ್ನು ಸೇರಿಸಿ ಕುಡಿಸಿ ಆ ಮಗುವನ್ನು ಬೆಳೆಸುತ್ತಾಳೆ.</p>



<p>ಕನ್ನಡದಲ್ಲಿನ ಪ್ರಾಚೀನ ಸಾಹಿತ್ಯದಲ್ಲೆ ಆಗಲಿ, ಜಾನಪದ ಸಾಹಿತ್ಯದಲ್ಲೆ ಆಗಲಿ, ನವ ಸಾಹಿತ್ಯದಲ್ಲೆ ಆಗಲಿ ಮನುಷ್ಯ-ಮನುಷ್ಯರಿಗಿರುವ ಸ್ನೇಹ- ಪ್ರೀತಿ ಸಂಬಂಧದ ಬಗ್ಗೆ ಹೇಳುತ್ತದೆ ಮತ್ತು ಮಾನವರ ನಡುವೆ ಇರುವ ಪ್ರೀತಿ- ಬೆಸುಗೆಯನ್ನು ಹೆಚ್ಚಿಸುತ್ತದೆ. ಮೇಲು ಕೀಳೆಂಬ ಅನಿಷ್ಟವನ್ನು ಸೃಷ್ಟಿಸುವುದಿಲ್ಲ, ಯಾಕೆಂದರೆ ಕನ್ನಡಿಗರಿಗೆ ಅದು ಬೇಕಾಗಿರಲಿಲ್ಲ ಮತ್ತು ಆ ವಿಷಯವೇ ಗೊತ್ತಿರಲಿಲ್ಲ. ಸಂಸ್ಕೃತದವರಾದ ಕುತಂತ್ರದವರು ಕನ್ನಡದವರ ಮೇಲೆ ಹೇರಲ್ಪಟ್ಟ ಅನಿಸ್ಠವೆ ಈ ಅಸ್ಪೃಶ್ಯತೆ. ಇದು ಸಂಸ್ಕೃತದ ಕೊಡುಗೆ. ಸಂಸ್ಕೃತವನ್ನು ಉಳಿಸುವ ಬೆಳೆಸುವ ಪ್ರಮೇಯವು ಸಾವಿರಾರು ವರ್ಷಗಳ ಕಾಲದ ಹಿಂದೆಯೂ ಇಲ್ಲ, ಇಗಲೂ ಬೇಕಿಲ್ಲ, ಅದು ಅಪ್ರಸ್ತುತ.</p>



<p>12ನೇ ಶತಮಾನದಲ್ಲಿನ ಕನ್ನಡ ಕವಿ ನಯಸೇನ, ತನ್ನ ಧರ್ಮಾಮೃತ ಕೃತಿಯಲ್ಲಿ ಹೀಗೆ ಹೇಳುತ್ತಾನೆ:- “ಕನ್ನಡದಲ್ಲಿ ತಿಳಿದು ತನ್ನೊಳು ತನ್ನ ಮೋಕ್ಷವಗಳಿಸಿಕೊಂಡರೆ ಸಾಲದೇ, ಸಂಸ್ಕೃತದಲ್ಲಿನೇನು”? ಮತ್ತೆ ಇನ್ನು ಮುಂದುವರೆದು, “ಕನ್ನಡದ ತುಪ್ಪದಲ್ಲಿ ಸಂಸ್ಕೃತದ ಎಣ್ಣೆಯನ್ನು ಬೆರೆಸಬೇಡಿ” ಎಂದು ಕನ್ನಡ ನುಡಿಯಲ್ಲಿ ಸಂಸ್ಕೃತ ಪದಗಳ ಬಳಕೆಯನ್ನು ಮತ್ತು ಅತಿಯಾದ ಬಳಕೆಯನ್ನು ವಿರೋಧಿಸಿ ಈ ಮಾತನ್ನು ಹೇಳುತ್ತಾನೆ.</p>



<p>“ಕನ್ನಡವೆಂಬ ಕರಿಮಣಿ ಸರದಲ್ಲಿ ಸಂಸ್ಕೃತವು ಕೆಂಪು ಮಣಿಯ ತರ ಇರಬೇಕು&#8221; ಎಂಬುದು ಕನ್ನಡದ ಖ್ಯಾತ ಬರಹಗಾರರಾದ ಬಿ. ಎಂ. ಶ್ರೀಕಂಠಯ್ಯ ಅವರ ಪ್ರಸಿದ್ಧ ಮಾತು. ಈ ಮಾತಿನ ಒಳ ಮರ್ಮವನ್ನು ಅರಿಯುವುದಾದರೆ ಅದು ಸಂಸ್ಕೃತ ಪುತ್ರರಾದ ಬಿ ಎಂ ಶ್ರೀಕಂಠಯ್ಯನವರು ಕರಿಮಣಿ ಸರದಲ್ಲಿ ಕೆಂಪು ಮಣಿ ಸ್ಥಾನವನ್ನು ಸಂಸ್ಕೃತಕ್ಕೆ ನೀಡಿ ಸಂಸ್ಕೃತ ಏರಿಕೆ ತೋರಿಕೆ ಸಮರ್ಥಿಸಿಕೊಳ್ಳುತ್ತಿದ್ದಾರೆ. ಕನ್ನಡವನ್ನು ಕರಿಮಣಿಸರ ಮಾಡಿ ಆ ಸರದಲ್ಲಿ ಸಂಸ್ಕೃತ ಎಂಬ ಕೆಂಪು ಮಣಿ ಇಲ್ಲದಿದ್ದರೆ ಅದು ಕ್ಷೋಭಿಸದು ಸಂಸ್ಕೃತ ಪ್ರಯೋಗ ಕನ್ನಡದಲ್ಲಿ ಇರಲೆಬೇಕೆಂಬ ಕೆಟ್ಟ ಮನಸ್ಥಿತಿಯನ್ನು ಸಮರ್ಥಿಸುವ ಮಾತಿದು.</p>



<p>ಕನ್ನಡದಲ್ಲೇ ಸಾಕಷ್ಟು ಒಳನುಡಿ ಆಡುನುಡಿಗಳು ಇವೆ. ಅವುಗಳನ್ನೇ ಕನ್ನಡದ ಕರಿಮಣಿ ಸರದಲ್ಲಿ ಕೆಂಪು ಮಣಿ ಮಾಡಿಕೊಳ್ಳೋಣ ಬೇರೆ ಬೇರೆ ಸೀಮೆಯ ಕನ್ನಡಿಗರು ಇದನ್ನು ಅನುಸರಿಸಲಿ, ಸಂಸ್ಕೃತದಿಂದ ಎರವಲು ಪಡೆಯುವ ದರಿದ್ರ ಕನ್ನಡಕ್ಕೆನಿದೆ, ಕನ್ನಡ ನುಡಿಯಲ್ಲಿ ಕಮ್ಮಿಯಾಗಿರುವುದಾದರೂ ಏನು? ಸಂಸ್ಕೃತ ಪುತ್ರರು ತಲೆ ಮರೆಸಿಕೊಂಡು ಒಳಸಂಚಿನಿಂದ ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಜನ ತೂರಿಕೊಂಡಿದ್ದಾರೆ, ಕನ್ನಡಿಗರಿಗೆ ಸಿಗಬೇಕಾದ ಸೌಕರ್ಯ, ಸೌಲಭ್ಯವನ್ನೆಲ್ಲ ನುಂಗಿ ನೀರು ಕುಡಿದಿದ್ದಾರೆ. ಇಂಥವರು&nbsp; ಕನ್ನಡಕ್ಕೆ ದೊರೆತಿರುವ ಜ್ಞಾನಪೀಠ ಪ್ರಶಸ್ತಿಗಳನ್ನು ಕಬಳಿಸಿದ್ದಾರೆ, ಮತ್ತೆ ಈ ಕುತಂತ್ರದವರು ಕನ್ನಡಕ್ಕಿಂತ ಸಂಸ್ಕೃತಕ್ಕೆ ಅತಿ ಹೆಚ್ಚು ನಿಷ್ಠೆ ತೋರಿಸಿದ್ದಾರೆ.</p>



<p>ಇಂಡಿಯಾ ಒಕ್ಕೂಟಕ್ಕೆ ಬ್ರಿಟಿಷರಿಂದ ಬಿಡುಗಡೆ ದೊರೆತು, ಸಂವಿಧಾನ ರಚನೆಯಾದಾಗ ಅದರ ಅನುಷ್ಠಾನ ಸಮಯದಲ್ಲಿ ಸಂಸ್ಕೃತ ಕುತಂತ್ರಿಗಳೇ ಹೆಚ್ಚಿದ್ದು, ಸಂಸ್ಕೃತ ಹೇರಿಕೆಗೆ ಸಂವಿಧಾನದಲ್ಲಿ ಅವಕಾಶ ಬರುವ ಹಾಗೆ ಮಾಡಿಕೊಂಡಿದ್ದಾರೆ. ಅಂಬೇಡ್ಕರ್ ಆಗಿನ ಸಮಯದಲ್ಲಿ ಅವರ ಒತ್ತಾಯಕ್ಕೆ ಮಣಿದು ಸಂಸ್ಕೃತ ಹೇರಿಕೆಗೆ ಅವಕಾಶ ಕೊಡಲೇಬೇಕಾದ ಕೆಟ್ಟ ಪರಿಸ್ಥಿತಿ ರೂಪುಗೊಂಡಿತ್ತು.</p>



<p>ಸಂಸ್ಕೃತ ಹೇರಿಕೆ ಕನ್ನಡಿಗರ ಮೇಲೆ ಸಾವಿರಾರು ವರ್ಷಗಳಿಂದ ಆಗುತ್ತಲೆ ಬಂದಿದೆ, ಅದಕ್ಕೆ ಪ್ರತಿರೋಧವಾಗಿ ಕನ್ನಡ ಸಾಹಿತ್ಯದಲ್ಲಿ ಸಂಸ್ಕೃತ ಮೃತಭಾಷೆ(ಸತ್ತೋಗಿರೋ ಭಾಷೆ) ಎಂಬ ಪ್ರಸ್ತಾಪವು ಬಂದಿದೆ, ಈ ಮಾತು ವಾಸ್ತವನು ಕೂಡ ಹೌದು.</p>



<p>ಸಂಸ್ಕೃತ ಸತ್ತೆ ಸಾವಿರಾರು ವರ್ಷಗಳಾಗಿರಬೇಕಾದರೆ ಇಂದಿಗೂ ಸಹ ಒಕ್ಕೂಟ ಸರ್ಕಾರ ಸಂಸ್ಕೃತಕ್ಕಾಗಿ ಖರ್ಚು ಮಾಡುತ್ತಿರುವ ಅಂದರೆ ನಿಜವಾದ ಅರ್ಥದಲ್ಲಿ&nbsp;<br>ದುಂದುವೆಚ್ಚ ಮಾಡುತ್ತಿರುವ ಹಣ ಸಂಸ್ಕೃತ ಭಾಷೆಯನ್ನು ಬೆಳೆಸಲಿಕ್ಕಲ್ಲ ಬದಲಾಗಿ ಸತ್ತೋಗಿರೋ ಸಂಸ್ಕೃತ ಭಾಷೆಗೆ ಅದ್ದೂರಿಯಾಗಿ ವರ್ಷದ ತಿಥಿ ಮಾಡಲಿಕ್ಕೆ ಎಂಬುದೇ ಸತ್ಯ.</p>



<p>ಸಂಸ್ಕೃತವನ್ನು ಬೆಳೆಸಬೇಕೆಂದು ಹೂಳಿಡುವ ನಾಯಿಗಳು ಅರ್ಥಮಾಡಿಕೊಳ್ಳಬೇಕದದ್ದು, ಪ್ರಾಚೀನ ಕಾಲದಿಂದಲೂ&nbsp; ಸಂಸ್ಕೃತ ದೇವಭಾಷೆ, ಅದು ಶ್ರೀಸಾಮಾನ್ಯರು ಕಲಿಯುವುದಕ್ಕಲ್ಲ ಕೇಳಿಸಿಯುಕೊಳ್ಳಲುಬಾರದು ಎಂಬ ಕಟ್ಟಾಜ್ಞೆ ಈ ಸಮಾಜದಲ್ಲಿ ರೂಢಿಯಲ್ಲಿತ್ತು. ದೇವ ಭಾಷೆ ದೇವರಿಗೆ ಇರಲಿಬಿಡಿ ಮಾನವರಿಗ್ಯಾಕೆ? ಅದರಲ್ಲೂ ಕನ್ನಡ ನಾಡಿನಲ್ಯಾಕೆ? ಇತ್ತೀಚಿಗೆ ತಿರುವನಂತಪುರಂನಲ್ಲಿರುವ ಕೇರಳ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಪಿಎಚ್ ಡಿ ಗೈಡ್ ವಿಜಯ ಕುಮಾರಿ ತಮ್ಮ ವಿದ್ಯಾರ್ಥಿಗೆ ನೀನು ದಲಿತ ನಿನಗೆ ಸಂಸ್ಕೃತ ಕಲಿಯುವ ಹಕ್ಕಿಲ್ಲ, ಸಂಸ್ಕೃತದಲ್ಲಿ ಪಿಹೆಚ್ ಡಿ ಪಡೆಯುವ ಅರ್ಹತೆ ಇಲ್ಲ ಎಂದು ವಿದ್ಯಾರ್ಥಿಯನ್ನು ಅಪಮಾನಿಸಿದ್ದರು.</p>



<p>ಆದರೂ ಸಹ ಮಾನ ಮರ್ಯಾದೆ ಇಲ್ಲದಿರುವ ಒಕ್ಕೂಟ ಸರ್ಕಾರ ಸಂಸ್ಕೃತದ ವರ್ಷದ ತಿಥಿ ಮಾಡಲು, ಸಂಸ್ಕೃತ ವಿಶ್ವವಿದ್ಯಾಲಯಗಳಿಗೆ, ರಾಷ್ಟ್ರೀಯ ಸಂಸ್ಕೃತ ದಿವಸಕ್ಕೆ<br>ನೂರಾರು ಕೋಟಿ ಅನುದಾನವನ್ನು ಸೇರಿದಂತೆ ಒಕ್ಕೂಟ ಸರ್ಕಾರವು 2014ರಿಂದ ಇಲ್ಲಿಯವರೆಗೆ 2532.59 ಕೋಟಿಯಷ್ಟು ಅನುದಾನ ನೀಡಿದೆ, ಇದೆಲ್ಲವೂ ಏನನ್ನು ಸಾಧಿಸಲಿಕ್ಕೆ?</p>



<p>ಮೊದಲಿಗೆ ಸಂಸ್ಕೃತ ಭಾಷೆಗೆ ಮುಕ್ತ ಮನಸ್ಸಿಲ್ಲ, ಪ್ರಾಚೀನ ಕಾಲದಿಂದಲೂ ಸಂಸ್ಕೃತ ಭಾಷೆ ಎಲ್ಲರಿಗೂ ಮುಕ್ತವಾಗಿ ದೊರಕಿಲ್ಲ, ಅದು ಕೇವಲ ಒಂದು ವರ್ಗಕ್ಕಷ್ಟೇ ಸೀಮಿತವಾದ ಖಾಸಗಿ ಭಾಷೆ. ಸಂಸ್ಕೃತ ಭಾಷೆ ಸತ್ತಿದೆ ಎಂಬುದಕ್ಕೆ ಒಂದು ಉದಾಹರಣೆ ನೋಡುವುದಾದರೆ, ಕನ್ನಡ ಬದುಕಿದೆ ಇನ್ನು ಉನ್ನತ ಮಟ್ಟದಲ್ಲಿ ಬೆಳೆಯಬೇಕಿದೆ ಹಾಗಾಗಿ ಕನ್ನಡ ನುಡಿಯಲ್ಲಿ ನೂರಾರು ಬಗೆಯ ಆಡುನುಡಿ (ಸ್ಲ್ಯಾಂಗ್) ಗಳಿವೆ, ಮಂಡ್ಯ ಕನ್ನಡ, ಮಳವಳ್ಳಿ ಕನ್ನಡ, ಮೈಸೂರು ಕನ್ನಡ, ಚಾಮರಾಜನಗರ ಕನ್ನಡ, ಕೊಳ್ಳೇಗಾಲ ಕನ್ನಡ, ಉತ್ತರ ಕರ್ನಾಟಕ ಕನ್ನಡ, ಇದೇ ರೀತಿ ಸಂಸ್ಕೃತಕ್ಕೆ ಎಷ್ಟು ಬಗೆಯ ಆಡುನುಡಿ (ಸ್ಲ್ಯಾಂಗ್) ಗಳಿವೆ ಹೇಳಿ. ಕನ್ನಡದಲ್ಲಿ ವರ್ಶಕ್ಕೆ ಇನ್ನೂರಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗುತ್ತವೆ ಅದೇ ತರಹ ಸಂಸ್ಕೃತದಲ್ಲಿ ಎಷ್ಟು ಸಿನಿಮಾಗಳು ಬಿಡುಗಡೆಯಾಗುತ್ತವೆ ಮತ್ತು ಸಂಸ್ಕೃತದಲ್ಲಿ ಎಷ್ಟು ಜನರಿಗೆ ಮನರಂಜನೆ ಸಿಗುತ್ತದೆ ಹೇಳಿ?</p>



<p>ಸಂಸ್ಕೃತಕ್ಕೆ ಸ್ವಂತ ಲಿಪಿಯೆ ಇಲ್ಲದಿದ್ದರೂ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ‌ ಎಂಬುದು ಎಂತಹ ಧಾರುಣ ಸ್ಥಿತಿ. ದಿನದಲ್ಲಿ ಎಷ್ಟು ಜನ ಸಂಸ್ಕೃತದಲ್ಲಿ ಮಾತುಕತೆ ನಡೆಸುತ್ತಾರೆ? ಸಂಸ್ಕೃತ ಹೇರಿಕೆ, ತೂರಿಕೆ ಪ್ರತಿದಿನ ನಡೆಯುವ ಕೆಲಸ, ನಾನು ಕೇಳುತ್ತಿರುವುದು ಪೂರ್ಣವಾಗಿ ಸಂಸ್ಕೃತದಲ್ಲಿ ಮಾತುಕತೆ ನಡೆಸುವವರು ಎಷ್ಟು ಜನ ಇದ್ದಾರೆ ಅಂತ? ಸಂಸ್ಕೃತ ಏರಿಕೆ ಮಾಡುವವರು ಸಹ ಸಂಸ್ಕೃತದಲ್ಲಿ ಸಂವಹನದ ಮಾಡುವುದಿಲ್ಲ. 24,000 ಜನ ಅಧಿಕೃತವಾಗಿ ಸಂಸ್ಕೃತದವರು ಎಂದು ಗುರುತಿಸಿಕೊಂಡಿದ್ದಾರೆ, ಅವರಿಗೆ ಒಕ್ಕೂಟ ಸರ್ಕಾರದ ವತಿಯಿಂದ 2532.59 ಕೋಟಿ ಅನುದಾನ ದೊರತಿದೆ, ಅದೇ ಕನ್ನಡ ನಾಡಿನ ನುಡಿಗಳಾದ ಕನ್ನಡ, ತುಳು, ಬ್ಯಾರಿ, ಕೊಡವ ನುಡಿಗಳಿಗೆ ಇದೇ ಒಕ್ಕೂಟ ಸರ್ಕಾರದಿಂದ ಎಷ್ಟು ಅನುದಾನ ದೊರತಿದೆ ? ಅದನ್ನು ಅನುಪಾತದ ದೃಷ್ಟಿಯಲ್ಲಿ ನೋಡುವುದಾದರೆ 206.24 : 1‌.</p>



<p>ಆರು ಕೋಟಿ ಜನರ ಜೀವನಾಡಿಯಾದ ಕನ್ನಡಕ್ಕೆ ಒಂದು ರೂಪಾಯಿಯಷ್ಟು, ಕೇವಲ 24 ಸಾವಿರ ಜನ ವರ್ಷಕ್ಕೆ ನಾಲ್ಕೈದು ಬಾರಿ ಸಂಸ್ಕೃತ ಮಾತನಾಡುವುದಕ್ಕೆ ಕೊಟ್ಟದ್ದು 206.64 ರೂಪಾಯಿಗಳಷ್ಟು. ಇನ್ನು ಮಿಕ್ಕ ಭಾಷೆಗಳಾದ ಬ್ಯಾರಿ ಕೊಡವ ತುಳು ಇವುಗಳಿಗೆ ಯಾವುದೇ ಅನುದಾನ ಸಿಕ್ಕಿಲ್ಲ.</p>



<p>ಮುಕ್ತ ಮನಸ್ಸಿಲ್ಲದ, ಸತ್ತೋಗಿರೋ ಸಂಸ್ಕೃತಕ್ಕೆ ಇಷ್ಟೊಂದು ವಿಜೃಂಭಣೆಯಿಂದ ಸಮಾಧಿ ಮಾಡಿ, ವರ್ಷದ ತಿಥಿ ಮಾಡುವ ಅವಶ್ಯಕತೆ ಇಲ್ಲ. ಬದಲಾಗಿ ಮಾಡಬೇಕಾದ ಕೆಲಸ&nbsp; ಕೋಟ್ಯಾನು ಕೋಟಿ ಜನರ ತಾಯಿನುಡಿಯಾಗಿರುವ ಕನ್ನಡದಿಂದ ಪ್ರೀತಿ, ಸಹನೆ, ಮಮಕಾರ, ವಾತ್ಸಲ್ಯ ಹುಟ್ಟುತ್ತದೆ ಆದರೆ ಅನ್ನ ಹುಟ್ಟುತ್ತಿಲ್ಲ. ಅನ್ನವೆಲ್ಲ ಹಿಂದಿ ಮತ್ತು ಸಂಸ್ಕೃತದವರ ಪಾಲಾಗಿ ಕನ್ನಡ, ಕನ್ನಡಿಗರು ಭಿಕಾರಿಯಾಗುವ ಹಂತ ತಲುಪಿದೆ.</p>



<p>ಶಿಕ್ಷಣದಲ್ಲಿ ಮೊದಲ ನುಡಿ ಕನ್ನಡ, ಈ ಪದ್ಧತಿ ಇರುವುದು ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ. ಕೇಂದ್ರ ಸರ್ಕಾರದ ಅನುದಾನದಲ್ಲಿ ನಡೆಯುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಇಂಗ್ಲಿಷ್ ಮಾಧ್ಯಮ ಶಿಕ್ಷಣ ಸಂಸ್ಥೆಗಳಲ್ಲಿ, ಕನ್ನಡಕ್ಕೆ ಎರಡನೆಯ,ಮೂರನೇ ಸ್ಥಾನ ಅಥವಾ ಕನ್ನಡಕ್ಕೆ ಸ್ಥಾನವೇ ಇಲ್ಲ. ಇದು ಕನ್ನಡ ಮಕ್ಕಳನ್ನು ಕನ್ನಡದಿಂದ ದೂರ ಮಾಡುವ ಪರಿ.</p>



<p>ಒಕ್ಕೂಟ ಸರ್ಕಾರವು ನಡೆಸುವ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶವಿಲ್ಲ, ಕನ್ನಡದಲ್ಲಿ ನಡೆಸುವ ಕೆಪಿಎಸ್ಸಿ ಪರೀಕ್ಷೆಯಲ್ಲಿಯು ಪ್ರಶ್ನೆ ಪತ್ರಿಕೆ ತಪ್ಪಾಗಿ ಬಂದ ನಿದರ್ಶನಗಳಿವೆ. ಈಗ ಕೇಳಿಕೊಳ್ಳಬೇಕಾದ ಪ್ರಶ್ನೆ ಕನ್ನಡಿಗರಿಗೆ ಎಲ್ಲಿ? ಎಷ್ಟರ ಮಟ್ಟಿಗೆ ನ್ಯಾಯ ಸಿಕ್ಕಿದೆಯೆಂದು? ಕನ್ನಡಿಗರಿಗೆ ಆಗುತ್ತಿರುವುದೆಲ್ಲ ಬರಿ ಅನ್ಯಾಯ.</p>
]]></content:encoded>
					
		
		
			</item>
		<item>
		<title>ಹಿಂದಿ ಎಕ್ಸಾಂ ಹಾಲ್ ಗೆ ನುಗ್ಗುತ್ತೇವೆ!</title>
		<link>https://peepalmedia.com/lets-rush-into-the-hindi-exam-hall/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 03 Feb 2026 15:01:29 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://peepalmedia.com/?p=73547</guid>

					<description><![CDATA[&#8220;..ವರ್ಷ ವರ್ಷ ಲಕ್ಷಾಂತರ ಮಕ್ಕಳನ್ನು ಹಿಂದಿ ಗುಲಾಮಗಿರಿಗೆ ಶಾಲಾ ಶಿಕ್ಷಣದ ಮೂಲಕ ತಳ್ಳುತ್ತಿರುವ ಎಸೆಸೆಲ್ಸಿ ಹಿಂದಿ ಎಕ್ಸಾಮ್ ನ ಈ ಸರ್ಕಾರ ರದ್ದುಪಡಿಸಲು ಸೂಕ್ತ ದಾಖಲೆ ಬಿಹಾರದ PWE ಕಾನೂನು..&#8221; ನಾವು Dravida ಕನ್ನಡಿಗರು ಚಳುವಳಿ ಮುಂದಾಳು ಅಭಿ ಒಕ್ಕಲಿಗ ಅವರ ಬರಹದಲ್ಲಿ ಕೋಟಿ ಕೋಟಿ ಕನ್ನಡಿಗರ ಅಂತರಾಳದ ಹಲವಾರು ನೋವುಗಳಲ್ಲಿ ಶಾಲಾ ಶಿಕ್ಷಣದಲ್ಲಿ ಕಡ್ಡಾಯವಾಗಿ ಹಿಂದಿ ಕಲಿಯಬೇಕಾಗಿರುವುದು ಕೂಡ ಸೇರಿದೆ. ಅವರೆಲ್ಲರೂ ಬೆರಳು ತೋರದೆ ಇರಬಹುದು, ಕೊರಳಾಗದೆ ಮೌನಕ್ಕೆ ಜಾರಿರಬಹುದು ಅವರೆಲ್ಲರ ಬದಲಿಯಾಗಿ ದುಡಿಯುತ್ತಿರುವ ಅಸಂಖ್ಯಾತ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>&#8220;..ವರ್ಷ ವರ್ಷ ಲಕ್ಷಾಂತರ ಮಕ್ಕಳನ್ನು ಹಿಂದಿ ಗುಲಾಮಗಿರಿಗೆ ಶಾಲಾ ಶಿಕ್ಷಣದ ಮೂಲಕ ತಳ್ಳುತ್ತಿರುವ ಎಸೆಸೆಲ್ಸಿ ಹಿಂದಿ ಎಕ್ಸಾಮ್ ನ ಈ ಸರ್ಕಾರ ರದ್ದುಪಡಿಸಲು ಸೂಕ್ತ ದಾಖಲೆ ಬಿಹಾರದ PWE ಕಾನೂನು..&#8221; <em>ನಾವು Dravida ಕನ್ನಡಿಗರು ಚಳುವಳಿ</em> ಮುಂದಾಳು ಅಭಿ ಒಕ್ಕಲಿಗ ಅವರ ಬರಹದಲ್ಲಿ </p>
</blockquote>



<p>ಕೋಟಿ ಕೋಟಿ ಕನ್ನಡಿಗರ ಅಂತರಾಳದ ಹಲವಾರು ನೋವುಗಳಲ್ಲಿ ಶಾಲಾ ಶಿಕ್ಷಣದಲ್ಲಿ ಕಡ್ಡಾಯವಾಗಿ ಹಿಂದಿ ಕಲಿಯಬೇಕಾಗಿರುವುದು ಕೂಡ ಸೇರಿದೆ. ಅವರೆಲ್ಲರೂ ಬೆರಳು ತೋರದೆ ಇರಬಹುದು, ಕೊರಳಾಗದೆ ಮೌನಕ್ಕೆ ಜಾರಿರಬಹುದು ಅವರೆಲ್ಲರ ಬದಲಿಯಾಗಿ ದುಡಿಯುತ್ತಿರುವ ಅಸಂಖ್ಯಾತ ಕನ್ನಡಪರ ಸಂಘಟನೆಗಳು ಕನ್ನಡ ಪರ ಚಳುವಳಿಗಾರರು ಮತ್ತು ಬೇರೆ ಬೇರೆ ಚಿಂತನೆಯ ಜನಪರ ಚಳುವಳಿಗಾರರು ಕನ್ನಡ ನಾಡಿನಲ್ಲಿ ಮೂರು ನುಡಿ ನೀತಿ ತೆಗೆದು ಕನ್ನಡ ಮತ್ತು ಇಂಗ್ಲಿಷ್ ಮಾತ್ರ ಇರುವ ಎರಡು ನುಡಿ ನೀತಿ ಜಾರಿಗೆ ಬೆರಳು ಕೊರಳು ತೋರುತ್ತಲೆ ಬಂದಿದ್ದೇವೆ.</p>



<p>ಚಳುವಳಿಯ ಒಡನಾಡಿಗಳೆ ಇಂದಿನ ಸಿನಿಮಾಗಳಂತೆ 200-300 ವರ್ಷ ಹಿಂದಕ್ಕೆ ಹೋಗಿ ಸೆಟ್ಹಾಕಿ ಅದೇ ಅಡಗೂಲಜ್ಜಿ ಪುರಾಣ ಪುಂಗಲಿ ಕಥೆಗಳಾದ ರಾಮಾಯಣ ಮಹಾಭಾರತ ನೆನಪಿಸಿಕೊಳ್ಳುವ ಗೋಜನ್ನು ಬಿಟ್ಟು ಕೇವಲ 4-5 ವರ್ಷದ ಹಿಂದೆ ನಮ್ಮ ಚಳುವಳಿಗಳನ್ನು ನೆನೆದರೆ ಗೋಚರಿಸುವುದೇನೆಂದರೆ ಹಿಂದಿ ಹೇರಿಕೆ ವಿರುದ್ಧದ ನಮ್ಮೆಲ್ಲರ ಕಾಯಕಗಳಿಗೆ ಕೊರಳಾಗುತ್ತಿದ್ದ ಅಂದಿನ ಮಾಜಿ ಮುಖ್ಯಮಂತ್ರಿ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಅದು ಟ್ವಿಟರ್ ಮೂಲಕವಾದರೂ ಸರಿ ಇಲ್ಲ ಮಡಿಲ ಮಾಧ್ಯಮಗಳ ಮೂಲಕವಾದರೂ ಸರಿ ವೇದಿಕೆ ಕಾರ್ಯಕ್ರಮಗಳಾದರು ಸರಿ. ಅಂತ ಸಿದ್ದರಾಮಯ್ಯನವರು ನಮ್ಮೆಲ್ಲರ ಚಳುವಳಿಗಳ ಪರಿಣಾಮದಿಂದ ಎರಡನೇ ಬಾರಿ ಮುಖ್ಯಮಂತ್ರಿಯಾಗಿ 3 ವರ್ಷ ಸಮೀಪಿಸುತ್ತಿದೆ ನಾನು ಆ ದಾಖಲೆ ಮುರಿದೆ ನಾನು ಈ ದಾಖಲೆ ಮಾಡಿದೆ ಎಂಬಂತೆ ಖುಷಿ ಖುಷಿಯಿಂದ ಓಡಾಡಿಕೊಂಡಿರುವ ಸಿದ್ದರಾಮಯ್ಯನವರು ಕನ್ನಡಪರ ಸಂಘಟನೆಗಳ ಕಾರ್ಯಕ್ರಮದಲ್ಲಿಯೆ &#8216;ನಾವು ಹಿಂದಿ ವಿರೋಧಿಸುವುದಿಲ್ಲ&#8217; ಅಂದಿದ್ದು ಇವರು ಅಂದಿನ ನಮ್ಮೆಲ್ಲರ ಕಾಯಕಗಳಿಗೆ ಕೊರಳಾಗುತ್ತಿದ್ದದ್ದು ಕೇವಲ ಅಧಿಕಾರ ಪಡೆಯುವ ದುರಾಸೆಯಿಂದ ಎಂಬುದನ್ನು ಸಾಬೀತುಪಡಿಸುತ್ತದೆ.</p>



<p>ನಾವೆಲ್ಲರೂ ಅಂದು ಇಂದು ಮುಂದು ದುಡಿಯುತ್ತಿರುವುದು ಕನ್ನಡ ನಾಡು ನುಡಿ ಮತ್ತು ಎಲ್ಲಾ ರೀತಿಯ ಸಮಾನತೆ ಬೆಳೆಸಲೆ ವಿನಃ ವೈಯಕ್ತಿಕ ಅಧಿಕಾರಕ್ಕಾಗಿಯೋ ಇಲ್ಲ ವೈಯಕ್ತಿಕ ಹಣ ಸಂಪಾದನೆಗಾಗಿಯೋ ಇಲ್ಲ ವೈಯಕ್ತಿಕ ಜನಪ್ರಿಯತೆಗಾಗಿಯೋ ಅಲ್ಲವೇ ಅಲ್ಲ. ಕರ್ನಾಟಕ ರಾಜ್ಯ ಶಿಕ್ಷಣ ನೀತಿ ಆಯೋಗ ಎರಡು ನುಡಿ ನೀತಿ ಜಾರಿ ಮಾಡಿ ಎಂದು ತಮ್ಮ ವರದಿ ಕೊಟ್ಟು ಆರು ತಿಂಗಳುಗಳ ಮೇಲಾಗಿದೆ ಇನ್ನು ಕೂಡ ಅದನ್ನು ಜಾರಿ ಮಾಡದೆ ಮತ್ತು ಮಾರ್ಚ್ ತಿಂಗಳಿನಲ್ಲಿ ನಡೆಯುವ ಎಸ್ ಎಸ್ ಎಲ್ ಸಿ ಎಕ್ಸಾಮ್ ಟೈಮ್ ಟೇಬಲ್ ನಲ್ಲಿ ಹಿಂದಿ ಎಕ್ಸಾಮ್ ಗು ದಿನಾಂಕ ಪ್ರಕಟಿಸಿರುವುದು ಕನ್ನಡ ವಿರೋಧಿ ಕೆಲಸವಲ್ಲದೆ ಬೇರೇನೂ ಅಲ್ಲ. ರಾಜ್ಯ ಶಿಕ್ಷಣ ನೀತಿ ಆಯೋಗಕ್ಕೆ 1992 ರ ವರೆಗೂ ಹಿಂದಿ ಸಬ್ಜೆಕ್ಟ್ ಗೆ ಕೇವಲ 50 ಅಂಕಗಳಿಗೆ ಪರೀಕ್ಷೆ ಇತ್ತು ಆ ಸಂದರ್ಭದಲ್ಲಿ ಬಾಬರಿ ಮಸೀದಿ ಗಲಾಟೆ ಮತ್ತು ಕಾವೇರಿ ಗಲಾಟೆಯ ಗುಂಗಿಗೆ ಜನರನ್ನು ತಳ್ಳಿ 50 ರಿಂದ 100 ಅಂಕಗಳಿಗೆ ಹಿಂದಿ ಸಬ್ಜೆಕ್ಟ್ ನ ಪರೀಕ್ಷೆ ಬದಲಾಯಿಸಿ ಬಿಟ್ಟರು ಎಂಬ ವಿಚಾರವನ್ನು ದಾಖಲೆ ಸಮೇತ ಮಂಡಿಸಿದ ಮೇಲೆ ಎರಡು ನುಡಿ ನೀತಿ ಅಳವಡಿಕೆಗೆ ತಯಾರಿ ನಡೆಸಿದರು. ಇಲ್ಲೂ ಕೂಡ ಒಂದು ತಕರಾರು ತಂದಿಟ್ಟಿದ್ದಾರೆ ಅದೇನೆಂದರೆ, ನಾವುಗಳು ಕೇಳಿದಂತೆ ಕನ್ನಡ ಮತ್ತು ಇಂಗ್ಲಿಷ್ ಮಾತ್ರ ಅಂತ ಮಾಡದೆ ತಾಯಿನುಡಿ ಮತ್ತು ಇಂಗ್ಲಿಷ್ ಮಾತ್ರ ಅಂತ ತಿಳಿಸಿದ್ದಾರೆ. ಬೇರೆ ಬೇರೆ ತಾಯಿನುಡಿಯ ಜನ ಅಂದಾಜು ಎರಡು ಕೋಟಿ ಇದ್ದಾರೆ ಕನ್ನಡ ನಾಡಿನಲ್ಲಿ. ಇರಲಿ, ಮೊದಲು ಎರಡು ನುಡಿ ನೀತಿ ಜಾರಿ ಮಾಡಿಸೋಣ ನಂತರ ನೆಲದ ನುಡಿಯಾದ ಕನ್ನಡ ಮೊದಲ ನುಡಿಯಾಗಿ ಕಡ್ಡಾಯ ಅಂತ ಮಾಡಿಸೋಣ.</p>



<p>ಇದೀಗ ಮತ್ತೊಂದು ದಾಖಲೆ ಹಿಡಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಟ್ಟಾಕುವ ಸಮಯ ಬಂದಿದೆ. ಆ ದಾಖಲೆ ಏನೆಂದರೆ ಬಿಹಾರದಲ್ಲಿ ಸಮಾಜವಾದಿ ಕರ್ಪೂರಿಯ ಠಾಕೂರ್ ರವರು ಶಿಕ್ಷಣ ಮಂತ್ರಿ , ಮುಖ್ಯಮಂತ್ರಿಯಾಗಿದ್ದವರು PWE ಪಾಸ್ ವಿಥೌಟ್ ಇಂಗ್ಲೀಷನ್ನು ಕಾನೂನು ಮಾಡಿ ಅಲ್ಲಿನ ಬಿಹಾರಿ ಜನಗಳನ್ನು ಬಿಹಾರಿ ಭಾಷೆ ಬಿಟ್ಟು ಹಿಂದಿ ಭಾಷೆಗೆ ಬಲಿಯಾಗುವಂತೆ ಮಾಡಿದವರು. ಆದರೆ ಅದನ್ನು ಬಿಂಬಿಸಿರುವುದು ಹೇಗೆಂದರೆ ಇವರು ಇಂಗ್ಲೀಷ್ ತೆಗೆದ ಕಾರಣ ತುಂಬಾ ಮಕ್ಕಳು ಶಾಲೆಗೆ ಬಂದರು ಬಡವರು ಹಳ್ಳಿಯವರು ದಲಿತರು ಹೆಣ್ಣು ಮಕ್ಕಳು ಅಂತ. ಅದು ಬಿಹಾರಿಗಳ ನೆಲ ಅವರ ನೆಲದ ನುಡಿ ಉಳಿಸಿಕೊಳ್ಳುವುದು ಬೆಳೆಸುವುದು ಅವರಿಗೆ ಬಿಟ್ಟುಬಿಡೋಣ. ಇಲ್ಲಿ ನಾವು ಗಮನಿಸಬೇಕಾದ ವಿಚಾರ ಏನಂದರೆ ಇಂಡಿಯಾ ಒಕ್ಕೂಟದಲ್ಲಿರುವ ಒಂದು ರಾಜ್ಯದಲ್ಲಿ PWE ಅಂತ ಕಾನೂನು ಮಾಡಲು ಸಾಧ್ಯವಿದೆ ಅಂದಮೇಲೆ ಅದೇ ಇಂಡಿಯಾ ಒಕ್ಕೂಟದಲ್ಲಿರುವ ಮತ್ತೊಂದು ರಾಜ್ಯದಲ್ಲಿ PWH ಪಾಸ್ ವಿಥೌಟ್ ಹಿಂದಿ ಅಂತ ಏಕೆ ಕಾನೂನು ಮಾಡಲು ಆಗುವುದಿಲ್ಲ? ಇವೆರಡು ರಾಜ್ಯಗಳು ಮಾತ್ರವಲ್ಲ ಎಲ್ಲಾ ರಾಜ್ಯಗಳು ಒಂದೇ ಉಪಾಯಗಳ ಅಡಿಯಲ್ಲಿ (ಸಂವಿಧಾನ ಅಡಿಯಲ್ಲಿ) ಇರೋದು ತಾನೇ.</p>



<p>ಈ ಬಿಹಾರದ ದಾಖಲೆಯನ್ನು ಬೇರೆ ಯಾರಿಗು ತೋರುವ ಅಗತ್ಯ ಇಲ್ಲ. ನೇರ ನೇರ ದಾಖಲೆಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಖಕ್ಕೆ ಹಿಡಿಯಬೇಕಿದೆ. ಏಕೆಂದರೆ ಹಿಂದಿ ಸಬ್ಜೆಕ್ಟ್ ತೆಗೆದುಹಾಕಲು ಎಲ್ಲರ ಒಪ್ಪಿಗೆ ದೊರೆತಿದೆ ಇನ್ನೇನಿದ್ದರೂ ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಬಿಟ್ಟದ್ದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ತಿಳಿಸಿದ್ದಾರೆ. ಹಿಂದಿ ಟೀಚರ್ ಗಳ ಲಾಬಿಯಿಂದ ಅದೇನೇನು ಲಾಭ ಪಡೆದಿದ್ದಾರೋ ಬಸವರಾಜ್ ಹೊರಟ್ಟಿಯವರು ಹಿಂದಿ ಸಬ್ಜೆಕ್ಟ್ ತೆಗೆದುಹಾಕಲು ಅಡ್ಡಗಾಲಾಗಿ ನಿಂತಿದ್ದಾರೆ. ಹೇಳಿ ಕೇಳಿ ಸಿದ್ದರಾಮಯ್ಯನವರು ಮತ್ತು ಹೊರಟ್ಟಿಯವರು ಚಡ್ಡಿ ದೋಸ್ತ್ ಗಳು, ಯೌವ್ವನದ ಕಾಲದಿಂದಲು.ಹೊರಟ್ಟಿಯವರು ಇತ್ತೀಚಿಗೆ ಕೋಮುವಾದಿ ಚಡ್ಡಿ ಬೇರೆ ತೊಟ್ಟವರು ಅಧಿಕಾರಕ್ಕಾಗಿ. ನಾನು ಸಮಾಜವಾದಿ ನಾನು ಅಹಿಯಿಂದ, ನಾನು ದಲಿತರಾಮಯ್ಯ, ನಾನು ಕನ್ನಡರಾಮಯ್ಯ ಇನ್ನು ಏನೇನೋ ಬಿರುದು ಬಾವಲಿಗಳ ತಮಗೆ ತಾವೇ ಕೊಟ್ಟುಕೊಂಡು ಸಿದ್ದರಾಮಯ್ಯನವರು<br>ಕೇವಲ ಅಧಿಕಾರಕ್ಕಾಗಿ ತಮ್ಮ ನಿಜವಾದ ಚಡ್ಡಿದೋಸ್ತ್ ಅಡ್ಡಗಾಲನ್ನು ದಾಟಿ ಹಿಂದಿ ಸಬ್ಜೆಕ್ಟ್ ತೆಗೆದಾಕಲು ಮುಂದಾಗಲಾರರು. ಇದೇನಿದ್ದರೂ ನಮ್ಮೆಲ್ಲರ ಹೋರಾಟದಿಂದಲೇ ಆಗಬೇಕಿದೆ.</p>



<p>ವರ್ಷ ವರ್ಷ ಲಕ್ಷಾಂತರ ಮಕ್ಕಳನ್ನು ಹಿಂದಿ ಗುಲಾಮಗಿರಿಗೆ ಶಾಲಾ ಶಿಕ್ಷಣದ ಮೂಲಕ ತಳ್ಳುತ್ತಿರುವ ಎಸೆಸೆಲ್ಸಿ ಹಿಂದಿ ಎಕ್ಸಾಮ್ ನ ಈ ಸರ್ಕಾರ ರದ್ದುಪಡಿಸಲು ಸೂಕ್ತ ದಾಖಲೆ ಬಿಹಾರದ PWE ಕಾನೂನು. ಕನ್ನಡ ನಾಡು ಬಿಟ್ಟು ಬೇರೆ ಕಡೆ ಕನ್ನಡ ಕನ್ನಡಿಗರು ಬೆಳೆಯಲು ನಮಗೆ ಇಂಗ್ಲೀಷ್ ಬೇಕೇ ವಿನಃ ಹಿಂದಿ ಬೇಕಾಗಿಲ್ಲ.ಆದುದ್ದರಿಂದ PWH ಕಾನೂನನ್ನು ಜಾರಿ ಮಾಡಿ 2026 ಮಾರ್ಚ್ ನಲ್ಲಿ ನಡೆಯುವ ಹಿಂದಿ ಸಬ್ಜೆಕ್ಟ್ ಎಕ್ಸಾಮ್ ಗೆ ಕಿಮ್ಮತ್ತಿಲ್ಲದಂತೆ ಮಾಡಬೇಕು ಕರ್ನಾಟಕ ಸರ್ಕಾರ ಅರ್ಥಾತ್ ಸಿದ್ದರಾಮಯ್ಯನವರು. ಇಲ್ಲವಾದರೆ ನುಗ್ಗೋಣ! ಎಲ್ಲಿಗೆ? ವಿಧಾನಸೌಧಕ್ಕೆ ಅಂದುಕೊಂಡಿರ?ಖಂಡಿತಾ ಅಲ್ಲ ಹಿಂದಿ ಎಕ್ಸಾಮ್ ದಿನ ಎಕ್ಸಾಮ್ ಹಾಲ್ಗಳಿಗೆ ನುಗ್ಗೋಣ. ಸುಮ್ಮನೆ ಹಿಂದಿ ಎಕ್ಸಾಮ್ ಬರಿಯೋ ಹಾಗಿಲ್ಲ ಹಂಗೆ ಪಾಸ್ ಮಾಡುತ್ತಾರೆ ಅನ್ನಿ ಎಸ್ ಎಸ್ ಎಲ್ ಸಿ ಮಕ್ಕಳಿಗೆ, ಅವರ ಮುಖದಲ್ಲಿ ಮೂಡುವ ಮಂದಹಾಸವೆ ಕನ್ನಡದ ಬೆಳೆವಣಿಗೆಯ ಪ್ರತೀಕ.</p>



<p>ನಾವೆಲ್ಲರೂ ನೋಡಿರದ ಪೊಲೀಸು, ಕೇಸು, ಕೋರ್ಟು ಯಾವುದಾದರೂ ಇದಿಯಾ? ಕೊನೆಯದಾಗಿ ಮತ್ತೊಂದು ವಿಚಾರ ಬರುವ ಸಾಲಿನಿಂದ ಅಂದರೆ 2026-2027ರಿಂದ ಹಿಂದಿ ಸಬ್ಜೆಕ್ಟ್ ನ ಐವತ್ತು ಅಂಕಗಳಿಗೆ ಇಳಿಸುತ್ತಿದ್ದೇವೆ ಎಂದು ಈಗಾಗಲೇ ಅಧಿಕೃತ ಬಲ್ಲಮೂಲಗಳು ನಮಗೆ ಪಿಸುಮಾತಿನಲ್ಲಿ ತಿಳಿಸಿದ್ದಾರೆ, ನಿಮಗೂ ತಿಳಿಸುತ್ತಾರೆ. ನಾವು ಇದಕ್ಕೆ ಸಮಾಧಾನ ಆಗುವುದು ಬೇಡ ಸಂಪೂರ್ಣವಾಗಿ ಹಿಂದಿ ಸಬ್ಜೆಕ್ಟ್ ತೆಗೆದು ಬಿಸಾಕಲಿ ಕನ್ನಡ ಮತ್ತು ಇಂಗ್ಲಿಷ್ ಮಾತ್ರ ಎಂಬ ಎರಡು ನುಡಿ ಅಳವಡಿಸಲಿ. ಅಲ್ಲಿಯ ವರೆಗೂ ವಿರಾಮಿಸುವುದು ಬೇಡ. ಈಗ ಬಿಹಾರದ ದಾಖಲೆಯನ್ನು ಸಿದ್ದರಾಮಯ್ಯನವರ ಮುಖಕ್ಕೆ ಬಿಸಾಡಿ ಕೇಳೋಣ ಬನ್ನಿ. ಬೆಲೆ ಕೊಡದಿದ್ದರೆ ಹಿಂದಿ ಎಕ್ಸಾಂ ಹಾಲ್ ಗೆ ನುಗ್ಗೋಣ.</p>



<p>✍️ ಅಬಿ ಒಕ್ಕಲಿಗ<br>ಮುಂದಾಳು,9686177118<br></p>



<p></p>
]]></content:encoded>
					
		
		
			</item>
		<item>
		<title>ದಲಿತ ಸೂರ್ಯ ಡಾ.ಸಿದ್ದಲಿಂಗಯ್ಯ ಎಂಬ ಮಹಾಚೇತನದ ಸಾಂಸ್ಕೃತಿಕ ಪಯಣ</title>
		<link>https://peepalmedia.com/cultural-journey-of-the-great-spirit-dr-siddalingaiah/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 03 Feb 2026 08:53:25 +0000</pubDate>
				<category><![CDATA[ಅಂಕಣ]]></category>
		<category><![CDATA[ದಲಿತ ನೋಟ]]></category>
		<category><![CDATA[ನಾಡು-ನುಡಿ]]></category>
		<category><![CDATA[ವಿಶೇಷ]]></category>
		<guid isPermaLink="false">https://peepalmedia.com/?p=73508</guid>

					<description><![CDATA[&#8220;..ಸಿದ್ಧಲಿಂಗಯ್ಯನವರನ್ನು ಕೇವಲ ಒಬ್ಬ &#8216;ದಲಿತ ಕವಿ&#8217; ಎಂದು ಕರೆದು ಒಂದು ಚೌಕಟ್ಟಿಗೆ ಸೀಮಿತಗೊಳಿಸುವುದು ಅವರ ಒಟ್ಟು ಸಾಹಿತ್ಯಕ ಸಾಧನೆಗೆ ಮಾಡುವ ಅಪಚಾರ. ಅವರು ಈ ನಾಡಿನ ನೋವು, ನಲಿವು, ಆಕ್ರೋಶ ಮತ್ತು ಹಾಸ್ಯದ ಪ್ರತಿರೂಪವಾಗಿದ್ದರು..&#8221; ಸಿದ್ದಲಿಂಗಯ್ಯನವರ ಜನ್ಮದಿನದ ವಿಶೇಷವಾಗಿ, ಲೇಖಕ ವಿಆರ್ ಕಾರ್ಪೆಂಟರ್ ಬರಹದಲ್ಲಿ ಕನ್ನಡದ ನೆಲದಲ್ಲಿ ಬದುಕು ಮತ್ತು ಬರಹವನ್ನು ಒಂದೇ ನಾಣ್ಯದ ಎರಡು ಮುಖಗಳಂತೆ ಬದುಕಿದವರು ಕೆಲವೇ ಕೆಲವು ಮಂದಿ. ಅದರಲ್ಲಿ ಸಿದ್ದಲಿಂಗಯ್ಯನವರ ಹೆಸರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ಇವತ್ತು ಫೆಬ್ರವರಿ 3, ಪೊ.ಬಿ ಕೃಷ್ಣಪ್ಪ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>&#8220;..ಸಿದ್ಧಲಿಂಗಯ್ಯನವರನ್ನು ಕೇವಲ ಒಬ್ಬ &#8216;ದಲಿತ ಕವಿ&#8217; ಎಂದು ಕರೆದು ಒಂದು ಚೌಕಟ್ಟಿಗೆ ಸೀಮಿತಗೊಳಿಸುವುದು ಅವರ ಒಟ್ಟು ಸಾಹಿತ್ಯಕ ಸಾಧನೆಗೆ ಮಾಡುವ ಅಪಚಾರ. ಅವರು ಈ ನಾಡಿನ ನೋವು, ನಲಿವು, ಆಕ್ರೋಶ ಮತ್ತು ಹಾಸ್ಯದ ಪ್ರತಿರೂಪವಾಗಿದ್ದರು..&#8221; ಸಿದ್ದಲಿಂಗಯ್ಯನವರ ಜನ್ಮದಿನದ ವಿಶೇಷವಾಗಿ, ಲೇಖಕ ವಿಆರ್ ಕಾರ್ಪೆಂಟರ್ ಬರಹದಲ್ಲಿ </p>
</blockquote>



<p>ಕನ್ನಡದ ನೆಲದಲ್ಲಿ ಬದುಕು ಮತ್ತು ಬರಹವನ್ನು ಒಂದೇ ನಾಣ್ಯದ ಎರಡು ಮುಖಗಳಂತೆ ಬದುಕಿದವರು ಕೆಲವೇ ಕೆಲವು ಮಂದಿ. ಅದರಲ್ಲಿ ಸಿದ್ದಲಿಂಗಯ್ಯನವರ ಹೆಸರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ಇವತ್ತು ಫೆಬ್ರವರಿ 3, ಪೊ.ಬಿ ಕೃಷ್ಣಪ್ಪ ಅವರು ಕಟ್ಟಿಕೊಟ್ಟ ಈ ನಾಡಿನ ದಲಿತ ಸಂಘರ್ಷ ಸಮಿತಿಯನ್ನು ಮುನ್ನಡೆಸಿದವರಲ್ಲಿ ಒಬ್ಬರಾದ, ಕ್ರಾಂತಿಕಾರಿ ಕವಿಯಾದ ಡಾ. ಸಿದ್ದಲಿಂಗಯ್ಯನವರ ಜನ್ಮದಿನ. ಸಿದ್ಧಲಿಂಗಯ್ಯನವರನ್ನು ಕೇವಲ ಒಬ್ಬ &#8216;ದಲಿತ ಕವಿ&#8217; ಎಂದು ಕರೆದು ಒಂದು ಚೌಕಟ್ಟಿಗೆ ಸೀಮಿತಗೊಳಿಸುವುದು ಅವರ ಒಟ್ಟು ಸಾಹಿತ್ಯಕ ಸಾಧನೆಗೆ ಮಾಡುವ ಅಪಚಾರ. ಅವರು ಈ ನಾಡಿನ ನೋವು, ನಲಿವು, ಆಕ್ರೋಶ ಮತ್ತು ಹಾಸ್ಯದ ಪ್ರತಿರೂಪವಾಗಿದ್ದರು. ೧954ರ ಫೆಬ್ರವರಿ 3ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಂಚನಬೆಲೆಯಲ್ಲಿ ಜನಿಸಿದ ಸಿದ್ದಲಿಂಗಯ್ಯನವರು, ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಕೇವಲ ಪದಗಳ ಜೋಡಣೆಯಲ್ಲ, ಬದಲಿಗೆ ಶತಶತಮಾನಗಳಿಂದ ತುಳಿತಕ್ಕೊಳಗಾದ ಸಮುದಾಯದ ಆತ್ಮಗೌರವದ ಧ್ವನಿ.</p>



<p>ಪಿ. ಲಂಕೇಶರ ಬರಹಗಳಲ್ಲಿ ಕಂಡುಬರುವ ನೇರ ನಡೆ-ನುಡಿ, ಸಮಾಜದ ಡೊಂಕುಗಳನ್ನು ಅಣಕಿಸುವ ಮೊನಚು ಮತ್ತು ಮನುಷ್ಯ ಸಂಬಂಧಗಳ ಬಗೆಗಿನ ಕಳಕಳಿಯ ಶೈಲಿಯಲ್ಲಿ ಸಿದ್ದಲಿಂಗಯ್ಯನವರ ಬದುಕು-ಬರಹಗಳನ್ನು ನೋಡುವುದೆಂದರೆ, ಅದು ಕನ್ನಡಿಯ ಮುಂದೆ ನಿಂತು ನಮ್ಮದೇ ಸಮಾಜದ ಅಸಹ್ಯಗಳನ್ನು ಮತ್ತು ಅದರಲ್ಲಿ ಅರಳಿದ ಕಮಲದಂತಹ ಪ್ರತಿಭೆಯನ್ನು ದರ್ಶಿಸಿದಂತೆ. ಸಿದ್ದಲಿಂಗಯ್ಯನವರ ಕಾವ್ಯ &#8216;ಇಕ್ರಲಾ ವದೀರ್ಲಾ&#8217; ಎಂದು ಆರ್ಭಟಿಸಿತು, ಅದೇ ಕವಿಯ ಆತ್ಮಕಥೆ &#8216;ಊರು ಕೇರೆ&#8217; ನಗಿಸುತ್ತಲೇ ನಮ್ಮ ಕಣ್ಣಂಚಿನಲ್ಲಿ ನೀರು ತರಿಸಿತು. ಸಿದ್ದಲಿಂಗಯ್ಯ ಎನ್ನುವ ಹೆಸರೇ ದಲಿತ ಚಳವಳಿಯ ಒಂದು ಕಾಲಘಟ್ಟದ ಪರ್ಯಾಯ ಪದದಂತಿದೆ.</p>



<p><strong>ಮಾಗಡಿಯ</strong><strong>ಮಣ್ಣಿನಿಂದ</strong><strong>ಬೆಂಗಳೂರಿನ</strong><strong>ಸ್ಲಂವರೆಗೆ</strong><strong>:</strong><br>ಸಿದ್ದಲಿಂಗಯ್ಯನವರ ಬದುಕು ಆರಂಭವಾಗಿದ್ದೇ ಸಂಘರ್ಷದ ಹಾದಿಯಲ್ಲಿ ಅವರ ತಂದೆ ದೇವಯ್ಯ ಮತ್ತು ತಾಯಿ ವೆಂಕಮ್ಮ ಬಾಲ್ಯದಲ್ಲಿಯೇ ಹಸಿವು ಮತ್ತು ಅವಮಾನದ ರುಚಿ ನೋಡಿದ ಇವರು, ಮಂಚನಬೆಲೆಯಿಂದ ಬೆಂಗಳೂರಿನ ಶ್ರೀರಾಮಪುರದ ಸ್ಟೆಂಗೆ ಬಂದು ಸೇರಿದರು. ಶ್ರೀರಾಮಪುರ ಎನ್ನುವುದು ಕೇವಲ ಒಂದು ಕೇರಿಯಲ್ಲ, ಅದು ನೂರಾರು ದಲಿತ ಕುಟುಂಬಗಳ ಬವಣೆಯ ಕೇಂದ್ರವಾಗಿತ್ತು. ಸಿದ್ಧಲಿಂಗಯ್ಯನವರು ತಮ್ಮ &#8216;ಊರು ಕೇರಿ&#8217; ಆತ್ಮಕಥೆಯಲ್ಲಿ ವಿವರಿಸುವಂತೆ, ಅವರ ತಂದೆ ಒಬ್ಬ ಭೂಮಿ ಇಲ್ಲದ ಕೂಲಿಕಾರರಾಗಿದ್ದರು. ಅಪ್ಪ ಅಕ್ಷರಸ್ಥರಲ್ಲದಿದ್ದರೂ ಮಗ ಓದಬೇಕೆಂಬ ಹಂಬಲ ಅವರಿಗಿತ್ತು. ಸಿದ್ದಲಿಂಗಯ್ಯನವರು ಶಾಲೆಗೆ ಹೋಗುತ್ತಿದ್ದಾಗ ಅನುಭವಿಸಿದ ಜಾತಿ ತಾರತಮ್ಯಗಳು ಅವರಲ್ಲಿ ಆಕ್ರೋಶದ ಕಿಚ್ಚು ಹಚ್ಚಿದ್ದವು.</p>



<p>ಒಂದು ಕಡೆ ಬಡತನ, ಇನ್ನೊಂದು ಕಡೆ ಕೇರಿಯ ಜನರ ಅಸಹಾಯಕತೆ, ಇಂತಹ ಪರಿಸರದಲ್ಲಿ ಬೆಳೆದ ಸಿದ್ದಲಿಂಗಯ್ಯನವರಿಗೆ ಶಿಕ್ಷಣವೇ ದೊಡ್ಡ ಅಸ್ತ್ರವಾಯಿತು. ಮಲ್ಲೇಶ್ವರಂನ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವಾಗಲೇ ಅವರು ಅದ್ಭುತ ಭಾಷಣಕಾರರಾಗಿ ಹೊರಹೊಮ್ಮಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಅವರು ಅಂಬೇಡ್ಕರ್ ಪೆರಿಯಾರ್ ಮತ್ತು ಲೋಹಿಯಾ ಅವರ ವಿಚಾರಧಾರೆಗಳಿಗೆ ಮಾರುಹೋಗಿದ್ದರು. ಈ ಮೂವರ ಚಿಂತನೆಗಳು ಸಿದ್ದಲಿಂಗಯ್ಯನವರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಹಂಬಲ, ಪೆರಿಯಾರ್ ಅವರ ವೈಚಾರಿಕತೆ ಮತ್ತು ಲೋಹಿಯಾ ಅವರ ಸಮಾಜವಾದಿ ನಿಲುವುಗಳು ಸಿದ್ದಲಿಂಗಯ್ಯನವರ ಕವಿತೆಗಳಲ್ಲಿ ಮೇಳವಿಸಿದವು.</p>



<p><strong>&#8216;</strong><strong>ಬೂಸಾ</strong><strong>&#8216; </strong><strong>ಚಳವಳಿ</strong><strong> ಮತ್ತು </strong><strong>ಆಕ್ರೋಶದ</strong><strong>ಉಗಮ</strong><br>೧973ರ &#8216;ಬೂಸಾ ಚಳವಳಿಯು ಕರ್ನಾಟಕದ ಸಾಂಸ್ಕೃತಿಕ ಮತ್ತು ರಾಜಕೀಯ ಇತಿಹಾಸದಲ್ಲಿ ಒಂದು ಮೈಲಿಗಲ್ಲು, ಅಂದಿನ ಸಚಿವ ಬಿ. ಬಸವಲಿಂಗಪ್ಪನವರು ಕನ್ನಡ ಸಾಹಿತ್ಯದ ಕೆಲವು ಮೌಡ್ಯಗಳನ್ನು ಟೀಕಿಸಿ, ಅದು ಬೂಸಾ ಸಾಹಿತ್ಯ ಎಂದು ಕರೆದಾಗ ದೊಡ್ಡ ವಿವಾದವಾಯಿತು. ಮೇಲ್ಮಾತಿಯ ಜನರು ಮತ್ತು ಸಾಹಿತಿಗಳು ಬಸವಲಿಂಗಪ್ಪನವರ ವಿರುದ್ಧ ತಿರುಗಿಬಿದ್ದರು. ಆದರೆ ಸಿದ್ದಲಿಂಗಯ್ಯ ಮತ್ತು ಅವರ ತಂಡ ಬಸವಲಿಂಗಪ್ಪನವರ ಬೆಂಬಲಕ್ಕೆ ನಿಂತಿತು. ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿಗಳ ಮೇಲೆ ಭೀಕರ ಹಲ್ಲೆಗಳು ನಡೆದವು. ಸಿದ್ದಲಿಂಗಯ್ಯನವರು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಇಂತಹ ದೈಹಿಕ ಮತ್ತು ಮಾನಸಿಕ ಹಲ್ಲೆಗಳನ್ನು ಎದುರಿಸಬೇಕಾಯಿತು. ಈ ಹಲ್ಲೆಗಳು ಸಿದ್ದಲಿಂಗಯ್ಯನವರನ್ನು ಕುಗ್ಗಿಸಲಿಲ್ಲ, ಬದಲಿಗೆ ಅವರ ಒಳಗೆ ಸುಪ್ತವಾಗಿದ್ದ ಕವಿಯನ್ನು ಜಾಗೃತಗೊಳಿಸಿದವು.</p>



<p>ಈ ಆಕ್ರೋಶದ ಫಲವಾಗಿ ಹುಟ್ಟಿಕೊಂಡದ್ದೇ &#8216;ಹೊಲೆ ಮಾದಿಗರ ಹಾಡು&#8217; ಎಂಬ ಕವನ ಸಂಕಲನ. ೧975ರಲ್ಲಿ ಪ್ರಕಟವಾದ ಈ ಪುಟ್ಟ ಪುಸ್ತಕ ಕನ್ನಡ ಸಾಹಿತ್ಯಲೋಕದಲ್ಲಿ ಕಂಪನವನ್ನೇ ಸೃಷ್ಟಿಸಿತು. ಅಲ್ಲಿಯವರೆಗೆ ಕನ್ನಡ ಕವಿತೆಗಳು ನವಿಲು, ಚಂದ್ರ, ಪ್ರೇಮದ ಸುತ್ತ ಸುಳಿಯುತ್ತಿದ್ದವು. ಆದರೆ ಸಿದ್ಧಲಿಂಗಯ್ಯನವರು ಈ ಎಲ್ಲವನ್ನೂ ಪಕ್ಕಕ್ಕೆ ಸರಿಸಿ, &#8216;ಇಕ್ರಲಾ ವದೀರ್ಲಾ&#8217; ಎಂದು ಗುಡುಗಿದರು. ಅವರ ಪದ್ಯಗಳಲ್ಲಿ ನವಿಲುಗಳಿರಲಿಲ್ಲ, ಬದಲಿಗೆ &#8216;ಹಸಿದ ಹೊಟ್ಟೆಗಳ, ಹರುಕು ಬಟ್ಟೆಗಳ ದಲಿತರು&#8217; ಇದ್ದರು.</p>



<p><strong>ಇಕ್ರಲಾ</strong><strong>ವದೀರ್ಲಾ</strong><strong>: </strong><strong>ಕೇವಲ</strong><strong>ಪದ್ಯವಲ್ಲ</strong><strong>, </strong><strong>ಅದೊಂದು</strong><strong>ಪ್ರತಿಭಟನೆ</strong><br>ಸಿದ್ದಲಿಂಗಯ್ಯನವರ ಇಕ್ರಲಾ ವದೀರ್ಲಾ ಪದ್ಯವು ದಲಿತ ಚಳವಳಿಯ ಗೀತೆಯಾಗಿ ಬದಲಾಯಿತು. ಈ ಪದ್ಯದಲ್ಲಿನ ಪದಪ್ರಯೋಗಗಳು ಎಷ್ಟು ತೀಕ್ಷವಾಗಿದ್ದವು ಎಂದರೆ, ಅದನ್ನು ಕೇಳಿದ ಕೂಡಲೇ ದಲಿತ ಯುವಕರಲ್ಲಿ ಒಂದು ರೀತಿಯ ಮಿಂಚಿನ ಸಂಚಲನವಾಗುತ್ತಿತ್ತು. ನಮ್ಮ ಕೇರಿಗಳ ಮೇಲೆ ಹಲ್ಲೆ ಮಾಡಿದವರನ್ನು, ನಮ್ಮ ತಾಯಿಯ ಮಾನ ಹರಣ ಮಾಡಿದವರನ್ನು ಸುಮ್ಮನೆ ಬಿಡಬೇಡಿ&#8217; ಎನ್ನುವ ಆಕ್ರೋಶ ಅದರಲ್ಲಿತ್ತು, ಆದರೆ ಈ ಆಕ್ರೋಶ ಕೇವಲ ಹಿಂಸೆಯನ್ನು ಪ್ರಚೋದಿಸುವುದಾಗಿರಲಿಲ್ಲ, ಅದು ಶತಮಾನಗಳ ಕಾಲ ತುಳಿತಕ್ಕೊಳಗಾದ ಮನುಷ್ಯನ ಸಹಜ ಪ್ರತಿಕ್ರಿಯೆಯಾಗಿತ್ತು.</p>



<p><strong>ಪೆರಿಯಾರ್</strong><strong>ಎಂಬ</strong><strong>ವೈಚಾರಿಕ</strong><strong>ದಾರಿದೀಪ</strong><br>ಸಿದ್ದಲಿಂಗಯ್ಯನವರ ಮೇಲೆ ಪೆರಿಯಾರ್ ರಾಮಸ್ವಾಮಿ ಅವರ ಪ್ರಭಾವ ಅಪಾರವಾಗಿತ್ತು. ಸಿದ್ಧಲಿಂಗಯ್ಯನವರು ತಮ್ಮ &#8216;ಊರು ಕೇರಿ&#8217;ಯಲ್ಲಿ ಪೆರಿಯಾರ್ ಬೆಂಗಳೂರಿಗೆ ಬಂದಿದ್ದ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ. 1973ರಲ್ಲಿ, ತಮ್ಮ ಸಾವಿಗಿಂತ ಕೆಲವು ತಿಂಗಳ ಮೊದಲು ಪೆರಿಯಾರ್ ಬೆಂಗಳೂರಿನ ಟೌನ್ ಹಾಲ್‌ನಲ್ಲಿ ಭಾಷಣ ಮಾಡಿದ್ದರು. ಆ 94 ವರ್ಷದ ವೃದ್ಧನ ಧ್ವನಿಯಲ್ಲಿ ಇಡೀ ವ್ಯವಸ್ಥೆಯನ್ನು ಅಲುಗಾಡಿಸುವ ಶಕ್ತಿಯಿತ್ತು. ಪೆರಿಯಾರ್ ತಮ್ಮ ಭಾಷಣವನ್ನು&#8221;ದೇವರಿಲ್ಲ, ದೇವರಿಲ್ಲ, ದೇವರು ಎನ್ನುವವನು ಮೂರ್ಖ&#8217; ಎಂದು ಶುರು ಮಾಡುತ್ತಿದ್ದರು. ಸಿದ್ದಲಿಂಗಯ್ಯನವರು ಅಂದು ಆ ಸಭೆಯಲ್ಲಿದ್ದರು. ಪೆರಿಯಾರ್ ಅವರ ತರ್ಕಬದ್ಧ ಮಾತುಗಳು, ಪುರಾಣಗಳನ್ನು ಅಣಕಿಸುವ ರೀತಿ ಮತ್ತು ದ್ರಾವಿಡ ಸಂಸ್ಕೃತಿಯ ಬಗೆಗಿನ ಅವರ ಅಭಿಮಾನ ಸಿದ್ದಲಿಂಗಯ್ಯನವರನ್ನು ಬೆರಗುಗೊಳಿಸಿದ್ದವು.</p>



<p>ಪೆರಿಯಾರ್ ಅವರ &#8220;ಸ್ವಾಭಿಮಾನ ಚಳವಳಿ&#8217; (Self-Respect Movement) ಸಿದ್ದಲಿಂಗಯ್ಯನವರಿಗೆ ದಲಿತ ಚಳವಳಿಯ ರೂಪುರೇಷೆಗಳನ್ನು ಸಿದ್ಧಪಡಿಸಲು ಸಹಾಯ ಮಾಡಿತು. ಜಾತಿ ವ್ಯವಸ್ಥೆಯು ಮೇಲ್ವರ್ಗದವರು ಕೆಳವರ್ಗದವರನ್ನು ಶೋಷಿಸಲು ಸೃಷ್ಟಿಸಿದ ಒಂದು ಆಯುಧ ಎಂದು ಪೆರಿಯಾರ್ ವಾದಿಸುತ್ತಿದ್ದರು. ಇದೇ ವಿಚಾರವನ್ನು ಸಿದ್ದಲಿಂಗಯ್ಯನವರು ತಮ್ಮ &#8216;ಗ್ರಾಮ ದೇವತೆಗಳು&#8217; ಸಂಶೋಧನಾ ಪ್ರಬಂಧದಲ್ಲಿ ಮತ್ತು ತಮ್ಮ ಕವಿತೆಗಳಲ್ಲಿ ವಿಸ್ತರಿಸಿದರು. ವೈದಿಕ ದೇವತೆಗಳಿಗಿಂತ ಜನಪದರ ಅಥವಾ ಗ್ರಾಮ ದೇವತೆಗಳೇ ದಲಿತರ ನೈಜ ಆರಾಧ್ಯ ದೈವಗಳು ಎಂದು ಅವರು ಸಾರಿದರು.</p>



<p>ಪೆರಿಯಾ‌ರ್ ಅವರ ಪ್ರಭಾವ ಸಿದ್ದಲಿಂಗಯ್ಯನವರನ್ನು ಕೇವಲ ಆಸ್ತಿಕ-ನಾಸ್ತಿಕ ಸಂಘರ್ಷಕ್ಕೆ ಸೀಮಿತಗೊಳಿಸಲಿಲ್ಲ. ಬದಲಿಗೆ, ಅದು ಅವರನ್ನು ಸಾಮಾಜಿಕ ಅಸಮಾನತೆಯ ಬೇರುಗಳನ್ನು ಹುಡುಕಲು ಪ್ರೇರೇಪಿಸಿತು. ತಮಿಳುನಾಡಿನಲ್ಲಿ ಪೆರಿಯಾರ್ ಅವರು ಹೋಟೆಲ್ ಫಲಕಗಳಿಂದ &#8216;ಬ್ರಾಹ್ಮಣರಿಗೆ ಮಾತ್ರ&#8217; ಎನ್ನುವ ಪದಗಳನ್ನು ಕಿತ್ತೆಸೆಯಲು ಹೇಗೆ ಹೋರಾಟ ನಡೆಸಿದರೋ, ಸಿದ್ದಲಿಂಗಯ್ಯನವರು ಕರ್ನಾಟಕದಲ್ಲಿ ಅಸ್ಪೃಶ್ಯತೆಯ ಮಾನಸಿಕ ಫಲಕಗಳನ್ನು ಕಿತ್ತೆಸೆಯಲು ತಮ್ಮ ಕಾವ್ಯವನ್ನು ಬಳಸಿದರು.</p>



<p><strong>ದಲಿತ</strong><strong>ಸಂಘರ್ಷ</strong><strong>ಸಮಿತಿ</strong><strong> (DSS) ಮತ್ತು </strong><strong>ಹೋರಾಟದ</strong><strong>ಜೀವನ</strong><br>ಸಿದ್ದಲಿಂಗಯ್ಯನವರು ಕೇವಲ ಕವಿಯಾಗಿ ಕುಳಿತುಕೊಳ್ಳಲಿಲ್ಲ. ಅವರು ಸಂಘಟಕರೂ ಆಗಿದ್ದರು, ಬಿ. ಕೃಷ್ಣಪ್ಪ ಅವರು ಕಟ್ಟಿಕೊಟ್ಟ ಡಿಎಸ್ಎಸ್ ಅನ್ನು ದೇವನೂರ ಮಹದೇವ, ಕೆ.ಬಿ.ಸಿದ್ದಯ್ಯ ಮುಂತಾದವರೊಂದಿಗೆ ಸೇರಿ ಮುನ್ನಡೆಸಿದರು. 1970 ಮತ್ತು 80ರ ದಶಕದಲ್ಲಿ ಡಿ.ಎಸ್.ಎಸ್ ಕರ್ನಾಟಕದಾದ್ಯಂತ ದಲಿತರ ಧ್ವನಿಯಾಗಿ ಕೆಲಸ ಮಾಡಿತು. ಹಳ್ಳಿಗಳಲ್ಲಿ ದಲಿತರ ಮೇಲೆ ಹಲ್ಲೆಯಾದಾಗ, ಭೂಮಿಗಾಗಿ ಹೋರಾಟ ನಡೆದಾಗ ಸಿದ್ದಲಿಂಗಯ್ಯನವರು ಮುಂಚೂಣಿಯಲ್ಲಿ ಇರುತ್ತಿದ್ದರು. ಜನ್ನಿ (ಜನಾರ್ದನ್) ಅವರು ಸಿದ್ದಲಿಂಗಯ್ಯನವರ ಪದ್ಯಗಳನ್ನು ಹಳ್ಳಿ ಹಳ್ಳಿಗಳಲ್ಲಿ ಹಾಡಿ ದಲಿತರನ್ನು ಎಚ್ಚರಿಸಿದರು.</p>



<p>ದಲಿತ ಚಳವಳಿಯಲ್ಲಿ ಸಿದ್ದಲಿಂಗಯ್ಯನವರ ಪಾತ್ರ ಅತ್ಯಂತ ದೊಡ್ಡದು. ಅವರು ಸಂಘರ್ಷದ ಹಾದಿಯಲ್ಲಿಯೂ ಸಹ ಹಾಸ್ಯ ಮತ್ತು ವಿಡಂಬನೆಯನ್ನು ಬಳಸುತ್ತಿದ್ದರು. ಇದರಿಂದಾಗಿ ಜನಸಾಮಾನ್ಯರಿಗೆ ಅವರು ಹತ್ತಿರವಾದರು. ಅವರು ಬಂಡಾಯ ಸಾಹಿತ್ಯ ಸಂಘಟನೆಯನ್ನೂ ಹುಟ್ಟುಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇವರ ಸಾಹಿತ್ಯ ಮತ್ತು ಹೋರಾಟದ ಪ್ರಭಾವದಿಂದಾಗಿ ಕರ್ನಾಟಕದಲ್ಲಿ ದಲಿತ ಸಾಹಿತ್ಯ ಎಂಬ ಒಂದು ಪ್ರತ್ಯೇಕ ಮತ್ತು ಪ್ರಭಾವಿ ಪ್ರಕಾರವೇ ಅಸ್ತಿತ್ವಕ್ಕೆ ಬಂದಿತು. ಸಿದ್ದಲಿಂಗಯ್ಯನವರ ಕವಿತೆಗಳು ಹೋರಾಟದ ಮೈದಾನದಲ್ಲಿ &#8216;ಆಂದೋಲನ ಗೀತೆ ಗಳಾಗಿ ಮಾರ್ಪಟ್ಟವು.</p>



<p><strong>ಸದನದಲ್ಲಿ</strong><strong>ಸಿದ್ದಲಿಂಗಯ್ಯ</strong><br>ಸಿದ್ದಲಿಂಗಯ್ಯನವರು ಎರಡು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ (MLC) ಆಯ್ಕೆಯಾಗಿದ್ದರು. ರಾಜಕೀಯಕ್ಕೆ ಪ್ರವೇಶಿಸಿದಾಗ ಅವರು ತಮ್ಮ ಸಿದ್ಧಾಂತಗಳನ್ನು ಮರೆತರು ಎಂದು ಕೆಲವರು ಟೇಕಿಸಿದರು. ಆದರೆ ಸಿದ್ದಲಿಂಗಯ್ಯನವರು ಸದನವನ್ನು ಕೇವಲ ಭಾಷಣ ಮಾಡುವ ವೇದಿಕೆಯನ್ನಾಗಿ ಬಳಸದೆ, ಕಾನೂನು ರೂಪಿಸುವ ಶಕ್ತಿಯನ್ನಾಗಿ ಬಳಸಿಕೊಂಡರು. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ದಕ್ಷಿಣ ಕನ್ನಡದ &#8216;ಅಜಲು&#8217; ಪದ್ಧತಿಯ ನಿಷೇಧ.</p>



<p>ಕೊರಗ ಜನಾಂಗದವರನ್ನು ಅತ್ಯಂತ ಅಮಾನುಷವಾಗಿ ನಡೆಸಿಕೊಳ್ಳುತ್ತಿದ್ದ ಅಜಲು ಪದ್ಧತಿಯ ಬಗ್ಗೆ ಸಿದ್ದಲಿಂಗಯ್ಯನವರು ಸದನದಲ್ಲಿ ಧ್ವನಿ ಎತ್ತಿದರು. ಮೇಲ್ವರ್ಗದವರ ತಲೆಕೂದಲು ಅಥವಾ ಉಗುರನ್ನು ದಲಿತರ ಆಹಾರದಲ್ಲಿ ಬೆರೆಸಿ ತಿನ್ನಿಸುವಂತಹ ಭೀಕರ ಪದ್ಧತಿಯನ್ನು ಅವರು ವಿವರವಾಗಿ ವಿವರಿಸಿ, ಅದನ್ನು ನಿಷೇಧಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಅವರ ಸತತ ಹೋರಾಟದ ಫಲವಾಗಿ ಕರ್ನಾಟಕ ಸರ್ಕಾರ ಈ ಪದ್ಧತಿಯನ್ನು ನಿಷೇಧಿಸಿತು. &#8216;ಸದನದಲ್ಲಿ ಸಿದ್ದಲಿಂಗಯ್ಯ&#8217; ಪುಸ್ತಕದ ಭಾಗಗಳು ಇಂದಿಗೂ ಸಂಸದೀಯ ವ್ಯವಸ್ಥೆಯಲ್ಲಿ ದಲಿತರ ಸಮಸ್ಯೆಗಳನ್ನು ಹೇಗೆ ಮಂಡಿಸಬೇಕು ಎಂಬುದಕ್ಕೆ ಪಾಠದಂತಿವೆ. ಅವರ ಮಾತುಗಳಲ್ಲಿ ರಾಜಕಾರಣಿಯ ಗರ್ವವಿರಲಿಲ್ಲ, ಬದಲಿಗೆ ಒಬ್ಬ ಕವಿಯ ಸಂವೇದನೆಯಿತ್ತು. ಡಿ.ಆರ್. ನಾಗರಾಜ್ ಅವರು ಹೇಳುವಂತೆ, ಸಿದ್ದಲಿಂಗಯ್ಯನವರ ಮಾತುಗಳು ತೋರಿಕೆಯ ರಾಜಕೀಯ ಧ್ವನಿಯಾಗಿರದೆ, ಕವಿಯ ಒಳಗಣ್ಣಿನ ನುಡಿಗಳಾಗಿದ್ದವು&#8221;.</p>



<p><strong>ಗ್ರಾಮ</strong><strong>ದೇವತೆಗಳು</strong><strong> ಮತ್ತು </strong><strong>ದಲಿತ</strong><strong>ಸಂಸ್ಕೃತಿಯ</strong><strong>ಮರುಶೋಧನೆ</strong><br>ಸಿದ್ದಲಿಂಗಯ್ಯನವರ ಶೈಕ್ಷಣಿಕ ಸಾಧನೆಗಳೂ ಸಾಮಾನ್ಯವಲ್ಲ. ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದರು. ಅವರ ಪಿಎಚ್.ಡಿ ಪ್ರಬಂಧವಾದ &#8216;ಗ್ರಾಮ ದೇವತೆಗಳು&#8217; ಜಾನಪದ ಮತ್ತು ಸಮಾಜಶಾಸ್ತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ ಕೃತಿ. ಅಲ್ಲಿಯವರೆಗೆ ಇತಿಹಾಸಕಾರರು ಕೇವಲ ದೊಡ್ಡ ದೊಡ್ಡ ದೇವಸ್ಥಾನಗಳ ಬಗ್ಗೆ ಬರೆಯುತ್ತಿದ್ದರು. ಆದರೆ ಸಿದ್ದಲಿಂಗಯ್ಯನವರು ಹಳ್ಳಿ ಹಳ್ಳಿಯ ಮಾರಮ್ಮ, ದುರ್ಗಮ್ಮ, ಅಟ್ಟಿಲಕ್ಕಮ್ಮ, ಮುಳ್ಳುಕಟ್ಟಮ್ಮ ಮೊದಲಾದ ದೈವಗಳ ಬಗ್ಗೆ ಅಧ್ಯಯನ ಮಾಡಿದರು.</p>



<p>ಈ ಗ್ರಾಮ ದೇವತೆಗಳು ದಲಿತರ ಮತ್ತು ಕೆಳಜಾತಿಗಳ ಶ್ರಮದ ಸಂಕೇತವಾಗಿವೆ ಎಂದು ಅವರು ಅನೇಕ ಕಡೆಗಳಲ್ಲಿ ಉಲ್ಲೇಖಿಸುತ್ತಾರೆ. ಹಬ್ಬದ ದಿನಗಳಲ್ಲಿ ವಿಭಿನ್ನ ಜಾತಿಗಳು ಒಂದೇ ಕಡೆ ಸೇರುವ ಈ ಗ್ರಾಮ ದೇವತೆಗಳ ಹಬ್ಬಗಳು ನಿಜವಾದ ಜನಪದ ಸಂಸ್ಕೃತಿಯ ಪ್ರತೀಕ ಎಂದು ಅವರು ತೋರಿಸಿಕೊಟ್ಟರು. ಅವರ ಸಂಶೋಧನೆಯು ದಲಿತರ ಸಾಂಸ್ಕೃತಿಕ ಬೇರುಗಳನ್ನು ಗುರುತಿಸುವಲ್ಲಿ ನೆರವಾಯಿತು. ದೇವಸ್ಥಾನಕ್ಕೆ ಪ್ರವೇಶವಿಲ್ಲದಿದ್ದರೂ, ದಲಿತರು ತಮ್ಮದೇ ಆದ ದೇವರನ್ನು ಹೇಗೆ ಸೃಷ್ಟಿಸಿಕೊಂಡರು ಎನ್ನುವುದನ್ನು ಅವರು ವೈಜ್ಞಾನಿಕವಾಗಿ ನಿರೂಪಿಸಿದರು. ಅವರು ಹೇಳುವಂತೆ, ಗ್ರಾಮ ದೇವತೆಗಳು ಕೇವಲ ವಿಗ್ರಹಗಳಲ್ಲ, ಅವು ಸಮುದಾಯದ ಏಕತೆಯ ಮತ್ತು ಹಂಚಿಕೊಂಡ ನೋವಿನ ಅಭಿವ್ಯಕ್ತಿಗಳು&#8221;.</p>



<p><strong>ಹಾಸ್ಯ</strong><strong> ಮತ್ತು </strong><strong>ಆಕ್ರೋಶದ</strong><strong>ಅಪರೂಪದ</strong><strong>ಸಂಗಮ</strong><strong>: </strong><strong>ಊರು</strong><strong>ಕೇರಿ</strong><br>ಸಿದ್ಧಲಿಂಗಯ್ಯನವರ ಕಾವ್ಯದಲ್ಲಿ ಆಕ್ರೋಶವಿದ್ದರೆ, ಅವರ &#8216;ಊರು ಕೇರಿ&#8217; ಆತ್ಮಕಥೆಯಲ್ಲಿ ಹಾಸ್ಯವಿದೆ. ಲಂಕೇಶರು ಹೇಗೆ ತಮ್ಮ &#8216;ಹುಳಿ ಮಾವಿನ ಮರ&#8217;ದಲ್ಲಿ ಮನುಷ್ಯ ಸಹಜ ದೌರ್ಬಲ್ಯಗಳನ್ನು ಹಾಸ್ಯಮಯವಾಗಿ ಚಿತ್ರಿಸಿದರೋ, ಹಾಗೆಯೇ ಸಿದ್ದಲಿಂಗಯ್ಯನವರು ತಮ್ಮ ಬಡತನವನ್ನು, ಕಷ್ಟಗಳನ್ನು ನಗೆಯ ರೂಪದಲ್ಲಿ ಸಾದರಪಡಿಸಿದರು. ಸ್ಲಂನಲ್ಲಿನ ಬದುಕು, ಅಲ್ಲಿನ ಚಿತ್ರ ವಿಚಿತ್ರ ವ್ಯಕ್ತಿಗಳು, ಹಾಸ್ಟೆಲ್ ಜೀವನದ ತಮಾಷೆಗಳು ಇವೆಲ್ಲವೂ ಓದುಗರಿಗೆ ಮುದ ನೀಡುತ್ತವೆ.</p>



<p>ಒಂದು ಕಡೆ ಆಕ್ರೋಶದಿಂದ ಕೂಗಾಡುತ್ತಿದ್ದ ಕವಿ, ಇನ್ನೊಂದು ಕಡೆ ಇಷ್ಟೊಂದು ಸರಳವಾಗಿ ತನ್ನ ಬದುಕನ್ನು ತೆರೆದಿಡುತ್ತಾನೆ ಎನ್ನುವುದೇ ಆಶ್ಚರ್ಯದ ಸಂಗತಿ. ಅವರ ವಿರೋಧಿಗಳೂ ಸಹ ಅವರ ಹಾಸ್ಯ ಪ್ರಜ್ಞೆಯನ್ನು ಮೆಚ್ಚುತ್ತಿದ್ದರು. ಸಿದ್ದಲಿಂಗಯ್ಯನವರ ಪ್ರಕಾರ, ಹಾಸ್ಯ ಎನ್ನುವುದು ಕೇವಲ ಮನರಂಜನೆಯಲ್ಲ, ಅದು ಶೋಷಿತನ ಬದುಕಿನ ಅತಿದೊಡ್ಡ ರಕ್ಷಾಕವಚ, ಎಲ್ಲವನ್ನೂ ಕಳೆದುಕೊಂಡವನಿಗೆ ಉಳಿಯುವುದು ಅಂತಿಮವಾಗಿ ತನ್ನ ಮೇಲೆಯೇ ತಾನು ಮಾಡಿಕೊಳ್ಳುವ ಹಾಸ್ಯ. ಈ ಹಾಸ್ಯವು ಅವರಿಗೆ ರಾಜಕೀಯ ವಿರೋಧಿಗಳನ್ನು ಮತ್ತು ಸಮಾಜದ ಕ್ರೌರ್ಯವನ್ನು ಎದುರಿಸುವ ಶಕ್ತಿಯನ್ನು ನೀಡಿತು.</p>



<p><strong>ಹೋರಾಟದ</strong><strong>ನಡುವೆ</strong><strong>ಹಲ್ಲೆ</strong><strong> ಮತ್ತು </strong><strong>ದೈಹಿಕ</strong><strong>ಸಂಘರ್ಷ</strong><br>ಸಿದ್ದಲಿಂಗಯ್ಯನವರ ಬದುಕು ಕೇವಲ ಅಕ್ಷರಗಳ ಜೊತೆಗಿನ ಆಟವಾಗಿರಲಿಲ್ಲ. ಅದು ಬೀದಿ ಹೋರಾಟದ ಭಾಗವಾಗಿತ್ತು. ಬೂಸಾ ಚಳವಳಿಯ ಸಮಯದಲ್ಲಿ ಅವರು ಅನುಭವಿಸಿದ ದೈಹಿಕ ಹಲ್ಲೆಗಳು ಅವರ ಜೀವನದ ದಿಕ್ಕನ್ನೇ ಬದಲಿಸಿದವು. ಬಸವಲಿಂಗಪ್ಪನವರ ಹೇಳಿಕೆಯನ್ನು ವಿರೋಧಿಸಿ. ಮೇಲ್ಮಾತಿಯ ವಿದ್ಯಾರ್ಥಿಗಳು ಬೆಂಗಳೂರಿನ ಕಲಾ ಮತ್ತು ವಿಜ್ಞಾನ ಕಾಲೇಜುಗಳಲ್ಲಿ ದಲಿತ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದಾಗ, ಸಿದ್ದಲಿಂಗಯ್ಯ ಮುಂಚೂಣಿಯಲ್ಲಿ ನಿಂತು ಅದನ್ನು ಎದುರಿಸಿದ್ದರು. ಈ ಹಲ್ಲೆಗಳು ಅವರಿಗೆ &#8220;ಜಾತಿ ಎನ್ನುವುದು ಕೇವಲ ಕಲ್ಪನೆಯಲ್ಲ, ಅದು ಮನುಷ್ಯನ ರಕ್ತ ಹರಿಸುವ ಕ್ರೂರ ವಾಸ್ತವ&#8217; ಎಂದು ಮನವರಿಕೆ ಮಾಡಿಕೊಟ್ಟಿತು.</p>



<p>ಅವರ &#8216;ಇಕ್ರಲಾ ವದೀರ್ಲಾ&#8217; ಪದ್ಯದ ಹುಟ್ಟು ಈ ದೈಹಿಕ ನೋವು ಮತ್ತು ಮಾನಸಿಕ ಅವಮಾನದ ಫಲವೇ ಆಗಿದೆ. ಆಕ್ರೋಶದ ನುಡಿಗಟ್ಟುಗಳು ಅವರ ಪೆನ್ನಿನಿಂದ ಹೊರಬಂದಾಗ, ಅದು ಕೇವಲ ಸಾಹಿತ್ಯವಾಗಲಿಲ್ಲ, ಬದಲಿಗೆ ಅದು ಹಲ್ಲೆಗೊಳಗಾದ ದಲಿತ ಸಮುದಾಯದ ತಿರುಗಿಬೀಳುವ ಕೆಚ್ಚಾಯಿತು. ಇತಿಹಾಸಕಾರ ರಾಮಚಂದ್ರ ಗುಹಾ ಅವರು ಹೇಳುವಂತೆ, ಸಿದ್ದಲಿಂಗಯ್ಯನವರ ಸಾಹಿತ್ಯದಲ್ಲಿನ ಆಕ್ರೋಶವು &#8220;ಸಂಸ್ಕಾರಯುತ ಪ್ರತಿಭಟನೆಯ ರೂಪವಾಗಿತ್ತು.</p>



<p><strong>ಕನ್ನಡಕ್ಕೆ</strong><strong>ಸಿದ್ದಲಿಂಗಯ್ಯನವರ</strong><strong>ಕೊಡುಗೆ</strong><br>ಸಿದ್ದಲಿಂಗಯ್ಯನವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಅವರು ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಶ್ರವಣಬೆಳಗೊಳದಲ್ಲಿ ನಡೆದ 8೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅವರು ಮಾಡಿದ ಭಾಷಣ ಕನ್ನಡದ ಅಸ್ಮಿತೆಯ ಬಗ್ಗೆ ಮಾತನಾಡಿತು. ಅವರಿಗೆ ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ ಮತ್ತು ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.</p>



<p>ಸಿದ್ದಲಿಂಗಯ್ಯನವರು ಇಂದು ದೈಹಿಕವಾಗಿ ನಮ್ಮೊಂದಿಗಿಲ್ಲ. 2020ರ ಜೂನ್ ೧೧ರಂದು ಅವರು ಕೋವಿಡ್ ನಂತರದ ಸಮಸ್ಯೆಗಳಿಂದಾಗಿ ನಮ್ಮನ್ನು ಅಗಲಿದರು. ಆದರೆ ಅವರ “ಸಾವಿರಾರು ನದಿಗಳು&#8221; ಸಾಗರ ಸೇರುವ ಹಂಬಲದಂತೆ, ಅವರ ವಿಚಾರಗಳು ಇಂದಿಗೂ ನವ ಪೀಳಿಗೆಯ ಹೋರಾಟಗಾರರಿಗೆ ಸ್ಫೂರ್ತಿ ನೀಡುತ್ತಿವೆ. ಅವರ ಕವಿತೆಗಳಲ್ಲಿನ &#8216;ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ&#8221; ಭಾವಗೀತೆಯ ಮೃದುತ್ವ ಮತ್ತು &#8220;ದಲಿತರು ಬರುವರು ದಾರಿ ಬಿಡಿ&#8221; ಘೋಷಣೆಯ ಕೆಚ್ಚು ಎರಡೂ ಕನ್ನಡದ ಆಸ್ತಿ.</p>



<p>ಸಿದ್ದಲಿಂಗಯ್ಯನವರ ಜೀವನ ನಮಗೆ ಕಲಿಸಿಕೊಡುವುದು ಒಂದೇ &#8211; ಎಷ್ಟೇ ಅವಮಾನಗಳಾದರೂ, ಹಲ್ಲೆಗಳಾದರೂ ಸತ್ಯದ ಹಾದಿಯನ್ನು ಬಿಡಬಾರದು ಮತ್ತು ನಮ್ಮ ಅಸ್ಮಿತೆಯನ್ನು ನಾವು ಹೆಮ್ಮೆಯಿಂದ ಪ್ರತಿಪಾದಿಸಬೇಕು. ಮಾಗಡಿಯ ಮಂಚನಬೆಲೆಯಲ್ಲಿ ಹುಟ್ಟಿದ ಆ ಪುಟ್ಟ ಬಾಲಕ ಇಡೀ ಕರ್ನಾಟಕವೇ ಹೆಮ್ಮೆ ಪಡುವಂತಹ ಸಾಂಸ್ಕೃತಿಕ ನಾಯಕನಾಗಿ ಬೆಳೆದ ಹಾದಿಯೇ ಒಂದು ದೊಡ್ಡ ಕಾವ್ಯ ಲಂಕೇಶರ ಬರಹಗಳಲ್ಲಿರುವಂತೆ, ಸಿದ್ದಲಿಂಗಯ್ಯ ಕೂಡ ವ್ಯವಸ್ಥೆಯ &#8216;ಬಿರುಕು&#8217;ಗಳ ಮೂಲಕವೇ ಬೆಳೆದು ಬಂದು, ಆ ಬಿರುಕುಗಳನ್ನು ಮುಚ್ಚುವ ಕೆಲಸ ಮಾಡಿದರು. ಇವತ್ತು ಅವರ ಜನ್ಮದಿನದಂದು ಆ ಮಹಾನ್ ಚೇತನಕ್ಕೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ. ಸಿದ್ದಲಿಂಗಯ್ಯನವರ ಸಾಹಿತ್ಯದ ಮೂಲಕ ಕನ್ನಡದ ಸಂವೇದನೆ ಮತ್ತಷ್ಟು ವಿಸ್ತಾರವಾಗಲಿ, ಅವರ ಆಕ್ರೋಶದ ನುಡಿಗಟ್ಟುಗಳು ಸಮಾಜದ ಕೊಳೆಯನ್ನು ತೊಳೆಯುವ ಕಾವೇರಿಯಾಗಲಿ.</p>



<p>ಸಿದ್ದಲಿಂಗಯ್ಯನವರ ಕೊಡುಗೆ ಕೇವಲ ದಲಿತರಿಗೆ ಸೀಮಿತವಲ್ಲ, ಅದು ಇಡೀ ಕನ್ನಡ ನಾಡಿಗೆ ಲಭಿಸಿದ ಸಾಂಸ್ಕೃತಿಕ ವರದಾನ. ಶ್ರಮಿಕ ವರ್ಗದ ಶ್ರೇಷ್ಠತೆಯನ್ನು ಸಾರಿದ ಅವರ ಹಾಡುಗಳು ಕನ್ನಡದ ಸಾಂಪ್ರದಾಯಿಕ ಸಾಹಿತ್ಯ ಚೌಕಟ್ಟನ್ನು ಮುರಿದು ಹೊಸ ದಿಕ್ಕನ್ನು ತೋರಿಸಿಕೊಟ್ಟವು. ಈ ಹಾದಿಯಲ್ಲಿ ಅವರು ಕಂಡುಕೊಂಡ ಗೆಲುವು ಇಡೀ ಮಾನವಕುಲದ ಗೆಲುವು. ಸಿದ್ಧಲಿಂಗಯ್ಯನವರು ಸದಾ ನಮ್ಮ ನಗು ಮತ್ತು ಹೋರಾಟದ ನಡುವೆ ಜೀವಂತವಾಗಿರುತ್ತಾರೆ.</p>
]]></content:encoded>
					
		
		
			</item>
		<item>
		<title>ಮೋದಿ ಸರ್ಕಾರದಲ್ಲಿ ಸಾಲವೇ ಸಾಲ, ಕಾಗದದ ಮೇಲಷ್ಟೇ ಕಾಣುತ್ತಿದೆ ಅಮೃತ ಕಾಲ</title>
		<link>https://peepalmedia.com/modi-govt-drowning-in-debt/</link>
		
		<dc:creator><![CDATA[Peepal Media]]></dc:creator>
		<pubDate>Tue, 03 Feb 2026 02:33:08 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://peepalmedia.com/?p=73494</guid>

					<description><![CDATA[ಮೋದಿ ಆಳ್ವಿಕೆಯಲ್ಲಿ ಸಾಲ ವಿಪರೀತವಾಗಿ ಹೆಚ್ಚುತ್ತಿದೆ. ಹೀಗೆ ಭಾರೀ ಪ್ರಮಾಣದಲ್ಲಿ ಸಾಲ ಮಾಡಿ ವೆಚ್ಚವನ್ನೂ ಹೆಚ್ಚಿಸಲಾಗುತ್ತಿದೆ. ಆದರೆ ಆ ವೆಚ್ಚವು ಜನರ ಕಲ್ಯಾಣಕ್ಕೆ ಬಳಕೆಯಾಗುತ್ತಿಲ್ಲ. ಈ ವರ್ಷ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ವಿಷಯದಲ್ಲಿ ಆರ್ಥಿಕ ತಜ್ಞರು ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಸರ್ಕಾರವು ಆರ್ಥಿಕ ಶಿಸ್ತನ್ನು ಪ್ರದರ್ಶಿಸುತ್ತಿರುವುದಾಗಿ ಹೇಳುತ್ತಿದ್ದರೂ, ವಾಸ್ತವದಲ್ಲಿ ಕಲ್ಯಾಣ ವಲಯಗಳಿಗೆ ಮೀಸಲಿಟ್ಟ ಅನುದಾನ ಸಂಪೂರ್ಣವಾಗಿ ಖರ್ಚಾಗುತ್ತಿಲ್ಲ ಎಂಬುದು ವಿಶ್ಲೇಷಣೆಗಳಿಂದ ತಿಳಿದುಬರುತ್ತಿದೆ. ಕಾಗದದ ಮೇಲೆ ಏರಿಕೆ&#8230; ಖರ್ಚಿನಲ್ಲಿ ಕಡಿತ ಬಜೆಟ್ ಅಂದಾಜಿನ ಪ್ರಕಾರ 2026-27ರಲ್ಲಿ ಒಟ್ಟು [&#8230;]]]></description>
										<content:encoded><![CDATA[
<p>ಮೋದಿ ಆಳ್ವಿಕೆಯಲ್ಲಿ ಸಾಲ ವಿಪರೀತವಾಗಿ ಹೆಚ್ಚುತ್ತಿದೆ. ಹೀಗೆ ಭಾರೀ ಪ್ರಮಾಣದಲ್ಲಿ ಸಾಲ ಮಾಡಿ ವೆಚ್ಚವನ್ನೂ ಹೆಚ್ಚಿಸಲಾಗುತ್ತಿದೆ. ಆದರೆ ಆ ವೆಚ್ಚವು ಜನರ ಕಲ್ಯಾಣಕ್ಕೆ ಬಳಕೆಯಾಗುತ್ತಿಲ್ಲ. ಈ ವರ್ಷ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ವಿಷಯದಲ್ಲಿ ಆರ್ಥಿಕ ತಜ್ಞರು ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಸರ್ಕಾರವು ಆರ್ಥಿಕ ಶಿಸ್ತನ್ನು ಪ್ರದರ್ಶಿಸುತ್ತಿರುವುದಾಗಿ ಹೇಳುತ್ತಿದ್ದರೂ, ವಾಸ್ತವದಲ್ಲಿ ಕಲ್ಯಾಣ ವಲಯಗಳಿಗೆ ಮೀಸಲಿಟ್ಟ ಅನುದಾನ ಸಂಪೂರ್ಣವಾಗಿ ಖರ್ಚಾಗುತ್ತಿಲ್ಲ ಎಂಬುದು ವಿಶ್ಲೇಷಣೆಗಳಿಂದ ತಿಳಿದುಬರುತ್ತಿದೆ.</p>



<p><strong>ಕಾಗದದ ಮೇಲೆ ಏರಿಕೆ&#8230; ಖರ್ಚಿನಲ್ಲಿ ಕಡಿತ</strong> ಬಜೆಟ್ ಅಂದಾಜಿನ ಪ್ರಕಾರ 2026-27ರಲ್ಲಿ ಒಟ್ಟು ಸರ್ಕಾರಿ ವೆಚ್ಚ 53.5 ಲಕ್ಷ ಕೋಟಿ ರೂ. ಮತ್ತು ಬಂಡವಾಳ ವೆಚ್ಚ 12.2 ಲಕ್ಷ ಕೋಟಿ ರೂ. ಇದೆ. ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ. 4.3ಕ್ಕೆ ತಗ್ಗಿಸುವ ಗುರಿ ಹೊಂದಿರುವ ಸರ್ಕಾರ, ಸಾಲ-ಜಿಡಿಪಿ ಅನುಪಾತವನ್ನು ಶೇ. 55.6ಕ್ಕೆ ಸೀಮಿತಗೊಳಿಸುವುದಾಗಿ ಘೋಷಿಸಿದೆ. ಆದರೆ ವಾಸ್ತವದಲ್ಲಿ ಈ ಗುರಿಗಳು ಸಾಧ್ಯವೇ ಎಂಬ ಅನುಮಾನಗಳು ಮೂಡಿವೆ. ಶಿಕ್ಷಣಕ್ಕೆ 1.39 ಲಕ್ಷ ಕೋಟಿ ರೂ., ಆರೋಗ್ಯಕ್ಕೆ 1.05 ಲಕ್ಷ ಕೋಟಿ ರೂ., ಕೃಷಿಗೆ 1.63 ಲಕ್ಷ ಕೋಟಿ ರೂ., ಸಮಾಜ ಕಲ್ಯಾಣಕ್ಕೆ 62,326 ಕೋಟಿ ರೂ., ಗ್ರಾಮೀಣಾಭಿವೃದ್ಧಿಗೆ 2.73 ಲಕ್ಷ ಕೋಟಿ ರೂ. ಮೀಸಲಿಟ್ಟಿರುವುದಾಗಿ ಬಜೆಟ್‌ನಲ್ಲಿ ತೋರಿಸಲಾಗಿದೆ. ಆದರೆ ಹಳೆಯ ಅನುಭವಗಳ ಪ್ರಕಾರ, ಬಜೆಟ್ ಅಂದಾಜುಗಳಿಂದ (BE) ಪರಿಷ್ಕೃತ ಅಂದಾಜುಗಳಿಗೆ (RE) ಬರುವಷ್ಟರಲ್ಲಿ ಈ ಎಲ್ಲಾ ವಲಯಗಳಲ್ಲಿನ ವೆಚ್ಚಗಳು ಕಡಿಮೆಯಾಗುತ್ತಿವೆ. 2025-26ರ ಆರ್ಥಿಕ ವರ್ಷದಲ್ಲಿ ಗ್ರಾಮೀಣಾಭಿವೃದ್ಧಿ ಹಂಚಿಕೆಯು 2.65 ಲಕ್ಷ ಕೋಟಿ ರೂ.ಗಳಿಂದ 2.12 ಲಕ್ಷ ಕೋಟಿ ರೂ.ಗಳಿಗೆ ಇಳಿದಿದೆ. ಸಮಾಜ ಕಲ್ಯಾಣ, ಶಿಕ್ಷಣ, ಆರೋಗ್ಯ ಮತ್ತು ಕೃಷಿಯಂತಹ ಪ್ರಮುಖ ವಲಯಗಳಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದೆ.</p>



<p><strong>ನರೇಗಾ ಮತ್ತು ಪಿಎಂ-ಪೋಷಣ್ ಯೋಜನೆಗಳ ಮೇಲೆ ಪರಿಣಾಮ</strong> ಗ್ರಾಮೀಣ ಭಾಗದಲ್ಲಿ ಸಂಕಷ್ಟಗಳಿದ್ದರೂ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ (MGNREGS) ಬಜೆಟ್ ಹಂಚಿಕೆಯಲ್ಲಿ ಯಾವುದೇ ನೈಜ ಏರಿಕೆ ಕಂಡುಬಂದಿಲ್ಲ. ಕೇಂದ್ರದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗಿನಿಂದ ಮೋದಿ ಸರ್ಕಾರ ಇದನ್ನು ಕಡೆಗಣಿಸುತ್ತಿದೆ. ಹಂತ ಹಂತವಾಗಿ ಇದನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂಬ ಆರೋಪಗಳೂ ಇವೆ. 2026-27ರಲ್ಲಿ ಇದನ್ನು &#8216;ವಿಕಸಿತ್ ಭಾರತ್ ಗ್ರಾಮೀಣ್&#8217; ಕಾರ್ಯಕ್ರಮದೊಂದಿಗೆ ವಿಲೀನಗೊಳಿಸಿರುವುದರಿಂದ ನಿಜವಾದ ವೆಚ್ಚದ ಏರಿಕೆ ಎಷ್ಟೆಂಬುದು ಸ್ಪಷ್ಟವಾಗಿ ಕಾಣುತ್ತಿಲ್ಲ. ಪಿಎಂ-ಪೋಷಣ್, ಅಂಗನವಾಡಿ ಯೋಜನೆಗಳಿಗೆ ಮೀಸಲಿಟ್ಟ ಅನುದಾನದ ನೈಜ ಬಿಡುಗಡೆ ಕಡಿಮೆಯಾಗುತ್ತಿರುವುದರಿಂದ ಮಕ್ಕಳು ಮತ್ತು ಮಹಿಳೆಯರ ಪೋಷಣೆಯ ಸ್ಥಿತಿ ಸುಧಾರಿಸುತ್ತಿಲ್ಲ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (NFHS-5) ಅಂಕಿಅಂಶಗಳ ಪ್ರಕಾರ ಮಕ್ಕಳಲ್ಲಿ ರಕ್ತಹೀನತೆ ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ.</p>



<p><strong>ಹೆಚ್ಚುತ್ತಿರುವ ಬಡ್ಡಿ ಹೊರೆ</strong> ಕೇಂದ್ರದ ಮೋದಿ ಸರ್ಕಾರ ಆರ್ಥಿಕ ಶಿಸ್ತಿನ ಬಗ್ಗೆ ಮಾತನಾಡುತ್ತಿದ್ದರೂ, ದಿನೇ ದಿನೇ ಹೆಚ್ಚುತ್ತಿರುವ ಸಾಲ ಮತ್ತು ಆ ಸಾಲದ ಮೇಲಿನ ಬಡ್ಡಿ ದೊಡ್ಡ ಹೊರೆಯಾಗಿ ಪರಿಣಮಿಸುತ್ತಿದೆ. ಸರ್ಕಾರದ ಕಲ್ಯಾಣ ವೆಚ್ಚಗಳಿಗೆ ಅಡ್ಡಿಯಾಗಿರುವ ಪ್ರಮುಖ ಅಂಶವೆಂದರೆ ಬಡ್ಡಿ ಪಾವತಿಯ ಹೊರೆ. 2025ರಲ್ಲಿ 11.37 ಲಕ್ಷ ಕೋಟಿ ರೂ. ಇದ್ದ ಬಡ್ಡಿ ಪಾವತಿಯು 2026ರಲ್ಲಿ 12.76 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಇದರಿಂದಾಗಿ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚುವರಿ ಅನುದಾನ ಮೀಸಲಿಡುವುದು ಆರ್ಥಿಕವಾಗಿ ಹೊರೆಯಾಗುತ್ತಿದೆ. ಮೋದಿ ಸರ್ಕಾರಕ್ಕೆ ಸರಿಯಾದ ಆರ್ಥಿಕ ಯೋಜನೆಯಿಲ್ಲ ಎಂಬುದಕ್ಕೆ ಇದೊಂದು ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದು ಆರ್ಥಿಕ ತಜ್ಞರು ಮತ್ತು ಬುದ್ಧಿಜೀವಿಗಳು ಅಭಿಪ್ರಾಯಪಟ್ಟಿದ್ದಾರೆ.</p>



<p><strong>ನಾಮಮಾತ್ರದ ಏರಿಕೆಯಿಂದ ಮಾನವ ಅಭಿವೃದ್ಧಿ ಕಷ್ಟ</strong> ಪಿಎಂ-ಕಿಸಾನ್, ಆಯುಷ್ಮಾನ್ ಭಾರತ್, ಪಿಎಂ-ಪೋಷಣ್ ಮುಂತಾದ ಯೋಜನೆಗಳಿಗೆ ಅಲ್ಪ ಏರಿಕೆ ತೋರಿಸಿದ್ದರೂ, ಹಣದುಬ್ಬರವನ್ನು ಪರಿಗಣಿಸಿದರೆ ಅವುಗಳ ನೈಜ ಮೌಲ್ಯ ಕಡಿಮೆಯಾಗಿದೆ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಆರೋಗ್ಯ, ಪೋಷಣೆ ಮತ್ತು ಆದಾಯ ಭದ್ರತಾ ವಲಯಗಳಲ್ಲಿನ ಈ ನಾಮಮಾತ್ರದ ಏರಿಕೆಗಳು ಮಾನವ ಅಭಿವೃದ್ಧಿಯ ಫಲಿತಾಂಶಗಳನ್ನು ಬದಲಾಯಿಸಲಾರವು ಎಂದು ಅವರು ಎಚ್ಚರಿಸಿದ್ದಾರೆ.</p>



<p>ಒಟ್ಟಾರೆಯಾಗಿ 2026-27ರ ಬಜೆಟ್‌ನಲ್ಲಿ ಕಲ್ಯಾಣ ರಾಜ್ಯದಂತೆ ಬಿಂಬಿಸಿಕೊಳ್ಳುವ ಪ್ರಯತ್ನವನ್ನು ಮೋದಿ ಸರ್ಕಾರ ಮಾಡಿದೆ. ಆದರೆ ಅನುಷ್ಠಾನದಲ್ಲಿನ ಲೋಪಗಳು ಮತ್ತು ನೈಜ ವೆಚ್ಚಗಳಲ್ಲಿನ ಕಡಿತದ ಕಾರಣದಿಂದಾಗಿ ಜನರ ಜೀವನಮಟ್ಟದಲ್ಲಿ ಗಮನಾರ್ಹ ಬದಲಾವಣೆ ಕಾಣುವುದು ಕಷ್ಟ ಎಂದು ಆರ್ಥಿಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಕೇವಲ ಅನುದಾನ ಹಂಚಿಕೆ ಮಾತ್ರವಲ್ಲ, ಅವುಗಳು ಪ್ರಾಮಾಣಿಕವಾಗಿ ಖರ್ಚಾಗುವುದು ಕೂಡ ಸವಾಲಾಗಿ ಪರಿಣಮಿಸಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮೋದಿ ಸರ್ಕಾರದ ಆಡಳಿತವು ಜನರ ಅಗತ್ಯಗಳಿಗಿಂತ ರಾಜಕೀಯ ಲಾಭಕ್ಕಾಗಿಯೇ ಹೆಚ್ಚು ಕೆಲಸ ಮಾಡುತ್ತಿದೆ ಎಂಬ ಅಭಿಪ್ರಾಯ ಬಲವಾಗುತ್ತಿದೆ. ಘೋಷಣೆಗಳು ಮತ್ತು ಪ್ರಚಾರಗಳಲ್ಲದೆ ನಿಜವಾದ ಉದ್ಯೋಗ, ಬಲವಾದ ಕಲ್ಯಾಣ ಯೋಜನೆಗಳು ಮತ್ತು ಸಮಾನ ಅಭಿವೃದ್ಧಿಯ ಅಗತ್ಯವಿದೆ ಎಂದು ಬುದ್ಧಿಜೀವಿಗಳು ಸಲಹೆ ನೀಡಿದ್ದಾರೆ. ಅವಿಲ್ಲದೆ ಹೋದರೆ ಮೋದಿ ಸರ್ಕಾರ ಸದಾ ಹೇಳುವ &#8216;ವಿಕಸಿತ್ ಭಾರತ್&#8217; ಕೇವಲ ಟೊಳ್ಳು ಘೋಷಣೆಯಾಗಿ ಉಳಿಯಲಿದೆ ಎಂದು ಅವರು ಎಚ್ಚರಿಸಿದ್ದಾರೆ.</p>
]]></content:encoded>
					
		
		
			</item>
	</channel>
</rss>
