<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ರಾಜಕೀಯ &#8211; Peepal Media</title>
	<atom:link href="https://peepalmedia.com/category/politics/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Wed, 26 Aug 2026 01:42:56 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.1</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>ರಾಜಕೀಯ &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ದೇಶದಲ್ಲಿ ಪ್ರತಿ ಸಮುದಾಯಕ್ಕೂ ಅದರದೇ ಆದ ನಾಯಕತ್ವವಿರುವಾಗ, ಮುಸ್ಲಿಮರಿಗೆ ಏಕೆ ಸ್ವತಂತ್ರ ರಾಜಕೀಯ ನಾಯಕತ್ವ ಇರಬಾರದು?: ಅಸಾದುದ್ದೀನ್ ಓವೈಸಿ</title>
		<link>https://peepalmedia.com/asaduddin-owaisi-speech-aimim-up-assembly-elections-muslim-leadership/</link>
		
		<dc:creator><![CDATA[Peepal Media]]></dc:creator>
		<pubDate>Wed, 26 Aug 2026 01:42:55 +0000</pubDate>
				<category><![CDATA[ರಾಜಕೀಯ]]></category>
		<guid isPermaLink="false">https://peepalmedia.com/?p=84018</guid>

					<description><![CDATA[ಹೈದರಾಬಾದ್‌ನಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಎಐಎಂಐಎಂ (AIMIM) ರಾಷ್ಟ್ರೀಯ ಅಧ್ಯಕ್ಷ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ, ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಭೆಯನ್ನುದ್ದೇಶಿಸಿ ಮಾತನಾಡಿದ ಓವೈಸಿ, &#8220;ಬಿಹಾರದಲ್ಲಿ ನಮ್ಮ ಪಕ್ಷದ ಐವರು ಶಾಸಕರು ಗೆದ್ದು ಬಂದಿದ್ದಾರೆ. ಅದೇ ರೀತಿ ಉತ್ತರ ಪ್ರದೇಶದಲ್ಲೂ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಅಭ್ಯರ್ಥಿಗಳು ಗೆದ್ದು ಅಸೆಂಬ್ಲಿ ಪ್ರವೇಶಿಸಲಿದ್ದಾರೆ. ನಮ್ಮ ಮೇಲೆ ಎಷ್ಟೇ ಆಪಾದನೆಗಳನ್ನು ಹೊರಿಸಿದರೂ ನಾವು ಹೆದರುವುದಿಲ್ಲ; [&#8230;]]]></description>
										<content:encoded><![CDATA[
<p class="wp-block-paragraph">ಹೈದರಾಬಾದ್‌ನಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಎಐಎಂಐಎಂ (AIMIM) ರಾಷ್ಟ್ರೀಯ ಅಧ್ಯಕ್ಷ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ, ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>



<p class="wp-block-paragraph">ಸಭೆಯನ್ನುದ್ದೇಶಿಸಿ ಮಾತನಾಡಿದ ಓವೈಸಿ, &#8220;ಬಿಹಾರದಲ್ಲಿ ನಮ್ಮ ಪಕ್ಷದ ಐವರು ಶಾಸಕರು ಗೆದ್ದು ಬಂದಿದ್ದಾರೆ. ಅದೇ ರೀತಿ ಉತ್ತರ ಪ್ರದೇಶದಲ್ಲೂ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಅಭ್ಯರ್ಥಿಗಳು ಗೆದ್ದು ಅಸೆಂಬ್ಲಿ ಪ್ರವೇಶಿಸಲಿದ್ದಾರೆ. ನಮ್ಮ ಮೇಲೆ ಎಷ್ಟೇ ಆಪಾದನೆಗಳನ್ನು ಹೊರಿಸಿದರೂ ನಾವು ಹೆದರುವುದಿಲ್ಲ; ಪ್ರಜಾಪ್ರಭುತ್ವವನ್ನು ಹಾಳುಮಾಡುತ್ತಿದ್ದೀರಿ ಎಂದು ಕೆಲವರು ನನ್ನನ್ನು ದೂರುತ್ತಾರೆ. ಆದರೆ ನಮ್ಮ ಹಕ್ಕುಗಳಿಗಾಗಿ ಹೋರಾಡುವ ನಮಗೆ ದೇವರು ಮತ್ತು ಆತನ ಸಂದೇಶವಾಹಕರ ಕೃಪೆಯಿಂದ ನ್ಯಾಯ ಸಿಗಲಿದೆ ಎಂಬ ಸಂಪೂರ್ಣ ನಂಬಿಕೆಯಿದೆ&#8221; ಎಂದು ಹೇಳಿದರು.</p>



<p class="wp-block-paragraph">ದೇಶದಲ್ಲಿ ಪ್ರತಿಯೊಂದು ಸಮುದಾಯಕ್ಕೂ ಅದರದೇ ಆದ ನಾಯಕತ್ವವಿರುವಾಗ, ಮುಸ್ಲಿಮರಿಗೆ ಏಕೆ ಸ್ವತಂತ್ರ ರಾಜಕೀಯ ನಾಯಕತ್ವ ಇರಬಾರದು ಎಂದು ಪ್ರಶ್ನಿಸಿದ ಅವರು, &#8220;ಸಮುದಾಯಗಳು ಸಂಘಟಿತರಾಗಿ ತಮ್ಮ ನಾಯಕತ್ವವನ್ನು ಬೆಳೆಸಿಕೊಂಡಾಗ ಮಾತ್ರ ದೇಶ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ. ದೇಶದಲ್ಲಿ 18 ಕೋಟಿಗೂ ಅಧಿಕ ಮುಸ್ಲಿಂ ಜನಸಂಖ್ಯೆ ಇದ್ದರೂ ಸಂಸತ್ತಿನಲ್ಲಿ ಕೇವಲ 24 ಮುಸ್ಲಿಂ ಸಂಸದರಿದ್ದಾರೆ. ಸಂಸತ್ತಿನಲ್ಲಿ ಅವರ ಪರವಾಗಿ ಮಾತನಾಡುವವರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ವಂದೇ ಮಾತರಂ ಅಥವಾ ಇತರ ವಿಷಯಗಳ ಚರ್ಚೆ ಬಂದಾಗ ಸಮುದಾಯದ ಪರವಾಗಿ ಗಟ್ಟಿಯಾಗಿ ನಿಲ್ಲಲು ನಮಗೆ ಜನಪ್ರತಿನಿಧಿಗಳ ಅಗತ್ಯವಿದೆ&#8221; ಎಂದರು.</p>



<p class="wp-block-paragraph">ತಮ್ಮ ವಿರುದ್ಧ ಮಾಧ್ಯಮಗಳು ಅಥವಾ ವಿರೋಧಿಗಳು ಎಷ್ಟೇ ಅಪಪ್ರಚಾರ ನಡೆಸಿದರೂ ಸತ್ಯಕ್ಕೆ ಕೊನೆಗೂ ಜಯ ಸಿಗಲಿದೆ ಎಂದು ತಿಳಿಸಿದ ಓವೈಸಿ, ಯುವಕರು ತಮ್ಮ ಹಕ್ಕುಗಳ ರಕ್ಷಣೆಗಾಗಿ ಎಚ್ಚೆತ್ತುಕೊಳ್ಳಬೇಕು ಮತ್ತು ಸಂಘಟಿತರಾಗಬೇಕು ಎಂದು ಕರೆ ನೀಡಿದರು.</p>
]]></content:encoded>
					
		
		
			</item>
		<item>
		<title>‘ಶರಿಯಾ, ಹಲಾಲಾ ಬಗ್ಗೆ ರಾಹುಲ್ ಗಾಂಧಿ ಎಂದಾದರೂ ಮಾತನಾಡಿದ್ದಾರೆಯೇ?’: ಶೈನಾ ಎನ್‌ಸಿ ಮತ್ತು ಬಿಜೆಪಿ ನಾಯಕರಿಂದ ವಾಗ್ದಾಳಿ</title>
		<link>https://peepalmedia.com/shaina-nc-and-bjp-leaders-slam-rahul-gandhi-over-manusmriti-remarks-ucc/</link>
		
		<dc:creator><![CDATA[Peepal Media]]></dc:creator>
		<pubDate>Tue, 25 Aug 2026 08:11:13 +0000</pubDate>
				<category><![CDATA[ರಾಜಕೀಯ]]></category>
		<guid isPermaLink="false">https://peepalmedia.com/?p=83990</guid>

					<description><![CDATA[ಮನುಸ್ಮೃತಿ ಕುರಿತಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ಶಿವಸೇನೆ (ಏಕನಾಥ್ ಶಿಂಧೆ ಬಣ) ನಾಯಕಿ ಶೈನಾ ಎನ್‌ಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿಯವರಿಗೆ ಕೇವಲ ಹಿಂದೂ ಧರ್ಮಗ್ರಂಥಗಳಲ್ಲಿ ಮಾತ್ರ ಕೆಡುಕುಗಳು ಕಾಣಿಸುತ್ತವೆ ಎಂದು ಆರೋಪಿಸಿರುವ ಅವರು, ಶರಿಯಾ, ನಿಖಾಹ್ ಹಲಾಲಾ ಅಥವಾ ತ್ರಿವಳಿ ತಲಾಖ್‌ನಂತಹ ಆಚರಣೆಗಳ ಬಗ್ಗೆ ಅವರು ಎಂದಾದರೂ ಮುಕ್ತವಾಗಿ ಮಾತನಾಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಮಹಿಳೆಯರ ಬಗ್ಗೆ ರಾಹುಲ್ ಗಾಂಧಿಯವರಿಗೆ ಅಷ್ಟೊಂದು ಕಾಳಜಿಯಿದ್ದರೆ, ಏಕರೂಪ ನಾಗರಿಕ ಸಂಹಿತೆಯನ್ನು (UCC) [&#8230;]]]></description>
										<content:encoded><![CDATA[
<p class="wp-block-paragraph">ಮನುಸ್ಮೃತಿ ಕುರಿತಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ಶಿವಸೇನೆ (ಏಕನಾಥ್ ಶಿಂಧೆ ಬಣ) ನಾಯಕಿ ಶೈನಾ ಎನ್‌ಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿಯವರಿಗೆ ಕೇವಲ ಹಿಂದೂ ಧರ್ಮಗ್ರಂಥಗಳಲ್ಲಿ ಮಾತ್ರ ಕೆಡುಕುಗಳು ಕಾಣಿಸುತ್ತವೆ ಎಂದು ಆರೋಪಿಸಿರುವ ಅವರು, ಶರಿಯಾ, ನಿಖಾಹ್ ಹಲಾಲಾ ಅಥವಾ ತ್ರಿವಳಿ ತಲಾಖ್‌ನಂತಹ ಆಚರಣೆಗಳ ಬಗ್ಗೆ ಅವರು ಎಂದಾದರೂ ಮುಕ್ತವಾಗಿ ಮಾತನಾಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.</p>



<p class="wp-block-paragraph">ಮಹಿಳೆಯರ ಬಗ್ಗೆ ರಾಹುಲ್ ಗಾಂಧಿಯವರಿಗೆ ಅಷ್ಟೊಂದು ಕಾಳಜಿಯಿದ್ದರೆ, ಏಕರೂಪ ನಾಗರಿಕ ಸಂಹಿತೆಯನ್ನು (UCC) ಬೆಂಬಲಿಸಲಿ, ಬಾಲ್ಯವಿವಾಹವನ್ನು ನಿಲ್ಲಿಸಲಿ ಹಾಗೂ ಬಹುಪತ್ನಿತ್ವದ ವಿರುದ್ಧ ಕಠಿಣ ಕಾನೂನು ತರಲು ಬೆಂಬಲ ನೀಡಲಿ ಎಂದು ಶೈನಾ ಎನ್‌ಸಿ ಸವಾಲು ಹಾಕಿದ್ದಾರೆ. ಇಂತಹ ಪ್ರಮುಖ ಸುಧಾರಣೆಗಳ ಬಗ್ಗೆ ಮೌನ ವಹಿಸಿ, ಕೇವಲ ಧರ್ಮಗ್ರಂಥಗಳನ್ನು ತಿರುಚಿ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.</p>



<p class="wp-block-paragraph">ಇದೇ ವಿಚಾರವಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, &#8220;ನೀವು ಮನುಸ್ಮೃತಿಯನ್ನು ನಂಬಿ ಅಥವಾ ಬಿಡಿ, ಆದರೆ ತಪ್ಪು ಮಾಹಿತಿಗಳನ್ನು ಹರಡಬೇಡಿ. ಅಥರ್ವವೇದ, ಶತಪಥ ಬ್ರಾಹ್ಮಣ, ಮಹಾಭಾರತ ಮತ್ತು ಮತ್ಸ್ಯ ಪುರಾಣಗಳು ಯಾರ ಮಹಿಮೆಯನ್ನು ಕೊಂಡಾಡುತ್ತವೆಯೋ ಅಂತಹ ಮನುವನ್ನು ಏಕೆ ಅವಮಾನಿಸುತ್ತಿದ್ದೀರಿ? ಸನಾತನಿಗಳು ಪಾಲಿಸುವ ಕಾಲಗಣನೆಯನ್ನು ನೀಡಿದ್ದು ಮನುವೇ ಹೊರತು ಬೇರೆ ಯಾರೂ ಅಲ್ಲ&#8221; ಎಂದು ಹೇಳಿದ್ದಾರೆ.</p>



<p class="wp-block-paragraph">ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಕೂಡ ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದು, &#8220;ರಾಹುಲ್ ಗಾಂಧಿ ಮಹಿಳಾ ಹಕ್ಕುಗಳ ಪ್ರತಿಪಾದಕರಲ್ಲ, ಕೇವಲ ಹಿಂದೂ ವಿರೋಧಿ&#8221; ಎಂದು ವಾಗ್ದಾಳಿ ನಡೆಸಿದ್ದಾರೆ. ಮಹಿಳಾ ಸಬಲೀಕರಣದ ವಿಷಯವನ್ನು ಅವರು ಹಿಂದೂ ಧರ್ಮವನ್ನು ಗುರಿಯಾಗಿಸಲು ಬಳಸಿಕೊಳ್ಳುತ್ತಿದ್ದಾರೆ ಎಂದಿರುವ ಅವರು, ಶರಿಯಾ ಅಡಿಯಲ್ಲಿರುವ ಪಿತೃಪ್ರಧಾನ ಪದ್ಧತಿಗಳ ವಿರುದ್ಧ ಅವರು ಎಂದಿಗೂ ಧ್ವನಿ ಎತ್ತಿಲ್ಲ ಎಂದು ಕಿಡಿಕಾರಿದ್ದಾರೆ.‘ಶರಿಯಾ, ಹಲಾಲಾ ಬಗ್ಗೆ ರಾಹುಲ್ ಗಾಂಧಿ ಎಂದಾದರೂ ಮಾತನಾಡಿದ್ದಾರೆಯೇ?’: ಶೈನಾ ಎನ್‌ಸಿ ಮತ್ತು ಬಿಜೆಪಿ ನಾಯಕರ ವಾಗ್ದಾಳಿ</p>
]]></content:encoded>
					
		
		
			</item>
		<item>
		<title>ಮೋದಿ ಜೊತೆ ಜಂಟಿ ಪತ್ರಿಕಾಗೋಷ್ಠಿ ಬೇಡವೆಂದರೂ ಟ್ರಂಪ್‌ ಅನಿರೀಕ್ಷಿತ ವರ್ತನೆ; ಇನ್ಮುಂದೆ ಭಾರತ ಎಚ್ಚರಿಕೆಯ ನಡೆ</title>
		<link>https://peepalmedia.com/trumps-unexpected-behavior-despite-declining-a-press-conference/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 25 Aug 2026 02:33:36 +0000</pubDate>
				<category><![CDATA[ದೇಶ]]></category>
		<category><![CDATA[ರಾಜಕೀಯ]]></category>
		<category><![CDATA[ವಿದೇಶ]]></category>
		<guid isPermaLink="false">https://peepalmedia.com/?p=83939</guid>

					<description><![CDATA[ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿವಿಧ ದೇಶಗಳ ನಾಯಕರೊಂದಿಗೆ ನಡೆಸುವ ಸಾರ್ವಜನಿಕ ಸಂವಾದಗಳಲ್ಲಿ ತೋರುತ್ತಿರುವ ಅನಿರೀಕ್ಷಿತ ವರ್ತನೆಯನ್ನು ಗಮನದಲ್ಲಿಟ್ಟುಕೊಂಡು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಭೇಟಿಯ ವೇಳೆ ಭಾರತ ಎಚ್ಚರಿಕೆಯ ರಾಜತಾಂತ್ರಿಕ ನಡೆ ಅನುಸರಿಸಿತ್ತು ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಫ್ರಾನ್ಸ್‌ನಲ್ಲಿ ಜೂನ್‌ನಲ್ಲಿ ನಡೆದ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ನಡುವೆ ಮಾತುಕತೆ ನಡೆದಿತ್ತು. ಈ ಭೇಟಿಯ ಬಳಿಕ ಜಂಟಿ ಮಾಧ್ಯಮಗೋಷ್ಠಿ ನಡೆಸದಿರಲು ಭಾರತ ನಿರ್ಧರಿಸಿತ್ತು. ಈ [&#8230;]]]></description>
										<content:encoded><![CDATA[
<p class="wp-block-paragraph">ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿವಿಧ ದೇಶಗಳ ನಾಯಕರೊಂದಿಗೆ ನಡೆಸುವ ಸಾರ್ವಜನಿಕ ಸಂವಾದಗಳಲ್ಲಿ ತೋರುತ್ತಿರುವ ಅನಿರೀಕ್ಷಿತ ವರ್ತನೆಯನ್ನು ಗಮನದಲ್ಲಿಟ್ಟುಕೊಂಡು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಭೇಟಿಯ ವೇಳೆ ಭಾರತ ಎಚ್ಚರಿಕೆಯ ರಾಜತಾಂತ್ರಿಕ ನಡೆ ಅನುಸರಿಸಿತ್ತು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.</p>



<p class="wp-block-paragraph">ಫ್ರಾನ್ಸ್‌ನಲ್ಲಿ ಜೂನ್‌ನಲ್ಲಿ ನಡೆದ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ನಡುವೆ ಮಾತುಕತೆ ನಡೆದಿತ್ತು. ಈ ಭೇಟಿಯ ಬಳಿಕ ಜಂಟಿ ಮಾಧ್ಯಮಗೋಷ್ಠಿ ನಡೆಸದಿರಲು ಭಾರತ ನಿರ್ಧರಿಸಿತ್ತು. ಈ ಕುರಿತು ಅಮೆರಿಕದ ಅಧಿಕಾರಿಗಳಿಗೆ ಭೇಟಿಗೂ ಮುನ್ನವೇ ಮಾಹಿತಿ ನೀಡಲಾಗಿತ್ತು ಎಂದು ಮೂಲಗಳು ಹೇಳಿವೆ.</p>



<p class="wp-block-paragraph">ಈ ನಡುವೆ ಅಮೆರಿಕದ ರಾಯಭಾರಿ ಸರ್ಗಿಯೊ ಗೊರ್ ಅವರು ನೀಡಿದ ಹೇಳಿಕೆ ಇದೀಗ ಚರ್ಚೆಗೆ ಕಾರಣವಾಗಿದೆ. ಮೋದಿ–ಟ್ರಂಪ್ ಭೇಟಿಯ ಸಂದರ್ಭದಲ್ಲಿ ಮಾಧ್ಯಮಗಳು ಹಾಜರಿರಬಹುದು, ಆದರೆ ಪೂರ್ಣ ಪ್ರಮಾಣದ ಸುದ್ದಿಗೋಷ್ಠಿ ಅಥವಾ ಪ್ರಶ್ನೋತ್ತರಕ್ಕೆ ಅವಕಾಶ ನೀಡದಂತೆ ಭಾರತದ ವಿದೇಶಾಂಗ ಸಚಿವಾಲಯ ಮನವಿ ಮಾಡಿತ್ತು ಎಂದು ಗೊರ್ ಹೇಳಿದ್ದರು.</p>



<p class="wp-block-paragraph">ಭಾರತದ ಮನವಿಗೆ ಟ್ರಂಪ್ ಕೂಡ ಆರಂಭದಲ್ಲಿ ಸಮ್ಮತಿ ಸೂಚಿಸಿದ್ದರು. ಆದರೆ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಪ್ರಶ್ನೆ ಕೇಳಲು ಅವಕಾಶ ನೀಡಿದ್ದು, ಸುಮಾರು 45 ನಿಮಿಷಗಳ ಕಾಲ ಸಂವಾದ ನಡೆದಿತ್ತು ಎಂದು ಅಮೆರಿಕ ರಾಯಭಾರಿ ವಿವರಿಸಿದ್ದರು.</p>



<p class="wp-block-paragraph">ಗೊರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಭಾರತೀಯ ಸರ್ಕಾರಿ ಮೂಲಗಳು, ಉನ್ನತ ಮಟ್ಟದ ನಾಯಕರ ಭೇಟಿಯ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಹೇಗೆ ಸಂವಹನ ನಡೆಸಬೇಕು ಎಂಬುದರ ಕುರಿತು ಮುಂಚಿತವಾಗಿ ಚರ್ಚಿಸುವುದು ಸಾಮಾನ್ಯ ರಾಜತಾಂತ್ರಿಕ ಪ್ರಕ್ರಿಯೆ ಎಂದು ಸ್ಪಷ್ಟಪಡಿಸಿವೆ.</p>



<p class="wp-block-paragraph">ಟ್ರಂಪ್ ಅವರು ಈ ಹಿಂದೆ ವಿವಿಧ ವಿಶ್ವ ನಾಯಕರೊಂದಿಗಿನ ಮಾಧ್ಯಮ ಸಂವಾದಗಳ ವೇಳೆ ಅನಿರೀಕ್ಷಿತ ಹೇಳಿಕೆಗಳನ್ನು ನೀಡಿರುವ ಹಿನ್ನೆಲೆಯಲ್ಲಿ, ಮೋದಿ ಭೇಟಿಯ ಸಂದರ್ಭದಲ್ಲಿ ಯಾವುದೇ ಅನಿರೀಕ್ಷಿತ ಪರಿಸ್ಥಿತಿ ಎದುರಾಗದಂತೆ ಭಾರತ ಮುನ್ನೆಚ್ಚರಿಕೆಯ ಕ್ರಮ ಕೈಗೊಂಡಿತ್ತು ಎಂಬುದು ಇದೀಗ ಸರ್ಕಾರದ ಮೂಲಗಳ ಹೇಳಿಕೆಯಿಂದ ಸ್ಪಷ್ಟವಾಗುತ್ತಿದೆ.</p>
]]></content:encoded>
					
		
		
			</item>
		<item>
		<title>ನೈಸ್‌ ಕಂಪನಿ ಖರೀದಿಸಲು ಸಿಎಂ ಮುಂದಾಗಿದ್ದಾರೆ, ಮುಂದಿನ ವಾರ ದಾಖಲೆ ಬಿಡುಗಡೆ : ಕುಮಾರಸ್ವಾಮಿ ಆರೋಪ</title>
		<link>https://peepalmedia.com/chief-minister-is-moving-to-acquire-the-nice-company/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 25 Aug 2026 01:46:11 +0000</pubDate>
				<category><![CDATA[ರಾಜಕೀಯ]]></category>
		<category><![CDATA[ರಾಜ್ಯ]]></category>
		<guid isPermaLink="false">https://peepalmedia.com/?p=83929</guid>

					<description><![CDATA[ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಬೇನಾಮಿ ಕಂಪನಿಗಳ ಮೂಲಕ ನೈಸ್‌ ಕಂಪನಿಯನ್ನು ಖರೀದಿಸಲು ಮುಂದಾಗಿದ್ದಾರೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಜೆಡಿಎಸ್‌ ಕಚೇರಿ ಜೆ.ಪಿ. ಭವನದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಎಂಐಸಿ ಯೋಜನೆಯ ಹೆಸರಿನಲ್ಲಿ ಸಾವಿರಾರು ಎಕರೆ ಭೂಮಿಯನ್ನು ಲೂಟಿ ಮಾಡುವ ಸಂಚು ನಡೆಯುತ್ತಿದೆ ಎಂದು ಆರೋಪಿಸಿದರು. ನೈಸ್‌ ಕಂಪನಿಯನ್ನು ಯಾರು ‘ಟೇಕ್‌ ಓವರ್‌’ ಮಾಡುತ್ತಿದ್ದಾರೆ ಎಂಬುದನ್ನು ಮುಖ್ಯಮಂತ್ರಿ ಜನರ ಮುಂದೆ ಬಹಿರಂಗಪಡಿಸಲಿ ಎಂದು [&#8230;]]]></description>
										<content:encoded><![CDATA[
<p class="wp-block-paragraph">ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಬೇನಾಮಿ ಕಂಪನಿಗಳ ಮೂಲಕ ನೈಸ್‌ ಕಂಪನಿಯನ್ನು ಖರೀದಿಸಲು ಮುಂದಾಗಿದ್ದಾರೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.</p>



<p class="wp-block-paragraph">ಜೆಡಿಎಸ್‌ ಕಚೇರಿ ಜೆ.ಪಿ. ಭವನದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಎಂಐಸಿ ಯೋಜನೆಯ ಹೆಸರಿನಲ್ಲಿ ಸಾವಿರಾರು ಎಕರೆ ಭೂಮಿಯನ್ನು ಲೂಟಿ ಮಾಡುವ ಸಂಚು ನಡೆಯುತ್ತಿದೆ ಎಂದು ಆರೋಪಿಸಿದರು. ನೈಸ್‌ ಕಂಪನಿಯನ್ನು ಯಾರು ‘ಟೇಕ್‌ ಓವರ್‌’ ಮಾಡುತ್ತಿದ್ದಾರೆ ಎಂಬುದನ್ನು ಮುಖ್ಯಮಂತ್ರಿ ಜನರ ಮುಂದೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.</p>



<p class="wp-block-paragraph">“ನನಗೆ ಈ ವ್ಯವಹಾರಕ್ಕೆ ಸಂಬಂಧಿಸಿದ ಹಲವು ಮಾಹಿತಿಗಳಿವೆ. ಮುಂದಿನ ವಾರ ದಾಖಲೆಗಳ ಸಮೇತ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ. ನೈಸ್‌ ಅಕ್ರಮದಲ್ಲಿ ಮುಖ್ಯಮಂತ್ರಿ ನೇರವಾಗಿ ಶಾಮೀಲಾಗಿದ್ದಾರೆ” ಎಂದು ಕುಮಾರಸ್ವಾಮಿ ಆರೋಪಿಸಿದರು.</p>



<p class="wp-block-paragraph">ನೈಸ್‌ ಯೋಜನೆಯನ್ನು ದೇಶದ ದೊಡ್ಡ ಭೂ ಹಗರಣ ಎಂದು ಬಣ್ಣಿಸಿದ ಅವರು, ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ ರೈತರ ಭೂಮಿಗೆ ಹಲವು ವರ್ಷಗಳಾದರೂ ಪರಿಹಾರ ನೀಡಿಲ್ಲ ಎಂದು ದೂರಿದರು. ಒಪ್ಪಂದದಂತೆ 111 ಕಿ.ಮೀ. ರಸ್ತೆ ನಿರ್ಮಿಸಬೇಕಿದ್ದರೂ ಕೇವಲ 5 ಕಿ.ಮೀ. ರಸ್ತೆ ನಿರ್ಮಿಸಲಾಗಿದೆ ಎಂದು ಆರೋಪಿಸಿದರು.</p>



<p class="wp-block-paragraph">ನೈಸ್‌ ಟೋಲ್‌ ಪ್ಲಾಜಾಗಳಲ್ಲಿ ಅಕ್ರಮವಾಗಿ ಹಣ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪಗಳನ್ನೂ ಅವರು ಮಾಡಿದರು. ಈ ವಿಚಾರದಲ್ಲಿ ನ್ಯಾಯಾಲಯದ ಅಭಿಪ್ರಾಯದಂತೆ ಕ್ರಮ ಕೈಗೊಳ್ಳಬೇಕಾಗಿದ್ದರೂ ಸರ್ಕಾರ ನೈಸ್‌ ಕಂಪನಿಯ ಪರ ನಿಂತಿದೆ ಎಂದು ಕುಮಾರಸ್ವಾಮಿ ದೂರಿದರು.</p>



<p class="wp-block-paragraph"><strong>ಬೀದಿ ಹೋರಾಟಕ್ಕೆ ಕರೆ</strong><br>ನೈಸ್‌ ಯೋಜನೆಯಿಂದ ರಾಜ್ಯದ ವಿವಿಧ ಭಾಗಗಳ ಜನರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದ ಕುಮಾರಸ್ವಾಮಿ, ಯುವಕರು ಹಾಗೂ ವಿದ್ಯಾರ್ಥಿಗಳು ಈ ವಿಚಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.</p>



<p class="wp-block-paragraph">ಟೋಲ್‌ ಪಾವತಿಸದಂತೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದ ಅವರು, ಹೋರಾಟ ಶಾಂತಿಯುತವಾಗಿರಬೇಕು. ಟೋಲ್‌ ಪ್ಲಾಜಾಗಳಿಗೆ ನುಗ್ಗುವಂತಹ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಮನವಿ ಮಾಡಿದರು.</p>



<p class="wp-block-paragraph">ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ನೈಸ್‌ ಯೋಜನೆ ಮತ್ತು ಕಂಪನಿ ಮಾಲೀಕರೊಂದಿಗೆ ಇರುವ ಸಂಬಂಧವೇನು, ಯಾವುದೇ ವ್ಯವಹಾರ ನಡೆದಿದೆಯೇ ಎಂಬುದನ್ನು ಜನರ ಮುಂದೆ ಸ್ಪಷ್ಟಪಡಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.</p>
]]></content:encoded>
					
		
		
			</item>
		<item>
		<title>ಡಿಕೆ-ಅದಾನಿ ಭೇಟಿ &#124; ಕೇಂದ್ರ ಸರ್ಕಾರ ಅಂಬಾನಿ ಹಾಗೂ ಅದಾನಿಯ ಗುಲಾಮ ಎನ್ನುವ ನಿಲುವಿಗೆ ಈಗಲೂ ಕಾಂಗ್ರೆಸ್ ಬದ್ಧ: ಪ್ರಿಯಾಂಕ್‌ ಖರ್ಗೆ</title>
		<link>https://peepalmedia.com/priyank-kharge-defends-meeting-with-gautam-adani-contractor-remark-bengaluru/</link>
		
		<dc:creator><![CDATA[Peepal Media]]></dc:creator>
		<pubDate>Mon, 24 Aug 2026 07:07:32 +0000</pubDate>
				<category><![CDATA[ರಾಜಕೀಯ]]></category>
		<category><![CDATA[ರಾಜ್ಯ]]></category>
		<guid isPermaLink="false">https://peepalmedia.com/?p=83877</guid>

					<description><![CDATA[ಬೆಂಗಳೂರು: ಉದ್ಯಮಿ ಗೌತಮ್ ಅದಾನಿ ಅವರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡೆಸಿದ ಭೇಟಿಯನ್ನು ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡಿದ್ದಾರೆ. ಸರ್ಕಾರದ ಏಕೈಕ ಆದ್ಯತೆ ಕಾನೂನು ಪಾಲನೆ ಮಾಡುವುದು ಮತ್ತು ಯೋಜನೆಗಳನ್ನು ಪೂರ್ಣಗೊಳಿಸುವುದಷ್ಟೇ ಎಂದು ಅವರು ತಿಳಿಸಿದ್ದಾರೆ. ಈ ಭೇಟಿಯ ಕುರಿತು ಎದ್ದಿರುವ ಟೀಕೆಗಳಿಗೆ ಉತ್ತರಿಸಿದ ಖರ್ಗೆ, ಅದಾನಿ ಕುರಿತು ವೈಯಕ್ತಿಕ ಅಭಿಪ್ರಾಯಗಳಲ್ಲಿ ಭಿನ್ನತೆಗಳಿರಬಹುದು, ಆದರೆ ಅದು ಸರ್ಕಾರದ ನಿರ್ಧಾರಗಳಲ್ಲಿ ಅಡ್ಡಿಯಾಗಬಾರದು ಎಂದಿದ್ದಾರೆ. ತಮ್ಮ ವಿಧಾನಸಭಾ ಕ್ಷೇತ್ರವಾದ ಚಿತ್ತಾಪುರದಲ್ಲಿರುವ ಎಸಿಸಿ ಸಿಮೆಂಟ್ ಕಾರ್ಖಾನೆಯನ್ನು ಅದಾನಿ ಸಮೂಹ ಸ್ವಾಧೀನಪಡಿಸಿಕೊಂಡಿರುವುದನ್ನು ಅವರು [&#8230;]]]></description>
										<content:encoded><![CDATA[
<p class="wp-block-paragraph">ಬೆಂಗಳೂರು: ಉದ್ಯಮಿ ಗೌತಮ್ ಅದಾನಿ ಅವರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡೆಸಿದ ಭೇಟಿಯನ್ನು ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡಿದ್ದಾರೆ. ಸರ್ಕಾರದ ಏಕೈಕ ಆದ್ಯತೆ ಕಾನೂನು ಪಾಲನೆ ಮಾಡುವುದು ಮತ್ತು ಯೋಜನೆಗಳನ್ನು ಪೂರ್ಣಗೊಳಿಸುವುದಷ್ಟೇ ಎಂದು ಅವರು ತಿಳಿಸಿದ್ದಾರೆ.</p>



<p class="wp-block-paragraph">ಈ ಭೇಟಿಯ ಕುರಿತು ಎದ್ದಿರುವ ಟೀಕೆಗಳಿಗೆ ಉತ್ತರಿಸಿದ ಖರ್ಗೆ, ಅದಾನಿ ಕುರಿತು ವೈಯಕ್ತಿಕ ಅಭಿಪ್ರಾಯಗಳಲ್ಲಿ ಭಿನ್ನತೆಗಳಿರಬಹುದು, ಆದರೆ ಅದು ಸರ್ಕಾರದ ನಿರ್ಧಾರಗಳಲ್ಲಿ ಅಡ್ಡಿಯಾಗಬಾರದು ಎಂದಿದ್ದಾರೆ. ತಮ್ಮ ವಿಧಾನಸಭಾ ಕ್ಷೇತ್ರವಾದ ಚಿತ್ತಾಪುರದಲ್ಲಿರುವ ಎಸಿಸಿ ಸಿಮೆಂಟ್ ಕಾರ್ಖಾನೆಯನ್ನು ಅದಾನಿ ಸಮೂಹ ಸ್ವಾಧೀನಪಡಿಸಿಕೊಂಡಿರುವುದನ್ನು ಅವರು ಉಲ್ಲೇಖಿಸಿದ್ದು, ಇದು ಏಷ್ಯಾದ ಅತಿದೊಡ್ಡ ಕ್ಲಿಂಕರ್ ಪ್ಲಾಂಟ್‌ಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ.</p>



<p class="wp-block-paragraph">&#8220;ಭೇಟಿ ಮಾಡುವುದರಲ್ಲಿ ತಪ್ಪೇನಿದೆ? ನಮ್ಮ ಪಾಲಿಗೆ ಅವರೊಬ್ಬ ಕಾಂಟ್ರಾಕ್ಟರ್ ಅಷ್ಟೇ. ಒಂದೆರಡು ಯೋಜನೆಗಳಲ್ಲಿ ಅವರ ಸಂಸ್ಥೆ ಎಲ್-1 (L1) ಆಗಿದೆ. ಇವು ಕರ್ನಾಟಕ ಸರ್ಕಾರಕ್ಕೆ ಅತ್ಯಂತ ಪ್ರಮುಖ ಯೋಜನೆಗಳು. ನಾವು ಟೆಂಡರ್ ಪ್ರಕ್ರಿಯೆಯ ಮೇಲೆ ಯಾವುದೇ ಪ್ರಭಾವ ಬೀರಿಲ್ಲ. ಯಾರು ಬೇಕಾದರೂ ಎಲ್-1 ಆಗಿ ಹೊರಹೊಮ್ಮಬಹುದು. ನಮಗೆ ಅವರು ಒಬ್ಬ ಗುತ್ತಿಗೆದಾರರಿಗಿಂತ ಹೆಚ್ಚೇನೂ ಅಲ್ಲ,&#8221; ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ.</p>



<p class="wp-block-paragraph">ಈ ಭೇಟಿಯ ವಿರುದ್ಧ ಬಿಜೆಪಿ ಮಾಡುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಅದಾನಿ ಸಮೂಹ ಮತ್ತು ಕೇಂದ್ರ ಸರ್ಕಾರದ ಕುರಿತು ಕಾಂಗ್ರೆಸ್ ಪಕ್ಷದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದಿದ್ದಾರೆ. &#8220;ಕೇಂದ್ರ ಸರ್ಕಾರವು ಅದಾನಿ ಮತ್ತು ಅಂಬಾನಿಯ ಗುಲಾಮ ಎಂಬ ನಮ್ಮ ಪಕ್ಷದ ನಿಲುವು ಇಂದಿಗೂ ಹಾಗೆಯೇ ಇದೆ. ಆದರೆ ನಾನು ಕಾನೂನುಬದ್ಧ ಪ್ರಕ್ರಿಯೆಯನ್ನು ತಡೆಯಲು ಸಾಧ್ಯವಿಲ್ಲ,&#8221; ಎಂದು ಹೇಳಿದ್ದಾರೆ.</p>



<p class="wp-block-paragraph">ಯೋಜನೆಗಳು ಯಶಸ್ವಿಯಾಗಿ ಜಾರಿಯಾಗುವುದಷ್ಟೇ ಸರ್ಕಾರದ ಆದ್ಯತೆ ಎಂದು ಪ್ರತಿಪಾದಿಸಿದ ಖರ್ಗೆ, &#8220;ಅದಾನಿ ಇರಲಿ, ಅಂಬಾನಿ ಇರಲಿ ಅಥವಾ ಅಂಬರೀಶ್ ಇರಲಿ, ನಮ್ಮ ಆದ್ಯತೆ ಕೆಲಸ ಪೂರ್ಣಗೊಳ್ಳಬೇಕು ಎಂಬುದಷ್ಟೇ. ಕಾನೂನು ಪ್ರಕ್ರಿಯೆಯ ಪ್ರಕಾರ ಅದಾನಿ ಕಂಪನಿ ಎಲ್-1 ಆಗಿದೆ. ನಾವು ಈ ಯೋಜನೆಯನ್ನು ಬೇರೆಯವರಿಗೆ ನೀಡಿದ್ದರೆ, ಮಾಧ್ಯಮಗಳೇ ಇದನ್ನು ಹಗರಣ ಎಂದು ಕರೆಯುತ್ತಿದ್ದವು,&#8221; ಎಂದಿದ್ದಾರೆ.</p>



<p class="wp-block-paragraph">ಬೆಂಗಳೂರು ಸುರಂಗ ರಸ್ತೆ ಯೋಜನೆಯನ್ನು ಪ್ರಸ್ತಾಪಿಸಿ ಬಿಜೆಪಿಗೆ ತಿರುಗೇಟು ನೀಡಿದ ಅವರು, &#8220;ಈಗ ಬಿಜೆಪಿಯ ನಿಲುವೇನು? ಅದಾನಿ ಕಂಪನಿಗೆ ಟೆಂಡರ್ ಸಿಕ್ಕಿದೆ ಎಂಬ ಕಾರಣಕ್ಕೆ ಸುರಂಗ ರಸ್ತೆ ಯೋಜನೆ ಆಗಬೇಕೋ ಬೇಡವೋ ಎಂಬುದನ್ನು ಅವರು ಸ್ಪಷ್ಟಪಡಿಸಲಿ. ಈ ಯೋಜನೆಯ ವಿಚಾರವಾಗಿ ಬಿಜೆಪಿ ಸಂಸದರು ನಮ್ಮ ಮೇಲೆ ಮುಗಿಬೀಳುತ್ತಿದ್ದರು, ಈಗ ಅವರ ಸಂಬಂಧಿಕರಾದ ಅದಾನಿಗೆ ಟೆಂಡರ್ ಸಿಕ್ಕಿದೆ. ಟೆಂಡರ್‌ನಲ್ಲಿ ಭಾಗವಹಿಸದಂತೆ ಅರ್ಹ ಕಂಪನಿಗಳನ್ನು ತಡೆಯಲು ಸರ್ಕಾರಕ್ಕೆ ಸಾಧ್ಯವಿಲ್ಲ,&#8221; ಎಂದು ಹೇಳಿದ್ದಾರೆ.</p>
]]></content:encoded>
					
		
		
			</item>
		<item>
		<title>ಪ್ರತಿರೋಧ ಹತ್ತಿಕ್ಕಲೆಂದೇ &#8216;ದಿಮಾಗೀ ನಕ್ಸಲ್&#8217; ಪದ ಬಳಕೆ: ಪ್ರಧಾನಿ ಮೋದಿ ಭಾಷಣದ ವಿರುದ್ಧ ಪ್ರೊಫೆಸರ್ ಆನಂದ್ ತೇಲ್ತುಂಬ್ಡೆ ವಾಗ್ದಾಳಿ</title>
		<link>https://peepalmedia.com/anand-teltumbde-criticism-pm-modi-independence-day-speech-dimagi-naxals/</link>
		
		<dc:creator><![CDATA[Peepal Media]]></dc:creator>
		<pubDate>Mon, 24 Aug 2026 02:06:09 +0000</pubDate>
				<category><![CDATA[ರಾಜಕೀಯ]]></category>
		<guid isPermaLink="false">https://peepalmedia.com/?p=83823</guid>

					<description><![CDATA[ನಾಯಕತ್ವವಿಲ್ಲದ, ಮೀಮ್‌ಗಳ ಆಧಾರಿತ ಯುವಜನರ ಪ್ರತಿಭಟನೆಗೆ ಮಣಿಯುವಂತಾದ ಬಿಜೆಪಿ ಸರ್ಕಾರವು, ಕಾನೂನುಬದ್ಧ ಪ್ರತಿಭಟನೆಯ ವ್ಯಾಪ್ತಿಯನ್ನು ಕುಗ್ಗಿಸಲು ಮೊದಲೇ ಪದಜಾಲವನ್ನು ಸಿದ್ಧಪಡಿಸಿಕೊಂಡು ಕೆಂಪುಕೋಟೆಯ ವೇದಿಕೆಯನ್ನು ಬಳಸಿಕೊಂಡಿದೆ ಎಂದು ಖ್ಯಾತ ಲೇಖಕ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತ ಪ್ರೊಫೆಸರ್ ಆನಂದ್ ತೇಲ್ತುಂಬ್ಡೆ &#8216;ದ ವೈರ್&#8217; ವೆಬ್‌ಸೈಟ್‌ನಲ್ಲಿ ಬರೆದ ಲೇಖನದಲ್ಲಿ ಟೀಕಿಸಿದ್ದಾರೆ. ಅವರ ವಿಶ್ಲೇಷಣೆಯ ಪ್ರಕಾರ, ಸ್ವಾತಂತ್ರ್ಯ ದಿನದಂದು ವಿಜಯಗರ್ವದೊಂದಿಗೆ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಅವರ 75 ನಿಮಿಷಗಳ ಮಾತುಗಳು ಸ್ವಾವಲಂಬನೆ, ತಂತ್ರಜ್ಞಾನ, ಉತ್ಪಾದನೆ, ರಕ್ಷಣೆ ಮತ್ತು ಸಪ್ತಧಾರಾ [&#8230;]]]></description>
										<content:encoded><![CDATA[
<p class="wp-block-paragraph">ನಾಯಕತ್ವವಿಲ್ಲದ, ಮೀಮ್‌ಗಳ ಆಧಾರಿತ ಯುವಜನರ ಪ್ರತಿಭಟನೆಗೆ ಮಣಿಯುವಂತಾದ ಬಿಜೆಪಿ ಸರ್ಕಾರವು, ಕಾನೂನುಬದ್ಧ ಪ್ರತಿಭಟನೆಯ ವ್ಯಾಪ್ತಿಯನ್ನು ಕುಗ್ಗಿಸಲು ಮೊದಲೇ ಪದಜಾಲವನ್ನು ಸಿದ್ಧಪಡಿಸಿಕೊಂಡು ಕೆಂಪುಕೋಟೆಯ ವೇದಿಕೆಯನ್ನು ಬಳಸಿಕೊಂಡಿದೆ ಎಂದು ಖ್ಯಾತ ಲೇಖಕ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತ ಪ್ರೊಫೆಸರ್ ಆನಂದ್ ತೇಲ್ತುಂಬ್ಡೆ &#8216;ದ ವೈರ್&#8217; ವೆಬ್‌ಸೈಟ್‌ನಲ್ಲಿ ಬರೆದ ಲೇಖನದಲ್ಲಿ ಟೀಕಿಸಿದ್ದಾರೆ. ಅವರ ವಿಶ್ಲೇಷಣೆಯ ಪ್ರಕಾರ, ಸ್ವಾತಂತ್ರ್ಯ ದಿನದಂದು ವಿಜಯಗರ್ವದೊಂದಿಗೆ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಅವರ 75 ನಿಮಿಷಗಳ ಮಾತುಗಳು ಸ್ವಾವಲಂಬನೆ, ತಂತ್ರಜ್ಞಾನ, ಉತ್ಪಾದನೆ, ರಕ್ಷಣೆ ಮತ್ತು ಸಪ್ತಧಾರಾ ಕಾರ್ಯತಂತ್ರಗಳ ಸುತ್ತಲೇ ಸುತ್ತಿದವು.</p>



<p class="wp-block-paragraph">ಮುಂದಿನ ಐದು ವರ್ಷಗಳಲ್ಲಿ ಅಮೆರಿಕದಿಂದ ಸುಮಾರು 47.85 ಲಕ್ಷ ಕೋಟಿ ರೂಪಾಯಿ ಮೌಲ್ಯದ ಇಂಧನ, ವಾಯುಯಾನ ಮತ್ತು ತಾಂತ್ರಿಕ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಫೆಬ್ರವರಿಯಲ್ಲಿ ಒಪ್ಪಂದ ಮಾಡಿಕೊಂಡಿದ್ದರೂ ಭಾಷಣದಲ್ಲಿ ಆತ್ಮನಿರ್ಭರತೆಯ ಬಗ್ಗೆ ಮಾತನಾಡಲಾಗಿದೆ. ವಿಶೇಷವಾಗಿ ಯುವಜನತೆಯಲ್ಲಿ ಹೆಚ್ಚುತ್ತಿರುವ ಅಸಮಾಧಾನವನ್ನು ಹತ್ತಿಕ್ಕಲು ಪ್ರಧಾನಿಯವರು &#8216;ದಿಮಾಗೀ ನಕ್ಸಲ್ಸ್&#8217; (ಮಾನಸಿಕ ನಕ್ಸಲರು) ಎಂಬ ಪದವನ್ನು ಪ್ರಯೋಗಿಸಿ ವಿಮರ್ಶೆಗೆ ಗುರಿಯಾಗಿದ್ದಾರೆ. &#8216;ಕಾಕ್ರೋಚ್ ಮೂವ್‌ಮೆಂಟ್&#8217; ಎಂದೂ ಕರೆಯಲ್ಪಡುವ ವಿದ್ಯಾರ್ಥಿ ಚಳವಳಿಯು ಬಿಜೆಪಿ ಸರ್ಕಾರವನ್ನು ಮೊದಲ ಬಾರಿಗೆ ತಲೆಬಾಗುವಂತೆ ಮಾಡಿದೆ ಎಂದು ಅವರು ಉಲ್ಲೇಖಿಸಿದ್ದಾರೆ.</p>



<p class="wp-block-paragraph"><strong>ಮುಂದಿನ 21 ವರ್ಷಗಳವರೆಗೆ ನೀವೇ ಅಧಿಕಾರದಲ್ಲಿರುತ್ತೀರಾ?</strong></p>



<p class="wp-block-paragraph">ಎಲೆಕ್ಟ್ರಾನಿಕ್ಸ್ ಉತ್ಪಾದನೆ 7 ಪಟ್ಟು ಮತ್ತು ರೈಲು ಕೋಚ್‌ಗಳ ತಯಾರಿಕೆ 21 ಪಟ್ಟು ಹೆಚ್ಚಾಗಿದೆ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿಕೊಂಡಿದ್ದಾರಾದರೂ ಪ್ರಮುಖ ವೈಫಲ್ಯಗಳನ್ನು ಮರೆಮಾಚಿದ್ದಾರೆ. ಭಾರತದ ಜಿಡಿಪಿಯಲ್ಲಿ ಉತ್ಪಾದನಾ ಕ್ಷೇತ್ರದ ಪಾಲು ಕಳೆದ 60 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟವಾದ ಶೇ. 13ಕ್ಕೆ ಕುಸಿದಿರುವ ಮಹತ್ವದ ಅಂಶವನ್ನು ಅವರು ಪ್ರಸ್ತಾಪಿಸಿಲ್ಲ. ಜನಾದೇಶವು ಐದು ವರ್ಷಗಳ ಆಡಳಿತಕ್ಕೆ ಮಾತ್ರವೇ ಹೊರತು 21 ವರ್ಷಗಳಿಗಲ್ಲ. ಹಾಗಿರುವಾಗ 2047ರವರೆಗೂ ತಾವೇ ಅಧಿಕಾರದಲ್ಲಿರುತ್ತೇವೆ ಎಂಬಂತೆ 21 ವರ್ಷಗಳ ನಂತರದ ಗುರಿಗಳ ಬಗ್ಗೆ ಮಾತನಾಡುವ ಬದಲು, ಇಂದಿನ ನೈಜ ಸಮಸ್ಯೆಗಳಿಗೆ ಉತ್ತರಿಸಬೇಕಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.</p>



<p class="wp-block-paragraph"><strong>ಪ್ರಶ್ನಿಸುವವರೆಲ್ಲರೂ ನಕ್ಸಲರೇ?</strong></p>



<p class="wp-block-paragraph">ನಾಗರಿಕರ ಸಮಸ್ಯೆಗಳು ಮತ್ತು ಕಳವಳಗಳ ಕುರಿತು ಮಾತನಾಡುವ ಬದಲು, ಪ್ರಧಾನಿಯವರು ಯಾವುದೋ ಶತ್ರುವಿನ ವಿರುದ್ಧ ಹೋರಾಡುತ್ತಿರುವಂತೆ ಮಾತನಾಡಿದ್ದಾರೆ. ತಮ್ಮನ್ನು ಪ್ರಶ್ನಿಸುವ ಪ್ರತಿಯೊಬ್ಬರನ್ನೂ ಶತ್ರುಗಳೆಂಬಂತೆ ಬಿಂಬಿಸಲಾಗುತ್ತಿದ್ದು, ರಾಜಕೀಯವಾಗಿ ಧ್ವನಿ ಎತ್ತುತ್ತಿರುವ ಜೆನ್-ಝಡ್ (Gen-Z) ಮತ್ತು ಜೆನ್ ಆಲ್ಫಾ (Gen-Alpha) ಪೀಳಿಗೆಯವರೇ ತಮ್ಮ ವಿರೋಧಿಗಳು ಎಂಬ ಪರೋಕ್ಷ ಸಂದೇಶ ನೀಡಿದ್ದಾರೆ. ಮೋದಿ ಬಳಸಿದ &#8216;ದಿಮಾಗೀ ನಕ್ಸಲ್ಸ್&#8217; ಪದವು ವಿವಾದಿತ &#8216;ಅರ್ಬನ್ ನಕ್ಸಲ್&#8217; ಎಂಬ ಹಣೆಪಟ್ಟಿಯನ್ನೇ ಹೋಲುತ್ತದೆ. ಕಳೆದ ಕೆಲವು ವರ್ಷಗಳಿಂದ ಶಿಕ್ಷಣ ತಜ್ಞರು ಮತ್ತು ವಿಮರ್ಶಕರ ಮೇಲೆ ಇಂತಹ ಹಣೆಪಟ್ಟಿ ಕಟ್ಟಿ ಟೀಕಿಸಲಾಗುತ್ತಿದೆ ಎಂದು ತೇಲ್ತುಂಬ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>



<p class="wp-block-paragraph"></p>
]]></content:encoded>
					
		
		
			</item>
		<item>
		<title>ದಕ್ಷಿಣ ವಲಯ ಮಂಡಳಿ ಸಭೆಗೆ ಮುನ್ನ ಸಿಎಂ ಡಿ.ಕೆ.ಶಿವಕುಮಾರ್‌ರಿಂದ ಮಹತ್ವದ ಮಾತುಕತೆ</title>
		<link>https://peepalmedia.com/key-discussions-held-by-cm-d-k-shivakumar-earlier/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 20 Aug 2026 08:06:25 +0000</pubDate>
				<category><![CDATA[ರಾಜಕೀಯ]]></category>
		<guid isPermaLink="false">https://peepalmedia.com/?p=83655</guid>

					<description><![CDATA[ಬೆಂಗಳೂರು : ಮಹಾಬಲಿಪುರಂನಲ್ಲಿ ನಡೆಯಲಿರುವ 31ನೇ ದಕ್ಷಿಣ ವಲಯ ಮಂಡಳಿ ಸಭೆಯ ಹಿನ್ನೆಲೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದಕ್ಷಿಣ ಭಾರತದ ವಿವಿಧ ರಾಜ್ಯಗಳ ಪ್ರಮುಖ ನಾಯಕರೊಂದಿಗೆ ಮಹತ್ವದ ಮಾತುಕತೆ ನಡೆಸಿದರು. ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್, ತೆಲಂಗಾಣ ಉಪಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ, ತೆಲಂಗಾಣ ಕೃಷಿ ಸಚಿವ ತುಮ್ಮಲ ನಾಗೇಶ್ವರ ರಾವ್ ಹಾಗೂ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ನಡೆದ ಚರ್ಚೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳ ಸಾಮಾನ್ಯ ಆದ್ಯತೆಗಳು, ಪ್ರಾದೇಶಿಕ ಅಭಿವೃದ್ಧಿ ಹಾಗೂ ರಾಜ್ಯಗಳ [&#8230;]]]></description>
										<content:encoded><![CDATA[
<p class="wp-block-paragraph">ಬೆಂಗಳೂರು : ಮಹಾಬಲಿಪುರಂನಲ್ಲಿ ನಡೆಯಲಿರುವ 31ನೇ ದಕ್ಷಿಣ ವಲಯ ಮಂಡಳಿ ಸಭೆಯ ಹಿನ್ನೆಲೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದಕ್ಷಿಣ ಭಾರತದ ವಿವಿಧ ರಾಜ್ಯಗಳ ಪ್ರಮುಖ ನಾಯಕರೊಂದಿಗೆ ಮಹತ್ವದ ಮಾತುಕತೆ ನಡೆಸಿದರು.</p>



<p class="wp-block-paragraph">ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್, ತೆಲಂಗಾಣ ಉಪಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ, ತೆಲಂಗಾಣ ಕೃಷಿ ಸಚಿವ ತುಮ್ಮಲ ನಾಗೇಶ್ವರ ರಾವ್ ಹಾಗೂ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ನಡೆದ ಚರ್ಚೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳ ಸಾಮಾನ್ಯ ಆದ್ಯತೆಗಳು, ಪ್ರಾದೇಶಿಕ ಅಭಿವೃದ್ಧಿ ಹಾಗೂ ರಾಜ್ಯಗಳ ಹಿತಾಸಕ್ತಿಗೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಅಭಿಪ್ರಾಯ ವಿನಿಮಯ ನಡೆಯಿತು.</p>



<p class="wp-block-paragraph">ಕರ್ನಾಟಕದ ಪರವಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜ್ಯದ ಪ್ರಮುಖ ಆದ್ಯತೆಗಳನ್ನು ಪ್ರಸ್ತಾಪಿಸುವುದರ ಜೊತೆಗೆ, ದಕ್ಷಿಣ ರಾಜ್ಯಗಳ ನಡುವೆ ಪರಸ್ಪರ ಸಹಕಾರ, ಸಮನ್ವಯ ಹಾಗೂ ಅನುಭವಗಳ ವಿನಿಮಯವನ್ನು ಮತ್ತಷ್ಟು ಬಲಪಡಿಸುವ ಅಗತ್ಯದ ಕುರಿತು ಚರ್ಚಿಸಿದರು.</p>



<p class="wp-block-paragraph">ದಕ್ಷಿಣ ಭಾರತದ ರಾಜ್ಯಗಳು ಹಲವು ಸಾಮಾನ್ಯ ಸವಾಲುಗಳನ್ನು ಎದುರಿಸುತ್ತಿದ್ದು, ಪರಸ್ಪರ ಸಹಕಾರ ಮತ್ತು ಸಮನ್ವಯದ ಮೂಲಕ ಅವುಗಳಿಗೆ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಈ ಹಿನ್ನೆಲೆಯಲ್ಲಿ ಮಹಾಬಲಿಪುರಂನಲ್ಲಿ ನಡೆಯಲಿರುವ ದಕ್ಷಿಣ ವಲಯ ಮಂಡಳಿ ಸಭೆ ಮಹತ್ವ ಪಡೆದುಕೊಂಡಿದೆ.</p>



<p class="wp-block-paragraph">ಪ್ರಾದೇಶಿಕ ಅಭಿವೃದ್ಧಿಗೆ ವೇಗ ನೀಡುವುದು, ರಾಜ್ಯಗಳ ನಡುವಿನ ಸಹಕಾರವನ್ನು ಬಲಪಡಿಸುವುದು ಹಾಗೂ ದಕ್ಷಿಣ ಭಾರತದ ಹಂಚಿಕೆಯ ಆದ್ಯತೆಗಳಿಗೆ ಒಗ್ಗಟ್ಟಿನ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಭೆಯಲ್ಲಿ ರಚನಾತ್ಮಕ ಮತ್ತು ಫಲಪ್ರದ ಚರ್ಚೆಗಳು ನಡೆಯುವ ನಿರೀಕ್ಷೆಯಿದೆ.</p>
]]></content:encoded>
					
		
		
			</item>
		<item>
		<title>ಮಣಿಪುರದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ: 3 ದಿನಗಳ ಕಾಲ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಿದ ಸರ್ಕಾರ</title>
		<link>https://peepalmedia.com/manipur-schools-colleges-closed-for-three-days-amid-law-and-order-crisis-bandh/</link>
		
		<dc:creator><![CDATA[Peepal Media]]></dc:creator>
		<pubDate>Thu, 20 Aug 2026 03:35:29 +0000</pubDate>
				<category><![CDATA[ರಾಜಕೀಯ]]></category>
		<guid isPermaLink="false">https://peepalmedia.com/?p=83630</guid>

					<description><![CDATA[ಇಂಫಾಲ: ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳಿಗೆ ಗುರುವಾರದಿಂದ ಶನಿವಾರದವರೆಗೆ (ಆಗಸ್ಟ್ 20 ರಿಂದ 22) ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ, &#8220;ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯಪಾಲರ ಆದೇಶದ ಮೇರೆಗೆ ಮಾಧ್ಯಮಿಕ ಶಿಕ್ಷಣ ಮಂಡಳಿ, ಉನ್ನತ ಮಾಧ್ಯಮಿಕ ಶಿಕ್ಷಣ ಮಂಡಳಿ, ಸಿಬಿಎಸ್‌ಇ (CBSE) ಅಥವಾ ಇತರ ಯಾವುದೇ ಮಂಡಳಿಗಳಿಗೆ ಸಂಯೋಜಿತವಾಗಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು, [&#8230;]]]></description>
										<content:encoded><![CDATA[
<p class="wp-block-paragraph"><strong>ಇಂಫಾಲ</strong>: ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳಿಗೆ ಗುರುವಾರದಿಂದ ಶನಿವಾರದವರೆಗೆ (ಆಗಸ್ಟ್ 20 ರಿಂದ 22) ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.</p>



<p class="wp-block-paragraph">ರಾಜ್ಯ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ, &#8220;ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯಪಾಲರ ಆದೇಶದ ಮೇರೆಗೆ ಮಾಧ್ಯಮಿಕ ಶಿಕ್ಷಣ ಮಂಡಳಿ, ಉನ್ನತ ಮಾಧ್ಯಮಿಕ ಶಿಕ್ಷಣ ಮಂಡಳಿ, ಸಿಬಿಎಸ್‌ಇ (CBSE) ಅಥವಾ ಇತರ ಯಾವುದೇ ಮಂಡಳಿಗಳಿಗೆ ಸಂಯೋಜಿತವಾಗಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು, ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಆಗಸ್ಟ್ 20 ರಿಂದ 22 ರವರೆಗೆ ಮುಚ್ಚಲಾಗುತ್ತದೆ.&#8221;</p>



<p class="wp-block-paragraph">ಈ ಆದೇಶವನ್ನು ತಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ತಲುಪಿಸಲು ಎಲ್ಲಾ ಜಿಲ್ಲಾಧಿಕಾರಿಗಳು, ಪ್ರಾದೇಶಿಕ ಶಿಕ್ಷಣಾಧಿಕಾರಿಗಳು ಮತ್ತು ಸಂಬಂಧಪಟ್ಟ ನಿರ್ದೇಶಕರಿಗೆ ಸೂಚಿಸಲಾಗಿದೆ.</p>



<p class="wp-block-paragraph"><strong>ಮಣಿಪುರದಲ್ಲಿ 48 ಗಂಟೆಗಳ ಬಂದ್:</strong></p>



<p class="wp-block-paragraph">ಮತ್ತೊಂದೆಡೆ, ರಾಜ್ಯದಲ್ಲಿ ಜನಗಣತಿ ಪ್ರಕ್ರಿಯೆ ಆರಂಭಿಸುವ ಮುನ್ನ ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ‘ಕ್ಯಾಂಪೇನ್ ಫಾರ್ ಜಸ್ಟ್ ಆ್ಯಂಡ್ ಫೇರ್ ಡಿಲಿಮಿಟೇಶನ್’ (JAFD) ಕರೆ ನೀಡಿದ್ದ 48 ಗಂಟೆಗಳ ಮುಷ್ಕರದ ಎರಡನೇ ದಿನವಾದ ಬುಧವಾರ ಕಣಿವೆ ಜಿಲ್ಲೆಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಪ್ರತಿಭಟನಾಕಾರರು ಹಲವೆಡೆ ರ್ಯಾಲಿ ನಡೆಸಿ ರಾಜಕೀಯ ನಾಯಕರ ಪ್ರತಿಕೃತಿಗಳನ್ನು ದಹಿಸಿದ್ದಾರೆ.</p>



<p class="wp-block-paragraph">ಗುರುವಾರದಿಂದ ಎಲ್ಲಾ ಸರ್ಕಾರಿ ಕಚೇರಿಗಳನ್ನು ಬಹಿಷ್ಕರಿಸುವುದಾಗಿ ಜೆಎಎಫ್‌ಡಿ ಘೋಷಿಸಿದೆ. ಪೂರ್ವ ಇಂಫಾಲ ಜಿಲ್ಲೆಯ ಖುರೈ ಲಾಮ್ಲಾಂಗ್‌ನಲ್ಲಿ ಮುಖ್ಯಮಂತ್ರಿ ವೈ. ಖೇಮ್‌ಚಂದ್ ಸಿಂಗ್ ಮತ್ತು ಗೃಹ ಸಚಿವ ಗೋವಿಂದದಾಸ್ ಕೊಂಥೌಜಮ್ ಅವರ ಪ್ರತಿಕೃತಿಗಳನ್ನು ದಹಿಸಲಾಯಿತು. ಪಶ್ಚಿಮ ಇಂಫಾಲ, ಪೂರ್ವ ಇಂಫಾಲ, ಬಿಷ್ಣುಪುರ ಮತ್ತು ಥೌಬಲ್ ಜಿಲ್ಲೆಗಳಲ್ಲಿ ರಸ್ತೆಗಳನ್ನು ತಡೆದು ವಾಹನ ಸಂಚಾರವನ್ನು ನಿರ್ಬಂಧಿಸಲಾಯಿತು. ಬಂದ್‌ನಿಂದಾಗಿ ಥೌಬಲ್ ಜಿಲ್ಲೆಯಲ್ಲಿ ಜನಗಣತಿ ಸಿಬ್ಬಂದಿಗಾಗಿ ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮವನ್ನೂ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>&#8220;PM CARES&#8221; ನಿಧಿ ಪ್ರಧಾನಿ ನರೇಂದ್ರ ಮೋದಿಯ ಸಾಂಸ್ಥಿಕ ಹಗರಣ; ಸಂಗ್ರಹದ ‘₹8,452 ಕೋಟಿಯಲ್ಲಿ ಕೇವಲ 0.01% ವೆಚ್ಚ’ : ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರೋಪ</title>
		<link>https://peepalmedia.com/prime-minister-narendra-modis-institutional-scandal/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 19 Aug 2026 12:25:58 +0000</pubDate>
				<category><![CDATA[ರಾಜಕೀಯ]]></category>
		<category><![CDATA[ರಾಜ್ಯ]]></category>
		<guid isPermaLink="false">https://peepalmedia.com/?p=83584</guid>

					<description><![CDATA[PM CARES ನಿಧಿಯ ಹಣದ ದುರ್ಬಳಕೆ ಮತ್ತು ಪಾರದರ್ಶಕತೆ ಕುರಿತು ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ನಿಧಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಸಂಗ್ರಹವಾಗಿದ್ದರೂ, ಸಂಕಷ್ಟದ ಸಂದರ್ಭಗಳಲ್ಲಿ ಅದರ ಸಮರ್ಪಕ ಬಳಕೆ ಆಗಿಲ್ಲ ಎಂದು ಅವರು ಆರೋಪಿಸಿದ್ದಾರೆ. ಈ ಬಗ್ಗೆ ತೀವ್ರ ಆಕ್ರೋಶ ಹೊರ ಹಾಕಿರುವ ಪ್ರಿಯಾಂಕ್ ಖರ್ಗೆ, PM CARES ನಿಧಿಯ 2024–25ನೇ ಸಾಲಿನ ಲೆಕ್ಕಪರಿಶೋಧನಾ ವರದಿಯನ್ನು ಉಲ್ಲೇಖಿಸಿ, ಲಭ್ಯವಿದ್ದ ₹8,452 ಕೋಟಿಯಲ್ಲಿ ಕೇವಲ ಶೇ.0.01ರಷ್ಟು ಹಣ [&#8230;]]]></description>
										<content:encoded><![CDATA[
<p class="wp-block-paragraph">PM CARES ನಿಧಿಯ ಹಣದ ದುರ್ಬಳಕೆ ಮತ್ತು ಪಾರದರ್ಶಕತೆ ಕುರಿತು ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ನಿಧಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಸಂಗ್ರಹವಾಗಿದ್ದರೂ, ಸಂಕಷ್ಟದ ಸಂದರ್ಭಗಳಲ್ಲಿ ಅದರ ಸಮರ್ಪಕ ಬಳಕೆ ಆಗಿಲ್ಲ ಎಂದು ಅವರು ಆರೋಪಿಸಿದ್ದಾರೆ.</p>



<p class="wp-block-paragraph">ಈ ಬಗ್ಗೆ ತೀವ್ರ ಆಕ್ರೋಶ ಹೊರ ಹಾಕಿರುವ ಪ್ರಿಯಾಂಕ್ ಖರ್ಗೆ, PM CARES ನಿಧಿಯ 2024–25ನೇ ಸಾಲಿನ ಲೆಕ್ಕಪರಿಶೋಧನಾ ವರದಿಯನ್ನು ಉಲ್ಲೇಖಿಸಿ, ಲಭ್ಯವಿದ್ದ ₹8,452 ಕೋಟಿಯಲ್ಲಿ ಕೇವಲ ಶೇ.0.01ರಷ್ಟು ಹಣ ಮಾತ್ರ ಬಳಕೆಯಾಗಿದೆ ಎಂದು ಹೇಳಿದ್ದಾರೆ. ತುರ್ತು ಪರಿಹಾರ ಕಾರ್ಯಗಳ ಉದ್ದೇಶದಿಂದ ದೇಶೀಯ ಹಾಗೂ ವಿದೇಶಿ ದಾನಿಗಳಿಂದ ಸಂಗ್ರಹಿಸಲಾದ ಹಣವನ್ನು ಅಗತ್ಯವಿರುವ ಸಂದರ್ಭಗಳಲ್ಲಿ ಬಳಸದೇ ಇರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅವರು ತಿಳಿಸಿದ್ದಾರೆ.</p>



<p class="wp-block-paragraph">ವರದಿಯಲ್ಲಿ ಜಾರಿಗೊಳಿಸುವ ಸಂಸ್ಥೆಗಳಿಂದ ₹324 ಕೋಟಿ ಹಣವನ್ನು ಹಿಂದಿರುಗಿಸಲಾಗಿದೆ ಎಂದು ಉಲ್ಲೇಖಿಸಿರುವುದನ್ನು ಖರ್ಗೆ ಪ್ರಸ್ತಾಪಿಸಿದ್ದು, ಆ ಸಂಸ್ಥೆಗಳು ಯಾವುವು, ಯಾವ ಯೋಜನೆಗಾಗಿ ಹಣ ನೀಡಲಾಗಿತ್ತು ಹಾಗೂ ಯಾವ ಕಾರಣಕ್ಕೆ ಮರುಪಾವತಿ ಮಾಡಲಾಗಿದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡಲಾಗಿಲ್ಲ ಎಂದು ಆರೋಪಿಸಿದ್ದಾರೆ.</p>



<p class="wp-block-paragraph">ಇದರ ಜೊತೆಗೆ, ಹಣಕಾಸು ಹೇಳಿಕೆಗೆ ಸಂಬಂಧಿಸಿದ ಪೂರಕ ಟಿಪ್ಪಣಿಗಳನ್ನು ಪ್ರಕಟಿಸದಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ. PM CARES ನಿಧಿಯ ವ್ಯವಹಾರಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರ ಮುಂದಿಡುವ ಮೂಲಕ ಕೇಂದ್ರ ಸರ್ಕಾರ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.</p>



<p class="wp-block-paragraph">2020ರ ಮಾರ್ಚ್‌ನಲ್ಲಿ ಕೋವಿಡ್-19 ಸೇರಿದಂತೆ ತುರ್ತು ಪರಿಸ್ಥಿತಿಗಳು ಮತ್ತು ಸಂಕಷ್ಟದ ಸಂದರ್ಭಗಳನ್ನು ಎದುರಿಸಲು PM CARES ನಿಧಿಯನ್ನು ಸ್ಥಾಪಿಸಲಾಗಿತ್ತು. ಬಳಿಕ ದೇಶದಲ್ಲಿ ಕೋವಿಡ್ ಮಹಾಮಾರಿ, ಹಲವು ರಾಜ್ಯಗಳಲ್ಲಿ ಪ್ರವಾಹ, ಚಂಡಮಾರುತ, ಭೂಕುಸಿತ ಹಾಗೂ ಇತರ ಪ್ರಕೃತಿ ವಿಕೋಪಗಳು ಸಂಭವಿಸಿದ್ದರೂ, ನಿಧಿಯಲ್ಲಿರುವ ದೊಡ್ಡ ಮೊತ್ತ ಬಳಕೆಯಾಗದೆ ಉಳಿದಿದೆ ಎಂದು ಖರ್ಗೆ ಪ್ರಶ್ನಿಸಿದ್ದಾರೆ.</p>



<p class="wp-block-paragraph">“ಜನರು ಸಂಕಷ್ಟದಲ್ಲಿರುವಾಗ ಪರಿಹಾರಕ್ಕಾಗಿ ಮೀಸಲಿಟ್ಟ ಹಣವನ್ನು ಬಳಸದೇ ಇರುವುದು ಸರಿಯಲ್ಲ. ದಾನಿಗಳ ವಿಶ್ವಾಸಕ್ಕೆ ತಕ್ಕಂತೆ ನಿಧಿಯ ಹಣವನ್ನು ಜನರ ನೆರವಿಗೆ ಬಳಸಬೇಕು” ಎಂದು ಪ್ರಿಯಾಂಕ್ ಖರ್ಗೆ ತಮ್ಮ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.</p>



<p class="wp-block-paragraph">PM CARES ನಿಧಿಯ ಹಣಕಾಸು ನಿರ್ವಹಣೆ, ವೆಚ್ಚದ ಪ್ರಮಾಣ ಹಾಗೂ ಮರುಪಾವತಿ ವಿವರಗಳ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಮಹಿಳೆಯರ ಕುರಿತು ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ; ವೇದಿಕೆಯಲ್ಲೇ ಸಿಡಿದು ನಿಂತ ಬಿಜೆಪಿ ಮಹಿಳಾ ಶಾಸಕಿ</title>
		<link>https://peepalmedia.com/bjp-woman-mla-lashes-out-right-on-stage/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 19 Aug 2026 09:24:06 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[ರಾಜಕೀಯ]]></category>
		<guid isPermaLink="false">https://peepalmedia.com/?p=83572</guid>

					<description><![CDATA[ಭೋಪಾಲ್ : ಮಧ್ಯಪ್ರದೇಶದ ಗುಣಾ ಜಿಲ್ಲೆಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ಇಬ್ಬರು ಶಾಸಕರ ನಡುವೆ ಸಾರ್ವಜನಿಕವಾಗಿ ಭಿನ್ನಾಭಿಪ್ರಾಯ ವ್ಯಕ್ತವಾಗಿರುವ ಘಟನೆ ಗಮನ ಸೆಳೆದಿದೆ. ಮಹಿಳೆಯರು ಮತ್ತು ಯುದ್ಧಗಳ ನಡುವಿನ ಸಂಬಂಧವನ್ನು ಪೌರಾಣಿಕ ಹಾಗೂ ಐತಿಹಾಸಿಕ ಉದಾಹರಣೆಗಳ ಮೂಲಕ ವಿವರಿಸಲು ಮುಂದಾದ ಬಿಜೆಪಿ ಶಾಸಕ ಪನ್ನಾಲಾಲ್ ಶಾಕ್ಯ ಅವರ ಹೇಳಿಕೆಗೆ, ಅದೇ ವೇದಿಕೆಯಲ್ಲಿದ್ದ ಬಿಜೆಪಿ ಶಾಸಕಿ ಪ್ರಿಯಾಂಕಾ ಪೆಂಚಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗುಣಾದ ನಾನಾಖೇಡಿ ಮಂಡಿ ಸಂಕೀರ್ಣದಲ್ಲಿ ಆಯೋಜಿಸಿದ್ದ ಬಲರಾಮ ಕೃಷಿ ಮಹೋತ್ಸವ [&#8230;]]]></description>
										<content:encoded><![CDATA[
<p class="wp-block-paragraph">ಭೋಪಾಲ್ : ಮಧ್ಯಪ್ರದೇಶದ ಗುಣಾ ಜಿಲ್ಲೆಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ಇಬ್ಬರು ಶಾಸಕರ ನಡುವೆ ಸಾರ್ವಜನಿಕವಾಗಿ ಭಿನ್ನಾಭಿಪ್ರಾಯ ವ್ಯಕ್ತವಾಗಿರುವ ಘಟನೆ ಗಮನ ಸೆಳೆದಿದೆ. ಮಹಿಳೆಯರು ಮತ್ತು ಯುದ್ಧಗಳ ನಡುವಿನ ಸಂಬಂಧವನ್ನು ಪೌರಾಣಿಕ ಹಾಗೂ ಐತಿಹಾಸಿಕ ಉದಾಹರಣೆಗಳ ಮೂಲಕ ವಿವರಿಸಲು ಮುಂದಾದ ಬಿಜೆಪಿ ಶಾಸಕ ಪನ್ನಾಲಾಲ್ ಶಾಕ್ಯ ಅವರ ಹೇಳಿಕೆಗೆ, ಅದೇ ವೇದಿಕೆಯಲ್ಲಿದ್ದ ಬಿಜೆಪಿ ಶಾಸಕಿ ಪ್ರಿಯಾಂಕಾ ಪೆಂಚಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.</p>



<p class="wp-block-paragraph">ಗುಣಾದ ನಾನಾಖೇಡಿ ಮಂಡಿ ಸಂಕೀರ್ಣದಲ್ಲಿ ಆಯೋಜಿಸಿದ್ದ ಬಲರಾಮ ಕೃಷಿ ಮಹೋತ್ಸವ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಮುಖ್ಯಮಂತ್ರಿ ಮೋಹನ್ ಯಾದವ್ ಉಪಸ್ಥಿತಿಯಲ್ಲಿದ್ದ ಕಾರ್ಯಕ್ರಮದಲ್ಲಿ ಆರಂಭದಲ್ಲಿ ರೈತರು, ರಸಗೊಬ್ಬರ ಹಾಗೂ ವಿದ್ಯುತ್ ಸಮಸ್ಯೆಗಳ ಕುರಿತು ಮಾತನಾಡಿದ ಶಾಕ್ಯ, ಬಳಿಕ ತಮ್ಮ ಭಾಷಣವನ್ನು ಧಾರ್ಮಿಕ ಮತ್ತು ಐತಿಹಾಸಿಕ ಪ್ರಸಂಗಗಳತ್ತ ತಿರುಗಿಸಿದರು.</p>



<p class="wp-block-paragraph">ರಾಮಾಯಣ, ಮಹಾಭಾರತ ಹಾಗೂ ಪೃಥ್ವಿರಾಜ್ ಚೌಹಾಣ್-ಸಂಯೋಗಿತಾ ಪ್ರಸಂಗಗಳನ್ನು ಉಲ್ಲೇಖಿಸಿದ ಶಾಕ್ಯ, ಇತಿಹಾಸದಲ್ಲಿ ಮಹಿಳೆಯರ ಕಾರಣದಿಂದಲೇ ಅನೇಕ ಯುದ್ಧಗಳು ನಡೆದಿದ್ದು, ಸಾವಿರಾರು ಪುರುಷರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ರಾವಣನು ಸೀತೆಯನ್ನು ಅಪಹರಿಸಿದ್ದರಿಂದ ಲಂಕೆಯ ವಿನಾಶ ಸಂಭವಿಸಿತು ಎಂದು ಅವರು ಉದಾಹರಣೆ ನೀಡಿದರು.</p>



<p class="wp-block-paragraph">ಆದರೆ ಶಾಕ್ಯ ಅವರ ಈ ಹೇಳಿಕೆಗೆ ಚಾಚೌಡಾ ಕ್ಷೇತ್ರದ ಬಿಜೆಪಿ ಶಾಸಕಿ ಪ್ರಿಯಾಂಕಾ ಪೆಂಚಿ ವೇದಿಕೆಯಲ್ಲೇ ವಿರೋಧ ವ್ಯಕ್ತಪಡಿಸಿದರು. ಮಹಿಳೆಯರನ್ನು ದೋಷಾರೋಪಣೆಗೆ ಗುರಿಪಡಿಸುವ ರೀತಿಯಲ್ಲಿ ಪೌರಾಣಿಕ ಹಾಗೂ ಐತಿಹಾಸಿಕ ಪ್ರಸಂಗಗಳನ್ನು ಬಳಸಬಾರದು ಎಂದು ಅವರು ಆಕ್ಷೇಪಿಸಿದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಶಾಕ್ಯ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.</p>



<p class="wp-block-paragraph">ಕೃಷಿ ಮತ್ತು ರೈತರ ಸಮಸ್ಯೆಗಳ ಕುರಿತು ಚರ್ಚೆ ನಡೆಯಬೇಕಿದ್ದ ಕಾರ್ಯಕ್ರಮ ಕ್ಷಣಾರ್ಧದಲ್ಲಿ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗೆ ವೇದಿಕೆಯಾಯಿತು. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.</p>



<p class="wp-block-paragraph"><strong>ವಿವಾದಗಳಿಗೆ ಹೊಸದೇನಲ್ಲ</strong><br>ಪನ್ನಾಲಾಲ್ ಶಾಕ್ಯ ಅವರ ಹೆಸರು ಈ ಹಿಂದೆಯೂ ಹಲವು ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗಿತ್ತು. 2018ರಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಕುರಿತು ಮಾತನಾಡುವಾಗ ಅವರು ನೀಡಿದ್ದ ಹೇಳಿಕೆ ಭಾರಿ ಟೀಕೆಗೆ ಗುರಿಯಾಗಿತ್ತು. ಅದೇ ವರ್ಷ ಮಹಿಳೆಯರ ಪಾತ್ರದ ಕುರಿತು ನೀಡಿದ್ದ ಮತ್ತೊಂದು ಹೇಳಿಕೆಯೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು.</p>



<p class="wp-block-paragraph">ಇದರ ಜೊತೆಗೆ 2017ರಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ವಿದೇಶದಲ್ಲಿ ವಿವಾಹವಾಗಿದ್ದ ವಿಚಾರವನ್ನೂ ಪ್ರಶ್ನಿಸಿ ಅವರು ಸುದ್ದಿಯಾಗಿದ್ದರು. 2024ರಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಪದವಿ ಸಾಲದು, ಕೌಶಲ್ಯಾಧಾರಿತ ಉದ್ಯೋಗಗಳತ್ತ ಗಮನ ಹರಿಸಬೇಕು ಎಂದು ಹೇಳಿದ ಸಂದರ್ಭವೂ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು.</p>



<p class="wp-block-paragraph"><strong>ಬಿಜೆಪಿ ಒಳಗೇ ಭಿನ್ನ ಧ್ವನಿ</strong><br>ಇತ್ತೀಚಿನ ಘಟನೆಯ ವಿಶೇಷತೆ ಎಂದರೆ ಇದು ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ನಡುವಿನ ವಾಗ್ವಾದವಾಗಿರದೆ, ಒಂದೇ ಪಕ್ಷದ ಇಬ್ಬರು ಶಾಸಕರ ನಡುವೆ ಸಾರ್ವಜನಿಕ ವೇದಿಕೆಯಲ್ಲಿ ನಡೆದಿರುವುದು. ಮಹಿಳೆಯರ ಕುರಿತ ಹೇಳಿಕೆಗೆ ಮಹಿಳಾ ಶಾಸಕಿಯೇ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.</p>
]]></content:encoded>
					
		
		
			</item>
	</channel>
</rss>
