<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ವಿಶೇಷ &#8211; Peepal Media</title>
	<atom:link href="https://peepalmedia.com/category/special-report/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Wed, 21 Jan 2026 01:37:04 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.9</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>ವಿಶೇಷ &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>₹10,000 ಕೋಟಿಗೂ ಅಧಿಕ ಅಧಿಕೃತ ಬ್ಯಾಂಕ್ ಬ್ಯಾಲೆನ್ಸ್‌: ಬಿಜೆಪಿ ಪಕ್ಷದ ಹೊಸ ದಾಖಲೆ</title>
		<link>https://peepalmedia.com/official-bank-balance-of-over-10000-crore/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 21 Jan 2026 01:37:03 +0000</pubDate>
				<category><![CDATA[ದೇಶ]]></category>
		<category><![CDATA[ರಾಜಕೀಯ]]></category>
		<category><![CDATA[ವಿಶೇಷ]]></category>
		<guid isPermaLink="false">https://peepalmedia.com/?p=72754</guid>

					<description><![CDATA[ಬೆಂಗಳೂರು: 14 ಕೋಟಿಗೂ ಅಧಿಕ ನೋಂದಾಯಿತ ಸದಸ್ಯರನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಇದೀಗ ತನ್ನ ಆರ್ಥಿಕ ಶಕ್ತಿಯಲ್ಲೂ ಹೊಸ ದಾಖಲೆ ಬರೆದಿದೆ. 2025ರ ಮಾರ್ಚ್ 31ಕ್ಕೆ ಅಂತ್ಯವಾದ ಆರ್ಥಿಕ ವರ್ಷದ ಲೆಕ್ಕಪರಿಶೋಧನಾ ವರದಿ ಅನ್ವಯ, ಬಿಜೆಪಿ ಬೊಕ್ಕಸದಲ್ಲಿ ₹10,230 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹವಾಗಿದೆ. ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಲೆಕ್ಕಪರಿಶೋಧನಾ ವರದಿ ಪ್ರಕಾರ, ಬ್ಯಾಂಕ್‌ಗಳಲ್ಲಿ ನಗದು ಹಾಗೂ ಠೇವಣಿ ರೂಪದಲ್ಲಿ [&#8230;]]]></description>
										<content:encoded><![CDATA[
<p>ಬೆಂಗಳೂರು: 14 ಕೋಟಿಗೂ ಅಧಿಕ ನೋಂದಾಯಿತ ಸದಸ್ಯರನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಇದೀಗ ತನ್ನ ಆರ್ಥಿಕ ಶಕ್ತಿಯಲ್ಲೂ ಹೊಸ ದಾಖಲೆ ಬರೆದಿದೆ. 2025ರ ಮಾರ್ಚ್ 31ಕ್ಕೆ ಅಂತ್ಯವಾದ ಆರ್ಥಿಕ ವರ್ಷದ ಲೆಕ್ಕಪರಿಶೋಧನಾ ವರದಿ ಅನ್ವಯ, ಬಿಜೆಪಿ ಬೊಕ್ಕಸದಲ್ಲಿ ₹10,230 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹವಾಗಿದೆ.</p>



<p>ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಲೆಕ್ಕಪರಿಶೋಧನಾ ವರದಿ ಪ್ರಕಾರ, ಬ್ಯಾಂಕ್‌ಗಳಲ್ಲಿ ನಗದು ಹಾಗೂ ಠೇವಣಿ ರೂಪದಲ್ಲಿ ₹9,996 ಕೋಟಿ ಇದ್ದು, ಸಾಲ ಮತ್ತು ಮುಂಗಡ ಪಾವತಿ ರೂಪದಲ್ಲಿ ₹234 ಕೋಟಿ ಇದೆ. ಇದರಿಂದ ಪಕ್ಷದ ಒಟ್ಟು ಹಣಕಾಸು ಸಂಪತ್ತು ₹10,230 ಕೋಟಿಗೆ ತಲುಪಿದೆ.</p>



<p><strong>ಆದಾಯದಲ್ಲಿ ಭಾರೀ ಏರಿಕೆ :</strong> 2023–24ನೇ ಹಣಕಾಸು ವರ್ಷದಲ್ಲಿ ಬಿಜೆಪಿ ಬಳಿ ₹3,967 ಕೋಟಿ ಇದ್ದು, ಅದರ ಮುಂದಿನ ವರ್ಷವಾದ 2024–25ರಲ್ಲಿ ಆದಾಯದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ದೆಹಲಿ ಮತ್ತು ಒಡಿಶಾ ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ 2025ರಲ್ಲಿ ಪಕ್ಷಕ್ಕೆ ₹6,125 ಕೋಟಿ ದೇಣಿಗೆ ಲಭಿಸಿದೆ. ಇದಲ್ಲದೆ, ಬ್ಯಾಂಕ್ ಠೇವಣಿಗಳಿಂದ ₹634 ಕೋಟಿ ಬಡ್ಡಿ ಆದಾಯ ಬಂದಿದೆ. ಆದಾಯ ತೆರಿಗೆ ರೀಫಂಡ್ ಮೂಲಕ ₹66 ಕೋಟಿ ಹಾಗೂ ಅದಕ್ಕೆ ಬಡ್ಡಿಯಾಗಿ ₹4.40 ಕೋಟಿ ಪಕ್ಷಕ್ಕೆ ದೊರೆತಿದೆ.</p>



<p><strong>ಚುನಾವಣಾ </strong><strong>ವೆಚ್ಚವೇ</strong><strong> ಮೇಲುಗೈ</strong> : 2024–25ನೇ ಹಣಕಾಸು ವರ್ಷದಲ್ಲಿ ಬಿಜೆಪಿ ಒಟ್ಟು ₹3,335 ಕೋಟಿ ವೆಚ್ಚ ಮಾಡಿದ್ದು, ಇದರಲ್ಲಿನ ಶೇ.88ರಷ್ಟು ಮೊತ್ತವನ್ನು ಚುನಾವಣಾ ಸಂಬಂಧಿತ ವೆಚ್ಚಗಳಿಗಾಗಿ ಬಳಸಲಾಗಿದೆ. ಅಭ್ಯರ್ಥಿಗಳಿಗೆ ಹಣಕಾಸು ನೆರವಿಗಾಗಿ ₹312 ಕೋಟಿ ಖರ್ಚಾಗಿದ್ದರೆ, ವಿಮಾನ ಮತ್ತು ಹೆಲಿಕಾಪ್ಟರ್ ಪ್ರಯಾಣ ವೆಚ್ಚಕ್ಕೆ ₹583 ಕೋಟಿ ವ್ಯಯಿಸಲಾಗಿದೆ.</p>



<p>ಎಲೆಕ್ಟ್ರಾನಿಕ್ ಮಾಧ್ಯಮ ಜಾಹೀರಾತಿಗೆ ₹1,125 ಕೋಟಿ, ಕಟೌಟ್‌, ಬ್ಯಾನರ್‌, ಹೋಲ್ಡಿಂಗ್‌ಗಳಿಗೆ ₹107 ಕೋಟಿ ಮತ್ತು ಮುದ್ರಣ ಕಾರ್ಯಗಳಿಗೆ ₹123 ಕೋಟಿ ವೆಚ್ಚವಾಗಿದೆ. ಇನ್ನು ಜಾಹೀರಾತು ವೆಚ್ಚಕ್ಕೆ ₹897 ಕೋಟಿ, ರ್‍ಯಾಲಿ ಹಾಗೂ ಪ್ರಚಾರಕ್ಕೆ ₹90 ಕೋಟಿ ಮತ್ತು ಸಭಾ ವೆಚ್ಚಗಳಿಗೆ ₹52 ಕೋಟಿ ಖರ್ಚು ಮಾಡಲಾಗಿದೆ ಎಂದು ಪಕ್ಷ ತಿಳಿಸಿದೆ.</p>



<p>ರಾಜಕೀಯ ಪಕ್ಷಗಳ ಹಣಕಾಸು ಪಾರದರ್ಶಕತೆಯ ಚರ್ಚೆ ನಡೆಯುತ್ತಿರುವ ನಡುವೆ, ಬಿಜೆಪಿ ಸಲ್ಲಿಸಿದ ಈ ಲೆಕ್ಕಪತ್ರಗಳು ವ್ಯಾಪಕ ಚರ್ಚೆಗೆ ಕಾರಣವಾಗಿವೆ.</p>
]]></content:encoded>
					
		
		
			</item>
		<item>
		<title>ಕರ್ನಾಟಕದ &#8216;ಬಿಗ್&#8217; ದುರಂತ: ನಕಲಿ ಹೀರೋಗಿರಿಯ ಮೆರವಣಿಗೆ ಮತ್ತು ನಿಜವಾದ ಸಾಧಕರ ಅನಾಥ ಪ್ರಜ್ಞೆ!</title>
		<link>https://peepalmedia.com/karnatakas-big-tragedy-big-boss/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 20 Jan 2026 08:58:33 +0000</pubDate>
				<category><![CDATA[ಅಂಕಣ]]></category>
		<category><![CDATA[ವಿಶೇಷ]]></category>
		<category><![CDATA[ಸಿನಿಮಾ]]></category>
		<guid isPermaLink="false">https://peepalmedia.com/?p=72724</guid>

					<description><![CDATA[&#8220;..ನಾವು &#8220;ರೀಲ್&#8221; ಹೀರೋಗಳನ್ನು ಮೆರೆಸುವುದರಲ್ಲಿ ಎಷ್ಟು ಮಗ್ನರಾಗಿದ್ದೇವೆ ಎಂದರೆ, &#8220;ರಿಯಲ್&#8221; ಹೀರೋಗಳು ನಮ್ಮ ಕಣ್ಣಮುಂದೆಯೇ ಕಳೆದುಹೋಗುತ್ತಿದ್ದಾರೆ. ಇದು ದೇಶದ ನೈತಿಕತೆಯ ಮೇಲೆ, ಪ್ರಜ್ಞೆಯ ಮೇಲೆ ಬಿದ್ದ ದೊಡ್ಡ ಏಟು..&#8221; ಲೇಖಕರಾದ ವಿ.ಆ‌ರ್.ಕಾರ್ಪೆಂಟರ್ ಅವರ ವಿಮರ್ಶೆಯಲ್ಲಿ.. ತಪ್ಪದೇ ಓದಿ ಕರ್ನಾಟಕ ಇಂದು ಒಂದು ವಿಚಿತ್ರವಾದ ಸಂಕಟದ ಎದುರು ನಿಂತಿದೆ. ಕುವೆಂಪು, ಕಾರಂತರು, ಮತ್ತು ಬೇಂದ್ರೆಯವರು ಕಟ್ಟಿ ಬೆಳೆಸಿದ ನಾಡು ಇದು ಎಂದು ಹೇಳಿಕೊಳ್ಳಲು ಕೆಲವೊಮ್ಮೆ ಸಂಕೋಚವಾಗುವಂತಹ ಸನ್ನಿವೇಶಗಳು ನಮ್ಮ ಕಣ್ಣಮುಂದೆ ನಡೆಯುತ್ತಿವೆ. ಇತ್ತೀಚಿನ ಕೆಲವು ದಿನಗಳ ವಿದ್ಯಮಾನಗಳನ್ನು ಗಮನಿಸಿದರೆ, [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>&#8220;..ನಾವು &#8220;ರೀಲ್&#8221; ಹೀರೋಗಳನ್ನು ಮೆರೆಸುವುದರಲ್ಲಿ ಎಷ್ಟು ಮಗ್ನರಾಗಿದ್ದೇವೆ ಎಂದರೆ, &#8220;ರಿಯಲ್&#8221; ಹೀರೋಗಳು ನಮ್ಮ ಕಣ್ಣಮುಂದೆಯೇ ಕಳೆದುಹೋಗುತ್ತಿದ್ದಾರೆ. ಇದು ದೇಶದ ನೈತಿಕತೆಯ ಮೇಲೆ, ಪ್ರಜ್ಞೆಯ ಮೇಲೆ ಬಿದ್ದ ದೊಡ್ಡ ಏಟು..&#8221; ಲೇಖಕರಾದ ವಿ.ಆ‌ರ್.ಕಾರ್ಪೆಂಟರ್ ಅವರ ವಿಮರ್ಶೆಯಲ್ಲಿ.. ತಪ್ಪದೇ ಓದಿ</p>
</blockquote>



<p>ಕರ್ನಾಟಕ ಇಂದು ಒಂದು ವಿಚಿತ್ರವಾದ ಸಂಕಟದ ಎದುರು ನಿಂತಿದೆ. ಕುವೆಂಪು, ಕಾರಂತರು, ಮತ್ತು ಬೇಂದ್ರೆಯವರು ಕಟ್ಟಿ ಬೆಳೆಸಿದ ನಾಡು ಇದು ಎಂದು ಹೇಳಿಕೊಳ್ಳಲು ಕೆಲವೊಮ್ಮೆ ಸಂಕೋಚವಾಗುವಂತಹ ಸನ್ನಿವೇಶಗಳು ನಮ್ಮ ಕಣ್ಣಮುಂದೆ ನಡೆಯುತ್ತಿವೆ. ಇತ್ತೀಚಿನ ಕೆಲವು ದಿನಗಳ ವಿದ್ಯಮಾನಗಳನ್ನು ಗಮನಿಸಿದರೆ, ನಮ್ಮ ಸಮಾಜದ ಹೀರೋ&#8217; ಯಾರು ಮತ್ತು &#8216;ಹೀರೋಯಿಸಂ&#8217; ಅಂದರೆ ಏನು ಎಂಬ ವ್ಯಾಖ್ಯಾನಗಳೇ ತಲೆಕೆಳಗಾಗಿರುವುದು ಸ್ಪಷ್ಟವಾಗುತ್ತದೆ.</p>



<p>ಒಂದೆಡೆ, ಮನರಂಜನೆಯ ಹೆಸರಿನಲ್ಲಿ ನಡೆಯುವ ಒಂದು ರಿಯಾಲಿಟಿ ಶೋ ವಿಜೇತನ ಕಾರಿನ ಹಿಂದೆ ನಮ್ಮ ರಾಜ್ಯದ ಕಾನೂನು ಪಾಲಕರು ಅಸಹಾಯಕರಾಗಿ ಓಡುತ್ತಾರೆ. ಇನ್ನೊಂದೆಡೆ, ಸಾಹಿತ್ಯ ಲೋಕದ ಅತ್ಯುನ್ನತ ಶಿಖರ ಏರಿದ ಕನ್ನಡತಿಯೊಬ್ಬರು ಎಲೆಮರೆಯ ಕಾಯಿಯಂತೆ ಉಳಿಯುತ್ತಾರೆ. ದೇಶಕ್ಕಾಗಿ ವಿಶ್ವಕಪ್ ಗೆದ್ದ ಅಂಧ ಹೆಣ್ಣುಮಕ್ಕಳು ಸದ್ದಿಲ್ಲದೆ ಬಂದು ಹೋಗುತ್ತಾರೆ. ಈ ವೈರುಧ್ಯವೇ ಇಂದಿನ ಕರ್ನಾಟಕದ ಸಾಂಸ್ಕೃತಿಕ ದಿವಾಳಿತನದ (Cultural Bankruptcy) ಅಪ್ಪಟ ಸಾಕ್ಷಿ.</p>



<p><strong>ರಿಯಾಲಿಟಿ ಶೋ ಉನ್ಮಾದ ಮತ್ತು &#8216;ಪಾಪದ&#8217; ಪೊಲೀಸರು</strong><br>ಮೊದಲಿಗೆ, ಮಂಡ್ಯದ ಪ್ರತಿಭೆ ಗಿಲ್ಲಿ ನಟರಾಜ್ (ಗಿಲ್ಲಿ ನಟ) ಅವರ ಗೆಲುವನ್ನೇ ತೆಗೆದುಕೊಳ್ಳೋಣ. ಒಬ್ಬ ಸಾಮಾನ್ಯ ಹಿನ್ನೆಲೆಯ ಹುಡುಗ ಗೆದ್ದಾಗ ಸಂಭ್ರಮಿಸುವುದು ತಪ್ಪಲ್ಲ. ಆದರೆ, ಆ ಸಂಭ್ರಮವು ಒಂದು <a href="https://www.deccanherald.com/entertainment/bigg-boss-12-kannada-gilli-nata-wins-title-rakshita-shetty-emerges-as-runner-up-3866758" data-type="link" data-id="https://www.deccanherald.com/entertainment/bigg-boss-12-kannada-gilli-nata-wins-title-rakshita-shetty-emerges-as-runner-up-3866758">ಸಾಮೂಹಿಕ ಉನ್ಮಾದದ (Mass Hysteria)</a> ರೂಪ ಪಡೆದಾಗ ಅದು ಆತಂಕಕಾರಿಯಾಗುತ್ತದೆ.</p>



<p>ಗಿಲ್ಲಿ ನಟರಾಜ್ ಅವರ ಮೆರವಣಿಗೆಯ ದೃಶ್ಯಗಳನ್ನು ನೋಡಿದ ಯಾರೇ ಆದರೂ ಬೆಚ್ಚಿ ಬೀಳಲೇಬೇಕು. ತೆರೆದ ವಾಹನದಲ್ಲಿ ಅವರು ಕೈಬೀಸುತ್ತಿದ್ದರೆ, ಆ ವಾಹನದ ಅಕ್ಕಪಕ್ಕದಲ್ಲಿ ನಮ್ಮ ರಾಜ್ಯದ ಪೊಲೀಸ್ ಸಿಬ್ಬಂದಿ ಭದ್ರತೆಗಾಗಿ ಓಡುತ್ತಿದ್ದರು. ಯಾರಿಗಾಗಿ ಈ ಭದ್ರತೆ? ಗಡಿಯಲ್ಲಿ ಯುದ್ದೆ ಗೆದ್ದು ಬಂದ ಯೋಧನಿಗಲ್ಲ, ಅಥವಾ ದೇಶವನ್ನು ಕಾಪಾಡುವ ವಿಜ್ಞಾನಿಗಲ್ಲ. ಕೇವಲ 100 ದಿನಗಳ ಕಾಲ ಒಂದು ಮನೆಯಲ್ಲಿದ್ದು, ಮನರಂಜನೆ ನೀಡಿದ ಒಬ್ಬ ವ್ಯಕ್ತಿಗೆ!</p>



<p>ಪೊಲೀಸರು ವಾಹನದ ಹಿಂದೆ ಓಡುತ್ತಿರುವ ದೃಶ್ಯವು ಆಡಳಿತ ವ್ಯವಸ್ಥೆಯ ದಯನೀಯ ಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಸಮವಸ್ತ್ರಧಾರಿಗಳು, &#8216;ಜನಪ್ರಿಯತೆ&#8217; ಎಂಬ ಮಾಯೆಯ ಮುಂದೆ ಎಷ್ಟರಮಟ್ಟಿಗೆ ಮಂಡಿಯೂರಿದ್ದಾರೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ. ಇವತ್ತು ಯುವಜನತೆಗೆ ಭಗತ್ ಸಿಂಗ್ ಅಥವಾ ಸಂಗೊಳ್ಳಿ ರಾಯಣ್ಣರಿಗಿಂತ, ಟಿವಿಯಲ್ಲಿ ಕಾಣುವ &#8220;ರೀಲ್ ಹೀರೋ&#8221;ಗಳೇ (Reel Heroes) ಆದರ್ಶವಾಗುತ್ತಿರುವುದು ದುರಂತವಲ್ಲದೇ ಮತ್ತೇನು?</p>



<p><strong>ಭಾಷೆಯ ಹೆಸರಿನಲ್ಲಿ ಜಾತಿ ಅಜೆಂಡಾ: ಅಶ್ವಿನಿ ಗೌಡರ ವಿವಾದ</strong><br>ಬಿಗ್ ಬಾಸ್ ಮನೆಯ ಒಳಗೆ ನಡೆದಿದ್ದು ಇದಕ್ಕಿಂತಲೂ ಹೇಯವಾದ ಕೃತ್ಯ. ಕನ್ನಡ ಪರ ಹೋರಾಟಗಾರ್ತಿ ಎಂದು ಗುರುತಿಸಿಕೊಳ್ಳುವ ಅಶ್ವಿನಿ ಗೌಡ ಅವರು, ಸಹ ಸಹ ಸ್ಪರ್ಧಿ ಸ್ಪರ್ಧಿ ರಕ್ಷಿತಾ ರಕ್ಷಿತಾ ಶೆಟ್ಟಿ ಅವರನ್ನು ಉದ್ದೇಶಿಸಿ ಆಡಿದ ಮಾತುಗಳು ಕೇವಲ ವ್ಯಕ್ತಿಗತ ನಿಂದನೆಯಲ್ಲ, ಅದು ವ್ಯವಸ್ಥಿತವಾದ ಜಾತಿ ಅಹಂಕಾರದ ಪ್ರದರ್ಶನ.</p>



<p>&#8220;ನೀನು ಯಾವ ಕೆಟಗರಿ ಎಂದು ಗೊತ್ತು, ಆ &#8216;ಎಸ್-ಕೆಟಗರಿ&#8217; (S-Category) ಯವಳು&#8221; ಎಂಬ ಅಶ್ವಿನಿ ಅವರ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಯಿತು. ಇಲ್ಲಿ &#8216;ಎಸ್&#8217; ಎಂಬುದು ಸ್ಲಮ್ ಅಥವಾ ಪರಿಶಿಷ್ಟ ಜಾತಿಯನ್ನು (SC/ST) ಹೀಯಾಳಿಸುವ ಸಂಕೇತವಾಗಿ ಬಳಸಲಾಗಿದೆ ಎಂಬುದು <a href="https://timesofindia.indiatimes.com/tv/news/kannada/police-complaint-filed-against-ashwini-gowda-for-caste-based-remark-on-the-show/articleshow/124762230.cms" data-type="link" data-id="https://timesofindia.indiatimes.com/tv/news/kannada/police-complaint-filed-against-ashwini-gowda-for-caste-based-remark-on-the-show/articleshow/124762230.cms">ಪೊಲೀಸ್ ದೂರಿನ ಸಾರಾಂಶವಾಗಿದೆ</a>. ಭಾಷೆ ಮತ್ತು ನಾಡಿನ ರಕ್ಷಣೆಗಾಗಿ ಹೋರಾಡಬೇಕಾದವರು, ಜಾತಿ ಮತ್ತು ತಾರತಮ್ಯದ ವಿಷಬೀಜ ಬಿತ್ತುವುದು ಯಾವ ಸೀಮೆಯ ಹೋರಾಟ?</p>



<p>ಇದಕ್ಕೆ ತುಪ್ಪ ಸುರಿದದ್ದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಗೌಡರ ಸಮರ್ಥನೆ. &#8220;<a href="https://kannada.asianetnews.com/tv-talk/ta-narayana-gowda-warning-trolls-ashwini-gowda-bigg-boss-kannada-support-san/articleshow-08fgws3" data-type="link" data-id="https://kannada.asianetnews.com/tv-talk/ta-narayana-gowda-warning-trolls-ashwini-gowda-bigg-boss-kannada-support-san/articleshow-08fgws3">ಅಶ್ವಿನಿ ಗೌಡ ಕನ್ನಡಕ್ಕಾಗಿ ಜೈಲಿಗೆ ಹೋದವರು. ಅವರನ್ನು ಬೆಂಬಲಿಸುವುದು ನಮ್ಮ ದರ್ಮ</a>&#8221; ಎಂಬ ನಾರಾಯಣಗೌಡರ ಹೇಳಿಕೆ ಆಘಾತಕಾರಿಯಾಗಿದೆ. ಕನ್ನಡಕ್ಕಾಗಿ ಜೈಲಿಗೆ ಹೋದರೆ, ಜಾ ಜಾತಿ ನಿಂದನೆ ಮಾಡುವ ಲೈಸೆನ್ಸ್ ಸಿಗುತ್ತದೆಯೇ? ಇಲ್ಲಿ &#8220;ಕನ್ನಡ&#8221; ಎಂಬ ಪವಿತ್ರವಾದ ಹೆಸರನ್ನು ಗುರಾಣಿಯಾಗಿ ಬಳಸಿಕೊಂಡು, ಅದರ ಹಿಂದಿನಿಂದ ತಮ್ಮ ಸಮುದಾಯದ (ಒಕ್ಕಲಿಗ) ವ್ಯಕ್ತಿಯನ್ನು ಸಮರ್ಥಿಸಿಕೊಳ್ಳುವ &#8220;ಜಾತಿ ಪ್ರೇಮ'&#8221; ಎದ್ದು ಕಾಣುತ್ತದೆ. ಹೋರಾಟಗಾರರು ತಪ್ಪು ಮಾಡಿದಾಗ ತಿದ್ದಬೇಕಾದ ನಾಯಕರೆ, ತಪ್ಪುಗಳನ್ನು ಸಮರ್ಥಿಸಿಕೊಂಡರೆ ಸಮಾಜಕ್ಕೆ ಉಳಿಗಾಲವಿದೆಯೇ?</p>



<p><strong>ಬೂಕ‌ರ್ ಪ್ರಶಸ್ತಿ ಮತ್ತು ಬೌದ್ಧಿಕ ಮೌನ</strong><br>ಇದೆಲ್ಲದರ ನಡುವೆ, ಹಾಸನದ ಮೂಲೆಯಲ್ಲೊಂದು ಅದ್ಭುತ ಸಂಭವಿಸಿತು. ಕನ್ನಡದ ಹಿರಿಯ ಸಾಹಿತಿ ಬಾನು ಮುಷ್ಕಾಕ್ ಅವರು ಸಾಹಿತ್ಯ ಲೋಕದ ಅತ್ಯುನ್ನತ ಗೌರವಗಳಲ್ಲಿ ಒಂದಾದ &#8216;ಅಂತರಾಷ್ಟ್ರೀಯ ಬೂಕ‌ರ್ ಪ್ರಶಸ್ತಿ&#8217;ಯನ್ನು (International Booker Prize) ಮುಡಿಗೇರಿಸಿಕೊಂಡರು. ಇದು ಕೇವಲ ಬಾನು ಅವರ ಗೆಲುವಲ್ಲ, ಕನ್ನಡ ಸಾಹಿತ್ಯಕ್ಕೆ ಸಿಕ್ಕ ಜಾಗತಿಕ ಮನ್ನಣೆ. ಅವರ &#8216;<a href="https://thebookerprizes.com/media-centre/press-releases/heart-lamp-wins-the-international-booker-prize-2025" data-type="link" data-id="https://thebookerprizes.com/media-centre/press-releases/heart-lamp-wins-the-international-booker-prize-2025">ಹಾರ್ಟ್ ಲ್ಯಾಂಪ್&#8217; (Heart Lamp)</a> ಕಥಾಸಂಕಲನವು ಮುಸ್ಲಿಂ ಮಹಿಳೆಯರ ಬದುಕು, ನೋವು ಮತ್ತು ಪ್ರತಿರೋಧವನ್ನು ಜಗತ್ತಿಗೆ ಪರಿಚಯಿಸಿತು.</p>



<p>ಆದರೆ, ಗಿಲ್ಲಿ ನಟರಾಜ್‌ಗೆ ಸಿಕ್ಕ ಜನಪ್ರಿಯತೆ, ಮಾಧ್ಯಮದ ಪ್ರಚಾರ ಅಥವಾ ಮೆರವಣಿಗೆಯ ಭಾಗ್ಯ ಬಾನು ಮುಷ್ಕಾಕ್ ಅವರಿಗೆ ಸಿಕ್ಕಿತೇ? ಇಲ್ಲ. ರಾಜ್ಯದ ಬಹುತೇಕ ಯುವಜನರಿಗೆ ಬಾನು ಮುಷ್ಕಾಕ್ ಯಾರೆಂದೇ ತಿಳಿದಿಲ್ಲ. <a href="https://www.deccanherald.com/india/karnataka/havent-managed-to-write-anything-since-booker-win-banu-mushtaq-3864162" data-type="link" data-id="https://www.deccanherald.com/india/karnataka/havent-managed-to-write-anything-since-booker-win-banu-mushtaq-3864162">&#8220;ಪ್ರಶಸ್ತಿ ಬಂದ ನಂತರ ಬರೆಯಲು ಸಮಯವೇ ಸಿಗುತ್ತಿಲ್ಲ&#8221;</a> ಎಂದು ಅವರು ಹೇಳಿಕೊಳ್ಳುವ ಸನ್ಮಾನಗಳ ಸುದ್ದಿಗಳು ಕೇವಲ ಸಾಹಿತ್ಯ ವಲಯಕ್ಕೆ ಸೀಮಿತವಾಗಿದ್ದವು.</p>



<p>ಯಾಕೆ ಈ ತಾರತಮ್ಯ? ಏಕೆಂದರೆ ಬಾನು ಮುಷ್ಕಾಕ್ ಅವರು ಮನರಂಜನೆ ನೀಡುವ ಸರಕು ಅಲ್ಲ. ಅವರು ಸಮಾಜದ ತ ಓರೆಕೋರೆಗಳನ್ನು ಪ್ರಶ್ನಿಸುವ &#8220;ಬುದ್ಧಿಜೀವಿ&#8221;. . ನಮ್ಮ ನಮ್ಮ ಸಮಾಜಕ್ಕೆ ಸಮಾಜಕ್ಕೆ ಈಗ ಬೇಕಿರುವುದು ಪ್ರಶ್ನಿಸುವವರಲ್ಲ, ಮಂಜರಂಜಿಸುವವರು. ಅದಕ್ಕಾಗಿಯೇ ಬೂಕರ್ &#8211; ಬೂಕರ್ ಪ್ರಶಸ್ತಿ ತಂದವರ ಮನೆ ಮುಂದೆ ಮೌನವಿದೆ, ಬಿಗ್ ಬಾಸ್ ಗೆದ್ದವರ ಮನೆ ಮುಂದೆ ಜಾತ್ರೆಯಿದೆ.</p>



<p><strong>ಕತ್ತಲಲ್ಲಿ ಗೆದ್ದವರು ಮತ್ತು ಕಣ್ಣಿದ್ದೂ ಕುರುಡಾದವರು</strong><br>ನೈತಿಕತೆಯ ಪತನದ ಮತ್ತೊಂದು ಉದಾಹರಣೆ ಎಂದರೆ ಭಾರತೀಯ ಅಂಧ ಮಹಿಳಾ ಕ್ರಿಕೆಟ್ ತಂಡದ ವಿಶ್ವಕಪ್ ವಿಜಯ. ಕಣ್ಣು ಕಾಣದಿದ್ದರೂ, ಛಲವೊಂದನ್ನೇ ನಂಬಿ ಈ ಹೆಣ್ಣುಮಕ್ಕಳು <a href="https://samarthanam.org/events/the-world-champion-indian-womens-cricket-team-for-the-blind-was-felicitated-by-honble-chief-minister-of-karnataka-shri-siddaramaiah/" data-type="link" data-id="https://samarthanam.org/events/the-world-champion-indian-womens-cricket-team-for-the-blind-was-felicitated-by-honble-chief-minister-of-karnataka-shri-siddaramaiah/">ಟಿ-20 ವಿಶ್ವಕಪ್ ಗೆದ್ದು ತಂದರು</a>. ಅದರಲ್ಲಿ ಕರ್ನಾಟಕದ ದೀಪಿಕಾ, ಸುಷ್ಮಾ ಅವರಂತಹ ಪ್ರತಿಭೆಗಳಿದ್ದರು.</p>



<p>ವಿಮಾನ ನಿಲ್ದಾಣದಲ್ಲಿ ಇಳಿದಾಗ ಇವರಿಗೆ ಸಿಕ್ಕ ಸ್ವಾಗತಕ್ಕೂ, ರಿಯಾಲಿಟಿ ಶೋ ತಾರೆಯರಿಗೆ ಸಿಗುವ ಸ್ವಾಗತಕ್ಕೂ ಇರುವ ವ್ಯತ್ಯಾಸವೇ ನಮ್ಮ ಸಮಾಜದ ನಿಜವಾದ ಬಣ್ಣವನ್ನು ಬಯಲು ಮಾಡುತ್ತದೆ. ಅಂಧ ಕ್ರಿಕೆಟಿಗರ ವಾಹನದ ಹಿಂದೆ ಓಡಲು ನಮ್ಮ ಪೊಲೀಸರಿಗೆ ಸಮಯವಿರಲಿಲ್ಲ, ಅವರ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ &#8216;ಫ್ಯಾನ್ ವಾರ್&#8217; ಮಾಡಲು ನಮ್ಮ ಯುವಜನರಿಗೆ ಆಸಕ್ತಿ ಇರಲಿಲ್ಲ.</p>



<p><strong>ಕೊನೆಯ ಮಾತು: ಎಚ್ಚೆತ್ತುಕೊಳ್ಳುವ ಸಮಯ</strong><br>ಗೆಳೆಯರೆ, ಇಲ್ಲಿ ಸಮಸ್ಯೆ ಬಿಗ್ ಬಾಸ್ ಕಾರ್ಯಕ್ರಮದ್ದಲ್ಲ. ಸಮಸ್ಯೆ ಇರುವುದು ಅದನ್ನು ನೋಡುವ ನಮ್ಮ ದೃಷ್ಟಿಕೋನದಲ್ಲಿ ಮತ್ತು ನಾವು ಆರಿಸಿಕೊಳ್ಳುವ ಆದ್ಯತೆಗಳಲ್ಲಿ.</p>



<ul class="wp-block-list">
<li>ಗಿಲ್ಲಿ ನಟರಾಜ್ ಗೆದ್ದಿದ್ದು ಒಂದು ಆಟದಲ್ಲಿ.</li>



<li>ಅಶ್ವಿನಿ ಗೌಡ ಮಾಡಿದ್ದು ಟಿವಿ ರಂಪಾಟ.</li>



<li>ಆದರೆ ಬಾನು ಮುಷ್ಕಾಕ್ ಮತ್ತು ಅಂಧ ಕ್ರಿಕೆಟ್ ತಂಡ ಗೆದ್ದಿದ್ದು ಬದುಕಿನ ಯುದ್ಧದಲ್ಲಿ.</li>
</ul>



<p>ನಾವು &#8220;ರೀಲ್&#8221; ಹೀರೋಗಳನ್ನು ಮೆರೆಸುವುದರಲ್ಲಿ ಎಷ್ಟು ಮಗ್ನರಾಗಿದ್ದೇವೆ ಎಂದರೆ, &#8220;ರಿಯಲ್&#8221; ಹೀರೋಗಳು ನಮ್ಮ ಕಣ್ಣಮುಂದೆಯೇ ಕಳೆದುಹೋಗುತ್ತಿದ್ದಾರೆ. ಇದು ದೇಶದ ನೈತಿಕತೆಯ ಮೇಲೆ, ಪ್ರಜ್ಞೆಯ ಮೇಲೆ ಬಿದ್ದ ದೊಡ್ಡ ಏಟು. ಇನ್ನಾದರೂ ನಮ್ಮ ಮೆರವಣಿಗೆಗಳು ಸಾಧಕರಿಗೆ ಸಲ್ಲಲಿ, ಕೇವಲ ಮನರಂಜಕರಿಗಲ್ಲ. ಇಲ್ಲದಿದ್ದರೆ, ಕುವೆಂಪು ಅವರ ನಾಡು ಸಾಂಸ್ಕೃತಿಕವಾಗಿ ಬರಿದಾಗುವುದರಲ್ಲಿ ಸಂಶಯವಿಲ್ಲ.</p>
]]></content:encoded>
					
		
		
			</item>
		<item>
		<title>ಲಾಲ್‌ಬಾಗ್ 219 ನೇ ಫಲಪುಷ್ಪ ಪ್ರದರ್ಶನಕ್ಕೆ ಸಜ್ಜು : ಈ ಬಾರಿ ಕಣ್ಮನ ಸೆಳೆಯಲಿರುವ ‘ತೇಜಸ್ವಿ ವಿಸ್ಮಯ’</title>
		<link>https://peepalmedia.com/this-time-the-eye-catching-tejaswi-vismaya/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 12 Jan 2026 16:28:36 +0000</pubDate>
				<category><![CDATA[ಪುಸ್ತಕ]]></category>
		<category><![CDATA[ಬೆಂಗಳೂರು]]></category>
		<category><![CDATA[ವಿಶೇಷ]]></category>
		<guid isPermaLink="false">https://peepalmedia.com/?p=72261</guid>

					<description><![CDATA[ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಜನವರಿ 15ರಿಂದ 26ರವರೆಗೆ ನಡೆಯಲಿರುವ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ತೋಟಗಾರಿಕೆ ಇಲಾಖೆ ಆಯೋಜಿಸುತ್ತಿರುವ ಇದು 219ನೇ ಫಲಪುಷ್ಪ ಪ್ರದರ್ಶನವಾಗಿದ್ದು, ಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬದುಕು–ಬರಹವನ್ನು ಆಧರಿಸಿದ ‘ತೇಜಸ್ವಿ ವಿಸ್ಮಯ’ ವಿಷಯವಸ್ತುವನ್ನು ಹೊಂದಿದೆ. ಗಾಜಿನ ಮನೆಯಲ್ಲಿ ತೇಜಸ್ವಿಯವರ ನೆಚ್ಚಿನ ಕಾಡಿನ ಪುಷ್ಪಮಾದರಿಯನ್ನು ನಿರ್ಮಿಸಲಾಗುತ್ತಿದ್ದು, ಒಟ್ಟಾರೆ 3 ಕೋಟಿ ರೂ.ಗೂ ಅಧಿಕ ವೆಚ್ಚ ಮಾಡಲಾಗುತ್ತಿದೆ. ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 14ರಂದು ಸಂಜೆ 4 ಗಂಟೆಗೆ ಚಾಲನೆ [&#8230;]]]></description>
										<content:encoded><![CDATA[
<p>ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಜನವರಿ 15ರಿಂದ 26ರವರೆಗೆ ನಡೆಯಲಿರುವ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ತೋಟಗಾರಿಕೆ ಇಲಾಖೆ ಆಯೋಜಿಸುತ್ತಿರುವ ಇದು 219ನೇ ಫಲಪುಷ್ಪ ಪ್ರದರ್ಶನವಾಗಿದ್ದು, ಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬದುಕು–ಬರಹವನ್ನು ಆಧರಿಸಿದ ‘ತೇಜಸ್ವಿ ವಿಸ್ಮಯ’ ವಿಷಯವಸ್ತುವನ್ನು ಹೊಂದಿದೆ. ಗಾಜಿನ ಮನೆಯಲ್ಲಿ ತೇಜಸ್ವಿಯವರ ನೆಚ್ಚಿನ ಕಾಡಿನ ಪುಷ್ಪಮಾದರಿಯನ್ನು ನಿರ್ಮಿಸಲಾಗುತ್ತಿದ್ದು, ಒಟ್ಟಾರೆ 3 ಕೋಟಿ ರೂ.ಗೂ ಅಧಿಕ ವೆಚ್ಚ ಮಾಡಲಾಗುತ್ತಿದೆ.</p>



<p>ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 14ರಂದು ಸಂಜೆ 4 ಗಂಟೆಗೆ ಚಾಲನೆ ನೀಡಲಿದ್ದಾರೆ ಎಂದು ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಕಾರ್ಯದರ್ಶಿ ಆರ್. ಗಿರೀಶ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>



<p>ತೋಟಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕ ಡಾ. ಎಂ. ಜಗದೀಶ್ ಮಾತನಾಡಿ, 45&#215;45 ಅಡಿ ವಿಸ್ತೀರ್ಣದ, 25 ಅಡಿ ಎತ್ತರದ ಕಾಡಿನಿಂದ ಆವೃತವಾದ ಬೃಹತ್ ಬೆಟ್ಟ, ಜಲಪಾತದ ಮಾದರಿ ಜಧಿತೆ ಹಾಗೂ ಅದರ ತಪ್ಪಲಿನಲ್ಲಿ ತೇಜಸ್ವಿಯವರ ‘ನಿರುತ್ತರ’ ಮನೆಯ ಪುಷ್ಪಮಾದರಿಯನ್ನು ನಿರ್ಮಿಸಲಾಗುತ್ತಿದೆ ಎಂದರು. ಮುಂದೆ 4 ಅಡಿ ಎತ್ತರದ ತೇಜಸ್ವಿ–ರಾಜೇಶ್ವರಿ ಪ್ರತಿಮೆಗಳು, ತೇಜಸ್ವಿಯವರ ಸ್ಕೂಟರ್, ‘ಕರ್ವಾಲೊ’ ಕಾದಂಬರಿಯ ಪಾತ್ರಗಳಾದ ಕಿವಿ ನಾಯಿ, ಕರಿಯಪ್ಪ, ಮಂದಣ್ಣ, ಏರೋಪ್ಲೇನ್ ಚಿಟ್ಟೆ ಸೇರಿದಂತೆ ಪ್ರಾಣಿ–ಪಕ್ಷಿ–ಕೀಟಗಳ ಪುಷ್ಪಾಕೃತಿಗಳು ಇರಲಿವೆ. ಬೆಟ್ಟದ ಬಲಭಾಗದಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಕಟ್ಟಡದ ಪುಷ್ಪಮಾದರಿಯೂ ಕಾಣಿಸಲಿದೆ.</p>



<p>ಒಂದು ಬಾರಿಗೆ 4.5 ಲಕ್ಷದಂತೆ ಎರಡು ಬಾರಿಗೆ ಒಟ್ಟು 9 ಲಕ್ಷ ಹೂಗಳನ್ನು ಬಳಸಿ ವಿವಿಧ ಪುಷ್ಪಾಕೃತಿಗಳನ್ನು ನಿರ್ಮಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಪರಿಸರ ಮತ್ತು ಕಾಡುಪ್ರಾಣಿಗಳ ಕುರಿತು ಎರಡು ಬೃಹತ್ ಸ್ತಬ್ಧ ಚಿತ್ರಗಳನ್ನೂ ಸೃಜಿಸಲಾಗುತ್ತಿದೆ. ಕಾಡುಪ್ರಾಣಿಗಳ ಪ್ರತಿಕೃತಿಗಳು ಲಾಲ್‌ಬಾಗ್‌ನಾದ್ಯಂತ ಸಂಚರಿಸಿ ವೀಕ್ಷಕರನ್ನು ಆಕರ್ಷಿಸಲಿವೆ.</p>



<p>ಜನವರಿ 15ರಿಂದ 26ರವರೆಗೆ ಪ್ರತಿದಿನ ಸಂಜೆ 5ರಿಂದ 7ರವರೆಗೆ ತೇಜಸ್ವಿಯವರ ‘ನನ್ನ ತೇಜಸ್ವಿ’, ‘ಕರ್ವಾಲೊ’, ‘ಜುಗಾರಿ ಕ್ರಾಸ್’ ಸೇರಿದಂತೆ ಪ್ರಸಿದ್ಧ ನಾಟಕಗಳು, ಸಿನಿಮಾ–ಸಾಹಿತ್ಯ ಕುರಿತ ಸಂವಾದಗಳು ನಡೆಯಲಿವೆ. ಜತೆಗೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯೂ ಇರಲಿದೆ.</p>



<p><strong>ಪ್ರವೇಶ ಶುಲ್ಕ:</strong><br>ವಾರದ ದಿನಗಳಲ್ಲಿ ವಯಸ್ಕರಿಗೆ 80 ರೂ., ರಜಾ ದಿನಗಳಲ್ಲಿ 100 ರೂ.; 12 ವರ್ಷದೊಳಗಿನ ಮಕ್ಕಳಿಗೆ ಎಲ್ಲಾ ದಿನಗಳಲ್ಲೂ 30 ರೂ. ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡುವ ಅವಕಾಶವಿದೆ. ಶಾಲಾ ಸಮವಸ್ತ್ರ ಧರಿಸಿ ಬರುವ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲಾಗಿದೆ.</p>



<p><strong>ಎಲ್‌ಇಡಿ</strong><strong> ಪ್ರದರ್ಶನ:</strong><br>ಲಾಲ್‌ಬಾಗ್‌ನ ಆಯ್ದ ಆರು ಸ್ಥಳಗಳಲ್ಲಿ ಎಲ್‌ಇಡಿ ಸ್ಕ್ರೀನ್‌ಗಳ ಮೂಲಕ ತೇಜಸ್ವಿಯವರ ಬದುಕು–ಬರಹ, ಸಾಧನೆಗಳನ್ನು ಬಿಂಬಿಸುವ ಫೋಟೋಗಳು, ವಿಡಿಯೊಗಳು ಹಾಗೂ ಎಐ ವಿಡಿಯೊ ತುಣುಕುಗಳನ್ನು ಪ್ರದರ್ಶನದ ಅವಧಿಯುದ್ದಕ್ಕೂ ಪ್ರದರ್ಶಿಸಲಾಗಲಿದೆ.</p>
]]></content:encoded>
					
		
		
			</item>
		<item>
		<title>ಏರ್ ಕೆನಡಾ ಫ್ಲೈಟ್ 143: ಆಕಾಶದಲ್ಲಿ ಸ್ತಬ್ಧವಾದ ಇಂಜಿನ್‌ಗಳು ಮತ್ತು &#8216;ಗಿಮ್ಲಿ ಗ್ಲೈಡರ್&#8217; ಸಾಹಸ</title>
		<link>https://peepalmedia.com/silent-engines-in-the-sky-and-the-gimli-glider-adventure/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 12 Jan 2026 10:18:58 +0000</pubDate>
				<category><![CDATA[ವಿಜ್ಞಾನ-ತಂತ್ರಜ್ಞಾನ]]></category>
		<category><![CDATA[ವಿಶೇಷ]]></category>
		<guid isPermaLink="false">https://peepalmedia.com/?p=72250</guid>

					<description><![CDATA[41,000 ಅಡಿ ಎತ್ತರದಲ್ಲಿ ಹಾರುತ್ತಿರುವ ಜೆಟ್ ವಿಮಾನವೊಂದರ ಎರಡೂ ಇಂಜಿನ್‌ಗಳು ದಿಢೀರನೆ ಸ್ತಬ್ಧಗೊಂಡರೆ ಏನಾಗಬಹುದು? ಅದು ಬೆಂಕಿ ಅಥವಾ ಹವಾಮಾನ ವೈಪರೀತ್ಯದಿಂದಲ್ಲ, ಬದಲಿಗೆ ಕೇವಲ ಇಂಧನ ಖಾಲಿಯಾದ ಕಾರಣಕ್ಕೆ! 41,000 ಅಡಿ ಎತ್ತರದಲ್ಲಿ ಹಾರುತ್ತಿರುವ ಜೆಟ್ ವಿಮಾನವೊಂದರ ಎರಡೂ ಇಂಜಿನ್‌ಗಳು ದಿಢೀರನೆ ಸ್ತಬ್ಧಗೊಂಡರೆ ಏನಾಗಬಹುದು? ಅದು ಬೆಂಕಿ ಅಥವಾ ಹವಾಮಾನ ವೈಪರೀತ್ಯದಿಂದಲ್ಲ, ಬದಲಿಗೆ ಕೇವಲ ಇಂಧನ ಖಾಲಿಯಾದ ಕಾರಣಕ್ಕೆ! ಜುಲೈ 23, 1983 ರಂದು, ಏರ್ ಕೆನಡಾ ಫ್ಲೈಟ್ 143 ಮಾಂಟ್ರಿಯಲ್‌ನಿಂದ ಎಡ್ಮಂಟನ್‌ಗೆ 69 ಪ್ರಯಾಣಿಕರೊಂದಿಗೆ ಹಾರುತ್ತಿತ್ತು. [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>41,000 ಅಡಿ ಎತ್ತರದಲ್ಲಿ ಹಾರುತ್ತಿರುವ ಜೆಟ್ ವಿಮಾನವೊಂದರ ಎರಡೂ ಇಂಜಿನ್‌ಗಳು ದಿಢೀರನೆ ಸ್ತಬ್ಧಗೊಂಡರೆ ಏನಾಗಬಹುದು? ಅದು ಬೆಂಕಿ ಅಥವಾ ಹವಾಮಾನ ವೈಪರೀತ್ಯದಿಂದಲ್ಲ, ಬದಲಿಗೆ ಕೇವಲ ಇಂಧನ ಖಾಲಿಯಾದ ಕಾರಣಕ್ಕೆ!</p>
</blockquote>



<p>41,000 ಅಡಿ ಎತ್ತರದಲ್ಲಿ ಹಾರುತ್ತಿರುವ ಜೆಟ್ ವಿಮಾನವೊಂದರ ಎರಡೂ ಇಂಜಿನ್‌ಗಳು ದಿಢೀರನೆ ಸ್ತಬ್ಧಗೊಂಡರೆ ಏನಾಗಬಹುದು? ಅದು ಬೆಂಕಿ ಅಥವಾ ಹವಾಮಾನ ವೈಪರೀತ್ಯದಿಂದಲ್ಲ, ಬದಲಿಗೆ ಕೇವಲ ಇಂಧನ ಖಾಲಿಯಾದ ಕಾರಣಕ್ಕೆ!</p>



<p>ಜುಲೈ 23, 1983 ರಂದು, ಏರ್ ಕೆನಡಾ ಫ್ಲೈಟ್ 143 ಮಾಂಟ್ರಿಯಲ್‌ನಿಂದ ಎಡ್ಮಂಟನ್‌ಗೆ 69 ಪ್ರಯಾಣಿಕರೊಂದಿಗೆ ಹಾರುತ್ತಿತ್ತು. ಆದರೆ ಅಂದು ನಡೆದ ಒಂದು ಸಣ್ಣ &#8216;ಮೆಟ್ರಿಕ್ ಕನ್ವರ್ಷನ್&#8217; (ಅಳತೆ ಮಾಪನ) ತಪ್ಪು ಇಡೀ ವಿಮಾನವನ್ನೇ ಅಪಾಯಕ್ಕೆ ತಳ್ಳಿತು. ಆ ಬೋಯಿಂಗ್ 767 ವಿಮಾನಕ್ಕೆ 22,300 ಕಿಲೋಗ್ರಾಂ ಇಂಧನದ ಅಗತ್ಯವಿತ್ತು, ಆದರೆ ತಪ್ಪಾಗಿ 22,300 ಪೌಂಡ್ ಇಂಧನವನ್ನು ತುಂಬಿಸಲಾಯಿತು. ಅಂದರೆ ಬೇಕಾಗಿದ್ದಕ್ಕಿಂತ ಅರ್ಧದಷ್ಟು ಮಾತ್ರ ಇಂಧನವಿತ್ತು!</p>



<p>ಮ್ಯಾನಿಟೋಬಾ ಆಕಾಶದಲ್ಲಿ ಹಾರುತ್ತಿದ್ದಾಗ ಇಂಜಿನ್‌ಗಳು ಕೈಕೊಟ್ಟವು, ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಆಧುನಿಕ ವಿಮಾನವೊಂದು ಕ್ಷಣಾರ್ಧದಲ್ಲಿ ಬೃಹತ್ ಗಾತ್ರದ &#8216;ಗ್ಲೈಡರ್&#8217; ಆಗಿ ಮಾರ್ಪಟ್ಟಿತು. ಕ್ಯಾಪ್ಟನ್ ರಾಬರ್ಟ್ ಪಿಯರ್ಸನ್ ಮತ್ತು ಫಸ್ಟ್ ಆಫೀಸರ್ ಮಾರಿಸ್ ಕ್ವಿಂಟಲ್ ಅವರ ಮುಂದೆ ಯಾವುದೇ ಸಿದ್ಧ ಮಾರ್ಗಸೂಚಿಗಳಿರಲಿಲ್ಲ. ಸಮಯದ ಅಭಾವವಿದ್ದರೂ, ಕ್ವಿಂಟಲ್ ಅವರಿಗೆ ಮ್ಯಾನಿಟೋಬಾದ &#8216;ಗಿಮ್ಲಿ&#8217; ಎಂಬಲ್ಲಿನ ಹಳೆಯ ಏರ್ ಬೇಸ್ ನೆನಪಿಗೆ ಬಂದಿತು. ಪಿಯರ್ಸನ್ ಅವರು ಒಬ್ಬ ಅನುಭವಿ ಗ್ಲೈಡರ್ ಪೈಲಟ್ ಆಗಿದ್ದರಿಂದ, ಯಾವುದೇ ಶಕ್ತಿಯಿಲ್ಲದ 130 ಟನ್ ತೂಕದ ವಿಮಾನವನ್ನು ಕೇವಲ ತಮ್ಮ ಕೌಶಲದಿಂದ ನಿಯಂತ್ರಿಸಿ ಸುರಕ್ಷಿತವಾಗಿ ಇಳಿಸಿದರು.</p>



<p>ಇದೊಂದು ಕೇವಲ ಅದೃಷ್ಟವಲ್ಲ, ಬದಲಿಗೆ ಒತ್ತಡದ ಪರಿಸ್ಥಿತಿಯಲ್ಲಿ ಮಾನವನ ಬುದ್ಧಿವಂತಿಕೆ ಮತ್ತು ಶಾಂತಚಿತ್ತತೆಗೆ ಸಾಕ್ಷಿ. ಇಂದಿನ ತಂತ್ರಜ್ಞಾನದ ಯುಗದಲ್ಲೂ, ಸರಿಯಾದ ತರಬೇತಿ ಮತ್ತು ಸಮಯಪ್ರಜ್ಞೆ ಎಂತಹ ದೊಡ್ಡ ವಿಪತ್ತನ್ನೂ ತಡೆಯಬಲ್ಲದು ಎಂಬುದಕ್ಕೆ ಈ ಘಟನೆ ಒಂದು ಪಾಠ.</p>



<p><strong>ಈ ಘಟನೆಯ ಬಗ್ಗೆ&nbsp; ಕೆಲವು ಆಸಕ್ತಿದಾಯಕ ಮಾಹಿತಿಗಳು:</strong><br>* &#8216;ಸೈಡ್‌ಸ್ಲಿಪ್&#8217; (Sideslip) ಸಾಹಸ: ರನ್‌ವೇಗೆ ಇಳಿಯುವಾಗ ವಿಮಾನದ ಎತ್ತರ ಮತ್ತು ವೇಗ ಹೆಚ್ಚಿತ್ತು. ವಿಮಾನವನ್ನು ನಿಧಾನಗೊಳಿಸಲು ಬ್ರೇಕ್‌ಗಳಿರಲಿಲ್ಲ. ಆಗ ಪೈಲಟ್ ಪಿಯರ್ಸನ್ ಅವರು &#8216;ಸೈಡ್‌ಸ್ಲಿಪ್&#8217; ಎಂಬ ತಂತ್ರವನ್ನು ಬಳಸಿದರು (ವಿಮಾನವನ್ನು ಒಂದು ಬದಿಗೆ ಓರೆಯಾಗಿಸಿ ಗಾಳಿಯ ಪ್ರತಿರೋಧದ ಮೂಲಕ ವೇಗ ಕಡಿಮೆ ಮಾಡುವುದು). ಸಾಮಾನ್ಯವಾಗಿ ಸಣ್ಣ ವಿಮಾನಗಳಲ್ಲಿ ಬಳಸುವ ಈ ತಂತ್ರವನ್ನು ಬೃಹತ್ ಪ್ಯಾಸೆಂಜರ್ ವಿಮಾನದಲ್ಲಿ ಬಳಸಿ ಯಶಸ್ವಿಯಾದದ್ದು ಪವಾಡವೇ ಸರಿ.</p>



<p>* ರೇಸಿಂಗ್ ಟ್ರ್ಯಾಕ್ ಆಗಿದ್ದ ರನ್‌ವೇ: ಅವರು ಇಳಿಯಲು ಆರಿಸಿಕೊಂಡ ಗಿಮ್ಲಿ ಏರ್ ಬೇಸ್ ಆಗ ರನ್-ವೇ ಆಗಿ ಉಳಿದಿರಲಿಲ್ಲ. ಬದಲಿಗೆ ಅದನ್ನು &#8216;ಡ್ರ್ಯಾಗ್ ರೇಸಿಂಗ್&#8217; (ಕಾರು ರೇಸ್) ಟ್ರ್ಯಾಕ್ ಆಗಿ ಬಳಸಲಾಗುತ್ತಿತ್ತು. ವಿಮಾನ ಇಳಿಯುವ ಸಮಯದಲ್ಲಿ ಅಲ್ಲಿ ಕಾರು ರೇಸ್ ನಡೆಯುತ್ತಿತ್ತು ಮತ್ತು ಅನೇಕ ಕುಟುಂಬಗಳು ಪಿಕ್ನಿಕ್ ಮಾಡುತ್ತಿದ್ದವು! ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಲಿಲ್ಲ.</p>



<p>* RAT (Ram Air Turbine) ಬಳಕೆ: ಇಂಜಿನ್‌ಗಳು ನಿಂತಾಗ ವಿಮಾನಕ್ಕೆ ವಿದ್ಯುತ್ ಮತ್ತು ಹೈಡ್ರಾಲಿಕ್ ಒತ್ತಡವನ್ನು ನೀಡಲು ವಿಮಾನದ ಕೆಳಭಾಗದಲ್ಲಿದ್ದ ಒಂದು ಸಣ್ಣ ಫ್ಯಾನ್ (RAT) ನೆರವಾಯಿತು. ಇದು ವಿಮಾನ ಚಲಿಸುವಾಗ ಸಿಗುವ ಗಾಳಿಯಿಂದ ಸುತ್ತುತ್ತಾ ಕನಿಷ್ಠ ನಿಯಂತ್ರಣಕ್ಕೆ ಬೇಕಾದ ಶಕ್ತಿ ನೀಡಿತು.</p>



<p>* ಯಂತ್ರದ ದೋಷವಲ್ಲ, ಲೆಕ್ಕಾಚಾರದ ತಪ್ಪು: ಕೆನಡಾ ದೇಶವು ಆಗಷ್ಟೇ ಪೌಂಡ್ಸ್‌ನಿಂದ ಮೆಟ್ರಿಕ್ (ಕೆ.ಜಿ) ಪದ್ಧತಿಗೆ ಬದಲಾಗುತ್ತಿತ್ತು. ಗ್ರೌಂಡ್ ಸಿಬ್ಬಂದಿ ಇಂಧನವನ್ನು ಲೆಕ್ಕ ಹಾಕುವಾಗ ಬಳಸಿದ &#8216;ಡೆನ್ಸಿಟಿ ಫಿಗರ್&#8217; ತಪ್ಪಾಗಿದ್ದರಿಂದ ಈ ಅವಾಂತರ ಸಂಭವಿಸಿತು.</p>



<p>* ವಿಮಾನದ ಪುನರ್ಜನ್ಮ: ಈ ಸಾಹಸದ ನಂತರ ಆ ಬೋಯಿಂಗ್ 767 ವಿಮಾನಕ್ಕೆ &#8216;ಗಿಮ್ಲಿ ಗ್ಲೈಡರ್&#8217; ಎಂದೇ ಹೆಸರಿಡಲಾಯಿತು. ಅದನ್ನು ರಿಪೇರಿ ಮಾಡಿ ಮತ್ತೆ ಹಾರಾಟಕ್ಕೆ ಬಳಸಲಾಯಿತು. ಆ ವಿಮಾನವು 2008 ರವರೆಗೆ ಸೇವೆಯಲ್ಲಿದ್ದು, ನಂತರ ನಿವೃತ್ತಿ ಹೊಂದಿತು.</p>
]]></content:encoded>
					
		
		
			</item>
		<item>
		<title>ರಾಷ್ಟ್ರೀಯ ಯುವ ದಿನ: ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯಿರಿ</title>
		<link>https://peepalmedia.com/national-youth-day-learn-about-the-history-and-significance/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 12 Jan 2026 05:18:28 +0000</pubDate>
				<category><![CDATA[ವಿಶೇಷ]]></category>
		<guid isPermaLink="false">https://peepalmedia.com/?p=72216</guid>

					<description><![CDATA[ಭಾರತದ ಭವಿಷ್ಯವನ್ನು ರೂಪಿಸುವ ಶಕ್ತಿ ಯುವಜನರಲ್ಲಿದೆ. ಯುವಶಕ್ತಿಯ ಉತ್ಸಾಹ, ಚಿಂತನೆ, ತ್ಯಾಗ ಮತ್ತು ನಾಯಕತ್ವ ಗುಣಗಳು ರಾಷ್ಟ್ರದ ಅಭಿವೃದ್ಧಿಗೆ ಆಧಾರಸ್ತಂಭವಾಗಿವೆ. ಈ ಹಿನ್ನೆಲೆಯಲ್ಲಿ ಯುವಜನರನ್ನು ಪ್ರೇರೇಪಿಸುವ ಮತ್ತು ಅವರ ಪಾತ್ರವನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಜನವರಿ 12ರಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರೀಯ ಯುವ ದಿನದ ಇತಿಹಾಸರಾಷ್ಟ್ರೀಯ ಯುವ ದಿನವನ್ನು ಭಾರತದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನದ ನೆನಪಿಗಾಗಿ ಆಚರಿಸಲಾಗುತ್ತದೆ. ಸ್ವಾಮಿ ವಿವೇಕಾನಂದರು 1863ರ ಜನವರಿ 12ರಂದು ಕೋಲ್ಕತ್ತೆಯಲ್ಲಿ ಜನಿಸಿದರು. ಅವರು ಭಾರತದ ಮಹಾನ್ ತತ್ತ್ವಜ್ಞಾನಿ, ಧಾರ್ಮಿಕ [&#8230;]]]></description>
										<content:encoded><![CDATA[
<p>ಭಾರತದ ಭವಿಷ್ಯವನ್ನು ರೂಪಿಸುವ ಶಕ್ತಿ ಯುವಜನರಲ್ಲಿದೆ. ಯುವಶಕ್ತಿಯ ಉತ್ಸಾಹ, ಚಿಂತನೆ, ತ್ಯಾಗ ಮತ್ತು ನಾಯಕತ್ವ ಗುಣಗಳು ರಾಷ್ಟ್ರದ ಅಭಿವೃದ್ಧಿಗೆ ಆಧಾರಸ್ತಂಭವಾಗಿವೆ. ಈ ಹಿನ್ನೆಲೆಯಲ್ಲಿ ಯುವಜನರನ್ನು ಪ್ರೇರೇಪಿಸುವ ಮತ್ತು ಅವರ ಪಾತ್ರವನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಜನವರಿ 12ರಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ.</p>



<p><strong>ರಾಷ್ಟ್ರೀಯ ಯುವ ದಿನದ ಇತಿಹಾಸ</strong><br>ರಾಷ್ಟ್ರೀಯ ಯುವ ದಿನವನ್ನು ಭಾರತದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನದ ನೆನಪಿಗಾಗಿ ಆಚರಿಸಲಾಗುತ್ತದೆ. ಸ್ವಾಮಿ ವಿವೇಕಾನಂದರು 1863ರ ಜನವರಿ 12ರಂದು ಕೋಲ್ಕತ್ತೆಯಲ್ಲಿ ಜನಿಸಿದರು. ಅವರು ಭಾರತದ ಮಹಾನ್ ತತ್ತ್ವಜ್ಞಾನಿ, ಧಾರ್ಮಿಕ ಚಿಂತಕ ಮತ್ತು ಯುವಜನರಿಗೆ ದಿಕ್ಕು ತೋರಿದ ಆದರ್ಶ ನಾಯಕನಾಗಿದ್ದರು.</p>



<p>1984ರಲ್ಲಿ ಭಾರತ ಸರ್ಕಾರವು ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಿಸುವ ನಿರ್ಧಾರ ಕೈಗೊಂಡಿತು. 1985ರಿಂದ ಈ ದಿನವನ್ನು ಅಧಿಕೃತವಾಗಿ ದೇಶದಾದ್ಯಂತ ಆಚರಿಸಲಾಗುತ್ತಿದೆ. ಯುವಜನರಲ್ಲಿ ದೇಶಭಕ್ತಿ, ಆತ್ಮವಿಶ್ವಾಸ, ಶಿಸ್ತು, ನೈತಿಕ ಮೌಲ್ಯಗಳು ಹಾಗೂ ಸೇವಾಭಾವ ಬೆಳೆಸುವ ಉದ್ದೇಶದಿಂದ ಈ ದಿನಕ್ಕೆ ವಿಶೇಷ ಮಹತ್ವ ನೀಡಲಾಗಿದೆ.</p>



<p>ಸ್ವಾಮಿ ವಿವೇಕಾನಂದರು “ಎದ್ದೇಳಿ, ಎಚ್ಚರವಾಗಿರಿ, ಗುರಿ ಸಾಧಿಸುವವರೆಗೆ ನಿಲ್ಲಬೇಡಿ” ಎಂಬ ಸಂದೇಶದ ಮೂಲಕ ಯುವಜನರನ್ನು ಜೀವನದಲ್ಲಿ ಧೈರ್ಯ, ಸಂಕಲ್ಪ ಮತ್ತು ಶ್ರಮದ ಮಹತ್ವವನ್ನು ಅರಿಯುವಂತೆ ಮಾಡಿದರು. ಅವರ ಚಿಂತನೆಗಳು ಇಂದಿಗೂ ಯುವ ಮನಸ್ಸುಗಳಿಗೆ ದಾರಿ ತೋರಿಸುತ್ತಿವೆ.</p>



<p><strong>ರಾಷ್ಟ್ರೀಯ ಯುವ ದಿನದ ಮಹತ್ವ</strong><br>ರಾಷ್ಟ್ರೀಯ ಯುವ ದಿನವು ಯುವಜನರಿಗೆ ತಮ್ಮ ಶಕ್ತಿ, ಸಾಮರ್ಥ್ಯ ಮತ್ತು ಹೊಣೆಗಾರಿಕೆಯನ್ನು ಅರಿಯುವ ಅವಕಾಶವನ್ನು ನೀಡುತ್ತದೆ. ದೇಶದ ಜನಸಂಖ್ಯೆಯಲ್ಲಿ ಹೆಚ್ಚಿನ ಭಾಗವನ್ನು ಯುವಜನರು ಹೊಂದಿರುವ ಭಾರತದಲ್ಲಿ, ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.</p>



<p><strong>ಈ ದಿನದ ಪ್ರಮುಖ ಉದ್ದೇಶಗಳು ಹೀಗಿವೆ:</strong><br>* ಯುವಜನರಲ್ಲಿ ರಾಷ್ಟ್ರೀಯತೆ ಮತ್ತು ಸಮಾಜ ಸೇವಾ ಮನೋಭಾವವನ್ನು ಉತ್ತೇಜಿಸುವುದು<br>* ನೈತಿಕ ಮೌಲ್ಯಗಳು, ಶಿಸ್ತು ಮತ್ತು ಆತ್ಮವಿಶ್ವಾಸ ಬೆಳೆಸುವುದು<br>* ಯುವಜನರನ್ನು ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಕಡೆಗೆ ಪ್ರೇರೇಪಿಸುವುದು<br>* ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವುದು</p>



<p>ರಾಷ್ಟ್ರೀಯ ಯುವ ದಿನದ ಅಂಗವಾಗಿ ದೇಶದಾದ್ಯಂತ ಶಾಲಾ–ಕಾಲೇಜುಗಳಲ್ಲಿ ಭಾಷಣ ಸ್ಪರ್ಧೆಗಳು, ಯುವ ಸಂವಾದಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಮಾಜ ಸೇವಾ ಚಟುವಟಿಕೆಗಳು ಹಾಗೂ ಪ್ರೇರಣಾದಾಯಕ ಉಪನ್ಯಾಸಗಳು ನಡೆಯುತ್ತವೆ. ಇವು ಯುವಜನರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ.</p>



<p>ರಾಷ್ಟ್ರೀಯ ಯುವ ದಿನವು ಕೇವಲ ಒಂದು ಆಚರಣೆ ಮಾತ್ರವಲ್ಲ, ಅದು ಯುವಜನರಿಗೆ ದಾರಿ ತೋರಿಸುವ ದಿನವಾಗಿದೆ. ಸ್ವಾಮಿ ವಿವೇಕಾನಂದರ ಚಿಂತನೆಗಳು ಯುವ ಮನಸ್ಸುಗಳಲ್ಲಿ ಆತ್ಮಗೌರವ, ಧೈರ್ಯ ಮತ್ತು ಸೇವಾಭಾವವನ್ನು ಬೆಳಸುತ್ತವೆ. ಶಕ್ತಿಶಾಲಿ, ಮೌಲ್ಯಾಧಾರಿತ ಮತ್ತು ಜವಾಬ್ದಾರಿಯುತ ಯುವ ಪೀಳಿಗೆಯೇ ಬಲಿಷ್ಠ ಭಾರತದ ನಿರ್ಮಾಣಕ್ಕೆ ಕೀಲುಕಲ್ಲು. ಈ ಕಾರಣದಿಂದಲೇ ರಾಷ್ಟ್ರೀಯ ಯುವ ದಿನದ ಆಚರಣೆ ರಾಷ್ಟ್ರದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.</p>
]]></content:encoded>
					
		
		
			</item>
		<item>
		<title>ಮಲಯಾಳಿ ಭಾಷಾ ಮಸೂದೆ ಕಾಸರಗೋಡು ಕನ್ನಡಿಗರಿಗೆ ಮಾರಕವೇ? ಲಾಭವೇ? ಸಿದ್ದರಾಮಯ್ಯ ರಾಜಕೀಯ ಏನು?</title>
		<link>https://peepalmedia.com/is-the-malayali-language-bill-fatal-for-kannadigas-in-kasaragod/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 09 Jan 2026 03:42:47 +0000</pubDate>
				<category><![CDATA[ಅಂಕಣ]]></category>
		<category><![CDATA[ವಿಶೇಷ]]></category>
		<category><![CDATA[ಶಿಕ್ಷಣ]]></category>
		<guid isPermaLink="false">https://peepalmedia.com/?p=72039</guid>

					<description><![CDATA[&#8220;ಕಾಸರಗೋಡು ಕನ್ನಡಿಗರ ಮಾತೃಭಾಷಾ ಸ್ವಾತಂತ್ರ್ಯವನ್ನು ‘ಮಲಯಾಳಿ ಭಾಷಾ ಮಸೂದೆ -2025’ ಕಸಿದುಕೊಳ್ಳುತ್ತದೆಯೇ? ‘ಮಲಯಾಳಿ ಭಾಷಾ ಮಸೂದೆ -2025’ ರ ಸೆಕ್ಷನ್ 5, 6, 7, 8 ರಲ್ಲಿ ಏನು ಹೇಳುತ್ತದೆ? ಸಿದ್ದರಾಮಯ್ಯ ರಾಜಕೀಯ ಏನು?&#8221; ಪತ್ರಕರ್ತ ನವೀನ್ ಸೂರಿಂಜೆಯವರ ಬರಹದಲ್ಲಿ, ತಪ್ಪದೇ ಓದಿ ಕೇರಳ ಸರ್ಕಾರದ ‘ಮಲಯಾಳಿ ಭಾಷಾ ಮಸೂದೆ -2025’ ಅನ್ನು ಕಾಸರಗೋಡು ಕನ್ನಡಿಗರ ಪರವಾಗಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿರೋಧಿಸಿದ್ದಾರೆ. ಕೇರಳ ಸರ್ಕಾರದ ಪ್ರಸ್ತಾಪಿತ ಮಲೆಯಾಳಿ ಭಾಷಾ ಮಸೂದೆ-2025 ಸಂವಿಧಾನ ಖಾತರಿ ಮಾಡಿರುವ ಭಾಷಾ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>&#8220;ಕಾಸರಗೋಡು ಕನ್ನಡಿಗರ ಮಾತೃಭಾಷಾ ಸ್ವಾತಂತ್ರ್ಯವನ್ನು ‘ಮಲಯಾಳಿ ಭಾಷಾ ಮಸೂದೆ -2025’ ಕಸಿದುಕೊಳ್ಳುತ್ತದೆಯೇ? ‘ಮಲಯಾಳಿ ಭಾಷಾ ಮಸೂದೆ -2025’ ರ ಸೆಕ್ಷನ್ 5, 6, 7, 8 ರಲ್ಲಿ ಏನು ಹೇಳುತ್ತದೆ? ಸಿದ್ದರಾಮಯ್ಯ ರಾಜಕೀಯ ಏನು?&#8221; ಪತ್ರಕರ್ತ ನವೀನ್ ಸೂರಿಂಜೆಯವರ ಬರಹದಲ್ಲಿ, ತಪ್ಪದೇ ಓದಿ</p>
</blockquote>



<p>ಕೇರಳ ಸರ್ಕಾರದ ‘ಮಲಯಾಳಿ ಭಾಷಾ ಮಸೂದೆ -2025’ ಅನ್ನು ಕಾಸರಗೋಡು ಕನ್ನಡಿಗರ ಪರವಾಗಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿರೋಧಿಸಿದ್ದಾರೆ. ಕೇರಳ ಸರ್ಕಾರದ ಪ್ರಸ್ತಾಪಿತ ಮಲೆಯಾಳಿ ಭಾಷಾ ಮಸೂದೆ-2025 ಸಂವಿಧಾನ ಖಾತರಿ ಮಾಡಿರುವ ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಸಿದ್ದರಾಮಯ್ಯನವರ ಈ ನಿಲುವು ಸರಿಯಾದುದಲ್ಲ. ಮಲಯಾಳಿ ಭಾಷಾ ಮಸೂದೆಯು ಕನ್ನಡದ ವಿರುದ್ಧವಾಗಿಲ್ಲ. ಬಹುಶಃ ಕೋಗಿಲು ಸಂತ್ರಸ್ತರ ಪರವಾಗಿ ಕರ್ನಾಟಕ ಸರ್ಕಾರವನ್ನು ಟೀಕಿಸಿದ ಕೇರಳ ಸಿಎಂ ಪಿನರಾಯಿ ವಿಜಯನ್ ಗೆ ತಿರುಗೇಟು ಕೊಡಲು ಮಲಯಾಳಿ ಭಾಷಾ ಮಸೂದೆಯನ್ನು ಸಿದ್ದರಾಮಯ್ಯ ತಪ್ಪಾಗಿ ಆಯ್ಕೆ ಮಾಡಿಕೊಂಡಿದ್ದಾರೆ.</p>



<p>ಮಲಯಾಳ ಕೇರಳದ ರಾಜ್ಯ ಭಾಷೆ. ರಾಜ್ಯಭಾಷೆಯೊಂದನ್ನು ‘ಅಧಿಕೃತ ಆಡಳಿತ ಭಾಷೆ’ ಎಂದು ಘೋಷಿಸಿ, ಶಾಲೆಗಳಲ್ಲಿ ಅದನ್ನು ಕಡ್ಡಾಯ ಮಾಡುವುದು ಆಯಾ ರಾಜ್ಯಗಳ ಭಾಷಾ ಬದ್ಧತೆಯನ್ನು ತೋರಿಸುತ್ತದೆ. ಕೇರಳ ಸರ್ಕಾರದ ಈ ಭಾಷಾ ಬದ್ಧತೆಯು ಕರ್ನಾಟಕಕ್ಕೆ ಮಾದರಿಯಾಗಬೇಕಿದೆ. ಹಾಗಾದರೆ, ಕಾಸರಗೋಡು ಕನ್ನಡಿಗರ ಮಾತೃಭಾಷಾ ಸ್ವಾತಂತ್ರ್ಯವನ್ನು ‘ಮಲಯಾಳಿ ಭಾಷಾ ಮಸೂದೆ -2025’ ಕಸಿದುಕೊಳ್ಳುತ್ತದೆಯೇ ? ಖಂಡಿತವಾಗಿಯೂ ಇಲ್ಲ ! ಬಹುಶಃ ಸಿದ್ದರಾಮಯ್ಯನವರು ‘ಮಲಯಾಳಿ ಭಾಷಾ ಮಸೂದೆ -2025’ ಅನ್ನು ಪೂರ್ತಿಯಾಗಿ ಓದಿಲ್ಲವೆಂದು ಕಾಣುತ್ತದೆ.</p>



<p><strong>‘ಮಲಯಾಳಿ ಭಾಷಾ ಮಸೂದೆ -2025’ ರ ಸೆಕ್ಷನ್ 5 ರಲ್ಲಿ ಹೀಗೆ ಹೇಳುತ್ತದೆ.</strong></p>



<p>ಸೆಕ್ಷನ್ 5</p>



<p>(1) ಭಾರತ ಸಂವಿಧಾನದ ವಿಧಿ 346 ಮತ್ತು ವಿಧಿ 347ಗಳಿಗೆ ಒಳಪಟ್ಟಂತೆ, ಕೇರಳ ರಾಜ್ಯದಲ್ಲಿ ಎಲ್ಲಾ ಅಧಿಕೃತ ಉದ್ದೇಶಗಳಿಗೆ ಬಳಸಬೇಕಾದ ಭಾಷೆ ಮಲಯಾಳಂ ಆಗಿರುತ್ತದೆ.</p>



<p>ಸೆಕ್ಷನ್ 5(2) ಉಪವಿಧಿ (1) ರಾಜ್ಯ ಸರ್ಕಾರದ ಅಧೀನದಲ್ಲಿರುವ ಈಗಿರುವ ಎಲ್ಲಾ ಇಲಾಖೆಗಳಿಗೂ ಹಾಗೂ ಮುಂದಿನ ದಿನಗಳಲ್ಲಿ ಸ್ಥಾಪನೆಯಾಗುವ ಎಲ್ಲಾ ಇಲಾಖೆಗಳಿಗೂ ಅನ್ವಯವಾಗುತ್ತದೆ. ಇದಲ್ಲದೆ ಸ್ಥಳೀಯ ಸಂಸ್ಥೆಗಳು, ಅರೆ-ಸರ್ಕಾರಿ ಸಂಸ್ಥೆಗಳು, ಸ್ವಾಯತ್ತ ಸಂಸ್ಥೆಗಳು, ಸಹಕಾರ ಸಂಸ್ಥೆಗಳು ಹಾಗೂ ಸರ್ಕಾರದ ಅಧೀನದಲ್ಲಿರುವ ಸಾರ್ವಜನಿಕ ವಲಯದ ಉದ್ದಿಮೆಗಳಿಗೂ ಇದು ಅನ್ವಯಿಸುತ್ತದೆ.</p>



<p>ಆದರೆ ಭಾರತ ಸರ್ಕಾರದೊಂದಿಗೆ, ಭಾರತ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳೊಂದಿಗೆ, ವಿದೇಶಗಳೊಂದಿಗೆ, ಇತರ ರಾಜ್ಯಗಳೊಂದಿಗೆ, ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಮುಂತಾದವರೊಂದಿಗೆ ನಡೆಯುವ ಪತ್ರವ್ಯವಹಾರಗಳಿಗೆ ಇಂಗ್ಲಿಷ್ ಭಾಷೆಯನ್ನು ಬಳಸಬಹುದು. ಹಾಗೆಯೇ ಕಾನೂನಿನ ಪ್ರಕಾರ ಇಂಗ್ಲಿಷ್ ಬಳಸುವುದು ಅನಿವಾರ್ಯವಾಗಿರುವ ಇತರ ಸಂದರ್ಭಗಳಲ್ಲಿ ಹಾಗೂ ತಮಿಳು ಮತ್ತು ಕನ್ನಡ ಭಾಷೆ ಮಾತನಾಡುವವರೊಂದಿಗೆ (ರಾಜ್ಯದ ಅಲ್ಪಸಂಖ್ಯಾತ ಭಾಷೆಗಳಾದ ತಮಿಳು ಮತ್ತು ಕನ್ನಡ ಹೊರತುಪಡಿಸಿ) ಸಂವಹನ ನಡೆಸುವ ಸಂದರ್ಭಗಳಲ್ಲೂ ಇಂಗ್ಲಿಷ್ ಬಳಸಬಹುದಾಗಿದೆ.</p>



<p><strong>‘ಮಲಯಾಳಿ ಭಾಷಾ ಮಸೂದೆ -2025’ ರ ಸೆಕ್ಷನ್ 6 ರಲ್ಲಿ ಹೀಗೆ ಹೇಳುತ್ತದೆ.</strong></p>



<p>ಸೆಕ್ಷನ್ 6(1) ಕೇರಳದಲ್ಲಿನ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 10ನೇ ತರಗತಿಯವರೆಗೆ ಮಲಯಾಳಂ ಕಡ್ಡಾಯ ಮೊದಲ ಭಾಷೆಯಾಗಿರುತ್ತದೆ.</p>



<p>ಸೆಕ್ಷನ್ 6(2) ರಾಜ್ಯದ ಎಲ್ಲಾ ಶಾಲೆಗಳಲ್ಲಿ ಮಲಯಾಳಂ ಭಾಷೆಯ ಪ್ರಸಾರ ಮತ್ತು ಪ್ರಚಾರವನ್ನು ಉತ್ತೇಜಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು.</p>



<p>ಸೆಕ್ಷನ್6(3) ಮಾತೃಭಾಷೆ ಮಲಯಾಳಂ ಹೊರತಾದ ಯಾವುದೇ ಭಾಷೆಯಾಗಿರುವ ವಿದ್ಯಾರ್ಥಿಗಳಿಗೆ, ತಮ್ಮ ಮಾತೃಭಾಷೆಯ ಜೊತೆಗೆ ಮಲಯಾಳಂ ಭಾಷೆಯನ್ನು ಅಧ್ಯಯನ ಮಾಡುವ ಅವಕಾಶ ನೀಡಲಾಗುತ್ತದೆ.</p>



<p>ಹಾಗಾಗಿ ‘ಮಲಯಾಳಿ ಭಾಷಾ ಮಸೂದೆ -2025’ರ ಸೆಕ್ಷನ್ 6(3) ಪ್ರಕಾರ ಕನ್ನಡ ಮಾತೃಭಾಷೆಯ ವಿದ್ಯಾರ್ಥಿಗಳು ಕನ್ನಡದ ಜೊತೆಗೆ ಮಲಯಾಳ ಭಾಷೆ ಕಲಿಯಬಹುದು. ಕನ್ನಡ ಭಾಷೆಗೆ ಇಲ್ಲಿ ಯಾವುದೇ ಅಪಾಯ ಇರುವುದಿಲ್ಲ.</p>



<p>ಇವೆಲ್ಲಕ್ಕಿಂತ ಮುಖ್ಯವಾಗುವುದು ‘ಮಲಯಾಳಿ ಭಾಷಾ ಮಸೂದೆ -2025’ಯ ಸೆಕ್ಷನ್ 7.. ಇದು ಕೇರಳ ಸರ್ಕಾರವು ದ್ರಾವಿಡ ಭಾಷೆಗಳ ಬಗ್ಗೆ ಹೊಂದಿರುವ ಉದಾರತೆಯನ್ನು ತೋರ್ಪಡಿಸುತ್ತದೆ. ಬಹುಶಃ ಯಾವ ರಾಜ್ಯದಲ್ಲೂ ಇಷ್ಟು ಭಾಷಾ ಉದಾರತೆ ಇರುವುದಿಲ್ಲವೇನೋ!</p>



<p><strong>ಮಲಯಾಳಿ ಭಾಷಾ ಮಸೂದೆ-2025 ಸೆಕ್ಷನ್ 7 ಹೀಗೆ ಹೇಳುತ್ತದೆ</strong>.</p>



<p>ಸೆಕ್ಷನ್ 7&nbsp; : ಇತರ ರಾಜ್ಯ–ಭಾಷಿಕ ಅಲ್ಪಸಂಖ್ಯಾತರ ಕುರಿತು ವಿಶೇಷ ಕ್ರಮಗಳು<br>ಸೆಕ್ಷನ್ 5 ಅಥವಾ ಸೆಕ್ಷನ್ 6ರಲ್ಲಿ ಯಾವುದೇ ಅಂಶಗಳಿದ್ದರೂ ಸಹ,</p>



<p>(1) ಕೇರಳ ರಾಜ್ಯದಲ್ಲಿರುವ ತಮಿಳು ಹಾಗೂ ಕನ್ನಡ ಭಾಷಿಕ ಅಲ್ಪಸಂಖ್ಯಾತರು, ಈ ಉದ್ದೇಶಕ್ಕಾಗಿ ಸರ್ಕಾರದಿಂದ ಭಾಷಿಕ ಅಲ್ಪಸಂಖ್ಯಾತ ಪ್ರದೇಶಗಳೆಂದು ಘೋಷಿಸಲಾದ ಪ್ರದೇಶಗಳಲ್ಲಿ ರುವ ರಾಜ್ಯ ಸರ್ಕಾರದ ಕಾರ್ಯಾಲಯ, ಇಲಾಖೆಗಳ ಮುಖ್ಯಸ್ಥರು ಮತ್ತು ರಾಜ್ಯ ಸರ್ಕಾರದ ಎಲ್ಲಾ ಸ್ಥಳೀಯ ಕಚೇರಿಗಳೊಂದಿಗೆ ತಮ್ಮ ಪತ್ರ ವ್ಯವಹಾರವನ್ನು ತಮ್ಮ ತಮ್ಮ ಭಾಷೆಗಳಲ್ಲಿ ನಡೆಸಬಹುದು. ಅಂತಹ ಸಂದರ್ಭಗಳಲ್ಲಿ ಕಳುಹಿಸಲಾಗುವ ಉತ್ತರಗಳೂ ಅವರವರ ಅಲ್ಪಸಂಖ್ಯಾತ ಭಾಷೆಗಳಲ್ಲಿಯೇ ಇರಬೇಕು.</p>



<p>(2) ಮಾತೃಭಾಷೆ ಮಲಯಾಳಂ ಹೊರತಾದ ಯಾವುದೇ ಮಾತೃ ಭಾಷೆಯಾಗಿರುವ ವಿದ್ಯಾರ್ಥಿಗಳು, ರಾಷ್ಟ್ರೀಯ ಶಿಕ್ಷಣ ಪಠ್ಯಕ್ರಮದ ಅನುಸಾರವಾಗಿ, ರಾಜ್ಯದ ಶಾಲೆಗಳಲ್ಲಿ ಲಭ್ಯವಿರುವ ತಮ್ಮ ಇಚ್ಛೆಯ ಭಾಷೆಗಳಲ್ಲಿ ಅಧ್ಯಯನ ಮುಂದುವರಿಸಬಹುದು.</p>



<p>(3) ಕೇರಳದಲ್ಲಿ ಅಧ್ಯಯನ ಮಾಡುತ್ತಿರುವ ಇತರ ರಾಜ್ಯಗಳು ಹಾಗೂ ವಿದೇಶಗಳಿಂದ ಬಂದ ವಿದ್ಯಾರ್ಥಿಗಳಲ್ಲಿ, ಮಾತೃಭಾಷೆ ಮಲಯಾಳಂ ಅಲ್ಲದವರಿಗೆ, 9ನೇ ತರಗತಿ, 10ನೇ ತರಗತಿ ಹಾಗೂ ಹಿರಿಯ ಪ್ರಾಥಮಿಕ ಮಟ್ಟದ ಪರೀಕ್ಷೆಗಳಲ್ಲಿ ಮಲಯಾಳಂ ಭಾಷೆಯಲ್ಲಿ ಪರೀಕ್ಷೆ ಬರೆಯುವ ಕಡ್ಡಾಯದಿಂದ ವಿನಾಯಿತಿ ನೀಡಲಾಗುತ್ತದೆ.</p>



<p>ಕೇರಳದಲ್ಲಿ ಕನ್ನಡಕ್ಕೆ ಇದಕ್ಕಿಂತ ಇನ್ನೇನು ಬೇಕು? ಮಲಯಾಳಿ ಭಾಷಾ ಮಸೂದೆ-2025 ಸೆಕ್ಷನ್ 7 ರ ಪ್ರಕಾರ ಕೇರಳದ ಉತ್ತರಭಾಗದ ಕಾಸರಗೋಡು ಕನ್ನಡ ಪ್ರದೇಶದಲ್ಲಿ ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಕನ್ನಡ ಕಡ್ಡಾಯವಾಗಿರುತ್ತದೆ. ಕನ್ನಡಿಗರ ಜೊತೆ ಕೇರಳದ ಉತ್ತರ ಭಾಗದ ಸರ್ಕಾರಿ ಕಚೇರಿ ಸಿಬ್ಬಂದಿ ಕನ್ನಡದಲ್ಲೇ ವ್ಯವಹರಿಸಬೇಕು. ಕನ್ನಡಿಗರ ಕನ್ನಡದ ಅರ್ಜಿ, ಉತ್ತರಗಳನ್ನು ಕಾಸರಗೋಡಿನ ಎಲ್ಲಾ ಸರ್ಕಾರಿ ಕಚೇರಿಗಳು ಸ್ವೀಕರಿಸುವುದನ್ನು, ಕನ್ನಡದಲ್ಲೇ ವ್ಯವಹರಿಸುವುದನ್ನು ಈ ಕಾಯ್ದೆ ಕಡ್ಡಾಯಗೊಳಿಸಿದೆ.</p>



<p>ಸೆಕ್ಷ 7(2) ಪ್ರಕಾರ, ಕನ್ನಡದ ಮಕ್ಕಳು ಕೇರಳದ ಉತ್ತರ ಭಾಗದಲ್ಲಿ ಕನ್ನಡದಲ್ಲೇ ಅಧ್ಯಯನ ಮುಂದುವರೆಸುವ ಹಕ್ಕನ್ನು ಈ ಕಾಯ್ದೆ ನೀಡುತ್ತದೆ. ಸೆಕ್ಷನ್ 7(3) ಪ್ರಕಾರ, ಕನ್ನಡದ 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳು ಕನ್ನಡದಲ್ಲೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಅವರಿಗೆ ಪ್ರಶ್ನೆ ಪತ್ರಿಕೆಯನ್ನೂ ಕನ್ನಡದಲ್ಲೇ ನೀಡಿ, ಉತ್ತರವನ್ನೂ ಕನ್ನಡದಲ್ಲೇ ಬರೆಯವ ಅವಕಾಶ ನೀಡಲಾಗಿದೆ. ಅಷ್ಟು ಮಾತ್ರವಲ್ಲದೆ ಪ್ರಾಥಮಿಕ ಶಾಲೆಯಲ್ಲೂ ಕನ್ನಡದಲ್ಲೇ ಕನ್ನಡ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು.</p>



<p>ಸೆಕ್ಷನ್ 9 ರ ಪ್ರಕಾರ ಕೇರಳದ ಎಲ್ಲಾ ಜಿಲ್ಲಾ ನ್ಯಾಯಾಲಯಗಳ ಆದೇಶಗಳನ್ನು, ತೀರ್ಪುಗಳನ್ನು ಮಲಯಾಳದಲ್ಲೇ ಪ್ರಕಟಿಸಬೇಕು. ಆದರೆ ಭಾಷಾ ಅಲ್ಪಸಂಖ್ಯಾತರಾಗಿರುವ ಪ್ರದೇಶದ ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ಅಥವಾ ಇಂಗ್ಲೀಷ್ ನಲ್ಲಿ ಆದೇಶ, ತೀರ್ಪುಗಳನ್ನು ಪ್ರಕಟಿಸಬೇಕು.</p>



<p>ಸಾರ್ವಜನಿಕ ಸ್ಥಳಗಳಲ್ಲಿ ಬಳಸುವ ಬೋರ್ಡ್, ಜಾಹೀರಾತುಗಳಲ್ಲಿ ದ್ವಿಭಾಷಾ ನೀತಿಯನ್ನು ಅನುಸರಿಸಬೇಕು ಎಂದು ಮಲಯಾಳಿ ಭಾಷಾ ಮಸೂದೆ-2025 ಹೇಳುತ್ತದೆ. ಇದು ಕರ್ನಾಟಕದಲ್ಲಿ ಬೇಡಿಕೆಯಲ್ಲಿದೆ. ಕರ್ನಾಟಕ ಸರ್ಕಾರ ಇನ್ನೂ ದ್ವಿಭಾಷಾ ನೀತಿಯನ್ನು ಸ್ಪಷ್ಟವಾಗಿ ಪ್ರಕಟಿಸಿಲ್ಲ. ಕೇರಳ ದ್ವಿಭಾಷಾ ನೀತಿಯನ್ನು ಈ ಕಾಯ್ದೆಯಲ್ಲಿ ಸ್ಪಷ್ಟಪಡಿಸುತ್ತಲೇ, ಕನ್ನಡಿಗರು ಇರುವ ಪ್ರದೇಶದಲ್ಲಿ ಕನ್ನಡದಲ್ಲಿ ಜಾಹೀರಾತು, ಬೋರ್ಡ್ ಗಳನ್ನು ಪ್ರದರ್ಶಿಸಬಹುದು ಎಂದು ಕಾಯ್ದೆ ಹೇಳುತ್ತದೆ. ಇದು ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ಕನ್ನಡಕ್ಕೆ ಕೇರಳ ಸರ್ಕಾರ ಕೊಟ್ಟ ಗೌರವ ಎಂಬುದು ನಾವ್ಯಾಕೆ ಹೆಮ್ಮೆಪಡಬಾರದು?</p>



<p>ಕೇರಳದ ಕಾಸರಗೋಡಿನಲ್ಲಿ ಈವರೆಗೂ ಕನ್ನಡ ಭಾಷೆ ಮತ್ತು ಕನ್ನಡ ಶಾಲೆಗಳು ಆತಂಕದಲ್ಲಿದ್ದವು. ನಿಧಾನಕ್ಕೆ ಕಾಸರಗೋಡಿನಲ್ಲಿ ಕನ್ನಡ ನಾಶವಾಗುತ್ತಿದೆ ಎಂಬ ಭಯ ಇತ್ತು. ಆದರೆ ಮಲಯಾಳಿ ಭಾಷಾ ಮಸೂದೆ-2025 ಸೆಕ್ಷನ್ 7 ಮೂಲಕ ಕಾಸರಗೋಡಿನಲ್ಲಿ ಕನ್ನಡ ಈಗ ಕನ್ನಡಿಗರ ಕಾನೂನು ಬದ್ಧ ಹಕ್ಕು ಆಗಿ ಮಾರ್ಪಾಟಾಗಿದೆ. ಕೇರಳ ಸರ್ಕಾರದ ಈ ಮಸೂದೆಯನ್ನು ಕನ್ನಡಿಗರು ವಿರೋಧಿಸಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಸ್ವಯಂ ಘೋಷಿಸಿಕೊಂಡಿದ್ದಾರೆ. ಇದು ಸರಿಯಾದುದಲ್ಲ. ಮಲಯಾಳಿ ಭಾಷಾ ಮಸೂದೆ-2025ಯನ್ನು ಕನ್ನಡಿಗರು ಸ್ವಾಗತಿಸಬೇಕು ಮಾತ್ರವಲ್ಲ, ಅದೇ ಮಾದರಿಯ ‘ಕನ್ನಡ ಭಾಷಾ ಮಸೂದೆ -2026’ ರನ್ನು ಸುಗ್ರೀವಾಜ್ಞೆ ಮೂಲಕ ಕರ್ನಾಟಕದಲ್ಲಿ ಜಾರಿಗೆ ತರಬೇಕು ಎಂದು ಕನ್ನಡಿಗರು ಸಿದ್ದರಾಮಯ್ಯ ಸರ್ಕಾರವನ್ನು ಆಗ್ರಹಿಸಬೇಕಿದೆ.</p>
]]></content:encoded>
					
		
		
			</item>
		<item>
		<title>‘ಟಾಕ್ಸಿಕ್’ ಟ್ರೈಲರ್: ರಾಕಿಂಗ್ ಸ್ಟಾರ್ ಯಶ್‌ನ ಹೊಸ ಅವತಾರ, ಕನ್ನಡ ಚಿತ್ರರಂಗಕ್ಕೆ ಹಾಲಿವುಡ್ ಟಚ್</title>
		<link>https://peepalmedia.com/toxic-trailer-a-new-avatar-of-rocking-star-yash/</link>
		
		<dc:creator><![CDATA[Pragath K R]]></dc:creator>
		<pubDate>Thu, 08 Jan 2026 06:09:47 +0000</pubDate>
				<category><![CDATA[ವಿಶೇಷ]]></category>
		<category><![CDATA[ಸಿನಿಮಾ]]></category>
		<guid isPermaLink="false">https://peepalmedia.com/?p=71972</guid>

					<description><![CDATA[ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದೆ. ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ, ಯಶ್ ಅವರ ಸಿನಿಜೀವನದ ಮತ್ತೊಂದು ಮಹತ್ವದ ಮೈಲಿಗಲ್ಲಾಗಲಿದೆ ಎಂಬ ನಿರೀಕ್ಷೆಯನ್ನು ಟ್ರೈಲರ್ ಮತ್ತಷ್ಟು ಬಲಪಡಿಸಿದೆ. ಯಶ್ ಅವರ ಜನ್ಮದಿನದ ಪ್ರಯುಕ್ತ ಜನವರಿ 8ರಂದು ಬೆಳಗ್ಗೆ 10 ಗಂಟೆ 10 ನಿಮಿಷಕ್ಕೆ ಟ್ರೈಲರ್ ಬಿಡುಗಡೆಗೊಂಡಿದ್ದು, ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ [&#8230;]]]></description>
										<content:encoded><![CDATA[
<p>ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದೆ. ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ, ಯಶ್ ಅವರ ಸಿನಿಜೀವನದ ಮತ್ತೊಂದು ಮಹತ್ವದ ಮೈಲಿಗಲ್ಲಾಗಲಿದೆ ಎಂಬ ನಿರೀಕ್ಷೆಯನ್ನು ಟ್ರೈಲರ್ ಮತ್ತಷ್ಟು ಬಲಪಡಿಸಿದೆ.</p>



<figure class="wp-block-image size-full"><img fetchpriority="high" decoding="async" width="686" height="386" src="https://peepalmedia.com/wp-content/uploads/2026/01/1000760335.jpg" alt="" class="wp-image-71973" srcset="https://peepalmedia.com/wp-content/uploads/2026/01/1000760335.jpg 686w, https://peepalmedia.com/wp-content/uploads/2026/01/1000760335-300x169.jpg 300w, https://peepalmedia.com/wp-content/uploads/2026/01/1000760335-150x84.jpg 150w" sizes="(max-width: 686px) 100vw, 686px" /></figure>



<p>ಯಶ್ ಅವರ ಜನ್ಮದಿನದ ಪ್ರಯುಕ್ತ ಜನವರಿ 8ರಂದು ಬೆಳಗ್ಗೆ 10 ಗಂಟೆ 10 ನಿಮಿಷಕ್ಕೆ ಟ್ರೈಲರ್ ಬಿಡುಗಡೆಗೊಂಡಿದ್ದು, ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಟ್ರೈಲರ್ ನೋಡುತ್ತಿದ್ದಂತೆಯೇ ಇದು ಸಾಮಾನ್ಯ ಮಾಸ್ ಸಿನಿಮಾ ಅಲ್ಲ, ಬದಲಾಗಿ ವಿಷಯಾಧಾರಿತ, ವಿಭಿನ್ನ ಶೈಲಿಯ ಪ್ರಯತ್ನ ಎನ್ನುವುದು ಸ್ಪಷ್ಟವಾಗುತ್ತದೆ.</p>



<p><strong>ಬೋಲ್ಡ್ ಕಥನ, ರೆಟ್ರೋ ಲೋಕದ ನೋಟ</strong><br>‘ಟಾಕ್ಸಿಕ್’ ಟ್ರೈಲರ್ ಆರಂಭದಲ್ಲೇ ಬೋಲ್ಡ್ ಹಾಗೂ ಅಚ್ಚರಿಯ ದೃಶ್ಯಗಳಿಂದ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತದೆ. ಕಥನ ಶೈಲಿ, ದೃಶ್ಯ ಸಂಯೋಜನೆ ಮತ್ತು ಕಲರ್ ಪ್ಯಾಲೆಟ್ ಎಲ್ಲವೂ ಸೇರಿ ಸಿನಿಮಾವನ್ನು ರೆಟ್ರೋ ವಾತಾವರಣದಲ್ಲಿ ಕಟ್ಟಿಕೊಟ್ಟಿರುವುದು ಗಮನಸೆಳೆಯುತ್ತದೆ. ಈ ರೀತಿಯ ಮೇಕಿಂಗ್ ಕನ್ನಡ ಚಿತ್ರರಂಗದಲ್ಲಿ ಅಪರೂಪ ಎನ್ನುವ ಬದಲು ಈವರೆಗೆ ಬಂದೇ ಇಲ್ಲ ಎನ್ನುವಂತೆ ಹಾಲಿವುಡ್ ಸಿನಿಮಾಗಳ ನೆನಪು ತರಿಸುತ್ತದೆ.</p>



<p><strong>ಮಾಸ್ ಜೊತೆ ಕ್ಲಾಸ್ ಮಿಶ್ರಣ: </strong><strong>ಯಶ್‌ನ</strong><strong> ಪ್ರಭಾವ ಪ್ರಸ್ತುತಿ</strong><br>ಟ್ರೈಲರ್‌ನ ಪ್ರಮುಖ ಆಕರ್ಷಣೆಯೇ ಯಶ್ ಅವರ ಪರಿವರ್ತಿತ ಅವತಾರ. ಮಾತು ಕಡಿಮೆ, ಕಣ್ಣುಗಳ ಮೂಲಕ ಮಾತನಾಡುವ ಅಭಿನಯ, ಗಟ್ಟಿಯಾದ ದೇಹಭಾಷೆ ಮತ್ತು ತೀವ್ರತೆಯ ಲುಕ್ ಎಲ್ಲವೂ ಸೇರಿ ಯಶ್ ಅವರನ್ನು ಇನ್ನೊಂದು ಮಟ್ಟದಲ್ಲಿ ತೋರಿಸುತ್ತಿವೆ. ಆ್ಯಕ್ಷನ್ ದೃಶ್ಯಗಳಲ್ಲಿ ಅವರ ಪ್ರೆಸೆನ್ಸ್ ಸಖತ್ ಮಾಸ್ ಆಗಿದ್ದರೆ, ಮೌನದ ಕ್ಷಣಗಳಲ್ಲಿ ಕ್ಲಾಸ್ ಟಚ್ ಸ್ಪಷ್ಟವಾಗಿ ಕಾಣಿಸುತ್ತದೆ.</p>



<p><strong>ನಾಯಕಿಯರ ಪಾತ್ರಕ್ಕೆ ತೂಕ</strong><br>ಟ್ರೈಲರ್‌ನಲ್ಲಿ ನಯನತಾರಾ, ರುಕ್ಮಿಣಿ ವಸಂತ್ ಸೇರಿದಂತೆ ನಾಯಕಿಯರ ಪಾತ್ರಗಳು ಕೇವಲ ಅಲಂಕಾರಕ್ಕೆ ಸೀಮಿತವಾಗಿಲ್ಲ ಎನ್ನುವ ಸೂಚನೆ ಸಿಗುತ್ತಿದೆ. ಪ್ರತಿಯೊಬ್ಬರಿಗೂ ಕಥೆಯೊಳಗಿನ ಪ್ರಾಮುಖ್ಯತೆ ಇರುವಂತೆ ಟ್ರೈಲರ್ ಕಟ್ಟಿಕೊಟ್ಟಿದ್ದು, ಮಹಿಳಾ ಪಾತ್ರಗಳಿಗೆ ಬಲ ನೀಡುವ ಗೀತು ಮೋಹನ್‌ದಾಸ್ ಶೈಲಿಯನ್ನು ಪ್ರತಿಬಿಂಬಿಸುತ್ತದೆ.</p>



<p><strong>ತಾಂತ್ರಿಕವಾಗಿ ಶ್ರೀಮಂತ ಸಿನಿಮಾ</strong><br>‘ಟಾಕ್ಸಿಕ್’ ಸಿನಿಮಾಗೆ ಕೆವಿಎನ್ ಪ್ರೊಡಕ್ಷನ್ಸ್ ಭಾರಿ ಬಂಡವಾಳ ಹೂಡಿದ್ದು, ಅದರ ಪ್ರತಿಫಲನ ಟ್ರೈಲರ್‌ನ ಪ್ರತಿಯೊಂದು ಫ್ರೇಮ್‌ನಲ್ಲೂ ಕಾಣಿಸುತ್ತದೆ. ಛಾಯಾಗ್ರಹಣ, ಹಿನ್ನೆಲೆ ಸಂಗೀತ, ಆ್ಯಕ್ಷನ್ ಕೊರಿಯೋಗ್ರಫಿ ಮತ್ತು ಆರ್ಟ್ ಡಿಸೈನ್ ಎಲ್ಲವೂ ಹೈ ಸ್ಟ್ಯಾಂಡರ್ಡ್‌ನಲ್ಲಿ ರೂಪುಗೊಂಡಿವೆ. ಹಿನ್ನೆಲೆ ಸಂಗೀತವು ಟ್ರೈಲರ್‌ಗೆ ತೀವ್ರತೆಯನ್ನು ಹೆಚ್ಚಿಸಿ, ಪ್ರೇಕ್ಷಕರನ್ನು ಕಥೆಯೊಳಗೆ ಎಳೆದುಕೊಳ್ಳುತ್ತದೆ.</p>



<p><strong>ಕಥೆಗೆ </strong><strong>ಯಶ್‌ಗೂ</strong><strong> ಪಾಲು</strong><br>ಈ ಚಿತ್ರದ ಕಥೆಯನ್ನು ಗೀತು ಮೋಹನ್‌ದಾಸ್ ಜೊತೆ ಯಶ್ ಕೂಡ ಸಹ-ರಚನೆ ಮಾಡಿದ್ದಾರೆ ಎಂಬ ಅಂಶ ಟ್ರೈಲರ್‌ಗೆ ಮತ್ತಷ್ಟು ಕುತೂಹಲ ಸೇರಿಸಿದೆ. ಇದು ಯಶ್ ಕೇವಲ ನಟನಾಗಿ ಮಾತ್ರವಲ್ಲ, ಕಥನದ ಭಾಗವಾಗಿಯೂ ಈ ಸಿನಿಮಾಗೆ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ಸೂಚಿಸುತ್ತದೆ.</p>



<p>ಬಾಕ್ಸ್ ಆಫೀಸ್‌ನಲ್ಲಿ ಕಠಿಣ ಪೈಪೋಟಿ<br>‘ಟಾಕ್ಸಿಕ್’ ಸಿನಿಮಾ ಬಿಡುಗಡೆ ವೇಳೆ ಹಿಂದಿಯ ಸೂಪರ್ ಹಿಟ್ ಸಿನಿಮಾ ‘ಧುರಂಧರ್’ ಚಿತ್ರದ ಸೀಕ್ವೆಲ್ ‘ಧುರಂಧರ್ 2’ ಜೊತೆ ನೇರ ಸ್ಪರ್ಧೆ ಎದುರಿಸಲಿದೆ. ಆದರೂ, ವಿಭಿನ್ನ ಕಥನ, ಅಂತಾರಾಷ್ಟ್ರೀಯ ಮಟ್ಟದ ಮೇಕಿಂಗ್ ಮತ್ತು ಯಶ್ ಅವರ ಬೃಹತ್ ಅಭಿಮಾನಿ ಬಳಗ ‘ಟಾಕ್ಸಿಕ್’ಗೆ ಬಲವಾಗಲಿದೆ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗದ ಈವರೆಗಿನ ಯಾವ ಸಿನಿಮಾ ಕೂಡಾ ಈ ಮೇಕಿಂಗ್ ಮೀರಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಇದೆ.</p>



<p>ಒಟ್ಟಾರೆ, ‘ಟಾಕ್ಸಿಕ್’ ಟ್ರೈಲರ್ ಕನ್ನಡ ಚಿತ್ರರಂಗಕ್ಕೆ ಹೊಸ ದಿಕ್ಕು ತೋರಿಸುವ ಪ್ರಯತ್ನವಾಗಿದ್ದು, ಮಾಸ್ ಮತ್ತು ಕ್ಲಾಸ್ ಎರಡನ್ನೂ ಸಮತೋಲನವಾಗಿ ಒಟ್ಟುಗೂಡಿಸಿರುವ ಸಿನಿಮಾ ಎಂಬ ಭರವಸೆಯನ್ನು ನೀಡುತ್ತದೆ. ರಾಕಿಂಗ್ ಸ್ಟಾರ್ ಯಶ್ ಅವರ ವಿಭಿನ್ನ ಪ್ರಯೋಗ, ಗೀತು ಮೋಹನ್‌ದಾಸ್ ಅವರ ಗಂಭೀರ ನಿರ್ದೇಶನ ಮತ್ತು ಅದ್ದೂರಿ ನಿರ್ಮಾಣ ಎಲ್ಲವೂ ಸೇರಿ ‘ಟಾಕ್ಸಿಕ್’ ಅನ್ನು 2026ರ ಬಹುನಿರೀಕ್ಷಿತ ಚಿತ್ರಗಳ ಸಾಲಿಗೆ ಸೇರಿಸಿದೆ.</p>



<p>ಮಾರ್ಚ್ 19ರಂದು ‘ಟಾಕ್ಸಿಕ್’ ತೆರೆ ಮೇಲೆ ಯಾವ ಮಟ್ಟದ ಪ್ರಭಾವ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.</p>
]]></content:encoded>
					
		
		
			</item>
		<item>
		<title>ದೇವರಾಜ ಅರಸು ಮತ್ತು ಸಿದ್ದರಾಮಯ್ಯ: ಯಾರು ಪವರ್‌ಫುಲ್‌?</title>
		<link>https://peepalmedia.com/devaraja-arasu-and-siddaramaiah-who-is-more-powerful/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 08 Jan 2026 02:27:08 +0000</pubDate>
				<category><![CDATA[ಅಂಕಣ]]></category>
		<category><![CDATA[ರಾಜಕೀಯ]]></category>
		<category><![CDATA[ರಾಜ್ಯ]]></category>
		<category><![CDATA[ವಿಶೇಷ]]></category>
		<guid isPermaLink="false">https://peepalmedia.com/?p=71922</guid>

					<description><![CDATA[&#8220;..ದೇವರಾಜ ಅರಸು ಅವರೇ ಅದ್ವೀತೀಯ (Undisputed) ನಾಯಕ. ಸಿದ್ದರಾಮಯ್ಯನವರು ಅರಸು ಅವರ ಹಾದಿಯಲ್ಲಿ ನಡೆದರೂ, ಅರಸು ಅವರಲ್ಲಿದ್ದ &#8220;ರಚನಾತ್ಮಕ&#8221; (Structural Vision) ಮತ್ತು &#8220;ತ್ಯಾಗ ಮನೋಭಾವ&#8221;ದ ಕೊರತೆ ಸಿದ್ದರಾಮಯ್ಯನವರಲ್ಲಿ ಎದ್ದು ಕಾಣುತ್ತದೆ..&#8221; ವಿಆರ್ ಕಾರ್ಪೆಂಟರ್ ಅವರ ವಿಶ್ಲೇಷಣೆಯಲ್ಲಿ ಕರ್ನಾಟಕದ ರಾಜಕೀಯ ಇತಿಹಾಸವನ್ನು ಅವಲೋಕಿಸಿದಾಗ, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಸಾಂಸ್ವೀಕರಣಗೊಳಿಸಿದ ಮತ್ತು ರಾಜ್ಯದ ಅಧಿಕಾರ ಸೂತ್ರವನ್ನು ಮೇಲ್ವರ್ಗಗಳಿಂದ ಹಿಂದುಳಿದ ವರ್ಗಗಳಿಗೆ ವರ್ಗಾಯಿಸಿದ ಇಬ್ಬರು ಪ್ರಮುಖ ನಾಯಕರಾಗಿ ಡಿ. ದೇವರಾಜ ಅರಸು ಮತ್ತು ಸಿದ್ದರಾಮಯ್ಯ ಅವರು ಎದ್ದು ಕಾಣುತ್ತಾರೆ. ಇವರಿಬ್ಬರೂ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>&#8220;..ದೇವರಾಜ ಅರಸು ಅವರೇ ಅದ್ವೀತೀಯ (Undisputed) ನಾಯಕ. ಸಿದ್ದರಾಮಯ್ಯನವರು ಅರಸು ಅವರ ಹಾದಿಯಲ್ಲಿ ನಡೆದರೂ, ಅರಸು ಅವರಲ್ಲಿದ್ದ &#8220;ರಚನಾತ್ಮಕ&#8221; (Structural Vision) ಮತ್ತು &#8220;ತ್ಯಾಗ ಮನೋಭಾವ&#8221;ದ ಕೊರತೆ ಸಿದ್ದರಾಮಯ್ಯನವರಲ್ಲಿ ಎದ್ದು ಕಾಣುತ್ತದೆ..&#8221; ವಿಆರ್ ಕಾರ್ಪೆಂಟರ್ ಅವರ ವಿಶ್ಲೇಷಣೆಯಲ್ಲಿ</p>
</blockquote>



<p>ಕರ್ನಾಟಕದ ರಾಜಕೀಯ ಇತಿಹಾಸವನ್ನು ಅವಲೋಕಿಸಿದಾಗ, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಸಾಂಸ್ವೀಕರಣಗೊಳಿಸಿದ ಮತ್ತು ರಾಜ್ಯದ ಅಧಿಕಾರ ಸೂತ್ರವನ್ನು ಮೇಲ್ವರ್ಗಗಳಿಂದ ಹಿಂದುಳಿದ ವರ್ಗಗಳಿಗೆ ವರ್ಗಾಯಿಸಿದ ಇಬ್ಬರು ಪ್ರಮುಖ ನಾಯಕರಾಗಿ ಡಿ. ದೇವರಾಜ ಅರಸು ಮತ್ತು ಸಿದ್ದರಾಮಯ್ಯ ಅವರು ಎದ್ದು ಕಾಣುತ್ತಾರೆ. ಇವರಿಬ್ಬರೂ ಮೈಸೂರು ಪ್ರಾಂತ್ಯದ ಹಿನ್ನೆಲೆಯಿಂದ ಬಂದವರು, ಹಿಂದುಳಿದ ವರ್ಗಗಳ ಚಾಂಪಿಯನ್‌ಗಳೆಂದು ಕರೆಸಿಕೊಳ್ಳುವವರು ಮತ್ತು ಮುಖ್ಯಮಂತ್ರಿಯಾಗಿ ಸುದೀರ್ಘ ಆಡಳಿತ ನಡೆಸಿದ ದಾಖಲೆ ಹೊಂದಿದವರು. ಆದಾಗ್ಯೂ, &#8220;ಯಾರು ಹೆಚ್ಚು ಪವರ್‌ಫುಲ್‌?&#8217; ಎಂಬ ಪ್ರಶ್ನೆಯನ್ನು ನಾವು ಹಾಕಿಕೊಂಡಾಗ, ಕೇವಲ ಅಧಿಕಾರಾವಧಿಯ ವರ್ಷಗಳನ್ನು ಲೆಕ್ಕಹಾಕದೆ, ಅವರ ಆಡಳಿತವು ಸಮಾಜದ ಕೆಳಸ್ತರದ ಮೇಲೆ ಬೀರಿದ ಶಾಶ್ವತ ಪರಿಣಾಮಗಳು, ಅವರು ತೆಗೆದುಕೊಂಡ ನಿರ್ಧಾರಗಳ ದೃಢತೆ ಮತ್ತು ದಲಿತ ಸಮುದಾಯಗಳೊಂದಿಗಿನ ಅವರ ಸಂಬಂಧದ ನೈಜತೆಯನ್ನು ಆಳವಾಗಿ ಪರಿಶೀಲಿಸಬೇಕಾಗುತ್ತದೆ.</p>



<pre class="wp-block-code"><code><strong>ಪ್ರಸ್ತುತ ಸನ್ನಿವೇಶದಲ್ಲಿ, ಸಿದ್ದರಾಮಯ್ಯನವರು ದೇವರಾಜ ಅರಸು ಅವರ ಅಧಿಕಾರಾವಧಿಯ ದಾಖಲೆಯನ್ನು </strong><strong>ಮುರಿದಿರಬಹುದು</strong><strong>, ಆದರೆ ಅವರ ಆಡಳಿತದ ವಿರುದ್ದ ಕೇಳಿಬರುತ್ತಿರುವ ಗಂಭೀರ ಆರೋಪಗಳು-ವಿಶೇಷವಾಗಿ </strong><strong>ಎಸ್‌ಎಸ್‌ಪಿ</strong><strong>/</strong><strong>ಟಿಎಸ್‌ಪಿ</strong><strong>(</strong><strong>SCSP</strong><strong>/TSP) ಅನುದಾನದ ದುರ್ಬಳಕೆ, ಒಳಮೀಸಲಾತಿ </strong><strong>ಜಾರಿಯಲ್ಲಿನ </strong><strong>ವಿಳಂಬ ನೀತಿ, ದಲಿತ ಪರ ಕಾಳಜಿಯ ಕುರಿತಾದ ಸಂಶಯಗಳು ಮತ್ತು 'ಸ್ವಜಾತಿ ಪ್ರೇಮ'-ಅವರ "ಅಹಿಂದ" (ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು) ನಾಯಕತ್ವದ ನೈತಿಕ ಬುನಾದಿಯನ್ನು ಪ್ರಶ್ನಿಸುವಂತೆ ಮಾಡಿವೆ. ಈ ಲೇಖನವು ಐತಿಹಾಸಿಕ ದಾಖಲೆಗಳು, ಪ್ರಸ್ತುತ ಅಂಕಿಅಂಶಗಳು ಮತ್ತು ರಾಜಕೀಯ ಬೆಳವಣಿಗೆಗಳನ್ನು ಆಧಾರವಾಗಿಟ್ಟುಕೊಂಡು ಈ ಇಬ್ಬರು ನಾಯಕರ ಅಧಿಕಾರ ಮತ್ತು ಸಾಧನೆಗಳನ್ನು ವಿಮರ್ಶಾತ್ಮಕವಾಗಿ </strong><strong>ತೂಗಿ ನೋಡಲು </strong><strong>ಪ್ರಯತ್ನಿಸಿದೆ.</strong></code></pre>



<p><strong>ಅಧಿಕಾರದ ಸ್ವರೂಪ &#8211; ಅರಸು ಅವರ &#8220;ರಚನಾತ್ಮಕ ಶಕ್ತಿ&#8221; ಮತ್ತು ಸಿದ್ದರಾಮಯ್ಯ ಅವರ &#8220;ಹಣಕಾಸಿನ ಶಕ್ತಿ&#8221;</strong><br>&#8220;ಪವರ್‌ಫುಲ್&#8221; ಅಥವಾ ಶಕ್ತಿಶಾಲಿ ಎಂಬ ಪದವನ್ನು ರಾಜಕೀಯದಲ್ಲಿ ಎರಡು ರೀತಿಯಲ್ಲಿ ಅರ್ಥೈಸಬಹುದು: ಒಂದು, ಸಮಾಜದ ರಚನೆಯನ್ನೇ ಬದಲಾಯಿಸುವ ತಾಕತ್ತು (Structural Power), ಮತ್ತು ಎರಡು, ಸರ್ಕಾರದ ಬಜೆಟ್ ಮತ್ತು ಜನಪ್ರಿಯ ಯೋಜನೆಗಳ ಮೂಲಕ ಜನರನ್ನು ನಿಯಂತ್ರಿಸುವ ತಾಕತ್ತು (Fiscal/Populist Power).</p>



<p><strong>ದೇವರಾಜ ಅರಸು: ಭೂಮಿ ಮತ್ತು ಮೀಸಲಾತಿಯ ಮೂಲಕ ಸಾಮಾಜಿಕ ಕ್ರಾಂತಿ</strong><br>1970ರ ದಶಕದಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ, ಅವರು ಎದುರಿಸಿದ ಸವಾಲುಗಳು ಕೇವಲ ರಾಜಕೀಯವಾಗಿರಲಿಲ್ಲ, ಅವು ಸಾಮಾಜಿಕವಾಗಿದ್ದವು. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಭೂಮಾಲೀಕತ್ವದ ಪ್ರಾಬಲ್ಯವನ್ನು ಮುರಿಯದೆ ಹಿಂದುಳಿದವರಿಗೆ ಅಧಿಕಾರ ಸಿಗಲಾರದು ಎಂಬುದನ್ನು ಅರಸು ಮನಗಂಡಿದ್ದರು.</p>



<ul class="wp-block-list">
<li>ಭೂ ಸುಧಾರಣೆಗಳು (Land Reforms): ಅರಸು ಅವರ ಅತ್ಯಂತ ದೊಡ್ಡ ಶಕ್ತಿಯೆಂದರೆ &#8220;ಉಳುವವನೇ ಹೊಲದೊಡೆಯ&#8221; ಕಾಯಿದೆ (1974). ಇದು ಕೇವಲ ಘೋಷಣೆಯಾಗಿರಲಿಲ್ಲ. ಈ ಕಾಯಿದೆಯ ಮೂಲಕ ಲಕ್ಷಾಂತರ ಎಕರೆ ಭೂಮಿಯನ್ನು ಜಮೀನ್ದಾರರಿಂದ ಕಿತ್ತುಕೊಂಡು ಗೇಣಿದಾರರಿಗೆ (ಅದರಲ್ಲಿ ಬಹುಪಾಲು ದಲಿತರು ಮತ್ತು ಹಿಂದುಳಿದವರು) ನೀಡಲಾಯಿತು. ಸುಮಾರು 4 ಲಕ್ಷ ಎಕರೆಗೂ ಹೆಚ್ಚು ಹೆಚ್ಚುವರಿ ಭೂಮಿಯನ್ನು ಗುರುತಿಸಿ, ಅದರಲ್ಲಿ ಶೇ. 50ರಷ್ಟನ್ನು ಪರಿಶಿಷ್ಟ ಜಾತಿಗಳಿಗೆ (SC) ಮೀಸಲಿಡಲಾಯಿತು. ಇದು ದಲಿತರಿಗೆ ಕೇವಲ ಆರ್ಥಿಕ ಸಹಾಯವನ್ನಷ್ಟೇ ನೀಡಲಿಲ್ಲ, ಬದಲಿಗೆ ಅವರನ್ನು &#8220;ಭೂಮಾಲೀಕರನ್ನಾಗಿ&#8221; ಮಾಡುವ ಮೂಲಕ ಸಮಾಜದಲ್ಲಿ ಅವರ ಸ್ಥಾನಮಾನವನ್ನೇ ಬದಲಾಯಿಸಿತು. ಇದು ಅರಸು ಅವರ &#8220;ರಚನಾತ್ಮಕ ಶಕ್ತಿ&#8217;ಗೆ ಸಾಕ್ಷಿ. </li>



<li>ಹಾವನೂರು ವರದಿ: ಎಲ್.ಜಿ. ಹಾವನೂರು ಆಯೋಗದ ಮೂಲಕ ಹಿಂದುಳಿದ ವರ್ಗಗಳಿಗೆ ವೈಜ್ಞಾನಿಕವಾಗಿ ಮೀಸಲಾತಿಯನ್ನು ಒದಗಿಸುವ ಮೂಲಕ, ಅರಸು ಅವರು ಆಡಳಿತದಲ್ಲಿ ಮತ್ತು ಶಿಕ್ಷಣದಲ್ಲಿ ಕೆಳವರ್ಗಗಳಿಗೆ ಶಾಶ್ವತ ಪಾಲನ್ನು ಖಾತ್ರಿ ಪಡಿಸಿದರು.</li>
</ul>



<p><strong>ಸಿದ್ದರಾಮಯ್ಯ: &#8220;ಗ್ಯಾರಂಟಿ&#8221; ರಾಜಕಾರಣ ಮತ್ತು ಸಂಪನ್ಮೂಲ ಹಂಚಿಕೆ</strong><br>ಸಿದ್ದರಾಮಯ್ಯನವರ ಅಧಿಕಾರವು ನವ-ಉದಾರವಾದಿ ಆರ್ಥಿಕತೆಯ ಕಾಲಘಟ್ಟದಲ್ಲಿ ಬೆಳೆದಿದೆ. ಇಂದು ಭೂಮಿಯನ್ನು ಹಂಚಲು ಲಭ್ಯವಿಲ್ಲದ ಕಾರಣ, ಸಿದ್ದರಾಮಯ್ಯನವರು &#8220;ನಗದು ವರ್ಗಾವಣೆ&#8221; (Cash Transfer) ಮತ್ತು &#8220;ಕ್ಷೇಮಾಭಿವೃದ್ಧಿ ಯೋಜನೆಗಳ&#8221; (Welfare Schemes) ಮೇಲೆ ತಮ್ಮ ಶಕ್ತಿಯನ್ನು ಕೇಂದ್ರೀಕರಿಸಿದ್ದಾರೆ.</p>



<ul class="wp-block-list">
<li><strong>ಅಹಿಂದ 2.0 ಮತ್ತು ಗ್ಯಾರಂಟಿಗಳು</strong>: ಸಿದ್ದರಾಮಯ್ಯನವರ ಶಕ್ತಿಯ ಮೂಲ &#8220;ಅಹಿಂದ&#8221; ಮತಬ್ಯಾಂಕ್. ಅನ್ನಭಾಗ್ಯ, ಕ್ಷೀರಭಾಗ್ಯ, ಮತ್ತು ಇತ್ತೀಚಿನ ಐದು ಗ್ಯಾರಂಟಿ ಯೋಜನೆಗಳು (ಶಕ್ತಿ, ಗೃಹಲಕ್ಷ್ಮಿ ಇತ್ಯಾದಿ) ಬಡವರ ದೈನಂದಿನ ಜೀವನವನ್ನು ಸುಧಾರಿಸಿವೆ ನಿಜ. ಆದರೆ, ಅರಸು ಅವರು ಜನರಿಗೆ &#8220;ಆಸ್ತಿ&#8221; (Asset) ನೀಡಿದರೆ, ಸಿದ್ದರಾಮಯ್ಯನವರು ಜನರಿಗೆ &#8220;ಯೋಜನೆ&#8221; (Scheme) ನೀಡುತ್ತಿದ್ದಾರೆ. ಆಸ್ತಿಯು ತಲೆಮಾರುಗಳವರೆಗೆ ಉಳಿಯುತ್ತದೆ, ಆದರೆ ಯೋಜನೆಯು ಸರ್ಕಾರದ ಬಜೆಟ್ ಇರುವವರೆಗೂ ಮಾತ್ರ ಇರುತ್ತದೆ.</li>



<li><strong>ಅಧಿಕಾರದ ಅವಧಿ</strong>: ದೇವರಾಜ ಅರಸು ಅವರ 7 ವರ್ಷ 239 ದಿನಗಳ ದಾಖಲೆಯನ್ನು ಸಿದ್ದರಾಮಯ್ಯ ಮುರಿದಿದ್ದಾರೆ. ಎರಡು ಬಾರಿ ಪೂರ್ಣ ಬಹುಮತದೊಂದಿಗೆ ಅಥವಾ ಮೈತ್ರಿ ಕೂಟದ ನೇತೃತ್ವ ವಹಿಸಿ ಸರ್ಕಾರ ರಚಿಸುವುದು ಅವರ ರಾಜಕೀಯ ಚತುರತೆ ಮತ್ತು &#8220;ಚುನಾವಣಾ ಶಕ್ತಿ&#8221;ಯನ್ನು ತೋರಿಸುತ್ತದೆ.</li>
</ul>



<p><strong>ಅರಸು ಮತ್ತು ಸಿದ್ದರಾಮಯ್ಯ ಅವರ ಆಡಳಿತ ಶೈಲಿಯ ಸ್ಯಾಂಪಲ್</strong></p>



<figure class="wp-block-image size-full"><img decoding="async" width="1016" height="549" src="https://peepalmedia.com/wp-content/uploads/2026/01/1000759517.jpg" alt="" class="wp-image-71928" srcset="https://peepalmedia.com/wp-content/uploads/2026/01/1000759517.jpg 1016w, https://peepalmedia.com/wp-content/uploads/2026/01/1000759517-300x162.jpg 300w, https://peepalmedia.com/wp-content/uploads/2026/01/1000759517-768x415.jpg 768w, https://peepalmedia.com/wp-content/uploads/2026/01/1000759517-150x81.jpg 150w, https://peepalmedia.com/wp-content/uploads/2026/01/1000759517-696x376.jpg 696w" sizes="(max-width: 1016px) 100vw, 1016px" /></figure>



<figure class="wp-block-image size-full"><img decoding="async" width="1017" height="240" src="https://peepalmedia.com/wp-content/uploads/2026/01/1000759518.jpg" alt="" class="wp-image-71929" srcset="https://peepalmedia.com/wp-content/uploads/2026/01/1000759518.jpg 1017w, https://peepalmedia.com/wp-content/uploads/2026/01/1000759518-300x71.jpg 300w, https://peepalmedia.com/wp-content/uploads/2026/01/1000759518-768x181.jpg 768w, https://peepalmedia.com/wp-content/uploads/2026/01/1000759518-150x35.jpg 150w, https://peepalmedia.com/wp-content/uploads/2026/01/1000759518-696x164.jpg 696w" sizes="(max-width: 1017px) 100vw, 1017px" /></figure>



<p><strong>ಎಸ್‌ಸಿಎಸ್‌ಪಿ</strong><strong>/</strong><strong>ಟಿಎಸ್‌ಪಿ</strong><strong> (</strong><strong>SCSP</strong><strong>/TSP) ಹಣದ ದುರ್ಬಳಕೆ:</strong><br>ಸಿದ್ದರಾಮಯ್ಯನವರ ಆಡಳಿತದ ವಿರುದ್ಧ ಕೇಳಿಬರುತ್ತಿರುವ ಅತ್ಯಂತ ಗಂಭೀರವಾದ ಆರೋಪವೆಂದರೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಮೀಸಲಾದ ಹಣವನ್ನು ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸುತ್ತಿರುವುದು. ಇದು ಕೇವಲ ಹಣಕಾಸಿನ ವಿಷಯವಲ್ಲ, ಇದು ದಲಿತ ಸಮುದಾಯಕ್ಕೆ ಮಾಡಲಾದ &#8220;ನಂಬಿಕೆ ದ್ರೋಹ&#8221; ಎಂದು ವಿರೋಧ ಪಕ್ಷಗಳು ಮಾತ್ರವಲ್ಲ ದಲಿತ ಸಂಘಟನೆಗಳು ಸಹ ಟೀಕಿಸುತ್ತಿವೆ.</p>



<p>ಸಿದ್ದರಾಮಯ್ಯನವರೇ ತಮ್ಮ ಮೊದಲ ಅವಧಿಯಲ್ಲಿ (2013) ಆಂಧ್ರ ಪ್ರದೇಶದಲ್ಲಿ ಜಾರಿಯಲ್ಲಿದ್ದ ಈ ಕಾಯ್ದೆಯನ್ನು ಕರ್ನಾಟಕ ಪರಿಶಿಷ್ಟ ಜಾತಿಗಳ ಉಪ-ಹಂಚಿಕೆ ಮತ್ತು ಬುಡಕಟ್ಟು ಉಪ-ಹಂಚಿಕೆ ಕಾಯಿದೆ, 2013 ಎಂಬ ಹೆಸರಿನಲ್ಲಿ ಜಾರಿಗೆ ತಂದರು. ಈ ಕಾಯಿದೆಯ ಪ್ರಕಾರ, ರಾಜ್ಯದ ಒಟ್ಟು ಯೋಜನಾ ವೆಚ್ಚದಲ್ಲಿ ಶೇ. 24.1ರಷ್ಟು ಹಣವನ್ನು ಕಡ್ಡಾಯವಾಗಿ ದಲಿತರ ಅಭಿವೃದ್ಧಿಗೆ ಮೀಸಲಿಡಬೇಕು. ಈ ಹಣವನ್ನು ರಸ್ತೆ, ಚರಂಡಿ ಮುಂತಾದ ಸಾಮಾನ್ಯ ಕಾಮಗಾರಿಗಳಿಗಿಂತ ಹೆಚ್ಚಾಗಿ, ದಲಿತರಿಗೆ ಭೂಮಿ ಖರೀದಿಸಲು, ಉದ್ಯಮಶೀಲತೆ ಬೆಳೆಸಲು, ಅಥವಾ ಉನ್ನತ ಶಿಕ್ಷಣಕ್ಕೆ ಬಳಸಬೇಕೆಂಬುದು ಇದರ ಆಶಯವಾಗಿತ್ತು.</p>



<p>ಲಭ್ಯವಿರುವ ಅಧಿಕೃತ ಮಾಹಿತಿಯ ಪ್ರಕಾರ, 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯಡಿ ಹಂಚಿಕೆಯಾದ ಅನುದಾನದಲ್ಲಿ ಭಾರಿ ಪ್ರಮಾಣದ ಹಣವನ್ನು ಐದು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ.</p>



<ul class="wp-block-list">
<li>ಸಮಾಜ ಕಲ್ಯಾಣ ಇಲಾಖೆಯ ಅಂಕಿಅಂಶಗಳ ಪ್ರಕಾರ, 2023ರಿಂದ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅಡಿಯಲ್ಲಿ ಖರ್ಚು ಮಾಡಲಾದ ಒಟ್ಟು ಹಣದಲ್ಲಿ ಶೇ. 31 ರಷ್ಟು (ಅಂದಾಜು ₹27,630 ಕೋಟಿ) ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗಿದೆ.</li>



<li>ಮುಂಬರುವ ಆರ್ಥಿಕ ವರ್ಷದಲ್ಲಿ, ದಲಿತರ ಕಲ್ಯಾಣಕ್ಕಾಗಿ ಮೀಸಲಾದ ₹42,017 ಕೋಟಿಗಳಲ್ಲಿ ಸುಮಾರು ₹11,896 ಕೋಟಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲು ಸರ್ಕಾರ ನಿರ್ಧರಿಸಿದೆ ಎಂದು ವರದಿಗಳು ಸೂಚಿಸುತ್ತವೆ.</li>
</ul>



<p>ಈ ಹಣ ವರ್ಗಾವಣೆಯನ್ನು ಸಮರ್ಥಿಸಿಕೊಳ್ಳಲು ಸರ್ಕಾರವು ಕಾಯಿದೆಯ &#8220;ಸೆಕ್ಷನ್ 7(ಸಿ)&#8221; ಅನ್ನು ಉಲ್ಲೇಖಿಸುತ್ತದೆ. ಈ ಸೆಕ್ಷನ್ ಪ್ರಕಾರ, ಒಂದು ಯೋಜನೆಯು ದಲಿತ ಸಮುದಾಯಕ್ಕೂ ಲಾಭದಾಯಕವಾಗಿದ್ದರೆ (ಉದಾಹರಣೆಗೆ ಉಚಿತ ಬಸ್ ಪ್ರಯಾಣ ಅಥವಾ ಉಚಿತ ವಿದ್ಯುತ್), ಆ ಯೋಜನೆಯ ಒಟ್ಟು ವೆಚ್ಚದ ಒಂದು ಭಾಗವನ್ನು ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದಿಂದ ಭರಿಸಬಹುದು.</p>



<ul class="wp-block-list">
<li><strong>ಸರ್ಕಾರದ ವಾದ</strong>: ಶಕ್ತಿ ಯೋಜನೆಯಡಿ ಬಸ್‌ನಲ್ಲಿ ಪ್ರಯಾಣಿಸುವ ಮಹಿಳೆಯರಲ್ಲಿ ದಲಿತರೂ ಇದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ ಹಣ ಪಡೆಯುವವರಲ್ಲಿ ದಲಿತ ಮಹಿಳೆಯರೂ ಇದ್ದಾರೆ. ಆದ್ದರಿಂದ, ಅವರ ಪಾಲಿನ ಹಣವನ್ನು ದಲಿತರ ಅನುದಾನದಿಂದಲೇ ಕೊಡುವುದರಲ್ಲಿ ತಪ್ಪೇನು?</li>



<li><strong>ವಿಮರ್ಶೆ</strong>: ದಲಿತ ಮುಖಂಡರ ಪ್ರಕಾರ, ಸಾರಿಗೆ ಇಲಾಖೆಯು ಬಸ್ ಟಿಕೆಟ್ ನೀಡುವಾಗ ಜಾತಿಯನ್ನು ಕೇಳುವುದಿಲ್ಲ. ಹೀಗಿರುವಾಗ, ಇಷ್ಟು ಮೊತ್ತ ದಲಿತರಿಗೆ ಖರ್ಚಾಗಿದೆ ಎಂದು ನಿಖರವಾಗಿ ಹೇಳಲು ಹೇಗೆ ಸಾಧ್ಯ? ಇದು ಕೇವಲ ಊಹೆಯಾಧಾರಿತ ಲೆಕ್ಕಾಚಾರವಾಗಿದ್ದು, ದಲಿತರ ಅಭಿವೃದ್ಧಿಗೆ ಮೀಸಲಾದ ಹಣವನ್ನು ಸಾಮಾನ್ಯ ಜನರಿಗೆ ಹಂಚಲಾಗುತ್ತಿದೆ ಎಂಬುದು ಗಂಭೀರ ಆರೋಪವಾಗಿದೆ. ಈ ಹಣದಲ್ಲಿ ದಲಿತರಿಗೆ ಹಾಸ್ಟೆಲ್‌ಗಳು, ವಸತಿ ಶಾಲೆಗಳು ಅಥವಾ ಅಂಬೇಡ್ಕ‌ರ್ ಭವನಗಳನ್ನು ನಿರ್ಮಿಸಬಹುದಿತ್ತು. ಆದರೆ, ಅದನ್ನು &#8220;ಬಸ್ ಟಿಕೆಟ್&#8221; ಮತ್ತು &#8220;ವಿದ್ಯುತ್ ಬಿಲ್‌ ಪಾವತಿಸಲು ಬಳಸುವ ಮೂಲಕ, ದಲಿತರ ದೀರ್ಘಕಾಲೀನ ಆಸ್ತಿ ಸೃಷ್ಟಿಗೆ (Asset Creation) ತಡೆಯೊಡ್ಡಲಾಗುತ್ತಿದೆ.</li>
</ul>



<p><strong>ಒಳಮೀಸಲಾತಿ ನಿರ್ಲಕ್ಷ್ಯ- ರಾಜಕೀಯ ಲಾಭಕ್ಕಾಗಿ ವಿಳಂಬ ನೀತಿ?</strong><br>ಒಳಮೀಸಲಾತಿ (Internal Reservation) ವಿಷಯದಲ್ಲಿ ಸಿದ್ದರಾಮಯ್ಯನವರ ನಿಲುವು ದಲಿತ ಸಮುದಾಯದೊಳಗಿನ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ. ಪರಿಶಿಷ್ಟ ಜಾತಿಗಳಲ್ಲಿನ (SC) ಬಲಗೈ (ಹೊಲಯ/ಚಲವಾದಿ) ಮತ್ತು ಎಡಗೈ (ಮಾದಿಗ) ಪಂಗಡಗಳ ನಡುವಿನ ಅಸಮಾನತೆಯನ್ನು ಸರಿಪಡಿಸಲು ಒಳಮೀಸಲಾತಿಯ ಅಗತ್ಯವಿದೆ ಎಂಬುದು ಹಲವು ದಶಕಗಳ ಬೇಡಿಕೆ.</p>



<p>2012ರಲ್ಲಿ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗವು ತನ್ನ ವರದಿಯನ್ನು ಸಲ್ಲಿಸಿತು. ಈ ವರದಿಯು ಪರಿಶಿಷ್ಟ ಜಾತಿಗಳಲ್ಲಿನ ಮೀಸಲಾತಿಯನ್ನು ಜನಸಂಖ್ಯೆ ಮತ್ತು ಹಿಂದುಳಿದಿರುವಿಕೆಯ ಆಧಾರದ ಮೇಲೆ ಉಪ-ವರ್ಗೀಕರಣ (Sub-categorization) ಮಾಡಬೇಕೆಂದು ಶಿಫಾರಸು ಮಾಡಿತು.</p>



<p>2013ರಿಂದ 2018ರವರೆಗೆ ಪೂರ್ಣ ಬಹುಮತದೊಂದಿಗೆ ಆಡಳಿತ ನಡೆಸಿದ ಸಿದ್ದರಾಮಯ್ಯನವರು, ಈ ವರದಿಯನ್ನು ಜಾರಿಗೊಳಿಸಲು ಹಿಂದೇಟು ಹಾಕಿದರು. ಇದಕ್ಕೆ ಪ್ರಮುಖ ಕಾರಣ ರಾಜಕೀಯ ಲೆಕ್ಕಾಚಾರ. ಒಳಮೀಸಲಾತಿಯನ್ನು ಜಾರಿಗೊಳಿಸಿದರೆ, ಮೀಸಲಾತಿಯ ಹೆಚ್ಚಿನ ಲಾಭ ಪಡೆಯುತ್ತಿರುವ ಬಲಗೈ ಸಮುದಾಯ (ಉದಾಹರಣೆಗೆ ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ.ಎಚ್.ಸಿ. ಮಹದೇವಪ್ಪ ಅವರ ಸಮುದಾಯ) ಮತ್ತು ಲಂಬಾಣಿ/ಬೋವಿ ಸಮುದಾಯಗಳು ಮುನಿಸಿಕೊಳ್ಳಬಹುದು ಎಂಬ ಭಯ ಸಿದ್ದರಾಮಯ್ಯನವರಿಗೆ ಈಗಲೂ ಇದೆ.</p>



<p>ಇತ್ತೀಚೆಗೆ ಸುಪ್ರೀಂ ಕೋರ್ಟ್ ಕೂಡ ರಾಜ್ಯಗಳಿಗೆ ಒಳಮೀಸಲಾತಿ ಕಲ್ಪಿಸುವ ಅಧಿಕಾರವಿದೆ ಎಂದು ತೀರ್ಪು ನೀಡಿದೆ. ಆದರೂ, ಸಿದ್ದರಾಮಯ್ಯನವರು &#8220;ಕಾನೂನು ತೊಡಕುಗಳನ್ನು ಪರಿಶೀಲಿಸಬೇಕು&#8221; ಅಥವಾ &#8220;ಎಲ್ಲರ ಸಹಮತ ಬೇಕು&#8221; ಎಂಬ ಕಾರಣಗಳನ್ನು ನೀಡುತ್ತಾ ವಿಳಂಬ ಮಾಡುತ್ತಿದ್ದರು. ಅಸಲಿಗೆ ಈಗಲೂ ಒಳಮೀಸಲಾತಿ ಜಾರಿಯಾಗಿದೆಯಾ ಅಥವಾ ಇಲ್ಲವಾ ಎಂದು ಯಾರಿಗೂ ನಿಖರವಾದ ಮಾಹಿತಿ ಇಲ್ಲ&#8230; ಅಷ್ಟರಮಟ್ಟಿಗೆ ಸಿದ್ದರಾಮಯ್ಯ ತಮ್ಮ ಚದುರಂಗದ ಆಟವನ್ನು ಆಡಿದ್ದಾರೆ.</p>



<p><strong>ದಲಿತ ಪರ ಕಾಳಜಿಯ ನಾಟಕ ಮತ್ತು ಭ್ರಷ್ಟಾಚಾರದ ಕಲೆ</strong><br>ಸಿದ್ದರಾಮಯ್ಯನವರು &#8220;ನಾನೂ ದಲಿತನೇ&#8221; (I am also a Dalit) ಎಂದು ಹೇಳಿಕೆ ನೀಡುವ ಮೂಲಕ ತಾವು ದಲಿತರ ಪರ ಎಂದು ಬಿಂಬಿಸಿಕೊಳ್ಳುತ್ತಾರೆ. ಇದಂತೂ ಬೂಟಾಟಿಕೆ ಅಥವಾ ದಲಿತರನ್ನು ವಂಚಿಸುವ ಕ್ರಿಯೆ ಎಂದು ನೇರವಾಗಿ ಹೇಳುತ್ತೇನೆ. ದಲಿತರಲ್ಲದ ದಲಿತರು ಯಾವುದೇ ಒಂದು ಸಣ್ಣ ಅನುದಾನ, ಸರ್ಕಾರದ ಸೌಲಭ್ಯವನ್ನು ಪಡೆಯುವುದು ಅಪರಾಧವಾಗಿರುವ ಈ ಕಾಲದಲ್ಲಿ ಸಿದ್ದರಾಮಯ್ಯನವರು “ನಾನೂ ದಲಿತನೇ ಕಣಯ್ಯ&#8221; ಅಂತ ಹೇಳುತ್ತಾ ಎಂಥ ಅಪರಾಧ ಮಾಡಿದ್ದಾರೆ ಎಂದರೆ, ಅದರೆ ಕುರಿತು ಅವರ ಹಿಂದುಮುಂದಿರುವ ಯಾರೂ ಕೂಡಾ ಎಚ್ಚರಿಸುತ್ತಿಲ್ಲ&#8230; ಇದೆಲ್ಲಾ ಒಂದು ಕಡೆಗಾದರೆ, ಅವರ ಆಡಳಿತದಲ್ಲಿ ದಲಿತ ನಾಯಕರ ಸ್ಥಿತಿಗತಿ ಮತ್ತು ದಲಿತರ ಹಣಕಾಸು ನಿಗಮಗಳಲ್ಲಿ ನಡೆದ ಹಗರಣಗಳು ಬೇರೆಯದೇ ಕಥೆಯನ್ನು ಹೇಳುತ್ತವೆ.</p>



<p><strong>ವಾಲ್ಮೀಕಿ ನಿಗಮದ ಹಗರಣ &#8211; &#8220;ದರೋಡೆ&#8221;ಯ ಸ್ವರೂಪ</strong><br>ಸಿದ್ದರಾಮಯ್ಯ 2.0 ಸರ್ಕಾರದ ಅತಿದೊಡ್ಡ ಕಪ್ಪು ಚುಕ್ಕೆ ಎಂದರೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿನಿಗಮದಲ್ಲಿ ನಡೆದ ಬಹುಕೋಟಿ ಹಗರಣ.</p>



<p>ನಿಗಮದ ಅಧೀಕ್ಷಕ ಚಂದ್ರಶೇಖರನ್ ಅವರ ಆತ್ಮಹತ್ಯೆಯು ಸುಮಾರು ₹187 ಕೋಟಿ ಅಕ್ರಮ ವರ್ಗಾವಣೆಯನ್ನು ಬಯಲಿಗೆಳೆಯಿತು. ಇದರಲ್ಲಿ ₹89.6 ಕೋಟಿ ಹಣವನ್ನು ಐಟಿ ಕಂಪನಿಗಳ ಹೆಸರಿನಲ್ಲಿ ಹೈದರಾಬಾದ್‌ನ ಖಾತೆಗಳಿಗೆ ವರ್ಗಾಯಿಸಿ, ಲೋಕಸಭಾ ಚುನಾವಣೆಗೆ ಬಳಸಲಾಯಿತು ಎಂಬ ಗಂಭೀರ ಆರೋಪವಿದೆ. ಇದು ಕೇವಲ ಭ್ರಷ್ಟಾಚಾರವಲ್ಲ, ಇದು ಅತ್ಯಂತ ಹಿಂದುಳಿದ ಆದಿವಾಸಿ/ಬುಡಕಟ್ಟು ಸಮುದಾಯದ ಹೊಟ್ಟೆಯ ಮೇಲೆ ಹೊಡೆದ ಪೆಟ್ಟು. ದಲಿತರ ಉದ್ಧಾರಕ್ಕಾಗಿ ಇರುವ ನಿಗಮವನ್ನೇ &#8220;ಚುನಾವಣಾ ಎಟಿಎಂ&#8221; ಮಾಡಿಕೊಂಡರೆ, ದಲಿತರ ಪರ ಕಾಳಜಿ ಎಲ್ಲಿದೆ? ತನಿಖೆಯಲ್ಲಿ ಸಚಿವರಾಗಿದ್ದ ಬಿ. ನಾಗೇಂದ್ರ ಅವರನ್ನು ಬಂಧಿಸಲಾಯಿತು, ಮತ್ತು ಅವರು ಸಿಎಂ ಹೆಸರನ್ನು ಹೇಳುವಂತೆ ಒತ್ತಡ ಹೇರಲಾಯಿತು ಎಂದು ಆರೋಪಿಸಿದರು.</p>



<p><strong>ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಹಗರಣ</strong><br>ದಲಿತ ಪರ ಎಂದು ಹೇಳಿಕೊಳ್ಳುವ ನಾಯಕನ ಕುಟುಂಬವು ಭೂ ಹಗರಣದಲ್ಲಿ ಸಿಲುಕಿರುವುದು ಅವರ ನೈತಿಕತೆಯನ್ನು ಕುಗ್ಗಿಸುತ್ತದೆ. ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರಿಗೆ ಮೈಸೂರಿನಲ್ಲಿ ಅಕ್ರಮವಾಗಿ 14 ನಿವೇಶನಗಳನ್ನು (Sites) ನೀಡಲಾಗಿದೆ ಎಂಬ ಆರೋಪ ಕೇಳಿಬಂತು. ಸ್ವಾಧೀನಪಡಿಸಿಕೊಂಡ ಜಮೀನಿನ ಮೌಲ್ಯಕ್ಕೂ, ಪರಿಹಾರವಾಗಿ ನೀಡಲಾದ ನಿವೇಶನಗಳ ಮೌಲ್ಯಕ್ಕೂ (ಅಂದಾಜು 156 ಕೋಟಿ) ಭಾರೀ ವ್ಯತ್ಯಾಸವಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದವು. ಅಂತಿಮವಾಗಿ, ಸಿಎಂ ಪತ್ನಿ ನಿವೇಶನಗಳನ್ನು ಹಿಂದಿರುಗಿಸಿದ್ದು, ಪರೋಕ್ಷವಾಗಿ ತಪ್ಪು ಒಪ್ಪಿಕೊಂಡಂತೆ ಅಲ್ಲವೇ?</p>



<p><strong>ದಲಿತ ನಾಯಕರ ಮೂಲೆಗುಂಪು</strong><br>ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಲು ದಲಿತರ ಮತಗಳು ಬೇಕು, ಆದರೆ ದಲಿತ ನಾಯಕರು ಬೆಳೆಯುವುದು ಬೇಡ ಎಂಬುದು ಆಂತರಿಕ ಟೀಕೆಯಷ್ಟೇ ಅಲ್ಲ; ಬಹಿರಂಗ ಸತ್ಯ ಕೂಡಾ&#8230; ಮಲ್ಲಿಕಾರ್ಜುನ ಖರ್ಗೆ ಮತ್ತು ಜಿ. ಪರಮೇಶ್ವರ್ ಅವರಂತಹ ಹಿರಿಯ ದಲಿತ ನಾಯಕರು ಮುಖ್ಯಮಂತ್ರಿ ಹುದ್ದೆಯಿಂದ ವಂಚಿತರಾಗಲು ಸಿದ್ದರಾಮಯ್ಯನವರ ರಾಜಕೀಯ ತಂತ್ರಗಾರಿಕೆಯೇ ಕಾರಣ ಎಂಬ ಭಾವನೆ ಇಂದಿಗೂ ದಲಿತ ಸಮುದಾಯದಲ್ಲಿ ಗಟ್ಟಿಯಾಗಿದೆ. 2013ರಲ್ಲಿ ಪರಮೇಶ್ವರ್ ಸೋಲಲು ಮತ್ತು ಡಿಸಿಎಂ ಹುದ್ದೆ ಸಿಗದಿರಲು ಆಂತರಿಕ ಒಳಸಂಚು ಕಾರಣವಾಗಿತ್ತು ಎಂಬ ಮಾತುಗಳು ಇಂದಿಗೂ ಕೇಳಿಬರುತ್ತವೆ.</p>



<p><strong>ಸ್ವಜಾತಿ ಪ್ರೇಮ (ಕುರುಬ ಪ್ರಾಬಲ್ಯ) ಮತ್ತು ಜಾತಿ ಗಣತಿ ವಿವಾದ</strong><br>&#8220;ಅಹಿಂದ&#8221; ಹೆಸರಿನಲ್ಲಿ ಅಧಿಕಾರಕ್ಕೆ ಬಂದರೂ, ಆಡಳಿತದಲ್ಲಿ ಕುರುಬ ಸಮುದಾಯದ (ಸಿದ್ದರಾಮಯ್ಯನವರ ಸ್ವಜಾತಿ) ಪ್ರಾಬಲ್ಯ ಎದ್ದು ಕಾಣುತ್ತದೆ ಎಂಬುದು ಸಾಮಾನ್ಯಜನರ ಟೀಕೆ. ಸಿದ್ದರಾಮಯ್ಯನವರು 2015ರಲ್ಲಿ ₹160 ಕೋಟಿ ವೆಚ್ಚದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು (ಜಾತಿ ಗಣತಿ) ನಡೆಸಿದರು. ಆದರೆ, ವರದಿಯನ್ನು ಸ್ವೀಕರಿಸಲು ಮತ್ತು ಬಿಡುಗಡೆ ಮಾಡಲು ಅವರು ತೋರಿಸುತ್ತಿರುವ ಮೀನಾಮೇಷ ಎಣಿಕೆ ಅನುಮಾನಾಸ್ಪದವಾಗಿದೆ.</p>



<p>2018ರ ಚುನಾವಣೆಗೂ ಮುನ್ನ ವರದಿ ಸಿದ್ಧವಿದ್ದರೂ, ಲಿಂಗಾಯತ ಮತ್ತು ಒಕ್ಕಲಿಗ ಮತಗಳು ಕೈತಪ್ಪಬಹುದು ಎಂಬ ಭಯದಿಂದ ಅದನ್ನು ಬಿಡುಗಡೆ ಮಾಡಲಿಲ್ಲ. ಈಗಲೂ ಕೂಡ, ವರದಿಯಲ್ಲಿ ಕುರುಬರ ಜನಸಂಖ್ಯೆ ನಿರೀಕ್ಷೆಗಿಂತ ಕಡಿಮೆ ಇರಬಹುದು ಅಥವಾ ದಲಿತರ ಸಂಖ್ಯೆ ಹೆಚ್ಚಿರಬಹುದು ಎಂಬ ಕಾರಣಕ್ಕೆ ವರದಿಯನ್ನು ಪರಿಷ್ಕರಿಸುವ ಅಥವಾ ತಾಂತ್ರಿಕ ಕಾರಣಗಳನ್ನು ಒಡ್ಡಿ ಮುಂದೂಡುವ ಪ್ರಯತ್ನಗಳು ನಡೆಯುತ್ತಿವೆ.</p>



<p>ಆಡಳಿತದ ಪ್ರಮುಖ ಹುದ್ದೆಗಳಲ್ಲಿ ಮತ್ತು ನಿಗಮ ಮಂಡಳಿಗಳಲ್ಲಿ ಕುರುಬ ಸಮುದಾಯದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. . ನಿಗಮ ಮಂಡಳಿಗಳು ಸೇರಿದಂತೆ ಅನೇಕ ಪವರ್‌ಫುಲ್ ಹುದ್ದೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುರುಬರೇ ಕುಳಿತಿದ್ದಾರೆಂದು ಅನೇಕ ಕಡೆಗಳಲ್ಲಿ ಚರ್ಚೆ ನಡೆಯುತ್ತಿದೆ.</p>



<p><strong>ಯಾರು ಹೆಚ್ಚು </strong><strong>ಪವರ್‌ಫುಲ್‌</strong><strong>?</strong><br>ಅಂತಿಮವಾಗಿ, ನಾವು ಈ ಲೇಖನದ ಮೂಲ ಉದ್ದೇಶವಾದ ಯಾರು ಪವರ್‌ಫುಲ್ ಎಂಬ ವಿಷಯಕ್ಕೆ ಬರುವುದಾದರೆ, ದೇವರಾಜ ಅರಸು ಮತ್ತು ಸಿದ್ದರಾಮಯ್ಯ ಅವರ ನಡುವಿನ &#8220;ಶಕ್ತಿ&#8221;ಯನ್ನು ಅಳೆಯುವುದಾದರೆ:</p>



<p>ಅರಸು ಅವರು ನಿಜವಾದ <strong>ಪವರ್‌ಫುಲ್</strong>. ಏಕೆಂದರೆ ಅವರು ಸಮಾಜದ ಬುಡವನ್ನೇ ಅಲುಗಾಡಿಸಿದರು. ಅವರು ಪ್ರಧಾನ ಮಂತ್ರಿಯನ್ನೇ ಎದುರು ಹಾಕಿಕೊಳ್ಳುವ ಧೈರ್ಯ ತೋರಿದರು. ಅವರು ನೀಡಿದ &#8220;ಭೂಮಿ&#8221; ಇಂದಿಗೂ ದಲಿತರ ಮತ್ತು ಹಿಂದುಳಿದವರ ಕುಟುಂಬಗಳನ್ನು ಸಲಹುತ್ತಿದೆ. ಅವರ ಅಧಿಕಾರವು &#8220;ತ್ಯಾಗ&#8221; ಮತ್ತು &#8220;ಸಂಘರ್ಷ&#8221;ದ ಮೇಲೆ ನಿಂತಿತ್ತು. ಅವರು ತಮ್ಮದೇ ಜಾತಿಯ (ಅರಸು) ಹಿತಾಸಕ್ತಿಗಿಂತ ವಿಶಾಲ ಬಹುಜನರ ಹಿತಾಸಕ್ತಿಯನ್ನು ಕಾಪಾಡಿದರು.</p>



<p>ಸಿದ್ದರಾಮಯ್ಯನವರು <strong>ರಾಜಕೀಯವಾಗಿ </strong><strong>ಪವರ್‌ಫುಲ್</strong>. ಅವರು ದೀರ್ಘಕಾಲ ಅಧಿಕಾರದಲ್ಲಿ ಉಳಿಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಅವರ &#8220;ಗ್ಯಾರಂಟಿ ಯೋಜನೆಗಳು&#8221; ಲಕ್ಷಾಂತರ ಜನರ ಹಸಿವನ್ನು ನೀಗಿಸುತ್ತಿವೆ ಎಂಬುದು ಸತ್ಯ. ಆದರೆ, ಅವರ &#8220;ಸಾಮಾಜಿಕ ನ್ಯಾಯ&#8217;ವು ದಲಿತರ ಹಣವನ್ನು (SCSP/TSP) ಬಳಸಿಕೊಂಡು, ದಲಿತರ ನಾಯಕರನ್ನು ನಿಯಂತ್ರಿಸಿ, ಸ್ವಜಾತಿಯನ್ನು ಪೋಷಿಸುವ ತಂತ್ರಗಾರಿಕೆಯಾಗಿ ಮಾರ್ಪಟ್ಟಿದೆ ಎಂಬ ಆರೋಪಗಳು ಬಲವಾಗಿವೆ.</p>



<p>ಒಂದು ವೇಳೆ &#8220;ಪವರ್&#8221; ಎಂದರೆ ಚುನಾವಣೆಯನ್ನು ಗೆಲ್ಲುವುದು ಮತ್ತು ಸರ್ಕಾರವನ್ನು ಉಳಿಸಿಕೊಳ್ಳುವುದು ಎಂದಾದರೆ, ಸಿದ್ದರಾಮಯ್ಯ ಹೆಚ್ಚು ಪವರ್‌ಫುಲ್.</p>



<p>ಆದರೆ, &#8220;ಪವರ್&#8221; ಎಂದರೆ ತಲೆಮಾರುಗಳವರೆಗೆ ಉಳಿಯುವಂತಹ ಸಾಮಾಜಿಕ ಬದಲಾವಣೆಯನ್ನು ತರುವುದು ಮತ್ತು ಶೋಷಿತರಿಗೆ ಸ್ವಾಭಿಮಾನದ ಬದುಕು (ಭೂಮಿ/ಉದ್ಯೋಗ) ಕಲ್ಪಿಸುವುದು ಎಂದಾದರೆ, ದೇವರಾಜ ಅರಸು ಅವರೇ ಅದ್ವೀತೀಯ (Undisputed) ನಾಯಕ. ಸಿದ್ದರಾಮಯ್ಯನವರು ಅರಸು ಅವರ ಹಾದಿಯಲ್ಲಿ ನಡೆದರೂ, ಅರಸು ಅವರಲ್ಲಿದ್ದ &#8220;ರಚನಾತ್ಮಕ &#8221; (Structural V &#8221; (Structural Vision) ಮತ್ತು &#8220;ತ್ಯಾಗ ಮನೋಭಾವ&#8217;ದ ಕೊರತೆ ಸಿದ್ದರಾಮಯ್ಯನವರಲ್ಲಿ ಎದ್ದು ಕಾಣುತ್ತದೆ. ಎಸ್‌ಸಿಎಸ್‌ಪಿ ಹಣದ ದುರ್ಬಳಕೆ ಮತ್ತು ಒಳಮೀಸಲಾತಿಯ ನಿರ್ಲಕ್ಷ್ಯವು ಸಿದ್ದರಾಮಯ್ಯನವರನ್ನು &#8220;ಅಹಿಂದ ನಾಯಕ&#8221;ನಿಗಿಂತ ಹೆಚ್ಚಾಗಿ &#8220;ಕುರುಬ ನಾಯಕ&#8221; ಅಥವಾ &#8220;ಚುನಾವಣಾ ತಂತ್ರಗಾರ&#8221;ನನ್ನಾಗಿ ಇತಿಹಾಸದಲ್ಲಿ ಉಳಿಸುವ ಸಾಧ್ಯತೆ ಇದೆ.</p>



<p></p>
]]></content:encoded>
					
		
		
			</item>
		<item>
		<title>ವೆನೆಜುವೆಲಾದಲ್ಲಿ ಮತ್ತೆ ಸೇನಾ ದಾಳಿ ಸಾಧ್ಯತೆ: ಟ್ರಂಪ್ ಎಚ್ಚರಿಕೆ</title>
		<link>https://peepalmedia.com/trump-warns-of-possible-military-attack-in-venezuela/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 05 Jan 2026 02:32:30 +0000</pubDate>
				<category><![CDATA[ವಿದೇಶ]]></category>
		<category><![CDATA[ವಿಶೇಷ]]></category>
		<guid isPermaLink="false">https://peepalmedia.com/?p=71705</guid>

					<description><![CDATA[ವಾಷಿಂಗ್ಟನ್ / ಕ್ಯಾರಕಾಸ್ : ವೆನೆಜುವೆಲಾದಲ್ಲಿ ಮತ್ತೊಮ್ಮೆ ಸೇನಾ ಹಸ್ತಕ್ಷೇಪ ನಡೆಸುವ ಸಾಧ್ಯತೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗವಾಗಿ ಎಚ್ಚರಿಸಿದ್ದಾರೆ. ದೇಶದ ಮಧ್ಯಂತರ ನಾಯಕತ್ವ ಅಮೆರಿಕದ ಬೇಡಿಕೆಗಳನ್ನು ಪಾಲಿಸಲು ವಿಫಲವಾದರೆ, ವಾಷಿಂಗ್ಟನ್ “ಎರಡನೇ ಅಲೆಯ” ಸೇನಾ ದಾಳಿ ನಡೆಸಲು ಸಿದ್ಧವಿದೆ ಎಂದು ಅವರು ಹೇಳಿದ್ದಾರೆ. ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿದ ಬಳಿಕ, ವೆನೆಜುವೆಲಾದ ಪರಿಸ್ಥಿತಿಯ ಮೇಲೆ ಅಮೆರಿಕ ಪ್ರಭಾವ ಬೀರುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ. “ವೆನೆಜುವೆಲಾವನ್ನು ಸರಿಪಡಿಸುವ ಕೆಲಸದತ್ತ ನಾವು ಗಮನ ಹರಿಸಿದ್ದೇವೆ. ಅವರು [&#8230;]]]></description>
										<content:encoded><![CDATA[
<p>ವಾಷಿಂಗ್ಟನ್ / ಕ್ಯಾರಕಾಸ್ : ವೆನೆಜುವೆಲಾದಲ್ಲಿ ಮತ್ತೊಮ್ಮೆ ಸೇನಾ ಹಸ್ತಕ್ಷೇಪ ನಡೆಸುವ ಸಾಧ್ಯತೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗವಾಗಿ ಎಚ್ಚರಿಸಿದ್ದಾರೆ. ದೇಶದ ಮಧ್ಯಂತರ ನಾಯಕತ್ವ ಅಮೆರಿಕದ ಬೇಡಿಕೆಗಳನ್ನು ಪಾಲಿಸಲು ವಿಫಲವಾದರೆ, ವಾಷಿಂಗ್ಟನ್ “ಎರಡನೇ ಅಲೆಯ” ಸೇನಾ ದಾಳಿ ನಡೆಸಲು ಸಿದ್ಧವಿದೆ ಎಂದು ಅವರು ಹೇಳಿದ್ದಾರೆ.</p>



<p>ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿದ ಬಳಿಕ, ವೆನೆಜುವೆಲಾದ ಪರಿಸ್ಥಿತಿಯ ಮೇಲೆ ಅಮೆರಿಕ ಪ್ರಭಾವ ಬೀರುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ. “ವೆನೆಜುವೆಲಾವನ್ನು ಸರಿಪಡಿಸುವ ಕೆಲಸದತ್ತ ನಾವು ಗಮನ ಹರಿಸಿದ್ದೇವೆ. ಅವರು ನಮ್ಮ ಮಾತು ಕೇಳದಿದ್ದರೆ, ಮತ್ತೊಂದು ದಾಳಿ ನಡೆಸಬೇಕಾಗುತ್ತದೆ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.</p>



<p>“ಈಗ ಯಾರು ಉಸ್ತುವಾರಿ ವಹಿಸಿದ್ದಾರೆ ಎಂದು ಕೇಳಬೇಡಿ. ಅದಕ್ಕೆ ಉತ್ತರ ಕೊಟ್ಟರೆ ಅದು ವಿವಾದವಾಗುತ್ತದೆ” ಎಂದು ಟ್ರಂಪ್ ಹೇಳಿದ್ದು, ನೆಲಮಟ್ಟದ ಪರಿಸ್ಥಿತಿಯನ್ನು ಅಮೆರಿಕ ನಿಯಂತ್ರಿಸುತ್ತಿದೆ ಎಂಬ ಸೂಚನೆ ನೀಡಿದ್ದಾರೆ. ಪ್ರಸ್ತುತ ದಾಳಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಆದರೆ ಅಗತ್ಯವಿದ್ದರೆ ಮತ್ತೆ ಕ್ರಮ ಕೈಗೊಳ್ಳಲಾಗುವುದು ಎಂದರು.</p>



<p>ಸೇನಾ ಕಾರ್ಯಾಚರಣೆಯ ವೇಳೆ ಅಮೆರಿಕದ ಒಂದು ಹೆಲಿಕಾಪ್ಟರ್ ಗಂಭೀರವಾಗಿ ಹಾನಿಗೊಳಗಾಗಿದ್ದು, ಅದರಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಯಾವುದೇ ಸಾವು ಸಂಭವಿಸಿಲ್ಲ, ಗಾಯಗೊಂಡವರೂ ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.</p>



<p>ವೆನೆಜುವೆಲಾವನ್ನು “ಈಗ ಸತ್ತ ದೇಶ” ಎಂದು ಟ್ರಂಪ್ ವರ್ಣಿಸಿದ್ದು, ವರ್ಷಗಳ ದುಶಾಸನ ಮತ್ತು ಅಸಮರ್ಪಕ ಆಡಳಿತವೇ ದೇಶದ ಕುಸಿತಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲದೆ, ವೆನೆಜುವೆಲಾದ ತೈಲ ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳಿಗೆ ಅಮೆರಿಕಕ್ಕೆ ಸಂಪೂರ್ಣ ಪ್ರವೇಶ ಬೇಕೆಂಬ ಬೇಡಿಕೆಯನ್ನು ಅವರು ಪುನರುಚ್ಚರಿಸಿದ್ದಾರೆ. “ತೈಲ ಉತ್ಪಾದನೆ ತುಂಬಾ ಕಡಿಮೆಯಾಗಿದೆ. ಮೂಲಸೌಕರ್ಯ ಪುನರ್‌ನಿರ್ಮಾಣಕ್ಕೆ ದೊಡ್ಡ ಹೂಡಿಕೆಗಳು ಅಗತ್ಯ” ಎಂದು ಹೇಳಿದರು.</p>



<p>ಗಾರ್ಡಿಯನ್ ವರದಿ ಪ್ರಕಾರ, ಕೆರಿಬಿಯನ್ ಪ್ರದೇಶದಲ್ಲಿ ಅಮೆರಿಕವು ಸುಮಾರು 15,000 ಸೈನಿಕರನ್ನು ನಿಯೋಜಿಸಿದೆ. ಮಧ್ಯಂತರ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅಮೆರಿಕದ ಬೇಡಿಕೆಗಳನ್ನು ಪೂರೈಸದಿದ್ದರೆ ಮತ್ತೆ ಮಧ್ಯಪ್ರವೇಶ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ. ಚುನಾವಣೆಗಳ ಕುರಿತು ಮಾತನಾಡಿದ ಟ್ರಂಪ್, “ಸರಿಯಾದ ಸಮಯದಲ್ಲಿ ಚುನಾವಣೆ ನಡೆಯಲಿದೆ” ಎಂದಿದ್ದಾರೆ.</p>



<p>ಮಡುರೊ ಬಂಧನವನ್ನು ರೊಡ್ರಿಗಸ್ ಸಾರ್ವಜನಿಕವಾಗಿ ಖಂಡಿಸಿದ್ದರೂ, ಅಮೆರಿಕದೊಂದಿಗೆ ಖಾಸಗಿ ಮಾತುಕತೆಗಳು ನಡೆಯುತ್ತಿವೆ ಎಂದು ಟ್ರಂಪ್ ತಿಳಿಸಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ರೊಡ್ರಿಗಸ್ ಅವರೊಂದಿಗೆ ಮಾತುಕತೆ ನಡೆಸಿದ್ದು, “ನಿಮಗೆ ಬೇಕಾದುದನ್ನು ನಾವು ಮಾಡುತ್ತೇವೆ” ಎಂಬ ಸಂದೇಶ ಬಂದಿದೆ ಎಂದು ಟ್ರಂಪ್ ಹೇಳಿದ್ದಾರೆ.</p>



<p>ಕ್ಯಾರಕಾಸ್‌ನಲ್ಲಿ ಹಿರಿಯ ಸರ್ಕಾರಿ ಮತ್ತು ಸೇನಾ ನಾಯಕರು ಮಡುರೊ ಅವರ ವಾಪಸಿಗೆ ಒತ್ತಾಯಿಸಿದ್ದರೂ, ತಾತ್ಕಾಲಿಕವಾಗಿ ರೊಡ್ರಿಗಸ್ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ರಕ್ಷಣಾ ಸಚಿವ ವ್ಲಾಡಿಮಿರ್ ಪ್ಯಾಡ್ರಿನೊ ಲೋಪೆಜ್ ಅಮೆರಿಕದ ಕ್ರಮವನ್ನು “ಸಾಮ್ರಾಜ್ಯಶಾಹಿ ಆಕ್ರಮಣ” ಎಂದು ಟೀಕಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸೈನಿಕರು ಹಾಗೂ ನಾಗರಿಕರು ಮೃತಪಟ್ಟಿದ್ದಾರೆ ಎಂದು ಆರೋಪಿಸಿದರೂ, ಸಾರ್ವಜನಿಕರು ಸಾಮಾನ್ಯ ಜೀವನ ಮುಂದುವರಿಸಬೇಕು ಎಂದು ಕರೆ ನೀಡಿದ್ದಾರೆ.</p>



<p>ಮಡುರೊ ಅವರ ಪುತ್ರ ನಿಕೋಲಸ್ ಮಡುರೊ ಗುಯೆರಾ, ಬೆಂಬಲಿಗರು ಪ್ರತಿರೋಧಕ್ಕೆ ಸಜ್ಜಾಗುತ್ತಾರೆ ಎಂದು ಹೇಳಿದ್ದಾರೆ. ಇತ್ತ ಸ್ಪೇನ್‌ನಲ್ಲಿ ವಾಸವಿರುವ ವಿರೋಧ ಪಕ್ಷದ ನಾಯಕ ಎಡ್ಮುಂಡೊ ಗೊನ್ಸಾಲೆಜ್ ಉರ್ರುಟಿಯಾ, ಮಡುರೊ ಪದಚ್ಯುತಿಯನ್ನು “ಮುಖ್ಯ ಹೆಜ್ಜೆ, ಆದರೆ ಸಾಕಾಗುವುದಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.</p>



<p>ಅಮೆರಿಕದ ಕ್ರಮದ ವಿರುದ್ಧ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಳವಳ ವ್ಯಕ್ತವಾಗಿದೆ. ಸ್ಪೇನ್, ಬ್ರೆಜಿಲ್, ಚಿಲಿ, ಕೊಲಂಬಿಯಾ, ಮೆಕ್ಸಿಕೊ ಮತ್ತು ಉರುಗ್ವೆ ಸೇರಿದಂತೆ ಹಲವು ದೇಶಗಳು, ಈ ಹಸ್ತಕ್ಷೇಪ ಪ್ರಾದೇಶಿಕ ಭದ್ರತೆಗೆ ಅಪಾಯಕಾರಿ ಪೂರ್ವನಿದರ್ಶನವಾಗಬಹುದು ಎಂದು ಎಚ್ಚರಿಸಿವೆ. ಯುರೋಪಿಯನ್ ಒಕ್ಕೂಟದ ಹಲವು ರಾಷ್ಟ್ರಗಳು ಸಂಯಮ ಪಾಲಿಸುವಂತೆ ಕರೆ ನೀಡಿವೆ.</p>



<p>ಕ್ಯಾರಕಾಸ್‌ನಲ್ಲಿ ಮತ್ತೆ ದಾಳಿ ನಡೆಯಬಹುದೆಂಬ ಭೀತಿಯಿಂದ ಜನರು ಅಗತ್ಯ ವಸ್ತುಗಳನ್ನು ಸಂಗ್ರಹಿಸುತ್ತಿದ್ದು, ಸೂಪರ್‌ಮಾರ್ಕೆಟ್ ಮತ್ತು ಔಷಧಾಲಯಗಳ ಮುಂದೆ ದೀರ್ಘ ಸಾಲುಗಳು ಕಂಡುಬಂದಿವೆ. ನೆರೆಯ ಕೊಲಂಬಿಯಾದಲ್ಲಿ ಅಧ್ಯಕ್ಷ ಗುಸ್ಟಾವೊ ಪೆಟ್ರೊ ಗಡಿ ಪ್ರದೇಶಕ್ಕೆ 30,000 ಸೈನಿಕರನ್ನು ನಿಯೋಜಿಸುವಂತೆ ಆದೇಶ ನೀಡಿದ್ದಾರೆ. ಇದರಿಂದ ಲ್ಯಾಟಿನ್ ಅಮೆರಿಕ ಪ್ರದೇಶದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.</p>
]]></content:encoded>
					
		
		
			</item>
		<item>
		<title>ಅಮಾನತುಗೊಂಡ ಮಹೇಶ್ ಜೋಶಿ ನೇತೃತ್ವದಲ್ಲಿ ಶೃಂಗೇರಿಯಲ್ಲಿ ಅಖಿಲ ಭಾರತ ಚುಟುಕು ಸಾಹಿತ್ಯ ಸಮ್ಮೇಳನ; ಸರ್ಕಾರಿ ನಿಯಮ ಉಲ್ಲಂಘನೆಯ ಗಂಭೀರ ಆರೋಪ</title>
		<link>https://peepalmedia.com/serious-accusation-of-violating-government-rules/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 03 Jan 2026 08:00:40 +0000</pubDate>
				<category><![CDATA[ಕಲೆ – ಸಾಹಿತ್ಯ]]></category>
		<category><![CDATA[ಚಿಕ್ಕಮಗಳೂರು]]></category>
		<category><![CDATA[ವಿಶೇಷ]]></category>
		<guid isPermaLink="false">https://peepalmedia.com/?p=71669</guid>

					<description><![CDATA[ಶೃಂಗೇರಿಯಲ್ಲಿ ದಿನಾಂಕ ಜನವರಿ 4ರಂದು ಭಾನುವಾರ ನಡೆಯಲಿರುವ ಅಖಿಲ ಭಾರತ ಕನ್ನಡ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಸಮ್ಮೇಳನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಒಂದು ಸ್ವಹಿತಾಸಕ್ತಿ ಗುಂಪು ಆಯೋಜಿಸುತ್ತಿದ್ದು, ಪರಿಷತ್ತಿನ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಸಮ್ಮೇಳನದ ಆಹ್ವಾನ ಪತ್ರಿಕೆಗಳು ಹಾಗೂ ಬ್ಯಾನರ್ಗಳಲ್ಲಿ, ಅವ್ಯವಹಾರಗಳ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಂಡಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಅವರ ಹೆಸರು ಹಾಗೂ ಭಾವಚಿತ್ರವನ್ನು ಬಳಸಿ, ಅವರನ್ನು ಇನ್ನೂ “ಕನ್ನಡ [&#8230;]]]></description>
										<content:encoded><![CDATA[
<p>ಶೃಂಗೇರಿಯಲ್ಲಿ ದಿನಾಂಕ ಜನವರಿ 4ರಂದು ಭಾನುವಾರ ನಡೆಯಲಿರುವ ಅಖಿಲ ಭಾರತ ಕನ್ನಡ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಸಮ್ಮೇಳನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಒಂದು ಸ್ವಹಿತಾಸಕ್ತಿ ಗುಂಪು ಆಯೋಜಿಸುತ್ತಿದ್ದು, ಪರಿಷತ್ತಿನ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.</p>



<p>ಸಮ್ಮೇಳನದ ಆಹ್ವಾನ ಪತ್ರಿಕೆಗಳು ಹಾಗೂ ಬ್ಯಾನರ್ಗಳಲ್ಲಿ, ಅವ್ಯವಹಾರಗಳ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಂಡಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಅವರ ಹೆಸರು ಹಾಗೂ ಭಾವಚಿತ್ರವನ್ನು ಬಳಸಿ, ಅವರನ್ನು ಇನ್ನೂ “<strong>ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರು</strong>” ಎಂದು ಪ್ರಚುರಪಡಿಸಲಾಗಿದೆ. ಇದು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರ್ಕಾರದ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ವಿರೋಧ ವ್ಯಕ್ತಪಡಿಸಿರುವ ಸಾಹಿತ್ಯಾಭಿಮಾನಿಗಳು ತಿಳಿಸಿದ್ದಾರೆ.</p>



<p>ಈ ಸಮ್ಮೇಳನವು ಸಮಗ್ರ ಸಾಹಿತ್ಯ ವಲಯವನ್ನು ಒಳಗೊಂಡಿಲ್ಲದೆ, ಕೆಲವೇ ಮಂದಿ ಸ್ವಾರ್ಥಪರ ವ್ಯಕ್ತಿಗಳ ವೈಯಕ್ತಿಕ ಲಾಭಕ್ಕಾಗಿ ಆಯೋಜಿಸಲಾಗುತ್ತಿದೆ ಎಂಬ ಆರೋಪವೂ ಮಾಡಲಾಗಿದೆ. <strong>ಇದೇ ಗುಂಪಿನವರು ಹಿಂದೆ ಶೃಂಗೇರಿಯಲ್ಲಿ ನಡೆದ </strong><strong>16ನೇ</strong><strong> ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಡ್ಡಿಪಡಿಸಿ, ಬಾಂಬ್ ಬೆದರಿಕೆ ಹಾಕುವ ಮೂಲಕ ಸಮ್ಮೇಳನವನ್ನು ಹಾಳುಗೆಡವಲು ಯತ್ನಿಸಿದ್ದರು</strong> ಎಂಬ ಆರೋಪವನ್ನು ವಿರೋಧಿಗಳು ನೆನಪಿಸಿದ್ದಾರೆ. ಆಗ ಹಿರಿಯ ಸಾಹಿತಿಗಳಾದ ಕಲ್ಕುಳಿ ವಿಠಲ ಹೆಗ್ಡೆಯವರು ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅಂದಿನ ಎರಡು ದಿನಗಳ ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ದಿನ ರಾಜ್ಯದ ಅನೇಕ ಸಾಹಿತ್ಯಾಸಕ್ತರ ನೆರವಿನಿಂದ ಸಮ್ಮೇಳನ ಯಶಸ್ವಿಯಾಗಿ ನೆರವೇರಿದ ನಂತರ, ಎರಡನೆಯ ದಿನ ಇದೇ ಚುಟುಕು ಸಾಹಿತ್ಯ ಸಮ್ಮೇಳನದ ರೂವಾರಿಗಳು ಸಮ್ಮೇಳನಕ್ಕೆ ಪೆಟ್ರೋಲ್ ಬಾಂಬ್ ಹಾಕುವ ಬೆದರಿಕೆ ಹಾಕಿ ಸಾಹಿತ್ಯ ಕಾರ್ಯಕ್ರಮವನ್ನೇ ಅರ್ಧಕ್ಕೆ ನಿಲ್ಲಿಸಿದ್ದರು. ಇಂತಹ ಸಾಹಿತ್ಯ ವಿರೋಧಿಗಳ ಗುಂಪು ಈಗ ಎಲ್ಲಾ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸುವ ಮೂಲಕ ಮತ್ತೊಮ್ಮೆ ಕಾನೂನು ಬಾಹಿರವಾಗಿ ತಮ್ಮ ನಡೆ ಇಟ್ಟಿದ್ದಾರೆ ಎಂದು ಸಾಹಿತ್ಯಾಸಕ್ತರ ವಲಯ ಗಂಭೀರವಾಗಿ ಆರೋಪಿಸಿದೆ.</p>



<p>ಅಷ್ಟೇ ಅಲ್ಲದೆ, ಹಲವಾರು ಸಾಹಿತ್ಯಾಭಿಮಾನಿಗಳ ಮೇಲೆ ಅಸಂಬದ್ಧ ಆರೋಪಗಳನ್ನು ಹೊರಿಸಿ ಪ್ರಕರಣಗಳನ್ನು ದಾಖಲಿಸುವ ಮೂಲಕ ಮಾನಸಿಕ ಒತ್ತಡ ಸೃಷ್ಟಿಸಲಾಗುತ್ತಿದೆ ಎಂದು ದೂರಲಾಗಿದೆ. ಇಂತಹ ನಡೆಗಳು ಸಾಹಿತ್ಯ ವಾತಾವರಣಕ್ಕೆ ಧಕ್ಕೆ ತರುತ್ತವೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.</p>



<p>ಸಾಹಿತ್ಯ ಮೌಲ್ಯಗಳು ಮತ್ತು ಶಿಷ್ಟಾಚಾರಗಳನ್ನು ಮೀರಿ, ರಾಜಕೀಯ ಉದ್ದೇಶದಿಂದ ಸಮ್ಮೇಳನ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ವಿರೋಧ ವ್ಯಕ್ತಪಡಿಸಿದವರು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.</p>



<p>ಈ ಕುರಿತು ಶ್ರೀ ಮಂದಾರ, ಜಗದೀಶ್ ಕಣದಮನೆ, ಭರತ್ ಗಿಣಿಕಲ್, ವೆಂಕಟೇಶ್ ಹಾಗಲಗಂಜಿ, ಚಂದ್ರಶೇಖರ್ ಹೆಗ್ಡೆ ಕಲ್ಕುಳಿ, ಸಂತೋಷ್ ಕಾಳ್ಯ, ರಾಜಕುಮಾರ್ ಹೆಗ್ಡೆ, ತ್ರಿಮೂರ್ತಿ ಹೊಸ್ತೋಟ, ಕಳಸಪ್ಪ ಕೆಲವಳ್ಳಿ, ನವಿನ್ ಕರುವಾನೆ ಮತ್ತು ಅಶೋಕ್ ಕುಂದೂರ್ ಸೇರಿದಂತೆ ಹಲವು ಸಾಹಿತ್ಯಾಭಿಮಾನಿಗಳು ಸಂಯುಕ್ತವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.</p>
]]></content:encoded>
					
		
		
			</item>
	</channel>
</rss>
