<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Peepal Media</title>
	<atom:link href="https://peepalmedia.com/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sat, 18 Jul 2026 15:02:52 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.2</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಮಗುವಿಗೆ ಜನ್ಮ ನೀಡಿದ್ದ ಅಪ್ರಾಪ್ತ ಬಾಲಕಿ ಮತ್ತೆ ಗರ್ಭಿಣಿ &#8211; ತನಿಖೆ ಚುರುಕು</title>
		<link>https://peepalmedia.com/minor-girl-who-gave-birth-earlier-is-pregnant-again-investigation-intensifies/</link>
		
		<dc:creator><![CDATA[ರಮೇಶ್‌ ಹಾಸನ್‌]]></dc:creator>
		<pubDate>Sat, 18 Jul 2026 15:00:48 +0000</pubDate>
				<category><![CDATA[Uncategorized]]></category>
		<category><![CDATA[karnataka]]></category>
		<category><![CDATA[news]]></category>
		<guid isPermaLink="false">https://peepalmedia.com/?p=81843</guid>

					<description><![CDATA[ಹುಬ್ಬಳ್ಳಿ:&#160;ಧಾರವಾಡ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾಗುತ್ತಿರುವ ಆಘಾತಕಾರಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಅತ್ಯಾಚಾರದಿಂದಾಗಿ ಗರ್ಭಿಣಿಯಾಗಿದ್ದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಲ್ಲದೆ, ಈಗ ಮತ್ತೆ ಗರ್ಭಿಣಿಯಾಗಿದ್ದಾಳೆ. ಒಂದೇ ಕುಟುಂಬದ ಇಬ್ಬರು ಅಪ್ರಾಪ್ತ ಬಾಲಕಿಯರಲ್ಲಿ ಒಬ್ಬಳು, ಈ ಹಿಂದೆ ಮಗುವಿಗೆ ಜನ್ಮ ನೀಡಿದ್ದ 15 ವರ್ಷದ ಬಾಲಕಿ ಇದೀಗ ಮತ್ತೆ ಗರ್ಭಿಣಿಯಾಗಿದ್ದು, ಪೊಲೀಸರು ಪೋಕ್ಸೋ ಪ್ರಕರಣದ ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹಳೆ ಹುಬ್ಬಳ್ಳಿ ಠಾಣೆ ವ್ಯಾಪ್ತಿಯಲ್ಲಿ ಈ ಆಘಾತಕಾರಿ ಪ್ರಕರಣ [&#8230;]]]></description>
										<content:encoded><![CDATA[
<p class="wp-block-paragraph"><strong>ಹುಬ್ಬಳ್ಳಿ:</strong>&nbsp;ಧಾರವಾಡ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾಗುತ್ತಿರುವ ಆಘಾತಕಾರಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಅತ್ಯಾಚಾರದಿಂದಾಗಿ ಗರ್ಭಿಣಿಯಾಗಿದ್ದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಲ್ಲದೆ, ಈಗ ಮತ್ತೆ ಗರ್ಭಿಣಿಯಾಗಿದ್ದಾಳೆ.</p>



<p class="wp-block-paragraph">ಒಂದೇ ಕುಟುಂಬದ ಇಬ್ಬರು ಅಪ್ರಾಪ್ತ ಬಾಲಕಿಯರಲ್ಲಿ ಒಬ್ಬಳು, ಈ ಹಿಂದೆ ಮಗುವಿಗೆ ಜನ್ಮ ನೀಡಿದ್ದ 15 ವರ್ಷದ ಬಾಲಕಿ ಇದೀಗ ಮತ್ತೆ ಗರ್ಭಿಣಿಯಾಗಿದ್ದು, ಪೊಲೀಸರು ಪೋಕ್ಸೋ ಪ್ರಕರಣದ ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.</p>



<p class="wp-block-paragraph">ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹಳೆ ಹುಬ್ಬಳ್ಳಿ ಠಾಣೆ ವ್ಯಾಪ್ತಿಯಲ್ಲಿ ಈ ಆಘಾತಕಾರಿ ಪ್ರಕರಣ ದಾಖಲಾಗಿದೆ ಎಂದು ಅವರು ಹೇಳಿದ್ದಾರೆ. 2025 ರಲ್ಲಿ ದುಷ್ಕರ್ಮಿಗಳು, 15 ವರ್ಷದ ಬಾಲಕಿಯನ್ನು ರೈಲ್ವೆ ನಿಲ್ದಾಣದ ಬಳಿಯ ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಯೊಬ್ಬರು ದೂರು ದಾಖಲಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.</p>



<p class="wp-block-paragraph">ಈ ಅತ್ಯಾಚಾರ ಘಟನೆಯ ನಂತರ ಬಾಲಕಿ ಗರ್ಭಿಣಿಯಾಗಿ ಕೊನೆಗೆ ಮಗುವಿಗೆ ಜನ್ಮ ನೀಡಿದ್ದಳು. ನಂತರ ಹುಡುಗಿಯ ಪೋಷಕರು ನವಜಾತ ಶಿಶುವನ್ನು ಅಪರಿಚಿತ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದ್ದು, ಇದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.</p>



<p class="wp-block-paragraph">ಈ ವರ್ಷದ ಮೇ ತಿಂಗಳಲ್ಲಿ, ಬಾಲಕಿಯ ಮೇಲೆ ಅದೇ ಆರೋಪಿ ಮತ್ತೊಮ್ಮೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಇದರ ಪರಿಣಾಮವಾಗಿ ಒಂದು ವರ್ಷದೊಳಗೆ ಆಕೆ ಎರಡನೇ ಬಾರಿ ಗರ್ಭಿಣಿಯಾಗಿದ್ದಾಳೆ.</p>



<p class="wp-block-paragraph">ಪೊಲೀಸರು ಈ ಆರೋಪಗಳ ಜೊತೆಗೆ ಎರಡೂ ಗರ್ಭಧಾರಣೆಗೆ ಕಾರಣವಾದ ಸಂದರ್ಭಗಳ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.</p>



<p class="wp-block-paragraph">ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿ ಕುಮಾರ್, ಈ ಹಿಂದೆ ಮಗುವಿಗೆ ಜನ್ಮ ನೀಡಿದ್ದ 15 ವರ್ಷದ ಬಾಲಕಿ ಮತ್ತೆ ಗರ್ಭಿಣಿಯಾಗಿರುವುದು ಕಂಡುಬಂದ ನಂತರ ಗುರುವಾರ ಹಳೆ ಹುಬ್ಬಳ್ಳಿ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ ಎಂದು ಹೇಳಿದರು.</p>



<p class="wp-block-paragraph">&#8220;ಇದು ಪೋಕ್ಸೊ ಪ್ರಕರಣದ ಸ್ಪಷ್ಟ ಪ್ರಕರಣ. ಈ ಹಿಂದೆ ಮಗುವಿಗೆ ಜನ್ಮ ನೀಡಿದ್ದ 15 ವರ್ಷದ ಬಾಲಕಿ ಮತ್ತೆ ಗರ್ಭಿಣಿಯಾಗಿದ್ದಾಳೆ&#8221; ಎಂದು ಅವರು ಹೇಳಿದರು.</p>



<p class="wp-block-paragraph">&#8220;ಈ‌ ಹಿಂದೆಯೂ ಕೂಡ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತಳು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಪೋಕ್ಸೋ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಈ‌ ಕೇಸ್ ತನಿಖೆ ನಡೆಸುವಾಗ ಅದೇ ಕುಟುಂಬದ ಸಹೋದರಿಯ ಮಗಳೂ ಕೂಡ ಅಪ್ರಾಪ್ತ ವಯಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ‌ ಎಂಬ ಮಾಹಿತಿಯ ಮೇಲೆ ಮತ್ತೊಂದು ‌ಪ್ರಕರಣ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ಬಾಲಕಿಗೆ ಮೊದಲು ಒಂದು ಹೆರಿಗೆಯಾಗಿದೆ. ಈಗ ಮತ್ತೊಮ್ಮೆ ಗರ್ಭಿಣಿಯಾಗಿದ್ದು, ಈ ಎರಡೂ ಪ್ರಕರಣಗಳು ತುಂಬಾ ಗಂಭೀರ ಪ್ರಕರಣಗಳಾಗಿವೆ. ಎರಡೂ ಪ್ರಕರಣಗಳಲ್ಲಿ ಆರೋಪಿಗಳ ಹೆಸರು ಹೇಳಲು ಅವರ ಪೋಷಕರು ಹಾಗೂ ಅಪ್ರಾಪ್ತರು ಮುಂದೆ ಬಂದಿಲ್ಲ. ಆದರೆ, ತನಿಖೆ ನಡೆಸಲಾಗುತ್ತಿದೆ. ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಮಾಡಿದ ಆರೋಪಿ ಯಾರು ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ&#8221; ಎಂದು ತಿಳಿಸಿದರು.</p>



<p class="wp-block-paragraph">ಇಬ್ಬರೂ ಹುಡುಗಿಯರು ವೈದ್ಯಕೀಯ ವೀಕ್ಷಣೆಯಲ್ಲಿದ್ದಾರೆ ಮತ್ತು ಅಪಾಯದಿಂದ ಪಾರಾಗಿದ್ದಾರೆ. ಅವರು ಯಾವುದೇ ರೀತಿಯ ಹೇಳಿಕೆ ನೀಡಲು ಸಿದ್ಧರಿಲ್ಲ. ಆರೋಗ್ಯದ ದೃಷ್ಟಿಯಿಂದ ಅವರಿಗೆ ಚೇತರಿಸಿಕೊಳ್ಳಲು ನಾವು ಅವಕಾಶ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.</p>



<p class="wp-block-paragraph">ಈ ಸಂಬಂಧ ಇಬ್ಬರು ಹುಡುಗಿಯರ ಕುಟುಂಬ ಸದಸ್ಯರಿಗೆ ನೋಟಿಸ್ ನೀಡಲಾಗಿದೆ ಮತ್ತು ವಿಚಾರಣೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.</p>



<p class="wp-block-paragraph">&#8220;ನಾವು ಕುಟುಂಬ ಸದಸ್ಯರಿಗೆ ನೋಟಿಸ್ ನೀಡಿದ್ದೇವೆ ಮತ್ತು ಇಡೀ ಘಟನೆ ಹೇಗೆ ನಡೆಯಿತು ಎಂಬುದರ ಕುರಿತು ವಿಚಾರಣೆ ನಡೆಸುತ್ತಿದ್ದೇವೆ&#8221; ಎಂದು ಅವರು ಹೇಳಿದರು.</p>



<p class="wp-block-paragraph">15 ವರ್ಷದ ಬಾಲಕಿಗೆ ಜನಿಸಿದ ಮೊದಲ ಮಗುವಿನ ಬಗ್ಗೆ ಕೇಳಿದಾಗ, ಆ ಮಗು ಅಸ್ವಸ್ಥವಾಗಿದ್ದು, ಕಾರವಾರದಲ್ಲಿ ಸಂಬಂಧಿಕರೊಂದಿಗೆ ಚಿಕಿತ್ಸೆ ಪಡೆಯುತ್ತಿದೆ ಎಂದು ಕುಟುಂಬ ಪೊಲೀಸರಿಗೆ ಮಾಹಿತಿ ನೀಡಿದೆ ಎಂದು ಅವರು ಹೇಳಿದರು.</p>
]]></content:encoded>
					
		
		
			</item>
		<item>
		<title>ಫಿಫಾ ವಿಶ್ವಕಪ್ ಫೈನಲ್ ನ ದುಬಾರಿ ಟಿಕೆಟ್ಸ್ ರೇಟ್‌ ಎಷ್ಟು ಗೊತ್ತ</title>
		<link>https://peepalmedia.com/do-you-know-the-price-of-the-expensive-tickets-for-the-fifa-world-cup-final/</link>
		
		<dc:creator><![CDATA[ರಮೇಶ್‌ ಹಾಸನ್‌]]></dc:creator>
		<pubDate>Sat, 18 Jul 2026 14:45:40 +0000</pubDate>
				<category><![CDATA[ಕ್ರೀಡೆ]]></category>
		<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[ಮೀಡಿಯಾ]]></category>
		<category><![CDATA[karnataka]]></category>
		<category><![CDATA[news]]></category>
		<guid isPermaLink="false">https://peepalmedia.com/?p=81840</guid>

					<description><![CDATA[ಅಮೆರಿಕ : ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆಯಲಿರುವ ಅರ್ಜೆಂಟೀನಾ (Argentina) ಹಾಗೂ ಸ್ಪೇನ್ (Spain) ನಡುವಿನ 2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯ (FIFA 2026) ಕ್ರೀಡಾ ಇತಿಹಾಸದಲ್ಲೇ ಅತ್ಯಂತ ದುಬಾರಿ ಕದನವಾಗಿ ದಾಖಲೆ ಬರೆದಿದೆ. ಫುಟ್‌ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಅವರ ವೃತ್ತಿಜೀವನದ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗುವ ಸಾಧ್ಯತೆ ಮತ್ತು ಸ್ಪೇನ್‌ನ ಉದಯೋನ್ಮುಖ ತಾರೆ ಲಾಮಿನ್ ಯಮಾಲ್ ಅವರ ನಡುವಿನ ರಣರೋಚಕ ಆಟಕ್ಕೆ ಸಾಕ್ಷಿಯಾಗಲು ಜಗತ್ತಿನಾದ್ಯಂತ ಅಭಿಮಾನಿಗಳು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪಂದ್ಯ ವೀಕ್ಷಿಸಲು [&#8230;]]]></description>
										<content:encoded><![CDATA[
<p class="wp-block-paragraph"><strong>ಅಮೆರಿಕ : </strong>ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆಯಲಿರುವ ಅರ್ಜೆಂಟೀನಾ (Argentina) ಹಾಗೂ ಸ್ಪೇನ್ (Spain) ನಡುವಿನ 2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯ (FIFA 2026) ಕ್ರೀಡಾ ಇತಿಹಾಸದಲ್ಲೇ ಅತ್ಯಂತ ದುಬಾರಿ ಕದನವಾಗಿ ದಾಖಲೆ ಬರೆದಿದೆ. ಫುಟ್‌ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಅವರ ವೃತ್ತಿಜೀವನದ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗುವ ಸಾಧ್ಯತೆ ಮತ್ತು ಸ್ಪೇನ್‌ನ ಉದಯೋನ್ಮುಖ ತಾರೆ ಲಾಮಿನ್ ಯಮಾಲ್ ಅವರ ನಡುವಿನ ರಣರೋಚಕ ಆಟಕ್ಕೆ ಸಾಕ್ಷಿಯಾಗಲು ಜಗತ್ತಿನಾದ್ಯಂತ ಅಭಿಮಾನಿಗಳು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪಂದ್ಯ ವೀಕ್ಷಿಸಲು ಸಿದ್ಧರಾಗಿದ್ದಾರೆ.</p>



<p class="wp-block-paragraph">ಈ ಮಹಾಸಮರದ ಟಿಕೆಟ್‌ಗಳ ದರಗಳು ಹುಬ್ಬೇರಿಸುವಂತಿದೆ. ಆರಂಭಿಕ ಹಂತದ ಅಧಿಕೃತ ಟಿಕೆಟ್‌ಗಳು 1.95 ಲಕ್ಷದಿಂದ 6.3 ಲಕ್ಷ ರೂಪಾಯಿ ವರೆಗೆ ಲಭ್ಯವಿದ್ದವು. ಕ್ರೀಡಾಂಗಣದ ಅತ್ಯಂತ ಮೇಲಿನ ಸ್ಟ್ಯಾಂಡ್‌ನ (೩೦೦ ಲೆವೆಲ್) ಒಂದು ಸೀಟಿನ ಬೆಲೆ ಕನಿಷ್ಠ 5.8 ಲಕ್ಷದಿಂದ 6.3 ಲಕ್ಷ ರೂಪಾಯಿ ವರೆಗೆ ಮಾರಾಟವಾಗಿದೆ. ಕ್ರೀಡಾಂಗಣದ ಸ್ಟ್ಯಾಂಡರ್ಡ್ ಟಾಪ್-ಟೈರ್ ಬೆಲೆ 10.58 ಲಕ್ಷ ರೂಪಾಯಿ ಆಗಿದೆ. ಈ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ಖರೀದಿಸಿರುವ ಸರಾಸರಿ ಟಿಕೆಟ್ ದರವೇ ಬರೋಬ್ಬರಿ 9.4 ಲಕ್ಷದಿಂದ 10.90 ಲಕ್ಷ ರೂಪಾಯಿ ಆಗಿದೆ, ಇದು ವಿಶ್ವಕಪ್ ಇತಿಹಾಸದಲ್ಲೇ ಗರಿಷ್ಠ ಸರಾಸರಿಯಾಗಿದೆ.</p>



<p class="wp-block-paragraph">ಇನ್ನು ಮೈದಾನಕ್ಕೆ ಅತ್ಯಂತ ಹತ್ತಿರವಿರುವ ಫ್ರಂಟ್ ಸೆಕ್ಷನ್‌ನ (115A) ಒಂದು ಪ್ರೀಮಿಯಂ ವಿಐಪಿ ಟಿಕೆಟ್ 23.7 ಲಕ್ಷ ರೂಪಾಯಿಗೆ ಮಾರಾಟವಾಗಿದ್ದು, ಕೆಲವು ವಿಐಪಿ ಟ್ರೋಫಿ ಲಾಂಜ್ ಪ್ಯಾಕೇಜ್‌ಗಳ ಬೆಲೆ 30 ಲಕ್ಷದ ಗಡಿ ದಾಟಿದೆ. ಇನ್ನು 12 ಜನರಿಗಾಗಿ ಇರುವ ಖಾಸಗಿ ಬಾಕ್ಸ್ ಒಳಗೊಂಡ ಆನ್-ಫೀಲ್ಡ್ ಹಾಸ್ಪಿಟಾಲಿಟಿ ಪ್ಯಾಕೇಜ್ ದರ ಬರೋಬ್ಬರಿ 9.62 ಕೋಟಿ ರೂಪಾಯಿಗೂ ಅಧಿಕವಾಗಿದೆ.<br>ಎಲ್ಲಕ್ಕಿಂತ ಆಶ್ಚರ್ಯಕರವಾಗಿ, ಮರುಮಾರಾಟ (ರಿಸೇಲ್) ಮಾರುಕಟ್ಟೆಯಲ್ಲಿ ಗರಿಷ್ಠ ಮರುಮಾರಾಟ ದರವು ಬರೋಬ್ಬರಿ 22.5 ಕೋಟಿ ರೂಪಾಯಿಗಳನ್ನು ತಲುಪಿದೆ. ಕ್ರೀಡಾಂಗಣದ ಕೆಳಭಾಗದ ಲೋವರ್ ಡೆಕ್‌ನ ಬ್ಲಾಕ್ 124, ರೋ 45 ರಲ್ಲಿರುವ ನಾಲ್ಕು ಪ್ರೀಮಿಯಂ ಟಿಕೆಟ್‌ಗಳನ್ನು ತಲಾ 21.68 ಕೋಟಿಯಿಂದ 22.14 ಕೋಟಿ ರೂಪಾಯಿ ಬೆಲೆಗೆ ಲಿಸ್ಟ್ ಮಾಡಲಾಗಿದೆ. ಮೂಲತಃ ಕೇವಲ 5.36 ಲಕ್ಷದಿಂದ 10.18 ಲಕ್ಷ ರೂಪಾಯಿ ಬೆಲೆಯ ಈ ನಾಲ್ಕು ಟಿಕೆಟ್‌ಗಳನ್ನು ಒಟ್ಟಾರೆಯಾಗಿ ಬರೋಬ್ಬರಿ 88 ಕೋಟಿ ರೂಪಾಯಿಗೆ ಮರುಮಾರಾಟಕ್ಕಿಡಲಾಗಿದೆ.</p>



<p class="wp-block-paragraph">ಅರ್ಜೆಂಟೀನಾ ಸತತ ಎರಡನೇ ಬಾರಿಗೆ ಟ್ರೋಫಿ ಗೆಲ್ಲಲು ಸಜ್ಜಾಗಿದ್ದರೆ, ಸ್ಪೇನ್ 16 ವರ್ಷಗಳ ನಂತರ ಚಾಂಪಿಯನ್ ಪಟ್ಟಕ್ಕೇರಲು ಕಾಯುತ್ತಿದೆ. ಫಿಫಾದ ಆಧುನಿಕ ತಂತ್ರಜ್ಞಾನ ಆಧಾರಿತ ದರ ನಿಗದಿ ವ್ಯವಸ್ಥೆ ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದ್ದು, ಭಾರತೀಯ ಕಾಲಮಾನದ ಪ್ರಕಾರ ಜುಲೈ ೨೦ರ ಮಧ್ಯರಾತ್ರಿ 12.30ಕ್ಕೆ ಈ ಐತಿಹಾಸಿಕ ಪಂದ್ಯ ಆರಂಭವಾಗಲಿದೆ.</p>
]]></content:encoded>
					
		
		
			</item>
		<item>
		<title>ದೇವೇಗೌಡ ಪತ್ಮಿ ಚೆನ್ನಮ್ಮ ನಿಧನಕ್ಕೆ ಗಣ್ಯರ ಜೊತೆಗೆ ರಾಜಕೀಯ ನಾಯಕರಿಂದ ಸಂತಾಪ</title>
		<link>https://peepalmedia.com/political-leaders-and-dignitaries-mourn-the-passing-of-deve-gowda-patmi-chennamma/</link>
		
		<dc:creator><![CDATA[ರಮೇಶ್‌ ಹಾಸನ್‌]]></dc:creator>
		<pubDate>Sat, 18 Jul 2026 14:33:03 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[karnataka]]></category>
		<category><![CDATA[news]]></category>
		<guid isPermaLink="false">https://peepalmedia.com/?p=81837</guid>

					<description><![CDATA[ಬೆಂಗಳೂರು : ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಬೆಂಗಳೂರಿಮ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ದೇವೇಗೌಡ (Chennamma Deve Gowda)&#160; ಅವರು ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಇದೀಗ ಚೆನ್ನಮ್ಮ ಅವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದು, ಸಿಎಂ ಡಿಕೆ ಶಿವಕುಮಾರ್‌ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕರು ಕಂಬಿನಿ ಮಿಡಿದಿದ್ದಾರೆ. ಅನೇಕ ರಾಜಕೀಯ ನಾಯಕರು ಈ ವಿಚಾರವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದು, ಚೆನ್ನಮ್ಮ ನಿಧನಕ್ಕೆ [&#8230;]]]></description>
										<content:encoded><![CDATA[
<p class="wp-block-paragraph"><strong>ಬೆಂಗಳೂರು : </strong>ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಬೆಂಗಳೂರಿಮ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ದೇವೇಗೌಡ (Chennamma Deve Gowda)&nbsp; ಅವರು ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಇದೀಗ ಚೆನ್ನಮ್ಮ ಅವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದು, ಸಿಎಂ ಡಿಕೆ ಶಿವಕುಮಾರ್‌ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕರು ಕಂಬಿನಿ ಮಿಡಿದಿದ್ದಾರೆ.</p>



<p class="wp-block-paragraph">ಅನೇಕ ರಾಜಕೀಯ ನಾಯಕರು ಈ ವಿಚಾರವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದು, ಚೆನ್ನಮ್ಮ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಸಹ ಚೆನ್ನಮ್ಮ ನಿಧನಕ್ಕೆ ಸಂತಾಪ ಸೂಚಿಸಿದ್ದು, ಕುಟುಂಬದವರಿಗೆ ಸಾಂತ್ವಾನ ಹೇಳಿದ್ದಾರೆ.</p>



<p class="wp-block-paragraph"><strong>ಚೆನ್ನಮ್ಮ ಒಬ್ಬ ಒಬ್ಬ ಆದರ್ಶ ಗೃಹಿಣಿ: ಸಿದ್ದರಾಮಯ್ಯ<br></strong>ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮನವರ ನಿಧನದಿಂದ ದುಃಖಿತನಾಗಿದ್ದೇನೆ. ಜನತಾ ಪರಿವಾರದಲ್ಲಿದ್ದ ನಾನು ದೇವೇಗೌಡರ ಕುಟುಂಬದೊಂದಿಗೆ ನಿಕಟವಾದ ಒಡನಾಟ ಇಟ್ಟುಕೊಂಡವನಾಗಿ ಚೆನ್ನಮ್ಮನವರನ್ನು‌ ಸಮೀಪದಿಂದ ಬಲ್ಲವನು. ಚೆನ್ನಮ್ಮನವರು ತಮ್ಮ ಜೀವನದಲ್ಲಿ ಎದುರಾದ ಕಷ್ಟ – ನೋವುಗಳಿಂದ ಕುಗ್ಗದೆ, ಎಲ್ಲವನ್ನೂ ಧೈರ್ಯದಿಂದ ಎದುರಿಸಿದ್ದ ಗಟ್ಟಿಗಿತ್ತಿ. ದೇವೇಗೌಡರ ರಾಜಕೀಯ ಜೀವನದ ಏಳುಬೀಳಿನ ನಡುವೆ ದೊಡ್ಡ ಕುಟುಂಬವನ್ನು ಪೊರೆಯುತ್ತಾ ಬಂದ ಅವರು ಒಬ್ಬ ಆದರ್ಶ ಗೃಹಿಣಿಯಾಗಿದ್ದರು. ಮಾಜಿ ಪ್ರಧಾನಿಗಳ ಮಡದಿಯಾಗಿದ್ದರೂ ಯಾವ ಹಮ್ಮು ಬಿಮ್ಮು ಇಲ್ಲದೆ ಎಲ್ಲರನ್ನೂ ಅಕ್ಕರೆಯಿಂದ ಕಾಣುತ್ತಿದ್ದ ಚೆನ್ನಮ್ಮನವರು, ಮಾದರಿ ಸತಿಯಾಗಿ ತುಂಬು ಜೀವನ ಸಾಗಿಸಿದವರು. ದೀರ್ಘಕಾಲದ ಸಂಗಾತಿಯನ್ನು ಈ ಇಳಿವಯಸ್ಸಿನಲ್ಲಿ ಕಳೆದುಕೊಂಡ ದೇವೇಗೌಡರಿಗೆ ದು:ಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ. ಗೌಡರ ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳು. ಅವರ ನೋವಿನಲ್ಲಿ ನಾನೂ ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ.</p>



<p class="wp-block-paragraph"><strong>ನೆನಪು ನಮ್ಮೆಲ್ಲರಲ್ಲಿ ಸದಾ ಚಿರಸ್ಮರಣೀಯವಾಗಿರಲಿದೆ: ವಿ ಸೋಮಣ್ಣ<br></strong>ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ ದೇವೇಗೌಡ ಅವರ ಧರ್ಮಪತ್ನಿ ಹಾಗೂ ಅತ್ಯಂತ ಸರಳ-ಸಜ್ಜನಿಕೆಯ ಮನೋಭಾವದವರಾಗಿದ್ದ ಶ್ರೀಮತಿ ಚೆನ್ನಮ್ಮ ಅವರು ದೈವಾಧೀನರಾದ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ಅಘಾತವಾಗಿದೆ. ಶ್ರೀ ಹೆಚ್.ಡಿ ದೇವೇಗೌಡ ಅವರ ಯಶಸ್ವಿ ರಾಜಕಾರಣದಲ್ಲಿ ಶ್ರೀಯುತರ ಪಾತ್ರವೂ ಅಪೂರ್ವವಾಗಿತ್ತು. ನಮ್ಮ ಮಾರ್ಗದರ್ಶಕರಾದ ದೇವೇಗೌಡರೊಂದಿಗೆ ಮನೆಗೆ ತೆರಳಿದಾಗಲೆಲ್ಲ ಅವರು ನೀಡಿದ್ದ ಆತಿಥ್ಯ ಸದಾ ನಮ್ಮ ತಾಯಿಯವರನ್ನು ನೆನಪಿಸಿದಂತಾಗುತ್ತಿತ್ತು. ಅವರ ನೆನಪು ನಮ್ಮೆಲ್ಲರಲ್ಲಿ ಸದಾ ಚಿರಸ್ಮರಣೀಯವಾಗಿರಲಿದೆ. ಶ್ರೀ ದೇವೇಗೌಡರು ಹಾಗೂ ಅವರ ಕುಟುಂಬಕ್ಕೆ ಹಾಗೂ ಅಪಾರ ಬಂಧುಗಳು, ಅಭಿಮಾನಿಗಳಿಗೆ ಆ ಭಗವಂತ ಈ ತೀವ್ರ ದುಃಖದ ಸಂದರ್ಭದಲ್ಲಿ ಹೆಚ್ಚಿನ ಶಕ್ತಿಯನ್ನು ನೀಡಲಿ. ಶ್ರೀಯುತರ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.</p>



<p class="wp-block-paragraph"><strong>ಆತ್ಮಕ್ಕೆ ಚಿರಶಾಂತಿ ನೀಡಲಿ: ಲಕ್ಷ್ಮಿ ಹೆಬ್ಬಾಳ್ಕರ್<br></strong>ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ನೋವಾಯಿತು. ಅವರ ಸರಳತೆ, ಸಹನೆ ಹಾಗೂ ತಮ್ಮ ಕುಟುಂಬಕ್ಕೆ ನೀಡಿದ ಅಚಲ ಬೆಂಬಲ ಸದಾ ಸ್ಮರಣೀಯವಾದದ್ದು. ​ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ದೇವೇಗೌಡರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ಈ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.</p>



<p class="wp-block-paragraph"><strong>ಎಲೆಮರೆ ಕಾಯಿಯಂತೆ ಇದ್ದವರು: ಬಿವೈ ವಿಜಯೇಂದ್ರ<br></strong>ಮಾಜಿ ಪ್ರಧಾನಿ ಸನ್ಮಾನ್ಯ ಶ್ರೀ&nbsp;ಅವರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮನವರು ವಿಧಿವಶರಾಗಿರುವುದು ತೀವ್ರ ನೋವನ್ನುಂಟು ಮಾಡಿದೆ. ಆಸ್ಪತೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಾರೆ ಎನ್ನುತ್ತಿರುವಾಗಲೇ ಅವರು ನಮ್ಮೆಲ್ಲರನ್ನು ಅಗಲಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಜೀವನ ಸಂಗಾತಿಯಾಗಿ ಅವರ ಜೀವನದುದ್ದಕ್ಕೂ ಜತೆಗೆ ನಿಂತು ಅವರ ಏಳಿಗೆಗೆ ಎಲೆಮರೆ ಕಾಯಿಯಂತೆ ಇದ್ದವರು. 85 ವರ್ಷಗಳ ಸಾರ್ಥಕ ಬದುಕನ್ನು ನಡೆಸಿದ ಮಾತೃ ಸ್ವರೂಪಿ ಚೆನ್ನಮ್ಮನವರು ನಮ್ಮನೆಲ್ಲ ಅಗಲಿರುವುದು ತುಂಬಾ ನೋವಿನ ಸಂಗತಿ.. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಂಟುಂಬಕ್ಕೆ ಭಗವಂತ ದಯಪಾಲಿಸಲಿ ಎಂದು ಪ್ರಾಥಿಸುತ್ತೇನೆ.</p>



<p class="wp-block-paragraph"></p>
]]></content:encoded>
					
		
		
			</item>
		<item>
		<title>K R ಸರ್ಕಲ್​​ನಲ್ಲಿ ಭೀಕರ ಅಪಘಾತ, ಬಿಎಂಟಿಸಿಗೆ ಆಟೋ ಚಾಲಕ ಬಲಿ</title>
		<link>https://peepalmedia.com/auto-rickshaw-driver-killed-in-collision-with-bmtc-bus/</link>
		
		<dc:creator><![CDATA[ರಮೇಶ್‌ ಹಾಸನ್‌]]></dc:creator>
		<pubDate>Sat, 18 Jul 2026 14:09:09 +0000</pubDate>
				<category><![CDATA[ಅಪಘಾತ]]></category>
		<category><![CDATA[ಬೆಂಗಳೂರು]]></category>
		<category><![CDATA[karnataka]]></category>
		<category><![CDATA[news]]></category>
		<guid isPermaLink="false">https://peepalmedia.com/?p=81834</guid>

					<description><![CDATA[ಬೆಂಗಳೂರು : ಇತ್ತೀಚಿಗೆ ಶಕ್ತಿ ಕೇಂದ್ರ ವಿಧಾನಸೌಧ ಬಳಿ ಕೆಆರ್ ಸರ್ಕಲ್​​ನಲ್ಲಿ ಎರಡು ಬಿಎಂಟಿಸಿ ಬಸ್ ಗಳ ಮಧ್ಯ ಸಂಭವಿಸಿದ್ದ ಭೀಕರ ಅಪಘಾತ ಮಾಸುವ ಮುನ್ನವೇ ಶನಿವಾರ ಅದೇ ಸ್ಥಳದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, 60 ವರ್ಷದ ಆಟೋ ಚಾಲಕ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಕೆಆರ್ ಸರ್ಕಲ್ ಬಳಿ ಬಿಎಂಟಿಸಿ ಎಲೆಕ್ಟ್ರಿಕಲ್ ಬಸ್​ವೊಂದು ಮುಂದೆ ಹೋಗುತ್ತಿದ್ದ ಮತ್ತೊಂದು ಬಿಎಂಟಿಸಿ ಬಸ್​​ಗೆ ಗುದ್ದಿದ ಪರಿಣಾಮ ಚಾಲಕ ಸೇರಿದಂತೆ ಐದಾರು ಪ್ರಯಾಣಿಕರು ಗಾಯಗೊಂಡಿದ್ದರು. ಇದೀಗ [&#8230;]]]></description>
										<content:encoded><![CDATA[
<p class="wp-block-paragraph"><strong>ಬೆಂಗಳೂರು :</strong> ಇತ್ತೀಚಿಗೆ ಶಕ್ತಿ ಕೇಂದ್ರ ವಿಧಾನಸೌಧ ಬಳಿ ಕೆಆರ್ ಸರ್ಕಲ್​​ನಲ್ಲಿ ಎರಡು ಬಿಎಂಟಿಸಿ ಬಸ್ ಗಳ ಮಧ್ಯ ಸಂಭವಿಸಿದ್ದ ಭೀಕರ ಅಪಘಾತ ಮಾಸುವ ಮುನ್ನವೇ ಶನಿವಾರ ಅದೇ ಸ್ಥಳದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, 60 ವರ್ಷದ ಆಟೋ ಚಾಲಕ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>



<p class="wp-block-paragraph">ಕೆಲ ದಿನಗಳ ಹಿಂದೆ ಕೆಆರ್ ಸರ್ಕಲ್ ಬಳಿ ಬಿಎಂಟಿಸಿ ಎಲೆಕ್ಟ್ರಿಕಲ್ ಬಸ್​ವೊಂದು ಮುಂದೆ ಹೋಗುತ್ತಿದ್ದ ಮತ್ತೊಂದು ಬಿಎಂಟಿಸಿ ಬಸ್​​ಗೆ ಗುದ್ದಿದ ಪರಿಣಾಮ ಚಾಲಕ ಸೇರಿದಂತೆ ಐದಾರು ಪ್ರಯಾಣಿಕರು ಗಾಯಗೊಂಡಿದ್ದರು. ಇದೀಗ ಅದೇ ಸ್ಥಳದಲ್ಲಿ ಬಿಎಂಟಿಸಿ ಬಸ್​​ನಿಂದ ಮತ್ತೊಂದು ಅವಘಡ ಸಂಭವಿಸಿದೆ.</p>



<p class="wp-block-paragraph">ಇಂದು ಮಧ್ಯಾಹ್ನ ಕೆಆರ್ ಸರ್ಕಲ್​​ನಲ್ಲಿ ಎಲೆಕ್ಟ್ರಿಕ್ ಬಿಎಂಟಿಸಿ ಬಸ್, ಆಟೋಗೆ ಡಿಕ್ಕಿ ಹೊಡೆದಿದ್ದು, ಬೀಕರ ಅಪಘಾತದಲ್ಲಿ ಕೆ ಆರ್ ಪುರಂ ನಿವಾಸಿ ಕೃಷ್ಣಮೂರ್ತಿ ಎಂಬುವವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶೇಷಾದ್ರಿ ರಸ್ತೆಯಿಂದ ಕೆ.ಆರ್. ವೃತ್ತಕ್ಕೆ ಬರುತ್ತಿದ್ದ KA51 AJ6648 ನೋಂದಣಿ ಸಂಖ್ಯೆಯ ವಿದ್ಯುತ್ ಚಾಲಿತ ಬಸ್, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಆಟೋಗೆ ರಭಸದಿಂದ ಡಿಕ್ಕಿ ಹೊಡೆದು ಮುಂದಿದ್ದ ವಿದ್ಯುತ್ ಕಂಬಕ್ಕೆ ಗುದ್ದಿದೆ. ಈ ಸಂದರ್ಭ ಆಟೋದಲ್ಲಿ ಕುಳಿತಿದ್ದ ಚಾಲಕ ಕೃಷ್ಣಮೂರ್ತಿ (60) ಎಂಬುವರು ಗಂಭೀರ ಗಾಯಗೊಂಡಿದ್ದರು. ಸ್ಥಳೀಯರ ನೆರವಿನಿಂದ ಅವರನ್ನು ಸಮೀಪದ ಸೇಂಟ್ ಮಾರ್ಥಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುರೆಳೆದಿದ್ದಾರೆ. ಕೆ. ಆರ್. ಪುರ ನಿವಾಸಿಯಾಗಿರುವ ಕೃಷ್ಣಮೂರ್ತಿ ಅವರ ಬಗ್ಗೆ ಮನೆಯವರಿಗೆ ತಿಳಿಸಲಾಗಿದೆ. ಸದ್ಯ ಬಸ್ ಚಾಲಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.</p>



<p class="wp-block-paragraph">ಬ್ರೇಕ್ ಫೆಲ್ಯೂರ್​​ನಿಂದಾಗಿ ಅಪಘಾತ ಸಂಭವಿಸಿರುವುದಾಗಿ ಬಸ್ ಚಾಲಕ ಪ್ರಾಥಮಿಕ ವಿಚಾರಣೆಯಲ್ಲಿ ಹೇಳಿಕೆ ನೀಡಿದ್ದಾರೆ‌. ಈ ಬಗ್ಗೆ ಖಚಿತ ಪಡಿಸಿಕೊಳ್ಳಲು ಆರ್​​ಟಿಐ ಅಧಿಕಾರಿಗಳನ್ನು ಕರೆಯಿಸಿ ಪರಿಶೀಲಿಸಲಾಗುವುದು. ಸದ್ಯ ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆ‌ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p>
]]></content:encoded>
					
		
		
			</item>
		<item>
		<title>ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ</title>
		<link>https://peepalmedia.com/h-d-deve-gowdas-wife-chennamma-passes-away/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 18 Jul 2026 12:23:25 +0000</pubDate>
				<category><![CDATA[ನಿಧನ ಸುದ್ದಿ]]></category>
		<category><![CDATA[ಬ್ರೇಕಿಂಗ್ ಸುದ್ದಿ]]></category>
		<guid isPermaLink="false">https://peepalmedia.com/?p=81830</guid>

					<description><![CDATA[ಬೆಂಗಳೂರು: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರ ಪತ್ನಿ ಶ್ರೀಮತಿ ಚೆನ್ನಮ್ಮ ಅವರು ಶನಿವಾರ ನಿಧನರಾದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಕೊನೆಯುಸಿರೆಳೆದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಚೆನ್ನಮ್ಮ ಅವರು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಆರೋಗ್ಯದಲ್ಲಿ ಏರುಪೇರಾಗಿದ್ದ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ ತೀವ್ರ ಉಸಿರಾಟದ ತೊಂದರೆಯಿಂದ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ [&#8230;]]]></description>
										<content:encoded><![CDATA[
<p class="wp-block-paragraph">ಬೆಂಗಳೂರು: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರ ಪತ್ನಿ ಶ್ರೀಮತಿ ಚೆನ್ನಮ್ಮ ಅವರು ಶನಿವಾರ ನಿಧನರಾದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಕೊನೆಯುಸಿರೆಳೆದರು.</p>



<p class="wp-block-paragraph">ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಚೆನ್ನಮ್ಮ ಅವರು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಆರೋಗ್ಯದಲ್ಲಿ ಏರುಪೇರಾಗಿದ್ದ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ ತೀವ್ರ ಉಸಿರಾಟದ ತೊಂದರೆಯಿಂದ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದರು.</p>



<p class="wp-block-paragraph">ಚೆನ್ನಮ್ಮ ಅವರ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದ್ದಂತೆ ದೇವೇಗೌಡರ ಕುಟುಂಬದ ಸದಸ್ಯರೆಲ್ಲರೂ ಆಸ್ಪತ್ರೆಗೆ ಧಾವಿಸಿದ್ದರು. ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಸೇರಿದಂತೆ ಕುಟುಂಬದ ಸದಸ್ಯರು ಆಸ್ಪತ್ರೆಯಲ್ಲೇ ಉಪಸ್ಥಿತರಿದ್ದರು.</p>



<p class="wp-block-paragraph">ಪತ್ನಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಭಾವುಕರಾಗಿ ಕಂಬನಿ ಮಿಡಿದರು. ಹಲವು ದಶಕಗಳ ಕಾಲ ಜೀವನದ ಸುಖ-ದುಃಖಗಳಲ್ಲಿ ಜೊತೆಗಿದ್ದ ಸಂಗಾತಿಯನ್ನು ಕಳೆದುಕೊಂಡ ದುಃಖ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಕುಟುಂಬದ ಸದಸ್ಯರು ಮತ್ತು ಆತ್ಮೀಯರು ದೇವೇಗೌಡ ಅವರಿಗೆ ಸಾಂತ್ವನ ಹೇಳಿದರು.</p>



<p class="wp-block-paragraph">ರಾಜಕೀಯದಿಂದ ಸಂಪೂರ್ಣ ದೂರ ಉಳಿದಿದ್ದ ಚೆನ್ನಮ್ಮ ಅವರು ದೇವೇಗೌಡರ ಕುಟುಂಬದ ಬೆನ್ನೆಲುಬಾಗಿ ಗುರುತಿಸಿಕೊಂಡಿದ್ದರು. ಅಪ್ಪಟ ಗೃಹಿಣಿಯಾಗಿ ಪತಿ, ಮಕ್ಕಳ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವುದರ ಜೊತೆಗೆ ದೊಡ್ಡ ಕುಟುಂಬವನ್ನು ಒಗ್ಗೂಡಿಸಿಕೊಂಡು ಸಾಗಿದ ಮಾತೃಮೂರ್ತಿಯಾಗಿದ್ದರು.</p>



<p class="wp-block-paragraph">ಅವರಿಗೆ ಪುತ್ರರಾದ ಹೆಚ್.ಡಿ. ಬಾಲಕೃಷ್ಣ, ಹೆಚ್.ಡಿ. ರೇವಣ್ಣ, ಹೆಚ್.ಡಿ. ಕುಮಾರಸ್ವಾಮಿ, ಹೆಚ್.ಡಿ. ರಮೇಶ್ ಹಾಗೂ ಪುತ್ರಿಯರಾದ ಹೆಚ್.ಡಿ. ಅನಸೂಯಾ ಮತ್ತು ಹೆಚ್.ಡಿ. ಶೈಲಜಾ ಇದ್ದಾರೆ. ಸೊಸೆಯರಾದ ಭವಾನಿ ರೇವಣ್ಣ, ಅನಿತಾ ಕುಮಾರಸ್ವಾಮಿ, ರಾಧಿಕಾ ಕುಮಾರಸ್ವಾಮಿ, ಕವಿತಾ ಬಾಲಕೃಷ್ಣ ಹಾಗೂ ಸೌಮ್ಯ ರಮೇಶ್ ಸೇರಿದಂತೆ ಅಪಾರ ಬಂಧು-ಬಳಗವನ್ನು ಅವರು ಅಗಲಿದ್ದಾರೆ.</p>



<p class="wp-block-paragraph">ದೇವೇಗೌಡರ ಕುಟುಂಬದ ಮಾತೃಸ್ಥಾನದಲ್ಲಿದ್ದ ಚೆನ್ನಮ್ಮ ಅವರ ನಿಧನಕ್ಕೆ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಗಣ್ಯರು ಹಾಗೂ ಸಾರ್ವಜನಿಕರು ಸಂತಾಪ ಸೂಚಿಸಿದ್ದು, ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಎಸ್‌ಐಆರ್‌ ಗೊಂದಲ ನಿವಾರಿಸಿ ಎಂದು ಕೇಳಲು ಹೋದ ಜಾಗೃತ ಕರ್ನಾಟಕ ಕಾರ್ಯಕರ್ತರ ಬಂಧನ</title>
		<link>https://peepalmedia.com/arrest-of-jagruta-karnataka-activists-who-went-to-make-inquiries/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 18 Jul 2026 08:23:52 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[ರಾಜಕೀಯ]]></category>
		<category><![CDATA[ರಾಜ್ಯ]]></category>
		<guid isPermaLink="false">https://peepalmedia.com/?p=81825</guid>

					<description><![CDATA[ಎಸ್‌ಐಆರ್‌ ಪ್ರಕ್ರಿಯೆಯಿಂದ ರಾಜ್ಯದಲ್ಲಿ ಲಕ್ಷಾಂತರ ಮತದಾರರು ಮತ್ತು ಸಾವಿರಾರು ಬಿಎಲ್‌ಓಗಳು ಆತಂಕದಲ್ಲಿದ್ದು, ವಿಪರೀತ ಗೊಂದಲದ ಸ್ಥಿತಿ ಏರ್ಪಟ್ಟಿದೆ. ಇದರ ಬಗ್ಗೆ ಸತತವಾಗಿ ಮನವಿ ಕೊಟ್ಟರೂ ಪ್ರಯೋಜನವಾಗದ್ದರಿಂದ, ಜಾಗೃತ ಕರ್ನಾಟಕದ ಕಾರ್ಯಕರ್ತರು ಸ್ವಾತಂತ್ರ್ಯ ಹೋರಾಟಗಾರರ ಮುಖಗಳಿದ್ದ ಚಿತ್ರಗಳನ್ನು ಧರಿಸಿ, ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲು ತೆರಳಿದ್ದರು. ಈಗಾಗಲೇ ತಳಮಟ್ಟದಲ್ಲಿ ಏರ್ಪಟ್ಟಿರುವ ಗೊಂದಲಗಳಿಗೆ ಚುನಾವಣಾ ಆಯೋಗದ ವೆಬ್‌ಸೈಟಿನಲ್ಲಿ ಅಧಿಕೃತವಾಗಿ ಪರಿಹಾರಗಳೇನು ಎಂಬುದನ್ನು ಬರೆಯಿರಿ ಎಂದಷ್ಟೇ ಹೋರಾಟಗಾರರ ಒತ್ತಾಯವಾಗಿತ್ತು. ಆದರೆ, ಚುನಾವಣಾ ಆಯೋಗದ ಅಧಿಕಾರಿಗಳು ಪೊಲೀಸರಿಗೆ ಪತ್ರ ಬರೆದು, ಭಾರೀ ಬಿಗಿ [&#8230;]]]></description>
										<content:encoded><![CDATA[
<p class="wp-block-paragraph">ಎಸ್‌ಐಆರ್‌ ಪ್ರಕ್ರಿಯೆಯಿಂದ ರಾಜ್ಯದಲ್ಲಿ ಲಕ್ಷಾಂತರ ಮತದಾರರು ಮತ್ತು ಸಾವಿರಾರು ಬಿಎಲ್‌ಓಗಳು ಆತಂಕದಲ್ಲಿದ್ದು, ವಿಪರೀತ ಗೊಂದಲದ ಸ್ಥಿತಿ ಏರ್ಪಟ್ಟಿದೆ. ಇದರ ಬಗ್ಗೆ ಸತತವಾಗಿ ಮನವಿ ಕೊಟ್ಟರೂ ಪ್ರಯೋಜನವಾಗದ್ದರಿಂದ, ಜಾಗೃತ ಕರ್ನಾಟಕದ ಕಾರ್ಯಕರ್ತರು ಸ್ವಾತಂತ್ರ್ಯ ಹೋರಾಟಗಾರರ ಮುಖಗಳಿದ್ದ ಚಿತ್ರಗಳನ್ನು ಧರಿಸಿ, ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲು ತೆರಳಿದ್ದರು.</p>



<p class="wp-block-paragraph">ಈಗಾಗಲೇ ತಳಮಟ್ಟದಲ್ಲಿ ಏರ್ಪಟ್ಟಿರುವ ಗೊಂದಲಗಳಿಗೆ ಚುನಾವಣಾ ಆಯೋಗದ ವೆಬ್‌ಸೈಟಿನಲ್ಲಿ ಅಧಿಕೃತವಾಗಿ ಪರಿಹಾರಗಳೇನು ಎಂಬುದನ್ನು ಬರೆಯಿರಿ ಎಂದಷ್ಟೇ ಹೋರಾಟಗಾರರ ಒತ್ತಾಯವಾಗಿತ್ತು.</p>



<p class="wp-block-paragraph">ಆದರೆ, ಚುನಾವಣಾ ಆಯೋಗದ ಅಧಿಕಾರಿಗಳು ಪೊಲೀಸರಿಗೆ ಪತ್ರ ಬರೆದು, ಭಾರೀ ಬಿಗಿ ಭದ್ರತೆ ಏರ್ಪಡಿಸಿಕೊಂಡಿದ್ದಲ್ಲದೇ, ಒಳಗೆ ಹೋಗಲೇ ಬಿಡದೆ ಎಲ್ಲರನ್ನೂ ವಶಕ್ಕೆ ಪಡೆದರು. ಎರಡನೇ ಕಂತಿನಲ್ಲಿ ಇನ್ನಷ್ಟು ಜನ ಕಾರ್ಯಕರ್ತರೂ ಅಲ್ಲಿಗೆ ಬಂದು ಪ್ರತಿಭಟನೆ ಮಾಡಿದ್ದರಿಂದ ಅವರನ್ನೂ ಬಂಧಿಸಿದ್ದಾರೆ. ಎಲ್ಲರನ್ನೂ ಮೈಸೂರು ರಸ್ತೆಯ ಸಿಎಆರ್‌ ಕೇಂದ್ರಸ್ಥಾನದ ಮೈದಾನದಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.</p>
]]></content:encoded>
					
		
		
			</item>
		<item>
		<title>ಲವ್ ಜಿಹಾದ್ ಚಟುವಟಿಕೆಗೆ ಪ್ರಚೋದನೆ ಕೊಟ್ಟ ಆರೋಪ: ಅಮೀರ್ ಖಾನ್‌ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಜೀವ ಬೆದರಿಕೆ</title>
		<link>https://peepalmedia.com/aamir-khan-receives-death-threat-lawrence-bishnoi-gang-marriage/</link>
		
		<dc:creator><![CDATA[Peepal Media]]></dc:creator>
		<pubDate>Sat, 18 Jul 2026 08:05:00 +0000</pubDate>
				<category><![CDATA[ಅಪರಾಧ]]></category>
		<guid isPermaLink="false">https://peepalmedia.com/?p=81822</guid>

					<description><![CDATA[ದೆಹಲಿ: ಬಾಲಿವುಡ್ ನಟ ಅಮೀರ್ ಖಾನ್ ಅವರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿಗಳಿಂದ ಸಾಮಾಜಿಕ ಜಾಲತಾಣದ ಪೋಸ್ಟ್ ಹಾಗೂ ಆಡಿಯೋ ಕ್ಲಿಪ್ ಮೂಲಕ ಜೀವ ಬೆದರಿಕೆ ಬಂದಿದೆ ಎಂದು ವರದಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಪೋಸ್ಟ್‌ನಲ್ಲಿ ಆರ್ಜೂ ಬಿಷ್ಣೋಯ್ ಮತ್ತು ಟೈಸನ್ ಬಿಷ್ಣೋಯ್ ಎಂಬುವವರ ಹೆಸರುಗಳು ಉಲ್ಲೇಖವಾಗಿದ್ದು, ತಾವು ಜೈಲಿನಲ್ಲಿರುವ ದಗಾಕೋರ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸೇರಿದವರೆಂದು ಅವರು ಹೇಳಿಕೊಂಡಿದ್ದಾರೆ. ಅಲ್ಲದೆ, ಅಮೀರ್ ಖಾನ್ ಅವರು ‘ಲವ್ ಜಿಹಾದ್’ ಚಟುವಟಿಕೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು [&#8230;]]]></description>
										<content:encoded><![CDATA[
<p class="wp-block-paragraph">ದೆಹಲಿ: ಬಾಲಿವುಡ್ ನಟ ಅಮೀರ್ ಖಾನ್ ಅವರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿಗಳಿಂದ ಸಾಮಾಜಿಕ ಜಾಲತಾಣದ ಪೋಸ್ಟ್ ಹಾಗೂ ಆಡಿಯೋ ಕ್ಲಿಪ್ ಮೂಲಕ ಜೀವ ಬೆದರಿಕೆ ಬಂದಿದೆ ಎಂದು ವರದಿಯಾಗಿದೆ.</p>



<p class="wp-block-paragraph">ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಪೋಸ್ಟ್‌ನಲ್ಲಿ ಆರ್ಜೂ ಬಿಷ್ಣೋಯ್ ಮತ್ತು ಟೈಸನ್ ಬಿಷ್ಣೋಯ್ ಎಂಬುವವರ ಹೆಸರುಗಳು ಉಲ್ಲೇಖವಾಗಿದ್ದು, ತಾವು ಜೈಲಿನಲ್ಲಿರುವ ದಗಾಕೋರ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸೇರಿದವರೆಂದು ಅವರು ಹೇಳಿಕೊಂಡಿದ್ದಾರೆ. ಅಲ್ಲದೆ, ಅಮೀರ್ ಖಾನ್ ಅವರು ‘ಲವ್ ಜಿಹಾದ್’ ಚಟುವಟಿಕೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.</p>



<p class="wp-block-paragraph">ಈ ಸಾಮಾಜಿಕ ಜಾಲತಾಣದ ಖಾತೆ, ಪೋಸ್ಟ್ ಹಾಗೂ ಅದರಲ್ಲಿರುವ ಆಡಿಯೋ ರೆಕಾರ್ಡಿಂಗ್‌ನ ವಿಶ್ವಾಸಾರ್ಹತೆಯನ್ನು ಸ್ವತಂತ್ರವಾಗಿ ಇನ್ನು ದೃಢೀಕರಿಸಲಾಗಿಲ್ಲ. ಆದರೆ, ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಈ ವಿಷಯದ ಕುರಿತು ಮುಂಬೈ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.</p>



<p class="wp-block-paragraph">ಫೇಸ್‌ಬುಕ್ ಪೋಸ್ಟ್ ಮತ್ತು ವಾಯ್ಸ್ ನೋಟ್ ಮೂಲಕ ಈ ಬೆದರಿಕೆಯ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈವರೆಗೆ ಅಮೀರ್ ಖಾನ್ ಅವರಾಗಲಿ ಅಥವಾ ಅವರ ಪ್ರತಿನಿಧಿಗಳಾಗಲಿ ಯಾವುದೇ ಅಧಿಕೃತ ದೂರು ದಾಖಲಿಸಿಲ್ಲ. ದೂರು ಬಂದ ನಂತರ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಮೂಲಗಳು ಸೇರಿಸಿವೆ.</p>



<p class="wp-block-paragraph">ವೈರಲ್ ಆಗಿರುವ ಪೋಸ್ಟ್‌ನಲ್ಲಿ ಅಮೀರ್ ಖಾನ್ ಅವರು ಭಾರತೀಯ ಸಂಸ್ಕೃತಿ ಮತ್ತು ಸನಾತನ ಧರ್ಮದ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ತಾರಗಿರಿಯ ಹೆಸರಿನಲ್ಲಿ ಅಂತರ್ಧರ್ಮೀಯ ಸಂಬಂಧಗಳನ್ನು ಉತ್ತೇಜಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿಯೂ ಬೆದರಿಕೆ ಹಾಕಲಾಗಿದೆ.</p>



<p class="wp-block-paragraph">ಈ ಪೋಸ್ಟ್‌ನಲ್ಲಿ ನಟನ ಪ್ರಾಣಕ್ಕೆ ನೇರ ಬೆದರಿಕೆ ಒಡ್ಡುವ ಭಾಷೆಯನ್ನು ಬಳಸಲಾಗಿದೆಯಾದರೂ, ಇದರ ಹಿಂದೆ ಇರುವವರು ನಿಜವಾಗಿಯೂ ಬಿಷ್ಣೋಯ್ ಗ್ಯಾಂಗ್‌ಗೆ ಸೇರಿದವರೇ ಎಂಬುದನ್ನು ತನಿಖಾಧಿಕಾರಿಗಳು ಇನ್ನು ಖಚಿತಪಡಿಸಿಲ್ಲ.</p>



<p class="wp-block-paragraph">ಜುಲೈ 5 ರಂದು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ಗೌರಿ ಸ್ಕ್ರಾಟ್ ಅವರೊಂದಿಗೆ ಅಮೀರ್ ಖಾನ್ ಆಪ್ತರ ಸಮ್ಮುಖದಲ್ಲಿ ನೋಂದಾಯಿತ ವಿವಾಹವಾದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.</p>



<p class="wp-block-paragraph">ಈ ವಿವಾಹದ ವಿರುದ್ಧ ಈ ಹಿಂದೆಯೂ ಕೆಲವು ಸಂಘಟನೆಗಳಿಂದ ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಬಿಹಾರದ ಫೋರ್ಬ್ಸ್‌ಗಂಜ್‌ನಲ್ಲಿ ಬಜರಂಗದಳದ ಕಾರ್ಯಕರ್ತರು ಅಮೀರ್ ಖಾನ್ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದರು ಮತ್ತು ಅವರ ವಿರುದ್ಧ ‘ಲವ್ ಜಿಹಾದ್’ ಆರೋಪ ಮಾಡಿದ್ದರು.</p>



<p class="wp-block-paragraph">ಮಹಾರಾಷ್ಟ್ರದ ಸಚಿವ ನಿತೇಶ್ ರಾಣೆ ಅವರೂ ನಟನ ಮೂರನೇ ಮದುವೆಯನ್ನು ಪ್ರಶ್ನಿಸಿ, ಇದೇ ರೀತಿಯ ಆರೋಪಗಳೊಂದಿಗೆ ಲಿಂಕ್ ಮಾಡಿದ್ದರು. ಮತ್ತೊಂದೆಡೆ, ಮುಸ್ಲಿಂ ಧರ್ಮಗುರುವೊಬ್ಬರು ಈ ಅಂತರ್ಧರ್ಮೀಯ ವಿವಾಹವನ್ನು ಆಕ್ಷೇಪಿಸಿದ್ದು, ಇದು ಇಸ್ಲಾಮಿಕ್ ಕಾನೂನಿನ ಪ್ರಕಾರ ಅನುಮತಿಸಲಾಗದು ಎಂದು ಹೇಳಿದ್ದರು.</p>



<p class="wp-block-paragraph">ಆದರೆ, ಅಮೀರ್ ಖಾನ್ ತಮ್ಮ ವಿವಾಹಗಳ ಸುತ್ತಲಿನ ಈ ಎಲ್ಲಾ ಆರೋಪಗಳನ್ನು ತಿರಸ್ಕರಿಸಿದ್ದಾರೆ. ತಮ್ಮ ವಿವಾಹಗಳು ನಾಗರಿಕ ಕಾನೂನಿನ ಅಡಿಯಲ್ಲಾಗಿದ್ದು (ಸಿವಿಲ್ ಯೂನಿಯನ್), ಗೌರಿ ಸ್ಕ್ರಾಟ್ ಆಗಲಿ ಅಥವಾ ತಮ್ಮ ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಅವರಾಗಲಿ ಯಾರೂ ತಮ್ಮ ಧರ್ಮವನ್ನು ಬದಲಾಯಿಸಿಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆ: ಖಾಸಗಿ ನಿರ್ಮಿತ &#8216;ವಿಕ್ರಮ್-1&#8217; ಯಶಸ್ವಿ ಕಕ್ಷೀಯ ಉಡಾವಣೆ</title>
		<link>https://peepalmedia.com/historic-achievement-in-indias-space-sector/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 18 Jul 2026 07:58:37 +0000</pubDate>
				<category><![CDATA[ದೇಶ]]></category>
		<guid isPermaLink="false">https://peepalmedia.com/?p=81816</guid>

					<description><![CDATA[ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಅಧ್ಯಾಯ ಸೇರ್ಪಡೆಯಾಗಿದೆ. ಭಾರತದ ಮೊದಲ ಖಾಸಗಿ ನಿರ್ಮಿತ ಕಕ್ಷೀಯ ರಾಕೆಟ್ &#8216;ವಿಕ್ರಮ್-1&#8217; (ಟೆಸ್ಟ್ ಫ್ಲೈಟ್–1) ತನ್ನ ಅಂತಿಮ ಹಂತದ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಉಪಗ್ರಹಗಳನ್ನು ಸುಮಾರು 450 ಕಿಲೋಮೀಟರ್ ಎತ್ತರದ ಕೆಳಮಟ್ಟದ ಭೂಕಕ್ಷೆ (Low Earth Orbit – LEO)ಗೆ ಯಶಸ್ವಿಯಾಗಿ ತಲುಪಿಸಿದೆ. ಈ ಸಾಧನೆಯೊಂದಿಗೆ, ಖಾಸಗಿ ಸಂಸ್ಥೆಯ ಮೂಲಕ ಕಕ್ಷೀಯ ಉಡಾವಣಾ ಸಾಮರ್ಥ್ಯವನ್ನು ಪ್ರದರ್ಶಿಸಿದ ವಿಶ್ವದ ಮೂರನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇದು ಭಾರತದ ಬಾಹ್ಯಾಕಾಶ [&#8230;]]]></description>
										<content:encoded><![CDATA[
<p class="wp-block-paragraph">ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಅಧ್ಯಾಯ ಸೇರ್ಪಡೆಯಾಗಿದೆ. ಭಾರತದ ಮೊದಲ ಖಾಸಗಿ ನಿರ್ಮಿತ ಕಕ್ಷೀಯ ರಾಕೆಟ್ &#8216;ವಿಕ್ರಮ್-1&#8217; (ಟೆಸ್ಟ್ ಫ್ಲೈಟ್–1) ತನ್ನ ಅಂತಿಮ ಹಂತದ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಉಪಗ್ರಹಗಳನ್ನು ಸುಮಾರು <strong>450 ಕಿಲೋಮೀಟರ್ ಎತ್ತರದ ಕೆಳಮಟ್ಟದ ಭೂಕಕ್ಷೆ (Low Earth Orbit – LEO)</strong>ಗೆ ಯಶಸ್ವಿಯಾಗಿ ತಲುಪಿಸಿದೆ.</p>



<p class="wp-block-paragraph">ಈ ಸಾಧನೆಯೊಂದಿಗೆ, ಖಾಸಗಿ ಸಂಸ್ಥೆಯ ಮೂಲಕ ಕಕ್ಷೀಯ ಉಡಾವಣಾ ಸಾಮರ್ಥ್ಯವನ್ನು ಪ್ರದರ್ಶಿಸಿದ ವಿಶ್ವದ ಮೂರನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇದು ಭಾರತದ ಬಾಹ್ಯಾಕಾಶ ವಲಯದಲ್ಲಿ ಖಾಸಗಿ ಉದ್ಯಮಗಳ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಸಾಬೀತುಪಡಿಸಿದ ಮಹತ್ವದ ಮೈಲಿಗಲ್ಲಾಗಿದೆ.</p>



<p class="wp-block-paragraph"><strong>ಅಂತಿಮ ಹಂತದಲ್ಲೂ ಯಶಸ್ಸು</strong><br>ವಿಕ್ರಮ್-1 ರಾಕೆಟ್‌ನ ಕೊನೆಯ ಹಂತವಾದ ಆರ್ಬಿಟಲ್ ಅಡ್ಜಸ್ಟ್‌ಮೆಂಟ್ ಮಾಡ್ಯೂಲ್ (OAM) ಬಾಹ್ಯಾಕಾಶದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿತು. ಸಂಪೂರ್ಣವಾಗಿ 3D-ಪ್ರಿಂಟಿಂಗ್ ತಂತ್ರಜ್ಞಾನದಿಂದ ನಿರ್ಮಿಸಲಾದ ಲಿಕ್ವಿಡ್ ಎಂಜಿನ್ ಬಾಹ್ಯಾಕಾಶದಲ್ಲಿಯೇ ಸ್ವಯಂಚಾಲಿತವಾಗಿ ಸ್ಟಾರ್ಟ್, ಸ್ಟಾಪ್ ಹಾಗೂ ರೀಸ್ಟಾರ್ಟ್ ಆಗುವ ಸಾಮರ್ಥ್ಯವನ್ನು ಪ್ರದರ್ಶಿಸಿತು. ಅಂತಿಮ ಉರಿಯುವಿಕೆ (Final Burn) ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ, ಉಪಗ್ರಹಗಳನ್ನು ನಿಖರವಾಗಿ ನಿಗದಿತ ಕಕ್ಷೆಯಲ್ಲಿ ನಿಯೋಜಿಸಲಾಯಿತು.</p>



<p class="wp-block-paragraph"><strong>ವಿಕ್ರಮ್-1 ರ ಪ್ರಮುಖ ತಾಂತ್ರಿಕ ವೈಶಿಷ್ಟ್ಯಗಳು</strong></p>



<ul class="wp-block-list">
<li>* ಮೂರು ಘನ-ಇಂಧನ (Solid Fuel) ಹಂತಗಳು ಹಾಗೂ ಒಂದು ಲಿಕ್ವಿಡ್ ಆರ್ಬಿಟಲ್ ಅಡ್ಜಸ್ಟ್‌ಮೆಂಟ್ ಮಾಡ್ಯೂಲ್ ಹೊಂದಿರುವ ವಿನ್ಯಾಸ.<br>* ಸುಮಾರು 350 ಕೆಜಿ ತೂಕದ ಉಪಗ್ರಹಗಳನ್ನು ಕಕ್ಷೆಗೆ ಸಾಗಿಸುವ ಸಾಮರ್ಥ್ಯ.<br>* ಭೂಮಿಯಿಂದ ಸುಮಾರು 450 ಕಿಲೋಮೀಟರ್ ಎತ್ತರದ LEO ಕಕ್ಷೆಗೆ, 60 ಡಿಗ್ರಿ ಇನ್‌ಕ್ಲಿನೇಶನ್‌ನಲ್ಲಿ ಉಪಗ್ರಹಗಳನ್ನು ಯಶಸ್ವಿಯಾಗಿ ನಿಯೋಜಿಸುವ ಸಾಮರ್ಥ್ಯ.</li>
</ul>



<p class="wp-block-paragraph"><strong>ಸ್ಕೈರೂಟ್ ಹೇಳಿದ್ದೇನು?</strong></p>



<pre class="wp-block-code"><code>ಉಡಾವಣೆಯ ಬಳಿಕ ಸ್ಕೈರೂಟ್ ಏರೋಸ್ಪೇಸ್ ತನ್ನ ಅಧಿಕೃತ ಪ್ರಕಟಣೆಯಲ್ಲಿ,
"ವಿಕ್ರಮ್-1 ತನ್ನ ಅಂತಿಮ ಹಂತದ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಉಪಗ್ರಹಗಳನ್ನು ಸುಮಾರು 450 ಕಿಲೋಮೀಟರ್ ಕಕ್ಷೆಗೆ ಸೇರಿಸಿದೆ. ಖಾಸಗಿ ಬಾಹ್ಯಾಕಾಶ ಉಡಾವಣಾ ಸಾಮರ್ಥ್ಯ ಹೊಂದಿದ ವಿಶ್ವದ ಮೂರನೇ ದೇಶವಾಗಿ ಭಾರತ ಹೊರಹೊಮ್ಮಿದೆ."</code></pre>



<p class="wp-block-paragraph">ಎಂದು ಹೆಮ್ಮೆಯಿಂದ ತಿಳಿಸಿದೆ.</p>



<p class="wp-block-paragraph"><strong>ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಹೊಸ ದಿಕ್ಕು</strong><br>ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ಬೆಂಬಲದೊಂದಿಗೆ ನಡೆದಿರುವ ಈ ಯಶಸ್ವಿ ಉಡಾವಣೆಯು, ಭಾರತದ ಖಾಸಗಿ ಬಾಹ್ಯಾಕಾಶ ವಲಯಕ್ಕೆ ಹೊಸ ಚೈತನ್ಯ ತುಂಬಿದೆ. ವಾಣಿಜ್ಯ ಉಪಗ್ರಹ ಉಡಾವಣಾ ಕ್ಷೇತ್ರದಲ್ಲಿ ಭಾರತದ ಸ್ಪರ್ಧಾತ್ಮಕ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ಜೊತೆಗೆ, ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ದೇಶದ ಪ್ರಭಾವವನ್ನು ಹೆಚ್ಚಿಸುವ ಮಹತ್ವದ ಹೆಜ್ಜೆಯಾಗಿದೆ.</p>



<p class="wp-block-paragraph">ವಿಕ್ರಮ್-1ರ ಈ ಯಶಸ್ಸು, ಭವಿಷ್ಯದಲ್ಲಿ ಭಾರತವನ್ನು ಖಾಸಗಿ ಬಾಹ್ಯಾಕಾಶ ತಂತ್ರಜ್ಞಾನ ಮತ್ತು ವಾಣಿಜ್ಯ ಉಡಾವಣಾ ಸೇವೆಗಳ ಪ್ರಮುಖ ಜಾಗತಿಕ ಕೇಂದ್ರವನ್ನಾಗಿ ರೂಪಿಸುವತ್ತ ಮತ್ತೊಂದು ದೊಡ್ಡ ಹೆಜ್ಜೆಯಾಗಿದೆ.</p>
]]></content:encoded>
					
		
		
			</item>
		<item>
		<title>ಪರೀಕ್ಷಾ ವಿವಾದ ಮುಗಿದಿದೆ ಎಂದು ಸರ್ಕಾರ ಭಾವಿಸಿರಬಹುದು, ಆದರೆ ಬಿಜೆಪಿ ಮತದಾರರು ಅದನ್ನು ಇನ್ನೂ ಮರೆತಿಲ್ಲ: ಯಶವಂತ್ ದೇಶಮುಖ್</title>
		<link>https://peepalmedia.com/yashwant-deshmukh-cvoter-bjp-voters-neet-exam-row-accountability/</link>
		
		<dc:creator><![CDATA[Peepal Media]]></dc:creator>
		<pubDate>Sat, 18 Jul 2026 07:58:33 +0000</pubDate>
				<category><![CDATA[ದೆಹಲಿ]]></category>
		<guid isPermaLink="false">https://peepalmedia.com/?p=81815</guid>

					<description><![CDATA[ದೆಹಲಿ: ಸಿಯುಇಟಿ (CUET) ಮತ್ತು ನೀಟ್ (NEET) ಫಲಿತಾಂಶಗಳ ಪ್ರಕಟಣೆಯು ವಿದ್ಯಾರ್ಥಿಗಳು ಪ್ರವೇಶ ಪ್ರಕ್ರಿಯೆಗಳತ್ತ ಮುನ್ನಡೆಯಲು ಸಹಕರಿಸಿರಬಹುದು, ಆದರೆ ಪೇಪರ್ ಸೋರಿಕೆ ಮತ್ತು ಪರೀಕ್ಷಾ ವೈಫಲ್ಯಗಳು ಸೃಷ್ಟಿಸಿರುವ ರಾಜಕೀಯ ಆಕ್ರೋಶವೇನೂ ಮಾಸಿಹೋಗಿಲ್ಲ ಎಂದು ಸಿ-ವೋಟರ್ (CVoter) ಸಂಸ್ಥೆಯ ಸಂಸ್ಥಾಪಕ ಯಶವಂತ್ ದೇಶಮುಖ್ ಶನಿವಾರ ಹೇಳಿದ್ದಾರೆ. ಎಕ್ಸ್ (ಟ್ವಿಟರ್) ಪೋಸ್ಟ್‌ನಲ್ಲಿ ಈ ಕುರಿತು ಬರೆದಿರುವ ದೇಶಮುಖ್, ವಿವಾದಗಳಿಂದ ನೇರವಾಗಿ ತೊಂದರೆಗೊಳಗಾದ ವಿದ್ಯಾರ್ಥಿಗಳು ಸದ್ಯ ಕೌನ್ಸೆಲಿಂಗ್ ಮತ್ತು ಪ್ರವೇಶ ಪ್ರಕ್ರಿಯೆಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರಿಂದಾಗಿ ಸರ್ಕಾರವು ಈ ಸಮಸ್ಯೆ ಬಗೆಹರಿದಿದೆ ಎಂದು [&#8230;]]]></description>
										<content:encoded><![CDATA[
<p class="wp-block-paragraph">ದೆಹಲಿ: ಸಿಯುಇಟಿ (CUET) ಮತ್ತು ನೀಟ್ (NEET) ಫಲಿತಾಂಶಗಳ ಪ್ರಕಟಣೆಯು ವಿದ್ಯಾರ್ಥಿಗಳು ಪ್ರವೇಶ ಪ್ರಕ್ರಿಯೆಗಳತ್ತ ಮುನ್ನಡೆಯಲು ಸಹಕರಿಸಿರಬಹುದು, ಆದರೆ ಪೇಪರ್ ಸೋರಿಕೆ ಮತ್ತು ಪರೀಕ್ಷಾ ವೈಫಲ್ಯಗಳು ಸೃಷ್ಟಿಸಿರುವ ರಾಜಕೀಯ ಆಕ್ರೋಶವೇನೂ ಮಾಸಿಹೋಗಿಲ್ಲ ಎಂದು ಸಿ-ವೋಟರ್ (CVoter) ಸಂಸ್ಥೆಯ ಸಂಸ್ಥಾಪಕ ಯಶವಂತ್ ದೇಶಮುಖ್ ಶನಿವಾರ ಹೇಳಿದ್ದಾರೆ.</p>



<p class="wp-block-paragraph">ಎಕ್ಸ್ (ಟ್ವಿಟರ್) ಪೋಸ್ಟ್‌ನಲ್ಲಿ ಈ ಕುರಿತು ಬರೆದಿರುವ ದೇಶಮುಖ್, ವಿವಾದಗಳಿಂದ ನೇರವಾಗಿ ತೊಂದರೆಗೊಳಗಾದ ವಿದ್ಯಾರ್ಥಿಗಳು ಸದ್ಯ ಕೌನ್ಸೆಲಿಂಗ್ ಮತ್ತು ಪ್ರವೇಶ ಪ್ರಕ್ರಿಯೆಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರಿಂದಾಗಿ ಸರ್ಕಾರವು ಈ ಸಮಸ್ಯೆ ಬಗೆಹರಿದಿದೆ ಎಂದು ಭಾವಿಸಿರಬಹುದು ಎಂದಿದ್ದಾರೆ. ಆದರೆ, ಇದರ ರಾಜಕೀಯ ಪ್ರಭಾವ ಈಗ ವಿದ್ಯಾರ್ಥಿಗಳಿಗಿಂತ ಹೆಚ್ಚಾಗಿ ಅವರ ಪೋಷಕರು ಮತ್ತು ಸಂಬಂಧಿಕರ ಮೇಲಿದೆ, ಏಕೆಂದರೆ ಅವರು ಪರೀಕ್ಷಾ ವ್ಯವಸ್ಥೆಯ ಮೇಲೆ ತಮ್ಮ ಹಣ, ಸಮಯ ಮತ್ತು ನಂಬಿಕೆಯನ್ನು ಹೂಡಿಕೆ ಮಾಡಿದ್ದಾರೆನ್ನುವುದು ಅವರ ಅಂದಾಜಾಗಿದೆ.</p>



<p class="wp-block-paragraph">ಈ ಕುಟುಂಬಗಳ ಪೈಕಿ &#8220;ಬಹಳ ದೊಡ್ಡ ಬಹುಸಂಖ್ಯಾತರು&#8221; ಬಿಜೆಪಿಗೆ ಮತ ಹಾಕಿದವರಾಗಿದ್ದಾರೆ, ಹೀಗಾಗಿ ಹೊಣೆಗಾರಿಕೆಯ ಬೇಡಿಕೆಯು ಆಡಳಿತ ಪಕ್ಷದ ಸ್ವಂತ ಬೆಂಬಲಿತ ವರ್ಗದ ಒಳಗಿನಿಂದಲೇ ಕೇಳಿಬರುತ್ತಿರುವ ಕಳಕಳಿಯಾಗಿದೆ ಎಂದು ದೇಶಮುಖ್ ತಿಳಿಸಿದ್ದಾರೆ. &#8220;ಸರ್ಕಾರವು ಈ ನಿಟ್ಟಿನಲ್ಲಿ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕಾಗಿದೆ ಮತ್ತು ನ್ಯಾಯ ಸಿಕ್ಕಿರುವುದು ಸಾರ್ವಜನಿಕವಾಗಿ ಕಾಣಿಸಬೇಕಿದೆ,&#8221; ಎಂದು ಬರೆಯುವ ಮೂಲಕ ಈ ವಿಷಯ ಸಾರ್ವಜನಿಕ ವಲಯದಲ್ಲಿ ಇನ್ನೂ ಜೀವಂತವಾಗಿದೆ ಎಂದು ಅವರು ವಾದಿಸಿದ್ದಾರೆ.</p>



<p class="wp-block-paragraph"><strong>ಪ್ರವೇಶ ಪ್ರಕ್ರಿಯೆಯತ್ತ ಮುಖ ಮಾಡಿರುವ ವಿದ್ಯಾರ್ಥಿಗಳು</strong></p>



<p class="wp-block-paragraph">ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಜೂನ್ 23 ರಂದು ಸಿಯುಇಟಿ-ಯುಜಿ ಫಲಿತಾಂಶಗಳನ್ನು ಪ್ರಕಟಿಸಿದ್ದು, ಅಭ್ಯರ್ಥಿಗಳು ಕೇಂದ್ರ ಹಾಗೂ ಇತರ ವಿಶ್ವವಿದ್ಯಾಲಯಗಳಿಗೆ ಅರ್ಜಿ ಸಲ್ಲಿಸಲು ಆರಂಭಿಸಿದ್ದಾರೆ. ಇನ್ನು ನೀಟ್-ಯುಜಿ ಫಲಿತಾಂಶಗಳನ್ನು ಜೂನ್ 21 ರಂದು ನಡೆದ ಮರುಪರೀಕ್ಷೆಯ ನಂತರ ಜುಲೈ 16 ರಂದು ಪ್ರಕಟಿಸಲಾಗಿದೆ. </p>



<p class="wp-block-paragraph">ನೀಟ್-ಯುಜಿ 2026 ರಲ್ಲಿ 11.21 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಪೇಪರ್ ಸೋರಿಕೆ ವಿವಾದದ ನಂತರ ಮೊದಲ ಪರೀಕ್ಷೆಯನ್ನು ರದ್ದುಗೊಳಿಸಿ ಇಡೀ ಪ್ರಕ್ರಿಯೆ ಅಸ್ತವ್ಯಸ್ತಗೊಂಡಿತ್ತಾದರೂ, ಈಗ ರ‍್ಯಾಂಕ್ ಮತ್ತು ಅಂಕಗಳ ಪ್ರಕಟಣೆಯು ವೈದ್ಯಕೀಯ ಕೌನ್ಸೆಲಿಂಗ್ ಮತ್ತು ಕಾಲೇಜು ಪ್ರವೇಶಕ್ಕೆ ಹಾದಿ ಸುಗಮಗೊಳಿಸಿದೆ.</p>



<p class="wp-block-paragraph">ಅನಿಶ್ಚಿತತೆಯಿಂದ ಬಳಲಿದ್ದ ವಿದ್ಯಾರ್ಥಿಗಳು ಈಗ ಸಾರ್ವಜನಿಕ ಪ್ರತಿಭಟನೆಗಳನ್ನು ಮುಂದುವರಿಸುವ ಬದಲು ಸೀಟುಗಳನ್ನು ಪಡೆದುಕೊಳ್ಳುವತ್ತ ಗಮನ ಹರಿಸುತ್ತಿದ್ದಾರೆ ಎಂಬುದನ್ನು ದೇಶಮುಖ್ ಒಪ್ಪಿಕೊಂಡಿದ್ದಾರೆ. ಆದರೆ ಪ್ರತಿಭಟನೆಗಳಲ್ಲಿ ಅವರ ಉಪಸ್ಥಿತಿ ಕಡಿಮೆಯಾಗಿರುವುದನ್ನು, ಕುಟುಂಬಗಳು ಈ ವಿವಾದವನ್ನು ಸರ್ಕಾರ ನಿಭಾಯಿಸಿದ ರೀತಿಯನ್ನು ಒಪ್ಪಿಕೊಂಡಿವೆ ಎಂಬುದಕ್ಕೆ ಪುರಾವೆಯಾಗಿ ಪರಿಗಣಿಸಬಾರದು ಎಂದು ಅವರು ಎಚ್ಚರಿಸಿದ್ದಾರೆ. </p>



<p class="wp-block-paragraph">ಮರುಪರೀಕ್ಷೆ ಮತ್ತು ಫಲಿತಾಂಶಗಳ ಪ್ರಕಟಣೆಯು ಅಭ್ಯರ್ಥಿಗಳ ಮುಂದಿದ್ದ ತಕ್ಷಣದ ಶೈಕ್ಷಣಿಕ ಗಂಡಾಂತರವನ್ನು ನಿವಾರಿಸಿದೆಯೇ ಹೊರತು, ಪರೀಕ್ಷಾ ಭದ್ರತೆಯ ವೈಫಲ್ಯಕ್ಕೆ ಯಾರು ಜವಾಬ್ದಾರರು ಎಂಬ ರಾಜಕೀಯ ಪ್ರಶ್ನೆಯನ್ನು ಅದು ಸ್ವಯಂಚಾಲಿತವಾಗಿ ಇತ್ಯರ್ಥಪಡಿಸಿಲ್ಲ ಎಂಬುದು ಇಲ್ಲಿ ಗಮನಾರ್ಹ.</p>



<p class="wp-block-paragraph"><strong>ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದ ಸಮೀಕ್ಷೆ</strong></p>



<p class="wp-block-paragraph">ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಶೇಕಡಾ 70 ರಷ್ಟು ಜನರು ಬೆಂಬಲಿಸಿದ್ದಾರೆ ಎಂದು ಸಿ-ವೋಟರ್ ಸಮೀಕ್ಷೆಯನ್ನು ದೇಶಮುಖ್ ಉಲ್ಲೇಖಿಸಿದ್ದಾರೆ. ಸಾರ್ವಜನಿಕವಾಗಿ ವರದಿಯಾದ ಸಂಶೋಧನೆಗಳ ಪ್ರಕಾರ ಪ್ರಧಾನ್ ಅವರ ರಾಜೀನಾಮೆಗೆ ಶೇ 66.2 ರಷ್ಟು ಬೆಂಬಲ ವ್ಯಕ್ತವಾಗಿದೆ. ಇದೇ ಸಮೀಕ್ಷೆಯಲ್ಲಿ ಶೇ 70.2 ರಷ್ಟು ಜನರು ಶೈಕ್ಷಣಿಕ ಆಡಳಿತ ಹದಗೆಟ್ಟಿದೆ ಎಂದು ಅಭಿಪ್ರಾಯಪಟ್ಟಿದ್ದರೆ, ಶೇ 71.7 ರಷ್ಟು ಜನರು ಈ ವಿವಾದಗಳು ಬಾಧಿತ ವಿದ್ಯಾರ್ಥಿಗಳ ಮುಂದಿನ ಮತದಾನದ ಆಯ್ಕೆಯ ಮೇಲೆ ಪ್ರಭಾವ ಬೀರಬಹುದು ಎಂದು ಹೇಳಿದ್ದಾರೆ. ಇನ್ನು ಶೇ 60.6 ರಷ್ಟು ಜನರು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು (NTA) ವಿಸರ್ಜಿಸಬೇಕೆಂದು ಬಯಸಿದ್ದರೆ, ಶೇ 51.7 ರಷ್ಟು ಜನರು ವ್ಯವಸ್ಥೆಯ ನ್ಯಾಯಸಮ್ಮತತೆಯ ಮೇಲಿನ ನಂಬಿಕೆಯನ್ನು ಕಳೆದುಕೊಂಡಿರುವುದಾಗಿ ತಿಳಿಸಿದ್ದಾರೆ.</p>



<p class="wp-block-paragraph">ಈ ಆಕ್ರೋಶ ಕೇವಲ ಪರೀಕ್ಷೆ ಬರೆದ ಅಭ್ಯರ್ಥಿಗಳದ್ದಷ್ಟೇ ಅಲ್ಲ ಎಂದು ದೇಶ್ಮುಖ್ ವಾದಿಸಿದ್ದಾರೆ. ಸಚಿವರ ರಾಜೀನಾಮೆ ಕೋರುತ್ತಿರುವವರಲ್ಲಿ ಬಹುಪಾಲು ವಿದ್ಯಾರ್ಥಿಗಳ ಪೋಷಕರು ಮತ್ತು ಸಂಬಂಧಿಕರು ಸೇರಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ಈ ಹಿಂದೆ ಬಿಜೆಪಿಯನ್ನು ಬೆಂಬಲಿಸಿದ ಕುಟುಂಬಗಳಿಗೆ ಸೇರಿದವರಾಗಿದ್ದಾರೆ ಎಂಬುದು ಅವರ ಅಭಿಪ್ರಾಯವಾಗಿದೆ.</p>



<p class="wp-block-paragraph"><strong>ಹೊಣೆಗಾರಿಕೆಯ ಪ್ರಶ್ನೆ ಇನ್ನೂ ಬಾಕಿ ಇದೆ</strong></p>



<p class="wp-block-paragraph">ಸಂತ್ರಸ್ತಗೊಂಡಿದ್ದ ನೀಟ್ ಪರೀಕ್ಷೆಯ ರದ್ದತಿ, ಮರುಪರೀಕ್ಷೆ ನಡೆಸಿದ್ದು, ಫಲಿತಾಂಶಗಳ ಪ್ರಕಟಣೆ ಮತ್ತು ಸೋರಿಕೆಯ ತನಿಖೆಯನ್ನು ಸರ್ಕಾರ ತನ್ನ ಸರಿಪಡಿಸುವ ಕ್ರಮಗಳಾಗಿ ಎತ್ತಿ ತೋರಿಸಬಹುದು. ಆಡಳಿತಾತ್ಮಕ ದೃಷ್ಟಿಕೋನದಿಂದ ಈ ಕ್ರಮಗಳು ವಿದ್ಯಾರ್ಥಿಗಳು ಪ್ರವೇಶ ಪ್ರಕ್ರಿಯೆಯನ್ನು ಪುನರಾರಂಭಿಸಲು ಸಹಾಯ ಮಾಡಿವೆ. ಆದರೆ ದೇಶ್ಮುಖ್ ಅವರ ಎಚ್ಚರಿಕೆ ಬೇರೆ ವಿಷಯಕ್ಕೆ ಸಂಬಂಧಿಸಿದ್ದಾಗಿದೆ: ಉನ್ನತ ಮಟ್ಟದಲ್ಲಿ ಜವಾಬ್ದಾರಿಯನ್ನು ಸರಿಯಾಗಿ ನಿಗದಿಪಡಿಸಲಾಗಿದೆಯೇ ಎಂದು ಸಾರ್ವಜನಿಕರು ನಂಬುತ್ತಾರೆಯೇ ಎಂಬುದು ಇಲ್ಲಿ ಮುಖ್ಯವಾಗಿದೆ. ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ರಕ್ಷಿಸಲು ಮರುಪರೀಕ್ಷೆಯನ್ನು ಒಪ್ಪಿಕೊಳ್ಳಬಹುದು, ಆದರೆ ವ್ಯವಸ್ಥೆಯು ವಿಫಲಗೊಳ್ಳಲು ಕಾರಣರಾದವರು ಯಾವುದೇ ದೃಶ್ಯ ಪರಿಣಾಮಗಳನ್ನು ಎದುರಿಸಿಲ್ಲ ಎಂಬ ನಂಬಿಕೆಯನ್ನು ಅವರು ಮುಂದುವರಿಸಬಹುದು.</p>



<p class="wp-block-paragraph"><strong>ಪ್ರತಿಭಟನಾ ಸಂಘಟಕರನ್ನು ಮೀರಿದ ವಾಂಗ್ಚುಕ್ ಕಾಳಜಿ</strong></p>



<p class="wp-block-paragraph">ಸೋನಂ ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹದ ಕುರಿತಾದ ಸಾರ್ವಜನಿಕ ಕಳಕಳಿಯನ್ನು ಪ್ರತಿಭಟನೆಯಲ್ಲಿ ತೊಡಗಿರುವ ಕಾರ್ಯಕರ್ತರು ಮತ್ತು ಆನ್‌ಲೈನ್ ವ್ಯಕ್ತಿಗಳಿಂದ ಪ್ರತ್ಯೇಕಿಸಲು ದೇಶ್ಮುಖ್ ಯತ್ನಿಸಿದ್ದಾರೆ. ಯಾರ ಹೆಸರನ್ನೂ ಉಲ್ಲೇಖಿಸದೆ, ಅವರನ್ನು &#8220;ರೀಲ್ ಮಾಡುವ ಫುಡ್-ಬ್ಲಾಗಿಂಗ್ ಕಾರ್ಯಕರ್ತರು&#8221; ಎಂದು ತಳ್ಳಿಹಾಕಿದ ಅವರು, ಸಾಮಾನ್ಯ ಜನರು ವಾಂಗ್ಚುಕ್ ಅವರ ಸುರಕ್ಷತೆಯನ್ನು ಬಯಸುತ್ತಿದ್ದಾರೆ ಎಂಬುದು ಇಲ್ಲಿ ಹೆಚ್ಚು ಮುಖ್ಯವಾದ ವಿಷಯ ಎಂದಿದ್ದಾರೆ.</p>



<p class="wp-block-paragraph">ತಮ್ಮ ಉಪವಾಸ ಸತ್ಯಾಗ್ರಹದ 21ನೇ ದಿನವಾದ ಶನಿವಾರ ಮುಂಜಾನೆ ವಾಂಗ್ಚುಕ್ ಅವರನ್ನು ಜಂತರ್ ಮಂತರ್‌ನಿಂದ ಸಫ್ದರ್‌ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅವರ ಆರೋಗ್ಯ ಕ್ಷೀಣಿಸುತ್ತಿರುವುದರಿಂದ ವೈದ್ಯಕೀಯ ಸಲಹೆ ಮತ್ತು ದೆಹಲಿ ಹೈಕೋರ್ಟ್ ನಿರ್ದೇಶನಗಳ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. </p>



<p class="wp-block-paragraph">ಅವರ ಸ್ಥಿತಿ ಸ್ಥಿರವಾಗಿದ್ದು, ನಿರಂತರ ಮೇಲ್ವಿಚಾರಣೆಯ ಅಗತ್ಯವಿದೆ ಎಂದು ವರದಿಯಾಗಿದೆ. ಅವರ ಆಸ್ಪತ್ರೆ ದಾಖಲಾತಿ ಮತ್ತು ಪ್ರತಿಭಟನಾಕಾರರ ತೆರವು ಜಂತರ್ ಮಂತರ್‌ನಲ್ಲಿನ ತಕ್ಷಣದ ಸಂಘರ್ಷವನ್ನು ಕೊನೆಗೊಳಿಸಿರಬಹುದು, ಆದರೆ ಇವೆರಡೂ ಪರೀಕ್ಷಾ ವೈಫಲ್ಯಗಳ ಮೇಲಿನ ಸಾರ್ವಜನಿಕರ ಹೊಣೆಗಾರಿಕೆಯ ಬೇಡಿಕೆಯನ್ನು ಪರಿಹರಿಸುವುದಿಲ್ಲ ಎಂಬುದು ದೇಶ್ಮುಖ್ ಅವರ ವಾದವಾಗಿದೆ.</p>
]]></content:encoded>
					
		
		
			</item>
		<item>
		<title>ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ ಕಾಕ್ರೋಚ್ ಪಾರ್ಟಿ ಸ್ಥಾಪಕ ಅಭಿಜೀತ್ ದೀಪ್ಕೆ</title>
		<link>https://peepalmedia.com/abhijeet-dipke-hunger-strike-jantar-mantar-sonam-wangchuk-protest/</link>
		
		<dc:creator><![CDATA[Peepal Media]]></dc:creator>
		<pubDate>Sat, 18 Jul 2026 07:18:40 +0000</pubDate>
				<category><![CDATA[ದೆಹಲಿ]]></category>
		<guid isPermaLink="false">https://peepalmedia.com/?p=81812</guid>

					<description><![CDATA[ನವದೆಹಲಿ: ಕಾಕ್ರೋಚ್ ಜನತಾ ಪಕ್ಷದ ಸ್ಥಾಪಕ ಅಭಿಜೀತ್ ದೀಪ್ಕೆ ಇಂದು ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ. ಇಂದು ಮುಂಜಾನೆ ದೆಹಲಿ ಪೊಲೀಸರು ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ವಾಂಗ್ಚುಕ್ ಅವರನ್ನು ಆಸ್ಪತ್ರೆಗೆ ಕರೆದೊಯ್ದ ನಂತರ, ಅವರು ಉಪವಾಸ ಕುಳಿತಿದ್ದ ಅದೇ ಜಾಗದಲ್ಲಿ ಅಭಿಜೀತ್ ದೀಪ್ಕೆ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಜುಲೈ 20 ರಂದು ನಡೆಯಬೇಕಿರುವ ತಮ್ಮ ಉದ್ದೇಶಿತ ರ‍್ಯಾಲಿ ಯಾವುದೇ ಬದಲಾವಣೆಯಿಲ್ಲದೆ ಯಥಾಪ್ರಕಾರ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಸಾರ್ವಜನಿಕರು [&#8230;]]]></description>
										<content:encoded><![CDATA[
<p class="wp-block-paragraph">ನವದೆಹಲಿ: ಕಾಕ್ರೋಚ್ ಜನತಾ ಪಕ್ಷದ ಸ್ಥಾಪಕ ಅಭಿಜೀತ್ ದೀಪ್ಕೆ ಇಂದು ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ. ಇಂದು ಮುಂಜಾನೆ ದೆಹಲಿ ಪೊಲೀಸರು ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು.</p>



<p class="wp-block-paragraph">ವಾಂಗ್ಚುಕ್ ಅವರನ್ನು ಆಸ್ಪತ್ರೆಗೆ ಕರೆದೊಯ್ದ ನಂತರ, ಅವರು ಉಪವಾಸ ಕುಳಿತಿದ್ದ ಅದೇ ಜಾಗದಲ್ಲಿ ಅಭಿಜೀತ್ ದೀಪ್ಕೆ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಜುಲೈ 20 ರಂದು ನಡೆಯಬೇಕಿರುವ ತಮ್ಮ ಉದ್ದೇಶಿತ ರ‍್ಯಾಲಿ ಯಾವುದೇ ಬದಲಾವಣೆಯಿಲ್ಲದೆ ಯಥಾಪ್ರಕಾರ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಸಾರ್ವಜನಿಕರು ಜಂತರ್ ಮಂತರ್ ಪ್ರತಿಭಟನಾ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದು ಅವರು ಮನವಿ ಮಾಡಿದ್ದಾರೆ. </p>



<p class="wp-block-paragraph">ಸರ್ಕಾರ ಅತ್ಯಂತ ಗಂಭೀರವಾದ ತಪ್ಪನ್ನು ಎಸಗಿದ್ದು, ಪ್ರತಿಯೊಬ್ಬರೂ ಜಂತರ್ ಮಂತರ್ ತಲುಪಬೇಕು ಎಂದು ಅವರು ಕರೆ ನೀಡಿದ್ದಾರೆ. ಇತ್ತ ಸಿಪಿಐ (ಎಂಎಲ್) ಪಕ್ಷದ ನೇಹಾ, ಅಮೀನ್ ಮತ್ತು ಮನೀಶ್ ಅವರು ಜಂತರ್ ಮಂತರ್‌ನಲ್ಲಿ 21ನೇ ದಿನವೂ ತಮ್ಮ ಉಪವಾಸವನ್ನು ಮುಂದುವರಿಸಲಿದ್ದಾರೆ ಎಂದು ಐಸಾ (AISA) ಅಧ್ಯಕ್ಷ ಎನ್. ಸಾಯಿ ಬಾಲಾಜಿ ತಿಳಿಸಿದ್ದಾರೆ.</p>
]]></content:encoded>
					
		
		
			</item>
	</channel>
</rss>
