<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Peepal Media</title>
	<atom:link href="https://peepalmedia.com/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 04 Jun 2026 09:09:41 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಸಚಿವ ರಾಮಲಿಂಗಾರೆಡ್ಡಿ ಪಟ್ಟು ; ರಾಜೀನಾಮೆ ಬೆದರಿಕೆ</title>
		<link>https://peepalmedia.com/ramalinga-reddy-appointed-as-bangalore-urban-development-minister/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 04 Jun 2026 09:09:40 +0000</pubDate>
				<category><![CDATA[ರಾಜಕೀಯ]]></category>
		<category><![CDATA[ರಾಜ್ಯ]]></category>
		<guid isPermaLink="false">https://peepalmedia.com/?p=79371</guid>

					<description><![CDATA[ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದೇ ದಿನ ಕಳೆಯುವಷ್ಟರಲ್ಲಿ ಖಾತೆ ಹಂಚಿಕೆ ವಿವಾದ ಭುಗಿಲೆದ್ದಿದೆ. ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರು ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡದಿದ್ದರೆ ಸಚಿವ ಸ್ಥಾನ ಬೇಡ ಎಂದು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡದೆ ಜಲಸಂಪನ್ಮೂಲ ಖಾತೆ ನೀಡಲಾಗಿದ್ದು, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ಸಚಿವ ಸ್ಥಾನಕ್ಕೆ [&#8230;]]]></description>
										<content:encoded><![CDATA[
<p class="wp-block-paragraph">ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದೇ ದಿನ ಕಳೆಯುವಷ್ಟರಲ್ಲಿ ಖಾತೆ ಹಂಚಿಕೆ ವಿವಾದ ಭುಗಿಲೆದ್ದಿದೆ. ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರು ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡದಿದ್ದರೆ ಸಚಿವ ಸ್ಥಾನ ಬೇಡ ಎಂದು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.</p>



<p class="wp-block-paragraph">ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡದೆ ಜಲಸಂಪನ್ಮೂಲ ಖಾತೆ ನೀಡಲಾಗಿದ್ದು, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. &#8220;ಸಚಿವ ಸ್ಥಾನ ಬೇಡ, ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ&#8221; ಎಂದು ಮುಖ್ಯಮಂತ್ರಿಗೆ ನೇರವಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.</p>



<p class="wp-block-paragraph">ಹಿಂದೆ ಸಿದ್ದರಾಮಯ್ಯ ಸರ್ಕಾರ ರಚನೆ ಸಂದರ್ಭದಲ್ಲಿ, ಆಗ ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ್, ರಾಮಲಿಂಗಾರೆಡ್ಡಿ ಅವರಿಗೆ &#8220;ಮುಖ್ಯಮಂತ್ರಿಯಾದ ನಂತರ ಬೆಂಗಳೂರು ನಗರಾಭಿವೃದ್ಧಿ ಖಾತೆ ನಿಮಗೇ ನೀಡುತ್ತೇನೆ&#8221; ಎಂದು ಮಾತು ನೀಡಿ, ಆ ಖಾತೆಯನ್ನು ತಾವೇ ಪಡೆದಿದ್ದರು. ಆ ಭರವಸೆಯನ್ನೇ ನೆನಪಿಸಿ ರಾಮಲಿಂಗಾರೆಡ್ಡಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.</p>



<p class="wp-block-paragraph">ಈ ಬೆಳವಣಿಗೆ ಕಾಂಗ್ರೆಸ್ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದು, ಮುಖ್ಯಮಂತ್ರಿ ಶಿವಕುಮಾರ್ ಅವರು ರಾಮಲಿಂಗಾರೆಡ್ಡಿ ಮನವೊಲಿಸಲು ಯತ್ನಿಸಿದ್ದಾರೆ. ಪಕ್ಷದ ವರಿಷ್ಠರೂ ಸಹ ರಾಮಲಿಂಗಾರೆಡ್ಡಿ ಅವರಿಗೆ ದೂರವಾಣಿ ಕರೆ ಮಾಡಿ ಸಮಾಧಾನಪಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೂ ಅವರು ಇನ್ನೂ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.</p>



<p class="wp-block-paragraph">ಹೊಸ ಸರ್ಕಾರ ಅಧಿಕಾರ ವಹಿಸಿಕೊಂಡ ಮರುದಿನವೇ ಈ ರೀತಿಯ ಆಂತರಿಕ ಬಿಕ್ಕಟ್ಟು ತಲೆದೋರಿರುವುದು ರಾಜಕೀಯ ವಲಯದಲ್ಲಿ ನಾನಾ ಚರ್ಚೆಗಳಿಗೆ ಕಾರಣವಾಗಿದೆ.</p>
]]></content:encoded>
					
		
		
			</item>
		<item>
		<title>ದಿ ಬ್ರೋಕನ್ ಕ್ರೌನ್‌: ಡಿಕೆಶಿ ಮುಂದಿರುವ ಚಕ್ರವ್ಯೂಹ ಮತ್ತು 18 ತಿಂಗಳ &#8216;ಡೆತ್ ಮ್ಯಾಚ್&#8217;!</title>
		<link>https://peepalmedia.com/maze-ahead-of-dk-and-the-18-month-death-match/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 04 Jun 2026 08:02:32 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://peepalmedia.com/?p=79364</guid>

					<description><![CDATA[&#8220;ಇದು ಡಿಕೆ ಶಿವಕುಮಾರ್ ಪಾಲಿನ ಅಂತಿಮ ಹೋರಾಟ. ಇದು ಮಾಡು ಇಲ್ಲವೇ ಮಡಿ ಪಂದ್ಯ! ಇಷ್ಟು ದಿನ ಟ್ರಬಲ್ ಶೂಟ‌ರ್ ಆಗಿ ಬೇರೆಯವರ ಸಂಕಷ್ಟಗಳನ್ನು ಪರಿಹರಿಸಿದವರು, ಈಗ ತಮ್ಮದೇ ಕುರ್ಚಿಗೆ, ತಮ್ಮದೇ ಸರ್ಕಾರಕ್ಕೆ, ತಮ್ಮದೇ ಪಕ್ಷಕ್ಕೆ ಎದುರಾಗಿರುವ ಟ್ರಬಲ್‌ಗಳನ್ನು ಹೇಗೆ ಶೂಟ್ ಮಾಡ್ತಾರೆ?..&#8221; ಓದಿ ವಿಆರ್ ಕಾರ್ಪೆಂಟರ್ ಅವರ ಬರಹದಲ್ಲಿ 2023ರ ಮೇ ತಿಂಗಳಲ್ಲಿ ಶುರುವಾಗಿದ್ದ &#8216;ಕುರ್ಚಿ&#8217;ಯ ಮ್ಯೂಸಿಕಲ್ ಚೇರ್ ಆಟಕ್ಕೀಗ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ದೆಹಲಿ ಹೈಕಮಾಂಡ್‌ನ ಪಕ್ಕಾ ಕಮರ್ಷಿಯಲ್ ಡೀಲ್ ಪ್ರಕಾರ, ಸಿದ್ದರಾಮಯ್ಯ ಕೆಳಗಿಳಿದಿದ್ದಾರೆ. [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p class="wp-block-paragraph">&#8220;ಇದು ಡಿಕೆ ಶಿವಕುಮಾರ್ ಪಾಲಿನ ಅಂತಿಮ ಹೋರಾಟ. ಇದು ಮಾಡು ಇಲ್ಲವೇ ಮಡಿ ಪಂದ್ಯ! ಇಷ್ಟು ದಿನ ಟ್ರಬಲ್ ಶೂಟ‌ರ್ ಆಗಿ ಬೇರೆಯವರ ಸಂಕಷ್ಟಗಳನ್ನು ಪರಿಹರಿಸಿದವರು, ಈಗ ತಮ್ಮದೇ ಕುರ್ಚಿಗೆ, ತಮ್ಮದೇ ಸರ್ಕಾರಕ್ಕೆ, ತಮ್ಮದೇ ಪಕ್ಷಕ್ಕೆ ಎದುರಾಗಿರುವ ಟ್ರಬಲ್‌ಗಳನ್ನು ಹೇಗೆ ಶೂಟ್ ಮಾಡ್ತಾರೆ?..&#8221; ಓದಿ ವಿಆರ್ ಕಾರ್ಪೆಂಟರ್ ಅವರ ಬರಹದಲ್ಲಿ</p>
</blockquote>



<p class="wp-block-paragraph">2023ರ ಮೇ ತಿಂಗಳಲ್ಲಿ ಶುರುವಾಗಿದ್ದ &#8216;ಕುರ್ಚಿ&#8217;ಯ ಮ್ಯೂಸಿಕಲ್ ಚೇರ್ ಆಟಕ್ಕೀಗ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ದೆಹಲಿ ಹೈಕಮಾಂಡ್‌ನ ಪಕ್ಕಾ ಕಮರ್ಷಿಯಲ್ ಡೀಲ್ ಪ್ರಕಾರ, ಸಿದ್ದರಾಮಯ್ಯ ಕೆಳಗಿಳಿದಿದ್ದಾರೆ. ಡಿ.ಕೆ. ಶಿವಕುಮಾ‌ರ್ ಸಿಎಂ ಗದ್ದುಗೆ ಏರಿದ್ದಾರೆ. ಕನಕಪುರದ ಬಂಡೆ ಈಗ ವಿಧಾನಸೌಧದ ಮೂರನೇ ಮಹಡಿಯಲ್ಲಿ ವಿರಾಜಮಾನವಾಗಿದೆ. &#8220;ನಮ್ಮ ಸಾಹೇಬ್ರು ಸಿಎಂ ಆದ್ರು&#8221; ಅಂತ ಅವರ ಅಭಿಮಾನಿಗಳು ರಾಜ್ಯಾದ್ಯಂತ ಕಟೌಟ್ ನಿಲ್ಲಿಸಿ, ಹಾಲಿನ ಅಭಿಷೇಕ ಮಾಡುತ್ತಿದ್ದಾರೆ.</p>



<p class="wp-block-paragraph">ಆದರೆ, ಆ ಕಟೌಟ್‌ಗಳ ಹಿಂದಿರುವ ಕಟು ವಾಸ್ತವವೇ ಬೇರೆ. ಡಿಕೆಶಿ ತಲೆ ಮೇಲಿರುವುದು ಹೂವಿನ ಕಿರೀಟ ಅಲ್ಲ, ಅದು ರಕ್ತ ಹೀರುವ ಮುಳ್ಳಿನ ಕಿರೀಟ!</p>



<p class="wp-block-paragraph"><strong>ಮುಳ್ಳಿನ ಕಿರೀಟ ಮತ್ತು ಕರಗುತ್ತಿರುವ ಕಾಲಾವಕಾಶ</strong><br>ಲೆಕ್ಕಾಚಾರ ಬಹಳ ಸಿಂಪಲ್ ಆಗಿದೆ, ಆದರೆ ಡೇಂಜರಸ್ ಆಗಿದೆ. ಡಿಕೆಶಿಗೆ ಸಿಕ್ಕಿರುವುದು ಐದು ವರ್ಷದ ಫುಲ್ ಟೈಮ್ ಅಧಿಕಾರ ಅಲ್ಲ, ಕೇವಲ ಎರಡು ವರ್ಷದ &#8216;ಪಾರ್ಟ್ ಟೈಮ್&#8217; ಕಾಂಟ್ರಾಕ್ಟ್. ಈ 24 ತಿಂಗಳಲ್ಲಿ ಕಡೆಯ ಆರು ತಿಂಗಳು ಸಂಪೂರ್ಣವಾಗಿ ಎಲೆಕ್ಷನ್ ಜ್ವರ. ನೀತಿ ಸಂಹಿತೆ, ಟಿಕೆಟ್ ಹಂಚಿಕೆ, ಪ್ರಚಾರದ ಗದ್ದಲ. ಅಂದರೆ ಆಡಳಿತ ನಡೆಸಲು ಉಳಿಯುವುದು ಬರೀ ಹದಿನೆಂಟು ತಿಂಗಳು.</p>



<p class="wp-block-paragraph">ಈ 18 ತಿಂಗಳಲ್ಲಿ ಏನಾಗಬೇಕು? ಹೊಸ ಸಿಎಂ ಬಂದ ತಕ್ಷಣ ತಮ್ಮದೇ ಆದ ಅಧಿಕಾರಿಗಳ ಪಡೆಯನ್ನು ಕಟ್ಟಿಕೊಳ್ಳಬೇಕು. ಚೀಫ್ ಸೆಕ್ರೆಟರಿಯಿಂದ ಹಿಡಿದು, ಡಿಜಿಪಿ, ಐಜಿಪಿ, ಜಿಲ್ಲಾಧಿಕಾರಿಗಳು, ಎಸ್ಪಿಗಳ ತನಕ &#8216;ತಮಗೆ ಬೇಕಾದವರನ್ನು&#8217; ಕೂರಿಸಿಕೊಳ್ಳಲು ಕನಿಷ್ಠ ಮೂರು ತಿಂಗಳು ಬೇಕು. ಆಮೇಲೆ ಬಜೆಟ್ ಮಂಡನೆ, ಹಳೆ ಯೋಜನೆಗಳ ರಿವ್ಯೂ… ನೋಡನೋಡುತ್ತಿದ್ದಂತೆಯೇ ಒಂದು ವರ್ಷ ಕಳೆದುಹೋಗುತ್ತದೆ!</p>



<p class="wp-block-paragraph">ಇನ್ನು ಡಿಕೆಶಿಯವರ ಡೀಮ್ ಪ್ರಾಜೆಕ್ಟ್ &#8216;ಬ್ರಾಂಡ್ ಬೆಂಗಳೂರು&#8217; ಕಥೆ ಏನಾಗಬೇಕು? ಟನೆಲ್ ರಸ್ತೆಗಳು, ಹೊಸ ಪ್ರೈಓವರ್‌ಗಳು, ಮೆಟ್ರೋ ವಿಸ್ತರಣೆ… ಇವೆಲ್ಲಾ 18 ತಿಂಗಳಲ್ಲಿ ಆಗುವ ಮ್ಯಾಜಿಕ್ ಅಲ್ಲ. ಈ ಪ್ರಾಜೆಕ್ಟ್‌ಗಳಿಗೆ ಟೆಂಡ‌ರ್ ಕರೆದು, ವರ್ಕ್ ಆರ್ಡರ್ ಕೊಡುವಷ್ಟರಲ್ಲಿ ಎಲೆಕ್ಷನ್ ಬಂದುಬಿಡುತ್ತದೆ. ಜನರ ಕಣ್ಣಿಗೆ ಕಾಣುವಂತಹ, &#8220;ಇದು ಡಿಕೆಶಿ ಮಾಡಿದ್ದು&#8221; ಅಂತ ಎದೆತಟ್ಟಿ ಹೇಳಿಕೊಳ್ಳುವಂತಹ ಒಂದೇ ಒಂದು ಬೃಹತ್ ಯೋಜನೆಯನ್ನು ಕಂಪ್ಲೇಟ್ ಮಾಡುವುದು ಅಕ್ಷರಶಃ ಅಸಾಧ್ಯ.</p>



<p class="wp-block-paragraph">ಅಂದರೆ, ಡಿಕೆಶಿ ಈಗ ಓಡಬೇಕಾಗಿರುವುದು ಟೆಸ್ಟ್ ಮ್ಯಾಚ್ ಪಿಚ್ ಮೇಲಲ್ಲ, ಇದು ಟಿ-20ಯ ಡೆತ್ ಓವರ್‌ಗಳು! ಪ್ರತಿ ಬಾಲ್‌ಗೂ ಸಿಕ್ಸ್ ಹೊಡೆಯಲೇಬೇಕಾದ ಅನಿವಾರ್ಯತೆ ಅವರ ಮುಂದಿದೆ.</p>



<p class="wp-block-paragraph"><strong>ಖಾಲಿ ಖಜಾನೆ ಮತ್ತು &#8220;ಗ್ಯಾರಂಟಿ&#8221; ಎಂಬ ರಾಕ್ಷಸ!</strong><br>ಸಮಯದ ಅಭಾವ ಒಂದು ಕಡೆಯಾದರೆ, ಅದಕ್ಕಿಂತ ದೊಡ್ಡ ಶತ್ರು ಡಿಕೆಶಿಯವರ ಕಚೇರಿಯ ಒಳಗೇ ಇದೆ. ಅದೇ ಆರ್ಥಿಕ ಇಲಾಖೆ! ನೀವು ಎಷ್ಟೇ ದೊಡ್ಡ ಟ್ರಬಲ್ ಶೂಟರ್ ಆಗಿರಬಹುದು, ಪವರ್‌ಫುಲ್ ಮ್ಯಾನೇಜ‌ರ್ ಆಗಿರಬಹುದು… ಆದರೆ ಜೇಬಲ್ಲಿ ಕಾಸಿಲ್ಲ ಅಂದರೆ ಯಾರು ತಾನೇ ಏನು ಮಾಡಲು ಸಾಧ್ಯ?</p>



<p class="wp-block-paragraph">ಇವತ್ತು ಕರ್ನಾಟಕದ ಬಜೆಟ್ ಗಾತ್ರ ಸುಮಾರು 3.7 ಲಕ್ಷ ಕೋಟಿ. ಅದರಲ್ಲಿ ಬರೋಬ್ಬರಿ 50 ರಿಂದ 60 ಸಾವಿರ ಕೋಟಿ ರೂಪಾಯಿಗಳು ಈ ಐದು ಗ್ಯಾರಂಟಿಗಳಿಗೆ ಸ್ವಾಹಾ ಆಗುತ್ತಿದೆ. ಇನ್ನು ಸರ್ಕಾರಿ ನೌಕರರ ಸಂಬಳ, ಪಿಂಚಣಿ, ಹಳೇ ಸಾಲದ ಬಡ್ಡಿ ತೀರಿಸುವುದರಲ್ಲೇ ಸರ್ಕಾರದ ಮುಕ್ಕಾಲು ಪಾಲು ಆದಾಯ ಖಾಲಿಯಾಗುತ್ತಿದೆ. ಇಲ್ಲೇ ಇರೋದು ಅಸಲಿ ಟ್ವಿಸ್ಟ್! ಶಾಸಕರು ತಮ್ಮ ಕ್ಷೇತ್ರಕ್ಕೆ ರಸ್ತೆ ಮಾಡಬೇಕು, ಚರಂಡಿ ಕಟ್ಟಬೇಕು, ಆಸ್ಪತ್ರೆ ಕಟ್ಟಬೇಕು ಅಂತ ಸಿಎಂ ಬಳಿ ಬಂದರೆ, ಸಿಎಂ ಕೊಡುವ ಉತ್ತರ ಒಂದೇ &#8211; &#8220;ದುಡ್ಡಿಲ್ಲ, ಕಾಯ್ತಾ ಇರಿ!&#8221;</p>



<p class="wp-block-paragraph"><strong>ಈಗ ಡಿಕೆಶಿ ಮುಂದಿರುವ ಆಯ್ಕೆಗಳೇನು?</strong></p>



<ul class="wp-block-list">
<li>ಆಯ್ಕೆ 1: ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದು ಅಥವಾ ಕಂಡೀಷನ್ ಹಾಕಿ ಕಡಿತಗೊಳಿಸುವುದು. ಆದರೆ ಹಾಗೆ ಮಾಡಿದರೆ, &#8220;ಡಿಕೆಶಿ ಬಂದು ನಮ್ಮ ಅನ್ನ ಕಿತ್ತುಕೊಂಡ&#8221; ಅಂತ ಜನ ಹಿಡಿಶಾಪ ಹಾಕುತ್ತಾರೆ. 2028ರ ಎಲೆಕ್ಷನ್‌ನಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲದಂತೆ ಆಗುತ್ತದೆ.</li>
</ul>



<ul class="wp-block-list">
<li>ಆಯ್ಕೆ 2: ಅಭಿವೃದ್ಧಿಯನ್ನು ಸಂಪೂರ್ಣವಾಗಿ ಬದಿಗೊತ್ತಿ, ಸಾಲದ ಮೇಲೆ ಸಾಲ ಮಾಡಿ ಗ್ಯಾರಂಟಿ ಮುಂದುವರಿಸುವುದು. ಆಗ ವಿರೋಧ ಪಕ್ಷಗಳು, &#8220;ನೋಡಿ, ಇವರಿಂದ ರಾಜ್ಯ ದಿವಾಳಿಯಾಯ್ತು&#8221; ಅಂತ ಕ್ಯಾಂಪೇನ್ ಶುರು ಮಾಡುತ್ತವೆ.</li>
</ul>



<p class="wp-block-paragraph">ಸಿದ್ದರಾಮಯ್ಯನವರು ಬಹಳ ಚಾಣಾಕ್ಷರು. ಗ್ಯಾರಂಟಿಗಳನ್ನು ತಂದು &#8216;ಜನನಾಯಕ&#8217; ಅನ್ನಿಸಿಕೊಂಡು, ಖಜಾನೆ ಖಾಲಿಯಾದ ಟೈಮ್‌ಗೆ, ಎಲ್ಲಾ ಜವಾಬ್ದಾರಿಗಳನ್ನು ಡಿ.ಕೆ.ಶಿ. ಅವರ ತಲೆಯ ಮೇಲೆ ಹೊರಿಸಿ ಎಕ್ಸಿಟ್ ಆಗಿಬಿಟ್ಟರು. ಈಗ ಖಾಲಿ ಪಾತ್ರೆಯನ್ನು ಇಟ್ಟುಕೊಂಡು ಮೃಷ್ಟಾನ್ನ ಭೋಜನ ಬಡಿಸುವ ಜವಾಬ್ದಾರಿ ಡಿಕೆಶಿಯವರದ್ದು! ಇದೊಂದು ಪಕ್ಕಾ ರಾಜಕೀಯ ಚಕ್ರವ್ಯೂಹ. ಬಹುಶಃ ಅವರ ಅರಿವು ಡಿಕೆಶಿ ಅವರಿಗೂ ಇದ್ದೇ ಇರುತ್ತದೆ.</p>



<p class="wp-block-paragraph"><strong>ಒಳೇಟುಗಳು ಮತ್ತು ಅತೃಪ್ತರ ಬ್ಲಾಕ್ ಮೇಲ್ ಪಾಲಿಟಿಕ್ಸ್‌</strong><br>ಡಿಕೆಶಿಗೆ ಅಸಲಿ ವಿರೋಧ ಪಕ್ಷ ಇರೋದು ಆರ್.ಎಸ್.ಎಸ್ ನಲ್ಲೋ ಅಥವಾ ಜೆಡಿಎಸ್ ಕಚೇರಿಯಲ್ಲೋ ಅಲ್ಲ… ಅದು ಇರೋದು ಸ್ವತಃ ಕಾಂಗ್ರೆಸ್ ಭವನದ ಒಳಗೆ!</p>



<p class="wp-block-paragraph">ನಿಮಗೆ ನೆನಪಿರಲಿ, ಕಾಂಗ್ರೆಸ್‌ನಲ್ಲಿರುವ 135ಕ್ಕೂ ಹೆಚ್ಚು ಶಾಸಕರಲ್ಲಿ, ಬಹುಪಾಲು ಶಾಸಕರು ಸಿದ್ದರಾಮಯ್ಯನವರ ಕ್ಯಾಂಪ್‌ನವರು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಈ ಶಾಸಕರು ಸುಮ್ಮನಿದ್ದರು. ಈಗ ಡಿಕೆಶಿ ಗದ್ದುಗೆ ಏರಿದ ತಕ್ಷಣ ಇವರೆಲ್ಲಾ ಸನ್ಯಾಸಿಗಳ ತರಹ ಸುಮ್ಮನೆ ಕೂರುತ್ತಾರಾ? ಚಾನ್ನೇ ಇಲ್ಲ!</p>



<p class="wp-block-paragraph">ಮಂತ್ರಿಗಿರಿಗಾಗಿ ಕಿತ್ತಾಟ, ನಿಗಮ ಮಂಡಳಿಗಳಿಗಾಗಿ ಪೈಪೋಟಿ ಈಗ ತಾರಕಕ್ಕೇರುತ್ತದೆ. &#8220;ನಮಗೆ ಬೇಕಾದ ಖಾತೆ ಕೊಡದಿದ್ದರೆ ನಾವು ಬಂಡಾಯ ಏಳುತ್ತೇವೆ&#8221; ಅಂತ ಬೆದರಿಸುವ ಬ್ಲಾಕ್ ಮೇಲ್ ಪಾಲಿಟಿಕ್ಸ್ ಶುರುವಾಗುತ್ತದೆ. ಡಿಕೆಶಿಯವರ ಕಾರ್ಯಶೈಲಿ ಸಿದ್ದರಾಮಯ್ಯನವರ ತರಹ ಸಾಫ್ಟ್ ಅಲ್ಲ. ಅವರು ಪಕ್ಕಾ ಕಾರ್ಪೊರೇಟ್ ಸಿಇಒ ತರಹ, &#8216;ನಾನು ಹೇಳಿದ್ದೇ ಫೈನಲ್ ಎನ್ನುವ ಮೈಕ್ರೋ-ಮ್ಯಾನೇಜರ್.</p>



<p class="wp-block-paragraph">ಇದು ಈ ಹಿರಿಯ ಶಾಸಕರಿಗೆ ಅರಗಿಸಿಕೊಳ್ಳಲು ಕಷ್ಟವಾಗುತ್ತದೆ. ಶಾಸಕರು ಮತ್ತು ಸಿಎಂ ನಡುವಿನ ಇಂತಹ ಸಣ್ಣಪುಟ್ಟ ಇಗೋ ಕ್ಯಾಶ್‌ಗಳೇ ನಾಳೆ ಬೃಹತ್ ಬಂಡಾಯವಾಗಿ ಸ್ಫೋಟಗೊಳ್ಳುವ ಅಪಾಯವಿದೆ. ಈ ಅತೃಪ್ತರನ್ನು ನಿಭಾಯಿಸುವ ಟ್ರಬಲ್ ಶೂಟಿಂಗ್‌ನಲ್ಲೇ ಡಿಕೆಶಿಯವರ ಅರ್ಧ ಎನರ್ಜಿ ಖರ್ಚಾಗಿ ಹೋದರೆ ಅಚ್ಚರಿಯಿಲ್ಲ.</p>



<p class="wp-block-paragraph"><strong>&#8216;ಗೌಡ&#8217; ಪ್ರೈಡ್ ಮತ್ತು ಕಂಬಾಲಪಲ್ಲಿಯ ಭೂತ!</strong><br>ಈಗ ಅತಿ ಮುಖ್ಯವಾದ, ಆದರೆ ಯಾರೂ ಓಪನ್ ಆಗಿ ಚರ್ಚೆ ಮಾಡದ ಒಂದು ವಿಚಾರದ ಬಗ್ಗೆ ಮಾತಾಡೋಣ. ಅದೇ ಜಾತಿ ಲೆಕ್ಕಾಚಾರ ಮತ್ತು ಸಾಮಾಜಿಕ ಸಮತೋಲನ. ಡಿಕೆಶಿ ಸಿಎಂ ಆಗಿದ್ದಾರೆ ಅಂದರೆ, ಅದು ಕೇವಲ ಒಬ್ಬ ಕಾಂಗ್ರೆಸ್ ನಾಯಕನ ಗೆಲುವಲ್ಲ. ಅದು ಇಡೀ ಒಕ್ಕಲಿಗ ಸಮುದಾಯದ ಎರಡು ದಶಕಗಳ ಹಂಬಲ. ಎಸ್.ಎಂ. ಕೃಷ್ಣ ನಂತರ ನಮ್ಮ ಸಮುದಾಯದ ಒಬ್ಬ ಪವರ್‌ಫುಲ್ ಲೀಡ‌ರ್ ಸಿಎಂ ಆದರು ಎನ್ನುವ ಹೆಮ್ಮೆ ಆ ಸಮುದಾಯಕ್ಕಿದೆ. ಅದು ತಪ್ಪಲ್ಲ.</p>



<p class="wp-block-paragraph">ಆದರೆ, ಅಧಿಕಾರದ ಕೇಂದ್ರ ಒಂದು ನಿರ್ದಿಷ್ಟ ಸಮುದಾಯದ ಕೈಗೆ ಹೋದಾಗ, ಸ್ಥಳೀಯ ಮಟ್ಟದಲ್ಲಿ ಏನಾಗುತ್ತದೆ ಎನ್ನುವುದನ್ನು ನಾವು ಇತಿಹಾಸದಿಂದ ಕಲಿಯಬೇಕಿದೆ. ಅಧಿಕಾರದ ಮದ ಸ್ಥಳೀಯ ಪುಡಾರಿಗಳ ನೆತ್ತಿಗೇರಿದರೆ ಏನಾಗುತ್ತದೆ? 2000ನೇ ಇಸವಿಯಲ್ಲಿ ಕೋಲಾರ ಜಿಲ್ಲೆಯ ಕಂಬಾಲಪಲ್ಲಿಯಲ್ಲಿ ದಲಿತರನ್ನು ಜೀವಂತ ದಹಿಸಿದ ಆ ಭೀಕರ ಘಟನೆ ನಮ್ಮ ಕಣ್ಣ ಮುಂದಿದೆ. ಆಗಲೂ ರಾಜ್ಯದಲ್ಲಿ ಎಸ್.ಎಂ. ಕೃಷ್ಣ ಅವರದ್ದೇ ಸರ್ಕಾರವಿತ್ತು! ಪ್ರಬಲ ಜಾತಿಗಳ ದರ್ಪ ಮಿತಿಮೀರಿದಾಗ, ವ್ಯವಸ್ಥೆ ಕಣ್ಣುಮುಚ್ಚಿ ಕೂತಾಗ ಇಂತಹ ಮಾರಣಹೋಮಗಳು ನಡೆಯುತ್ತವೆ.</p>



<p class="wp-block-paragraph">ಈಗ 2026! ಕಂಬಾಲಪಲ್ಲಿಯ ಕಾಲಕ್ಕೂ ಇಂದಿಗೂ ಅಜಗಜಾಂತರ ವ್ಯತ್ಯಾಸವಿದೆ. ಈಗಿನ ಯುವಜನತೆ ಸುಮ್ಮನೆ ಕೂರುವವರಲ್ಲ. ಕೂರುವವರಲ್ಲ. ದಲಿತ ಸಂಘಟನೆಗಳು, ಪ್ರಗತಿಪರರು ಈಗ ಹಿಂದೆಂದಿಗಿಂತಲೂ ಹೆಚ್ಚು ಜಾಗೃತರಾಗಿದ್ದಾರೆ. ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಇದೆ, ಎಕ್ಸ್ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ಗಳಂತಹ ಅಸ್ತ್ರಗಳಿವೆ. ರಾಜ್ಯದ ಯಾವುದೇ ಮೂಲೆಯಲ್ಲಿ, ಯಾವುದೇ ಒಂದು ಹಿಂದುಳಿದ ವರ್ಗದ ಅಥವಾ ದಲಿತನ ಮೇಲೆ ಸಣ್ಣದೊಂದು ದೌರ್ಜನ್ಯ ನಡೆದರೂ, ಆ ವಿಡಿಯೋ ಕ್ಷಣಾರ್ಧದಲ್ಲಿ ವೈರಲ್ ಆಗುತ್ತದೆ. &#8220;ಇದು ಒಕ್ಕಲಿಗರ ದರ್ಪ, ಡಿಕೆಶಿಯವರ ಕುಮ್ಮಕ್ಕು&#8221; ಅಂತ ಒಂದೇ ನಿಮಿಷದಲ್ಲಿ ನ್ಯರೇಟಿವ್ ಸೆಟ್ ಆಗಿಬಿಡುತ್ತದೆ!</p>



<p class="wp-block-paragraph">ಈ ಜಾತಿ ಸಂಘರ್ಷದ ಕಿಡಿಯನ್ನು ಆರಿಸುವುದು ಡಿಕೆಶಿ ಮುಂದಿರುವ ಅತಿ ದೊಡ್ಡ ಅಗ್ನಿಪರೀಕ್ಷೆ. ತಾನು ಕೇವಲ ಒಕ್ಕಲಿಗರ ನಾಯಕನಲ್ಲ, ಇಡೀ ರಾಜ್ಯದ ನಾಯಕ ಎಂದು ಅವರು ಸಾಬೀತುಪಡಿಸಲೇಬೇಕು. ದಲಿತ ಮತ್ತು ಅಹಿಂದ ವರ್ಗದ ಮತಗಳಿಲ್ಲದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವೇ ಇರಲಿಲ್ಲ ಎನ್ನುವ ಸತ್ಯ ಅವರಿಗೆ ಗೊತ್ತಿದೆ. ಹೀಗಾಗಿ, ಪೊಲೀಸ್ ಇಲಾಖೆಯನ್ನು ಸಂಪೂರ್ಣವಾಗಿ ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಬಿಡುವುದು, ತಪ್ಪು ಮಾಡಿದರೆ ತಮ್ಮದೇ: ತಮ್ಮದೇ ಜಾತಿಯವರಾದರೂ ನಿರ್ದಾಕ್ಷಿಣ್ಯವಾಗಿ ಜೈಲಿಗಟ್ಟುವ ಇಚ್ಛಾಶಕ್ತಿಯನ್ನು ಡಿಕೆಶಿ ತೋರಲೇಬೇಕು. ಇಲ್ಲದಿದ್ದರೆ, ಸಿದ್ದರಾಮಯ್ಯನವರು ಕಟ್ಟಿದ ಅಹಿಂದ ವೋಟ್ ಬ್ಯಾಂಕ್ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮರ್ಮಾಘಾತ ನೀಡುವುದು ಗ್ಯಾರಂಟಿ.</p>



<p class="wp-block-paragraph"><strong>2028ರ ಮಾಡು ಇಲ್ಲವೇ ಮಡಿ!</strong><br>ಇದೆಲ್ಲದರ ಲೆಕ್ಕಾಚಾರ ಬಂದು ನಿಲ್ಲುವುದು ಎಲ್ಲಿಗೆ? ಅದೇ 2028ರ ಮಹಾಚುನಾವಣೆಗೆ. ಬೀದಿಬೀದಿಯಲ್ಲಿ ಈಗಲೇ ಒಂದು ಮಾತು ಕೇಳಿಬರುತ್ತಿದೆ… &#8220;ಕಾಂಗ್ರೆಸ್ ಮುಂದಿನ ಬಾರಿ ಅಧಿಕಾರಕ್ಕೆ ಬರೋದು ಭಾರಿ ಡೌಟು!&#8221;</p>



<p class="wp-block-paragraph">ಆಡಳಿತ ವಿರೋಧಿ ಅಲೆ (Anti-incumbency) ಈಗಲೇ ಶುರುವಾಗಿದೆ. ಈ ಅಲೆಯನ್ನು ತಡೆಯಲು ಡಿಕೆಶಿ ಬಳಿ ಇರುವ ಏಕೈಕ ಅಸ್ತ್ರಅಂದರೆ ಅವರ &#8216;ಸಂಘಟನಾ ಚಾತುರ್ಯ&#8217;. ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವುದು, ಕಾರ್ಯಕರ್ತರಿಗೆ ಬೂಸ್ಟ್ ಕೊಡುವುದು, ಚುನಾವಣಾ ರಣತಂತ್ರ ಹೆಣೆಯುವುದರಲ್ಲಿ ಡಿಕೆಶಿಯನ್ನು ಮೀರಿಸುವವರಿಲ್ಲ. ಆದರೆ, ಪಾರ್ಟಿ ಆಫೀಸ್‌ನಲ್ಲಿ ಕೂತು ಪ್ಲಾನ್ ಮಾಡುವುದು ಬೇರೆ, ಸಿಎಂ ಸೀಟಲ್ಲಿ ಕೂತು ಇಡೀ ರಾಜ್ಯವನ್ನು ಇಡೀ ರಾಜ್ಯವನ್ನು ಮ್ಯಾನೇಜ್ ಮಾಡುವುದು ಬೇರೆ.</p>



<p class="wp-block-paragraph">ಕೇವಲ &#8216;ಮ್ಯಾನೇಜೆಂಟ್&#8217; ನಿಂದ ಚುನಾವಣೆ ಗೆಲ್ಲಲು ಆಗುವುದಿಲ್ಲ. ಜನರಿಗೆ ಕುಡಿಯೋಕೆ ನೀರು ಬೇಕು, ಓಡಾಡೋಕೆ ರಸ್ತೆ ಬೇಕು, ಯುವಕರಿಗೆ ಉದ್ಯೋಗ ಬೇಕು. ಇವೆಲ್ಲವನ್ನು ಈ 18 ತಿಂಗಳಲ್ಲಿ, ಖಾಲಿ ಖಜಾನೆಯನ್ನು ಇಟ್ಟುಕೊಂಡು ಡಿಕೆಶಿ ಹೇಗೆ ಸಾಧಿಸುತ್ತಾರೆ?</p>



<p class="wp-block-paragraph">ಇದು ಡಿಕೆ ಶಿವಕುಮಾರ್ ಪಾಲಿನ ಅಂತಿಮ ಹೋರಾಟ. ಇದು ಮಾಡು ಇಲ್ಲವೇ ಮಡಿ ಪಂದ್ಯ! ಇಷ್ಟು ದಿನ ಟ್ರಬಲ್ ಶೂಟ‌ರ್ ಆಗಿ ಬೇರೆಯವರ ಸಂಕಷ್ಟಗಳನ್ನು ಪರಿಹರಿಸಿದವರು, ಈಗ ತಮ್ಮದೇ ಕುರ್ಚಿಗೆ, ತಮ್ಮದೇ ಸರ್ಕಾರಕ್ಕೆ, ತಮ್ಮದೇ ಪಕ್ಷಕ್ಕೆ ಎದುರಾಗಿರುವ ಟ್ರಬಲ್‌ಗಳನ್ನು ಹೇಗೆ ಶೂಟ್ ಮಾಡ್ತಾರೆ? ಅವರು ಈ ಸವಾಲುಗಳನ್ನು ಮೀರಿ ನಿಂತರೆ, ಇತಿಹಾಸ ಅವರನ್ನು ಒಬ್ಬ &#8216;ಮಾಸ್ ಲೀಡರ್&#8217; ಆಗಿ ನೆನಪಿಟ್ಟುಕೊಳ್ಳುತ್ತದೆ. ಎಡವಿದರೆ…ಕಾಂಗ್ರೆಸ್ ಮತ್ತೊಂದು ದಶಕಗಳ ಕಾಲ ವಿರೋಧ ಪಕ್ಷದ ಸಾಲಿನಲ್ಲಿ ಕೂರಬೇಕಾಗುತ್ತದೆ. ನಿಮ್ಮ ಪ್ರಕಾರ ಡಿಕೆಶಿ ಈ ಚಕ್ರವ್ಯೂಹವನ್ನು ಭೇದಿಸುತ್ತಾರಾ? ಅಥವಾ ಈ ರಾಜಕೀಯ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಾರಾ? ಇದು ಕೇವಲ ರಾಜಕಾರಣದ ಆಟವಲ್ಲ. ಇದು ಕರ್ನಾಟಕದ ಭವಿಷ್ಯದ ಪ್ರಶ್ನೆ!</p>



<pre class="wp-block-code"><code>ಸಿದ್ದರಾಮಯ್ಯನವರು ಬಹಳ ಚಾಣಾಕ್ಷರು. ಗ್ಯಾರಂಟಿಗಳನ್ನು ತಂದು 'ಜನನಾಯಕ' ಅನ್ನಿಸಿಕೊಂಡು, ಖಜಾನೆ ಖಾಲಿಯಾದ ಟೈಮ್‌ಗೆ, ಎಲ್ಲಾ ಜವಾಬ್ದಾರಿಗಳನ್ನು ಡಿ.ಕೆ.ಶಿ. ಅವರ ತಲೆಯ ಮೇಲೆ ಹೊರಿಸಿ ಎಕ್ಸಿಟ್ ಆಗಿಬಿಟ್ಟರು. ಈಗೆ ಖಾಲಿ ಪಾತ್ರೆಯನ್ನು ಇಟ್ಟುಕೊಂಡು ಮೃಷ್ಟಾನ್ನ ಭೋಜನ ಬಡಿಸುವ ಜವಾಬ್ದಾರಿ ಡಿಕೆಶಿಯವರದ್ದು! ಇದೊಂದು ಪಕ್ಕಾ ರಾಜಕೀಯ ಚಕ್ರವ್ಯೂಹ. ಬಹುಶಃ ಅವರ ಅರಿವು ಡಿಕೆಶಿ ಅವರಿಗೂ ಇದ್ದೇ ಇರುತ್ತದೆ.</code></pre>
]]></content:encoded>
					
		
		
			</item>
		<item>
		<title>ರಾಷ್ಟ್ರೀಯ ಪರೀಕ್ಷಾ ಲೋಪಗಳ ವಿರುದ್ಧ ಸಿಜೆಪಿ ಬೃಹತ್ ಪ್ರತಿಭಟನೆ: ವಿದ್ಯಾರ್ಥಿಗಳು ಮತ್ತು ಯುವಜನತೆಗೆ ಮುಕ್ತ ಆಹ್ವಾನ</title>
		<link>https://peepalmedia.com/cjp-press-conference-students-youth-protest-nta-exam-scam-demands/</link>
		
		<dc:creator><![CDATA[Peepal Media]]></dc:creator>
		<pubDate>Thu, 04 Jun 2026 02:43:46 +0000</pubDate>
				<category><![CDATA[ದೇಶ]]></category>
		<guid isPermaLink="false">https://peepalmedia.com/?p=79361</guid>

					<description><![CDATA[ದೆಹಲಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಪ್ರಮುಖ ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳ ಒಕ್ಕೂಟವಾದ &#8216;ಕೇಂದ್ರೀಯ ಜಂಟಿ ಪ್ರತಿಭಟನಾ ಸಮಿತಿ&#8217; (CJP), ದೇಶಾದ್ಯಂತ ಇರುವ ವಿದ್ಯಾರ್ಥಿಗಳು, ಯುವಜನರು ಮತ್ತು ಸಾರ್ವಜನಿಕರನ್ನು ಮುಂಬರುವ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮುಕ್ತ ಆಹ್ವಾನ ನೀಡಿದೆ. ಇತ್ತೀಚಿನ ರಾಷ್ಟ್ರೀಯ ಪರೀಕ್ಷೆಗಳ ನಿರ್ವಹಣೆಯಲ್ಲಿ ಎದುರಾಗಿರುವ ಸರಣಿ ವೈಫಲ್ಯಗಳು, ಪತ್ರಿಕೆ ಸೋರಿಕೆ ಮತ್ತು ತಾಂತ್ರಿಕ ಲೋಪಗಳನ್ನು ಖಂಡಿಸಿ ಈ ಪ್ರತಿಭಟನೆಯನ್ನು ಆಯೋಜಿಸಲಾಗುತ್ತಿದ್ದು, ಯಾವುದೇ ಜಾತಿ, ಮತ ಅಥವಾ ಸಂಘಟನೆಯ ಭೇದವಿಲ್ಲದೆ ಯಾರು ಬೇಕಾದರೂ ಈ ಚಳವಳಿಯಲ್ಲಿ ಭಾಗವಹಿಸಬಹುದು [&#8230;]]]></description>
										<content:encoded><![CDATA[
<p class="wp-block-paragraph">ದೆಹಲಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಪ್ರಮುಖ ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳ ಒಕ್ಕೂಟವಾದ &#8216;ಕೇಂದ್ರೀಯ ಜಂಟಿ ಪ್ರತಿಭಟನಾ ಸಮಿತಿ&#8217; (CJP), ದೇಶಾದ್ಯಂತ ಇರುವ ವಿದ್ಯಾರ್ಥಿಗಳು, ಯುವಜನರು ಮತ್ತು ಸಾರ್ವಜನಿಕರನ್ನು ಮುಂಬರುವ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮುಕ್ತ ಆಹ್ವಾನ ನೀಡಿದೆ. </p>



<p class="wp-block-paragraph">ಇತ್ತೀಚಿನ ರಾಷ್ಟ್ರೀಯ ಪರೀಕ್ಷೆಗಳ ನಿರ್ವಹಣೆಯಲ್ಲಿ ಎದುರಾಗಿರುವ ಸರಣಿ ವೈಫಲ್ಯಗಳು, ಪತ್ರಿಕೆ ಸೋರಿಕೆ ಮತ್ತು ತಾಂತ್ರಿಕ ಲೋಪಗಳನ್ನು ಖಂಡಿಸಿ ಈ ಪ್ರತಿಭಟನೆಯನ್ನು ಆಯೋಜಿಸಲಾಗುತ್ತಿದ್ದು, ಯಾವುದೇ ಜಾತಿ, ಮತ ಅಥವಾ ಸಂಘಟನೆಯ ಭೇದವಿಲ್ಲದೆ ಯಾರು ಬೇಕಾದರೂ ಈ ಚಳವಳಿಯಲ್ಲಿ ಭಾಗವಹಿಸಬಹುದು ಎಂದು ಸಮಿತಿ ಸ್ಪಷ್ಟಪಡಿಸಿದೆ.</p>



<p class="wp-block-paragraph">​ಇತ್ತೀಚೆಗೆ ನಡೆದ ರಾಷ್ಟ್ರೀಯ ಅರ್ಹತಾ ಪರೀಕ್ಷೆಗಳಾದ ನೀಟ್ (NEET) ಮತ್ತು ಜಿಇಇ ಅಡ್ವಾನ್ಸ್‌ಡ್ (JEE Advanced) ಪರೀಕ್ಷೆಗಳಲ್ಲಿನ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ದಂಧೆ ಹಾಗೂ ಲಕ್ಷಾಂತರ ಅಭ್ಯರ್ಥಿಗಳ ಸೂಕ್ಷ್ಮ ದತ್ತಾಂಶಗಳು ಆನ್‌ಲೈನ್‌ನಲ್ಲಿ ಬಹಿರಂಗಗೊಂಡಿರುವ ಪ್ರಕರಣಗಳ ಕುರಿತು ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ಸಮಗ್ರ ಮತ್ತು ಸ್ವತಂತ್ರ ತನಿಖೆಯಾಗಬೇಕು ಎಂದು ಸಮಿತಿ ಒತ್ತಾಯಿಸಿದೆ. </p>



<p class="wp-block-paragraph">ಪರೀಕ್ಷೆಗಳನ್ನು ನಡೆಸುವಲ್ಲಿ ಸರಣಿ ನಿರ್ಲಕ್ಷ್ಯ ಹಾಗೂ ಭದ್ರತಾ ಲೋಪ ಎಸಗಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಉನ್ನತ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಈ ಇಡೀ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪುನರ್ರಚಿಸಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ.</p>



<p class="wp-block-paragraph">​ಸೈಬರ್ ಭದ್ರತಾ ಲೋಪಗಳಿಂದಾಗಿ ಖಾಸಗಿ ವಿವರಗಳು ಬಹಿರಂಗಗೊಂಡು ಮಾನಸಿಕ ಆತಂಕ ಎದುರಿಸುತ್ತಿರುವ ದೇಶದ ಲಕ್ಷಾಂತರ ಅಭ್ಯರ್ಥಿಗಳಿಗೆ ಸೂಕ್ತ ನ್ಯಾಯ ಸಿಗಬೇಕು ಮತ್ತು ಪಾರದರ್ಶಕ ಪರಿಹಾರವನ್ನು ಒದಗಿಸಬೇಕು ಎಂದು ಸಿಜೆಪಿ ನಾಯಕರು ಆಗ್ರಹಿಸಿದ್ದಾರೆ. </p>



<p class="wp-block-paragraph">ಮುಂಬರುವ ದಿನಗಳಲ್ಲಿ ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಹಂತ ಹಂತವಾಗಿ ಶಾಂತಿಯುತ ಧರಣಿ ಮತ್ತು ಪ್ರತಿಭಟನಾ ರ್‍ಯಾಲಿಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ವಿದ್ಯಾರ್ಥಿ ಸಮೂಹದ ಭವಿಷ್ಯವನ್ನು ರಕ್ಷಿಸಲು ಯುವ ಪೀಳಿಗೆಯು ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಕರೆ ನೀಡಲಾಗಿದೆ.</p>
]]></content:encoded>
					
		
		
			</item>
		<item>
		<title>ನೀಟ್ ಪರೀಕ್ಷೆಯಲ್ಲಿ ಮತ್ತೊಂದು ಬೃಹತ್ ಹಗರಣ: 20 ಲಕ್ಷ ರೂಪಾಯಿಗೆ ಸರ್ಕಾರಿ ವೈದ್ಯಕೀಯ ಸೀಟುಗಳ ಆಫರ್</title>
		<link>https://peepalmedia.com/neet-exam-scam-government-medical-seats-offered-for-20-lakhs/</link>
		
		<dc:creator><![CDATA[Peepal Media]]></dc:creator>
		<pubDate>Thu, 04 Jun 2026 02:29:36 +0000</pubDate>
				<category><![CDATA[ದೇಶ]]></category>
		<guid isPermaLink="false">https://peepalmedia.com/?p=79358</guid>

					<description><![CDATA[ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ನೀಟ್ (NEET 2026) ಪರೀಕ್ಷಾ ವ್ಯವಸ್ಥೆಯಲ್ಲಿ ಮತ್ತೊಂದು ಬೃಹತ್ ಹಗರಣ ಬೆಳಕಿಗೆ ಬಂದಿದೆ. ಕೇವಲ 20 ಲಕ್ಷ ರೂಪಾಯಿಗಳನ್ನು ನೀಡಿದರೆ ಸಾಕು, ಯಾವುದೇ ಕಷ್ಟವಿಲ್ಲದೇ ಪ್ರತಿಷ್ಠಿತ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಕೊಡಿಸುವುದಾಗಿ ಅಭ್ಯರ್ಥಿಗಳಿಗೆ ಆಮಿಷ ಒಡ್ಡುತ್ತಿರುವ ದಂಧೆಯೊಂದನ್ನು ದೆಹಲಿ ಪೊಲೀಸರು ಪತ್ತೆಹಚ್ಚಿದ್ದಾರೆ. ​ಪ್ರಸಕ್ತ ಸಾಲಿನ ನೀಟ್ ಪರೀಕ್ಷೆಯ ಫಲಿತಾಂಶಗಳು ಶೀಘ್ರದಲ್ಲೇ ಪ್ರಕಟಗೊಳ್ಳಲಿರುವ ಹಿನ್ನೆಲೆಯಲ್ಲಿ, ಬಿಹಾರ ಮತ್ತು ದೆಹಲಿ ಮೂಲದ ಪ್ರಮುಖ ವಂಚಕರ ಜಾಲವೊಂದು ಸಕ್ರಿಯವಾಗಿದೆ. ಕಡಿಮೆ ಅಂಕಗಳು ಅಥವಾ ಕಳಪೆ [&#8230;]]]></description>
										<content:encoded><![CDATA[
<p class="wp-block-paragraph">ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ನೀಟ್ (NEET 2026) ಪರೀಕ್ಷಾ ವ್ಯವಸ್ಥೆಯಲ್ಲಿ ಮತ್ತೊಂದು ಬೃಹತ್ ಹಗರಣ ಬೆಳಕಿಗೆ ಬಂದಿದೆ. ಕೇವಲ 20 ಲಕ್ಷ ರೂಪಾಯಿಗಳನ್ನು ನೀಡಿದರೆ ಸಾಕು, ಯಾವುದೇ ಕಷ್ಟವಿಲ್ಲದೇ ಪ್ರತಿಷ್ಠಿತ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಕೊಡಿಸುವುದಾಗಿ ಅಭ್ಯರ್ಥಿಗಳಿಗೆ ಆಮಿಷ ಒಡ್ಡುತ್ತಿರುವ ದಂಧೆಯೊಂದನ್ನು ದೆಹಲಿ ಪೊಲೀಸರು ಪತ್ತೆಹಚ್ಚಿದ್ದಾರೆ.</p>



<p class="wp-block-paragraph">​ಪ್ರಸಕ್ತ ಸಾಲಿನ ನೀಟ್ ಪರೀಕ್ಷೆಯ ಫಲಿತಾಂಶಗಳು ಶೀಘ್ರದಲ್ಲೇ ಪ್ರಕಟಗೊಳ್ಳಲಿರುವ ಹಿನ್ನೆಲೆಯಲ್ಲಿ, ಬಿಹಾರ ಮತ್ತು ದೆಹಲಿ ಮೂಲದ ಪ್ರಮುಖ ವಂಚಕರ ಜಾಲವೊಂದು ಸಕ್ರಿಯವಾಗಿದೆ. ಕಡಿಮೆ ಅಂಕಗಳು ಅಥವಾ ಕಳಪೆ ರಾಂಕ್ ಪಡೆದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಈ ದಂಧೆ ನಡೆಸಲಾಗುತ್ತಿತ್ತು. ಸರ್ಕಾರಿ ಕೋಟಾದಡಿ ಸೀಟುಗಳನ್ನು ಖಾತರಿಪಡಿಸಲು ತಲಾ 20 ಲಕ್ಷ ರೂಪಾಯಿಗಳಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿತ್ತು ಎನ್ನಲಾಗಿದೆ.</p>



<p class="wp-block-paragraph">​ಈ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ವಿಶೇಷ ತಂಡವು ಬಿಹಾರ ಮತ್ತು ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಿದೆ. ಬಂಧಿತರಿಂದ ಹಲವಾರು ನೀಟ್ ಅಭ್ಯರ್ಥಿಗಳ ಪ್ರವೇಶ ಪತ್ರಗಳು (Admit Cards), ಖಾಲಿ ಬ್ಯಾಂಕ್ ಚೆಕ್‌ಗಳು ಮತ್ತು ಒರಿಜಿನಲ್ ಶೈಕ್ಷಣಿಕ ಪ್ರಮಾಣಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. </p>



<p class="wp-block-paragraph">ಅಧಿಕೃತ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಕೆಲವು ಆಡಳಿತ ಮಂಡಳಿಗಳ ಅಧಿಕಾರಿಗಳೊಂದಿಗೆ ಶಾಮೀಲಾಗಿ ಬ್ಯಾಕ್-ಡೋರ್ ಎಂಟ್ರಿ ಮೂಲಕ ಸೀಟುಗಳನ್ನು ಬ್ಲಾಕ್ ಮಾಡಲು ಈ ಜಾಲವು ಯೋಜಿಸಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಇದರ ಹಿಂದೆ ದೊಡ್ಡ ಪ್ರಭಾವಿ ವ್ಯಕ್ತಿಗಳ ಕೈವಾಡವಿರುವ ಶಂಕೆಯಿದೆ.</p>
]]></content:encoded>
					
		
		
			</item>
		<item>
		<title>ಶಿಕ್ಷಕರ ನೇಮಕಾತಿ ಹಗರಣ: ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿಗೆ ಇಡಿ ಸಮನ್ಸ್</title>
		<link>https://peepalmedia.com/abhishek-banerjee-ed-summons-bengal-teacher-recruitment-scam/</link>
		
		<dc:creator><![CDATA[Peepal Media]]></dc:creator>
		<pubDate>Thu, 04 Jun 2026 02:24:51 +0000</pubDate>
				<category><![CDATA[ದೇಶ]]></category>
		<guid isPermaLink="false">https://peepalmedia.com/?p=79355</guid>

					<description><![CDATA[ಪಶ್ಚಿಮ ಬಂಗಾಳದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ (TMC) ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಅವರಿಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್ ಜಾರಿ ಮಾಡಿದೆ. ಜೂನ್ 15 ರಂದು ಕೋಲ್ಕತಾದ ಸಾಲ್ಟ್‌ಲೇಕ್‌ನಲ್ಲಿರುವ ಸಿಜಿಒ ಕಾಂಪ್ಲೆಕ್ಸ್‌ನ ಇಡಿ ಪ್ರಾದೇಶಿಕ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.ಬುಧವಾರ ಸಂಜೆ ದಕ್ಷಿಣ ಕೋಲ್ಕತಾದ ಕಾಳೀಘಾಟ್ ರಸ್ತೆಯಲ್ಲಿರುವ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸಕ್ಕೆ ತೆರಳಿದ ನಾಲ್ವರು ಸದಸ್ಯರ ಇಡಿ [&#8230;]]]></description>
										<content:encoded><![CDATA[
<p class="wp-block-paragraph">ಪಶ್ಚಿಮ ಬಂಗಾಳದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ (TMC) ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಅವರಿಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್ ಜಾರಿ ಮಾಡಿದೆ. </p>



<p class="wp-block-paragraph">ಜೂನ್ 15 ರಂದು ಕೋಲ್ಕತಾದ ಸಾಲ್ಟ್‌ಲೇಕ್‌ನಲ್ಲಿರುವ ಸಿಜಿಒ ಕಾಂಪ್ಲೆಕ್ಸ್‌ನ ಇಡಿ ಪ್ರಾದೇಶಿಕ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.<br>ಬುಧವಾರ ಸಂಜೆ ದಕ್ಷಿಣ ಕೋಲ್ಕತಾದ ಕಾಳೀಘಾಟ್ ರಸ್ತೆಯಲ್ಲಿರುವ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸಕ್ಕೆ ತೆರಳಿದ ನಾಲ್ವರು ಸದಸ್ಯರ ಇಡಿ ಅಧಿಕಾರಿಗಳ ತಂಡವು ಈ ನೋಟಿಸ್ ತಲುಪಿಸಿದೆ. ಆ ಸಮಯದಲ್ಲಿ ಡೈಮಂಡ್ ಹಾರ್ಬರ್ ಸಂಸದರು ಮನೆಯಲ್ಲಿ ಇಲ್ಲದ ಕಾರಣ, ಅವರ ಕಚೇರಿ ಸಿಬ್ಬಂದಿಗೆ ಸಮನ್ಸ್ ಹಸ್ತಾಂತರಿಸಲಾಗಿದೆ.<br>ಪ್ರಾಥಮಿಕ ಶಿಕ್ಷಕರ ನೇಮಕಾತಿಯಲ್ಲಿ ದೊಡ್ಡ ಮಟ್ಟದ ಅಕ್ರಮಗಳು, ಅರ್ಹತೆ ಇಲ್ಲದವರಿಗೆ ಉದ್ಯೋಗ ನೀಡಿರುವುದು ಮತ್ತು ಮೆರಿಟ್ ಪಟ್ಟಿಯ ಅವಕತವಕಗಳ ಕುರಿತು 2022 ರಿಂದ ಇಡಿ ತನಿಖೆ ನಡೆಸುತ್ತಿದೆ. </p>



<p class="wp-block-paragraph">ಈ ಪ್ರಕರಣದಲ್ಲಿ ಈಗಾಗಲೇ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಸೇರಿದಂತೆ ಹಲವು ಪ್ರಮುಖ ಟಿಎಂಸಿ ನಾಯಕರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಈ ಹಗರಣದಲ್ಲಿ ದಲ್ಲಾಳಿಗಳ ಮೂಲಕ ನಡೆದ ಕೆಲವು ಶಂಕಾಸ್ಪದ ಆರ್ಥಿಕ ವಹಿವಾಟುಗಳಿಗೆ ಸಂಬಂಧಿಸಿದಂತೆ ಅಭಿಷೇಕ್ ಬ್ಯಾನರ್ಜಿ ಅವರ ಲಿಂಕ್ ಇರುವ ಸಾಧ್ಯತೆಯನ್ನು ತನಿಖಾ ಸಂಸ್ಥೆಗಳು ಶಂಕಿಸಿವೆ. ಆದರೆ, ಈ ಎಲ್ಲ ಆರೋಪಗಳನ್ನು ಅಭಿಷೇಕ್ ಬ್ಯಾನರ್ಜಿ ತೀವ್ರವಾಗಿ ಖಂಡಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಜೆಇಇ ಅಡ್ವಾನ್ಸ್‌ಡ್ ಪರೀಕ್ಷಾ ನಿರ್ವಹಣೆಯಲ್ಲಿ ಗಂಭೀರ ಲೋಪ: 1.79 ಲಕ್ಷ ಅಭ್ಯರ್ಥಿಗಳ ವಿವರಗಳು ಆನ್‌ಲೈನ್‌ನಲ್ಲಿ ಬಹಿರಂಗ</title>
		<link>https://peepalmedia.com/jee-advanced-data-leak-iit-roorkee-candidates-details-exposed/</link>
		
		<dc:creator><![CDATA[Peepal Media]]></dc:creator>
		<pubDate>Thu, 04 Jun 2026 02:20:01 +0000</pubDate>
				<category><![CDATA[ದೇಶ]]></category>
		<guid isPermaLink="false">https://peepalmedia.com/?p=79352</guid>

					<description><![CDATA[ಇನ್ನೊಂದು ಪ್ರಮುಖ ಪರೀಕ್ಷೆಯ ನಿರ್ವಹಣೆಯಲ್ಲಿ ಗಂಭೀರ ವೈಫಲ್ಯ ಎದುರಾಗಿದ್ದು, ಜಿಇಇ ಅಡ್ವಾನ್ಸ್‌ಡ್ (JEE Advanced 2026) ಅಭ್ಯರ್ಥಿಗಳ ಅತ್ಯಂತ ಸೂಕ್ಷ್ಮ ವಿವರಗಳು ಆನ್‌ಲೈನ್‌ನಲ್ಲಿ ಬಹಿರಂಗಗೊಂಡಿವೆ. ಸಿಬಿಎಸ್‌ಇ 12ನೇ ತರಗತಿ ಪರೀಕ್ಷಾ ವ್ಯವಸ್ಥೆಯ ಗೊಂದಲಗಳಿಂದ ವಿದ್ಯಾರ್ಥಿಗಳು ಇನ್ನು ಹೊರಬರುವ ಮುನ್ನವೇ ಈ ನೂತನ ತಾಂತ್ರಿಕ ನಿರ್ಲಕ್ಷ್ಯದ ಘಟನೆ ಬೆಳಕಿಗೆ ಬಂದಿದೆ.ಕಳೆದ ವಾರವಷ್ಟೇ ಪ್ರಕಟಗೊಂಡ ಜಿಇಇ ಅಡ್ವಾನ್ಸ್‌ಡ್ ಫಲಿತಾಂಶಗಳಿಗೆ ಸಂಬಂಧಿಸಿದಂತೆ ಸುಮಾರು 1.79 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳ ಫಲಿತಾಂಶದ ದಾಖಲೆಗಳು ಹಾಗೂ 1.87 ಲಕ್ಷ ಅಭ್ಯರ್ಥಿಗಳ ಅಡ್ಮಿಟ್ ಕಾರ್ಡ್ (ಪ್ರವೇಶ [&#8230;]]]></description>
										<content:encoded><![CDATA[
<p class="wp-block-paragraph">ಇನ್ನೊಂದು ಪ್ರಮುಖ ಪರೀಕ್ಷೆಯ ನಿರ್ವಹಣೆಯಲ್ಲಿ ಗಂಭೀರ ವೈಫಲ್ಯ ಎದುರಾಗಿದ್ದು, ಜಿಇಇ ಅಡ್ವಾನ್ಸ್‌ಡ್ (JEE Advanced 2026) ಅಭ್ಯರ್ಥಿಗಳ ಅತ್ಯಂತ ಸೂಕ್ಷ್ಮ ವಿವರಗಳು ಆನ್‌ಲೈನ್‌ನಲ್ಲಿ ಬಹಿರಂಗಗೊಂಡಿವೆ. ಸಿಬಿಎಸ್‌ಇ 12ನೇ ತರಗತಿ ಪರೀಕ್ಷಾ ವ್ಯವಸ್ಥೆಯ ಗೊಂದಲಗಳಿಂದ ವಿದ್ಯಾರ್ಥಿಗಳು ಇನ್ನು ಹೊರಬರುವ ಮುನ್ನವೇ ಈ ನೂತನ ತಾಂತ್ರಿಕ ನಿರ್ಲಕ್ಷ್ಯದ ಘಟನೆ ಬೆಳಕಿಗೆ ಬಂದಿದೆ.<br>ಕಳೆದ ವಾರವಷ್ಟೇ ಪ್ರಕಟಗೊಂಡ ಜಿಇಇ ಅಡ್ವಾನ್ಸ್‌ಡ್ ಫಲಿತಾಂಶಗಳಿಗೆ ಸಂಬಂಧಿಸಿದಂತೆ ಸುಮಾರು 1.79 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳ ಫಲಿತಾಂಶದ ದಾಖಲೆಗಳು ಹಾಗೂ 1.87 ಲಕ್ಷ ಅಭ್ಯರ್ಥಿಗಳ ಅಡ್ಮಿಟ್ ಕಾರ್ಡ್ (ಪ್ರವೇಶ ಪತ್ರ) ಪಿಡಿಎಫ್‌ಗಳು ಯಾವುದೇ ಅಧಿಕೃತ ದೃಢೀಕರಣ ಅಥವಾ ಪಾಸ್‌ವರ್ಡ್ ಇಲ್ಲದೆಯೇ ಆನ್‌ಲೈನ್‌ನಲ್ಲಿ ಮುಕ್ತವಾಗಿ ಲಭ್ಯವಿರುವುದು ಪತ್ತೆಯಾಗಿದೆ.</p>



<p class="wp-block-paragraph"> ದುಬೈ ಮೂಲದ ಸೈಬರ್ ಭದ್ರತಾ ಸಂಶೋಧಕರೊಬ್ಬರು ಈ ಗಂಭೀರ ಲೋಪವನ್ನು ಸಾಮಾಜಿಕ ಮಾಧ್ಯಮ ಎಕ್ಸ್ (X) ಮುಖಾಂತರ ಬಹಿರಂಗಪಡಿಸಿ, ನಿರ್ವಹಣಾ ಸಂಸ್ಥೆಯ ಗಮನಕ್ಕೆ ತಂದಿದ್ದಾರೆ.<br>ಬಹಿರಂಗಗೊಂಡ ದತ್ತಾಂಶದಲ್ಲಿ ಅಭ್ಯರ್ಥಿಗಳ ಹೆಸರುಗಳು, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆಗಳು, ವಿಷಯವಾರು ಅಂಕಗಳು ಮತ್ತು ಪಡೆದ ರಾಂಕ್‌ಗಳೂ ಸೇರಿದಂತೆ ಎಲ್ಲಾ ಖಾಸಗಿ ವಿವರಗಳು ಲಭ್ಯವಿವೆ. ಈ ವರ್ಷದ ಪರೀಕ್ಷೆಯನ್ನು ಆಯೋಜಿಸಿದ್ದ ಐಐಟಿ ರೂರ್ಕಿ (IIT Roorkee) ಸಂಸ್ಥೆಯು ಈ ದತ್ತಾಂಶ ಸೋರಿಕೆಯಾಗಿರುವುದನ್ನು ಅಧಿಕೃತವಾಗಿ ಒಪ್ಪಿಕೊಂಡಿದೆ. </p>



<p class="wp-block-paragraph">ವ್ಯವಸ್ಥೆಯಲ್ಲಿದ್ದ ಕ್ಲೌಡ್ ಸ್ಟೋರೇಜ್‌ನ ತಪ್ಪು ಕಾನ್ಫಿಗರೇಶನ್ (Cloud Storage Misconfiguration) ಕಾರಣದಿಂದಾಗಿ ಈ ತಾಂತ್ರಿಕ ದೋಷ ಸಂಭವಿಸಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಆದಾಗ್ಯೂ, ಬಹಿರಂಗಗೊಂಡ ದತ್ತಾಂಶವು ಕೇವಲ ಓದಲು ಮಾತ್ರ ಸಾಧ್ಯವಿರುವ (Read-Only) ರೂಪದಲ್ಲಿದ್ದ ಕಾರಣ, ಯಾವುದೇ ವಿದ್ಯಾರ್ಥಿಯ ಅಧಿಕೃತ ಅಂಕಗಳನ್ನು ಅಥವಾ ರಾಂಕ್ ದಾಖಲೆಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಐಐಟಿ ರೂರ್ಕಿ ತಿಳಿಸಿದೆ. ಸದ್ಯ ಈ ಭದ್ರತಾ ಲೋಪವನ್ನು ಸರಿಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.</p>



<p class="wp-block-paragraph"></p>
]]></content:encoded>
					
		
		
			</item>
		<item>
		<title>ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ಭೀಕರ ದಾಳಿ: ಭಾರತೀಯ ಪ್ರಜೆ ಸಾವು, 63 ಜನರಿಗೆ ಗಾಯ</title>
		<link>https://peepalmedia.com/kuwait-airport-attack-iran-missile-drone-strike-indian-killed/</link>
		
		<dc:creator><![CDATA[N S]]></dc:creator>
		<pubDate>Thu, 04 Jun 2026 02:14:13 +0000</pubDate>
				<category><![CDATA[ವಿದೇಶ]]></category>
		<guid isPermaLink="false">https://peepalmedia.com/?p=79349</guid>

					<description><![CDATA[​ಕುವೈಟ್ ಎಂಡ್‌ಪಾಯಿಂಟ್: ಗಲ್ಫ್ ವಲಯದಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಮತ್ತೊಮ್ಮೆ ತಾರಕಕ್ಕೇರಿದೆ. ಬುಧವಾರ ಕುವೈಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು (Kuwait International Airport) ಗುರಿಯಾಗಿಸಿಕೊಂಡು ಇರಾನ್ ಪಡೆಗಳು ನಡೆಸಿದ ಭೀಕರ ಡ್ರೋನ್ ಮತ್ತು ಕ್ಷಿಪಣಿ ದಾಳಿಯಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ದುರ್ಮರಣಕ್ಕೀಡಾಗಿದ್ದಾರೆ. ಈ ಭೀಕರ ದಾಳಿಯಲ್ಲಿ ಕನಿಷ್ಠ 63 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಕುವೈಟ್‌ ದೇಶದ ಮಿಲಿಟರಿ ಮೂಲಗಳು ದೃಢಪಡಿಸಿವೆ. ​ಮೃತಪಟ್ಟ ವ್ಯಕ್ತಿ ಭಾರತೀಯ ಪ್ರಜೆಯಾಗಿದ್ದು, ಕುವೈತ್‌ನಲ್ಲಿರುವ [&#8230;]]]></description>
										<content:encoded><![CDATA[
<p class="wp-block-paragraph">​ಕುವೈಟ್ ಎಂಡ್‌ಪಾಯಿಂಟ್: ಗಲ್ಫ್ ವಲಯದಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಮತ್ತೊಮ್ಮೆ ತಾರಕಕ್ಕೇರಿದೆ. ಬುಧವಾರ ಕುವೈಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು (Kuwait International Airport) ಗುರಿಯಾಗಿಸಿಕೊಂಡು ಇರಾನ್ ಪಡೆಗಳು ನಡೆಸಿದ ಭೀಕರ ಡ್ರೋನ್ ಮತ್ತು ಕ್ಷಿಪಣಿ ದಾಳಿಯಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ದುರ್ಮರಣಕ್ಕೀಡಾಗಿದ್ದಾರೆ. </p>



<p class="wp-block-paragraph">ಈ ಭೀಕರ ದಾಳಿಯಲ್ಲಿ ಕನಿಷ್ಠ 63 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಕುವೈಟ್‌ ದೇಶದ ಮಿಲಿಟರಿ ಮೂಲಗಳು ದೃಢಪಡಿಸಿವೆ.</p>



<p class="wp-block-paragraph">​ಮೃತಪಟ್ಟ ವ್ಯಕ್ತಿ ಭಾರತೀಯ ಪ್ರಜೆಯಾಗಿದ್ದು, ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ (Indian Embassy) ಈ ವಿಷಯವನ್ನು ಖಚಿತಪಡಿಸಿದೆ. ಮೃತರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯ ನೆರವು ನೀಡಲಾಗುತ್ತಿದೆ ಎಂದು ರಾಯಭಾರ ಕಚೇರಿ ಪ್ರಕಟಿಸಿದೆ.</p>



<p class="wp-block-paragraph">​ಇರಾನ್‌ನ ಗೆರುಕ್ ಮತ್ತು ಖೇಶ್ಮ್ ದ್ವೀಪಗಳ ಮೇಲಿನ ಅಮೆರಿಕದ ಇತ್ತೀಚಿನ ವಾಯುದಾಳಿಗಳಿಗೆ ಪ್ರತಿಕಾರವಾಗಿ ಇರಾನ್ ಈ ದಾಳಿ ನಡೆಸಿದೆ ಎನ್ನಲಾಗಿದೆ. ಕುವೈಟ್ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳು ಹಾಗೂ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಇರಾನ್ ಪಡೆಗಳು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಕಾಮಿಕಾಜೆ ಡ್ರೋನ್‌ಗಳ ಮೂಲಕ ಈ ದಾಳಿ ನಡೆಸಿವೆ.</p>



<p class="wp-block-paragraph">​ಈ ಭೀಕರ ದಾಳಿಯಿಂದಾಗಿ ಕುವೈತ್ ವಿಮಾನ ನಿಲ್ದಾಣದ ಟರ್ಮಿನಲ್-1 (Terminal 1) ಭವನಕ್ಕೆ ಅತ್ಯಂತ ಭಾರಿ ಪ್ರಮಾಣದ ಹಾನಿಯಾಗಿದೆ. ರನ್‌ವೇ ಮತ್ತು ಪಾರ್ಕಿಂಗ್ ಪ್ರದೇಶಗಳಲ್ಲಿ ಅವಶೇಷಗಳು ಮತ್ತು ಬೆಂಕಿ ಕಾಣಿಸಿಕೊಂಡ ಸಾಮಾಜಿಕ ಮಾಧ್ಯಮಗಳ ದೃಶ್ಯಗಳು ಪರಿಸ್ಥಿತಿಯ ಗಂಭೀರತೆಯನ್ನು ಬಿಂಬಿಸುತ್ತಿವೆ. </p>



<p class="wp-block-paragraph">ದಾಳಿಯ ಬೆನ್ನಲ್ಲೇ ಕುವೈತ್ ನಾಗರಿಕ ವಿಮಾನಯಾನ ಪ್ರಾಧಿಕಾರವು ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ, ಎಲ್ಲಾ ವಾಣಿಜ್ಯ ವಿಮಾನಗಳ ಸಂಚಾರವನ್ನು ತಕ್ಷಣವೇ ಸ್ಥಗಿತಗೊಳಿಸಿತು. </p>



<p class="wp-block-paragraph">ಕುವೈತ್‌ಗೆ ಬರಬೇಕಿದ್ದ ಹಲವಾರು ಅಂತರರಾಷ್ಟ್ರೀಯ ವಿಮಾನಗಳನ್ನು ನೆರೆಹೊರೆಯ ಸುರಕ್ಷಿತ ವಲಯಗಳಿಗೆ ತಿರುಗಿಸಲಾಗಿದೆ. ತದನಂತರ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ಟರ್ಮಿನಲ್-4 ರ ಮೂಲಕ ಕೆಲವು ವಿಮಾನ ಸೇವೆಗಳನ್ನು ಭಾಗಶಃ ಪುನರಾರಂಭಿಸಲಾಗಿದೆ.</p>



<p class="wp-block-paragraph">​ಇರಾನ್‌ನ ಈ ಕೃತ್ಯವನ್ನು ಕುವೈತ್ ರಕ್ಷಣಾ ಸಚಿವಾಲಯದ ವಕ್ತಾರ ಬ್ರಿಗೇಡಿಯರ್ ಜನರಲ್ ಸೌದ್ ಅಬ್ದುಲ್ ಅಜೀಜ್ ಅಲ್-ಅತ್ವಾನ್ ಕಠಿಣ ಪದಗಳಲ್ಲಿ ಖಂಡಿಸಿದ್ದು, ಇದು ಕೃಮಿನಲ್ ಆಕ್ರಮಣಶೀಲತೆ ಎಂದು ಕರೆದಿದ್ದಾರೆ. ಇತ್ತ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಈ ದಾಳಿಯನ್ನು ಉದ್ದೇಶಪೂರ್ವಕ ಮತ್ತು ಅಸಮರ್ಥನೀಯ ಎಂದು ಬಣ್ಣಿಸಿದೆ. </p>



<p class="wp-block-paragraph">ಗಲ್ಫ್ ವಲಯದಲ್ಲಿ ಏಪ್ರಿಲ್ 8 ರಂದು ಜಾರಿಗೆ ಬಂದಿದ್ದ ಕದನ ವಿರಾಮ ಒಪ್ಪಂದದ ನಂತರ ನಡೆದ ಮೊದಲ ಭೀಕರ ಮತ್ತು ಪ್ರಾಣಾಪಾಯ ಉಂಟುಮಾಡಿದ ದಾಳಿ ಇದಾಗಿದೆ. ಇದರಿಂದಾಗಿ ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಯುದ್ಧದ ಭೀತಿ ಆವರಿಸಿದೆ.</p>
]]></content:encoded>
					
		
		
			</item>
		<item>
		<title>​ತಂಪು ಸುದ್ದಿ.. ಮುಂದಿನ 24 ಗಂಟೆಗಳಲ್ಲಿ ಕೇರಳ ಕರಾವಳಿಗೆ ನೈಋತ್ಯ ಮುಂಗಾರು ಪ್ರವೇಶ!</title>
		<link>https://peepalmedia.com/kerala-southwest-monsoon-arrival-imd-rain-alert-karnataka/</link>
		
		<dc:creator><![CDATA[Peepal Media]]></dc:creator>
		<pubDate>Thu, 04 Jun 2026 02:06:51 +0000</pubDate>
				<category><![CDATA[ಹವಾಮಾನ]]></category>
		<guid isPermaLink="false">https://peepalmedia.com/?p=79346</guid>

					<description><![CDATA[ಬೆಂಗಳೂರು: ದೇಶಾದ್ಯಂತ ತೀವ್ರವಾದ ಬಿಸಿಲು ಮತ್ತು ಸೆಕೆಯಿಂದ ಕಂಗಾಲಾಗಿರುವ ಜನತೆಗೆ ಭಾರತೀಯ ಹವಾಮಾನ ಇಲಾಖೆ (IMD) ಅತ್ಯಂತ ಸಿಹಿ ಸುದ್ದಿ ನೀಡಿದೆ. ದೇಶದ ಕೋಟ್ಯಂತರ ಜನತೆ ಮತ್ತು ರೈತಾಪಿ ವರ್ಗ ಕಾತರದಿಂದ ಕಾಯುತ್ತಿರುವ ನೈಋತ್ಯ ಮುಂಗಾರು (Southwest Monsoon) ಮುಂದಿನ 24 ಗಂಟೆಗಳಲ್ಲಿ ಕೇರಳ ಕರಾವಳಿಯನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ. ​ಸಾಮಾನ್ಯವಾಗಿ ಜೂನ್ 1 ರ ವೇಳೆಗೆ ಕೇರಳ ತಲುಪಬೇಕಿದ್ದ ಮುಂಗಾರು ಈ ಬಾರಿ ಸ್ವಲ್ಪ ವಿಳಂಬವಾಗಿದ್ದರೂ, ಪ್ರಸ್ತುತ ಪರಿಸ್ಥಿತಿಗಳು ಪೂರಕವಾಗಿದ್ದು, ಅತ್ಯಂತ [&#8230;]]]></description>
										<content:encoded><![CDATA[
<h1 class="wp-block-heading"></h1>



<p class="wp-block-paragraph"><strong>ಬೆಂಗಳೂರು:</strong> ದೇಶಾದ್ಯಂತ ತೀವ್ರವಾದ ಬಿಸಿಲು ಮತ್ತು ಸೆಕೆಯಿಂದ ಕಂಗಾಲಾಗಿರುವ ಜನತೆಗೆ ಭಾರತೀಯ ಹವಾಮಾನ ಇಲಾಖೆ (IMD) ಅತ್ಯಂತ ಸಿಹಿ ಸುದ್ದಿ ನೀಡಿದೆ. ದೇಶದ ಕೋಟ್ಯಂತರ ಜನತೆ ಮತ್ತು ರೈತಾಪಿ ವರ್ಗ ಕಾತರದಿಂದ ಕಾಯುತ್ತಿರುವ ನೈಋತ್ಯ ಮುಂಗಾರು (Southwest Monsoon) ಮುಂದಿನ 24 ಗಂಟೆಗಳಲ್ಲಿ ಕೇರಳ ಕರಾವಳಿಯನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ.</p>



<p class="wp-block-paragraph">​ಸಾಮಾನ್ಯವಾಗಿ ಜೂನ್ 1 ರ ವೇಳೆಗೆ ಕೇರಳ ತಲುಪಬೇಕಿದ್ದ ಮುಂಗಾರು ಈ ಬಾರಿ ಸ್ವಲ್ಪ ವಿಳಂಬವಾಗಿದ್ದರೂ, ಪ್ರಸ್ತುತ ಪರಿಸ್ಥಿತಿಗಳು ಪೂರಕವಾಗಿದ್ದು, ಅತ್ಯಂತ ವೇಗವಾಗಿ ಮುನ್ನಡೆಯುತ್ತಿವೆ. ಇದರಿಂದಾಗಿ ದೇಶದಲ್ಲಿ ಮುಂಗಾರು ಹಂಗಾಮಿಗೆ ಹಸಿರು ನಿಶಾನೆ ಸಿಕ್ಕಂತಾಗಿದೆ.</p>



<h3 class="wp-block-heading">​ಕೇರಳದಲ್ಲಿ ಭಾರಿ ಮಳೆ.. ಆರೆಂಜ್ ಅಲರ್ಟ್ ಘೋಷಣೆ!</h3>



<p class="wp-block-paragraph">​ಮುಂಗಾರು ಆಗಮನಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಿರುವುದರಿಂದ ಮುಂದಿನ 24 ಗಂಟೆಗಳಲ್ಲಿ ಆಗ್ನೇಯ ಅರಬ್ಬಿ ಸಮುದ್ರ, ಲಕ್ಷದ್ವೀಪ, ಕೇರಳ ಮತ್ತು ತಮಿಳುನಾಡಿನ ಕೆಲವು ಭಾಗಗಳಿಗೆ ಮುಂಗಾರು ಮಾರುತಗಳು ವ್ಯಾಪಿಸಲಿವೆ. ಮಾನ್ಸೂನ್ ಪ್ರವೇಶದ ಹಿನ್ನೆಲೆಯಲ್ಲಿ ಕೇರಳದ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರಿ ಗಾಳಿ-ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಎಚ್ಚರಿಸಿದೆ. ಈ ಹಿನ್ನೆಲೆಯಲ್ಲಿ ವಾತಾವರಣ ಇಲಾಖೆಯು ಕೆಲವು ಪ್ರದೇಶಗಳಿಗೆ <strong>&#8216;ಆರೆಂಜ್ ಅಲರ್ಟ್&#8217;</strong> ಘೋಷಿಸಿದೆ.</p>



<h3 class="wp-block-heading">​ಕರ್ನಾಟಕಕ್ಕೆ ಮುಂಗಾರು ಪ್ರವೇಶ ಯಾವಾಗ?</h3>



<p class="wp-block-paragraph">​ಹವಾಮಾನ ತಜ್ಞರ ಅಂದಾಜಿನ ಪ್ರಕಾರ, ಕೇರಳ ಕರಾವಳಿಯನ್ನು ಸ್ಪರ್ಶಿಸಿದ ನಂತರ ಮುಂಗಾರು ಮತ್ತಷ್ಟು ಬಲಗೊಂಡು ಮುನ್ನಡೆಯಲಿದೆ. ಮುಂದಿನ ಎರಡು-ಮೂರು ದಿನಗಳಲ್ಲಿ ಇದು ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗದ ಮೂಲಕ ರಾಜ್ಯವನ್ನು ಪ್ರವೇಶಿಸುವ ಸಾಧ್ಯತೆಯಿದೆ. ಜೂನ್ ಎರಡನೇ ವಾರದ ವೇಳೆಗೆ ಇಡೀ ಕರ್ನಾಟಕ ರಾಜ್ಯಾದ್ಯಂತ ಮುಂಗಾರು ಮಳೆ ವ್ಯಾಪಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>



<p class="wp-block-paragraph">​<strong>ರೈತಾಪಿ ವಲಯದಲ್ಲಿ ಚಿಗುರಿದ ಆಸೆ:</strong></p>



<p class="wp-block-paragraph">ದೇಶದ ಆರ್ಥಿಕತೆ ಮತ್ತು ವಿಶೇಷವಾಗಿ ಕೃಷಿ ವಲಯಕ್ಕೆ ನೈಋತ್ಯ ಮುಂಗಾರೇ ಜೀವಾಳ. ಮುಂಗಾರು ಆಗಮನದ ಈ ತಾಜಾ ವರದಿಯಿಂದಾಗಿ ಮುಂಗಾರು ಬಿತ್ತನೆಗೆ ಸಜ್ಜಾಗುತ್ತಿರುವ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಇನ್ನು ಕೆಲವೇ ದಿನಗಳಲ್ಲಿ ಬಿಸಿಲಿನ ತಾಪ ಸಂಪೂರ್ಣವಾಗಿ ಕಡಿಮೆಯಾಗಿ, ವಾತಾವರಣ ತಂಪಾಗಲಿದೆ.</p>



<p class="wp-block-paragraph"></p>
]]></content:encoded>
					
		
		
			</item>
		<item>
		<title>ಬಿಹಾರದ ಖಾಸಗಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ: 10 ರೋಗಿಗಳು ಸಜೀವ ದಹನ, ಹಲವರ ಸ್ಥಿತಿ ಗಂಭೀರ</title>
		<link>https://peepalmedia.com/massive-fire-breaks-out-at-private-hospital-in-bihar/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 04 Jun 2026 01:47:54 +0000</pubDate>
				<category><![CDATA[ಅಪಘಾತ]]></category>
		<category><![CDATA[ಬ್ರೇಕಿಂಗ್ ಸುದ್ದಿ]]></category>
		<guid isPermaLink="false">https://peepalmedia.com/?p=79341</guid>

					<description><![CDATA[ಮುಜಾಫರ್‌ಪುರ (ಬಿಹಾರ), ಜೂನ್ 4: ಬಿಹಾರದ ಮುಜಾಫರ್‌ಪುರ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಗುರುವಾರ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 10 ರೋಗಿಗಳು ಸಜೀವ ದಹನಗೊಂಡು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಘಟನೆಯ ವೇಳೆ ಆಸ್ಪತ್ರೆಯಲ್ಲಿದ್ದ 20ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಆಸ್ಪತ್ರೆಯಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಪರಿಣಾಮ ಆಸ್ಪತ್ರೆಯಾದ್ಯಂತ ದಟ್ಟ [&#8230;]]]></description>
										<content:encoded><![CDATA[
<p class="wp-block-paragraph">ಮುಜಾಫರ್‌ಪುರ (ಬಿಹಾರ), ಜೂನ್ 4: ಬಿಹಾರದ ಮುಜಾಫರ್‌ಪುರ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಗುರುವಾರ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 10 ರೋಗಿಗಳು ಸಜೀವ ದಹನಗೊಂಡು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಘಟನೆಯ ವೇಳೆ ಆಸ್ಪತ್ರೆಯಲ್ಲಿದ್ದ 20ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>



<p class="wp-block-paragraph">ಪ್ರಾಥಮಿಕ ತನಿಖೆಯ ಪ್ರಕಾರ ಆಸ್ಪತ್ರೆಯಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಪರಿಣಾಮ ಆಸ್ಪತ್ರೆಯಾದ್ಯಂತ ದಟ್ಟ ಹೊಗೆ ಆವರಿಸಿಕೊಂಡು ಆತಂಕದ ವಾತಾವರಣ ನಿರ್ಮಾಣವಾಯಿತು.</p>



<p class="wp-block-paragraph">ತೀವ್ರ ನಿಗಾ ಘಟಕ (ಐಸಿಯು) ಹಾಗೂ ವಿವಿಧ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಬೆಂಕಿ ಮತ್ತು ಹೊಗೆಯಿಂದ ಹೊರಬರಲು ಸಾಧ್ಯವಾಗದೆ ಸಿಲುಕಿಕೊಂಡರು. ಹೊಗೆಯ ತೀವ್ರತೆ ಹಾಗೂ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಹಲವರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.</p>



<p class="wp-block-paragraph">ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಆಸ್ಪತ್ರೆಯ ಕಿಟಕಿಗಳು ಮತ್ತು ಬಾಗಿಲುಗಳನ್ನು ಒಡೆದು ಒಳಗಿದ್ದ ರೋಗಿಗಳು ಹಾಗೂ ಅವರ ಸಂಬಂಧಿಕರನ್ನು ಹೊರಗೆ ಕರೆತರಲಾಯಿತು. ಕಾರ್ಯಾಚರಣೆಯಲ್ಲಿ 20ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.</p>



<p class="wp-block-paragraph">ರಕ್ಷಿಸಲ್ಪಟ್ಟವರಲ್ಲಿ ಕೆಲವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಆಸ್ಪತ್ರೆಯ ಸುರಕ್ಷತಾ ಕ್ರಮಗಳು ಹಾಗೂ ಅಗ್ನಿ ಅವಘಡದ ನಿಖರ ಕಾರಣದ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಸಚಿವರಾಗಿ ಮೊದಲ ಬಾರಿಗೆ ಯತೀಂದ್ರ ಸಿದ್ದರಾಮಯ್ಯ &#8211; ಪ್ರಮಾಣ ವಚನ ಸ್ವೀಕಾರ</title>
		<link>https://peepalmedia.com/yathindra-siddaramaiah-takes-oath-as-minister-for-the-first-time/</link>
		
		<dc:creator><![CDATA[ರಮೇಶ್‌ ಹಾಸನ್‌]]></dc:creator>
		<pubDate>Wed, 03 Jun 2026 13:56:25 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[ರಾಜಕೀಯ]]></category>
		<category><![CDATA[karnataka]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=79337</guid>

					<description><![CDATA[ಬೆಂಗಳೂರು : ಕರ್ನಾಟಕದ(karnataka) 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್‌(DK Shivakumar) ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಡಿಕೆ ಶಿವಕುಮಾರ್‌ ಸಚಿವ ಸಂಪುಟದಲ್ಲಿ ಡಾ.ಯತೀಂದ್ರ(Dr.yathindra) ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮೊದಲ ಬಾರಿಗೆ ಸಚಿವ ಸ್ಥಾನದ ಗರಿಡಾ. ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಬಾರಿಯ ಸಂಪುಟ ರಚನೆಯಲ್ಲಿ ಹಿರಿಯ ನಾಯಕರ ನಡುವೆ [&#8230;]]]></description>
										<content:encoded><![CDATA[
<p class="wp-block-paragraph"><strong>ಬೆಂಗಳೂರು :</strong> ಕರ್ನಾಟಕದ(karnataka) 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್‌(DK Shivakumar) ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಡಿಕೆ ಶಿವಕುಮಾರ್‌ ಸಚಿವ ಸಂಪುಟದಲ್ಲಿ ಡಾ.ಯತೀಂದ್ರ(Dr.yathindra) ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.</p>



<p class="wp-block-paragraph"><strong>ಮೊದಲ ಬಾರಿಗೆ ಸಚಿವ ಸ್ಥಾನದ ಗರಿ</strong><br>ಡಾ. ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಬಾರಿಯ ಸಂಪುಟ ರಚನೆಯಲ್ಲಿ ಹಿರಿಯ ನಾಯಕರ ನಡುವೆ ಯುವಕರಿಗೆ ಮತ್ತು ಹೊಸ ಮುಖಗಳಿಗೆ ಆದ್ಯತೆ ನೀಡಬೇಕು ಎಂಬ ಹೈಕಮಾಂಡ್ ಸೂತ್ರದ ಅಡಿಯಲ್ಲಿ ಯತೀಂದ್ರ ಅವರಿಗೆ ಮೊದಲ ಪಟ್ಟಿಯಲ್ಲೇ ಸ್ಥಾನ ಕಲ್ಪಿಸಲಾಗಿದೆ. ಪ್ರಸ್ತುತ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಕರ್ನಾಟಕ ವಿಧಾನಪರಿಷತ್ (MLC) ಸದಸ್ಯರಾಗಿದ್ದಾರೆ</p>



<p class="wp-block-paragraph">ಈ ಹಿಂದೆ ವರುಣಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದ ಇವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ತಂದೆ ಸಿದ್ದರಾಮಯ್ಯ ಅವರಿಗಾಗಿ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ತದನಂತರ ಪಕ್ಷ ಇವರ ಸಂಘಟನಾ ಶಕ್ತಿಯನ್ನು ಗುರುತಿಸಿ ಮೇಲ್ಮನೆಗೆ ಆಯ್ಕೆ ಮಾಡಿತ್ತು. ಇದೀಗ ಮೇಲ್ಮನೆಯ ಸದಸ್ಯರ ಕೋಟಾದ ಅಡಿಯಲ್ಲಿಯೇ ಇವರಿಗೆ ಜವಾಬ್ದಾರಿಯುತ ಸಚಿವ ಸ್ಥಾನದ ಸಾರಥ್ಯ ಸಿಕ್ಕಿದೆ.</p>



<p class="wp-block-paragraph">ಬೆಂಗಳೂರಿನ ಲೋಕಭವನದ ಗಾಜಿನಮನೆಯಲ್ಲಿ ನಡೆದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಐತಿಹಾಸಿಕ ಪ್ರಮಾಣ ವಚನ ಸ್ವೀಕಾರ ಸಮಾರಂಭವು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಗಣ್ಯಾತಿಗಣ್ಯರ ಸಾಕ್ಷಿಗೆ ಸಾಕ್ಷಿಯಾಯಿತು. ಗೌರವಾನ್ವಿತ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರು ನೂತನ ಸಿಎಂ ಮತ್ತು ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಈ ಕಾರ್ಯಕ್ರಮದಲ್ಲಿ, ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಮತ್ತು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ದೆಹಲಿಯ ಪ್ರಮುಖ ನಾಯಕರ ದಂಡೇ ಪಾಲ್ಗೊಂಡಿತ್ತು.</p>



<p class="wp-block-paragraph">ವೇದಿಕೆಯ ಮೇಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನೂತನ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ಸಂಪುಟ ಸೇರಿದ 13 ಜನ ಹೊಸ ಸಚಿವರಾದ ಕೆ.ಎಚ್. ಮುನಿಯಪ್ಪ, ಎಂ.ಬಿ. ಪಾಟೀಲ್, ಕೃಷ್ಣ ಬೈರೇಗೌಡ, ಯು.ಟಿ. ಖಾದರ್, ಈಶ್ವರ್ ಖಂಡ್ರೆ, ಡಾ. ಶರಣಪ್ರಕಾಶ್ ಪಾಟೀಲ್, ಬೈರತಿ ಸುರೇಶ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ ಮತ್ತು ಡಾ. ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ನೂರಾರು ಶಾಸಕರು ಮತ್ತು ಸಂಸದರು ಉಪಸ್ಥಿತರಿದ್ದರು. ಇವರೊಂದಿಗೆ ವಿವಿಧ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಮತ್ತು ವಿವಿಧ ರಾಜ್ಯಗಳ ಪಿಸಿಸಿ ಅಧ್ಯಕ್ಷರು ಆಗಮಿಸಿ ಶುಭ ಹಾರೈಸಿದರು.</p>
]]></content:encoded>
					
		
		
			</item>
	</channel>
</rss>
