Home ಬ್ರೇಕಿಂಗ್ ಸುದ್ದಿ ಮಳೆಯ ದುರಂತ ; ಕಾಲುವೆಯಲ್ಲಿ ಕೊಚ್ಚಿಹೋದ ಅಣ್ಣ ತಂಗಿ

ಮಳೆಯ ದುರಂತ ; ಕಾಲುವೆಯಲ್ಲಿ ಕೊಚ್ಚಿಹೋದ ಅಣ್ಣ ತಂಗಿ

0

ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ನಗರದಾದ್ಯಂತ ಹಲವು ಕಡೆ ಅನಾಹುತಗಳು ಸಂಭವಿಸಿವೆ. ಇದರ ನಡುವೆ ಘೋರ ದುರಂತವೊಂದು ನಡೆದಿದ್ದು ಕಾಲುವೆಯಲ್ಲಿ ಅಣ್ಣ ತಂಗಿ ಇಬ್ಬರು ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರಿನ ಕೆಂಗೇರಿ ಬಳಿ ಅಣ್ಣ, ತಂಗಿ ಇಬ್ಬರೂ ನಾಪತ್ತೆಯಾಗಿದ್ದು, ಕಾಲುವೆಯಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಸಧ್ಯ ಸ್ಥಳೀಯರು ಮತ್ತು ಬಿಬಿಎಂಪಿ ಸಹಯೋಗದೊಂದಿಗೆ ಶೋಧ ಕಾರ್ಯ ಶುರುವಾಗಿದೆ.

ಅಣ್ಣ ಶ್ರೀನಿವಾಸ್ (13) ಹಾಗೂ ತಂಗಿ (11) ನಾಪತ್ತೆಯಾಗಿದ್ದು, ಮಳೆನೀರಿನಲ್ಲಿ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದೆ. ಇನ್ನು ನಾಪತ್ತೆಯಾಗಿರುವ ಮಕ್ಕಳಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

You cannot copy content of this page

Exit mobile version