<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ABVP &#8211; Peepal Media</title>
	<atom:link href="https://peepalmedia.com/tag/abvp/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Fri, 19 Jan 2024 13:50:03 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>ABVP &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>300 ರಾಮಾಯಣಗಳ ವಿರುದ್ಧ ನಿಂತ ಎಬಿವಿಪಿ!</title>
		<link>https://peepalmedia.com/abvp-protested-against-300-ramayanas/</link>
		
		<dc:creator><![CDATA[Charan Aivarnad]]></dc:creator>
		<pubDate>Fri, 19 Jan 2024 12:34:05 +0000</pubDate>
				<category><![CDATA[ಅಂಕಣ]]></category>
		<category><![CDATA[ABVP]]></category>
		<category><![CDATA[ak ramanujan]]></category>
		<category><![CDATA[ayodhya]]></category>
		<category><![CDATA[Bangalore]]></category>
		<category><![CDATA[bjp]]></category>
		<category><![CDATA[breaking news]]></category>
		<category><![CDATA[charan Aivarnad]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[modi]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[ram]]></category>
		<category><![CDATA[Ram Mandira]]></category>
		<category><![CDATA[rama]]></category>
		<category><![CDATA[ramayana]]></category>
		<category><![CDATA[state politics]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=35181</guid>

					<description><![CDATA[ಎಷ್ಟು&#160; ರಾಮಾಯಣಗಳಿವೆ ? ಮುನ್ನೂರು? ಮೂರು ಸಾವಿರ? ಕೆಲವು ರಾಮಾಯಣಗಳ ಕೊನೆಯಲ್ಲಿ, ಕೆಲವೊಮ್ಮೆ ಪ್ರಶ್ನೆಯೊಂದನ್ನು ಕೇಳಲಾಗುತ್ತದೆ: ಎಷ್ಟು &#160;ರಾಮಾಯಣಗಳಿವೆ ? ಈ ಪ್ರಶ್ನೆಗೆ ಉತ್ತರಿಸುತ್ತಾ ಕೆಲವು ರಾಮಯಣಗಳು, ಇಲ್ಲೊಂದಿದೆ..ಎನ್ನುತ್ತವೆ! ಹೀಗೆ ಭಾರತದ ಹೆಸರಾಂತ ಕವಿ ಮತ್ತು ವಿದ್ವಾಂಸ ಎ ಕೆ ರಾಮಾನುಜನ್ ಅವರ ‘ಮುನ್ನೂರು ರಾಮಾಯಣಗಳು’ ಎಂಬ ಪ್ರಬಂಧ ಆರಂಭವಾಗುತ್ತದೆ. 1987ರಲ್ಲಿ ಪಿಟ್ಸ್‍ಬರ್ಗ್ ವಿವಿಯಲ್ಲಿ ಮಂಡಿಸಲಾದ ಈ ಪ್ರಬಂಧವನ್ನು ದೆಹಲಿ ವಿವಿಯ ಇತಿಹಾಸ ಪಠ್ಯದಲ್ಲಿ ಸೇರಿಸಲಾಗಿತ್ತು. 2008ರಲ್ಲಿ ಈ ಪ್ರಬಂಧ ದೊಡ್ಡ ವಿವಾದವನ್ನು ಸೃಷ್ಟಿಸಿತ್ತಲ್ಲದೆ ಹಿಂದೂ ಸಂಘಟನೆಗಳು, [&#8230;]]]></description>
										<content:encoded><![CDATA[
<p>ಎಷ್ಟು&nbsp; <em>ರಾಮಾಯಣಗಳಿವೆ</em> ? ಮುನ್ನೂರು? ಮೂರು ಸಾವಿರ? <em>ಕೆಲವು ರಾಮಾಯಣಗಳ</em> ಕೊನೆಯಲ್ಲಿ, ಕೆಲವೊಮ್ಮೆ ಪ್ರಶ್ನೆಯೊಂದನ್ನು ಕೇಳಲಾಗುತ್ತದೆ: ಎಷ್ಟು <em>&nbsp;ರಾಮಾಯಣಗಳಿವೆ </em>? ಈ ಪ್ರಶ್ನೆಗೆ ಉತ್ತರಿಸುತ್ತಾ ಕೆಲವು ರಾಮಯಣಗಳು, ಇಲ್ಲೊಂದಿದೆ..ಎನ್ನುತ್ತವೆ!</p>



<p>ಹೀಗೆ ಭಾರತದ ಹೆಸರಾಂತ ಕವಿ ಮತ್ತು ವಿದ್ವಾಂಸ ಎ ಕೆ ರಾಮಾನುಜನ್ ಅವರ ‘ಮುನ್ನೂರು ರಾಮಾಯಣಗಳು’ ಎಂಬ ಪ್ರಬಂಧ ಆರಂಭವಾಗುತ್ತದೆ. 1987ರಲ್ಲಿ ಪಿಟ್ಸ್‍ಬರ್ಗ್ ವಿವಿಯಲ್ಲಿ ಮಂಡಿಸಲಾದ ಈ ಪ್ರಬಂಧವನ್ನು ದೆಹಲಿ ವಿವಿಯ ಇತಿಹಾಸ ಪಠ್ಯದಲ್ಲಿ ಸೇರಿಸಲಾಗಿತ್ತು. 2008ರಲ್ಲಿ ಈ ಪ್ರಬಂಧ ದೊಡ್ಡ ವಿವಾದವನ್ನು ಸೃಷ್ಟಿಸಿತ್ತಲ್ಲದೆ ಹಿಂದೂ ಸಂಘಟನೆಗಳು, ಬಿಜೆಪಿ, ಎಬಿವಿಪಿ ಬೃಹತ್ ಪ್ರತಿಭಟನೆ ನಡೆಸಿದವು.</p>



<p>ಎಬಿವಿಪಿಯ ಪುಂಡರು ವಿಶ್ವವಿದ್ಯಾನಿಲಯದ ಹಿಸ್ಟರಿ ಡಿಪಾರ್ಟ್‌ಮೆಂಟ್‌ಗೆ ನುಗ್ಗಿ, ದಾಂಧಲೆ ಎಬ್ಬಿಸಿದರು. ತರಗತಿಗಳ ಬಾಗಿಲು ಕಿಟಕಿ ಒಡೆದರು!</p>



<p>ನೂರಾರು ರಾಮಾಯಣಗಳು ಸುಮಾರು 2,500 ವರ್ಷಗಳಿಗೂ ಹೆಚ್ಚು ಕಾಲದಿಂದ ಹೇಗೆ ಭಾರತ ಹಾಗೂ ಏಷ್ಯಾದಾದ್ಯಂತ ಹರಡಿರುವ ಇತಿಹಾಸವನ್ನು ಈ ಪ್ರಬಂಧ ಸರಳ ಸುಂದರವಾಗಿ ವಿವರಿಸುತ್ತದೆ. ರಾಮನ ಒಂದೇ ಕಥೆ ಬೇರೆ ಬೇರೆ ಭಾಷೆಗಳು, ಸಮಾಜಗಳು, ಪ್ರಾದೇಶಿಕತೆ, ಧರ್ಮಗಳು ಮತ್ತು ವಿವಿಧ ಚಾರಿತ್ರಿಕ ಘಟ್ಟಗಳಲ್ಲಿ ಪ್ರಸಾರವಾಗುತ್ತಿರುವಾಗ ಹಲವಾರು ಬದಲಾವಣೆಗಳಿಗೆ ಒಳಗಾಗಿದೆ ಎಂಬುದನ್ನು ಇದು ವಿದ್ವತ್ಪೂರ್ಣವಾಗಿ ಇದು ಹೇಳುತ್ತದೆ.&nbsp;</p>



<p>ಮುಖ್ಯವಾಗಿ ಈ ಪ್ರಬಂಧದಲ್ಲಿ ರಾಮಾಯಣದ ಐದು ಪಠ್ಯಗಳನ್ನು ಪರಿಗಣಿಸಲಾಗಿದೆ: ವಾಲ್ಮೀಕಿ ರಾಮಾಯಣ, ತಮಿಳಿನ ಕಂಬನ್ ರಾಮಾಯಣ, ಜೈನ ರಾಮಾಯಣ ಪಠ್ಯಗಳು, ಥಾಯ್ಲಾಂಡಿನ ಥಾಯ್ ರಾಮಕಿಯನ್ ಮತ್ತು ದಕ್ಷಿಣ ಭಾರತೀಯ ಜಾನಪದ ರಾಮಾಯಣದ ಪಠ್ಯಗಳು.</p>



<p>ಇವುಗಳನ್ನು ಪ್ರಬಂಧದಲ್ಲಿ ತರುವಾಗ ರಾಮಾನುಜನ್‌ ʼವರ್ಷನ್ಸ್‌ʼ ಮತ್ತು ʼವೇರಿಯೆಂಟ್ಸ್‌ʼ ಎಂಬ ಪದಗಳ ಬದಲಾಗಿ ʼಟೆಲ್ಲಿಂಗ್ಸ್‌ʼ ಎಂಬ ಪದವನ್ನು ಬಳಸುತ್ತಾರೆ. ಯಾಕೆರಂದರೆ ಈ ಕಥೆ ಒಂದು ವರ್ಷನ್ (ಆವೃತ್ತಿ) ಎಂದು ಹೇಳಬೇಕಾದರೆ, ಮೂಲದಲ್ಲಿ ಒಂದು ಕಥೆ ಇರಲೇ ಬೇಕು. ಇದು ಆ ಮೂಲಕಥೆಯ ಇನ್ನೊಂದು ವರ್ಷನ್ ಎಂದು ಹೇಳುವುದು ಮೂಲ ಪಠ್ಯದ ಅಸ್ತಿತ್ವವನ್ನು ಸೂಚಿಸುತ್ತದೆ. ಆದರೆ, ಇಡೀ ಪ್ರಬಂಧದಲ್ಲಿ ರಾಮಾನುಜನ್‌ ಅವರ ಮುಖ್ಯ ಅವಲೋಕನವೆಂದರೆ ಅಂತಹ ಒಂದು ಮೂಲ ರಾಮಾಯಣ ಎಂಬುದೇ ಇಲ್ಲ ಎಂಬುದು. ವಾಲ್ಮೀಕಿ ರಾಮಾಯಣ ಕಥೆʼ ಎಂತಹ ಅನೇಕ ರಾಮಾಯಣಗಳ ಕಥೆಗಳಲ್ಲಿ ಒಂದು. ಅದರ ಅರ್ಥ, ವಾಲ್ಮೀಕಿ ರಾಮಾಯಣ ಬರೆಯುವುದಕ್ಕೆ ಮೊದಲೇ ಈ ಕಥೆ ಜನಪದದಲ್ಲಿ ಇದ್ದಿರಬೇಕು.&nbsp;</p>



<p>ಹೀಗಾಗಿ, ರಾಮಾಯಣವಿರಲಿ…ಮಹಾಭಾರತವಿರಲಿ, ಕವಿಗಳಿಗೆ ತಮಗಿಂತ ಹಿಂದೆಯೇ ಕಥೆಯನ್ನು ಅನೇಕರು ಹೇಳಿದ್ದಾರೆ ಎಂಬ ಅರಿವು ಇತ್ತು. ಕನ್ನಡದ ಕವಿ ಕುಮಾರವ್ಯಾಸ ತನ್ನ ʼಕರ್ಣಾಟ ಭಾರತ ಕಥಾಮಂಜರಿʼಯಲ್ಲಿ “ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ; ತಿಂತಿಣಿಯ ರಘುವರಚರಿತೆಯಲಿ ಕಾಲಿಡಲು ತೆರಪಿಲ್ಲ,” ಎನ್ನುತ್ತಾನೆ. ಕವಿ ಕುಮಾರವ್ಯಾಸ ಪೀಠಿಕಾ ಸಂಧಿಯಲ್ಲೇ ಇದನ್ನು ಹೇಳಿ ತನ್ನ ಕಾವ್ಯ ರಚನೆಗೆ ತೊಡಗುತ್ತಾನೆ. ಎಷ್ಟು ರಾಮಾಯಣಗಳಿವೆ ಎಂದರೆ, ಅದರ ಭಾರಕ್ಕೆ ಭೂಮಿಯನ್ನೇ ತಲೆಯ ಮೇಲೆ ಹೊತ್ತಿರುವ ಆದಿಶೇಷ ರಾಮಾಯಣದ ಕವಿಗಳನ್ನು ಹೊರಲಾರದೆ ತಿಣುಕಿದ್ದಾನೆ, ರಘುಚರಿತೆಯ ರಾಶಿಯಲ್ಲಿ ಕಾಲಿಡಲು ಜಾಗವಿಲ್ಲ ಎಂದು ವರ್ಣಿಸಿದ್ದಾನೆ.</p>



<p>ಕವಿಗೆ ಇರುವ ಅರಿವು ಭಾರತದಾದ್ಯಂತ ಬಹುತೇಕ ಕವಿಗಳಿಗೆ, ಜಾನಪದರಿಗೆ ಇತ್ತು. ಹಾಗಾಗಿ, ಎ ಕೆ ರಾಮಾನುಜನ್‌ ಅವರ ಪ್ರಬಂಧ ಆರಂಭವಾಗುವುದೇ ʼಎಷ್ಟು ರಾಮಾಯಣಗಳಿವೆ, ಇಕೋ ಇಲ್ಲೊಂದಿದೆ..ʼ ಎಂಬ ಹೇಳಿಕೆಯಿಂದ</p>



<p>ಎ ಕೆ ರಾಮಾನುಜನ್‌ ನಮಗೆ ಕೊಡುವ ಮಹತ್ವದ ಅರಿವು ಏನೆಂದರೆ ಭಾರತದ ಬಹುತೇಕ ಎಲ್ಲಾ ಭಾಷೆಗಳು, ಸಮುದಾಯಗಳು ರಾಮಾಯಣವನ್ನು ತಮಗೆ ಬೇಕಾದಂತೆ ಬರೆದುಕೊಂಡಿವೆ ಎಂಬುದು. ಇದು ನಮ್ಮ ಅರಿವಿನಲ್ಲಿದ್ದರೆ ಸಹಜವಾಗಿಯೇ ಎಬಿವಿಪಿ ಈ ಪ್ರಬಂಧದ ವಿರುದ್ಧ ನಡೆಸಿದ ಪ್ರತಿಭಟನೆಯ ಹಿಂದಿರುವ ಅವರ ಉದ್ದೇಶ ನಮಗೆ ಗೊತ್ತಾಗುತ್ತದೆ. ಭಾರತ ರಾಮನ ಕಥೆಯನ್ನು ಹೇಳುವ ಬಗೆಯೇ ಬಿಜೆಪಿ ಹಾಗೂ ಸಂಘ ಪರಿವಾರ ರಾಮನನ್ನು ರಾಜಕಾರಣಕ್ಕೆ ಬಳಸುವ ಕುತಂತ್ರಕ್ಕೆ ವಿರೋಧವಾಗಿ ನಿಲ್ಲುತ್ತದೆ.&nbsp;</p>



<div data-wp-interactive="core/file" class="wp-block-file">&lt;object class=&quot;wp-block-file__embed&quot; data=&quot;https://peepalmedia.com/wp-content/uploads/2024/01/three-hundred-Ramayanas-A-K-Ramanujan-1.pdf&quot; type=&quot;application/pdf&quot; style=&quot;width:100%;height:600px&quot; aria-label=&quot;&lt;strong&gt;ಮುನ್ನೂರು ರಾಮಾಯಣಗಳು &#8211; ಎ ಕೆ ರಾಮಾನುಜನ್</strong></object><a id="wp-block-file--media-81f31f28-8478-4e67-b4ae-e9bc98387a74" href="https://peepalmedia.com/wp-content/uploads/2024/01/three-hundred-Ramayanas-A-K-Ramanujan-1.pdf"><strong>ಮುನ್ನೂರು ರಾಮಾಯಣಗಳು &#8211; ಎ ಕೆ ರಾಮಾನುಜನ್</strong></a><a href="https://peepalmedia.com/wp-content/uploads/2024/01/three-hundred-Ramayanas-A-K-Ramanujan-1.pdf" class="wp-block-file__button wp-element-button" download aria-describedby="wp-block-file--media-81f31f28-8478-4e67-b4ae-e9bc98387a74">Download</a></div>



<p>ಇದು ಕೇವಲ ರಾಮಾಯಣಕ್ಕೆ ಮಾತ್ರವಲ್ಲ, ಮಹಾಭಾರತದ ಸಂದರ್ಭದಲ್ಲೂ ಇದೇ.</p>



<p>&nbsp;“ವಾಲ್ಮೀಕಿ, ವ್ಯಾಸರು ರಾಮಾಯಣ , ಮಹಾಭಾರತಗಳ ಮೊಟ್ಟ ಮೊದಲ&nbsp; ಸೃಷ್ಟಿಕರ್ತರಲ್ಲ. ಅವರಿಗಿಂತಲೂ ಪೂರ್ವದಲ್ಲಿ ಈ ಕತೆಗಳು ಜನತೆಯಲ್ಲಿ ಇದ್ದುವು, ಅವರ ತರುವಾಯವೂ ಇದ್ದುವು, ಇವತ್ತಿಗೂ ಇವೆ.ವಾಲ್ಮೀಕಿ ವ್ಯಾಸರು ತಮ್ಮ ಕಾವ್ಯಗಳನ್ನು ರಚಿಸಿದ ಮಾತ್ರಕ್ಕೆ ಇವರಿಗೂ ಪ್ರೇರಕವಾದ,ವಸ್ತುಗಳನ್ನು ಒದಗಿಸಿದ ಜನಪದ ಕಥಾವಾಹಿನಿ ನಿಂತುಹೋಗಿಲ್ಲ.ಸತತವಾಗಿ ಹರಿದಿದೆ. ಆದ್ದರಿ೦ದ ಸಾಮಾನ್ಯ ಜನತೆಗೆ ತಿಳಿದಿರುವುದು ಅಥವಾ ಪ್ರಭಾವ ಬೀರಿರುವುದು ವಾಲ್ಮೀಕಿ,ವ್ಯಾಸರುಗಳ ರಾಮಾಯಣ, ಮಹಾಭಾರತ ಕಥೆಗಳಾಗಿರದೆ,ಅವರಿಗೂ ಮೂಲವಾಗಿ ಇದ್ದ ಇವತ್ತಿಗೂ ಇದ್ದು ಬಂದಿರುವ ಜನಪದ ರಾಮಾಯಣ, ಮಹಾಭಾರತಗಳೆಂಬುದು ಅತ್ಯಂತ ಸ್ಪಷ್ಟವಿರುವ ವಿಷಯ”(ರಾ ಗೌ;ಸಂ.ಜನಪದ ರಾಮಾಯಣ;1973:ix)&nbsp;</p>



<p>ರಾಮಾಯಣ, ಮಹಾಭಾರತಗಳು ಒಂದು ಸ್ಥಳದಿಂದ ಅನಾಮಿಕ ಕರ್ತೃವಿನಿಂದ ಹುಟ್ಟಿ ಕ್ರಮೇಣ ಇತರ ಸಮುದಾಯಗಳಿಂದಲೂ ಸ್ವೀಕರಿಸಲ್ಪಟ್ಟು ಮೌಖಿಕ ಪರಂಪರೆಗಳಾಗಿ ಸಾಗಿ ಬಂದಿವೆ.ಈ ಪ್ರವಾಹದಲ್ಲಿ ಭಿನ್ನ ಕಥನಗಳು,ಹೊಸ ಅಂಶಗಳು ಸೇರ್ಪಡೆಯಾಗಿ ಅನನ್ಯತೆಯನ್ನು ಮೆರೆದಿವೆ.ಜಾನಪದ ವಸ್ತುಗಳಿಂದ ಪ್ರೇರಿತರಾಗಿ ವಾಲ್ಮೀಕಿ ವ್ಯಾಸಾದಿಗಳು ರಚಿಸಿದ ಕಾವ್ಯಗಳು ಜನಪ್ರಿಯತೆಯನ್ನು ಪಡೆದವು. ಕನ್ನಡದಲ್ಲೂ ಪೊನ್ನನ ‘ ಭುವನೈಕ್ಯ ರಾಮಾಭ್ಯುದಯ'(ಕ್ರಿ.ಶ.ಸು 950), ನಾಗಚಂದ್ರನ ‘ರಾಮಚಂದ್ರ ಚರಿತ ಪುರಾಣ'(ಕ್ರಿ.ಶ.ಸು1100), ಕುಮುದೇಂದುವಿನ ರಾಮಾಯಣ(ಕ್ರಿ.ಶ.ಸು1270), ನಾಗರಾಜನ ‘ಪುಣ್ಯಾಸ್ರವ’ ಗಳಂತ ಜೈನರಾಮಾಯಣಗಳು ಬಂದವು. ಹದಿನಾಲ್ಕನೆ ಶತಮಾನದ ಬಳಿಕ ವೈದಿಕ ಕವಿಗಳು ವಾಲ್ಮೀಕಿ ರಾಮಾಯಣದಿಂದ ಪ್ರೇರಿತರಾಗಿ ಜೈನ ರಾಮಾಯಣಗಳಿಗಿಂತ ಭಿನ್ನವಾದ ಕಾವ್ಯಗಳನ್ನು ರಚಿಸಿದರು. ಕುಮಾರ ವಾಲ್ಮೀಕಿಯ ‘ತೊರವೆ ರಾಮಾಮಣ’ (ಕ್ರಿ.ಶ.1500), ಚಾಮರಾಜ ‘ರಾಮಾಯಣ'(ಕ್ರಿ.ಶ.1630),ಮಲ್ಲರಸನ ‘ ದಶಾವತಾರ ಚರಿತೆ'(ಕ್ರಿ.ಶ.1680) ಮುಂತಾದವುಗಳಿಂದ ಹಿಡಿದು ಕುವೆಂಪು, ಮೋಯ್ಲಿಗಳ ವರೆಗೆ ರಚಿತವಾಗಿರುವ ರಾಮಾಯಣಗಳಿಂದ ʼತಿಂತಿಣಿಯ ರಘುವರಚರಿತೆಯಲಿ ಕಾಲಿಡಲು ತೆರಪಿಲ್ಲ.&#8217;</p>



<p>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : <a href="https://chat.whatsapp.com/Lec6jB78EHu04TNvY80Tu6" data-type="link" data-id="https://chat.whatsapp.com/Lec6jB78EHu04TNvY80Tu6"><strong>ಪೀಪಲ್‌ ಮೀಡಿಯಾ</strong></a></p>



<p>ಅಂತೆಯೇ ಮಹಾಭಾರತವೂ ಅನೇಕ ಜೈನ ಕವಿಗಳಿಂದ, ವೈದಿಕ ಕವಿಗಳಿಂದ ಪುನರ್ರಚನೆಗೊಂಡಿದೆ. ಪಂಪನ&nbsp; ‘ವಿಕ್ರಮಾರ್ಜುನ ವಿಜಯ’, ರನ್ನನ ‘ಗದಾಯುದ್ಧ’ ಕುಮಾರವ್ಯಾಸನ ‘ ಕರ್ನಾಟ ಭಾರತ ಕಥಾಮಂಜರಿ’ ಇತ್ಯಾದಿಗಳು. ಕ್ರಮೇಣ 16-17 ಶತಮಾನದಲ್ಲಿ ಶ್ರೋತೃಗಳನ್ನು ಕೇಂದ್ರೀಕರಿಸಿಕೊಂಡು ಕುಂಬಳೆಯ ಪಾರ್ತಿಸುಬ್ಬನಂತಹ ಅನೇಕ ಯಕ್ಷಗಾನ ಕವಿಗಳು ಪ್ರಸಂಗಗಳನ್ನು ಕಾವ್ಯಗಳ ಮೇಲೆ ಬರೆದಿದ್ದಾರೆ. ಕರಾವಳಿಯ ಜನರಿಗೆ ಮಹಾಕಾವ್ಯಗಳು, ಪುರಾಣಗಳು ಯಕ್ಷಗಾನದ ಮೂಲಕ ಚಿರ ಪರಿಚಿತವಾಗಿವೆ.&nbsp;&nbsp;&nbsp;</p>



<p>&nbsp;ತುಳುವಿನಲ್ಲಿ ಅರುಣಾಬ್ಜ ಕವಿ ವಿರಜಿತ ‘ಮಹಾಭಾರತೊ’ (ಕ್ರಿ.ಶ.1657) ಇದೆ,’ ಮಂದಾರ ರಾಮಾಯಣ’ ಇದೆ.ಆದರೆ ಇವೆಲ್ಲ ಶಿಷ್ಟ ಕಾವ್ಯಗಳಿಗೆ ನಿಷ್ಠವಾಗಿದ್ದು ಜಾನಪದ ಕಾವ್ಯಗಳಿಗೆ ಭಿನ್ನತೆಗಳವೆ.</p>



<p>ಬ್ರಿಟೀಷ್‌ ಆಡಳಿತದಲ್ಲಿ 1866 ರಲ್ಲಿ ಬಾಂಬೆ ಸರ್ಕಾರ ಭಾರತದಲ್ಲಿ ಲಭ್ಯವಿರುವ ಹಸ್ತಪ್ರತಿಗಳನ್ನು ಸಂಗ್ರಹಿಸುವ ಯೋಜನೆಯನ್ನು ಕೈಗೆತ್ತಿಕೊಂಡಿತು. ಜಾರ್ಜ್ ಬುಹ್ಲರ್, ಎಫ್ ಕೀಲ್ಹಾರ್ನ್, ಪೀಟರ್ ಪೀಟರ್ಸನ್, ರಾಮಕೃಷ್ಣ ಗೋಪಾಲ್ ಭಂಡಾರ್ಕರ್, ಎಸ್ ಆರ್ ಭಂಡಾರ್ಕರ್, ಕಥಾವಟೆ ಮತ್ತು ಘಾಟೆ ಮುಂತಾದ ಪ್ರಸಿದ್ಧ ವಿದ್ವಾಂಸರು ಈ ಯೋಜನೆಯಡಿಯಲ್ಲಿ 17,000 ಕ್ಕೂ ಹೆಚ್ಚು ಪ್ರಮುಖ ಹಸ್ತಪ್ರತಿಗಳನ್ನು ಸಂಗ್ರಹಿಸಿದರು. 1917ರಲ್ಲಿ ಭಂಡಾರ್ಕರ್ ಓರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ (BORI) ಸ್ಥಾಪನೆಯಾದ ನಂತರ ಬಾಂಬೆ ಪ್ರೆಸಿಡೆನ್ಸಿಯ ಆಗಿನ ಗವರ್ನರ್ ಮತ್ತು BORI ನ ಮೊದಲ ಅಧ್ಯಕ್ಷರಾದ ಲಾರ್ಡ್ ವಿಲಿಂಗ್ಡನ್ ಅವರು 1 ಏಪ್ರಿಲ್ 1918 ರಂದು ಈ ಎಲ್ಲಾ ಹಸ್ತಪ್ರತಿಗಳನ್ನು BORI ಗೆ ಸ್ಥಳಾಂತರಿಸಿದರು.</p>



<p>ಇದರ ಭಾಗವಾಗಿಯೇ, ಪಿ ವಿ ಕಾಣೆ, ವಿ ಎಸ್ ಸೂಕ್ತಂಕರ್, ಎಸ್ ಕೆ ಬೆಲ್ವಲ್ಕರ್, ಎಸ್ ಕೆ ಡೇ ಪ್ರೊ.ಡಾ. ಆರ್ ಎನ್.ದಾಂಡೇಕರ್ ಮುಂತಾದ ವಿದ್ವಾಂಸರು ಸುಮಾರು ಐದು ವರ್ಷಗಳ ಕಾಲ 1,259 ಹಸ್ತಪ್ರತಿಗಳನ್ನು ಅವಲೋಕಿಸಿ ಮಹಾಭಾರತದ ಒಂದು ವಿಮರ್ಶಾತ್ಮಕ ಆವೃತ್ತಿಯನ್ನು ಹೊರಗೆ ತಂದರು. ಸೆಪ್ಟೆಂಬರ್ 22, 1966 ರಂದು ಭಾರತದ ಅಂದಿನ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅದನ್ನು ಬಿಡುಗಡೆ ಮಾಡಿದರು. 18 ಪರ್ವಗಳು; 89000+ ಪದ್ಯಗಳು, 15000+ ಪುಟಗಳ 19 ಸಂಪುಟಗಳನ್ನು ಇದು ಹೊಂದಿದೆ.&nbsp;</p>



<p>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : <a href="https://chat.whatsapp.com/Lec6jB78EHu04TNvY80Tu6" data-type="link" data-id="https://chat.whatsapp.com/Lec6jB78EHu04TNvY80Tu6"><strong>ಪೀಪಲ್‌ ಮೀಡಿಯಾ</strong></a></p>



<p>ಇದರಲ್ಲಿ ಸೂಕ್ತಂಕರ್ ಹೇಳುತ್ತಾರೆ- “ವ್ಯಾಸರು ರಚಿಸಿದ ಪಠ್ಯ ಹೇಗಿದ್ದಿರಬಹುದೆಂದು ಸಾಧಿಸುವುದು ಅಸಾಧ್ಯ.ಈಗ ನಾವು ಸಿದ್ಧಪಡಿಸಿದ್ದು ಮಹಾಭಾರತದ ಇನ್ನೊಂದು ಪಠ್ಯ” ಈ ಮಾತು ಗಮನಾರ್ಹವಾದುದು.</p>



<p>ಸಂಶೋಧಕ ರಾಗೌ ಹಾಗೂ ಇತರರು ಸಂಪಾದಿಸಿದ ‘ಜನಪದ ರಾಮಾಯಣ’ದಲ್ಲಿ ತಂಬೂರಿಯವರ ರಾಮಾಯಣವು ರಾವಣ ಹಾಗೂ ಸೀತೆಯರ ತಂದೆ-ಮಗಳ ಸಂಬಂಧದ ಕಥೆಯಿದೆ. “ಇದು ಸೀತೆಯ ಜೀವನ ದುರಂತತೆಯನ್ನು ಧ್ವನಿಸುವುದು ಮಾತ್ರವಲ್ಲ, ಇಡೀ ರಾಮಾಯಣ ಕಥಾ ಕಟ್ಟಡವನ್ನೇ ತನ್ನಲ್ಲಿ ನಿಲ್ಲಿಸಿಕೊಂಡಿರುವಂತಿದೆ. ಇಲ್ಲಿ ಶಿವನಿಂದ ರಾವಣ ಮಾವಿನಹಣ್ಣೊಂದನ್ನು ಪಡೆದು, ಅದನ್ನು ತಿಂದು ವಾಟೆಯನ್ನು ಹೆಂಡತಿಗೆ ನೀಡುತ್ತಾನೆ. ಆಗ ಅವನೇ ಗರ್ಭ ಧರಿಸಿ ಸೀತೆಯನ್ನು ಹೆರುತ್ತಾನೆ. ವಾಲ್ಮೀಕಿಯ ರಾಮಾಯಣದಲ್ಲಿ ದಶರಥ ಹಣ್ಣಿನಿಂದ ಮಕ್ಕಳನ್ನು ಪಡೆಯುವುದನ್ನು ನೋಡಬಹುದು.</p>



<p>&nbsp;ಇವರದೇ ಸಂಪಾದನೆಯ ‘ಹೊನ್ನಾಜಮ್ಮನ ರಾಮಾಯಣ’ದಲ್ಲಿ ಸೀತೆ ಕಮಲದ ರೂಪದಲ್ಲಿರುವುದು, ತಾವರೆಯನ್ನು ಆಘ್ರಾಣಿಸಿದ ರಾವಣನ ಮೂಗಿನ ಹೊಳ್ಳೆಗಳ ಒಳಗೆ ಸೇರಿಕೊಳ್ಳುವುದು, ಸೀನಿದಾಗ ಮೂಗಿನಿಂದ ಸೀತೆ ಹುಟ್ಟುವುದು- ಇಲ್ಲಿ ಸೀತೆಯ ಜನನ ಅಸಹಜ ಹಾಗೂ ಅಮಂಗಳಕರ. ತಂಬೂರಿಯವರ ರಾಮಾಯಣದಂತೆ ಇಲ್ಲೂ ರಾವಣನಿಂದ ನೀರಿನಲ್ಲಿ ತೇಲಿ ಬಿಟ್ಟ ಸೀತೆ ಜನಕನಿಗೆ ಸಿಗುತ್ತಾಳೆ.</p>



<p>&nbsp;ಹೊನ್ನಾಜಮ್ಮನ ರಾಮಾಯಣದ ಸೀತೆಯ ಪಾವಿತ್ರ್ಯತೆಯ ಪರೀಕ್ಷೆಯೂ ವಿಶಿಷ್ಟ. ಇಲ್ಲಿ ರಾಮ ಇವಳಿಗೆ ಸರ್ಪವನ್ನು ಸಿಂಬಿಯಾಗಿಸಿಕೊಂಡು ಮರಳಿನ ಮಡಿಕೆಯಲ್ಲಿ ನೀರು ತರುವ ಹಾಗೂ ಮಲ್ಲಿಗೆ ಬಾಡದಂತೆ;ಉಟ್ಟ ಬಟ್ಟೆ ಹಾಳಾಗದಂತೆ, ಅರಶಿನ ಕುಂಕುಮ ಕೆಡದಂತೆ ಅಗ್ನಿ ಕೊಂಡದಲ್ಲಿ ನಿಂತುಕೊಳ್ಳುವ ಪರೀಕ್ಷೆಗಳನ್ನು ಒಡ್ಡುತ್ತಾನೆ.</p>



<p>ಹನುಮಂತನ ಬಗ್ಗೆ ಗಂಗಾ ಯಮುನಾ ಬಯಲಿನಲ್ಲಿ ಪ್ರಚಲಿತದಲ್ಲಿರುವ ಹಲವಾರು ಕತೆಗಳಲ್ಲಿ ಕೆಲವನ್ನು ಅಯೋವಾ ವಿ.ವಿ.ಯ ಪ್ರಾಧ್ಯಾಪಕರಾದ ಡಾ. ಫಿಲಿಪ್ ಲಟ್ಗೆಂಡಾರ್ಫ್ ಪ್ರಕಟಿಸುತ್ತಾರೆ.ಇದರಲ್ಲೊಂದು ಕತೆಯಲ್ಲಿ ಪಾತ್ರಗಳೇ ನಿರೂಪಕರಾಗುತ್ತಾ ತಮ್ಮದೇ ಪಾತ್ರಗಳಿಗೆ ಮುಖಾಮುಖಿಯಾಗುವ ಅದ್ಭುತ ಸನ್ನಿವೇಷವಿದೆ.ಇದರಲ್ಲಿ ಅಂಜನಾದೇವಿ ಬಾಲ ಆಂಜನೇಯನಿಗೆ ರಾತ್ರಿ ರಾಮನ ಕತೆಯನ್ನು ಹೇಳುತ್ತಾಳೆ. ಆಂಜನೇಯ-ರಾಮನ ಬೇಟಿಯ ಬಗ್ಗೆ ಹೇಳುವಾಗ ಬಾಲ ಆಂಜನೇಯ “ಈ ಆಂಜನೇಯ ಯಾರು?” ಎಂದು ಅಚ್ಚರಿಯಿ೦ದ ಕೇಳುತ್ತಾನೆ. ರಾವಣ-ಆಂಜನೇಯರ ಬೇಟಿಯ ಬಗ್ಗೆ ಹೇಳುವಾಗ ಆಂಜನೇಯ ರಾವಣನನ್ನು ಅಲ್ಲೇ ಕೊಲ್ಲದ್ದಕ್ಕೆ ಬಾಲಾಂಜನೇಯ ಆಕ್ರೋಶ ವ್ಯಕ್ತ ಪಡಿಸುತ್ತಾನೆ! ರಾಮಾಂಜನೇಯರ ಆಲಿಂಗನದ ಬಗ್ಗೆ ಹೇಳುವಾಗ ಆ ಆಂಜನೇಯ ತಾನಾಗಬಾರದಿತ್ತೇ ಎಂದು ಆಸೆ ಪಡುತ್ತಾನೆ. ರಾಮನನ್ನು ಈಗಲೇ ತೋರಿಸುವಂತೆ ಹಠ ಹಿಡಿದಾಗ ಅಂಜನಾದೇವಿ “ರಾಮ ಈಗಷ್ಟೇ ಅಯೋಧ್ಯೆಯಲ್ಲಿ ಹುಟ್ಟಿದ್ದಾನೆ. ಅವನದು ಇನ್ನೊಂದು ರಾಮಾಯಣ” ಎನ್ನುತ್ತಾಳೆ. ಆಂಜನೇಯ ತಕ್ಷಣ ಅಯೋಧ್ಯೆಗೆ ಹೊರಡಲನುವಾದಾಗ ತಾಯಿ ತಡೆದು “ಅಲ್ಲಿ ಮಾನವರು ವಾಸಿಸುತ್ತಾರೆ. ಕಪಿಗಳಿಗೆ ಅಲ್ಲಿ ಜಾಗವಿಲ್ಲ. ಕಾಲ ಕೂಡಿ ಬಂದಾಗ ಬೇಟಿಯಾಗು” ಎನ್ನುತ್ತಾಳೆ. ಈ ಕಥಾನಿರೂಪಣೆಯ ಶೈಲಿ ಅದ್ಭುತವಾದುದು.</p>



<p>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : <a href="https://chat.whatsapp.com/Lec6jB78EHu04TNvY80Tu6" data-type="link" data-id="https://chat.whatsapp.com/Lec6jB78EHu04TNvY80Tu6"><strong>ಪೀಪಲ್‌ ಮೀಡಿಯಾ</strong></a></p>



<p>&nbsp;ಹಿ.ಚಿ.ಬೋರಲಿಂಗಯ್ಯರವರು ಸಂಪಾದಿಸಿದ ‘ಗೊಂಡರ ರಾಮಾಯಣ’ ಬಹಳ ವಿಶಿಷ್ಟವಾದದು. ಕೋವಿ ಹಿಡಿದು ಬೇಟೆಗೆ ಹೊರಡುವ ದಶರಥನನ್ನು ಸಾಮಾನ್ಯ ಗೊಂಡನಂತೆ ಚಿತ್ರಿಸಲಾಗಿದೆ.ಕೆರೆಯಲ್ಲಿ ಆನೆಯೊಂದು ನೀರು ಕುಡಿಯುವಾಗ ಅದಕ್ಕೆ ಗುಂಡು ಹಾರಿಸುವ ದಶರಥ ” ನೀನು ನಿನ್ನ ಮಗನಿಂದಲೇ ಮರಣ ಹೊಂದು” ಎಂದು ಆನೆಯಿಂದ ಶಪಿಸಲ್ಪಡುತ್ತಾನೆ. ವಾಲ್ಮೀಕಿಯ ರಾಮಾಯಣದಲ್ಲಿ ಆನೆಯೆಂದು ಭಾವಿಸಿ ಶ್ರವಣ ಕುಮಾರನ ಹತ್ಯೆಯಾಗುತ್ತದೆ.</p>



<p>ಗೊಂಡರ ರಾಮಾಯಣದಲ್ಲಿ ಮಡಿವಾಳ ಮಾಜಯ್ಯ(?) ಹೀಯಾಳಿಸುವಾಗ ರಾಮ ತನ್ನ ಘನತೆಯನ್ನು ಕಾಯ್ದುಕೊಳ್ಳಲು ಸೀತೆಯನ್ನು ಕಾಡಿನಲ್ಲಿ ಕೊಂದು ಬರುವಂತೆ ಕಿರಾತಕರಲ್ಲಿ ಆಜ್ಞಾಪಿಸುತ್ತಾನೆ. ಕೊಲ್ಲುವಾಗ ಕಿರಾತಕರಿಗೆ ಕತ್ತಿಯ ಅರಗಿನಲ್ಲಿ ಮಗುವಿನ ಬಿಂಬ ಕಂಡು ಶಿಶುಹತ್ಯಾ ದೋಷಕ್ಕೆ ಹೆದರಿ ಕಾಡಲ್ಲಿ ಬಿಟ್ಟು ಬರುತ್ತಾರೆ.ಇಲ್ಲಿಯೂ ವಾಲ್ಮೀಕಿಯ ರಾಮಾಯಣದಂತೆ ಸೀತೆಗೆ ಅವಳಿ ಮಕ್ಕಳ ಜನನವಾಗುವುದಿಲ್ಲ. ಬದಲಾಗಿ ‘ಚಿತ್ರಪಟ ರಾಮಾಯಣ’ದಂತೆ ಕುಶನು ವಾಲ್ಮೀಕಿಯ ದರ್ಬೆಯಿಂದ ಜನಿಸುತ್ತಾನೆ.</p>



<p>ವಿಲಿಯಮ್ ಡಾಲ್ರಿಂಪಲ್ ನ&nbsp; &#8221;ನೈನ್ ಲೈವ್ಸ್&#8221;&nbsp; ನಲ್ಲಿ ರಾಜಸ್ಥಾನದ ನಾಲ್ಕು ಸಾವಿರ ಸಾಲುಗಳ ‘ಪಭುಜೀಯ’ ಮಾಖಿಕ ಕಾವ್ಯದ ಬಗ್ಗೆ&nbsp; ಬರವು ಇದೆ. ಕೇಂಬ್ರಿಡ್ಜ್ ನ ಸಂಶೋಧಕ ಜಾನ್ ಡಿ ಸ್ಮಿತ್ 1970 ರಲ್ಲಿ ಈ ವೀರ ಪಭುಜೀಯ ಕಾವ್ಯ ಹಾಗೂ ಅದನ್ನು ಹಾಡುವ ಭೋಪರ ಮೇಲೆ ಪಿ.ಎಚ್.ಡಿ ಮಾಡಿದ್ದಾರೆ. ಅಖಿಲ ಭಾರತ ಮಟ್ಟದ ರಾಮಾಯಣದಂತೆ ರಾಮ ತನ್ನ ಅಪಹೃತ ಪತ್ನಿಗಾಗಿ ಲಂಕೆಗೆ ಹೋಗುವುದಿಲ್ಲ,ಬದಲಾಗಿ ರಾವಣನ ಒಂಟೆಗಳನ್ನು ಕದಿಯಲು ಹೋಗುತ್ತಾನೆ. ರಾಜಸ್ಥಾನದ ಮರಳುಗಾಡಿಗೆ ಒಂಟೆಗಳನ್ನು ತಂದ ಪಭುಜೀಯನ್ನು ಅಲ್ಲಿಯ ಜನರು ಆರಾಧಿಸುತ್ತಾರೆ. ರೋಬರಿ ಜನಾಂಗದ ಭೋಪ ತನ್ನ ಸಂಗಡಿಗರೊಂದಿಗೆ ಕಾವ್ಯವನ್ನು ಹಾಡುತ್ತಾನೆ.ಜೊತೆಗೆ ‘ಪಾಡ್’ ಎಂಬ ಪವಿತ್ರವಾದ ಚಿತ್ರಪಟವನ್ನು ಕಥಾ ನಿರೂಪಣೆಗೆ ಬಳಸುತ್ತಾರೆ.</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<div class="youtube-embed" data-video_id="aek9tIplPWA"><iframe title="#rammandir ರಾಮನ  ಕಥನಗಳನ್ನ ಸ್ಥಳೀಯಗೊಳಿಸುವ ಗುಣವನ್ನು ನಿರ್ಲಕ್ಷ್ಯ ಮಾಡುತ್ತಿರುವ ಬಿಜೆಪಿ...  |Peepal Media" width="696" height="392" src="https://www.youtube.com/embed/aek9tIplPWA?start=10&#038;feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" allowfullscreen></iframe></div>
</div></figure>



<p>ರಾಮಾಯಣವನ್ನು ಹಿಂದೂ ಧರ್ಮದ ಅಧಿಕೃತ ಕಾವ್ಯವೆಂದು ಭಾವಿಸುವ ಸಂದರ್ಭದಲ್ಲಿ ಮತೀಯ ವ್ಯಾಪ್ತಿಯನ್ನು ಮೀರಿ ಅದು ಬೆಳೆದ ಬಗೆಯನ್ನು ಕೇರಳದ ಮಾಪಿಳ್ಳೆ ರಾಮಾಯಣದಲ್ಲಿ ನೋಡಬಹುದು. ಇದು ಮುಸಲ್ಮಾನ ಮಾಪಿಳ್ಳೆಗಳ ಜಾನಪದ ಹಾಡುಗಳಲ್ಲಿ ರಾಮ ಕಾಣಿಸಿಕೊಂಡ ಬಗೆ. ರಾಮನ ಹೆಸರನ್ನು &#8220;ಲಾಮನ್&#8221; ಎಂದು ಬದಲಿಸಿದ್ದಷ್ಟೇ, ಉಳಿದ ಪಾತ್ರಗಳು ಅಂತೆಯೇ ಇವೆ. ಮುಸ್ಲಿಂ ಮಾಪಿಳ್ಳೆಗಳ ಬದುಕು-ಸಂಸ್ಕøತಿಗೆ ಹೊಂದಿಕೊಳ್ಳುವಂತೆ ರಾಮಾಯಣ ಮರುರೂಪುಗೊಂಡಿದೆ, ಇದು ರಾಮನ ಹೆಸರಿನಲ್ಲಿ ನಡೆಯುವ ರಾಜಕೀಯ ಪ್ರೇರಿತ ಮತೀಯ ಸಂಘರ್ಷಗಳಿಗೆ ಮುಖಾಮುಖಿಗೊಳ್ಳುವ ಅಗತ್ಯತೆ ತುಂಬಾ ಇದೆ.</p>



<p>ರಾಮಾಯಣಕ್ಕಿಂತ ತುಸು ಹೆಚ್ಚು ಜನಮಾನಸವನ್ನು ಹೊಕ್ಕಿರುವ ಕಾವ್ಯ ಮಹಾಭಾರತ. ಅದಕ್ಕೆ ಅದರ ಸರ್ವ ರಸೋದಯ ಕಾರಣವೇನೋ…. ಜನರ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಪ್ರಸಿದ್ಧ ಜಾನಪದ ವಿದ್ವಾಂಸ ಎನ್.ಆರ್.ನಾಯಕರು ಸಂಪಾದಿಸಿದ ‘ಗ್ರಾಮೊಕ್ಕಲ ಮಹಾಭಾರತ’ ಕರಾವಳಿ ಕರ್ನಾಟಕ ಭಾಗದಲ್ಲಿರುವ ಗ್ರಾಮೊಕ್ಕಲು ಸಮುದಾಯದ ಭಾರತ. ಇದರಲ್ಲಿ ಧರ್ಮರು, ಗೀಚಕ(ಕೀಚಕ), ಸುಭದ್ರೆ,ಲಕ್ಷ್ಮಣ,ಅರ್ಜುನ,ಕುಸುಮಾಲಿ(ಚಿತ್ರಾಂಗದೆ),ಕನಕಾಂಗಿ ಕಲ್ಯಾಣ,ಅಭಿಮನ್ಯು ಹಾಗೂ ಸಾವಿತ್ರಿ ಹೀಗೆ ಒಂಬತ್ತು ಬಿಡಿ ಕಥನಗಳಿವೆ.ಈ ಮಹಾಭಾರತ ಅನಕ್ಷರಸ್ಥ ಜನರ ಮೂಲಕ ಮೌಖಿಕವಾಗಿ ಹರಿದು ಬಂದಿದೆ.</p>



<p>ಈ ಮಹಾಭಾರತದಲ್ಲಿ ಪಾಂಡವರನ್ನು ಸೋಲಿಸಿದ ದುರ್ಯೋಧನನನ್ನು ದ್ರೌಪದಿಯು ಪಗಡೆಯಾಟದಲ್ಲಿ ಗೆಲ್ಲುತ್ತಾಳೆ. ದ್ರೌಪದಿ ಕರ್ಣನ ನೆರವಿನಿಂದ ನಾರಾಯಣ ದೇವರ ಪಗಡೆ ಮಣೆಯನ್ನು ತರಿಸಿ ಕೌರವನ ಮೋಸದ ಮಣೆಯನ್ನು ಬದಲಿಸುತ್ತಾಳೆ. ಪಗಡೆಯಾಡುವಾಗ ಗಾಳಿ ಬೀಸಿ ದ್ರೌಪದಿಯ ಸೆರಗು ಜಾರಿ, ಇದರಿಂದ ಚಿತ್ತ ಚಂಚಲಗೊಂಡ ಕೌರವ ಸೋಲುತ್ತಾನೆ. ಕಾವ್ಯದಲ್ಲಿ ಕರ್ಣನ ಧರ್ಮಬೀರುತನ, ಸಹೋದರತ್ವ, ನೈತಿಕತೆ ಸುಂದರವಾಗಿ ವ್ಯಕ್ತಗೊಂಡಿದೆ. ಇತರರಂತೇ ದುರ್ಯೋಧನನು ಇವನನ್ನು ಸೂತನೆಂದು ಕರೆಯುವ ನವೀನ ಆಶಯ &nbsp; ಇದೆ. ದ್ರೌಪದಿ ವಸ್ತ್ರಾಪಹರಣದಂತಹ ಅನೈತಿಕ ಪ್ರಸಂಗವನ್ನು ನಿರೂಪಕ ಬದಲಿಸಿದ್ದಾನೆ. ಪಗಡೆಯಾಟದಲ್ಲಿ ದ್ರೌಪದಿ ಗೆದ್ದರೂ ಈ&nbsp; ಮಹಾಭಾರತದಲ್ಲಿ ಪಾಂಡವರನ್ನು ಸೋಲಿಸಿದ ದುರ್ಯೋಧನನನ್ನು ದ್ರೌಪದಿಯು ಪಗಡೆಯಾಟದಲ್ಲಿ ಗೆಲ್ಲುತ್ತಾಳೆ. ದ್ರೌಪದಿ ಕರ್ಣನ ನೆರವಿನಿಂದ&nbsp; ನಾರಾಯಣದೇವರ ಪಗಡೆ ಮಣೆಯನ್ನು ತರಿಸಿ ಕೌರವನ ಮೋಸದ ಮಣೆಯನ್ನು ಬದಲಿಸುತ್ತಾಳೆ. ಪಗಡೆಯಾಡುವಾಗ ಗಾಳಿ ಬೀಸಿ ದ್ರೌಪದಿಯ ಸೆರಗು ಜಾರಿ,ಇದರಿಂದ ಚಿತ್ತ ಚಂಚಲಗೊಂಡ ಕೌರವ ಸೋಲುತ್ತಾನೆ. ಕಾವ್ಯದಲ್ಲಿ ಕರ್ಣನ ಧರ್ಮ ಬೀರುತನ, ಸಹೋದರತ್ವ, ನೈತಿಕತೆ ಸುಂದರವಾಗಿ ವ್ಯಕ್ತಗೊಂಡಿದೆ.ಇತರರಂತೇ ದುರ್ಯೋಧನನೂ ಇವನನ್ನು ಸೂತನೆಂದು ಕರೆಯುವ ವನವಾಸಕ್ಕೆ ಕಾರಣ ಅಸ್ಪಷ್ಟ.</p>



<p>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : <a href="https://chat.whatsapp.com/Lec6jB78EHu04TNvY80Tu6" data-type="link" data-id="https://chat.whatsapp.com/Lec6jB78EHu04TNvY80Tu6"><strong>ಪೀಪಲ್‌ ಮೀಡಿಯಾ</strong></a></p>



<p>ಈ ಮಹಾಭಾರತದಲ್ಲಿ ‘ಸುಭದ್ರೆಯ ಹಾಡು’ ಅಭಿಜಾತ ಮಹಾಭಾರತಕ್ಕಿಂತ ಭಿನ್ನ . ಜೋಗಿಯಾಗಿ ಬಂದು ಭಿಕ್ಷೆಗಾಗಿ ಪೀಡಿಸುವ ಅರ್ಜುನನ ಉಪಟಳವನ್ನು ತಾಳಲಾರದೆ ಸುಭದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದು,ಅರ್ಜುನ ತನ್ನ ನಾಗರ ಬೆತ್ತ- ಅಮೃತ ನೀರಿನಿಂದ ಬದುಕಿಸುವ ವಿಶಿಷ್ಟ ಪ್ರಕರಣಗಳು ಇದರಲ್ಲಿವೆ.ಅರ್ಜುನ ಚದುರಂಗಿ ಕುಸುಮಾಲಿಯನ್ನು ಮದುವೆಯಾಗಿ ಹನ್ನೆರಡು ವರ್ಷದ ನಂತರ ಜೋಗಿ ವೇಷಧಾರಿಯಾಗಿ ಬಂದು ಪರೀಕ್ಷಿಸಿ ಹಸ್ತಿನಾವತಿಗೆ ಕರೆದೊಯ್ಯುವ ಪ್ರಸಂಗ ಇದರಲ್ಲಿ ಮಾತ್ರ ಕಾಣಸಿಗುತ್ತದೆ.</p>



<p>ಮಧ್ಯಭಾರತದ ಗೊಂಡರಲ್ಲಿ ಪ್ರಸಿದ್ಧವಾದ ‘ ಭೀಮ ಸಿದಿ’ ಕಥನ ಕಾವ್ಯದಲ್ಲಿ ಭೀಮನೇ ವಸ್ತ್ರಾಪಹರಣ ಮಾಡುವವನು.ಸುಂದರಿಯರನ್ನು ನೋಡುವಾಗ ತನ್ನ ತಂದೆ ಪವನಾರನನ್ನು ಪ್ರಾರ್ಥಿಸುತ್ತಾನೆ. ತಂದೆ ಜೋರಾಗಿ ಗಾಳಿ ಬೀಸಿ ಹೆಂಗಳೆಯರು ಬಟ್ಟೆ ಹಾರಿಸುತ್ತಾನೆ. ಗೊಂಡರಿಗೆ ಭೀಮ ಫಲವಂತಿಕೆಯ ದೈವ, ಮಳೆ ತರುವವನು.</p>



<p>ಛತ್ತೀಸಘಡದ ಕಥನವೊಂದರಲ್ಲಿ ಕೃಷ್ಣ ಬಾಣ ಹರಿತಗೊಳಿಸುವಾಗ ಕೈ ಬೆರಳಿಗೆ ಗಾಯ ಮಾಡಿಕೊಳ್ಳುತ್ತಾನೆ. ಆಗ ದ್ರೌಪದಿ ತನ್ನ ಸೆರಗಿನ ಬಟ್ಟೆ ತುಂಡೊಂದನ್ನು ಹರಿದು ಅವನ ಬೆರಳಿಗೆ ಕಟ್ಟುತ್ತಾಳೆ. ಇನ್ನೊಂದು ಕಥನದಲ್ಲಿ ಪಾಂಡವರೊಂದಿಗೆ ಕೃಷ್ಣ ಈಜಾಡುವಾಗ ತನ್ನ ಲಂಗೋಟಿಯನ್ನು ಕಳೆದುಕೊಳ್ಳುತ್ತಾನೆ. ಆಗ ದ್ರೌಪದಿ ತನ್ನ ಸೆರಗಿನ ತುಂಡೊಂದನ್ನು ನೀಡುತ್ತಾಳೆ. ಈ ಉಪಕಾರವನ್ನು ಅಕ್ಷಯಾಂಬರ ವಿಲಾಸದಲ್ಲಿ ತೀರಿಸುತ್ತಾನೆ.</p>



<p>&nbsp;ಮಹಾಭಾರತದ ಪ್ರಮುಖ ಪಾತ್ರ ದ್ರೌಪದಿಯು ತಮಿಳುನಾಡಿನಲ್ಲಿ ದೈವವಾಗಿ ಆರಾಧಿಸಲ್ಪಡುತ್ತಾಳೆ. ಕೊಯಮ್ಬತ್ತೂರಿನ ‘ಅರವನ್ ಜಾತ್ರೆ’ ಯಲ್ಲಿ ಇವಳು ಒಂದು ದೈವ. ಕೃಷ್ಣ ಮೋಹಿನಿಯಾಗಿ ಆರವನ್ ನನ್ನು ಮದುವೆಯಾದ ದಿನದಂದು ಈ ಜಾತ್ರೆ ನಡೆಯುತ್ತದೆ. ಇದರಲ್ಲಿ ತೃತೀಯ ಲಿಂಗಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಆರವನ್ ಉಲೂಪಿಯ ಮಗ ಇರಾವಂತನೆಂಬ ವಾದ ವಿದ್ವಾಂಸರದ್ದು. ತಮಿಳುನಾಡಿನ ನೃತ್ಯ ಪ್ರಕಾರ ‘ತೆರಕೂತ್ತು’ವಿನಲ್ಲಿ ಮಹಾಭಾರತದ ಪ್ರಸಂಗಗಳಿವೆ.</p>



<p>ತೆಲುಗಿನ ಮಹಾಭಾರತದಲ್ಲಿ ಪಾಂಡವರು ತಾವು ಚಿರಂಜೀವಿಗಳಾಗಲು ತಂದೆ ಪಾಂಡುವಿನ ಹೆಣವನ್ನು ತಿನ್ನುವ ಪ್ರಸಂಗವಿದ್ದು, ಇದನ್ನು ಕೃಷ್ಣ ತಪ್ಪಿಸುತ್ತಾನೆ. ಗ್ರಾಮೊಕ್ಕಲು ಮಹಾಭಾರತದಂತೆ ಇಲ್ಲೂ ದ್ರೌಪದಿ ಕೌರವನೊಂದಿಗೆ ಪಗಡೆಯಾಡುತ್ತಾಳೆ, ಆದರೆ ಕಾಲ ಬೆರಳಿನಲ್ಲಿ!</p>



<p>ಭಾರತದ ಅನೇಕ ಜನಾಂಗಗಳು ಮಹಾಭಾರತದ ಪಾತ್ರಗಳನ್ನು ತಮ್ಮ ಪೂರ್ವಜರೆಂದು ಬಗೆಯುತ್ತವೆ.ಹಿಮಾಚಲಪ್ರದೇಶದ ‘ಮಂಡಿ’ಯಲ್ಲಿ ಹಿಡಿಂಬೆಯ ದೇಗುಲವಿದೆ. ಉತ್ತರಾಖಾಂಡದಾದ್ಯಂತ ಇರುವ ಗಿಡ್ಡಿ ಜನಾಂಗೀಯರಿಗೆ ಜರಾಸಂಧ ದೈವ! ರಾಜಸ್ಥಾನದ ಜೋದಾಪುರದಲ್ಲಿ ಮುದ್ಗಲ್ ಗೋತ್ರದ ದವೆ ಬ್ರಾಹ್ಮಣರು ತಮ್ಮನ್ನು ರಾವಣನ ವಂಶಸ್ಥರೆಂದು ಕರೆಸಿಕೊಂಡು ಅವನಿಗೆ ದೇವಾಲಯ ನಿರ್ಮಿಸಿ ಆರಾಧಿಸುತ್ತಾರೆ.</p>



<p>ಹಿಮಾಚಲಪ್ರದೇಶದ ಕಿನ್ನೂರು ಪ್ರದೇಶದ ನಿರೂಪಣೆಯೊಂದರ ಪ್ರಕಾರ ಕುಂತಿಗೆ ಮಂಗಗಳನ್ನು ನೋಡಿ ಮಗುವಿನ ಬಯಕೆಯಾಗಿ ‘ಋಷಿ ಮಾಮ’ನ ಸೇವೆ ಮಾಡಿ ಮಕ್ಕಳನ್ನು ಪಡೆಯುತ್ತಾಳೆ.ಇಲ್ಲಿ ಬೆಟ್ಟದ ಮೇಲೆ ವಾಸಿಸುವ ಪಾಂಡವರಿಗೂ ಕೆಳಗೆ ವಾಸಿಸುವ ಕೌರವರಿಗೂ ನೀರಿಗಾಗಿ ಜಗಳವಾಗುತ್ತದೆ. ಅಸ್ಸಾಂನ ಜನರು ರುಕ್ಮ, ಭಗದತ್ತ,ಬಾಣಾಸುರರನ್ನು ತಮ್ಮ ಪೂರ್ವಜರೆಂದು ಭಾವಿಸುತ್ತಾರೆ. ಕೃಷ್ಣನ ಪತ್ನಿ ರುಕ್ಮಿಣಿ&nbsp; ಬೋಡೋಗಳ ಕನ್ಯೆ!!!</p>



<p>ಭಾರತದಲ್ಲಿ ಅನೇಕ ಸ್ಥಳನಾಮಗಳು ಮಹಾಭಾರತ ರಾಮಾಯಣ ಕೇಂದ್ರಿತವಾಗಿವೆ. ಪಾಂಡವರ ಗುಡ್ಡ, ಪಾಂಡವಪುರ, ಪಾಂಡವ ಪಣೆ, ಹಂಪಿಯ ಸೀತೆಯ ಸೆರಗು, ಭೀಮನ ಕಲ್ಲು ಇತ್ಯಾದಿ. ಸಾಮಾನ್ಯ ಮಾನವ ಮಾಡಲಾಗದ ಅಸಾಮಾನ್ಯ, ಅತಿಮಾನುಷ ಕಾರ್ಯಗಳನ್ನು ಪುರಾಣ ಪಾತ್ರಗಳಿಗೆ ಆರೋಪಿಸುವುದು ಜನಸಮುದಾಯದ ಸಾಮಾನ್ಯ ನಂಬಿಕೆ. ಯಾರೂ ಎತ್ತಲಾಗದ ಭಾರೀ ಗಾತ್ರದ ಕಲ್ಲು ‘ ಭೀಮನ ಕಲ್ಲು’ ಆಗುವುದು ಭೀಮನ ದೇಹ ದಾಢ್ಯತೆಯ ಅರಿವು ಇರುವುದರಿಂದ.ಅನೇಕ ಗ್ರಾಮಗಳು ತಮ್ಮ ಊರಿನ ಐತಿಹ್ಯವನ್ನು ಪಾಂಡವರ ವನವಾಸದೊಂದಿಗೆ ಸಂಬಂಧ ಕಲ್ಪಿಸಿಕೊಳ್ಳುತ್ತವೆ. ನನ್ನ ಊರು ಐವರ್ನಾಡಿಗೆ ಪಾಂಡವರು ಬಂದಿದ್ದರು, ಅವರು ಸ್ಥಾಪಿಸಿದ ಲಿಂಗಗಳೇ ಪಂಚಲಿಂಗೇಶ್ವರ.</p>



<p>ಹೀಗೆ, ಜನಮಾನಸದಲ್ಲಿ ರಾಮ-ಕೃಷ್ಣರ ಕಥೆಗಳು ಬೇರೆ ಬೇರೆ ಭಾಷೆಗಳಲ್ಲಿ, ಜನಪದದಲ್ಲಿ ಹೊಸದಾಗಿ ಕಟ್ಟುವ ಪರಂಪರೆ ಭಾರತ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ರಾಮ ಕೋಮುವಾದಿ ಶಕ್ತಿಗಳ ಕೈಗೆ ಸಿಕ್ಕಿದ್ದಾನೆ. ನಿಜವಾದ ʼರಾಮಂದಿರುʼ ಮರೆಯಾಗಿ ಹಿಂದುತ್ವದ ರಾಮ ನಮ್ಮ ಮುಂದೆ ಬಂದಿದ್ದಾನೆ. ರಾಮ ದೇವಾಲಯದ ಒಳಗೆ ಬಂಧಿಯಾಗುತ್ತಿದ್ದಾನೆ. ಈ ಸಂದರ್ಭದಲ್ಲಿ ರಾಮನ ಭಾರತ ಕಥನಗಳನ್ನು ನಾವು ಸ್ಮರಿಸಿಕೊಳ್ಳಬೇಕು.     </p>



<p style="font-size:20px"><strong>ಲೇಖನ: ಚರಣ್ ಐವರ್ನಾಡು</strong></p>
]]></content:encoded>
					
		
		
			</item>
		<item>
		<title>ಅತ್ಯಾ*ರ ಪ್ರಕರಣ : ಬಿಜೆಪಿ ಐಟಿ ಸೆಲ್ ಸದಸ್ಯರ ಬಂಧಿಸಲು ಎಬಿವಿಪಿ ಆಗ್ರಹ</title>
		<link>https://peepalmedia.com/abvp-demands-arrest-of-bjp-it-cell-members/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 01 Jan 2024 02:35:18 +0000</pubDate>
				<category><![CDATA[Uncategorized]]></category>
		<category><![CDATA[ABVP]]></category>
		<category><![CDATA[bjp]]></category>
		<category><![CDATA[Bjp IT cell]]></category>
		<category><![CDATA[india]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[uttar pradesh]]></category>
		<guid isPermaLink="false">https://peepalmedia.com/?p=34266</guid>

					<description><![CDATA[ನವೆಂಬರ್‌ ತಿಂಗಳಿನಲ್ಲಿ ಉತ್ತರ ಪ್ರದೇಶದ ವಾರಣಾಸಿಯ ಹಾಸ್ಟೆಲ್ ಬಳಿ ಐಐಟಿ-ಬಿಎಚ್‌ಯು ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆಯಲ್ಲಿ ಪೊಲೀಸರು  ಎಲ್ಲಾ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ಗುರುತಿಸಿ ಅವರ ಸಾಮಾಜಿಕ ಸ್ಥಾನಮಾನ ನೋಡಿದಾಗ ಅವರು, ಉತ್ತರ ಪ್ರದೇಶದ ಬಿಜೆಪಿ ಪಕ್ಷದ ಐಟಿ ಸೆಲ್ ಸದಸ್ಯರು ಎಂದು ತಿಳಿದು ಬಂದಿದೆ. ಕ್ರೈಂ ಬ್ರಾಂಚ್ ಮತ್ತು ಲಂಕಾ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಸುಸುವಾಹಿ ಪ್ರದೇಶದಿಂದ ಬಂಧಿಸಿದ್ದು, ಆರೋಪಿಗಳನ್ನು ಈಗ ವಿಚಾರಣೆಗೆ ಒಳಪಡಿಸಲಾಗಿದೆ. ವರದಿಗಳ ಪ್ರಕಾರ, ಬಂಧಿತ ಆರೋಪಿಗಳನ್ನು ಬ್ರಿಜ್ [&#8230;]]]></description>
										<content:encoded><![CDATA[
<p>ನವೆಂಬರ್‌ ತಿಂಗಳಿನಲ್ಲಿ ಉತ್ತರ ಪ್ರದೇಶದ ವಾರಣಾಸಿಯ ಹಾಸ್ಟೆಲ್ ಬಳಿ ಐಐಟಿ-ಬಿಎಚ್‌ಯು ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆಯಲ್ಲಿ ಪೊಲೀಸರು  ಎಲ್ಲಾ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ಗುರುತಿಸಿ ಅವರ ಸಾಮಾಜಿಕ ಸ್ಥಾನಮಾನ ನೋಡಿದಾಗ ಅವರು, ಉತ್ತರ ಪ್ರದೇಶದ ಬಿಜೆಪಿ ಪಕ್ಷದ ಐಟಿ ಸೆಲ್ ಸದಸ್ಯರು ಎಂದು ತಿಳಿದು ಬಂದಿದೆ.</p>



<p>ಕ್ರೈಂ ಬ್ರಾಂಚ್ ಮತ್ತು ಲಂಕಾ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಸುಸುವಾಹಿ ಪ್ರದೇಶದಿಂದ ಬಂಧಿಸಿದ್ದು, ಆರೋಪಿಗಳನ್ನು ಈಗ ವಿಚಾರಣೆಗೆ ಒಳಪಡಿಸಲಾಗಿದೆ. ವರದಿಗಳ ಪ್ರಕಾರ, ಬಂಧಿತ ಆರೋಪಿಗಳನ್ನು ಬ್ರಿಜ್ ಎನ್‌ಕ್ಲೇವ್ ಕಾಲೋನಿ ಸುಂದರ್‌ಪುರದ ಕುನಾಲ್ ಪಾಂಡೆ ಮತ್ತು ಜಿವಾಧಿಪುರ ಬಜಾರ್ದಿಹಾದ ಆನಂದ್ ಅಲಿಯಾಸ್ ಅಭಿಷೇಕ್ ಚೌಹಾನ್ ಮತ್ತು ಸಕ್ಷಮ್ ಪಟೇಲ್ ಎಂದು ಗುರುತಿಸಲಾಗಿದೆ.&nbsp;ಅಪರಾಧ ಕೃತ್ಯಕ್ಕೆ ಬಳಸಿದ್ದ ಮೋಟಾರ್ ಸೈಕಲ್ ಅನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.</p>



<p>ಸಾಮಾಜಿಕ ಮಾಧ್ಯಮ ಪೋಸ್ಟ್‌ ಹಾಗೂ ಸ್ಥಳೀಯ ಮಾಧ್ಯಮಗಳ ವರದಿಯಂತೆ, ಬಂಧಿತ ಆರೋಪಿಗಳು ಬಿಜೆಪಿ ಐಟಿ ಸೆಲ್‌ಗೆ ಸಂಪರ್ಕ ಹೊಂದಿದ್ದರು ಎಂದು ವರದಿ ಮಾಡಲಾಗುತ್ತಿದೆ.&nbsp;&nbsp;ವಾರಣಾಸಿಯ ಬಿಜೆಪಿ ಐಟಿ ಸೆಲ್‌ನಲ್ಲಿ ಕುನಾಲ್ ಪಾಂಡೆ ಮಹಾನಗರ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು&nbsp;ವರದಿಯಾಗಿದೆ&nbsp;,&nbsp; ಆದರೆ ಸಕ್ಷಮ್ ಪಟೇಲ್ ಐಟಿ ಸೆಲ್‌ನಲ್ಲಿ ವಾರಣಾಸಿ ಮೆಟ್ರೋಪಾಲಿಟನ್ ಸಹ-ಸಂಚಾಲಕರಾಗಿ ಸೇವೆ ಸಲ್ಲಿಸುತ್ತಾರೆ ಎಂದು ಹೇಳಲಾಗಿದೆ.</p>



<p>ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಬಂಧಿತ ವ್ಯಕ್ತಿಗಳ ಫೇಸ್‌ಬುಕ್ ಪ್ರೊಫೈಲ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ, ಬಿಜೆಪಿ ಐಟಿ ಸೆಲ್‌ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.</p>



<p>ಆರೋಪಿಯ ಬಂಧನದ ಬಳಿಕ ಎಬಿವಿಪಿ ಹೇಳಿಕೆ ಬಿಡುಗಡೆ ಮಾಡಿ, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ. ಆರೋಪಿಗಳಿಗೆ ಆಶ್ರಯ ನೀಡುತ್ತಿರುವವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ರಾಷ್ಟ್ರೀಯ ಮಾಧ್ಯಮ ಸಂಚಾಲಕ ಎಬಿವಿಪಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಬರೆದಂತೆ, “ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತ ಆರೋಪಿಗಳ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸುವ ಮೂಲಕ ತಕ್ಷಣ ಕ್ರಮ ಕೈಗೊಳ್ಳಿ. ಈವರೆಗೆ ಆರೋಪಿಗಳಿಗೆ ರಕ್ಷಣೆ ನೀಡುತ್ತಿದ್ದವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ಮೊದಲಿನಿಂದಲೂ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ABVP ಪ್ರತಿಭಟನೆ ನಡೆಸುತ್ತಿದೆ.&#8221; ಎಂದು ಒತ್ತಾಯಿಸಿದರು.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="hi" dir="ltr">एबीवीपी की मॉंग: <a href="https://twitter.com/hashtag/IITBHU?src=hash&amp;ref_src=twsrc%5Etfw">#IITBHU</a> में छात्रा के साथ गैंगरेप मामले में पकड़े गए आरोपियों पर चार्जशीट दाखिल कर शीघ्र कार्रवाई करे <a href="https://twitter.com/Uppolice?ref_src=twsrc%5Etfw">@Uppolice</a>। अब तक आरोपियों को जो लोग संरक्षण दे रहे थे,उनको चिन्हित कर कार्रवाई हो। मामले में शुरूआत से कार्रवाई की माँग को लेकर प्रदर्शनरत है परिषद। <a href="https://t.co/rfKk6JiCvt">pic.twitter.com/rfKk6JiCvt</a></p>&mdash; Ashutosh Singh (आशुतोष सिंह) (@iAshutoshdu) <a href="https://twitter.com/iAshutoshdu/status/1741365458731962796?ref_src=twsrc%5Etfw">December 31, 2023</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ವಿದ್ಯಾರ್ಥಿನಿಯೊಬ್ಬಳನ್ನು ವಿವಸ್ತ್ರಗೊಳಿಸಿ, ಮೂವರು ಅಪರಿಚಿತ ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರವೆಸಗಿದ ಘಟನೆಯನ್ನು ದಾಖಲಿಸಿದ ಎರಡು ತಿಂಗಳ ನಂತರ ಈ ಬಂಧನಗಳು ನಡೆದಿವೆ.&nbsp;ಇದು ಕ್ಯಾಂಪಸ್‌ನಲ್ಲಿ ಬೃಹತ್ ಪ್ರತಿಭಟನೆಗೆ ಕಾರಣವಾಯಿತು ಮತ್ತು ಲೈಂಗಿಕ ದೌರ್ಜನ್ಯ ಘಟನೆಯನ್ನು ವಿರೋಧಿಸಿ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.</p>



<p>ವರದಿಗಳ ಪ್ರಕಾರ, ಘಟನೆಯ ಎರಡನೇ ದಿನ, ಎಲ್ಲಾ ಮೂವರು ಆರೋಪಿಗಳು ಬುಲೆಟ್ ಸವಾರಿ ಮಾಡುತ್ತಿರುವುದು ಚೆಟ್‌ಗಂಜ್‌ನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.&nbsp;ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.&nbsp;ಖಚಿತವಾದ ಹಿನ್ನೆಲೆಯಲ್ಲಿ ಪೊಲೀಸರು ಈ ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ.</p>



<p> ಸವಾರಿ ಮಾಡುತ್ತಿರುವುದು ಚೆಟ್‌ಗಂಜ್‌ನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಖಚಿತವಾದ ಹಿನ್ನೆಲೆಯಲ್ಲಿ ಪೊಲೀಸರು ಈ ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಚೈತ್ರಾ ಕುಂದಾಪುರ ಹಣ ವಂಚನೆ ಪ್ರಕರಣ: ಶಿವಮೊಗ್ಗ ABVP ಶಾಮೀಲು?</title>
		<link>https://peepalmedia.com/shimoga-abvp-involved-in-the-case/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 19 Sep 2023 10:34:08 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[ABVP]]></category>
		<category><![CDATA[chaitra kundapura]]></category>
		<category><![CDATA[Gagan Kadur]]></category>
		<category><![CDATA[govinda babu pujary]]></category>
		<category><![CDATA[kannada]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=28068</guid>

					<description><![CDATA[ಬಿಜೆಪಿ ಟಿಕೆಟ್‌ ವಂಚನೆ ಪ್ರಕರಣದ ತನಿಖೆಗಾಗಿ ಪ್ರಕರಣದ ಎ2 ಆರೋಪಿ ಆಗಿರುವ ಗಗನ್ ಕಡೂರು ಎಂಬ ಆರೋಪಿಯನ್ನು ಶಿವಮೊಗ್ಗ RSS ಕಚೇರಿಗೆ ಸಿಸಿಬಿ ಅಧಿಕಾರಿಗಳು ಕರೆದೊಯ್ದಿದ್ದಾರೆ. ಶಿವಮೊಗ್ಗದ RSS ಕಚೇರಿ ಬಳಿಯಲ್ಲಿ ಸಂತ್ರಸ್ತರಿಗೆ ಸಂಬಂಧಿಸಿದ 50 ಲಕ್ಷ ಹಣವನ್ನು ಪಡೆದ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ಗಗನ್ ಕಡೂರು ನನ್ನು ಶಿವಮೊಗ್ಗಕ್ಕೆ ತನಿಖೆಗೆ ಕರೆದುಕೊಂಡು ಹೋಗಿದ್ದಾರೆ. ಉದ್ಯಮಿ ಹಾಗೂ ಹಾಗೂ RSS ಕಾರ್ಯಕರ್ತನೂ ಆಗಿರುವ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಚೈತ್ರ ಕುಂದಾಪುರ [&#8230;]]]></description>
										<content:encoded><![CDATA[
<p>ಬಿಜೆಪಿ ಟಿಕೆಟ್‌ ವಂಚನೆ ಪ್ರಕರಣದ ತನಿಖೆಗಾಗಿ ಪ್ರಕರಣದ ಎ2 ಆರೋಪಿ ಆಗಿರುವ ಗಗನ್ ಕಡೂರು ಎಂಬ ಆರೋಪಿಯನ್ನು ಶಿವಮೊಗ್ಗ RSS ಕಚೇರಿಗೆ ಸಿಸಿಬಿ ಅಧಿಕಾರಿಗಳು ಕರೆದೊಯ್ದಿದ್ದಾರೆ. ಶಿವಮೊಗ್ಗದ RSS ಕಚೇರಿ ಬಳಿಯಲ್ಲಿ ಸಂತ್ರಸ್ತರಿಗೆ ಸಂಬಂಧಿಸಿದ 50 ಲಕ್ಷ ಹಣವನ್ನು ಪಡೆದ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ಗಗನ್ ಕಡೂರು ನನ್ನು ಶಿವಮೊಗ್ಗಕ್ಕೆ ತನಿಖೆಗೆ ಕರೆದುಕೊಂಡು ಹೋಗಿದ್ದಾರೆ.</p>



<p>ಉದ್ಯಮಿ ಹಾಗೂ ಹಾಗೂ RSS ಕಾರ್ಯಕರ್ತನೂ ಆಗಿರುವ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಚೈತ್ರ ಕುಂದಾಪುರ ತಂಡ ವಂಚಿಸಿದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸ್ ತನಿಖೆ ಚುರುಕುಗೊಳಿಸಿದ್ದಾರೆ. ಈಗಾಗಲೇ ಒಡಿಶಾದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಸ್ವಾಮಿ ಹಾಲಶ್ರೀಯನ್ನು ಬಂಧಿಸಿ ಸಧ್ಯ ಬೆಂಗಳೂರಿಗೆ ಕರೆತರಲಾಗುತ್ತಿದೆ.</p>



<p>ಈ ನಡುವೆ ಎ2 ಆರೋಪಿ ಗಗನ್‌ ನನ್ನು ಶಿವಮೊಗ್ಗಕ್ಕೆ ಕರೆದೊಯ್ದ ಸಿಸಿಬಿ ತಂಡ, ಶಿವಮೊಗ್ಗ ಆರ್‌ ಎಸ್‌ ಎಸ್‌ ಕಚೇರಿ ಬಳಿ 50 ಲಕ್ಷ ಪಡೆದಿದ್ದ ಗಗನ್ ನನ್ನು ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ. ಈ ಹಣ ವರ್ಗಾವಣೆ ಬಗ್ಗೆ ಶಿವಮೊಗ್ಗ ABVP ಕಚೇರಿಯಲ್ಲೇ ಪ್ರಮುಖವಾಗಿ ಮಾತುಕತೆ ಮತ್ತು ಸಭೆ ನಡೆದ ಬಗ್ಗೆ ಆರೋಪಿ ಗಗನ್ ಕಡೂರು ಬಾಯಿ ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.</p>



<p>ಸಧ್ಯದ ಬೆಳವಣಿಗೆ ನೋಡಿದರೆ ಶಿವಮೊಗ್ಗದ RSS ಹಾಗೂ ABVP ಕಚೇರಿಯಲ್ಲೇ ಇದರ ಮಾತುಕತೆ ನಡೆದಿರಬಹುದಾದದ ಹಿನ್ನೆಲೆಯಲ್ಲಿ ಜಿಲ್ಲಾ ABVP ಮುಖಂಡರು ಸಹ ಇದರಲ್ಲಿ ಭಾಗಿ ಆಗಿರಬಹುದು ಎಂದೂ ಸಿಸಿಬಿ ಪೊಲೀಸರು ಶಂಕಿಸಿದ್ದಾರೆ. ಜೊತೆಗೆ ಇದರಲ್ಲಿ ಭಾಗಿ ಆಗಿರಬಹುದಾದ RSS ನಾಯಕರ ಬಗ್ಗೆಯೂ ತೀವ್ರವಾಗಿ ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.</p>



<p>ಸಧ್ಯ ಗೋವಿಂದ ಬಾಬು ಪೂಜಾರಿ, ಚೈತ್ರಾ ಕುಂದಾಪುರ ಹಾಗೂ ಗಗನ್‌ ಕಡೂರು ನಡುವೆ ನಡೆದಿದ್ದ ಶಿವಮೊಗ್ಗ ABVP ಕಚೇರಿಯಲ್ಲಿ ನಡೆದ ಸಭೆಯ ಬಗ್ಗೆ ಕುತೂಹಲ ಮೂಡಿಸಿದೆ. ಇನ್ನೇನು ABVP, RSS ಕಚೇರಿ ಬಳಿಯೂ ಸಿಸಿಬಿ ತಂಡ ಪರಿಶೀಲನೆ ನಡೆಸಲಿದೆ.</p>
]]></content:encoded>
					
		
		
			</item>
		<item>
		<title>ಉಡುಪಿ &#124; ಕಾಲೇಜು ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಇಲ್ಲ: ಖುಷ್ಬೂ ಸುಂದರ್</title>
		<link>https://peepalmedia.com/udupi-there-was-no-hidden-camera-khushboo/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 27 Jul 2023 12:16:12 +0000</pubDate>
				<category><![CDATA[Uncategorized]]></category>
		<category><![CDATA[ಉಡುಪಿ]]></category>
		<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[ABVP]]></category>
		<category><![CDATA[bjp]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[kushboo]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=24442</guid>

					<description><![CDATA[ಉಡುಪಿ: ದೇಶದ ಗಮನ ಸೆಳೆದಿರುವ ಉಡುಪಿಯ ನೇತ್ರ ಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಮೊಬೈಲ್ ವಿಡಿಯೋ ಪ್ರಕರಣ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್ ಉಡುಪಿ ಕಾಲೇಜಿನಲ್ಲಿ ಸತತ ಐದು ಗಂಟೆಗಳ ಸುಧೀರ್ಘ ಕಾಲದ ಸಭೆ ನಡೆಸಿದ್ದಾರೆ. ಸತತ 5 ಗಂಟೆಗಳ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ನಾಯಕಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಶೌಚಾಲಯದಲ್ಲಿ ಯಾವುದೇ ಹಿಡನ್ ಕ್ಯಾಮೆರಾ ಇರಲಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಈ ಕುರಿತು [&#8230;]]]></description>
										<content:encoded><![CDATA[
<p>ಉಡುಪಿ: ದೇಶದ ಗಮನ ಸೆಳೆದಿರುವ ಉಡುಪಿಯ ನೇತ್ರ ಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಮೊಬೈಲ್ ವಿಡಿಯೋ ಪ್ರಕರಣ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್ ಉಡುಪಿ ಕಾಲೇಜಿನಲ್ಲಿ ಸತತ ಐದು ಗಂಟೆಗಳ ಸುಧೀರ್ಘ ಕಾಲದ ಸಭೆ ನಡೆಸಿದ್ದಾರೆ.</p>



<p>ಸತತ 5 ಗಂಟೆಗಳ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ನಾಯಕಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಶೌಚಾಲಯದಲ್ಲಿ ಯಾವುದೇ ಹಿಡನ್ ಕ್ಯಾಮೆರಾ ಇರಲಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.</p>



<p>ಈ ಕುರಿತು ಮಾಧ್ಯಮಗಳೊಡನೆ ವಿವರವಾಗಿ ಮಾತನಾಡಿದ ಅವರು, &#8220;ಈಗಷ್ಟೇ ತನಿಖೆ ಆರಂಭ ಮಾಡಿದ್ದೇನೆ. ಯಾವುದೇ ಮಾಹಿತಿಗಳನ್ನು ಹೊರಗೆ ಹೇಳಲು ಸಾಧ್ಯವಿಲ್ಲ. ಒಳಗಡೆ ಏನು ಚರ್ಚೆಯಾಯಿತು ಎಂದು ಬಹಿರಂಗಪಡಿಸಲು ಸಾಧ್ಯವಿಲ್ಲ. ಈಗಲೇ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಈಗಷ್ಟೇ ತನಿಖೆ ಆರಂಭಿಸಿದ್ದೇವೆ, ಈ ವಿಚಾರದಲ್ಲಿ ಯಾವುದೇ ಅಂತಿಮ ತೀರ್ಮಾನಕ್ಕೆ ಬರಬೇಡಿ. ಸಾಕ್ಷಿ ಸಿಕ್ಕಿದೆಯಾ ಎನ್ನುವ ಬಗ್ಗೆ ಹೇಳಲು ಸಾಧ್ಯವಿಲ್ಲ. ಪೊಲೀಸರ ಹೇಳಿಕೆ ಹೊರತಾಗಿ ಸದ್ಯ ಜನರು ಬೇರೆ ಯಾವುದೇ ಊಹಾಪೋಹಗಳಿಗೆ ಕಿವಿ ಕೊಡಬೇಡಿ&#8221; ಎಂದು ಮನವಿ ಮಾಡಿದರು.</p>



<p>&#8220;ಪ್ರಕರಣದ ಕುರಿತು ಮಾಹಿತಿ ಸಂಗ್ರಹಕ್ಕೆ ನಮಗೆ ಇನ್ನೂ ಸ್ವಲ್ಪ ಸಮಯ ಬೇಕು. ಎಲ್ಲರೂ ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸಬೇಕೆಂದು ಪ್ರಾಮಾಣಿಕವಾಗಿ ಕೋರುತ್ತೇನೆ. ಯಾವುದೇ ರೂಮರ್‌ಗಳಿಗೆ, ವಾಟ್ಸಪ್ ಮೆಸೇಜ್‌ಗಳಿಗೆ ಗಮನ ಕೊಡಬೇಡಿ. ನಾವೇ ಸರಿಯಾದ ಮಾಹಿತಿಯನ್ನು ನೀಡುತ್ತೇವೆ&#8221; ಎಂದರು.</p>



<p>ಘಟನೆಗೆ ಸಂಬಂಧಿಸಿದ ಫೋನುಗಳನ್ನು ವಿಧಿ ವಿಜ್ಞಾನ ಪ್ರಯೋಗಕ್ಕೆ ಕಳುಹಿಸಲಾಗಿದೆ. ಸದ್ಯಕ್ಕೆ ಇಷ್ಟು ಮಾತ್ರವೇ ಹೇಳಲು ಸಾಧ್ಯ. ನಮಗೆ ನಮ್ಮ ಕೆಲಸ ಮಾಡಲು ಬಿಡಿ. ನಾವು ಹೋದಲ್ಲೆಲ್ಲ ನಮ್ಮನ್ನು ಹಿಂಬಾಲಿಸಿ ತೊಂದರೆ ಕೊಡಬೇಡಿ ಎಂದು ಮಾಧ್ಯಮಗಳ ಬಳಿ ವಿನಂತಿಸಿಕೊಂಡರು. ಸದ್ಯ ನನ್ನ ಬಳಿ ನಿಮಗಾಗಿ ಯಾವುದೇ ಸುದ್ದಿಯಿಲ್ಲ. ಮಹಿಳಾ ಆಯೋಗಕ್ಕೆ ದೂರು ಬಂದ ಕಾರಣ ನಾನು ಇಲ್ಲಿಯವರೆಗೆ ಬಂದಿದ್ದೇನೆ ಎಂದು ಅವರು ಹೇಳಿದರು.</p>



<p>ಆರೋಪಗಳು ಅನೇಕ ಇರಬಹುದು, ಅದರ ಆಧಾರದಲ್ಲಿ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ನಾನು ಯಾವುದೇ ಬ್ರೇಕಿಂಗ್ ನ್ಯೂಸ್ ಕೊಡಲು ಇಲ್ಲಿ ಇಲ್ಲ. ಇದು ವಿದ್ಯಾರ್ಥಿನಿಯರಿಗೆ ಸಂಬಂಧಿಸಿದ ವಿಚಾರ. ಇದು ಮಹಿಳೆಯರಿಗೆ ಸಂಬಂಧಿಸಿದ ವಿಚಾರ, ಕಾಯಬೇಕು. ಇದು ಎರಡು ನಿಮಿಷದ ನೂಡಲ್ಸ್ ಥರ ಅಲ್ಲ. ಟಾಯ್ಲೆಟ್‌ನಲ್ಲಿ ಹಿಡನ್ ಕ್ಯಾಮೆರಾ ಇರಿಸಲಾಗಿದೆ ಎನ್ನುವ ರೂಮರ್ ನಂಬಬೇಡಿ. ಹರಿದಾಡುತ್ತಿರುವ ಸುಳ್ಳು ವಿಡಿಯೋಗಳನ್ನು ನಂಬಬೇಡಿ. ಇದೊಂದು ಶೈಕ್ಷಣಿಕ ಕೇಂದ್ರ ಎಲ್ಲಿ ಹಿಡನ್ ಕ್ಯಾಮೆರಾ ಇರಲು ಸಾಧ್ಯವಿಲ್ಲ. ಪೊಲೀಸರ ಜೊತೆಗೆ ನಾವು ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ. ಪೊಲೀಸರ ಸಹಕಾರದೊಂದಿಗೆ ನಮ್ಮ ತನಿಖೆ ಮುಂದುವರಿಯಲಿದೆ ಎಂದು ಖುಷ್ಬು ಸಭೆಯ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಹೆಣ್ಣು ಮಕ್ಕಳ ವಿಷಯ, ಬಹಳ ಸೂಕ್ಷ್ಮವಾದ ವಿಷಯ ಇದು ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಮಾಧ್ಯಮಗಳಿಗೆ ಕಿವಿ ಮಾತು ಹೇಳಿದರು.</p>



<p>ಇಂದು ಬಿಜೆಪಿ ಪಕ್ಷ ಮತ್ತು ABVP ಸಂಘಟನೆಗಳು ಉಡುಪಿ ಸೇರಿದಂತೆ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದವು. ಬೆಂಗಳೂರಿನಲ್ಲಿ ಗೃಹ ಸಚಿವರ ಮನೆಗೆ ನುಗ್ಗಲು ಪ್ರಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ABVP ಪದಾಧಿಕಾರಿಗಳು : ಆರೋಪ ತಳ್ಳಿ ಹಾಕಿದ ಸಂಘಟನೆ</title>
		<link>https://peepalmedia.com/abvp-office-bearers-in-gang-rape-case/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 20 Jul 2023 07:22:21 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[ABVP]]></category>
		<category><![CDATA[bjp]]></category>
		<category><![CDATA[gang rape]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Rajastan]]></category>
		<guid isPermaLink="false">https://peepalmedia.com/?p=24050</guid>

					<description><![CDATA[ರಾಜಸ್ಥಾನದ ಜೋಧ್‌ಪುರ ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಆವರಣದಲ್ಲಿ 17 ವರ್ಷದ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳು ಬಿಜೆಪಿಯ ವಿದ್ಯಾರ್ಥಿ ಘಟಕವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಸದಸ್ಯರು ಎಂದು ಪೊಲೀಸರು ಆರೋಪಿಸಿ ರಾಜಸ್ಥಾನದಲ್ಲಿ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ತಾನು ಪ್ರೀತಿಸಿದ ಹುಡುಗನೊಂದಿಗೆ ಅಜ್ಮೀರ್ ಜಿಲ್ಲೆಯ ಬೇವಾರ್‌ನಿಂದ ಓಡಿಹೋಗಿ ಶನಿವಾರ ತಡರಾತ್ರಿ ಜೋಧ್‌ಪುರ ತಲುಪಿದ್ದಾಳೆ.&#160;ನಗರದಲ್ಲಿ ವಸತಿಗಾಗಿ ಹುಡುಕಾಡುತ್ತಿದ್ದಾಗ ಮೂವರು ಆರೋಪಿಗಳು ರಾತ್ರಿ ಆಶ್ರಯ ನೀಡುವುದಾಗಿ ಹೇಳಿ ಆಮಿಷ ಒಡ್ಡಿದ್ದಾರೆ. [&#8230;]]]></description>
										<content:encoded><![CDATA[
<p>ರಾಜಸ್ಥಾನದ ಜೋಧ್‌ಪುರ ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಆವರಣದಲ್ಲಿ 17 ವರ್ಷದ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳು ಬಿಜೆಪಿಯ ವಿದ್ಯಾರ್ಥಿ ಘಟಕವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಸದಸ್ಯರು ಎಂದು ಪೊಲೀಸರು ಆರೋಪಿಸಿ ರಾಜಸ್ಥಾನದಲ್ಲಿ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.</p>



<p>ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ತಾನು ಪ್ರೀತಿಸಿದ ಹುಡುಗನೊಂದಿಗೆ ಅಜ್ಮೀರ್ ಜಿಲ್ಲೆಯ ಬೇವಾರ್‌ನಿಂದ ಓಡಿಹೋಗಿ ಶನಿವಾರ ತಡರಾತ್ರಿ ಜೋಧ್‌ಪುರ ತಲುಪಿದ್ದಾಳೆ.&nbsp;ನಗರದಲ್ಲಿ ವಸತಿಗಾಗಿ ಹುಡುಕಾಡುತ್ತಿದ್ದಾಗ ಮೂವರು ಆರೋಪಿಗಳು ರಾತ್ರಿ ಆಶ್ರಯ ನೀಡುವುದಾಗಿ ಹೇಳಿ ಆಮಿಷ ಒಡ್ಡಿದ್ದಾರೆ.</p>



<p>ನಂತರ ಆರೋಪಿಗಳು ಅವರನ್ನು ವಿಶ್ವವಿದ್ಯಾನಿಲಯದ ಹಾಕಿ ಮೈದಾನಕ್ಕೆ ಕರೆದೊಯ್ದು ಆಕೆಯ ಪ್ರಿಯಕರನನ್ನು ಥಳಿಸಿ ನಂತರ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಆಪಾದಿತ ಅತ್ಯಾಚಾರಿಗಳನ್ನು ಅಪರಾಧ ನಡೆದ ಎರಡು ಗಂಟೆಗಳ ನಂತರ ಬಂಧಿಸಲಾಗಿದೆ.&nbsp;ಅವರನ್ನು ಧರ್ಮಪಾಲ್ ಸಿಂಗ್, ಸಮಂದರ್ ಸಿಂಗ್ ಭಾಟಿ ಮತ್ತು ಭಟ್ಟಮ್ ಸಿಂಗ್ ಎಂದು ಗುರುತಿಸಲಾಗಿದ್ದು, ಎಲ್ಲರೂ 20 ರಿಂದ 22 ವರ್ಷ ವಯಸ್ಸಿನವರಾಗಿದ್ದಾರೆ.</p>



<p>ಪ್ರಕರಣದಲ್ಲಿ ಬಂಧಿತರಾಗಿರುವ ವಿದ್ಯಾರ್ಥಿಗಳು ABVP ಸದಸ್ಯರು ಎಂದು ಪೊಲೀಸರು ಗುರುತಿಸಿದ್ದು, ರಾಜಸ್ಥಾನದ ರಾಜಕೀಯದಲ್ಲಿ ಬಾರೀ ಕೋಲಾಹಲ ಸೃಷ್ಟಿಯಾಗಿದೆ. ಆದರೆ ಪೊಲೀಸರು ವಿಶ್ವವಿದ್ಯಾನಿಲಯದಲ್ಲಿ ನಡೆಯುವ ವಿದ್ಯಾರ್ಥಿ ಸಂಘದ ಚುನಾವಣೆಗೆ ಎಬಿವಿಪಿಯಿಂದ ಟಿಕೆಟ್‌ಗಾಗಿ ವಿದ್ಯಾರ್ಥಿ ನಾಯಕನಿಗೆ ಆರೋಪಿಗಳು ಪ್ರಚಾರ ನಡೆಸುತ್ತಿದ್ದರು ಎಂದು ಪೊಲೀಸರು ತನಿಖೆ ಮೂಲಕ ತಿಳಿಸಿದ್ದಾರೆ.</p>



<p>ಆದರೆ ಬಿಜೆಪಿ ಪಕ್ಷ ಮತ್ತು ABVP ಸಂಘಟನೆ ಆರೋಪಿಗಳೊಂದಿಗಿನ ತಮ್ಮ ಸಂಬಂಧವನ್ನು ನಿರಾಕರಿಸಿವೆ. ಇದೇ ವಿಚಾರ ರಾಜಸ್ಥಾನದ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪವಾದಾಗ ಬಿಜೆಪಿ ಶಾಸಕರು ಗದ್ದಲ ಎಬ್ಬಿಸಿದ ಘಟನೆ ನಡೆದಿದೆ. ವಿಧಾನಸಭೆಯಲ್ಲಿ ಪಕ್ಷೇತರ ಶಾಸಕ ಸಂಯಮ್ ಲೋಧಾ ಅವರು ಈ ವಿಚಾರ ಪ್ರಸ್ತಾಪಿಸಿದಾಗ ಬಿಜೆಪಿ ಶಾಸಕರು ಇದನ್ನು ವಿರೋಧಿಸಿ, ಈ ವಿಚಾರವನ್ನು ನಡಾವಳಿಗಳ ದಾಖಲೆಯಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿದರು.</p>



<p>ಇದರ ನಡುವೆ ಆರೋಪಿಗಳಲ್ಲಿ ಒಬ್ಬನಾದ ಧರ್ಮಪಾಲ್ ಸಿಂಗ್ ಅವರು ಸೆಪ್ಟೆಂಬರ್ 21, 2021 ರಿಂದ ಸದಸ್ಯರಾಗಿದ್ದಾರೆ ಎಂದು ತೋರಿಸುವ ಎಬಿವಿಪಿ ಸದಸ್ಯತ್ವದ ರಸೀದಿಯನ್ನು ರಾಜ್ಯ ಸರ್ಕಾರದ ಮೂಲಗಳು ಬುಧವಾರ ಬಿಡುಗಡೆ ಮಾಡಿದೆ. ರಶೀದಿಯಲ್ಲಿ ಎಬಿವಿಪಿ ಜೋಧ್‌ಪುರ &#8216;ಪ್ರಾಂತ್&#8217; (ಬ್ಲಾಕ್) ಅಧ್ಯಕ್ಷ ಬಲ್ವೀರ್ ಚೌಧರಿ ಸಹಿ ಮಾಡಿದ ದಾಖಲೆ ಕೂಡ ಕಂಡುಬಂದಿದೆ.</p>



<p>ಮೂವರು ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (POCSO), ಭಾರತೀಯ ದಂಡ ಸಂಹಿತೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.</p>
]]></content:encoded>
					
		
		
			</item>
		<item>
		<title>ತೀರ್ಥಹಳ್ಳಿ ABVP ಮುಖ್ಯಸ್ಥನ ಬಂಧನ ; ಪ್ರಕರಣದಲ್ಲಿ ಸಂಘಪರಿವಾರದ ಮೌನದ ಹಿಂದಿನ ಕಾರಣವೇನು?</title>
		<link>https://peepalmedia.com/theerthahalli-abvp-president-arrested-what-is-the-reason-behind-the-sangh-parivars-silence-in-the-case/</link>
		
		<dc:creator><![CDATA[Peepal Media Desk]]></dc:creator>
		<pubDate>Sun, 18 Jun 2023 14:36:05 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[ABVP]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[RSS]]></category>
		<category><![CDATA[Sex scam]]></category>
		<category><![CDATA[Thirthahalli]]></category>
		<guid isPermaLink="false">https://peepalmedia.com/?p=22496</guid>

					<description><![CDATA[ಅಶ್ಲೀಲ ವಿಡಿಯೋ ಹರಿಬಿಟ್ಟು ಅಮಾಯಕ ಹೆಣ್ಣು ಮಕ್ಕಳ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ABVP ಘಟಕದ ಮುಖ್ಯಸ್ಥ ಪ್ರತೀಕ್ ಗೌಡ ಬಂಧನವಾಗಿದೆ. ನಿನ್ನೆಯ ದಿನ NSUI ತೀರ್ಥಹಳ್ಳಿ ಘಟಕ ಆತನ ಮೇಲೆ ದೂರು ದಾಖಲಿಸಿದ ಬೆನ್ನಲ್ಲೇ ತೀರ್ಥಹಳ್ಳಿ ಪೊಲೀಸರು ಪ್ರತೀಕ್ ಗೌಡನನ್ನು ಬಂಧಿಸಿದ್ದಾರೆ. ಈ ಬಗ್ಗೆ ಪೀಪಲ್ ಟಿವಿ ವಿಸ್ತೃತ ವರದಿ ಮಾಡಿತ್ತು. ವರದಿಯ ಬೆನ್ನಲ್ಲೇ ಶನಿವಾರ ಪ್ರತೀಕ್ ಗೌಡನ ಬಂಧನವಾಗಿದೆ. ABVP ಸಂಘಟನೆಯ ಸದಸ್ಯತ್ವ ಮತ್ತು ಸಂಘಟನೆಯಲ್ಲಿನ ಘಟಕಗಳಿಗೆ ಸ್ಥಾನಮಾನ ಕೊಡುವ ಬಗ್ಗೆ ವಿಧ್ಯಾರ್ಥಿನಿಯರಿಗೆ ನಾನಾ [&#8230;]]]></description>
										<content:encoded><![CDATA[
<p>ಅಶ್ಲೀಲ ವಿಡಿಯೋ ಹರಿಬಿಟ್ಟು ಅಮಾಯಕ ಹೆಣ್ಣು ಮಕ್ಕಳ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ABVP ಘಟಕದ ಮುಖ್ಯಸ್ಥ ಪ್ರತೀಕ್ ಗೌಡ ಬಂಧನವಾಗಿದೆ. ನಿನ್ನೆಯ ದಿನ NSUI ತೀರ್ಥಹಳ್ಳಿ ಘಟಕ ಆತನ ಮೇಲೆ ದೂರು ದಾಖಲಿಸಿದ ಬೆನ್ನಲ್ಲೇ ತೀರ್ಥಹಳ್ಳಿ ಪೊಲೀಸರು ಪ್ರತೀಕ್ ಗೌಡನನ್ನು ಬಂಧಿಸಿದ್ದಾರೆ.</p>



<p>ಈ ಬಗ್ಗೆ <strong>ಪೀಪಲ್ ಟಿವಿ</strong> ವಿಸ್ತೃತ ವರದಿ ಮಾಡಿತ್ತು. ವರದಿಯ ಬೆನ್ನಲ್ಲೇ ಶನಿವಾರ ಪ್ರತೀಕ್ ಗೌಡನ ಬಂಧನವಾಗಿದೆ. ABVP ಸಂಘಟನೆಯ ಸದಸ್ಯತ್ವ ಮತ್ತು ಸಂಘಟನೆಯಲ್ಲಿನ ಘಟಕಗಳಿಗೆ ಸ್ಥಾನಮಾನ ಕೊಡುವ ಬಗ್ಗೆ ವಿಧ್ಯಾರ್ಥಿನಿಯರಿಗೆ ನಾನಾ ರೀತಿಯಲ್ಲಿ ಆಮಿಷವೊಡ್ಡಿ ಅವರಿಂದ ನಗ್ನ ಚಿತ್ರಗಳನ್ನ ಆರೋಪಿ ಪ್ರತೀಕ್ ಗೌಡ ಚಿತ್ರಿಸಿದ್ದನು. ನಂತರ ವಿಧ್ಯಾರ್ಥಿನಿಯರಿಗೆ ವಿಡಿಯೋ ತೋರಿಸಿ ಹಣ ಮತ್ತು ನಿರಂತರ ಲೈಂಗಿಕ ಕ್ರಿಯೆಗೆ ಬಳಸಿದ್ದ ಎಂದೂ ಆರೋಪಿಸಲಾಗಿದೆ.</p>



<p>ನಂತರ ಈತನ ಬ್ಲಾಕ್ಮೇಲ್ ತಂತ್ರಕ್ಕೆ ಮಣಿಯದೇ ಹೋದಾಗ ವಿದ್ಯಾರ್ಥಿನಿಯರ ನಗ್ನ ಚಿತ್ರಗಳನ್ನು ವಾಟ್ಸಾಪ್ ಮೂಲಕ ಹರಿಬಿಟ್ಟು ಹೆಣ್ಣು ಮಕ್ಕಳ ಮಾನಹಾನಿ ಮಾಡಿದ್ದಾನೆ. ಸಧ್ಯ ಆರೋಪಿ ಈಗ ತೀರ್ಥಹಳ್ಳಿ ಪೊಲೀಸರ ಅತಿಥಿಯಾಗಿದ್ದಾನೆ.</p>



<p><strong>ಆತ ನಮ್ಮವನಲ್ಲ ಎಂದ ABVP</strong></p>



<p>ಇನ್ನೊಂದು ಕಡೆ ಈತನ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ ಈತ ಮುಖ್ಯಸ್ಥನಾಗಿದ್ದ ತೀರ್ಥಹಳ್ಳಿ ABVP ಘಟಕ, ಪ್ರತೀಕ್ ಗೌಡ ನಮ್ಮ ಸಂಘಟನೆಯಲ್ಲೇ ಇಲ್ಲ. ಈತನಿಗೂ ಸಂಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ತಿಪ್ಪೆ ಸಾರಿಸೋಕೆ ಹೊರಟಿದೆ. ಆದರೆ ಇದು ಸಂಘ ಪರಿವಾರದ ಎಸ್ಕೇಪ್ ಮಾರ್ಗ ಅನ್ನೋ ಸತ್ಯ ಈಗ ಗುಟ್ಟಾಗಿ ಉಳಿದಿಲ್ಲ. ಸಂಘ ಪರಿವಾರದ ಹಿನ್ನೆಲೆಯ ಕಾರ್ಯಕರ್ತರು ಏನೇ ಕಾನೂನು ಬಾಹಿರ ಚಟುವಟಿಕೆ ನಡೆಸಿದರೂ ಪರಿವಾರ ಇದೇ ರೀತಿಯ ಮಾರ್ಗ ಉಪಯೋಗಿಸಿ ತಪ್ಪಿಸಿಕೊಳ್ಳುತ್ತೆ. ಇಲ್ಲಿ ಪ್ರತೀಕ್ ಗೌಡನ ವಿಷಯದಲ್ಲಿ ಆಗಿರೋದೂ ಇದೇ.</p>



<figure class="wp-block-image size-large"><img fetchpriority="high" decoding="async" width="810" height="1024" src="https://peepalmedia.com/wp-content/uploads/2023/06/IMG_20230618_200331-810x1024.jpg" alt="" class="wp-image-22499" srcset="https://peepalmedia.com/wp-content/uploads/2023/06/IMG_20230618_200331-810x1024.jpg 810w, https://peepalmedia.com/wp-content/uploads/2023/06/IMG_20230618_200331-237x300.jpg 237w, https://peepalmedia.com/wp-content/uploads/2023/06/IMG_20230618_200331-768x971.jpg 768w, https://peepalmedia.com/wp-content/uploads/2023/06/IMG_20230618_200331-150x190.jpg 150w, https://peepalmedia.com/wp-content/uploads/2023/06/IMG_20230618_200331-300x379.jpg 300w, https://peepalmedia.com/wp-content/uploads/2023/06/IMG_20230618_200331-696x880.jpg 696w, https://peepalmedia.com/wp-content/uploads/2023/06/IMG_20230618_200331-1068x1351.jpg 1068w, https://peepalmedia.com/wp-content/uploads/2023/06/IMG_20230618_200331.jpg 1080w" sizes="(max-width: 810px) 100vw, 810px" /></figure>



<p>ಇದೇ ಪ್ರತೀಕ್ ಗೌಡ ABVP ಸಂಘಟನೆಯ ತಾಲ್ಲೂಕು ಮುಖ್ಯಸ್ಥ ಎಂಬುದು ಸಂಘಟನೆಯ ಕಾರ್ಯ ಚಟುವಟಿಕೆಗಳಲ್ಲೇ ದಾಖಲಾಗಿದೆ. ಮತ್ತು ಈತ ಗುರುತಿಸಿಕೊಂಡಿರುವ ಸಂಘಟನೆ ಹಿನ್ನಲೆಯ ಪ್ರತಿಯೊಬ್ಬರೂ ಹೇಳುವ ಮಾತು. ಕೇವಲ ಎರಡು ತಿಂಗಳ ಹಿಂದೆ ನಡೆದ ABVP ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ವೇದಿಕೆಯನ್ನೇ ಹಂಚಿಕೊಂಡ ಫೋಟೋಗಳೇ ಈತ ಆ ಸಂಘಟನೆ ಪದಾಧಿಕಾರಿ ಎಂಬುದಕ್ಕೆ ಸಾಕ್ಷ್ಯ ಒದಗಿಸುತ್ತಿದೆ.</p>



<figure class="wp-block-image size-large"><img decoding="async" width="1024" height="760" src="https://peepalmedia.com/wp-content/uploads/2023/06/IMG-20230616-WA0037-1024x760.jpg" alt="" class="wp-image-22502" srcset="https://peepalmedia.com/wp-content/uploads/2023/06/IMG-20230616-WA0037-1024x760.jpg 1024w, https://peepalmedia.com/wp-content/uploads/2023/06/IMG-20230616-WA0037-300x223.jpg 300w, https://peepalmedia.com/wp-content/uploads/2023/06/IMG-20230616-WA0037-768x570.jpg 768w, https://peepalmedia.com/wp-content/uploads/2023/06/IMG-20230616-WA0037-150x111.jpg 150w, https://peepalmedia.com/wp-content/uploads/2023/06/IMG-20230616-WA0037-485x360.jpg 485w, https://peepalmedia.com/wp-content/uploads/2023/06/IMG-20230616-WA0037-696x517.jpg 696w, https://peepalmedia.com/wp-content/uploads/2023/06/IMG-20230616-WA0037-1068x793.jpg 1068w, https://peepalmedia.com/wp-content/uploads/2023/06/IMG-20230616-WA0037.jpg 1080w" sizes="(max-width: 1024px) 100vw, 1024px" /></figure>



<p>ಇನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈತ ತೀರ್ಥಹಳ್ಳಿಯಲ್ಲಿ ಹಿಜಾಬ್ ಘಟನೆಯ ನೇತೃತ್ವ ಕೂಡಾ ವಹಿಸಿದ್ದ. ಅದೂ ABVP ಸಂಘಟನೆಯ ಅಡಿಯಲ್ಲೇ ನಡೆದ ಗಲಭೆಗಳಲ್ಲಿ ಪ್ರತೀಕ್ ಗೌಡ ಮುಂಚೂಣಿ ಜವಾಬ್ದಾರಿ ವಹಿಸಿದ್ದ ಎಂಬ ಮಾಹಿತಿಗಳೂ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.</p>



<p><strong>ಸಂಘ ಪರಿವಾರದ ಮೌನವೇಕೆ?</strong></p>



<p>&#8216;ಒಂದು ಕಡೆ ಸಂಘ ಪರಿವಾರ ತನ್ನ ಅಂಗಸಂಸ್ಥೆಗಳ ಮೂಲಕ ಹಿಜಾಬ್, ಲವ್ ಜಿಹಾದ್ ನಂತಹ ಅನಗತ್ಯ ವಿಚಾರಗಳನ್ನು ಇಟ್ಟು ಹಿಂದೂ ಹೆಣ್ಣು ಮಕ್ಕಳಿಗೆ ಉಳಿಗಾಲವಿಲ್ಲ ಅನ್ನೋದು. ಇನ್ನೊಂದು ಕಡೆ ಅವರದೇ ಸಂಘಟನೆಯ ಪದಾಧಿಕಾರಿಗಳು ಈ ರೀತಿಯಲ್ಲಿ ಹಿಂದೂ ಹೆಣ್ಣು ಮಕ್ಕಳನ್ನೇ ಅಶ್ಲೀಲ ಕೃತ್ಯಗಳಿಗೆ ಬಳಸಿಕೊಳ್ಳೋದು. ಹಾಗಾದರೆ ಹಿಂದೂ ಹೆಣ್ಣು ಮಕ್ಕಳು ಅಪಾಯದಲ್ಲಿ ಇರೋದು ಯಾರಿಂದ? ಹಿಂದೂವಾಗಿ ಹಿಂದೂ ಹೆಣ್ಣು ಮಕ್ಕಳನ್ನು ಯಾವ ರೀತಿಯಲ್ಲಿ ಬೇಕಾದರೂ ಬಳಸಿಕೊಳ್ಳಬಹುದಾ? ಇಲ್ಲಿ ಮಾನಹಾನಿ ಆಗಿದ್ದು ಒಬ್ಬ ಹಿಂದೂ ಯುವಕನಿಂದ‌. ಮೇಲಾಗಿ ಸಂಘ ಪರಿವಾರದ ಹಿನ್ನೆಲೆಯ ವ್ಯಕ್ತಿಯಿಂದ ಅನ್ನೋದು ಗಮನಾರ್ಹ.</p>



<p>ಹಿಂದೆ ಇದೇ ತೀರ್ಥಹಳ್ಳಿಯಲ್ಲಿ ನಂದಿತಾ ಎಂಬ ವಿದ್ಯಾರ್ಥಿನಿಯ ಸಾವಿನ ನಂತರ ಬಿಜೆಪಿ ಪಕ್ಷ ಇಡೀ ತೀರ್ಥಹಳ್ಳಿ ಹೊತ್ತಿ ಉರಿಯುವಂತಹ ಪ್ರತಿಭಟನೆ ಮಾಡಿತ್ತು. ಲಕ್ಷಾಂತರ ಮೌಲ್ಯದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿತ್ತು. ಸತ್ಯಾಸತ್ಯತೆಯ ಅರಿವಿಲ್ಲದೆ ನೂರಾರು ಅಮಾಯಕ ಯುವಜನರನ್ನು ಅಡ್ಡದಾರಿಗೆ ತಗೆದುಕೊಂಡು ಹೋಗಿ, ಅವರ ಮೇಲೆ ಪ್ರಕರಣ ದಾಖಲಾಗುವಂತೆ ಮಾಡಿತ್ತು. ರಾಜ್ಯದ ಮೂಲೆ ಮೂಲೆಗಳಲ್ಲಿ ನಂದಿತಾ ಸಾವಿನ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿತ್ತು. ಪ್ರಕರಣದ ತೀರ್ಪು ಹೊರಬರಲೂ ಅವಕಾಶ ಕೊಡದೇ ತೀರ್ಥಹಳ್ಳಿಯಲ್ಲಿ ಹಿಂದೆಂದೂ ಕಾಣದಂತಹ ಗಲಭೆ ಎಬ್ಬಿಸಿತ್ತು ಸಂಘ ಪರಿವಾರ.</p>



<figure class="wp-block-image size-full"><img loading="lazy" decoding="async" width="259" height="194" src="https://peepalmedia.com/wp-content/uploads/2023/06/IMG_20230618_212016.jpg" alt="" class="wp-image-22504" srcset="https://peepalmedia.com/wp-content/uploads/2023/06/IMG_20230618_212016.jpg 259w, https://peepalmedia.com/wp-content/uploads/2023/06/IMG_20230618_212016-150x112.jpg 150w" sizes="auto, (max-width: 259px) 100vw, 259px" /></figure>



<p>ಆದರೆ ABVP ಮುಖ್ಯಸ್ಥ ಪ್ರತೀಕ್ ಗೌಡನ ಪ್ರಕರಣದಲ್ಲಿ ಈ ವರೆಗೂ ಯಾವೊಬ್ಬ ಸಂಘ ಪರಿವಾರದ ಮುಖಂಡನಾಗಲಿ, ಬಿಜೆಪಿ ನಾಯಕರಾಗಲಿ ಆ ಹೆಣ್ಣು ಮಕ್ಕಳಿಗಾದ ಅನ್ಯಾಯದ ವಿರುದ್ಧ ದನಿಗೂಡಿಸದೇ ಇರೋದು ಹಿಂದೂ ಹೆಣ್ಣು ಮಕ್ಕಳ ಮೇಲಿನ ಇವರ ಕಾಳಜಿ ಕೇವಲ ಬೂಟಾಟಿಕೆ ಎಂಬುದನ್ನು ತೋರಿಸುತ್ತಿದೆ. ಹೀಗೆಂದು ಸ್ಥಳೀಯ ಪ್ರಜ್ಞಾವಂತರು ಮಾತಾಡಿಕೊಳ್ಳುತ್ತಿದ್ದಾರೆ.</p>



<p>ಏನೇ ಆಗಲಿ ತೀರ್ಥಹಳ್ಳಿ ABVP ಮುಖ್ಯಸ್ಥ ಪ್ರತೀಕ್ ಗೌಡನ ಬಂಧನವಾಗಿದೆ. ಆರೋಪ ಸಾಭೀತಾಗಿ ತಕ್ಕ ಶಿಕ್ಷೆ ಆಗಲಿದೆ ಎಂಬ ಭರವಸೆ ಕೂಡಾ ಇದೆ. ಇನ್ನೂ ಸ್ವಲ್ಪ ಧೈರ್ಯ ಮಾಡಿ ಅನ್ಯಾಯಕ್ಕೆ ಒಳಗಾದ ಹೆಣ್ಣು ಮಕ್ಕಳು ಆತನ ಮೇಲೆ ದೂರು ದಾಖಲಿಸಿದರೆ ಮುಂದೆ ಇಂತಹ ತಪ್ಪು ಮಾಡುವವರು ನೂರು ಬಾರಿ ಯೋಚಿಸುವಂತಾಗಬೇಕು. ಅಮಾಯಕ ಹೆಣ್ಣು ಮಕ್ಕಳು ಅನ್ಯಾಯಕ್ಕೆ ಒಳಗಾಗುವುದನ್ನು ತಪ್ಪಿಸಬಹುದು.</p>



<p></p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<div class="youtube-embed" data-video_id="UuYdq0sCyu4"><iframe loading="lazy" title="ಪರಿಶಿಷ್ಟ ಅಲೆಮಾರಿ ಬಾಲಕಿ ತೇಜಸ್ವಿನಿಯ ಅನುಮಾನಾಸ್ಪದ ಸಾವು. ಆರ್ ಎಸ್ ಎಸ್ ವ್ಯಕ್ತಿ ವನಶ್ರೀ ಮಂಜಪ್ಪನೇ ತಪ್ಪಿತಸ್ಥನೆ?" width="696" height="392" src="https://www.youtube.com/embed/UuYdq0sCyu4?feature=oembed&#038;enablejsapi=1" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" allowfullscreen></iframe></div>
</div></figure>
]]></content:encoded>
					
		
		
			</item>
		<item>
		<title>ಹಿಂದೂ ಯುವತಿಯರೇ ಎಚ್ಚರ! ಇದು ಮೀಸೆ ಚಿಗುರದ ಬಲಪಂಥೀಯ ವಿಧ್ಯಾರ್ಥಿ ಸಂಘಟನೆ ಅಧ್ಯಕ್ಷನ ಸೆಕ್ಸ್ ಸ್ಕ್ಯಾಂಡಲ್!</title>
		<link>https://peepalmedia.com/hindu-young-women-beware-this-is-the-sex-scandal-of-the-president-of-the-right-wing-student-organization-with-a-mustache/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 17 Jun 2023 08:56:42 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[ABVP]]></category>
		<category><![CDATA[blackmail]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Sex scam]]></category>
		<category><![CDATA[Thirthahalli]]></category>
		<guid isPermaLink="false">https://peepalmedia.com/?p=22450</guid>

					<description><![CDATA[ಎಚ್ಚರ! ಎಚ್ಚರ!! ಎಚ್ಚರ!!!ಕಾಲೇಜು ಕಲಿಕೆಯ ಹಂತದ ವಿದ್ಯಾರ್ಥಿ ದಿಸೆಯಲ್ಲಿ ಸಂಘಟನೆ ಕಟ್ಟಿ ತಮ್ಮ ಶೈಕ್ಷಣಿಕ ಹಕ್ಕುಗಳಿಗಾಗಿ ಹೋರಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪ್ರಕ್ರಿಯೆ. ಆದರೆ ಅದು ಯಾವಾಗ ಧರ್ಮ, ಸಂಸ್ಕೃತಿ ಉಳಿಸುವ ವಿದ್ಯಾರ್ಥಿ ಸಂಘಟನೆಯಾಗೋಕೆ ಹೊರಟಿತೋ ಆಗಲೇ ವಿದ್ಯೆಯ ಮತ್ತು ಸಂಘಟನೆಯ ಮೂಲ ಆಶಯವೇ ಹಳ್ಳ ಹಿಡಿಯಲು ಪ್ರಾರಂಭವಾಯಿತು. ಅಂದಹಾಗೆ ಇದು ಧರ್ಮ ಮತ್ತು ಸಂಸ್ಕೃತಿ ಉಳಿಸಲು ಹೊರಟು ತನ್ನ ನೈಜ ಸಂಸ್ಕೃತಿ ಹೊರಹಾಕಿದ ಬಲಪಂಥೀಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷನ ಕಥೆಯಿದು. ಸಧ್ಯ ಈಗ ನಾವು ಹೇಳೋಕೆ [&#8230;]]]></description>
										<content:encoded><![CDATA[
<p>ಎಚ್ಚರ! ಎಚ್ಚರ!! ಎಚ್ಚರ!!!<br>ಕಾಲೇಜು ಕಲಿಕೆಯ ಹಂತದ ವಿದ್ಯಾರ್ಥಿ ದಿಸೆಯಲ್ಲಿ ಸಂಘಟನೆ ಕಟ್ಟಿ ತಮ್ಮ ಶೈಕ್ಷಣಿಕ ಹಕ್ಕುಗಳಿಗಾಗಿ ಹೋರಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪ್ರಕ್ರಿಯೆ. ಆದರೆ ಅದು ಯಾವಾಗ ಧರ್ಮ, ಸಂಸ್ಕೃತಿ ಉಳಿಸುವ ವಿದ್ಯಾರ್ಥಿ ಸಂಘಟನೆಯಾಗೋಕೆ ಹೊರಟಿತೋ ಆಗಲೇ ವಿದ್ಯೆಯ ಮತ್ತು ಸಂಘಟನೆಯ ಮೂಲ ಆಶಯವೇ ಹಳ್ಳ ಹಿಡಿಯಲು ಪ್ರಾರಂಭವಾಯಿತು. ಅಂದಹಾಗೆ ಇದು ಧರ್ಮ ಮತ್ತು ಸಂಸ್ಕೃತಿ ಉಳಿಸಲು ಹೊರಟು ತನ್ನ ನೈಜ ಸಂಸ್ಕೃತಿ ಹೊರಹಾಕಿದ  ಬಲಪಂಥೀಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷನ ಕಥೆಯಿದು.</p>



<p>ಸಧ್ಯ ಈಗ ನಾವು ಹೇಳೋಕೆ ಹೊರಟಿರೋದು ತೀರ್ಥಹಳ್ಳಿ ಭಾಗದಲ್ಲಿ ಧರ್ಮ ಮತ್ತು ಸಂಸ್ಕೃತಿಯನ್ನು ವಿಧ್ಯಾರ್ಥಿ ಘಟ್ಟದಿಂದಲೇ ಉಳಿಸ ಹೊರಟಿರುವ ಬಲಪಂಥೀಯ ವಿಧ್ಯಾರ್ಥಿ ಸಂಘಟನೆಯ ಪ್ರತೀಕ್‌ ಗೌಡ ಎಂಬ ಅಧ್ಯಕ್ಷನ ಸೆಕ್ಸ್ ಸ್ಕ್ಯಾಂಡಲ್ ಬಗ್ಗೆ. ರಾಜಕೀಯ ಪಕ್ಷಗಳು ತಮ್ಮ ಅಸ್ತಿತ್ವ ಸ್ಥಾಪಿಸಲು ವಿದ್ಯಾರ್ಥಿಗಳನ್ನು ಬಳಸಿಕೊಳ್ಳೋದು ಅನಾದಿಕಾಲದಿಂದಲೂ ನಡೆದುಕೊಂಡು ಬಂದ ಪ್ರಕ್ರಿಯೆ. ತೀರ್ಥಹಳ್ಳಿ ತಾಲ್ಲೂಕಿನ ಈ ಸಂಘಟನೆಯ ಮುಂಚೂಣಿ ಯುವನಾಯಕನ ಕಾಮದಾಟ ಈಗ ಇಲ್ಲಿನ ಪಡ್ಡೆ ಹೈಕಳ ಮೊಬೈಲ್ ಗಳಲ್ಲಿ ಗುಪ್ತ್ ಗುಪ್ತಾಗಿ ಹರಿದಾಡುತ್ತಿದೆ.</p>



<figure class="wp-block-image size-large"><img loading="lazy" decoding="async" width="779" height="1024" src="https://peepalmedia.com/wp-content/uploads/2023/06/IMG_20230617_142054-779x1024.jpg" alt="" class="wp-image-22452" srcset="https://peepalmedia.com/wp-content/uploads/2023/06/IMG_20230617_142054-779x1024.jpg 779w, https://peepalmedia.com/wp-content/uploads/2023/06/IMG_20230617_142054-228x300.jpg 228w, https://peepalmedia.com/wp-content/uploads/2023/06/IMG_20230617_142054-768x1009.jpg 768w, https://peepalmedia.com/wp-content/uploads/2023/06/IMG_20230617_142054-150x197.jpg 150w, https://peepalmedia.com/wp-content/uploads/2023/06/IMG_20230617_142054-300x394.jpg 300w, https://peepalmedia.com/wp-content/uploads/2023/06/IMG_20230617_142054-696x914.jpg 696w, https://peepalmedia.com/wp-content/uploads/2023/06/IMG_20230617_142054-1068x1403.jpg 1068w, https://peepalmedia.com/wp-content/uploads/2023/06/IMG_20230617_142054.jpg 1080w" sizes="auto, (max-width: 779px) 100vw, 779px" /></figure>



<p>&#8216;<strong>ಕಠೋರ ಹಿಂದೂ ಹುಲಿ&#8217;ಯೊಂದರ ಸೆಕ್ಸ್ ಸ್ಕ್ಯಾಂಡಲ್ ಬ್ಲಾಕ್ಮೇಲ್ ದಂಧೆ.!</strong><br>ಬಿಜೆಪಿ ಪಕ್ಷ ಮತ್ತು ಬಲಪಂಥೀಯ ಸಂಘಟನೆ ಹಾಗೂ ವಿಧ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡು ಎಲ್ಲಾ ವೇದಿಕೆಗಳಲ್ಲೂ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ತೀರ್ಥಹಳ್ಳಿ ಘಟಕದ ಅಧ್ಯಕ್ಷ, &#8216;ಕಠೋರ ಹಿಂದೂ&#8217; ಪ್ರತೀಕ್‌ ಗೌಡನೇ ಈ ಸ್ಟೋರಿಯ ಹೀರೋ ಕಂ ವಿಲನ್.</p>



<p>ಈತ ಮಾಡಿರೋ ಅಯೋಗ್ಯ ಕೆಲಸಕ್ಕೆ ಇಡೀ ತೀರ್ಥಹಳ್ಳಿಯ ಜನತೆ ಮುಜುಗರಕ್ಕೆ ಸಿಕ್ಕಿದಂತಾಗಿದೆ. ಹೇಳಿಕೊಳ್ಳೋಕೆ ತಾನೊಬ್ಬ ದೊಡ್ಡ ಸಂಸ್ಕೃತಿಯ ವಕ್ತಾರ ಎಂಬಂತೆ ಇಲ್ಲಿಯವರೆಗೆ ಪೋಸು ಕೊಡುತ್ತಿದ್ದಾತ ಈಗ ಈತನ ಕಾಮಕೇಳಿ ಹೊರಬೀಳುತ್ತಿದ್ದಂತೆ ತಲೆಮರೆಸಿಕೊಂಡಿದ್ದಾನೆ. ಅಷ್ಟಕ್ಕೂ ಈತ ಮಾಡಿದ ಕೆಟ್ಟ ಕೆಲಸ ಕ್ಷಮಿಸಲಾರದ್ದು.</p>



<p><font style="vertical-align: inherit;"><font style="vertical-align: inherit;">ತೀರ್ಥಹಳ್ಳಿ ಸಮ</font></font>ಜವಾದದ ತವರು. ಒಬ್ಬ ಮುಖ್ಯಮಂತ್ರಿ, ಒಬ್ಬ ಪ್ರಖರ <font style="vertical-align: inherit;"><font style="vertical-align: inherit;">ಸಮಾಜವಾದಿ ಮತ್ತು ಎರಡು ಜ್ಞಾನಪೀಠವನ್ನು ತನ್ನ ಮಡಿಲಿಗೆ ಹಾಕಿಕೊಂಡ ಅಪ್ಪಟ ಜಾತ್ಯತೀತ ನೆಲೆಗಟ್ಟಿನ ನೆಲ. </font><font style="vertical-align: inherit;">ಅಂತರಾಷ್ಟ್ರೀಯ ಮಟ್ಟದಲ್ಲಿ ತೀರ್ಥಹಳ್ಳಿ ಅಂದಾಕ್ಷಣ ಮೊದಲ ಪಂಕ್ತಿಯಲ್ಲಿ ಬರುವ ಹೆಸರುಗಳೇ ಕುವೆಂಪು, ಶಾಂತವೇರಿ ಗೋಪಾಲಗೌಡರು, ಕಡಿದಾಳ್ ಮಂಜಪ್ಪನವರು, ಅನಂತಮೂರ್ತಿ, ಹಾಮಾ ನಾಯಕ್ ರಂತಹ ಮಹಾನುಭಾವರು. </font><font style="vertical-align: inherit;">ಆದರೆ ಇಂತಹ ತೀರ್ಥಹಳ್ಳಿಗಳು ಇಲ್ಲಿ ನಡೆಯುವ ಕುಕೃತ್ಯಗಳು ಈಗ ತಲೆ ತಗ್ಗಿಸುವಂಥ ಅವಮಾನಕ್ಕೆ ಗುರಿಯಾಗ್ತಿದೆ.</font></font></p>



<figure class="wp-block-image size-large"><img loading="lazy" decoding="async" width="1024" height="760" src="https://peepalmedia.com/wp-content/uploads/2023/06/IMG_20230618_181612-1024x760.jpg" alt="" class="wp-image-22486" srcset="https://peepalmedia.com/wp-content/uploads/2023/06/IMG_20230618_181612-1024x760.jpg 1024w, https://peepalmedia.com/wp-content/uploads/2023/06/IMG_20230618_181612-300x223.jpg 300w, https://peepalmedia.com/wp-content/uploads/2023/06/IMG_20230618_181612-768x570.jpg 768w, https://peepalmedia.com/wp-content/uploads/2023/06/IMG_20230618_181612-150x111.jpg 150w, https://peepalmedia.com/wp-content/uploads/2023/06/IMG_20230618_181612-485x360.jpg 485w, https://peepalmedia.com/wp-content/uploads/2023/06/IMG_20230618_181612-696x517.jpg 696w, https://peepalmedia.com/wp-content/uploads/2023/06/IMG_20230618_181612-1068x793.jpg 1068w, https://peepalmedia.com/wp-content/uploads/2023/06/IMG_20230618_181612.jpg 1080w" sizes="auto, (max-width: 1024px) 100vw, 1024px" /></figure>



<p>ತನ್ನದೇ ನೇತೃತ್ವದ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು ಎನ್ನಲಾದ ವಿದ್ಯಾರ್ಥಿನಿಯರನ್ನು ಸಂಘಟನೆ ಹೆಸರಿನಲ್ಲಿ ಪರಿಚಯಮಾಡಿಕೊಂಡು, ಆತ್ಮೀಯನಾಗಿ, ಹಿಂದುತ್ವದ ಕೊಮುದ್ವೇಷದ ಅಮಲೇರಿಸಿ ನಂತರ ಅವರನ್ನು ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸುತ್ತಿದ್ದ. ಈತನ &#8216;ಹೀರೋಯಿಸಂ&#8217; ನೋಡಿ ಮರುಳಾದ ಒಂದಷ್ಟು ವಿಧ್ಯಾರ್ಥಿನಿಯರು ಈತನ ಬ್ಲಾಕ್ಮೇಲ್ ಬಲೆಗೆ ಬಿದ್ದು ಈಗ ತಾವು ಮಾಡಿದ ತಪ್ಪಿಗೆ ಕೊರಗುತ್ತಿದ್ದಾರೆ.</p>



<p>ಈ ಕೃತ್ಯ ಕೇವಲ ಅವರವರ ನಡುವೆ ನಡೆದು ಮುಗಿದು ಹೋಗುವಂತದ್ದಾಗಿದ್ದರೆ ಸುಮ್ಮನಾಗಬಹುದಿತ್ತು. ಆದರೆ ಪ್ರತೀಕ್‌ ಗೌಡ ಕೆಲವು ಹೆಣ್ಣು ಮಕ್ಕಳಿಗೆ ವಿಡಿಯೋ ಕಾಲ್ ಮಾಡಿ, ನಗ್ನವಾಗಿಸಿ ಅದನ್ನು ರೆಕಾರ್ಡ್ ಮಾಡಿ ಬ್ಲಾಕ್ಮೇಲ್ ಮಾಡಲು ಶುರುವಿಟ್ಟುಕೊಂಡದ್ದೇ ಈಗ ದೊಡ್ಡ ಸುದ್ದಿಯಾಗಿ ತೀರ್ಥಹಳ್ಳಿ ಭಾಗದ ಜನ ಬಾಯಿ ಮೇಲೆ ಬೆರಳಿಡುವಂತಹ ಕೆಲಸವಾಗಿದೆ.</p>



<p>ಈಗಾಗಲೇ ಈ &#8216;ಕಠೋರ ಹಿಂದೂ ಹುಲಿ&#8217;ಯ ಬ್ಲಾಕ್ಮೇಲ್ ಮಾದರಿಯ ಹಲವಾರು ವಿಡಿಯೋಗಳು ಇದ್ದು, ಸಧ್ಯ ಇದೀಗ 2 ವಿಡಿಯೋಗಳು ಸೋಶಿಯಲ್ ಮೀಡಿಯಾ ಹಾಗೂ ವಾಟ್ಸ್ ಆಪ್ ಗ್ರೂಪ್ಗಳಲ್ಲಿ ಹರಿದಾಡುತ್ತಿದೆ. ಆಘಾತಕಾರಿ ವಿಚಾರವೆಂದರೆ ತನ್ನ ನೇತೃತ್ವದ ಸಂಘಟನೆಯಲ್ಲೇ ಗುರುತಿಸಿಕೊಂಡ ಹತ್ತಾರು ಯುವತಿಯರ ಜೊತೆಗೆ ಈತ ಈ ರೀತಿಯ ಕೃತ್ಯ ನಡೆಸಿ ನಂತರ ಹಣಕ್ಕೆ ಮತ್ತು ಮಂಚಕ್ಕೆ ಕರೆದು ಬ್ಲಾಕ್ಮೇಲ್ ಮಾಡಲು ಶುರು ಮಾಡಿಕೊಂಡಿದ್ದ ಎಂಬುದು ಈ ಭಾಗದ ಜನ ಮಾತಾಡುತ್ತಿದ್ದಾರೆ. ತನ್ನ ಬಲೆಗೆ ಬಿದ್ದ ಪ್ರತೀ ಹೆಣ್ಣು ಮಕ್ಕಳ ಬಳಿಯೂ ಹತ್ತು, ಇಪ್ಪತ್ತು ಮೂವತ್ತು ಸಾವಿರಕ್ಕೆ ಈತ ಬ್ಲಾಕ್ಮೇಲ್ ಮಾಡುತ್ತಿದ್ದ ಬಗ್ಗೆಯೂ ವಂಚನೆಗೊಳಗಾದ ಯುವತಿಯರು ಈಗ ಕಣ್ಣೀರಿಡುತ್ತಿದ್ದಾರಂತೆ. ಜೊತೆಗೆ ಆತನ ನೇತೃತ್ವದ ವಿಧ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ತಮ್ಮ ಬಗ್ಗೆ ತಾವೇ ಶಪಿಸಿಕೊಳ್ಳುತ್ತಿದ್ದಾರೆ.</p>



<p>ಸಧ್ಯ ಈ &#8216;ಕಠೋರ ಹುಲಿ&#8217;ಯದು ಹೊರ ಬಿದ್ದಿರುವುದು ಎರಡು ವೀಡಿಯೊ. ಆದರೆ ಈ ರೀತಿಯ ಹತ್ತಾರು ವಿಡಿಯೋ ಇಟ್ಟುಕೊಂಡು ಹತ್ತಾರು ಹೆಣ್ಣು ಮಕ್ಕಳ ಬಳಿಯೂ ಈತ ಬ್ಲಾಕ್ಮೇಲ್ ದಂಧೆ ನಡೆಸುತ್ತಿದ್ದ ಎಂಬ ಗುಮಾನಿಯಿದೆ. ಈ ಬಗ್ಗೆ ಈಗ ತೀರ್ಥಹಳ್ಳಿ ವಿದ್ಯಾರ್ಥಿಗಳು ಮತ್ತು ಯುವ ಜನತೆ ಆ ವಿಧ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡ ಯುವತಿಯರ ಬಗ್ಗೆ ಅನುಮಾನದ ಕಣ್ಣಿಂದ ನೋಡುವ ದುಸ್ಥಿತಿ ಬಂದಿದೆ ಎಂದರೆ ತಪ್ಪಿಲ್ಲ.</p>



<p>ಈಗಾಗಲೇ ಸಮಾಜದ, ತಾಲ್ಲೂಕಿನ ಮತ್ತು ವಿಧ್ಯಾರ್ಥಿಗಳ ವಲಯದಲ್ಲಿ ಸ್ವಾಸ್ಥ್ಯ ಕೆಡುವಂತೆ ಮಾಡಿದ ಈತನ ಮೇಲೆ NSUI ಸಂಘಟನೆ ತೀರ್ಥಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದೆ. ಹಾಗೆಯೇ ಈತನ ವಂಚನೆಯ ಜಾಲಕ್ಕೆ ಬಿದ್ದ ಹೆಣ್ಣು ಮಕ್ಕಳೂ ಸಹ ಈತನ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ ಎಂಬ ಸುದ್ದಿ ಕೂಡಾ ಹೊರಬರುತ್ತಿದೆ. ಆದರೆ ಸ್ಟೋರಿಯ &#8216;ಹೀರೋ ಕಂ ವಿಲನ್&#8217; ಪ್ರತೀಕ್‌ ಗೌಡ ಈಗ ತಲೆಮರೆಸಿಕೊಂಡಿದ್ದಾನೆ. ಆತ ಸಿಕ್ಕಿದ ನಂತರ ಆತನ ಬಳಿ ಎಷ್ಟು ವಿಡಿಯೋಗಳಿವೆ, ಎಷ್ಟು ಯುವತಿಯರ ಜೊತೆಗೆ ಈ ರೀತಿ ಬ್ಲಾಕ್ಮೇಲ್ ದಂಧೆ ಮಾಡಿಕೊಂಡು ಬಂದಿದ್ದ, ವಂಚನೆಗೊಳಗಾದ ಹೆಣ್ಣು ಮಕ್ಕಳು ಎಷ್ಟು ಮಂದಿ ಎಂಬುದು ಹೊರಬರಬೇಕಿದೆ.</p>



<p>ಒಟ್ಟಾರೆ ಹೇಳುವುದಾದರೆ ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳಲ್ಲಿ ಗುರುತಿಸಿಕೊಂಡವವರು ಹೆಚ್ಚಾಗಿ ಇಂತಹ ಕೃತ್ಯಗಳಲ್ಲಿ ಗುರುತಿಸಿಕೊಂಡು ವಿರೋಧಿಗಳ ಕಡೆಯಿಂದ &#8216;ಬ್ಲೂಜೆಪಿ&#8217; ಅನ್ನಿಸಿಕೊಳ್ಳುತ್ತಿರುವುದಕ್ಕೆ ಈ ಸ್ಟೋರಿ ಕೂಡಾ ಒಂದು ಹೊಸ ಸೇರ್ಪಡೆ. ಎಚ್ಚರಿಕೆ ವಹಿಸಬೇಕಾದ ಒಂದು ಪ್ರಮುಖ ಅಂಶವೆಂದರೆ ಕಾಲೇಜು ಯುವತಿಯರು ಇಂತವರ ನೇತೃತ್ವದ ಸಂಘಟನೆಗಳಲ್ಲಿ ಗುರುತಿಸಿಕೊಂಡರೂ, ತಾವು ಗುರುತಿಸಿಕೊಳ್ಳುವ ಸಂಘಟನೆ ಮತ್ತು ಅದರ ಮುಖ್ಯಸ್ಥರು ಎಷ್ಟು ಸಾಚಾ ಇದ್ದಾರೆ, ಅಲ್ಲಿ ಗುರುತಿಸಿಕೊಂಡರೆ ತಮ್ಮ ಹೆಸರು ಮತ್ತು ಬೆಲೆಯನ್ನು ಎಷ್ಟರ ಮಟ್ಟಿಗೆ ಉಳಿಸಿಕೊಳ್ಳಬಹುದು ಎಂಬುದನ್ನು ಮನನ ಮಾಡಿಕೊಳ್ಳಬೇಕಿದೆ. </p>



<p></p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<div class="youtube-embed" data-video_id="qxBzM565wF4"><iframe loading="lazy" title="ಬಿಎಂಎಸ್ ಕಾಲೇಜಿನಲ್ಲಿ ಗಂಧದಗುಡಿ ಕಲರವ | GANDADAGUDI | PUNEETH RAJKUMAR |" width="696" height="392" src="https://www.youtube.com/embed/qxBzM565wF4?feature=oembed&#038;enablejsapi=1" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" allowfullscreen></iframe></div>
</div></figure>
]]></content:encoded>
					
		
		
			</item>
		<item>
		<title>ಗೃಹ ಸಚಿವ ಆರಗ ಜ್ಞಾನೇಂದ್ರ  ಮನೆಗೆ ಎಬಿವಿಪಿ ಕಾರ್ಯಕರ್ತರ ಮುತ್ತಿಗೆ..!</title>
		<link>https://peepalmedia.com/gruha-sachiva-araga-jnanendra-manege-abvp-karyakarthara-mutthige/</link>
		
		<dc:creator><![CDATA[Peepal Media]]></dc:creator>
		<pubDate>Sat, 30 Jul 2022 10:14:38 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[ರಾಜಕೀಯ]]></category>
		<category><![CDATA[ರಾಜ್ಯ]]></category>
		<category><![CDATA[ABVP]]></category>
		<category><![CDATA[araga jnanendhra]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[jayamahal]]></category>
		<category><![CDATA[kannada]]></category>
		<category><![CDATA[kannada news]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[state]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=300</guid>

					<description><![CDATA[ಬೆಂಗಳೂರು : ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ)ಸದಸ್ಯರು ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಬೇಕು. ಗೃಹ ಸಚಿವರು ʼರಾಜೀನಾಮೆʼ ನೀಡಬೇಕು ಎಂದು ಆಗ್ರಹಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಬೆಳಗ್ಗೆ ಜಯಮಹಲ್‌ನಲ್ಲಿರುವ ಗೃಹ ಸಚಿವರ ಮನೆಗೆ ಬಂದಿದ್ದ ಕಾರ್ಯಕರ್ತರು, ಪ್ರವೇಶ ದ್ವಾರದಲ್ಲಿ ಪ್ರತಿಭಟನೆ ಆರಂಭಿಸಿದ್ದು, ಕೆಲ ಹೊತ್ತಿನ ನಂತರ ಮನೆಯ ಗೇಟನ್ನ ದಾಟಿ ಮನೆಯ ಬಾಗಿಲು ಬಳಿ ಕೂತು ಪ್ರತಿಭಟನೆ ನಡೆಸಿದ್ದಾರೆ. &#160;&#8216;ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ [&#8230;]]]></description>
										<content:encoded><![CDATA[
<p class="has-medium-font-size"><strong>ಬೆಂಗಳೂರು :</strong> ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ)ಸದಸ್ಯರು ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಬೇಕು. ಗೃಹ ಸಚಿವರು ʼರಾಜೀನಾಮೆʼ ನೀಡಬೇಕು ಎಂದು ಆಗ್ರಹಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.</p>



<p class="has-medium-font-size">ಬೆಳಗ್ಗೆ ಜಯಮಹಲ್‌ನಲ್ಲಿರುವ ಗೃಹ ಸಚಿವರ ಮನೆಗೆ ಬಂದಿದ್ದ ಕಾರ್ಯಕರ್ತರು, ಪ್ರವೇಶ ದ್ವಾರದಲ್ಲಿ ಪ್ರತಿಭಟನೆ ಆರಂಭಿಸಿದ್ದು, ಕೆಲ ಹೊತ್ತಿನ ನಂತರ ಮನೆಯ ಗೇಟನ್ನ ದಾಟಿ ಮನೆಯ ಬಾಗಿಲು ಬಳಿ ಕೂತು ಪ್ರತಿಭಟನೆ ನಡೆಸಿದ್ದಾರೆ. &nbsp;&#8216;ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು&#8217; ಎಂದು ಆಗ್ರಹಿಸಿದ್ದಾರೆ. ನಂತರ ಪ್ರತಿಭಟನೆ ತೀವ್ರಗೊಂಡಿದ್ದು, ಸಚಿವರ ಮನೆಯ ಮುಂದಿನ ಪೀಠೋಪಕರಣಗಳನ್ನ ನಾಶಮಾಡಲಾರಂಭಿಸಿದರು. ನಂತರ ಪರಿಸ್ಥಿತಿಯನ್ನ ಸುಧಾರಿಸಲು ಪೋಲಿಸರು ಕಾರ್ಯಕರ್ತರನ್ನು ದ್ವಾರಬಾಗಿಲಿನಿಂದ ಹೊರಹಾಕಲು ಪ್ರಯತ್ನಿಸಿದರು. ಈ ವೇಳೆ ಪೋಲಿಸ್‌ ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ಶುರುವಾಗಿದೆ. ನಂತರ ಪರಿಸ್ಥಿತಿ ಕೈಗೆಟುಕಾದ ಕಾರಣ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. 40 ಎಬಿವಿಪಿ ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಠಾಣೆಗೆ ಕರೆದೊಯ್ಯಲಾಗಿದೆ. ನಂತರ ಗೃಹ ಸಚಿವರ ಮನೆ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ</p>
]]></content:encoded>
					
		
		
			</item>
	</channel>
</rss>
