<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Ambedkar Parinirvan Day &#8211; Peepal Media</title>
	<atom:link href="https://peepalmedia.com/tag/ambedkar-parinirvan-day/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 27 Aug 2024 11:25:29 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Ambedkar Parinirvan Day &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>“ಅಂಬೇಡ್ಕರ್ ದಿನಚರಿ” ಯುವಜನರು ಓದಲೇಬೇಕಾದ ಪುಸ್ತಕ</title>
		<link>https://peepalmedia.com/ambedkar-diary-is-a-must-read-book-for-young-people/</link>
		
		<dc:creator><![CDATA[Peepal Media]]></dc:creator>
		<pubDate>Tue, 27 Aug 2024 11:25:29 +0000</pubDate>
				<category><![CDATA[ಅಂಕಣ]]></category>
		<category><![CDATA[Ambedkar]]></category>
		<category><![CDATA[Ambedkar Parinirvan Day]]></category>
		<category><![CDATA[ambedkar statue]]></category>
		<category><![CDATA[bengalure]]></category>
		<category><![CDATA[Bhimrao Ramji Ambedkar]]></category>
		<category><![CDATA[Dalit]]></category>
		<category><![CDATA[dalit activists]]></category>
		<category><![CDATA[Dalit assault]]></category>
		<category><![CDATA[Dalit community]]></category>
		<category><![CDATA[Dalit cultural resistance]]></category>
		<category><![CDATA[dalit dalitlivesmatter dalits]]></category>
		<category><![CDATA[Dalit fighters]]></category>
		<category><![CDATA[Dalit organizations]]></category>
		<category><![CDATA[DR B R AMBEDKAR]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=44524</guid>

					<description><![CDATA[ರುದ್ರು ಪುನೀತ್ ಪ್ರತೀ ಬಾರಿಯೂ ಬಾಬಾಸಾಹೇಬರ ಕುರಿತು ಓದುವಾಗ ನನಗನ್ನಿಸುವುದು ಅಷ್ಟೊಂದು ಅಗಾಧವಾದ ಜ್ಞಾನವನ್ನು ಅವರು ದಕ್ಕಿಸಿಕೊಂಡಿದ್ದಾದರೂ ಹೇಗೆ? ನಿರಂತರ ಓದುವುದರಿಂದ, ಅಥವಾ ಹಗಲು ರಾತ್ರಿ ಓದುವುದರಿಂದ, ಅಥವಾ ವಿದೇಶದಲ್ಲಿ ಓದುವುದರಿಂದ ಇವುಗಳ ಕಾರಣಕ್ಕಷ್ಟೇ ಬಾಬಾ ಸಾಹೇಬರು ವಿಶ್ವಮಟ್ಟದ ಜ್ಞಾನಿಯಾಗಿ ಹೊರಹೊಮ್ಮಿದರೇ? ಬಾಬಾಸಾಹೇಬರು ವಿಶ್ವಜ್ಞಾನಿ ಎಂದು ಕರೆಸಿಕೊಳ್ಳಲು ಅವರು ಪಟ್ಟ ಪರಿಶ್ರಮ, ಅವರ ಓದು, ಅವರ ದಿನನಿತ್ಯ ಬದುಕಿನಲ್ಲಿ ಅವರು ಅಳವಡಿಸಿಕೊಂಡ ಶಿಸ್ತು, ಅವರು ಯಾವುದನ್ನೆಲ್ಲ ಓದಲು ಬಯಸುತ್ತಿದ್ದರು ಎನ್ನುವುದನ್ನು ತಿಳಿಯಲು ಅವರ ದಿನಚರಿಯನ್ನು ನಾವು ಗಮನಿಸಬೇಕು. [&#8230;]]]></description>
										<content:encoded><![CDATA[
<p><strong>ರುದ್ರು ಪುನೀತ್</strong></p>



<p>ಪ್ರತೀ ಬಾರಿಯೂ ಬಾಬಾಸಾಹೇಬರ ಕುರಿತು ಓದುವಾಗ ನನಗನ್ನಿಸುವುದು ಅಷ್ಟೊಂದು ಅಗಾಧವಾದ ಜ್ಞಾನವನ್ನು ಅವರು ದಕ್ಕಿಸಿಕೊಂಡಿದ್ದಾದರೂ ಹೇಗೆ?</p>



<p>ನಿರಂತರ ಓದುವುದರಿಂದ, ಅಥವಾ ಹಗಲು ರಾತ್ರಿ ಓದುವುದರಿಂದ, ಅಥವಾ ವಿದೇಶದಲ್ಲಿ ಓದುವುದರಿಂದ ಇವುಗಳ ಕಾರಣಕ್ಕಷ್ಟೇ ಬಾಬಾ ಸಾಹೇಬರು ವಿಶ್ವಮಟ್ಟದ ಜ್ಞಾನಿಯಾಗಿ ಹೊರಹೊಮ್ಮಿದರೇ?</p>



<p>ಬಾಬಾಸಾಹೇಬರು ವಿಶ್ವಜ್ಞಾನಿ ಎಂದು ಕರೆಸಿಕೊಳ್ಳಲು ಅವರು ಪಟ್ಟ ಪರಿಶ್ರಮ, ಅವರ ಓದು, ಅವರ ದಿನನಿತ್ಯ ಬದುಕಿನಲ್ಲಿ ಅವರು ಅಳವಡಿಸಿಕೊಂಡ ಶಿಸ್ತು, ಅವರು ಯಾವುದನ್ನೆಲ್ಲ ಓದಲು ಬಯಸುತ್ತಿದ್ದರು ಎನ್ನುವುದನ್ನು ತಿಳಿಯಲು ಅವರ ದಿನಚರಿಯನ್ನು ನಾವು ಗಮನಿಸಬೇಕು. ಬಾಬಾ ಸಾಹೇಬರ ಜೊತೆಯಲ್ಲಿಯೇ ಇದ್ದು ಹತ್ತಾರು ವರ್ಷಗಳು ಕಳೆದ ದೇವಿದಯಾಳ್ ಅವರು ಬರೆದಿರುವ ಅಂಬೇಡ್ಕರ್ ಡೈರಿ ಪುಸ್ತಕವನ್ನು ಕನ್ನಡಕ್ಕೆ &#8220;ಅಂಬೇಡ್ಕರ್ ದಿನಚರಿ&#8221; ಎನ್ನುವ ಶೀರ್ಷಿಕೆಯೊಂದಿಗೆ ಸಹಾಯಕ ಉಪನ್ಯಾಸಕರು ಮತ್ತು ಅಂಬೇಡ್ಕರ್ ವಾದಿ ಲೇಖಕರಾದ ಪಿ.‌ಆರಡಿಮಲ್ಲಯ್ಯ ಕಟ್ಟೇರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.. ಬಾಬಾಸಾಹೇಬರ ದಿನಚರಿಯನ್ನು ಅವರು ದಾಖಲಿಸಿರುವ ರೀತಿ ಇದೆಯಲ್ಲ ಅದು ನಿಜಕ್ಕೂ ಓದುಗರಿಗೆ ಬಾಬಾಸಾಹೇಬರ ಬಗ್ಗೆ ಹೊಸ ಹೊಳವುಗಳನ್ನು ನೀಡುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಅರ್ಥವಾಗುವ ಹಾಗೆ ಸರಳ ಕನ್ನಡದಲ್ಲಿ ಅನುವಾದಿಸಿದ್ದಾರೆ. ಬಾಬಾಸಾಹೇಬರ ಅನೇಕ ಪುಸ್ತಕಗಳನ್ನು ನಾನು ಓದಿದ್ದೇನೆ. ಆದರೆ ಅಂಬೇಡ್ಕರ್ ದಿನಚರಿ ಸಾಹೇಬರೊಂದಿಗೆ ಜರ್ನಿ ಮಾಡುವ ಅನುಭವ ನೀಡುತ್ತದೆ.</p>



<p>ಶೋಷಿತ ದಮನಿತ ಧ್ವನಿ ಇಲ್ಲದ ನನ್ನ ಸಮುದಾಯಕ್ಕೆ ನಾನು ನ್ಯಾಯ ದೊರಕಿಸಿಕೊಡಲು ನಿತ್ಯ ನಿರಂತರವಾಗಿ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು ಎಂದು ಬಾಬಾ ಸಾಹೇಬರು ಹಾತೊರೆಯುತ್ತಾರೆ. ಬಾಬಾ ಸಾಹೇಬರು ಸಮಯಕ್ಕೆ ತುಂಬಾ ಪ್ರಾಮುಖ್ಯತೆ ನೀಡುತ್ತಿದ್ದರು. ಅವರು ಶಿಸ್ತಿನ ಸಿಪಾಯಿಯಾಗಿದ್ದರು. ಅವರು ತಮ್ಮ ವೈಯಕ್ತಿಕ ಬದುಕಿಗಿಂತ ಹೆಚ್ಚಾಗಿ ತನ್ನ ಸಮುದಾಯದ ಬಗ್ಗೆ ಹೆಚ್ಚು ಚಿಂತಿತರಾಗಿದ್ದರು. ನನ್ನ ಸಮುದಾಯದ ಅಬ್ಯುದಯಕ್ಕಾಗಿ ನಾನು ಮತ್ತಷ್ಟು ಹೆಚ್ಚು ದಿನಗಳು ಬದುಕಬೇಕೆಂದು ಬಯಸಿದ್ದರು. ಬಾಬಾ ಸಾಹೇಬರು ನೇರ ನಿಷ್ಟುರವಾದಿಯಾಗಿದ್ದರು. ಬಾಬಾ ತಮ್ಮ ಆಳವಾದ ಜ್ಞಾನದಿಂದಲೇ ಎದುರಾಳಿಗಳಲ್ಲಿ ಭಯ ಹುಟ್ಟಿಸುವಂತಿದ್ದರು. ಬಾಬಾ ಸಾಹೇಬರ ಬಗ್ಗೆ ಎಲ್ಲೂ ದಾಖಲಾಗದ ಇಂತಹ ಅನೇಕ ವಿಷಯಗಳನ್ನು ಈ ಅಂಬೇಡ್ಕರ್ ಡೈರಿ ತೆರೆದಿಡುತ್ತದೆ. ಈ ಪುಸ್ತಕವು ಖಂಡಿತ ನಿಮಗೆ ಬಾಬಾ ಸಾಹೇಬರನ್ನು ಮತ್ತಷ್ಟು ಓದಲು ಪ್ರಚೋದಿಸಿತ್ತದೆ.</p>



<p><strong>ಇದನ್ನು ಹೇಳಲೇಬೇಕು</strong>: ನಿರಂತರ ಓದು, ಅಥವಾ ಹತ್ತಾರು ಡಿಗ್ರಿಗಳು, ವಿದೇಶದಲ್ಲಿ ಪಡೆದ ಶಿಕ್ಷಣ ಇವುಗಳಿಂದ ಮಾತ್ರ ಜ್ಞಾನಿಗಳು ಎನ್ನಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ನನ್ನ ಅನೇಕ ಸ್ನೇಹಿತರು ಅನೇಕ ಡಿಗ್ರಿಗಳನ್ನು ಪಡೆದುಕೊಂಡು ಕನಿಷ್ಠ ಎಂಟತ್ತು ವರ್ಷಗಳ ಕಾಲ UPSC ಗೆ ಪ್ರಿಪೇರ್ ಆದವರು ಇದ್ದಾರೆ. UPSC ಪ್ರಿಪೇರ್ ಆಗುವುದೆಂದರೆ ವರ್ಲ್ಡ್ ಹಿಸ್ಟರಿ, ವರ್ಲ್ಡ್ ಜಿಯಾಗ್ರಫಿ, ಎನ್ವಿರಾನ್ಮೆಂಟ್, ವಿಜ್ಞಾನ, ಸೋಷಿಯಾಲಾಜಿ, ಲಿಟರೇಚರ್, ಎತಿಕ್ಸ್ ಇವುಗಳೆಲ್ಲವನ್ನು ಓದುತ್ತಾರೆ ಆದರೂ ಪ್ರಿಪೇರ್ ಆಗುವವರನ್ನು ಬಿಟ್ಟಾಕಿ ಈಗಾಗಲೇ IAS ಕ್ಲಿಯರ್ ಮಾಡಿಕೊಂಡು ಉನ್ನತ ಹುದ್ದೆಯಲ್ಲಿರುವ ಪರಿಚಯದ ಅಧಿಕಾರಿಯೊಬ್ಬ ತೀರಾ ಇತ್ತೀಚೆಗೆ ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ಕಲ್ಪಿಸಿ ಸುಪ್ರೀಂಕೋರ್ಟ್ ಕೊಟ್ಟ ತೀರ್ಪು ನಮ್ಮ ದೇಶದ ಧರ್ಮ ಮತ್ತು ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದು ನನ್ನ ಬಳಿ ಹೇಳಿದ್ದನ್ನು ಕೇಳಿ ನಾನು ದಂಗಾಗಿದ್ದೆ. ಅಷ್ಟೇ ಏಕೆ ಈ ದೇಶದ ಉನ್ನತ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ಪರಿಚಯದವರು ಕೂಡ ಬೆಳಗ್ಗೆ ಪೂಜೆ ಮಾಡದೆಯೇ ಆಫೀಸಿಗೆ ಹೋಗೋದಿಲ್ಲ..</p>



<p>ಬಾಬಾಸಾಹೇಬರು ಈ ಜಗತ್ತಿನಲ್ಲಿಯೇ ಅತೀ ಹೆಚ್ಚು ಡಿಗ್ರಿಗಳನ್ನು ಹೊಂದಿದವರು ಎನ್ನುವ ಖ್ಯಾತಿ ಪಡೆದಿದ್ದಾರೆ. ಅವರ ಬಳಿ ಜಗತ್ತಿನ ಅತೀ ದೊಡ್ಡ ವೈಯಕ್ತಿಕ ಲೈಬ್ರರಿ ಇತ್ತು. ಅವರ ಜನ್ಮದಿನವನ್ನು ವಿಶ್ವಸಂಸ್ಥೆಯು ವಿಶ್ವ ಜ್ಞಾನಿಗಳ ದಿನವೆಂದು ಘೋಷಿಸಿದೆ. ಬಾಬಾ ಸಾಹೇಬರು ವಿಶ್ವ ಜ್ಞಾನಿಯಾಗಲು ಖಂಡಿತ ನಿರಂತರ ಓದಿನಿಂದ ಸಾಧ್ಯವಾಯಿತು ಆದರೆ ಆ ಓದಿನ ಹಿಂದೆ ಒಂದು ಸ್ಪಷ್ಟವಾದ ದ್ಯೇಯವಿತ್ತು. ಆ ಕಾರಣಕ್ಕೆ ಅವರು ಈ ದೇಶದ ನೈಜ ಇತಿಹಾಸವನ್ನು ತಿಳಿಯಬಯಸಿದರು. ಸಾವಿರಾರು ವರ್ಷಗಳ ಯಾಕೆ ಈ ದೇಶದ SC/ST/OBC/ಅಲ್ಪಸಂಖ್ಯಾತ ರಾದ ಬಹುಜನರಿಗೆ ಶಿಕ್ಷಣ ಇರಲಿಲ್ಲ. ಯಾಕೆ ಅವರಿಗೆ ಭೂಮಿ ಇರಲಿಲ್ಲ, ಯಾಕೆ ಅವರು ಗುಲಾಮರಾಗಿದ್ದರು, ವರ್ಣ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು ಯಾರು. ಯಾಕೆ ಬ್ರಾಹ್ಮಣರು ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ತಮ್ಮ ವಸಾಹತು ಸ್ಥಾಪಿಸಿದ್ದಾರೆ ಇವುಗಳ ಅಧ್ಯಯನದಲ್ಲಿ ತೊಡಗಿಕೊಂಡರು. ಇತಿಹಾಸವನ್ನು ಹೆಕ್ಕಿ ಹೆಕ್ಕಿ ಹೊರತೆಗೆದರು. ದಾಖಲೆಗಳನ್ನು ಕ್ರೂಡಿಕರಿಸಿದರು,</p>



<p>ಅಸಮಾನತೆಯ ಬಗ್ಗೆ, ಜಾತಿ ವ್ಯವಸ್ಥೆಯ ಬಗ್ಗೆ, ಶ್ರೇಣೀಕೃತ ವ್ಯವಸ್ಥೆಯ ಬಗ್ಗೆ ದಾಖಲಿಸಿದರು, ದೇವರು ದೆವ್ವ ಎನ್ನುವ ಕಾಲ್ಪನಿಕ ಕಥೆಗಳ ಮೂಲಕ ಹೇಗೆ ಈ ದೇಶದ ಬಡವರನ್ನು ಮಂತ್ರಮುಗ್ದರನ್ನಾಗಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎನ್ನುವುದರ ಬಗ್ಗೆಯೂ ಬರೆದರು. ಹೆಣ್ಣಿನ ಮೇಲಾಗುತ್ತಿದ್ದ ಮೇಲಾಗುತ್ತಿದ್ದ ಶೋಷಣೆ ದಬ್ಬಾಳಿಕೆಯ ಬಗ್ಗೆ ಬರೆದರು. ಇಷ್ಟೆಲ್ಲ ಓದು ಬರಹ ಸಂಶೋಧನೆಯ ಕಾರಣಕ್ಕೆ ಬಾಬಾ ಸಾಹೇಬರು ವಿಶ್ವಜ್ಞಾನಿಯಾದ್ರು. ಈ ದೇಶದ ಸಂವಿಧಾನ ಬರೆಯುವ ಮಟ್ಟಕ್ಕೆ ಬೆಳೆದರು. ಆ ಮೂಲಕ ಸಾವಿರಾರು ವರ್ಷಗಳ ಕಾಲ ಗುಲಾಮರಾಗಿದ್ದ ಈ ದೇಶದ ಮೂಲನಿವಾಸಿ SC/ST/OBC/RM ಮತ್ತು ಮಹಿಳೆಯರಿಗೆ ಶಿಕ್ಷಣ, ಭೂಮಿ, ಉದ್ಯೋಗ, ರಾಜಕೀಯ ಪ್ರಾತಿನಿಧ್ಯ, ಆಡಳಿತದಲ್ಲಿ ಅಧಿಕಾರವನ್ನು ನೀಡಲು ಸಾಧ್ಯವಾಯಿತು.</p>



<p>ಕೇವಲ ಶಿಕ್ಷಿತರಾದರೆ ಸಾಲದು ವೈಚಾರಿಕ, ವೈಜ್ಞಾನಿಕ, ಬೌದ್ಧಿಕ ಜ್ಞಾನವನ್ನು ಪಡೆದಾಗ ಮಾತ್ರ ನಾವುಗಳು ನಾಗರೀಕರಾಗಲು ಸಾಧ್ಯ.</p>



<p>ಅಂಬೇಡ್ಕರ್ ಡೈರಿಯನ್ನು ಕನ್ನಡಕ್ಕೆ ಅನುವಾದಿಸಿ ಬಾಬಾಸಾಹೇಬರ ಬಗ್ಗೆ ನಮಗೆ ಗೊತ್ತಿಲ್ಲದ ಅನೇಕ ಸೂಕ್ಷ್ಮ ವಿಷಯಗಳನ್ನು ಅಂಬೇಡ್ಕರ್ ದಿನಚರಿಯ ಮೂಲಕ ಕರ್ನಾಟಕದ ಜನತೆಗೆ ತಲುಪಿಸಿದ್ದಕ್ಕಾಗಿ ನಿಮಗೆ ಕೋಟಿ ಕೋಟಿ ವಂದನೆಗಳು.</p>
]]></content:encoded>
					
		
		
			</item>
		<item>
		<title>ಒಳಮೀಸಲಾತಿ ಹೋರಾಟದ ಸೈದ್ಧಾಂತಿಕ ಬೆನ್ನೆಲುಬು ಡಾ.ಕೆ.ಬಾಲಗೋಪಾಲ್</title>
		<link>https://peepalmedia.com/dr-k-balagopal-was-the-ideological-backbone-of-the-internal-reservation-struggle/</link>
		
		<dc:creator><![CDATA[Peepal Media]]></dc:creator>
		<pubDate>Sat, 24 Aug 2024 13:10:39 +0000</pubDate>
				<category><![CDATA[ಅಂಕಣ]]></category>
		<category><![CDATA[ಸತ್ಯ ಶೋಧ]]></category>
		<category><![CDATA[Ambedkar]]></category>
		<category><![CDATA[Ambedkar odu]]></category>
		<category><![CDATA[Ambedkar Parinirvan Day]]></category>
		<category><![CDATA[Bhimrao Ramji Ambedkar]]></category>
		<category><![CDATA[Dr BR Ambedkar]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=44426</guid>

					<description><![CDATA[-ವಿ.ಎಲ್.ನರಸಿಂಹಮೂರ್ತಿ ಒಳಮೀಸಲಾತಿ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಹೊರಬಂದ ಮೇಲೆ MRPS ನೇತಾರ ಮಂದಾಕೃಷ್ಣ ಮಾದಿಗ ಹಲವರನ್ನು ಬೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ. ಮಂದಾಕೃಷ್ಣ ಮಾದಿಗ ಭೇಟಿ ಮಾಡಿದ ಹಲವರಲ್ಲಿ ಒಳಮೀಸಲಾತಿ ಹೋರಾಟಕ್ಕೆ ನಿಜವಾಗಿಯೂ ಬೆಂಬಲ ಕೊಟ್ಟವರ ಜೊತೆಗೆ ಬಿಜೆಪಿ-ಸಂಘಪರಿವಾರದ ಹಲವರೂ ಇದ್ದಾರೆ. ಇವೆಲ್ಲವೂ ಅವರ ರಾಜಕೀಯ ಲೆಕ್ಕಾಚಾರ. ಆದರೆ ಇಂದು ಮಂದಾಕೃಷ್ಣ ಅವರು ಈಗ ಭೌತಿಕವಾಗಿ ನಮ್ಮ ನಡುವೆ ಇಲ್ಲದ ಚಿಂತಕ, ಮಾನವ ಹಕ್ಕುಗಳ ಹೋರಾಟಗಾರ ಡಾ. ಕೆ. ಬಾಲಗೋಪಾಲ್ ಅವರ ಮನೆಗೆ ಭೇಟಿ ಕೊಟ್ಟು [&#8230;]]]></description>
										<content:encoded><![CDATA[
<p><strong>-ವಿ.ಎಲ್.ನರಸಿಂಹಮೂರ್ತಿ</strong></p>



<p>ಒಳಮೀಸಲಾತಿ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಹೊರಬಂದ ಮೇಲೆ MRPS ನೇತಾರ ಮಂದಾಕೃಷ್ಣ ಮಾದಿಗ ಹಲವರನ್ನು ಬೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ. ಮಂದಾಕೃಷ್ಣ ಮಾದಿಗ ಭೇಟಿ ಮಾಡಿದ ಹಲವರಲ್ಲಿ ಒಳಮೀಸಲಾತಿ ಹೋರಾಟಕ್ಕೆ ನಿಜವಾಗಿಯೂ ಬೆಂಬಲ ಕೊಟ್ಟವರ ಜೊತೆಗೆ ಬಿಜೆಪಿ-ಸಂಘಪರಿವಾರದ ಹಲವರೂ ಇದ್ದಾರೆ. ಇವೆಲ್ಲವೂ ಅವರ ರಾಜಕೀಯ ಲೆಕ್ಕಾಚಾರ.</p>



<p>ಆದರೆ ಇಂದು ಮಂದಾಕೃಷ್ಣ ಅವರು ಈಗ ಭೌತಿಕವಾಗಿ ನಮ್ಮ ನಡುವೆ ಇಲ್ಲದ ಚಿಂತಕ, ಮಾನವ ಹಕ್ಕುಗಳ ಹೋರಾಟಗಾರ ಡಾ. ಕೆ. ಬಾಲಗೋಪಾಲ್ ಅವರ ಮನೆಗೆ ಭೇಟಿ ಕೊಟ್ಟು ಕೃತಜ್ಞತೆ ಸಲ್ಲಿಸಿ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ವೈಯಕ್ತಿಕವಾಗಿ ನನಗೆ ಮಂದಾಕೃಷ್ಣ ಅವರ ಈ ನಡೆ ತುಂಬಾ ಖುಷಿ ಕೊಟ್ಟಿದೆ.</p>



<p>ಒಳಮೀಸಲಾತಿ ಹೋರಾಟ ಶುರುವಾಗಿ ಅದು ಆಂಧ್ರಪ್ರದೇಶದಲ್ಲಿ ತಾರಕಕ್ಕೆ ಹೋದಾಗ ಅದನ್ನು ಬೌದ್ಧಿಕ ವಲಯ ಅಸಂವಿಧಾನಿಕ, ದಲಿತ ಚಳುವಳಿಗೆ ಮಾರಕ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಪರಿಕಲ್ಪನೆಗೆ ವಿರುದ್ಧ ಅಂತ ಬಿಂಬಿಸುವುದಕ್ಕೆ ಪ್ರಯತ್ನಿಸಿತು. ಒಳಮೀಸಲಾತಿ ಹೋರಾಟವೇ ಅಪ್ರಸ್ತುತ ಎಂದು ವಾದಿಸಿದ ಚಿಂತಕರಲ್ಲಿ ದಲಿತೇತರರು, ದಲಿತ ಚಿಂತಕರು ಎಲ್ಲರೂ ಇದ್ದರು.</p>



<p>ದಲಿತ ಸಮುದಾಯದ ನಡುವೆ ಎದ್ದ ಪ್ರಾತಿನಿಧ್ಯದ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಎಲ್ಲರೂ ಒದ್ದಾಡುತ್ತಿದ್ದಾಗ ಡಾ. ಕೆ. ಬಾಲಗೋಪಾಲ್ EPW ಪತ್ರಿಕೆ ಅಂಕಣದಲ್ಲಿ ಒಳಮೀಸಲಾತಿ ಕುರಿತು ಬರೆದರು. ಬಾಲಗೋಪಾಲ್ ಒಳಮೀಸಲಾತಿ ಹೋರಾಟದ ಅಗತ್ಯದ ಕುರಿತು ಬರೆದ A Tangled Web: Subdivision of SC Reservations in AP(2000) ಮತ್ತು ಒಳಮೀಸಲಾತಿಯನ್ನು ಅಸಿಂಧುಗೊಳಿಸಿ ಸುಪ್ರೀಂಕೋರ್ಟ್ ನೀಡಿದ ಇ.ವಿ. ಚಿನ್ನಯ್ಯ ಕೇಸಿನ ಕುರಿತು ಬರೆದ Justice for Dalits among Dalits: All the Ghosts Resurface(2005) ಈ ಎರಡೂ ಲೇಖನಗಳು<br>ಒಳಮೀಸಲಾತಿ ಹೋರಾಟಕ್ಕೆ ಸ್ಪಷ್ಟ ಮತ್ತು ಬಲಿಷ್ಠವಾದ ಸೈದ್ಧಾಂತಿಕ ಚೌಕಟ್ಟನ್ನು ಒದಗಿಸಿದವು.<br>ಒಳಮೀಸಲಾತಿ ಹೋರಾಟ ಕೇವಲ ರಾಜಕೀಯ ಸಂಚು, ನಾಯಕತ್ವದ ಪ್ರಶ್ನೆ, ಐಡೆಂಟಿಟಿ ರಾಜಕಾರಣದ ಅಪಾಯಕಾರಿ ಬೆಳವಣಿಗೆ ಎನ್ನುವ ನೆರೇಟಿವ್‌ ಅನ್ನು ಹೊಡೆದು ಉರುಳಿಸಿದ ಬಾಲಗೋಪಾಲ್ ಚಿಂತನೆ ದಲಿತ ಮತ್ತು ದಲಿತೇತರ ಬುದ್ದಿಜೀವಿಗಳನ್ನು ಅಲುಗಾಡಿಸಿತು. ಬಾಲಗೋಪಾಲ್ ತಮ್ಮ ಓರಿಜಿನಲ್ ಅಂಬೇಡ್ಕರ್‌ವಾದಿ ಕಣ್ಣೋಟದ ಮುಖಾಂತರ ಒಳಮೀಸಲಾತಿ ಹೋರಾಟವನ್ನು ವಿಶ್ಲೇಷಿಸಿದ ನಂತರ ಅದಕ್ಕೆ ಉತ್ತರ ಕೊಡಲಾಗದೆ ಬೌದ್ಧಿಕ ವಲಯ ಮೌನಕ್ಕೆ ಶರಣಾಯಿತು.</p>



<p>ಈಗ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟ ಮೇಲೂ ಬೌದ್ಧಿಕ ವಲಯ ಮೀಸಲಾತಿ ಕುರಿತು ಮೇಲ್ಜಾತಿಯ ಚಿಂತಕರು ಕಟ್ಟಿರುವ ಮಿಥ್‌ಗಳನ್ನೇ ಮುಂದುವರೆಸಿಕೊಂಡು ಒಳಮೀಸಲಾತಿ ಜಾರಿಯಾದರೆ ದಲಿತ ಸಮುದಾಯದ ಒಗ್ಗಟ್ಟು ಮುರಿಯುತ್ತದೆ, ಪ್ರತಿಭೆಗೆ ಅವಕಾಶವಿಲ್ಲದಂತಾಗುತ್ತದೆ, ಮೀಸಲಾತಿ ಅಪ್ರಸ್ತುತವಾಗುತ್ತದೆ, ಸರಿಯಾದ ಅಂಕಿಅಂಶಗಳಿಲ್ಲದ ಕಾರಣ ಒಳಮೀಸಲಾತಿ ಜಾರಿ ಅಸಂಭವ ಎನ್ನುವ ಅಡ್ಡಗೋಡೆಯ ಮೇಲೆ ದೀಪ ಇಡುವ ಮಾದರಿಯ ಜಾಣ ನಡೆ ಅನುಸರಿಸುತ್ತಿದೆ. ದಲಿತರೊಳಗಿನ ಬಲಾಢ್ಯ ಜಾತಿಗಳ ನಾಯಕರು ಇದನ್ನು ಮುಂದುಮಾಡಿ ಒಳಮೀಸಲಾತಿ ಜಾರಿಯಾಗದಂತೆ ಪ್ರಯತ್ನಿಸುತ್ತಿರುವಾಗ ಬಾಲಗೋಪಾಲ್ ಬದುಕಿದ್ದರೆ ಇವರೆಲ್ಲರಿಗೂ ಉತ್ತರಿಸುತ್ತಿದ್ದರು.</p>



<p>ತನ್ನ ಕಾಲದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದ ಬಾಲಗೋಪಾಲ್ ತರದ ಚಿಂತಕರಿಲ್ಲದೆ ಇವತ್ತು Intellectual void ಸೃಷ್ಟಿಯಾಗಿದೆ.</p>



<p>ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಕುರಿತಂತೆ ಡಾ.ಕೆ. ಬಾಲಗೋಪಾಲ್ ಅವರ ಕಾಣ್ಕೆಯನ್ನು ನೆನಪು ಮಾಡಿಕೊಳ್ಳುವುದು ಇವತ್ತಿನ ಬಿಕ್ಕಟ್ಟಿನ ಸಮಯದಲ್ಲಿ ಹೆಚ್ಚು ಪ್ರಸ್ತುತ.</p>



<p>ಜೈ ಭೀಮ್‌ ಡಾ. ಕೆ. ಬಾಲಗೋಪಾಲ್ ಸರ್…</p>
]]></content:encoded>
					
		
		
			</item>
		<item>
		<title>ಡಿಎಸ್‌ಎಸ್‌ ಪಕ್ಷವಲ್ಲ ದಲಿತರ ಶಕ್ತಿ: ಸಿ.ಬಸವಲಿಂಗಯ್ಯ</title>
		<link>https://peepalmedia.com/dss-is-not-a-party-but-the-power-of-dalits-c-basavalingaiah/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 06 Dec 2022 10:18:07 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[ರಾಜ್ಯ]]></category>
		<category><![CDATA[Ambedkar Parinirvan Day]]></category>
		<category><![CDATA[bengalure]]></category>
		<category><![CDATA[C BASAVALINGAYYA]]></category>
		<category><![CDATA[DSS]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=17713</guid>

					<description><![CDATA[ಬೆಂಗಳೂರು: ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್‌) ಒಂದು ಪಕ್ಷವಲ್ಲ ಇದು ದಲಿತರ ಶಕ್ತಿ ಎಂದು ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ಹೇಳಿದರು. ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆರಂಭಗೊಂಡ ದಲಿತರ ಸಾಂಸ್ಕೃತಿಕ ಪ್ರತಿರೋಧ ಸಮಾವೇಶದಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅಂಬೇಡ್ಕರ್ ಪರಿನಿರ್ವಾಣ ದಿನ ನಮ್ಮ ಪಾಲಿಗೆ ಹಬ್ಬ, ನಾವು ಇದನ್ನು ಸಂಭ್ರಮಿಸುತ್ತೇವೆ ಎಂದರು. ಈ ದೇಶದಲ್ಲಿ ದಲಿತರು ಯಾರನ್ನು ಕೊಂದಿಲ್ಲ, ಮೋಸ ಮಾಡಿಲ್ಲ. ಈ ಹಿಂದೆ ಸಿದ್ದಲಿಂಗಯ್ಯನವರ “ಇಕ್ಕುರ್ಲ ಹೊದಿರ್ಲ ಆ ನನ್ ಮಕ್ಕಳ [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್‌) ಒಂದು ಪಕ್ಷವಲ್ಲ ಇದು ದಲಿತರ ಶಕ್ತಿ ಎಂದು ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ಹೇಳಿದರು.</p>



<p>ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆರಂಭಗೊಂಡ ದಲಿತರ ಸಾಂಸ್ಕೃತಿಕ ಪ್ರತಿರೋಧ ಸಮಾವೇಶದಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅಂಬೇಡ್ಕರ್ ಪರಿನಿರ್ವಾಣ ದಿನ ನಮ್ಮ ಪಾಲಿಗೆ ಹಬ್ಬ, ನಾವು ಇದನ್ನು ಸಂಭ್ರಮಿಸುತ್ತೇವೆ ಎಂದರು.</p>



<p>ಈ ದೇಶದಲ್ಲಿ ದಲಿತರು ಯಾರನ್ನು ಕೊಂದಿಲ್ಲ, ಮೋಸ ಮಾಡಿಲ್ಲ. ಈ ಹಿಂದೆ ಸಿದ್ದಲಿಂಗಯ್ಯನವರ “ಇಕ್ಕುರ್ಲ ಹೊದಿರ್ಲ ಆ ನನ್ ಮಕ್ಕಳ ಚರ್ಮ ಎಬ್ಬುರ್ಲʼಎಂದು ಹಾಡಿದ್ದೇವೆ ಹೌದು. ಜೊತೆಗೆ ನಾವು ಕಟ್ಟುತ್ತೇವೆ, ನಾವು ಕಟ್ಟುತ್ತೇವೆ ಹಾಡನ್ನು ಸಹ ಹಾಡುತ್ತೇವೆ. ನಮ್ಮದು ಸಾಂಸ್ಕೃತಿಕ ಪ್ರತರೋಧ ಎಂದು ಹೇಳಿದರು.</p>



<p>ದಲಿತರ ತಮಟನೆಯನ್ನು ಜನ ಕೀಳೆಂದು ತಿಳಿದಿದ್ದರು. ಅದನ್ನೆ ನಮ್ಮ ಹೋರಾಟದ ಅಸ್ತ್ರ ಮಾಡಿಕೊಂಡಿದ್ದೇವೆ. ಜಂಬೆ ಎನ್ನುವುದು ಆಫ್ರಿಕದಲ್ಲಿ ಹುಟ್ಟಿತು. ಅದಕ್ಕೂ ನಮಗೂ ಡಿಎನ್‌ಎ ಸಂಬಂಧವಿದೆ ಮತ್ತು ಜಂಬೆ ಇಂದು ವಿಶ್ವವ್ಯಾಪಿಯಾಗಿದೆ. ಈ ಸಾಂಸ್ಕೃತಿಕ ಆಯುಧಗಳ ಮೂಲಕ ಹೊಸ ಪ್ರತಿರೋಧ ಚಳವಳಿ ಕಟ್ಟುತ್ತೇವೆ. ಏಕೆಂದರೆ ಡಿಎಸ್‌ಎಸ್‌ ಎಂಬುದು ಒಂದು ಪಕ್ಷವಲ್ಲ, ಬದಲಿಗೆ ದಲಿತರ ಶಕ್ತಿ ಎಂದರು.</p>



<p>ನಾವೆಲ್ಲವರೂ ವಿಶ್ವಮಾನವರು, ನಾವೆಲ್ಲ ಒಂದೇ. ಮೂಲನಿವಾಸಿಗಳ ಮೇಲಿನ ದಮನ ದೌರ್ಜನ್ಯವನ್ನು ಒಟ್ಟಾಗಿ ಎದುರಿಸುತ್ತೇವೆ. ಇದು ಪೇಶ್ವೆ ಭಾರತವಲ್ಲ, ಇದು ಸಂವಿಧಾನ ಭಾರತ. ದೌರ್ಜನ್ಯ ನಡೆಸುವವರ ಡಿಎನ್‌ಎ ಚೆಕ್ ಮಾಡಿದರೆ ನಮಗೆ ಸತ್ಯ ತಿಳಿಯುತ್ತದೆ ಎಂದು ಹೇಳಿದರು.</p>



<p>ಇದು ಬುದ್ದನ ನಾಡು, ಆದರೆ ಬುದ್ಧನೇ ಇಲ್ಲಿ ಪರಕೀಯನಾಗಿದ್ದಾನೆ. ಮೂಲನಿವಾಸಿಗಳನ್ನು ಮೂಲೆಗುಂಪು ಮಾಡಲಾಗುತ್ತಿದೆ, ಇದಕ್ಕೆ ಅವಕಾಶ ಕೊಡಬಾರದು. ಕರ್ನಾಟಕವನ್ನು ಯುಪಿ, ಗುಜರಾತ್, ಬಿಹಾರ ಮಾಡಲು ಬಿಡುವುದಿಲ್ಲ ಎಂದು ಸಿ.ಬಸವಲಿಂಗಯ್ಯ ಎಚ್ಚರಿಸಿದರು.</p>
]]></content:encoded>
					
		
		
			</item>
	</channel>
</rss>
