<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>arecanut &#8211; Peepal Media</title>
	<atom:link href="https://peepalmedia.com/tag/arecanut/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Fri, 18 Nov 2022 09:30:33 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>arecanut &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಅಡಿಕೆ -ಮಲೆನಾಡಿಗರ ದುರಾಸೆ ಅತಿಯಾಯಿತೆ!?</title>
		<link>https://peepalmedia.com/malenadu-arecanut-cultural-crop/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 18 Nov 2022 09:24:03 +0000</pubDate>
				<category><![CDATA[ಯುವ ನೋಟ]]></category>
		<category><![CDATA[arecanut]]></category>
		<category><![CDATA[Digant Bimbail]]></category>
		<category><![CDATA[kannada]]></category>
		<category><![CDATA[Malenadu]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Yuva nota]]></category>
		<guid isPermaLink="false">https://peepalmedia.com/?p=15827</guid>

					<description><![CDATA[ಮಲೆನಾಡಿಗರು ತಮ್ಮ ಹಿಂದಿನ ಬದುಕಿಗೆ ಹೊರಳಲಾಗದೆ, ಇಂದಿನ ಬದುಕಿಗೆ ಹೊಂದಿಕೊಳ್ಳಲಾಗದ ತೊಳಲಾಟದಿಂದ ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಂಥದ್ದೇನಾಗಿದೆ? ಹವ್ಯಾಸಿ ಬರಹಗಾರ ದಿಗಂತ್‌ ಬಿಂಬೈಲ್‌ ಅವರ ಅಂಕಣ ಓದಿ. ಮಲೆನಾಡಿಗರ ಅರ್ಥಿಕ ಬಲವಾಗಿದ್ದ ಅಡಿಕೆಗೆ ದಾಳಿ ಇಟ್ಟಿರುವ ಎಲೆಚುಕ್ಕಿ ರೋಗ ಅಡಿಕೆ ತೋಟವನ್ನು ಸಂಪೂರ್ಣ ನಿರ್ನಾಮ ಮಾಡಿಬಿಡುವುದೆ? ಎನ್ನುವ ಅನುಮಾನ ಈಗ ದಟ್ಟವಾಗುತ್ತಿದೆ. ಅಡಿಕೆ ನಂಬಿದವರು ಮುಂದೆ ಬದುಕು ಹೇಗೆ ಎಂಬ ಯೋಚನೆಗಳಲ್ಲಿ ಮಂಡೆ ಕೆರೆದು ಕೊಳ್ಳುತ್ತಿರುವಾಗ, ಗದ್ದೆ ಗುಡ್ಡಗಳನ್ನೆಲ್ಲ ಅಡಿಕೆಯ ತೋಟಗಳನ್ನಾಗಿ ಮಾರ್ಪಡಿಸಿಕೊಂಡು ಆಡಂಬರದ [&#8230;]]]></description>
										<content:encoded><![CDATA[
<p style="font-size:20px"><strong>ಮಲೆನಾಡಿಗರು ತಮ್ಮ ಹಿಂದಿನ ಬದುಕಿಗೆ ಹೊರಳಲಾಗದೆ, ಇಂದಿನ ಬದುಕಿಗೆ ಹೊಂದಿಕೊಳ್ಳಲಾಗದ ತೊಳಲಾಟದಿಂದ ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಂಥದ್ದೇನಾಗಿದೆ? ಹವ್ಯಾಸಿ ಬರಹಗಾರ ದಿಗಂತ್‌ ಬಿಂಬೈಲ್‌ ಅವರ ಅಂಕಣ ಓದಿ.</strong></p>



<p style="font-size:20px">ಮಲೆನಾಡಿಗರ ಅರ್ಥಿಕ ಬಲವಾಗಿದ್ದ ಅಡಿಕೆಗೆ ದಾಳಿ ಇಟ್ಟಿರುವ ಎಲೆಚುಕ್ಕಿ ರೋಗ ಅಡಿಕೆ ತೋಟವನ್ನು ಸಂಪೂರ್ಣ ನಿರ್ನಾಮ ಮಾಡಿಬಿಡುವುದೆ? ಎನ್ನುವ ಅನುಮಾನ ಈಗ ದಟ್ಟವಾಗುತ್ತಿದೆ. ಅಡಿಕೆ ನಂಬಿದವರು ಮುಂದೆ ಬದುಕು ಹೇಗೆ ಎಂಬ ಯೋಚನೆಗಳಲ್ಲಿ ಮಂಡೆ ಕೆರೆದು ಕೊಳ್ಳುತ್ತಿರುವಾಗ, ಗದ್ದೆ ಗುಡ್ಡಗಳನ್ನೆಲ್ಲ ಅಡಿಕೆಯ ತೋಟಗಳನ್ನಾಗಿ ಮಾರ್ಪಡಿಸಿಕೊಂಡು ಆಡಂಬರದ ಬದುಕಿಗೆ ಓಡುವ ದುರಾಸೆ ಅತಿಯಾಗಿತ್ತು ಎನ್ನುವ ವಾದ ಕೇಳಿ ಬರುತ್ತಿದೆ.</p>



<p style="font-size:20px">ಸೂಕ್ಷ್ಮವಾಗಿ ಗಮನಿಸಿದಾಗ ಆಸೆ ಅತಿಯಾಗಿರುವುದು ಪ್ರತ್ಯಕ್ಷವಾಗಿ ಎದುರಿಗಿದ್ದರೂ ಸಹ ಅದೇನು ಕೇವಲ ಮಲೆನಾಡಿಗರ ಗುಣವಲ್ಲ. ಮಲೆನಾಡಿನ ಹೊರತಾಗಿ ಉಳಿದೆಲ್ಲ ಪ್ರದೇಶಗಳ ಜನಸಮೂಹ ಸರ್ವಸಂಗ ಪರಿತ್ಯಾಗಿಗಳಾಗಿ ಕುಳಿತಿಲ್ಲ. ಪ್ರಾಕೃತಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಇಡೀ ಜಗತ್ತು ಅಭಿವೃದ್ಧಿ ಎಂಬ ಹಣೆಪಟ್ಟಿ ಹೊತ್ತು ಓಡುತ್ತಿರುವಾಗ ಅದೇ ಹಾದಿಗೆ ಮಲೆನಾಡು ಕಾಲಿಟ್ಟಿದೆ. ಈಗೀಗ ಹೆಜ್ಜೆ ತಪ್ಪಿದಂತೆನಿಸಿದರೂ ಮಲೆನಾಡಿಗರನ್ನ ಆಧುನಿಕ ಬದುಕಿಗೆ ಎಳೆದಿದ್ದೇ ಈ ವ್ಯವಸ್ಥೆ.</p>



<figure class="wp-block-image size-full"><img fetchpriority="high" decoding="async" width="720" height="907" src="https://peepalmedia.com/wp-content/uploads/2022/11/IMG-20221118-WA0016.jpg" alt="" class="wp-image-15832" srcset="https://peepalmedia.com/wp-content/uploads/2022/11/IMG-20221118-WA0016.jpg 720w, https://peepalmedia.com/wp-content/uploads/2022/11/IMG-20221118-WA0016-238x300.jpg 238w, https://peepalmedia.com/wp-content/uploads/2022/11/IMG-20221118-WA0016-150x189.jpg 150w, https://peepalmedia.com/wp-content/uploads/2022/11/IMG-20221118-WA0016-300x378.jpg 300w, https://peepalmedia.com/wp-content/uploads/2022/11/IMG-20221118-WA0016-696x877.jpg 696w" sizes="(max-width: 720px) 100vw, 720px" /></figure>



<p style="font-size:20px">ಮನೆ ಪಕ್ಕದ ಕಾಡುಗಳಲ್ಲಿ ಆಹಾರ, ಮನೋರಂಜನೆ, ಔಷಧಿ ಎಂಬಿತರ ಬದುಕಿನ ಅಗತ್ಯಗಳನ್ನ ಹುಡುಕಿಕೊಂಡಿದ್ದ, ಹಾಗೆಯೇ ಪರಿಸರದೊಂದಿಗೆ ಹೊಂದಾಣಿಕೆಯಲ್ಲಿ ಬದುಕುತ್ತಿದ್ದವರ ಪರಿಸರ ಪ್ರೀತಿಯ ಕೊಂಡಿಯನ್ನ ವ್ಯವಸ್ಥಿತವಾಗಿ ಕತ್ತರಿಸಲಾಯಿತು.</p>



<p style="font-size:20px">ಈ ವ್ಯವಸ್ಥೆ ಹಸಿರು ಕ್ರಾಂತಿಯ ಹೆಸರಿನಲ್ಲಿ ಹಳ್ಳಿಹಳ್ಳಿಗೆ ರಾಸಾಯನಿಕಗಳ ತುರುಕಿತು. ಹೆಂಡ ಕಳ್ಳು ಬ್ಯಾನ್ ಮಾಡಿ ಒತ್ತಾಯ ಪೂರ್ವಕವಾಗಿ ಸಾರಾಯಿ ಬ್ರಾಂಡಿಗಳ ಪರಿಚಯಿಸಿತು. ಉದ್ಯಮಿಗಳ ಬಂಡವಾಳ ಹಿಂಪಡೆಯಲು ಪ್ರಕೃತಿಯೊಂದಿಗಿನ ಬಂಧದವರನ್ನೆಲ್ಲ ತನ್ನೆಡೆಗೆ ಸೆಳೆದುಕೊಂಡಿತು. ನಡುವೆ ಸಾವಿರಾರು ಎಕರೆ ಮಲೆಕಾಡನ್ನ ಅಣೆಕಟ್ಟುಗಳ ಹೆಸರಲ್ಲಿ ಮುಳುಗಿಸಿತು. ಆ ಮುಖೇನ ಅಭಿವೃದ್ಧಿ ಎನ್ನುವುದನ್ನ ಹೇರಿಕೆ ಮಾಡಿ ಉದ್ಯೋಗದ ಆಸೆ ತೋರಿಸಿ, ಕಾಡುಗಳ ನಡುವೆ ಪಟ್ಟಣಗಳನ್ನ ಕಟ್ಟಿತು. ಅಷ್ಟಕ್ಕೂ ಬಿಡದೆ ಮತ್ತೆ ಸಾವಿರಾರು ಎಕರೆ ಮಲೆಗುಡ್ಡಗಳಿಗೆ ಅಕೇಶಿಯ, ನೀಲಗಿರಿ ಇಟ್ಟು ಗುಡ್ಡಗಳನ್ನೆಲ್ಲ ತನ್ನ ಬಂಡವಾಳದ ಭಾಗವಾಗಿ ಮಾಡಿಕೊಂಡ ಸರ್ಕಾರ, ಅದಾಗಲೇ ಪರಿಸರ ಕೊಂಡಿ ಕಳಚಿದ ಜನರಿಗೆ ನಾವೂ ಹೀಗೆ ಮನೆ ಪಕ್ಕದ ಕಾಡು ಗುಡ್ಡಗಳನ್ನ ಕೃಷಿ ನೆಲವನ್ನಾಗಿ ಮಾರ್ಪಡಿಸಿಕೊಂಡರೆ ವಾಣಿಜ್ಯವಾಗಿ ಅಭಿವೃದ್ಧಿ ಹೊಂದಬಹುದೆಂದು ಪರೋಕ್ಷವಾಗಿ ಹೇಳಿದಂತಿತ್ತು.</p>



<figure class="wp-block-image size-full"><img decoding="async" width="720" height="540" src="https://peepalmedia.com/wp-content/uploads/2022/11/IMG-20221118-WA0015.jpg" alt="" class="wp-image-15833" srcset="https://peepalmedia.com/wp-content/uploads/2022/11/IMG-20221118-WA0015.jpg 720w, https://peepalmedia.com/wp-content/uploads/2022/11/IMG-20221118-WA0015-300x225.jpg 300w, https://peepalmedia.com/wp-content/uploads/2022/11/IMG-20221118-WA0015-150x113.jpg 150w, https://peepalmedia.com/wp-content/uploads/2022/11/IMG-20221118-WA0015-696x522.jpg 696w" sizes="(max-width: 720px) 100vw, 720px" /></figure>



<p style="font-size:20px">ಮನೆಪಕ್ಕದ ಕಾಡಿನಲ್ಲಿಯೇ ದೊರೆಯುತ್ತಿದ್ದ ಆಹಾರ, ಔಷಧಿ, ಮನೋರಂಜನೆ ಇವೆಲ್ಲಕ್ಕೂ ಉದ್ಯಮಿಗಳನ್ನ ಅವಲಂಬಿಸಿದ್ದರಿಂದ ಅವುಗಳನ್ನೆಲ್ಲ ಪಡೆಯಬೇಕಾದರೆ ದುಡ್ಡೇ ಮುಖ್ಯವಾಗಿ ನಿಲ್ಲುವ ದಿನಗಳಿಗೆ ಕಾಲಿಟ್ಟಾಯ್ತು. ಹೀಗೆ, ಈ ವ್ಯವಸ್ಥೆ ಮಲೆಜನರ ಬದುಕಿನ ಗಡಿಯೊಳಗೆ ಬಂದು ಪ್ರಹಾರ ನಡೆಸಿ ಅವರ ಸಂಸ್ಕೃತಿಯೇ ಅಲ್ಲದ, ಅಲ್ಲಿಗೆ ಅಗತ್ಯವೇ ಇಲ್ಲದ, ಮಲೆನಾಡ ಭೌಗೋಳಿಕ ವಿನ್ಯಾಸಕ್ಕೆ, ಹವಾಗುಣಕ್ಕೆ ಸಂಪೂರ್ಣ ವಿರುದ್ಧದ ಬದುಕಿಗೆ ಮಲೆಜನರನ್ನ ಎಳೆದು, ಪೇಟೆಯ ಧಾವಂತದ ಲೆಕ್ಕಾಚಾರದ ಬದುಕನ್ನ ಪರಿಚಯಿಸಿ ರುಚಿತೋರಿಸಿ ಸಂಪೂರ್ಣ ಮಲೆನಾಡ ವ್ಯವಸ್ಥೆಯನ್ನೇ ಹದಗೆಡಿಸಿ ಬಿಟ್ಟಿತು.</p>



<p style="font-size:20px">&nbsp;ಆಹಾರದ ಬೆಳೆಯ ಗದ್ದೆಗಳನ್ನು ವಾಣಿಜ್ಯವಾಗಿ ಪರಿವರ್ತಿಸಿಕೊಂಡು ಅಡಿಕೆ ಬೆಳೆದು ಇಲ್ಲಿಯ ಪರಿಸರಕ್ಕೆ ಹೊಂದಿಕೆಯಾಗದ ಸ್ಲ್ಯಾಬ್ ಮನೆ ಕಟ್ಟಡ, ಅಗಲವಾದ ರಸ್ತೆ, ಅದ್ದೂರಿ ಆಡಂಬರದ ಜೀವನ ಶೈಲಿಗಳಿಗೆ ಮಾರುಹೋಗಿ ಅವುಗಳನ್ನೇ ನೆಚ್ಚಿ ಹಾಗೆ ಬದುಕಲು ಬೇಕಾದ ಹಣಕ್ಕಾಗಿ ಮತ್ತೆ ಮತ್ತೆ ಅಡಿಕೆ ತೋಟಗಳ ವಿಸ್ತೀರ್ಣವನ್ನ ಹೆಚ್ಚಿಸಿಕೊಳ್ಳುತ್ತ ಅವುಗಳ ಮೇಲೆಯೇ ಅವಲಂಬಿತರಾದ ಮಲೆನಾಡ ಜನರ ಬದುಕು ಈಗ ಅಡಕತ್ತರಿಯಲ್ಲಿ ನಿಂತಿದೆ. ಮತ್ತೆ ತಮ್ಮ ಹಿಂದಿನ ಬದುಕಿಗೆ ಹೊರಳಲಾಗದೆ, ಇಂದಿನ ಬದುಕಿಗೆ ಹೊಂದಿಕೊಳ್ಳಲಾಗದ ತೊಳಲಾಟದಿಂದ ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಅಭಿವೃದ್ಧಿ ಎಂಬ ರಾಕ್ಷಸನ ಬೆನ್ನತ್ತಿ ಓಡುತ್ತಿರುವ ಆಳುವ ವರ್ಗಕ್ಕೆ ನಮ್ಮ ನೋವಿನ ಕೂಗು ಕೇಳುವುದೇ ಇಲ್ಲ. ದುರಾಸೆಯ ಬದುಕಿಗೆ ಎಳೆತಂದು ನಿಲ್ಲಿಸಿ ಈಗ ಬೆತ್ತಲಾಗುತ್ತಿರುವ ಮಲೆಜನರನ್ನ ನೋಡಿ ತನ್ನ ತಪ್ಪೇ ಇಲ್ಲದಂತೆ ನಿಂತಿರುವ ಸರ್ಕಾರ ವ್ಯಂಗ್ಯ ಮಾಡುವಂತಿದೆ. ದೇಶ ರಾಜ್ಯ ಜಿಲ್ಲೆಗಳೆಂದು ವಿಭಜಿಸಿಕೊಂಡಿರುವ ನಾವು ಅಲ್ಲಿಯ ಪ್ರಾದೇಶಿಕತೆಯನ್ನ ಕೆಡಿಸಿ ಪರಿಸರ ವ್ಯವಸ್ಥೆಯಲ್ಲಿ ಹೊಂದಿಕೊಂಡಿರುವವರ ಗಡಿಯೊಳಗೆ ನುಸುಳುವುದು, ಮತ್ತವರನ್ನ ಗಡಿಯಾಚೆ ಎಳೆತರುವುದು ಯಾವ ಮಟ್ಟದ ಸಾಂಸ್ಕೃತಿಕ ಸ್ಫೋಟಕ್ಕೆ ಕಾರಣವಾಗುತ್ತದೆ ಎನ್ನುವುದಕ್ಕೆ ಇಂದಿನ ಅರೆಬೆಂದ ಮಲೆನಾಡೇ ಸಾಕ್ಷಿ.</p>



<p style="font-size:20px"><strong>ದಿಗಂತ್‌ ಬಿಂಬೈಲ್‌</strong></p>



<p style="font-size:20px">ಹವ್ಯಾಸಿ ಬರಹಗಾರರು</p>


]]></content:encoded>
					
		
		
			</item>
		<item>
		<title>&#8220;ಅವ್ರ್ ಮನೇಲಿ ಮಗಳು ಮದುವೆಗೆ ಹಾರು ಫ್ಯಾನ್ ಮಾಡ್ಸಿದ್ರು&#8230;&#8221;</title>
		<link>https://peepalmedia.com/yuva-nota-article-by-diganth-bimabail/</link>
		
		<dc:creator><![CDATA[Peepal Media]]></dc:creator>
		<pubDate>Fri, 04 Nov 2022 11:10:44 +0000</pubDate>
				<category><![CDATA[ಯುವ ನೋಟ]]></category>
		<category><![CDATA[adike]]></category>
		<category><![CDATA[arecanut]]></category>
		<category><![CDATA[diganth bimbail]]></category>
		<category><![CDATA[drone]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[lalita prabandha]]></category>
		<category><![CDATA[malndad]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sagara]]></category>
		<category><![CDATA[shimoga]]></category>
		<category><![CDATA[tirthahalli]]></category>
		<category><![CDATA[wedding]]></category>
		<category><![CDATA[writing]]></category>
		<guid isPermaLink="false">https://peepalmedia.com/?p=14179</guid>

					<description><![CDATA[ಅವರಂತೆ ನಾವು ಮನೆ ಕಟ್ಬೇಕು, ಮದುವೆ ಮಾಡ್ಬೇಕು ಎಂಬ ಕನಸುಗಳಿಗೆಲ್ಲ ಧೈರ್ಯ ಕೊಡುತ್ತಿದ್ದ ಅಡಿಕೆಗೀಗ ಉಸಿರುಕಟ್ಟುತ್ತಿದೆ. ಬದುಕು ಮುಂದೆ ಹೇಗೆ ಎಂಬ ಉತ್ತರವಿಲ್ಲದ ಪ್ರಶ್ನೆ ಮಲೆನಾಡಿನ ಪ್ರತಿಯೊಬ್ಬರಲ್ಲೂ ಹೊಕ್ಕಿ ಕುಳಿತಿದೆ. ಮುಂದೇನು? ಎಂಬ ಆತಂಕದ ದನಿ ಮಲೆನಾಡಿನ ಯುವ ಬರಹಗಾರ ದಿಗಂತ್‌ ಬಿಂಬೈಲ್‌ ಅವರದು. &#8220;ಅವ್ರ್ ಮನೇಲಿ ಮಗಳು ಮದುವೆಗೆ ಹಾರು ಫ್ಯಾನ್ ಮಾಡ್ಸಿದ್ರು ಹಂಗೆ ನಾವು ನಮ್ ಮನೆ ಮದ್ವೆ ಮನೇಲಿ ಮಾಡುಸ್ಬೇಕು ಅಂತಿದೀವಿ…&#8221; ಹೀಗೆ ಮಾತಾಡ್ತಾ ಪರಿಚಯದವರೊಬ್ಬರು ಹೇಳಿದ್ರು. &#8220;ಇವ್ರ್ ಕರ್ಮ ಎಂತ ಹಾರು [&#8230;]]]></description>
										<content:encoded><![CDATA[
<p class="has-text-align-center"><strong>ಅವರಂತೆ ನಾವು ಮನೆ ಕಟ್ಬೇಕು, ಮದುವೆ ಮಾಡ್ಬೇಕು ಎಂಬ ಕನಸುಗಳಿಗೆಲ್ಲ ಧೈರ್ಯ ಕೊಡುತ್ತಿದ್ದ ಅಡಿಕೆಗೀಗ ಉಸಿರುಕಟ್ಟುತ್ತಿದೆ. ಬದುಕು ಮುಂದೆ ಹೇಗೆ ಎಂಬ ಉತ್ತರವಿಲ್ಲದ ಪ್ರಶ್ನೆ ಮಲೆನಾಡಿನ ಪ್ರತಿಯೊಬ್ಬರಲ್ಲೂ ಹೊಕ್ಕಿ ಕುಳಿತಿದೆ. ಮುಂದೇನು? ಎಂಬ ಆತಂಕದ ದನಿ ಮಲೆನಾಡಿನ ಯುವ ಬರಹಗಾರ ದಿಗಂತ್‌ ಬಿಂಬೈಲ್‌ ಅವರದು. </strong></p>



<p>&#8220;ಅವ್ರ್ ಮನೇಲಿ ಮಗಳು ಮದುವೆಗೆ ಹಾರು ಫ್ಯಾನ್ ಮಾಡ್ಸಿದ್ರು ಹಂಗೆ ನಾವು ನಮ್ ಮನೆ ಮದ್ವೆ ಮನೇಲಿ ಮಾಡುಸ್ಬೇಕು ಅಂತಿದೀವಿ…&#8221; ಹೀಗೆ ಮಾತಾಡ್ತಾ ಪರಿಚಯದವರೊಬ್ಬರು ಹೇಳಿದ್ರು. &#8220;ಇವ್ರ್ ಕರ್ಮ ಎಂತ ಹಾರು ಫ್ಯಾನ್ ಮಾಡುಸ್ತಾರೆ..&#8221; ಅಂತ ಮನಸಲ್ಲಿ ಅಂದ್ಕೋತ ಮತಾಡ್ತ ಇದ್ದ ಹಾಗೆ ಗೊತ್ತಾಯ್ತು. ಅದು ಹಾರು ಫ್ಯಾನ್ ಅಲ್ಲ ಡ್ರೋನ್ ಎಂದು.</p>



<p>&nbsp;ಮಕ್ಕಳ ವಿದ್ಯಾಭ್ಯಾಸ ಮಾಡಿಸಬೇಕು, ಮಗ, ಮಗಳ ಮದ್ವೆ ಮಾಡ್ಬೇಕು, ಮನೆ ಕಟ್ಬೇಕು, ಅನಾರೋಗ್ಯ ಪೀಡಿತ ವಯಸ್ಸಾದವರ ಆಸ್ಪತ್ರೆಗೆ ಸೇರಿಸಬೇಕು ಏನೆಲ್ಲ ಮಾಡ್ಬೇಕು ಅಂದ್ರು ಮಲೆನಾಡಿಗರಿಗೆ ಬೆನ್ನೆಲುಬಾಗಿ ಆರ್ಥಿಕ ಧೈರ್ಯ ಕೊಟ್ಟಿದ್ದು ಅಡಿಕೆ. ಯಾವ ಮಟ್ಟಕ್ಕೆಂದರೆ ಮಲೆನಾಡಿನ ಮೂಲ ಪ್ರಭೇದವೇ ಅಲ್ಲದ ಅಡಿಕೆ ಬೆಳೆ ಇಲ್ಲದಿದ್ದರೆ ಬದುಕೇ ಇಲ್ಲ ಎನ್ನುವಷ್ಟರ ಮಟ್ಟಿಗಿನ ಮಾತು ಗದ್ದೆ, ತೋಟ, ಹಡ್ಡೆ, ಮದ್ವೆ ಮನೆ, ಸಾವಿನ ಮನೆ ಎಲ್ಲ ಕಡೆ ಕೇಳ್ತಿದೆ.</p>



<p>&nbsp;ಇದು ಇವತ್ತಿನ ಮಲೆನಾಡಿನ ಸ್ಥಿತಿಯಲ್ಲಿ ಸತ್ಯವೂ ಹೌದು. ಅಡಿಕೆ ಇದ್ದರೆ ಬದುಕು ಎನ್ನುವಷ್ಟು ಅವಲಂಬನೆಯೇ ಬಹುಪಾಲು. ಈಗ ಕಾಡುತ್ತಿರುವ ಅಭದ್ರತೆ ಒಂದೆಡೆ ಆದರೆ ಅಡಿಕೆ ಮಲೆನಾಡಿನ ಸಂಸ್ಕೃತಿ, ಜನಜೀವನವನ್ನೇ ಮತ್ತೆಂದು ಸರಿಪಡಿಸಲಾಗದಷ್ಟು ಅಂದಗೆಡಿಸಿ ಇಟ್ಟಿರುವುದು ಜೀರ್ಣಿಸಿಕೊಳ್ಳಲಾಗದ್ದು. ಹಿರಿಯರು ಎರಡು ಗುಡ್ಡಗಳ ನಡುವಿನ ಸರಕಲು ಜಾಗದಲ್ಲಿ ಸಾಂಪ್ರದಾಯಿಕವಾಗಿ, ಸಾವಯವವಾಗಿ ಬೆಳೆಯುತ್ತಿದ್ದ ಬೆಳೆ ಕಳೆದೆರಡು ದಶಕಗಳಿಂದ ಭತ್ತದ ಗದ್ದೆಗಳ ಜೊತೆಜೊತೆಗೆ ಮನೆ ಬಳಿಯ ಗುಡ್ಡಗಾಡುಗಳನ್ನೆಲ್ಲ ಆವರಿಸಿ ಕೇಕೆ ಹಾಕುತ್ತಿತ್ತು. ಮದುವೆ ಮನೆ ಸಾವಿನ ಮನೆ ತೊಟ್ಟಿಲು ಶಾಸ್ತ್ರ ಯಾವುದೇ ಕಾರ್ಯಕ್ರಮಕ್ಕೆ ಹೋದ್ರು ಮಾತೆತ್ತಿದರೆ &#8220;ನಿಮ್ಗೆ ಎಷ್ಟ್ ಕುಂಟಾಲ್ ಅಡಿಕೆ ಆಗ್ತದೆ&#8230;&#8221; ಪರಿಚಯದ ನಂತರದ ಮಾತೇ ಇದಾಗಿತ್ತು. ಗದ್ದೆ ಮಾಡ್ತೇವೆ ಎಂದರೆ ಸಾಕು &#8220;ಇನ್ನೂ ಗದ್ದೆ ಇಟ್ಕೊಂಡಿರ? ನಮ್ಗ್ ಆ ರಗಳೆ ಇಲ್ಲ. ಪೂರ್ತಿ ತ್ವಾಟ ಹಾಕಿವಿ&#8221; ಹೊಟ್ಟೆಗೆ ಅನ್ನ ಬೆಳೆದು ಕೊಳ್ಳುವುದೇ ರಗಳೆ ಎನ್ನುವುದರ ಮಟ್ಟಕ್ಕೆ ಮಾತನಾಡಿಕೊಳ್ಳುವವರಿಗೇನು ಕಡಿಮೆ ಇರಲಿಲ್ಲ.</p>



<p>ಮಲೆನಾಡಿನಲ್ಲಿ ಬೇರೆ ಯಾವ ಬೆಳೆಯು ಕೊಡಲಾಗದ ಲಾಭದ ಹಿಂದೆ ಬಿದ್ದವರು ಇಲ್ಲಿಯ ಪ್ರಕೃತಿಗೆ ಹೊಂದಿಕೆಯಾಗದ ಸ್ಲ್ಯಾಬ್ ಮನೆ, ಅದ್ದೂರಿ ಮದುವೆ, ಇನ್ನೂ ಮುಂದೆ ಹೋಗಿ ಹುಟ್ಟಿದ ಹಬ್ಬದ ಸಂಭ್ರಮ ಇನ್ನು ಏನೇನೋ ಲಕ್ಷ ಕೋಟಿ ಲೆಕ್ಕದಲ್ಲಿ ಹಣ ಖರ್ಚು ಮಾಡುವಷ್ಟು ಗಟ್ಟಿಗರಾಗಿದ್ದರು. ಗಟ್ಟಿಗರಾಗಿದ್ದರು ಎನ್ನುವುದಕ್ಕಿಂತ ತೋರುಗಾಣಿಕೆಯ ಬದುಕು. ಈಗೀಗ ಮಲೆನಾಡಿನಲ್ಲಿ ನಿರ್ಮಾಣವಾದ ಯಾವುದೇ ಸ್ಲ್ಯಾಬ್ ಮನೆಗಳ ಒಳಹೊಕ್ಕರೂ ಸರ್ವೇ ಸಾಮಾನ್ಯವಾಗಿ ಗುರುತಿಸಬಹುದಾದ ಒಂದು ಅಂಶವೆಂದರೆ ಬಂದವರಿಗೆ ತೋರಿಸಲೆಂದೇ ಮಾಡಿಟ್ಟ ಲಕ್ಷದ ಖರ್ಚು ಮಾಡಿದ ಅಡುಗೆ ಮನೆ. ಅಲ್ಲಿ ಅಡುಗೆಯನ್ನು ಮಾಡದೆ ಕೇವಲ ವಾಸ್ತುವಿನ ಹೆಸರು ಹೇಳಿಕೊಂಡು ಬಂದವರಿಗೆ ಕರೆಕರೆದು ತೋರಿಸುವ ಗತ್ತಿಗಷ್ಟೇ ಆಗಿತ್ತದು. ದಿನ ನಿತ್ಯದ ಅಡುಗೆ ಕೆಲಸಕ್ಕೆ ಅಲ್ಲೆಲ್ಲೋ ಮೂಲೆಯಲ್ಲಿ ಮತ್ತೊಂದು ಅಡುಗೆ ಮನೆ. ಕೆಲವೇ ವರ್ಷಗಳಲ್ಲಿ ಮಳೆ ತಡೆದುಕೊಳ್ಳಲಾಗದೆ ಮಳೆ ನೀರು ತೊಟ್ಟಿಕ್ಕುವ ಸ್ಲ್ಯಾಬ್ ಮನೆಗಳ ಮೇಲೆ ಮತ್ತೆ ಕಟ್ಟಿ ಹೆಂಚು, ಶೀಟ್ ಹಾಕಿಸಿ ತಮ್ಮ ತೋರುಗಾಣಿಕೆ ಬದುಕು ಹೊರಕಾಣದಂತೆ ತೇಪೆ ಹಚ್ಚುವ ಕಾರ್ಯ.</p>


<div class="wp-block-image">
<figure class="aligncenter size-large"><img decoding="async" width="771" height="1024" src="https://peepalmedia.com/wp-content/uploads/2022/11/IMG_20221104_105916-1-771x1024.jpg" alt="" class="wp-image-14188" srcset="https://peepalmedia.com/wp-content/uploads/2022/11/IMG_20221104_105916-1-771x1024.jpg 771w, https://peepalmedia.com/wp-content/uploads/2022/11/IMG_20221104_105916-1-226x300.jpg 226w, https://peepalmedia.com/wp-content/uploads/2022/11/IMG_20221104_105916-1-768x1020.jpg 768w, https://peepalmedia.com/wp-content/uploads/2022/11/IMG_20221104_105916-1-1157x1536.jpg 1157w, https://peepalmedia.com/wp-content/uploads/2022/11/IMG_20221104_105916-1-1542x2048.jpg 1542w, https://peepalmedia.com/wp-content/uploads/2022/11/IMG_20221104_105916-1-150x199.jpg 150w, https://peepalmedia.com/wp-content/uploads/2022/11/IMG_20221104_105916-1-300x398.jpg 300w, https://peepalmedia.com/wp-content/uploads/2022/11/IMG_20221104_105916-1-696x924.jpg 696w, https://peepalmedia.com/wp-content/uploads/2022/11/IMG_20221104_105916-1-1068x1418.jpg 1068w, https://peepalmedia.com/wp-content/uploads/2022/11/IMG_20221104_105916-1-1920x2550.jpg 1920w, https://peepalmedia.com/wp-content/uploads/2022/11/IMG_20221104_105916-1-scaled.jpg 1928w" sizes="(max-width: 771px) 100vw, 771px" /></figure></div>


<p>ಇಲ್ಲಿಯ ಭೌಗೋಳಿಕ ಲಕ್ಷಣಗಳಿಗೆ ಹೊಂದಿಕೆಯಾಗದಂತಹ ಮನೆ ಕಟ್ಟಡಗಳ ನಿರ್ಮಾಣ ಒಂದೆಡೆಯಾದರೆ, ಮದುವೆ ಕಾರ್ಯಕ್ರಮಗಳು ಇಲ್ಲಿನ ಸಂಸ್ಕೃತಿ ಸೊಗಡನ್ನ ಬುಡಮೇಲು ಮಾಡಲು ಮುಂದಾಗಿದ್ದವು. ಹಳ್ಳಿ ಹಳ್ಳಿಗಳ ಹೊಕ್ಕಿದ ಡಿಜೆಯ ಸದ್ದಿನೊಂದಿಗೆ ದುಬಾರಿ ಬೆಲೆಯ ಮದ್ಯದ ಬಾಟಲಿಗಳು ಮತ್ತೇರಿಸಿ ಕುಣಿಸುತ್ತಿದ್ದವು. ಕಾಲುದಾರಿಯಲ್ಲಿ ಓಡಾಡಿ ಜೀವನ ಕಟ್ಟಿಕೊಂಡ ಊರು ಅಗಲವಾದ ಡಾಂಬರು ರಸ್ತೆಗಳೇ ಬೇಕೆನ್ನುವಷ್ಟು ಹಠ ಹಿಡಿದಿತ್ತು. ಮನೆಮನೆಗೂ ಬಂದು ನಿಂತ ಕಾರು ಬೈಕುಗಳಿಂದ ವೈಭವದ ಮೆಟ್ಟಿಲು ಹತ್ತುವ ತವಕ. ಒಬ್ಬರು ಮಾಡುತ್ತಾರೆಂದು ಮತ್ತೊಬ್ಬರು ಹೇಗೂ ಅಡಿಕೆ ಆಗುತ್ತದಲ್ಲ ಎಂಬ ನಂಬಿಕೆಯಲ್ಲಿಯೇ ಅಲ್ಲಿ ಇಲ್ಲಿ ಸಾಲ ಮಾಡಿ ಸುರಿಯುತ್ತಿದ್ದರು. ಈಗ ಅಡಿಕೆಯ ನಂಬಿಕೆಗೆ ಹೊಡೆತ ಬೀಳುವಂತಾಗಿದೆ.</p>



<p>&nbsp;ಸಾಂಪ್ರದಾಯಿಕ ಕೃಷಿಯಲ್ಲಿ ಮುಂದುವರಿಯುತ್ತಿರುವ ಮಧ್ಯಮ ವರ್ಗದ ಸಾವಿರಾರು ಕುಟುಂಬಗಳು ದುರಾಸೆ ಬೀಳದೆ ಉಳಿದಿದ್ದರೂ ಸಹ ಅವರ ಬದುಕಿನ ಅವಲಂಬನೆ ಅಡಿಕೆಯೇ ಆಗಿತ್ತು. ಅಡಿಕೆ ಆಗುತ್ತದೆ ಎಂಬ ನಂಬಿಕೆಯಲ್ಲಿಯೇ ಮನೆಯಲ್ಲಿಯೇ ಇರಲಿ ಎಂಬ ಭಾವನೆ ತೆಗೆದು ಎಷ್ಟೋ ಹೆಣ್ಣು ಮಕ್ಕಳು ಡಿಗ್ರಿ ಪಡೆಯುವಂತಾಯ್ತು. ಮನೆಮಕ್ಕಳು ಓದಿ ಉದ್ಯೋಗ ಹಿಡಿಯುವಂತಾಯ್ತು. ಇವೆಲ್ಲಕ್ಕೂ ಮೂಲ ಬಲವಾಗಿದ್ದ ಅಡಿಕೆ ಯಾವ ಮಟ್ಟಕ್ಕೆ ಚರ್ಚಾ ವಸ್ತು ಆಗಿತ್ತೆಂದರೆ, ಮುಖ್ಯವಾಗಿ ಜಾತಿಯ ಆಧಾರದ ಮೇಲೆ ಮೇಲು ಕೀಳು ನಡೆಸುವುದಕ್ಕಿಂತ ಅಡಿಕೆ ಎಷ್ಟು ಕುಂಟಾಲ್ ಆಗುತ್ತದೆ ಎನ್ನುವುದರ ಮೇಲೆ ಜನರ ಯೋಗ್ಯತೆ ಅಳೆಯುವ ಮಟ್ಟಕ್ಕೆ ಬಂದು ನಿಂತಿತ್ತು ಬದುಕು. ಅವರಂತೆ ನಾವು ಮನೆ ಕಟ್ಬೇಕು, ಮದುವೆ ಮಾಡ್ಬೇಕು ಎಂಬ ಕನಸುಗಳಿಗೆಲ್ಲ ಧೈರ್ಯ ಕೊಡುತ್ತಿದ್ದ ಅಡಿಕೆಗೀಗ ಉಸಿರು ಕಟ್ಟುತ್ತಿದೆ. ಬದುಕು ಮುಂದೆ ಹೇಗೆ ಎಂಬ ಉತ್ತರವಿಲ್ಲದ ಪ್ರಶ್ನೆ ಮಲೆನಾಡಿನ ಪ್ರತಿಯೊಬ್ಬರಲ್ಲೂ ಹೊಕ್ಕಿ ಕುಳಿತಿದೆ. ಮಲೆನಾಡಿನ ವಿಷಯದಲ್ಲಿ ಸರ್ಕಾರ ಕೊಟ್ಟಿದ್ದು ಕಡಿಮೆ ಇಲ್ಲಿಂದ ಪಡೆದದ್ದೇ ಹೆಚ್ಚು. ಹಳದಿ ಎಲೆ ರೋಗ ಬಂದು ಮೂರು ದಶಕಗಳಾದರು ಸಹ ಯಾವುದೇ ಔಷಧಿ ಕಂಡುಹಿಡಿಯಲಿಲ್ಲ. ಎಲೆಚುಕ್ಕಿ ರೋಗಕ್ಕೂ ಮದ್ದು ಕಂಡು ಹಿಡಿಯುವ ಸಂಶೋಧನೆಗಳನ್ನ ಸಮರ್ಥವಾಗಿ ನಡೆಸುತ್ತಾರೆಂಬ ಖಾತ್ರಿಯೂ ಇಲ್ಲ. ಆದರೆ ಅಡಿಕೆಯ ವಿಷಯದಲ್ಲಿ ಎಲ್ಲ ಹೆಚ್ಚು ಗಾರಿಕೆ ಮುರಿದು ಎಲ್ಲರನ್ನು ಒಂದೇ ತಕ್ಕಡಿಯಲ್ಲಿಟ್ಟ ಪ್ರಕೃತಿಯ ಶಕ್ತಿ ನಿಜದ ಆಶ್ಚರ್ಯ.&nbsp;</p>



<p></p>



<p><strong>ದಿಗಂತ್ ಬಿಂಬೈಲ್‌</strong></p>



<p>ಹವ್ಯಾಸಿ ಬರಹಗಾರರು</p>



<figure class="wp-block-image size-large is-resized"><img loading="lazy" decoding="async" src="https://peepalmedia.com/wp-content/uploads/2022/11/WhatsApp-Image-2022-11-04-at-3.21.11-PM-872x1024.jpeg" alt="" class="wp-image-14182" width="159" height="184"/></figure>
]]></content:encoded>
					
		
		
			</item>
	</channel>
</rss>
