<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>article &#8211; Peepal Media</title>
	<atom:link href="https://peepalmedia.com/tag/article/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Wed, 16 Nov 2022 07:40:50 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>article &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಭಾರತದ ಸಂವಿಧಾನ ಬಗ್ಗೆ ರಾಜ್ಯ ಮಟ್ಟದ ಲೇಖನ ಸ್ಪರ್ಧೆ</title>
		<link>https://peepalmedia.com/state-level-essay-competition-on-constitution-of-india/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 16 Nov 2022 07:40:49 +0000</pubDate>
				<category><![CDATA[ರಾಜ್ಯ]]></category>
		<category><![CDATA[article]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[indian constitution]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=15652</guid>

					<description><![CDATA[ಬೆಂಗಳೂರು: ಭಾರತ ಸಂವಿಧಾನದ ಬಗ್ಗೆ ಯುವಜನತೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ದಲಿತ ಮತ್ತು ಮಹಿಳಾ ಚಳುವಳಿ ಹಾಗು ಬೇರು ಸಂಸ್ಥೆಯು ರಾಜ್ಯ ಮಟ್ಟದ ಭಾರತ ಸಂವಿಧಾನ ಕುರಿತ ಲೇಖನ ಸ್ಪರ್ಧೆಯನ್ನು ಆಯೋಜನೆ ಮಾಡಿದ್ದು, ಉತ್ತಮ ಲೇಖನಕ್ಕೆ ಬಹುಮಾನ ನೀಡಲಾಗುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು, 1. ಸಂವಿಧಾನ ಮತ್ತು ನನ್ನ ಬದುಕು, 2. ಸಂವಿಧಾನ ಮತ್ತು ಸಾಮಾಜಿಕ ನ್ಯಾಯ, 3. ಸಂವಿಧಾನ ಮತ್ತು ಭಾರತದ ಅಭಿವೃದ್ಧಿ, 4. ಸಂವಿಧಾನ ಮತ್ತು ತಳ ಸಮುದಾಯಗಳು ಈ  ನಾಲ್ಕು ವಿಷಯಗಳಲ್ಲಿ ಯಾವುದಾದರು ಒಂದನ್ನು [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ಭಾರತ ಸಂವಿಧಾನದ ಬಗ್ಗೆ ಯುವಜನತೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ದಲಿತ ಮತ್ತು ಮಹಿಳಾ ಚಳುವಳಿ ಹಾಗು ಬೇರು ಸಂಸ್ಥೆಯು ರಾಜ್ಯ ಮಟ್ಟದ ಭಾರತ ಸಂವಿಧಾನ ಕುರಿತ ಲೇಖನ ಸ್ಪರ್ಧೆಯನ್ನು ಆಯೋಜನೆ ಮಾಡಿದ್ದು, ಉತ್ತಮ ಲೇಖನಕ್ಕೆ ಬಹುಮಾನ ನೀಡಲಾಗುತ್ತಿದೆ.</p>



<p>ಸ್ಪರ್ಧೆಯಲ್ಲಿ ಭಾಗವಹಿಸುವವರು, 1. ಸಂವಿಧಾನ ಮತ್ತು ನನ್ನ ಬದುಕು, 2. ಸಂವಿಧಾನ ಮತ್ತು ಸಾಮಾಜಿಕ ನ್ಯಾಯ, 3. ಸಂವಿಧಾನ ಮತ್ತು ಭಾರತದ ಅಭಿವೃದ್ಧಿ, 4. ಸಂವಿಧಾನ ಮತ್ತು ತಳ ಸಮುದಾಯಗಳು ಈ  ನಾಲ್ಕು ವಿಷಯಗಳಲ್ಲಿ ಯಾವುದಾದರು ಒಂದನ್ನು ಆಯ್ಕೆ ಮಾಡಿ ಅದರ ಕುರಿತು ಲೇಖನ ಬರೆದು ಕಳುಹಿಸಿ ಬಹುಮಾನ ಗೆಲ್ಲಬಹುದಾಗಿದೆ.</p>



<p><strong>ಸ್ಪರ್ಧೆಯ ನಿಯಮಗಳು </strong>: </p>



<ul class="wp-block-list">
<li>18 ರಿಂದ 25 ವರ್ಷದೊಳಗಿನ ಯುವ ಜನರು ಸ್ಪರ್ಧೆಯಲ್ಲಿ ಭಾಗವಹಿಸಬಹುದು.</li>



<li> ಲೇಖನ ಸ್ವಂತ ಬರವಣಿಗೆಯಾಗಿರಬೇಕು.</li>



<li>ಲೇಖನ ಕನಿಷ್ಟ 800 ರಿಂದ 2000 ಸಾವಿರ ಪದಗಳು ಇರಬೇಕು.</li>



<li>ಲೇಖನವನ್ನು ನುಡಿ ಅಥವಾ ಯುನಿಕೋಡ್ ನಲ್ಲಿ ಟೈಪ್ ಮಾಡಿರಬೇಕು.</li>
</ul>



<p>ತಮ್ಮ ಸ್ಪರ್ಧಾತ್ಮಕ ಲೇಖನಗಳನ್ನು ಆಯೋಜಕರಿಗೆ ದಿನಾಂಕ : 31/12/2022 ರ ಒಳಗೆ beruorg@gmail.com  ಅಥವಾ dmcchaluvali@gmail.com  ಇ- ಮೇಲ್ ವಿಳಾಸಕ್ಕೆ ಕಳಹಿಸಬೇಕಾಗಿದೆ.</p>



<p>ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪತ್ರದ ಜೊತೆಗೆ ಮೊದಲನೇ ಬಹುಮಾನ-3000 ಎರಡನೇ ಬಹುಮಾನ-2000 ಮೂರನೇ ಬಹುಮಾನ-1000 ನೀಡಲಾಗುವುದು.</p>



<p>ಹೆಚ್ಚಿನ ಮಾಹಿತಿಗಾಗಿ ಬೇರು ಸಂಸ್ಥೆ- 9008660371-beruorg@gmail.com ದಲಿತ ಮತ್ತು ಮಹಿಳಾ ಚಳುವಳಿ-9945966683- dmcchaluvali@gmail.com&nbsp; ಇವರನ್ನು ಸಂಪರ್ಕಿಸಬಹುದಾಗಿದೆ.</p>
]]></content:encoded>
					
		
		
			</item>
		<item>
		<title>ತುಳಸಿ ವೃಂದಾ &#8211; ಪುರಾಣ ಕಥೆಯ ಗೊಂದಲ !?</title>
		<link>https://peepalmedia.com/tulasi-pooja-special-article-by-praveen-shetty/</link>
		
		<dc:creator><![CDATA[Peepal Media]]></dc:creator>
		<pubDate>Sat, 05 Nov 2022 13:10:35 +0000</pubDate>
				<category><![CDATA[ಧರ್ಮ- ಸಂಸ್ಕೃತಿ]]></category>
		<category><![CDATA[article]]></category>
		<category><![CDATA[festival]]></category>
		<category><![CDATA[kannada]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=14342</guid>

					<description><![CDATA[ಇಂದು ತುಳಸೀ ಹಬ್ಬ. ದೀಪಾವಳಿ ಹಬ್ಬದ ಬೆನ್ನಲೇ ಬರುವ ಹಬ್ಬ ಇದು. ಈ ಹಬ್ಬದ ಕುರಿತು ಪುರಾಣ ಕತೆಗಳಲ್ಲಿ ಇರುವ ಗೊಂದಲಗಳ ಕುರಿತು ಚಿಂತಕ ಪ್ರವೀಣ್ ಎಸ್ ಶೆಟ್ಟಿ ಅವರು ಬರೆದ ಈ ವೈಚಾರಿಕ ಲೇಖನ ಓದಿ&#8230; ಈಗ ತುಳಸಿ ಹಬ್ಬ ಬಂದಾಗ ಪತ್ರಿಕೆಗಳಲ್ಲಿ ತುಳಸಿಯ ಕುರಿತ ಹಲವಾರು ಪುರಾಣ ಕಥೆಗಳು ಹೊರಬರುತ್ತವೆ. ಎಲ್ಲಾ ಬ್ರಾಹ್ಮಣರ ಮನೆಯ ಎದುರು ತುಲಸಿ ಕಟ್ಟೆ ಇದ್ದೇ ಇರುತ್ತದೆ. ಆದರೆ ಬ್ರಾಹ್ಮಣರು ತುಲಸಿ ಕಟ್ಟೆಯ ಸುತ್ತ ಬಲಿ ಬರುತ್ತಾರೆಯೇ ವಿನ: ಅದಕ್ಕೆ [&#8230;]]]></description>
										<content:encoded><![CDATA[
<p style="font-size:20px"><strong>ಇಂದು ತುಳಸೀ ಹಬ್ಬ. ದೀಪಾವಳಿ ಹಬ್ಬದ ಬೆನ್ನಲೇ ಬರುವ ಹಬ್ಬ ಇದು. ಈ ಹಬ್ಬದ ಕುರಿತು ಪುರಾಣ ಕತೆಗಳಲ್ಲಿ ಇರುವ ಗೊಂದಲಗಳ ಕುರಿತು ಚಿಂತಕ</strong><strong> ಪ್ರವೀಣ್ ಎಸ್ ಶೆಟ್ಟಿ ಅವರು ಬರೆದ ಈ ವೈಚಾರಿಕ ಲೇಖನ ಓದಿ&#8230;</strong></p>



<p style="font-size:20px">ಈಗ ತುಳಸಿ ಹಬ್ಬ ಬಂದಾಗ ಪತ್ರಿಕೆಗಳಲ್ಲಿ ತುಳಸಿಯ ಕುರಿತ ಹಲವಾರು ಪುರಾಣ ಕಥೆಗಳು ಹೊರಬರುತ್ತವೆ. ಎಲ್ಲಾ ಬ್ರಾಹ್ಮಣರ ಮನೆಯ ಎದುರು ತುಲಸಿ ಕಟ್ಟೆ ಇದ್ದೇ ಇರುತ್ತದೆ. ಆದರೆ ಬ್ರಾಹ್ಮಣರು ತುಲಸಿ ಕಟ್ಟೆಯ ಸುತ್ತ ಬಲಿ ಬರುತ್ತಾರೆಯೇ ವಿನ: ಅದಕ್ಕೆ ಕೈ ಮುಗಿಯುವುದಿಲ್ಲ! ಅವರು ಆಕಾಶ ನೋಡಿ ಸೂರ್ಯನಿಗೆ ಕೈಮುಗಿಯುತ್ತಾರೆ. ಯಾಕೆಂದರೆ ತುಲಸಿ ಕಟ್ಟೆಯು ವೃಂದಾಳ ಸಮಾಧಿ. ಹಾಗಾಗಿ ಅದಕ್ಕೆ ವೃಂದಾವನ ಎಂದು ಕರೆಯುವುದು. ತುಲಸಿ-ವೃಂದಾ ಇವರು ಅಸುರ-ರಾಕ್ಷಸ ಕುಲದವರು. ಅಸುರ-ರಾಕ್ಷಸ ಕುಲದವರಿಗೆ ಬ್ರಾಹ್ಮಣರು ಎಂದೂ ಕೈಮುಗಿಯುವುದಿಲ್ಲ. ಅಸುರ ಕುಲದ ಬಲಿಚಕ್ರವರ್ತಿಯನ್ನು ದೀಪಾವಳಿಯ ಮರುದಿನ ಎಲ್ಲ ಶೂದ್ರರೂ ಪೂಜಿಸುತ್ತಾರೆ ಆದರೆ ಬ್ರಾಹ್ಮಣರು ಪೂಜಿಸುವುದಿಲ್ಲ. ಅಸುರ ತುಲಸಿ-ವೃಂದಾ ಸತ್ತಾಗ ಅವಳ ದೇಹವನ್ನು ಸಮಾಧಿ ಮಾಡಿ ಅದರ ಸುತ್ತ ಕಟ್ಟೆ ಕಟ್ಟಿ ಅದರ ಮೇಲೆ ತುಳಸಿ ಎಂಬ ಔಷಧ ಗಿಡ ನೆಡಲಾಯಿತು. ಅದಕ್ಕೆ ವೃಂದಾವನ ಅರ್ಥಾತ್ ತುಳಸಿಕಟ್ಟೆ ಎಂಬ ಹೆಸರು ಬಿತ್ತು. ಮಂತ್ರಾಲಯ ಮತ್ತು ಉಡುಪಿ ಮಠದಲ್ಲಿ ದಿವಂಗತ ಸ್ವಾಮಿಗಳ ಸಮಾಧಿಗೆ ವೃಂದಾವನ ಎಂದೇ ಕರೆಯುವುದು. ಅದೇ ರೀತಿ ತುಲಸಿ ಕಟ್ಟೆಯೂ ಸಮಾಧಿಯ ಪ್ರತೀಕ. ಹಾಗಾಗಿ ಬ್ರಾಹ್ಮಣರು ಅದಕ್ಕೆ ಕೈಮುಗಿಯುವುದಿಲ್ಲ!</p>



<p style="font-size:20px"><strong>ತುಳಸಿಗೆ ಪೌರಾಣಿಕ ಕಥೆಯ ಲೇಪನ ಬೇಕಿಲ್ಲ&#8230;</strong></p>



<p style="font-size:20px">ತುಳಸಿ ಗಿಡದಲ್ಲಿ ಅದ್ಭುತ ಔಷಧ ಗುಣಗಳು ಇರುವುದು ನಿಜ. ಅದು ಅನೇಕ ರೋಗಗಳಿಗೆ ದಿವ್ಯ ಔಷಧವೆಂಬುದೂ ನಿಜ. ಈ ಗಿಡದ ಗಾಳಿಯಲ್ಲಿ ಕೀಟನಾಶಕ ಗುಣವೂ ಇರುವುದು ನಿಜ. ಇದು ಸಂಶೋಧನೆಯಲ್ಲೂ ಧೃಡಪಟ್ಟಿದೆ. ಹಾಗಾಗಿ ತುಳಸಿ ಎಲೆಗಳ ಮತ್ತು ಕಡ್ಡಿಯ ಸೇವನೆಯಿಂದ ಮತ್ತು ಗಿಡದ ಹತ್ತಿರದ ಗಾಳಿಯ ಸೇವನೆಯಿಂದ ನಿಜವಾಗಿ ನಮ್ಮ ಆರೋಗ್ಯಕ್ಕೆ ಆಗುವ ಲಾಭದ ಬಗ್ಗೆ ಜನರಿಗೆ ತಿಳಿ ಹೇಳುವ ಬದಲು ಮೌಢ್ಯ ಭರಿತ ಪುರಾಣಗಳನ್ನು ಜೋಡಿಸುವ ಅಗತ್ಯವಿದೆಯೇ? ನೇರವಾಗಿ ಗಿಡದ ಔಷಧೀಯ ಗುಣದ ಬಗ್ಗೆ ಹೇಳಿದರೆ ಅದು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನಿಲ್ಲುವುದಿಲ್ಲ ಎಂಬ ಕಾರಣಕ್ಕೆ ಹಿಂದಿನ ಕಾಲದಲ್ಲಿ ಪೌರಾಣಿಕ ಕಥೆಯ ಲೇಪನ ಕೊಟ್ಟಿರಬಹುದು. ಆದರೆ ಈ ಆಧುನಿಕ ಕಾಲದಲ್ಲಿ ಅದರ ಅವಶ್ಯಕತೆ ಇಲ್ಲ. ಋತುಮತಿಯಾದ ಮಹಿಳೆಗೆ ನಿಜವಾಗಿ ಆ ಸಮಯದಲ್ಲಿ ತುಳಸಿಯ ಗಾಳಿ ಮತ್ತು ಅದರ ಎಲೆಗಳ ಸೇವನೆ ಅತಿ ಅಗತ್ಯ. ಆ ಸಮಯದಲ್ಲಿ ಅವಳ ರಕ್ತಹೀನತೆ ನಿವಾರಿಸಲು ಬೇಕಾಗುವ ಅನೇಕ ವಿಟಮಿನ್ ಮತ್ತು ಖನಿಜ ತುಳಸಿಯಿಂದ ಸಿಗುತ್ತದೆ. ವಿಪರ್ಯಾಸವೆಂದರೆ ಋತುಮತಿಯಾದ ಮಹಿಳೆ ತುಳಸಿಯ ಎಲೆಯನ್ನು ಮುಟ್ಟಬಾರದು ಗಿಡದ ಹತ್ತಿರವೂ ಹೋಗಬಾರದು ಎಂಬ ಮೂಢ ನಂಬಿಕೆಯನ್ನು ವೈದಿಕರು ಹುಟ್ಟು ಹಾಕಿದ್ದಾರೆ. ಮನೆಯಲ್ಲಿ ಜನನ-ಮರಣದ ಸೂತಕವಿದ್ದರೂ ಆ ಮನೆಯವರು ತುಳಸಿ ಗಿಡವನ್ನು ಮುಟ್ಟಬಾರದು ನೀರು ಹಾಕಬಾರದು ಎಂಬ ಮೌಢ್ಯವನ್ನೂ ಯಾರೋ ಶತಮೂರ್ಖರು ಹುಟ್ಟು ಹಾಕಿದ್ದಾರೆ. ಬೇಸಿಗೆಯಲ್ಲಿ ಸೂತಕದ ಹದಿಮೂರು ದಿನ ನೀರಿಲ್ಲದಿದ್ದರೆ ಗಿಡ ಬದುಕುವುದೇ?&nbsp;&nbsp;</p>



<figure class="wp-block-image size-full"><img fetchpriority="high" decoding="async" width="600" height="338" src="https://peepalmedia.com/wp-content/uploads/2022/11/IMG-20221105-WA0033.jpg" alt="" class="wp-image-14345" srcset="https://peepalmedia.com/wp-content/uploads/2022/11/IMG-20221105-WA0033.jpg 600w, https://peepalmedia.com/wp-content/uploads/2022/11/IMG-20221105-WA0033-300x169.jpg 300w, https://peepalmedia.com/wp-content/uploads/2022/11/IMG-20221105-WA0033-150x85.jpg 150w" sizes="(max-width: 600px) 100vw, 600px" /></figure>



<p style="font-size:20px"><strong>ತುಳಸಿಗೆ ಮಾಂಸಾಹಾರದ ಗೊಬ್ಬರ ಹಾಕಬಾರದೇ?</strong></p>



<p style="font-size:20px">ತುಳಸಿಯೂ ಸಹಾ ಒಂದು ಸಸ್ಯ. ಹಾಗಾಗಿ ಇತರ ಸಸ್ಯಗಳಂತೆ ಅದಕ್ಕೂ ಗೊಬ್ಬರ ಮತ್ತು ಸೂರ್ಯ ರಶ್ಮಿ ಬೇಕು.&nbsp; ಆದರೆ ನಗರ ಪ್ರದೇಶದ ಫ್ಲಾಟುಗಳಲ್ಲಿ ವಾಸಿಸುವವರು ಬಾಲ್ಕನಿಯಲ್ಲಿ ತುಳಸಿ ಗಿಡ ನೆಡುತ್ತಾರೆ. ಆದರೆ ಅದಕ್ಕೆ ನೀರು ಬಿಟ್ಟು ಬೇರೆ ಏನೂ ಹಾಕುವುದಿಲ್ಲ. ಹಾಗಾಗಿ ನಗರದ ಫ್ಲಾಟುಗಳ ತುಳಸಿ ಗಿಡ ಯಾವಾಗಲೂ ಸೊರಗಿಕೊಂಡೇ ಇರುತ್ತದೆ. ಯಾವುದೇ ಸಸ್ಯಕ್ಕೆ ದೈವತ್ವ ಆರೋಪಿಸಿದರೂ ಅದಕ್ಕೆ ಗೊಬ್ಬರ ಹಾಗೂ ಸೂರ್ಯನ ಬೆಳಕು ಬೇಕೆಂಬ ಸಾಮಾನ್ಯ ಜ್ಞಾನ ಅನೇಕರಿಗಿಲ್ಲ. ಗೊಬ್ಬರ ಹಾಕಿದರೂ ತರಕಾರಿ ತ್ಯಾಜ್ಯದ ಗೊಬ್ಬರ ಮಾತ್ರ ಹಾಕಬೇಕು ಮೀನು-ಕೋಳಿಯ ತ್ಯಾಜ್ಯದ ಗೊಬ್ಬರ ಹಾಕಬಾರದು ಎಂಬ ಮಡಿವಂತ ಮೂಢನಂಬಿಕೆ ಕೆಲವರು ಹೊತ್ತಿದ್ದಾರೆ. ಪುರಾಣ ಕಥೆಯಂತೆ ತುಳಸಿ ಮತ್ತು ವೃಂದಾ ಇಬ್ಬರೂ ರಾಕ್ಷಸ ಪುತ್ರಿಯರು ಹಾಗೂ ರಾಕ್ಷಸರದೇ ಪತಿವ್ರತಾ ಪತ್ನಿಯರು. ಹಾಗಾಗಿ ಅವರು ಮಾಂಸಾಹಾರ ಸೇವಿಸಿರಲೇ ಬೇಕು. ಹಾಗಿರುವಾಗ ತುಲಸಿ- ವೃಂದಾ ಇಬ್ಬರೂ ಗಿಡವಾಗಿ ಹುಟ್ಟಿರುವಾಗ ಅವರಿಗೆ ಮಾಂಸಾಹಾರದ ಗೊಬ್ಬರ ಹಾಕಬಾರದು ಎಂಬ ನಿಯಮವೇ ತರ್ಕವಿಹೀನ.</p>



<p style="font-size:20px"><strong>ತುಳಸಿಯ ವಿಷಯದಲ್ಲಿ ಅನೇಕ ಗೊಂದಲಗಳಿವೆ</strong></p>



<p style="font-size:20px">ತುಳಸಿ ಮತ್ತು ವೃಂದ ಇಬ್ಬರೂ ಒಂದೆಯೇ ಅಥವಾ ಬೇರೆ ಬೇರೆ ವ್ಯಕ್ತಿಗಳೇ ಎಂಬ ಗೊಂದಲವಿದೆ. ಶಿವ ಪುರಾಣದ ಪ್ರಕಾರ ಶಿವನ ಕೋಪಾಗ್ನಿ ಸಮುದ್ರದಲ್ಲಿ ಬಿದ್ದು ಜಲಂಧರ ರಾಕ್ಷಸ ಹುಟ್ಟುತ್ತಾನೆ. ಅವನೇ ಮುಂದೆ ಪತಿವ್ರತೆ ವೃಂದಾಳನ್ನು ಮದುವೆಯಾಗಿ ಅವಳ ಪಾತಿವ್ರತ್ಯದ ಕವಚದಿಂದ ಬಲಿಷ್ಟನಾಗುತ್ತಾನೆ. ಆದರೆ ವಿಷ್ಣು ಭಾಗವತದ ಪ್ರಕಾರ ಕೃಷ್ಣನ ಗೆಳೆಯ ಸುದಾಮನೇ ರಾಧೆಯ ಶಾಪದಿಂದ ಇನ್ನೊಂದು ಜನ್ಮದಲ್ಲಿ ಶಂಕಚೂಡ ಎಂಬ ರಾಕ್ಷಸನಾಗಿ ಹುಟ್ಟಿ ಪತಿವ್ರತೆ ತುಳಸಿಯನ್ನು ಮದುವೆಯಾಗಿ ಬಲಿಷ್ಟನಾಗುತ್ತಾನೆ. ಆದರೆ ಎರಡೂ ಕಥೆಯಲ್ಲಿ ವಿಷ್ಣುವೇ ಅಸುರಿ ವೃಂದಾ ಹಾಗೂ ತುಳಸಿಯ ಶೀಲವನ್ನು ಮೋಸದಿಂದ ಕೆಡಿಸುತ್ತಾನೆ ಮತ್ತು ಶಿವನು ಅವರಿಬ್ಬರ ರಾಕ್ಷಸ ಗಂಡಂದಿರನ್ನೂ ಕೊಲ್ಲುತ್ತಾನೆ. ಹಾಗಾದರೆ ಸರಿಯಾದ ಕಥೆ ಯಾವುದು? ಎರಡೂ ಕಥೆಯಲ್ಲಿ ವೃಂದಾ ಮತ್ತು ತುಳಸಿ ಇಬ್ಬರೂ ಲಕ್ಷ್ಮೀದೇವಿಯ ಅಂಶದಿಂದ ಹುಟ್ಟಿದವರು.&nbsp; ಹಾಗಾಗಿ ವಿಷ್ಣುವಿನಿಂದ ಕೆಡಿಸಲ್ಪಟ್ಟಿದ್ದರಲ್ಲಿ ತಪ್ಪಿಲ್ಲ ಎಂಬ ಕುತರ್ಕವಿದೆ. ಹಾಗಾದರೆ ವಿಷ್ಣುವಿನ ಪತ್ನಿ ಲಕ್ಷ್ಮೀದೇವಿಯೇ ತುಲಸಿ-ವೃಂದಾ ಎಂಬ ಅಸುರ ರೂಪದಲ್ಲಿ ಬಂದು ಎರಡೆರಡು ರಾಕ್ಷಸರೊಂದಿಗೆ ಸಂಸಾರ ನಡೆಸಿದ್ದರಿಂದ ಲಕ್ಷ್ಮೀದೇವಿಯ ಶೀಲದ ಪಾವಿತ್ರ್ಯ ನಷ್ಟವಾದಂತೆ ಆಯಿತಲ್ಲವೇ?</p>



<p style="font-size:20px"><strong>ಗಣಪತಿಯ ಶಾಪ-ಕಮ್-ವರ</strong></p>



<p style="font-size:20px">ಇನ್ನೊಂದು ಪುರಾಣ ಕಥೆಯ ಪ್ರಕಾರ ಗಣಪತಿ ದೇವರಿಗೆ ತುಳಸಿ ದಳ ಈಗಲೂ ಅರ್ಪಿಸದೇ ಇರುವುದಕ್ಕೆ ಕಾರಣ ರಾಕ್ಷಸಿಯಾಗಿದ್ದ ತುಳಸಿಯು ಗಣಪತಿಯನ್ನು ಮೋಹಿಸಿ ಮದುವೆಯಾಗುವಂತೆ ಪೀಡಿಸಿ ಅವನ ತಪಸ್ಸು ಭಂಗ ಮಾಡುತ್ತಾಳೆ. ಅದರಿಂದ ಕುಪಿತನಾದ ಗಣಪತಿ ಅವಳು ಸಸ್ಯವಾಗಿ ಹೋಗಲಿ ಎಂದು ಶಪಿಸುತ್ತಾನೆ. ಅವಳು ಕ್ಷಮೆ ಕೇಳಿದ ನಂತರ ನನ್ನ ಹೊರತು ಎಲ್ಲಾ ದೇವರ ಪೂಜೆಗೆ ತುಳಸಿ ಅರ್ಹವಾಗಲಿ ಎಂದು ಗಣಪತಿ ಶಾಪ-ಕಮ್-ವರ ಕೊಡುತ್ತಾನೆ. ಹಾಗಾಗಿ ಗಣಪತಿ ಪೂಜೆಗೆ ತುಳಸಿ ದಳ ನಿಷಿದ್ಧವಂತೆ.&nbsp; &nbsp;&nbsp;</p>



<figure class="wp-block-image size-full"><img decoding="async" width="600" height="450" src="https://peepalmedia.com/wp-content/uploads/2022/11/IMG-20221105-WA0034.jpg" alt="" class="wp-image-14346" srcset="https://peepalmedia.com/wp-content/uploads/2022/11/IMG-20221105-WA0034.jpg 600w, https://peepalmedia.com/wp-content/uploads/2022/11/IMG-20221105-WA0034-300x225.jpg 300w, https://peepalmedia.com/wp-content/uploads/2022/11/IMG-20221105-WA0034-150x113.jpg 150w" sizes="(max-width: 600px) 100vw, 600px" /></figure>



<p style="font-size:20px"><strong>ಶಿವಪುರಾಣದ ಪ್ರಕಾರ&#8230;</strong></p>



<p style="font-size:20px">ಅಸುರ ಜಲಂಧರ ಸತ್ತ ಮೇಲೆ ಅವನ ಹೆಂಡತಿ ವೃಂದಾ ಸತಿಸಹಗಮನ ಮಾಡಿ ಸಾಯುತ್ತಾಳೆ ಹಾಗೂ ಅವಳ ಚಿತೆಯ ಬೂದಿಯಲ್ಲಿ ಪಾರ್ವತಿ, ಸರಸ್ವತಿ, ಲಕ್ಷ್ಮಿಯರು ತುಳಸಿ, ನೆಲ್ಲಿಕಾಯಿ ಮತ್ತು ಮಧುಮಾಲತಿ ಗಿಡಗಳ ಬೀಜ ನೆಡುತ್ತಾರೆ. ಅದಕ್ಕಾಗಿ ಈ ಮೂರು ಗಿಡಗಳನ್ನು ಈಗಲೂ ಒಟ್ಟಾಗಿ ಪೂಜಿಸಲಾಗುತ್ತದೆ ಮತ್ತು ಇವು ಮೂರೂ ಅಪಾರ ಔಷಧಿ ಗುಣ ಹೊಂದಿವೆಯಂತೆ. ಇದರ ಅರ್ಥ ವೃಂದಾ ಸಾಯುವುದಕ್ಕೆ ಮೊದಲೇ ತುಳಸಿ ಬೀಜ ಇತ್ತು ವೃಂದಾಳೇ ತುಳಸಿ ಗಿಡವಾಗಿ ಜನಿಸಿದ್ದಲ್ಲ ಎಂದಂತಾಯಿತು.</p>



<p style="font-size:20px"><strong>ಭಾಗವತ ಪುರಾಣದ ಪ್ರಕಾರ&#8230;</strong></p>



<p style="font-size:20px">ಶಂಕಚೂಡನ ಚರಿತ್ರೆಯಲ್ಲಿ- ತುಳಸಿ ಸತ್ತ ನಂತರ ಗಂಡಕಿ ನದಿಯ ರೂಪದಲ್ಲಿ ಹುಟ್ಟುತ್ತಾಳೆ ಮತ್ತು ಕೇವಲ ಅವಳ ತಲೆಕೂದಲು ಗಂಡಕಿ ದಡದಲ್ಲಿ ತುಳಸಿ ಗಿಡವಾಗಿ ಹುಟ್ಟುತ್ತದೆ. ಹಾಗಾದರೆ ನಾವು ಈಗ ಪೂಜಿಸುವ ತುಳಸಿ ಗಿಡ ಕೇವಲ ತುಳಸಿದೇವಿಯ ಕೂದಲೇ ಅಥವಾ ಇಡಿ ಶರೀರವೇ ಎಂಬ ಗೊಂದಲವಿದೆ.&nbsp;</p>



<p style="font-size:20px"><strong>ಸಾಲಿಗ್ರಾಮ ನಿಜವಾಗಿ ಕಲ್ಲು ಅಲ್ಲ!</strong><strong>&nbsp;</strong><strong></strong></p>



<p style="font-size:20px">ಪತಿವ್ರತೆ ತುಳಸಿಯ ಶಾಪದಿಂದ ವಿಷ್ಣು ಗಂಡಕಿ ನದಿಯಲ್ಲಿ ಸಾಲಿಗ್ರಾಮ ಕಲ್ಲಾಗಿ ಹುಟ್ಟುತ್ತಾನೆ. ಅದಕ್ಕಾಗಿ ಈಗಲೂ ವೈಷ್ಣವರು ಸಾಲಿಗ್ರಾಮವನ್ನು ತಮ್ಮ ಮನೆಯಲ್ಲಿ ಪೂಜಿಸುತ್ತಾರೆ, (ಕರಾವಳಿಯ ದೇವಸ್ಥಾನದಲ್ಲಿಯ ಮಾಧ್ವ ಅರ್ಚಕರು ಯಾವಾಗಲೂ ತಮ್ಮ ಸೊಂಟದಲ್ಲಿ ಕಟ್ಟಿಕೊಂಡಿರುವ ಸಾಲಿಗ್ರಾಮವನ್ನು ಶಿವ ದುರ್ಗಾ ದೇವಸ್ಥಾನದಲ್ಲೂ ಗುಟ್ಟಾಗಿ ಪೂಜಿಸಿ ದಿನಾಲೂ ಶಿವ-ದುರ್ಗೆಯರನ್ನು ಅವಮಾನಿಸುತ್ತಾರೆ). ಆದರೆ ಈ ಸಾಲಿಗ್ರಾಮ ನಿಜವಾಗಿ ಕಲ್ಲು ಅಲ್ಲ!&nbsp; ಅದು ಬಸವನ ಹುಳದ ಜಾತಿಯ ಒಂದು ಹುಳದ ದೇಹದ ಪಳೆಯುಳಿಕೆ!&nbsp; ಲಕ್ಷಾಂತರ&nbsp; ವರ್ಷಗಳ ಹಿಂದೆ ಈ ಹುಳುಗಳು ಗಂಡಕಿ ನದಿಯ ಭಾಗದಲ್ಲಿ ಮಾತ್ರ ವಾಸಿಸುತ್ತಿದ್ದು ಆಗ ಸತ್ತ ಈ ಹುಳುಗಳ ದೇಹ ನದಿಯ ತಳ ಸೇರಿ ಭೂಮಿಯ ಒತ್ತಡ ಹಾಗೂ ಶಾಖದಿಂದ ಕಲ್ಲಿನಂತಾದವು. ಹಾಗಾಗಿ ಈಗ ವೈಷ್ಣವರು&nbsp; ಪೂಜಿಸುತ್ತಿರುವ ಸಾಲಿಗ್ರಾಮ ಒಂದು ಹುಳದ ಶವ ಅನ್ನಬಹುದು. ಶಿವಪುರಾಣ ಮತ್ತು ಭಾಗವತ ಬರೆದು ಹೆಚ್ಚೆಂದರೆ ಮೂರು ಸಾವಿರ ವರ್ಷಗಳಾಗಿವೆ.</p>



<p style="font-size:20px">ಇದರ ಅರ್ಥ ವೃಂದಾ-ತುಳಸಿಯ ಕಥೆ ಅಥವಾ ಗಂಡಕಿ ನದಿ-ಸಾಲಿಗ್ರಾಮ ಕಲ್ಲಿನ ಕತೆಯೂ ಕೇವಲ ಮೂರು ಸಾವಿರ ವರ್ಷ ಹಳೆಯದು ಮಾತ್ರ. ಆದರೆ ನಿಜದಲ್ಲಿ ಗಂಡಕಿ ನದಿ ಮತ್ತು ಸಾಲಿಗ್ರಾಮ ಹುಳುಗಳು ಕೋಟ್ಯಾಂತರ ವರ್ಷಗಳ ಹಿಂದೆಯೇ ಡೈನೋಸಾರ್ ಯುಗದಲ್ಲಿಯೇ ಇದ್ದವು. ತುಳಸಿ-ನೆಲ್ಲಿಕಾಯಿ-ಮಧುಮಾಲತಿ ಗಿಡಗಳು ಲಕ್ಷಾಂತರ ವರ್ಷ ಹಿಂದೆಯೇ ಇದ್ದವು. ಆಗ ಮನುಷ್ಯ ಜಾತಿಯೇ ಭೂಮಿ ಮೇಲೆ ಇರಲಿಲ್ಲ. ಅಂದರೆ ಈ ಗೊಂದಲಮಯ ತುಳಸಿ ಪುರಾಣಕ್ಕೆ ವೈಜ್ಞಾನಿಕ ಆಧಾರವೇ ಇಲ್ಲ ಅನ್ನಬಹುದು. ಹಾಗಾಗಿ ಕಹಿಬೇವು, ಅಶ್ವಥ ನೆಲ್ಲಿಕಾಯಿ, ಮಧುಮಾಲತಿ ಗಿಡದಂತೆ ತುಳಸಿಯೂ ಒಂದು ಅದ್ಭುತ ಔಷದಿ ಸಸ್ಯ ಹಾಗೂ ಪ್ರಾಕೃತಿಕ ಕೀಟನಾಶಕ ಎಂದು ಪರಿಗಣಿಸಬೇಕು. ಅದಕ್ಕಾಗಿ ತುಳಸಿಯನ್ನು ಕುರುಡಾಗಿ ಪೂಜಿಸುವ ಬದಲು ಅದರ ಗಾಳಿ ಮತ್ತು ಎಲೆ ಸೇವಿಸಬೇಕು. ದೇವಸ್ಥಾನದಲ್ಲಿ ಅರ್ಚಕರು ಕೊಡುವ ತುಳಸಿ ದಳವನ್ನು ಕಿವಿಗೆ ಇಟ್ಟುಕೊಂಡು ಹಾಳು ಮಾಡುವ ಬದಲು ಅದನ್ನು ತೊಳೆದು ತಿಂದರೆ ಆರೋಗ್ಯಕ್ಕೆ ಉತ್ತಮ.&nbsp;</p>



<p style="font-size:20px">ವೈದಿಕರಿದ್ದಲ್ಲಿ ಲೈಂಗಿಕ ರಸಿಕತೆ ಇರಲೇಬೇಕು ತಾನೇ. ಅದರಂತೆ ಶೂದ್ರರೆಲ್ಲ ಇದಕ್ಕೆ ‘ತುಳಸಿ ಪೂಜೆ’ ಎಂದು ಕರೆದರೆ ವೈದಿಕರೆಲ್ಲಾ ಅದಕ್ಕೆ ‘ತುಳಸಿ-ವಿವಾಹ’ ಎಂದು ಕರೆದು ತುಳಸಿ ಗಿಡ ಮತ್ತು ಸಾಲಿಗ್ರಾಮ ಕಲ್ಲಿಗೆ ಪ್ರತಿವರ್ಷ ಮದುವೆ ಶಾಸ್ತ್ರ ಮಾಡಿ ತಮ್ಮ ರಸಿಕತನ ತೋರುತ್ತಾರೆ. ಎಷ್ಟಾದರೂ ವೈದಿಕ ಪುರಾಣಗಳ ಕೇಂದ್ರ ಬಿಂದುವೇ ರಸಿಕ ಲೀಲೆ ತಾನೇ !&nbsp; &nbsp;</p>



<p style="font-size:20px"><a><strong>ಪ್ರವೀಣ್ ಎಸ್ ಶೆಟ್ಟಿ</strong></a></p>



<p style="font-size:20px"><strong>ಚಿಂತಕರು</strong></p>



<figure class="wp-block-image size-large is-resized"><img decoding="async" src="https://peepalmedia.com/wp-content/uploads/2022/11/IMG-20221105-WA0035-816x1024.jpg" alt="" class="wp-image-14343" width="172" height="211"/></figure>



<p>(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲಾ ಅಭಿಪ್ರಾಯಗಳು ಲೇಖಕರದ್ದೇ ಆಗಿರುತ್ತದೆ)</p>
]]></content:encoded>
					
		
		
			</item>
		<item>
		<title>ಮೋಹನನ ರಂಗಿನಾಟವೂ ಚಂದ್ರಹಾಸನ ಮೋಜಿನಾಟವೂ&#8230;</title>
		<link>https://peepalmedia.com/mohanana-ranginatavo-chandrahasana-mojinatavo/</link>
		
		<dc:creator><![CDATA[Vani Satish]]></dc:creator>
		<pubDate>Thu, 27 Oct 2022 11:04:27 +0000</pubDate>
				<category><![CDATA[ಅಂಕಣ]]></category>
		<category><![CDATA[ಹೆಣ್ಣೋಟ]]></category>
		<category><![CDATA[article]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[special]]></category>
		<category><![CDATA[tanti melan hejje]]></category>
		<category><![CDATA[tanti melina nadige]]></category>
		<category><![CDATA[Vani Sathish]]></category>
		<category><![CDATA[Vani Sathish Series]]></category>
		<category><![CDATA[writing]]></category>
		<guid isPermaLink="false">https://peepalmedia.com/?p=13115</guid>

					<description><![CDATA[ಈ ವರೆಗೆ&#8230; ಬಡ ಕುಟುಂಬದ ಗಂಗೆಯನ್ನು ನೋಡಲು ಮೋಹನ ಬರುತ್ತಾನೆ. ಹುಡುಗಿ ಒಪ್ಪಿಗೆಯಾಗಿ ಮದುವೆಗೆ ಅವಸರಿಸುತ್ತಾನೆ. ಅವನ ಮನೆ, ಕುಟುಂಬ ನೋಡದೆ ಮದುವೆ ಸಾಧ್ಯವಿಲ್ಲವೆಂದು ಗಂಗೆಯ ಅಪ್ಪ ಖಡಾ ಖಂಡಿತವಾಗಿ ಹೇಳಿದಾಗ ಮೋಹನ ಆಕೆಯ ಕುಡುಕ ಅಣ್ಣ ಚಂದ್ರಹಾಸನನ್ನು ಬುಟ್ಟಿಗೆ ಹಾಕಿ ಕೊಳ್ಳುತ್ತಾನೆ. ಮುಂದೇನಾಯ್ತು? ಓದಿ&#8230; ವಾಣಿ ಸತೀಶ್‌ ಅವರ ತಂತಿ ಮೇಲಣ ಹೆಜ್ಜೆ -೨ ವಾರ ಕಳೆದು ಇಂದು ಗಂಗೆಯ ಮನೆ ಹೊಕ್ಕಿದ್ದ ಮೋಹನ ಮುಖತಃ ಅವಳನ್ನು ಕಂಡು ಮುದಗೊಂಡ. ಅವಳ ಅಪ್ಪನ&#160; ಸಂದರ್ಶನವನ್ನು ಆತಂಕದಿಂದಲೇ&#160; [&#8230;]]]></description>
										<content:encoded><![CDATA[
<p><strong>ಈ ವರೆಗೆ&#8230;</strong></p>



<p><strong>ಬಡ ಕುಟುಂಬದ ಗಂಗೆಯನ್ನು ನೋಡಲು ಮೋಹನ ಬರುತ್ತಾನೆ. ಹುಡುಗಿ ಒಪ್ಪಿಗೆಯಾಗಿ ಮದುವೆಗೆ ಅವಸರಿಸುತ್ತಾನೆ. ಅವನ ಮನೆ, ಕುಟುಂಬ ನೋಡದೆ ಮದುವೆ ಸಾಧ್ಯವಿಲ್ಲವೆಂದು ಗಂಗೆಯ ಅಪ್ಪ ಖಡಾ ಖಂಡಿತವಾಗಿ ಹೇಳಿದಾಗ ಮೋಹನ ಆಕೆಯ ಕುಡುಕ ಅಣ್ಣ ಚಂದ್ರಹಾಸನನ್ನು ಬುಟ್ಟಿಗೆ ಹಾಕಿ ಕೊಳ್ಳುತ್ತಾನೆ. ಮುಂದೇನಾಯ್ತು? ಓದಿ&#8230; ವಾಣಿ ಸತೀಶ್‌ ಅವರ ತಂತಿ ಮೇಲಣ ಹೆಜ್ಜೆ -೨</strong></p>



<p>ವಾರ ಕಳೆದು ಇಂದು ಗಂಗೆಯ ಮನೆ ಹೊಕ್ಕಿದ್ದ ಮೋಹನ ಮುಖತಃ ಅವಳನ್ನು ಕಂಡು ಮುದಗೊಂಡ. ಅವಳ ಅಪ್ಪನ&nbsp; ಸಂದರ್ಶನವನ್ನು ಆತಂಕದಿಂದಲೇ&nbsp; ಎದುರಿಸಿ, “ಬನ್ನಿ ಬಾವ ಹೊರಗೆ ಸುತ್ತಾಡಿಕೊಂಡು ಬರೋಣ” ಎಂದು ಚಂದ್ರಹಾಸನನ್ನು ಕರೆದುಕೊಂಡು&nbsp; ಹೊರಬಂದ. ಈ ಚಂದ್ರಹಾಸನನ್ನು ಆಡಿಸುವ, ಬೀಳಿಸುವ ಮಟ್ಟು ಕಂಡುಕೊಂಡಿದ್ದ ಮೋಹನ ಅವನನ್ನು ಸೀದಾ ನಾರಿಪುರದ ಸರ್ಕಲ್ ನಲ್ಲಿದ್ದ ಮಿಲ್ಟ್ರಿ ಹೋಟೆಲಿಗೆ ಕರೆದು ಕೊಂಡು ಹೋದ. ಹೆಂಡ ಬಾಡಿನ ಸಮಾರಾಧನೆ ಮಾಡಿಸಿ ತನ್ನ ಅಳಲು ತೋಡಿಕೊಂಡ. “ನಮ್ಮ ಚಿಕ್ಕಮ್ಮ ಬಹಳ ಘಾಟಿ ಬಾವ. ನಾನು ಅವಳ ಅಣ್ಣನ ಮಗಳನ್ನು ಮದುವೆ ಆಗಬೇಕು ಅಂತ ಹಠ ಹಿಡಿದು ಕೂತಿದ್ದಾಳೆ. ಮೂರ್ಛೆರೋಗ ಬರುವ ಆ ಹುಡುಗೀನ ಹೇಗೆ ಮದುವೆ ಮಾಡ್ಕೊಳ್ಳಿ ಹೇಳಿ. ಮನೆಲಿ ನನಗೆ ನೆಮ್ಮದಿ ಅನ್ನೋದೇ ಇಲ್ಲ. ಹಾಗಾಗಿ ಹೆಚ್ಚಾಗಿ ಪೇಟೆಯಲ್ಲಿ ಗೆಳೆಯರ ರೂಮಿನಲ್ಲಿ ಇರ್ತಿನಿ. ಅಂತದ್ರಲ್ಲಿ ಬೇರೆ ಹುಡುಗಿನ ಮದುವೆ ಮಾಡ್ಕೊಂಡು ಈಗ ಮನೆಗೆ ಕರೆದುಕೊಂಡು ಬರ್ತಿನಿ ಅಂದ್ರೆ ಖಂಡಿತಾ ಅವಳು ಒಪ್ಪೋದಿಲ್ಲ. ನೀವೆಲ್ಲಾ ಹೀಗೆ ಮದುವೆ ವಿಷಯ ಮಾತಾಡೋಕೆ ಮನೆಗೆ ಬರ್ತಿದ್ದೀರಿ ಅಂದ್ರೆ ದೊಡ್ಡ ರಾದ್ಧಾಂತ ಮಾಡಿ ಬೀದಿಯಲ್ಲಿ ನಿಂತು ನಮ್ಮೆಲ್ಲರ ಮರ್ಯಾದಿನೇ ಹರಾಜಾಕಿ ಬಿಡ್ತಾಳೆ. ಪರಿಸ್ಥಿತಿ ಹೀಗಿರುವಾಗ, ನನಗೆ ಏನ್ಮಾಡೋದು ಅಂತ್ಲೆ ತೋಚುತ್ತಿಲ್ಲ ಅಂದ. ಮೋಹನನ ಬಗ್ಗೆ ಕನಿಕರಗೊಂಡ ಚಂದ್ರಹಾಸ, “ನೀವು ಏನೂ ಯೋಚನೆ ಮಾಡಬೇಡಿ ಬಾವ. ನಮ್ಮ ಅವ್ವ ಅಪ್ಪ ಬರ್ದಂಗೆ ನೋಡ್ಕೊಳ್ಳೋದು ನನ್ನ ಜವಾಬ್ದಾರಿ. ಒಬ್ಬ ತಮ್ಮನ್ನ ಮಾತ್ರ ನನ್ನ ಜೊತೆ ಕರ್ಕೊಂಡು ಬರೋಕೆ ವ್ಯವಸ್ಥೆ ಮಾಡ್ಕೋತಿನಿ. ನಿಮ್ಮ ಚಿಕ್ಕಮ್ಮನ್ನ ಹೆಂಗ್ ಸಂಭಾಳುಸ್ಬೇಕು ಅಂತ ಒಂಚೂರು ತಲೆ ಓಡ್ಸಿ” ಎಂದು ಧೈರ್ಯ ತುಂಬಿ ಕಳುಹಿಸಿದ.</p>



<p>ಗಂಡು ಮಕ್ಕಳು ಅನ್ನುವ ಅತಿಯಾದ ಮೋಹದಲ್ಲಿ ಕುರಾಡಾಗಿದ್ದ ಅವ್ವ, ದೇವರಂತ ಅಪ್ಪನಿಗೆ ಆ ಮನೆಯಲ್ಲಿ ಕವಡೆ ಕಿಮ್ಮತ್ತು ಸಿಗದಂತೆ ಮಾಡಿದ್ದಳು. ಇನ್ನು ಗಂಗೆಯೋ ಎಲ್ಲರ ಕಾಲಿನ ಚೆಂಡಾಗಿದ್ದಳು. ಅವಳು ಹಾಗಲ್ಲ ಹೀಗೆ ಎಂದಳೋ ಮುಗಿದೇ ಹೋಯಿತು. ಆರು ಜನ ಅಣ್ಣ ತಮ್ಮಂದಿರ ಕಾಲುಗಳು ಜಾಡಿಸಲು ಸದಾ ಸಿದ್ಧವಾಗಿಯೇ ಇರುತ್ತಿದ್ದವು. ಹಾಗಂತ ಗಂಗೆ ಏನು ಹೆದರಿ ಮುಲುಕುವ ಸ್ವಭಾವದವಳೇನಾಗಿರಲಿಲ್ಲ. ತನಗೆ ಸರಿ ಅನ್ನಿಸಿದ್ದನ್ನು ಅಣ್ಣಂದಿರೊಂದಿಗೆ ಗುದುಮುರಿ ಬಿದ್ದೋ, ಇಲ್ಲ ಕದ್ದು ಮುಚ್ಚಿಯೋ ಜಾಣತನದಿಂದ ಮಾಡಿಯೇ ತೀರುತ್ತಿದ್ದಳು. ಅವಳು ಕೂಡ ಅಣ್ಣಂದಿರ ಬೈಗುಳಕ್ಕೆ ಅವರ ಒರಟುತನಕ್ಕೆ ಜಡ್ಡು ಗಟ್ಟಿದವಳಂತಾಗಿದ್ದಳು. ಒಟ್ಟಿನಲ್ಲಿ ಆ ಮನೆಯಲ್ಲಿ ಗಂಡು ಮಕ್ಕಳ ಇರುವಿಕೆ ಅಂದರೆ ಆನೆ ನಡೆದದ್ದೇ ದಾರಿ ಎಂಬಂತಿತ್ತು. ಹೀಗಿರಲಾಗಿ ಚಂದ್ರಹಾಸನಿಗೆ, ಅಪ್ಪನನ್ನು, ಮೋಹನನ ಮನೆಗೆ ಹೋಗದಂತೆ ತಡೆಯುವುದೇನು ಕಷ್ಟದ ಕೆಲಸವಾಗಿರಲಿಲ್ಲ.</p>



<figure class="wp-block-image size-large"><img loading="lazy" decoding="async" width="1024" height="640" src="https://peepalmedia.com/wp-content/uploads/2022/10/ಬತ್ತದ-ಗದ್ದೆ-1024x640.jpg" alt="" class="wp-image-13123" srcset="https://peepalmedia.com/wp-content/uploads/2022/10/ಬತ್ತದ-ಗದ್ದೆ-1024x640.jpg 1024w, https://peepalmedia.com/wp-content/uploads/2022/10/ಬತ್ತದ-ಗದ್ದೆ-300x188.jpg 300w, https://peepalmedia.com/wp-content/uploads/2022/10/ಬತ್ತದ-ಗದ್ದೆ-768x480.jpg 768w, https://peepalmedia.com/wp-content/uploads/2022/10/ಬತ್ತದ-ಗದ್ದೆ-150x94.jpg 150w, https://peepalmedia.com/wp-content/uploads/2022/10/ಬತ್ತದ-ಗದ್ದೆ-696x435.jpg 696w, https://peepalmedia.com/wp-content/uploads/2022/10/ಬತ್ತದ-ಗದ್ದೆ-1068x668.jpg 1068w, https://peepalmedia.com/wp-content/uploads/2022/10/ಬತ್ತದ-ಗದ್ದೆ.jpg 1200w" sizes="auto, (max-width: 1024px) 100vw, 1024px" /></figure>



<p>ತಮ್ಮ ಗಿರಿಧರನನ್ನು  ಬೆನ್ನಿಗೆ ಹಾಕಿಕೊಂಡು, ಅರವತ್ತು ಮೈಲು ದೂರ ಇರುವ ಭೋಗನೂರಿಗೆ ಬಂದು ತಲುಪಿದ್ದ ಚಂದ್ರಹಾಸ. ಭೋಗನೂರಿನ ಬಸ್ ಸ್ಟಾಂಡಿನಲ್ಲಿ ಕಾಯುತ್ತಾ ಕುಳಿತಿದ್ದ ಮೋಹನ ಈ ಇಬ್ಬರು ಅಣ್ಣ-ತಮ್ಮಂದಿರನ್ನು ಕರೆದುಕೊಂಡು ಮನೆಗೆ ಹೊರಟ. ದಾರಿಯುದ್ದಕ್ಕೂ ತನ್ನ ಮನೆತನದ ಗುಣಗಾನ ನಡೆಸಿದ. ತನ್ನ ಬೆನ್ನಿಗೆ ಹುಟ್ಟಿದ ತಂಗಿ ಇಬ್ಬರು ತಮ್ಮಂದಿರ ಬಗ್ಗೆ ಬಹಳ ಪ್ರೀತಿಯ ಮಾತುಗಳನ್ನಾಡಿದ. ಮನೆ ಸಮೀಪಿಸುತ್ತಿದ್ದಂತೆ ಅನತಿ ದೂರದಲ್ಲೇ ಮನೆಯತ್ತ ಕೈ ತೋರಿಸಿ “ಅದೇ ನಮ್ಮ ಮನೆ” ಎಂದು ಹೇಳಿದ. ಹರಕಲು ಮುರುಕಲಾಗಿದ್ದ ಆ ದೊಡ್ಡ ತೊಟ್ಟಿ ಮನೆಯನ್ನು ಕಂಡು ಅಣ್ಣತಮ್ಮಂದಿರ ಮುಖ ಕಳೆಗುಂದಿತು. ಇದನ್ನು ಊಹಿಸಿದ್ದ ಮೋಹನ ಕೂಡಲೇ “ಗಾಬ್ರಿಯಾಗಬೇಡಿ ಇನ್ನೇನು ಜಮೀನಿನಲ್ಲಿ ಹೊಸ ಮನೆಗೆ ಕೈ ಹಾಕ್ಬೇಕು ಅಂತಿದಿವಿ. ಇದು ಟೆಂಪ್ರವರಿ ಅಷ್ಟೇ” ಬನ್ನಿ ಕಾಫಿ ಕುಡಿರಿ, ನಮ್ಮ ಜಮೀನು ತೋರಿಸಿಕೊಂಡು ಬರ್ತಿನಿ” ಎಂದು ಮನೆಯ ಒಳ ನಡೆದ. ತನ್ನ ಚಿಕ್ಕಮ್ಮನನ್ನು ಕರೆದು “ಇವರು ನನ್ನ ಕಾಲೇಜ್ ಫ್ರೆಂಡ್ಸ್” ಎಂದು ಪರಿಚಯಿಸಿ ಟೀ ಇಡಲು ಹೇಳಿದ. ಚಿಕ್ಕಮ್ಮನಿಗೆ ಮೊದಲೇ ಇವನು ತಾಕೀತು ಮಾಡಿದ್ದರಿಂದಾಗಿ ಏನೊಂದು ಮಾತಾಡದೆ ಗಂಟು ಮೂತಿಯಲ್ಲೊಮ್ಮೆ ಅವರನ್ನೆಲ್ಲ ಕೆಕ್ಕರಿಸಿ ನೋಡಿ “ಹೂಂ” ಎಂದು ಒಳ ನಡೆದಳು.</p>


<div class="wp-block-image">
<figure class="aligncenter size-full"><img loading="lazy" decoding="async" width="640" height="432" src="https://peepalmedia.com/wp-content/uploads/2022/10/ತೆಂಗು-೨.webp" alt="" class="wp-image-13121" srcset="https://peepalmedia.com/wp-content/uploads/2022/10/ತೆಂಗು-೨.webp 640w, https://peepalmedia.com/wp-content/uploads/2022/10/ತೆಂಗು-೨-300x203.webp 300w, https://peepalmedia.com/wp-content/uploads/2022/10/ತೆಂಗು-೨-150x101.webp 150w" sizes="auto, (max-width: 640px) 100vw, 640px" /></figure></div>


<p>ಟೀ ಸಮಾರಾಧನೆಯ ನಂತರ ತೋಟದ ದಾರಿ ಹಿಡಿದ ಬಾವ, ಬಾಮೈದುನರಿಗೆ ಮೋಹನ ದಾರಿ ಉದ್ದಕ್ಕೂ ತನ್ನ ತೋಟ, ಹೊಲ, ರಾಶಿ ರಾಶಿ ಒಟ್ಟಾಗುವ ಫಸಲುಗಳ ಬಗ್ಗೆ ಸವಿಸ್ತಾರವಾಗಿ ಹೇಳಿದ. ಸುತ್ತಿ ಬಳಸಿ ಒಂದು ವಿಶಾಲವಾದ ತೋಟದ ಬಳಿ ಬಂದು ನಿಂತ. ದೃಷ್ಟಿತಾಗಿತೋ ಎನ್ನುವಂತೆ ಮೈತುಂಬ ಎಳನೀರನ್ನು ಹೊತ್ತು ನಲಿಯುತ್ತಿದ್ದ ದೊಡ್ಡ ದೊಡ್ಡ ತೆಂಗಿನ ಮರಗಳ ನಡುವೆ ಅವರನ್ನು ಕೂರಿಸಿದ. ಮಾರು ದೂರದಲ್ಲಿ ನೆಲಕ್ಕೆ ಬಿದ್ದ ಕಾಯಿಗಳನ್ನು ಮಂಕರಿಗೆ ತುಂಬಿಸುತ್ತಿದ್ದ ಚಿನ್ನಪ್ಪನನ್ನು ಕರೆದು “ಇವತ್ತು ಎಷ್ಟು ಮಂಕ್ರಿ ತಳ್ಳು ಸಿಕ್ಕಿದ್ವೋ? ಎಲ್ಲನೂ ಎಲ್ಲಿ  ಒಟ್ಟ್ತಿದ್ದೀವಿ ಎಂದು ಕೇಳಿದ. ಚಿನ್ನಪ್ಪ ತಲೆ ಕೆರೆದುಕೊಂಡು ಹುಳ್ಳಗೆ ನಗುತ್ತಾ “ಈಗೊಂದು ಹತ್ತು ಮಂಕ್ರಿ  ಸಿಕ್ಕವೆ ಮೋನಣ್ಣ. ಎಲ್ಲಾನು ಶಿವಣ್ಣನ ಮನೆ ಫಸ್ಲು ಕೋಣೆಗೆ <a>ಒಟ್ಟ್ತಿದ್ದೀವಿ</a>” ಎಂದು ಹೇಳಿ ಕುಡ್ಲು ಹಿಡಿದು ಸರ ಸರನೆ ಮರ ಏರಿ ನಾಲ್ಕು ಎಳನೀರು ಕಿತ್ತು ಕೆಳ ಹಾಕಿದ. ಎಳನೀರು ಕುಡಿದು, ಚಿನ್ನಪ್ಪನ ಕಿಸೆಗೆ ಇಪ್ಪತ್ತು ರುಪಾಯಿ ತುರುಕಿ “ಇಲ್ಲೆ ಕೂತು ನಿಂತು ಕತೆ ಹಾಕ್ಬೇಡಿ.. ಬೇಗ ಕೆಲ್ಸ ಮುಗ್ಸಿ ನೀನು ಕೆಂಚನೂ ಮನೆ ಕಡೆಗ್ ಬನ್ನಿ” ಎಂದು ಹೇಳಿ ಚಂದ್ರಹಾಸ ಗಿರಿಧರರನ್ನು ಕರೆದುಕೊಂಡು ಅಲ್ಲೇ ಸುತ್ತಮುತ್ತ ಇದ್ದ ಗದ್ದೆಗಳೆಡೆಗೆ ನಡೆದ. ಬತ್ತದ ತೆನೆ ಹೊತ್ತು ನಳನಳಿಸುತ್ತಿದ್ದ ಗದ್ದೆಯನ್ನು ತೋರಿಸಿ “ಇದಿಷ್ಟು ನಮ್ಮ ಗದ್ದೆ. ಈಗ ಸದ್ಯಕ್ಕೆ ನಮ್ಮ ಚಿಕ್ಕಮ್ಮನೇ ಆಳು ಕಾಳು ಇಟ್ಕೊಂಡು ಇದನ್ನೆಲ್ಲ ನಿಭಾಯಿಸ್ತಿದ್ದಾಳೆ ಎಂದ. </p>


<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2022/10/ತೆಂಗು-೩.webp" alt="" class="wp-image-13122" width="614" height="459" srcset="https://peepalmedia.com/wp-content/uploads/2022/10/ತೆಂಗು-೩.webp 540w, https://peepalmedia.com/wp-content/uploads/2022/10/ತೆಂಗು-೩-300x224.webp 300w, https://peepalmedia.com/wp-content/uploads/2022/10/ತೆಂಗು-೩-150x112.webp 150w" sizes="auto, (max-width: 614px) 100vw, 614px" /></figure></div>


<p>ಇನ್ನೂ ನಾಲಿಗೆ ಮೇಲೆಯೇ ಕುಳಿತಿದ್ದ ಎಳನೀರಿನ ಸಿಹಿಯಾದ ರುಚಿ ಚಪ್ಪರಿಸುತ್ತಾ, ಕಿವಿಗೆ ಇಂಪಾಗಿ ಮೆತ್ತಿಕೊಂಡಿದ್ದ ಫಸಲು ರಾಶಿಗಳ ಲೆಕ್ಕಾಚಾರದಲ್ಲಿಯೇ ಕಳೆದು ಹೋಗಿದ್ದ ಚಂದ್ರಹಾಸ, ಎದೆಯುಬ್ಬಿಸಿ “ಸಾಕು ನಡಿರೀ ಬಾವ.. ಇದಕ್ಕಿಂತ ನನ್ನ ತಂಗಿಗೆ ಇನ್ನೇನ್ ಬೇಕು” ಎಂದು ಹೆಮ್ಮೆಯಿಂದ ಮೋಹನನ ಬೆನ್ನು ಚಪ್ಪರಿಸಿದ. ಆಗಲೇ ಮಧ್ಯಾಹ್ನವಾಗಿದ್ದರಿಂದ ಭೋಗನೂರಿನ ಹೋಟೆಲ್ನಲ್ಲಿ ಇಬ್ಬರಿಗೂ ಹೊಟ್ಟೆ ಬಿರಿಯುವಂತೆ ಊಟ ಹಾಕಿಸಿದ ಮೋಹನ, ನಿಧಾನವಾಗಿ ಮದುವೆಯ ಖರ್ಚು ವೆಚ್ಚದ ಮಾತು ಎತ್ತಿದ. “ನೋಡಿ ಬಾವ ನನಗೆ ಈ ಆಡಂಬರ ಗಿಡಂಬರ ಎಲ್ಲಾ ಇಷ್ಟ ಇಲ್ಲ. ಹಾಗಾಗಿ ಸಿಂಪಲ್ಲಾಗಿ ಯಾವುದಾದ್ರು ದೇವಸ್ಥಾನದಲ್ಲಿ  ಮದುವೆ ಮಾಡಿಕೊಟ್ರೆ ಸಾಕು. ಈಗ ನನ್ ಪರಿಸ್ಥಿತಿ ನಿಮಗೆ ಗೊತ್ತೇ ಇದೆ. ಎಲ್ಲಾ ವ್ಯವಹಾರನೂ ಚಿಕ್ಕಮ್ಮನೆ ಹಿಡ್ಕೊಂಡು ಕೂತಿರೋದ್ರಿಂದ, ಈಗ ಸದ್ಯಕ್ಕೆ ಮದುವೆಗೆ ಹಣ ಹೊಂದಿಸೋದು ನನಗೆ ಕಷ್ಟ ಆಗುತ್ತೆ. ಹಾಗಾಗಿ ನೀವೇ ಎಲ್ಲಾ ಖರ್ಚನ್ನು ಹಾಕಿ ಮಾಡಿದ್ರೆ ನಾನು ಪೂನದಲ್ಲಿ ಡ್ಯೂಟಿ ರಿಪೋರ್ಟ್ ಮಾಡ್ಕೊಂಡ್ ಕೂಡ್ಲೇ  ನಿಮಗೆ ಆ ದುಡ್ಡನ್ನೆಲ್ಲಾ ಕಳಿಸಿಬಿಡ್ತಿನಿ” ಎಂದು ಹೇಳಿ ಚಂದ್ರಹಾಸನ ಜೇಬಿಗೆ ಇನ್ನೂರು ರೂಪಾಯಿ ದುಡ್ಡನ್ನಿಟ್ಟ. ನೂರರ ಎರಡು ಭಾರೀ ಮೊತ್ತಕ್ಕೆ ಕಣ್ಣರಳಿಸಿದ ಚಂದ್ರಹಾಸ ಮನೆಯಲ್ಲಿ ಮಾತಾಡುವುದಾಗಿ ಹೇಳಿ ಮೋಹನನ ಕೈ ಕುಲುಕಿ ಅಲ್ಲಿಂದ ಬೀಳ್ಕೊಂಡ. (ಇಲ್ಲಿ ಬಳಸಿರುವ ಚಿತ್ರಗಳು ಸಾಂದರ್ಭಿಕ‌)</p>



<p class="has-text-align-center">(ಮುಂದುವರೆಯುವುದು)<br></p>



<p><strong>ವಾಣಿ ಸತೀಶ್</strong><br>ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.</p>
]]></content:encoded>
					
		
		
			</item>
		<item>
		<title>ಶಿಕ್ಷಕ ದಿನಾಚರಣೆ ತೆರೆದಿಟ್ಟ ಬಿಡಿಚಿತ್ರಗಳು</title>
		<link>https://peepalmedia.com/shishaka-dinaacharane-tereditta-bidichitragalu/</link>
		
		<dc:creator><![CDATA[Sudha Adukala]]></dc:creator>
		<pubDate>Mon, 05 Sep 2022 10:57:36 +0000</pubDate>
				<category><![CDATA[ವಿಶೇಷ]]></category>
		<category><![CDATA[article]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[special]]></category>
		<category><![CDATA[special story]]></category>
		<category><![CDATA[teachers day]]></category>
		<category><![CDATA[writing]]></category>
		<guid isPermaLink="false">https://peepalmedia.com/?p=3937</guid>

					<description><![CDATA[ಶಿಕ್ಷಕ/ಶಿಕ್ಷಕಿ ಅನ್ನುವುದು ಕೇವಲ ಮೂರಕ್ಷರಗಳ ಪದವಲ್ಲ. ಮಕ್ಕಳಲ್ಲಿ ಕಲ್ಪನೆ, ಭರವಸೆ, ಕಲಿಕೆಯ ಪ್ರೀತಿ, ಕನಸುಗಳನ್ನು ಹುಟ್ಟು ಹಾಕಿ ಅವುಗಳನ್ನು ಸಾಕಾರಗೊಳಿಸಲು, ಅವರಿಗೆ ವರ್ಣರಂಜಿತ ಪ್ರೀತಿಯ ಜಗತ್ತನ್ನು ಪರಿಚಯಿಸಲು, ಸದೃಢ ಸಮಾಜ ಮತ್ತು ದೇಶವನ್ನು ಕಟ್ಟಲು ಮಕ್ಕಳ ಬದುಕಿನ ಹಾದಿಗೆ ಮುನ್ನುಡಿ ಬರೆಯುವ ಪದ ಅದು. ಸ್ವತ: ಶಿಕ್ಷಕರಾಗಿ ಈ ಮೂರು ಪದಗಳಿಗೆ ಘನತೆ ತುಂಬಿ ಭಾರತೀಯ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ನೀಡಿದ, ಭಾರತ ಕಂಡ ಅಗ್ರಮಾನ್ಯ ಶಿಕ್ಷಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌. ಅವರ ಜನ್ಮ ದಿನವನ್ನು [&#8230;]]]></description>
										<content:encoded><![CDATA[
<blockquote class="wp-block-quote has-medium-font-size is-layout-flow wp-block-quote-is-layout-flow"><p><strong>ಶಿಕ್ಷಕ/ಶಿಕ್ಷಕಿ ಅನ್ನುವುದು ಕೇವಲ ಮೂರಕ್ಷರಗಳ ಪದವಲ್ಲ. ಮಕ್ಕಳಲ್ಲಿ ಕಲ್ಪನೆ, ಭರವಸೆ, ಕಲಿಕೆಯ ಪ್ರೀತಿ, ಕನಸುಗಳನ್ನು ಹುಟ್ಟು ಹಾಕಿ ಅವುಗಳನ್ನು ಸಾಕಾರಗೊಳಿಸಲು, ಅವರಿಗೆ ವರ್ಣರಂಜಿತ ಪ್ರೀತಿಯ ಜಗತ್ತನ್ನು ಪರಿಚಯಿಸಲು, ಸದೃಢ ಸಮಾಜ ಮತ್ತು ದೇಶವನ್ನು ಕಟ್ಟಲು ಮಕ್ಕಳ ಬದುಕಿನ ಹಾದಿಗೆ ಮುನ್ನುಡಿ ಬರೆಯುವ ಪದ ಅದು. ಸ್ವತ: ಶಿಕ್ಷಕರಾಗಿ ಈ ಮೂರು ಪದಗಳಿಗೆ ಘನತೆ ತುಂಬಿ ಭಾರತೀಯ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ನೀಡಿದ, ಭಾರತ ಕಂಡ ಅಗ್ರಮಾನ್ಯ ಶಿಕ್ಷಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌. ಅವರ ಜನ್ಮ ದಿನವನ್ನು ನೆನಪಿಸುವ ಶಿಕ್ಷಕರ ದಿನ (ಸೆ.೫) ದ ನೆನಪಿನಲ್ಲಿ ಮನಸ್ಸಿನಲ್ಲಿ ಮೂಡಿದ ಬಿಡಿ ಚಿತ್ರಗಳನ್ನು ಪೀಪಲ್‌ ಮೀಡಿಯಾದ ಓದುಗರಿಗಾಗಿ ಸೊಗಸಾಗಿ ಬಿಡಿಸಿಟ್ಟಿದ್ದಾರೆ ವಿದ್ಯಾರ್ಥಿಗಳ ನೆಚ್ಚಿನ ಉಪನ್ಯಾಸಕಿಯೂ, ಲೇಖಕಿಯೂ ಆಗಿರುವ ಸುಧಾ ಆಡುಕಳ.</strong></p></blockquote>



<div class="wp-block-cover is-light" style="min-height:417px;aspect-ratio:unset;"><span aria-hidden="true" class="wp-block-cover__background has-light-green-cyan-background-color has-background-dim-100 has-background-dim"></span><div class="wp-block-cover__inner-container is-layout-flow wp-block-cover-is-layout-flow">
<p class="has-text-align-justify has-medium-font-size">ಅವಳು ಅತೀವ ಉತ್ಸಾಹದಿಂದ ಕರೆ ಮಾಡಿದಾಗ ನಾನು ಯಾವುದೋ ಕೆಲಸದಲ್ಲಿ ಮುಳುಗಿದ್ದೆ. ಮತ್ತೆ ಫೋನ್ ನೋಡಿ ನಾನೇ ಕರೆ ಮಾಡಿದಾಗಲೂ ಅವಳ ಉತ್ಸಾಹವೇನೂ ಬತ್ತಿರಲಿಲ್ಲ. &#8220;ಟೀಚರ್, ನಾನು ಇವಾಗ ಗಣಿತ ಟೀಚರ್ ಆಗಿದ್ದೀನಿ. ಇಲ್ಲೇ ಹತ್ತಿರದ ಪ್ರಾಥಮಿಕ ಶಾಲೆಯಲ್ಲಿ ಪಾಠ ಮಾಡಬಹುದಾ ಎಂದು ಕೇಳಲು ಹೋಗಿದ್ದೆ. ಅವರು ಗಣಿತ ಪಾಠ ಮಾಡು ಎಂದು ಪುಸ್ತಕ ಕೊಟ್ಟರು. ನಾನೂ ಟೀಚರ್ ಆದೆ&#8221; ಅವಳು ಮಾತಾಡಿದ್ದು ಫೋನಿನಲ್ಲಾದರೂ ಅವಳ ಕಣ್ಣ ಹೊಳಪನ್ನು ನಾನು ನೋಡಬಲ್ಲವಳಾಗಿದ್ದೆ. ನಾನು ಗಣಿತ ಟೀಚರ್ರೇ ಆಗುವುದೆಂದು ಬೆನ್ನ ಹಿಂದೆ ತಿರುಗುತ್ತಿದ್ದವಳು ಬದುಕಿನ ಅನಿವಾರ್ಯತೆಯಿಂದ ಎಂಜಿನಿಯರಿಂಗ್ ಪದವಿ ಪಡೆದು, ಅಂತಾರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗವನ್ನು ಪಡೆದು ಕೊಂಡಿದ್ದಳು. ಅಷ್ಟಾದ ಮೇಲೆಯೂ ಒಂದೆರಡು ತಿಂಗಳಾದರೂ ತಾನು ಶಿಕ್ಷಕಿಯಾಗಿ ಕೆಲಸ ಮಾಡಬೇಕೆಂಬ ಒತ್ತಾಸೆಯನ್ನು ಅವಳೊಳಗೆ ಮೂಡಿಸಿದ ಸಂಗತಿ ಏನಿರಬಹುದು? ಎಂಬುದು ಶಿಕ್ಷಕ ವೃತ್ತಿಯ ಬಗ್ಗೆ ಮತ್ತೆ ಯೋಚಿಸುವಂತೆ ಮಾಡಿತು.</p>
</div></div>


<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2022/09/WhatsApp-Image-2022-09-05-at-4.03.26-PM.jpeg" alt="" class="wp-image-3945" width="671" height="435" srcset="https://peepalmedia.com/wp-content/uploads/2022/09/WhatsApp-Image-2022-09-05-at-4.03.26-PM.jpeg 592w, https://peepalmedia.com/wp-content/uploads/2022/09/WhatsApp-Image-2022-09-05-at-4.03.26-PM-300x195.jpeg 300w" sizes="auto, (max-width: 671px) 100vw, 671px" /></figure></div>


<div class="wp-block-cover is-light" style="min-height:226px;aspect-ratio:unset;"><span aria-hidden="true" class="wp-block-cover__background has-light-green-cyan-background-color has-background-dim-100 has-background-dim"></span><div class="wp-block-cover__inner-container is-layout-flow wp-block-cover-is-layout-flow">
<p class="has-text-align-justify has-medium-font-size">ಮೊನ್ನೆ ಹೀಗೆ ವಿರಾಮದಲ್ಲಿ ಕುಳಿತು ಗಾರ್ಗಿ ಸಿನೆಮಾ ನೋಡುತ್ತಿದ್ದೆವು. ಅದರಲ್ಲಿ ಚಿತ್ರದ ನಾಯಕಿ ಆಗಾಗ ತನ್ನ ಬಾಲ್ಯಕ್ಕೆ ಜಾರುತ್ತಾಳೆ ಮತ್ತು ಅಲ್ಲಿ ಒಬ್ಬ ಗಡ್ಡಧಾರಿಯಾದ ಶಿಕ್ಷಕ ಪ್ರತ್ಯಕ್ಷನಾಗುತ್ತಾನೆ. ತಣ್ಣಗೆ ಆ ಪುಟ್ಟ ಹುಡುಗಿಯ ಮೈ ಕೈ ಸವರುತ್ತ ತನ್ನ ಮೈ ತೀಟೆಯನ್ನು ತೀರಿಸಿಕೊಳ್ಳುತ್ತಾನೆ. ಆ ದೃಶ್ಯಗಳನ್ನು ನೋಡುತ್ತಿದ್ದಂತೆಯೇ ಬಾಲ್ಯದಲ್ಲಿ ನಮಗೆ ಪಾಠ ಮಾಡಿದ ಅನೇಕ ಶಿಕ್ಷಕರು ನೆನಪಾದರು.</p>
</div></div>



<div class="wp-block-cover is-light"><span aria-hidden="true" class="wp-block-cover__background has-light-green-cyan-background-color has-background-dim-100 has-background-dim"></span><div class="wp-block-cover__inner-container is-layout-flow wp-block-cover-is-layout-flow">
<p class="has-text-align-justify has-medium-font-size">ಕಣ್ಣು ಕಾಣದ, ಕಿವಿ ಕೇಳದ, ಮಾತು ಬಾರದ ಹೆಲೆನ್ ಕೆಲ್ಲರ್ ಎಂಬ ಹುಡುಗಿ ಜಗತ್ತಿನ ಅತಿ ಶ್ರೇಷ್ಠ ಬರಹಗಾರ್ತಿ ಮತ್ತು ಭಾಷಣಕಾರಳಾಗಿ ಹೊರಹೊಮ್ಮಿದ ಅದ್ಭುತವೊಂದು ನಮ್ಮೆಲ್ಲರ ಕಣ್ಣೆದುರಿಗಿದೆ. ಅವಳು ಬರೆದ &#8220;ನಾನು ಮೂರು ದಿನಗಳ ಮಟ್ಟಿಗೆ ಜಗವ ನೋಡುವಂತಾದರೆ…&#8221; ಎಂಬ ಪ್ರಬಂಧವನ್ನು ಓದುತ್ತಿದ್ದೆ. ಅದರಲ್ಲಿ ಅವಳು ಬರೆಯುತ್ತಾಳೆ, &#8221; ನಾನು ಜಗತ್ತನ್ನು ನೋಡಬಲ್ಲೆನಾದರೆ ಮೊದಲು ನೋಡ ಬಯಸುವುದು ನನಗೆ ಅತ್ಯಂತ ಪ್ರೀತಿಪಾತ್ರರಾದವರ ಮುಖವನ್ನು. ಅದು ನನ್ನ ಗುರು ಆ್ಯನೆ ಸುಲಿವಾನೆಯವರದಲ್ಲದೇ ಬೇರಾರದೂ ಅಲ್ಲ. ಈಗಾಗಲೇ ಅವರ ಪ್ರೀತಿ ಮತ್ತು ಕರುಣೆಯನ್ನು ಸ್ಪರ್ಶಿಸಿರುವೆನಾದರೂ ಅದನ್ನು ಧರಿಸಿರುವ ಅವರ ಮುಖ ಹೇಗಿರಬಹುದೆಂಬುದನ್ನು ನೋಡುವ ಅತೀವ ತವಕ ನನಗೆ&#8221; ಕೇವಲ ಸ್ಪರ್ಶದ ಜ್ಞಾನವೊಂದರಿಂದಲೇ ಇಡಿಯ ಜಗತ್ತನ್ನು ಅರ್ಥೈಸಲು ತನ್ನ ಶಿಷ್ಯೆಗೆ ಕಲಿಸಿದ ಆ್ಯನೆ ಅದೆಂಥಹ ಅದ್ಭುತ ಶಿಕ್ಷಕಿಯಾಗಿರಬಹುದು?</p>
</div></div>



<div class="wp-block-cover is-light"><span aria-hidden="true" class="wp-block-cover__background has-light-green-cyan-background-color has-background-dim-100 has-background-dim"></span><div class="wp-block-cover__inner-container is-layout-flow wp-block-cover-is-layout-flow">
<p class="has-text-align-justify has-medium-font-size">ಆ ಶಿಕ್ಷಕಿ ಈ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಹೆಣ್ಣು ಮಕ್ಕಳಿಗೆಂದು ಶಾಲೆ ತೆರೆದಿದ್ದಳು. ವಯಸ್ಸು, ಜಾತಿ ಬೇಧವಿಲ್ಲದೇ ಎಲ್ಲರೂ ಆ ಶಾಲೆಯಲ್ಲಿ ಕಲಿಯಬಹುದಿತ್ತು. ಎಲ್ಲರ ಜೊತೆಗೆ ಅನೇಕ ವಿಧವೆಯರೂ ನಾಲ್ಕಕ್ಷರ ಕಲಿಯಲೆಂದು ಅಲ್ಲಿಗೆ ಸೇರಿದರು. ಹೆಣ್ಣು ಮಕ್ಕಳ ತಲೆಕೆಡಿಸಿ ಸಮಾಜವನ್ನು ಒಡೆಯುವ ಹುನ್ನಾರವಿದು ಎಂದು ಕೆಲವರಿಗೆ ಅನ್ನಿಸಿತು. ದಾರಿಯಲ್ಲಿ ಹೋಗುವಾಗ ಅವಳ ಮೇಲೆ ಸೆಗಣಿಯನ್ನು ಎಸೆದು ಅವಮಾನಿಸಿದರು. ಆ ತಾಯಿ ಮಾರನೇ ದಿನದಿಂದ ಶಾಲೆಗೆ ಹೋದೊಡನೆ ಬದಲಾಯಿಸಲು ಇನ್ನೊಂದು ಸೀರೆಯನ್ನು ಚೀಲದೊಳಗಿಟ್ಟು ನಡೆದಳೇ ಹೊರತು ಶಾಲೆಯ ಬಾಗಿಲನ್ನು ಮುಚ್ಚಲಿಲ್ಲ. ಇಂದು ಅವರನ್ನು ಅಕ್ಷರದವ್ವ ಎಂದು ಕರೆದು ಜಗತ್ತು ಗೌರವಿಸುತ್ತದೆ. ಸಾವಿತ್ರಿಬಾಯಿ ಫುಲೆ ಮತ್ತವರ ಪತಿ ಜ್ಯೋತಿಬಾ ಫುಲೆಯವರು ಸ್ವಾತಂತ್ರ್ಯ ಪೂರ್ವದಲ್ಲಿಯೇ ನಡೆಸಿದ ಶಿಕ್ಷಣ ಕ್ರಾಂತಿಯದು.</p>
</div></div>



<div class="wp-block-cover is-light"><span aria-hidden="true" class="wp-block-cover__background has-light-green-cyan-background-color has-background-dim-100 has-background-dim"></span><div class="wp-block-cover__inner-container is-layout-flow wp-block-cover-is-layout-flow">
<p class="has-text-align-justify has-medium-font-size">ಪ್ರಸಿದ್ಧ ಕಾಲೇಜೊಂದರಲ್ಲಿ ಜಿ.ಎನ್ ದೇವಿಯವರ ಪುಸ್ತಕ ಬಿಡುಗಡೆಯ ಕಾರ್ಯಕ್ರಮವಿತ್ತು. ಅನಿವಾರ್ಯ ಅಡಚಣೆಯಿಂದಾಗಿ ದೇವಿಯವರ ಆ ಕೃತಿಯ ಆಳ, ಅಂತರಾಳಗಳನ್ನು ಅರ್ಥೈಸಿಕೊಳ್ಳಲಾಗದ ಭಿನ್ನ ಶಿಸ್ತಿನ ವಿದ್ಯಾರ್ಥಿಗಳು ಪ್ರೇಕ್ಷಕರಾಗಿ ಭಾಗವಹಿಸಿದ್ದರು. ಕೃತಿ ಪರಿಚಯ, ಕೃತಿ ವಾಚನ, ಕೃತಿ ವಿಮರ್ಶೆಗಳೆಲ್ಲ ನಡೆಯುವಾಗ ಅವರೆಲ್ಲರೂ ತಮ್ಮ ತಮ್ಮ ಮೊಬೈಲ್ ವೀಕ್ಷಣೆಯಲ್ಲಿ ಮಗ್ನರಾಗಿದ್ದರು. ಕೊನೆಯಲ್ಲಿ ದೇವಿಯವರೊಂದಿಗೆ ಸಂವಾದ ಕಾರ್ಯಕ್ರಮವಿತ್ತು. ಸಭೆಯಲ್ಲಿ ನಡೆಯುವುದು ತಮಗೆ ಸಂಬಂಧಿಸಿದ್ದೇ ಅಲ್ಲವೆಂಬಂತೆ ಕುಳಿತಿದ್ದ ವಿದ್ಯಾರ್ಥಿಗಳೊಂದಿಗೆ ದೇವಿಯವರು ಏನು ಸಂವಾದ ನಡೆಸಿಯಾರೆಂಬ ಕುತೂಹಲ ಎಲ್ಲರಂತೆ ನನ್ನಲ್ಲಿಯೂ ಇತ್ತು. ಆದರೆ ಅವರು ಅದನ್ನು ಹೂವೆತ್ತುವಷ್ಟು ಸುಲಭದಲ್ಲಿ ಮಾಡಿ ತೋರಿಸಿದರು. ಮೊದಲು ಎಲ್ಲರನ್ನೂ ತಾವಿರುವ ವೇದಿಕೆಯ ಮೇಲೆಯೇ ಬರುವಂತೆ ಕರೆದರು. ನಿಮ್ಮ ಮೊಬೈಲನ್ನು ಜೊತೆಗೆ ತನ್ನಿ ಎಂದೂ ಸೇರಿಸಿದರು. ಅವರ ನಡುವೆ ನಿಂತು ಎಲ್ಲರನ್ನೂ ತಮ್ಮ ಸುತ್ತಲೂ ಕೂರಿಸಿಕೊಂಡು ನಿಮ್ಮೊಂದಿಗೆ ಒಂದು ಸೆಲ್ಫಿ ಬೇಕು. ಆದರೆ ಅದರ ಮೊದಲು ಸ್ವಲ್ಪ ಮಾತಾಡೋಣವೆ? ಎಂದು ಆತ್ಮೀಯವಾಗಿ ಹೇಳುತ್ತಾ ತಮ್ಮ ವಿಚಾರಧಾರೆಯನ್ನು ಅತಿ ಸರಳ ಮತ್ತು ಅತಿ ಕಡಿಮೆ ಪದಗಳಲ್ಲಿ ಅವರೆದುರು ಮಂಡಿಸಿದರು. ನಡುನಡುವೆ ನಗೆಚಟಾಕಿ ಹಾರಿಸಿ ಅವರನ್ನು ನಗಿಸಿದರು. ಮತ್ತೆ ವಿದ್ಯಾರ್ಥಿಗಳು ಎಷ್ಟು ಪ್ರಶ್ನೆಗಳನ್ನು ಕೇಳಿದರೆಂದರೆ ಊಟದ ಸಮಯವಾಯಿತೆಂದು ಸಂಘಟಕರು ಎಚ್ಚರಿಸುವಷ್ಟು! ಎಲ್ಲ ಮುಗಿದಾಗ ಮಕ್ಕಳು ದೇವಿಯವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದನ್ನು ಮರೆತು ಇನ್ನೊಮ್ಮೆ ಕಾಲೇಜಿಗೆ ಬರಲೇಬೇಕು ಎಂದು ಒತ್ತಾಯಿಸುತ್ತಿದ್ದರು. ಶಿಕ್ಷಕರೆಲ್ಲರೂ ಕಲಿಯಲೇಬೇಕಾದ ಅದೆಷ್ಟೋ ಪಾಠಗಳು ಆ ಒಂದು ತಾಸಿನಲ್ಲಿದ್ದವು.</p>
</div></div>



<p class="has-text-align-justify has-medium-font-size">ಇಂದು ಶಿಕ್ಷಣದ ಬಗ್ಗೆ ಮಾತನಾಡುವಾಗಲೆಲ್ಲ ವಿದ್ಯಾರ್ಥಿಗಳ ನಡವಳಿಕೆಯ ಬಗೆಗಿನ ದೂರುಗಳು ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ ತೆಳುವಾಗುತ್ತಿರುವುದರ ಬಗ್ಗೆಯೂ ಚರ್ಚೆಯಾಗುತ್ತದೆ. ಆಗೆಲ್ಲ ಗೆಳೆಯ ಡಾ|ಶ್ರೀಪಾದ ಭಟ್ ಹೇಳುವ ಮಾತು ನೆನಪಿಗೆ ಬರುತ್ತದೆ, &#8220;ಇಂದಿನ ಮಕ್ಕಳು ಟಿ. ವಿ. ಯಲ್ಲಿ ಬರುವ ಜಾಹೀರಾತುಗಳಂತಿದ್ದಾರೆ, ನಾವಿನ್ನೂ ಹಳೆಯ ಧಾರಾವಾಹಿಗಳಂತಿದ್ದೇವೆ.&#8221;</p>


<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2022/09/WhatsApp-Image-2022-09-05-at-3.57.46-PM.jpeg" alt="" class="wp-image-3940" width="653" height="600" srcset="https://peepalmedia.com/wp-content/uploads/2022/09/WhatsApp-Image-2022-09-05-at-3.57.46-PM.jpeg 578w, https://peepalmedia.com/wp-content/uploads/2022/09/WhatsApp-Image-2022-09-05-at-3.57.46-PM-300x276.jpeg 300w" sizes="auto, (max-width: 653px) 100vw, 653px" /></figure></div>


<p class="has-text-align-justify has-medium-font-size">ತರಗತಿಯಲ್ಲಿ ವಿದ್ಯಾರ್ಥಿಯ ಕುಂದಿದ ಮುಖವನ್ನು ಗಮನಿಸಿಯೇ ಹತ್ತಿರ ಕರೆದು, ಮಾತನಾಡಿಸಿ, ಸಾಂತ್ವನ ಹೇಳುವ, ಮಕ್ಕಳ ವಾಂತಿ, ಎಂಜಲನ್ನೂ ಒರೆಸಿ ತಾಯ್ತನ ತೋರುವ, ಕುಸಿದುಹೋದ ಆತ್ಮವಿಶ್ವಾಸವನ್ನು ಮರಳಿ ತರುವ, ಅಡ್ಡದಾರಿ ಹಿಡಿದರೆಂದು ಅರಿವಾದೊಡನೆ ಏಕಾಂತದಲ್ಲಿ ಕರೆದು ಕಿವಿಹಿಂಡಿ ಬುದ್ಧಿಹೇಳಿ, ಬೆನ್ನು ತಟ್ಟಿ ಕಳಿಸುವ, ವಿದ್ಯಾರ್ಥಿಗಳ ಪ್ರತಿಭೆಗೆ ವಿಫುಲ ಅವಕಾಶ ನೀಡಿ ಪ್ರೋತ್ಸಾಹಿಸುವ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಅವರೆಲ್ಲರನ್ನೂ ಸಮ ಭಾವದಿಂದ ನೋಡುವ ಅನೇಕ ಶಿಕ್ಷಕರು ಇಂದಿಗೂ ಇದ್ದಾರೆಂಬ ಸತ್ಯವೇ ಭವಿಷ್ಯದ ಬಗ್ಗೆ ಕನಸುಗಳನ್ನಿಟ್ಟುಕೊಳ್ಳುವಂತೆ ಮಾಡುತ್ತದೆ. ಎಲೆಮರೆಯ ಕಾಯಿಯಂತೆ ದುಡಿಯುವ ಇವರನ್ನು ನೋಡುವಾಗ ಶಿಕ್ಷಕತನವೆಂಬುದು ಬಹುಶಃ ವೃತ್ತಿಯಲ್ಲ, ಅದೊಂದು ಸ್ವಭಾವ ಅನಿಸುತ್ತದೆ.</p>



<div class="wp-block-cover is-light" style="min-height:158px;aspect-ratio:unset;"><span aria-hidden="true" class="wp-block-cover__background has-light-green-cyan-background-color has-background-dim-100 has-background-dim"></span><div class="wp-block-cover__inner-container is-layout-flow wp-block-cover-is-layout-flow">
<p class="has-text-align-justify has-medium-font-size">ಅಧಿಕಾರಿಯೊಬ್ಬರು ಶಿಕ್ಷಕ ದಿನಾಚರಣೆಯ ಭಾಷಣದಲ್ಲಿ ಹೇಳಿದ್ದರು, &#8220;ಇಂದಿಗೂ ತಮ್ಮ ಮಕ್ಕಳನ್ನು ಅತೀವ ಭರವಸೆಯಿಂದ ಪಾಲಕರು ಬಿಡುವುದು ಶಿಕ್ಷಕರೊಂದಿಗೆ ಮಾತ್ರ.&#8221; ಶಿಕ್ಷಕರ ಹೊಣೆಗಾರಿಕೆಯ ಬಗ್ಗೆ ಇದಕ್ಕಿಂತ ಬೇರೆ ವ್ಯಾಖ್ಯಾನ ಬೇಕೆ?</p>
</div></div>



<div class="wp-block-cover is-light" style="min-height:247px;aspect-ratio:unset;"><span aria-hidden="true" class="wp-block-cover__background has-light-green-cyan-background-color has-background-dim-100 has-background-dim"></span><div class="wp-block-cover__inner-container is-layout-flow wp-block-cover-is-layout-flow">
<p class="has-text-align-justify has-medium-font-size">ತುದಿ ಬೆರಳ ಸ್ಪರ್ಶದಲ್ಲಿ ಜಗತ್ತಿನ ಎಲ್ಲ ಮಾಹಿತಿಗಳೂ ಕಣ್ಣೆದುರು ಸುರಿಯುವ ಈ ಕಾಲದಲ್ಲಿ ಶಿಕ್ಷಕರ ಹೊಣೆಗಾರಿಕೆಯೇನು? ಶಿಕ್ಷಕರು ಮತ್ತು ಪೋಷಕರು ಪರಸ್ಪರ ಚರ್ಚಿಸಿ ತೀರ್ಮಾನಿಸಬೇಕಾದ ಮತ್ತು ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಷಯವಿದು. ಶಿಕ್ಷಕರ ದೈಹಿಕ ಉಪಸ್ಥಿತಿ ಮತ್ತು ಅವರೊಂದಿಗಿನ ಒಡನಾಟ, ಮಾತು, ನೋಟ ಇವೆಲ್ಲವೂ ಅಂತರ್ಜಾಲಕ್ಕಿಂತ ಬೇರೆಯಾದ ಹೊಸತೊಂದು ಅನುಭವವನ್ನು ನೀಡುವುದಿಲ್ಲವೆಂದಾದಲ್ಲಿ ಶಿಕ್ಷಣ ಕ್ರಮದ ಮರುವಿಮರ್ಶೆ ಅನಿವಾರ್ಯ.</p>
</div></div>



<div class="wp-block-cover is-light" style="min-height:154px;aspect-ratio:unset;"><span aria-hidden="true" class="wp-block-cover__background has-light-green-cyan-background-color has-background-dim-100 has-background-dim"></span><div class="wp-block-cover__inner-container is-layout-flow wp-block-cover-is-layout-flow">
<p class="has-text-align-justify has-medium-font-size">ಶಾಲೆಗಳಿಲ್ಲದಿದ್ದರೆ ಬದುಕೆಷ್ಟು ಸುಂದರವಾಗುತ್ತಿತ್ತು? ಎಂದು ಮಗುವೊಂದು ಯೋಚಿಸುತ್ತಿರುವಂತೆ ಕನಸಾಗಿ ಎಚ್ಚರವಾದಾಗಲೆಲ್ಲ ಮೈತುಂಬಾ ಬೆವರು. ಹಾಗನಿಸದಂತೆ ಆಗಬೇಕಲ್ಲ ಎಂಬ ಒತ್ತಡವೇ ಶಿಕ್ಷಕನನ್ನು ಜೀವಂತವಾಗಿಡುತ್ತದೆ.</p>
</div></div>



<p class="has-text-align-justify has-medium-font-size">ಥಳಥಳಿಸುವ ಕಟ್ಟಡ, ಹೊಳೆಯುವ ನೆಲ, ವಾತಾಯನ ಸಹಿತ ತರಗತಿ ಕೋಣೆಗಳು, ಬಾಗಿಲ ಬಳಿ ತೂಗುಬಿಟ್ಟ ಸಾಲುಸಾಲು ಮುಖಗಳು, ಸೂಜಿ ಬಿದ್ದರೆ ಕೇಳುವಷ್ಟು ನೀರವ ಮೌನ, ಕೈಕಟ್ಟಿ ಇರುವೆ ಸಾಲಿನಂತೆ ನಡೆಯುವಷ್ಟು ಶಿಸ್ತು ಇವುಗಳೆಲ್ಲದರ ನಡುವೆ ಪುಡಿಗಾಸಿನ ಸಂಬಳದಲ್ಲಿ ಜೀವನ ನಡೆಸಲೂ ಪರದಾಡುವ ತರುಣ ಶಿಕ್ಷಕರು, ನಡುನಡುವೆ ಪ್ರಕಟವಾಗುವ ಆತ್ಮಹತ್ಯೆಗಳ ಸುದ್ದಿಗಳು…. ನಿಜಕ್ಕೂ ಕತ್ತಲ ಗುಹೆಯೊಳಗೆ ಏನಾಗುತ್ತಿದೆ? ಶಿಕ್ಷಕ ದಿನಾಚರಣೆಯ ಶುಭಾಶಯಗಳನ್ನು ಅವರಿಗೆ ಹೇಳುವುದಾದರೂ ಹೇಗೆ?</p>


<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2022/09/WhatsApp-Image-2022-09-05-at-3.59.41-PM.jpeg" alt="" class="wp-image-3939" width="386" height="502" srcset="https://peepalmedia.com/wp-content/uploads/2022/09/WhatsApp-Image-2022-09-05-at-3.59.41-PM.jpeg 485w, https://peepalmedia.com/wp-content/uploads/2022/09/WhatsApp-Image-2022-09-05-at-3.59.41-PM-230x300.jpeg 230w" sizes="auto, (max-width: 386px) 100vw, 386px" /><figcaption><strong>ದಿಸರ್ವಪಲ್ಲಿ ರಾಧಾಕೃಷ್ಣ</strong></figcaption></figure></div>


<div class="wp-block-cover is-light" style="min-height:239px;aspect-ratio:unset;"><span aria-hidden="true" class="wp-block-cover__background has-light-green-cyan-background-color has-background-dim-100 has-background-dim"></span><div class="wp-block-cover__inner-container is-layout-flow wp-block-cover-is-layout-flow">
<p class="has-text-align-justify has-medium-font-size">ಆದರ್ಶ ಶಿಕ್ಷಕರಾಗಿದ್ದು, ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾದ  ಸರ್ವಪಲ್ಲಿ ರಾಧಾಕೃಷ್ಣನ್‌ ರಲ್ಲಿ ಅವರ ಗೆಳೆಯರು ಒಮ್ಮೆ ಕೇಳಿದರಂತೆ, &#8220;ಇಂತಹ ಉನ್ನತ ಹುದ್ದೆಯನ್ನು ಅಲಂಕರಿಸುವ ನಿಮ್ಮ ಜನ್ಮದಿನವನ್ನು ಆಚರಿಸೋಣವೆ?&#8221; ಅದಕ್ಕೆ ಅವರು ನೀಡಿದ ಉತ್ತರ, &#8220;ಶಿಕ್ಷಕ ವೃತ್ತಿಗಿಂತ ಘನತೆಯ ಹುದ್ದೆ ಬೇರೆಯುಂಟೆ? ನನ್ನ ಜನ್ಮ ದಿನವನ್ನು ಆಚರಿಸುವುದಾದಲ್ಲಿ ಅದನ್ನು ಶಿಕ್ಷಕರ ದಿನಾಚರಣೆಯೆಂದೇ ಆಚರಿಸಬೇಕು.&#8221; ಅವರ ನೆನಪಿನಲ್ಲಿಂದು ನಮ್ಮೆಲ್ಲರ ದಿನಾಚರಣೆ. ಆ ದಿನದ ನೆನಪಿನಲ್ಲಿ ಮನಸ್ಸಿನಲ್ಲಿ ಮೂಡಿದ ಬಿಡಿ ಚಿತ್ರಗಳಿವು.</p>
</div></div>



<p class="has-text-align-right has-medium-font-size"><mark style="background-color:rgba(0, 0, 0, 0)" class="has-inline-color has-vivid-red-color">(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)</mark></p>



<figure class="wp-block-image size-full is-resized"><img loading="lazy" decoding="async" src="https://peepalmedia.com/wp-content/uploads/2022/09/WhatsApp-Image-2022-09-05-at-3.42.34-PM.jpeg" alt="" class="wp-image-3944" width="162" height="192" srcset="https://peepalmedia.com/wp-content/uploads/2022/09/WhatsApp-Image-2022-09-05-at-3.42.34-PM.jpeg 808w, https://peepalmedia.com/wp-content/uploads/2022/09/WhatsApp-Image-2022-09-05-at-3.42.34-PM-253x300.jpeg 253w, https://peepalmedia.com/wp-content/uploads/2022/09/WhatsApp-Image-2022-09-05-at-3.42.34-PM-768x912.jpeg 768w" sizes="auto, (max-width: 162px) 100vw, 162px" /></figure>



<p class="has-medium-font-size"><strong>ಸುಧಾ ಆಡುಕಳ</strong><br>ಉಪನ್ಯಾಸಕಿ, ಲೇಖಕಿ</p>
]]></content:encoded>
					
		
		
			</item>
	</channel>
</rss>
