<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Arun Jolada kudligi &#8211; Peepal Media</title>
	<atom:link href="https://peepalmedia.com/tag/arun-jolada-kudligi/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Fri, 26 Apr 2024 04:17:04 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Arun Jolada kudligi &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ನಮಗೆ ನಾವೇ ಆತ್ಮಸಾಕ್ಷಿಯನ್ನು ಕೇಳಿಕೊಂಡು ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸೋಣ</title>
		<link>https://peepalmedia.com/let-us-ask-our-conscience-and-vote-wisely/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 26 Apr 2024 04:17:03 +0000</pubDate>
				<category><![CDATA[ದೇಶ]]></category>
		<category><![CDATA[ರಾಜಕೀಯ]]></category>
		<category><![CDATA[ಲೋಕಸಭೆ ಚುನಾವಣೆ -2024]]></category>
		<category><![CDATA[Arun Jolada kudligi]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=38746</guid>

					<description><![CDATA[ಪ್ರಿಯರೇ.. ಮನೆಗೆ ತರಕಾರಿ ತರುವಾಗ ತರಕಾರಿ ಮಾರುಕಟ್ಟೆಯಲ್ಲಿ ಒಂದೊಂದನ್ನೆ ಕೆಡದಂತಹದ್ದನ್ನು ತಾಜಾ ಅನ್ನಿಸುವಂಥದ್ದನ್ನು ಆಯ್ಕೆ ಮಾಡುತ್ತೇವೆ.. ಎಷ್ಟೊಂದು ಮುತುವರ್ಜಿ ವಹಿಸುತ್ತೇವೆ. ತರಕಾರಿಯವರು ಹೇಳಿದ ಬೆಲೆಗೆ ಕೊಳ್ಳದೆ ಚೌಕಾಸಿ ಮಾಡಿ ಪೈಸೆ ಪೈಸೆ ಉಳಿಸಲು ಪ್ರಯತ್ನಿಸುತ್ತೇವೆ. ಇಷ್ಟೆಲ್ಲಾ ಮಾಡುವಾಗ ಉತ್ತಮ ಆರೋಗ್ಯದ ಕಾಳಜಿ ನಮ್ಮ ತಲೆಯಲ್ಲಿರುತ್ತದೆ. ಮನೆಗೆ ಬೇಕಾದ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಕೊಳ್ಳುವಾಗ ಇಂಟರ್ ನೆಟ್ ಸರ್ಚ್ ಮಾಡಿ ಆಯಾ ವಸ್ತುಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸುತ್ತೇವೆ. ಬಳಕೆದಾರರ ಅಭಿಪ್ರಾಯಗಳನ್ನು ಗಮನಿಸುತ್ತೇವೆ. ಅದರ ಬಗ್ಗೆ ಯೂಟೂಬ್ ವಿಶ್ಲೇಷಣೆಗಳಿದ್ದರೆ ಕೇಳುತ್ತೇವೆ..ಇಷ್ಟೆಲ್ಲಾ ಮಾಡುವಾಗ [&#8230;]]]></description>
										<content:encoded><![CDATA[
<p></p>



<hr class="wp-block-separator has-alpha-channel-opacity"/>



<p>ಪ್ರಿಯರೇ..</p>



<p>ಮನೆಗೆ ತರಕಾರಿ ತರುವಾಗ ತರಕಾರಿ ಮಾರುಕಟ್ಟೆಯಲ್ಲಿ ಒಂದೊಂದನ್ನೆ ಕೆಡದಂತಹದ್ದನ್ನು ತಾಜಾ ಅನ್ನಿಸುವಂಥದ್ದನ್ನು ಆಯ್ಕೆ ಮಾಡುತ್ತೇವೆ.. ಎಷ್ಟೊಂದು ಮುತುವರ್ಜಿ ವಹಿಸುತ್ತೇವೆ. ತರಕಾರಿಯವರು ಹೇಳಿದ ಬೆಲೆಗೆ ಕೊಳ್ಳದೆ ಚೌಕಾಸಿ ಮಾಡಿ ಪೈಸೆ ಪೈಸೆ ಉಳಿಸಲು ಪ್ರಯತ್ನಿಸುತ್ತೇವೆ. ಇಷ್ಟೆಲ್ಲಾ ಮಾಡುವಾಗ ಉತ್ತಮ ಆರೋಗ್ಯದ ಕಾಳಜಿ ನಮ್ಮ ತಲೆಯಲ್ಲಿರುತ್ತದೆ.</p>



<p>ಮನೆಗೆ ಬೇಕಾದ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಕೊಳ್ಳುವಾಗ ಇಂಟರ್ ನೆಟ್ ಸರ್ಚ್ ಮಾಡಿ ಆಯಾ ವಸ್ತುಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸುತ್ತೇವೆ. ಬಳಕೆದಾರರ ಅಭಿಪ್ರಾಯಗಳನ್ನು ಗಮನಿಸುತ್ತೇವೆ. ಅದರ ಬಗ್ಗೆ ಯೂಟೂಬ್ ವಿಶ್ಲೇಷಣೆಗಳಿದ್ದರೆ ಕೇಳುತ್ತೇವೆ..<br>ಇಷ್ಟೆಲ್ಲಾ ಮಾಡುವಾಗ ಕೊಂಡ ಪ್ರತಿ ವಸ್ತುವು ಗರಿಷ್ಟ ಬಳಕೆಗೆ ಬರಬೇಕು. ಕೊಟ್ಟ ಹಣಕ್ಕೆ ಮೋಸ ಆಗಬಾರದು ಎನ್ನುವ ಕಾಳಜಿ ಇರುತ್ತದೆ.</p>



<p>ಸ್ವಂತ ಮನೆ ಕಟ್ಟುವಾಗಲಂತೂ ಒಂದೊಂದು ಇಟ್ಟಿಗೆಯ ಬಗ್ಗೆಯೂ ಹತ್ತಾರು ಜನರನ್ನು ಕೇಳುತ್ತೇವೆ. ಮನೆ ಕಟ್ಟಡಕ್ಕೆ ಬಳಸುವ ಪ್ರತಿಯೊಂದು ವಸ್ತುಗಳ ಬಗ್ಗೆ ಗೂಗಲ್ ಮಾಡಿ ಪ್ರತಿಯೊಂದರ ಗುಣಮಟ್ಟದ ಬಗ್ಗೆ ಪರಿಶೀಲಿಸುತ್ತೇವೆ. ಈಗಾಗಲೆ ಮನೆ ಕಟ್ಟಿದವರ ಅನುಭವಗಳನ್ನು ಕೇಳುತ್ತೇವೆ. ಇಷ್ಟೆಲ್ಲಾ ಮಾಡುವಾಗ ಸರಿಯಾದ ಬೆಲೆಯಲ್ಲಿ ಗರಿಷ್ಟ ಗುಣಮಟ್ಟದ ಬಹಳ ಕಾಲ ಬಾಳಿಕೆ ಬರುವ ಮನೆ ಕಟ್ಟುವ ಕಾಳಜಿ ಇರುತ್ತದೆ.</p>



<p>ಇಂದು ಬಹುತೇಕ Online ಶಾಪಿಂಗ್ ಹೆಚ್ಚಾಗಿದೆ.<br>ಹೀಗೆ ಒಂದು ವಸ್ತುವನ್ನು Online ನಲ್ಲಿ ಖರೀದಿಸಲು ಹತ್ತಾರು ವೆಬ್ ಸೈಟ್ ಗಳನ್ನು ಪರಿಶೀಲಿಸಿ ಬೆಲೆಯ ವ್ಯತ್ಯಾಸವನ್ನು ತಿಳಿಯುತ್ತೇವೆ. ಬಳಕೆದಾರರ ರಿವಿವ್/ಕಮೆಂಟುಗಳನ್ನು ಓದುತ್ತೇವೆ. ರೇಟಿಂಗ್ ಪರಿಶೀಲಿಸುತ್ತೇವೆ. ಆಯಾ ಪ್ರಡಕ್ಟ್ ಬಗ್ಗೆ ಏನಾದರೂ ನೆಗೆಟಿವ್ ಸುದ್ದಿಗಳಿವೆಯೇ ಎಂದು ಗೂಗಲ್‌ಮಾಡಿ ಪರಿಶೀಲಿಸುತ್ತೇವೆ. ಇಷ್ಟೆಲ್ಲಾ ಮಾಡುವುದರ ಹಿಂದೆ ಕೈಯಿಂದ ಕೊಟ್ಟ ಪೈಸೆ ಪೈಸೆಗೂ ಗುಣಮಟ್ಟದ ವಸ್ತುಗಳು ಬೇಕು ಎನ್ನುವುದು ಮನಸ್ಸಲ್ಲಿರುತ್ತೆ.</p>



<p>ಇನ್ನು ಮಗನನ್ನೊ, ಮಗಳನ್ನೋ ಮದುವೆ ಮಾಡುವ ಸಂದರ್ಭ ಬಂದರಂತೂ ಮೈಯೆಲ್ಲಾ ಕಣ್ಣಾಗಿಸಿಕೊಂಡು ಹುಡುಗನಿಗೆ ಹುಡುಗಿ, ಹುಡುಗಿಗೆ ಹುಡುಗನನ್ನು ಹುಡುಕುತ್ತೇವೆ. ಇರೋ ಬರೋ ಮ್ಯಾಟ್ರಮನಿ ವೆಬ್ ಸೈಟುಗಳನ್ನು ತಡಕಾಡುತ್ತೇವೆ. ಬ್ರೋಕರುಗಳ ಬೆನ್ನು ಬೀಳುತ್ತೇವೆ. ಮ್ಯಾಟ್ರಮೊನಿ ಪ್ರೊಪೈಲುಗಳನ್ನೆಲ್ಲಾ ಜಾಲಾಡುತ್ತೇವೆ. ನೂರಾರು ಜನರಿಗೆ ಫೋನ್ ಮಾಡಿ ವಿಚಾರಿಸುತ್ತೇವೆ.<br>ಆಯಾ ಹುಡುಗ ಹುಡುಗಿಯರ ಮನೆಯವರ ಬಗ್ಗೆ ಗುಪ್ತವಾಗಿ ಸಂಶೋಧನೆಯನ್ನೆ ಮಾಡುತ್ತೇವೆ. ಇಷ್ಟೆಲ್ಲಾ ಮಾಡುವುದು ಮದುವೆಯಾಗುವ ಹುಡುಗ ಅಥವಾ ಹುಡುಗಿಯರ ಜೀವನ ಸುಖಕರವಾಗಿರಲೆಂಬ ಎಚ್ಚರದಿಂದ.</p>



<p>ಹೀಗೆ ಮಕ್ಕಳನ್ನು ಸ್ಕೂಲಿಗೆ ಸೇರಿಸುವಾಗ, ನೌಕರಿ ಹಿಡಿಯುವಾಗ, ಬಟ್ಟೆ ಕೊಳ್ಳುವಾಗ, ಬೇರೊಬ್ಬರನ್ನು ನಂಬುವಾಗ ಹೀಗೆ ಹತ್ತಾರು ಬಾರಿ ಪರಿಶೀಲಿಸಿ ಹತ್ತಾರು ಜನರನ್ನು ಕೇಳಿ ಒಂದೆಜ್ಜೆ ಮುಂದಿಡುತ್ತೇವೆ..</p>



<p>ಪ್ರಿಯರೇ<br>ಹೀಗೆ ಬದುಕಿಗೆ ಸಂಬಂಧಿಸಿದ ಪ್ರತಿಯೊಂದರ ಬಗ್ಗೆ ಇಷ್ಟೊಂದು ಖಚಿತ ಅಭಿಪ್ರಾಯ ಹೊಂದಿದ ನಾವುಗಳು. ಪ್ರತಿ ಆಯ್ಕೆಯಲ್ಲಿ ಎಚ್ಚರ ತಪ್ಪದ ನಾವುಗಳು, ಮೇಲೆ ಹೇಳಿದ ಎಲ್ಲಾ ಸಂಗತಿಗಳ ಬಗ್ಗೆ ಪರೋಕ್ಷವಾಗಿ ಪರಿಣಾಮ ಬೀರುವ ನಮ್ಮನ್ನು ಆಳುವ ರಾಜಕಾರಣಿ, ನಮ್ಮನ್ನು ಆಳುವ ಸರಕಾರವನ್ನು ಆಯ್ಕೆ ಮಾಡುವಾಗ ಮಾತ್ರ ಏಕೆ ಎಡವುತ್ತೇವೆ? ಏಕೆ ಕೂಲಂಕುಶವಾಗಿ ಪರಿಶೀಲಿಸುವುದಿಲ್ಲ? ಯಾಕೆ ರಾಜಕೀಯ ಪಕ್ಷದ ಚರಿತ್ರೆಯ ಬಗ್ಗೆ, ನಾವು ಮತ ಚಲಾಯಿಸುವ ಉಮೇದುವಾರರ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸುವುದಿಲ್ಲ?<br>ನಮ್ಮನ್ನೆಲ್ಲಾ ಪೊರೆಯುವುದು &#8216;ಸಂವಿಧಾನ&#8217;. ಈ ಸಂವಿಧಾನದ ಆಶಯದಂತೆ ಯಾವ ರಾಜಕೀಯ ಪಕ್ಷ ಆಡಳಿತ ನಡೆಸಿದೆ, ಯಾವ ರಾಜಕೀಯ ಪಕ್ಷ ಸಂವಿಧಾನದ ಆಶಯಕ್ಕೆ ವಿರುದ್ದವಾಗಿ ನಡೆಯುತ್ತಿದೆ ? ಯಾವ ರಾಜಕೀಯ ಪಕ್ಷ ದುರ್ಬಲರಿಗೆ ನೆರವಾಗಿದೆ? ಎಂದೇಕೆ ನಾವು ಪರಿಶೀಲಿಸುವುದಿಲ್ಲ.<br>ಸುಳ್ಳುಗಳನ್ನು ಹೇಳುವ, ಸುಳ್ಳು ಭರವಸೆ ಕೊಡುವವರನ್ನು ಏಕೆ ಆಯ್ಕೆ ಮಾಡುತ್ತೇವೆ? ಧರ್ಮ ಧರ್ಮದ ಮಧ್ಯೆ ಜಾತಿ ಜಾತಿಗಳ ಮಧ್ಯೆ ದ್ವೇಶ ಬಿತ್ತುವವರನ್ನೇಕೆ ಆಯ್ಕೆ ಮಾಡುತ್ತೇವೆ?</p>



<p>ಪ್ರಿಯರೇ, ಮತ ಚಲಾವಣೆಗೆ ಹೊರಡುವ ಮುನ್ನ ಒಂದು ನಿಮಿಷವಾದರೂ ಈ ಬಗ್ಗೆ ನಮಗೆ ನಾವೇ ಆತ್ಮಸಾಕ್ಷಿಯನ್ನು ಕೇಳಿಕೊಂಡು ಮತ ಚಲಾಯಿಸೋಣ. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದ ಮೂಲಕ ನೀಡಿದ ಮತದಾನದ ಹಕ್ಕು ನಮ್ಮಗಳ ಜೀವನದ ಮಹತ್ವದ ಅಧಿಕಾರವಾಗಿದೆ. ಇಂತಹ ಮತಾಧಿಕಾರವನ್ನು ಸಂವಿಧಾನ ಬದ್ಧತೆಗೆ ಪೂರಕವಾಗಿ ನಮ್ಮ ಬದ್ಧತೆಯನ್ನು ತೋರೋಣ. ಎಲ್ಲರೂ ಮತ ಚಲಾಯಿಸೋಣ</p>



<p><em>ಅಜೋ</em></p>
]]></content:encoded>
					
		
		
			</item>
		<item>
		<title>ಟಿಪ್ಪು ಸುಲ್ತಾನನ್ನು ಯಾರು ಯಾರು ಏಕೆ ನೆನೆಯಬೇಕು?</title>
		<link>https://peepalmedia.com/arun-jolada-kudligi-article-about-tippu-sultan/</link>
		
		<dc:creator><![CDATA[Arun Jolada Kudligi]]></dc:creator>
		<pubDate>Thu, 17 Nov 2022 08:26:13 +0000</pubDate>
				<category><![CDATA[ವಿಶೇಷ]]></category>
		<category><![CDATA[Arun Jolada kudligi]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[tippu jayanthi]]></category>
		<category><![CDATA[TIPPU SULTHAN]]></category>
		<guid isPermaLink="false">https://peepalmedia.com/?p=15748</guid>

					<description><![CDATA[ಆಧುನಿಕ ಪ್ರಜಾಪ್ರಭುತ್ವವಾದಿ ಟಿಪ್ಪು ಸುಲ್ತಾನನನ್ನು ಅಖಂಡ ಕನ್ನಡಿಗರು ಬೇರೆ ಬೇರೆ ಕಾರಣಕ್ಕೆ ನೆನೆಯ ಬೇಕಾಗಿದೆ. ಯಾರು ಯಾರು ಏಕೆ ನೆನೆಯಬೇಕೆಂದು ಸಣ್ಣದೊಂದು ಪಟ್ಟಿಯನ್ನು ಸಂಶೋಧಕ ಅರುಣ್ ಜೋಳದಕೂಡ್ಲಿಗಿಯವರು ಮಾಡಿದ್ದಾರೆ. ಗಮನಿಸಿ. ಟಿಪ್ಪುವನ್ನು ಮಹಿಳೆಯರೇಕೆ ನೆನೆಯಬೇಕು? ಟಿಪ್ಪುವನ್ನು ರೈತರೇಕೆ ನೆನೆಯಬೇಕು? ಟಿಪ್ಪುವನ್ನು ಈ ನಾಡಿನ ದಲಿತರೇಕೆ ನೆನೆಯಬೇಕು? ಟಿಪ್ಪುವನ್ನು ಹಿಂದುಗಳೇಕೆ‌ ನೆನೆಯಬೇಕು? ಹೀಗೆ ಪಟ್ಟಿ ಬೆಳೆಯುತ್ತದೆ. ಅರುಣ್ ಜೋಳದಕೂಡ್ಲಿಗಿ]]></description>
										<content:encoded><![CDATA[
<p><strong>ಆಧುನಿಕ ಪ್ರಜಾಪ್ರಭುತ್ವವಾದಿ ಟಿಪ್ಪು ಸುಲ್ತಾನನನ್ನು ಅಖಂಡ ಕನ್ನಡಿಗರು ಬೇರೆ ಬೇರೆ ಕಾರಣಕ್ಕೆ ನೆನೆಯ ಬೇಕಾಗಿದೆ. ಯಾರು ಯಾರು ಏಕೆ ನೆನೆಯಬೇಕೆಂದು ಸಣ್ಣದೊಂದು ಪಟ್ಟಿಯನ್ನು ಸಂಶೋಧಕ ಅರುಣ್ ಜೋಳದಕೂಡ್ಲಿಗಿಯವರು ಮಾಡಿದ್ದಾರೆ. ಗಮನಿಸಿ.</strong></p>



<p><strong>ಟಿಪ್ಪುವನ್ನು ಮಹಿಳೆಯರೇಕೆ ನೆನೆಯಬೇಕು?</strong></p>



<ol class="wp-block-list" type="1">
<li>ಸಾಮಾಜಿಕ‌ ಪಿಡುಗನ್ನು ನಿಶೇಧಿಸಿದ.</li>



<li>ಮನೆಗೆಲಸಕ್ಕೆ ಗುಲಾಮ ಮಹಿಳೆಯರನ್ನು ನೇಮಿಸಿ ಕೊಳ್ಳುವುದನ್ನು ನಿಶೇಧಿಸಿದ.</li>



<li>ಮಲಬಾರ್ ಪ್ರಾಂತದಲ್ಲಿದ್ದ ಬಹುಪತ್ನಿತ್ವ ಪದ್ಧತಿಯನ್ನು‌ ನಿಶೇಧಿಸಿದ.</li>



<li>ಮಲಬಾರಿನ ಬುಡಕಟ್ಟು ಮಹಿಳೆಯರು ಸೊಂಟದ ಮೇಲೆ ಉಡುಪು ಧರಿಸುವಂತಿರದ ಅಮಾನವೀಯ ಕ್ರೌರ್ಯವನ್ನು ನಿಶೇಧಿಸಿ ಉಡುಪು ಧರಿಸುವಂತೆ ನಿಯಮ ಜಾರಿಗೊಳಿಸಿದ.</li>



<li>ಮದುವೆಯ ದುಂದು ವೆಚ್ಚವನ್ನು ನಿಯಂತ್ರಿಸಿ ಸರಳ ಮದುವೆಗಳನ್ನು ಬೆಂಬಲಿಸಿದ.&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp; &nbsp;</li>
</ol>



<p><strong>ಟಿಪ್ಪುವನ್ನು ರೈತರೇಕೆ ನೆನೆಯಬೇಕು?</strong></p>



<ol class="wp-block-list" type="1">
<li>ರೈತರ ಜೀವ ಹಿಂಡುತ್ತಿದ್ದ ಸ್ಥಳೀಯ ಪಾಳೆಯಗಾರರನ್ನು ಮಟ್ಟಹಾಕಿನು.</li>



<li>ಮಧ್ಯವರ್ತಿ ದಲ್ಲಾಳಿಗಳನ್ನು ನಿಯಂತ್ರಿಸಿ ರೈತ ಮತ್ತು ಸರಕಾರದ ನೇರ ಸಂಪರ್ಕಕ್ಕೆ ಕ್ರಮ ಕೈಗೊಂಡನು.</li>



<li>ಜಮೀನ್ದಾರಿ ಪದ್ಧತಿಯನ್ನು ನಿಯಂತ್ರಿಸಿ, <strong>ತಕಾವಿ </strong>ಕಿರುಸಾಲ ಯೋಜನೆಯನ್ನು ಜಾರಿಗೆ ತಂದನು.</li>



<li>ರೈತರಿಗಾಗಿ ಸಹಕಾರಿ ಬ್ಯಾಂಕ್ ಸ್ಥಾಪಿಸಿದನು.</li>



<li>ತೆರಿಗೆಯಲ್ಲಿ ದೊಡ್ಡ ಸುಧಾರಣೆ ತರಲಾಯಿತು. ಹೊಲ ಬೆಳೆ ಎಲ್ಲವನ್ನು ಸರ್ವೆಮಾಡಿ ನ್ಯಾಯಯುತ ತೆರಿಗೆ ವಿಧಿಸತೊಡಗಿದ.</li>



<li>ಬಂಗಾಳದಿಂದ ರೇಶ್ಮೆಹುಳು ತರಿಸಿ <strong>ರೇಶ್ಮೆ ಕೃಷಿ</strong> ಯನ್ನು ಆರಂಭಿಸಿದ.</li>



<li>ನೀರಾವರಿಗಾಗಿ 39,000 ಕೆರೆಕಟ್ಟೆಗಳನ್ನು ಕಟ್ಟಿಸಿದ, 16,000 ಬಾವಿಗಳನ್ನು ತೋಡಿಸಿದ. 24 ಕಡೆ ನದಿ ಆಣೆಕಟ್ಟೆಗಳನ್ನು ಕಟ್ಟಿಸಿ ನೀರಾವರಿ ಕೃಷಿಯನ್ನು ಅಭಿವೃದ್ಧಿಗೊಳಿಸಿದ. 1803-04 ರ ಹೊತ್ತಲ್ಲಿ 30 ಲಕ್ಷ ಎಕರೆ ಜಮೀನಿನಲ್ಲಿ 8 ಲಕ್ಷ ಎಕರೆ ಜಮೀನು ಅಂದರೆ ಶೇ 35 ರಷ್ಟು ನೀರಾವರಿಯಾಯಿತು.</li>



<li>1798 ರಲ್ಲಿ KRS ಇರುವ ಜಾಗದಲ್ಲಿ ಕಾವೇರಿ ನದಿಗೆ ಬೃಹತ್ ಆಣೆಕಟ್ಟು ಕಟ್ಟಿಸುವ ಅಡಿಗಲ್ಲು ಹಾಕಿಸಿದ.</li>



<li>ಕಬೀರ್ ಕಾಸರ್ ಗುರುತಿಸುವಂತೆ, ರೈತನ ಜಾತಿ, ಮತ, ಪಂಥ, ಧರ್ಮ ಏನೇ ಇದ್ದರೂ <strong>ಉಳುವವನೆ ಭೂಒಡೆಯ</strong> ಎಂಬ ಕ್ರಾಂತಿಕಾರಿ ಯೋಜನೆಯನ್ನು ತಂದನು.</li>



<li>ಜೀತ ಪದ್ಧತಿ ಮುಕ್ತಗೊಳಿಸಿ <strong>ದಿನಕೂಲಿ</strong> ಪದ್ಧತಿಯನ್ನು‌ ಜಾರಿಗೊಳಿಸಿದನು.</li>



<li>ರೈತರ ಆರೋಗ್ಯ&nbsp; ಹಿತದೃಷ್ಟಿಯಿಂದ <strong>ಗಾಂಜಾ</strong> ಮತ್ತು <strong>ಮದ್ಯಪಾನ ನಿಶೇಧ</strong> ಜಾರಿಗೆ ತರುತ್ತಾನೆ.&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp; &nbsp;</li>
</ol>



<p><strong>ಟಿಪ್ಪುವನ್ನು ಈ ನಾಡಿನ ದಲಿತರೇಕೆ ನೆನೆಯಬೇಕು?</strong></p>



<ol class="wp-block-list" type="1">
<li>ತನ್ನ ರಾಜ್ಯದಲ್ಲಿ <strong>ಅಸ್ಷೃಶ್ಯತೆಯ</strong> ಆಚರಣೆಯನ್ನು ನಿಶೇಧ ಮಾಡುತ್ತಾನೆ.</li>



<li>2.ಟಿಪ್ಪು ಕಟ್ಟಿಸಿದ ಕೆರೆ ಬಾವಿಗಳಿಗೆ ದಲಿತರನ್ನು <strong>ನೀರಗಂಟಿ</strong> ಗಳನ್ನಾಗಿ ನೇಮಿಸುತ್ತಾರೆ.</li>



<li>3.ನಂಜನಗೂಡಿನಲ್ಲಿ 500 ಬ್ರಾಹ್ಮಣರಿಗಿದ್ದ 14,000 ಎಕರೆ ಜಮೀನನ್ನು ಹೊಲವಿಲ್ಲದ 700 ದಲಿತ ಶೂದ್ರರಿಗೆ ಹಂಚುತ್ತಾನೆ.</li>



<li>ಜೀತಪದ್ಧತಿಗೆ ಬಲಿಯಾಗಿದ್ದ ಬಹುಸಂಖ್ಯಾತ ದಲಿತರನ್ನು <strong>ಜೀತಪದ್ಧತಿ‌ ನಿಶೇಧ</strong> ಕಾಯ್ದೆ ಬಿಡುಗಡೆಗೊಳಿಸುತ್ತದೆ.</li>



<li>6.&#8217;ಉಳುವವನೆ ಭೂ ಒಡೆಯ&#8217; ಕಾನೂನಿನಡಿ&nbsp; ಉಳುವ ಭೂಮಿಗೆ ಒಡೆಯರಾದವರಲ್ಲಿ ದಲಿತರ ಪಾಲು ದೊಡ್ಡದಿದೆ.&nbsp;&nbsp;&nbsp;</li>
</ol>



<p><strong>ಟಿಪ್ಪುವನ್ನು ಹಿಂದುಗಳೇಕೆ‌ ನೆನೆಯಬೇಕು?</strong></p>



<ol class="wp-block-list" type="1">
<li>ಬಹುಸಂಖ್ಯಾತ ಹಿಂದುಗಳಿರುವ ತನ್ನ ರಾಜ್ಯದಲ್ಲಿ ಆತ ಮುಸ್ಲಿಮರಿಗಿಂತ ಹಿಂದುಗಳಿಗೆ ಹೆಚ್ಚು ಕೆಲಸ ಮಾಡಿದ್ದಾನೆ.</li>



<li>ಟಿಪ್ಪುವಿನ ರಾಜ್ಯನೀತಿಯ ಮುಖ್ಯ ಅಂಶ <strong>ಜಾತ್ಯತೀತತೆ</strong></li>



<li>1916 ರಲ್ಲಿ ಆರ್.ನರಸಿಂಹಾಚಾರ್ಯರು ಟಿಪ್ಪು ಶೃಂಗೇರಿಗೆ ಬರೆದ ಪತ್ರಗಳನ್ನು ಪತ್ತೆಹಚ್ಚಿದ್ದಾರೆ. ಈ ಪತ್ರಗಳನ್ನು ಓದಿದರೆ ಟಿಪ್ಪುವಿನ ಧರ್ಮಾತೀತ ಗುಣ ತಿಳಿಯುತ್ತದೆ. ಮರಾಠರ ಪರುಶುರಾಮ ಭಾವು ಶೃಂಗರಿಯ ಮಠವನ್ನು ದಾಳಿ ಮಾಡಿದಾಗ ಶಾರದಾ ಮಠವನ್ನು ಮತ್ತೆ ಜೀರ್ಣೋದ್ಧಾರ ಮಾಡಿದವನು ಟಿಪ್ಪು.</li>



<li>ನಂಜನಗೂಡಿನ ಕಳಲೆಯ ಲಕ್ಷ್ಮಿಕಾಂತ ದೇವಸ್ಥಾನಕ್ಕೆ ನಾಲ್ಕು ಬೆಳ್ಳಿಬಟ್ಟಲು, ಮೇಲುಕೋಟೆ ಚೆಲುವ ನಾರಾಯಣ ದೇವಸ್ಥಾನಕ್ಕೆ ಆನೆ, ಬೆಳ್ಳಿ ಪಾತ್ರೆಗಳನ್ನು ಕೊಟ್ಟಿದ್ದಾನೆ. ನಂಜನಗೂಡಿನ ಶ್ರೀಕಂಠೇಶ್ವರ ದೇಗುಲಕ್ಕೆ ಅಪೂರ್ವ ಪಚ್ಚೆಲಿಂಗ ಕೊಡಿಸಿದ್ದಾನೆ. ಈ ಪಟ್ಟಿ ದೊಡ್ಡದಿದೆ. ಒಟ್ಟು 154 ದೇವಾಲಯಗಳಿಗೆ ದತ್ತಿ ಕಾಣಿಕೆ ನೀಡಿದ್ದಾನೆ.</li>



<li>ಆಡಳಿತದ ಪ್ರಮುಖ ಹುದ್ದೆಗಳಲ್ಲಿ ಹಿಂದೂಗಳನ್ನು ನೇಮಿಸಿದ್ದ.</li>



<li>ದಿವಾನ್ ಪೂರ್ಣಯ್ಯ-ಕಂದಾಯ, ಹಣಕಾಸು ಸಚಿವ</li>



<li>ಕೃಷ್ಣಾರಾವ್- ಕೋಶಾಧಿಕಾರಿ.</li>



<li>ಶ್ಯಾಮ್ ಅಯ್ಯಂಗಾರ್-ಅಂಚೆ ಸಚಿವರು.</li>



<li>ಹರಿಸಿಂಗ್- ಅಶ್ವದಳದ ಮುಖ್ಯಸ್ಥ</li>



<li>ಶಿವಾಜಿ ಎಂಬ ಮರಾಠಿ ಸೈನಿಕ 3,000 ಅಶ್ವದಳದ ಮುಖ್ಯಸ್ಥನಾಗಿದ್ದ.</li>



<li>ನರಸಿಂಗ ರಾವ್, ಶ್ರೀನಿವಾಸರಾವ್, ಅಪ್ಪಾಜಿರಾವ್ ಟಿಪ್ಪುಗೆ ಮುತ್ಸದ್ದಿ ಸಲಹೆಗಾರರಾಗಿದ್ದರು.</li>
</ol>



<p>ಹೀಗೆ ಪಟ್ಟಿ ಬೆಳೆಯುತ್ತದೆ.<br><br></p>



<p><a><strong>ಅರುಣ್ ಜೋಳದಕೂಡ್ಲಿಗಿ</strong></a></p>
]]></content:encoded>
					
		
		
			</item>
		<item>
		<title>ಎರಡು ವರ್ಷ ಪೂರೈಸಿದ `ಅಂಬೇಡ್ಕರ್ ಓದು’</title>
		<link>https://peepalmedia.com/ambedkar-odu-completes-two-years/</link>
		
		<dc:creator><![CDATA[Arun Jolada Kudligi]]></dc:creator>
		<pubDate>Sat, 15 Oct 2022 12:12:38 +0000</pubDate>
				<category><![CDATA[ವಿಶೇಷ]]></category>
		<category><![CDATA[Ambedkar]]></category>
		<category><![CDATA[Ambedkar odu]]></category>
		<category><![CDATA[Arun Jolada kudligi]]></category>
		<category><![CDATA[Bhimrao Ramji Ambedkar]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Series]]></category>
		<category><![CDATA[state politics]]></category>
		<category><![CDATA[writing]]></category>
		<category><![CDATA[youtube]]></category>
		<guid isPermaLink="false">https://peepalmedia.com/?p=10903</guid>

					<description><![CDATA[ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳನ್ನು ಅಂತರ್ಜಾಲದ ಮೂಲಕ ಮನೆ ಮನಗಳಿಗೆ ತಲುಪಿಸುವ `ಅಂಬೇಡ್ಕರ್ ಓದು’ ಯೂಟೂಬ್ ಸರಣಿಯು ಇದೀಗ ಎರಡು ವರ್ಷ ಪೂರೈಸಿದೆ. ಅಂಬೇಡ್ಕರ್ ಓದು ಸರಣಿ 525 ನೇ ಸಂಚಿಕೆ ತಲುಪಿದೆ. ಅಂಬೇಡ್ಕರ್ ಬೌದ್ಧ ದಮ್ಮ ಸ್ವೀಕರಿಸಿದ ದಿನದ ಅಕ್ಟೋಬರ್-14 ರ ವಿಶೇಷ ಸಂಚಿಕೆಯನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಟಿ.ಎಂ.ಭಾಸ್ಕರ್ ಅವರು ಓದಿದ್ದಾರೆ. ಸೆಪ್ಟಂಬರ್ 7, 2020 ರಂದು ಲೇಖಕಿ ಹೆಚ್.ಎಸ್.ಅನುಪಮಾ ಮೊದಲ ಸಂಚಿಕೆ ಓದಿದ್ದರು. ಹೀಗೆ ಆರಂಭವಾದ ಅಂಬೇಡ್ಕರ್ ಓದು ಎರಡು ವರ್ಷ ಪೂರೈಸಿ [&#8230;]]]></description>
										<content:encoded><![CDATA[
<p>ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳನ್ನು ಅಂತರ್ಜಾಲದ ಮೂಲಕ ಮನೆ ಮನಗಳಿಗೆ ತಲುಪಿಸುವ `ಅಂಬೇಡ್ಕರ್ ಓದು’ ಯೂಟೂಬ್ ಸರಣಿಯು ಇದೀಗ ಎರಡು ವರ್ಷ ಪೂರೈಸಿದೆ. ಅಂಬೇಡ್ಕರ್ ಓದು ಸರಣಿ 525 ನೇ ಸಂಚಿಕೆ ತಲುಪಿದೆ. ಅಂಬೇಡ್ಕರ್ ಬೌದ್ಧ ದಮ್ಮ ಸ್ವೀಕರಿಸಿದ ದಿನದ ಅಕ್ಟೋಬರ್-14 ರ ವಿಶೇಷ ಸಂಚಿಕೆಯನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಟಿ.ಎಂ.ಭಾಸ್ಕರ್ ಅವರು ಓದಿದ್ದಾರೆ. ಸೆಪ್ಟಂಬರ್ 7, 2020 ರಂದು ಲೇಖಕಿ ಹೆಚ್.ಎಸ್.ಅನುಪಮಾ ಮೊದಲ ಸಂಚಿಕೆ ಓದಿದ್ದರು. ಹೀಗೆ ಆರಂಭವಾದ ಅಂಬೇಡ್ಕರ್ ಓದು ಎರಡು ವರ್ಷ ಪೂರೈಸಿ ಮುನ್ನಡೆದಿದೆ. ಈತನಕ 351 ಜನರಿಂದ 525 ಸರಣಿಗಳನ್ನು ಓದಿಸಲಾಗಿದೆ, ಈಗ ಅಂಬೇಡ್ಕರ್ ಚಿಂತನೆಗಳನ್ನು ಕನ್ನಡದಲ್ಲಿ 120 ಗಂಟೆಗಳ ಕಾಲ ಕೇಳಬಹುದಾಗಿದೆ. ಈತನಕ 167 ಮಹಿಳೆಯರು 300 ಕ್ಕಿಂತ ಹೆಚ್ಚಿನ ಸರಣಿಗಳನ್ನು ಓದಿರುವುದು ವಿಶೇಷವಾಗಿದೆ.</p>



<p>&nbsp;500 ನೇ ಸಂಚಿಕೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಓದಿದ್ದರು. ಈ ಹಿಂದೆ ರಾಜ್ಯಸಭಾ ಸದಸ್ಯರಾದ ಎಲ್.ಹನುಮಂತಯ್ಯ, ಸಂಗೀತ ನಿರ್ದೇಶಕ ಹಂಸಲೇಖ, ನಟರಾದ ರಮೇಶ್ ಅರವಿಂದ, ಕಿಶೋರ್, ರಂಗಾಯಣ ರಘು, ಅಚ್ಯುತ ಕುಮಾರ್, ಸಿನೆಮಾ ನಿರ್ದೇಶಕರಾದ ಬಿ.ಸುರೇಶ್, ಬಿ.ಎಂ ಗಿರಿರಾಜ, ರಾಜಕಾರಣಿ ಶ್ರೀಮತಿ ಮೋಟಮ್ಮ, ಬಿಜಾಪುರದ ಮಹಿಳಾ ವಿವಿಯ ವಿಶ್ರಾಂತ ಕುಲಪತಿಗಳಾದ ಪ್ರೊ.ಸಭಿಹಾ ಲೇಖಕರಾದ ದೇವನೂರು ಮಹಾದೇವ, ಅಮರೇಶ ನುಗಡೋಣಿ, ನಟರಾಜ ಹುಳಿಯಾರ, ಹೆಚ್.ಎಸ್.ರಾಘವೇಂದ್ರರಾವ್, ಜಾನಪದ ಅಕಾಡೆಮಿ ಅಧ್ಯಕ್ಷರಾದ ಪದ್ಮಶ್ರೀ ಮಂಜಮ್ಮ ಜೋಗತಿ ಪತ್ರಕರ್ತರಾದ ದಿನೇಶ ಅಮಿನಮಟ್ಟು, ರವೀಂದ್ರ ಭಟ್, ವೈ.ಗ ಜಗದೀಶ, ರಶ್ಮಿ ಎಸ್. ಹೀಗೆ ಸಾಹಿತಿಗಳು, ಪತ್ರಕರ್ತರು, ನಟ ನಟಿಯರು, ಶಿಕ್ಷಕ ಶಿಕ್ಷಕಿಯರು, ವಿದ್ಯಾರ್ಥಿಗಳು, ರೈತರು ಎಲ್ಲಾ ಹಿನ್ನೆಲೆಯವರೂ ಓದಿನ ಭಾಗವಾಗಿದ್ದಾರೆ.</p>



<p>2019 ರ ಏಪ್ರಿಲ್ 14 ರಂದು ನನ್ನ ಪೇಸ್ ಬುಕ್ ಪೇಜಲ್ಲಿ ಅಂಬೇಡ್ಕರ್ ಓದನ್ನು ಲೈವ್ ಮಾಡಿದ್ದೆ. ಈ ಓದಿಗೆ ಸಿಕ್ಕ ಪ್ರತಿಕ್ರಿಯೆ ಓದನ್ನು ನಿರಂತರವಾಗಿ ನಡೆಸುವ ಕನಸೊಂದನ್ನು ಹುಟ್ಟಿಸಿತ್ತು. ಖಾಸಗಿ ವಾಹಿನಿಯಲ್ಲಿ ಮಹಾನಾಯಕ ದಾರವಾಹಿ ಶುರುವಾದ ನಂತರ ಅಂತರ್ಜಾಲದಲ್ಲಿ ಕನ್ನಡದಲ್ಲಿ ಅಂಬೇಡ್ಕರ್ ಹುಡುಕಾಟ ಹೆಚ್ಚಾಯಿತು. ಆದರೆ ಆಗ ಅಂತರ್ಜಾಲದಲ್ಲಿ ಕನ್ನಡದಲ್ಲಿ ಅಂಬೇಡ್ಕರ್ ಅರಿವು ಹೆಚ್ಚಾಗಿ ಇರಲಿಲ್ಲ, ಆಗ ಅಂತರ್ಜಾಲದಲ್ಲಿ ಅಂಬೇಡ್ಕರ್ ಚಿಂತನೆಗಳು ಸಿಗುವಂತಾಗಬೇಕು ಎಂದು ಅಂಬೇಡ್ಕರ್ ಓದು ಪ್ರಾರಂಭಿಸಲಾಯಿತು. ನಾನು ನೆಪಮಾತ್ರನಾಗಿದ್ದು `ಇದು ಸಹಭಾಗಿತ್ವದ ಯಶಸ್ಸು, `ಎಲ್ಲರ ಅಂಬೇಡ್ಕರ್’ ಎನ್ನುವ ತತ್ವದಡಿ ಎಲ್ಲರೂ ಅಂಬೇಡ್ಕರ್ ಅವರನ್ನು ಓದುವಂತಾಗಬೇಕು, ಎಲ್ಲರೂ ಕೇಳುವಂತಾಗಬೇಕು. ಅಂಬೇಡ್ಕರ್ ಚಿಂತನೆ ಕನ್ನಡದಲ್ಲಿ ಕೇಳಲು ಅಂತರ್ಜಾಲದಲ್ಲಿ ಸಿಗುವಂತಾಗಬೇಕು ಎನ್ನುವ ಕನಸು ಈ ಸರಣಿಯ ಹಿಂದಿದೆ.</p>



<p></p>



<figure class="wp-block-image size-full"><img fetchpriority="high" decoding="async" width="696" height="409" src="https://peepalmedia.com/wp-content/uploads/2022/10/ambedkar-odu-sarani-peepal-media.jpg" alt="" class="wp-image-10904" srcset="https://peepalmedia.com/wp-content/uploads/2022/10/ambedkar-odu-sarani-peepal-media.jpg 696w, https://peepalmedia.com/wp-content/uploads/2022/10/ambedkar-odu-sarani-peepal-media-300x176.jpg 300w, https://peepalmedia.com/wp-content/uploads/2022/10/ambedkar-odu-sarani-peepal-media-150x88.jpg 150w" sizes="(max-width: 696px) 100vw, 696px" /><figcaption>ಡಾ. ಬಿ.ಆರ್‌ ಅಂಬೇಡ್ಕರ್‌ ಮತ್ತು ಅರುಣ್ ಜೋಳದಕೂಡ್ಲಿಗಿ</figcaption></figure>



<p> ಈ ತರಹದ ಅಂಬೇಡ್ಕರ್ ಆಡಿಯೋ ಆರ್ಖೈವ್ ರೂಪುಗೊಂಡಿರುವುದು ಭಾರತದ ದೇಸಿ ಭಾಷೆಗಳಲ್ಲಿ ಇದು ಮೊದಲ ಪ್ರಯತ್ನ. ಇದು ಇತರೆ ಭಾಷಿಕರಿಗೆ ಮಾದರಿಯಾಗಬೇಕು ಎನ್ನುವುದು ನನ್ನ ಕನಸಾಗಿದೆ. ಈ ತನಕ ಯೂಟೂಬ್ ಚಾನಲ್ಲಿನಲ್ಲಿ ಒಂಬತ್ತು ಲಕ್ಷದಷ್ಟು ಕೇಳುವಿಕೆ ಸಾಧ್ಯವಾಗಿದೆ. ಅನೇಕರು ಈ ಓದಿನಿಂದ ಪ್ರೇರಿತರಾಗಿದ್ದಾರೆ. ಇದೀಗ ಅನೇಕರು ಅಂಬೇಡ್ಕರ್ ಓದಿನ ಅವಕಾಶಕ್ಕಾಗಿ ಕೇಳುತ್ತಿದ್ದಾರೆ. ಇದು ಈ ಸರಣಿಯ ರೂಪಾಂತರವಾಗಿದೆ. ಅಂಬೇಡ್ಕರ್ ಅವರ ಸಮಕಾಲೀನವೆನಿಸುವ ಎಲ್ಲಾ ಬರಹಗಳನ್ನು ಓದಿಸುವ ಗುರಿ ಈ ಸರಣಿಗಿದೆ. ಹಾಗಾಗಿ ಅಂಬೇಡ್ಕರ್ ಓದು ಇನ್ನೂ ಮುಂದುವರಿಯಲಿದೆ. ಅಂಬೇಡ್ಕರ್ ಓದಿನ ಸಹಭಾಗಿಗಳಾದ ಎಲ್ಲರಿಗೂ ಮತ್ತೊಮ್ಮೆ ಜೈಭೀಮ್ ನಮನಗಳನ್ನು ಸಲ್ಲಿಸುವೆ.</p>
]]></content:encoded>
					
		
		
			</item>
		<item>
		<title>ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿ ನಿಜಕ್ಕೂ ದರೋಡೆಕೋರ ಆಗಿದ್ದರೆ?</title>
		<link>https://peepalmedia.com/maharshi-valmiki-was-not-dacoit/</link>
		
		<dc:creator><![CDATA[Arun Jolada Kudligi]]></dc:creator>
		<pubDate>Sun, 09 Oct 2022 03:30:56 +0000</pubDate>
				<category><![CDATA[ಧರ್ಮ- ಸಂಸ್ಕೃತಿ]]></category>
		<category><![CDATA[Arun Jolada kudligi]]></category>
		<category><![CDATA[epics]]></category>
		<category><![CDATA[india]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[rama]]></category>
		<category><![CDATA[ramayana]]></category>
		<category><![CDATA[special]]></category>
		<category><![CDATA[special story]]></category>
		<category><![CDATA[valmiki]]></category>
		<category><![CDATA[writing]]></category>
		<guid isPermaLink="false">https://peepalmedia.com/?p=9494</guid>

					<description><![CDATA[ಈ ದಿನದ ವಾಲ್ಮೀಕಿ&#160; ಜಯಂತಿ ವಿಶೇಷವಾಗಿದೆ. ಕಾರಣ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡುವಂತೆ ಆಗ್ರಹಿಸಿ ಪ್ರಸನ್ನಾನಂದ ಸ್ವಾಮೀಜಿ 240 ದಿನ ನಗರದ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಸತ್ಯಾಗ್ರಹ ನಡೆಸಿದ್ದರು. ಪರಿಣಾಮವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ರಾಜ್ಯ ಸರಕಾರ ಹೆಚ್ಚಿಸುವ ಅಧಿಕೃತ ಘೋಷಣೆಯನ್ನು ಇಂದು ಮುಖ್ಯಮಂತ್ರಿಗಳು ಮಂಡಿಸುವ ಸಾಧ್ಯತೆ ಇದೆ. ರಾಜ್ಯ ಸರ್ಕಾರದ ಈ ನಿಲುವನ್ನು ಸ್ವಾಗತಿಸಿ ಪ್ರಸನ್ನಾಂದ ಸ್ವಾಮೀಜಿ ತಮ್ಮ ‌ಬೇಡಿಕೆ ಈಡೇರಿದ ನಿಟ್ಟಿನಲ್ಲಿ ಧರಣಿ ಅಂತ್ಯಗೊಳಿಸುವ ಮಾತನಾಡಿದ್ದಾರೆ. ಹಾಗಾದಲ್ಲಿ [&#8230;]]]></description>
										<content:encoded><![CDATA[
<p></p>



<p style="font-size:20px">ಈ ದಿನದ ವಾಲ್ಮೀಕಿ&nbsp; ಜಯಂತಿ ವಿಶೇಷವಾಗಿದೆ. ಕಾರಣ</p>



<p style="font-size:20px"><strong>ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡುವಂತೆ ಆಗ್ರಹಿಸಿ ಪ್ರಸನ್ನಾನಂದ ಸ್ವಾಮೀಜಿ 240 ದಿನ ನಗರದ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಸತ್ಯಾಗ್ರಹ ನಡೆಸಿದ್ದರು. ಪರಿಣಾಮವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ರಾಜ್ಯ ಸರಕಾರ ಹೆಚ್ಚಿಸುವ ಅಧಿಕೃತ ಘೋಷಣೆಯನ್ನು ಇಂದು ಮುಖ್ಯಮಂತ್ರಿಗಳು ಮಂಡಿಸುವ ಸಾಧ್ಯತೆ ಇದೆ. ರಾಜ್ಯ ಸರ್ಕಾರದ ಈ ನಿಲುವನ್ನು ಸ್ವಾಗತಿಸಿ ಪ್ರಸನ್ನಾಂದ ಸ್ವಾಮೀಜಿ ತಮ್ಮ ‌ಬೇಡಿಕೆ ಈಡೇರಿದ ನಿಟ್ಟಿನಲ್ಲಿ ಧರಣಿ ಅಂತ್ಯಗೊಳಿಸುವ ಮಾತನಾಡಿದ್ದಾರೆ. ಹಾಗಾದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರುವ 54 ಬುಡಕಟ್ಟುಗಳು ಇಂದು ವಿಜಯದ ದಿವಸವನ್ನಾಗಿ ಆಚರಿಸಬೇಕಿದೆ.</strong></p>



<p style="font-size:20px">________&nbsp;&nbsp;&nbsp;</p>



<p style="font-size:20px">ಕರ್ನಾಟಕದಲ್ಲಿ ಆಚರಿಸಲ್ಪಡುವ ವಾಲ್ಮೀಕಿ ಜಯಂತಿಗಳಲ್ಲಿ ಮಹರ್ಷಿ ವಾಲ್ಮೀಕಿಯ ಬಗೆಗೆ ಕಡ್ಡಾಯವಾಗಿ ಉಲ್ಲೇಖಿಸುವ ಕಟ್ಟುಕತೆಯೊಂದಿದೆ. ಅದೆಂದರೆ ವಾಲ್ಮೀಕಿ ಪೂರ್ವಾಶ್ರಮದಲ್ಲಿ ರತ್ನಾಕರ ಎಂಬ ದರೋಡೆಕೋರನಾಗಿದ್ದ. ನಾರದರು ಒಮ್ಮೆ ಎದುರಾಗಿ ನಿನ್ನ ಈ ಅಪರಾದದಲ್ಲಿ ಮನೆಯವರು ಪಾಲುದಾರರೇ? ಎನ್ನುತ್ತಾನೆ, ವಿಚಾರಿಸಲಾಗಿ ರತ್ನಾಕರನ ಕುಟುಂಬ ಆತನ ಅಪರಾಧದಲ್ಲಿ ಪಾಲು ಪಡೆಯಲು ನಿರಾಕರಿಸುತ್ತಾರೆ. ನಂತರ ಆತನಿಗೆ ಅರಿವಾಗಿ ದರೋಡೆಯನ್ನು ನಿಲ್ಲಿಸಿ ತಪಸ್ಸು ಮಾಡುತ್ತಾನೆ. ಬಹುದಿನಗಳ ನಂತರ ಜ್ಞಾನೋದಯವಾಗಿ ತಪಸ್ಸಿಗೆ ಕೂತಲ್ಲಿಯೇ ಬೆಳೆದಿದ್ದ ಹುತ್ತವನ್ನು ಒಡೆದು ವಾಲ್ಮೀಕಿಯಾಗಿ ಹೊರಬಂದು ನಾರದರ ನಿರ್ದೇಶನದಂತೆ ರಾಮಾಯಣ ರಚನೆ ಮಾಡಿದ ಎನ್ನುವ ಕತೆ ಹೇಳುತ್ತಾರೆ. ಇದನ್ನು ವಿಶ್ವವಿದ್ಯಾಲಯಗಳ ಅಧ್ಯಾಪಕರಿಂದ ಹಿಡಿದು, ರಾಜಕಾರಣಿ, ಸಾಮಾನ್ಯ ಜನರ ತನಕ ಈ ಕತೆಯನ್ನು ಹೇಳುತ್ತಲೇ ಬಂದಿದ್ದಾರೆ. ಹಾಗಾದರೆ ವಾಲ್ಮೀಕಿ ದರೋಡೆಕೋರನಾಗಿದ್ದ ಎನ್ನುವುದಕ್ಕೆ ಪುರಾವೆ ಏನು?</p>



<p style="font-size:20px">ಒಂದೋ ಸ್ವತಃ ವಾಲ್ಮೀಕಿ ತಾನೇ ಬರೆದ ರಾಮಾಯಣದಲ್ಲಿ ದರೋಡೆಕೋರನಾಗಿರುವ ಬಗ್ಗೆ ಹೇಳಿಕೊಂಡಿರಬೇಕು. ಇಲ್ಲವೇ ವಾಲ್ಮೀಕಿಯ ಜತೆ ಬದುಕಿದ್ದ ಸಮಕಾಲೀನರು ಈತನ ಬದುಕನ್ನು ನೋಡಿ ಉಲ್ಲೇಖಿಸಿರಬೇಕು. ಸದ್ಯಕ್ಕೆ ಈ ಎರಡೂ ಪುರಾವೆಗಳು ಇಲ್ಲ. ಹಾಗಾದರೆ ವಾಲ್ಮೀಕಿ ದರೋಡೆಕೋರನಾಗಿದ್ದ ಎನ್ನುವ ಕಥೆ ಹುಟ್ಟಿದ್ದೆಲ್ಲಿ? ಚಾರಿತ್ರಿಕ ಅಧ್ಯಯನಗಳ ಕಡೆ ಹೊರಳೋಣ. ವಾಲ್ಮೀಕಿ ಮತ್ತು ರಾಮಾಯಣ ರಚನೆ ಕುರಿತಂತೆ ವ್ಯಾಪಕವಾದ ಅಧ್ಯಯನಗಳು ನಡೆದಿವೆ. ಇತಿಹಾಸ ತಜ್ಞ ಹೆಚ್.ಡಿ. ಸಾಂಕಾಲಿಯ ಉಲ್ಲೇಖಿಸುವಂತೆ, ಈ ಅಧ್ಯಯನ 1843 ರಿಂದ 1867 ರ ಅವಧಿಯಲ್ಲಿ ಗೊರೆಸ್ಯೋನ ಪ್ರಕಟಿಸಿದ ರಾಮಾಯಣದ ಆರು ಸಂಪುಟಗಳಿಂದ ಆರಂಭವಾಗಿದೆ. ಕಾಲನಿರ್ಣಯದ ಬಗ್ಗೆ ಎ.ವೆಬರ್ (1873) ಮೊದಲು ವಿಮರ್ಶೆ ಮಾಡಿರಬೇಕೆಂದು ಅಭಿಪ್ರಾಯ ತಾಳುತ್ತಾರೆ. ವಿಲಿಯಂ ಜೋನ್ಸ್, ರಾಮಸ್ವಾಮಿಶಾಸ್ತ್ರಿ, ಆರ್.ಸಿ.ಮುಜುಂದಾರ್, ಗೊರೇಸಿಯಾ, ಪುಲಸ್ಕರ್, ಪಿ.ವಿ ಕಾಣೆ, ಡಿ.ಡಿ.ಕೋಸಾಂಬಿ, ಎ.ಎಲ್.ಬಾಷಂ, ರೋಮಿಲಾ ಥಾಫರ್, ಇರ್ಫಾನ್ ಹಬೀಬ್, ಪೆರಿಯಾರ್, ಲೋಹಿಯಾ, ಅಂಬೇಡ್ಕರ್ ತನಕ ಹೀಗೆ ನೂರಾರು ಜನ ಇತಿಹಾಸ ತಜ್ಞರು, ಪುರಾತತ್ವಜ್ಞರು, ಹಲವು ಜ್ಞಾನಶಾಖೆಗಳ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿದ್ದಾರೆ.</p>



<p style="font-size:20px">ವಾಲ್ಮೀಕಿ ರಾಮಾಯಣದ ರಚನೆಯ ಕಾಲ ನಿರ್ಣಯದ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ, ಕ್ರಿ.ಪೂ. 3 ರಿಂದ 5 ನೇ ಶತಮಾನದ ಅಂತರದಲ್ಲಿ ವಾಲ್ಮೀಕಿ ಬದುಕಿದ್ದಿರಬೇಕು, ರಾಮಾಯಣ ರಚನೆಯಾಗಿದ್ದಿರಬೇಕು ಎಂಬ ನಿಲುವಿಗೆ ಹೆಚ್ಚು ಮಾನ್ಯತೆ ದೊರೆತಿದೆ. ಹೀಗೆ ವಾಲ್ಮೀಕಿ ಬದುಕಿದ್ದ ಕಾಲಘಟ್ಟವೇ ಮಸುಕಾಗಿರುವಾಗ ವಾಲ್ಮೀಕಿ ದರೋಡೆಕೋರನಾಗಿದ್ದನ್ನು ನೋಡಿದವರು ಯಾರು? ಮೇಲೆ ಉಲ್ಲೇಖಿಸಿದ ಅಧ್ಯಯನಗಳೂ ಸಹ ರಾಮಾಯಣದ ಕಣ್ಣೋಟದಲ್ಲಿ ವಾಲ್ಮೀಕಿಯ ಜೀವನ ವೃತ್ತಾಂತವನ್ನು ವಿವರಿಸಿದ್ದು ಬಿಟ್ಟರೆ, ಇತರೆ ಜೀವನ ವಿವರಗಳನ್ನು ದಾಖಲಿಸುವುದಿಲ್ಲ. ಹಾಗಾದರೆ ವಾಲ್ಮೀಕಿ ದರೋಡೆಕೋರನಾಗಿದ್ದ ಎನ್ನುವುದರ ನೆಲೆಗಟ್ಟೇನು? ಎನ್ನುವ ಪ್ರಶ್ನೆ ಎದುರು ನಿಲ್ಲುತ್ತದೆ.</p>



<p style="font-size:20px">ಕರ್ನಾಟಕದಲ್ಲಿ ಈ ತನಕ ವಾಲ್ಮೀಕಿ ದರೋಡೆಕೋರನಾಗಿದ್ದನು ಎನ್ನುವ ಕಟ್ಟುಕತೆಯನ್ನು ಬಹಿರಂಗವಾಗಿ ಪ್ರಶ್ನಿಸಿದ್ದಕ್ಕಿಂತ ಒಪ್ಪಿಕೊಂಡಿರುವುದೇ ಹೆಚ್ಚು. ಆದರೆ ಉತ್ತರ ಭಾರತದ ಪಂಜಾಬ್ ಒಳಗೊಂಡಂತೆ ಅಲ್ಲಿನ ವಾಲ್ಮೀಕಿ ಸಮುದಾಯದವರು ವಾಲ್ಮೀಕಿ ದರೋಡೆಕೋರನಾಗಿದ್ದ ಎನ್ನುವ ಉಲ್ಲೇಖ ಮತ್ತು ಕಟ್ಟುಕತೆಗಳ ವಿರುದ್ಧ ಬಂಡೆದ್ದಿದ್ದಾರೆ. ಉಲ್ಲೇಖಿಸಿದವರ ವಿರುದ್ಧ ಎಫ್.ಐ.ಆರ್ ದಾಖಲಿಸಿದ್ದಾರೆ. ಕೋರ್ಟಿನ ಕಟಕಟೆಗೆ ಎಳೆತಂದು ಸಾಕ್ಷಿ ಕೇಳಿದ್ದಾರೆ. 2003 ರಲ್ಲಿ ಪ್ರಸಾರವಾಗಿದ್ದ `ಕುಮ್ ಕುಮ್ ಏಕ್ ಪ್ಯಾರ್ ಬಂಧನ್’ ಎನ್ನುವ ಧಾರವಾಹಿಯಲ್ಲಿ ಮಹರ್ಷಿ ವಾಲ್ಮೀಕಿಯನ್ನು `ಡಾಕು’ ಎಂದು ಪದ ಬಳಸಿ ಪರಿಚಯಿಸಲಾಗಿತ್ತು. ಇದರ ವಿರುದ್ಧ ಎಫ್.ಐ.ಆರ್ ದಾಖಲಾಗಿತ್ತು. ಬ್ಯಾಗ್ ಫಿಲ್ಮ್ ಲಿಮಿಟೆಡ್ ನವರು ಪಂಜಾಬಿನ ವಾಲ್ಮೀಕಿ ಸಮುದಾಯವನ್ನು ಕ್ಷಮೆಕೋರಿದ್ದರು. ಟಿ.ವಿ ಮೂಲಕವೇ ಬಹಿರಂಗ&nbsp; ಕ್ಷಮೆಯಾಚಿಸಿ, ಸ್ಪಷ್ಟನೆಯ ಕಾರ್ಯಕ್ರಮ ಪ್ರಸಾರ ಮಾಡಿ ಕೇಸನ್ನು ವಾಪಾಸು ಪಡೆಯುವಂತೆ ಮನವಿ ಮಾಡಿದ್ದರು. ಇನ್ನು 2009 ರ `ಸ್ಟಾರ್ ಇಂಡಿಯಾ ಪ್ರವೇಟ್ ಲಿಮಿಟೆಡ್ ವರ್ಸಸ್ ಸ್ಟೇಟ್ ಆಫ್ ಪಂಜಾಬ್’ ಕೇಸಿನಲ್ಲಿ ವಾಲ್ಮೀಕಿ ದರೋಡೆಕೋರನಾಗಿರಲಿಲ್ಲ ಎನ್ನುವ ಜಸ್ಟೀಸ್ ರಾಜೀವ ಭಲ್ಲಾ ಅವರ ತೀರ್ಪಿನೊಂದಿಗೆ ತಾರ್ಕಿಕ ಅಂತ್ಯ ಕಂಡಿತು.</p>



<p style="font-size:20px">ಪಂಜಾಬ್‌ನ ಜಲಂಧರ್ ಜಿಲ್ಲೆಯ ಮಾಡೆಲ್ ಟೌನ್‌ನ ರಿಷಿನಗರದ ನಿವಾಸಿ ನವ್ವಿಕಾಸ್ ಎನ್ನುವವರು 6.10.2009 ರಲ್ಲಿ ಸ್ಟಾರ್ ಪ್ಲಸ್ ಟಿವಿಯಲ್ಲಿ `ಸಪ್ನ ಬಾಬುಲ್ ಕಾ ಬಿದಾಯಿ’ ಎನ್ನುವ ದಾರವಾಹಿ ನೋಡುತ್ತಿದ್ದರು. ಆ ದಾರವಾಹಿಯಲ್ಲಿ ವಾಲ್ಮೀಕಿಯ ಋಷಿಪೂರ್ವ ಜೀವನದಲ್ಲಿ ದರೋಡೆಕೋರನಾಗಿದ್ದ, ರೋಡ್ ರಾಬರ್ ಆಗಿದ್ದ ಎನ್ನುವ ಸಂಭಾಷಣೆ ಬರುತ್ತದೆ. ಸ್ವತಃ ವಾಲ್ಮೀಕಿ ಸಮುದಾಯದ ನವ್ವಿಕಾಸ್ ಅವರು ಈ ಸಂಭಾಷಣೆ ಮತ್ತು ದಾರವಾಹಿಯ ವಿರುದ್ಧ ಎಫ್.ಐ.ಆರ್ ದಾಖಲಿಸುತ್ತಾರೆ. ಈ ಕಟ್ಟುಕಥೆಗೆ ದಾಖಲೆ ಕೊಡಿ ಎಂದು ಕೇಳುತ್ತಾರೆ. ಸ್ಥಳೀಯ ಪೋಲೀಸರಿಂದ ನಿರೀಕ್ಷಿತ ಬೆಂಬಲ ಸಿಗದ&nbsp; ಕಾರಣ ನವ್ವಿಕಾಸ್ ಕೋರ್ಟ್ ಮೆಟ್ಟಿಲೇರುತ್ತಾರೆ.</p>



<p style="font-size:20px">ಪಂಜಾಬ್ ಯುನಿವರ್ಸಿಟಿ ಪಾಟಿಯಾಲದ ಪ್ರೊಫೆಸರ್ ಮಂಜುಳಾ ಸಹದೆವ್ ಅವರ ವಾಲ್ಮೀಕಿ ಜೀವನ ವೃತ್ತಾಂತವನ್ನು ಕುರಿತ ಸಂಶೋಧನೆಯನ್ನು ಕೋರ್ಟ್ ಪರಿಶೀಲಿಸುತ್ತದೆ. ಮಂಜುಳ ಸಹದೆವ್ 1979 ರಿಂದ ಪಂಜಾಬ್ ಯುನಿವರ್ಸಿಟಿಯಲ್ಲಿ ಸಂಸ್ಕೃತ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. 1995 &#8211; 2004ರ ತನಕ ಮಹರ್ಷಿ ವಾಲ್ಮೀಕಿ ಚೇರ್ ಮುಖ್ಯಸ್ಥರಾಗಿದ್ದರು. ಸಂಸ್ಕೃತ ಶಾಸ್ತ್ರೀಯ ಭಾಷೆಯ ಖಾಯಂ ಸದಸ್ಯರೂ ಆಗಿದ್ದಂತವರು. ಎಂಬತ್ತರ ದಶಕದಿಂದಲೂ ವಿಶೇಷವಾಗಿ ರಾಮಾಯಣ ಮತ್ತು ವಾಲ್ಮೀಕಿ ಕುರಿತು ನಿರಂತರ ಅಧ್ಯಯನ ಸಂಶೋಧನೆಗಳನ್ನು ಪ್ರಕಟಿಸಿದವರು. `ಮಹರ್ಷಿ ವಾಲ್ಮೀಕಿ ಏಕ್ ಸಮೀಕ್ಷಾತ್ಮಕ ಅಧ್ಯಯನ’ ಇವರ ಮಹತ್ವದ ಸಂಶೋಧನೆ. ಈ ಕೃತಿಯಲ್ಲಿ ಮಹರ್ಷಿ ವಾಲ್ಮೀಕಿ ಋಷಿಪೂರ್ವದಲ್ಲಿ ಡಕಾಯಿತ್, ರೋಡ್ ರಾಬರ್ ಆಗಿರಲಿಲ್ಲ ಎನ್ನುವುದರ ತಾರ್ಕಿಕ ವಿಶ್ಲೇಷಣೆ ಮಾಡಿದ್ದಾರೆ.</p>



<p style="font-size:20px">ಈ ಸಂಶೋಧನೆಯ ಮುಖ್ಯಾಂಶಗಳೆಂದರೆ, ವೇದಗಳ ಕಾಲದಿಂದ ಕ್ರಿ.ಶ 9 ನೇ ಶತಮಾನದ ತನಕ ವಾಲ್ಮೀಕಿ ಪೂರ್ವಾಶ್ರಮದಲ್ಲಿ ದರೋಡೆಕೋರನಾಗಿದ್ದ ಎನ್ನುವುದಕ್ಕೆ ಎಲ್ಲಿಯೂ ಉಲ್ಲೇಖಗಳಿಲ್ಲ. ಅಂತೆಯೇ ವಾಲ್ಮೀಕಿ ಅಂದರೆ ಹುತ್ತದಿಂದ ಎದ್ದು ಬಂದವ ಎನ್ನುವ ಪವಾಡ ಸದೃಶ್ಯ ಕಥನದ ಬಳಕೆಯೂ ಇಲ್ಲ. ವಾಲ್ಮೀಕಿ ಸ್ವರಚಿತ ರಾಮಾಯಣದಲ್ಲಿಯೇ ಎಲ್ಲಿಯೂ ತಾನು ಪೂರ್ವಾಶ್ರಮದಲ್ಲಿ ದರೋಡೆಕೋರನಾಗಿದ್ದ ಬಗ್ಗೆ ಪ್ರಸ್ತಾಪಿಸುವುದಿಲ್ಲ. ಬದಲಾಗಿ ತನ್ನನ್ನು ಭಗವಾನ್, ಮುನಿ, ರಿಷಿ, ಮಹರ್ಷಿ ಎಂದು ಕರೆದುಕೊಂಡದ್ದಕ್ಕೆ ಸಾಕ್ಷ್ಯಗಳಿವೆ. ಮೊಟ್ಟಮೊದಲ ಬಾರಿಗೆ ವಾಲ್ಮೀಕಿ ಋಷಿಪೂರ್ವದಲ್ಲಿ ದರೋಡೆಕೋರನಾಗಿದ್ದ ಎನ್ನುವುದನ್ನು ಹತ್ತನೆ ಶತಮಾನದ ಸ್ಕಂದ ಪುರಾಣ ಉಲ್ಲೇಖಿಸುತ್ತದೆ. ಇದು ಎಲ್ಲವನ್ನೂ ಪುರಾಣೀಕರಿಸುವ ಕಾಲಘಟ್ಟ. ಬಹುಶಃ ಸ್ಕಂದ ಪುರಾಣದ ಉಲ್ಲೇಖದ ನಂತರ ವಾಲ್ಮೀಕಿ ದರೋಡೆಕೋರನಾಗಿದ್ದ ಎನ್ನುವ ಕತೆಯನ್ನು ಹೆಣೆಯಲಾಗಿದೆ.</p>



<p style="font-size:20px">`ಮರ ಮರ’ ಎನ್ನುವ ಮಂತ್ರದ ಉಲ್ಲೇಖ 15 ಶತಮಾನದ `ಆದ್ಯಾತ್ಮ ರಾಮಾಯಣ’ ಮತ್ತು 16 ನೇ ಶತಮಾನದ `ಆನಂದ ರಾಮಾಯಣ’ ದಲ್ಲಿ ಸಿಗುತ್ತದೆ. ಅಂದರೆ `ಮರ ಮರ’ ಮಂತ್ರದಿಂದಲೆ ವಾಲ್ಮೀಕಿ ರಾಮಾಯಣ ರಚಿಸಿದ ಎನ್ನುವುದೂ ಕಟ್ಟುಕತೆ. 13 ಮತ್ತು 16 ನೇ ಶತಮಾನದಲ್ಲಿ ರಾಮನನ್ನು ವಿಷ್ಣುವಿನ ಅವತಾರ ಎಂದು ದೈವೀಕರಿಸಿದ ಮೇಲೆ ವಾಲ್ಮೀಕಿಯ ಬಗೆಗೆ ಇಂತಹ ಕತೆಗಳು ಹೆಣೆಯಲ್ಪಟ್ಟಿವೆ. ಹೆಚ್.ಡಿ.ಸಾಂಕಾಲಿಯ ಅವರ ಪ್ರಕಾರ ವಾಲ್ಮೀಕಿಯ ಕಾಲದಲ್ಲಿಯೇ ಬಿಡಿಬಿಡಿ ಜನಪದ ಕತೆಗಳಲ್ಲಿದ್ದ ರಾಮಕತೆಯನ್ನು ಜೋಡಿಸಿ ಮಹಾಕಾವ್ಯದ ರೂಪಕೊಟ್ಟು ರಾಮನನ್ನು ಶ್ರೀರಾಮನನ್ನಾಗಿಸಿ ಪುನರ್‌ಸೃಷ್ಠಿಸಿದ್ದು ವಾಲ್ಮೀಕಿ. ಆದರೆ ರಾಮನಾಮದ ಬಲದಿಂದಲೇ ವಾಲ್ಮೀಕಿ ರಾಮಾಯಣವನ್ನು ರಚಿಸಿದ ಎಂದು ವಾಲ್ಮೀಕಿಯನ್ನು ಆಧೀನ ಮಾಡಲಾಯಿತು. ಈ ಉದ್ದೇಶಕ್ಕಾಗಿ ವಾಲ್ಮೀಕಿಯ ಬಗೆಗೆ ಇಂತಹ ಕಟ್ಟುಕತೆಗಳನ್ನು ಕಟ್ಟಲಾಯಿತು. ಇದನ್ನು ಪರಿಶೀಲಿಸಿದಾಗ ವಾಲ್ಮೀಕಿ ಬದುಕಿದ್ದ 1500 ವರ್ಷಗಳ ನಂತರ ಆತ `ದರೋಡೆಕೋರನಾಗಿದ್ದ’ ಎನ್ನುವ ಕತೆ ಸಿಗುತ್ತದೆ. ಹೀಗಾಗಿ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಪುರಾಣವನ್ನು ಉಲ್ಲೇಖಿಸುವುದು ಅಪರಾಧವಾಗುತ್ತದೆ ಎಂದು, 2009 ರ `ಸ್ಟಾರ್ ಇಂಡಿಯಾ ಪ್ರವೇಟ್ ಲಿಮಿಟೆಡ್ ವರ್ಸಸ್ ಸ್ಟೇಟ್ ಆಫ್ ಪಂಜಾಬ್’ ಕೇಸಿನಲ್ಲಿ ಜಸ್ಟೀಸ್ ರಾಜೀವ ಭಲ್ಲಾ `ವಾಲ್ಮೀಕಿ ಋಷಿಪೂರ್ವದಲ್ಲಿ ದರೋಡೆಕೋರನಾಗಿರಲಿಲ್ಲ’ ಎನ್ನುವ ತೀರ್ಪು ನೀಡುತ್ತಾರೆ. 2019 ರಲ್ಲಿ ಪ್ರೊ.ಮಂಜುಳ ಸಹದೇವ್ ವಿರುದ್ಧದ ಕೇಸಿನಲ್ಲಿ ಜಸ್ಟೀಸ್ ಅರವಿಂದ್ ಸಿಂಗ್ ಸಾಂಗ್ವಾನ್ ಅವರು ಕೂಡ ರಾಜೀವ ಭಲ್ಲಾ ಅವರ ತೀರ್ಪನ್ನು ಎತ್ತಿಹಿಡಿದಿದ್ದಾರೆ.</p>



<figure class="wp-block-image size-large"><img decoding="async" width="1024" height="609" src="https://peepalmedia.com/wp-content/uploads/2022/10/Ramayana_manuscript_Mewari_paintings_Rajasthan_1653_CE-1024x609.jpg" alt="" class="wp-image-9496" srcset="https://peepalmedia.com/wp-content/uploads/2022/10/Ramayana_manuscript_Mewari_paintings_Rajasthan_1653_CE-1024x609.jpg 1024w, https://peepalmedia.com/wp-content/uploads/2022/10/Ramayana_manuscript_Mewari_paintings_Rajasthan_1653_CE-300x178.jpg 300w, https://peepalmedia.com/wp-content/uploads/2022/10/Ramayana_manuscript_Mewari_paintings_Rajasthan_1653_CE-768x456.jpg 768w, https://peepalmedia.com/wp-content/uploads/2022/10/Ramayana_manuscript_Mewari_paintings_Rajasthan_1653_CE-1536x913.jpg 1536w, https://peepalmedia.com/wp-content/uploads/2022/10/Ramayana_manuscript_Mewari_paintings_Rajasthan_1653_CE-150x89.jpg 150w, https://peepalmedia.com/wp-content/uploads/2022/10/Ramayana_manuscript_Mewari_paintings_Rajasthan_1653_CE-696x414.jpg 696w, https://peepalmedia.com/wp-content/uploads/2022/10/Ramayana_manuscript_Mewari_paintings_Rajasthan_1653_CE-1068x635.jpg 1068w, https://peepalmedia.com/wp-content/uploads/2022/10/Ramayana_manuscript_Mewari_paintings_Rajasthan_1653_CE.jpg 1575w" sizes="(max-width: 1024px) 100vw, 1024px" /><figcaption>ರಾಜಾಸ್ತಾನದ ಮೇವಾರಿ ಬುಡಕಟ್ಟು ಚಿತ್ರಕಲೆಯಲ್ಲಿ ದೊರೆತ ರಅಮಾಐಣದ ಹಸ್ತಪ್ರತಿ</figcaption></figure>



<p style="font-size:20px">ಪಂಜಾಬ್ ಹೈಕೋರ್ಟಿನ ಜಸ್ಟೀಸ್ ರಾಜೀವ ಭಲ್ಲಾ ಅವರು ಮಂಜುಳ ಸಹದೇವ್ ಅವರ ಸಂಶೋಧನೆಯನ್ನು ಅಮೂಲಾಗ್ರವಾಗಿ ಅಧ್ಯಯನ ಮಾಡಿ, ಮೇಲಿನ ಮುಖ್ಯಾಂಶಗಳನ್ನು ಉಲ್ಲೇಖಿಸಿ ಮಹರ್ಷಿ ವಾಲ್ಮೀಕಿ ದರೋಡೆಕೋರನಾಗಿರಲಿಲ್ಲ. ಕಾಲಾನಂತರದಲ್ಲಿ ಆದ ಸೇರ್ಪಡೆಗಳಲ್ಲಿ ಈ ಬಗೆಯ ಕತೆಯನ್ನು ಕಟ್ಟಲಾಗಿದೆ. ಒಂದು ಸಮುದಾಯದ ಧರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ತೀರ್ಪು ನೀಡುತ್ತಾರೆ. ಈ ತೀರ್ಪಿನ ತರುವಾಯ ಬಹುತೇಕ ಉತ್ತರ ಭಾರತದ ರಾಜ್ಯಗಳಲ್ಲಿ ಸಾರ್ವಜನಿಕವಾಗಿ ವಾಲ್ಮೀಕಿಯು ದರೋಡೆಕೋರನಾಗಿದ್ದ ಎನ್ನುವ ಕಥೆಯ ಉಲ್ಲೇಖ ನಿಷೇಧವಾಗಿದೆ. ಅಕಸ್ಮಾತ್ ಈ ಕಥೆಯನ್ನು ಉಲ್ಲೇಖಿಸಿದರೆ ಎಫ್.ಐ.ಆರ್ ದಾಖಲಾಗುತ್ತದೆ.</p>



<p style="font-size:20px">ಮಹರ್ಷಿ ವಾಲ್ಮೀಕಿಯ ಬಗೆಗಿನ ಅಧ್ಯಯನಗಳು ಮತ್ತು ಸ್ವರಚಿತ ರಾಮಾಯಣವನ್ನು ಆಧರಿಸಿ ನೋಡುವುದಾದರೆ ವಾಲ್ಮೀಕಿ ರಾಮನೆಂಬ ಕಾಲ್ಪನಿಕ ಪಾತ್ರವನ್ನು ಸಶಕ್ತವಾಗಿ ಕಟ್ಟಿದ ಭರತಖಂಡದ ಆದಿಕವಿ, ಬೇಡ ಸಮುದಾಯದ ಮೊದಲ ಸಾಕ್ಷರ. ಸಂಸ್ಕೃತವನ್ನು ಕೆಳಜಾತಿ ದಮನಿತ ಸಮುದಾಯಗಳಿಗೆ ನಿಶೇಧಿಸಿದ್ದ ಕಾಲಘಟ್ಟದಲ್ಲಿ ಸಂಸ್ಕೃತವನ್ನು ಕಲಿತು ಮೇರು ಕಾವ್ಯವನ್ನು ರಚನೆ ಮಾಡಿದ್ದು ಈ ಸಮುದಾಯಗಳಿಗೆ ಒಂದು ಸ್ಪೂರ್ತಿದಾಯಕ ಸಂಗತಿ. ಕೆಳಜಾತಿ ಜನರು ಯಾವುದೇ ಮಹತ್ಸಾಧನೆಯನ್ನು ಮಾಡಿದಾಗ ಮೇಲ್ಜಾತಿಗಳು ಅವರ ಹುಟ್ಟನ್ನೆ ಅನುಮಾನಿಸುವ, ಅವರ ಚಾರಿತ್ರ್ಯವನ್ನು ತಿರುಚುವ ಯತ್ನ ನಡದೇ ಇದೆ. ವಾಲ್ಮೀಕಿ ಋಷಿಪೂರ್ವದಲ್ಲಿ ದರೋಡೆಕೋರನಾಗಿದ್ದ ಎನ್ನುವ ಕಟ್ಟುಕಥೆ ಕೂಡ ಇಂತಹದ್ದೇ ಒಂದು ಪ್ರಯತ್ನ. ಹಾಗಾಗಿ ವಾಲ್ಮೀಕಿಯನ್ನು ಅಕ್ಷರ, ಶಿಕ್ಷಣ, ಜ್ಞಾನ, ಹೋರಾಟದ ಸಂಕೇತವಾಗಿ ಪರಿಭಾವಿಸಬೇಕಿದೆ. ಇನ್ನಾದರೂ ವಾಲ್ಮೀಕಿ ಋಷಿಪೂರ್ವದಲ್ಲಿ ದರೋಡೆಕೋರನಾಗಿದ್ದ ಎನ್ನುವ ಕಟ್ಟುಕತೆಯನ್ನು ಹೇಳುವುದನ್ನು ನಿಲ್ಲಿಸಬೇಕು.</p>



<p style="font-size:25px">-ಡಾ. ಅರುಣ್ ಜೋಳದಕೂಡ್ಲಿಗಿ ‌</p>



<figure class="wp-block-image size-full"><img decoding="async" width="218" height="197" src="https://peepalmedia.com/wp-content/uploads/2022/10/ಅರುಣ್.jpg" alt="" class="wp-image-9505" srcset="https://peepalmedia.com/wp-content/uploads/2022/10/ಅರುಣ್.jpg 218w, https://peepalmedia.com/wp-content/uploads/2022/10/ಅರುಣ್-150x136.jpg 150w" sizes="(max-width: 218px) 100vw, 218px" /><figcaption>ಡಾ. ಅರುಣ್‌ ಜೋಳದ ಕೂಡ್ಲಿಗಿ </figcaption></figure>
]]></content:encoded>
					
		
		
			</item>
	</channel>
</rss>
