<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>arundati rai &#8211; Peepal Media</title>
	<atom:link href="https://peepalmedia.com/tag/arundati-rai/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Wed, 07 Sep 2022 04:24:29 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>arundati rai &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಅತ್ಯದ್ಭುತವಾದ ಸಂಗತಿಯೆಂದರೆ ಸ್ವತಂತ್ರ ಸ್ತ್ರೀಯಾಗಿರುವುದು: ಅರುಂಧತಿ ರಾಯ್‌ ಭಾಷಣದ ಪೂರ್ಣಪಾಠ</title>
		<link>https://peepalmedia.com/atyadbutavada-sangatiyendare-swatantra-striyagiruvudu/</link>
		
		<dc:creator><![CDATA[Peepal Media]]></dc:creator>
		<pubDate>Tue, 06 Sep 2022 08:10:06 +0000</pubDate>
				<category><![CDATA[ವಿಶೇಷ]]></category>
		<category><![CDATA[arundati rai]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[special]]></category>
		<category><![CDATA[special story]]></category>
		<category><![CDATA[writer]]></category>
		<category><![CDATA[writing]]></category>
		<category><![CDATA[ಅರುಂಧತಿ ರಾಯ್‌]]></category>
		<category><![CDATA[ಗಣೇಶ್‌ ಎನ್‌ ದೇವಿ]]></category>
		<category><![CDATA[ಗೌರಿ ಲಂಕೇಶ್‌]]></category>
		<category><![CDATA[ಪ್ರಕಾಶ್‌ ರಾಜ್‌]]></category>
		<category><![CDATA[ಬೂಕರ್‌ ಪ್ರಶಸ್ತಿ]]></category>
		<guid isPermaLink="false">https://peepalmedia.com/?p=3999</guid>

					<description><![CDATA[ಖ್ಯಾತ ಚಿಂತಕಿ, ಪ್ರತಿಷ್ಠಿತ ಬೂಕರ್‌ ಪ್ರಶಸ್ತಿ ವಿಜೇತ ಲೇಖಕಿ, ಒಬ್ಬ ಲೋಕಚಿಂತಕಿ, ನೇರ- ನಿಷ್ಠೂರ ಮಾತುಗಾರ್ತಿ ಅರುಂಧತಿ ರಾಯ್‌ ನೆನ್ನೆ (ಸೆ.05.2022) ಬೆಂಗಳೂರಿನಲ್ಲಿದ್ದರು. ಐದು ವರ್ಷಗಳ ಹಿಂದೆ ಸನಾತನವಾದಿ ಭಯೋತ್ಪಾದಕರಿಂದ ಹತ್ಯೆಯಾದ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ತುಂಬಿದ ಸಭಾಂಗಣದಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ಭಾಷಣ- ಸಂವಾದ ನಡೆಸಿದರು. ಹಿರಿಯ ವಿದ್ವಾಂಸರಾದ ಗಣೇಶ್‌ ಎನ್‌ ದೇವಿ, ಹೋರಾಟಗಾರ್ತಿ ತೀಸ್ತಾ ಸೆಟಲ್ವಾದ್‌, ಕವಿತಾ ಲಂಕೇಶ್‌, ಬಹುಭಾಷಾ ನಟ ಪ್ರಕಾಶ್‌ ರಾಜ್‌, ಪ್ರೊ.ವಿ [&#8230;]]]></description>
										<content:encoded><![CDATA[
<blockquote class="wp-block-quote has-medium-font-size is-layout-flow wp-block-quote-is-layout-flow"><p><strong>ಖ್ಯಾತ ಚಿಂತಕಿ, ಪ್ರತಿಷ್ಠಿತ ಬೂಕರ್‌ ಪ್ರಶಸ್ತಿ ವಿಜೇತ ಲೇಖಕಿ, ಒಬ್ಬ ಲೋಕಚಿಂತಕಿ, ನೇರ- ನಿಷ್ಠೂರ ಮಾತುಗಾರ್ತಿ ಅರುಂಧತಿ ರಾಯ್‌ ನೆನ್ನೆ (ಸೆ.05.2022) ಬೆಂಗಳೂರಿನಲ್ಲಿದ್ದರು. ಐದು ವರ್ಷಗಳ ಹಿಂದೆ ಸನಾತನವಾದಿ ಭಯೋತ್ಪಾದಕರಿಂದ ಹತ್ಯೆಯಾದ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ತುಂಬಿದ ಸಭಾಂಗಣದಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ಭಾಷಣ- ಸಂವಾದ ನಡೆಸಿದರು. ಹಿರಿಯ ವಿದ್ವಾಂಸರಾದ ಗಣೇಶ್‌ ಎನ್‌ ದೇವಿ, ಹೋರಾಟಗಾರ್ತಿ ತೀಸ್ತಾ ಸೆಟಲ್ವಾದ್‌, ಕವಿತಾ ಲಂಕೇಶ್‌, ಬಹುಭಾಷಾ ನಟ ಪ್ರಕಾಶ್‌ ರಾಜ್‌, ಪ್ರೊ.ವಿ ಎಸ್‌ ಶ್ರೀಧರ್‌, ಹಿರಿಯ ಪತ್ರಕರ್ತ ಡಿ.ಉಮಾಪತಿ, ಪೆಡೆಸ್ಟ್ರಿಯನ್‌ ಪಿಕ್ಚರ್ಸ್‌ನ ದೀಪು ಜೊತೆ ಸೇರಿ ನಡೆಸಿದ ಸಂವಾದ ಮತ್ತು ಅರುಂಧತಿ ರಾಯ್‌ ಅವರ ಭಾಷಣದ ಪೂರ್ಣಪಾಠ ಇಲ್ಲಿದೆ. ಜನಶಕ್ತಿಯ ಮಲ್ಲಿಗೆ ಸಿರಿಮನೆ ಸ್ಥಳದಲ್ಲೇ ಅನುವಾದಿಸಿ ಅಕ್ಷರರೂಪಕ್ಕೆ ಮಾರ್ಪಡಿಸಿದ ಈ ಪಠ್ಯವನ್ನು ಪೀಪಲ್‌ ಮೀಡಿಯಾ ಓದುಗರಿಗಾಗಿ ಇಲ್ಲಿ ಪ್ರಕಟಿಸಿದ್ದೇವೆ.</strong></p></blockquote>



<p class="has-medium-font-size"><strong>ಪ್ರಿಯರೆ</strong></p>



<p class="has-text-align-justify has-medium-font-size">ಇಂದು ಇಲ್ಲಿರುವುದು ನನ್ನ ಪಾಲಿಗೆ ಒಂದು ಗೌರವ, ನಾನು ಗೌರವಿಸುವವರೊಂದಿಗೆ, ಮೂರು ದಿನಗಳ ಹಿಂದೆ ನನ್ನ ತಾಯಿಯವರನ್ನು ನಾನು ಮಣ್ಣು ಮಾಡಬೇಕಾಗಿ ಬಂತು, ನನ್ನ ಹೃದಯ ನನಗೆ ಅವಕಾಶ ಕೊಡುತ್ತಿತ್ತೋ ಇಲ್ಲವೋ ಆದರೆ ನನ್ನ ತಾಯಿ ನಾನು ಇಲ್ಲಿಗೆ ಬರದಿದ್ದರೆ ನನ್ನ ಬಗ್ಗೆ ನಾಚಿಕೆ ಪಟ್ಟುಕೊಳ್ಳುತ್ತಾರೆ ಎಂದು ಬಂದೆ. &nbsp;&nbsp;</p>



<p class="has-text-align-justify has-medium-font-size">ಗೌರಿ ಪ್ರತಿ ಸಲ ನಾನು ಏನಾದರೂ ಬರೆದಾಗ ನಾನು ಅನುವಾದ ಮಾಡಲೇ ಎಂದು ಉತ್ಸಾಹದಿಂದ ಫೋನ್ ಮಾಡುತ್ತಿದ್ದರು. ಅವರು ಈಗ ನಮ್ಮ ಜೊತೆಗಿಲ್ಲ, ತೀಸ್ತಾ ಸೆಟಲ್ವಾದ್‌ ಜೈಲಿಗೆ ಹೋಗಬೇಕಾಗಿ ಬಂತು. ಅವರು ಜೈಲಿನಲ್ಲಿ ಇರುವಾಗ ನಾಗರೀಕರ ವೇದಿಕೆ ಗುಜರಾತ್ ಗಲಭೆಗಳ ಕುರಿತು ಹೊರತಂದ ಬರಹಗಳನ್ನು ಬಹಳ ಗಮನ ಇಟ್ಟು ಓದಿದೆ,  ತೀಸ್ತಾ ಮಾಡಿರುವುದು ನಿಜಕ್ಕೂ ಅದ್ಭುತವಾದ ಕೆಲಸ. ನಾನು ಫ್ಯಾಸಿಸಂ ಕಾಲದಲ್ಲಿ ನ್ಯಾಯಾಂಗದಂತಹ ಸಂಸ್ಥೆಗಳು ಕೆಲಸ ಮಾಡುತ್ತವಾ ಎಂಬ ಬಗ್ಗೆ ಅನುಮಾನ ಹೊಂದಿದವರಲ್ಲಿ ಒಬ್ಬಳು, ಆದರೆ ತೀಸ್ತಾ ಮತ್ತು ಅವರ ಸಂಘಟನೆಯ ಕೆಲಸ ಅಗಾಧ. ಅವರು ಮಾಡಿದಂತಹ ಅಗಾಧವಾದ ದಾಖಲೀಕರಣ ಎಂದಾದರೂ ಒಂದು ದಿನ ನ್ಯಾಯಕ್ಕೆ ದಾರಿಮಾಡಲೇಬೇಕು. ಮುಂದೊಮ್ಮೆ ಯುದ್ಧಾಪರಾಧಗಳಿಗೆ ತೀಸ್ತಾ ಅವರ ದಾಖಲೆಗಳು ಗಟ್ಟಿಯಾದ ದಾಖಲೆ ಒದಗಿಸುವುದು ಖಚಿತ.  </p>



<p class="has-text-align-justify has-medium-font-size">ಇಂದು ಇಲ್ಲಿ ನಾವು ಬದುಕಿರುವ ಸಮಾಜದಲ್ಲಿ ಬಿಲ್ಕೀಸ್ ಅವರ ಪೂರ್ತಿ ಕುಟುಂಬ ಕೊಲೆಯಾಯಿತು, ಪುಟ್ಟ ಮಗಳೂ ಕೂಡಾ- ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು, ಆದರೆ ನ್ಯಾಯ ಕೊಡಬೇಕಾದ ಎಲ್ಲರೂ ಶಾಮೀಲಾದರು, ಅಪರಾಧಿಗಳ ರಕ್ಷಣೆಗಾಗಿ, ಕೊನೆಗೆ ಕಾನೂನಿನ ಪ್ರಕ್ರಿಯೆಯ ಮೇಲೆಯೇ ಈ ಅಪರಾಧಿಗಳನ್ನು ಬಿಡುಗಡೆ ಮಾಡಲಾಯಿತು, ಆ ಸಮಿತಿಯಲ್ಲಿ ಇದ್ದವರು ಹೆಚ್ಚಿನವರು ಬಿಜೆಪಿಯವರು. ಒಬ್ಬರಂತೂ ಅವರೆಲ್ಲಾ ಬ್ರಾಹ್ಮಣರಾದ್ದರಿಂದ ಅಂತಹ ಕೃತ್ಯವೆಸಗಿರಲು ಸಾಧ್ಯವಿಲ್ಲ, ಯಾಕೆಂದರೆ ಅವರು ಸಂಸ್ಕಾರವಂತರು ಎಂದು ಹೇಳಿಕೆ ನೀಡುವಲ್ಲಿಗೆ ಪರಿಸ್ಥಿತಿ ತಲುಪಿದೆ.</p>



<p class="has-text-align-justify has-medium-font-size">ಅಂತರರಾಷ್ಟ್ರೀಯ ಕಾರಣಗಳಿಗಾಗಿ ಕಾನೂನಿನ ಸುಳಿವುಗಳನ್ನು ಅಳಿಸಲಾಗುತ್ತಿದೆ. ಇದು ಬಹಳ ಅಪಾಯಕಾರಿ, ನಾವು ಇಂದು ಭಾರತದಲ್ಲಿ ನೋಡುತ್ತಿರುವುದು ಪ್ರಭುತ್ವ, ಪ್ರಭುತ್ವದ ಯಂತ್ರಾಂಗ, ಮತ್ತು ಒಂದು ರಾಜಕೀಯ ಪಕ್ಷ ಎಲ್ಲವೂ ಸೇರಿ ಒಂದೇ ಆಗುತ್ತಿವೆ. ಒಂದು ಮತ್ತೊಂದರಿಂದ ಭಿನ್ನವಲ್ಲವೆಂಬಂತಾಗುತ್ತಿದೆ. ಇಲ್ಲಿ ಒಂದೇ ವಿರೋಧ ಪಕ್ಷವಿರುವುದು. ಆದರೆ ಈಗ ಇವರು ನಮಗೆ ವಿರೋಧ ಪಕ್ಷವೇ ಇಲ್ಲದ ಪ್ರಜಾತಂತ್ರ ಬೇಕು ಅಂತ ಹೇಳುತ್ತಾರೆ.  ಬಹಳ ಜನರು ಈ ಬಗ್ಗೆ ಚರ್ಚೆ ಮಾಡುವವರು ಇವರು ಫ್ಯಾಸಿಸ್ಟರು ಹೌದಾ ಅಲ್ಲವಾ ಎಂದು ಕೊನೆಯಿಲ್ಲದೆ ಚರ್ಚೆ ಮಾಡುತ್ತಲೇ ಇದ್ದಾರೆ. ಆದರೆ ಆದರೆ ಅವರು ಬಹಳ ಮಾತ್ರ ತಾವು ಏನು ಎಂಬ ಬಗ್ಗೆ ಬಹಳ ಸ್ಪಷ್ಟತೆ ಹೊಂದಿದ್ದಾರೆ.</p>



<p class="has-text-align-justify has-medium-font-size">ಬಿಜೆಪಿಯವರು ಕಳೆದ ಎರಡು ಚುನಾವಣೆಗಳಲ್ಲಿ ಮುಸ್ಲಿಂ ಮತಗಳಿಲ್ಲದೆ ಗೆಲ್ಲಬಲ್ಲೆವು ಎಂದು ತೋರಿಸಿದ್ದಾರೆ. ಇವತ್ತಿನ ಸನ್ನಿವೇಶ ಏನೆಂದರೆ ನಮಗೆ ಒಂದು ಸಂವಿಧಾನವಿದೆ, ಕಾನೂನು ಇದೆಯಾದರೂ ಅವುಗಳ ಜಾರಿ ಮಾತ್ರ ವ್ಯಕ್ತಿಗಳ ಧರ್ಮ, ಲಿಂಗವನ್ನು ಆಧರಿಸಿ ಇರುತ್ತದೆ.  ಬಿಲ್ಕಿಸ್‌ ಪ್ರಕರಣವೇ ಇದಕ್ಕೆ ನಿದರ್ಶನ.</p>



<p class="has-text-align-justify has-medium-font-size">ನಾವು ಪ್ರಪಂಚದಲ್ಲೇ ಅತ್ಯಂತ ಶ್ರೀಮಂತವಾದ ರಾಜಕೀಯ ಪಕ್ಷವನ್ನು ನೋಡುತ್ತಿದ್ದೇವೆ, ಅದು ಬಂದದ್ದು ನೋಟು ರದ್ದತಿ ಬಾಂಡ್ಗಳು ಮುಂತಾದವುಗಳಿಂದ. ನನ್ನ ಒಂದು ಸಲಹೆ ಏನೆಂದರೆ ಈಗ ಚುನಾಯಿತ ಪ್ರತಿನಿಧಿಗಳು ಯಾರಿದ್ದಾರೋ ಅವರೆಲ್ಲಾ ರೈತರು ತಮ್ಮ ಬೆಳೆಗಳ ವಿಷಯದಲ್ಲಿ ಮಾಡಿದಂತೆ ತಮ್ಮ ಖರೀದಿಗೆ ಕನಿಷ್ಟ ಬೆಂಬಲ ಬೆಲೆ (MSP) ನಿಗದಿ ಮಾಡಬೇಕು ಎಂದು ಕ್ಯಾಂಪೇನ್ ಮಾಡಬೇಕು, ನಂತರ ಅವರನ್ನೆಲ್ಲಾ ಖರೀದಿಸಿ ಅದಾನಿ ಗೋಡೌನ್ ಗಳಲ್ಲಿ ಇಡಬಹುದು. ರಾಜಕಾರಣಿಗಳು ಪಕ್ಷಾಂತರ ಆಗುತ್ತಿರುವ ರೀತಿ ನೋಡಿದರೆ ಇದನ್ನು ಪ್ರಜಾತಂತ್ರ ಎನ್ನಲು ಸಾದ್ಯವೇ?</p>



<p class="has-text-align-justify has-medium-font-size">ನನ್ನ ಹೃದಯ ಗೌರಿಗಾಗಿ ಮತ್ತು ನನ್ನ ತಾಯಿಗಾಗಿ ಸಂಕಟದಿಂದ ತುಂಬಿದೆ. ನನಗೆ ಬೆಳಿಗ್ಗೆ ಸಮಾಧಿ ಬಳಿ ಹೋದಾಗ ಇದು ಗೌರಿಯ ಸಮಾಧಿಯೋ ಅಥವಾ ನನ್ನ ತಾಯಿಯ ಸಮಾದಿಯೋ ಎಂದು ಒಂದು ಕ್ಷಣ ಗೊಂದಲವಾಯಿತು. </p>



<p class="has-text-align-justify has-medium-font-size">ಮಾತು ಮುಗಿಸುವ ಮೊದಲು, ಜನರು ಪ್ರತಿರೋಧ ಚಳವಳಿಯಲ್ಲಿರುವವರು, ತಮ್ಮ ಬಗ್ಗೆ ಚಿಂತಿಸದೆ ಜನರಿಗಾಗಿ ಕೆಲಸ ಮಾಡಿದವರಿಗೆ ಏನಾಗುತ್ತಿದೆ? 90ರ ದಶಕದಲ್ಲಿ ಎರಡು ಬಗೆಯ ಬೀಗಗಳನ್ನು ತೆರೆಯಲಾಯಿತು, ಒಂದು ಬಾಬರಿ ಮಸೀದಿಯದ್ದು ಇನೊಂದು ಮುಕ್ತ ಮಾರುಕಟ್ಟೆಯದ್ದು.  ಎರಡು ಬಗೆಯ ಮೂಲಭೂತವಾದ. ಪ್ರಭುತ್ವವನ್ನು ಬಹಳವೇ ದಮನಕಾರಿ ಮಾಡಲು ಪ್ರತಿಯೊಂದು ಘಟನೆಯೂ ಕಾರಣವಾಗುತ್ತಾ ಹೋಯಿತು.</p>



<p class="has-text-align-justify has-medium-font-size">ಉದ್ಯೋಗ ಇಲ್ಲದೆ, ಬೆಲೆಯೇರಿಕೆಯಿಂದ ದೌರ್ಜನ್ಯಗಳಿಂದ ನರಳುತ್ತಿರುವ ಜನರೇ ಮತ್ತೆ ತಮ್ಮ ಕಷ್ಟಗಳಿಗೆ ಕಾರಣರಾಗುವವರಿಗೇ ಮತ  ಹಾಕುತ್ತಿದ್ದಾರೆ. ಮುಸ್ಲಿಮರನ್ನು ಪೌರತ್ವದಿಂದ ವಂಚಿಸಿ ವೋಟಿನ ಹಕ್ಕಿಲ್ಲದಂತೆ ಮಾಡಲಾಗುತ್ತಿದೆ, ಇದು ಸಮಾಜದ ಅಮಾನವೀಕರಣ ಆಗುತ್ತಿರುವ ಪರಿಸ್ಥಿತಿ.  ಈ ವರ್ಷ ಭಾರತದ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ವರ್ಷ. ದೇಶದ ರಾಜಧಾನಿ ದೆಹಲಿ ಬಹಳ ದೊಡ್ಡ ಬಡಜನರ ಪ್ರವಾಹದಲ್ಲಿ ತುಂಬಿಕೊಂಡಿದೆ. ಜನರು ತಮ್ಮ ಜನರನ್ನು ಮತ್ತಷ್ಟು ನರಕಮಯಗೊಳಿಸಿಕೊಳ್ಳಲು ಚುನಾವಣೆಗಳಲ್ಲಿ ವೋಟು ಹಾಕುತ್ತಿರುವಂತೆ ಭಾಸವಾಗುತ್ತಿದೆ. ಕ್ರೂರ ಜಾತಿ ವ್ಯವಸ್ಥೆಯಿಂದ ಶತಮಾನಗಳ ಕಾಲ ನರಳಿದವರು ದಮನಕ್ಕೊಳಗಾಗುತ್ತಿದ್ದಾರೆ. ಮತ್ತೆ ಯಾರು ಇಂತಹ ವ್ಯವಸ್ಥೆಯ ಪ್ರತಿಪಾದಕರೋ ಅವರನ್ನೇ ಆಯ್ಕೆ ಮಾಡುತ್ತಾರೆ ಕೂಡಾ. 50ರಲ್ಲಿ 60ರ ದಶಕದಲ್ಲಿ, 80ರಲ್ಲಿ ಚಳವಳಿಗಳು ಭೂಮಿಯ ಮೇಲೆ ಉಳುವವರಿಗೆ ಹಕ್ಕಿಗಾಗಿ ಕೇಳುತ್ತಿದ್ದವು, ಅವುಗಳನ್ನು ತುಳಿಯಲಾಯಿತು.  ನಂತರ 90ರ ದಶಕದಲ್ಲಿ ನಮ್ಮನ್ನು ಸ್ಥಳಾಂತರಿಸಬೇಡಿ ಎಂದು ಕೇಳಿದರು, ಅವನ್ನೂ ತುಳಿಯಲಾಯಿತು, 2000ದ ಹೊತ್ತಿಗೆ ನರೇಗಾ (ಉದ್ಯೋಗ ಖಾತ್ರಿ) ಕೇಳುವುದೇ ಕ್ರಾಂತಿಕಾರಿ ಬೇಡಿಕೆಯಾಯಿತು. ಈಗ ಬಿಡಿ ಸರ್ಕಾರ 5 ಕೆಜಿ ಅಕ್ಕಿ ಉಪ್ಪು ಕೊಡುವುದೇ ದೊಡ್ಡ ಉಪಕಾರವಾಗಿದೆ! ಮೋದಿಯವರ ಉಪ್ಪು ತಿಂದರೆ ಅವರಿಗೇ ಓಟು ಹಾಕಿ ಎನ್ನುತ್ತಿದ್ದಾರೆ! ಎಂತಹ ವಿಪರ್ಯಾಸ!</p>



<p class="has-text-align-justify has-medium-font-size">ಭಾರತವು ಪೊಲೀಸ್ ರಾಜ್ಯವಾಗುತ್ತಿದೆ, 20 ಮಿಲಿಯನ್ ಜನರು ಕಾಶ್ಮೀರಲ್ಲಿ ಯಾವುದೇ ಸಂವಹನದ ಸಾಧ್ಯತೆಯಿಲ್ಲದೆ ಬದುಕಿದರು. ವಸಾಹತುಶಾಹಿ ಕಾಲದಲ್ಲಿ ನಾವು ಬೀದಿಗಳಲ್ಲಿ ಹೋರಾಡುತ್ತಿದ್ದೆವು. ಈಗ ನಾವು ರಸ್ತೆಗಳನ್ನೂ ಬಿಟ್ಟು ಅಡಿಯಲ್ಲಿ ಹೋಗಬೇಕಾಗಿದೆ, ಏಕೆಂದರೆ ಬೀದಿಗಳೂ ವಿಷಮಯವಾಗಿವೆ, ಮೀಡಿಯಾಗಳಲ್ಲಿ, ಸೀರಿಯಲ್ ಗಳ ಮೂಲಕ ಪ್ರತಿಕ್ಷಣ ತಲೆಗಳಲ್ಲಿ ವಿಷ ತುಂಬಲಾಗುತ್ತಿದೆ.</p>



<p class="has-text-align-justify has-medium-font-size">ಇಲ್ಲಿಂದಲೇ ಆರಂಭಿಸಬೇಕಾಗಿದೆ, ಪ್ರತಿಯೊಂದು ಸಣ್ಣ ಗೆಲುವನ್ನೂ ಗೆಲುವೆಂದು ಸಂಭ್ರಮಿಸುತ್ತಾ ಮುನ್ನಡೆಯಬೇಕಾಗಿದೆ. ಇದು ಮುಕ್ತಾಯವಾಗುತ್ತದೆ, ಈ ವ್ಯವಸ್ಥೆ ಕುಸಿದು ಹೋಗಿದೆ, ಹೊಸದು ಹುಟ್ಟಬೇಕಾಗಿದೆ. ಅದು ಭೌತಶಾಸ್ತçದ ನಿಯಮ, ಮುಗಿಯಲೇಬೇಕು, ನಾವು ಭರವಸೆ ಕಳೆದುಕೊಳ್ಲುವುದು ಬೇಡ, ಮುಂದುವರೆಯೋಣ.</p>



<p class="has-text-align-justify has-medium-font-size"><strong>ಸಂವಾದ ಕಾರ್ಯಕ್ರಮದಲ್ಲಿ ತಮಗೆ ಕೇಳಲಾದ ಪ್ರಶ್ನೆಗಳಿಗೆ ಅರುಂಧತಿ ರಾಯ್‌ ಅವರ ಉತ್ತರಗಳು</strong></p>



<figure class="wp-block-image size-large"><img fetchpriority="high" decoding="async" width="1024" height="682" src="https://peepalmedia.com/wp-content/uploads/2022/09/WhatsApp-Image-2022-09-06-at-1.31.02-PM-1-1024x682.jpeg" alt="" class="wp-image-4023" srcset="https://peepalmedia.com/wp-content/uploads/2022/09/WhatsApp-Image-2022-09-06-at-1.31.02-PM-1-1024x682.jpeg 1024w, https://peepalmedia.com/wp-content/uploads/2022/09/WhatsApp-Image-2022-09-06-at-1.31.02-PM-1-300x200.jpeg 300w, https://peepalmedia.com/wp-content/uploads/2022/09/WhatsApp-Image-2022-09-06-at-1.31.02-PM-1-768x512.jpeg 768w, https://peepalmedia.com/wp-content/uploads/2022/09/WhatsApp-Image-2022-09-06-at-1.31.02-PM-1.jpeg 1280w" sizes="(max-width: 1024px) 100vw, 1024px" /><figcaption><strong>ಅರುಂಧತಿ ರಾಯ್</strong></figcaption></figure>



<p class="has-medium-font-size"><strong><mark style="background-color:rgba(0, 0, 0, 0)" class="has-inline-color has-vivid-red-color">ಸಂವಾದ:</mark></strong></p>



<p class="has-medium-font-size"><strong>ಡಿ. ಉಮಾಪತಿ:</strong></p>



<p class="has-text-align-justify has-medium-font-size">ಎಲ್ಲರ ಪರವಾಗಿ ಕರ್ನಾಟಕದ ಜನರ ಪರವಾಗಿ ಅರುಂಧತಿ ರಾಯ್‌ ಅವರ ಅಮ್ಮ ಮೇರಿ ರಾಯ್ ಅವರಿಗೆ ನಮ್ಮ ಎದೆಯಾಳದ ಶ್ರದ್ಧಾಂಜಲಿಗಳು, ಅರುಂದತಿ ತಮ್ಮ ತಾಯಿಯ ಕುರಿತು ಇನ್ನಷ್ಟು ಹೇಳಿ ಎಂದು ಕೇಳಿಕೊಳ್ಳುತ್ತೇನೆ, ಯಾಕೆಂದರೆ ಅವರೂ ಕೂಡಾ ಮಾನವತಾವಾದಿ ಮತ್ತು ಹೋರಾಟಗಾರ್ತಿಯಾಗಿದ್ದರು.</p>



<p class="has-medium-font-size"><strong>ಅರುಂಧತಿ ರಾಯ್:</strong> ನನ್ನ ತಾಯಿ ಹಲವರಲ್ಲಿ ಒಬ್ಬರು ಅಲ್ಲ, ಬಹಳ ಮುಖ್ಯರಾಗಿದ್ದರು, ನನ್ನೊಳಗಿದ್ದ ಮಗಳು ಮತ್ತು ಲೇಖಕಿಯ ಪಾತ್ರಗಳು ಅವರ ಜೊತೆಗಿರುವುದ ಒಪ್ಪದೆ ನಾನು ಬಹಳ ಸಣ್ಣ ವಯಸ್ಸಿನಲ್ಲೇ ಅವರನ್ನು ಬಿಟ್ಟು ಹೊರಟೆ. ಅವರು ಸಿರಿಯನ್ ಕ್ರಿಶ್ಚಿಯನ್ ಆಗಿದ್ದರು, ಆದರೆ ಆ ಸಮುದಾಯದ ಕಟ್ಟುಪಾಡುಗಳನ್ನು ಒಪ್ಪಿದವರಲ್ಲ. ಶಾಲೆ ಆರಂಭಿಸಿದರು. ನನ್ನ ತಂದೆಯನ್ನು ಬಿಟ್ಟು ಬಂದಮೇಲೆ ಸಿರಿಯನ್ ಕ್ರಿಶ್ಚಿಯನ್ ರಲ್ಲಿ ಉತ್ತರಾಧಿಕಾರ ಕಾನೂನು ಬಹಳ ಮಹಿಳಾ ವಿರೋಧಿಯಾಗಿತ್ತು, ಅದನ್ನು ಬದಲಿಸಲು ಅಮ್ಮ ಹೋರಾಡಿದರು, ಅವರಿಂದಾಗಿ ಅದು ಬದಲಾಯಿತು. ಆದರೆ ಕಾನೂನು ಮಾತ್ರ ಬದಲಾಯಿತು, ಸಮಾಜದ ಇಂದಿಗೂ ಆ ಸಮುದಾಯದಲ್ಲಿ ಮನಸ್ಥಿತಿ ಬದಲಾಗಿಲ್ಲ.</p>



<p class="has-text-align-justify has-medium-font-size">ಮಹಿಳೆಯರು ತಮ್ಮ ಬುದ್ಧಿವಂತಿಕೆ ಆಕ್ರೋಶ ಪ್ರತಿಭೆ ಎಲ್ಲವನ್ನೂ ಬಳಸಿಕೊಳ್ಳಲು ಬಿಡುತ್ತಾರೆ. ನಾವಿಬ್ಬರೂ ಒಬ್ಬರನ್ನೊಬ್ಬರು ಬಹಳ ಆಳವಾಗಿ ಹಚ್ಚಿಕೊಂಡಿದ್ದೆವು. ಅವರು ನಾನು ಏನು ಬೇಕಾದರೂ ನಾನು ಬಯಸಿದ ಎಲ್ಲವೂ ಆಗಲು ಅವಕಾಶ ಮಾಡಿಕೊಟ್ಟರು. ಅವರು ಡಿವೋರ್ಸ್‌ ಆದಾಗ &nbsp;ನಮಗೆ ಬಹಳ ಬಡತನ ಇತ್ತು, ನಾನು ಕಲಿತ ಶಾಲೆಯಲ್ಲಿ ಇದ್ದ ಒಬ್ಬ ಚರ್ ಪ್ರತಿದಿನ ನನಗೆ ನಿನ್ನ ಮುಖದಲ್ಲಿ ನನಗೆ ಭೂತ ಕಾಣುತ್ತದೆ ಎನ್ನುತ್ತಿದ್ದರು.</p>



<p class="has-text-align-justify has-medium-font-size">ನನಗೆ ತಾಯಿ ಒಂದು ಪುಸ್ತಕ ಕೊಟ್ಟು ನಿನಗೆ ಇಷ್ಟವಾದದ್ದು ಬರಿ ಅಂದಾಗ, ನಾನು ಆ ಟೀಚರ್ ನ್ನು ದ್ವೇಷಿಸುತ್ತೇನೆ ಎಂದು ಬರೆದಿದ್ದೆ. &nbsp;</p>



<p class="has-text-align-justify has-medium-font-size"><mark style="background-color:rgba(0, 0, 0, 0)" class="has-inline-color has-vivid-red-color"><strong>ಪ್ರೊ.ಜಿ ಎನ್ ದೇವಿ:‌ ನೀವು ಬದುಕಿದ್ದು ಬಾಂಗ್ಲಾ ಮಲೆಯಾಳಂ ಹಿಂದಿ ಇಂಗಲೀಷ್ ಮುಂತಾದ ಭಾಷೆಗಳ ಬದುಕಿನಲ್ಲಿ, ನಾನು ಗುಜರಾತಿ ಮರಾಠಿ ಇತ್ಯಾದಿಗಳ ಜೊತೆ ಬದುಕಿರಬಹುದು. ನೀವು ಎಂಎಸ್‌ಪಿಯನ್ನು ರಾಜಕಾರಣಿಗಳಿಗೆ ತರಬೇಕು ಎಂದಿರಿ, ನಾನು ಅದನ್ನು ಕನಿಷ್ಟ ಮಾತನಾಡುವ ಬೆಲೆ ಎಂದು ಹೇಳುತ್ತೇನೆ. ಮಾತಿನ ಅರ್ಥವೂ ಕಳೆದು ಹೋಗುತ್ತಿದೆ. ನಾವಿಂದು ಭಾರತದಲ್ಲಿ ಕನಿಷ್ಟ ಮಾತನಾಡುವ ಬೆಲೆ ಹೊಂದಿದ್ದೇವೆ, 50 ಕೋಟಿ ಜನರು ಕೆಲವು ಪದಗಳನ್ನು ಬಳಸಬಹುದು, ಇನ್ನು 50 ಕೋಟಿ ಮಂದಿ ಇನ್ನೊಂದಷ್ಟು ಪದಗಳನ್ನು ಬಳಸಬಹುದು,</strong></mark></p>



<p class="has-text-align-justify has-medium-font-size"><strong>ಈಗ ನಿಮ್ಮ ಸರದಿ, ನಿಮ್ಮ ಬದುಕಿನ ಬಗ್ಗೆ ಎರಡು ಮೂರು ಪದಗಳನ್ನು ಮಾತಾಡಿ ಎಂದರೆ-ಎಲ್ಲರ ಬದುಕಿನ ಬಗ್ಗೆ- ಏನು ಹೇಳುತ್ತೀರಿ?</strong></p>



<p class="has-medium-font-size"><strong>ಅರುಂಧತಿ ರಾಯ್:</strong> ಮೊದಲ ಎರಡು: ಸಮಾನತೆ ಮತ್ತು ನ್ಯಾಯ. ನನ್ನ ಮಟ್ಟಿಗೆ ಮೂರನೆಯದೆಂದರೆ ಸೌಂದರ್ಯ.</p>



<p class="has-text-align-justify has-medium-font-size"><strong><mark style="background-color:rgba(0, 0, 0, 0)" class="has-inline-color has-vivid-red-color">ಪ್ರೊ.ಜಿ ಎನ್ ದೇವಿ: ತೀಸ್ತಾ ಅವರ ದಾಖಲೀಕರಣದ ಸೌಂದರ್ಯ, ಜೈಲಿಗೆ ಹೋಗಲು ಧೈರ್ಯ ಮಾಡಿದ ಕಾರ್ಟೂನಿಸ್ಟನ ಧೀಮಂತಿಕೆಯ ಸೌಂಧರ್ಯ, ಸಾರ್ವಜನಿಕ ಬುದ್ಧಿಜೀವಿಯಾಗಿ ನಿಮ್ಮ ಧೈರ್ಯ, ಇವೆಲ್ಲದರ ಮೂಲವೇನು? ತೀಸ್ತಾ, ಗೌರಿ, ಅರುಂಧತಿ ಇವರೆಲ್ಲರ ಈ ಧೈರ್ಯದ ಅದರ ಸೌಂದರ್ಯದ ಮೂಲ ಏನು?</mark></strong></p>



<p class="has-text-align-justify has-medium-font-size"><strong>ಅರುಂಧತಿ</strong> <strong>ರಾಯ್:</strong> ಭಾಷೆಯ ಬದಲಾವಣೆ- ಯಾವುದು ಸ್ವೀಕಾರಾರ್ಹ ಅಥವಾ ಅಲ್ಲ ಎಂಬುದು- ಬದಲಾಗುತ್ತದೆ. ಅಣುಪರೀಕ್ಷೆ ನಡೆದಾಗ ನನಗೆ ಅನಿಸಿತು ಹೀಗೆಂದು.‌</p>



<p class="has-text-align-justify has-medium-font-size">ಇಲ್ಲಿ ಕಾಣುತ್ತಿರುವುದು ನಮ್ಮ ದೇಶದ ಬಗ್ಗೆ ಪ್ರೀತಿಯ ಬಗೆಗಲ್ಲ ಇನ್ನೊಂದು ದೇಶದ ಬಗೆಗಿನ ದ್ವೇಷದ ಬಗ್ಗೆ ಮಾತು.</p>



<p class="has-medium-font-size">ಅದರ ಕುರಿತು ಒಂದು ಲೇಖನ ಬರೆದು- ಅದರಲ್ಲಿ ಹೀಗಿದೆ.</p>



<p class="has-medium-font-size">ನಾವು ಬದುಕಿರುವ ಸಮಯದಲ್ಲಿ ಬದುಕುವ ಸತ್ತಾಗಲೇ ಸಾಯುವ ಅವಕಾಶ</p>



<p class="has-medium-font-size">ಪ್ರೀತಿಸುವುದು, ಪ್ರೀತಿಸಲ್ಪಡುವುದು</p>



<p class="has-medium-font-size">ನಮ್ಮ ಸುತ್ತಲಿನ ಅಸಮಾನತೆಗಳ ಬಗ್ಗೆ ಮಾತಾಡುವುದು</p>



<p class="has-medium-font-size">ಸುತ್ತಲಿನ ಸೌಂದರ್ಯವನ್ನು ಸವಿಯುವುದು</p>



<p class="has-text-align-justify has-medium-font-size">ಸರಳ ವಿಷಯಗಳನ್ನು ಸಂಕೀರ್ಣಗೊಳಿಸದಿರುವುದು ಸಂಕೀರ್ಣವಾದವನ್ನು ಸರಳಗೊಳಿಸದಿರುವುದು&#8230;</p>



<p class="has-medium-font-size">ಎಂದೆಂದಿಗೂ ಮರೆಯದಿರುವುದು</p>



<p class="has-text-align-justify has-medium-font-size"><mark style="background-color:rgba(0, 0, 0, 0)" class="has-inline-color has-vivid-red-color"><strong>ಡಿ ಉಮಾಪತಿ: ನೀವು ನಿರಂತರವಾಗಿ ಆಶಾವಾದಿಯಾಗಿ ಕಾಣುತ್ತೀರಿ ನಿಮ್ಮ ಎಲ್ಲ ಬರಹಗಳಲ್ಲಿ. ಪ್ರತಿ ಸಲವೂ ಪ್ರಭುತ್ವ ಉಕ್ಕಿನ ಮುಷ್ಟಿಯೊಂದಿಗೆ ದಮನಿಸಲು ಬರುತ್ತದೆ. ನಿಮ್ಮ ಆಶಾವಾದದ ಮೂಲವೇನು?</strong></mark></p>



<p class="has-text-align-justify has-medium-font-size"><strong>ಅರುಂಧತಿ ರಾಯ್:</strong> ನನಗೆ ಅನಿಸುವಂತೆ ನಮ್ಮ ಸಮಸ್ಯೆ ಪ್ರಭುತ್ವ ಅಲ್ಲ, ನಿಜವಾದ ಸಮಸ್ಯೆ ಇರುವುದು ನಮ್ಮ ಸಮಾಜದಲ್ಲಿ. ಜಾತಿಯನ್ನು, ಶ್ರೇಣೀಕೃತ ಆಲೋಚನೆಯನ್ನು-ಮೇಲಿನಿಂದ ಮಾತ್ರವಲ್ಲ ಕೆಳಗಿನಿಂದಲೂ ಅಳವಡಿಸಿರುವ ರೀತಿಯಲ್ಲಿ. ಮಾವೋ ಸಣ್ಣದೊಂದು ಕಿಡಿ ಹುಲ್ಲಿನ ಗದ್ದೆಗೇ ಬೆಂಕಿ ಹಚ್ಚಬಲ್ಲದು ಎನ್ನುತ್ತಾರೆ, ಆದರೆ ನಮ್ಮ ದೇಶದಲ್ಲಿ ಇರುವುದು ಅಂತಹ ಹುಲ್ಲಿನ ಗದ್ದೆಯಲ್ಲ. ಇಲ್ಲಿ ಇರುವುದೇನಿದ್ದರೂ ಅಡ್ಡಡ್ಡ ಉದ್ದುದ್ದ ಸೀಳಿಕೊಂಡಿರುವ ಜಾತಿಯ ಜಾಲ. ಹಾಗೆ ನೋಡಿದರೆ ಪ್ರಪಂಚದ ಇತರೆ ಭಾಗಗಳಲ್ಲಿ ಜನರು ಅನುಭವಿಸಿರುವ ಸಂಕಷ್ಟಗಳನ್ನು ನೋಡಿದರೆ ನಮ್ಮಜನರು ಅಂತಹ ಸ್ಥಿತಿಗಳನ್ನು ಎದುರಿಸಿಲ್ಲ. ಬೇರೆ ದೇಶಗಳಲ್ಲಿ ಏನಾಯಿತು? ಯುರೋಪು ಎರಡನೇ ಪ್ರಪಂಚ ಯುದ್ಧದಲ್ಲಿ ಅನುಭವಿಸಿದ ಕಷ್ಟ ಕೋಟಲೆಗಳು, ಜಪಾನ್ ನ ಹಿರೋಷಿಮಾ ನಾಗಾಸಾಕಿಯಲ್ಲಿ &nbsp;ಕೋಟಿಗಟ್ಟಲೆ ಜನರ ಕೊಲೆಗಳು, ಜರ್ಮನಿಯ ಜನಾಂಗ ಹತ್ಯೆಗಳು, ಆಫ್ರಿಕನ್ ಅಮೇರಿಕನ್ನರ ಕೊಲೆಗಳು ಇವೆಲ್ಲಾ ನೋಡಿದರೆ ನಾವಿನ್ನೂ ಯುದ್ಧ ಎಂದರೇನೆAದು ಅರ್ಥಮಾಡಿಕೊಳ್ಳಲು ಆರಂಭವೇ ಮಾಡಿಲ್ಲ. ಹಾಗಿರುವಾಗ ನಾವು ನಿರಾಶೆಗೊಳ್ಳಲು ನಮಗೆ ಏನು ಅಧಿಕಾರ ಇದೆ?</p>



<figure class="wp-block-image size-large"><img decoding="async" width="1024" height="682" src="https://peepalmedia.com/wp-content/uploads/2022/09/WhatsApp-Image-2022-09-06-at-1.26.39-PM-2-1024x682.jpeg" alt="" class="wp-image-4024" srcset="https://peepalmedia.com/wp-content/uploads/2022/09/WhatsApp-Image-2022-09-06-at-1.26.39-PM-2-1024x682.jpeg 1024w, https://peepalmedia.com/wp-content/uploads/2022/09/WhatsApp-Image-2022-09-06-at-1.26.39-PM-2-300x200.jpeg 300w, https://peepalmedia.com/wp-content/uploads/2022/09/WhatsApp-Image-2022-09-06-at-1.26.39-PM-2-768x512.jpeg 768w, https://peepalmedia.com/wp-content/uploads/2022/09/WhatsApp-Image-2022-09-06-at-1.26.39-PM-2.jpeg 1280w" sizes="(max-width: 1024px) 100vw, 1024px" /><figcaption><strong>ಅರುಂಧತಿ ರಾಯ್</strong></figcaption></figure>



<p class="has-text-align-justify has-medium-font-size">ಆರೆಸ್ಸೆಸ್ 100 ವರ್ಷದಿಂದ ಕೆಲಸ ಮಾಡುತ್ತಿದೆ, ಒಂದೇ ದೃಷ್ಟಿ, ಒಂದೇ ಗುರಿ, ಒಂದೇ ದ್ವೇಷ ಇದ್ದವರು ಮಾತ್ರ ಹಾಗೆ ಕೆಲಸ ಮಾಡುತ್ತಾರೆ. ನಾವು ಮಹಾಸಾಗರದಂತೆ, ಹಾಗೇ ಇರಬೇಕೆಂಬುದು ನಮ್ಮ ದೃಷ್ಟಿ ಸಹ. ಜಗತ್ತಿನಲ್ಲಿ ಯಾವುದೂ ಕೂಡಾ ಶಾಶ್ವತವಾಗಿ ಒಂದು ಸಿದ್ಧಾಂತ ಒಂದು ಚಿಂತನೆಯಿಂದ ದಮನಿಸಲ್ಪಡಲು ಸಾಧ್ಯವಿಲ್ಲ ಎಂಬುದು ನನ್ನ ಬಲವಾದ ನಂಬಿಕೆ. ಒಂದು ಕಡೆ ಭಾರತವನ್ನು ಹಿಂದೂ ರಾಷ್ಟçವಾಗಿ ಕಟ್ಟುವುದು ಇತ್ಯಾದಿಗಳನ್ನು ಘೋಷಿಲಾಗುತ್ತಿದೆ ಮತ್ತೊಂದು ಕಡೆ ಬಂಡವಾಳವಾದದ ನಡಿಗೆ ಇಡೀ ಗ್ರಹವನ್ನೇ ಕೊನೆಗೊಳಿಸಲಿದೆ ಎಂಬುದು ನಿಚ್ಚಳವಾಗುತ್ತಿದೆ.</p>



<p class="has-text-align-justify has-medium-font-size">ನನಗೆ ಇತ್ತೀಚೆಗೆ ನನ್ನ ಮುಸ್ಲಿಂ ಸ್ನೇಹಿತರೊಬ್ಬರು ಹೀಗೇ ಮಾತಾಡುತ್ತಾ ಇರುವಾಗ ಕೇಳಿದರು. ನನಗದು ಬಹಳ ನೋವು ತರಿಸಿದ ಮಾತು. ಅವರು ಏನೆಂದರೆಂದರೆ, &nbsp;ಅರುಂಧತಿ, ಈಗ ನಮ್ಮನ್ನು ದಮನಿಸುವವರು ಬಯಸುತ್ತಿರುವಂತೆ ನಾವು ಅವರ ರೀತಿ ನೀಗೆ ಒಪ್ಪಿಕೊಂಡರೆ, ಅವರು ಕೇಳುವಂತೆ ನಾವು ಪೌರತ್ವ ಬಿಟ್ಟುಕೊಟ್ಟು ಎರಡನೇ ದರ್ಜೆಯ ಪ್ರಜೆಗಳಾಗಲು ಒಪ್ಪಿಕೊಂಡರೆ ಈ ಹಿಂಸೆ ಹಿಂಸೆ ನಿಲ್ಲಬಹುದೇ? ಎಂದರು. ಅದಕ್ಕೆ ನಾನು ಹೇಳಿದೆ ಖಂಡಿತಾ ಇಲ್ಲ. ಅಷ್ಟಾದರೂ ದಮನಕಾರರಿಗೆ ಸಮಾಧಾನವಾಗುವುದಿಲ್ಲ. ನಾವು ಸಂಪೂರ್ಣವಾಗಿ ನಾಶವಾಗುವ ತನಕ ಅವರು ಹಿಂಸೆ ನಿಲ್ಲಿಸುವುದಿಲ್ಲ. ಹೀಗಾಗಿ ಎದುರು ತಿರುಗಿ ನಿಲ್ಲುವುದನ್ನು ಬಿಟ್ಟು ಬೇರೆ ದಾರಿಯೇ ಇಲ್ಲ. ನಾವು ನಮ್ಮ ಕಾಲುಗಳ ಮೇಲೆ ಭದ್ರವಾಗಿ ನಿಲ್ಲಬೇಕಿದೆ. ಈಗ ನಾವು ಕಾಣುತ್ತಿರುವ ಈ ಎಲ್ಲಾ ಹಾರರ್ ಶೋ ಆರಂಭವಾದದ್ದು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೇನಲ್ಲ. ಅದು ಬಹಳ ಹಿಂದೆಯೇ ಶುರುವಾಗಿದೆ. ಭಾರತ ರಾಷ್ಟ್ರವಾಗಿ ಇನ್ನೂ ರಚನೆಯಾಗುವ ಮೊದಲೇ ಶುರುವಾಗಿದೆಯಲ್ಲವೆ?</p>



<p class="has-text-align-justify has-medium-font-size">ನನ್ನ ತಾಯಿಗೆ ಆಕೆ ಜೀವನದಲ್ಲಿ ಒಬ್ಬ ಬಂಡಾಯಗಾರಳಾಗಿ ಬದುಕಿದ ಕಾರಣಕ್ಕೆ ಅವಳ ಶರೀರವನ್ನು ಹೂಳಲು ಸ್ಮಶಾನದಲ್ಲಿ ಜಾಗ ಕೊಡಲಿಲ್ಲ, ಅದಿನ್ನೂ ಮುಗಿದಿಲ್ಲ ನಾನು ವಾಪಾಸ್ ಹೋಗಿ ತಾಯಿಯ ಚಿತಾಭಸ್ಮವನ್ನು ನಾನು ಬೆಳೆದ ಪ್ರದೇಶದ ನದಿಯಲ್ಲಿ ಕಳಿಸುತ್ತೇನೆ. ನನ್ನ ತಾಯಿಗೆ ಅವರು ಜಾಗ ಕೊಡಲಿಲ್ಲ ಎಂಬುದರ ಬಗ್ಗೆ ನನಗೆ ಹೆಮ್ಮೆಯಿದೆ. ಯಾಕೆಂದರೆ ನನ್ನ ಅಮ್ಮ ಹಾಗೆ ಬದುಕಿದ್ದರು.</p>



<p class="has-text-align-justify has-medium-font-size">ಭಾರತದಲ್ಲಿ ಜಾತಿ ಮತ್ತು ಬಂಡವಾಳವಾದ ಒಂದು ವಿಚಿತ್ರ ಮಿಶ್ರಣವಾಗಿ ತಯಾರಾಗಿವೆ. ಇಂದು ಎಲ್ಲವನ್ನೂ ನಿಯಂತ್ರಿಸುತ್ತಿರುವವರು ಶೇಕಡಾ 2-3 &nbsp;ರಷ್ಟು ಜನಸಂಖ್ಯೆಯಲ್ಲಿರುವ ಬ್ರಾಹ್ಮಣ, ಬನಿಯಾ ಮುಂತಾದು ಮೇಲ್ಜಾತಿಯವರು. ಆದರೆ ಕಳೆದ ಸಾವಿರಾರು ವರ್ಷಗಳಿಂದಲೂ ಅವರು ಈ ದೇಶದ ಬಹುಸಂಖ್ಯಾತರನ್ನು ಹತೋಟಿಯಲ್ಲಿ ಹಿಡಿದುಕೊಳ್ಳುವ ಪ್ರಬಲ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. &nbsp;&nbsp;</p>



<p class="has-text-align-justify has-medium-font-size">ಇಂದು ಅತಿ ಹೆಚ್ಚು ಧೈರ್ಯ ತೋರಿದವರು ಅತಿದೊಡ್ಡ ಬೆಲೆ ತೆರಬೇಕಾಗುತ್ತದೆ ಎಂಬುದು ಒಂದು ನಿಯಮದಂತೆ. ಯಾರಿಗೆ ಅತಿಹೆಚ್ಚು ಧೈರ್ಯ ತೋರಲು ಸಾಧ್ಯವಾಗುತ್ತದೋ ಅವರಿಗೆ ಸಮಾಜವನ್ನು ಬದಲಿಸಬೇಕೆಂಬ ಬಗ್ಗೆ ಅತಿಹೆಚ್ಚು ಕಾಳಜಿಯೂ ಇರುತ್ತದೆ ಯಾರೂ ಮಾತಾಡದಂತೆ ಪ್ರಶ್ನಿಸದಂತೆ ಕೇವಲ ಪ್ರಭುತ್ವ ಮಾತ್ರವಲ್ಲ, ಜಾತಿವಾದಿಗಳು, ಪಟ್ಟಭದ್ರ ಕಾರ್ಪೊರೇಶನ್ ಗಳು, ಬಲಪಂಥೀಯರು ಎಡಪಂಥೀಯರು ಎಲ್ಲರೂ ಇನ್ಯಾರನ್ನೋ ಮಾತಾಡದಂತೆ ಮಾಡಲು ನೋಡುತ್ತಿದ್ದಾರೆ. ಸೆನ್ಸಾರ್ ಶಿಪ್ ಗೆ ಹಲವು ಮುಖಗಳಿವೆ. ಹೈದ್ರಾಬಾದ್‌ನಲ್ಲಿ ಮುಸ್ಲಿಂ ಹಿಂದೂ ಮದುವೆಯ ಸಂದರ್ಭದಲ್ಲಿ ಮರ್ಯಾದೆಗೇಡು ಹತ್ಯೆ ಆದಾಗ, ದೊಡ್ಡ ಆಂದೋಲನ ಸರ್ ಸೆ ತನ್ ಜುದಾ (ತಲೆಯಿಂದ ದೇಹ ಬೇರೆ), ಪ್ರಶ್ನಿಸುವ ಸ್ಥಳವೇ ಇಲ್ಲವಾಗುವ ಬಗೆ.. ಇತ್ತೀಚೆಗೆ ಸಲ್ಮಾನ್ ರಶ್ದಿ ಅವರನ್ನಂತೂ ಹೆಚ್ಚೂ ಕಡಿಮೆ ಕೊಂದೇ ಹಾಕಿದ್ದರು. ಇರಾಕ್ ಮೇಲೆ ಬಾಂಬ್ ಹಾಕಿದ್ದಾಗ, ಅಫ್ಘಾನಿಸ್ಥಾನ ನಡೆದಾಗ ಪ್ಯಾಲೆಸ್ತೇನೆ ವಿಷಯದಲ್ಲಿ-ಎಲಿಯೂ ಮುಕ್ತ ಮಾತಿನ ವಾತಾವರಣ ಇಲ್ಲ, ಜೂಲಿಯನ್ ಅಸಾಂಜ್ ಇನ್ನೂ ಜೈಲಿನಲ್ಲಿದ್ದಾರೆ. ಇದೆಲ್ಲಾ ಏನು ತೋರಿಸುತ್ತದೆ ಹೇಳಿ. ‌</p>



<p class="has-text-align-justify has-medium-font-size"><mark style="background-color:rgba(0, 0, 0, 0)" class="has-inline-color has-vivid-red-color"><strong>ಪ್ರಶ್ನೆ: (ಹರ್ಷಕುಮಾರ್‌ ಕುಗ್ವೆ)- ನೀವು ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಜಾತಿ ವಿನಾಶ ಪುಸ್ತಕಕ್ಕೆ ಡಾಕ್ಟರ್‌ ಅಂಡ್‌ ಸೈಂಟ್‌ ತಲೆಬರಹದ ಒಂದು ಸುದೀರ್ಘ ಮುನ್ನುಡಿ ಬರೆದಾಗ ಅಂಬೇಡ್ಕರ್‌ ವಾದಿಗಳಿಂದಲೂ ಟೀಕೆಗೆ ಒಳಗಾದಿರಿ. ಇದನ್ನು ಮೇಲ್ಜಾತಿ ಅಹಂ ಎಂದೇ ಅವರು ಪರಿಗಣಿಸಿ ಟೀಕೆ ಮಾಡಿದರು. ಈ ಬಗ್ಗೆ ನಿಮ್ಮ ಅಭಿಪ್ರಾಯ?</strong></mark></p>



<p class="has-text-align-justify has-medium-font-size"><strong>ಅರುಂಧತಿ ರಾಯ್:‌</strong> ನಿಜ. ಬಹಳ ಕಹಿಯಾದ ಟೀಕೆ ಆ ಸಂದರ್ಭದಲ್ಲಿ ಬಂತು. ಡಾ.ಬಿ.ಆರ್.‌ಅಂಬೇಡ್ಕರ್ ಅವರ ಕೃತಿ Anhilation of Caste ಏನಿದೆ, ಅದನ್ನು ಭಾರತದಲ್ಲಿ ಪ್ರಬಲ ಜಾತಿಗಳ ಬೌದ್ಧಿಕ ಲಾಭಿ ಯಾರಿಗೂ ತಲುಪದಂತೆ ಮಾಡಿದೆ. ಯಾಕೆಂದರೆ ಅದನ್ನು ಅಂಬೇಡ್ಕರ್‌ ಬರೆದಿರುವುದೇ ಬಲಾಡ್ಯ ಜಾತಿಗಳನ್ನು ಉದ್ದೇಶಿಸಿ. ಹೀಗಾಗಿ ಅದು ಇಂತಹ ಜಾತಿಗಳ ಜನರಿಗೆ ತಲುಪುವಂತೆ ಮಾಡಬೇಕು, ಬಲಾಢ್ಯ ಜಾತಿಗಳಿಗೆ ಇವನ್ನೆಲ್ಲ ಹೇಳಲೇಬೇಕಾದ ಅಗತ್ಯವಿತ್ತು. ಹೀಗಾಗಿ ನಾನು ಅಂತಹ ಮುನ್ನುಡೆ ಬರೆದೆ. ಆದರೆ ಅದಕ್ಕೆ ಬಂದ ಟೀಕೆಗಳ ಕಾರಣದಿಂದ ಈಗ ಆ ಮುನ್ನುಡಿಯನ್ನು ತೆಗೆದು ಕೇವಲ ಅಂಬೇಡ್ಕರ್‌ ಅವರ ಪ್ರಬಂಧವನ್ನು ಪ್ರಕಟಿಸಲಾಗುತ್ತಿದೆ. ನನ್ನ ಮುನ್ನುಡಿಯಲ್ಲಿ ನಾನು ಬರೆದಿರುವ ಅಭಿಪ್ರಾಯಗಳಿಗೆ ಈಗಲೂ ಬದ್ಧಳಾಗಿದ್ದೇನೆ. ಅದನ್ನು &nbsp;ಪ್ರತ್ಯೇಕ ಪುಸ್ತಕವಾಗಿ ತರುತ್ತಿದ್ದೇವೆ.</p>



<p class="has-text-align-justify has-medium-font-size"><mark style="background-color:rgba(0, 0, 0, 0)" class="has-inline-color has-vivid-red-color"><strong>ಪ್ರಶ್ನೆ: ಬಂಡವಾಳಶಾಹಿ ಮತ್ತು ಜಾತಿ ಬಗ್ಗೆ ಮಾತಾಡಿದಿರಿ, ಮಹಿಳಾ ವಿಮೋಚನೆ ಯಾವಾಗ?</strong></mark> </p>



<p class="has-text-align-justify has-medium-font-size"><strong>ಕಾಯುವುದೇ ನಮ್ಮ ಸಮಸ್ಯೆಯಾಗಿದೆ ನೋಡಿ. ಆದರೆ ನನ್ನಮ್ಮ ಕಾಯಲಿಲ್ಲ, ನಾನು ಕಾಯಲಿಲ್ಲ, ಇಂತಹ ಎಷ್ಟೋ ಮಂದಿ ಕಾಯಲಿಲ್ಲ. ನಾವು ದಮನಕ್ಕೊಳಗಾಗಿರುವ ಬಗ್ಗೆ ಮಾತ್ರ ಮಾತಾಡುವುದಲ್ಲ ನಮಗಾಗಿ ಯಾರೂ ಬಂದು ಹೋರಾಡುವುದಿಲ್ಲ. ನನ್ನ ಪ್ರಕಾರ ಅತ್ಯದ್ಭುತವಾದ ಸಂಗತಿಯೆಂದರೆ ಸ್ವತಂತ್ರ ಸ್ತ್ರೀ ಆಗಿರುವುದು. ಈ ಸಂಪ್ರದಾಯ, ಮದುವೆ ಮುಂತಾದ  ಚೌಕಟ್ಟುಗಳನ್ನು ಮೀರಿ ಬದುಕುವುದು ʼಆವಾರಾʼ ಅನಿಸಿಕೊಳ್ಳುವುದು ನನ್ನ ಪ್ರಕಾರ ಅದ್ಭುತ.</strong></p>



<p class="has-medium-font-size"><strong>ಅಕ್ಷರ ರೂಪ ಕೊಟ್ಟವರು: ಮಲ್ಲಿಗೆ ಸಿರಿಮನೆ, ಜನಶಕ್ತಿ</strong></p>
]]></content:encoded>
					
		
		
			</item>
	</channel>
</rss>
