<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ayodhya &#8211; Peepal Media</title>
	<atom:link href="https://peepalmedia.com/tag/ayodhya/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sat, 17 Feb 2024 08:14:45 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>ayodhya &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಜ್ಞಾನವಾಪಿ ಮಸೀದಿ ತೀರ್ಪು: ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನಿರ್ಧಾರ</title>
		<link>https://peepalmedia.com/gyanavapi-mosque-verdict-reappeal-to-high-court/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 02 Feb 2024 08:55:39 +0000</pubDate>
				<category><![CDATA[ದೇಶ]]></category>
		<category><![CDATA[ayodhya]]></category>
		<category><![CDATA[Bangalore]]></category>
		<category><![CDATA[breaking news]]></category>
		<category><![CDATA[gyanavapi]]></category>
		<category><![CDATA[gyanavapi mosque]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[kashi]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[ram]]></category>
		<category><![CDATA[state politics]]></category>
		<category><![CDATA[temple]]></category>
		<category><![CDATA[trend]]></category>
		<category><![CDATA[trending news]]></category>
		<category><![CDATA[VARANASI]]></category>
		<category><![CDATA[writing]]></category>
		<guid isPermaLink="false">https://peepalmedia.com/?p=35575</guid>

					<description><![CDATA[ವಾರಾಣಾಸಿ: ಜ್ಞಾನವಾಪಿ ಮಸೀದಿದ ಆವರಣದಲ್ಲಿರುವ ‘ವ್ಯಾಸ್ ಕಾ ತೆಖಾನಾ’ದ ಒಳಗೆ ಹಿಂದೂ ಭಕ್ತರು ಪೂಜೆ ಸಲ್ಲಿಸಲು ಅವಕಾಶ ನೀಡಿ ವಾರಾಣಾಸಿ ಕೋರ್ಟ್ ಬುಧವಾರ ನೀಡಿತ್ತು. ಈ ತೀರ್ಪಿನ ವಿರುದ್ಧ ಅಲಹಾಬಾದ್ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಮುಸ್ಲಿಂ ಪರ ವಕೀಲ ಅಖ್ಲಾಕ್ ಅಹ್ಮದ್ ತಿಳಿಸಿದ್ದಾರೆ.ವಾರಣಾಸಿ ಕೋರ್ಟ್ನ ಈಗಿನ ತೀರ್ಪು 2022ರ ಅಡ್ವೊಕೇಟ್ ಕಮಿಷನರ್ ವರದಿ, ಎಎಸ್ಐ ವರದಿ ಮತ್ತು ನಮ್ಮ ಪರವಾಗಿ 1937ರಲ್ಲಿ ನೀಡಲಾಗಿದ್ದ ತೀರ್ಪನ್ನು ಕಡೆಗಣಿಸಿದೆ. 1993ಕ್ಕೆ ಮುನ್ನ ಇಲ್ಲಿ ಪ್ರಾರ್ಥನೆ ನಡೆಯುತ್ತಿತ್ತು ಎನ್ನುವುದನ್ನು ಸಾಬೀತುಪಡಿಸುವ [&#8230;]]]></description>
										<content:encoded><![CDATA[
<p><strong>ವಾರಾಣಾಸಿ: </strong>ಜ್ಞಾನವಾಪಿ ಮಸೀದಿದ ಆವರಣದಲ್ಲಿರುವ ‘ವ್ಯಾಸ್ ಕಾ ತೆಖಾನಾ’ದ ಒಳಗೆ ಹಿಂದೂ ಭಕ್ತರು ಪೂಜೆ ಸಲ್ಲಿಸಲು ಅವಕಾಶ ನೀಡಿ ವಾರಾಣಾಸಿ ಕೋರ್ಟ್ ಬುಧವಾರ ನೀಡಿತ್ತು. ಈ ತೀರ್ಪಿನ ವಿರುದ್ಧ ಅಲಹಾಬಾದ್ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಮುಸ್ಲಿಂ ಪರ ವಕೀಲ ಅಖ್ಲಾಕ್ ಅಹ್ಮದ್ ತಿಳಿಸಿದ್ದಾರೆ.<br>ವಾರಣಾಸಿ ಕೋರ್ಟ್ನ ಈಗಿನ ತೀರ್ಪು 2022ರ ಅಡ್ವೊಕೇಟ್ ಕಮಿಷನರ್ ವರದಿ, ಎಎಸ್ಐ ವರದಿ ಮತ್ತು ನಮ್ಮ ಪರವಾಗಿ 1937ರಲ್ಲಿ ನೀಡಲಾಗಿದ್ದ ತೀರ್ಪನ್ನು ಕಡೆಗಣಿಸಿದೆ. 1993ಕ್ಕೆ ಮುನ್ನ ಇಲ್ಲಿ ಪ್ರಾರ್ಥನೆ ನಡೆಯುತ್ತಿತ್ತು ಎನ್ನುವುದನ್ನು ಸಾಬೀತುಪಡಿಸುವ ಯಾವುದೇ ಸಾಕ್ಷಿಗಳನ್ನು ಹಿಂದೂ ಅರ್ಜಿದಾರರು ನೀಡಿಲ್ಲ. ಆ ಸ್ಥಳದಲ್ಲಿ ಅಂಥ ಯಾವುದೇ ವಿಗ್ರಹ ಸಹ ಇಲ್ಲ&#8221; ಎಂದು ಅಹ್ಮದ್‌ ತಿಳಿಸಿದ್ದಾರೆ.<br>ಬಾಬರಿ ಮಸೀದಿ ಪ್ರಕರಣದಲ್ಲಿ ಕೂಡಾ ಇಂಥದ್ದೇ ದೃಷ್ಟಿಕೋನ ಹೊಂದಲಾಗಿತ್ತು. ಒಳಗೆ ಏನೂ ಇರಲಿಲ್ಲ ಎನ್ನುವುದನ್ನು ಆಯುಕ್ತರ ವರದಿ ಮತ್ತು ಎಎಸ್ಐ ವರದಿ ಹೇಳಿತ್ತು. ಈ ತೀರ್ಪಿನ ಬಗ್ಗೆ ನಮಗೆ ತೀವ್ರ ಅಸಮಾಧಾನವಾಗಿದೆ ಎಂದು ಇನ್ನೊಬ್ಬ ವಕೀಲ ಮಿಅರಾಜುದ್ದೀನ್ ಸಿದ್ದೀಖಿ ಹೇಳಿದ್ದಾರೆ.<br>&#8220;ಇಂಥ ಯಾವುದೇ ತೀರ್ಪನ್ನು ನಾವು ಒಪ್ಪುವುದಿಲ್ಲ. ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಜಿಲ್ಲಾ ಅಧ್ಯಕ್ಷರು ಕೈಜೋಡಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ನಾವು ಕಾನೂನಾತ್ಮಕವಾಗಿ ಹೋರಾಡುತ್ತೇವೆ. ರಾಜಕೀಯ ಲಾಭ ಪಡೆಯಲು ಇದು ನಡೆಯುತ್ತಿದೆ ಎಂದು ಮಿಅರಾಜುದ್ದೀನ್ ಸಿದ್ದೀಖಿ ಸ್ಪಷ್ಟಪಡಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಮೋದಿಯವರ ಹೊಸ ಕಾಲಚಕ್ರದಲ್ಲಿ ಉದ್ಯೋಗ ಸಿಗಲಿದೆಯೇ?</title>
		<link>https://peepalmedia.com/unemotional-in-modis-naya-kalachakra/</link>
		
		<dc:creator><![CDATA[Charan Aivarnad]]></dc:creator>
		<pubDate>Fri, 26 Jan 2024 08:05:38 +0000</pubDate>
				<category><![CDATA[ಅಂಕಣ]]></category>
		<category><![CDATA[ayodhya]]></category>
		<category><![CDATA[banagalore]]></category>
		<category><![CDATA[bjp]]></category>
		<category><![CDATA[breaking news]]></category>
		<category><![CDATA[congress]]></category>
		<category><![CDATA[crisis]]></category>
		<category><![CDATA[gaza]]></category>
		<category><![CDATA[GDP]]></category>
		<category><![CDATA[india]]></category>
		<category><![CDATA[isreal]]></category>
		<category><![CDATA[jai sri ram]]></category>
		<category><![CDATA[job]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[narendra]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[news update]]></category>
		<category><![CDATA[palestinian]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[ram]]></category>
		<category><![CDATA[ram mandir]]></category>
		<category><![CDATA[state politics]]></category>
		<category><![CDATA[trend]]></category>
		<category><![CDATA[Trending]]></category>
		<category><![CDATA[trending news]]></category>
		<category><![CDATA[Unemployment]]></category>
		<category><![CDATA[viral]]></category>
		<category><![CDATA[viral news]]></category>
		<category><![CDATA[work]]></category>
		<category><![CDATA[writing]]></category>
		<guid isPermaLink="false">https://peepalmedia.com/?p=35387</guid>

					<description><![CDATA[ಅಯೋಧ್ಯೆಯಲ್ಲಿ ಪ್ರಧಾನಿಗಳು ಬಾಲರಾಮನ ಪ್ರತಿಷ್ಠಾಪನೆಯನ್ನು ಮಾಡಿದ್ದಾರೆ. ಸ್ವತಃ ತಾವು ಗರ್ಭಗುಡಿಯ ಒಳಗೆ ರಾಮನಿಗೆ ಪೂಜೆ ಮಾಡಿದ್ದಾರೆ. ಇದಾದ ನಂತರ ಮಾಡಿದ ತಮ್ಮ ಭಾಷಣದಲ್ಲಿ ಜನವರಿ 22ನ್ನು ದೇಶದಲ್ಲಿ ಹೊಸ ಕಾಲ ಚಕ್ರದ ಆರಂಭ ಎಂದು ಘೋಷಿಸಿದ್ದಾರೆ. ಆದರೆ ಮುಂದೆ ಈ ಚಕ್ರ ಹೇಗೆ ತಿರುಗಲಿದೆ ಎಂಬುದು ನೋಡಬೇಕಿದೆ. 2014 ರಲ್ಲಿ ಮೋದಿಯವರು ಅಧಿಕಾರಕ್ಕೆ ಬಂದಾಗ ಅವರು ನೀಡಿದ್ದ ಪ್ರಮುಖ ಭರವಸೆಗಳ ಚಕ್ರ ಉಲ್ಟಾ ಸುತ್ತುತ್ತಿದೆಯೇ?2014 ರಲ್ಲಿ, ಭಾರತದ ಆರ್ಥಿಕತೆಯು ಸುಮಾರು ಎರಡು ದಶಕಗಳ ಕ್ಷಿಪ್ರ ಬೆಳವಣಿಗೆಯ ನಂತರ [&#8230;]]]></description>
										<content:encoded><![CDATA[
<pre class="wp-block-code" style="font-size:16px"><code><strong><em>ಕಳೆದ ಎರಡು ವರ್ಷಗಳಿಂದ ಪ್ರಧಾನಿ ಮೋದಿಯವರು ಮಾಡುವುತ್ತಿರುವುದೆಲ್ಲಾ ಹೇಗಾದರೂ ಮಾಡಿ 2024ರ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಆಸೆಯಿಂದ. ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆ ಇದಕ್ಕೆ ಒಂದು ಉದಾಹರಣೆಯಷ್ಟೇ. ಇದರ ಮುಂದೆ ದೇಶ ಅನುಭವಿಸುತ್ತಿರುವ ಸಂಕಷ್ಟಗಳು ಮಣ್ಣುಪಾಲಾಗಿವೆ. ಕಂಠ ಹರಿದುಕೊಂಡು ಕೂಗುವ ಘೋಷಣೆಗಳ ಮಧ್ಯೆ ದೇಶದ ನೋವಿನ ದನಿ ಕೇಳದಾಗಿದೆ</em></strong>

<strong>ಲೇಖನ: ಚರಣ್ ಐವರ್ನಾಡು</strong></code></pre>



<p>ಅಯೋಧ್ಯೆಯಲ್ಲಿ ಪ್ರಧಾನಿಗಳು ಬಾಲರಾಮನ ಪ್ರತಿಷ್ಠಾಪನೆಯನ್ನು ಮಾಡಿದ್ದಾರೆ. ಸ್ವತಃ ತಾವು ಗರ್ಭಗುಡಿಯ ಒಳಗೆ ರಾಮನಿಗೆ ಪೂಜೆ ಮಾಡಿದ್ದಾರೆ. ಇದಾದ ನಂತರ ಮಾಡಿದ ತಮ್ಮ ಭಾಷಣದಲ್ಲಿ ಜನವರಿ 22ನ್ನು ದೇಶದಲ್ಲಿ ಹೊಸ ಕಾಲ ಚಕ್ರದ ಆರಂಭ ಎಂದು ಘೋಷಿಸಿದ್ದಾರೆ. ಆದರೆ ಮುಂದೆ ಈ ಚಕ್ರ ಹೇಗೆ ತಿರುಗಲಿದೆ ಎಂಬುದು ನೋಡಬೇಕಿದೆ.</p>



<p>2014 ರಲ್ಲಿ ಮೋದಿಯವರು ಅಧಿಕಾರಕ್ಕೆ ಬಂದಾಗ ಅವರು ನೀಡಿದ್ದ ಪ್ರಮುಖ ಭರವಸೆಗಳ ಚಕ್ರ ಉಲ್ಟಾ ಸುತ್ತುತ್ತಿದೆಯೇ?<br>2014 ರಲ್ಲಿ, ಭಾರತದ ಆರ್ಥಿಕತೆಯು ಸುಮಾರು ಎರಡು ದಶಕಗಳ ಕ್ಷಿಪ್ರ ಬೆಳವಣಿಗೆಯ ನಂತರ ಮೂರು ವರ್ಷಗಳ ಕಾಲ ತೀವ್ರ ಕುಸಿತವನ್ನು ಕಂಡಿತು. 2003-04 ರಿಂದ ವರ್ಷಕ್ಕೆ ಸರಾಸರಿ 70 ಲಕ್ಷಕ್ಕಿಂತಲೂ ಹೆಚ್ಚಿನ ಕೃಷಿಯೇತರ ಉದ್ಯೋಗದ ಬೆಳವಣಿಗೆಯು ತೀವ್ರವಾಗಿ ಕುಸಿದಿದೆ.</p>



<p>ಈ ಸಂದರ್ಭದಲ್ಲಿ ಪಿಎಂ ಮೋದಿಯವರು ವರ್ಷಕ್ಕೆ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿದರು. ಈ ಬಣ್ಣ ಬಣ್ಣದ ಬರವಸೆಯನ್ನು ನಂಬಿದ ಯುವಕರು ಅವರನ್ನು ನಂಬಿ ಅಧಿಕಾರಕ್ಕೆ ತರಲು ಮತ ಹಾಕಿದರು. ಆದರೆ ಅವರ ಸರ್ಕಾರಕ್ಕೆ ಈ ಉದ್ಯೋಗ ಸೃಷ್ಟಿಯಲ್ಲಿ ಆಗಿರುವ ಕುಸಿತವನ್ನು ತಡೆಯಲು ಸಾಧ್ಯವಾಗಲಿಲ್ಲ. ಮಾರ್ಚ್ 2020 ರ ಹೊತ್ತಿಗೆ, ಕೋವಿಡ್‌ ತಾಪತ್ರಯ ಶುರುವಾಗುವ ಮೊದಲು ಭಾರತದ ಆರ್ಥಿಕತೆಯ ಪರಿಸ್ಥಿತಿ ಶೋಚನೀಯವಾಗಿತ್ತು. ಇದರಿಂದ ಅತೀ ಹೆಚ್ಚು ಸಂಕಷ್ಟಕ್ಕೆ ಒಳಗಾದವರು ಯುವಕರು.</p>



<p style="font-size:20px"><strong>ಭಾರತೀಯರು ಒಪ್ಪತ್ತಿನ ಊಟಕ್ಕೆ ಇಸ್ರೇಲ್‌ಗೆ ಹೋಗಬೇಕೇ? </strong></p>



<p>ಪ್ಯಾಲಿಸ್ತೇನ್‌ ಹಅಗೂ ಗಾಜಾದ ಮೇಲೆ ಇಸ್ರೇಲ್‌ ಆಕ್ರಮಣ ಆರಂಭವಾಗಿ ಸುಮಾರು ನೂರು ದಿನಗಳಿಗೂ ಹೆಚ್ಚಾಗುತ್ತಿದೆ. ಗಾಜಾ ನಿರ್ಣಾಮವಾಗಿ ಹೋಗಿದೆ. ಇಸ್ರೇಲ್‌ ಯುದ್ಧದ ಉನ್ಮಾದದಲ್ಲಿಯೇ ಇದೆ. </p>



<p>ಪ್ಯಾಲಿಸ್ತೇನಿಯರ ಉದ್ಯೋಗ ಪರವಾನಗಿಯನ್ನು ಇಸ್ರೇಲ್‌ ಅಮಾನತು ಮಾಡಿರುವುದರಿಂದ ಅಲ್ಲಿ ಕಾರ್ಮಿಕರ ಅಭಾವ ಎದುರಾಗಿದೆ. ಹಾಗಾಗಿ ಅಲ್ಲಿ ಉದ್ಯೋಗಗಳು ಖಾಲಿ ಬಿದ್ದಿವೆ. ಅಕ್ಟೋಬರ್‌ನಲ್ಲಿ, ಟೆಲ್ ಅವಿವ್‌ನಲ್ಲಿ ಇಸ್ರೇಲಿ ಕಟ್ಟಡ ನಿರ್ಮಾಣ ಕಂಪನಿಗಳು   ಪ್ಯಾಲೆಸ್ತೇನಿಯರ ಬದಲಿಗೆ 100,000 ಭಾರತೀಯ ಕಾರ್ಮಿಕರನ್ನು ಕಳುಹಿಸಿ ಕೊಡುವಂತೆ ಭಾರತ ಸರ್ಕಾರವನ್ನು ಕೋರಿದೆ.</p>



<p><strong>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : </strong><a href="https://chat.whatsapp.com/Lec6jB78EHu04TNvY80Tu6" data-type="link" data-id="https://chat.whatsapp.com/Lec6jB78EHu04TNvY80Tu6">ಪೀಪಲ್‌ ಮೀಡಿಯಾ</a></p>



<p>ಹರ್ಯಾಣ ಸರ್ಕಾರವು ಡಿಸೆಂಬರ್‌ನಲ್ಲಿ ಇಸ್ರೇಲ್‌ನಲ್ಲಿ ಕಟ್ಟಡ ನಿರ್ಮಾಣ ಕೆಲಸಕ್ಕೆ ಕಾರ್ಮಿಕರನ್ನು ತಮ್ಮ ರಾಜ್ಯದಿಂದ ಕಳುಹಿಸಲು 10,000 ಹುದ್ದೆಗಳಿಗೆ ಅರ್ಜಿ ಕರೆದಿತ್ತು. ಇದರಲ್ಲಿ ಬಡಗಿಗಳು ಮತ್ತು ಕಬ್ಬಿಣದ ಮಾಡುವ 3,000 ಹುದ್ದೆಗಳಿದ್ದವು. ನೆಲಕ್ಕೆ ಟೈಲ್ ಹಾಕುವವರಿಗಾಗಿ 2,000 ಉದ್ಯೋಗಗಳು ಮತ್ತು ಗಾರೆ ಕೆಲಸಕ್ಕೆ 2,000 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. ಇದಕ್ಕೆ ಸಂಬಳ ತಿಂಗಳಿಗೆ 6,100 ಶೆಕೆಲ್‌ಗಳು ಅಥವಾ ಸುಮಾರು 1,625 ಡಾಲರ್ (1 ಲಕ್ಷದ 30 ಸಾವಿರ ರುಪಾಯಿ). ಹರ್ಯಾಣದ ತಲಾ ತಿಂಗಳ ಆದಾಯ (per capita income) <a href="https://www.pib.gov.in/PressReleasePage.aspx?PRID=1942055" data-type="link" data-id="https://www.pib.gov.in/PressReleasePage.aspx?PRID=1942055">ಸುಮಾರು 24723.75 ರುಪಾಯಿ (2022-23)</a>.</p>



<p>ಅದೇ ತಿಂಗಳು, ಭಾರತದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶವು 10,000 ಕಾರ್ಮಿಕರಿಗಾಗಿ ಇದೇ ರೀತಿಯ ಇಸ್ರೇಲಿ ಉದ್ಯೋಗ ನೀಡುವ ಭರವಸೆಯ ಜಾಹೀರಾತನ್ನು ಬಿಡುಗಡೆ ಮಾಡಿತು. ಕಳೆದ ಮಂಗಳವಾರದಂದು ಲಕ್ನೋದಲ್ಲಿ ನೇಮಕಾತಿ ಚಾಲನೆ ಆರಂಭಗೊಂಡಿದ್ದು, ನೂರಾರು ಅರ್ಜಿದಾರರನ್ನು ಸರತಿ ಸಾಲಿನಲ್ಲಿ ನಿಂತಿದ್ದಾರೆ.</p>



<p>ಭಾರತ ಸರ್ಕಾರ ತನ್ನ ಪ್ರಜಾಪ್ರಭುಗಳಿಗೆ ವಿದೇಶಿ ಉದ್ಯೋಗ ನೀಡುವಷ್ಟು ಮುಂದೆ ಹೋಗಿದೆ ಎಂದು ನೀವು ಭಾವಿಸಿದರೆ, ಅದು ಮೂರ್ಖತನ. ಯುದ್ಧದಲ್ಲಿ ಮುಳುಗಿರುವ ಒಂದು ದೇಶ ಉದ್ಯೋಗ ನೀಡಲು ಶಕ್ತವಾದರೆ, ಭಾರತಕಕ್ಕೆ ಉದ್ಯೋಗ ಸೃಷ್ಟಿಸಲು ಯಾಕೆ ಸಾಧ್ಯವಾಗುತ್ತಿಲ್ಲ? </p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">This is the queue for recruitment drive to send labourers to work in Israel. The registration cum screening began at ITI Lucknow on January 23 is witnessing huge influx of job seekers from UP, Bihar and West Bengal. <a href="https://t.co/jLsVogk7QC">pic.twitter.com/jLsVogk7QC</a></p>&mdash; Piyush Rai (@Benarasiyaa) <a href="https://twitter.com/Benarasiyaa/status/1750030998006571009?ref_src=twsrc%5Etfw">January 24, 2024</a></blockquote><script async src="https://platform.twitter.com/widgets.js" charset="utf-8"></script>
</div></figure>



<p style="font-size:20px"><strong>ನಿರುದ್ಯೋಗದಿಂದ ಭಾರತ ತತ್ತರಿಸಿ ಹೋಗಲಿದೆ?</strong></p>



<p>ಸದ್ಯ ಯುವಕರ ಅವರ ಭವಿಷ್ಯ ಎಷ್ಟು ಕರಾಳವಾಗಿತ್ತು ಎಂಬುದನ್ನು ತೋರಿಸಲು ಮೂರು ಉದಾಹರಣೆಗಳು ಸಾಕು. 2018 ರಲ್ಲಿ, ಭಾರತೀಯ ರೈಲ್ವೇ ವಿವಿಧ ಕೆಳಮಟ್ಟದ ಉದ್ಯೋಗಗಳಲ್ಲಿ 63,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆಯಿತು. 1.91 ಕೋಟಿ ಪದವಿ ಮತ್ತು ಡಿಪ್ಲೋಮಾ ಓದಿರುವ ಯುವಕರು ಈ ಹುದ್ದೆಗಳಿಗೆ ಅಪ್ಲೈ ಮಾಡಿದ್ದರು.</p>



<p>ಒಂದು ವರ್ಷದ ನಂತರ, Personnel and Training Department 12,000 ಖಾಲಿ ಹುದ್ದೆಗಳನ್ನು ಅರ್ಜಿ ಕರೆದಾಗ, 1.2 ಕೋಟಿಗೂ ಹೆಚ್ಚು ಯುವಕರು ಮತ್ತೆ ಅರ್ಜಿ ಸಲ್ಲಿಸಿದರು.</p>



<p>ಆಯ್ದ ಯುವಕರಿಗೆ ನಾಲ್ಕು ವರ್ಷಗಳ ಮಿಲಿಟರಿ ತರಬೇತಿ ನೀಡಲು ಸರ್ಕಾರವು ಅಗ್ನಿವೀರ್ ಯೋಜನೆಯನ್ನು ಘೋಷಿಸಿದಾಗ, ಇದಕ್ಕೆ ಆಯ್ಕೆಯಾಗದೆ ವಿಫಲರಾಗಿ ಯುವಕರು ಹತಾಶೆಗೆ ಒಳಗಾದರು. ಹತಾಶ ಯುವಕರು ಆತ್ಮಹತ್ಯೆ ಮಾಡಿಕೊಂಡರು. <a href="https://timesofindia.indiatimes.com/city/patna/agnipath-protests-rail-coaches-set-on-fire-at-different-places-in-bihar/articleshow/92279487.cms" data-type="link" data-id="https://timesofindia.indiatimes.com/city/patna/agnipath-protests-rail-coaches-set-on-fire-at-different-places-in-bihar/articleshow/92279487.cms">ಬಿಹಾರದ ದಾನಪುರ ನಿಲ್ದಾಣದಲ್ಲಿ ರೈಲಿಗೆ ಬೆಂಕಿ</a> ಕೂಡ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿದರು.</p>



<p>ಪ್ರಧಾನಿ ಮೋದಿಯವರು ತಮ್ಮ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾದರು., 2019 ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಾಗಲೂ ನಿರುದ್ಯೋಗದ ಸಮಸ್ಯೆಗೆ ಪರಿಹಾರ ಹುಡುಕಲಿಲ್ಲ. 2019-20 ರ ಹೊತ್ತಿಗೆ, GDP ಬೆಳವಣಿಗೆಯು 4.2 ಶೇಕಡಾಕ್ಕೆ ಕುಸಿದಿದೆ. ಇದು ಹಿಂದೆಂದೂ ಕಾಣದ ಕುಸಿತವಾಗಿದೆ.</p>



<p><strong>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : </strong><a href="https://chat.whatsapp.com/Lec6jB78EHu04TNvY80Tu6" data-type="link" data-id="https://chat.whatsapp.com/Lec6jB78EHu04TNvY80Tu6">ಪೀಪಲ್‌ ಮೀಡಿಯಾ</a></p>



<p>ಆಗಸ್ಟ್ 2020 ರಲ್ಲಿ ಪ್ರಕಟವಾದ ಮೆಕಿನ್ಸೆ ವರದಿ ದೇಶ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡುತ್ತದೆ: ಮುಂದಿನ ದಶಕದಲ್ಲಿ ಭಾರತದ ಜಿಡಿಪಿ ವಾರ್ಷಿಕವಾಗಿ ಶೇಕಡಾ 8 ರಿಂದ 8.5 ರಷ್ಟು ಬೆಳೆಯಬೇಕು. ಹಾಗಾದಾಗ ಮಾತ್ರ 2019-20 ರ ಹಣಕಾಸು ವರ್ಷದಲ್ಲಿ ದಾಖಲಾದ ಶೇಕಡಾ 4.2 ರ ಬೆಳವಣಿಗೆಯ ಡಬಲ್‌ ಆಗುತ್ತದೆ. ಆಗ 2023 ಮತ್ತು 2030 ರ ನಡುವೆ 9 ಕೋಟಿ ಹೊಸ ಕೃಷಿಯೇತರ ಉದ್ಯೋಗಗಳನ್ನು ಸೃಷ್ಟಿಯಾಗುತ್ತದೆ. ಇವುಗಳಲ್ಲಿ 6 ಕೋಟಿ ಹೊಸ ಉದ್ಯೋಗಿಗಳು ವರ್ಕ್‌ ಫೋರ್ಸ್‌ ಪ್ರವೇಶಿಸಲಿದ್ದಾರೆ.</p>



<p>ಆದರೆ ಇವರಿಗೆ ಮಾಡಲು ಕೆಲಸ ಇದ್ಯಾ? ಇದೊಂದು ಪ್ರಶ್ನೆ… ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಬ್ಲಾವಟ್ನಿಕ್ ಸ್ಕೂಲ್ ಆಫ್ ಗವರ್ನೆನ್ಸ್ ಈ ಬಗ್ಗೆ ಮಾತನಾಡುತ್ತದೆ. COVID ನಿಂದಾಗಿ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಮರಳಿದರು.</p>



<p>COVID ಆಟ ಮುಗಿದಾಗ ಅವರು ಮತ್ತೆ ಬಂದು ಮಾಡಲು ಏನೂ ಉದ್ಯೋಗ ಇರಲಿಲ್ಲ. ಇದರ ಪರಿಣಾಮವಾಗಿ, ಏಪ್ರಿಲ್ 2020 ಮತ್ತು ಜೂನ್ 2023 ರ ನಡುವೆ 6 ಕೋಟಿ ಕಾರ್ಮಿಕರು ಕೃಷಿ ಕೆಲಸದ ಚಟುವಟಿಕೆಗೆ ಬಂದರು ಎಂದು ಈ ಅಧ್ಯಯನ ಹೇಳುತ್ತದೆ.<br>2011 ಮತ್ತು 2021 ರ ನಡುವೆ, 16 ರಿಂದ 60 ವರ್ಷ ವಯಸ್ಸಿನ 7 ಕೋಟಿ ಜನರು ಕೆಲಸ ಹುಡುಕುವುದನ್ನೇ ಬಿಟ್ಟಿದ್ದಾರೆ. ಇವರು ದೇಶದ ಕಾರ್ಮಿಕ ಬಲದಿಂದ ಹೊರಗುಳಿದಿದ್ದಾರೆ. ಇದನ್ನು ಹೇಳಿದ್ದು ಸ್ವತಃ ಸರ್ಕಾರದ್ದೇ ಆದ Periodic Labour Force Studies.</p>



<p>ಸದ್ಯ ಮೋದಿಯವರು ಹೇಳಿದ ಚಕ್ರ ಮುಂದಕ್ಕೆ ಚಲಿಸುತ್ತೀಲ್ಲ. ಮುಂದಕ್ಕೆ ಹೋಗದೇ ಇದ್ದರೂ ಪರವಾಗಿಲ್ಲ, ನಿಂತಲ್ಲೇ ನಿಂತಿದ್ದರೂ ಫೈನ್… ಆದರೆ ಚಕ್ರ ಈಗ ಹಿಂದಕ್ಕೆ ಓಡುತ್ತಿದೆ. ಯುವಕ ಯುವತಿಯರು ಉದ್ಯೋಗದ ಭದ್ರತೆಯಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಉದ್ಯೋಗ ಸೃಷ್ಟಿಯಾಗುತ್ತಿಲ್ಲ, ಇದು ಒಂದು ಕಡೆ ಇದ್ದರೆ, ಉನ್ನತ ಶಿಕ್ಷಣದ ಗುಣಮಟ್ಟದಲ್ಲಿ ಏಕಾಏಕಿ ದುರಂತಮಯವಾದ ಕುಸಿತವಾಗಿದೆ.</p>



<p>ಕಳೆದ ಎರಡು ದಶಕಗಳಲ್ಲಿ, ಯುಜಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳೊಂದಿಗೆ ಸಂಯೋಜಿತವಾಗಿರುವ ಖಾಸಗಿ ಕಾಲೇಜುಗಳ ಸಂಖ್ಯೆ ಅಣಬೆಯಂತೆ ಹೆಚ್ಚಾಗುತ್ತಿದೆ. ಎರಡು ದಶಕಗಳ ಹಿಂದೆ ಸುಮಾರು 10,000 ಇದ್ದ ಖಾಸಗಿ ಕಾಲೇಜುಗಳ ಸಂಖ್ಯೆ ಈಗ 42,000ಕ್ಕೂ ಹೆಚ್ಚಾಗಿದೆ. ಇವೆಲ್ಲವೂ ಸುಳ್ಳು ಭರವಸೆಗಳನ್ನು ನೀಡುತ್ತಾ, ಫೀಸು ಹೆಚ್ಚಿಸುವುದನ್ನು ಮೂಮದುವರಿಸಿವೆ. ಉನ್ನತ ಶಿಕ್ಷಣ ದುಬಾರಿಯಾಗುತ್ತಿದೆ.</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<iframe title="SHIVAJI&#039;S BANGALORE PALACE | ಬೆಂಗಳೂರಿನಲ್ಲಿ ಶಿವಾಜಿ ಅರಮನೆ |" width="696" height="392" src="https://www.youtube.com/embed/xygNejGWbRY?feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" allowfullscreen></iframe>
</div></figure>



<p>ಕಳೆದ ಎರಡು ವರ್ಷಗಳಿಂದ ಪಿಎಂ ಮೋದಿಯವರು ಮಾಡುವುತ್ತಿರುವುದೆಲ್ಲಾ ಹೇಗಾದರೂ ಮಾಡಿ 2024ರ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು. ಅಯೋಧ್ಯೆಯಲ್ಲಿ ಮಾಡಿರುವ ರಾಮನ ಪ್ರತಿಷ್ಠಾಪನೆ ಇದಕ್ಕೆ ಉದಾಹರಣೆ. ಇದರ ಮುಂದೆ ದೇಶ ಅನುಭವಿಸುತ್ತಿರುವ ಸಂಕಷ್ಟಗಳು ಮಣ್ಣುಪಾಲಾಗಿವೆ. ಕಂಠ ಹರಿದುಕೊಂಡು ಕೂಗುವ ಘೋಷಣೆಗಳ ಮಧ್ಯೆ ದೇಶದ ನೋವಿನ ದನಿ ಕೇಳದಾಗಿದೆ.</p>



<p>ಜನತೆಯನ್ನು ಎಲ್ಲಿ ಹೇಗೆ ನಿಯಂತ್ರಿಸಬೇಕು ಎಂಬುದನ್ನು ಸ್ಪಷ್ಟವಾಗಿ ಮೋದಿಯವರು ಮಾಡಿದ್ದಾರೆ. ಭ್ರಮೆಯಿಂದ ತೇಲಾಡುತ್ತಿದ್ದೇವೆ ನಾವು. ಸಮಸ್ಯೆಗಳನ್ನು ಮರೆತಿದ್ದೇವೆ. ಆದರೆ, ಸಮಸ್ಯೆಗಳು ನಮ್ಮನ್ನು ಮರೆಯಲ್ಲ. ಹುಚ್ಚುನಾಯಿಯಂತೆ ನಮ್ಮನ್ನು ಬೆನ್ನಟ್ಟಿ ಕಚ್ಚಲಿವೆ. ಒಂದು ದಿನ ದೀಡೀರನೇ ಮೋದಿಯವರು ಚುನಾವಣೆಯನ್ನು ಮುಂದೂಡುತ್ತಿದ್ದೇವೆ ಎಂದರೂ ಅಚ್ಚರಿಯಿಲ್ಲ.</p>



<p>ಹೀಗೇ ಆದರೆ ಮೋದಿಯವರು ಹೇಳಿದ ಭರತವರ್ಷದ ಹೊಸ ಕಾಲ ಚಕ್ರ ತುಂಬಾ ಸ್ಪೀಡಾಗಿ ಓಡಲಿದೆ. ಆದರೆ ಮುಂದಕ್ಕಲ್ಲ, ಹಿಂದಕ್ಕೆ…..</p>
]]></content:encoded>
					
		
		
			</item>
		<item>
		<title>ಅಯೋಧ್ಯೆಯ ಸೌಹಾರ್ದತೆ ಉಳಿಸಲು ಗುಂಡಿಗೆ ಎದೆಕೊಟ್ಟ ಬಾಬಾ ಲಾಲ್ ದಾಸ್</title>
		<link>https://peepalmedia.com/baba-lal-das-sacrifice-himself-to-save-the-harmony-of-ayodhya/</link>
		
		<dc:creator><![CDATA[Charan Aivarnad]]></dc:creator>
		<pubDate>Wed, 24 Jan 2024 08:50:30 +0000</pubDate>
				<category><![CDATA[ಅಂಕಣ]]></category>
		<category><![CDATA[ayodhya]]></category>
		<category><![CDATA[baba lal das]]></category>
		<category><![CDATA[bajaranga dala]]></category>
		<category><![CDATA[Bangalore]]></category>
		<category><![CDATA[bjp]]></category>
		<category><![CDATA[breaking news]]></category>
		<category><![CDATA[hindutva]]></category>
		<category><![CDATA[india]]></category>
		<category><![CDATA[jai sri ram]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[modi]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[ram janma bhumi]]></category>
		<category><![CDATA[ram mandir]]></category>
		<category><![CDATA[ram temple]]></category>
		<category><![CDATA[RSS]]></category>
		<category><![CDATA[special story]]></category>
		<category><![CDATA[sri ram]]></category>
		<category><![CDATA[sriram sene]]></category>
		<category><![CDATA[state politics]]></category>
		<category><![CDATA[temple]]></category>
		<category><![CDATA[trend]]></category>
		<category><![CDATA[trending news]]></category>
		<category><![CDATA[vhp]]></category>
		<category><![CDATA[viral news]]></category>
		<guid isPermaLink="false">https://peepalmedia.com/?p=35351</guid>

					<description><![CDATA[ಅಯೋಧ್ಯೆಯಲ್ಲಿ ಬಾಲ ರಾಮನ ಪ್ರತಿಷ್ಠಾಪನೆಯಾಗಿದೆ. ದೇಶದಾದ್ಯಂತ ಜನರು ಕುತೂಹಲದಿಂದ ಕಾಯುತ್ತಿದ್ದ ಅಯೋಧ್ಯೆಯ ರಾಮಮಂದಿರದ ನಿರ್ಮಾಣ ಪೂರ್ಣಗೊಂಡು, ಆ ವಿವಾದಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ. ಹಾಗೆಂದು ಭಾವಿಸಿಕೊಂಡರೂ, ಇದು ಭಾರತವೆಂಬ ಪ್ರಪಂಚದ ಬೃಹತ್‌ ಪ್ರಜಾತಂತ್ರದ ಮತೀಯ ರಾಜಕಾರಣಕ್ಕೆ ಹೊಸ ತಿರುವೊಂದು ಸಿಕ್ಕಿದೆ. ಇದರ ಪ್ರಭಾವವನ್ನು ನಾವು ಮುಂದಿನ ಲೋಕಸಭಾ ಚುನಾವಣೆಯಲ್ಲಿಯೇ ನೋಡಬೇಕು. ಅದು ಭಾರತ ನಡೆಯುತ್ತಿರುವ ದಿಕ್ಕನ್ನು ತೋರಿಸಲಿದೆ.&#160; ಈ ಹಿನ್ನಲೆಯಲ್ಲಿ ನಾವು ನೆನಪಿಸಿಕೊಳ್ಳಬೇಕಾದ ಓರ್ವ ವ್ಯಕ್ತಿಯೆಂದರೆ ಅಯೋಧ್ಯೆಯ ರಾಮಜನ್ಮಭೂಮಿ ದೇವಸ್ಥಾನದ ಮಹಂತ್ (ಮುಖ್ಯ ಅರ್ಚಕ) ಆಗಿದ್ದ ಬಾಬಾ [&#8230;]]]></description>
										<content:encoded><![CDATA[
<p>ಅಯೋಧ್ಯೆಯಲ್ಲಿ ಬಾಲ ರಾಮನ ಪ್ರತಿಷ್ಠಾಪನೆಯಾಗಿದೆ. ದೇಶದಾದ್ಯಂತ ಜನರು ಕುತೂಹಲದಿಂದ ಕಾಯುತ್ತಿದ್ದ ಅಯೋಧ್ಯೆಯ ರಾಮಮಂದಿರದ ನಿರ್ಮಾಣ ಪೂರ್ಣಗೊಂಡು, ಆ ವಿವಾದಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ. ಹಾಗೆಂದು ಭಾವಿಸಿಕೊಂಡರೂ, ಇದು ಭಾರತವೆಂಬ ಪ್ರಪಂಚದ ಬೃಹತ್‌ ಪ್ರಜಾತಂತ್ರದ ಮತೀಯ ರಾಜಕಾರಣಕ್ಕೆ ಹೊಸ ತಿರುವೊಂದು ಸಿಕ್ಕಿದೆ. ಇದರ ಪ್ರಭಾವವನ್ನು ನಾವು ಮುಂದಿನ ಲೋಕಸಭಾ ಚುನಾವಣೆಯಲ್ಲಿಯೇ ನೋಡಬೇಕು. ಅದು ಭಾರತ ನಡೆಯುತ್ತಿರುವ ದಿಕ್ಕನ್ನು ತೋರಿಸಲಿದೆ.&nbsp;</p>



<p>ಈ ಹಿನ್ನಲೆಯಲ್ಲಿ ನಾವು ನೆನಪಿಸಿಕೊಳ್ಳಬೇಕಾದ ಓರ್ವ ವ್ಯಕ್ತಿಯೆಂದರೆ ಅಯೋಧ್ಯೆಯ ರಾಮಜನ್ಮಭೂಮಿ ದೇವಸ್ಥಾನದ ಮಹಂತ್ (ಮುಖ್ಯ ಅರ್ಚಕ) ಆಗಿದ್ದ ಬಾಬಾ ಲಾಲ್ ದಾಸ್ ಅವರನ್ನು. ಇವರನ್ನು ನವೆಂಬರ್ 26, 1993ರಂದು ಗುಂಡಿಕ್ಕಿ ಕೊಲ್ಲಲಾಯಿತು.&nbsp;</p>



<p>ಇವರ ಜೊತೆಗೆ ಕಾಶಿ ವಿಶ್ವನಾಥ ದೇವಾಲಯದ ಮಾಜಿ ಮಹಾಂತ್ ರಾಜೇಂದ್ರ ಪ್ರಸಾದ್ ತಿವಾರಿ ಅವರನ್ನು. ಇಬ್ಬರಲ್ಲಿ ಇರುವ ವ್ಯತ್ಯಾಸವೆಂದರೆ ಓಬ್ಬರನ್ನು ಸಾಯಿಸಲಾಗಿದೆ, ಇನ್ನೊಬ್ಬರು ಬದುಕಿದ್ದಾರೆ. ಆದರೆ ಇಬ್ಬರ ದನಿಯೂ ಒಂದೇ ಆಗಿದೆ.</p>



<p>“ಅಯೋಧ್ಯೆಯ ಜನ ಮಾತ್ರವಲ್ಲ, ಭಾರತದಾದ್ಯಂತ ಜನರು ಇದನ್ನು ವಿರೋಧಿಸಬೇಕು. ನಾವು ಎಂದಿಗೂ ಇತರರ ಧಾರ್ಮಿಕ ಭಾವನೆಗಳನ್ನು ನೋಯಿಸಬಾರದು ಮತ್ತು ಅವರ ಹೃದಯವನ್ನು ಒಡೆಯಬಾರದು. ನಮ್ಮ ಧರ್ಮ ಇದನ್ನು ಒಪ್ಪುವುದಿಲ್ಲ. ರಾಮನ ರಾಜಕೀಯ ಆದರ್ಶವು ಎಲ್ಲರಿಗೂ ಸಮೃದ್ಧಿಯನ್ನು ತರುತ್ತದೆ &#8230; ನಾವು ತಿಂದರೆ ನಮ್ಮ ದೇಹದ ಎಲ್ಲಾ ಭಾಗಗಳಿಗೆ ಆಹಾರ ಸಿಗುತ್ತದೆ, ಆದ್ದರಿಂದ ಎಲ್ಲರೂ ನಮ್ಮವರೇ, ಯಾರೂ ಇಲ್ಲಿ ದೊಡ್ಡವರಲ್ಲ ಅಥವಾ ಚಿಕ್ಕವರಲ್ಲ. ಈ ಆದರ್ಶಗಳನ್ನು ಕೊಲ್ಲಲಾಗಿದೆ….!”</p>



<p><strong>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ :</strong><a href="https://chat.whatsapp.com/Lec6jB78EHu04TNvY80Tu6" data-type="link" data-id="https://chat.whatsapp.com/Lec6jB78EHu04TNvY80Tu6"><strong> ಪೀಪಲ್‌ ಮೀಡಿಯಾ</strong></a></p>



<p>1990 ರ ದಶಕದಲ್ಲಿ ರಾಮ ಮಂದಿರದ ಗಲಭೆಯಲ್ಲಿ ದೇಶ ಹೊತ್ತಿ ಉರಿಯುತ್ತಿದ್ದಾಗ ಈ ಮಾತುಗಳನ್ನು ಹೇಳಿದ್ದು ಬೇರೆ ಯಾರೂ ಅಲ್ಲ, ವಿವಾದಿತ ರಾಮಜನ್ಮಭೂಮಿ ದೇವಸ್ಥಾನದ ಮಹಂತ್ (ಮುಖ್ಯ ಅರ್ಚಕ) ಆಗಿದ್ದ ಹಿಂದೂ ಅರ್ಚಕ ಬಾಬಾ ಲಾಲ್ ದಾಸ್ ಅವರು. ಇದು ರಾಮ್ ಕೆ ನಾಮ್ ಸಾಕ್ಷ್ಯಚಿತ್ರದ ಕೊನೆಯಲ್ಲಿ ನೀವು ಕೇಳಬೇಕಾದ ಮುಂದೆಂದೂ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವ ಮಾತುಗಳು.</p>



<p>ಭಾರತದ ಭಕ್ತಿ ಪರಂಪರೆಯ ಆತ್ಮದ ಭಾಷೆಗಳಾದ ಪ್ರೇಮ, ಶಾಂತಿ, ಒಳಗೊಳ್ಳುವಿಕೆ ನಶಿಸಿಹೋಗುತ್ತಾ, ದೇಶ ಆದ್ಯಾತ್ಮದಿಂದ ಕಳಚಿಕೊಂಡು ಕರ್ಮಠತನಕ್ಕೆ ದಾಂಗುಡಿ ಇಡುವಾಗ, ಮತೀಯತೆ ಪ್ರಜಾಪ್ರಭುತ್ವವನ್ನು ಅಪ್ಪಿಕೊಂಡ, ಒಪ್ಪಿಕೊಂಡ ದೇಶದಲ್ಲಿ ಮುನ್ನಲೆಗೆ ಬರುತ್ತಿರುವಾಗ, ದೇಶ ಸಾಂಸ್ಕೃತಿಕವಾಗಿ ಬಹುಮುಖಿಯಾಗಿ ಕಟ್ಟಿಕೊಳ್ಳುವ ತನ್ನ ಪರಂಪರೆಯನ್ನು ನಿಲ್ಲಿಸುತ್ತಿರುವ ಸಂದರ್ಭದಲ್ಲಿ ಬಾಬಾ ಲಾಲ್‌ ದಾಸ್‌ ಆವರ ಮಾತುಗಳು ನಮ್ಮ ಹೃದಯವನ್ನು ಆಳವಾಗಿ ನಾಟಿ ಸಂಕಟವನ್ನು ಉಂಟುಮಾಡುತ್ತವೆ.</p>



<p>1991ರಲ್ಲಿ ಖ್ಯಾತ ಸಾಕ್ಷ್ಯಚಿತ್ರ ನಿರ್ಮಾಪಕ ಆನಂದ್ ಪಟವರ್ಧನ್ ಅವರ ರಾಮ್ ಕೆ ನಾಮ್ ಸಾಕ್ಷ್ಯಚಿತ್ರ ಪ್ರಚಾರಕ್ಕೆ ಬಂದ ಕೆಲವೇ ದಿನಗಳಲ್ಲಿ, ನವೆಂಬರ್ 26, 1993 ರಂದು, ಬಾಬಾ ಲಾಲ್ ದಾಸ್ ಅವರನ್ನು ಅನುಮಾನಾಸ್ಪದವಾಗಿ ಗುಂಡಿಕ್ಕಿ ಕೊಲ್ಲಲಾಯಿತು.&nbsp;</p>



<p style="font-size:19px"><strong>ಯಾರು ಈ ಬಾಬಾ ಲಾಲ್‌ ದಾಸ್‌?</strong></p>



<p>ಬಾಬಾ ಲಾಲ್ ದಾಸ್ ಅವರನ್ನು 1983 ರಲ್ಲಿ ಲಕ್ನೋ ಹೈಕೋರ್ಟ್ ಅಯೋಧ್ಯೆಯ ಮುಖ್ಯ ಅರ್ಚಕರನ್ನಾಗಿ ನೇಮಿಸಿತು. ಬಾಬರಿ ಮಸೀದಿಯ ಸುತ್ತ ವಿಶ್ವ ಹಿಂದೂ ಪರಿಷತ್&nbsp; ನಡೆಸುತ್ತಿದ್ದ ಚಟುವಟಿಕೆಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಇವರು,. ಲಾಲ್ ಕೃಷ್ಣ ಅಡ್ವಾಣಿಯವರಿಗೆ ತಮ್ಮ ರಥಯಾತ್ರೆಯನ್ನು ನಿಲ್ಲಿಸುವಂತೆ ಆಗ್ರಹಿಸಿದ್ದರು. ರಾಮ ಮಂದಿರ ಚಳವಳಿಯನ್ನು ಕೇವಲ ಹಿಂದೂ ಮತಗಳನ್ನು ಸೆಳೆಯುವ ತಂತ್ರ ಎಂದು ಟೀಕಿಸಿದ್ದರು.</p>



<p>ರಾಮ್‌ ಕೆ ನಾಮ್‌ ಡಾಕ್ಯುಮೆಂಟರಿಯಲ್ಲಿ, &#8220;ಇದು (ಮಸೀದಿ ಧ್ವಂಸ) ವಿಎಚ್‌ಪಿಯ ರಾಜಕೀಯ ಆಟ. ಇದನ್ನು ಮಾಡುತ್ತಿರುವವರಿಗೆ ಹಿಂದೂ ಮತವನ್ನು ಸೆಳೆಯಲು ಭಾರತದಾದ್ಯಂತ ಉದ್ವಿಗ್ನತೆಯನ್ನು ಸೃಷ್ಟಿಸುವುದರಲ್ಲಿ ಹೆಚ್ಚು ಆಸಕ್ತಿ,&#8221; ಎನ್ನುತ್ತಾ ಎರಡು ಸಮುದಾಯಗಳ ನಡುವೆ ಇರುವ ಶಾಂತಿ ಮತ್ತು ಸಾಮರಸ್ಯದ ಬಗ್ಗೆ ವಿವರಿಸಿದ್ದರು. ಅಯೋಧ್ಯೆಯ ಹೆಚ್ಚಿನ ದೇವಾಲಯಗಳನ್ನು ಅವಧ್‌ನ ಮುಸ್ಲಿಂ ರಾಜರ ದೇಣಿಗೆಯಿಂದ ಹೇಗೆ ನಿರ್ಮಿಸಲಾಯಿತು ಮತ್ತು 1855 ರ ಘರ್ಷಣೆಯ ನಂತರ ಹಿಂದೂ ಪುರೋಹಿತರು ಮತ್ತು ಮುಸ್ಲಿಂ ಪೀರರು ಹೇಗೆ ಸೌಹಾರ್ದಯುತವಾಗಿ ಬದುಕಲು ನಿರ್ಧರಿಸಿದರು ಎಂದು ಈ ಡಾಕ್ಯುಮೆಂಟರಿಯಲ್ಲಿ ಅರ್ಚಕರು ಹೇಳಿದ್ದಾರೆ.</p>



<p>ಬಾಬಾ ಲಾಲ್‌ ದಾಸ್‌ ಅವರಲ್ಲಿ ಬಾಬ್ರಿ ಮಸೀದಿ ಧ್ವಂಸದ  ಬಗ್ಗೆ ಸಾಕ್ಷ್ಯಾಧಾರಗಳು ಇದ್ದವು,1993 ರಲ್ಲಿ ದೆಹಲಿಯ ಸಿಟಿಜನ್‌ ಟ್ರಿಬ್ಯೂನಲ್‌ಗೆ ಇದನ್ನು ಸಲ್ಲಿಸಿದ್ದರು.  ರಾಮಜನ್ಮಭೂಮಿ ನ್ಯಾಸ್ ಪರವಾಗಿ ಸಂಗ್ರಹಿಸಲಾದ ದೊಡ್ಡ ಮೊತ್ತದ ಹಣದಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ಆರೋಪ ಕೂಡ ಮಾಡಿದ್ದರು.</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<div class="youtube-embed" data-video_id="tEUbXET7gjY"><iframe title="ಅಯೋಧ್ಯೆಯ ಸೌಹಾರ್ದತೆಯ ದನಿ ಬಾಬಾ ಲಾಲ್ ದಾಸ್ |Peepal Media | ಪೀಪಲ್‌ ಮೀಡಿಯಾ" width="696" height="392" src="https://www.youtube.com/embed/tEUbXET7gjY?feature=oembed&#038;enablejsapi=1" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" allowfullscreen></iframe></div>
</div></figure>



<p>ಇದಾಗಿ, 1992 ರಲ್ಲಿ ಬಾಬರಿ ಮಸೀದಿ ಧ್ವಂಸದ ಕೆಲ ತಿಂಗಳುಗಳ ಮೊದಲು, ಅಂದಿನ ಕಲ್ಯಾಣ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಬಾಬಾ ಲಾಲ್ ದಾಸ್ ಅವರನ್ನು ಅರ್ಚಕ ಸ್ಥಾನದಿಂದ ಅನಧಿಕೃತವಾಗಿ ತೆಗೆದುಹಾಕಿತು. ಕೋರ್ಟಿನಿಂದ ನೇಮಕವಾಗಿರುವ ಕಾರಣ ಕೋರ್ಟಿನ ಆದೇಶ ಇಲ್ಲದೆ ಈ ರೀತಿ ವಜಾಗೊಳಿಸಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಸರ್ಕಾರದ ವಿರುದ್ಧ ಮೊಕದ್ದಮೆ ಹೂಡಿದರು. ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದ ಮುಂದೆ ಈ ಪ್ರಕರಣ ಬಾಕಿ ಉಳಿದಿದೆ. </p>



<p><strong>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ :</strong><a href="https://chat.whatsapp.com/Lec6jB78EHu04TNvY80Tu6" data-type="link" data-id="https://chat.whatsapp.com/Lec6jB78EHu04TNvY80Tu6"><strong> ಪೀಪಲ್‌ ಮೀಡಿಯಾ</strong></a></p>



<p>ಡಿಸೆಂಬರ್ 6, 1992 ರಂದು ಬಾಬರಿ ಮಸೀದಿ ಧ್ವಂಸವಾಯಿತು. ಇದಾದ ನಂತರ ತಮ್ಮ ಹತ್ಯೆಯಾಗಬಹುದು ಎಂಬ ಭಯ ಅರ್ಚಕರಿಗೆ ಇತ್ತು. ರಕ್ಷಣೆ ಕೊಡುವಂತೆ&nbsp; ಸರ್ಕಾರಕ್ಕೆ ವಿನಂತಿಸಿದರು. ಆದರೆ ಕಲ್ಯಾಣ್ ಸಿಂಗ್ ಅವರ ಸರ್ಕಾರವು ಅವರ ಅಂಗರಕ್ಷಕರನ್ನು ತೆಗೆದುಹಾಕಿತು. ನವೆಂಬರ್ 26, 1993 ರಲ್ಲಿ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು.&nbsp;</p>



<p>ದೇಶ ಕಂಡು ಕೇಳರಿಯದ ಅಮಾನವೀಯ ಘಟನೆಗಳು ಇದರ ಬೆನ್ನಿನಲ್ಲೇ ನಡೆದವು. ಇದರಿಂದ ದೇಶ ಚೇತರಿಸಿಕೊಂಡಿಲ್ಲ. ಆಗ ಉಂಟಾದ ಬೃಹತ್‌ ಕಂದಕವನ್ನು ಮುಚ್ಚಲು ಶತಮಾನಗಳಷ್ಟು ಪ್ರಯತ್ನಿಸಬೇಕು. ಈಗ ಬಾಬರಿ ಮಸೀದಿ ಇದ್ದಲ್ಲೇ ರಾಮನ ಪ್ರತಿಷ್ಠೆಯನ್ನು ಮಾನನೀಯ ಪ್ರಧಾನಿಗಳ ನೇತೃತ್ವದಲ್ಲಿ ಮಾಡಲಾಗಿದೆ. ದೇಶದ ರಾಜಕಾರಣ ಮಗ್ಗುಲು ಬದಲಿಸಿದ&nbsp; ಈ ಸಂದರ್ಭದಲ್ಲಿ ರಾಮಭಕ್ತ ಲಾಲ್ ದಾಸ್ ಅವರು ನೀಡಿದ ಕೋಮು ಐಕ್ಯತೆಯ ಸಂದೇಶ ಹಿಂದೆಂದಿಗಿಂತಲೂ ಹೆಚ್ಚು ಮಹತ್ವದ್ದಾಗಿದೆ.</p>



<p>ಮೊಘಲ್ ರಾಜಕುಮಾರ ದಾರಾ ಶಿಕೋಹ್ 17 ನೇ ಶತಮಾನದಲ್ಲಿ ವಾರಣಾಸಿಯ ವಿಶ್ವನಾಥ ದೇವಾಲಯದ ಮೇಲ್ವಿಚಾರಣೆಗಾಗಿ ಅಲ್ಲಿನ ಮಹಂತರಿಗೆ ಪಟ್ಟಾ (ಪತ್ರ) ನೀಡುತ್ತಾನೆ. 10 ತಲೆಮಾರುಗಳವರೆಗೆ ಇದು ಮುಂದುವರಿದುಕೊಂಡು ಬಂದಿದೆ. ಕಾಶಿ ವಿಶ್ವನಾಥ ದೇವಾಲಯದ ಆಡಳಿತದ ಅಧಿಕಾರ ಈ ಕುಟುಂಬದ ಕೈಯಲ್ಲೇ ಇತ್ತು. 1983 ರಲ್ಲಿ ಉತ್ತರ ಪ್ರದೇಶ ಸರ್ಕಾರ ಇವರನ್ನು ದೇವಾಲಯದ ಪಾರಂಪರಿಕ ಮೋಕ್ತೇಸರಿಕೆಯಿಂದ ತೆಗೆಯಿತು. ಈ ಮನೆತನದ ಈಗಿನ ತಲೆಮಾರು ಮಹಂತ್ ರಾಜೇಂದ್ರ ಪ್ರಸಾದ್ ತಿವಾರಿ ಸಧ್ಯದ ಕೋಮುವಾದ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಶಾಂತಿ ಸಹಬಾಳ್ವೆಯ ಬಹುಮುಖ್ಯ ದನಿಯಾಗಿ ಕಾಣಿಸಿಕೊಳ್ಳುತ್ತಾರೆ.</p>



<p>ತಿವಾರಿ ಪ್ರಧಾನಿ ನರೇಂದ್ರ ಮೋದಿಯವರ ಬಹುಪ್ರಿಯ ಯೋಜನೆಯಾದ ವಿಶ್ವನಾಥ ಟೆಂಪಲ್ ಕಾರಿಡಾರ್‌ನ ಕಟು ಟೀಕಾಕಾರರಾಗಿದ್ದರು. ಈ ಯೋಜನೆಯ ಮೂಲಕ ಸುಮಾರು 286 ಶಿವಲಿಂಗಗಳನ್ನು ಹೊಂದಿರುವ ಹಲವಾರು ಪುರಾತನ ದೇವಾಲಯಗಳನ್ನು ಕೆಡವಿ ಹಾಕಲಾಗಿದೆ. ಇವುಗಳನ್ನು ಕಿತ್ತು ಬಿಸಾಡಲಾಯಿತು, ಕೆಲವನ್ನು ಮುರಿದು ಹಾಕಿದರು. ಕೇವಲ 146 ಶಿವಲಿಂಗಗಳನ್ನು ಮಾತ್ರ ಜೀರ್ಣೋದ್ಧಾರಗೊಳಿಸಿ ಬನಾರಸ್‌ನ ಲಂಕಾದ ಪೊಲೀಸ್ ಠಾಣೆಯಲ್ಲಿ ಸಂರಕ್ಷಿಸಿ ಇಡಲಾಗಿದೆ. ಸದ್ಯ ಅಲ್ಲಿ ಅವುಗಳಿಗೆ ನಿತ್ಯದ ಪೂಜೆಯನ್ನು ಸಲ್ಲಿಸಲಾಗುತ್ತಿದೆ.&nbsp;</p>



<p>ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠೆಯನ್ನು ತುರಾತುರಿಯಲ್ಲಿ ಮಾಡಿರುವುದನ್ನು ಎಲೆಕ್ಷನ್‌ ಗಿಮಿಕ್‌ ಎಂದೇ ಟೀಕಿಸಿರುವ ಕಾಶಿಯ ಮಾಜಿ ಮೊಕ್ತೇಸರ ತಿವಾರಿಯವರು, ಇದೊಂದು ʼಸ್ಪಾನ್ಸರ್ಡ್‌ ಬೈ ಪಿಲಂ ಸ್ಟಾರ್‌ʼ ಕಾರ್ಯಕ್ರಮ, ಇದು ಮೋದಿಯವರು ತಮ್ಮ ವ್ಯಾನಿಟಿಯನ್ನು ಹೆಚ್ಚಿಸಿಕೊಳ್ಳಲು ಮಾಡಿರುವ ತಂತ್ರ ಎಂದು ಆರೋಪಿಸಿದ್ದಾರೆ.&nbsp;</p>



<p>“ಮೋದಿಯವರು ಓಟಿಗಾಗಿ ರಾಮನನ್ನು ಬಳಸಿಕೊಳ್ಳುತ್ತಿದ್ದಾರೆ. ಅಧಿಕಾರವೇ ಮೋದಿಯವರ ರಾಮ, ಅವರ ನಂಬಿಕೆ, ಅವರ ವ್ಯಾಪಾರ,” ಎಂದು ತಿವಾರಿ ಹೇಳಿದ್ದಾರೆ.</p>



<p>ಭಾರತದ ಪವಿತ್ರ ಸ್ಥಳಗಳನ್ನು ಅಭಿವೃದ್ಧಿ ಮಾಡುವಲ್ಲಿ ತೋರಿರುವ ನಿರ್ಲಕ್ಷ್ಯ, ತಿರಸ್ಕಾರದ ಬಗ್ಗೆ ತಿವಾರಿಯವರಿಗೆ ಆಕ್ರೋಶ ಇದೆ, ಅವುಗಳನ್ನು ಮಾಲ್‌ಗಳ ರೀತಿಯಲ್ಲಿ ಕಟ್ಟಲಾಗುತ್ತಿದೆ, ಅಲ್ಲಿ ಜನರು ಶಾಪಿಂಗ್ ಮಾಡಲು ಮತ್ತು ಮೋಜು ಮಸ್ತಿಗಾಗಿ ಬರುತ್ತಾರೆ ಅಥವಾ ಅವುಗಳನ್ನು ಪ್ರವಾಸಿ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ. ಪವಿತ್ರವಾದ ಕ್ಷೇತ್ರವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವ ಪ್ರಯತ್ನಗಳೇ ಹೊರತು ಭಕ್ತರಲ್ಲಿ ದೇವರ ಮೇಲಿನ ಭಕ್ತಿಯನ್ನು ಮೂಡಿಸುವ ಪ್ರಯತ್ನಗಳಲ್ಲ. “ಇದು ಮಾಲ್, ಅಯೋಧ್ಯೆಯ ರಾಮಮಂದಿರವಲ್ಲ. ಅಂತಹ ಮೊದಲ ಮಾಲ್ ಅನ್ನು ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ನಿರ್ಮಿಸಲಾಯಿತು. ಮೂರನೆಯದು ಮಥುರಾದಲ್ಲಿ ಆಗಲಿದೆ” ಎಂದು ತಿವಾರಿ ಹೇಳುತ್ತಾರೆ.</p>



<p><strong>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ :</strong><a href="https://chat.whatsapp.com/Lec6jB78EHu04TNvY80Tu6" data-type="link" data-id="https://chat.whatsapp.com/Lec6jB78EHu04TNvY80Tu6"><strong> ಪೀಪಲ್‌ ಮೀಡಿಯಾ</strong></a></p>



<p>ಇವೆಲ್ಲವನ್ನೂ ಸನಾತನ ಧರ್ಮದ ಮೇಲಿನ ಆಕ್ರಮಣ ಎಂದು ತಿವಾರಿ ಕರೆದಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಸನಾತನ ಧರ್ಮ, ಅದರ ತತ್ವಗಳು, ಅದರ ನಿಯಮಗಳು ಮತ್ತು ಭವಿಷ್ಯದಲ್ಲಿ ಹಿಂದೂಗಳ ಧರ್ಮಗ್ರಂಥಗಳನ್ನು ರೂಪಿಸುವ ಅಧಿಕಾರವನ್ನು ಆಚಾರ್ಯರು ಮತ್ತು ಧಾರ್ಮಿಕ ಗುರುಗಳಿಂದ ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. &#8220;ಸನಾತನ ಧರ್ಮದ ಮೇಲಿನ ಈ ಸವಾರಿಯೇ ಶಂಕರಾಚಾರ್ಯರನ್ನು ಜನವರಿ 22 ರ ಉದ್ಘಾಟನೆಯ ವಿರುದ್ಧ ಮಾತನಾಡುವಂತೆ ಮಾಡಿತು&#8221; ಎಂದು ತಿವಾರಿ ವಾದಿಸುತ್ತಾರೆ.</p>



<p>ಇದು ಮತೀಯತೆ ಮತ್ತು ಆಧ್ಯಾತ್ಮಿಕತೆಯ ನಡುವಿನ ಸಂಘರ್ಷ. ಸಂಘವು ತನ್ನ ರಾಜಕೀಯ ಬಲದ ಜೊತೆಗೆ ಧಾರ್ಮಿಕ ಶಕ್ತಿಯನ್ನು ಪಡೆಯಲು ಯತ್ನಿಸುತ್ತಿದೆ. &#8220;ಒಮ್ಮೆ ಇದು ನಡೆದರೆ, ನಮ್ಮ ಸಮಾಜದ ಮೇಲೆ ಸಂಘದ ನಿಯಂತ್ರಣವು ಪೂರ್ಣಗೊಳ್ಳುತ್ತದೆ&#8221; ಎಂದು ಅವರು ಭವಿಷ್ಯ ನುಡಿದ್ದಾರೆ.</p>



<p>&nbsp;&#8220;ಸತ್ಯಕ್ಕಿಂತ ಅಸತ್ಯವು ಯಾವಾಗಲೂ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ&#8221; ಎನ್ನುವ ಮಹಂತ್ ತಿವಾರಿ, ಸನಾತನ ಧರ್ಮದ 10 ಮೌಲ್ಯಗಳನ್ನು ಪಟ್ಟಿ ಮಾಡುತ್ತಾರೆ: ಸತ್ಯವನ್ನು ಹೇಳುವುದು, ಅಹಂಕಾರ ಮತ್ತು ಕೋಪವನ್ನು ತೊಡೆದುಹಾಕುವುದು, ಸಹನೆಯನ್ನು ಬೆಳೆಸುವುದು ಇತ್ಯಾದಿ. &#8220;ಈ ಎಲ್ಲಾ ಮೌಲ್ಯಗಳು ಕುಸಿಯುತ್ತಿವೆ, ಇವುಗಳಲ್ಲಿ ಯಾವುದನ್ನೂ ಸಾಕಾರಗೊಳಿಸಲಾಗಿಲ್ಲ, ಅವರು ನಮ್ಮನ್ನು ಮತಾಂಧರನ್ನಾಗಿ ಮಾಡುತ್ತಿದ್ದಾರೆ&#8221; ಎಂದು ಅವರು ತಿವಾರಿ ಹೇಳುತ್ತಾರೆ.</p>



<p>ಕಾಶಿ ವಿಶ್ವನಾಥ ದೇವಾಲಯದ ಪಾರಂಪರಿಕ ಅಧಿಕಾರವನ್ನು ಹೊಂದಿರುವ ಮನೆತನದ ಈಗಿನ ತಲೆಮಾರು, ಯಾವುದೇ ಫಲಾಪೇಕ್ಷೆ ಇಲ್ಲದೆ, ದೇಶದ ಬಹುದೊಡ್ಡ ರಾಜಕೀಯ ಶಕ್ತಿಯೊಂದರ ವಿರುದ್ಧ ತಮ್ಮ ಮಾತುಗಳನ್ನು ನಿರ್ಭಯವಾಗಿ ಹೇಳುತ್ತಿದ್ದಾರೆ. ಇವರ ಮಾತುಗಳು ನಮ್ಮನ್ನು ಮತ್ತೆ ಅಯೋಧ್ಯೆಯ ಮುಖ್ಯ ಅರ್ಚಕ, ಸತ್ಯಕ್ಕಾಗಿ ಗುಂಡಿಗೆ ಎದೆಕೊಟ್ಟ ಬಾಬಾ ಲಾಲ್‌ ದಾಸ್‌ ಅವರ ನೆನಪನ್ನು ತರುತ್ತದೆ.</p>



<p>ಯಾಕೆ ಅವರು ಈಗ ಪ್ರಶ್ನಿಸುತ್ತಿದ್ದಾರೆ? ಯಾಕೆ ಅದ್ವೈತ ಪೀಠಗಳು, ಅನೇಕ ಧಾರ್ಮಿಕ ನಾಯಕರು ಬಿಜೆಪಿಯ ನಡೆಯನ್ನು ವಿರೋಧಿಸುತ್ತಿದ್ದಾವೆ?</p>



<p>ಅವರ ಮಾತುಗಳು ಸ್ಪಷ್ಟವಾಗಿವೆ: ಬಿಜೆಪಿ &#8211; ಸಂಘ ಪರಿವಾರದ ಈ ಎಲ್ಲಾ ನಡೆಗಳೂ ಹಿಂದೂ ಧರ್ಮಕ್ಕೆ ಕಂಟಕಪ್ರಾಯವಾಗಿವೆ. ದೇಶ ಸಹಸ್ರಾರು ವರ್ಷಗಳಿಂದ ರೂಪಿಸಿಕೊಂಡು ಬಂದ ಆಧ್ಯಾತ್ಮಿಕತೆ ಮತ್ತು ಬಹುಮುಖಿ ಸಂಸ್ಕೃತಿಗಳಿಗೆ ಹಿಂದುತ್ವ ಮಾರಕವಾಗಿ ಪರಿಣಮಿಸಿದೆ. ಇದು ಚುನಾವಣೆ ಗೆಲ್ಲುವುದಕ್ಕೆ, ಅನ್ಯ ಮತೀಯರನ್ನು ದ್ವೇಷಿಸುವುದಕ್ಕೆ ತಮ್ಮದೇ ಸಂಪ್ರದಾಯವನ್ನು ಎಷ್ಟರಮಟ್ಟಿಗೆ ಬೇಕಾದರೂ ತಿರುಚಿ, ಕೆಡವಿ ಹಾಕಲು ಮುಂದಾಗುತ್ತಿದೆ.&nbsp;</p>



<p>ಹಿಂದುತ್ವ ಎಂಬುದು ಕೋಮವಾದ+ರಾಜಕಾರಣ. ಹಿಂದೂ ಧರ್ಮ ಎಂಬುದು ಭಾರತೀಯ ಧರ್ಮಗಳ ಒಟ್ಟುಗೂಡುವಿಕೆ ಎಂಬ ಸ್ಪಷ್ಟತೆ ಇವರಲ್ಲಿ ಬರುತ್ತಿದೆ. ಹಿಂದುತ್ವವೇ ಹಿಂದೂ ಧರ್ಮದ ಮುಖವಾಡ ಧರಿಸಿಕೊಂಡು ಬಂದಾಗ ಹಿಂದೂ ಧರ್ಮದ ಮೂಲ ಆಶಯಗಳಿಗೆ ಧಕ್ಕೆಯಾಗುತ್ತದೆ ಎಂಬ ಭಯ ಈ ಧಾರ್ಮಿಕ ನಾಯಕರಲ್ಲಿ ಇದೆ. ಹಿಂದುತ್ವ ಎಂಬುದು ಆದ್ಯಾತ್ಮಿಕವಲ್ಲದ್ದು, ಅದು ಆದ್ಯಾತ್ಮಿಕವಾಗಿದ್ದರೆ ಅನ್ಯರನ್ನು ದ್ವೇಷಿಸುವಂತೆ ಮಾಡಲು ಸಾಧ್ಯವಿಲ್ಲ, ಹಾಗಾಗಿ ತಿವಾರಿಯಂತ ಪ್ರಜ್ಞಾವಂತೆರು ಬಿಜೆಪಿಯ ನಡೆಯನ್ನು ವಿರೋಧಿಸಿದ್ದಾರೆ. &nbsp; ಬಾಬಾ ಲಾಲ್‌ ದಾಸ್‌ರಂತ ಅರ್ಚಕರು ತಮ್ಮ ಸಂಪ್ರದಾಯವನ್ನು ಉಳಿಸಲು ಪ್ರಾಣವನ್ನೇ ಕೊಡಬೇಕಾಯ್ತು.&nbsp;</p>



<p style="font-size:19px"><strong>ಲೇಖನ:</strong> ಚರಣ್‌ ಐವರ್ನಾಡು</p>
]]></content:encoded>
					
		
		
			</item>
		<item>
		<title>300 ರಾಮಾಯಣಗಳ ವಿರುದ್ಧ ನಿಂತ ಎಬಿವಿಪಿ!</title>
		<link>https://peepalmedia.com/abvp-protested-against-300-ramayanas/</link>
		
		<dc:creator><![CDATA[Charan Aivarnad]]></dc:creator>
		<pubDate>Fri, 19 Jan 2024 12:34:05 +0000</pubDate>
				<category><![CDATA[ಅಂಕಣ]]></category>
		<category><![CDATA[ABVP]]></category>
		<category><![CDATA[ak ramanujan]]></category>
		<category><![CDATA[ayodhya]]></category>
		<category><![CDATA[Bangalore]]></category>
		<category><![CDATA[bjp]]></category>
		<category><![CDATA[breaking news]]></category>
		<category><![CDATA[charan Aivarnad]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[modi]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[ram]]></category>
		<category><![CDATA[Ram Mandira]]></category>
		<category><![CDATA[rama]]></category>
		<category><![CDATA[ramayana]]></category>
		<category><![CDATA[state politics]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=35181</guid>

					<description><![CDATA[ಎಷ್ಟು&#160; ರಾಮಾಯಣಗಳಿವೆ ? ಮುನ್ನೂರು? ಮೂರು ಸಾವಿರ? ಕೆಲವು ರಾಮಾಯಣಗಳ ಕೊನೆಯಲ್ಲಿ, ಕೆಲವೊಮ್ಮೆ ಪ್ರಶ್ನೆಯೊಂದನ್ನು ಕೇಳಲಾಗುತ್ತದೆ: ಎಷ್ಟು &#160;ರಾಮಾಯಣಗಳಿವೆ ? ಈ ಪ್ರಶ್ನೆಗೆ ಉತ್ತರಿಸುತ್ತಾ ಕೆಲವು ರಾಮಯಣಗಳು, ಇಲ್ಲೊಂದಿದೆ..ಎನ್ನುತ್ತವೆ! ಹೀಗೆ ಭಾರತದ ಹೆಸರಾಂತ ಕವಿ ಮತ್ತು ವಿದ್ವಾಂಸ ಎ ಕೆ ರಾಮಾನುಜನ್ ಅವರ ‘ಮುನ್ನೂರು ರಾಮಾಯಣಗಳು’ ಎಂಬ ಪ್ರಬಂಧ ಆರಂಭವಾಗುತ್ತದೆ. 1987ರಲ್ಲಿ ಪಿಟ್ಸ್‍ಬರ್ಗ್ ವಿವಿಯಲ್ಲಿ ಮಂಡಿಸಲಾದ ಈ ಪ್ರಬಂಧವನ್ನು ದೆಹಲಿ ವಿವಿಯ ಇತಿಹಾಸ ಪಠ್ಯದಲ್ಲಿ ಸೇರಿಸಲಾಗಿತ್ತು. 2008ರಲ್ಲಿ ಈ ಪ್ರಬಂಧ ದೊಡ್ಡ ವಿವಾದವನ್ನು ಸೃಷ್ಟಿಸಿತ್ತಲ್ಲದೆ ಹಿಂದೂ ಸಂಘಟನೆಗಳು, [&#8230;]]]></description>
										<content:encoded><![CDATA[
<p>ಎಷ್ಟು&nbsp; <em>ರಾಮಾಯಣಗಳಿವೆ</em> ? ಮುನ್ನೂರು? ಮೂರು ಸಾವಿರ? <em>ಕೆಲವು ರಾಮಾಯಣಗಳ</em> ಕೊನೆಯಲ್ಲಿ, ಕೆಲವೊಮ್ಮೆ ಪ್ರಶ್ನೆಯೊಂದನ್ನು ಕೇಳಲಾಗುತ್ತದೆ: ಎಷ್ಟು <em>&nbsp;ರಾಮಾಯಣಗಳಿವೆ </em>? ಈ ಪ್ರಶ್ನೆಗೆ ಉತ್ತರಿಸುತ್ತಾ ಕೆಲವು ರಾಮಯಣಗಳು, ಇಲ್ಲೊಂದಿದೆ..ಎನ್ನುತ್ತವೆ!</p>



<p>ಹೀಗೆ ಭಾರತದ ಹೆಸರಾಂತ ಕವಿ ಮತ್ತು ವಿದ್ವಾಂಸ ಎ ಕೆ ರಾಮಾನುಜನ್ ಅವರ ‘ಮುನ್ನೂರು ರಾಮಾಯಣಗಳು’ ಎಂಬ ಪ್ರಬಂಧ ಆರಂಭವಾಗುತ್ತದೆ. 1987ರಲ್ಲಿ ಪಿಟ್ಸ್‍ಬರ್ಗ್ ವಿವಿಯಲ್ಲಿ ಮಂಡಿಸಲಾದ ಈ ಪ್ರಬಂಧವನ್ನು ದೆಹಲಿ ವಿವಿಯ ಇತಿಹಾಸ ಪಠ್ಯದಲ್ಲಿ ಸೇರಿಸಲಾಗಿತ್ತು. 2008ರಲ್ಲಿ ಈ ಪ್ರಬಂಧ ದೊಡ್ಡ ವಿವಾದವನ್ನು ಸೃಷ್ಟಿಸಿತ್ತಲ್ಲದೆ ಹಿಂದೂ ಸಂಘಟನೆಗಳು, ಬಿಜೆಪಿ, ಎಬಿವಿಪಿ ಬೃಹತ್ ಪ್ರತಿಭಟನೆ ನಡೆಸಿದವು.</p>



<p>ಎಬಿವಿಪಿಯ ಪುಂಡರು ವಿಶ್ವವಿದ್ಯಾನಿಲಯದ ಹಿಸ್ಟರಿ ಡಿಪಾರ್ಟ್‌ಮೆಂಟ್‌ಗೆ ನುಗ್ಗಿ, ದಾಂಧಲೆ ಎಬ್ಬಿಸಿದರು. ತರಗತಿಗಳ ಬಾಗಿಲು ಕಿಟಕಿ ಒಡೆದರು!</p>



<p>ನೂರಾರು ರಾಮಾಯಣಗಳು ಸುಮಾರು 2,500 ವರ್ಷಗಳಿಗೂ ಹೆಚ್ಚು ಕಾಲದಿಂದ ಹೇಗೆ ಭಾರತ ಹಾಗೂ ಏಷ್ಯಾದಾದ್ಯಂತ ಹರಡಿರುವ ಇತಿಹಾಸವನ್ನು ಈ ಪ್ರಬಂಧ ಸರಳ ಸುಂದರವಾಗಿ ವಿವರಿಸುತ್ತದೆ. ರಾಮನ ಒಂದೇ ಕಥೆ ಬೇರೆ ಬೇರೆ ಭಾಷೆಗಳು, ಸಮಾಜಗಳು, ಪ್ರಾದೇಶಿಕತೆ, ಧರ್ಮಗಳು ಮತ್ತು ವಿವಿಧ ಚಾರಿತ್ರಿಕ ಘಟ್ಟಗಳಲ್ಲಿ ಪ್ರಸಾರವಾಗುತ್ತಿರುವಾಗ ಹಲವಾರು ಬದಲಾವಣೆಗಳಿಗೆ ಒಳಗಾಗಿದೆ ಎಂಬುದನ್ನು ಇದು ವಿದ್ವತ್ಪೂರ್ಣವಾಗಿ ಇದು ಹೇಳುತ್ತದೆ.&nbsp;</p>



<p>ಮುಖ್ಯವಾಗಿ ಈ ಪ್ರಬಂಧದಲ್ಲಿ ರಾಮಾಯಣದ ಐದು ಪಠ್ಯಗಳನ್ನು ಪರಿಗಣಿಸಲಾಗಿದೆ: ವಾಲ್ಮೀಕಿ ರಾಮಾಯಣ, ತಮಿಳಿನ ಕಂಬನ್ ರಾಮಾಯಣ, ಜೈನ ರಾಮಾಯಣ ಪಠ್ಯಗಳು, ಥಾಯ್ಲಾಂಡಿನ ಥಾಯ್ ರಾಮಕಿಯನ್ ಮತ್ತು ದಕ್ಷಿಣ ಭಾರತೀಯ ಜಾನಪದ ರಾಮಾಯಣದ ಪಠ್ಯಗಳು.</p>



<p>ಇವುಗಳನ್ನು ಪ್ರಬಂಧದಲ್ಲಿ ತರುವಾಗ ರಾಮಾನುಜನ್‌ ʼವರ್ಷನ್ಸ್‌ʼ ಮತ್ತು ʼವೇರಿಯೆಂಟ್ಸ್‌ʼ ಎಂಬ ಪದಗಳ ಬದಲಾಗಿ ʼಟೆಲ್ಲಿಂಗ್ಸ್‌ʼ ಎಂಬ ಪದವನ್ನು ಬಳಸುತ್ತಾರೆ. ಯಾಕೆರಂದರೆ ಈ ಕಥೆ ಒಂದು ವರ್ಷನ್ (ಆವೃತ್ತಿ) ಎಂದು ಹೇಳಬೇಕಾದರೆ, ಮೂಲದಲ್ಲಿ ಒಂದು ಕಥೆ ಇರಲೇ ಬೇಕು. ಇದು ಆ ಮೂಲಕಥೆಯ ಇನ್ನೊಂದು ವರ್ಷನ್ ಎಂದು ಹೇಳುವುದು ಮೂಲ ಪಠ್ಯದ ಅಸ್ತಿತ್ವವನ್ನು ಸೂಚಿಸುತ್ತದೆ. ಆದರೆ, ಇಡೀ ಪ್ರಬಂಧದಲ್ಲಿ ರಾಮಾನುಜನ್‌ ಅವರ ಮುಖ್ಯ ಅವಲೋಕನವೆಂದರೆ ಅಂತಹ ಒಂದು ಮೂಲ ರಾಮಾಯಣ ಎಂಬುದೇ ಇಲ್ಲ ಎಂಬುದು. ವಾಲ್ಮೀಕಿ ರಾಮಾಯಣ ಕಥೆʼ ಎಂತಹ ಅನೇಕ ರಾಮಾಯಣಗಳ ಕಥೆಗಳಲ್ಲಿ ಒಂದು. ಅದರ ಅರ್ಥ, ವಾಲ್ಮೀಕಿ ರಾಮಾಯಣ ಬರೆಯುವುದಕ್ಕೆ ಮೊದಲೇ ಈ ಕಥೆ ಜನಪದದಲ್ಲಿ ಇದ್ದಿರಬೇಕು.&nbsp;</p>



<p>ಹೀಗಾಗಿ, ರಾಮಾಯಣವಿರಲಿ…ಮಹಾಭಾರತವಿರಲಿ, ಕವಿಗಳಿಗೆ ತಮಗಿಂತ ಹಿಂದೆಯೇ ಕಥೆಯನ್ನು ಅನೇಕರು ಹೇಳಿದ್ದಾರೆ ಎಂಬ ಅರಿವು ಇತ್ತು. ಕನ್ನಡದ ಕವಿ ಕುಮಾರವ್ಯಾಸ ತನ್ನ ʼಕರ್ಣಾಟ ಭಾರತ ಕಥಾಮಂಜರಿʼಯಲ್ಲಿ “ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ; ತಿಂತಿಣಿಯ ರಘುವರಚರಿತೆಯಲಿ ಕಾಲಿಡಲು ತೆರಪಿಲ್ಲ,” ಎನ್ನುತ್ತಾನೆ. ಕವಿ ಕುಮಾರವ್ಯಾಸ ಪೀಠಿಕಾ ಸಂಧಿಯಲ್ಲೇ ಇದನ್ನು ಹೇಳಿ ತನ್ನ ಕಾವ್ಯ ರಚನೆಗೆ ತೊಡಗುತ್ತಾನೆ. ಎಷ್ಟು ರಾಮಾಯಣಗಳಿವೆ ಎಂದರೆ, ಅದರ ಭಾರಕ್ಕೆ ಭೂಮಿಯನ್ನೇ ತಲೆಯ ಮೇಲೆ ಹೊತ್ತಿರುವ ಆದಿಶೇಷ ರಾಮಾಯಣದ ಕವಿಗಳನ್ನು ಹೊರಲಾರದೆ ತಿಣುಕಿದ್ದಾನೆ, ರಘುಚರಿತೆಯ ರಾಶಿಯಲ್ಲಿ ಕಾಲಿಡಲು ಜಾಗವಿಲ್ಲ ಎಂದು ವರ್ಣಿಸಿದ್ದಾನೆ.</p>



<p>ಕವಿಗೆ ಇರುವ ಅರಿವು ಭಾರತದಾದ್ಯಂತ ಬಹುತೇಕ ಕವಿಗಳಿಗೆ, ಜಾನಪದರಿಗೆ ಇತ್ತು. ಹಾಗಾಗಿ, ಎ ಕೆ ರಾಮಾನುಜನ್‌ ಅವರ ಪ್ರಬಂಧ ಆರಂಭವಾಗುವುದೇ ʼಎಷ್ಟು ರಾಮಾಯಣಗಳಿವೆ, ಇಕೋ ಇಲ್ಲೊಂದಿದೆ..ʼ ಎಂಬ ಹೇಳಿಕೆಯಿಂದ</p>



<p>ಎ ಕೆ ರಾಮಾನುಜನ್‌ ನಮಗೆ ಕೊಡುವ ಮಹತ್ವದ ಅರಿವು ಏನೆಂದರೆ ಭಾರತದ ಬಹುತೇಕ ಎಲ್ಲಾ ಭಾಷೆಗಳು, ಸಮುದಾಯಗಳು ರಾಮಾಯಣವನ್ನು ತಮಗೆ ಬೇಕಾದಂತೆ ಬರೆದುಕೊಂಡಿವೆ ಎಂಬುದು. ಇದು ನಮ್ಮ ಅರಿವಿನಲ್ಲಿದ್ದರೆ ಸಹಜವಾಗಿಯೇ ಎಬಿವಿಪಿ ಈ ಪ್ರಬಂಧದ ವಿರುದ್ಧ ನಡೆಸಿದ ಪ್ರತಿಭಟನೆಯ ಹಿಂದಿರುವ ಅವರ ಉದ್ದೇಶ ನಮಗೆ ಗೊತ್ತಾಗುತ್ತದೆ. ಭಾರತ ರಾಮನ ಕಥೆಯನ್ನು ಹೇಳುವ ಬಗೆಯೇ ಬಿಜೆಪಿ ಹಾಗೂ ಸಂಘ ಪರಿವಾರ ರಾಮನನ್ನು ರಾಜಕಾರಣಕ್ಕೆ ಬಳಸುವ ಕುತಂತ್ರಕ್ಕೆ ವಿರೋಧವಾಗಿ ನಿಲ್ಲುತ್ತದೆ.&nbsp;</p>



<div data-wp-interactive="core/file" class="wp-block-file">&lt;object class=&quot;wp-block-file__embed&quot; data=&quot;https://peepalmedia.com/wp-content/uploads/2024/01/three-hundred-Ramayanas-A-K-Ramanujan-1.pdf&quot; type=&quot;application/pdf&quot; style=&quot;width:100%;height:600px&quot; aria-label=&quot;&lt;strong&gt;ಮುನ್ನೂರು ರಾಮಾಯಣಗಳು &#8211; ಎ ಕೆ ರಾಮಾನುಜನ್</strong></object><a id="wp-block-file--media-81f31f28-8478-4e67-b4ae-e9bc98387a74" href="https://peepalmedia.com/wp-content/uploads/2024/01/three-hundred-Ramayanas-A-K-Ramanujan-1.pdf"><strong>ಮುನ್ನೂರು ರಾಮಾಯಣಗಳು &#8211; ಎ ಕೆ ರಾಮಾನುಜನ್</strong></a><a href="https://peepalmedia.com/wp-content/uploads/2024/01/three-hundred-Ramayanas-A-K-Ramanujan-1.pdf" class="wp-block-file__button wp-element-button" download aria-describedby="wp-block-file--media-81f31f28-8478-4e67-b4ae-e9bc98387a74">Download</a></div>



<p>ಇದು ಕೇವಲ ರಾಮಾಯಣಕ್ಕೆ ಮಾತ್ರವಲ್ಲ, ಮಹಾಭಾರತದ ಸಂದರ್ಭದಲ್ಲೂ ಇದೇ.</p>



<p>&nbsp;“ವಾಲ್ಮೀಕಿ, ವ್ಯಾಸರು ರಾಮಾಯಣ , ಮಹಾಭಾರತಗಳ ಮೊಟ್ಟ ಮೊದಲ&nbsp; ಸೃಷ್ಟಿಕರ್ತರಲ್ಲ. ಅವರಿಗಿಂತಲೂ ಪೂರ್ವದಲ್ಲಿ ಈ ಕತೆಗಳು ಜನತೆಯಲ್ಲಿ ಇದ್ದುವು, ಅವರ ತರುವಾಯವೂ ಇದ್ದುವು, ಇವತ್ತಿಗೂ ಇವೆ.ವಾಲ್ಮೀಕಿ ವ್ಯಾಸರು ತಮ್ಮ ಕಾವ್ಯಗಳನ್ನು ರಚಿಸಿದ ಮಾತ್ರಕ್ಕೆ ಇವರಿಗೂ ಪ್ರೇರಕವಾದ,ವಸ್ತುಗಳನ್ನು ಒದಗಿಸಿದ ಜನಪದ ಕಥಾವಾಹಿನಿ ನಿಂತುಹೋಗಿಲ್ಲ.ಸತತವಾಗಿ ಹರಿದಿದೆ. ಆದ್ದರಿ೦ದ ಸಾಮಾನ್ಯ ಜನತೆಗೆ ತಿಳಿದಿರುವುದು ಅಥವಾ ಪ್ರಭಾವ ಬೀರಿರುವುದು ವಾಲ್ಮೀಕಿ,ವ್ಯಾಸರುಗಳ ರಾಮಾಯಣ, ಮಹಾಭಾರತ ಕಥೆಗಳಾಗಿರದೆ,ಅವರಿಗೂ ಮೂಲವಾಗಿ ಇದ್ದ ಇವತ್ತಿಗೂ ಇದ್ದು ಬಂದಿರುವ ಜನಪದ ರಾಮಾಯಣ, ಮಹಾಭಾರತಗಳೆಂಬುದು ಅತ್ಯಂತ ಸ್ಪಷ್ಟವಿರುವ ವಿಷಯ”(ರಾ ಗೌ;ಸಂ.ಜನಪದ ರಾಮಾಯಣ;1973:ix)&nbsp;</p>



<p>ರಾಮಾಯಣ, ಮಹಾಭಾರತಗಳು ಒಂದು ಸ್ಥಳದಿಂದ ಅನಾಮಿಕ ಕರ್ತೃವಿನಿಂದ ಹುಟ್ಟಿ ಕ್ರಮೇಣ ಇತರ ಸಮುದಾಯಗಳಿಂದಲೂ ಸ್ವೀಕರಿಸಲ್ಪಟ್ಟು ಮೌಖಿಕ ಪರಂಪರೆಗಳಾಗಿ ಸಾಗಿ ಬಂದಿವೆ.ಈ ಪ್ರವಾಹದಲ್ಲಿ ಭಿನ್ನ ಕಥನಗಳು,ಹೊಸ ಅಂಶಗಳು ಸೇರ್ಪಡೆಯಾಗಿ ಅನನ್ಯತೆಯನ್ನು ಮೆರೆದಿವೆ.ಜಾನಪದ ವಸ್ತುಗಳಿಂದ ಪ್ರೇರಿತರಾಗಿ ವಾಲ್ಮೀಕಿ ವ್ಯಾಸಾದಿಗಳು ರಚಿಸಿದ ಕಾವ್ಯಗಳು ಜನಪ್ರಿಯತೆಯನ್ನು ಪಡೆದವು. ಕನ್ನಡದಲ್ಲೂ ಪೊನ್ನನ ‘ ಭುವನೈಕ್ಯ ರಾಮಾಭ್ಯುದಯ'(ಕ್ರಿ.ಶ.ಸು 950), ನಾಗಚಂದ್ರನ ‘ರಾಮಚಂದ್ರ ಚರಿತ ಪುರಾಣ'(ಕ್ರಿ.ಶ.ಸು1100), ಕುಮುದೇಂದುವಿನ ರಾಮಾಯಣ(ಕ್ರಿ.ಶ.ಸು1270), ನಾಗರಾಜನ ‘ಪುಣ್ಯಾಸ್ರವ’ ಗಳಂತ ಜೈನರಾಮಾಯಣಗಳು ಬಂದವು. ಹದಿನಾಲ್ಕನೆ ಶತಮಾನದ ಬಳಿಕ ವೈದಿಕ ಕವಿಗಳು ವಾಲ್ಮೀಕಿ ರಾಮಾಯಣದಿಂದ ಪ್ರೇರಿತರಾಗಿ ಜೈನ ರಾಮಾಯಣಗಳಿಗಿಂತ ಭಿನ್ನವಾದ ಕಾವ್ಯಗಳನ್ನು ರಚಿಸಿದರು. ಕುಮಾರ ವಾಲ್ಮೀಕಿಯ ‘ತೊರವೆ ರಾಮಾಮಣ’ (ಕ್ರಿ.ಶ.1500), ಚಾಮರಾಜ ‘ರಾಮಾಯಣ'(ಕ್ರಿ.ಶ.1630),ಮಲ್ಲರಸನ ‘ ದಶಾವತಾರ ಚರಿತೆ'(ಕ್ರಿ.ಶ.1680) ಮುಂತಾದವುಗಳಿಂದ ಹಿಡಿದು ಕುವೆಂಪು, ಮೋಯ್ಲಿಗಳ ವರೆಗೆ ರಚಿತವಾಗಿರುವ ರಾಮಾಯಣಗಳಿಂದ ʼತಿಂತಿಣಿಯ ರಘುವರಚರಿತೆಯಲಿ ಕಾಲಿಡಲು ತೆರಪಿಲ್ಲ.&#8217;</p>



<p>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : <a href="https://chat.whatsapp.com/Lec6jB78EHu04TNvY80Tu6" data-type="link" data-id="https://chat.whatsapp.com/Lec6jB78EHu04TNvY80Tu6"><strong>ಪೀಪಲ್‌ ಮೀಡಿಯಾ</strong></a></p>



<p>ಅಂತೆಯೇ ಮಹಾಭಾರತವೂ ಅನೇಕ ಜೈನ ಕವಿಗಳಿಂದ, ವೈದಿಕ ಕವಿಗಳಿಂದ ಪುನರ್ರಚನೆಗೊಂಡಿದೆ. ಪಂಪನ&nbsp; ‘ವಿಕ್ರಮಾರ್ಜುನ ವಿಜಯ’, ರನ್ನನ ‘ಗದಾಯುದ್ಧ’ ಕುಮಾರವ್ಯಾಸನ ‘ ಕರ್ನಾಟ ಭಾರತ ಕಥಾಮಂಜರಿ’ ಇತ್ಯಾದಿಗಳು. ಕ್ರಮೇಣ 16-17 ಶತಮಾನದಲ್ಲಿ ಶ್ರೋತೃಗಳನ್ನು ಕೇಂದ್ರೀಕರಿಸಿಕೊಂಡು ಕುಂಬಳೆಯ ಪಾರ್ತಿಸುಬ್ಬನಂತಹ ಅನೇಕ ಯಕ್ಷಗಾನ ಕವಿಗಳು ಪ್ರಸಂಗಗಳನ್ನು ಕಾವ್ಯಗಳ ಮೇಲೆ ಬರೆದಿದ್ದಾರೆ. ಕರಾವಳಿಯ ಜನರಿಗೆ ಮಹಾಕಾವ್ಯಗಳು, ಪುರಾಣಗಳು ಯಕ್ಷಗಾನದ ಮೂಲಕ ಚಿರ ಪರಿಚಿತವಾಗಿವೆ.&nbsp;&nbsp;&nbsp;</p>



<p>&nbsp;ತುಳುವಿನಲ್ಲಿ ಅರುಣಾಬ್ಜ ಕವಿ ವಿರಜಿತ ‘ಮಹಾಭಾರತೊ’ (ಕ್ರಿ.ಶ.1657) ಇದೆ,’ ಮಂದಾರ ರಾಮಾಯಣ’ ಇದೆ.ಆದರೆ ಇವೆಲ್ಲ ಶಿಷ್ಟ ಕಾವ್ಯಗಳಿಗೆ ನಿಷ್ಠವಾಗಿದ್ದು ಜಾನಪದ ಕಾವ್ಯಗಳಿಗೆ ಭಿನ್ನತೆಗಳವೆ.</p>



<p>ಬ್ರಿಟೀಷ್‌ ಆಡಳಿತದಲ್ಲಿ 1866 ರಲ್ಲಿ ಬಾಂಬೆ ಸರ್ಕಾರ ಭಾರತದಲ್ಲಿ ಲಭ್ಯವಿರುವ ಹಸ್ತಪ್ರತಿಗಳನ್ನು ಸಂಗ್ರಹಿಸುವ ಯೋಜನೆಯನ್ನು ಕೈಗೆತ್ತಿಕೊಂಡಿತು. ಜಾರ್ಜ್ ಬುಹ್ಲರ್, ಎಫ್ ಕೀಲ್ಹಾರ್ನ್, ಪೀಟರ್ ಪೀಟರ್ಸನ್, ರಾಮಕೃಷ್ಣ ಗೋಪಾಲ್ ಭಂಡಾರ್ಕರ್, ಎಸ್ ಆರ್ ಭಂಡಾರ್ಕರ್, ಕಥಾವಟೆ ಮತ್ತು ಘಾಟೆ ಮುಂತಾದ ಪ್ರಸಿದ್ಧ ವಿದ್ವಾಂಸರು ಈ ಯೋಜನೆಯಡಿಯಲ್ಲಿ 17,000 ಕ್ಕೂ ಹೆಚ್ಚು ಪ್ರಮುಖ ಹಸ್ತಪ್ರತಿಗಳನ್ನು ಸಂಗ್ರಹಿಸಿದರು. 1917ರಲ್ಲಿ ಭಂಡಾರ್ಕರ್ ಓರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ (BORI) ಸ್ಥಾಪನೆಯಾದ ನಂತರ ಬಾಂಬೆ ಪ್ರೆಸಿಡೆನ್ಸಿಯ ಆಗಿನ ಗವರ್ನರ್ ಮತ್ತು BORI ನ ಮೊದಲ ಅಧ್ಯಕ್ಷರಾದ ಲಾರ್ಡ್ ವಿಲಿಂಗ್ಡನ್ ಅವರು 1 ಏಪ್ರಿಲ್ 1918 ರಂದು ಈ ಎಲ್ಲಾ ಹಸ್ತಪ್ರತಿಗಳನ್ನು BORI ಗೆ ಸ್ಥಳಾಂತರಿಸಿದರು.</p>



<p>ಇದರ ಭಾಗವಾಗಿಯೇ, ಪಿ ವಿ ಕಾಣೆ, ವಿ ಎಸ್ ಸೂಕ್ತಂಕರ್, ಎಸ್ ಕೆ ಬೆಲ್ವಲ್ಕರ್, ಎಸ್ ಕೆ ಡೇ ಪ್ರೊ.ಡಾ. ಆರ್ ಎನ್.ದಾಂಡೇಕರ್ ಮುಂತಾದ ವಿದ್ವಾಂಸರು ಸುಮಾರು ಐದು ವರ್ಷಗಳ ಕಾಲ 1,259 ಹಸ್ತಪ್ರತಿಗಳನ್ನು ಅವಲೋಕಿಸಿ ಮಹಾಭಾರತದ ಒಂದು ವಿಮರ್ಶಾತ್ಮಕ ಆವೃತ್ತಿಯನ್ನು ಹೊರಗೆ ತಂದರು. ಸೆಪ್ಟೆಂಬರ್ 22, 1966 ರಂದು ಭಾರತದ ಅಂದಿನ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅದನ್ನು ಬಿಡುಗಡೆ ಮಾಡಿದರು. 18 ಪರ್ವಗಳು; 89000+ ಪದ್ಯಗಳು, 15000+ ಪುಟಗಳ 19 ಸಂಪುಟಗಳನ್ನು ಇದು ಹೊಂದಿದೆ.&nbsp;</p>



<p>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : <a href="https://chat.whatsapp.com/Lec6jB78EHu04TNvY80Tu6" data-type="link" data-id="https://chat.whatsapp.com/Lec6jB78EHu04TNvY80Tu6"><strong>ಪೀಪಲ್‌ ಮೀಡಿಯಾ</strong></a></p>



<p>ಇದರಲ್ಲಿ ಸೂಕ್ತಂಕರ್ ಹೇಳುತ್ತಾರೆ- “ವ್ಯಾಸರು ರಚಿಸಿದ ಪಠ್ಯ ಹೇಗಿದ್ದಿರಬಹುದೆಂದು ಸಾಧಿಸುವುದು ಅಸಾಧ್ಯ.ಈಗ ನಾವು ಸಿದ್ಧಪಡಿಸಿದ್ದು ಮಹಾಭಾರತದ ಇನ್ನೊಂದು ಪಠ್ಯ” ಈ ಮಾತು ಗಮನಾರ್ಹವಾದುದು.</p>



<p>ಸಂಶೋಧಕ ರಾಗೌ ಹಾಗೂ ಇತರರು ಸಂಪಾದಿಸಿದ ‘ಜನಪದ ರಾಮಾಯಣ’ದಲ್ಲಿ ತಂಬೂರಿಯವರ ರಾಮಾಯಣವು ರಾವಣ ಹಾಗೂ ಸೀತೆಯರ ತಂದೆ-ಮಗಳ ಸಂಬಂಧದ ಕಥೆಯಿದೆ. “ಇದು ಸೀತೆಯ ಜೀವನ ದುರಂತತೆಯನ್ನು ಧ್ವನಿಸುವುದು ಮಾತ್ರವಲ್ಲ, ಇಡೀ ರಾಮಾಯಣ ಕಥಾ ಕಟ್ಟಡವನ್ನೇ ತನ್ನಲ್ಲಿ ನಿಲ್ಲಿಸಿಕೊಂಡಿರುವಂತಿದೆ. ಇಲ್ಲಿ ಶಿವನಿಂದ ರಾವಣ ಮಾವಿನಹಣ್ಣೊಂದನ್ನು ಪಡೆದು, ಅದನ್ನು ತಿಂದು ವಾಟೆಯನ್ನು ಹೆಂಡತಿಗೆ ನೀಡುತ್ತಾನೆ. ಆಗ ಅವನೇ ಗರ್ಭ ಧರಿಸಿ ಸೀತೆಯನ್ನು ಹೆರುತ್ತಾನೆ. ವಾಲ್ಮೀಕಿಯ ರಾಮಾಯಣದಲ್ಲಿ ದಶರಥ ಹಣ್ಣಿನಿಂದ ಮಕ್ಕಳನ್ನು ಪಡೆಯುವುದನ್ನು ನೋಡಬಹುದು.</p>



<p>&nbsp;ಇವರದೇ ಸಂಪಾದನೆಯ ‘ಹೊನ್ನಾಜಮ್ಮನ ರಾಮಾಯಣ’ದಲ್ಲಿ ಸೀತೆ ಕಮಲದ ರೂಪದಲ್ಲಿರುವುದು, ತಾವರೆಯನ್ನು ಆಘ್ರಾಣಿಸಿದ ರಾವಣನ ಮೂಗಿನ ಹೊಳ್ಳೆಗಳ ಒಳಗೆ ಸೇರಿಕೊಳ್ಳುವುದು, ಸೀನಿದಾಗ ಮೂಗಿನಿಂದ ಸೀತೆ ಹುಟ್ಟುವುದು- ಇಲ್ಲಿ ಸೀತೆಯ ಜನನ ಅಸಹಜ ಹಾಗೂ ಅಮಂಗಳಕರ. ತಂಬೂರಿಯವರ ರಾಮಾಯಣದಂತೆ ಇಲ್ಲೂ ರಾವಣನಿಂದ ನೀರಿನಲ್ಲಿ ತೇಲಿ ಬಿಟ್ಟ ಸೀತೆ ಜನಕನಿಗೆ ಸಿಗುತ್ತಾಳೆ.</p>



<p>&nbsp;ಹೊನ್ನಾಜಮ್ಮನ ರಾಮಾಯಣದ ಸೀತೆಯ ಪಾವಿತ್ರ್ಯತೆಯ ಪರೀಕ್ಷೆಯೂ ವಿಶಿಷ್ಟ. ಇಲ್ಲಿ ರಾಮ ಇವಳಿಗೆ ಸರ್ಪವನ್ನು ಸಿಂಬಿಯಾಗಿಸಿಕೊಂಡು ಮರಳಿನ ಮಡಿಕೆಯಲ್ಲಿ ನೀರು ತರುವ ಹಾಗೂ ಮಲ್ಲಿಗೆ ಬಾಡದಂತೆ;ಉಟ್ಟ ಬಟ್ಟೆ ಹಾಳಾಗದಂತೆ, ಅರಶಿನ ಕುಂಕುಮ ಕೆಡದಂತೆ ಅಗ್ನಿ ಕೊಂಡದಲ್ಲಿ ನಿಂತುಕೊಳ್ಳುವ ಪರೀಕ್ಷೆಗಳನ್ನು ಒಡ್ಡುತ್ತಾನೆ.</p>



<p>ಹನುಮಂತನ ಬಗ್ಗೆ ಗಂಗಾ ಯಮುನಾ ಬಯಲಿನಲ್ಲಿ ಪ್ರಚಲಿತದಲ್ಲಿರುವ ಹಲವಾರು ಕತೆಗಳಲ್ಲಿ ಕೆಲವನ್ನು ಅಯೋವಾ ವಿ.ವಿ.ಯ ಪ್ರಾಧ್ಯಾಪಕರಾದ ಡಾ. ಫಿಲಿಪ್ ಲಟ್ಗೆಂಡಾರ್ಫ್ ಪ್ರಕಟಿಸುತ್ತಾರೆ.ಇದರಲ್ಲೊಂದು ಕತೆಯಲ್ಲಿ ಪಾತ್ರಗಳೇ ನಿರೂಪಕರಾಗುತ್ತಾ ತಮ್ಮದೇ ಪಾತ್ರಗಳಿಗೆ ಮುಖಾಮುಖಿಯಾಗುವ ಅದ್ಭುತ ಸನ್ನಿವೇಷವಿದೆ.ಇದರಲ್ಲಿ ಅಂಜನಾದೇವಿ ಬಾಲ ಆಂಜನೇಯನಿಗೆ ರಾತ್ರಿ ರಾಮನ ಕತೆಯನ್ನು ಹೇಳುತ್ತಾಳೆ. ಆಂಜನೇಯ-ರಾಮನ ಬೇಟಿಯ ಬಗ್ಗೆ ಹೇಳುವಾಗ ಬಾಲ ಆಂಜನೇಯ “ಈ ಆಂಜನೇಯ ಯಾರು?” ಎಂದು ಅಚ್ಚರಿಯಿ೦ದ ಕೇಳುತ್ತಾನೆ. ರಾವಣ-ಆಂಜನೇಯರ ಬೇಟಿಯ ಬಗ್ಗೆ ಹೇಳುವಾಗ ಆಂಜನೇಯ ರಾವಣನನ್ನು ಅಲ್ಲೇ ಕೊಲ್ಲದ್ದಕ್ಕೆ ಬಾಲಾಂಜನೇಯ ಆಕ್ರೋಶ ವ್ಯಕ್ತ ಪಡಿಸುತ್ತಾನೆ! ರಾಮಾಂಜನೇಯರ ಆಲಿಂಗನದ ಬಗ್ಗೆ ಹೇಳುವಾಗ ಆ ಆಂಜನೇಯ ತಾನಾಗಬಾರದಿತ್ತೇ ಎಂದು ಆಸೆ ಪಡುತ್ತಾನೆ. ರಾಮನನ್ನು ಈಗಲೇ ತೋರಿಸುವಂತೆ ಹಠ ಹಿಡಿದಾಗ ಅಂಜನಾದೇವಿ “ರಾಮ ಈಗಷ್ಟೇ ಅಯೋಧ್ಯೆಯಲ್ಲಿ ಹುಟ್ಟಿದ್ದಾನೆ. ಅವನದು ಇನ್ನೊಂದು ರಾಮಾಯಣ” ಎನ್ನುತ್ತಾಳೆ. ಆಂಜನೇಯ ತಕ್ಷಣ ಅಯೋಧ್ಯೆಗೆ ಹೊರಡಲನುವಾದಾಗ ತಾಯಿ ತಡೆದು “ಅಲ್ಲಿ ಮಾನವರು ವಾಸಿಸುತ್ತಾರೆ. ಕಪಿಗಳಿಗೆ ಅಲ್ಲಿ ಜಾಗವಿಲ್ಲ. ಕಾಲ ಕೂಡಿ ಬಂದಾಗ ಬೇಟಿಯಾಗು” ಎನ್ನುತ್ತಾಳೆ. ಈ ಕಥಾನಿರೂಪಣೆಯ ಶೈಲಿ ಅದ್ಭುತವಾದುದು.</p>



<p>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : <a href="https://chat.whatsapp.com/Lec6jB78EHu04TNvY80Tu6" data-type="link" data-id="https://chat.whatsapp.com/Lec6jB78EHu04TNvY80Tu6"><strong>ಪೀಪಲ್‌ ಮೀಡಿಯಾ</strong></a></p>



<p>&nbsp;ಹಿ.ಚಿ.ಬೋರಲಿಂಗಯ್ಯರವರು ಸಂಪಾದಿಸಿದ ‘ಗೊಂಡರ ರಾಮಾಯಣ’ ಬಹಳ ವಿಶಿಷ್ಟವಾದದು. ಕೋವಿ ಹಿಡಿದು ಬೇಟೆಗೆ ಹೊರಡುವ ದಶರಥನನ್ನು ಸಾಮಾನ್ಯ ಗೊಂಡನಂತೆ ಚಿತ್ರಿಸಲಾಗಿದೆ.ಕೆರೆಯಲ್ಲಿ ಆನೆಯೊಂದು ನೀರು ಕುಡಿಯುವಾಗ ಅದಕ್ಕೆ ಗುಂಡು ಹಾರಿಸುವ ದಶರಥ ” ನೀನು ನಿನ್ನ ಮಗನಿಂದಲೇ ಮರಣ ಹೊಂದು” ಎಂದು ಆನೆಯಿಂದ ಶಪಿಸಲ್ಪಡುತ್ತಾನೆ. ವಾಲ್ಮೀಕಿಯ ರಾಮಾಯಣದಲ್ಲಿ ಆನೆಯೆಂದು ಭಾವಿಸಿ ಶ್ರವಣ ಕುಮಾರನ ಹತ್ಯೆಯಾಗುತ್ತದೆ.</p>



<p>ಗೊಂಡರ ರಾಮಾಯಣದಲ್ಲಿ ಮಡಿವಾಳ ಮಾಜಯ್ಯ(?) ಹೀಯಾಳಿಸುವಾಗ ರಾಮ ತನ್ನ ಘನತೆಯನ್ನು ಕಾಯ್ದುಕೊಳ್ಳಲು ಸೀತೆಯನ್ನು ಕಾಡಿನಲ್ಲಿ ಕೊಂದು ಬರುವಂತೆ ಕಿರಾತಕರಲ್ಲಿ ಆಜ್ಞಾಪಿಸುತ್ತಾನೆ. ಕೊಲ್ಲುವಾಗ ಕಿರಾತಕರಿಗೆ ಕತ್ತಿಯ ಅರಗಿನಲ್ಲಿ ಮಗುವಿನ ಬಿಂಬ ಕಂಡು ಶಿಶುಹತ್ಯಾ ದೋಷಕ್ಕೆ ಹೆದರಿ ಕಾಡಲ್ಲಿ ಬಿಟ್ಟು ಬರುತ್ತಾರೆ.ಇಲ್ಲಿಯೂ ವಾಲ್ಮೀಕಿಯ ರಾಮಾಯಣದಂತೆ ಸೀತೆಗೆ ಅವಳಿ ಮಕ್ಕಳ ಜನನವಾಗುವುದಿಲ್ಲ. ಬದಲಾಗಿ ‘ಚಿತ್ರಪಟ ರಾಮಾಯಣ’ದಂತೆ ಕುಶನು ವಾಲ್ಮೀಕಿಯ ದರ್ಬೆಯಿಂದ ಜನಿಸುತ್ತಾನೆ.</p>



<p>ವಿಲಿಯಮ್ ಡಾಲ್ರಿಂಪಲ್ ನ&nbsp; &#8221;ನೈನ್ ಲೈವ್ಸ್&#8221;&nbsp; ನಲ್ಲಿ ರಾಜಸ್ಥಾನದ ನಾಲ್ಕು ಸಾವಿರ ಸಾಲುಗಳ ‘ಪಭುಜೀಯ’ ಮಾಖಿಕ ಕಾವ್ಯದ ಬಗ್ಗೆ&nbsp; ಬರವು ಇದೆ. ಕೇಂಬ್ರಿಡ್ಜ್ ನ ಸಂಶೋಧಕ ಜಾನ್ ಡಿ ಸ್ಮಿತ್ 1970 ರಲ್ಲಿ ಈ ವೀರ ಪಭುಜೀಯ ಕಾವ್ಯ ಹಾಗೂ ಅದನ್ನು ಹಾಡುವ ಭೋಪರ ಮೇಲೆ ಪಿ.ಎಚ್.ಡಿ ಮಾಡಿದ್ದಾರೆ. ಅಖಿಲ ಭಾರತ ಮಟ್ಟದ ರಾಮಾಯಣದಂತೆ ರಾಮ ತನ್ನ ಅಪಹೃತ ಪತ್ನಿಗಾಗಿ ಲಂಕೆಗೆ ಹೋಗುವುದಿಲ್ಲ,ಬದಲಾಗಿ ರಾವಣನ ಒಂಟೆಗಳನ್ನು ಕದಿಯಲು ಹೋಗುತ್ತಾನೆ. ರಾಜಸ್ಥಾನದ ಮರಳುಗಾಡಿಗೆ ಒಂಟೆಗಳನ್ನು ತಂದ ಪಭುಜೀಯನ್ನು ಅಲ್ಲಿಯ ಜನರು ಆರಾಧಿಸುತ್ತಾರೆ. ರೋಬರಿ ಜನಾಂಗದ ಭೋಪ ತನ್ನ ಸಂಗಡಿಗರೊಂದಿಗೆ ಕಾವ್ಯವನ್ನು ಹಾಡುತ್ತಾನೆ.ಜೊತೆಗೆ ‘ಪಾಡ್’ ಎಂಬ ಪವಿತ್ರವಾದ ಚಿತ್ರಪಟವನ್ನು ಕಥಾ ನಿರೂಪಣೆಗೆ ಬಳಸುತ್ತಾರೆ.</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<div class="youtube-embed" data-video_id="aek9tIplPWA"><iframe title="#rammandir ರಾಮನ  ಕಥನಗಳನ್ನ ಸ್ಥಳೀಯಗೊಳಿಸುವ ಗುಣವನ್ನು ನಿರ್ಲಕ್ಷ್ಯ ಮಾಡುತ್ತಿರುವ ಬಿಜೆಪಿ...  |Peepal Media" width="696" height="392" src="https://www.youtube.com/embed/aek9tIplPWA?start=10&#038;feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" allowfullscreen></iframe></div>
</div></figure>



<p>ರಾಮಾಯಣವನ್ನು ಹಿಂದೂ ಧರ್ಮದ ಅಧಿಕೃತ ಕಾವ್ಯವೆಂದು ಭಾವಿಸುವ ಸಂದರ್ಭದಲ್ಲಿ ಮತೀಯ ವ್ಯಾಪ್ತಿಯನ್ನು ಮೀರಿ ಅದು ಬೆಳೆದ ಬಗೆಯನ್ನು ಕೇರಳದ ಮಾಪಿಳ್ಳೆ ರಾಮಾಯಣದಲ್ಲಿ ನೋಡಬಹುದು. ಇದು ಮುಸಲ್ಮಾನ ಮಾಪಿಳ್ಳೆಗಳ ಜಾನಪದ ಹಾಡುಗಳಲ್ಲಿ ರಾಮ ಕಾಣಿಸಿಕೊಂಡ ಬಗೆ. ರಾಮನ ಹೆಸರನ್ನು &#8220;ಲಾಮನ್&#8221; ಎಂದು ಬದಲಿಸಿದ್ದಷ್ಟೇ, ಉಳಿದ ಪಾತ್ರಗಳು ಅಂತೆಯೇ ಇವೆ. ಮುಸ್ಲಿಂ ಮಾಪಿಳ್ಳೆಗಳ ಬದುಕು-ಸಂಸ್ಕøತಿಗೆ ಹೊಂದಿಕೊಳ್ಳುವಂತೆ ರಾಮಾಯಣ ಮರುರೂಪುಗೊಂಡಿದೆ, ಇದು ರಾಮನ ಹೆಸರಿನಲ್ಲಿ ನಡೆಯುವ ರಾಜಕೀಯ ಪ್ರೇರಿತ ಮತೀಯ ಸಂಘರ್ಷಗಳಿಗೆ ಮುಖಾಮುಖಿಗೊಳ್ಳುವ ಅಗತ್ಯತೆ ತುಂಬಾ ಇದೆ.</p>



<p>ರಾಮಾಯಣಕ್ಕಿಂತ ತುಸು ಹೆಚ್ಚು ಜನಮಾನಸವನ್ನು ಹೊಕ್ಕಿರುವ ಕಾವ್ಯ ಮಹಾಭಾರತ. ಅದಕ್ಕೆ ಅದರ ಸರ್ವ ರಸೋದಯ ಕಾರಣವೇನೋ…. ಜನರ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಪ್ರಸಿದ್ಧ ಜಾನಪದ ವಿದ್ವಾಂಸ ಎನ್.ಆರ್.ನಾಯಕರು ಸಂಪಾದಿಸಿದ ‘ಗ್ರಾಮೊಕ್ಕಲ ಮಹಾಭಾರತ’ ಕರಾವಳಿ ಕರ್ನಾಟಕ ಭಾಗದಲ್ಲಿರುವ ಗ್ರಾಮೊಕ್ಕಲು ಸಮುದಾಯದ ಭಾರತ. ಇದರಲ್ಲಿ ಧರ್ಮರು, ಗೀಚಕ(ಕೀಚಕ), ಸುಭದ್ರೆ,ಲಕ್ಷ್ಮಣ,ಅರ್ಜುನ,ಕುಸುಮಾಲಿ(ಚಿತ್ರಾಂಗದೆ),ಕನಕಾಂಗಿ ಕಲ್ಯಾಣ,ಅಭಿಮನ್ಯು ಹಾಗೂ ಸಾವಿತ್ರಿ ಹೀಗೆ ಒಂಬತ್ತು ಬಿಡಿ ಕಥನಗಳಿವೆ.ಈ ಮಹಾಭಾರತ ಅನಕ್ಷರಸ್ಥ ಜನರ ಮೂಲಕ ಮೌಖಿಕವಾಗಿ ಹರಿದು ಬಂದಿದೆ.</p>



<p>ಈ ಮಹಾಭಾರತದಲ್ಲಿ ಪಾಂಡವರನ್ನು ಸೋಲಿಸಿದ ದುರ್ಯೋಧನನನ್ನು ದ್ರೌಪದಿಯು ಪಗಡೆಯಾಟದಲ್ಲಿ ಗೆಲ್ಲುತ್ತಾಳೆ. ದ್ರೌಪದಿ ಕರ್ಣನ ನೆರವಿನಿಂದ ನಾರಾಯಣ ದೇವರ ಪಗಡೆ ಮಣೆಯನ್ನು ತರಿಸಿ ಕೌರವನ ಮೋಸದ ಮಣೆಯನ್ನು ಬದಲಿಸುತ್ತಾಳೆ. ಪಗಡೆಯಾಡುವಾಗ ಗಾಳಿ ಬೀಸಿ ದ್ರೌಪದಿಯ ಸೆರಗು ಜಾರಿ, ಇದರಿಂದ ಚಿತ್ತ ಚಂಚಲಗೊಂಡ ಕೌರವ ಸೋಲುತ್ತಾನೆ. ಕಾವ್ಯದಲ್ಲಿ ಕರ್ಣನ ಧರ್ಮಬೀರುತನ, ಸಹೋದರತ್ವ, ನೈತಿಕತೆ ಸುಂದರವಾಗಿ ವ್ಯಕ್ತಗೊಂಡಿದೆ. ಇತರರಂತೇ ದುರ್ಯೋಧನನು ಇವನನ್ನು ಸೂತನೆಂದು ಕರೆಯುವ ನವೀನ ಆಶಯ &nbsp; ಇದೆ. ದ್ರೌಪದಿ ವಸ್ತ್ರಾಪಹರಣದಂತಹ ಅನೈತಿಕ ಪ್ರಸಂಗವನ್ನು ನಿರೂಪಕ ಬದಲಿಸಿದ್ದಾನೆ. ಪಗಡೆಯಾಟದಲ್ಲಿ ದ್ರೌಪದಿ ಗೆದ್ದರೂ ಈ&nbsp; ಮಹಾಭಾರತದಲ್ಲಿ ಪಾಂಡವರನ್ನು ಸೋಲಿಸಿದ ದುರ್ಯೋಧನನನ್ನು ದ್ರೌಪದಿಯು ಪಗಡೆಯಾಟದಲ್ಲಿ ಗೆಲ್ಲುತ್ತಾಳೆ. ದ್ರೌಪದಿ ಕರ್ಣನ ನೆರವಿನಿಂದ&nbsp; ನಾರಾಯಣದೇವರ ಪಗಡೆ ಮಣೆಯನ್ನು ತರಿಸಿ ಕೌರವನ ಮೋಸದ ಮಣೆಯನ್ನು ಬದಲಿಸುತ್ತಾಳೆ. ಪಗಡೆಯಾಡುವಾಗ ಗಾಳಿ ಬೀಸಿ ದ್ರೌಪದಿಯ ಸೆರಗು ಜಾರಿ,ಇದರಿಂದ ಚಿತ್ತ ಚಂಚಲಗೊಂಡ ಕೌರವ ಸೋಲುತ್ತಾನೆ. ಕಾವ್ಯದಲ್ಲಿ ಕರ್ಣನ ಧರ್ಮ ಬೀರುತನ, ಸಹೋದರತ್ವ, ನೈತಿಕತೆ ಸುಂದರವಾಗಿ ವ್ಯಕ್ತಗೊಂಡಿದೆ.ಇತರರಂತೇ ದುರ್ಯೋಧನನೂ ಇವನನ್ನು ಸೂತನೆಂದು ಕರೆಯುವ ವನವಾಸಕ್ಕೆ ಕಾರಣ ಅಸ್ಪಷ್ಟ.</p>



<p>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : <a href="https://chat.whatsapp.com/Lec6jB78EHu04TNvY80Tu6" data-type="link" data-id="https://chat.whatsapp.com/Lec6jB78EHu04TNvY80Tu6"><strong>ಪೀಪಲ್‌ ಮೀಡಿಯಾ</strong></a></p>



<p>ಈ ಮಹಾಭಾರತದಲ್ಲಿ ‘ಸುಭದ್ರೆಯ ಹಾಡು’ ಅಭಿಜಾತ ಮಹಾಭಾರತಕ್ಕಿಂತ ಭಿನ್ನ . ಜೋಗಿಯಾಗಿ ಬಂದು ಭಿಕ್ಷೆಗಾಗಿ ಪೀಡಿಸುವ ಅರ್ಜುನನ ಉಪಟಳವನ್ನು ತಾಳಲಾರದೆ ಸುಭದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದು,ಅರ್ಜುನ ತನ್ನ ನಾಗರ ಬೆತ್ತ- ಅಮೃತ ನೀರಿನಿಂದ ಬದುಕಿಸುವ ವಿಶಿಷ್ಟ ಪ್ರಕರಣಗಳು ಇದರಲ್ಲಿವೆ.ಅರ್ಜುನ ಚದುರಂಗಿ ಕುಸುಮಾಲಿಯನ್ನು ಮದುವೆಯಾಗಿ ಹನ್ನೆರಡು ವರ್ಷದ ನಂತರ ಜೋಗಿ ವೇಷಧಾರಿಯಾಗಿ ಬಂದು ಪರೀಕ್ಷಿಸಿ ಹಸ್ತಿನಾವತಿಗೆ ಕರೆದೊಯ್ಯುವ ಪ್ರಸಂಗ ಇದರಲ್ಲಿ ಮಾತ್ರ ಕಾಣಸಿಗುತ್ತದೆ.</p>



<p>ಮಧ್ಯಭಾರತದ ಗೊಂಡರಲ್ಲಿ ಪ್ರಸಿದ್ಧವಾದ ‘ ಭೀಮ ಸಿದಿ’ ಕಥನ ಕಾವ್ಯದಲ್ಲಿ ಭೀಮನೇ ವಸ್ತ್ರಾಪಹರಣ ಮಾಡುವವನು.ಸುಂದರಿಯರನ್ನು ನೋಡುವಾಗ ತನ್ನ ತಂದೆ ಪವನಾರನನ್ನು ಪ್ರಾರ್ಥಿಸುತ್ತಾನೆ. ತಂದೆ ಜೋರಾಗಿ ಗಾಳಿ ಬೀಸಿ ಹೆಂಗಳೆಯರು ಬಟ್ಟೆ ಹಾರಿಸುತ್ತಾನೆ. ಗೊಂಡರಿಗೆ ಭೀಮ ಫಲವಂತಿಕೆಯ ದೈವ, ಮಳೆ ತರುವವನು.</p>



<p>ಛತ್ತೀಸಘಡದ ಕಥನವೊಂದರಲ್ಲಿ ಕೃಷ್ಣ ಬಾಣ ಹರಿತಗೊಳಿಸುವಾಗ ಕೈ ಬೆರಳಿಗೆ ಗಾಯ ಮಾಡಿಕೊಳ್ಳುತ್ತಾನೆ. ಆಗ ದ್ರೌಪದಿ ತನ್ನ ಸೆರಗಿನ ಬಟ್ಟೆ ತುಂಡೊಂದನ್ನು ಹರಿದು ಅವನ ಬೆರಳಿಗೆ ಕಟ್ಟುತ್ತಾಳೆ. ಇನ್ನೊಂದು ಕಥನದಲ್ಲಿ ಪಾಂಡವರೊಂದಿಗೆ ಕೃಷ್ಣ ಈಜಾಡುವಾಗ ತನ್ನ ಲಂಗೋಟಿಯನ್ನು ಕಳೆದುಕೊಳ್ಳುತ್ತಾನೆ. ಆಗ ದ್ರೌಪದಿ ತನ್ನ ಸೆರಗಿನ ತುಂಡೊಂದನ್ನು ನೀಡುತ್ತಾಳೆ. ಈ ಉಪಕಾರವನ್ನು ಅಕ್ಷಯಾಂಬರ ವಿಲಾಸದಲ್ಲಿ ತೀರಿಸುತ್ತಾನೆ.</p>



<p>&nbsp;ಮಹಾಭಾರತದ ಪ್ರಮುಖ ಪಾತ್ರ ದ್ರೌಪದಿಯು ತಮಿಳುನಾಡಿನಲ್ಲಿ ದೈವವಾಗಿ ಆರಾಧಿಸಲ್ಪಡುತ್ತಾಳೆ. ಕೊಯಮ್ಬತ್ತೂರಿನ ‘ಅರವನ್ ಜಾತ್ರೆ’ ಯಲ್ಲಿ ಇವಳು ಒಂದು ದೈವ. ಕೃಷ್ಣ ಮೋಹಿನಿಯಾಗಿ ಆರವನ್ ನನ್ನು ಮದುವೆಯಾದ ದಿನದಂದು ಈ ಜಾತ್ರೆ ನಡೆಯುತ್ತದೆ. ಇದರಲ್ಲಿ ತೃತೀಯ ಲಿಂಗಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಆರವನ್ ಉಲೂಪಿಯ ಮಗ ಇರಾವಂತನೆಂಬ ವಾದ ವಿದ್ವಾಂಸರದ್ದು. ತಮಿಳುನಾಡಿನ ನೃತ್ಯ ಪ್ರಕಾರ ‘ತೆರಕೂತ್ತು’ವಿನಲ್ಲಿ ಮಹಾಭಾರತದ ಪ್ರಸಂಗಗಳಿವೆ.</p>



<p>ತೆಲುಗಿನ ಮಹಾಭಾರತದಲ್ಲಿ ಪಾಂಡವರು ತಾವು ಚಿರಂಜೀವಿಗಳಾಗಲು ತಂದೆ ಪಾಂಡುವಿನ ಹೆಣವನ್ನು ತಿನ್ನುವ ಪ್ರಸಂಗವಿದ್ದು, ಇದನ್ನು ಕೃಷ್ಣ ತಪ್ಪಿಸುತ್ತಾನೆ. ಗ್ರಾಮೊಕ್ಕಲು ಮಹಾಭಾರತದಂತೆ ಇಲ್ಲೂ ದ್ರೌಪದಿ ಕೌರವನೊಂದಿಗೆ ಪಗಡೆಯಾಡುತ್ತಾಳೆ, ಆದರೆ ಕಾಲ ಬೆರಳಿನಲ್ಲಿ!</p>



<p>ಭಾರತದ ಅನೇಕ ಜನಾಂಗಗಳು ಮಹಾಭಾರತದ ಪಾತ್ರಗಳನ್ನು ತಮ್ಮ ಪೂರ್ವಜರೆಂದು ಬಗೆಯುತ್ತವೆ.ಹಿಮಾಚಲಪ್ರದೇಶದ ‘ಮಂಡಿ’ಯಲ್ಲಿ ಹಿಡಿಂಬೆಯ ದೇಗುಲವಿದೆ. ಉತ್ತರಾಖಾಂಡದಾದ್ಯಂತ ಇರುವ ಗಿಡ್ಡಿ ಜನಾಂಗೀಯರಿಗೆ ಜರಾಸಂಧ ದೈವ! ರಾಜಸ್ಥಾನದ ಜೋದಾಪುರದಲ್ಲಿ ಮುದ್ಗಲ್ ಗೋತ್ರದ ದವೆ ಬ್ರಾಹ್ಮಣರು ತಮ್ಮನ್ನು ರಾವಣನ ವಂಶಸ್ಥರೆಂದು ಕರೆಸಿಕೊಂಡು ಅವನಿಗೆ ದೇವಾಲಯ ನಿರ್ಮಿಸಿ ಆರಾಧಿಸುತ್ತಾರೆ.</p>



<p>ಹಿಮಾಚಲಪ್ರದೇಶದ ಕಿನ್ನೂರು ಪ್ರದೇಶದ ನಿರೂಪಣೆಯೊಂದರ ಪ್ರಕಾರ ಕುಂತಿಗೆ ಮಂಗಗಳನ್ನು ನೋಡಿ ಮಗುವಿನ ಬಯಕೆಯಾಗಿ ‘ಋಷಿ ಮಾಮ’ನ ಸೇವೆ ಮಾಡಿ ಮಕ್ಕಳನ್ನು ಪಡೆಯುತ್ತಾಳೆ.ಇಲ್ಲಿ ಬೆಟ್ಟದ ಮೇಲೆ ವಾಸಿಸುವ ಪಾಂಡವರಿಗೂ ಕೆಳಗೆ ವಾಸಿಸುವ ಕೌರವರಿಗೂ ನೀರಿಗಾಗಿ ಜಗಳವಾಗುತ್ತದೆ. ಅಸ್ಸಾಂನ ಜನರು ರುಕ್ಮ, ಭಗದತ್ತ,ಬಾಣಾಸುರರನ್ನು ತಮ್ಮ ಪೂರ್ವಜರೆಂದು ಭಾವಿಸುತ್ತಾರೆ. ಕೃಷ್ಣನ ಪತ್ನಿ ರುಕ್ಮಿಣಿ&nbsp; ಬೋಡೋಗಳ ಕನ್ಯೆ!!!</p>



<p>ಭಾರತದಲ್ಲಿ ಅನೇಕ ಸ್ಥಳನಾಮಗಳು ಮಹಾಭಾರತ ರಾಮಾಯಣ ಕೇಂದ್ರಿತವಾಗಿವೆ. ಪಾಂಡವರ ಗುಡ್ಡ, ಪಾಂಡವಪುರ, ಪಾಂಡವ ಪಣೆ, ಹಂಪಿಯ ಸೀತೆಯ ಸೆರಗು, ಭೀಮನ ಕಲ್ಲು ಇತ್ಯಾದಿ. ಸಾಮಾನ್ಯ ಮಾನವ ಮಾಡಲಾಗದ ಅಸಾಮಾನ್ಯ, ಅತಿಮಾನುಷ ಕಾರ್ಯಗಳನ್ನು ಪುರಾಣ ಪಾತ್ರಗಳಿಗೆ ಆರೋಪಿಸುವುದು ಜನಸಮುದಾಯದ ಸಾಮಾನ್ಯ ನಂಬಿಕೆ. ಯಾರೂ ಎತ್ತಲಾಗದ ಭಾರೀ ಗಾತ್ರದ ಕಲ್ಲು ‘ ಭೀಮನ ಕಲ್ಲು’ ಆಗುವುದು ಭೀಮನ ದೇಹ ದಾಢ್ಯತೆಯ ಅರಿವು ಇರುವುದರಿಂದ.ಅನೇಕ ಗ್ರಾಮಗಳು ತಮ್ಮ ಊರಿನ ಐತಿಹ್ಯವನ್ನು ಪಾಂಡವರ ವನವಾಸದೊಂದಿಗೆ ಸಂಬಂಧ ಕಲ್ಪಿಸಿಕೊಳ್ಳುತ್ತವೆ. ನನ್ನ ಊರು ಐವರ್ನಾಡಿಗೆ ಪಾಂಡವರು ಬಂದಿದ್ದರು, ಅವರು ಸ್ಥಾಪಿಸಿದ ಲಿಂಗಗಳೇ ಪಂಚಲಿಂಗೇಶ್ವರ.</p>



<p>ಹೀಗೆ, ಜನಮಾನಸದಲ್ಲಿ ರಾಮ-ಕೃಷ್ಣರ ಕಥೆಗಳು ಬೇರೆ ಬೇರೆ ಭಾಷೆಗಳಲ್ಲಿ, ಜನಪದದಲ್ಲಿ ಹೊಸದಾಗಿ ಕಟ್ಟುವ ಪರಂಪರೆ ಭಾರತ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ರಾಮ ಕೋಮುವಾದಿ ಶಕ್ತಿಗಳ ಕೈಗೆ ಸಿಕ್ಕಿದ್ದಾನೆ. ನಿಜವಾದ ʼರಾಮಂದಿರುʼ ಮರೆಯಾಗಿ ಹಿಂದುತ್ವದ ರಾಮ ನಮ್ಮ ಮುಂದೆ ಬಂದಿದ್ದಾನೆ. ರಾಮ ದೇವಾಲಯದ ಒಳಗೆ ಬಂಧಿಯಾಗುತ್ತಿದ್ದಾನೆ. ಈ ಸಂದರ್ಭದಲ್ಲಿ ರಾಮನ ಭಾರತ ಕಥನಗಳನ್ನು ನಾವು ಸ್ಮರಿಸಿಕೊಳ್ಳಬೇಕು.     </p>



<p style="font-size:20px"><strong>ಲೇಖನ: ಚರಣ್ ಐವರ್ನಾಡು</strong></p>
]]></content:encoded>
					
		
		
			</item>
		<item>
		<title>ಚುನಾವಣಾ ಲಾಭಕ್ಕಾಗಿ ತರಾತುರಿಯ ಮಂದಿರ ಉದ್ಘಾಟನೆ : ದೂರವಿರಲು ಕಾಂಗ್ರೆಸ್ ತೀರ್ಮಾನ</title>
		<link>https://peepalmedia.com/hasty-temple-opening-for-election-gains/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 10 Jan 2024 12:59:52 +0000</pubDate>
				<category><![CDATA[ರಾಜಕೀಯ]]></category>
		<category><![CDATA[ayodhya]]></category>
		<category><![CDATA[bjp]]></category>
		<category><![CDATA[bjp dirty politics]]></category>
		<category><![CDATA[congress]]></category>
		<category><![CDATA[india]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Ramamandira]]></category>
		<category><![CDATA[RSS]]></category>
		<guid isPermaLink="false">https://peepalmedia.com/?p=34809</guid>

					<description><![CDATA[&#8216;ಅಯೋಧ್ಯೆಯಲ್ಲಿ ರಾಮಮಂದಿರದ ಕೆಲಸಗಳು ಇನ್ನೂ ಬಾಕಿ ಉಳಿದಿದ್ದರೂ, ಬಿಜೆಪಿ ತನ್ನ ಚುನಾವಣಾ ಲಾಭಕ್ಕಾಗಿ ಮಂದಿರ ಉದ್ಘಾಟನೆಗೆ ತೊಡಗಿದೆ. ರಾಜಕೀಯ ಉದ್ದೇಶದಿಂದ ನಡೆಸುವ ಈ ಕಾರ್ಯದಿಂದ ದೂರ ಉಳಿಯಲು ಕಾಂಗ್ರೆಸ್ ತೀರ್ಮಾನಿಸಿದೆ&#8217; ಎಂದು ಕಾಂಗ್ರೆಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. &#8220;ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರು ಇನ್ನೂ ಪೂರ್ಣಗೊಳ್ಳದ ದೇವಾಲಯದ ಉದ್ಘಾಟನೆಯನ್ನು ಚುನಾವಣಾ ಲಾಭಕ್ಕಾಗಿ ಗಡಿಬಿಡಿ ಮಾಡುತ್ತಿದೆ. ಇದೊಂದು ರಾಜಕೀಯ ಪ್ರೇರಿತ ಕಾರ್ಯಕ್ರಮ ಎಂದು ಕಾಂಗ್ರೆಸ್ ದೂರಿದೆ. ಇಂದು ಕಾಂಗ್ರೆಸ್ ಪಕ್ಷ ಹೊರಡಿಸಿದ ಅಧಿಕೃತ ಪ್ರಕಟಣೆಯಲ್ಲಿ ಪಕ್ಷ ಈ ರೀತಿಯಾಗಿ [&#8230;]]]></description>
										<content:encoded><![CDATA[
<p>&#8216;ಅಯೋಧ್ಯೆಯಲ್ಲಿ ರಾಮಮಂದಿರದ ಕೆಲಸಗಳು ಇನ್ನೂ ಬಾಕಿ ಉಳಿದಿದ್ದರೂ, ಬಿಜೆಪಿ ತನ್ನ ಚುನಾವಣಾ ಲಾಭಕ್ಕಾಗಿ ಮಂದಿರ ಉದ್ಘಾಟನೆಗೆ ತೊಡಗಿದೆ. ರಾಜಕೀಯ ಉದ್ದೇಶದಿಂದ ನಡೆಸುವ ಈ ಕಾರ್ಯದಿಂದ ದೂರ ಉಳಿಯಲು ಕಾಂಗ್ರೆಸ್ ತೀರ್ಮಾನಿಸಿದೆ&#8217; ಎಂದು ಕಾಂಗ್ರೆಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.</p>



<p>&#8220;ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರು ಇನ್ನೂ ಪೂರ್ಣಗೊಳ್ಳದ ದೇವಾಲಯದ ಉದ್ಘಾಟನೆಯನ್ನು ಚುನಾವಣಾ ಲಾಭಕ್ಕಾಗಿ ಗಡಿಬಿಡಿ ಮಾಡುತ್ತಿದೆ. ಇದೊಂದು ರಾಜಕೀಯ ಪ್ರೇರಿತ ಕಾರ್ಯಕ್ರಮ ಎಂದು ಕಾಂಗ್ರೆಸ್ ದೂರಿದೆ.</p>



<p>ಇಂದು ಕಾಂಗ್ರೆಸ್ ಪಕ್ಷ ಹೊರಡಿಸಿದ ಅಧಿಕೃತ ಪ್ರಕಟಣೆಯಲ್ಲಿ ಪಕ್ಷ ಈ ರೀತಿಯಾಗಿ ರಾಮಮಂದಿರ ಉದ್ಘಾಟನೆ ಬಗ್ಗೆ ತನ್ನ ಅಭಿಪ್ರಾಯ ತಿಳಿಸಿದೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">Here is the statement of Shri <a href="https://twitter.com/Jairam_Ramesh?ref_src=twsrc%5Etfw">@Jairam_Ramesh</a>, General Secretary (Communications), Indian National Congress. <a href="https://t.co/JcKIEk3afy">pic.twitter.com/JcKIEk3afy</a></p>&mdash; Congress (@INCIndia) <a href="https://twitter.com/INCIndia/status/1745034149457477811?ref_src=twsrc%5Etfw">January 10, 2024</a></blockquote><script async src="https://platform.twitter.com/widgets.js" charset="utf-8"></script>
</div></figure>



<p>&#8220;ಕಳೆದ ತಿಂಗಳು ಕಾಂಗ್ರೆಸ್ ಅಧ್ಯಕ್ಷರು ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿ ಮತ್ತು ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕ ಶ್ರೀ ಅಧೀರ್ ರಂಜನ್ ಚೌಧರಿ ಅವರು ಜನವರಿ 22, 2024 ರಂದು ನಡೆಯಲಿರುವ ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನವನ್ನು ಸ್ವೀಕರಿಸಿದ್ದಾರೆ.</p>



<p>ಶ್ರೀರಾಮನನ್ನು ನಮ್ಮ ದೇಶದಲ್ಲಿ ಲಕ್ಷಾಂತರ ಜನರು ಪೂಜಿಸುತ್ತಾರೆ. ಧರ್ಮವು ವೈಯಕ್ತಿಕ ವಿಷಯವಾಗಿದೆ. ಆದರೆ ಆರೆಸ್ಸೆಸ್/ಬಿಜೆಪಿ ಬಹಳ ಹಿಂದಿನಿಂದಲೂ ಅಯೋಧ್ಯೆಯಲ್ಲಿ ಮಂದಿರದ ವಿಚಾರವನ್ನು ರಾಜಕೀಯ ಪ್ರೇರಿತಗೊಳಿಸಿವೆ. ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರಿಂದ ಇನ್ನೂ ಪೂರ್ಣಗೊಳ್ಳದ ಉದ್ಘಾಟನೆಯನ್ನು ಚುನಾವಣಾ ಲಾಭಕ್ಕಾಗಿ ಸ್ಪಷ್ಟವಾಗಿ ಮುಂದಿಡಲಾಗಿದೆ. 2019 ರ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಬದ್ಧರಾಗಿ ಮತ್ತು ಶ್ರೀರಾಮನನ್ನು ಗೌರವಿಸುವ ಲಕ್ಷಾಂತರ ಜನರ ಭಾವನೆಗಳನ್ನು ಗೌರವಿಸುವಾಗ, ಶ್ರೀ ಮಲ್ಲಿಕಾರ್ಜುನ ಖರ್ಗೆ, ಶ್ರೀಮತಿ ಸೋನಿಯಾ ಗಾಂಧಿ ಮತ್ತು ಶ್ರೀ ಅಧೀರ್ ರಂಜನ್ ಚೌಧರಿ ಅವರು ಸ್ಪಷ್ಟವಾಗಿ ಆರೆಸ್ಸೆಸ್/ಬಿಜೆಪಿಯ ಈ ಕಾರ್ಯಕ್ರಮದ ಆಹ್ವಾನವನ್ನು ಗೌರವಯುತವಾಗಿ ನಿರಾಕರಿಸಿದ್ದಾರೆ&#8221; ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.</p>



<p>ಪ್ರತಿಷ್ಠಾಪನಾ ಸಮಾರಂಭಕ್ಕೆ ಹಲವಾರು ಉನ್ನತ ರಾಜಕಾರಣಿಗಳು, ಕ್ರೀಡಾಪಟುಗಳು ಮತ್ತು ಸೆಲೆಬ್ರಿಟಿಗಳನ್ನು ಆಹ್ವಾನಿಸಲಾಗಿತ್ತು. ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಅಧೀರ್ ರಂಜನ್ ಚೌಧರಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಆಹ್ವಾನ ನೀಡಲಾಗಿದೆ.</p>



<p>ಈ ಕಾರ್ಯಕ್ರಮಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಲಾಲು ಪ್ರಸಾದ್ ಯಾದವ್ ಮತ್ತು ಸೀತಾರಾಮ್ ಯೆಚೂರಿ ಸೇರಿದಂತೆ ಇತರ ವಿರೋಧ ಪಕ್ಷದ ನಾಯಕರನ್ನು ಆಹ್ವಾನಿಸಲಾಗಿತ್ತು.</p>
]]></content:encoded>
					
		
		
			</item>
		<item>
		<title>ಅಯೋಧ್ಯೆಯಲ್ಲಿ ಭೀಕರ ಘಟನೆ: ಅರ್ಚಕ ಹತ್ಯೆ</title>
		<link>https://peepalmedia.com/priest-killed-in-ayodhya/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 19 Oct 2023 10:25:16 +0000</pubDate>
				<category><![CDATA[ದೇಶ]]></category>
		<category><![CDATA[ayodhya]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[priest]]></category>
		<guid isPermaLink="false">https://peepalmedia.com/?p=30169</guid>

					<description><![CDATA[ನವದೆಹಲಿ: ಅಯೋಧ್ಯೆಯಲ್ಲಿ ಅತ್ಯಂತ ಕೆಟ್ಟ ಘಟನೆ ನಡೆದಿದೆ. ರಾಮಜನ್ಮಭೂಮಿಯಲ್ಲಿರುವ ಪ್ರಸಿದ್ಧ ಹನುಮಾನ್ ಗರ್ಹಿ ದೇವಸ್ಥಾನದ ಅರ್ಚಕನನ್ನು ಅಪರಿಚಿತ ದುಷ್ಕರ್ಮಿಗಳು ಕತ್ತು ಹಿಸುಕಿ ಕೊಂದಿದ್ದಾರೆ. ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜ್ ಕರಣ್ ನಯ್ಯರ್ ಪ್ರಕಾರ &#8220;ಪೂಜಾರಿ ರಾಮ್ ಸಹರೆ ದಾಸ್ (44) ಹನುಮಾನ್ ಗರ್ಹಿ ದೇವಸ್ಥಾನದಲ್ಲಿ ಪೂಜೆಗಳನ್ನು ನಡೆಸುತ್ತಾರೆ. ಅವರು ತಮ್ಮ ಇಬ್ಬರು ಶಿಷ್ಯರೊಂದಿಗೆ ದೇವಸ್ಥಾನದ ಪಕ್ಕದ ಕೋಣೆಯಲ್ಲಿ ತಂಗುತ್ತಾರೆ. ರಾಮ ಜನ್ಮಭೂಮಿ ಆವರಣದ ತೀವ್ರ ಭದ್ರತಾ ವಲಯದ ಕೊಠಡಿಯಲ್ಲಿ ರಾಮ್ ಸಹಾರೆ ಶವವಾಗಿ ಬಿದ್ದಿದ್ದರು.&#8221; ವಿಷಯ ತಿಳಿದ [&#8230;]]]></description>
										<content:encoded><![CDATA[
<p>ನವದೆಹಲಿ: ಅಯೋಧ್ಯೆಯಲ್ಲಿ ಅತ್ಯಂತ ಕೆಟ್ಟ ಘಟನೆ ನಡೆದಿದೆ. ರಾಮಜನ್ಮಭೂಮಿಯಲ್ಲಿರುವ ಪ್ರಸಿದ್ಧ ಹನುಮಾನ್ ಗರ್ಹಿ ದೇವಸ್ಥಾನದ ಅರ್ಚಕನನ್ನು ಅಪರಿಚಿತ ದುಷ್ಕರ್ಮಿಗಳು ಕತ್ತು ಹಿಸುಕಿ ಕೊಂದಿದ್ದಾರೆ.</p>



<p>ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜ್ ಕರಣ್ ನಯ್ಯರ್ ಪ್ರಕಾರ &#8220;ಪೂಜಾರಿ ರಾಮ್ ಸಹರೆ ದಾಸ್ (44) ಹನುಮಾನ್ ಗರ್ಹಿ ದೇವಸ್ಥಾನದಲ್ಲಿ ಪೂಜೆಗಳನ್ನು ನಡೆಸುತ್ತಾರೆ. ಅವರು ತಮ್ಮ ಇಬ್ಬರು ಶಿಷ್ಯರೊಂದಿಗೆ ದೇವಸ್ಥಾನದ ಪಕ್ಕದ ಕೋಣೆಯಲ್ಲಿ ತಂಗುತ್ತಾರೆ. ರಾಮ ಜನ್ಮಭೂಮಿ ಆವರಣದ ತೀವ್ರ ಭದ್ರತಾ ವಲಯದ ಕೊಠಡಿಯಲ್ಲಿ ರಾಮ್ ಸಹಾರೆ ಶವವಾಗಿ ಬಿದ್ದಿದ್ದರು.&#8221;</p>



<p>ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಅವರನ್ನು ಕತ್ತು ಕೊಯ್ದು ಕೊಲೆ ಮಾಡಿರುವುದು ಪೊಲೀಸರಿಗೆ ಗೊತ್ತಾಗಿದೆ. ಚೆನ್ನಾಗಿ ತಿಳಿದವರೇ ಈ ಕೃತ್ಯ ಎಸಗಿದ್ದಾರೆ ಎಂಬ ಶಂಕೆಯಲ್ಲಿ ತನಿಖೆ ನಡೆಸಲಾಗುತ್ತಿದೆ.</p>



<p>ಇಂದು ಬೆಳಗ್ಗೆ 7 ಗಂಟೆಗೆ ಈ ದುಷ್ಕೃತ್ಯ ನಡೆದಿದೆ ಎಂದು ಪೊಲೀಸರಿಗೆ ಮಾಹಿತಿ ಲಭಿಸಿದೆ. ರಾಮ್ ಸಹಾರೆ ಪೂಜೆಗೆ ಬಾರದೇ ಇದ್ದುದರಿಂದ ಅವರ ಸಹ ಅರ್ಚಕರು ಅವರನ್ನು ಹುಡುಕಲು ಹೋದಾಗ ಮೃತದೇಹ ಪತ್ತೆಯಾಗಿದೆ. ದಾಳಿಕೋರರು ಹರಿತವಾದ ಆಯುಧದಿಂದ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ನಿನ್ನೆ ರಾತ್ರಿ ಅರ್ಚಕ ಹಾಗೂ ಆತನ ಶಿಷ್ಯರ ನಡುವೆ ಘರ್ಷಣೆ ನಡೆದಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.</p>



<p>ಅರ್ಚಕರ ಶಿಷ್ಯರೇ ಕೊಲೆ ಮಾಡಿರಬಹುದು ಎಂಬ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಬ್ಬ ಶಿಷ್ಯ ಓಡಿಹೋದ. ನಾಲ್ಕು ಪೊಲೀಸ್ ತಂಡಗಳು ಆತನನ್ನು ಬೆನ್ನಟ್ಟಿ ಬೇಟೆಯಾಡುತ್ತಿವೆ.</p>
]]></content:encoded>
					
		
		
			</item>
	</channel>
</rss>
