<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Bangalore &#8211; Peepal Media</title>
	<atom:link href="https://peepalmedia.com/tag/bangalore/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 01 Jul 2025 09:11:32 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Bangalore &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಕೊಟ್ಟಿಯೂರು ಜಾತ್ರೆ: ಭಕ್ತಿಯಲ್ಲಿ ಹೊಸ ಟ್ರೆಂಡ್!</title>
		<link>https://peepalmedia.com/kottiyur-festival-that-new-trend-in-devotion/</link>
		
		<dc:creator><![CDATA[Charan Aivarnad]]></dc:creator>
		<pubDate>Tue, 01 Jul 2025 08:06:17 +0000</pubDate>
				<category><![CDATA[ಅಂಕಣ]]></category>
		<category><![CDATA[ಧರ್ಮ- ಸಂಸ್ಕೃತಿ]]></category>
		<category><![CDATA[Akkare Kottiyoor]]></category>
		<category><![CDATA[Akkare Kottiyoor Rituals]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[Hindu Festivals in Kerala]]></category>
		<category><![CDATA[Ikkare Kottiyoor]]></category>
		<category><![CDATA[kananda]]></category>
		<category><![CDATA[karnataka]]></category>
		<category><![CDATA[Kerala Temple Festivals]]></category>
		<category><![CDATA[Kottiyoor Devaswam]]></category>
		<category><![CDATA[Kottiyoor Shiva Temple]]></category>
		<category><![CDATA[Kottiyoor Temple]]></category>
		<category><![CDATA[Kottiyoor Vaishakha Festival]]></category>
		<category><![CDATA[Kottiyoor Vyshakha Mahotsavam]]></category>
		<category><![CDATA[Kottiyoor Yatra]]></category>
		<category><![CDATA[Pilgrimage in Kerala]]></category>
		<category><![CDATA[shabarimala]]></category>
		<category><![CDATA[Traditional Kerala Rituals]]></category>
		<category><![CDATA[Vedic Rituals Kerala]]></category>
		<guid isPermaLink="false">https://peepalmedia.com/?p=61916</guid>

					<description><![CDATA[2025 ರಲ್ಲಿ ಟ್ರೆಂಡಿಂಗ್‌ಗೆ ಬಂದಿರುವ ದೇವಸ್ಥಾನ ಮತ್ತು ಜಾತ್ರೆ ಎಂದರೆ ಉತ್ತರ ಮಲಬಾರು (ಕಣ್ಣೂರಿನ) ಕೊಟ್ಟಿಯೂರು ಶಿವ ದೇವಾಲಯ ಮತ್ತು ಅಲ್ಲಿ ನಡೆಯುವ ಕೊಟ್ಟಿಯೂರು ವೈಶಾಖ ಮಹೋತ್ಸವ. ನಾನು ಸುಮಾರು ಎರಡು ಮೂರು ವರ್ಷಗಳಿಂದ ಈ ದೇವಾಲಯ ಮತ್ತು ಜಾತ್ರೆಯ ವೀಡಿಯೋಗಳನ್ನು ನೋಡುತ್ತಾ ಬಂದಿದ್ದೇನೆ. ಈ ಬಗ್ಗೆ ಆ ಊರಿನಲ್ಲಿರುವ ನನ್ನ ಸ್ನೇಹಿತನ ಜೊತೆಗೆ ಮಾತನಾಡಿದ್ದೇನೆ. ಈ ವರ್ಷ&#160; ಆ ದೇವಾಲಯ ದಡೀರನೇ ಖ್ಯಾತಿಯನ್ನು ಪಡೆಯಿತು. ವರ್ಷಕ್ಕೊಮ್ಮೆ ಅಕ್ಕರೆ ಕೊಟ್ಟಿಯೂರು (ನದಿಯ ಆ ಭಾಗದ ಕೊಟ್ಟಿಯೂರು) ಎಂಬ [&#8230;]]]></description>
										<content:encoded><![CDATA[
<pre class="wp-block-code"><code><em>ಜನರು ಹೊಸ ಹೊಸ ದೇವರನ್ನು, ಭಕ್ತಿಯ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಇಂದು ಜನಪ್ರಿಯವಾಗಿರುವ ದೇವರು ನಾಳೆ ಯಾರಿಗೂ ಬೇಡವಾಗಬಹುದು. ಈಗ ಜನಜಂಗುಳಿಯಿಂದ ತುಂಬಿರುವ ದೇವಾಲಯದಲ್ಲಿ ನಾಳೆ ಅರ್ಚಕ ಮಾತ್ರ ಇರುವ ಕಾಲ ಬರಬಹುದು </em></code></pre>



<p>2025 ರಲ್ಲಿ ಟ್ರೆಂಡಿಂಗ್‌ಗೆ ಬಂದಿರುವ ದೇವಸ್ಥಾನ ಮತ್ತು ಜಾತ್ರೆ ಎಂದರೆ ಉತ್ತರ ಮಲಬಾರು (ಕಣ್ಣೂರಿನ) ಕೊಟ್ಟಿಯೂರು ಶಿವ ದೇವಾಲಯ ಮತ್ತು ಅಲ್ಲಿ ನಡೆಯುವ ಕೊಟ್ಟಿಯೂರು ವೈಶಾಖ ಮಹೋತ್ಸವ. ನಾನು ಸುಮಾರು ಎರಡು ಮೂರು ವರ್ಷಗಳಿಂದ ಈ ದೇವಾಲಯ ಮತ್ತು ಜಾತ್ರೆಯ ವೀಡಿಯೋಗಳನ್ನು ನೋಡುತ್ತಾ ಬಂದಿದ್ದೇನೆ. ಈ ಬಗ್ಗೆ ಆ ಊರಿನಲ್ಲಿರುವ ನನ್ನ ಸ್ನೇಹಿತನ ಜೊತೆಗೆ ಮಾತನಾಡಿದ್ದೇನೆ.</p>



<p>ಈ ವರ್ಷ&nbsp; ಆ ದೇವಾಲಯ ದಡೀರನೇ ಖ್ಯಾತಿಯನ್ನು ಪಡೆಯಿತು. ವರ್ಷಕ್ಕೊಮ್ಮೆ ಅಕ್ಕರೆ ಕೊಟ್ಟಿಯೂರು (ನದಿಯ ಆ ಭಾಗದ ಕೊಟ್ಟಿಯೂರು) ಎಂಬ ಕಾಡಿನಲ್ಲಿ ನಡೆಯುವ ವೈಶಾಖ ಮಹೋತ್ಸವಕ್ಕೆ ಈ ವರ್ಷ ಸಾವಿರ ಸಾವಿರ ಜನರು ಕರ್ನಾಟಕ, ತಮಿಳುನಾಡಿನಿಂದೆಲ್ಲಾ ದಂಡು ದಂಡಾಗಿ ಹೋಗುತ್ತಿದ್ದಾರೆ.</p>



<p>ನನ್ನ ಅಣ್ಣನೊಬ್ಬ ತಾನು ಆ ಜಾತ್ರೆಗೆ ಹೋಗುವುದಾಗಿ, ನನ್ನನ್ನು ಬರುವಂತೆ ಕೇಳಿಕೊಂಡ. ಆತನಿಗೆ ಈ ಜಾತ್ರೆಯ ಬಗ್ಗೆ ಫೇಸ್‌ಬುಕ್‌ನಿಂದ ಗೊತ್ತಾಗಿದ್ದು. ಫೇಸ್‌ಬುಕ್‌, ಇನ್ಸ್ಟಾಗ್ರಾಮಿನಲ್ಲಿ ಈ ಜಾತ್ರೆಯ ವೀಡಿಯೋಗಳು ಹರಿದಾಡುತ್ತಿವೆ. ಹಿಂದೊಮ್ಮೆ ಶಬರಿಮಲೆಗೆ ಹೋದಂತೆ, ಮಲಯಾಳಿಗಳಲ್ಲದವರೂ ಈ ಜಾತ್ರೆಗೆ ಗಾಡಿ ಮಾಡಿಕೊಂಡು ಹೋಗುತ್ತಾರೆ. ಅಲ್ಲಿ ಹೋಗಿ ಫೋಟೋ ತೆಗಿಸಿಕೊಂಡು, ವೀಡಿಯೋ ಮಾಡಿಕೊಂಡು ಅದಕ್ಕೆ ಪ್ರಚಾರವನ್ನು ನೀಡುತ್ತಿದ್ದಾರೆ. ಯೂಟ್ಯೂಬ್‌ ವ್ಲಾಗರ್‌ಗಳು ಕ್ಯಾಮರಾ ಹಿಡಿದುಕೊಂಡು, ಕೇಸರಿ ತೊಟ್ಟು ಜಾತ್ರೆಗೆ ಹೋಗಿ ‘ಕಂಟೆಂಟ್‌ʼ ಮಾಡುತ್ತಿದ್ದಾರೆ.</p>



<p>ಕೊಟ್ಟಿಯೂರಿನಲ್ಲಿರುವ ನನ್ನ ಸ್ನೇಹಿತ ಅನೀಶ್‌ ಕೊಟ್ಟಿಯೂರು ಹೇಳುವಂತೆ, “ಕೊಟ್ಟಿಯೂರಿನ ತುಂಬಾ KL ಗಾಡಿಗಳಿಗಿಂತ KA ಗಾಡಿಗಳೇ ತುಂಬಿ ಹೋಗಿವೆ.”</p>



<p>ಕಣ್ಣೂರಿನ ಕೊಟ್ಟಿಯೂರು ಗ್ರಾಮದಲ್ಲಿ ಎರಡು ದೇವಾಲಯಗಳಿಗೆ, ‘ಬಾವಲಿ ನದಿ’ಯ ಈ ಕಡೆಗೆ ಇರುವ ‘ಇಕ್ಕರೆ ಕೊಟ್ಟಿಯೂರಿನ’ ಶಿವನ್‌ ದೇವಾಲಯ ಮತ್ತು ಅ ಕಡೆ ಇರುವ ‘ಅಕ್ಕರೆ ಕೊಟ್ಟಿಯೂರುʼ ಎಂಬ ವರ್ಷಕ್ಕೊಮ್ಮೆ ವೈಶಾಖ ಮಾಸದಲ್ಲಿ ಮಾತ್ರ ಜನರ ಪ್ರವೇಶಕ್ಕೆ ಅವಕಾಶ ಇರುವ ಶಿವನ ಬನ, ಕಾಡು.</p>


<div class="wp-block-image">
<figure class="aligncenter size-full is-resized"><img fetchpriority="high" decoding="async" width="720" height="405" src="https://peepalmedia.com/wp-content/uploads/2025/07/image.png" alt="" class="wp-image-61917" style="width:482px;height:auto" srcset="https://peepalmedia.com/wp-content/uploads/2025/07/image.png 720w, https://peepalmedia.com/wp-content/uploads/2025/07/image-300x169.png 300w, https://peepalmedia.com/wp-content/uploads/2025/07/image-150x84.png 150w, https://peepalmedia.com/wp-content/uploads/2025/07/image-696x392.png 696w" sizes="(max-width: 720px) 100vw, 720px" /><figcaption class="wp-element-caption"><strong>ಕೊಟ್ಟಿಯೂರು ವೈಶಾಖ ಮಹೋತ್ಸವ</strong></figcaption></figure></div>


<p>ವೈಶಾಖ ಮಹೋತ್ಸಹ ಎನ್ನುವ ಬ್ರಾಹ್ಮಣರು ಅಕ್ಕರೆ ಕೊಟ್ಟಿಯೂರಿನಲ್ಲಿ ನಡೆಸುವ ಯಾಗ ಯಜ್ಞಾದಿಗಳನ್ನು ನಡೆಸುವ ಜಾತ್ರೆಗೆ ದಕ್ಷ ಭ್ರಹ್ಮನ ಮಗಳು, ಶಿವನ ಹೆಂಡತಿ ದಾಕ್ಷಾಯಿಣಿ ಯಾಗದ ಬೆಂಕಿಗೆ ಬೀಳುವ ಕತೆಯಾಗ ದಕ್ಷ ಯಜ್ಞದ ಕತೆಯೊಂದಿಗೆ ತಳುಕು ಹಾಕಿಕೊಂಡಿದೆ. ದಕ್ಷ ಯಜ್ಞ ನಡೆದದ್ದು ಇಲ್ಲಿಯೇ ಎಂದು ಇವರು ನಂಬುತ್ತಾರೆ. ಭಾರತದ ಅಲ್ಲಲ್ಲಿ ಈ ಕತೆಯನ್ನು ತಮ್ಮಲ್ಲೇ ನಡೆದದ್ದಾಗಿ ಹೇಳುತ್ತಾರೆ. ಉತ್ತರಾಖಂಡದ ಹರಿದ್ವಾರದ ಬಳಿ ಇರುವ ಕಂಕಾಳ್‌ನಲ್ಲಿ ದಕ್ಷ ಯಜ್ಞ ನಡೆದದ್ದು ಎಂಬುದು ತುಂಬಾ ಖ್ಯಾತವಾಗಿರುವ ನಂಬಿಕೆ. ಆದರೆ, ಸದ್ಯ ಕೊಟ್ಟಿಯೂರು ಟ್ರೆಂಡಿಂಗ್‌ನಲ್ಲಿ ಇರುವುದರಿಂದ ದಕ್ಷ ಯಜ್ಞ ನಡೆದದ್ದು ಕೊಟ್ಟಿಯೂರಿನಲ್ಲಿಯೇ ಎಂಬ ದೇವಾಲಯದ ಸ್ಥಳ ಪುರಾಣಗಳು ಹೇಳುತ್ತವೆ, ಅದನ್ನೇ ನಮ್ಮ ಯೂಟ್ಯೂಬರ್‌ಗಳೂ ಪ್ರಚಾರ ಮಾಡುತ್ತಾರೆ. ಸ್ಥಳ ಪುರಾಣಗಳು ಕಟ್ಟು ಕತೆಯಷ್ಟೇ, ಆ ಸ್ಥಳದ ಹೆಸರು, ಭೌಗೋಳಿಕತೆ, ಜನ ಸಮುದಾಯವನ್ನು, ಮೂಲ ಆರಾಧನಾ ಪದ್ದತಿಯನ್ನು ಜೋಡಿಸಿ ಹೊಸ ಕತೆಯನ್ನು ಬರೆದು, ಅದನ್ನು ಪುರಾಣದ ಜೊತೆಗೆ ಜೋಡಿಸುವುದು ಅದರಲ್ಲಿರುವ ವೈಶಿಷ್ಟ್ಯ. ಪಾಂಡವರು ವನವಾಸದಲ್ಲಿ ಎಲ್ಲಾ ಊರುಗಳಿಗೆ ಬಂದು ಶಿವಲಿಂಗ ಸ್ಥಾಪಿಸಿದಂತೆ!</p>


<div class="wp-block-image">
<figure class="aligncenter size-full is-resized"><img decoding="async" width="1000" height="664" src="https://peepalmedia.com/wp-content/uploads/2025/07/image-1.png" alt="" class="wp-image-61918" style="width:450px;height:auto" srcset="https://peepalmedia.com/wp-content/uploads/2025/07/image-1.png 1000w, https://peepalmedia.com/wp-content/uploads/2025/07/image-1-300x199.png 300w, https://peepalmedia.com/wp-content/uploads/2025/07/image-1-768x510.png 768w, https://peepalmedia.com/wp-content/uploads/2025/07/image-1-150x100.png 150w, https://peepalmedia.com/wp-content/uploads/2025/07/image-1-696x462.png 696w" sizes="(max-width: 1000px) 100vw, 1000px" /><figcaption class="wp-element-caption"><strong>ಕೊಟ್ಟಿಯೂರು ವೈಶಾಖ ಮಹೋತ್ಸವಕ್ಕೆ ಬಂದಿರುವ ಭಕ್ತರು</strong></figcaption></figure></div>


<p>ಅನೀಶ್‌ ಒಂದು ಕತೆಯನ್ನು ಹೇಳಿದ. ಇದೇ ಕತೆಯನ್ನು ಕೊಟ್ಟಿಯೂರು <a href="https://kottiyoordevaswom.com/mythology.html">ದೇವಾಲಯದ ಸ್ಥಳ ಪುರಾಣದಲ್ಲಿ</a> ಕೂಡ ನೀಡಲಾಗಿದೆ: ಕುರಿಚ್ಯ ಎನ್ನುವ ಕಾಡಿನ ಜನಾಂಗದ ಬೇಟೆಗಾರರು ತಮ್ಮ ಬಾಣವನ್ನು ಹರಿತ ಮಾಡಲು ಕಲ್ಲೊಂದಕ್ಕೆ ಉಜ್ಜುವಾಗ, ಆ ಕಲ್ಲಿನಿಂದ ರಕ್ತ ಬರಲು ಆರಂಭವಾಯ್ತು! ಇದನ್ನು ಅವರು ಅಲ್ಲಿನ ಬ್ರಾಹ್ಮಣ ತರವಾಡು ಪಡಿಂಗಿಟ್ಟ ನಂಬೂತಿರಿ ಇಲ್ಲಂಗೆ ಬಂದು ಹೇಳುತ್ತಾರೆ. ಅವರು ಅದನ್ನು ಮನತನ ಗ್ರಾಮದ ನಾಯರ್‌ಗಳಿಗೆ ತಿಳಿಸಲು ಆ ಬೇಡರಿಗೆ ಹೇಳುತ್ತಾರೆ. ಹೀಗೆ ಅವರು ಸ್ವಯಂಭೂ ಲಿಂಗವನ್ನು ಪತ್ತೆ ಮಾಡುತ್ತಾರೆ.</p>



<p>ಇದು ಸ್ಥಳ ಪುರಾಣಗಳಲ್ಲಿ ಕಾಣುವ ಸಾಮಾನ್ಯವಾದ ಕತೆ. ಇದೇ ರೀತಿಯ ಕತೆಯನ್ನು ಅನೇಕ ದೇವಾಲಯಗಳಲ್ಲಿ ನೋಡಬಹುದು. ಮದರು ಎಂಬ ದಲಿತ ಮಹಿಳೆ ಕೆಲಸ ಮಾಡುವಾಗ, ಆಕೆಯ ಕತ್ತಿಯು ಕಲ್ಲೊಂದಕ್ಕೆ ತಾಗಿ, ಅದರಿಂದ ರಕ್ತ ಬಂತು. ಆ ಮದುರುವಿನಿಂದ ಪತ್ತೆಯಾದ ಲಿಂಗವೇ <a href="https://madhurtemple.in/history/">ಮದೂರು ಮದನಂತೇಶ್ವರ</a>! ದಲಿತರಿಗೆ ಶಿವಲಿಂಗ ಸಿಗುವ ಐತಿಹ್ಯವೆಂದರೆ, ಮೂಲದಲ್ಲಿದ್ದ ಸಮುದಾಯಗಳ ಆರಾಧನಾ ಕ್ಷೇತ್ರಗಳನ್ನೇ ವೈದಿಕ ಶಿವಸ್ಥಾನಗಳಾಗಿ ಪರಿವರ್ತನೆಗೊಂಡ ಕತೆ. ಇಲ್ಲವೇ, ಬ್ರಾಹ್ಮಣೇತರ ಪೂಜಾರಿಗಳು ಆರಾಧಿಸಿಕೊಂಡು ಬರುತ್ತಿದ್ದ ದೇವಾಲಯಗಳು ವೈದಿಕ ಆರಾಧನೆಗೆ ಒಳಪಟ್ಟ ಸಂಗತಿಯನ್ನು ಈ ಕತೆಗಳು ಹೇಳುತ್ತವೆ.</p>



<p>ಕೊಟ್ಟಿಯೂರಿನ ಬಗ್ಗೆ ಬ್ರಿಟೀಷ್‌ ಮಾನವಶಾಸ್ತ್ರಜ್ಞ ಮತ್ತು ಪುರಾತತ್ವಶಾಸ್ತ್ರಜ್ಷ ಫ್ರೆಡ್ರಿಕ್ ಫಾಸೆಟ್ ಬರೆದಿರುವ “<a href="https://archive.org/details/in.ernet.dli.2015.213414/page/n93/mode/2up?q=Kottidr">ದಿ ನಾಯರ್ಸ್‌ ಆಫ್ ಮಲಬಾರ್</a>”‌ ಪುಸ್ತಕದಲ್ಲಿ ಕೆಲವು ಆಸಕ್ತಿಕರ ಸಂಗತಿಗಳು ದಾಖಲಾಗಿವೆ.</p>



<p>“ನಿಜವಾದ ಮಲಯಾಳಿ ಜಾತ್ರೆಯೆಂದರೆ ಉತ್ತರ ಮಲಬಾರಿನ ಕೊಟ್ಟಿಯೋರ್‌ನಲ್ಲಿ ನಡೆಯುವ ಜಾತ್ರೆ. ಅದು 3,000 ರಿಂದ 5,000 ಅಡಿ ಎತ್ತರದ ವೈನಾಡ್ ಬೆಟ್ಟಗಳ ತಪ್ಪಲಿನಲ್ಲಿರುವ ಕಾಡಿನಲ್ಲಿ ನಡೆಯುತ್ತದೆ. ಇದನ್ನು ಜುಲೈನಲ್ಲಿ ಮಾನ್ಸೂನ್ ಮಳೆ ಉತ್ತುಂಗದಲ್ಲಿದ್ದಾಗ ನಡೆಸಲಾಗುತ್ತದೆ. ಜುಲೈನಲ್ಲಿ ಕೊಟ್ಟಿಯೋರ್‌ನಲ್ಲಿ ಸರಾಸರಿ ಮಳೆ ಕನಿಷ್ಠ 60 ಇಂಚು ಇರಬಹುದು, ಆದ್ದರಿಂದ ಭಕ್ತರು ಇಲ್ಲಿ ಒಳ್ಳೆಯ ಮಳೆಯನ್ನು ನೋಡುತ್ತಾರೆ. ಇದು ಕೊಟ್ಟಿಯೋರ್‌ನಲ್ಲಿ ಪರಸ್ಪರ ಬರೆಯದ ಮೇಲು ಮತ್ತು ಕೀಳು ಜಾತಿಗಳ ಜಾತ್ರೆ. ಇಲ್ಲಿಗೆ ನಾಯರ್‌ಗಳು ಮೊದಲು ಹೋಗುತ್ತಾರೆ, ಕೆಲವು ದಿನಗಳ ನಂತರ ತೀಯಾಗಳು ಹೋಗುತ್ತಾರೆ, ಹೀಗೆ ಮುಂದುವರಿಯುತ್ತದೆ. ಇದರ ಒಂದು ಕುತೂಹಲಕಾರಿ ವೈಶಿಷ್ಟ್ಯವೆಂದರೆ ಇದಕ್ಕೆ ಹೋಗುವ ಭಕ್ತರು ಗದ್ದಲ ಎಬ್ಬಿಸಿಕೊಂಡು ಹೋಗುತ್ತಾರೆ. ದಾರಿಯಲ್ಲಿ ಸಿಕ್ಕವರನ್ನು ಪರಸ್ಪರ ಅತ್ಯಂತ ಕೆಟ್ಟ ಮತ್ತು ಕೊಳಕು ಪದಗಳಲ್ಲಿ ನಿಂದಿಸುತ್ತಾರೆ. ಅದನ್ನು ತಮ್ಮ ಹಕ್ಕು ಎಂದು ಭಾವಿಸುತ್ತಾರೆ. ಬಹುಶಃ ಕೆಲವು ದಿನಗಳ ವರೆಗೆ ನಡೆಯುವ ಈ ಮೆರವಣಿಗೆಯಲ್ಲಿ, ಜನರು ಅತಿಯಾದ ಉತ್ಸಾಹದಿಂದ ಹೃದಯಕ್ಕೆ ತೃಪ್ತಿಯಾಗುವಷ್ಟು ನಿಂದಿಸುತ್ತಾರೆ. ಮಾತ್ರವಲ್ಲದೆ, ರಸ್ತೆಯ ಉದ್ದಕ್ಕೂ ಸಿಗುವ ವ್ಯಕ್ತಿ ಮತ್ತು ವಸ್ತುಗಳನ್ನು ಹಿಂಸಿಸುತ್ತಾರೆ. ಅಲ್ಲಿಂದ ಹಿಂತಿರುಗುವಾಗ ಶಾಂತವಾಗಿ ಬರುತ್ತಾರೆ.”</p>



<p>ಭಕ್ತರು ಈ ಪರಿಯಾಗಿ ಭಾವಾವೇಶದಿಂದ, ಹಿಂಸಾತ್ಮಕವಾಗಿ ಜಾತ್ರೆಗೆ ಹೋಗುವುದನ್ನು, ಅವರು ಬಳಸುವ ಭಾಷೆಯನ್ನು ಅರ್ಥ ಮಾಡಿಕೊಳ್ಳಲು &nbsp;ಎಫ್ ಫಾಸೆಟ್‌ಗೆ ಆಗುವುದಿಲ್ಲ. ಆತ ಕೊಟ್ಟಿಯೂರಿನಲ್ಲಿ ದೇವರನ್ನು ನೋಡಲು ಬರುವ ಭಕ್ತರು ದೇವರನ್ನೂ, ತಮ್ಮೊಂದಿಗೆ ಇರುವ ಇತರ ಭಕ್ತರನ್ನೂ ಕೆಟ್ಟದಾಗಿ ನಿಂದಿಸುವುದನ್ನು ನೋಡಿ, ಇಂತಹದ್ದೇ ಆಚರಣೆ ತಿರುಪತಿಯ ಗಂಗಮ್ಮ ಉತ್ಸವದಲ್ಲಿಯೂ ನೋಡಿರುವುದಾಗಿ ಹೇಳುತ್ತಾನೆ.</p>



<p>ಪ್ರತಿ ವರ್ಷ ಮೇ ತಿಂಗಳ ಮೊದಲ ಮತ್ತು ಎರಡನೇ ವಾರಗಳ ನಡುವೆ ಬರುವ ತಿರುಪತಿಯ ಗಂಗಮ್ಮ ಜಾತ್ರೆಯಲ್ಲಿಯೂ ಈ ತೆರನಾದ ಭಕ್ತಿಯನ್ನು ಜಾತ್ರೆಗೆ ಬರುವ ಭಕ್ತರು ತೋರಿಸುತ್ತಾರೆ. ಗಂಗಮ್ಮನನ್ನು ತಿರುಪತಿ ಬಾಲಾಜಿ (ವೆಂಕಟೇಶ್ವರನ) ಸಹೋದರಿ ಎಂದು ನಂಬಲಾಗುತ್ತದೆ. ಈ ಜಾತ್ರೆಯಲ್ಲಿ ದೇವಿಯನ್ನು ದೇವಿಯನ್ನು ಅಶ್ಲೀಲವೆಂದು ಪರಿಗಣಿಸಲಾಗುವ ಭಾಷೆಯಲ್ಲಿ ನಿಂದಿಸಲಾಗುತ್ತದೆ. &#8220;ಗಂಗಮ್ಮ! ನಿನ್ನದು ಬುಟ್ಟಿಯಷ್ಟು ದೊಡ್ಡದಾದ… (ಯೋನಿ)&#8221; ಎಂಬಂತ <a href="https://archive.org/details/in.ernet.dli.2015.213414/page/n93/mode/2up?q=Kottidr">ನಿಂದಾಸ್ತುತಿಯನ್ನು</a> ಭಕ್ತರು ಮಾಡುತ್ತಾರೆ. ಮೆರವಣಿಗೆ ದೇವಾಲಯಕ್ಕೆ ಬರುತ್ತಿದ್ದಂತೆ ಒಬ್ಬರನ್ನೊಬ್ಬರು ಮೀರಿಸಬೇಕು ಎಂಬಂತೆ ನಿಂದಾಸ್ತುತಿ ಮಾಡುತ್ತಾರೆ. &nbsp;</p>



<p>ಇದನ್ನು ಅವರು ಹರಕೆಯಂತೆ ಮಾಡುತ್ತಾರೆ. ಕುಣಿಯುತ್ತಾ, ಲೈಂಗಿಕ ಸನ್ನೆಗಳನ್ನು ಮಾಡುತ್ತಾ, ಆವೇಷಗೊಳ್ಳುತ್ತಾ ತಮ್ಮ ಹರಕೆಯನ್ನು ತೀರಿಸುತ್ತಾರೆ. ಕೊನೆಗೆ ಪ್ರಜ್ಞೆಯನ್ನು ಕಳೆದುಕೊಂಡು ಬೀಳುತ್ತಾರೆ. ತನ್ನ ಮಗನ ಅನಾರೋಗ್ಯಕ್ಕೆ ತಾಯಿಯೂ ಇಂತಹ ಹರಕೆಯನ್ನು ಕಟ್ಟಿಕೊಳ್ಳುತ್ತಾಳೆ.</p>



<p>ನಾನು ನೋಡಿದ ಇಂತಹ ಒಂದು ಜಾತ್ರೆಯೆಂದರೆ, ಕೋಡಂಗಲ್ಲೂರಿನ ಭಗವತಿಯ ಭರಣಿ ಜಾತ್ರೆ. ಇದರಲ್ಲಿ ಸಾವಿರಾರು ಮಂದಿ ಮಹಿಳೆಯರು, ಪುರುಷರು, ಮಂಗಳಮುಖಿಯರು ಗುಂಪು ಗುಂಪಾಗಿ ಕೋಲಾಟವಾಡುತ್ತಾ ಭದ್ರಕಾಳಿಯನ್ನು ಲೈಂಗಿಕ ಪರಿಭಾಷೆಗಳಿಂದ ನಿಂದಿಸುತ್ತಾರೆ. ಇದಕ್ಕೆ <a href="https://youtu.be/ZqXWl8CF3wU?si=83xqS_9aLnLMm_JN">ಭರಣಿ ಪಾಟ್ಟ್‌</a> ಎಂದು ಕರೆಯುತ್ತಾರೆ. ಇದಕ್ಕಾಗಿ ಅವರು ಹಾಡುಗಳನ್ನು ಕಟ್ಟುತ್ತಾರೆ. “ಕೋಡಂಗಲ್ಲೂರಮ್ಮನಿಗೆ……ಮಾಡಬೇಕೆಂದರೆ…..ಧ್ವಜಮರದಂತ…..” ಇಂತಹ ಹಾಡುಗಳನ್ನು ಕಟ್ಟಿ ಹಾಡುತ್ತಾರೆ. ರಸ್ತೆಯಲ್ಲಿ ಕಾವಲು ಕಾಯುವ ಪೋಲೀಸನ್ನೂ ಬಿಡುವುದಿಲ್ಲ. ಅನೇಕ ಬೆಳಚ್ಚಪಾಡ ಗಂಡಸರು, ಹೆಂಗಸರು ಕೈಯಲ್ಲಿ ಗಗ್ಗರ (ಚಿಲಂಬು) ಮತ್ತು ಕಡ್ಸಲೆ (ಕತ್ತಿ) ಹಿಡಿದು ರಕ್ತಸಿಕ್ತವಾಗಿ ಆವೇಷಗೊಂಡು ಕೋಡಂಗಲ್ಲೂರು ಕ್ಷೇತ್ರದ ಸುತ್ತ ಓಡುತ್ತಾರೆ.</p>


<div class="wp-block-image">
<figure class="aligncenter size-large is-resized"><img decoding="async" width="1024" height="637" src="https://peepalmedia.com/wp-content/uploads/2025/07/image-4-1024x637.png" alt="" class="wp-image-61923" style="width:496px;height:auto" srcset="https://peepalmedia.com/wp-content/uploads/2025/07/image-4-1024x637.png 1024w, https://peepalmedia.com/wp-content/uploads/2025/07/image-4-300x187.png 300w, https://peepalmedia.com/wp-content/uploads/2025/07/image-4-768x477.png 768w, https://peepalmedia.com/wp-content/uploads/2025/07/image-4-150x93.png 150w, https://peepalmedia.com/wp-content/uploads/2025/07/image-4-696x433.png 696w, https://peepalmedia.com/wp-content/uploads/2025/07/image-4-1068x664.png 1068w, https://peepalmedia.com/wp-content/uploads/2025/07/image-4.png 1200w" sizes="(max-width: 1024px) 100vw, 1024px" /><figcaption class="wp-element-caption"><strong>ಕೋಡಂಗಲ್ಲೂರು ಭರಣಿ ಜಾತ್ರೆ</strong></figcaption></figure></div>


<p>ಈಗ ಸದ್ಯ ಟ್ರೆಂಡಿಂಗ್‌ನಲ್ಲಿ ಇರುವ ಕೊಟ್ಟಿಯೂರು ವೈಶಾಖ ಜಾತ್ರೆಯಲ್ಲಿಯೂ ಇಂತಹ ಆಚರಣೆಗಳಿದ್ದವು ಎಂದು ಫಾಸೆಟ್‌ ದಾಖಲಿಸಿದ್ದಾನೆ. 1894 ರಲ್ಲಿ ಫ್ರೆಡ್ರಿಕ್ ಫಾಸೆಟ್ ಕಂಡದ್ದೇನು ಎನ್ನುವುದನ್ನು ನೋಡೋಣ. ಅಲ್ಲಿ ಚೌಕಾಕಾರದ ಹುಲ್ಲಿನ ಕಟ್ಟಡ, ಮಧ್ಯದಲ್ಲಿ ದೇವಾಲಯ. ಜನರು ದೇವರನ್ನು ಪೆರುಮಾಳ್‌ (ಅಥವಾ ಪೆರುಮಾಳ್‌ ಈಶ್ವರ) ಎಂದು ಕರೆಯುತ್ತಾರೆ. (ಇದು ಇಕ್ಕರೆ ಕೊಟ್ಟಿಯೂರು ಶಿವ ದೇವಾಲಯ) ಆದರೆ ಅದರ ಒಳಗೆ ಏನಿದೆ ಎನ್ನುವುದನ್ನು ನೋಡಲು ಫಾಸೆಟ್‌ಗೆ ಅನುಮತಿ ಕೊಡಲಿಲ್ಲ. ಅವನು ಅಲ್ಲಿನ ಕೆಲವು ನಂಬೂತಿರಿ ಪುರೋಹಿತರ ಜೊತೆಗೆ ಮಾತಿಗಿಳಿದ. ಅವರು ಆ ಹಬ್ಬದ ದಿನಗಳಲ್ಲಿ ಆ ಕಡೆಯ ಕಾಡಿನಲ್ಲಿ ಒಂಟಿಯಾಗಿರಬೇಕು ಎಂದು ಹೇಳಿದರು. ಅವರು ನೀಡಿದ ಉಪಹಾರ, ಬೆಣ್ಣೆ-ಹಾಲು ಮತ್ತು ಸಕ್ಕರೆಯನ್ನು ಕೃತಜ್ಞತೆಯಿಂದ ಸ್ವೀಕರಿಸಿದ. ನಂಬೂತಿರಿಗಳು, ಬಹಳ ಅತ್ಯಾಧುನಿಕ ವ್ಯಕ್ತಿಗಳು ಮತ್ತು ಮಡಿ ಮೈಲಿಗೆ ಪಾಲಿಸುತ್ತಿದ್ದರು. ಹಾಲು ಮತ್ತು ಸಕ್ಕರೆಯನ್ನು ನೆಲದ ಮೇಲೆ ಇರಿಸಿ ಫಾಸೆಟ್‌ನನ್ನು ಆಹ್ವಾನಿಸಿದರು. ಫಾಸೆಟ್‌ನ ನಾಯಿಗೆ ತಿನ್ನಲು ಅವರು ದೊಡ್ಡ ತೆಂಗಿನಕಾಯಿಯ ತುಂಡನ್ನು ಎಸೆದರು.</p>



<p>ಫಾಸೆಟ್‌ ಅಲ್ಲಿಂದ ಅಕ್ಕರೆ ಕೊಟ್ಟಿಯೂರಿನ ಕಾಡಿನ ಕ್ಷೇತ್ರಕ್ಕೆ ಹೋಗುತ್ತಾನೆ. ಜಾತ್ರೆಯ ಸಮಯದ ಅಲ್ಲದ ಕಾರಣ, ಉಳಿದ ದಿನಗಳಲ್ಲಿ ಅಲ್ಲಿಗೆ ಹೋಗಲು ಜನ ಹೆದರುತ್ತಾರೆ. ನನ್ನ ಸ್ನೇಹಿತ ಅನೀಶ್‌ ಹೇಳುವಂತೆ, ಅವನ ಅಜ್ಜನಿಗೆ, ಅಪ್ಪನಿಗೆ ಬೇಟೆಗೆ ಕಾಡಿಗೆ ಹೋಗುವ ಸಮಯದಲ್ಲಿ ಆ ಕಾಡಿನ ಪರಿಸರದಲ್ಲಿ ಏನೇನೋ ಕಂಡುಬಂದಿತ್ತು.</p>



<p>ಫಾಸೆಟ್‌ ಜೊತೆಗೆ ನಾಯರ್‌ ಮತ್ತು ಕುರಿಚ್ಚನ್‌ ಇದ್ದರು. ಅವರಿಗೆ ನದಿಯನ್ನು ದಾಟಿ ಆ ಕಾಡಿಗೆ ಹೋಗಲು ಭಯವಿತ್ತು. ಅಲ್ಲಿಗೆ ಉಳಿದ ದಿನಗಳಲ್ಲಿ ಹೋಗುವವರು ಸಾಯುತ್ತಾರೆ ಎಂಬ ನಂಬಿಕೆ ಇತ್ತು. “ನಾವು ಆ ಪವಿತ್ರ ಸ್ಥಳವನ್ನು ತಲುಪಲು ಮೊಣಕಾಲು ಮಳುಗುವಷ್ಟು ನೀರು ಇರುವ, ಸುಮಾರು 30 ಗಜ ಅಗಲದ ಸಣ್ಣ ನದಿಯ ಮೂಲಕ ನಡೆದೆವು. &nbsp;ನಮ್ಮೊಂದಿಗೆ ಇದ್ದ ನಾಯರ್‌ ಮತ್ತು ಕುರಿಚ್ಚನ್‌ ಮುಖದಲ್ಲಿ ಆತಂಕವಿತ್ತು. ಅವರು ನಮ್ಮೊಂದಿಗೆ ನದಿ ದಾಟಲು ಧೈರ್ಯ ಮಾಡಲಿಲ್ಲ,” ಎನ್ನುತ್ತಾನೆ ಫಾಸೆಟ್.‌</p>



<p>ಈ ಕಾಡಿಗೆ ಹೋಗುವ ತನ್ನ ಸಾಹಸವನ್ನು ವಿವರಿಸುತ್ತಾ “ಎವ್ರಿಡೈಸ್‌ನನ್ನು ಹುಡುಕಲು ಅಧೋಲೋಕಕ್ಕೆ ಹೋದ ಓರ್ಫಿಯಸ್, ನರಕದೊಳಗೆ ಪ್ರವೇಶಿಸಲು ಹೊರಟ ಡಾಂಟೆಯೂ” ಇಷ್ಟು ಭಯಾನಕ ಪ್ರಯಾಣವನ್ನು ಕೈಗೊಂಡಿರಲಿಲ್ಲ ಎಂದು ಹೇಳುತ್ತಾನೆ. ಪವಿತ್ರ ಸ್ಥಳವನ್ನು ತಲುಪಿದಾಗ, ಅದೊಂದು ಹುಲ್ಲು ಪ್ರದೇಶ. ಹಬ್ಬದ ಸಮಯದಲ್ಲಿ ಅದು ನೀರಿನಿಂದ ಮುಚ್ಚಿರುತ್ತದೆ. ಮಧ್ಯದಲ್ಲಿ 12 ಅಡಿ ವ್ಯಾಸದ ರಾಶಿ ಹಾಕಿದ ಕಲ್ಲುಗಳ ವೃತ್ತವಿದೆ. ಕಲ್ಲುಗಳ ರಾಶಿಯ ಮಧ್ಯದಲ್ಲಿ ಒಂದು ಒರಟಾದ ಲಿಂಗ.</p>


<div class="wp-block-image">
<figure class="aligncenter size-full is-resized"><img loading="lazy" decoding="async" width="640" height="480" src="https://peepalmedia.com/wp-content/uploads/2025/07/image-2.png" alt="" class="wp-image-61919" style="width:416px;height:auto" srcset="https://peepalmedia.com/wp-content/uploads/2025/07/image-2.png 640w, https://peepalmedia.com/wp-content/uploads/2025/07/image-2-300x225.png 300w, https://peepalmedia.com/wp-content/uploads/2025/07/image-2-150x113.png 150w" sizes="auto, (max-width: 640px) 100vw, 640px" /><figcaption class="wp-element-caption"><strong>ದೇವರ ಸಾನಿಧ್ಯ</strong></figcaption></figure></div>


<p>ನಿಧಿಯನ್ನು ಹುಡುಕುವ ಯಾರೋ ಆ ಲಿಂಗವನ್ನು ಮುರಿದಿದ್ದರು ಎಂದು ಫಾಸೆಟ್‌ ಹೇಳುತ್ತಾನೆ. ಲಿಂಗದ ವೃತ್ತದಿಂದ ಪೂರ್ವ ದಿಕ್ಕಿನಲ್ಲಿ ಒಂದು ಉದ್ದವಾದ ಶೆಡ್ ಇದೆ, ಅದರ ಮಧ್ಯದಲ್ಲಿ ಇಟ್ಟಿಗೆಯ ಉದ್ದವಾದ ಎತ್ತರದ ವೇದಿಕೆ ಇದೆ. ಇದನ್ನು ಅಡುಗೆ ಮಾಡುವ ಸ್ಥಳವಾಗಿ ಬಳಸಲಾಗುತ್ತಿತ್ತು. ಹಬ್ಬದ ಸಮಯದಲ್ಲಿ ಜನರು ತಂಗಿದ್ದ ಹುಲ್ಲಿನ ಶೆಡ್‌ಗಳು ಸಹ ಇದ್ದವು. ಹುಲ್ಲು ಮತ್ತು ಕಳೆ ಗಿಡಗಳು ಎತ್ತರವಾಗಿ ಬೆಳೆದಿದ್ದವು. ಶೆಡ್‌ಗಳು ಶಿಥಿಲಗೊಂಡಿದ್ದವು, ತುಂಬಾ ವರ್ಷಗಳಿಂದ ಬಳಸದಿರುವಂತೆ ಕಾಣುತ್ತಿದ್ದವು.</p>



<p>ಜಾತ್ರೆಗೆ ಹೋಗುವ ಎಲ್ಲರೂ ತಮ್ಮೊಂದಿಗೆ ಕಾಣಿಗೆಯನ್ನು ತೆಗೆದುಕೊಂಡು ಹೋಗುತ್ತಾರೆ. ತೀಯಾಗಳು ಎಳೆನೀರು ತೆಗೆದುಕೊಂಡು ಹೋಗುತ್ತಾರೆ. “ನಾಯರ್‌ಗಳು ಏನು ತೆಗೆದುಕೊಂಡು ಹೋಗುತ್ತಾರೆ,” ಎಂಬುದು ತಿಳಿದಿಲ್ಲ ಎಂದು ಫಾಸೆಟ್‌ ಹೇಳುತ್ತಾನೆ. ಜಾತ್ರೆಗೆ ಹೋದವರು ತಾಳೆ ಮರದ ಮಡಲನ್ನು ಸೀಳಿ ಮಾಡಿದ ಚವಳವನ್ನು ತೆಗೆದುಕೊಂಡು ಹೋಗುತ್ತಾರೆ. (ಈಗ ಬಿದಿರನ್ನು ಸೀಳಿ ಮಾಡಿದ ಚವಳವನ್ನು ತೆಗೆದುಕೊಂಡು ಹೋಗುತ್ತಾರೆ, ಅವನ್ನು ಕೊಟ್ಟಿಯೂರಿನಲ್ಲಿ ಮಾರಾಟವೂ ಮಾಡುತ್ತಾರೆ)</p>


<div class="wp-block-image">
<figure class="aligncenter size-full is-resized"><img loading="lazy" decoding="async" width="640" height="480" src="https://peepalmedia.com/wp-content/uploads/2025/07/image-3.png" alt="" class="wp-image-61921" style="width:425px;height:auto" srcset="https://peepalmedia.com/wp-content/uploads/2025/07/image-3.png 640w, https://peepalmedia.com/wp-content/uploads/2025/07/image-3-300x225.png 300w, https://peepalmedia.com/wp-content/uploads/2025/07/image-3-150x113.png 150w" sizes="auto, (max-width: 640px) 100vw, 640px" /><figcaption class="wp-element-caption"><strong>ಮಾರಾಟಕ್ಕೆ ಇಟ್ಟಿರುವ ಚವಳ</strong></figcaption></figure></div>


<p>ಸಾಮಾನ್ಯವಾಗಿ ವೃತ್ತಾಕಾರವಾಗಿ ಕಲ್ಲುಗಳನ್ನು ಜೋಡಿಸಿ, ಅದರ ಒಳಗೆ ಒಂದು ಕಲ್ಲನ್ನು ಇಡುವುದು, ಅಥವಾ ಕಲ್ಲಿನ ಗೂಡಿನಂತಹ ರಚನೆ ಇಡುವುದು ಪ್ರಾಚೀನ ಸಮಾಧಿಗಳ ಲಕ್ಷಣ. ಕ್ರಿಸ್ತಪೂರ್ವ 800 ರ ಹಿಂದಿನ ವಿಶಿಷ್ಟ ಮೆಗಾಲಿಥಿಕ್ ಸಮಾಧಿಯೊಂದು <a href="https://www.daijiworld.com/news/newsDisplay?newsID=952142">ದಕ್ಷಿಣ ಕನ್ನಡದ ಕಡಬ ತಾಲೂಕಿನ ರಾಮಕುಂಜದಲ್ಲಿ</a> ಪತ್ತೆಯಾಗಿತ್ತು. ಇಂತಹ ಸಮಾಧಿಗಳನ್ನು ಕುಕ್ಕೆ ಸುಬ್ರಹ್ಮಣ್ಯದ ಕುಮಾರ ಪರ್ವತದಲ್ಲೂ ನೋಡಿದ್ದೇನೆ.</p>


<div class="wp-block-image">
<figure class="aligncenter size-full is-resized"><img loading="lazy" decoding="async" width="960" height="720" src="https://peepalmedia.com/wp-content/uploads/2025/07/500740960_3926185610931242_594187518192911483_n.jpg" alt="" class="wp-image-61924" style="width:543px;height:auto" srcset="https://peepalmedia.com/wp-content/uploads/2025/07/500740960_3926185610931242_594187518192911483_n.jpg 960w, https://peepalmedia.com/wp-content/uploads/2025/07/500740960_3926185610931242_594187518192911483_n-300x225.jpg 300w, https://peepalmedia.com/wp-content/uploads/2025/07/500740960_3926185610931242_594187518192911483_n-768x576.jpg 768w, https://peepalmedia.com/wp-content/uploads/2025/07/500740960_3926185610931242_594187518192911483_n-150x113.jpg 150w, https://peepalmedia.com/wp-content/uploads/2025/07/500740960_3926185610931242_594187518192911483_n-696x522.jpg 696w" sizes="auto, (max-width: 960px) 100vw, 960px" /><figcaption class="wp-element-caption"><strong>ಕುಮಾರ ಪರ್ವತದಲ್ಲಿರುವ ಸಮಾಧಿಗಳಲ್ಲಿ ಒಂದು</strong></figcaption></figure></div>


<p>ಇಂತಹ ಸಮಾಧಿಗಳನ್ನು ಜನರು ಆರಾಧಿಸುತ್ತಾ ಬಂದಿದ್ದಾರೆ. ಕಾಲಾಂತರದಲ್ಲಿ ಇಂತಹ ಸಮಾಧಿಗಳ ಮೇಲೆಯೇ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಸಾಮಾನ್ಯವಾಗಿ ಬೌದ್ಧ ಸ್ತೂಪಗಳ ಉತ್ಖನನಗಳನ್ನು ಮಾಡುವಾಗ, ಮಣ್ಣಿನ ಅಡಿಯಲ್ಲಿ ಪ್ರಾಚೀನ ಸಮಾಧಿಗಳು ಕಂಡುಬಂದಿರುವುದನ್ನು ನಾವು ನೋಡಿದ್ದೇವೆ. ಕೊಟ್ಟಿಯೂರಿನ ಆರಾಧನೆಯೂ ಇಂತಹ ಕ್ಷೇತ್ರಗಳಲ್ಲೇ ನಡೆಯುತ್ತದೆ. ಬುಡಕಟ್ಟು ಜನರು ತಮ್ಮ ಹಿರಿಯರ ಸಮಾಧಿಗಳಲ್ಲಿ ನಡೆಸುತ್ತಿದ್ದ ಆರಾಧನೆಗಳು ವೈದಿಕ ಶೈವ ದೇವಾಲಯವಾಗಿ ಬದಲಾಗಿರಬಹುದು.</p>



<p>ಇದಿಷ್ಟು, ಕೊಟ್ಟಿಯೂರಿನ ಬಗ್ಗೆ.</p>



<p>ಕೊಟ್ಟಿಯೂರಿಗೆ ಸದ್ಯ ಜನರು ಶಬರಿಮಲೆಗೆ ಹೋದಂತೆ ಯಾತ್ರೆ ಹೋಗಲು ಆರಂಭಿಸಿದ್ದಾರೆ. 1940 ರ ದಶಕದಲ್ಲಿ, ಶಬರಿಮಲೆ ಅಯ್ಯಪ್ಪ ದೇವಾಲಯವು ಕೇರಳದ ಹೊರಗಿನ ಪ್ರದೇಶಗಳಲ್ಲಿ ವ್ಯಾಪಕವಾದ ಪ್ರಚಾರದಲ್ಲಿರಲಿಲ್ಲ. 1980 ರ ದಶಕದಲ್ಲಿ ರಸ್ತೆ ಮತ್ತು ರೈಲು ಸಂಪರ್ಕ ಬಂದ ನಂತರ, ದೇವಾಲಯವು ಭಾರಿ ಜನಪ್ರಿಯತೆಯನ್ನು ಗಳಿಸಿತು. ತಮಿಳುನಾಡು ಮತ್ತು ಕರ್ನಾಟಕದ ಭಕ್ತರು ದಂಡು ದಂಡಾಗಿ ಬರಲು ಆರಂಭಿಸಿದರು. ಸಿನೇಮಾ ನಟರು, ಸಲಬ್ರೆಟಿಗಳು ಬರಲು ಆರಂಭಿಸಿದರು. ಇದಕ್ಕೆ ಮುಖ್ಯವಾದ ಕಾರಣ, 1975 ರ ಮಲಯಾಳಂ ಚಲನಚಿತ್ರ ಸ್ವಾಮಿ ಅಯ್ಯಪ್ಪನ್. ಈ ಚಲನಚಿತ್ರದ ಜನಪ್ರಿಯತೆಯ ನಂತರ ದಕ್ಷಿಣ ಭಾರತದ ಇತರ ಭಾಷೆಗಳಲ್ಲೂ ಅಯ್ಯಪ್ಪನ ಕತೆ ಹೇಳುವ ಸಿನೇಮಾಗಳು ಬಂದವು. ಟಿವಿ ಕಾರ್ಯಕ್ರಮಗಳು, ಭಕ್ತಿಗೀತೆಗಳು ಮತ್ತು ಭಜನೆಗಳ ಮೂಲಕ ಪ್ರಚಾರ ಪಡೆಯಿತು. ಶಬರಿ ಮಲೆಯ ಜ್ಯೋತಿಯ ಬಗ್ಗೆ ಅತಿಮಾನುಷ ಪರಿಕಲ್ಪನೆಗಳು ಹುಟ್ಟಿಕೊಂಡವು, ಸದ್ಯ ಇದು ಮನುಷ್ಯರ ಕೆಲಸ ಎಂಬುದು ಸಾಬೀತಾಗಿದೆ.</p>



<p>ಬಾಬಾ ಬುಡನ್‌ ಗಿರಿ – ದತ್ತ ಪೀಠದ ವಿವಾದದ ಸಮಯದಲ್ಲಿ, ಹಿಂದುತ್ವವಾದಿ ಸಂಘಟನೆಗಳು ಮತ್ತು ಕರ್ನಾಟಕ ಬಿಜೆಪಿ ಶಬರಿಮಲೆಯ ಭಕ್ತರು ವ್ರತ ಹಿಡಿಯುವಂತೆ ‘ದತ್ತ ಮಾಲೆʼ ಎಂಬ ಮಾಲೆ ಧರಿಸಿ, ಯಾತ್ರೆ ಹೋಗುವ ಹೊಸ ಸಂಸ್ಕೃತಿಯನ್ನು ತಂದರು. ಇದರ ಜನಪ್ರಿಯತೆ ಈಗ ಕಡಿಮೆಯಾಗುತ್ತಿದೆ.</p>



<p>ಸದ್ಯ ಕರ್ನಾಟಕದಲ್ಲಿ ಕೊರಗಜ್ಜ ಎಂಬ ತುಳುನಾಡಿನ ದೈವ ಅತ್ಯಂತ ಜನಪ್ರಿಯತೆಯನ್ನು ಪಡೆದಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಕಟ್ಟೆಗಳನ್ನು ಕಟ್ಟಿ ಕೊರಗಜ್ಜನ ಹೆಸರಿನಲ್ಲಿ ಒಳ್ಳೆಯ ಸಂಪಾದನೆಯನ್ನು ಮಾಡುವ ಪ್ರವೃತ್ತಿಯೂ ಬೆಳೆದಿದ್ದು, ಇದಕ್ಕೆ ಅನೇಕ ದೈವಭಕ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಒಂದು ಕಾಲದಲ್ಲಿ ಕೊರಗಜ್ಜ ಎಂಬ ಖ್ಯಾತವಲ್ಲದ ದೈವವು ದಿಡೀರನೇ ಖ್ಯಾತಿಯನ್ನು ಪಡೆಯಿತು. ಬೆಂಗಳೂರು, ಮೈಸೂರಿನಲ್ಲಿ ಕೊರಗಜ್ಜನ ಗುಡಿಗಳು ಎದ್ದವು. ಬೆಂಗಳೂರಿನ ಆಟೋಗಳಲ್ಲಿ ಕೊರಗಜ್ಜನ ಸ್ಟಿಕ್ಕರ್‌ ಅಂಟಿಸಿ, ‘ಸ್ವಾಮಿ ಕೊರಗಜ್ಜʼ ಎಂದು ಬರೆದಿರುವುದನ್ನು ನೋಡಿದ್ದೇನೆ.</p>



<p>ಕಾಂತಾರ ಎಂಬ ಕನ್ನಡ ಸಿನೇಮಾದ ನಂತರ ಪಂಜುರ್ಲಿ ಮತ್ತು ಗುಳಿಗ ಎಂಬೆರಡು ತುಳುನಾಡಿನ ದೈವಗಳು ಇಡೀ ಭಾರತದಲ್ಲಿ ಪ್ರಚಾರಕ್ಕೆ ಬಂದವು. ಇವುಗಳ ವೇಷ ಕಟ್ಟಿಕೊಂಡು ವೇದಿಕೆಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಅಭಿನಯಿಸುವ, ಮೆರವಣಿಗೆ ಮಾಡುವ ಹೊಸ ಪ್ರವೃತ್ತಿಯೊಂದು ಆರಂಭ ಆಯ್ತು. ಇದು ಕನ್ನಡಕ್ಕೆ ಮಾತ್ರ ಸೀಮಿತವಾಗಿಲ್ಲ, ಇತರ ಭಾಷೆಗಳ ರಿಯಾಲಿಟಿ ಶೋಗಳಲ್ಲೂ ಹೋ….. ಎನ್ನುತ್ತಾ ಕುಣಿಯುವ “ಕಾಂತಾರದ ಪಂಜುರ್ಲಿ, ಗುಳಿಗ” ರನ್ನು ನೋಡಿದ್ದೇವೆ. ಆರಂಭದಲ್ಲಿ ಕಾಂತಾರವನ್ನು “ದೈವಾರಾಧನೆಯನ್ನು ಪ್ರಪಂಚಕ್ಕೆ ತಿಳಿಸಿದ ಸಿನೇಮಾ” ಎಂದು ಹೊಗಳಿದ ಭಕ್ತರು ಈಗ ಸಿನೇಮಾದ ಪ್ರಚಾರದಿಂದ ಹುಟ್ಟಿಕೊಂಡ ಈ ರೀತಿಯ ಹೊಸ ಬೆಳವಣಿಗೆಯ ಬಗ್ಗೆ ಅಸಮಧಾನವನ್ನು ಹೊಂದಿದ್ದಾರೆ.</p>



<p>ಜನರು ಹೊಸ ಹೊಸ ದೇವರಿಗೆ ಮೊರೆ ಹೋಗುವ, ತಮ್ಮ ಭಕ್ತಿಯನ್ನು ತೋರಿಸುವ ಪ್ರವೃತ್ತಿಗೆ ಕುತೂಹಲಕಾರಿಯಾದ ನಿದರ್ಶನವೆಂದರೆ ‘ಸಂತೋಷಿ ಮಾʼ ಎಂಬ ದೇವತೆ. 1960 ರ ದಶಕದಲ್ಲಿ ಉತ್ತರ ಪ್ರದೇಶದ ಮಹಿಳೆಯರು ಪೂಜಿಸುತ್ತಿದ್ದ ಸಂತೋಷಿ ಮಾ ಎಂಬ ದೇವತೆಯನ್ನು ‘ಜೈ ಸಂತೋಷಿ ಮಾʼ ಎಂಬ ಸಿನೇಮಾ ಇಡೀ ದೇಶಕ್ಕೆ ಪರಿಚಯಿಸಿತು. ಇದಕ್ಕೂ ಹಿಂದೆ ಪುರಾಣದ ಯಾವುದೇ ಹಿನ್ನಲೆ ಇಲ್ಲದ ಈ ದೇವತೆಗೆ ಪುರಾಣಗಳು ಹುಟ್ಟಿಕೊಂಡವು.</p>



<p>1975 ರಲ್ಲಿ ಶೋಲೆ ಮತ್ತು ದೀವಾರ್ ಜೊತೆಗೆ, ಅಪರಿಚಿತ ಕಲಾವಿದರನ್ನು ಹಾಕಿಕೊಂಡು ಕಡಿಮೆ ಬಜೆಟ್ ನಲ್ಲಿ ‘ಜೈ ಸಂತೋಷಿ ಮಾʼ ಸಿನೇಮಾ ಬಂತು. ಬಹುತೇಕ ನೃತ್ಯಗಾರ್ತಿಯರು, ಕಲಾವಿದೆಯರನ್ನು ವೇಶ್ಯಾಗೃಹಗಳಿಂದ ಕರೆಸಿಕೊಂಡು ಬರಲಾಗಿತ್ತು.</p>



<p>ಈ ಬಗ್ಗೆ<a href="https://www.livemint.com/Sundayapp/c1dqPakofWSZ6nIMbXIVdO/Santoshi-Maa-The-celluloid-goddess.html"> ಮಿಂಟ್‌</a>ನಲ್ಲಿ ಸಂತೋಷಿ ಮಾ ಪಾತ್ರದಾರಿ ನಟಿ ಅನಿತಾ ಗುಹಾ, ಚಿತ್ರದ ಯಶಸ್ಸನ್ನು ವಿವರಿಸುತ್ತಾ, &#8220;ಪ್ರೇಕ್ಷಕರು ಸಿನೇಮಾವನ್ನು ಮೆಚ್ಚಿ ಪರದೆಯ ಮೇಲೆ ನಾಣ್ಯಗಳು, ಹೂವು, ಅಕ್ಕಿ ಎಸೆಯುತ್ತಿದ್ದರು. ಬರಿಗಾಲಿನಲ್ಲಿ ಥಿಯೇಟರ್‌ಗೆ ಬಂದು ಸಿನೇಮಾ ನೋಡುತ್ತಿದ್ದರು. ಬಾಂದ್ರಾದಲ್ಲಿ ಥಿಯೇಟರ್‌ ಹೊರಗೆ ಒಂದು ಸಣ್ಣ ಗುಡಿ ಕೂಡ ಕಟ್ಟಿದ್ದರು. 50 ವಾರಗಳ ಕಾಲ ಸಿನೇಮಾ ಓಡಿತು. ಅದೊಂದು ಪವಾಡ,&#8221; ಎಂದು ಹೇಳುತ್ತಾರೆ.</p>



<p>ಈ ಸಿನೇಮಾದಲ್ಲಿ ಸಂತೋಷಿ ಮಾತೆಯ ವ್ರತ ಹೇಗೆ ಮಾಡೋದು, ದೈವಿಗೆ ಯಾವ ನೈವೇದ್ಯ ಇಡೋದು, ಶುಕ್ರವಾರ ಉಪವಾಸ ಮಾಡೋದು ಮೊದಲಾದ ಪ್ರಸಂಗಗಳಿಗೆ. ಈಗಲೂ ಈ ದೇವಿಯ ಭಕ್ತರು ಶುಕ್ರವಾರ ಉಪವಾಸ ಮಾಡುತ್ತಾರೆ. &#8220;ಮೈ ತೋ ಆರತಿ ಉತರು ರೇ ಸಂತೋಷಿ ಮಾತಾ ಕಿ&#8221;&nbsp;ಎಂಬ ಹಾಡು ತುಂಬಾ ಫೇಮಸ್‌ ಆಯ್ತು. ಈ ಸಿನೇಮಾ ಸದ್ಯ ಯೂಟ್ಯೂಬಿನಲ್ಲಿಯೂ ಇದೆ.</p>



<p>ಬಜೆಟ್‌ ಮತ್ತು ಸಂಪಾದನೆಗೆ ಹೋಲಿಸಿದರೆ, ಈ ಸಿನೇಮಾವು ಇದರ ಜೊತೆ ಜೊತೆಗೆ ರಿಲೀಸ್‌ ಆದ ಶೋಲೆ ಮತ್ತು ದೀವಾರ್‌ಗಿಂತ ಸಕ್ಸಸ್‌ ಕಂಡಿತು.</p>



<p>ಸದ್ಯ ಕೋಳಿಯ ಮೇಲೆ ಕೂತಿರುವ ಸಂತೋಷಿ ಮಾತೆಯ ಪೋಟೋವನ್ನು ಲೈಂಗಿಕ ಅಲ್ಪಸಂಖ್ಯಾತರ ಮನೆಗಳಲ್ಲಿ, ವೃಶ್ಯಾಗೃಹಗಳಲ್ಲಿ ನೋಡಬಹುದು. ಬೆಂಗಳೂರಿನ ಬಿನ್ನಿಮಿಲ್‌ ರೋಡಿನಲ್ಲಿ ಕಾರವಾರದಲ್ಲಿ ಈ ಸಂತೋಷಿ ಮಾತೆಯ ದೇವಾಲಯಗಳಿವೆ.</p>



<p>ಕಾಲಕಾಲಕ್ಕೆ ಹೊಸ ದೇವರು ಹುಟ್ಟುತ್ತವೆ, ಯಾರಿಗೂ ತಿಳಿಯದ ದೇವರೊಂದು ದಿಡೀರ್‌ ಖ್ಯಾತಿಯನ್ನು ಪಡೆಯುತ್ತದೆ. ಮಂತ್ರಾಲಯದ ರಾಘವೇಂದ್ರ ಸ್ವಾಮಿಯ ಸಿನೇಮಾಗಳ ನಂತರ ಮಂತ್ರಾಲಯಕ್ಕೆ ಬೇಟಿ ಕೊಡುವ ಭಕ್ತರ ಸಂಖ್ಯೆ ದಡೀರ್‌ ಹೆಚ್ಚಾಯಿತು.</p>



<p>ಒಂದೊಮ್ಮೆ ನಾನು ಬಾಲ್ಯದಲ್ಲಿ ಹೋಗುತ್ತಿದ್ದ, ಜನಜಂಗುಳಿಯಿಂದ ತುಂಬಿದ್ದ ಕಾಸರಗೋಡಿನ ಮಲ್ಲ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಈಗ ಭಕ್ತರ ಸಂಖ್ಯೆ ಎರಡಂಕೆಗೆ ಇಳಿದಿದೆ. ಹಿಂದಿನಂತೆ ದಿನಂಪ್ರತಿ ನೂರಾರು ಭಕ್ತರು ಬರುತ್ತಿಲ್ಲ.</p>



<p>ದಕ್ಷಿಣ ಕನ್ನಡದ ಬೆಳಾಲ್‌ ಎಂಬ ಗ್ರಾಮದಲ್ಲಿ ಮರದಡಿಯಲ್ಲಿ ಇದ್ದ ದೇವಿಗೆ ಅರಿಕೋಡಿ ಚಾಮುಂಡೇಶ್ವರಿ ಎಂದು ದೇವಾಲಯ ಕಟ್ಟಿಸಲಾಗಿದೆ. ಇಲ್ಲಿಗೆ ಹೆಚ್ಚು ಪ್ರಚಾರವನ್ನು ಕೊಟ್ಟಿದ್ದು ಕೆಲವು ಯೂಟ್ಯೂಬರ್‌ಗಳು. ಈಗ ಅಲ್ಲೊಬ್ಬರು ಸ್ವಯಂಘೋಷಿತ ಧರ್ಮದರ್ಶಿ ಇದ್ದಾರೆ. ಅವರನ್ನು ಬೇಟಿ ಮಾಡಲು ಟೋಕನ್‌ ತೆಗೆದುಕೊಳ್ಳಬೇಕು. ಈ ದೇವಾಲಯದ ಪೇಸ್‌ಬುಕ್‌ ಪೇಜ್‌ನಲ್ಲಿ, “ಮಾತು ಬಾರದವರಿಗೆ ಮಾತು ಬಂತು, <a href="https://www.facebook.com/share/p/1BL54rRu9Z/">ಮಕ್ಕಳಾಗದವರಿಗೆ ಮಕ್ಕಳಾಯಿತು</a>,” ಎಂಬ ಅವೈಜ್ಞಾನಿಕ ನಂಬಿಕೆಗಳನ್ನು ಹರಡಲಾಗುತ್ತಿದೆ. ದೈವಾರಾಧನೆಯ ಪಾರಂಪರಿಕ ಶೈಲಿಗೆ ಭಿನ್ನವಾಗಿ ವೈಭವೋಪೇತ ರೀತಿಯಲ್ಲಿ ಮೈಯಲ್ಲಿ ಆವಾಹಿಸಿಕೊಂಡು, ತ್ರಿಶೂಲ ಹಿಡಿದು ದೇವಿ ಮಹಾತ್ಮೆ ಯಕ್ಷಗಾನದ ದೇವಿ ಪಾತ್ರದಾರಿಯಂತೆ ಕುಣಿಯುವ ಹೊಸ ಪದ್ಧತಿ ಬಂದಿದೆ. ಈ ದೇವಾಲಯಕ್ಕೆ ಈಗ ಸಾವಿರಾರು ಭಕ್ತರಿದ್ದಾರೆ.</p>



<p>ಇಂತಹ ಇನ್ನೊಂದು ಹೊಸ ದೇವಾಲಯ ತ್ರಿಶೂರಿನ ವಿಷ್ಣುಮಾಯ ದೇವಾಲಯ. ಇದು ತನ್ನ ವೆಬ್‌ಸೈಟಿನಲ್ಲಿ ತ್ರಿಶೂರ್‌ನಲ್ಲಿರುವ ಏಕೈಕ ಅಧಿಕೃತ ಪೆರಿಂಗೊಟ್ಟುಕರ ದೇವಸ್ಥಾನ ವಿಷ್ಣುಮಾಯ ದೇವಾಲಯ ನಮ್ಮದು. ಪ್ರಾಚೀನ ಮತ್ತು ದೊಡ್ಡ ದೇವಾಲಯ” ಎಂದು ಬರೆದುಕೊಂಡಿದೆ. ಇದಕ್ಕೊಬ್ಬ ಧರ್ಮದರ್ಶಿ ಇದ್ದಾನೆ. ಈ ದೇವಾಲಯವನ್ನು ಪ್ರಚಾರ ಮಾಡಲು ಹಿರಿಯ <a href="https://www.google.com/search?q=actress+ambika+promoting+a+temple&amp;oq=ac&amp;gs_lcrp=EgZjaHJvbWUqCAgAEEUYJxg7MggIABBFGCcYOzIGCAEQRRg5MgYIAhAjGCcyBggDEEUYPDIGCAQQRRg8MgYIBRBFGDwyBggGEEUYPDIGCAcQRRg80gEIMzc5MWowajeoAgCwAgA&amp;sourceid=chrome&amp;ie=UTF-8#fpstate=ive&amp;vld=cid:3bf058f6,vid:f3PiZHLIXA0,st:0">ನಟಿ ಅಂಬಿಕಾ</a> ಸೇರಿದಂತೆ ಯೂಟ್ಯೂಬರ್‌ಗಳನ್ನೆಲ್ಲಾ ಬಳಸಲಾಗುತ್ತಿದೆ.</p>



<p>ಜನರು ಹೊಸ ಹೊಸ ದೇವರನ್ನು, ಭಕ್ತಿಯ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಇಂದು ಜನಪ್ರಿಯವಾಗಿರುವ ದೇವರು ನಾಳೆ ಯಾರಿಗೂ ಬೇಡವಾಗಬಹುದು. ಈಗ ಜನಜಂಗುಳಿಯಿಂದ ತುಂಬಿರುವ ದೇವಾಲಯದಲ್ಲಿ ನಾಳೆ ಅರ್ಚಕ ಮಾತ್ರ ಇರುವ ಕಾಲ ಬರಬಹುದು. ಹೊಸ ದೇವರು, ದೇವಾಲಯ ಇನ್ಸ್ಟಾಗ್ರಾಮ್‌, ಫೇಸ್‌ಬುಕ್‌ ರೀಲ್‌ಗಳಲ್ಲಿ ಬಂದರೆ ಸಾಕಷ್ಟೇ! ಹಿಂದೆ ಶಬರಿಮಲೆಗೆ ಹೋಗುತ್ತಿದ್ದ ಭಕ್ತರು, ಈಗ ಕೊಟ್ಟಿಯೂರನ್ನು ನೋಡಿದ್ದಾರೆ, ನಾಳೆ ಇನ್ನೊಂದು ದೇವಾಲಯ-ಅಚರಣೆಯ ರೀಲ್ಸ್‌ ಬಂದರೆ ಆ ಕಡೆಗೆ ಹೋಗುತ್ತಾರೆ.</p>



<p><strong>ಭಕ್ತಿಯೆಂಬುದು ತೋರುಂಬ ಲಾಭ</strong> – ಅಲ್ಲಮ ಪ್ರಭು</p>



<p><strong>ಲೇಖನ:</strong> ಚರಣ್‌ ಐವರ್ನಾಡು</p>
]]></content:encoded>
					
		
		
			</item>
		<item>
		<title>ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಕ್ಷರಧಿ</title>
		<link>https://peepalmedia.com/ksharadhi-in-the-india-book-of-records/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 20 Jun 2025 10:04:44 +0000</pubDate>
				<category><![CDATA[ಕಲೆ – ಸಾಹಿತ್ಯ]]></category>
		<category><![CDATA[Bangalore]]></category>
		<category><![CDATA[India Book of Records]]></category>
		<guid isPermaLink="false">https://peepalmedia.com/?p=61309</guid>

					<description><![CDATA[ಕ್ಷರಧಿ ಎಂಬ ಹೆಸರಿನ 5 ವರ್ಷದ ಈ ಪುಟ್ಟ ಬಾಲೆಯ ಪ್ರತಿಭೆಯು 2025 ರ ಏಪ್ರಿಲ್ ತಿಂಗಳ ಸೋಮವಾರ 21 ನೇ ತಾರೀಖಿನಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಯಿತು. ನಮ್ಮ ದೇಶದ ಅತ್ಯಂತ ಅದ್ಭುತ ಮತ್ತು ಶ್ರೇಷ್ಠ ಸಾಧನೆಗಳನ್ನು ದಾಖಲಿಸುವ ಒಂದು ವಾರ್ಷಿಕ ಪುಸ್ತಕದಲ್ಲಿ ಕ್ಷರಧಿಯ ಹೆಸರು ಸೇರ್ಪಡೆಯಾಗಿರುವುದು ಬಹಳ ಹೆಮ್ಮೆಯ ವಿಚಾರ. ಈ ಬಾಲಕಿಯು ತಾಯಿಯ ಉದರದಲ್ಲಿರುವಾಗಲೇ ಸಂಗೀತ ಕಲೆಯನ್ನು ವರಪ್ರಸಾದವಾಗಿ ಪಡೆದುಕೊಂಡು ಬಂದಿದ್ದಾಳೆ. ಜನ್ಮದತ್ತವಾಗಿ ಸಂಗೀತದಲ್ಲಿ ಆಸಕ್ತಿ ಹೊಂದಿರುವ ಈ ಮಗುವು [&#8230;]]]></description>
										<content:encoded><![CDATA[
<p>ಕ್ಷರಧಿ ಎಂಬ ಹೆಸರಿನ 5 ವರ್ಷದ ಈ ಪುಟ್ಟ ಬಾಲೆಯ ಪ್ರತಿಭೆಯು 2025 ರ ಏಪ್ರಿಲ್ ತಿಂಗಳ ಸೋಮವಾರ 21 ನೇ ತಾರೀಖಿನಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಯಿತು. ನಮ್ಮ ದೇಶದ ಅತ್ಯಂತ ಅದ್ಭುತ ಮತ್ತು ಶ್ರೇಷ್ಠ ಸಾಧನೆಗಳನ್ನು ದಾಖಲಿಸುವ ಒಂದು ವಾರ್ಷಿಕ ಪುಸ್ತಕದಲ್ಲಿ ಕ್ಷರಧಿಯ ಹೆಸರು ಸೇರ್ಪಡೆಯಾಗಿರುವುದು ಬಹಳ ಹೆಮ್ಮೆಯ ವಿಚಾರ. ಈ ಬಾಲಕಿಯು ತಾಯಿಯ ಉದರದಲ್ಲಿರುವಾಗಲೇ ಸಂಗೀತ ಕಲೆಯನ್ನು ವರಪ್ರಸಾದವಾಗಿ ಪಡೆದುಕೊಂಡು ಬಂದಿದ್ದಾಳೆ. ಜನ್ಮದತ್ತವಾಗಿ ಸಂಗೀತದಲ್ಲಿ ಆಸಕ್ತಿ ಹೊಂದಿರುವ ಈ ಮಗುವು ಎಲ್ಲರ ಮುದ್ದಿನ ಕಣ್ಮಣಿಯಾಗಿದ್ದಾಳೆ.</p>



<p>ಕ್ಷರಧಿಯ ಹುಟ್ಟೂರು ಬೆಂಗಳೂರು. ತಂದೆ ಶ್ರೀನಾಗ್, ತಾಯಿ ಮಾಧುರಿ. ಶ್ರೀನಾಗ್ ಮೂಲತಃ ಚಿಕ್ಕಬಳ್ಳಾಪುರದ ನಂದಿಹಳ್ಳಿಯವರು. ಮಾಧುರಿ ಬೆಂಗಳೂರಿನವರು. ಈ ದಂಪತಿಗಳು ತಮ್ಮ ಪುಟ್ಟ ಮಗಳೊಂದಿಗೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನೆಲೆಸಿದ್ದಾರೆ. ಈ ಮುದ್ದು ಬಾಲಕಿ ಬಸವೇಶ್ವರ ನಗರದ &#8216;ಯುರೋ ಕಿಡ್ಸ್&#8217; ಶಾಲೆಯಲ್ಲಿ<br>ಯು.ಕೆ.ಜಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಕ್ಷರಧಿಯ ಕುಟುಂಬದ ಬಹುತೇಕ ಎಲ್ಲರೂ ಸಂಗೀತದಲ್ಲಿ ಅಭಿರುಚಿಯುಳ್ಳವರೇ ಆಗಿದ್ದಾರೆ.</p>



<p>ಕ್ಷರಧಿ ಬಹು ಪ್ರಬುದ್ಧ ಬಾಲಕಿ. ಹುಟ್ಟಿನಿಂದಲೇ ಸಂಗೀತವನ್ನು ರಕ್ತಗತ ಮಾಡಿಕೊಂಡಿರುವ ಬಾಲೆ. ಪುಟ್ಟ ಮಗುವಾಗಿದ್ದಾಗಲೇ ಸಂಗೀತದ ಬಗ್ಗೆ ಒಲವು ತೋರುತ್ತಿದ್ದಳು ಕ್ಷರಧಿ. ಹಾಡುಗಳನ್ನು ಆಲಿಸದೆ ಈ ಮಗುವಿಗೆ ನಿದ್ರೆ ಬರುತ್ತಿರಲಿಲ್ಲವಂತೆ. ಏಳು ತಿಂಗಳ ಮಗುವಾಗಿದ್ದಾಗಲೇ &#8216;ಅ&#8217; ಕಾರ ಮತ್ತು &#8216;ಹ&#8217; ಕಾರವನ್ನು ಶ್ರದ್ಧೆಯಿಂದ ಆಲಿಸಿ ಅವುಗಳನ್ನು ಪುನರುಚ್ಚರಿಸುತ್ತಿದ್ದಳಂತೆ. ಕ್ಷರಧಿ ಮೂರು ವರ್ಷ ತುಂಬಿ ಮೂರು ತಿಂಗಳ ಬಾಲೆಯಾಗಿರುವಾಗಲೇ ವಿದುಷಿ ಆಶಾ ಮಂಜುನಾಥ್ ರವರಿಂದ ಕರ್ನಾಟಿಕ್ ಸಂಗೀತವನ್ನು ಕಲಿಯಲು ಪ್ರಾರಂಭಿಸಿದಳು. ನಾಲ್ಕು ವರ್ಷದವಳಿದ್ದಾಗಿನಿಂದ ನರಹರಿ ದೀಕ್ಷಿತ್ ರವರಿಂದ ಲಘು ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾಳೆ.</p>


<div class="wp-block-image">
<figure class="aligncenter size-large is-resized"><img loading="lazy" decoding="async" width="819" height="1024" src="https://peepalmedia.com/wp-content/uploads/2025/06/WhatsApp-Image-2025-06-19-at-6.03.24-PM-819x1024.jpeg" alt="" class="wp-image-61310" style="width:387px;height:auto" srcset="https://peepalmedia.com/wp-content/uploads/2025/06/WhatsApp-Image-2025-06-19-at-6.03.24-PM-819x1024.jpeg 819w, https://peepalmedia.com/wp-content/uploads/2025/06/WhatsApp-Image-2025-06-19-at-6.03.24-PM-240x300.jpeg 240w, https://peepalmedia.com/wp-content/uploads/2025/06/WhatsApp-Image-2025-06-19-at-6.03.24-PM-768x960.jpeg 768w, https://peepalmedia.com/wp-content/uploads/2025/06/WhatsApp-Image-2025-06-19-at-6.03.24-PM-150x188.jpeg 150w, https://peepalmedia.com/wp-content/uploads/2025/06/WhatsApp-Image-2025-06-19-at-6.03.24-PM-300x375.jpeg 300w, https://peepalmedia.com/wp-content/uploads/2025/06/WhatsApp-Image-2025-06-19-at-6.03.24-PM-696x870.jpeg 696w, https://peepalmedia.com/wp-content/uploads/2025/06/WhatsApp-Image-2025-06-19-at-6.03.24-PM.jpeg 1024w" sizes="auto, (max-width: 819px) 100vw, 819px" /></figure></div>


<p>ಗುರು ಹಿರಿಯರ ಆಶೀರ್ವಾದದಿಂದ ಹಾಗೂ ಅಪ್ಪ ಅಮ್ಮ ಮತ್ತು ಕುಟುಂಬದ ಸದಸ್ಯರರೆಲ್ಲರ ಸಹಕಾರ ಹಾಗೂ ಪ್ರೋತ್ಸಾಹದಿಂದ ಕ್ಷರಧಿ ಇದುವರಿಗೂ 30 ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾಳೆ. &#8220;ಈ ಪುಟಾಣಿಯು 14 ನಿಮಿಷ ಮತ್ತು 13 ಸೇಕೆಂಡ್ ಗಳಲ್ಲಿ 165 ಹಾಡುಗಳ ಗುನುಗುವಿಕೆಯನ್ನು ಆಲಿಸುವ ಮೂಲಕ ಹಾಡುಗಳನ್ನು ಗುರುತಿಸಿ ಇಂಡಿಯಾ ಬುಕ್ ರೆಕಾರ್ಡ್ಸ್ ನಲ್ಲಿ ಸಾಧಕಿಯ ಸ್ಥಾನವನ್ನು ಪಡೆದುಕೊಂಡಿದ್ದಾಳೆ&#8221;. ಈ ಮಗುವಿಗೆ ಸಂಗೀತದ ಮೇಲಿರುವ ಪ್ರೀತಿ ಹಾಗೂ ಶ್ರದ್ಧೆ ಇಂದು ಅವಳನ್ನು ಈ ಮಟ್ಟಕ್ಕೆ ತಲುಪಿಸಿದೆ.</p>



<p>ಕ್ಷರಧಿಯನ್ನು ನಾನು ಮೊದಲಬಾರಿಗೆ ನೋಡಿದ್ದು ಹಾಗೂ ಸಮ್ಮೋಹನಗೊಳಿಸುವಂತಹಾ ಈ ಪುಟಾಣಿಯ ಹಾಡನ್ನು ಆಲಿಸಿದ್ದು ನಮ್ಮ ಬೆಂಗಳೂರಿನ ಆರ್ಗ್ಯಾನಿಕ್ ಗ್ರೀನ್ ಪಾತ್ ನಲ್ಲಿ. ನನ್ನ ಸ್ನೇಹಿತೆ ಮಮತಾ ಭಾಸ್ಕರ್ ರವರ ಜೊತೆ ಒಂದು ಭಾನುವಾರ ಅಲ್ಲಿ ನೆರವೇರುವ ಸಂಗೀತ ಕಾರ್ಯಕ್ರಮವನ್ನು ನೋಡಲು ಹೋಗಿದ್ದೆ. ಈ ಬಾಲೆಯು ಅಮ್ಮ ಮಾಧುರಿಯವರ ಜೊತೆ<br>ಬಂದಿದ್ದಳು. ಪುಟ್ಟ ಬಾಲಕಿಯಾದ ಕಾರಣ ಸದಾ ಅಮ್ಮ ಅಪ್ಪನ ಜೊತೆಯೇ ಇರುತ್ತಿದ್ದ ಕ್ಷರಧಿ ಸ್ವಲ್ಪ ಸಂಕೋಚ ಗುಣದವಳು ಕೂಡಾ. ನಾವು ಹತ್ತಿರ ಕರೆದಾಗ ದೂರದಿಂದಲೇ ಕದ್ದು ನೋಡುತ್ತಿದ್ದಳೇ ವಿನಃ ಬರುತ್ತಿರಲಿಲ್ಲ. ಚಾಕೊಲೇಟ್ ಕೊಟ್ಟರೆ ಅಮ್ಮ ಹೇಳುವವರೆಗೂ ತೆಗೆದುಕೊಳ್ಳುತ್ತಾ ಇರಲಿಲ್ಲ.</p>



<p>ಕ್ಷರಧಿ ಹಾಡುತ್ತಾಳೆ ಎಂದು ನನ್ನ ಗೆಳತಿ ಮಮತಾರವರು ಹೇಳಿದಾಗ ಮೊದಲು ನನಗೆ ನಂಬಿಕೆಯೇ ಬರಲಿಲ್ಲ. ಐದು ವರ್ಷದ ಮುದ್ದು ಮಗು ಬಾಲಗೀತೆಗಳನ್ನು ಹಾಡುವ ಈ ವಯಸ್ಸಿನಲ್ಲಿ ಹಾಡುಗಳನ್ನು ಹಾಡುತ್ತಾಳೆಯೇ!!!! ಎಂದು ಅಚ್ಚರಿಯುಂಟಾಯಿತು. ವೇದಿಕೆಯ ಮೇಲೆ ಮೈಕ್ ಹಿಡಿದು ನಿಂತ ಕ್ಷರಧಿಯನ್ನು ಕುತೂಹಲದಿಂದ ಗಮನಿಸುತ್ತಿದ್ದೆ. ಹಿನ್ನೆಲೆ ಸಂಗೀತ ಪ್ರಾರಂಭವಾಗುವುದರ ಜೊತೆಗೆ ಪುಟ್ಟ ಕ್ಷರಧಿಯ ಸುಮಧುರ ಧ್ವನಿ ಕೇಳಿಸಿತು. ಖ್ಯಾತ ಗಾಯಕಿ ಬಿ.ಕೆ ಸುಮಿತ್ರಾರವರು ಹಾಡಿದ &#8220;ಸಂಪಿಗೆ ಮರದ ಹಸಿರೆಲೆ ನಡುವೆ&#8221; ಹಾಡನ್ನು ಸುಶ್ರಾವ್ಯವಾಗಿ ಹಾಡಿದಳು. ನಾವೆಲ್ಲರೂ ಮಂತ್ರಮುಗ್ಧರಾಗಿ ಕ್ಷರಧಿಯ ಹಾಡುಗಾರಿಕೆಯನ್ನು ಆಲಿಸುತ್ತಿದ್ದೆವು. ನಡುವೆ ಒಂದು ಕಡೆ ತಾಳ ತಪ್ಪುವ ಹಂತಕ್ಕೆ ಬಂದಾಗ ಸ್ವಲ್ಪವೂ ವಿಚಲಿತಳಾಗದೇ ಪುನಃ ಅತಿ ಸಮರ್ಥವಾಗಿ ತಾಳವನ್ನು ಸರಿದೂಗಿಸಿ ಹಾಡಿದಳು. ಅಂಜಿ ಹಾಡುವುದನ್ನು ನಿಲ್ಲಿಸಲಿಲ್ಲ. ಅಲ್ಲಿ ನೆರೆದಿದ್ದ ಸಂಗೀತ ಪ್ರಿಯರೆಲ್ಲರನ್ನೂ ಚಕಿತಗೊಳಿಸಿ ಮೂಕವಿಸ್ಮಿತರನ್ನಾಗಿ ಮಾಡಿದಳು ಈ ಬಾಲೆ. ಅರಿಯದೇ ನನ್ನ ಗೆಳತಿಯ ಕೊರಳಿನಿಂದ ಉದ್ಗಾರವೊಂದು ಹೊರಬಿತ್ತು…&#8221;ಈ ಮಗು ನಿಜಕ್ಕೂ ಸರಸ್ವತಿ ಪುತ್ರಿಯೇ ಸರಿ&#8221;…. ಎಂದು ಹೇಳುತ್ತಾ ಗದ್ಗದಿತರಾದರು. ಅವರ ಕಣ್ಣಿಂದ ಆನಂದಬಾಷ್ಪ ಹರಿಯಿತು.</p>



<p>ಕ್ಷರಧಿಯ ಹಾಡುಗಾರಿಕೆಯನ್ನು ಕೇಳಿ ನಾನು ರೋಮಾಂಚನಗೊಂಡೆ. ನನ್ನ ಗಂಟಲಿನಿಂದ ಶಬ್ದವೇ ಹೊರ ಬರಲಿಲ್ಲ. ಕ್ಷರಧಿಯ ಹಾಡನ್ನು ಕೇಳಿದ ಎಲ್ಲರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಹೀಗೆ ಅನೇಕ ಬಾರಿ ಕ್ಷರಧಿಯ ಹಾಡನ್ನು ಕೇಳಿ ಮೂಕವಿಸ್ಮಿತಳಾಗಿದ್ದೇನೆ. ತನಗಿಂತ ಹಿರಿಯರು ಹಾಡುವಾಗಲೂ ಶ್ರದ್ಧೆಯಿಂದ ಗಮನಿಸಿ, ಅವರು ಲಯ,ತಾಳ ತಪ್ಪಿದರೆ ಒಡನೆಯೇ ಅದನ್ನು ಗುರುತಿಸುವ ಸೂಕ್ಷ್ಮಮತಿ ಈ ಬಾಲಕಿ. ನಮ್ಮ ಮಮತಾ ಸಂಗೀತ ಸುಧೆಯ ವಿಶೇಷ ಅತಿಥಿ ಈ ಬಾಲ ಪ್ರತಿಭೆ. ಕ್ಷರಧಿ ನಮ್ಮ ಕಾರ್ಯಕ್ರಮಕ್ಕೆ ಬಂದರೆ ಒಂದು ವಿಶೇಷ ಕಳೆ ತುಂಬಿ ತುಳುಕಿದಂತೆ ಆಗುತ್ತದೆ. ಒಂದು ಪರಿಪೂರ್ಣತೆಯ ಭಾವ ನಮ್ಮಲ್ಲಿ ಮೂಡುತ್ತದೆ. ಇಡೀ ಕುಟುಂಬವೇ ನಮ್ಮ ಕಾರ್ಯಕ್ರಮಕ್ಕೆ ಆಗಮಿಸುತ್ತದೆ. ಮಲ್ಲೇಶ್ವರದ ಲೀಲಾದ್ರಿ ಸಭಾಂಗಣದಲ್ಲಿ ನಡೆದ ಮಮತಾ ಸಂಗೀತ ಸುಧೆಯ ಕಾರ್ಯಕ್ರಮದಲ್ಲಿ ಕ್ಷರಧಿಯು ಹಾಡಿದಾಗ ಅವಳ ಸೊಗಸಾದ ಗಾಯನಕ್ಕೆ ಬೆರಗಾಗಿ ಸಭಾಂಗಣದ ಮಾಲಿಕರು ವೇದಿಕೆಯಲ್ಲಿ ಮಗುವನ್ನು ಆಹ್ವಾನಿಸಿ ಸನ್ಮಾನ ಮಾಡಿದ್ದಾರೆ. ಈ ಪುಟ್ಟ ಬಾಲಕಿಯನ್ನು ಹಲವು ಸಂಸ್ಥೆಗಳು ತಮ್ಮ ಕಾರ್ಯಕ್ರಮಗಳಲ್ಲಿ ಸನ್ಮಾನಿಸಿದ್ದಾರೆ.</p>



<p>ವೇದಿಕೆಯ ಭಯವಿಲ್ಲದೇ, ಯಾವುದೇ ಅಂಜಿಕೆ ಆತಂಕವಿಲ್ಲದೇ ಸುಶ್ರಾವ್ಯವಾಗಿ ಹಾಡುವ ಈ ಬಾಲೆಯಿಂದ ಸಂಗೀತ ಪ್ರೇಮಿಗಳು ಕಲಿಯುವುದು ಬಹಳವಿದೆ. ಕ್ಷರಧಿ ಪ್ರತಿಯೊಂದು ಹಾಡನ್ನೂ ಬಹಳ ತನ್ಮಯತೆಯಿಂದ ಹಾಡುತ್ತಾಳೆ. ಈ ಮಗುವಿನ ಪ್ರತಿಭೆ ಅಗಾಧವಾದದ್ದು. ಈ ಬಾಲ ಪ್ರತಿಭೆ ನಮ್ಮ ಬೆಂಗಳೂರಿನವಳು ಎನ್ನುವುದು ನಾವು ಹೆಮ್ಮೆ ಪಡಬೇಕಾದ ವಿಚಾರ. ಮುಂದೊಂದು ದಿನ ಈ ಮಗು ಒಂದು ಸುಪ್ರಸಿದ್ಧ ಗಾಯಕಿಯಾಗಿ ಹೊರ ಹೊಮ್ಮಲಿ. ಈಕೆಯ ಪ್ರತಿಭೆ ನಾಲ್ಕೂ ದಿಕ್ಕುಗಳಲ್ಲಿ ಪ್ರಸರಣಗೊಳ್ಳಲಿ. ಕ್ಷರಧಿಯ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಎಲ್ಲರೂ ಹಾರೈಸೋಣ. ನಮ್ಮ ನಾಡಿನ ಈ ಬಾಲ ಪ್ರತಿಭೆಯನ್ನು ಸಂಪೂರ್ಣ ಸಹಕಾರ ನೀಡಿ ಬೆಳೆಸೋಣ. ವಿದ್ಯಾಭ್ಯಾಸದ ಜೊತೆ ಜೊತೆಗೇ ಈ ಬಾಲೆಯ ಸಂಗೀತಾಭ್ಯಾಸವೂ ನಿರಂತರವಾಗಿ ನಡೆಯುತ್ತಿರಲಿ.</p>



<p><strong>ರುಕ್ಮಿಣಿ.ಎಸ್.ನಾಯರ್</strong><br>ಬೆಂಗಳೂರು.</p>
]]></content:encoded>
					
		
		
			</item>
		<item>
		<title>ಭಾರತದ ಬಳಿ ಅಂಕಿಅಂಶಗಳಿಲ್ಲ! ಕೇಂದ್ರದ ಹೊಣೆಗೇಡಿತನ</title>
		<link>https://peepalmedia.com/india-has-no-statistics-the-centres-responsibility/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 10 Jun 2025 10:07:36 +0000</pubDate>
				<category><![CDATA[ಅಂಕಣ]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[census]]></category>
		<category><![CDATA[covid-19]]></category>
		<category><![CDATA[Data Blackout]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Missing data]]></category>
		<guid isPermaLink="false">https://peepalmedia.com/?p=60695</guid>

					<description><![CDATA[ಯಾವುದೇ ಪ್ರಜಾಪ್ರಭುತ್ವದಲ್ಲಿ, ಸರ್ಕಾರವು ಸಮಯಕ್ಕೆ ಸರಿಯಾಗಿ ಮತ್ತು ನಿಖರವಾದ ರೀತಿಯಲ್ಲಿ ದತ್ತಾಂಶವನ್ನು ಸಂಗ್ರಹಿಸುವುದು ಮುಖ್ಯ. ದತ್ತಾಂಶವಿಲ್ಲ ಎಂದರೆ ಅದು ಸರ್ಕಾರದ ಹೊಣೆಗೇಡಿತನ. ಸಂಸತ್ತಿನಲ್ಲಿ ಸಂಸದರು ಎತ್ತಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸುತ್ತಾ, ಸರ್ಕಾರವು ತನ್ನ ಬಳಿ ಡೇಟಾ ಇಲ್ಲ ಎಂದು ಹೇಳಿಕೊಂಡಿದೆ. ಇದರಲ್ಲಿ ಕೋವಿಡ್-19 ಸಮಯದಲ್ಲಿ ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದವರ ಸಂಖ್ಯೆ, ನೀಟ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ನೈಸರ್ಗಿಕ ವಿಕೋಪಗಳಿಂದ ಉಂಟಾದ ನಷ್ಟಗಳ ಡೇಟಾ ಮತ್ತು ರೈತರ ಆತ್ಮಹತ್ಯೆಗೆ ಕಾರಣಗಳ ಡೇಟಾ ಸೇರಿವೆ. ಜನಗಣತಿ [&#8230;]]]></description>
										<content:encoded><![CDATA[
<p>ಯಾವುದೇ ಪ್ರಜಾಪ್ರಭುತ್ವದಲ್ಲಿ, ಸರ್ಕಾರವು ಸಮಯಕ್ಕೆ ಸರಿಯಾಗಿ ಮತ್ತು ನಿಖರವಾದ ರೀತಿಯಲ್ಲಿ ದತ್ತಾಂಶವನ್ನು ಸಂಗ್ರಹಿಸುವುದು ಮುಖ್ಯ. ದತ್ತಾಂಶವಿಲ್ಲ ಎಂದರೆ ಅದು ಸರ್ಕಾರದ ಹೊಣೆಗೇಡಿತನ.</p>



<p>ಸಂಸತ್ತಿನಲ್ಲಿ ಸಂಸದರು ಎತ್ತಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸುತ್ತಾ, ಸರ್ಕಾರವು ತನ್ನ ಬಳಿ ಡೇಟಾ ಇಲ್ಲ ಎಂದು ಹೇಳಿಕೊಂಡಿದೆ. ಇದರಲ್ಲಿ ಕೋವಿಡ್-19 ಸಮಯದಲ್ಲಿ ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದವರ ಸಂಖ್ಯೆ, ನೀಟ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ನೈಸರ್ಗಿಕ ವಿಕೋಪಗಳಿಂದ ಉಂಟಾದ ನಷ್ಟಗಳ ಡೇಟಾ ಮತ್ತು ರೈತರ ಆತ್ಮಹತ್ಯೆಗೆ ಕಾರಣಗಳ ಡೇಟಾ ಸೇರಿವೆ.</p>



<p><strong>ಜನಗಣತಿ</strong></p>



<p>ಭಾರತದಲ್ಲಿ 150 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿರುವ ಹತ್ತು ವರ್ಷಗಳ ಜನಗಣತಿಯನ್ನು 2011 ರಿಂದ ನಡೆಸಲಾಗಿಲ್ಲ. 2021 ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ವಿಳಂಬ ಮಾಡಲಾಯಿತು, ಆದರೂ ದೊಡ್ಡ ರಾಜಕೀಯ ರ್ಯಾಲಿಗಳು ಮತ್ತು ಧಾರ್ಮಿಕ ಸಭೆಗಳು ನಡೆಯಲು‌ ಆ ಸಮಯದಲ್ಲಿ ಅವಕಾಶವಿತ್ತು. ಮುಂದಿನ ಜನಗಣತಿಯನ್ನು 2027 ರಲ್ಲಿ ನಡೆಸಲಾಗುವುದು ಎಂದು ಭಾರತ ಸರ್ಕಾರ ಅಂತಿಮವಾಗಿ ಘೋಷಿಸಿದೆ.</p>



<p>ಜನಗಣತಿ ಕೇವಲ ಶೈಕ್ಷಣಿಕ ಚಟುವಟಿಕೆಯಲ್ಲ; ಇದು ನೀತಿ ನಿರೂಪಣೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಜನಗಣತಿಯನ್ನು ನಡೆಸದಿರುವುದು ಲಕ್ಷಾಂತರ ಜನರ ಜೀವನದ ಮೇಲೆ, ವಿಶೇಷವಾಗಿ ಸಮಾಜದ ಅಂಚಿನಲ್ಲಿ ಬದುಕುವವರ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಉದಾಹರಣೆಗೆ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಪ್ರಕಾರ, ಪಡಿತರ ಚೀಟಿಗಳನ್ನು ನೀಡಬೇಕಾದ ಜನರ ಸಂಖ್ಯೆಯನ್ನು ಇತ್ತೀಚಿನ ಜನಗಣತಿಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. 2021 ರ ಜನಗಣತಿಯನ್ನು ನಡೆಸದ ಕಾರಣ 10 ಕೋಟಿಗೂ ಹೆಚ್ಚು ಜನರು ಆಹಾರ ಭದ್ರತಾ ಜಾಲದ ವ್ಯಾಪ್ತಿಯಿಂದ ಹೊರಗುಳಿದಿದ್ದಾರೆ ಎಂದು ಅಂದಾಜಿಸಲಾಗಿದೆ. ನವೀಕರಿಸಿದ ಜನಗಣತಿ ಅಂಕಿಅಂಶಗಳು ಇಲ್ಲದೇ ಇದ್ದಾಗ ಸಮಾಜದಲ್ಲಿ ತಪ್ಪು ಮಾಹಿತಿ ಹರಡಲು ಕಾರಣವಾಗುತ್ತದೆ. ಧಾರ್ಮಿಕ ಅಲ್ಪಸಂಖ್ಯಾತರ ಜನಸಂಖ್ಯೆಯಲ್ಲಿ ಅಸಮಾನ ಹೆಚ್ಚಳ, ಲಿಂಗ ಅನುಪಾತದಲ್ಲಿನ ಸುಧಾರಣೆ ಇತ್ಯಾದಿಗಳ ಬಗ್ಗೆ ರಾಜಕೀಯ ಲಾಭಕ್ಕಾಗಿ ಮಾಡಲಾಗುವ ಹೇಳಿಕೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಅಸಾಧ್ಯವಾಗುತ್ತದೆ.</p>



<p><strong>ಕೋವಿಡ್ ಸಾವುಗಳು</strong></p>



<p>ದತ್ತಾಂಶ ಸಂಗ್ರಹಿಸಲಾದ ಸಂದರ್ಭಗಳಲ್ಲಿಯೂ ಸಹ, ಅದರ ನಿಖರತೆಯ ಬಗ್ಗೆ ಬಹಳ ಗಂಭೀರವಾದ ಕಳವಳಗಳಿವೆ. ದೇಶದಲ್ಲಿ ಕೋವಿಡ್ ಸಮಯದಲ್ಲಿ ಸಂಭವಿಸಿದ ಸಾವಿನ ಸಂಖ್ಯೆಯ ದತ್ತಾಂಶವು ಭಾರಿ ವಿವಾದವನ್ನುಂಟುಮಾಡಿದೆ. ಸರ್ಕಾರವು ಕೇವಲ ಐದು ಲಕ್ಷ ಕೋವಿಡ್ ಸಾವುಗಳನ್ನು ವರದಿ ಮಾಡಿದ್ದರೂ, ವಿಶ್ವ ಆರೋಗ್ಯ ಸಂಸ್ಥೆ (WHO) ಸೇರಿದಂತೆ ಸ್ವತಂತ್ರ ಅಂದಾಜುಗಳು ಈ ಅಂಕಿಅಂಶವನ್ನು 40 ಲಕ್ಷಕ್ಕೂ ಹೆಚ್ಚು ಎಂದು ತಿಳಿಸಿವೆ. ಸುಮಾರು ನಾಲ್ಕು ವರ್ಷಗಳ ವಿಳಂಬದ ನಂತರ ಸರ್ಕಾರ ಇತ್ತೀಚೆಗೆ 2021 ರ ನಾಗರಿಕ ನೋಂದಣಿ ವ್ಯವಸ್ಥೆಗೆ ಸಂಬಂಧಿಸಿದ ಡೇಟಾವನ್ನು ಬಿಡುಗಡೆ ಮಾಡಿದೆ. 2021 ರಲ್ಲಿ ಮಾತ್ರ ಸಂಭವಿಸಿದ ಹೆಚ್ಚುವರಿ ಸಾವುಗಳು ಸುಮಾರು 21 ಲಕ್ಷ ಎಂದು ದತ್ತಾಂಶವು ತೋರಿಸುತ್ತದೆ &#8211; ಸಾಂಕ್ರಾಮಿಕ ರೋಗದಿಂದಾಗಿ ಸುಮಾರು 40 ಲಕ್ಷ ಕೋವಿಡ್ ಸಂಬಂಧಿತ ಸಾವುಗಳ ಸಾಧ್ಯತೆಯನ್ನು ಇದು ಸೂಚಿಸುತ್ತದೆ.</p>



<p><strong>ಡೇಟಾ ಕಾಣೆಯಾಗಿದೆ!</strong></p>



<p>2017-18ರ NSO ನ ಗ್ರಾಹಕ ವೆಚ್ಚ ಸಮೀಕ್ಷೆಯನ್ನು ತಿರಸ್ಕರಿಸಲಾಯಿತು. ಸಮೀಕ್ಷೆಯ ಸೋರಿಕೆಯಾದ ಸಂಶೋಧನೆಗಳು ನಾಲ್ಕು ದಶಕಗಳಲ್ಲಿ ಮೊದಲ ಬಾರಿಗೆ ಗ್ರಾಹಕ ಖರ್ಚು ಕುಸಿದಿದೆ ಮತ್ತು ಬಳಕೆ ಕಡಿಮೆಯಾಗಿದೆ ಎಂದು ತೋರಿಸಿದೆ, ಇದು ಬಡತನದ ಹೆಚ್ಚಳವನ್ನು ಸೂಚಿಸುತ್ತದೆ.</p>



<p><a href="https://www.indiaspend.com/data-gaps/critical-data-remain-elusive-as-2024-comes-to-a-close-936492"><em>ಇಂಡಿಯಾಸ್ಪೆಂಡ್</em></a> ವರದಿಯ <a href="https://www.indiaspend.com/data-gaps/critical-data-remain-elusive-as-2024-comes-to-a-close-936492">ಪ್ರಕಾರ</a> , 2024 ರ ಅಂತ್ಯದ ವೇಳೆಗೆ 16 ನಿರ್ಣಾಯಕ ದತ್ತಾಂಶಗಳು ವಿಳಂಬವಾಗಿವೆ ಮತ್ತು ಒಂಬತ್ತು ಸಚಿವಾಲಯಗಳು ತಮ್ಮ ವಾರ್ಷಿಕ ವರದಿಗಳನ್ನು ಬಿಡುಗಡೆ ಮಾಡಿಲ್ಲ. ವಿಳಂಬವಾದ ದತ್ತಾಂಶಗಳಲ್ಲಿ &#8216;ಭಾರತದಲ್ಲಿ ಅಪರಾಧ&#8217; ವರದಿಯೂ ಸೇರಿದೆ, ಇದು ಸೈಬರ್ ಅಪರಾಧಗಳು, ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳ ಅಂಕಿಅಂಶಗಳು ಸೇರಿದಂತೆ ಅಪರಾಧ ಅಂಕಿಅಂಶಗಳ ಕುರಿತು ನಿರ್ಣಾಯಕ ಮಾಹಿತಿಯನ್ನು ಒದಗಿಸುತ್ತದೆ ಮತ್ತು &#8216;ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ&#8217; ಸೇರಿವೆ. ಎರಡನ್ನೂ ಕೊನೆಯದಾಗಿ 2022 ರಲ್ಲಿ ಪ್ರಕಟಿಸಲಾಯಿತು.</p>



<p><strong>ಶೂಟಿಂಗ್‌ ದಿ ಮೆಸೆಂಜರ್?</strong></p>



<p>ಇತ್ತೀಚೆಗೆ, ಕೇಂದ್ರ ಸರ್ಕಾರವು ಭಾರತದ ಮಾಜಿ ಮುಖ್ಯ ಅಂಕಿಅಂಶಶಾಸ್ತ್ರಜ್ಞ ಡಾ. ಪ್ರಣಬ್ ಸೇನ್ ನೇತೃತ್ವದ ಅಂಕಿಅಂಶಗಳ ಸ್ಥಾಯಿ ಸಮಿತಿಯನ್ನು ವಿಸರ್ಜಿಸಿತು. ವರದಿಗಳ ಪ್ರಕಾರ, ಸಮಿತಿಯ ಸದಸ್ಯರು ಜನಗಣತಿಯನ್ನು ನಡೆಸುವಲ್ಲಿನ ವಿಳಂಬದ ಬಗ್ಗೆ ಸಭೆಗಳಲ್ಲಿ ಪದೇ ಪದೇ ಕಳವಳ ವ್ಯಕ್ತಪಡಿಸಿದ್ದರು. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (NFHS) ಸಂಶೋಧನೆಗಳು ಸರ್ಕಾರದ ಹೇಳಿಕೆಗಳಿಗೆ ವಿರುದ್ಧವಾಗಿ, ದೇಶದಲ್ಲಿ ರಕ್ತಹೀನತೆಯಿಂದ ಬಳಲುತ್ತಿರುವ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ಬಯಲು ಮಲವಿಸರ್ಜನೆ ಇನ್ನೂ ಅಸ್ತಿತ್ವದಲ್ಲಿ ಇರುವುದನ್ನು ಇವು ತೋರಿಸಿವೆ. 2023 ರಲ್ಲಿ, NFHS ಅನ್ನು ಸಿದ್ಧಪಡಿಸುವ ಜವಾಬ್ದಾರಿಯುತ ಸಂಸ್ಥೆಯ ನಿರ್ದೇಶಕರನ್ನು ತೆಗೆದುಹಾಕಲಾಯಿತು.</p>



<p><strong>ದತ್ತಾಂಶ ರಾಜಕೀಯ</strong></p>



<p>ಮೋದಿ ಸರ್ಕಾರ ದತ್ತಾಂಶದ ಬಗ್ಗೆ ಅತ್ಯಂತ ಜಾಗರೂಕರಾಗಿರುವಂತೆ ಕಾಣುತ್ತದೆ. ವಸ್ತುನಿಷ್ಠ ದತ್ತಾಂಶದ ಲಭ್ಯತೆಯು ಸರ್ಕಾರದ ಕಾರ್ಯನಿರ್ವಹಣೆಯನ್ನು ಪ್ರಶ್ನಿಸಲು ಮತ್ತು ಅಧಿಕಾರದಲ್ಲಿರುವವರು ಮಾಡುವ ಪ್ರಚಾರ ಮತ್ತು ಅವರು ನೀಡುವ ಹೇಳಿಕೆಗಳನ್ನು ಪ್ರಶ್ನಿಸಲು ಜನರಿಗೆ ಅಧಿಕಾರ ನೀಡುತ್ತದೆ. ದತ್ತಾಂಶವು ನಿರ್ಣಾಯಕ ನಾಗರಿಕರ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ಆಡಳಿತ ನಡೆಸುವವರ ಹೊಣೆಗಾರಿಕೆಯನ್ನು ಖಚಿತಪಡಿಸುತ್ತದೆ. ತನ್ನ ಬಗ್ಗೆ ತಾನೇ ಸಾರ್ವಜನಿಕ ಅಭಿಪ್ರಾಯಗಳನ್ನು ರೂಪಿಸುವ ತಂತ್ರವನ್ನು ಹೆಣೆಯುವ ಕೊಡುವ ಸರ್ಕಾರವು ಪ್ರಾಥಮಿಕವಾಗಿ ಪರಿಣಾಮಕಾರಿ ದತ್ತಾಂಶ ಆಡಳಿತವನ್ನು ಜಾರಿಗೆ ತರಲು ತಡಮಾಡುತ್ತದೆ.</p>



<p>ಈ ಬಗ್ಗೆ <em>ಅರ್ಥಶಾಸ್ತ್ರದ ಪ್ರಾಧ್ಯಾಪಕಿ ಜಯತಿ ಘೋಷ್ ಅವರು ಅಂಜಲಿ ಭಾರದ್ವಾಜ್ ಮತ್ತು ಅಮೃತಾ ಜೋಹ್ರಿ</em> ನಡೆಸಿದ ಚರ್ಚೆಯನ್ನು ಇಲ್ಲಿ ನೋಡಬಹುದು: <em><a href="https://www.youtube.com/watch?v=DfD9mveLNGk">&#8216;ಭಾರತದಲ್ಲಿ ದತ್ತಾಂಶ ಸ್ಥಗಿತ &#8211; ಜನಗಣತಿಯಿಂದ ಕೋವಿಡ್ ಸಾವುಗಳವರೆಗೆ | ಜಾನೆ ಭಿ ದೋ ಯಾರೋ</a> &#8216; </em></p>



<p><strong>ಬರಹ:</strong> ಅಂಜಲಿ ಭಾರದ್ವಾಜ್, ಅಮೃತಾ ಜೋಹ್ರಿ ಮತ್ತು ಸಿಂಧು ಕೋಶಿ, ದಿ ವೈರ್</p>
]]></content:encoded>
					
		
		
			</item>
		<item>
		<title>2022 ರಲ್ಲಿ ನೋಂದಾಯಿತ ಸಾವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನಕ್ಕೆ ವೈದ್ಯಕೀಯ ಚಿಕಿತ್ಸೆ ಸಿಗಲಿಲ್ಲ; ನೋಂದಾಯಿಸದ ಸಾವುಗಳ ಲೆಕ್ಕವಿಲ್ಲ</title>
		<link>https://peepalmedia.com/more-than-half-of-registered-deaths-in-2022-did-not-receive-medical-treatment/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 10 Jun 2025 08:54:24 +0000</pubDate>
				<category><![CDATA[ಅಂಕಣ]]></category>
		<category><![CDATA[ಆರೋಗ್ಯ]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[civil registration system]]></category>
		<category><![CDATA[health]]></category>
		<category><![CDATA[india]]></category>
		<category><![CDATA[kananda]]></category>
		<category><![CDATA[karnataka]]></category>
		<category><![CDATA[Medical Attention]]></category>
		<category><![CDATA[Medical care]]></category>
		<guid isPermaLink="false">https://peepalmedia.com/?p=60670</guid>

					<description><![CDATA[ಭಾರತದಲ್ಲಿ ದಾಖಲಾಗಿರುವ ಎಲ್ಲಾ ಸಾವುಗಳಲ್ಲಿ, ಸುಮಾರು ಅರ್ಧದಷ್ಟು ಜನರು ಸಾಯುವ ಸಮಯದಲ್ಲಿ ಯಾವುದೇ ವೈದ್ಯಕೀಯ ಸೇವೆಯನ್ನು ಪಡೆಯಲಿಲ್ಲ. ನಾಗರಿಕ ನೋಂದಣಿ ವ್ಯವಸ್ಥೆಯ ( civil registration system &#8211; CRS) 2022 ರ ಇತ್ತೀಚಿನ ಮಾಹಿತಿಯ ಪ್ರಕಾರ, ದಾಖಲಾಗಿರುವ ಮರಣಗಳಲ್ಲಿ 50.7% ರಷ್ಟು ಜನರು ಯಾವುದೇ ವೈದ್ಯಕೀಯ ಸೇವೆಯನ್ನು ಪಡೆದಿರಲಿಲ್ಲ ಎಂಬುದು ಕಂಡು ಬಂದಿದೆ. ಇನ್ನು ದಾಖಲಾಗದ ಸಾವಿನ ಸಂಖ್ಯೆ ಇದರಲ್ಲಿ ಸೇರಿಲ್ಲ. ವಿಚಿತ್ರವೆಂದರೆ, ಒಟ್ಟು ಸಾವುಗಳಲ್ಲಿ ಎಷ್ಟು ಶೇಕಡಾವಾರು ದಾಖಲಾಗಿವೆ ಎಂಬುದರ ಕುರಿತು ಯಾವುದೇ ದತ್ತಾಂಶ ಲಭ್ಯವಿಲ್ಲ &#8211; ಮತ್ತು ದತ್ತಾಂಶ [&#8230;]]]></description>
										<content:encoded><![CDATA[
<pre class="wp-block-code"><code><em><strong><mark style="background-color:rgba(0, 0, 0, 0)" class="has-inline-color has-vivid-red-color">ಇತ್ತೀಚಿನ ಸಿಆರ್‌ಎಸ್ ದತ್ತಾಂಶವು 2022 ರಲ್ಲಿ ದಾಖಲಾದ 'ಒಟ್ಟು' ಸಾವುಗಳ ಸಂಖ್ಯೆಯನ್ನು ಬಹಿರಂಗಪಡಿಸಿದೆ. 2022 ರ ಮತ್ತೊಂದು ದತ್ತಾಂಶ ಸಂಗ್ರಹವಾದ ಎಸ್‌ಆರ್‌ಎಸ್ ಅನ್ನು ಬಿಡುಗಡೆ ಮಾಡಲಾಗಿಲ್ಲ, ಇದರಿಂದಾಗಿ ಎಷ್ಟು 'ಶೇಕಡಾವಾರು' ಸಾವುಗಳು ನೋಂದಾಯಿಸದೆ ಉಳಿದಿವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅಸಾಧ್ಯವಾಗಿದೆ</mark></strong></em></code></pre>



<p>ಭಾರತದಲ್ಲಿ ದಾಖಲಾಗಿರುವ ಎಲ್ಲಾ ಸಾವುಗಳಲ್ಲಿ, ಸುಮಾರು ಅರ್ಧದಷ್ಟು ಜನರು ಸಾಯುವ ಸಮಯದಲ್ಲಿ ಯಾವುದೇ ವೈದ್ಯಕೀಯ ಸೇವೆಯನ್ನು ಪಡೆಯಲಿಲ್ಲ. ನಾಗರಿಕ ನೋಂದಣಿ ವ್ಯವಸ್ಥೆಯ ( civil registration system &#8211; CRS) 2022 ರ ಇತ್ತೀಚಿನ ಮಾಹಿತಿಯ ಪ್ರಕಾರ, ದಾಖಲಾಗಿರುವ ಮರಣಗಳಲ್ಲಿ 50.7% ರಷ್ಟು ಜನರು ಯಾವುದೇ ವೈದ್ಯಕೀಯ ಸೇವೆಯನ್ನು ಪಡೆದಿರಲಿಲ್ಲ ಎಂಬುದು ಕಂಡು ಬಂದಿದೆ.</p>



<p>ಇನ್ನು ದಾಖಲಾಗದ ಸಾವಿನ ಸಂಖ್ಯೆ ಇದರಲ್ಲಿ ಸೇರಿಲ್ಲ. ವಿಚಿತ್ರವೆಂದರೆ, ಒಟ್ಟು ಸಾವುಗಳಲ್ಲಿ ಎಷ್ಟು <em>ಶೇಕಡಾವಾರು</em> ದಾಖಲಾಗಿವೆ ಎಂಬುದರ ಕುರಿತು ಯಾವುದೇ ದತ್ತಾಂಶ ಲಭ್ಯವಿಲ್ಲ &#8211; ಮತ್ತು ದತ್ತಾಂಶ ಸಿಗದಿರುವುದನ್ನು ಇದರಲ್ಲಿ ಉಲ್ಲೇಖಿಸಲಾಗಿಲ್ಲ. ಆದ್ದರಿಂದ ಸತ್ತವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರಿಗೆ ವೈದ್ಯಕೀಯ ಚಿಕಿತ್ಸೆ ಸಿಗಲಿಲ್ಲ ಎಂಬ ತೀರ್ಮಾನವು ಸಣ್ಣಮಟ್ಟಿನ ಅಂದಾಜು ಆಗಿರಬಹುದು.</p>



<p>2020 ಕ್ಕೆ ಹೋಲಿಸಿದರೆ 2022 ರಲ್ಲಿ  ಸಾಯುವ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದ ಜನರ ಶೇಕಡಾವಾರು ಪ್ರಮಾಣವು ಐದು ಶೇಕಡಾ ಪಾಯಿಂಟ್‌ಗಳಷ್ಟು ಕಡಿಮೆಯಾಗಿದೆ.</p>



<p>2022 ಮತ್ತು 2021 ರ ನಡುವಿನ ಹೋಲಿಕೆಯನ್ನು ಇಲ್ಲಿ ತಪ್ಪಿಸಲಾಗಿದೆ. ಏಕೆಂದರೆ ಆ ಸಮಯದಲ್ಲಿ ಕೋವಿಡ್-19 ರ ಎರಡನೇಯ ಡೆಲ್ಟಾ ಅಲೆ ಬಂದಿತ್ತು ಮತ್ತು ವೈದ್ಯಕೀಯ ಚಿಕಿತ್ಸೆ ಪಡೆಯುವ ಜನರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿತ್ತು, ಅದು ನಿಜಕ್ಕೂ ಸಂಭವಿಸಿದೆ.</p>



<p>ರಾಜ್ಯ ಸರ್ಕಾರಗಳ ಕಳಪೆ ಆರೋಗ್ಯ ಮೂಲಸೌಕರ್ಯಕ್ಕೆ ಮತ್ತು ಭಾಗಶಃ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳನ್ನು ಪಡೆದ ಜನರು ಇಷ್ಟು ಕಡಿಮೆ ಶೇಕಡಾವಾರು ಪ್ರಮಾಣದಲ್ಲಿದ್ದಾರೆ ಎಂಬುದು ಸತ್ಯ.</p>



<p>2022 ರಲ್ಲಿ, ವೈದ್ಯಕೀಯ ಚಿಕಿತ್ಸೆ ಪಡೆದ ಎಲ್ಲರಲ್ಲಿ, 25% ಜನರು ವೈದ್ಯಕೀಯ ಸಂಸ್ಥೆಗಳಿಂದ ಪಡೆದವರು. ಇನ್ನೂ 17.1% ಜನರು ಮೆಡಿಕಲ್‌ ಕೇರ್ ವ್ಯಾಪ್ತಿಯಿಂದ ಹೊರಗಿದ್ದರೂ, ಒಂದಲ್ಲ ಒಂದು ರೂಪದಲ್ಲಿ ವೈದ್ಯಕೀಯ ಆರೈಕೆಯನ್ನು ಪಡೆದರು.</p>



<p><strong>ಮರಣ ನೋಂದಣಿ</strong></p>



<p>2021 ರಲ್ಲಿ 102.2 ಲಕ್ಷವಿದ್ದ ನೋಂದಾಯಿತ ಸಾವುಗಳ ಸಂಖ್ಯೆ 2022 ರಲ್ಲಿ 86.5 ಲಕ್ಷಕ್ಕೆ ಇಳಿದಿದೆ. ಇದು ಶೇ. 15.4 ರಷ್ಟು ಇಳಿಕೆಯಾಗಿದೆ.</p>



<p>ಭಾರತದ ಕೆಲವು ಪ್ರಮುಖ ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು, ಉತ್ತರ ಪ್ರದೇಶ, ಕರ್ನಾಟಕ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಹರಿಯಾಣ ರಾಜ್ಯಗಳು ನೋಂದಾಯಿತ ಸಾವುಗಳ ಸಂಖ್ಯೆಯಲ್ಲಿ ಇಳಿಕೆಗೆ ಗಮನಾರ್ಹವಾಗಿ ಕಾರಣವಾಗಿವೆ.</p>



<p>2022 ರಲ್ಲಿ ಸಾವಿನ ನೋಂದಣಿ ಸಂಖ್ಯೆಯಲ್ಲಿನ ಈ ಕುಸಿತವನ್ನು ಈ ದೃಷ್ಟಿಕೋನದಿಂದ ನೋಡಬಹುದು: ಕೋವಿಡ್‌-19 ಡೆಲ್ಟಾ ಅಲೆಯ ವರ್ಷ 2021 ರಲ್ಲಿ ಸಂಭವಿಸಿದ ಸಾವುಗಳ ಸಂಖ್ಯೆಯು 2022 ರಲ್ಲಿ ಸಂಭವಿಸಿದ್ದಕ್ಕಿಂತ ಹೆಚ್ಚಿನದಾಗಿದೆ. ಆದ್ದರಿಂದ, 2021 ರಲ್ಲಿ ನೋಂದಾಯಿಸಲಾದ ಸಾವುಗಳ ಸಂಖ್ಯೆ 2022 ಕ್ಕಿಂತ ಹೆಚ್ಚಾಗಿದೆ.</p>



<p>2021 ರಲ್ಲಿ ಯಾವುದೇ ಸಾವುಗಳನ್ನು ಕಡಿಮೆ ಮಾಡಿ ಎಣಿಸಲಾಗಿಲ್ಲ ಎಂದು ಸರ್ಕಾರ ದೀರ್ಘಕಾಲದವರೆಗೆ ಹೇಳಿಕೊಂಡಿತ್ತು. ಆದರೆ 2021 ರಲ್ಲಿ ದಾಖಲಾದ ಸಾವುಗಳ ಸಂಖ್ಯೆ 2022 ರಲ್ಲಿ ಸಂಭವಿಸಿದ್ದಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ ಎಂಬ ಅಂಶವು ಸರ್ಕಾರದ ಪ್ರತಿಪಾದನೆಗಳನ್ನು ಪ್ರಶ್ನಿಸುವ ಮತ್ತೊಂದು ದತ್ತಾಂಶವಾಗಿದೆ.</p>



<p><em>ಸಿಆರ್‌ಎಸ್‌ನ 2022 ರ ದತ್ತಾಂಶದಿಂದ ದಾಖಲಾದ ಒಟ್ಟು</em> ಸಾವುಗಳ ಸಂಖ್ಯೆ ಸ್ಪಷ್ಟವಾದರೂ, ಎಷ್ಟು <em>ಶೇಕಡಾ</em> ಸಾವುಗಳು ನೋಂದಾಯಿಸಲ್ಪಟ್ಟಿಲ್ಲ ಎಂಬುದನ್ನು ಸೂಚಿಸಲು ಯಾವುದೇ ದತ್ತಾಂಶವಿಲ್ಲ, ಇದು ಸಾವುಗಳನ್ನು ದಾಖಲಿಸುವ ವ್ಯವಸ್ಥೆಯ ದೃಢತೆಯನ್ನು ಅರ್ಥಮಾಡಿಕೊಳ್ಳಲು ನಿರ್ಣಾಯಕ ಸೂಚಕವಾಗಿದೆ.</p>



<p>ಎರಡು ದತ್ತಾಂಶ ಮೂಲಗಳನ್ನು ಒಟ್ಟುಗೂಡಿಸಿ ಸಾವಿನ ಶೇಕಡಾವಾರು ಪ್ರಮಾಣವನ್ನು ಲೆಕ್ಕಹಾಕಬಹುದು:</p>



<ol class="wp-block-list">
<li>ಮಾದರಿ ನೋಂದಣಿ ವ್ಯವಸ್ಥೆ (sample registration system &#8211; SRS) ಪ್ರತಿ 1,000 ಜನಸಂಖ್ಯೆಗೆ ಸಾವಿನ ಪ್ರಮಾಣವನ್ನು ಅಂದಾಜು ಮಾಡುತ್ತದೆ ಮತ್ತು ಆದ್ದರಿಂದ, ಒಂದು ನಿರ್ದಿಷ್ಟ ವರ್ಷದಲ್ಲಿ (ಉದಾಹರಣೆಗೆ 2022) ಸಂಭವಿಸಿದ ಒಟ್ಟು ಸಾವುಗಳ <em>ಅಂದಾಜು</em> ಸಂಖ್ಯೆಯನ್ನು ನೀಡಬಹುದು .</li>



<li>ನಾಗರಿಕ ನೋಂದಣಿ ವ್ಯವಸ್ಥೆಯ ( civil registration system &#8211; CRS), ಇದು ಒಂದು ನಿರ್ದಿಷ್ಟ ವರ್ಷದಲ್ಲಿ (ಉದಾಹರಣೆಗೆ 2022) ದಾಖಲಾದ <em>ಒಟ್ಟು</em> ಸಾವುಗಳ ನಿಖರವಾದ ಸಂಖ್ಯೆಯನ್ನು ನೀಡುತ್ತದೆ.</li>
</ol>



<p>ಆದ್ದರಿಂದ, ನೋಂದಾಯಿತ ಸಾವುಗಳ ಶೇಕಡಾವಾರು = (ಒಟ್ಟು ನೋಂದಾಯಿತ ಸಾವುಗಳ ಸಂಖ್ಯೆ (CRS) / ಅಂದಾಜು ಸಾವುಗಳ ಸಂಖ್ಯೆ (SRS)) X 100.</p>



<p>ಸರ್ಕಾರವು 2022 ರ ಸಿಆರ್‌ಎಸ್ ಡೇಟಾವನ್ನು ಬಿಡುಗಡೆ ಮಾಡಿದ್ದರೂ, ಅದು 2022 ರ ಎಸ್‌ಆರ್‌ಎಸ್ ಡೇಟಾವನ್ನು ಬಿಡುಗಡೆ ಮಾಡಿಲ್ಲ. ಆದ್ದರಿಂದ, 2022 ರಲ್ಲಿ ದಾಖಲಾದ ಸಾವುಗಳ ಶೇಕಡಾವಾರು ಪ್ರಮಾಣವನ್ನು ಲೆಕ್ಕಹಾಕುವುದು ಅಸಾಧ್ಯ.</p>



<p>ಭಾರತದಲ್ಲಿ ಮರಣ ನೋಂದಣಿ ಸುಮಾರು 80% ರಷ್ಟಿದೆ, ಆದರೆ ರಾಜ್ಯವಾರು ವ್ಯತ್ಯಾಸಗಳನ್ನು ನೋಡುವುದು ಬಹಳ ಮುಖ್ಯ. 2022 ರಲ್ಲಿ ದಾಖಲಾದ ಸಾವಿನ ಶೇಕಡಾವಾರು ಇನ್ನೂ ತಿಳಿದಿಲ್ಲವಾದ್ದರಿಂದ, ಮೇಲೆ ತಿಳಿಸಿದ ಕಾರಣಗಳಿಂದಾಗಿ, ರಾಜ್ಯಗಳ ವೈಯಕ್ತಿಕ ಕಾರ್ಯಕ್ಷಮತೆಯನ್ನು ನೋಡಲು ಸಾಧ್ಯವಿಲ್ಲ.</p>



<p>ಮರಣ ನೋಂದಣಿ ಕಾನೂನಿನ ಅನುಷ್ಠಾನವು ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ. 1969 ರ ಜನನ ಮತ್ತು ಮರಣಗಳ ನೋಂದಣಿ ಕಾಯ್ದೆಯ ಪ್ರಕಾರ, ಪ್ರತಿಯೊಂದು ಸಾವನ್ನು ನೋಂದಾಯಿಸುವುದು ಕಡ್ಡಾಯವಾಗಿದೆ.</p>



<p>ನೋಂದಣಿಯಾದ ಸಾವುಗಳು ಮತ್ತು ಜನನಗಳ ನಿಜವಾದ ಸಂಖ್ಯೆಯನ್ನು ಒಳಗೊಂಡಿರುವ ಸಿಆರ್‌ಎಸ್ ಅನ್ನು ರಾಜ್ಯ ಸರ್ಕಾರಗಳು ನಡೆಸಬೇಕು. ಮತ್ತೊಂದೆಡೆ, ಅಂದಾಜು ಸಾವುಗಳು ಮತ್ತು ಜನನಗಳ ಸಂಖ್ಯೆಯನ್ನು ನೀಡುವ ಎಸ್‌ಆರ್‌ಎಸ್ ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ.</p>



<p>ನಿಜವಾದ ಸಾವುಗಳ ಸಂಖ್ಯೆಯನ್ನು ಕಳೆ ಹಾಕಲು ಸಾಧ್ಯವಾಗದೇ ಇದ್ದರೆ, ಈ ಸಮೀಕ್ಷೆಯ ಮೂಲಕ ಪ್ರತಿ 1,000 ಜನಸಂಖ್ಯೆಗೆ ಎಷ್ಟು ಸಾವುಗಳು ಸಂಭವಿಸಿವೆ ಎಂಬುದನ್ನು ಅಂದಾಜು ಮಾಡಬಹುದು, ಆದ್ದರಿಂದ SRS ಮುಖ್ಯವಾಗಿದೆ.</p>



<p>ಕೇಂದ್ರ ಸರ್ಕಾರವು CRS 2022 ಅನ್ನು ಬಿಡುಗಡೆ ಮಾಡಿದೆ, ಆದರೆ SRS 2022 ಅನ್ನು ತಡೆಹಿಡಿದಿದೆ.</p>



<p>ಮರಣ ನೋಂದಣಿಯಲ್ಲಿ ನಗರ-ಗ್ರಾಮೀಣ ಅಂತರವು ಸ್ಪಷ್ಟವಾಗಿ ಗೋಚರಿಸುತ್ತದೆ. ಎಷ್ಟೇ ಸಾವುಗಳು ದಾಖಲಾಗಿದ್ದರೂ, ಗ್ರಾಮೀಣ ಪ್ರದೇಶಗಳು ನಗರ ಪ್ರದೇಶಗಳಿಗಿಂತ ಸಾವುಗಳನ್ನು ದಾಖಲಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.</p>


<div class="wp-block-image">
<figure class="aligncenter size-full is-resized"><img loading="lazy" decoding="async" width="650" height="832" src="https://peepalmedia.com/wp-content/uploads/2025/06/image-7.png" alt="" class="wp-image-60675" style="width:377px;height:auto" srcset="https://peepalmedia.com/wp-content/uploads/2025/06/image-7.png 650w, https://peepalmedia.com/wp-content/uploads/2025/06/image-7-234x300.png 234w, https://peepalmedia.com/wp-content/uploads/2025/06/image-7-150x192.png 150w, https://peepalmedia.com/wp-content/uploads/2025/06/image-7-300x384.png 300w" sizes="auto, (max-width: 650px) 100vw, 650px" /></figure></div>


<p>ಮರಣ ನೋಂದಣಿ ಕೇವಲ ಸರಳ ಅಂಕಿಅಂಶವಲ್ಲ.</p>



<p>ಇದು ದಾಖಲೆಗಳನ್ನು ಇಡುವ ಉದ್ದೇಶವಾದರೂ, ಸಾವಿನ ಕಾರಣವನ್ನು ಕಂಡುಹಿಡಿಯಲು ಸಹ ಇದು ಸಹಾಯ ಮಾಡುತ್ತದೆ &#8211; ಜನಸಂಖ್ಯಾ ಪರಿಭಾಷೆಯಲ್ಲಿ ಇದನ್ನು ವೈದ್ಯಕೀಯವಾಗಿ ಪ್ರಮಾಣೀಕೃತ ಸಾವಿನ ಕಾರಣ (medically certified cause of deaths &#8211; MCCD) ಎಂದು ಕರೆಯಲಾಗುತ್ತದೆ.</p>



<p>ರೋಗಗಳು ಮತ್ತು ಸಾವಿನ ಇತರ ಕಾರಣಗಳು ಸೇರಿದಂತೆ ಸಾವುಗಳನ್ನು 19 ವರ್ಗಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ.</p>



<p>2022 ರಲ್ಲಿ ಕೇವಲ 22.3% ಸಾವುಗಳಿಗೆ ಕಾರಣಗಳನ್ನು ವೈದ್ಯಕೀಯವಾಗಿ ಪ್ರಮಾಣೀಕರಿಸಲಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಆ ವರ್ಷದ ನಾಲ್ಕನೇ ಮೂರು ಭಾಗಕ್ಕಿಂತ ಹೆಚ್ಚಿನ ಸಾವುಗಳಿಗೆ ಇರುವ ಕಾರಣಗಳನ್ನು ವರ್ಗೀಕರಿಸಲಾಗಿಲ್ಲ.</p>



<p>ರಾಜ್ಯವಾರು ಅಸಮಾನತೆಗಳು ಕಂಡು ಬರುತ್ತವೆ. ಉದಾಹರಣೆಗೆ, 2022 ರಲ್ಲಿ ಬಿಹಾರದಲ್ಲಿ MCCD ದರವು 5.4%, ತಮಿಳುನಾಡಿನಲ್ಲಿ 43% ಮತ್ತು ಸಿಕ್ಕಿಂನಲ್ಲಿ 48.6% ರಷ್ಟಿತ್ತು.</p>



<p>ವೈದ್ಯಕೀಯ ಆರೈಕೆ ಪಡೆಯುವಲ್ಲಿ ದಾಖಲಾಗುವ ಅರ್ಧಕ್ಕಿಂತ ಕಡಿಮೆ ಸಾವುಗಳ ಪರಿಣಾಮವೆಂದರೆ ಕಡಿಮೆ MCCD ದರ. ಇಷ್ಟು ಹೆಚ್ಚಿನ ಪ್ರಮಾಣದ ಸಾವುಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡದಿದ್ದರೆ (2022 ರಲ್ಲಿ 50.7% ರಷ್ಟು), ಅವುಗಳ ಕಾರಣವನ್ನು ಗುರುತಿಸಲು ಯಾವುದೇ ಮಾರ್ಗವಿಲ್ಲ.</p>



<p>ಹಾಗಿದ್ದರೂ, ನೋಂದಾಯಿತ ಸಾವುಗಳಲ್ಲಿ ಉಳಿದವುಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ ಎಂಬ ಅಂಶವು ಅವುಗಳ ಕಾರಣವನ್ನು ಸರಿಯಾಗಿ ಗುರುತಿಸಲಾಗಿದೆ ಎಂದು ಅರ್ಥವಲ್ಲ. ಇದಕ್ಕೆ <a href="https://pmc.ncbi.nlm.nih.gov/articles/PMC11463844/">ಹಲವಾರು ಕಾರಣಗಳಿವೆ</a> , ಆದರೆ ಪ್ರಾಥಮಿಕ ಕಾರಣವೆಂದರೆ ಆರೋಗ್ಯ ಸೇವೆ ಒದಗಿಸುವವರು ಬಳಸುವ ತಪ್ಪು ಕಾರ್ಯವಿಧಾನಗಳು.</p>



<p><strong>ಮೃತ ಶಿಶುಗಳ ಜನನ</strong>  (<strong>Stillbirths</strong>)</p>



<p>ಗರ್ಭಾವಸ್ಥೆಯ 28 ವಾರಗಳ ಅವಧಿಯಲ್ಲಿ ಅಥವಾ ನಂತರ ಯಾವುದೇ ಜೀವನದ ಲಕ್ಷಣಗಳಿಲ್ಲದೆ ಜನಿಸಿದ ಮಗುವನ್ನು ನಿರ್ಜೀವ ಜನನ ಎಂದು WHO ವ್ಯಾಖ್ಯಾನಿಸುತ್ತದೆ. ನಿರ್ಜೀವ ಜನನ ದರವು 1,000 ಜೀವಂತ ಜನನಗಳಿಗೆ ಎಷ್ಟು ಜನಿಸುತ್ತವೆ ಎಂಬುದನ್ನು ಸೂಚಿಸುತ್ತದೆ.</p>



<p>ಭಾರತವು 2022 ರಲ್ಲಿ 1,000 ಜೀವಂತ ಜನನಗಳಿಗೆ 7.54 ಮೃತ ಶಿಶು ಜನನ ದರವನ್ನು ತೋರಿಸಿದ್ದು, ಭಾರತದ ನವಜಾತ ಶಿಶು ಕ್ರಿಯಾ ಯೋಜನೆಯ ಪ್ರಕಾರ ಈ ಸಂಖ್ಯೆಯನ್ನು ಏಕ ಅಂಕೆಗೆ ಇಳಿಸುವ ಗುರಿಯನ್ನು ತಲುಪಿದೆ.</p>



<p>ಆದಾಗ್ಯೂ, ಮೇಘಾಲಯದಂತಹ ರಾಜ್ಯಗಳು ಅತಿ ಹೆಚ್ಚು ಮೃತ ಶಿಶು ಜನನ ಪ್ರಮಾಣವನ್ನು 14.46 ರಷ್ಟು ದಾಖಲಿಸಿದ್ದು, ಇದು ಇನ್ನೂ ಕಳವಳಕಾರಿ ವಿಷಯವಾಗಿದೆ. ರಾಜಸ್ಥಾನ (1,000 ಜನನಗಳಿಗೆ 12.91) ಮತ್ತು ಗುಜರಾತ್ (1,000 ಜನನಗಳಿಗೆ 10.47) ನಂತರದ ಸ್ಥಾನಗಳಲ್ಲಿವೆ.</p>


<div class="wp-block-image">
<figure class="aligncenter size-full is-resized"><img loading="lazy" decoding="async" width="648" height="641" src="https://peepalmedia.com/wp-content/uploads/2025/06/image-3.png" alt="" class="wp-image-60671" style="width:411px;height:auto" srcset="https://peepalmedia.com/wp-content/uploads/2025/06/image-3.png 648w, https://peepalmedia.com/wp-content/uploads/2025/06/image-3-300x297.png 300w, https://peepalmedia.com/wp-content/uploads/2025/06/image-3-150x148.png 150w" sizes="auto, (max-width: 648px) 100vw, 648px" /></figure></div>

<div class="wp-block-image">
<figure class="aligncenter size-full is-resized"><img loading="lazy" decoding="async" width="658" height="539" src="https://peepalmedia.com/wp-content/uploads/2025/06/image-5.png" alt="" class="wp-image-60673" style="width:398px;height:auto" srcset="https://peepalmedia.com/wp-content/uploads/2025/06/image-5.png 658w, https://peepalmedia.com/wp-content/uploads/2025/06/image-5-300x246.png 300w, https://peepalmedia.com/wp-content/uploads/2025/06/image-5-150x123.png 150w" sizes="auto, (max-width: 658px) 100vw, 658px" /></figure></div>

<div class="wp-block-image">
<figure class="aligncenter size-full is-resized"><img loading="lazy" decoding="async" width="645" height="301" src="https://peepalmedia.com/wp-content/uploads/2025/06/image-6.png" alt="" class="wp-image-60674" style="width:411px;height:auto" srcset="https://peepalmedia.com/wp-content/uploads/2025/06/image-6.png 645w, https://peepalmedia.com/wp-content/uploads/2025/06/image-6-300x140.png 300w, https://peepalmedia.com/wp-content/uploads/2025/06/image-6-150x70.png 150w" sizes="auto, (max-width: 645px) 100vw, 645px" /></figure></div>


<p>ಕೆಲವು ಅಧ್ಯಯನಗಳು ಭಾರತದಲ್ಲಿ ಮೃತ ಶಿಶುಗಳ ಜನನ ಸರಿಯಾಗಿ ಎಣಿಸಲಾಗಿಲ್ಲ (ಕಡಿಮೆ ಎಣಿಸಲಾಗಿದೆ) ಎಂದು ಸೂಚಿಸುತ್ತವೆ.</p>



<p>ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ರಾಖಿ ದಂಡೋನಾ ಮತ್ತು ಅವರ ಸಹೋದ್ಯೋಗಿಗಳು ಬರೆದಿರುವ ಈ&nbsp;<a href="https://pmc.ncbi.nlm.nih.gov/articles/PMC9948498/">ಪ್ರಬಂಧವು</a>&nbsp;2016 ಮತ್ತು 2020 ರ ನಡುವಿನ ಮೃತ ಶಿಶುಗಳ ಜನನ ಪ್ರಮಾಣವನ್ನು ವಿಶ್ಲೇಷಿಸಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ಯಿಂದ (1,000 ಜನನಗಳಿಗೆ 9.7 ಮೃತ ಶಿಶುಗಳ ಜನನಗಳು) ಭಾರತದ ಮೃತ ಶಿಶುಗಳ ಜನನ ಪ್ರಮಾಣವು 2016-2020 ರ ಮಾದರಿ ನೋಂದಣಿ ವ್ಯವಸ್ಥೆಯಲ್ಲಿ ವರದಿಯಾದ ಸರಾಸರಿ ದರಕ್ಕಿಂತ 2.6 ಪಟ್ಟು ಹೆಚ್ಚಾಗಿದೆ ಎಂದು ಅದು ಹೇಳಿದೆ.</p>



<p>ಹೆಚ್ಚಿನ ಮೃತ ಶಿಶು ಜನನ ಪ್ರಮಾಣವು ತಾಯಿಯ ಆರೈಕೆಯ ಕೊರತೆಯ ಸೂಚಕವಾಗಿದೆ. &#8220;ಮೃತ ಶಿಶು ಜನನಕ್ಕೆ ಪ್ರಮುಖ ಕಾರಣಗಳಲ್ಲಿ ಗರ್ಭಧಾರಣೆ ಮತ್ತು ಹೆರಿಗೆಗೆ ಸಂಬಂಧಿಸಿದ ತೊಡಕುಗಳು [ಆರೋಗ್ಯ ಮೂಲಸೌಕರ್ಯ ಕಳಪೆಯಾಗಿರುವುದರಿಂದ]; ದೀರ್ಘಕಾಲದ ಗರ್ಭಧಾರಣೆ; ಮಲೇರಿಯಾ, ಸಿಫಿಲಿಸ್ ಮತ್ತು ಎಚ್ಐವಿ ತಾಯಿಯ ಪರಿಸ್ಥಿತಿಗಳು, ವಿಶೇಷವಾಗಿ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ತಾಯಿಯ ಸೋಂಕುಗಳು; ಮತ್ತು ಭ್ರೂಣದ ಬೆಳವಣಿಗೆಯ ನಿರ್ಬಂಧ [ಹುಟ್ಟಲಿರುವ ಮಗು ತನ್ನ ಬೆಳವಣಿಗೆಯ ಸಾಮರ್ಥ್ಯವನ್ನು ಸಾಧಿಸಲು ಸಾಧ್ಯವಾಗದಿದ್ದಾಗ ಮತ್ತು ಆದ್ದರಿಂದ ಅದು ಇರಬೇಕಾದಕ್ಕಿಂತ ಚಿಕ್ಕದಾಗಿದ್ದಾಗ] ಸೇರಿವೆ&#8221; ಎಂದು WHO ತಿಳಿಸಿದೆ.</p>



<p><strong>ಲಿಂಗ ಅನುಪಾತ</strong></p>



<p>ಸಿಆರ್‌ಎಸ್‌ನಲ್ಲಿ ಅತ್ಯಂತ ನಿರ್ಣಾಯಕ ಸೂಚಕಗಳಲ್ಲಿ ಒಂದು ಜನನದ ಸಮಯದಲ್ಲಿನ ಲಿಂಗ ಅನುಪಾತ, ಅಂದರೆ 1,000 ಪುರುಷರಿಗೆ ಮಹಿಳೆಯರ ಸಂಖ್ಯೆ. ಬಿಹಾರವು 891 ರ ಅತ್ಯಂತ ಕಡಿಮೆ ಲಿಂಗ ಅನುಪಾತವನ್ನು ದಾಖಲಿಸಿದೆ. ಇದರ ಲಿಂಗ ಅನುಪಾತವು 2021 ರಲ್ಲಿ 908 ರಿಂದ 2022 ರಲ್ಲಿ 891 ಕ್ಕೆ ಇಳಿದಿದೆ.</p>



<p>ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಎರಡು ದಶಕಗಳಿಗೂ ಹೆಚ್ಚಿನ ವೃತ್ತಿಜೀವನದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದ್ದಾರೆ, ಅವುಗಳಲ್ಲಿ &#8216;ಮುಖ್ಯಮಂತ್ರಿ ಕನ್ಯಾ ಸುರಕ್ಷಾ ಯೋಜನೆ&#8217; (ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಮೊದಲು ಜನಿಸಿದವರಿಗೆ ಆರ್ಥಿಕವಾಗಿ ಸಹಾಯ ಮಾಡಲು), &#8216;ಮುಖ್ಯಮಂತ್ರಿ ಬಾಲಿಕಾ ಸೈಕಲ್ ಯೋಜನೆ&#8217; (ಶಾಲೆಯಲ್ಲಿ ಹುಡುಗಿಯರ ದಾಖಲಾತಿಯನ್ನು ಸುಧಾರಿಸಲು), &#8216;ಮುಖ್ಯಮಂತ್ರಿ ಮಹಿಳಾ ಉದ್ಯಮಿ ಯೋಜನೆ&#8217; (ವ್ಯಾಪಾರ ಉದ್ಯಮಗಳನ್ನು ಪ್ರಾರಂಭಿಸಲು ಮಹಿಳೆಯರಿಗೆ 10 ಲಕ್ಷ ರೂ.ಗಳನ್ನು ಒದಗಿಸುತ್ತದೆ) ಮತ್ತು &#8216;ನಿಶ್ಚಯ್ ಆರಕ್ಷಿತ್ ರೋಜ್‌ಗಾರ್ ಮಹಿಳಾವೋಂ ಕಾ ಅಧಿಕಾರ್&#8217; (ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಮೀಸಲಾತಿ) ಸೇರಿವೆ.</p>



<p>ಈ ಯೋಜನೆಗಳು ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟುವುದು ಮತ್ತು ಮಹಿಳೆಯರ ಜೀವನದ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿವೆ. ಆದಾಗ್ಯೂ, 2022 ರಲ್ಲಿ ರಾಜ್ಯವು ದೇಶದಲ್ಲೇ ಅತ್ಯಂತ ಕೆಟ್ಟ ಲಿಂಗ ಅನುಪಾತವನ್ನು ದಾಖಲಿಸಿದೆ ಎಂಬ ಅಂಶವು ಈ ಯೋಜನೆಗಳ ವ್ಯಾಪಕ ವ್ಯಾಪ್ತಿಯನ್ನು ಮತ್ತು ವಿಶೇಷವಾಗಿ ಅವು ಸಮಾಜ ಮತ್ತು ಜನರ ಮನಸ್ಸಿನ ಮೇಲೆ ಬೀರುತ್ತಿರುವ ಪರಿಣಾಮವನ್ನು ಪ್ರಶ್ನಿಸುವಂತೆ ಮಾಡುತ್ತದೆ.</p>



<p>ಬಿಹಾರದ ಜೊತೆಗೆ, ಇತರ ಕೆಲವು ರಾಜ್ಯಗಳು ಸಹ ತಮ್ಮ ಲಿಂಗ ಅನುಪಾತದಲ್ಲಿ ಕುಸಿತವನ್ನು ದಾಖಲಿಸಿವೆ. ಅವುಗಳೆಂದರೆ: ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ತೆಲಂಗಾಣ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ.</p>


<div class="wp-block-image">
<figure class="aligncenter size-full is-resized"><img loading="lazy" decoding="async" width="645" height="604" src="https://peepalmedia.com/wp-content/uploads/2025/06/image-8.png" alt="" class="wp-image-60681" style="width:403px;height:auto" srcset="https://peepalmedia.com/wp-content/uploads/2025/06/image-8.png 645w, https://peepalmedia.com/wp-content/uploads/2025/06/image-8-300x281.png 300w, https://peepalmedia.com/wp-content/uploads/2025/06/image-8-150x140.png 150w" sizes="auto, (max-width: 645px) 100vw, 645px" /></figure></div>

<div class="wp-block-image">
<figure class="aligncenter size-full is-resized"><img loading="lazy" decoding="async" width="612" height="497" src="https://peepalmedia.com/wp-content/uploads/2025/06/image-9.png" alt="" class="wp-image-60682" style="width:391px;height:auto" srcset="https://peepalmedia.com/wp-content/uploads/2025/06/image-9.png 612w, https://peepalmedia.com/wp-content/uploads/2025/06/image-9-300x244.png 300w, https://peepalmedia.com/wp-content/uploads/2025/06/image-9-150x122.png 150w" sizes="auto, (max-width: 612px) 100vw, 612px" /></figure></div>

<div class="wp-block-image">
<figure class="aligncenter size-full is-resized"><img loading="lazy" decoding="async" width="641" height="203" src="https://peepalmedia.com/wp-content/uploads/2025/06/image-11.png" alt="" class="wp-image-60684" style="width:408px;height:auto" srcset="https://peepalmedia.com/wp-content/uploads/2025/06/image-11.png 641w, https://peepalmedia.com/wp-content/uploads/2025/06/image-11-300x95.png 300w, https://peepalmedia.com/wp-content/uploads/2025/06/image-11-150x48.png 150w" sizes="auto, (max-width: 641px) 100vw, 641px" /></figure></div>


<p>ಕೆಲವು ರಾಜ್ಯಗಳ ಲಿಂಗ ಅನುಪಾತವು ಕಳವಳಕಾರಿ ವಿಷಯವಾಗಿದ್ದರೂ, ಭಾರತದ ಒಟ್ಟಾರೆ ಸರಾಸರಿ ಲಿಂಗ ಅನುಪಾತವು ವರ್ಷಗಳಲ್ಲಿ ಸ್ಥಿರವಾಗಿ ಸುಧಾರಿಸಿದೆ ಎಂದು NFHS ಗಳ ದತ್ತಾಂಶವು ಸೂಚಿಸುತ್ತದೆ.</p>



<p>2015-16ರ ನಡುವೆ ನಡೆಸಿದ NFHS ನ ನಾಲ್ಕನೇ ಸುತ್ತಿನ ಅಡಿಯಲ್ಲಿ ನೋಂದಾಯಿಸಲಾದ ಲಿಂಗ ಅನುಪಾತವು 991 ಆಗಿದ್ದರೆ, 2020-21 ರಿಂದ ನಡೆಸಿದ ಐದನೇ ಸುತ್ತಿನ ಸಮೀಕ್ಷೆಯಲ್ಲಿ ಅದು 1,020 ಕ್ಕೆ ಏರಿದೆ.</p>



<p>ಹೀಗಾಗಿ, ಇತ್ತೀಚಿನ ವರ್ಷಗಳಲ್ಲಿ ಮೊದಲ ಬಾರಿಗೆ, ಹೆಣ್ಣು ಮಕ್ಕಳ ಜನನದ ಸಂಖ್ಯೆಯು ಪುರುಷರ ಜನನಕ್ಕಿಂತ ಹೆಚ್ಚಾಗಿದೆ.</p>



<p><strong>ಲೇಖನ: </strong>ಬಂಜೋತ್ ಕೌರ್, <a href="https://thewire.in/health/over-half-registered-deaths-2022-no-medical-attention">Over Half of Registered Deaths in 2022 Got No Medical Attention; Unregistered Deaths Not Even Counted</a></p>



<p></p>
]]></content:encoded>
					
		
		
			</item>
		<item>
		<title>ಜೈಲಿನಲ್ಲಿ ಭರವಸೆ ಬೆಳೆಸಿಕೊಳ್ಳುವುದು ಅಪಾಯಕಾರಿ: ತಿಹಾರ್ ಜೈಲಿನಿಂದ ಉಮರ್ ಖಾಲಿದ್ ಪತ್ರ</title>
		<link>https://peepalmedia.com/developing-hope-in-jail-is-dangerous-umar-khalid/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 10 Jun 2025 07:31:39 +0000</pubDate>
				<category><![CDATA[ಅಂಕಣ]]></category>
		<category><![CDATA[Bangalore]]></category>
		<category><![CDATA[Fyodor Dostoevsky]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[The House of the Dead]]></category>
		<category><![CDATA[Tihar Jail]]></category>
		<category><![CDATA[Umar Khalid]]></category>
		<guid isPermaLink="false">https://peepalmedia.com/?p=60650</guid>

					<description><![CDATA[ನಾನು ಇತ್ತೀಚೆಗೆ ಮುಗಿಸಿದ ಪುಸ್ತಕವೆಂದರೆ ಫ್ಯೋಡರ್ ದಾಸ್ತೋಸ್ಕಿ&#160;&#8220;ದಿ ಹೌಸ್ ಆಫ್ ದಿ ಡೆಡ್&#8220;. ಇದು 19 ನೇ ಶತಮಾನದ ಮಧ್ಯಭಾಗದಲ್ಲಿ ಝಾರ್‌ ಅರಸೊತ್ತಿಗೆಯ ಆಡಳಿತದ ರಷ್ಯಾದಲ್ಲಿ ತಾನು ಅನುಭವಿಸಿದ ಜೈಲುವಾಸವನ್ನು ಆಧಿರಿಸಿ ಬರೆದ ಒಂದು ಕಾಲ್ಪನಿಕ ಕತೆ. ಪುಸ್ತಕವನ್ನು ಓದಿದಾಗ, ನನಗೆ ಬಂದ ಅತ್ಯಂತ ಭಯಾನಕ ಆಲೋಚನೆಯೆಂದರೆ, ಜಗತ್ತು ಅನೇಕ ರೀತಿಯಲ್ಲಿ ರೂಪಾಂತರಗೊಂಡಿದ್ದರೂ ಜೈಲುವಾಸದ ಅನುಭವಗಳ ವಿಚಾರದಲ್ಲಿ ಹೆಚ್ಚು ಬದಲಾವಣೆಯೇ ಆಗಿಲ್ಲ ಎಂಬುದು. ಪುಸ್ತಕದಲ್ಲಿ ವಿವರಿಸಿದ ಘಟನೆಗಳಾಗಿ 150 ವರ್ಷಗಳಿಗೂ ಹೆಚ್ಚು ಕಾಲ ಆಗಿಹೋಗಿದೆ. ಅದು ನಡೆದದ್ದು [&#8230;]]]></description>
										<content:encoded><![CDATA[
<pre class="wp-block-code"><code><strong><mark style="background-color:rgba(0, 0, 0, 0);color:#049df6" class="has-inline-color">ಕಳೆದ ಐದು ವರ್ಷಗಳಿಂದ ತಿಹಾರ್‌ ಜೈಲಿನಲ್ಲಿ ಇರುವ ಉಮರ್ ಖಾಲಿದ್ ಅವರು ದಾಸ್ತೋಸ್ಕಿಯು ಜೈಲಿನ ಬಗ್ಗೆ ಬರೆದ ಬರಹಗಳ ಮೂಲಕ ಸಾಂತ್ವನವನ್ನು ಕಂಡುಕೊಳ್ಳುತ್ತಿದ್ದಾರೆ, ಜೈಲುವಾಸದಲ್ಲಿ ಬೆಳೆಸಿಕೊಳ್ಳುವ ಭರವಸೆ ಮತ್ತು ಹತಾಶೆಯ ಬಗ್ಗೆ ಕೆಲವು ವಿಚಾರಗಳನ್ನು ತಮ್ಮ ಪತ್ರದಲ್ಲಿ ಬರೆದಿದ್ದಾರೆ </mark></strong></code></pre>



<p>ನಾನು ಇತ್ತೀಚೆಗೆ ಮುಗಿಸಿದ ಪುಸ್ತಕವೆಂದರೆ ಫ್ಯೋಡರ್ ದಾಸ್ತೋಸ್ಕಿ&nbsp;<em>&#8220;<a href="https://www.holybooks.com/wp-content/uploads/The-House-of-the-Dead.pdf">ದಿ ಹೌಸ್ ಆಫ್ ದಿ ಡೆಡ್</a>&#8220;</em>. ಇದು 19 ನೇ ಶತಮಾನದ ಮಧ್ಯಭಾಗದಲ್ಲಿ ಝಾರ್‌ ಅರಸೊತ್ತಿಗೆಯ ಆಡಳಿತದ ರಷ್ಯಾದಲ್ಲಿ ತಾನು ಅನುಭವಿಸಿದ ಜೈಲುವಾಸವನ್ನು ಆಧಿರಿಸಿ ಬರೆದ ಒಂದು ಕಾಲ್ಪನಿಕ ಕತೆ.</p>



<p>ಪುಸ್ತಕವನ್ನು ಓದಿದಾಗ, ನನಗೆ ಬಂದ ಅತ್ಯಂತ ಭಯಾನಕ ಆಲೋಚನೆಯೆಂದರೆ, ಜಗತ್ತು ಅನೇಕ ರೀತಿಯಲ್ಲಿ ರೂಪಾಂತರಗೊಂಡಿದ್ದರೂ ಜೈಲುವಾಸದ ಅನುಭವಗಳ ವಿಚಾರದಲ್ಲಿ ಹೆಚ್ಚು ಬದಲಾವಣೆಯೇ ಆಗಿಲ್ಲ ಎಂಬುದು. ಪುಸ್ತಕದಲ್ಲಿ ವಿವರಿಸಿದ ಘಟನೆಗಳಾಗಿ 150 ವರ್ಷಗಳಿಗೂ ಹೆಚ್ಚು ಕಾಲ ಆಗಿಹೋಗಿದೆ. ಅದು ನಡೆದದ್ದು ಪ್ರಪಂಚದ ಬೇರೆ ಭಾಗದಲ್ಲಾದರೂ, ಅನೇಕ ಸ್ಥಳಗಳಲ್ಲಿ, ಅದರಲ್ಲೂ ತಿಹಾರ್‌ ಜೈಲಿನಲ್ಲಿ ನನ್ನ ಸುತ್ತಮುತ್ತ ನಾನು ನೋಡುವ ಸಂಗತಿಗಳು ಮತ್ತು ಘಟನೆಗಳನ್ನೇ ದಾಸ್ತೋಸ್ಕಿ ತನ್ನ ಪುಸ್ತಕದಲ್ಲಿ ಹೇಳುತ್ತಿದ್ದಾನೆ ಎಂದೆನಿಸಿತು.</p>



<pre class="wp-block-code"><code><strong><mark style="background-color:rgba(0, 0, 0, 0);color:#f80707" class="has-inline-color">ಪುಸ್ತಕದಲ್ಲಿ ಜೈಲಿನ ಪರಿಸ್ಥಿತಿಯ ಬಗ್ಗೆ ಒಬ್ಬ ಸಹ ಕೈದಿಯ ಮಾತನ್ನು ದಾಸ್ತೋಸ್ಕಿ ಹೀಗೆ ಉಲ್ಲೇಖಿಸುತ್ತಾನೆ - "ನಾವು ಬದುಕಿದ್ದರೂ ಜೀವಂತವಾಗಿಲ್ಲ, ನಾವು ಸತ್ತಿದ್ದರೂ ನಮ್ಮ ಸಮಾಧಿಗಳಲ್ಲಿಲ್ಲ!"</mark></strong></code></pre>



<p>ಏಳು ದಿನಗಳ ಮಧ್ಯಂತರ ಜಾಮೀನಿನ ನಂತರ ಜೈಲಿಗೆ ಮರಳುವುದು ಎಷ್ಟು ಅವಾಸ್ತವಿಕವಾಗಿತ್ತು ಎಂಬುದನ್ನು ವಿವರಿಸಲು ನಾನು ಸ್ವಲ್ಪ ಸಮಯದ ಹಿಂದೆ ಬಾನ್ (ಅನಿರ್ಬನ್ ಭಟ್ಟಾಚಾರ್ಯ) ಮತ್ತು ಡೈಸಿಗೆ ಹೇಳಿದ್ದು ನೆನಪಿದೆ. ವಾಸ್ತವವಾಗಿ, ಜೈಲು ಜೀವಂತರ ಸ್ಮಶಾನ ಇದ್ದಂತೆ ಎಂಬ ಬೈಬಲ್‌ನ ಕಥೆಯನ್ನು ನಾನು ಉಲ್ಲೇಖಿಸಿದ್ದೆ. ಅಚ್ಚರಿಯೆಂದರೆ, ನಾನು ಆಗ ಈ ಪುಸ್ತಕವನ್ನು ಓದಿರಲಿಲ್ಲ.&nbsp;</p>



<p>&#8220;ಬದುಕು ಮತ್ತು ಸಾವಿನ ನಡುವಿನ ಸ್ಥಿತಿ&#8221; ಎಂದು ಭಾವಿಸುವಂತೆ ಮಾಡುವ ಏನೋ ಒಂದು ಈ ಸೆರೆಯಲ್ಲಿದೆ. ನಾನು ಬೈಬಲ್ ಕಥೆಯಲ್ಲಿ ಬರುವ &#8220;ಜೀವಂತರ ಸ್ಮಶಾನ&#8221; ಎಂಬ ಮಾತನ್ನು ಉಲ್ಲೇಖಿಸಿದ್ದರೆ, ದಾಸ್ತೋಸ್ಕಿ ತನ್ನ ಕತೆಗೆ &#8221;&nbsp;<em>ದಿ ಹೌಸ್ ಆಫ್ ದಿ ಡೆಡ್&#8221;</em>&nbsp;ಎಂದು ಹೆಸರಿಸಿಟ್ಟಿದ್ದಾನೆ.&nbsp;</p>



<pre class="wp-block-code"><code><strong><mark style="background-color:rgba(0, 0, 0, 0);color:#f60505" class="has-inline-color">ಇನ್ನು ಕೆಲವೇ ದಿನಗಳಲ್ಲಿ ನಾನು ಇಲ್ಲಿಗೆ ಬಂದು ಐದು ವರ್ಷಗಳು ತುಂಬಲಿವೆ. ಕೆಲವೊಮ್ಮೆ ನಾನು ಇಷ್ಟೇ ಅಗಲದ ಸೀಮಿತ ಜಾಗದಲ್ಲಿ ಇಷ್ಟು ದಿನ ಹೇಗೆ ಬದುಕುಳಿದಿದ್ದೇನೆ ಮತ್ತು ಈ ದೀರ್ಘ ಅವಧಿಯಲ್ಲಿ ಹೆಚ್ಚಿನ ಸಮಯ ವಿಶ್ರಾಂತಿ ಪಡೆಯದೆ ಇದ್ದಿದ್ದಾದರೂ ಹೇಗೆ ಎಂಬುದು ಆಶ್ಚರ್ಯಕರ. ನನಗೆ ಕಿರಿಕಿರಿಯಾಗುವ ಮತ್ತು ಖಿನ್ನತೆಗೆ ಒಳಗಾದ ದಿನಗಳಿದ್ದವು. ಬುನೋ (ಬನೋಜ್ಯೋತ್ಸ್ನಾ ಲಹಿರಿ) ಜೊತೆಗೆ ನಾನು ಅದನ್ನೆಲ್ಲಾ ಹೊರಹಾಕಿದ್ದೆ- ಆದರೆ ಅದೂ ಹೆಚ್ಚು ದಿನ ನಡೆಯಲಿಲ್ಲ. ಆದರೂ, ಆ ದಿನಗಳಲ್ಲಿ ನನಗೆ ಕೊಂಚ ಶಾಂತಿ ಸಿಕ್ಕಿತ್ತು. </mark></strong></code></pre>



<p>ತನ್ನ ಕತೆಯ ಆರಂಭದಲ್ಲಿಯೇ ದಾಸ್ತೋಸ್ಕಿ, &#8220;ಜೈಲಿನಲ್ಲಿ ತಾಳ್ಮೆ ಕಲಿಯಲು ಬೇಕಾದಷ್ಟು ಸಮಯವಿದೆ,&#8221; ಎಂದು ಬರೆಯುತ್ತಾನೆ. ಆದರೆ ನಾನು ಇಲ್ಲಿ ಕಲಿತ ಆ ತಾಳ್ಮೆಯನ್ನು ಹೊರಗಿನ ಪ್ರಪಂಚಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದು ಭಾವಿಸುವುದಿಲ್ಲ &#8211; ನಾನು ಹೊರಗೆ ಹೋದ ನಂತರ, ಅದು ಯಾವಾಗ ಬೇಕಾದರೂ ಇಲ್ಲವಾಗಬಹುದು, ನಾನು ನನ್ನ ಪ್ರಕ್ಷುಬ್ಧ ಸ್ವಭಾವಕ್ಕೆ ಮರಳಬಹುದು. ಇದು ಕಳೆದ ಡಿಸೆಂಬರ್‌ನಲ್ಲಿ ನಾನು ಹೊರಗೆ ಕಳೆದ ಆ 7 ದಿನಗಳಲ್ಲಿ ನನ್ನ ಅರಿವಿಗೆ ಬಂದಿದೆ.</p>



<p>ಹೇಗಾದರೂ, ನಾನು ಈ ಜಾಗದಲ್ಲಿ ಇಷ್ಟು ದಿನ ಬದುಕುಳಿದಿದ್ದಕ್ಕೆ ಮತ್ತು ಶಾಂತವಾಗಿರಲು ಇನ್ನೊಂದು ಕಾರಣವೆಂದರೆ, ನಾನು ಅಷ್ಟು ದೊಡ್ಡ ಭಾಗಗಳಲ್ಲಿ ಸಮಯದ ಬಗ್ಗೆ ಯೋಚಿಸಲಿಲ್ಲ. ಇದೊಂದು ದೀರ್ಘವಾದ ಪ್ರಯಾಣ ಎಂಬುದು ಕೊನೆಗೂ ಸ್ಪಷ್ಟವಾಯಿತು. ಆದರೆ ಇಲ್ಲಿ ದಿನಗಳನ್ನು ಕಳೆಯುವಾಗ, ಗಮನ ಕೊಡಲು ಯಾವಾಗಲೂ ತಕ್ಷಣದ ದಿನಾಂಕವಿರುತ್ತದೆ &#8211; ಅದು ಸಾಮಾನ್ಯವಾಗಿ ಕೆಲವು ದಿನಗಳಿರಬಹುದು, ಹೆಚ್ಚೆಂದರೆ ಕೆಲವು ತಿಂಗಳುಗಳಿರಬಹುದು &#8211; ನಾನು ಜುಲೈ 2021 ರಿಂದ ನಡೆಯುತ್ತಿರುವ ನನ್ನ ಜಾಮೀನು ವಿಚಾರಣೆಗಳ ಬಗ್ಗೆ ಮಾತನಾಡುತ್ತಿದ್ದೇನೆ. ಕಡಿಮೆ ಅವಧಿಯ ಈ ದಿನಾಂಕಗಳು ನಮಗೆ ಎದುರುನೋಡಲು ಏನನ್ನಾದರೂ ಕೊಡುತ್ತವೆ, ಬದುಕಲು ಏನನ್ನಾದರೂ ನೀಡುತ್ತವೆ, ಸಮಯವನ್ನು ಗುರುತಿಸಲು ಏನನ್ನಾದರೂ ನೀಡುತ್ತವೆ ಮತ್ತು ಭರವಸೆಯನ್ನು ಇಟ್ಟುಕೊಳ್ಳಲು ಏನನ್ನಾದರೂ ನೀಡುತ್ತವೆ.</p>



<p><strong>ಜೈಲಿನಲ್ಲಿ ಹುಟ್ಟುವ ಭರವಸೆಯ ಬಗ್ಗೆ</strong>&nbsp;ದೋಸ್ತೋಸ್ಕಿ ಕೆಲವು ಚಿಂತನೆಗಳನ್ನು ಹೊಂದಿದ್ದಾನೆ. ಅವರು ಬರೆಯುತ್ತಾನೆ, “ನನ್ನ ಜೈಲುವಾಸದ ಮೊದಲ ದಿನದಿಂದಲೇ, ನಾನು ಸ್ವಾತಂತ್ರ್ಯದ ಕನಸು ಕಾಣಲು ಪ್ರಾರಂಭಿಸಿದೆ. ನನ್ನ ಜೈಲು ದಿನಗಳು ಯಾವಾಗ ಮುಗಿಯುತ್ತವೆ ಎಂದು ಸಾವಿರ ವಿಭಿನ್ನ ರೀತಿಯಲ್ಲಿ ಲೆಕ್ಕ ಹಾಕುವುದು ನನ್ನ ನೆಚ್ಚಿನ ಉದ್ಯೋಗವಾಯಿತು. ಅದು ಯಾವಾಗಲೂ ನನ್ನ ಮನಸ್ಸಿನಲ್ಲಿತ್ತು, ನಿಗದಿತ ಅವಧಿಯ ವರೆಗೆ ಸ್ವಾತಂತ್ರ್ಯದಿಂದ ವಂಚಿತರಾದ ಪ್ರತಿಯೊಬ್ಬರ ವಿಷಯದಲ್ಲೂ ಇದು ಇದ್ದೇ ಇರುತ್ತದೆ ಎಂದು ನನಗೆ ಖಚಿತವಾಗಿದೆ. ಇತರ ಅಪರಾಧಿಗಳು ನನ್ನ ಹಾಗೆ ಯೋಚಿಸಿದ್ದಾರೋ, ಲೆಕ್ಕ ಹಾಕಿದ್ದಾರೋ ಎಂಬುದು ನನಗೆ ತಿಳಿದಿಲ್ಲ, ಆದರೆ ಅವರ ಭರವಸೆಗಳಲ್ಲಿದ್ದ ಅದ್ಭುತ ಧೈರ್ಯವು ಮೊದಲಿನಿಂದಲೂ ನನ್ನನ್ನು ಪ್ರಭಾವಿಸಿತು.&#8221;</p>



<p>&#8220;ಸ್ವಾತಂತ್ರ್ಯ ಇಲ್ಲದ ಕೈದಿಯ ಆಶಯಗಳು ನೈಸರ್ಗಿಕ ಜೀವನವನ್ನು ನಡೆಸುವ ಮನುಷ್ಯನ ಆಶಯಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿವೆ. ಒಬ್ಬ ಸ್ವತಂತ್ರ ಮನುಷ್ಯನು (ಉದಾಹರಣೆಗೆ ಅದೃಷ್ಟ ಕೂಡಿ ಬರಲು, ಅಥವಾ ಒಂದು ಕಾರ್ಯದ ಯಶಸ್ಸಿಗಾಗಿ) ಆಶಿಸುತ್ತಾನೆ, ಆದಕ್ಕಾಗಿ ಬದುಕುತ್ತಾನೆ, ವರ್ತಿಸುತ್ತಾನೆ, ಜೀವನ ಜಗತ್ತಿನಲ್ಲಿ ಸಿಲುಕಿಕೊಳ್ಳುತ್ತಾನೆ. ಕೈದಿಯ ವಿಷಯದಲ್ಲಿ ಇದು ತುಂಬಾ ಭಿನ್ನ. ಅವನಿಗೂ ಜೀವನವಿದೆ &#8211; ಅವನಿಗೆ ಜೈಲಿನ ಜೀವನ ನೀಡಲಾಗಿದೆ &#8211; ಆದರೆ ಅವನ ಅಪರಾಧ ಏನೇ ಇರಲಿ ಮತ್ತು ಅವನ ಶಿಕ್ಷೆಯ ಅವಧಿ ಎಷ್ಟೇ ಇರಲಿ, ತನ್ನ ಆ ಪಾಲನ್ನು ನಿಜ ಜೀವನದ ಭಾಗವಾಗಿ ಸಕಾರಾತ್ಮಕ, ಅಂತಿಮ ಎಂಬಂತೆ ಸ್ವೀಕರಿಸಲು ಸಹಜವಾಗಿಯೇ ಅವನಿಗೆ ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬ ಅಪರಾಧಿಯೂ ತಾನು ತನ್ನ ಮನೆಯಲ್ಲಿಲ್ಲ, ಆದರೆ ಮನೆಯವರ ಭೇಟಿಯಲ್ಲಿದ್ದೇನೆ ಎಂದು ಭಾವಿಸುತ್ತಾನೆ. ಅವನು ಇಪ್ಪತ್ತು ವರ್ಷಗಳನ್ನು ಎರಡು ವರ್ಷಗಳಂತೆ ನೋಡುತ್ತಾನೆ. 55 ನೇ ವಯಸ್ಸಿನಲ್ಲಿ ಬಿಡುಗಡೆಯಾದಾಗ &#8211; ಅವನು ಈಗ 35 ವರ್ಷ ವಯಸ್ಸಿನಂತೆಯೇ ಜೀವನ ಮತ್ತು ಶಕ್ತಿಯಿಂದ ತುಂಬಿರುತ್ತಾನೆ ಎಂದು ಸಂಪೂರ್ಣವಾಗಿ ಮನವರಿಕೆ ಮಾಡಿಕೊಳ್ಳುತ್ತಾನೆ,&#8221; ಎಂದು ದಾಸ್ತೋಸ್ಕಿ ಬರೆಯುತ್ತಾನೆ.</p>



<p>ಹಾಗೆ, ಪುಸ್ತಕದಲ್ಲಿ ಅವನು ಹೀಗೆ ಬರೆಯುತ್ತಾನೆ, &#8220;ಯಾವುದೇ ಗುರಿ ಇರಲಿ, ಅದನ್ನು ತಲುಪಲು ಸ್ವಲ್ಪವೂ ಪ್ರಯತ್ನವಿಲ್ಲದಿದ್ದರೆ ಯಾವ ಮನುಷ್ಯನಿಗಾದರೂ ಬದುಕಲು ಸಾಧ್ಯವಿಲ್ಲ. ಜೀವನದಲ್ಲಿ ಎಲ್ಲಾ ಭರವಸೆ, ಎಲ್ಲಾ ಉದ್ದೇಶಗಳನ್ನು ಕಳೆದುಕೊಂಡಾಗ, ಮನುಷ್ಯನು ತನ್ನ ದುಃಖದ ಮಡುವಿನಲ್ಲಿ ಬಿದ್ದು ದೈತ್ಯನಾಗುತ್ತಾನೆ. ಕೈದಿಗಳ ಒಂದೇ ಗುರಿ- ಅದು ಸ್ವಾತಂತ್ರ್ಯ ಮತ್ತು ಜೈಲಿನಿಂದ ಹೊರಬರುವುದು.&#8221;</p>



<pre class="wp-block-code"><code><strong><mark style="background-color:rgba(0, 0, 0, 0);color:#f90404" class="has-inline-color">ಬಹುಶಃ ನನ್ನ ಕೆಲವು ಸ್ನೇಹಿತರು ಭಾವಿಸಿದಂತೆ ನಾನು ಈಗ ಮೊದಲಿನಂತೆ ಆಶಾವಾದಿಯಾಗಿ ಉಳಿದಿಲ್ಲ. ಅದು ನಿಜ. ಆದರೆ ನನ್ನ ಆಶಾವಾದದ ಕೊರತೆಯು ಪ್ರಸ್ತುತ ರಾಜಕೀಯ ಪರಿಸ್ಥಿತಿಯ ವಾಸ್ತವಿಕ ಮೌಲ್ಯಮಾಪನವನ್ನು ಆಧರಿಸಿದೆ.</mark></strong></code></pre>



<p>ಮತ್ತು ನಾನು ಮೊದಲೇ ಹೇಳಿದಂತೆ, ಜೈಲಿನಲ್ಲಿ ಭರವಸೆಯನ್ನು ಬೆಳೆಸಿಕೊಳ್ಳುವುದು ಕೂಡ ಅಪಾಯಕಾರಿ ಕೆಲಸ. ನೀವು ಎಷ್ಟು ಎತ್ತರಕ್ಕೆ ಆಶಿಸುತ್ತೀರೋ, ಅಷ್ಟೇ ಎತ್ತರದಿಂದ ಕೆಳಗೆ ಬೀಳುತ್ತೀರಿ. ಸರಳವಾಗಿ ಹೇಳುವುದಾದರೆ, ನನಗೆ ಭರವಸೆಯ ಬಗ್ಗೆ ಭಯವಿದೆ, ಆದ್ದರಿಂದ ನಾನು ಭರವಸೆಯಿಂದ ದೂರ ಉಳಿಯಲು ಪ್ರಯತ್ನಿಸುತ್ತೇನೆ.</p>



<p>ಆದರೆ ಜೈಲಿನಲ್ಲಿ ಬದುಕುಳಿಯಲು ಬೆಳೆಸಿಕೊಳ್ಳುವ ಈ ರೀತಿಯ ಮನೋಭಾವದ ವಿಚಾರಕ್ಕೆ ಬಂದಾಗ, ನಾನು ಹೇಳಿದ್ದಕ್ಕೆ ಸಾಕಷ್ಟು ಅಪವಾದ ಇದೆ. ಇಲ್ಲಿರುವ ಪ್ರತಿಯೊಬ್ಬರೂ ಹುಚ್ಚು ಆಶಾವಾದಿಗಳು, ಅತ್ಯಂತ ಹತಾಶ ಪರಿಸ್ಥಿತಿಯಲ್ಲಿರುವವರೂ ಕೂಡ ಆಶಾವಾದ ತುಂಬಿದ ಹುಚ್ಚರು. ಮೇಲೆ ಉಲ್ಲೇಖಿಸಿದ ಸಾಲುಗಳಲ್ಲಿ ದೋಸ್ತೋಸ್ಕಿಯ ಹೇಳಿಕೆಯಿಂದ ಖಚಿತವಾಗುತ್ತದೆ: &#8220;ಅವರು ಆಶಿಸುತ್ತಲೇ ಇರುತ್ತಾರೆ, ಪ್ರಾರ್ಥಿಸುತ್ತಲೇ ಇರುತ್ತಾರೆ. ಕೆಲವೊಮ್ಮೆ ಅವರು ಇಟ್ಟುಕೊಂಡಿರುವ ಭರವಸೆಗಳು ಮತ್ತು ಪ್ರಯತ್ನಗಳು ಫಲ ನೀಡುತ್ತವೆ.&#8221;</p>



<p><strong>ಅಂತಹ ಒಂದು ಕತೆಯನ್ನು ನಿಮಗೆ ಹೇಳುತ್ತೇನೆ.</strong></p>



<p>ಕಳೆದ 29 ವರ್ಷಗಳಿಂದ ಜೈಲಿನಲ್ಲಿರುವ ಒಬ್ಬ ಕೈದಿಯೊಬ್ಬನ ಪರಿಚಯ ನನಗಾಯ್ತು. ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದು ಸಾಮಾನ್ಯ ಜೀವಾವಧಿ ಶಿಕ್ಷೆಗಿಂತ ಭಿನ್ನವಾದ ಹದಿನಾಲ್ಕು ವರ್ಷಗಳಿಗೂ ಹೆಚ್ಚಿನ ಶಿಕ್ಷೆ. ಅವನಿಗೆ ಕೊಟ್ಟಿರುವ ಶಿಕ್ಷೆಯಲ್ಲಿ ಯಾವುದೇ ಪೆರೋಲ್ ಇಲ್ಲದೆ ಉಸಿರಾಡುವವರೆಗೂ ಜೈಲಿನಲ್ಲಿಯೇ ಇರಬೇಕೆಂದು ಸ್ಪಷ್ಟವಾಗಿ ಹೇಳಲಾಗಿದೆ. ನ್ಯಾಯಾಲಯವು ಅವನಿಗೆ ಮರಣದಂಡನೆ ವಿಧಿಸಿತ್ತು, ಆದರೆ ಹಲವಾರು ವರ್ಷಗಳ ಕಾಲ ಮರಣದಂಡನೆಯಲ್ಲಿದ್ದ ಅವನಿಗೆ ರಾಷ್ಟ್ರಪತಿ ಕ್ಷಮಾದಾನದ ಮೂಲಕ ಅವನನ್ನು ಗಲ್ಲು ಶಿಕ್ಷೆಯಿಂದ ಪಾರು ಮಾಡಲಾಗಿದೆ. ನೇಣಿಗೆ ಕೊರಳೊಡ್ಡುವ ಬದಲು, ಸಹಜ ಮರಣ ಬರುವ ವರೆಗೆ ಜೈಲಿನಲ್ಲಿಯೇ ಇರಬೇಕಾಗಿತ್ತು.</p>



<p>ಆಗಲೇ ಹೇಳಿದಂತೆ, ಅವನಿಗೆ ಎಂದಿಗೂ ಪೆರೋಲ್ ಸಿಗುತ್ತಿರಲಿಲ್ಲ. ಆದ್ದರಿಂದ ತನ್ನ ಕೊನೆಯ ಉಸಿರಿನವರೆಗೂ ತಾನು ಜೈಲಿನಲ್ಲಿಯೇ ಇರಬೇಕಾಗುತ್ತದೆ ಎಂಬ ಅರಿವಿನೊಂದಿಗೆ ಜೀವಿಸುವುದನ್ನು ಮುಂದುವರಿಸಿದನು.</p>



<p>1990 ರ ದಶಕದ ಆರಂಭದಲ್ಲಿ ಅವನು ಜೈಲಿಗೆ ಬಂದಾಗ, ಅವನು 20 ರ ಹರೆಯದ ಯುವಕ. ಈಗ ಅವನಿಗೆ 50 ರ ಹರೆಯ. ಜೈಲಿನಲ್ಲಿ ತಾನಾಯಿತು, ತನ್ನ ಕೆಲಸವಾಯ್ತು ಎಂದಿರುತ್ತಾನೆ. ಬೆಳಿಗ್ಗೆ ತನ್ನ ಮುಷಕತ್ (ನಿಯೋಜಿತ ದೈಹಿಕ ಕೆಲಸ) ಕ್ಕೆ ಹೋಗುತ್ತಾನೆ. ಸಂಜೆ, ಅವನು ಇತರ ಕೆಲವು ಕೈದಿಗಳೊಂದಿಗೆ ಒಂದು ಗಂಟೆ ಅಥವಾ ಅದಕ್ಕೂ ಹೆಚ್ಚು ಕಾಲ ಬ್ಯಾಡ್ಮಿಂಟನ್ ಆಡುತ್ತಾನೆ. ಆಗ ಮಾತ್ರ ಅವನಲ್ಲಿ ತುಂಬಿರುವ ಉತ್ಸಾಹ ಮತ್ತು ಅವನು ವ್ಯಕ್ತಪಡಿಸುವ ಕೆಲವು ಭಾವನೆಗಳನ್ನು ನೀವು ನೋಡಬಹುದು.&nbsp;</p>



<p><strong>ದಿನದಿಂದ ದಿನಕ್ಕೆ</strong>, ಅವನು ಇದೇ ಜೀವನವನ್ನು ನಡೆಸುತ್ತಿದ್ದಾನೆ, ತನ್ನ ಜೀವನದ ಉಳಿದ ದಿನಗಳೂ ಹೀಗೆಯೇ ಇರುತ್ತವೆ ಎಂಬ ಅರಿವಿನೊಂದಿಗೆ.</p>



<p>ಜೈಲಿನಲ್ಲಿ ಅವನನ್ನು ಹೆಚ್ಚಿನ ಕೈದಿಗಳು ಗೌರವಿಸುತ್ತಾರೆ &#8211; ಮುಖ್ಯವಾಗಿ ಅವನು ಜೈಲಿನಲ್ಲಿ ಕಳೆದ ಹೆಚ್ಚಿನ ದಿನಗಳಿಗಾಗಿ. ಹೆಚ್ಚಾಗಿ ಅವನು ಎಲ್ಲರಿಂದ ದೂರವಿರುತ್ತಾನೆ, ಯಾರ ವ್ಯವಹಾರಕ್ಕೂ ತಲೆಹಾಕುವುದಿಲ್ಲ. ಆರಂಭಿಕ ದಿನಗಳಲ್ಲಿ, ಆ ಮಟ್ಟಿನ ಶಾಂತಿ ಆತನೊಳಗೆ ಎಲ್ಲಿಂದ ಬಂತು ಎಂದು ನಾನು ಆಶ್ಚರ್ಯ ಪಡುತ್ತಿದ್ದೆ! ತನ್ನ ಅಪರಾಧಗಳ ಅರಿವಿನಿಂದಲೋ? ಇಷ್ಟು ವರ್ಷಗಳ ಹಿಂದೆ ತಾನು ಮಾಡಿದ್ದರ ಬಗ್ಗೆ ಪಶ್ಚಾತ್ತಾಪವೋ? ತಾನು ಅನುಭವಿಸುತ್ತಿರುವುದು ತನ್ನ ಕೃತ್ಯಗಳ ಪರಿಣಾಮ ಎಂದು ಅವನಿಗೆ ಅನಿಸಿತೇ? ತಾನು ಯಾವುದೋ ತಪಸ್ಸನ್ನು ಮಾಡುತ್ತಿದ್ದೇನೆ ಎಂದು ಅವನಿಗೆ ಅನಿಸಿತೇ? ಅಥವಾ ಬಹುಶಃ ಅವನಿಗೆ ಯಾವುದೇ ಪಶ್ಚಾತ್ತಾಪವಿಲ್ಲದಿರಬಹುದು.</p>



<p>ಹೇಳಬೇಕಾಗಿಲ್ಲ, ಅವನು ಮಾಡಿದ್ದರ ಬಗ್ಗೆ ಅವನಿಗೆ ಏನು ಅನಿಸಿತು ಎಂದು ನಾನು ಎಂದಿಗೂ ಕೇಳಲಿಲ್ಲ. ನೀವು ಜೈಲಿನಲ್ಲಿ ಅಂತಹ ಪ್ರಶ್ನೆಗಳನ್ನು ಕೇಳಬಾರದು.</p>



<pre class="wp-block-code"><code><strong><mark style="background-color:rgba(0, 0, 0, 0);color:#f90202" class="has-inline-color">ನಾನು ಹೇಳಿದಂತೆ, ಅವನ ದಿನಚರಿಯನ್ನು ನಾನು ಪ್ರತಿದಿನ ಗಮನಿಸುತ್ತಿದ್ದೆ. ಅವನು ತನ್ನ ಜೀವನದುದ್ದಕ್ಕೂ ಸೆರೆವಾಸದ ಜೀವನಕ್ಕೆ ರಾಜೀನಾಮೆ ನೀಡಿದ್ದಾನೆಂದು ನಾನು ಭಾವಿಸಿದೆ. ಅವನೂ ಸಹ ಭರವಸೆಯನ್ನು ತ್ಯಜಿಸಿಲ್ಲ ಎಂಬುದು ನನಗೆ ತಿಳಿದಿರಲಿಲ್ಲ. ಅವನು ತನ್ನ ಪ್ರಕರಣದಲ್ಲಿ ತನಗಿರುವ ಕಾನೂನುಬದ್ಧ ಅವಕಾಶವನ್ನು ಕಂಡುಕೊಂಡ ನಂತರ, ಕಳೆದ ಕೆಲವು ವರ್ಷಗಳಿಂದ ಸ್ವಲ್ಪ ಪರಿಹಾರವನ್ನು ಪಡೆಯಲು ಕೆಲವು ಪ್ರಯತ್ನಗಳನ್ನು ಮಾಡುತ್ತಿದ್ದಾನೆ.</mark></strong></code></pre>



<p>ರಾಷ್ಟ್ರಪತಿ ನೀಡಿದ  ಕ್ಷಮಾದಾನವು ಅವನಿಗೆ ಯಾವುದೇ ಪೆರೋಲ್ ಇಲ್ಲದೆ ಕೊನೆಯ ಉಸಿರು ಇರುವವರೆಗೂ ಜೈಲಿನಲ್ಲಿಯೇ ಇರಬೇಕೆಂದು ಸ್ಪಷ್ಟವಾಗಿ ಹೇಳಿದ್ದರೂ, ಅವನಿಗೆ ರಜೆ ಸಿಗುತ್ತದೆಯೋ, ಇಲ್ಲವೋ ಎಂಬುದರ ಕುರಿತು ಅದು ಏನನ್ನೂ ಹೇಳಲಿಲ್ಲ.</p>



<p>ಫರ್ಲೋ (Furlough) ಅಥವಾ ಜೈಲಿನಿಂದ ರಜೆ ಎನ್ನುವುದು ಜೈಲು ಇಲಾಖೆಯು ರೂಪಿಸಿದ ವ್ಯವಸ್ಥೆಯಾಗಿದ್ದು, ಶಿಕ್ಷೆಗೊಳಗಾದ ಕೈದಿಗಳು, ಅವರ ಮೇಲ್ಮನವಿ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿಲ್ಲದಿದ್ದರೆ ಮತ್ತು ಅವರ ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದ್ದರೆ ಮತ್ತು ಅವರು ಕನಿಷ್ಠ 3 ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದರೆ ಮತ್ತು ಮುಖ್ಯವಾಗಿ, ಅವರ ನಡವಳಿಕೆ ಉತ್ತಮವಾಗಿದ್ದರೆ, ವರ್ಷದಲ್ಲಿ ಮೂರು ಬಾರಿ ಜೈಲಿನಿಂದ ರಜೆ ಪಡೆಯಲು ಅರ್ಹರಾಗಿರುತ್ತಾರೆ &#8211; ಒಂದು ಬಾರಿ 3 ವಾರಗಳವರೆಗೆ ಮತ್ತು ಎರಡನೇ ಬಾರಿ 2 ವಾರಗಳವರೆಗೆ ರಜೆ ಇರುತ್ತದೆ.</p>



<p>ಇದು ಪೆರೋಲ್‌ಗಿಂತ ಭಿನ್ನ, ಇದನ್ನು ಜೈಲು ಇಲಾಖೆಯು ಕೈದಿಗೆ ಅವನ ಉತ್ತಮ ನಡವಳಿಕೆಗಾಗಿ ನೀಡುತ್ತದೆ. ಕುಟುಂಬದಲ್ಲಿ ಮದುವೆ ಅಥವಾ ಕುಟುಂಬದಲ್ಲಿ ಯಾರಾದರೂ ಸತ್ತರೆ ಇತ್ಯಾದಿ ಕೆಲವು ನಿರ್ದಿಷ್ಟ ಕಾರಣಗಳಿಗಾಗಿ ಮಾತ್ರ ನ್ಯಾಯಾಲಯವು ಅನುಮೋದಿಸುವ ಪೆರೋಲ್‌ಗಿಂತ ಇದು ಭಿನ್ನವಾಗಿದೆ.</p>



<p>ಬೇರೆ ರೀತಿಯಲ್ಲಿ ಹೇಳುವುದಾದರೆ, ಒಬ್ಬ ಕೈದಿ ಜೈಲಿನಲ್ಲಿ ತನ್ನ ಉತ್ತಮ ನಡವಳಿಕೆಯ ಮೂಲಕ ರಜೆ ಪಡೆಯುವ ಹಕ್ಕನ್ನು ಗಳಿಸುತ್ತಾನೆ. ಮೂಲತಃ, ಈ ವ್ಯವಸ್ಥೆಯು ಜೈಲಿನಲ್ಲಿ ಉತ್ತಮ ನಡವಳಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿದೆ, ಜೊತೆಗೆ ಅಪರಾಧಿ ತನ್ನ ಕುಟುಂಬ ಮತ್ತು ಸಮಾಜದಿಂದ ಸಂಪೂರ್ಣವಾಗಿ ಬೇರ್ಪಡದಂತೆ ಮಾಡುತ್ತದೆ &#8211; ಇದರಿಂದಾಗಿ ಅವನು ಸಮಾಜಕ್ಕೆ ಮತ್ತೆ ಬಂದು ಬದುಕಬೇಕಾದರೆ, ಅವನು ಸಮಾಜದೊಂದಿಗೆ ಸಂಪರ್ಕವನ್ನು ಹೊಂದಿರುತ್ತಾನೆ. ಮೂಲತಃ, ಇದು ಜೈಲಿನ ಬಗ್ಗೆ ಸಂಪೂರ್ಣ ಸುಧಾರಣಾ ಸಿದ್ಧಾಂತಕ್ಕೆ ಹೊಂದಿಕೊಳ್ಳುತ್ತದೆ.</p>



<p>ನಾನು ಹೇಳಿದ ಕೈದಿಯ ಕತೆಗೆ ಬಂದರೆ &#8211; ಜೈಲು ಇಲಾಖೆಗೆ ತನ್ನನ್ನು ವಜಾಗೊಳಿಸುವಂತೆ ನ್ಯಾಯಾಲಯವು ಸೂಚನೆಗಳನ್ನು ನೀಡಬೇಕೆಂದು ಕೋರಿ ಅವನು ಮೊದಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದಾಗ &#8211; ರಾಷ್ಟ್ರಪತಿಗಳ ಕ್ಷಮಾದಾನ ಆದೇಶವು ಅವನ ಕೊನೆಯ ಉಸಿರಿನವರೆಗೂ ಜೈಲಿನಲ್ಲಿಯೇ ಇರಬೇಕೆಂದು ಹೇಳಿರುವುದನ್ನು ಉಲ್ಲೇಖಿಸಿ ಜೈಲು ಇಲಾಖೆಯು ಅವನನ್ನು ವಜಾಗೊಳಿಸಲಿಲ್ಲ. ನ್ಯಾಯಾಲಯವು ಅವನ ಪರವಾಗಿ ತೀರ್ಪು ನೀಡಲಿಲ್ಲ, ರಾಷ್ಟ್ರಪತಿಗಳ ಕ್ಷಮಾದಾನವು ವಜಾಗೊಳಿಸುವಿಕೆಯ ಬಗ್ಗೆ ನಿರ್ದಿಷ್ಟವಾಗಿ ಏನನ್ನೂ ಉಲ್ಲೇಖಿಸದೇ ಇರಬಹುದು, ಆದರೆ ಆ ಆದೇಶದ ಮೂಲತತ್ವವೆಂದರೆ ಅವನು ಯಾವುದೇ ಪರಿಹಾರವಿಲ್ಲದೆ ಜೈಲಿನಲ್ಲಿಯೇ ಇರಬೇಕೆಂದು ಹೇಳಿದೆ. ಅವನು ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದನು, ಆದರೆ ಹೈಕೋರ್ಟ್ ಕೂಡ ಅವನ ಪರವಾಗಿ ತೀರ್ಪು ನೀಡಲಿಲ್ಲ.</p>



<p>ಕೊನೆಯ ಪ್ರಯತ್ನವಾಗಿ, ಅವನು ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ. ಸುಪ್ರೀಂ ಕೋರ್ಟ್ ಅವನ ಪರವಾಗಿ ತೀರ್ಪು ನೀಡಿತು &#8211; ಫರ್ಲೋ ಎಂಬುದು ಅವನಿಂದ ಕಸಿದುಕೊಳ್ಳಲು ಸಾಧ್ಯವಿಲ್ಲದ ಹಕ್ಕು, ಏಕೆಂದರೆ ಅವನು ಇದನ್ನು 28 ವರ್ಷಗಳ ಜೈಲುವಾಸದ ಮೂಲಕ ಗಳಿಸಿದ್ದಾನೆ ಎಂದು ಸುಪ್ರೀಂ ಕೋರ್ಟ್ ಹೇಳಿತು.</p>



<p>ಕೊನೆಗೆ ಅವನಿಗೆ 21 ದಿನಗಳ ರಜೆ ನೀಡಲಾಯಿತು, ಮತ್ತು 28 ವರ್ಷಗಳ ಜೈಲುವಾಸದ ನಂತರ ಅವರು ಜೈಲಿನಿಂದ ಹೊರಬರಬೇಕಾಯಿತು.</p>



<p>ಅವನು ಮತ್ತೆ ಹಿಂತಿರುಗಿದಾಗ, ಇಷ್ಟು ವರ್ಷಗಳ ನಂತರ ಹೊರಗಿನ ಪ್ರಪಂಚ ಹೇಗಿತ್ತು ಎಂದು ನಾನು ಅವನನ್ನು ಕೇಳಿದೆ. ಅವನನ್ನು ಸ್ವಾಗತಿಸಲು ಯಾರು ಬಂದರು ಮತ್ತು ಅವನು ಹೇಗೆ ಜೈಲಿಗೆ ಹಿಂತಿರುಗಿದ ಎಂದು ನಾನು ಕೇಳಿದೆ. ನಾನು ಮೊದಲೇ ಹೇಳಿದಂತೆ, ಅವನು ಹೆಚ್ಚು ಮಾತನಾಡುವುದಿಲ್ಲ. ಆದರೆ ಅವನು ಆ ಬಗ್ಗೆ ಕೆಲವೇ ಮಾತುಗಳನ್ನಾಡಿದ; ಅವನು 21 ದಿನಗಳಲ್ಲ, 21 ನಿಮಿಷಗಳ ಕಾಲ ಹೊರಗೆ ಇದ್ದಂತೆ ಭಾಸವಾಯಿತು ಎಂದು ಹೇಳಿದನು.<br><br>1990 ರ ದಶಕದಲ್ಲಿ ತಮಗೆ ತಿಳಿದಿದ್ದ ಕೆಲವೇ ಕೆಲವು ಸಂಬಂಧಿಕರು ಈಗ ಜೀವಂತವಾಗಿದ್ದಾರೆ, ತಮಗೆ ಅಪರಿಚಿತರಾಗಿರುವ ಕುಟುಂಬ ಹೊಸ ಸದಸ್ಯರನ್ನು ಭೇಟಿಯಾದರು ಮತ್ತು ಅವರಿಗೆ ತಾನೂ ಕೂಡ ಅಪರಿಚಿತನೇ ಎಂಬೆಲ್ಲವನ್ನೂ ಅವನು ನನಗೆ ವಿವರಿಸಿದ.</p>



<p>ಅವನು ಏಕೆ ಓಡಿಹೋಗಲಿಲ್ಲ, ಜೈಲಿನಿಂದ ಹೊರಬರಲು ಅವಕಾಶ ಸಿಕ್ಕ ನಂತರವೂ ಅವನು ಸ್ವಯಂಪ್ರೇರಣೆಯಿಂದ ಏಕೆ ಮತ್ತೆ ಜೈಲಿಗೆ ಹಿಂತಿರುಗಿದ ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಅದಕ್ಕೆ ಕಾರಣ ಅವನು ಇನ್ನೂ ಭರವಸೆ ಇಟ್ಟುಕೊಳ್ಳುವುದನ್ನು ನಿಲ್ಲಿಸದ್ದು, ಮತ್ತು ವಾಸ್ತವವಾಗಿ ಮುಂಬರುವ ವರ್ಷಗಳಲ್ಲಿ ನ್ಯಾಯಾಲಯಗಳಿಂದ ಹೆಚ್ಚಿನ ಪರಿಹಾರವನ್ನು ನಿರೀಕ್ಷಿಸುತ್ತಿದ್ದಾನೆ. ಅವನೇ ನನಗೆ ಹೀಗೆ ಹೇಳಿದ &#8211; ಈಗ ಅವನು ಪ್ರತಿ ವರ್ಷ ಮೂರು ರಜೆಗಳಿಗೆ ಅರ್ಹನಾಗಿದ್ದಾನೆ &#8211; ಮತ್ತು ಅವನು ಹೊರಗೆ ಹೋಗಿ ಕೆಲವು ವರ್ಷಗಳ ಕಾಲ ಜೈಲಿಗೆ ಹಿಂತಿರುಗುತ್ತಿದ್ದರೆ, ನ್ಯಾಯಾಲಯವು ಅವನನ್ನು ಬಿಡುಗಡೆಗೆ ಅರ್ಹನೆಂದು ಪರಿಗಣಿಸಬಹುದು.</p>



<p>ಅವನಿಗೆ ರಜೆ ನೀಡುವ ಆದೇಶವು ಅದಕ್ಕೆ ಮಾತ್ರ ಸೀಮಿತವಾಗಿತ್ತು. ಅವನ ಅಪರಾಧ ಸಾಬೀತಾದ ಅರ್ಹತೆ ಅಥವಾ ಶಿಕ್ಷೆಯ ಸ್ವರೂಪದ ಬಗ್ಗೆ ಯಾವುದೇ ಪ್ರತಿಕ್ರಿಯೆ ಅದರಲ್ಲಿ ನೀಡಿರಲಿಲ್ಲ, ಹಾಗಿರುವಾಗ ಅದು ಹೇಗೆ ಸಾಧ್ಯ ಎಂದು ನಾನು ಆಶ್ಚರ್ಯ ಪಡುತ್ತಿದ್ದೆ.</p>



<p>ಆದರೆ ನಾನು ಅವನಿಗೆ ಅಂತಹ ಪ್ರಶ್ನೆಗಳನ್ನು ಕೇಳಲಿಲ್ಲ, ಅವನಿಗೆ ಭರವಸೆ ನೀಡಬೇಕು &#8211; ಏಕೆಂದರೆ ಭರವಸೆ ಅವನಿಗೆ ಜೈಲಿನಲ್ಲಿ ಶಾಂತಿಯಿಂದ ಬದುಕಲು ಅನುವು ಮಾಡಿಕೊಡುತ್ತದೆ.</p>



<p>ಕೊನೆಯದಾಗಿ, ಕಳೆದ ವರ್ಷ ರಾಜೀವ್ ಗಾಂಧಿ ಹತ್ಯೆಯ ಪಿತೂರಿಯಲ್ಲಿ ಭಾಗಿಯಾದವರಿಗೆ ಸುಪ್ರೀಂ ಕೋರ್ಟ್ ನೀಡಿದ ಪರಿಹಾರವನ್ನು ಉಲ್ಲೇಖಿಸಿ, ಭರವಸೆಯನ್ನು ಜೀವಂತವಾಗಿರಿಸಿಕೊಳ್ಳುವಲ್ಲಿ ತನ್ನನ್ನು ತಾನು ಕಂಡುಕೊಂಡಿದ್ದೇನೆ ಎಂದು ಹೇಳುವಂತೆ &#8211; &#8220;ಅವರೆಲ್ಲರೂ ಪ್ರಧಾನಿಯನ್ನು ಕೊಲ್ಲುವಲ್ಲಿ ಭಾಗಿಯಾಗಿದ್ದಾರೆ, ಮೇನೇ ಪಿಎಂ ಕೋ ತೋ ನಹಿ ಮಾರ ಥಾ ನಾ&#8221; ಎಂದು ಅವರು ನನಗೆ ಹೇಳಿದರು! ಎಷ್ಟೇ ವಿಲಕ್ಷಣವಾಗಿದ್ದರೂ, ಪ್ರಬಲ ಬಂಧನವಾಗಿದ್ದರೂ ಯಾರೂ ಎಂದಿಗೂ ಓಡಿಹೋಗುವುದಿಲ್ಲ, ಏಕೆಂದರೆ ಅವರಲ್ಲಿರುವ ಭರವಸೆ ಹಾಗೆ ಮಾಡಿಸುವುದಿಲ್ಲ.</p>



<p>ದಾಸ್ತೋಸ್ಕಿ ತನ್ನ ಕತೆಯಲ್ಲಿ ಇದನ್ನೇ ಹೇಳುತ್ತಾನೆ &#8211; ಆಗ ಪೆರೋಲ್‌ಗಳು ಅಥವಾ ಫರ್ಲೋಗಳ ವ್ಯವಸ್ಥೆ ಇಲ್ಲದಿದ್ದರೂ ಕೈದಿಗಳು ಏಕೆ ಓಡಿಹೋಗುತ್ತಿರಲಿಲ್ಲ, ಆದರೆ ಅವರು ಇನ್ನೂ ಕೈದಿ ಕಲೊನಿಗಳಲ್ಲಿ (Penal Colonies) ಕೆಲಸ ಮಾಡಲು ಹೋಗುತ್ತಿದ್ದರು ಮತ್ತು ಅಲ್ಲಿ ಯಾವಾಗಲೂ ಅವರನ್ನು ನೋಡಿಕೊಳ್ಳಲು ಕಾವಲುಗಾರರು ಇರಲಿಲ್ಲ.</p>



<p>ಅವನು ಹೇಳಿದ್ದಕ್ಕೂ ತಿಹಾರ್‌ನಲ್ಲಿ ನಾನು ನನ್ನ ಸುತ್ತಲೂ ನೋಡುವ ವಿಷಯಗಳಿಗೆ ಹೋಲಿಕೆಯಿದೆ. ದಾಸ್ತೋಸ್ಕಿ ಬರೆಯುತ್ತಾನೆ, ಕೈದಿಗಳು ತಾವು ಜೈಲಿಗೆ ನೀಡಿದ ಸಮಯವನ್ನು ಅವರು ಗೌರವಿಸುವ ಕಾರಣಕ್ಕಾಗಿ ಅವರು ಓಡಿಹೋಗುವುದಿಲ್ಲ.</p>



<p>ಶಿಕ್ಷೆಯ ಆರಂಭದಲ್ಲಿದ್ದವರು ಮಾತ್ರ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಜೈಲಿಗೆ ತಮ್ಮ ಅಷ್ಟೂ ಸಮಯವನ್ನು ಕೊಟ್ಟವರು ಬಾಗಿಲು ತೆರೆದಿದ್ದರೂ ಓಡಿಹೋಗುವುದಿಲ್ಲ. ಮೊದಲು ಅವರು ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತಾರೆ. ಅವರು ಭರವಸೆಯ ಮೇಲೆ ನಂಬಿಕೆ ಇಡುತ್ತಾರೆ.</p>



<p>ಭರವಸೆ ಮತ್ತು ಕಾಯುವಿಕೆ, ಹತಾಶೆ ಮತ್ತು ಹಾತೊರೆಯುವಿಕೆಯ ಬಗ್ಗೆ ನನಗೆ ಅನಿಸಿದ ಕೆಲವು ಆಲೋಚನೆಗಳು ಇವು.&nbsp;</p>



<p><strong>ಐದು ವರ್ಷಗಳು ಕಳೆದಿವೆ, ಬಹುತೇಕ ಅರ್ಧ ದಶಕದಂತೆ.</strong>&nbsp;ಜನರು ತಮ್ಮ ಪಿಎಚ್‌ಡಿ ಮುಗಿಸಿ ಉದ್ಯೋಗಗಳನ್ನು ಹುಡುಕಲು, ಪ್ರೀತಿಸಲು, ಮದುವೆಯಾಗಲು ಮತ್ತು ಮಗುವನ್ನು ಹೊಂದಲು, ತಮ್ಮ ಮಕ್ಕಳು ಗುರುತಿಸಲಾಗದಷ್ಟು ಬೆಳೆಯಲು, ಗಾಜಾದಲ್ಲಿ ನಡೆಯುತ್ತಿರುವ ನರಮೇಧವನ್ನು ಜಗತ್ತು ಸಾಮಾನ್ಯೀಕರಿಸಲು, ನಮ್ಮ ಹೆತ್ತವರು ವೃದ್ಧರಾಗಿ ಮತ್ತು ದುರ್ಬಲರಾಗಲು ಇಷ್ಟು ಅವಧಿ ಸಾಕು.</p>



<p>ನಮ್ಮ ಬಿಡುಗಡೆಗೆ ಇಷ್ಟು ಸಮಯ ಸಾಕೇ?</p>



<p><em>(ಉಮರ್ ಖಾಲಿದ್ ಜೆಎನ್‌ಯುನ ಮಾಜಿ ವಿದ್ಯಾರ್ಥಿ ನಾಯಕ ಮತ್ತು ಇತಿಹಾಸ ಶಾಸ್ತ್ರದಲ್ಲಿ ಪಿಎಚ್‌ಡಿ ಫೆಲೋ. ಸರ್ಕಾರದ ನೀತಿಗಳ ವಿರುದ್ಧದ ತಮ್ಮ ಕ್ರಿಯಾಶೀಲ ಭಿನ್ನಾಭಿಪ್ರಾಯಕ್ಕೆ ಹೆಸರುವಾಸಿಯಾಗಿದ್ದಾರೆ. ದೆಹಲಿ ಗಲಭೆಯಲ್ಲಿ ಪಿತೂರಿ ನಡೆಸಿದ್ದಾರೆ ಎಂಬ ಆರೋಪದ ಮೇಲೆ 2020 ರಲ್ಲಿ ಯುಎಪಿಎ ಅಡಿಯಲ್ಲಿ ಬಂಧಿಸಲ್ಪಟ್ಟ ಅವರು ವಿಚಾರಣೆಯಿಲ್ಲದೆ ತಿಹಾರ್ ಜೈಲಿನಲ್ಲಿದ್ದಾರೆ. ಇಲ್ಲಿ ಪ್ರಕಟಿಸಿದ ಪತ್ರದ ಕನ್ನಡ ಅನುವಾದವು ಲೇಖಕರ ಸ್ವಂತ ಅಭಿಪ್ರಾಯಗಳಾಗಿವೆ. ಪೀಪಲ್‌ ಮೀಡಿಯಾ ಇದಕ್ಕೆ ಯಾವುದೇ ರೀತಿಯಲ್ಲಿ ಜವಬ್ದಾರವಲ್ಲ.)</em></p>



<p></p>
]]></content:encoded>
					
		
		
			</item>
		<item>
		<title>ಕಮಲ ಹಾಸನ್ ಕೂಡಲೇ ಕನ್ನಡಿಗರ ಕ್ಷಮೆಯಾಚಿಸಬೇಕು &#8211; ಮುಖ್ಯಮಂತ್ರಿ ಚಂದ್ರು ಆಗ್ರಹ</title>
		<link>https://peepalmedia.com/kamal-haasan-should-immediately-apologize-to-kannadigas-chief-minister-chandru-demands/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 29 May 2025 11:47:59 +0000</pubDate>
				<category><![CDATA[ರಾಜ್ಯ]]></category>
		<category><![CDATA[Aam Aadmi Party]]></category>
		<category><![CDATA[AAP]]></category>
		<category><![CDATA[Bangalore]]></category>
		<category><![CDATA[kamal hasan]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[mukhyamanthri chandru]]></category>
		<category><![CDATA[tamil]]></category>
		<guid isPermaLink="false">https://peepalmedia.com/?p=59981</guid>

					<description><![CDATA[&#8220;ಒಂದು ಭಾಷೆಯ ಉಗಮದ ವಿಚಾರಗಳು ಅತ್ಯಂತ ಸೂಕ್ಷ್ಮವಾಗಿದೆ. ಯಾವುದೇ ಸಂಶೋಧನೆ, ಅಧ್ಯಯನಗಳು ಇಲ್ಲದೆ ಇಂತಹ ವಿಚಾರಗಳನ್ನು ಮಾತನಾಡಲು ಯಾರಿಗೂ ಸಾಧ್ಯವಿಲ್ಲ. ಕನ್ನಡ ಭಾಷೆಯ ಹುಟ್ಟಿನ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿರುವ ತಮಿಳು ನಟ ಕಮಲ ಹಾಸನ್ ಕೂಡಲೇ ಕನ್ನಡಿಗರ ಕ್ಷಮೆ ಯಾಚಿಸಬೇಕು&#8221; ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಇಂದಿಲ್ಲಿ ಆಗ್ರಹಪಡಿಸಿದರು. &#8220;ಕನ್ನಡದ ಸುಪ್ರಸಿದ್ಧ ಕಲಾವಿದ ಶಿವರಾಜ್ ಕುಮಾರ್ ರವರ ಮುಂದೆಯೇ, ಅದೇ ವೇದಿಕೆಯಲ್ಲಿಯೇ ಕನ್ನಡ ಭಾಷೆಯ ಬಗ್ಗೆ ಈ ರೀತಿಯ ಹೇಳಿಕೆ ನೀಡಿರುವುದು [&#8230;]]]></description>
										<content:encoded><![CDATA[
<p>&#8220;ಒಂದು ಭಾಷೆಯ ಉಗಮದ ವಿಚಾರಗಳು ಅತ್ಯಂತ ಸೂಕ್ಷ್ಮವಾಗಿದೆ. ಯಾವುದೇ ಸಂಶೋಧನೆ, ಅಧ್ಯಯನಗಳು ಇಲ್ಲದೆ ಇಂತಹ ವಿಚಾರಗಳನ್ನು ಮಾತನಾಡಲು ಯಾರಿಗೂ ಸಾಧ್ಯವಿಲ್ಲ. ಕನ್ನಡ ಭಾಷೆಯ ಹುಟ್ಟಿನ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿರುವ ತಮಿಳು ನಟ ಕಮಲ ಹಾಸನ್ ಕೂಡಲೇ ಕನ್ನಡಿಗರ ಕ್ಷಮೆ ಯಾಚಿಸಬೇಕು&#8221; ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಇಂದಿಲ್ಲಿ ಆಗ್ರಹಪಡಿಸಿದರು.</p>



<p>&#8220;ಕನ್ನಡದ ಸುಪ್ರಸಿದ್ಧ ಕಲಾವಿದ ಶಿವರಾಜ್ ಕುಮಾರ್ ರವರ ಮುಂದೆಯೇ, ಅದೇ ವೇದಿಕೆಯಲ್ಲಿಯೇ ಕನ್ನಡ ಭಾಷೆಯ ಬಗ್ಗೆ ಈ ರೀತಿಯ ಹೇಳಿಕೆ ನೀಡಿರುವುದು ಕನ್ನಡಿಗರಿಗೆ ಮತ್ತಷ್ಟು ನೋವನ್ನುಂಟು ಮಾಡಿದೆ. ಈಗಾಗಲೇ ಕನ್ನಡ ಮತ್ತು ತಮಿಳು ಭಾಷೆಯ ನಡುವಿನ ಸಂಘರ್ಷಗಳನ್ನು ಸಾಕಷ್ಟು ಕಂಡಿರುವ ಸಂದರ್ಭದಲ್ಲಿ ಮತ್ತಷ್ಟು ತುಪ್ಪ ಸುರಿಯುವಂತಹ ಇವರ ಹೇಳಿಕೆ ತೀರ ಖಂಡನೀಯ. ಶಿವರಾಜ್ ಕುಮಾರ್ ರವರು ಕೂಡಲೇ ಇವರ ಹೇಳಿಕೆಯನ್ನು ಪ್ರತಿಭಟಿಸಬಹುದಿತ್ತು&#8221;</p>



<p>&#8220;ಕನ್ನಡಪರ ಆಲೋಚಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಸರ್ಕಾರ ಕೂಡಲೇ ಇವರ ಹೇಳಿಕೆಯನ್ನು ಖಂಡಿಸಬೇಕು. ಇದ್ಯಾವುದೂ ಆಗದಿದ್ದ ಪಕ್ಷದಲ್ಲಿ ಇವರ ಹೇಳಿಕೆಯ ವಿರುದ್ಧದ ಕನ್ನಡಿಗರ ಕಿಚ್ಚಿಗೆ ನಾವು ಸಹ ಧ್ವನಿಗೂಡಿಸಬೇಕಾಗುತ್ತದೆ&#8221; ಎಂದು ಮುಖ್ಯಮಂತ್ರಿ ಚಂದ್ರು ಎಚ್ಚರಿಸಿದರು.</p>



<p></p>
]]></content:encoded>
					
		
		
			</item>
		<item>
		<title>ರಂಗಪಯಣದಿಂದ ಹೊಸ ನಾಟಕ: ಹೆಸರೇ ಇಲ್ಲದವರು</title>
		<link>https://peepalmedia.com/new-play-from-rangapayana-the-nameless-ones/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 23 May 2025 11:33:52 +0000</pubDate>
				<category><![CDATA[ಕಲೆ – ಸಾಹಿತ್ಯ]]></category>
		<category><![CDATA[Bangalore]]></category>
		<category><![CDATA[drama]]></category>
		<category><![CDATA[hesare illadavaru]]></category>
		<category><![CDATA[play]]></category>
		<category><![CDATA[ranga payana]]></category>
		<category><![CDATA[theatre]]></category>
		<guid isPermaLink="false">https://peepalmedia.com/?p=59567</guid>

					<description><![CDATA[ರಂಗಪಯಣ ನಾಟಕ ತಂಡದ ಹೊಸ ನಾಟಕ ʼ ಹೆಸರೇ ಇಲ್ಲದವರುʼ ಮೇ 27 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ರಾಜಗುರು ಹೊಸಕೋಟೆ ಅವರು ರಚಿಸಿ ನಿರ್ದೇಶಿಸಿದ್ದಾರೆ. &#8220;ಸದಾ ಧ್ವನಿ ಕಳೆದುಕೊಂಡವರ ಧ್ವನಿಯಾಗಿ ಅವರ ಬದಕನ್ನೆ ಕಥೆಯಾಗಿಸಿ ಜೀವ ತುಂಬುವ ರಂಗಪಯಣ ತಂಡವು ಸಾಂಸ್ಕೃತಿಕವಾಗಿ ಅಲೆಮಾರಿಗಳಾಗಿ ತಮ್ಮದೇ ಬದುಕು ಕಟ್ಟಿಕೊಂಡವರ ಕಥೆಯನ್ನು ಹೇಳಲು ವೇದಿಕೆ ಹತ್ತುತ್ತಿದ್ದೆ. ಹೆಸರಿಲ್ಲದೇ ಆಧುನಿಕ ಜಂಜಡಗಳ‌ ನಡುವೆ ಕಳೆದುಹೋಗುತ್ತಿರುವ ಅಲೆಮಾರಿ ಸಮುದಾಯದ ನೋವನ್ನು, ಸಂಕಟವನ್ನು ಕಣ್ಣುಮುಂದೆ ತರುತ್ತಲೇ, ಭಾರತದ ಬಹುತ್ವವನ್ನು, ಜ್ಞಾನ [&#8230;]]]></description>
										<content:encoded><![CDATA[
<p>ರಂಗಪಯಣ ನಾಟಕ ತಂಡದ ಹೊಸ ನಾಟಕ ʼ ಹೆಸರೇ ಇಲ್ಲದವರುʼ ಮೇ 27 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ರಾಜಗುರು ಹೊಸಕೋಟೆ ಅವರು ರಚಿಸಿ ನಿರ್ದೇಶಿಸಿದ್ದಾರೆ.</p>



<p>&#8220;ಸದಾ ಧ್ವನಿ ಕಳೆದುಕೊಂಡವರ ಧ್ವನಿಯಾಗಿ ಅವರ ಬದಕನ್ನೆ ಕಥೆಯಾಗಿಸಿ ಜೀವ ತುಂಬುವ ರಂಗಪಯಣ ತಂಡವು ಸಾಂಸ್ಕೃತಿಕವಾಗಿ ಅಲೆಮಾರಿಗಳಾಗಿ ತಮ್ಮದೇ ಬದುಕು ಕಟ್ಟಿಕೊಂಡವರ ಕಥೆಯನ್ನು ಹೇಳಲು ವೇದಿಕೆ ಹತ್ತುತ್ತಿದ್ದೆ. ಹೆಸರಿಲ್ಲದೇ ಆಧುನಿಕ ಜಂಜಡಗಳ‌ ನಡುವೆ ಕಳೆದುಹೋಗುತ್ತಿರುವ ಅಲೆಮಾರಿ ಸಮುದಾಯದ ನೋವನ್ನು, ಸಂಕಟವನ್ನು ಕಣ್ಣುಮುಂದೆ ತರುತ್ತಲೇ, ಭಾರತದ ಬಹುತ್ವವನ್ನು, ಜ್ಞಾನ ದ ಮೌಲ್ಯತೆಯನ್ನು ಮತ್ತೆ ನೆನಪಿಸುವ ಹೊಸ ನಾಟಕ ಪ್ರಯೋಗ &#8216;ಹೆಸರೇ ಇಲ್ಲದವರು&#8217;. ಸಮಾಜದ ಕಟ್ಟಲೆಗಳು ಒಂದು ಕಡೆ ನೋವಿನ ಕೂಪಕ್ಕೆ ತಳ್ಳಿದರೆ ಕುಲಕಸುಬುಗಳನ್ನೆ ನಂಬಿದ ಸಮುದಾಯಗಳು ಆಧುನಿಕತೆಯ ಬಾರುಕೋಲಿಗೆ ಸಿಲುಕಿ ನಲುಗಿದ ಕಥನವೇ ಹೆಸರೇ ಇಲ್ಲದವರು,&#8221; ರಂಗಪಯಣವು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. </p>


<div class="wp-block-image">
<figure class="aligncenter size-large is-resized"><img loading="lazy" decoding="async" width="682" height="1024" src="https://peepalmedia.com/wp-content/uploads/2025/05/WhatsApp-Image-2025-05-23-at-4.50.31-PM-682x1024.jpeg" alt="" class="wp-image-59568" style="width:396px;height:auto" srcset="https://peepalmedia.com/wp-content/uploads/2025/05/WhatsApp-Image-2025-05-23-at-4.50.31-PM-682x1024.jpeg 682w, https://peepalmedia.com/wp-content/uploads/2025/05/WhatsApp-Image-2025-05-23-at-4.50.31-PM-200x300.jpeg 200w, https://peepalmedia.com/wp-content/uploads/2025/05/WhatsApp-Image-2025-05-23-at-4.50.31-PM-768x1153.jpeg 768w, https://peepalmedia.com/wp-content/uploads/2025/05/WhatsApp-Image-2025-05-23-at-4.50.31-PM-1023x1536.jpeg 1023w, https://peepalmedia.com/wp-content/uploads/2025/05/WhatsApp-Image-2025-05-23-at-4.50.31-PM-150x225.jpeg 150w, https://peepalmedia.com/wp-content/uploads/2025/05/WhatsApp-Image-2025-05-23-at-4.50.31-PM-300x450.jpeg 300w, https://peepalmedia.com/wp-content/uploads/2025/05/WhatsApp-Image-2025-05-23-at-4.50.31-PM-696x1045.jpeg 696w, https://peepalmedia.com/wp-content/uploads/2025/05/WhatsApp-Image-2025-05-23-at-4.50.31-PM.jpeg 1066w" sizes="auto, (max-width: 682px) 100vw, 682px" /></figure></div>


<p>&#8220;ಕೊಳಕು ರಾಜಕೀಯದಲ್ಲಿ ಸಿಲುಕಿ ನಲುಗುವ, ನೆಲವಿಲ್ಲದ ಅಲೆಮಾರಿಗಳು ಸಾಂಸ್ಕೃತಿಕ ಐಡೆಂಟಿಟಿ ಗೆ ಪರಿತಪಿಸುತ್ತಿರುವಾಗ ವ್ಯವಸ್ಥೆಯ ವ್ಯೂಹ ಅವರನ್ನು ಬಲಿ ತೆಗೆದುಕೊಳ್ಳವ ಹುನ್ನರಕ್ಕೆ ಸತ್ಯದ ರುಚಿ ತೋರಿಸಿದವರ ಕಥನವಾಗಿದೆ.&#8221;</p>



<p><strong>ನಾಟಕ ಪ್ರದರ್ಶನ ಎಲ್ಲಿ? ಯಾವಾಗ?</strong></p>



<p><strong>ನಾಟಕ-</strong>ಹೆಸರೇ ಇಲ್ಲದವರು<br><strong>ರಚನೆ &#8211; ವಿನ್ಯಾಸ &#8211; ಸಂಗೀತ &#8211; ನಿರ್ದೇಶನ </strong>&#8212; ರಾಜಗುರು ಹೊಸಕೋಟೆ<br><strong>ಪ್ರಸಾದನ &#8211;</strong> ಜಯರಾಜ್ ಹುಸ್ಕೂರು<br><strong>ಬೆಳಕು &#8211; </strong>ಎಂ ಜಿ ನವೀನ್<br><strong>ನಿರ್ವಹಣೆ &#8211; </strong>ನಯನ ಸೂಡ</p>



<p><strong>ದಿನಾಂಕ:</strong> ಮೇ 27, ಮಂಗಳವಾರ<br><strong>ಸಮಯ :</strong> 7:30 ಕ್ಕೆ<br><strong>ಸ್ಥಳ: </strong>ರವೀಂದ್ರ ಕಲಾಕ್ಷೇತ್ರ, ಜೆ ಸಿ ರಸ್ತೆ<br>ಬೆಂಗಳೂರು<br></p>
]]></content:encoded>
					
		
		
			</item>
		<item>
		<title>ನಗರದಲ್ಲಿ ಮಳೆ ಸಮಸ್ಯೆ, ಶಾಶ್ವತ ಪರಿಹಾರ ನಮ್ಮ ಆದ್ಯತೆ: ಡಿ.ಸಿ.ಎಂ</title>
		<link>https://peepalmedia.com/rain-problem-in-the-city-permanent-solution-is-our-priority-dcm/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 22 May 2025 08:00:13 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[dk shivakumar]]></category>
		<category><![CDATA[dks]]></category>
		<guid isPermaLink="false">https://peepalmedia.com/?p=59493</guid>

					<description><![CDATA[ಬೆಂಗಳೂರು: ರಾಜಧಾನಿಯಲ್ಲಿ ಮಳೆಯಿಂದಾಗಿರುವ ಸಮಸ್ಯೆ ಕುರಿತು ಜನರಿಗೆ ಆಕ್ರೋಶ ಇದೆ ನಿಜ. ಆದರೆ, ಮಳೆ ಪರಿಸ್ಥಿತಿ ನಿಭಾಯಿಸಲು ಶಾಶ್ವತ ಪರಿಹಾರ ನಮ್ಮ ಆದ್ಯತೆಯಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು. ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ನಾಡಿನಲ್ಲಿ ಮಳೆ ಹೆಚ್ಚಾಗಬೇಕು ಎಂದುಕೊಳ್ಳುತ್ತೇನೆ. ಅದರಿಂದ ಬೆಳೆ ಉತ್ತಮವಾಗಿ ನಾಡು ಸುಭಿಕ್ಷವಾಗಿರುತ್ತದೆ. ಆದರೆ, ಬೆಂಗಳೂರಿನಲ್ಲಿ ನಿರಂತರ ಮಳೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ನಮ್ಮ ಜವಾಬ್ದಾರಿ. ಹೀಗಾಗಿ ಮೂಲಸೌಕರ್ಯಗಳಲ್ಲಿನ ಬಹುಕಾಲದ ನ್ಯೂನ್ಯತೆಗಳನ್ನು ಸರಿಪಡಿಸುವ ಕಾರ್ಯ ಮಾಡುತ್ತಿದ್ದೇವೆ [&#8230;]]]></description>
										<content:encoded><![CDATA[
<p><strong>ಬೆಂಗಳೂರು: </strong>ರಾಜಧಾನಿಯಲ್ಲಿ ಮಳೆಯಿಂದಾಗಿರುವ ಸಮಸ್ಯೆ ಕುರಿತು ಜನರಿಗೆ ಆಕ್ರೋಶ ಇದೆ ನಿಜ. ಆದರೆ, ಮಳೆ ಪರಿಸ್ಥಿತಿ ನಿಭಾಯಿಸಲು ಶಾಶ್ವತ ಪರಿಹಾರ ನಮ್ಮ ಆದ್ಯತೆಯಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.</p>



<p>ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ನಾಡಿನಲ್ಲಿ ಮಳೆ ಹೆಚ್ಚಾಗಬೇಕು ಎಂದುಕೊಳ್ಳುತ್ತೇನೆ. ಅದರಿಂದ ಬೆಳೆ ಉತ್ತಮವಾಗಿ ನಾಡು ಸುಭಿಕ್ಷವಾಗಿರುತ್ತದೆ. ಆದರೆ, ಬೆಂಗಳೂರಿನಲ್ಲಿ ನಿರಂತರ ಮಳೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ನಮ್ಮ ಜವಾಬ್ದಾರಿ. ಹೀಗಾಗಿ ಮೂಲಸೌಕರ್ಯಗಳಲ್ಲಿನ ಬಹುಕಾಲದ ನ್ಯೂನ್ಯತೆಗಳನ್ನು ಸರಿಪಡಿಸುವ ಕಾರ್ಯ ಮಾಡುತ್ತಿದ್ದೇವೆ ಎಂದು ಹೇಳಿದರು.</p>



<p>ಇತ್ತೀಚಿಗೆ ಕೆರೆ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿ, ಅಗತ್ಯ ಕ್ರಮಗಳಿಗೆ ಸೂಚಿಸಿದಂತೆ ಅಧಿಕಾರಿಗಳು ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ. ₹ 2,000 ಕೋಟಿಯಲ್ಲಿ ಇಡೀ ಬೆಂಗಳೂರಿನ ರಾಜಕಾಲುವೆಗಳ ಸಮಸ್ಯೆಗಳನ್ನು ಒಂದೇ ಸಾರಿ ಪೂರ್ಣಗೊಳಿಸಬೇಕೆಂದುಕೊಂಡು ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.</p>



<p>ಮಳೆ ಬಾಧಿತ ಪ್ರದೇಶಗಳಲ್ಲಿ ಬೇಸ್‌ಮೆಂಟ್ ಪಾರ್ಕಿಂಗ್, ಕೆಳ ಹಂತದಲ್ಲಿ ಮನೆ ನಿರ್ಮಾಣಕ್ಕೆ ಅವಕಾಶ ನೀಡದಂತೆ ಟೌನ್ ಪ್ಲಾನಿಂಗ್‌ ನಲ್ಲಿ ಬದಲಾವಣೆ ತರುವ ಬಗ್ಗೆ ತೀರ್ಮಾನ ಮಾಡಿದ್ದೇವೆ. ಮಳೆ ನೀರು ನುಗ್ಗದಿದ್ದರೂ, ಕೆಲವೆಡೆ ನೆಲಮಹಡಿಗಳಲ್ಲಿ ಅಂತರ್ಜಲ ಬರುತ್ತಿದೆ. ಇದರಿಂದ ವಿದ್ಯುತ್‌ ಶಾರ್ಟ್‌ ಸರ್ಕೀಟ್‌ಗಳಾಗುತ್ತಿದೆ, ಇದರಿಂದ ಪ್ರಾಣ ಹಾನಿಗಳಾಗಿದೆ ಎಂದರು.</p>



<p>ಹೀಗಾಗಿ, ಹೊಸ ಕಟ್ಟಡಗಳಲ್ಲಿ ಈ ನೆಲಮಹಡಿಗಳಿಗೆ ಸಂಬಂಧಿಸಿದಂತೆ ತಾಂತ್ರಿಕವಾಗಿ ಸಮಾಲೋಚಿಸಿ, ತೀರ್ಮಾನ ಕೈಗೊಳ್ಳುತ್ತಿದ್ದೇವೆ. ಪರಿಹಾರ ಕ್ರಮಗಳು ಸದ್ಯಕ್ಕೆ ಸಮರೋಪಾದಿಯಲ್ಲಿದೆ. ಜನ ನೆಮ್ಮದಿಯಿಂದ ಬದುಕುವ, ಸುಸ್ಥಿರ ಬೆಂಗಳೂರು ನಿರ್ಮಾಣ ನಮ್ಮ ಕರ್ತವ್ಯವಾಗಿದ್ದು, ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.</p>
]]></content:encoded>
					
		
		
			</item>
		<item>
		<title>ಮನೆ-ಮನೆಗೆ ತೆರಳಿದ ಆರೋಗ್ಯ ಸಚಿವ: ಆರೋಗ್ಯ ಸುರಕ್ಷತಾ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು</title>
		<link>https://peepalmedia.com/health-minister-goes-door-to-door-public-aware-of-health-safety-measures/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 22 May 2025 07:29:00 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[dk shivakumar]]></category>
		<category><![CDATA[dks]]></category>
		<category><![CDATA[flood]]></category>
		<guid isPermaLink="false">https://peepalmedia.com/?p=59490</guid>

					<description><![CDATA[ಬೆಂಗಳೂರು: ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಹಿನ್ನೆಲೆಯಲ್ಲಿ ನಿನ್ನೆ(ಬುಧವಾರ) ಗಾಂಧಿನಗರ ವಿಧಾನಸಭಾ ಕ್ಷೇತ್ರದ ಚಿಕ್ಕಪೇಟೆ ವ್ಯಾಪ್ತಿಯ ಕುಂಬಾರಗುಂಡಿ ಬಡಾವಣೆಯಲ್ಲಿ ,ಮನೆ ಮನೆಗೆ ತೆರಳಿ ಡೆಂಗ್ಯೂ ವಿರುದ್ಧ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್‌ ಗುಂಡೂರಾವ್‌ ಸಾರ್ವಜನಿಕರಿಗೆ ಅರಿವು ಮೂಡಿಸಿದ್ದಾರೆ. ನೀರಿನ ಘಟಕಗಳು, ನೀರಿನ ಟ್ಯಾಂಕ್, ಮನೆಯಲ್ಲಿನ ಬಿಂದಿಗೆ, ಮನೆಯ ಬಳಿಯ ಹಳೆಯ ಟೈರ್‌ಗಳು ಜೊತೆಗೆ ತೆಂಗಿನ ಚಿಪ್ಪುಗಳಲ್ಲಿ, “ಈಡಿಸ್ ಸೊಳ್ಳೆ”- “ಲಾರ್ವಾ” ಹುಳು ಹುಟ್ಟಲು ಕಾರಣವಾಗುತ್ತದೆ, ಆದ್ದರಿಂದ ಸಾಧ್ಯವಾದಷ್ಟು ಈ ಎಲ್ಲಾ [&#8230;]]]></description>
										<content:encoded><![CDATA[
<p><strong>ಬೆಂಗಳೂರು: </strong>ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಹಿನ್ನೆಲೆಯಲ್ಲಿ ನಿನ್ನೆ(ಬುಧವಾರ) ಗಾಂಧಿನಗರ ವಿಧಾನಸಭಾ ಕ್ಷೇತ್ರದ ಚಿಕ್ಕಪೇಟೆ ವ್ಯಾಪ್ತಿಯ ಕುಂಬಾರಗುಂಡಿ ಬಡಾವಣೆಯಲ್ಲಿ ,ಮನೆ ಮನೆಗೆ ತೆರಳಿ ಡೆಂಗ್ಯೂ ವಿರುದ್ಧ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್‌ ಗುಂಡೂರಾವ್‌ ಸಾರ್ವಜನಿಕರಿಗೆ ಅರಿವು ಮೂಡಿಸಿದ್ದಾರೆ.</p>



<p>ನೀರಿನ ಘಟಕಗಳು, ನೀರಿನ ಟ್ಯಾಂಕ್, ಮನೆಯಲ್ಲಿನ ಬಿಂದಿಗೆ, ಮನೆಯ ಬಳಿಯ ಹಳೆಯ ಟೈರ್‌ಗಳು ಜೊತೆಗೆ ತೆಂಗಿನ ಚಿಪ್ಪುಗಳಲ್ಲಿ, “ಈಡಿಸ್ ಸೊಳ್ಳೆ”- “ಲಾರ್ವಾ” ಹುಳು ಹುಟ್ಟಲು ಕಾರಣವಾಗುತ್ತದೆ, ಆದ್ದರಿಂದ ಸಾಧ್ಯವಾದಷ್ಟು ಈ ಎಲ್ಲಾ ತಾಣಗಳ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.</p>



<p>ನಗರದಲ್ಲಿ 40% ರಿಂದ 50ರಷ್ಟು ಡೆಂಗ್ಯೂ ಪ್ರಕರಣಗಳು ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ನಾಗರಿಕರು ಸಹ ಹೆಚ್ಚಿನ ಮುನ್ನೆಚ್ಚರಿಕೆ ‌ ವಹಿಸುವುದು ಅಗತ್ಯವಾಗಿದೆ. ಸ್ವಚ್ಛತೆಯಿಂದ ಡೆಂಗಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ. ಮೊದಲು ನಮ್ಮ ಮನೆ ಸುತ್ತಾಮುತ್ತಾ ಪ್ರದೇಶಗಳು ಸ್ವಚ್ಚವಾಗಿಟ್ಟುಕೊಳ್ಳಬೇಕು ಎಂದು ಸಾರ್ವಜನಿಕರಿಗೆ ತಿಳಿಹೇಳಿದ್ದಾರೆ.</p>



<p>ಈ ಹಿನ್ನಲೆಯಲ್ಲಿ, ಡೆಂಗ್ಯೂ ನಿಯಂತ್ರಣಕ್ಕೆ ನಗರದಲ್ಲಿ 240 ಆರೋಗ್ಯ ನಿರೀಕ್ಷಣಾಧಿಕಾರಿಗಳು ಮತ್ತು 700 ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.</p>



<p>ನಮ್ಮ ಆರೋಗ್ಯಕ್ಕೆ ನಾವು ಮೊದಲ ಪ್ರಾಮುಖ್ಯ ನೀಡಬೇಕಿದೆ. ಉತ್ತಮ ಆರೋಗ್ಯಕ್ಕೆ ಉತ್ತಮ ವಾತಾವರಣ ನಿರ್ಮಾಣ ಅಗತ್ಯವಿದ್ದು ನಮ್ಮ ಸುತ್ತಮುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಎಲ್ಲೆಲ್ಲಿ ಬಿಜೆಪಿ ಶಾಸಕರಿದ್ದಾರೋ ಅಲ್ಲಿ ಮಾತ್ರ ಮಳೆಹಾನಿ ಸಮಸ್ಯೆ: ಡಿ.ಕೆ.ಶಿ</title>
		<link>https://peepalmedia.com/rain-damage-problem-only-exists-wherever-there-are-bjp-mlas-d-k-s/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 22 May 2025 06:50:21 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[dk shivakumar]]></category>
		<category><![CDATA[dks]]></category>
		<category><![CDATA[flood]]></category>
		<category><![CDATA[Siddaramaiah]]></category>
		<guid isPermaLink="false">https://peepalmedia.com/?p=59487</guid>

					<description><![CDATA[ಬೆಂಗಳೂರು: ಎಲ್ಲೆಲ್ಲಿ ಬಿಜೆಪಿ ಶಾಸಕರಿದ್ದಾರೋ ಆ ಪ್ರದೇಶಗಳಲ್ಲಿ ಮಾತ್ರ ಮಳೆಹಾನಿ ಸಮಸ್ಯೆ ಎದುರಾಗಿದೆ. ಇದು ಅವರು ಯಾವುದೇ ಕೆಲಸ ಮಾಡಿಲ್ಲ ಎಂಬುದಕ್ಕೆ ಸಾಕ್ಷಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಟೀಕಿಸಿದ್ದಾರೆ. ರಾಜ್ಯದಲ್ಲಿ ಮೂರ್ನಾಲ್ಕು ದಿನಗಳಿಂದ ಮಳೆಯಾಗಿದ್ದು, ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗಳು ಮಳೆ ನೀರಿನಿಂದ ಜಲಾವೃತವಾಗಿ, ಸಾವರ್ಜನಿಕರಿಗೆ ತೊಂದರೆಯಾಗಿರುವ ಹಿನ್ನಲೆಯಲ್ಲಿ, ರಾಜ್ಯದ ಮುಖ್ಯಮಂತ್ರಿ ಜೊತೆಗೆ ಉಪಮುಖ್ಯಮಂತ್ರಿಗಳು ಸಿಟಿ ರೌಂಡ್‌ ಹಾಕಿದ ಬಳಿಕ, ಈ ಕುರಿತು ರಾಜ್ಯ ಕಾಂಗ್ರೆಸ್‌ ಘಟಕ ತಮ್ಮ ʼಎಕ್ಸ್‌ʼ ಖಾತೆಯಲ್ಲಿ ಪೋಸ್ಟ್‌ ಮಾಡಿದೆ. ಪೋಸ್ಟ್‌ನಲ್ಲಿ, [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ಎಲ್ಲೆಲ್ಲಿ ಬಿಜೆಪಿ ಶಾಸಕರಿದ್ದಾರೋ ಆ ಪ್ರದೇಶಗಳಲ್ಲಿ ಮಾತ್ರ ಮಳೆಹಾನಿ ಸಮಸ್ಯೆ ಎದುರಾಗಿದೆ. ಇದು ಅವರು ಯಾವುದೇ ಕೆಲಸ ಮಾಡಿಲ್ಲ ಎಂಬುದಕ್ಕೆ ಸಾಕ್ಷಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಟೀಕಿಸಿದ್ದಾರೆ.</p>



<p>ರಾಜ್ಯದಲ್ಲಿ ಮೂರ್ನಾಲ್ಕು ದಿನಗಳಿಂದ ಮಳೆಯಾಗಿದ್ದು, ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗಳು ಮಳೆ ನೀರಿನಿಂದ ಜಲಾವೃತವಾಗಿ, ಸಾವರ್ಜನಿಕರಿಗೆ ತೊಂದರೆಯಾಗಿರುವ ಹಿನ್ನಲೆಯಲ್ಲಿ, ರಾಜ್ಯದ ಮುಖ್ಯಮಂತ್ರಿ ಜೊತೆಗೆ ಉಪಮುಖ್ಯಮಂತ್ರಿಗಳು ಸಿಟಿ ರೌಂಡ್‌ ಹಾಕಿದ ಬಳಿಕ, ಈ ಕುರಿತು ರಾಜ್ಯ ಕಾಂಗ್ರೆಸ್‌ ಘಟಕ ತಮ್ಮ ʼಎಕ್ಸ್‌ʼ ಖಾತೆಯಲ್ಲಿ ಪೋಸ್ಟ್‌ ಮಾಡಿದೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="kn" dir="ltr">ಎಲ್ಲೆಲ್ಲಿ ಬಿಜೆಪಿ ಶಾಸಕರಿದ್ದಾರೋ ಆ ಪ್ರದೇಶಗಳಲ್ಲಿ ಮಾತ್ರ ಮಳೆಹಾನಿ ಸಮಸ್ಯೆ ಎದುರಾಗಿದೆ. ಇದು ಅವರು ಯಾವುದೇ ಕೆಲಸ ಮಾಡಿಲ್ಲ ಎಂಬುದಕ್ಕೆ ಸಾಕ್ಷಿ.<br><br>ಕಾಂಗ್ರೆಸ್ ಶಾಸಕರು ಕಾಮಗಾರಿಗಳನ್ನು ಬೇಗ ಮುಗಿಸಿ ತಮ್ಮ ಕ್ಷೇತ್ರಗಳಲ್ಲಿನ ಸಮಸ್ಯೆ ಬಗೆಹರಿಸಿದ್ದಾರೆ. ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಕ್ಷೇತ್ರದಲ್ಲೂ ಪರಿಶೀಲನೆ ಮಾಡಿದ್ದೇವೆ. ಅವರು ಈ… <a href="https://t.co/LNayDsCK0a">pic.twitter.com/LNayDsCK0a</a></p>&mdash; Karnataka Congress (@INCKarnataka) <a href="https://twitter.com/INCKarnataka/status/1925415832018202991?ref_src=twsrc%5Etfw">May 22, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಪೋಸ್ಟ್‌ನಲ್ಲಿ, ಬೆಂಗಳೂರಿನಲ್ಲಿ ಎಲ್ಲೇಲ್ಲಿ ಮಳೆ ಹಾನಿಯಾಗಿದೇಯೋ ಆ ಎಲ್ಲಾ ಪ್ರದೇಶಗಳು ಬಿಜೆಪಿ ಶಾಸಕರು ಇರುವಂತಹ ಸ್ಥಳಗಳು, ಇವು ಬಿಜೆಪಿ ಶಾಸಕರ ಕೆಲಸದ ವೈಕರಿಯನ್ನ ತಿಳಿಸುತ್ತದೆ ಎಂದು ಡಿ.ಕೆ.ಶಿವಕುಮಾರ್‌ ಅವರು ವ್ಯಂಗಿಸಿದ್ದಾರೆ ಎಂದು ಹೇಳಿದೆ.</p>



<p>ಜೊತೆಗೆ ಕಾಂಗ್ರೆಸ್ ಶಾಸಕರು ಕಾಮಗಾರಿಗಳನ್ನು ಬೇಗ ಮುಗಿಸಿ ತಮ್ಮ ಕ್ಷೇತ್ರಗಳಲ್ಲಿನ ಸಮಸ್ಯೆ ಬಗೆಹರಿಸಿದ್ದಾರೆ. ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಕ್ಷೇತ್ರದಲ್ಲೂ ಪರಿಶೀಲನೆ ಮಾಡಿದ್ದೇವೆ. ಅವರು ಈ ಭಾಗದ ರಸ್ತೆ ಅಗಲೀಕರಣ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ಅವರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.</p>



<p>ಈ ವಿಚಾರವಾಗಿ ಎಲ್ಲೆಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಸಮಸ್ಯೆಯಾಗಿದೆಯೋ‌ ಆ ಜಾಗಗಳ ಫೋಟೊ, ವಿಡಿಯೊ ಮಾಡಿಕೊಂಡು ತುರ್ತು ವರದಿ ಸಲ್ಲಿಕೆ ಮಾಡುವಂತೆ ಡಿ.ಕೆ.ಶಿ ಅವರು ತಿಳಿಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ಘಟಕ ತಮ್ಮ ಪೋಸ್ಟ್‌ ಹಂಚಿಕೊಂಡಿದೆ.</p>
]]></content:encoded>
					
		
		
			</item>
	</channel>
</rss>
