<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>bhagat sing &#8211; Peepal Media</title>
	<atom:link href="https://peepalmedia.com/tag/bhagat-sing/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Wed, 28 Sep 2022 15:41:55 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>bhagat sing &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>‘ಕ್ರಾಂತಿ ಚಿರಾಯುವಾಗಲಿ’ ಘೋಷಣೆಯ ಕುರಿತು</title>
		<link>https://peepalmedia.com/long-live-the-revolutionbhagath-singh/</link>
		
		<dc:creator><![CDATA[Jyothi A]]></dc:creator>
		<pubDate>Wed, 28 Sep 2022 14:45:49 +0000</pubDate>
				<category><![CDATA[ವಿಶೇಷ]]></category>
		<category><![CDATA[bhagat sing]]></category>
		<category><![CDATA[Bhagat Singh]]></category>
		<category><![CDATA[kannada]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[special]]></category>
		<category><![CDATA[special story]]></category>
		<category><![CDATA[writing]]></category>
		<guid isPermaLink="false">https://peepalmedia.com/?p=7807</guid>

					<description><![CDATA[(ಮಾಡರ್ನ್ ರಿವ್ಯೂ ಪತ್ರಿಕೆಯಲ್ಲಿ ರಮಾನಂದ ಚಟರ್ಜಿ ಅವರು ಕ್ರಾಂತಿ ಚಿರಾಯುವಾಗಲಿ ಎಂಬ ಘೋಷಣೆಯನ್ನು ಅಪಹಾಸ್ಯ ಮಾಡಿ ಬರೆದಿದ್ದ ಸಂಪಾದಕೀಯಕ್ಕೆ ‘ಸಂಪಾದಕರಿಗೊಂದು ಪತ್ರ’ದ ಮೂಲಕ ಪ್ರತಿಕ್ರಿಯೆ ನೀಡಿದ ಭಗತ್ ಸಿಂಗ್ ಆ ಘೋಷಣೆಯ ಅರ್ಥ, ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ಈ ಪತ್ರವನ್ನು 1929ರ ಡಿಸೆಂಬರ್ 24ರಂದು ‘ದ ಟೆಲಿಗ್ರಾಫ್’ ಪತ್ರಿಕೆ ಪ್ರಕಟಿಸಿತು.) ಸಂಪಾದಕರು, ಮಾಡರ್ನ್ ರಿವ್ಯೂ, ತಮ್ಮ ಮಾನ್ಯ ಪತ್ರಿಕೆಯ ಡಿಸೆಂಬರ್ (1929) ಸಂಚಿಕೆಯಲ್ಲಿ ‘ಕ್ರಾಂತಿ ಚಿರಾಯುವಾಗಲಿ’ ಎಂಬ ಶೀರ್ಷಿಕೆಯಡಿ ತಾವು ಟಿಪ್ಪಣಿಯೊಂದನ್ನು ಬರೆದಿದ್ದೀರಿ. ಅಲ್ಲದೆ ಆ [&#8230;]]]></description>
										<content:encoded><![CDATA[
<p>(<strong><em>ಮಾಡರ್ನ್ ರಿವ್ಯೂ ಪತ್ರಿಕೆಯಲ್ಲಿ ರಮಾನಂದ ಚಟರ್ಜಿ ಅವರು ಕ್ರಾಂತಿ ಚಿರಾಯುವಾಗಲಿ ಎಂಬ ಘೋಷಣೆಯನ್ನು ಅಪಹಾಸ್ಯ ಮಾಡಿ ಬರೆದಿದ್ದ ಸಂಪಾದಕೀಯಕ್ಕೆ ‘ಸಂಪಾದಕರಿಗೊಂದು ಪತ್ರ’ದ ಮೂಲಕ ಪ್ರತಿಕ್ರಿಯೆ ನೀಡಿದ ಭಗತ್ ಸಿಂಗ್ ಆ ಘೋಷಣೆಯ ಅರ್ಥ, ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ಈ ಪತ್ರವನ್ನು 1929ರ ಡಿಸೆಂಬರ್ 24ರಂದು ‘ದ ಟೆಲಿಗ್ರಾಫ್’ ಪತ್ರಿಕೆ ಪ್ರಕಟಿಸಿತು.</em></strong>)</p>



<p>ಸಂಪಾದಕರು,</p>



<p>ಮಾಡರ್ನ್ ರಿವ್ಯೂ, ತಮ್ಮ ಮಾನ್ಯ ಪತ್ರಿಕೆಯ ಡಿಸೆಂಬರ್ (1929) ಸಂಚಿಕೆಯಲ್ಲಿ ‘ಕ್ರಾಂತಿ ಚಿರಾಯುವಾಗಲಿ’ ಎಂಬ ಶೀರ್ಷಿಕೆಯಡಿ ತಾವು ಟಿಪ್ಪಣಿಯೊಂದನ್ನು ಬರೆದಿದ್ದೀರಿ. ಅಲ್ಲದೆ ಆ ಪದಪುಂಜದ ಅರ್ಥಹೀನತೆಯ ಬಗ್ಗೆಯೂ ಅದರಲ್ಲಿ ಬೊಟ್ಟು ಮಾಡಿದ್ದೀರಿ. ಎಚ್ಚೆತ್ತ ಭಾರತೀಯರೆಲ್ಲರ ಅಪಾರ ಮೆಚ್ಚುಗೆಗೆ ಪಾತ್ರರಾಗಿರುವ ತಮ್ಮಂತಹ ಒಬ್ಬ ಹಿರಿಯ, ಅನುಭವಿ, ಶ್ರೇಷ್ಠ ಮತ್ತು ಖ್ಯಾತ ಪತ್ರಕರ್ತನ ಹೇಳಿಕೆಯನ್ನು ಅಲ್ಲಗಳೆಯಲು ಅಥವಾ ವಿರೋಧಿಸಲು ಯತ್ನಿಸುವುದು ನಮ್ಮ ಪಾಲಿನ ಅಧಿಕಪ್ರಸಂಗತನವೇ ಆದೀತು. ಆದರೂ ಆ ಘೋಷಣೆಯ ಮೂಲಕ ಏನು ಹೇಳಲು ಹೊರಟಿದ್ದೇವೆಂದು ವಿವರಿಸುವುದು ನಮ್ಮ ಕರ್ತವ್ಯ ಎಂದು ಭಾವಿಸುತ್ತೇವೆ. ಹಾಗೆಯೇ ಈ ಕಾಲಘಟ್ಟದಲ್ಲಿ ನಮ್ಮ ದೇಶದಲ್ಲಿ ಈ “ಕೂಗುಗಳಿಗೆ” ಪ್ರಚಾರ ನೀಡಬೇಕಿದೆ ಎಂದೂ ಸಹ ನಮಗನ್ನಿಸಿದೆ.</p>



<p>ಈ ಕೂಗನ್ನು ಹುಟ್ಟುಹಾಕಿದವರು ನಾವಲ್ಲ. ಇದೇ ಕೂಗು ರಷ್ಯಾದ ಕ್ರಾಂತಿಕಾರಿ ಚಳವಳಿಯಲ್ಲೂ ಬಳಕೆಯಾಗಿತ್ತು. ಅಪ್ಟನ್ ಸಿಂಕ್ಲೇರ್ ಎಂಬ ಖ್ಯಾತ ಸಮಾಜವಾದಿ ಬರಹಗಾರ, ಬೋಸ್ಟನ್ ಮತ್ತು ಆಯಿಲ್ ಎಂಬ ತನ್ನ ಇತ್ತೀಚಿನ ಕಾದಂಬರಿಗಳಲ್ಲಿ ಕೆಲವು ಅರಾಜಕತಾವಾದಿ ಕ್ರಾಂತಿಕಾರಿ ಪಾತ್ರಗಳ ಮೂಲಕ ಈ ಘೋಷಣೆಯನ್ನು ಮೊಳಗಿಸಿದ. ರಕ್ತಪಾತದ ಹೋರಾಟ ಸದಾಕಾಲ ಮುಂದುವರಿಯಬೇಕು ಎಂದಾಗಲಿ ಅಥವಾ ಸ್ವಲ್ಪ ಸಮಯಕ್ಕಾದರೂ ಯಾವುದೊಂದೂ ಸ್ತಬ್ಧವಾಗಕೂಡದು ಎಂದಾಗಲಿ ಈ ಘೋಷಣೆಯ ಅರ್ಥವಲ್ಲ. ಈ ಘೋಷಣೆಯನ್ನು ದೀರ್ಘಕಾಲ ಬಳಸುವುದರಿಂದ ಅದು ಪಡೆಯುವ ಮಹತ್ವಕ್ಕೆ ವ್ಯಾಕರಣಾತ್ಮಕವಾಗಿ ಇಲ್ಲವೇ ಪದಸಂರಚನಾತ್ಮಕವಾಗಿ ಅಷ್ಟೇನೂ ಸಮರ್ಥನೆ ಸಿಗದಿರಬಹುದು. ಆದರೆ ನಾವು ಅದರ ಮೂಲಕವೇ ಈ ಘೋಷಣೆಗೆ ಸಂಬಂಧಿಸಿದ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಅಂತಹ ಎಲ್ಲ ಕೂಗುಗಳೂ ತಮ್ಮೊಳಗೆ ಭಾಗಶಃ ಅಂತರ್ಗತವಾಗಿರುವ ಮತ್ತು ಭಾಗಶಃ ಹೊರಗಿನಿಂದ ಪಡೆದುಕೊಂಡಿರುವ ಸಾಮಾನ್ಯ ಗ್ರಹಿಕೆಯನ್ನು ಸೂಚಿಸುತ್ತವೆ. ಉದಾಹರಣೆಗೆ, ನಾವು “ಜತಿನ್ ದಾಸ್ ಚಿರಾಯುವಾಗಲಿ” ಎಂಬ ಘೋಷಣೆಯನ್ನು ಮೊಳಗಿಸುವಾಗ ಅದರಿಂದ ದಾಸ್ ದೈಹಿಕವಾಗಿ ಬದುಕಿರಬೇಕೆಂದು ನಾವು ಅರ್ಥೈಸಲು ಸಾಧ್ಯವಿಲ್ಲ ಅಥವಾ ಅರ್ಥೈಸುವುದಿಲ್ಲ. ಅಷ್ಟೆಲ್ಲ ನೋವುಂಡ ಆ ಮಹಾ ಹುತಾತ್ಮನಿಗೆ ಇಂತಹ ಪರಮೋಚ್ಛ ತ್ಯಾಗ ಮಾಡಲು ಪ್ರೇರೇಪಿಸಿದ ಚಿಂತನೆಯ ಅದಮ್ಯ ಚೇತನದ ಜೊತೆಗೆ ಅವನ ಬದುಕಿನ ಶ್ರೇಷ್ಠ ವಿಚಾರಗಳು ಚಿರವಾಗಿ ಉಳಿಯಬೇಕು ಎಂಬುದನ್ನು ಈ ಘೋಷಣೆ ಮೊಳಗಿಸುವ ಮೂಲಕ ನಾವು ಹೇಳಲು ಬಯಸುತ್ತೇವೆ. ಈ ಕೂಗನ್ನು ಮೊಳಗಿಸುವುದರಿಂದ ನಾವು ನಮ್ಮ ಆದರ್ಶದ ಬೆಂಬತ್ತಿ ಹೋಗುವಾಗಲೂ ಅದೇ ಎದೆಗಾರಿಕೆಯನ್ನು ಪ್ರದರ್ಶಿಸಬಹುದೆಂದು ಅಪೇಕ್ಷಿಸುತ್ತೇವೆ. ಆ ಉತ್ಸಾಹವನ್ನೇ ನಾವಿಲ್ಲಿ ಪ್ರಾಸಂಗಿಕವಾಗಿ ಸೂಚಿಸುತ್ತಿರುವುದು.</p>



<p>ಹಾಗೆಯೆ ಯಾರೂ “ಕ್ರಾಂತಿ” ಪದವನ್ನು ಅದರ ಶಬ್ದಾರ್ಥದಲ್ಲಿ ವ್ಯಾಖ್ಯಾನಿಸಬಾರದು. ತಮ್ಮ ಅನುಕೂಲಕ್ಕಾಗಿ ಬಳಸುವ ಇಲ್ಲವೆ ದುರ್ಬಳಕೆ ಮಾಡಿಕೊಳ್ಳುವವರ ಮನಸ್ಥಿತಿಗೆ ಅನುಗುಣವಾಗಿ ಈ ಪದಕ್ಕೆ ಹಲವು ಅರ್ಥಗಳನ್ನೂ ತಾತ್ಪರ್ಯಗಳನ್ನೂ ಕಲ್ಪಿಸಲಾಗಿದೆ. ಸ್ಥಾಪಿತ ವ್ಯವಸ್ಥೆಯಿಂದ ಹಿಡಿದು ಶೋಷಕ ಸಂಸ್ಥೆಗಳವೆರಗೂ ಕ್ರಾಂತಿ ಶಬ್ದವು ರಕ್ತದ ಕಲೆ ಅಂಟಿರುವ ಭಯಾನಕ ಭಾವವನ್ನು ಕಣ್ಣಿಗೆ ಕಟ್ಟುತ್ತದೆ. ಆದರೆ ಕ್ರಾಂತಿಕಾರಿಗಳಿಗೆ ಅದು ಪವಿತ್ರ ಶಬ್ದವೇ ಸರಿ. ಶಾಸನಸಭೆಯ ಬಾಂಬ್ ಎಸೆತ ಪ್ರಕರಣದ ವಿಚಾರಣೆಯಲ್ಲಿ ನಾವು ದೆಹಲಿಯ ಸೆಷನ್ಸ್ ನ್ಯಾಯಾಧೀಶರ ಎದುರು ನೀಡಿದ ಹೇಳಿಕೆಯಲ್ಲಿ “ಕ್ರಾಂತಿ” ಪದದ ಅರ್ಥವನ್ನು ಸ್ಪಷ್ಟವಾಗಿ ವಿವರಿಸಲು ಯತ್ನಿಸಿದ್ದೆವು.</p>



<p></p>



<figure class="wp-block-image size-full"><img fetchpriority="high" decoding="async" width="540" height="405" src="https://peepalmedia.com/wp-content/uploads/2022/09/Bhagat-Singh-_17fb5e39284_medium.jpg" alt="" class="wp-image-7819" srcset="https://peepalmedia.com/wp-content/uploads/2022/09/Bhagat-Singh-_17fb5e39284_medium.jpg 540w, https://peepalmedia.com/wp-content/uploads/2022/09/Bhagat-Singh-_17fb5e39284_medium-300x225.jpg 300w, https://peepalmedia.com/wp-content/uploads/2022/09/Bhagat-Singh-_17fb5e39284_medium-150x113.jpg 150w" sizes="(max-width: 540px) 100vw, 540px" /></figure>



<p></p>



<p>ಕ್ರಾಂತಿ ಎಂದರೆ ರಕ್ತಪಾತದ ಹೋರಾಟ ಮಾತ್ರವೇ ಅಲ್ಲ ಎಂದು ಅಲ್ಲಿ ನಾವು ಹೇಳಿದ್ದೆವು. ಅದು ಬಾಂಬ್ ಮತ್ತು ಪಿಸ್ತೂಲು ಪಂಥಕ್ಕೆ ಸೇರಿದ್ದಲ್ಲ. ಕ್ರಾಂತಿಯ ಸಾಧನೆಗಾಗಿ ಅವು ಒಮ್ಮೊಮ್ಮೆ ಬರೀ ಸಾಧನಗಳಾಗುತ್ತವೆ, ಅಷ್ಟೇ. ಕೆಲವು ಚಳವಳಿಗಳಲ್ಲಿ ಅವು ಮಹತ್ವದ ಪಾತ್ರ ವಹಿಸುತ್ತವೆ ಎಂಬುದೂ ನಿಜವೇ. ಆದರೆ ಅದೊಂದೇ ಕಾರಣಕ್ಕಾಗಿ ಅವೆರಡೂ ಒಂದೇ ಆಗುವುದಿಲ್ಲ. ದಂಗೆಯೇ ಕ್ರಾಂತಿಯಲ್ಲ. ಅದು ಅಂತಿಮ ಗುರಿಯತ್ತ ಒಯ್ಯಬಹುದಷ್ಟೇ.</p>



<p>ಉತ್ತಮ ವ್ಯವಸ್ಥೆಯನ್ನು ರೂಪಿಸುವ ಸಲುವಾಗಿ ಬದಲಾವಣೆ ತರುವ ಹೆಬ್ಬಯಕೆ ಮತ್ತು ಉತ್ಸಾಹದಿಂದ ಆ ಪದಪುಂಜದಲ್ಲಿ ಕ್ರಾಂತಿ ಎಂಬ ಶಬ್ದದ ಪ್ರಯೋಗವಾಗಿದೆ. ಜನರು ಸಾಮಾನ್ಯವಾಗಿ ಸ್ಥಾಪಿತ ವ್ಯವಸ್ಥೆಗೆ ಹೊಂದಿಕೊಂಡಿರುತ್ತಾರೆ. ಅಲ್ಲದೆ ಬದಲಾವಣೆ ಎಂಬ ಒಂದು ಆಲೋಚನೆಯೇ ವ್ಯವಸ್ಥೆಯಲ್ಲಿ ನಡುಕ ಹುಟ್ಟಿಸುತ್ತದೆ. ಈ ಜಡತ್ವದ ಬದಲು ನಾವು ಕ್ರಾಂತಿಕಾರಿ ಚೈತನ್ಯವನ್ನು ಮೈಗೂಡಿಸಿಕೊಳ್ಳಬೇಕಿದೆ. ಇಲ್ಲವೆಂದಾದರೆ ಅವನತಿ ಮೇಲುಗೈ ಸಾಧಿಸುತ್ತದೆ ಮತ್ತು ಪ್ರತಿಗಾಮಿ ಶಕ್ತಿಗಳು ಇಡೀ ಮನುಷ್ಯತ್ವವನ್ನೇ ಕೆಟ್ಟ ದಾರಿಯಲ್ಲಿ ಒಯ್ಯುತ್ತವೆ. ಇದು ಮಾನವ ಪ್ರಗತಿಯಲ್ಲಿನ ಜಡv ಮತ್ತು ನಿಷ್ಕ್ರಿಯತೆಗೆ ಕಾರಣವಾಗುತ್ತದೆ. ಪ್ರತಿಗಾಮಿ ಶಕ್ತಿಗಳು ಒಟ್ಟುಗೂಡದಂತೆ (ಅವುಗಳ ಪ್ರಾಬಲ್ಯ ಹೆಚ್ಚಾಗದಂತೆ) ಮತ್ತು ಅವುಗಳ ಶಾಶ್ವತ ಮುನ್ನಡೆಯನ್ನು ತಡೆಗಟ್ಟುವ ಸಲುವಾಗಿ, ಕ್ರಾಂತಿಯ ಚಿಲುಮೆ ಸದಾಕಾಲ ಮಾನವೀಯತೆಯನ್ನು ವ್ಯಾಪಿಸುವಂತೆ ಗಮನ ವಹಿಸಬೇಕು. ಹೊಸದೊಂದು ವ್ಯವಸ್ಥೆಯ ಉದಯಕ್ಕೆ ದಾರಿ ಮಾಡಿಕೊಡಲು ಹಳೆಯ ವ್ಯವಸ್ಥೆ ಸ್ಥಿರವಾಗಿ ಮತ್ತು ಚಿರವಾಗಿ ಬದಲಾಗಬೇಕು. ಒಂದು “ಒಳ್ಳೆಯ” ವ್ಯವಸ್ಥೆ ಹುಟ್ಟಿದರೆ ಅದು ಇಡೀ ವಿಶ್ವವನ್ನೇ ಭ್ರಷ್ಟವಾಗದಂತೆ ತಡೆಗಟ್ಟುತ್ತದೆ. ನಾವು “ಕ್ರಾಂತಿ ಚಿರಾಯುವಾಗಲಿ” ಎಂಬ ಘೋಷಣೆ ಮೊಳಗಿಸುವುದು ಈ ಅರ್ಥದಿಂದಲೇ.</p>



<p>&nbsp;ತಮ್ಮ ವಿಶ್ವಾಸಿ,</p>



<p>&nbsp;ಸಹಿ/-</p>



<p>&nbsp;ಭಗತ್ ಸಿಂಗ್, ಬಿ. ಕೆ. ದತ್</p>



<p><strong><em>(ಈ ಲೇಖನವನ್ನು ನವಕರ್ನಾಟಕ ಪ್ರಕಾಶನ ಸಂಸ್ಥೆ ಪ್ರಕಟಿಸಿರುವ, ಜ್ಯೋತಿ ಎ. ಅನುವಾದಿಸಿರುವ “ಭಗತ್ ಸಿಂಗ್ ಇಂಕ್ವಿಲಾಬ್ ಜಿಂದಾಬಾದ್! ಆಯ್ದ ಬರಹಗಳು ಮತ್ತು ಭಾಷಣಗಳು” ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.)</em></strong></p>



<p></p>



<p></p>



<p></p>



<p></p>



<p></p>



<p><strong>ಇದನ್ನೂ ನೋಡಿ: </strong><a href="https://youtu.be/_GkiuaLBr9I">ಬಿಜೆಪಿ ಸರ್ಕಾರ ನಿಜಕ್ಕೂ 40% ಕಮಿಷನ್‌ ಪಡೆಯುತ್ತಿದೆಯೇ? ಈ ಕುರಿತು ಯುವ ರಾಜಕೀಯ ಮುಂದಾಳು ಸುರೇಶ್‌ ರಾಥೋಡ್‌ ಅವರ ವಿಶ್ಲೇಷಣೆ ಇಲ್ಲಿದೆ.</a></p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<iframe title="ಬಿಜೆಪಿ ಸರ್ಕಾರ ನಿಜಕ್ಕೂ 40% ಕಮಿಷನ್‌ ಪಡೆಯುತ್ತಿದೆಯೇ?" width="696" height="392" src="https://www.youtube.com/embed/_GkiuaLBr9I?feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture" allowfullscreen></iframe>
</div></figure>



<p></p>



<p></p>



<p></p>



<p></p>



<p></p>



<p></p>



<p></p>



<p></p>
]]></content:encoded>
					
		
		
			</item>
		<item>
		<title>ಮಹಾತ್ಮಾ ಗಾಂಧಿ, ಭಗತ್ ಸಿಂಗ್ ಭಾರತೀಯ ವಿದ್ಯಾರ್ಥಿಗಳ ನೆಚ್ಚಿನ ರಾಷ್ಟ್ರನಾಯಕರು: ಸಮೀಕ್ಷೆ</title>
		<link>https://peepalmedia.com/mahatma-gandhi-bhagat-sing-bharateeya-vidyarthi-nechhina-rashtranayakaru-sameekshe/</link>
		
		<dc:creator><![CDATA[Peepal Media]]></dc:creator>
		<pubDate>Thu, 25 Aug 2022 07:16:15 +0000</pubDate>
				<category><![CDATA[ಜನ-ಗಣ-ಮನ]]></category>
		<category><![CDATA[bhagat sing]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[leaders]]></category>
		<category><![CDATA[mahatma gandhi]]></category>
		<category><![CDATA[national]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=2848</guid>

					<description><![CDATA[ಬ್ರೈನ್ಲಿ ಆನ್‌ ಲೈನ್‌ ಕಲಿಕಾ ವೇದಿಕೆ ನಡೆಸಿದ ಸಮೀಕ್ಷೇಯೊಂದರಲ್ಲಿ, ಮಹಾತ್ಮ ಗಾಂಧಿ ಮತ್ತು ಭಗತ್‌ ಸಿಂಗ್‌ ಭಾರತೀಯ ವಿಧ್ಯಾರ್ಥಿಗಳ ನೆಚ್ಚಿನ ನಾಯಕರಾಗಿ ಹೊರಹೊಮ್ಮಿದ್ದು, ಮೊದಲ ಮತ್ತು ಎರಡನೇ ಸ್ಥಾನಗಳನ್ನು ಪಡೆದಿದ್ದಾರೆ. ಈ ಮೂಲಕ ಶೇ 89% ವಿಧ್ಯಾರ್ಥಿಗಳು ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಇನ್ನಷ್ಟು ತಿಳಿಯಲು ಉತ್ಸುಕರಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಈ ಆಗಸ್ಟ್‌ 15 ರಂದು ಭಾರತವು ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ 75 ನೇ ವರ್ಷಕ್ಕೆ ಕಾಲಿಟ್ಟಿದ್ದು ಅಮೃತಮಹೋತ್ವವನ್ನು ಆಚರಿಸಿಕೊಂಡಿತು. ಹೀಗಾಗಿ ಈ ದಿನವನ್ನು ನಮ್ಮ ಸ್ವಾತಂತ್ರ್ಯ [&#8230;]]]></description>
										<content:encoded><![CDATA[
<p class="has-medium-font-size">ಬ್ರೈನ್ಲಿ ಆನ್‌ ಲೈನ್‌ ಕಲಿಕಾ ವೇದಿಕೆ ನಡೆಸಿದ ಸಮೀಕ್ಷೇಯೊಂದರಲ್ಲಿ, ಮಹಾತ್ಮ ಗಾಂಧಿ ಮತ್ತು ಭಗತ್‌ ಸಿಂಗ್‌ ಭಾರತೀಯ ವಿಧ್ಯಾರ್ಥಿಗಳ ನೆಚ್ಚಿನ ನಾಯಕರಾಗಿ ಹೊರಹೊಮ್ಮಿದ್ದು, ಮೊದಲ ಮತ್ತು ಎರಡನೇ ಸ್ಥಾನಗಳನ್ನು ಪಡೆದಿದ್ದಾರೆ. ಈ ಮೂಲಕ ಶೇ 89% ವಿಧ್ಯಾರ್ಥಿಗಳು ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಇನ್ನಷ್ಟು ತಿಳಿಯಲು ಉತ್ಸುಕರಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.</p>



<p class="has-medium-font-size">ಈ ಆಗಸ್ಟ್‌ 15 ರಂದು ಭಾರತವು ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ 75 ನೇ ವರ್ಷಕ್ಕೆ ಕಾಲಿಟ್ಟಿದ್ದು ಅಮೃತಮಹೋತ್ವವನ್ನು ಆಚರಿಸಿಕೊಂಡಿತು. ಹೀಗಾಗಿ ಈ ದಿನವನ್ನು ನಮ್ಮ ಸ್ವಾತಂತ್ರ್ಯ ಹೋರಾಟಗಾರ ಧೀರ ತ್ಯಾಗದ ಸಂಕೇತವಾಗಿ ಗುರುತಿಸಲಾಗಿದೆ.</p>



<p class="has-medium-font-size">75 ನೇ ಸ್ವಾತಂತ್ರ್ಯ ಅಮೃತಮಹೋತ್ಸವ  ದಿನಾಚರಣೆಯ ಮಹತ್ವದ ಸಂದರ್ಭದಲ್ಲಿ,  ಬ್ರೈನ್ಲಿ ಆನ್‌ಲೈನ್ ಕಲಿಕಾ ವೇದಿಕೆಯು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಭಾರತೀಯ ವಿಧ್ಯಾರ್ಥಿಗಳು  ಎಷ್ಟು ತಿಳಿದಿದ್ದಾರೆಂದು ತಿಳಿಯಲು ಸಮೀಕ್ಷೇ ನಡೆಸಿತು.ಹೀಗಾಗಿ ಬ್ರೈನ್ಲಿ ಆನ್‌ಲೈನ್ ಕಲಿಕಾ ವೇದಿಕೆಯು ಒಟ್ಟು 5.5 ಕೋಟಿಗೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳ ಬಳಕೆದಾರರ ನೆಲೆಯನ್ನು ಹೊಂದಿದೆ ಎಂದು ಸಮೀಕ್ಷೇಯಲ್ಲಿ ತಿಳಿಸಲಾಗಿದೆ. </p>



<p class="has-medium-font-size">ಈ ಸಮಿಕ್ಷೇಯನ್ನು ರಾಷ್ಟ್ರಪಿತನಿಂದ ಪ್ರಾರಂಭಿಸಿದ್ದು,  ಮಹಾತ್ಮ ಗಾಂಧಿಯವರು 41% ಮತಗಳನ್ನು ಗಳಿಸುವ ಮೂಲಕ ಅತ್ಯಂತ ನೆಚ್ಚಿನ ಮತ್ತು ಸ್ಪೂರ್ತಿದಾಯಕ ರಾಷ್ಟ್ರೀಯ ಐಕಾನ್ ಆಗಿ ಹೊರಹೊಮ್ಮಿದ್ದಾರೆ. ಭಾರತೀಯ ಇತಿಹಾಸದಲ್ಲಿ ಗಮನಾರ್ಹ ಅಧ್ಯಾಯವಾಗಿ ಉಳಿದಿರುವ ಗಾಂಧಿ ಅವರು ಅವರ ಅಹಿಂಸೆ ಮತ್ತು ಬಲವಾದ ನಾಯಕತ್ವದ ತತ್ತ್ವಶಾಸ್ತ್ರಕ್ಕಾಗಿ ಪ್ರಶಂಸಿಸಲ್ಪಟ್ಟಿದ್ದಾರೆ. </p>



<pre class="wp-block-preformatted has-medium-font-size">ನಂತರದ ಸ್ಥಾನವನ್ನು ಯುವ ಕ್ರಾಂತಿಕಾರಿ ಭಗತ್ ಸಿಂಗ್ 32% ಮತಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದು, ಭಾರತೀಯ ಇತಿಹಾಸದಲ್ಲಿ ಅವರ ದಂಗೆಗಳು ಗಮನಾರ್ಹ ಅಧ್ಯಯನಗಳಾವಿವೆ. 
<strong>ಸಮೀಕ್ಷೆ ಏಕೆ ನಡೆಸಲಾಯಿತು?</strong></pre>



<pre class="wp-block-preformatted has-medium-font-size">"ಬ್ರೈನ್ಲಿ ಸಮೀಕ್ಷೆಯು ಇಂದು ವಿದ್ಯಾರ್ಥಿಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಸ್ತುತತೆಯನ್ನು ಅಳೆಯುವ ಪ್ರಯತ್ನಮಾಡಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ನಾಯಕರುಗಳು ಹೇಗೆ ಎಲ್ಲವನ್ನೂ ಧೈರ್ಯದಿಂದ ಎದುರಿಸಿದರು, ಇಂತಹ ನಾಯಕರ ಬಗ್ಗೆ ವಿಧ್ಯಾರ್ಥಿಗಳಲ್ಲಿ ಎಷ್ಟು ಅರಿವು ಇದೆ ಎಂಬುದನ್ನು ತಿಳಿಯುವುದಕ್ಕೆ ಈ ಸಮೀಕ್ಷೆ ಎಂದು ಬ್ರೈನ್ಲಿಯ ಭಾರತದ ವ್ಯವಸ್ಥಾಪಕ ನಿರ್ದೇಶಕ ನರಸಿಂಹ ಜಯಕುಮಾರ್ ಹೇಳಿದರು.</pre>



<pre class="wp-block-preformatted has-medium-font-size">ನಮ್ಮ ಸಂಶೋಧನೆಯು ವಿದ್ಯಾರ್ಥಿಗಳು ನಮ್ಮ ಇತಿಹಾಸದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಆಸಕ್ತಿ ಹೊಂದಿದ್ದಾರೆಂದು ತೋರಿಸುತ್ತದೆ ಆದರೆ ಮಾಹಿತಿ ವಿತರಣೆಯಲ್ಲಿ ಅಂತರಗಳಿವೆ, ಅದನ್ನು ಉತ್ತಮವಾಗಿ ತಿಳಿಸಬೇಕಾಗಿದೆ" ಎಂದು ಹೇಳಿದರು.</pre>



<pre class="wp-block-preformatted has-medium-font-size">ಇಂದು, ಭಾರತವು 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 550 ಮಿಲಿಯನ್‌ &nbsp;ಜನರಿಗೆ ನೆಲೆಯಾಗಿದೆ, ಇದು ವಿಶ್ವದಾದ್ಯಂತ ಯುವ ಜನಸಂಖ್ಯೆಯಲ್ಲಿ ಅತಿ ಹೆಚ್ಚು ವಿಸ್ತಾರ ಹೊಂದಿದೆ. ಅವರೇ ನಮಗೆ ಉತ್ತಮ ನಾಳೆಯನ್ನು ಸ್ಕ್ರಿಪ್ಟ್ ಮಾಡುತ್ತಾರೆ. ಅದನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು, ಅವರು ಈ ರಾಷ್ಟ್ರವನ್ನು ನಿರ್ಮಿಸಲು ಮಾಡಿದ ತ್ಯಾಗ ಮತ್ತು ನಾಗರಿಕರಾಗಿ ನಾವು ಅನುಭವಿಸುವ ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ತಿಳಿದಿರಬೇಕು ಎಂದು ಜಯಕುಮಾರ್ ತಿಳಿಸಿದರು. </pre>



<div class="wp-block-cover is-light"><span aria-hidden="true" class="wp-block-cover__background has-light-green-cyan-background-color has-background-dim-100 has-background-dim"></span><div class="wp-block-cover__inner-container is-layout-flow wp-block-cover-is-layout-flow">
<pre class="wp-block-preformatted has-medium-font-size"><strong><mark style="background-color:rgba(0, 0, 0, 0)" class="has-inline-color has-vivid-red-color">ಸಮೀಕ್ಷೆಯ ಮುಖ್ಯಾಂಶಗಳು</mark></strong></pre>



<pre class="wp-block-preformatted has-medium-font-size"><strong>1) ಸಮೀಕ್ಷೆಯಲ್ಲಿ 59% ವಿದ್ಯಾರ್ಥಿಗಳು 75 ನೇ ವರ್ಷದ ಸ್ವಾತಂತ್ರ್ಯದ ಬಗ್ಗೆ ಸರಿಯಾಗಿ ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ಭಾರತದಂತಹ ಐತಿಹಾಸಿಕ ಅಪ್ರತಿಮ ರಾಷ್ಟ್ರಕ್ಕಾಗಿ, ಮುಂದಿನ ಪೀಳಿಗೆಗೆ, ಭಾರತದ ರಾಷ್ಟ್ರೀಯ ವೀರರ ಬಗ್ಗೆ ಮತ್ತು ಅವರು ಸ್ವಾತಂತ್ರ್ಯವನ್ನು ತರಲು ಏನೇಲ್ಲಾ ಹೋರಾಟ ಮಾಡಿದರು ಎಂದು ತಿಳಿಸಬೇಕು ಎಂಬುದು ಈ ಸಮೀಕ್ಷೆಯ ಮುಖ್ಯ ಅಂಶವಾಗಿತ್ತು.</strong></pre>



<pre class="wp-block-preformatted has-medium-font-size"><strong>2) 50% ವಿದ್ಯಾರ್ಥಿಗಳು &nbsp;ಜ್ಞಾನದ ಪ್ರಾಥಮಿಕ ಮೂಲ ಶಾಲೆಗಳು &nbsp;ಎಂದು ಪ್ರತಿಪಾದಿಸಿದರೆ, ಆದಾಗ್ಯೂ ಕೇವಲ 13% ವಿದ್ಯಾರ್ಥಿಗಳು ಅವರು ಮನೆಯಲ್ಲಿ ಅಥವಾ ಅವರ ಪೋಷಕರಿಂದ ಕಲಿತಿದ್ದಾರೆ ಎಂದು ಹೇಳಿದರು. ಆದರೆ ಇನ್ನುಳಿದ 17% ವಿದ್ಯಾರ್ಥಿಗಳು &nbsp;ಆನ್‌ಲೈನ್ ಮೂಲಕ ರಾಷ್ಟ್ರನಾಯಕರ ಬಗ್ಗೆ ಮಾಹಿತಿ ಹುಡುಕಾಡಿದ್ದು ಬ್ರೈನ್ಲಿ ಸಂಶೋಧನೆಗೆ ಕಾರಣವಾಗಿದೆ.</strong></pre>



<pre class="wp-block-preformatted has-medium-font-size"><strong>3) ಮಹಾತ್ಮ ಗಾಂಧಿಯವರ 'ಮಾಡು ಇಲ್ಲವೇ ಮಡಿ' ಎಂಬುದು ಭಾರತದ ಸ್ವಾತಂತ್ರ್ಯ ಹೋರಾಟವನ್ನು ವ್ಯಾಖ್ಯಾನಿಸಿದ ಜನಪ್ರಿಯ ಯುದ್ಧದ ಕೂಗು. ಅವರು ಅದನ್ನು ರೂಪಿಸಿದ ಬಂಡಾಯದ ಬಗ್ಗೆ ಕೇಳಿದಾಗ, 50% ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಕ್ವಿಟ್ ಇಂಡಿಯಾ ಚಳುವಳಿಗೆ ಸರಿಯಾಗಿ ಮತ ಹಾಕಿದ್ದಾರೆ. ಈ ಮೂಲಕ ಇನ್ನೂ 50% ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಚಳುವಳಿಗಳ ಬಗ್ಗೆ ಹೆಚ್ಚು ಅರಿವಿಲ್ಲ ಎಂದು ತಿಳಿಯುತ್ತದೆ.</strong> </pre>



<pre class="wp-block-preformatted has-medium-font-size"><strong>4) ಸಮೀಕ್ಷೆಯಲ್ಲಿ ಕೇಳಿದ ಪ್ರಶ್ನೆಗೆ 47% ವಿದ್ಯಾರ್ಥಿಗಳು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಧೈರ್ಯ ಮತ್ತು ನಿರ್ಭಯತೆಗಾಗಿ 'ಭಾರತದ ಉಕ್ಕಿನ ಮನುಷ್ಯ' ಎಂದು ಕರೆಯುತ್ತಾರೆ ಎಂದು ತಿಳಿದಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. </strong></pre>



<pre class="wp-block-preformatted has-medium-font-size"><strong>5) 89% ಜನರು ಭಾರತ ಮತ್ತು ಅದರ ಸ್ವಾತಂತ್ರ್ಯ ಚಳುವಳಿಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ಹೇಳಿದ್ದಾರೆ. ಹೀಗಾಗಿ ಮುಂದಿನ ಪೀಳಿಗೆಗೆ ಭಾರತದ ಇತಿಹಾಸ ಮತ್ತು ವೈಭವವನ್ನು ಮನೆಗೆ ತರಲು ಏನು ಮಾಡಬಹುದು ಎಂಬುದರ ಕುರಿತು ಹೆಚ್ಚಿನ ಮಾಹಿತಿ ನೀಡಲು ಮಹತ್ವದ ಅವಕಾಶವಾಗಿದೆ.</strong></pre>
</div></div>



<pre class="wp-block-preformatted has-medium-font-size"><strong>ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅರಿವಿನ ಕೊರತೆ</strong></pre>



<pre class="wp-block-preformatted has-medium-font-size">ಬ್ರೈನ್ಲಿ ಸಮೀಕ್ಷೆಯು ಭಾರತದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಭಾರತೀಯ ಸಂವಿಧಾನದ ಬಗ್ಗೆ ಸೀಮಿತ ಅರಿವನ್ನು ಬಹಿರಂಗಪಡಿಸಿದೆ. ಆದಾಗ್ಯೂ ಕೇವಲ 22% ವಿದ್ಯಾರ್ಥಿಗಳಿಗೆ ಮಾತ್ರ ಮತಂಗನಿ ಹಜ್ರಾ ಬಗ್ಗೆ ತಿಳಿದಿತ್ತು, ಅವರ ನೆನಪಿಗಾಗಿ ಕೋಲ್ಕತ್ತಾದಲ್ಲಿ ಮಹಿಳಾ ಕ್ರಾಂತಿಕಾರಿಯ ಮೊದಲ ಪ್ರತಿಮೆಯನ್ನು ನಿರ್ಮಿಸಲಾಯಿತು. ಅಲ್ಲದೆ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಕ್ರಮದಲ್ಲಿ ಭಾರತೀಯ ನಾಗರಿಕರಿಗೆ ನಿಗದಿಪಡಿಸಿದ ಮೂಲಭೂತ ಹಕ್ಕುಗಳ ಬಗ್ಗೆ 40% ಕ್ಕಿಂತ ಕಡಿಮೆ ಜನರು ತಿಳಿದುಕೊಂಡಿದ್ದರು ಎಂದು ಸಮೀಕ್ಷೇ ಮುಖ್ಯಾಂಶದಲ್ಲಿ ಗುರುತಿಸಲಾಗಿದೆ. </pre>
]]></content:encoded>
					
		
		
			</item>
	</channel>
</rss>
