<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Bhagat Singh &#8211; Peepal Media</title>
	<atom:link href="https://peepalmedia.com/tag/bhagat-singh/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 25 Feb 2025 05:55:36 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Bhagat Singh &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ದೆಹಲಿ: ಮುಖ್ಯಮಂತ್ರಿ ಕಚೇರಿಯಿಂದ ಅಂಬೇಡ್ಕರ್, ಭಗತ್ ಸಿಂಗ್ ಭಾವಚಿತ್ರಗಳನ್ನು ಬಿಜೆಪಿ ತೆಗೆದುಹಾಕಿದೆ ಎಂದು ಎಎಪಿ ಆರೋಪಿಸಿದ ಬೆನ್ನಲ್ಲೇ ಭುಗಿಲೆದ್ದ ವಿವಾದ</title>
		<link>https://peepalmedia.com/new-delhi-a-day-after-aap-alleged-that-the-bjp-had-removed-the-portraits-of-ambedkar-and-bhagat-singh-from-the-chief-ministers-office-a-controversy-erupted/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 25 Feb 2025 05:55:25 +0000</pubDate>
				<category><![CDATA[ದೇಶ]]></category>
		<category><![CDATA[Aam Aadmi Party]]></category>
		<category><![CDATA[AAP]]></category>
		<category><![CDATA[Bhagat Singh]]></category>
		<category><![CDATA[DR B R AMBEDKAR]]></category>
		<category><![CDATA[New Delhi]]></category>
		<category><![CDATA[Rekha Gupta]]></category>
		<guid isPermaLink="false">https://peepalmedia.com/?p=54415</guid>

					<description><![CDATA[ಮುಖ್ಯಮಂತ್ರಿ ಕಚೇರಿಯಿಂದ ಬಿ.ಆರ್. ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಛಾಯಾಚಿತ್ರಗಳನ್ನು ಆಡಳಿತಾರೂಢ ಭಾರತೀಯ ಜನತಾ ಪಕ್ಷವು ಕಿತ್ತುಹಾಕಿದೆ ಎಂದು ವಿರೋಧ ಪಕ್ಷದ ಆಮ್ ಆದ್ಮಿ ಪಕ್ಷ ಆರೋಪಿಸಿದ ನಂತರ ಸೋಮವಾರ ನವದೆಹಲಿಯಲ್ಲಿ ರಾಜಕೀಯ ವಿವಾದ ಭುಗಿಲೆದ್ದಿತು. ಆಮ್ ಆದ್ಮಿ ಪಕ್ಷವು ಆ ಫೋಟೋಗಳ ಜಾಗದಲ್ಲಿ ಮಹಾತ್ಮ ಗಾಂಧಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಚಿತ್ರಗಳನ್ನು ಹಾಕಿದೆ ಎಂದು ಬಿಜೆಪಿ ಮೇಲೆ ಆರೋಪ ಮಾಡಿದೆ. ಆದರೆ, ಬಿಜೆಪಿ ಈ ಆರೋಪಗಳು ಸುಳ್ಳು ಮತ್ತು [&#8230;]]]></description>
										<content:encoded><![CDATA[
<p>ಮುಖ್ಯಮಂತ್ರಿ ಕಚೇರಿಯಿಂದ ಬಿ.ಆರ್. ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಛಾಯಾಚಿತ್ರಗಳನ್ನು ಆಡಳಿತಾರೂಢ ಭಾರತೀಯ ಜನತಾ ಪಕ್ಷವು ಕಿತ್ತುಹಾಕಿದೆ ಎಂದು ವಿರೋಧ ಪಕ್ಷದ ಆಮ್ ಆದ್ಮಿ ಪಕ್ಷ ಆರೋಪಿಸಿದ ನಂತರ ಸೋಮವಾರ ನವದೆಹಲಿಯಲ್ಲಿ ರಾಜಕೀಯ ವಿವಾದ ಭುಗಿಲೆದ್ದಿತು.</p>



<p>ಆಮ್ ಆದ್ಮಿ ಪಕ್ಷವು ಆ ಫೋಟೋಗಳ ಜಾಗದಲ್ಲಿ ಮಹಾತ್ಮ ಗಾಂಧಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಚಿತ್ರಗಳನ್ನು ಹಾಕಿದೆ ಎಂದು ಬಿಜೆಪಿ ಮೇಲೆ ಆರೋಪ ಮಾಡಿದೆ. </p>



<p>ಆದರೆ, ಬಿಜೆಪಿ ಈ ಆರೋಪಗಳು ಸುಳ್ಳು ಮತ್ತು ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷದ &#8220;ಭ್ರಷ್ಟಾಚಾರ ಮತ್ತು ದುಷ್ಕೃತ್ಯಗಳನ್ನು&#8221; ಮರೆಮಾಚಲು ಮಾಡಲಾದ ಆರೋಪಗಳು ಎಂದು ಹೇಳಿಕೊಂಡಿದೆ.</p>



<p>ಇದಕ್ಕೂ ಮುನ್ನ, ಆಮ್ ಆದ್ಮಿ ಪಕ್ಷದ ನಾಯಕಿ ಮತ್ತು ಮಾಜಿ ಮುಖ್ಯಮಂತ್ರಿ ಅತಿಶಿ, ಮುಖ್ಯಮಂತ್ರಿ ಕಚೇರಿಯಿಂದ ಅಂಬೇಡ್ಕರ್ ಮತ್ತು ಸಿಂಗ್ ಅವರ ಚಿತ್ರಗಳನ್ನು ತೆಗೆದುಹಾಕುವ ಮೂಲಕ ಬಿಜೆಪಿ &#8220;ತನ್ನ ನಿಜವಾದ ದಲಿತ ವಿರೋಧಿ ಮತ್ತು ಸಿಖ್ ವಿರೋಧಿ ಮುಖವನ್ನು ತೋರಿಸಿದೆ&#8221; ಎಂದು ಹೇಳಿಕೊಂಡಿದ್ದರು.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="hi" dir="ltr">भाजपा ने अपना असली दलित विरोधी और सिख विरोधी चेहरा दिखा दिया है। दिल्ली विधान सभा के मुख्यमंत्री कार्यालय से बाबासाहेब भीम राव अंबेडकर और शहीद-ए-आज़म भगत सिंह की तस्वीरें हटा दी गईं है <a href="https://t.co/Zdq1Xxa7bW">pic.twitter.com/Zdq1Xxa7bW</a></p>&mdash; Atishi (@AtishiAAP) <a href="https://twitter.com/AtishiAAP/status/1893944397860934025?ref_src=twsrc%5Etfw">February 24, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ತಾವು ಮುಖ್ಯಮಂತ್ರಿಯಾಗಿದ್ದಾಗ ಕಚೇರಿಯ ಛಾಯಾಚಿತ್ರಗಳನ್ನು ಹಂಚಿಕೊಂಡ ಅವರು, ಆ ಇಬ್ಬರು ನಾಯಕರ ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು ಮತ್ತು ಹೊಸದಾಗಿ ಸೇರ್ಪಡೆಗೊಂಡ ಮುಖ್ಯಮಂತ್ರಿ ರೇಖಾ ಗುಪ್ತಾ ಅವರೊಂದಿಗೆ ಗಾಂಧಿ, ಮುರ್ಮು ಮತ್ತು ಮೋದಿ ಅವರ ಭಾವಚಿತ್ರಗಳನ್ನು ಹೊಂದಿರುವ ಕೋಣೆಯ ಛಾಯಾಚಿತ್ರಗಳನ್ನು ಕೂಡ ಹಂಚಿಕೊಂಡರು.</p>



<p><a href="https://x.com/ArvindKejriwal/status/1893950068828299744" target="_blank" rel="noreferrer noopener">ಅರವಿಂದ್ ಕೇಜ್ರಿವಾಲ್</a> ಕೂಡ ಎರಡು ಭಾವಚಿತ್ರಗಳನ್ನು ತೆಗೆದುಹಾಕಲಾಗಿದೆ ಎಂದು ಹೇಳಿದ್ದಾರೆ. &#8220;ಇದು ಬಾಬಾ ಸಾಹೇಬರ ಲಕ್ಷಾಂತರ ಅನುಯಾಯಿಗಳಿಗೆ ನೋವುಂಟು ಮಾಡಿದೆ. ಬಿಜೆಪಿಗೆ ನನ್ನದೊಂದು ವಿನಂತಿ ಇದೆ. ನೀವು ಪ್ರಧಾನಿಯವರ ಫೋಟೋ ಹಾಕಬಹುದು ಆದರೆ ಬಾಬಾ ಸಾಹೇಬರ ಫೋಟೋ ತೆಗೆಯಬೇಡಿ. ಅವರ ಫೋಟೋ ಅಲ್ಲೇ ಇರಲಿ,&#8221; ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಹೇಳಿದರು. </p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="hi" dir="ltr">दिल्ली की नई बीजेपी सरकार ने बाबा साहेब की फोटो हटाकर प्रधान मंत्री मोदी जी की फोटो लगा दी। ये सही नहीं है। इस से बाबा साहेब के करोड़ो अनुयायियों को ठेस पहुँची है। <br><br>मेरी बीजेपी से प्रार्थना है। आप प्रधान मंत्री जी की फोटो लगा लीजिए लेकिन बाबा साहिब की फोटो तो मत हटाइए। उनकी फोटो… <a href="https://t.co/k9A2HKFECV">https://t.co/k9A2HKFECV</a></p>&mdash; Arvind Kejriwal (@ArvindKejriwal) <a href="https://twitter.com/ArvindKejriwal/status/1893950068828299744?ref_src=twsrc%5Etfw">February 24, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಇದಕ್ಕೆ &#8220;ಸರ್ಕಾರದ ಮುಖ್ಯಸ್ಥರ ಫೋಟೋ ಹಾಕಬಾರದೇ? ದೇಶದ ರಾಷ್ಟ್ರಪತಿಗಳ ಫೋಟೋ ಹಾಕಬಾರದೇ? ರಾಷ್ಟ್ರಪಿತ ಗಾಂಧೀಜಿಯವರ ಫೋಟೋ ಹಾಕಬಾರದೇ?&#8221; ಎಂದು <a href="https://x.com/ANI/status/1893969929667486051?ref_src=twsrc%5Etfw%7Ctwcamp%5Etweetembed%7Ctwterm%5E1893969929667486051%7Ctwgr%5E89d42e7495e945ccc2e3c68b39e1ef6f6bb06152%7Ctwcon%5Es1_&amp;ref_url=https%3A%2F%2Fwww.indiatoday.in%2Findia%2Fstory%2Faap-bjp-br-ambedkar-bhagat-singh-photos-removal-claim-delhi-chief-minister-office-rekha-gupta-2684703-2025-02-24" target="_blank" rel="noreferrer noopener">ಗುಪ್ತಾ ಪ್ರತಿಕ್ರಿಯಿಸಿದರು.</a></p>



<p>&#8220;ಭಗತ್ ಸಿಂಗ್ ಮತ್ತು ಬಾಬಾಸಾಹೇಬ್ ದೇಶದ ಗೌರವಾನ್ವಿತ ವ್ಯಕ್ತಿಗಳು ಮತ್ತು ನಮ್ಮ ಮಾರ್ಗದರ್ಶಕರು. ಆದ್ದರಿಂದ, ಈ ಕೊಠಡಿ ದೆಹಲಿಯ ಮುಖ್ಯಮಂತ್ರಿಯವರದು ಮತ್ತು ಸರ್ಕಾರದ ಮುಖ್ಯಸ್ಥರಾಗಿ ನಾವು ಅವರಿಗೆ ಜಾಗ ನೀಡಿದ್ದೇವೆ. ಅವರಿಗೆ ಉತ್ತರಿಸುವುದು ನನ್ನ ಕೆಲಸವಲ್ಲ. ನಾನು ಜನರಿಗೆ ಉತ್ತರಿಸುತ್ತೇನೆ&#8221; ಎಂದು ಅವರು ಹೇಳಿದರು.</p>



<p>ಬಿಜೆಪಿ ಪ್ರಚಾರ ಮುಖ್ಯಸ್ಥ&nbsp;<a href="https://x.com/amitmalviya/status/1893984387177578633" rel="noreferrer noopener" target="_blank">ಅಮಿತ್ ಮಾಳವೀಯ</a>&nbsp;ನಂತರ ಸಾಮಾಜಿಕ ಮಾಧ್ಯಮದಲ್ಲಿ ಮುಖ್ಯಮಂತ್ರಿ ಕಚೇರಿಯ ಚಿತ್ರಗಳನ್ನು ಹಂಚಿಕೊಂಡರು, ಅದರಲ್ಲಿ ಮುಖ್ಯಮಂತ್ರಿಗಳ ಮೇಜಿನ ಹಿಂದಿನ ಗೋಡೆಯ ಬದಲಿಗೆ ಮತ್ತೊಂದು ಗೋಡೆಯ ಮೇಲೆ ಅಂಬೇಡ್ಕರ್ ಮತ್ತು ಸಿಂಗ್ ಅವರ ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು.</p>



<p>&#8220;ಇದು ದೆಹಲಿಯ ಮುಖ್ಯಮಂತ್ರಿಯ ಕೋಣೆ, ಅಲ್ಲಿ ಎಲ್ಲಾ ಮಹಾನ್ ವ್ಯಕ್ತಿಗಳ ಚಿತ್ರಗಳು ಇನ್ನೂ ನೇತಾಡುತ್ತಿವೆ. ಮದ್ಯ ಹಗರಣದ ಆರೋಪಿ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿ ಕಚೇರಿಗೆ ಹೋಗಲು ಸಾಧ್ಯವಿಲ್ಲ, ಆದ್ದರಿಂದ ಅವರು ಗೊಂದಲವನ್ನು ಹರಡುವ ಅಗ್ಗದ ರಾಜಕೀಯವನ್ನು ಮಾಡುತ್ತಿದ್ದಾರೆ. ಸೋಲಿನ ನಂತರ ಅವರು ತಮ್ಮ ಮುಖವನ್ನು ತೋರಿಸಲು ಸಹ ಸಾಧ್ಯವಾಗದಷ್ಟು ಸಾರ್ವಜನಿಕರು ಅವರನ್ನು ಅವಮಾನಿಸಿದರು, ಆದರೂ ಅವರು ತಮ್ಮ ನೀಚ ಕೆಲಸದಿಂದ ಹಿಂದೆ ಸರಿಯುತ್ತಿಲ್ಲ,&#8221; ಎಂದು ಅವರು ಹೇಳಿದರು. </p>



<p>ಗುರುವಾರ ಗುಪ್ತಾ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿದ ಕೆಲವು ದಿನಗಳ ನಂತರ ಇದು ಸಂಭವಿಸಿದೆ. 26 ವರ್ಷಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಸರ್ಕಾರ ರಚಿಸಿದ ಹಿಂದುತ್ವವಾದಿ ಪಕ್ಷದ ಮೊದಲ ಮುಖ್ಯಮಂತ್ರಿ ಅವರು.</p>



<p>ಶಾಲಿಮಾರ್ ಬಾಗ್ ಕ್ಷೇತ್ರದಲ್ಲಿ ಗುಪ್ತಾ ಅವರು ಆಮ್ ಆದ್ಮಿ ಪಕ್ಷದ ಬಂದಾನ ಕುಮಾರಿ ಮತ್ತು ಕಾಂಗ್ರೆಸ್‌ನ ಪರ್ವೀನ್ ಕುಮಾರ್ ಜೈನ್ ಅವರನ್ನು 29,595 ಮತಗಳ ಅಂತರದಿಂದ ಸೋಲಿಸಿದ್ದರು. ಹಿಂದುತ್ವ ಪಕ್ಷ <a href="https://scroll.in/latest/1078889/delhi-assembly-election-result-2025-counting-of-votes-to-begin-at-8-am"><u>48 ಕ್ಷೇತ್ರಗಳಲ್ಲಿ ಗೆದ್ದರೆ</u></a> , ಆಮ್ ಆದ್ಮಿ ಪಕ್ಷ 21 ಸ್ಥಾನಗಳನ್ನು ಗೆದ್ದಿತು. 70 ಸದಸ್ಯ ಬಲದ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು ಒಂದು ಪಕ್ಷ ಅಥವಾ ಒಕ್ಕೂಟವು 36 ಸ್ಥಾನಗಳನ್ನು ಪಡೆಯಬೇಕು.</p>
]]></content:encoded>
					
		
		
			</item>
		<item>
		<title>ಭಗತ್ ಸಿಂಗ್ ವಿರುದ್ಧ ಅವಹೇಳನಕಾರಿ ಹೇಳಿಕೆ: ಪಾಕಿಸ್ತಾನಕ್ಕೆ ಭಾರತದ ವಿರೋಧ</title>
		<link>https://peepalmedia.com/india-opposes-pakistans-derogatory-remarks-against-bhagat-singh/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 07 Dec 2024 07:02:09 +0000</pubDate>
				<category><![CDATA[ವಿದೇಶ]]></category>
		<category><![CDATA[bengalure]]></category>
		<category><![CDATA[Bhagat Singh]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[Pakistan]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=50361</guid>

					<description><![CDATA[ಹೊಸದಿಲ್ಲಿ:&#160;ಭಗತ್ ಸಿಂಗ್ ಕುರಿತು ಪಾಕಿಸ್ತಾನದ ನಿವೃತ್ತ ನೌಕಾದಳದ ಕಮೋಡೋರ್ ನೀಡಿರುವ &#8220;ಆಕ್ಷೇಪಾರ್ಹ ಹೇಳಿಕೆಗಳಿಗೆ&#8221; ಭಾರತವು ಪಾಕಿಸ್ತಾನಕ್ಕೆ ತನ್ನ &#8220;ಬಲವಾದ ಪ್ರತಿಭಟನೆಯನ್ನು&#8221; ಸಲ್ಲಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಡಿಸೆಂಬರ್ 6, ಶುಕ್ರವಾರ ತಿಳಿಸಿದೆ.&#160;ಲಾಹೋರ್‌ನ ಚೌಕವೊಂದಕ್ಕೆ ಭಗತ್‌ ಸಿಂಗ್‌ ಹೆಸರಿಡುವ ಯೋಜನೆಯನ್ನೂ ಸ್ಥಳೀಯ ನ್ಯಾಯಾಲಯ ಕೈಬಿಟ್ಟಿದೆ&#160;. ಲೋಕಸಭೆಯಲ್ಲಿ ಶುಕ್ರವಾರ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಈ ವಿಚಾರ ತಿಳಿಸಿದ್ದಾರೆ. &#8220;ಪಾಕಿಸ್ತಾನದಲ್ಲಿ ಶಹೀದ್ ಭಗತ್ ಸಿಂಗ್ ವಿರುದ್ಧ ಇತ್ತೀಚೆಗೆ [&#8230;]]]></description>
										<content:encoded><![CDATA[
<p><strong>ಹೊಸದಿಲ್ಲಿ:</strong>&nbsp;ಭಗತ್ ಸಿಂಗ್ ಕುರಿತು ಪಾಕಿಸ್ತಾನದ ನಿವೃತ್ತ ನೌಕಾದಳದ ಕಮೋಡೋರ್ ನೀಡಿರುವ &#8220;ಆಕ್ಷೇಪಾರ್ಹ ಹೇಳಿಕೆಗಳಿಗೆ&#8221; ಭಾರತವು ಪಾಕಿಸ್ತಾನಕ್ಕೆ ತನ್ನ &#8220;ಬಲವಾದ ಪ್ರತಿಭಟನೆಯನ್ನು&#8221; ಸಲ್ಲಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಡಿಸೆಂಬರ್ 6, ಶುಕ್ರವಾರ ತಿಳಿಸಿದೆ.&nbsp;<a href="https://thewire.in/south-asia/pakistan-veteran-oppose-rename-lahore-square-bhagat-singh-scrapped-reports">ಲಾಹೋರ್‌ನ ಚೌಕವೊಂದಕ್ಕೆ ಭಗತ್‌ ಸಿಂಗ್‌ ಹೆಸರಿಡುವ ಯೋಜನೆಯನ್ನೂ ಸ್ಥಳೀಯ ನ್ಯಾಯಾಲಯ ಕೈಬಿಟ್ಟಿದೆ</a>&nbsp;.</p>



<p>ಲೋಕಸಭೆಯಲ್ಲಿ ಶುಕ್ರವಾರ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಈ ವಿಚಾರ ತಿಳಿಸಿದ್ದಾರೆ. </p>



<p>&#8220;ಪಾಕಿಸ್ತಾನದಲ್ಲಿ ಶಹೀದ್ ಭಗತ್ ಸಿಂಗ್ ವಿರುದ್ಧ ಇತ್ತೀಚೆಗೆ ನೀಡಲಾಗಿರುವ ಆಕ್ಷೇಪಾರ್ಹ ಹೇಳಿಕೆಗಳ ಬಗ್ಗೆ ಭಾರತ ಸರ್ಕಾರಕ್ಕೆ ತಿಳಿದಿದೆ, ರಾಜತಾಂತ್ರಿಕ ಮಾರ್ಗಗಳ ಮೂಲಕ ಈ ಘಟನೆಯನ್ನು ವಿರೋಧಿಸಿ ಪಾಕಿಸ್ತಾನ ಸರ್ಕಾರಕ್ಕೆ ತೀವ್ರ ಪ್ರತಿಭಟನೆಯನ್ನು ಸಲ್ಲಿಸಿದೆ&#8221;&nbsp;<a href="https://www.mea.gov.in/lok-sabha.htm?dtl/38708/QUESTION_NO_1912_PRESERVATION_OF_SHAHEED_BHAGAT_SINGHS_LEGACY">ಎಂದು ಕಾಂಗ್ರೆಸ್ ಸಂಸದ ಮನೀಶ್ </a><a href="https://www.mea.gov.in/lok-sabha.htm?dtl/38708/QUESTION_NO_1912_PRESERVATION_OF_SHAHEED_BHAGAT_SINGHS_LEGACY"></a>ತಿವಾರಿಯವರ ಅವರ ಪ್ರಶ್ನೆಗೆ ಉತ್ತರಿಸಿದರು.&nbsp;</p>



<p>ಭಾರತವು &#8220;ಪಾಕಿಸ್ತಾನದೊಂದಿಗೆ, ಸಾಂಸ್ಕೃತಿಕ ಪರಂಪರೆಯ ಮೇಲಿನ ದಾಳಿಗಳು, ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಅಗೌರವದಂತಹ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದೆ&#8221; ಎಂದು ಸಚಿವಾಲಯ ಹೇಳಿದೆ.</p>



<p>ಮತ್ತೊಂದು ಪ್ರಶ್ನೆಗೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯ, &#8220;ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಶಹೀದ್ ಭಗತ್ ಸಿಂಗ್ ಅವರ ಅಮೂಲ್ಯ ಕೊಡುಗೆಯನ್ನು ಸರ್ಕಾರ ಮತ್ತು ಇಡೀ ರಾಷ್ಟ್ರವು ಗುರುತಿಸುತ್ತದೆ,&#8221; ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.</p>



<p>“ಶಹೀದ್ ಭಗತ್ ಸಿಂಗ್ ಅವರ ಪುಣ್ಯತಿಥಿಯನ್ನು ಪ್ರತಿ ವರ್ಷ ಭಾರತ ಮತ್ತು ವಿದೇಶಗಳಲ್ಲಿ ಆಚರಿಸಲಾಗುತ್ತದೆ. ವಿದೇಶದಲ್ಲಿರುವ ಭಾರತದ ರಾಜತಾಂತ್ರಿಕ ನಿಯೋಗಗಳು ಶಹೀದ್ ಭಗತ್ ಸಿಂಗ್ ಅವರಿಗೆ ಗೌರವ ಸಲ್ಲಿಸಲು ಕಾರ್ಯಕ್ರಮಗಳನ್ನು ನಡೆಸುತ್ತವೆ,” ಎಂದು ಸಿಂಗ್ ಉತ್ತರಿಸಿದರು.</p>



<p>1928 ಡಿಸೆಂಬರ್ ತಿಂಗಳಲ್ಲಿ, ಭಗತ್ ಸಿಂಗ್ ತಮ್ಮ ಸಹ ಕ್ರಾಂತಿಕಾರಿ ಶಿವರಾಮ ರಾಜ್ಗುರು ಅವರೊಂದಿಗೆ ಲಾಲಾ ಲಜಪತ್ ರಾಯ್ ಅವರ ಸಾವಿಗೆ ಕಾರಣನಾದ ಬ್ರಿಟಿಷ್ ಪೋಲೀಸ್ ಅಧಿಕಾರಿ ಜಾನ್ ಸೌಂಡರ್ಸ್ ನನ್ನು ಲಾಹೋರ್‌ನಲ್ಲಿ ಕೊಂದರು. ಕಾಮ್ರೇಡ್‌ ಭಗತ್‌ ಸಿಂಗರನ್ನು ಮಾರ್ಚ್ 1931 ರಂದು ಅವರ 23 ನೇ ವಯಸ್ಸಿನಲ್ಲಿ ಗಲ್ಲಿಗೇರಿಸಲಾಯಿತು.</p>



<p><strong>ಪಾಕಿಸ್ತಾನದ ಮಾಜಿ ಮಿಲಿಟರಿ ಅಧಿಕಾರಿಯ ಆಕ್ಷೇಪಾರ್ಹ ಹೇಳಿಕೆಯ ನಂತರ ಸಾರ್ವಜನಿಕ ಚೌಕಕ್ಕೆ ಭಗತ್‌ ಸಿಂಗ್‌ ಹೆಸರಿಡುವ ಯೋಜನೆಯನ್ನು ಕೈಬಿಡಲಾ</strong>ಗಿದೆ</p>



<p>ಲಾಹೋರ್‌ನ ಮೆಟ್ರೋಪಾಲಿಟನ್ ಕಾರ್ಪೊರೇಷನ್ ಲಾಹೋರ್ ಹೈಕೋರ್ಟ್‌ಗೆ ಸಲ್ಲಿಸಿದ ದಾಖಲೆಗಳ ಜೊತೆಗೆ ಮಾಜಿ ಮಿಲಿಟರಿ ಅಧಿಕಾರಿಯ &#8220;ಜಾಗೃತಿ ಸಂಕ್ಷಿಪ್ತ &#8211; awareness brief&#8221; ವನ್ನು ಕೂಡ ಸಲ್ಲಿಸಲಾಗಿದೆ ಎಂದು&nbsp;ಪಾಕಿಸ್ತಾನಿ ಪತ್ರಿಕೆ&nbsp;&nbsp;<em>ಡಾನ್ ನವೆಂಬರ್ 10 ರಂದು ವರದಿ ಮಾಡಿದೆ.</em></p>



<p>ಮೆಟ್ರೋಪಾಲಿಟನ್ ಕಾರ್ಪೊರೇಷನ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಹಿ ಮಾಡಿದ ನಾಲ್ಕು ಪುಟಗಳ ವರದಿಯಲ್ಲಿ, “ನಿರಾಕರಿಸಲಾಗಿದೆ, ಅರ್ಜಿಯ ಅರ್ಜಿಯನ್ನು ಸ್ವೀಕರಿಸಿದ ನಂತರ, ಈ ಮಧ್ಯೆ, ಕಮೋಡೋರ್ ತಾರಿಕ್ ಮಜೀದ್ (ನಿವೃತ್ತ) ಅವರು ಉಲ್ಲೇಖವನ್ನು ಮಂಡಿಸಿದರು, ಇದು ನಕಲಿ/ಕಟ್ಟುಕತೆಯ ಪ್ರಕರಣ. ಶಾದ್ಮಾನ್ ಚೌಕ್‌ಗೆ ಭಗತ್ ಸಿಂಗ್ ಚೌಕ್ ಎಂದು ಹೆಸರಿಸಬಾರದು,&#8221; ವಿವರಿಸಲಾಗಿದೆ. ನಿವೃತ್ತ ಕಮೋಡೋರ್ ಮಜೀದ್ ಅವರು ಭಗತ್ ಸಿಂಗ್ &#8220;ಉಪಖಂಡದ ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಪಾತ್ರವನ್ನು ಹೊಂದಿಲ್ಲ,&#8221; ಎಂದು ವಾದಿಸಿದರು.</p>



<p>ಭಗತ್ ಸಿಂಗ್ ಅವರನ್ನು &#8220;ಇಂದಿನ ಪರಿಭಾಷೆಯಲ್ಲಿ ಒಬ್ಬ ಕ್ರಾಂತಿಕಾರಿ ಅಲ್ಲ ಆದರೆ ಒಬ್ಬ ಕ್ರಿಮಿನಲ್ ಭಯೋತ್ಪಾದಕ, ಬ್ರಿಟಿಷ್ ಪೊಲೀಸ್ ಅಧಿಕಾರಿಯನ್ನು ಕೊಂದ ಅಪರಾಧದಲ್ಲಿ ಅವರು ಜೊತೆಗೆ ಅವರ ಇಬ್ಬರು ಸಹಚರರನ್ನು ಗಲ್ಲಿಗೇರಿಸಲಾಗಿದೆ,&#8221; ಎಂದು ಹೇಳಿದ್ದಾರೆ.</p>



<p>ಭಗತ್ ಸಿಂಗ ಸ್ವಯಂ ಘೋಷಿತ ನಾಸ್ತಿಕ ಎಂದು ಮಜೀದ್ ವಾದಿಸಿದರು. &#8220;ಈ ಅಪರಾಧಿಯನ್ನು <em>ʼಶಹೀದ್</em>&nbsp;ʼ ಎಂದು ಕರೆಯುವುದು ಅತ್ಯಂತ ಆಕ್ರಮಣಕಾರಿ ಮತ್ತು ಇಸ್ಲಾಂನ ಶಹೀದ್ ಪರಿಕಲ್ಪನೆಗೆ ಉದ್ದೇಶಪೂರ್ವಕ ಮಾಡಿರುವ ಅವಮಾನವಾಗಿದೆ&#8221; ಎಂದು ಅವರು ಹೇಳಿದ್ದಾರೆ.</p>



<p>ಈ ವಿವಾದವು ಡಿಸೆಂಬರ್ 2012 ರ ಹಿಂದಿನದು, ಮಹಾನಗರ ಪಾಲಿಕೆಯು ಲಾಹೋರ್‌ನಾದ್ಯಂತ ವಿವಿಧ ರಸ್ತೆಗಳು, ಚೌಕಗಳು ಮತ್ತು ಅಂಡರ್‌ಪಾಸ್‌ಗಳನ್ನು ಮರುನಾಮಕರಣ ಮಾಡಲು ಪ್ರಸ್ತಾಪಿಸಿದಾಗ,&nbsp;ಫವಾರಾ ಚೌಕ್ ಶಾದ್‌ಮನ್ ಅನ್ನು &#8216;ಭಗತ್ ಸಿಂಗ್ ಚೌಕ್&#8217; ಎಂದು&nbsp;<a href="https://www.nytimes.com/2013/03/31/world/asia/plan-to-rename-traffic-circle-provokes-outcry-in-lahore-pakistan.html">ಮರುನಾಮಕರಣ ಮಾಡುವ ಸಲಹೆಯೂ ಬಂದಿತ್ತು.</a></p>



<p>ಈ ಬಗ್ಗೆ ಪತ್ರಿಕೆಯ ವರದಿಯ ಬಂದ ನಂತರ, ಈ ಪ್ರಸ್ತಾಪದ ವಿರುದ್ಧ ಆಕ್ಷೇಪಣೆಗಳು ಹುಟ್ಟಿಕೊಂಡವು. ಸ್ಥಳೀಯ ಪಾಕಿಸ್ತಾನಿ ಎನ್‌ಜಿಒ ಭಗತ್ ಸಿಂಗ್ ಮೆಮೋರಿಯಲ್ ಫೌಂಡೇಶನ್ ಭಗತ್ ಸಿಂಗ್ ಅವರ ಗೌರವಾರ್ಥವಾಗಿ ಮರುನಾಮಕರಣ ಮಾಡುವಂತೆ ಲಾಹೋರ್ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದರು.</p>



<p>ಸೆಪ್ಟೆಂಬರ್ 2018 ರಲ್ಲಿ, ಹೈಕೋರ್ಟ್ ಈ ಪ್ರಕರಣವನ್ನು ಮುಕ್ತಾಯಗೊಳಿಸಿತು, &#8220;ಕಾನೂನಿಗೆ ಅನುಸಾರವಾಗಿ&#8221; ಮರುನಾಮಕರಣದ ಅರ್ಜಿಯನ್ನು ನಿರ್ಧರಿಸಲು ಲಾಹೋರ್‌ನ ಮೇಯರ್‌ಗೆ ನಿರ್ದೇಶಿಸಿತು. ಈ ವರ್ಷದ ಮಾರ್ಚ್‌ನಲ್ಲಿ, ಭಗತ್ ಸಿಂಗ್ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷ ಇಮ್ತಿಯಾಜ್ ರಶೀದ್ ಖುರೇಷಿ ಅವರು ಭಗತ್ ಸಿಂಗ್ ಅವರ ಹೆಸರನ್ನು ಶಾದ್‌ಮನ್ ಚೌಕ್‌ಗೆ ಮರುನಾಮಕರಣ ಮಾಡುವ ಪ್ರಸ್ತಾಪದ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲು ವಿಫಲವಾದ ಬಗ್ಗೆ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಸಲ್ಲಿಸಿದ ನಂತರ ನ್ಯಾಯಾಲಯವು ಪ್ರಾಂತೀಯ ಮತ್ತು ಜಿಲ್ಲಾ ಸರ್ಕಾರಗಳಿಂದ ಪ್ರತಿಕ್ರಿಯೆಗಳನ್ನು ಕೇಳಿತು.</p>
]]></content:encoded>
					
		
		
			</item>
		<item>
		<title>ಭಗತ್‌ ಸಿಂಗ್‌, ಅಂಬೇಡ್ಕರ್ ಫೋಟೊ ಜೊತೆ ಕೇಜ್ರಿವಾಲ್‌ ಫೋಟೊ: ಭಗತ್‌ ಸಿಂಗ್‌ ಮೊಮ್ಮಗ ಆಕ್ಷೇಪ</title>
		<link>https://peepalmedia.com/bhagat-singh-ambedkar-photo-with-kejriwal-bhagat-singhs-grandson-objects/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 05 Apr 2024 05:26:09 +0000</pubDate>
				<category><![CDATA[ದೇಶ]]></category>
		<category><![CDATA[Bhagat Singh]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[kejrival]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<guid isPermaLink="false">https://peepalmedia.com/?p=37960</guid>

					<description><![CDATA[ಅರವಿಂದ್ ಕೇಜ್ರಿವಾಲ್ ಅವರನ್ನು ಶಹೀದ್-ಎ-ಆಜಮ್ ಜೊತೆ ಹೋಲಿಸಿದ್ದಕ್ಕೆ ಭಗತ್ ಸಿಂಗ್ ಮೊಮ್ಮಗ ಯುದ್ವಿಂದರ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನು ನೋಡಿ ತನಗೆ ಮತ್ತು ಭಗತ್ ಸಿಂಗ್ ಪ್ರೇಮಿಗಳಿಗೆ ತುಂಬಾ ಬೇಸರವಾಯಿತು ಎಂದು ಅವರು ಹೇಳಿದ್ದಾರೆ. ಮುಂದೆ ಈ ರೀತಿ ಮಾಡಬೇಡಿ ಎಂದು ಆಮ್ ಆದ್ಮಿ ಪಕ್ಷಕ್ಕೆ ಯುದ್ವಿಂದರ್ ಸಿಂಗ್ ಮನವಿ ಮಾಡಿದ್ದಾರೆ. ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರ ಪತ್ರಿಕಾಗೋಷ್ಠಿಯಲ್ಲಿ, ಭಗತ್ ಸಿಂಗ್ [&#8230;]]]></description>
										<content:encoded><![CDATA[
<p>ಅರವಿಂದ್ ಕೇಜ್ರಿವಾಲ್ ಅವರನ್ನು ಶಹೀದ್-ಎ-ಆಜಮ್ ಜೊತೆ ಹೋಲಿಸಿದ್ದಕ್ಕೆ ಭಗತ್ ಸಿಂಗ್ ಮೊಮ್ಮಗ ಯುದ್ವಿಂದರ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನು ನೋಡಿ ತನಗೆ ಮತ್ತು ಭಗತ್ ಸಿಂಗ್ ಪ್ರೇಮಿಗಳಿಗೆ ತುಂಬಾ ಬೇಸರವಾಯಿತು ಎಂದು ಅವರು ಹೇಳಿದ್ದಾರೆ.</p>



<p>ಮುಂದೆ ಈ ರೀತಿ ಮಾಡಬೇಡಿ ಎಂದು ಆಮ್ ಆದ್ಮಿ ಪಕ್ಷಕ್ಕೆ ಯುದ್ವಿಂದರ್ ಸಿಂಗ್ ಮನವಿ ಮಾಡಿದ್ದಾರೆ. ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರ ಪತ್ರಿಕಾಗೋಷ್ಠಿಯಲ್ಲಿ, ಭಗತ್ ಸಿಂಗ್ ಮತ್ತು ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ನಡುವೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಚಿತ್ರ ಕಂಡುಬಂದಿದೆ.</p>



<p>ಮದ್ಯ ಹಗರಣ ಪ್ರಕರಣದಲ್ಲಿ ಜೈಲು ಪಾಲಾಗಿರುವ ಕೇಜ್ರಿವಾಲ್ ಅವರ ಚಿತ್ರ ಇಬ್ಬರು ಮಹಾನ್ ವ್ಯಕ್ತಿಗಳ ನಡುವೆ ಕಾಣಿಸಿದ ನಂತರ ಈ ವಿವಾದ ಉಂಟಾಗಿದೆ. ಭಾರತೀಯ ಜನತಾ ಪಕ್ಷವು ಆಮ್ ಆದ್ಮಿ ಪಕ್ಷದ ವಿರುದ್ಧ ಹೋರಾಟವನ್ನು ಆರಂಭಿಸಿದೆ. ಇದು ಭಗತ್ ಸಿಂಗ್ ಮತ್ತು ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ ಎಂದು ಬಿಜೆಪಿ ಹೇಳಿದೆ. ಅದೇ ಸಮಯದಲ್ಲಿ, ಕೇಜ್ರಿವಾಲ್ ಅವರು ಭಗತ್ ಸಿಂಗ್ ಅವರಂತೆ ಸರ್ವಾಧಿಕಾರದ ವಿರುದ್ಧ ಹೋರಾಡುತ್ತಿದ್ದಾರೆ ಮತ್ತು ಅದೇ ಕಾರಣಕ್ಕೆ ಅವರು ಜೈಲಿಗೆ ಹೋಗಿದ್ದಾರೆ ಎಂದು ಹೇಳುವ ಮೂಲಕ ಆಮ್ ಆದ್ಮಿ ಪಕ್ಷವು ತನ್ನನ್ನು ತಾನು ಸಮರ್ಥಿಸಿಕೊಂಡಿದೆ. ಇದೀಗ ಈ ಹೋಲಿಕೆಗೆ ಭಗತ್ ಸಿಂಗ್ ಮೊಮ್ಮಗ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>



<p>ವಿಡಿಯೋ ಸಂದೇಶದಲ್ಲಿ ಯುದ್ವಿಂದರ್ ಸಿಂಗ್, &#8216;ಇದನ್ನು ನೋಡಿ ತುಂಬಾ ಬೇಸರವಾಯಿತು. ಆಮ್ ಆದ್ಮಿ ಪಕ್ಷ ಈ ರೀತಿ ಮಾಡಬಾರದು. ಯಾವುದೇ ರಾಜಕಾರಣಿ ತನ್ನನ್ನು ಭಗತ್ ಸಿಂಗ್ ಮತ್ತು ಅಂಬೇಡ್ಕರ್ ಜೊತೆ ಹೋಲಿಸಿಕೊಳ್ಳಬಾರದು. ನಿಮ್ಮ ವೈಯಕ್ತಿಕ ರಾಜಕೀಯವನ್ನು ನಿಮ್ಮದೇ ಆದ ರೀತಿಯಲ್ಲಿ ಮಾಡಿ, ಆದರೆ ಈ ಮಹಾನ್ ವ್ಯಕ್ತಿಗಳೊಂದಿಗೆ ಹೋಲಿಕೆ ಮಾಡಬೇಡಿ. ಅವರು ತೋರಿಸಿದ ಮಾರ್ಗಗಳನ್ನು ಅನುಸರಿಸಲು ನಾವು ಪ್ರಯತ್ನಿಸಬಹುದು. ನನಗೆ ಭಾರತದಾದ್ಯಂತ ಪ್ರತಿಕ್ರಿಯೆಗಳು ಬರುತ್ತಿವೆ. ಭಗತ್ ಸಿಂಗ್ ಮತ್ತು ಬಾಬಾ ಸಾಹೇಬ್ ಅವರ ಪ್ರೇಮಿಗಳು ಅರವಿಂದ್ ಕೇಜ್ರಿವಾಲ್ ಅವರನ್ನು ಈ ಇಬ್ಬರು ಮಹಾನ್‌ ವ್ಯಕ್ತಿಗಳಿಗೆ ಹೋಲಿಸಿರುವುದು ತುಂಬಾ ಬೇಸರವಾಗಿದೆ ಎಂದಿದ್ದಾರೆ. ಭವಿಷ್ಯದಲ್ಲಿ ಆಮ್ ಆದ್ಮಿ ಪಕ್ಷ ಇದನ್ನು ತಪ್ಪಿಸಬೇಕುʼ ಎಂದು ಅವರು ತಮ್ಮ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾರೆ.</p>
]]></content:encoded>
					
		
		
			</item>
		<item>
		<title>‘ಕ್ರಾಂತಿ ಚಿರಾಯುವಾಗಲಿ’ ಘೋಷಣೆಯ ಕುರಿತು</title>
		<link>https://peepalmedia.com/long-live-the-revolutionbhagath-singh/</link>
		
		<dc:creator><![CDATA[Jyothi A]]></dc:creator>
		<pubDate>Wed, 28 Sep 2022 14:45:49 +0000</pubDate>
				<category><![CDATA[ವಿಶೇಷ]]></category>
		<category><![CDATA[bhagat sing]]></category>
		<category><![CDATA[Bhagat Singh]]></category>
		<category><![CDATA[kannada]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[special]]></category>
		<category><![CDATA[special story]]></category>
		<category><![CDATA[writing]]></category>
		<guid isPermaLink="false">https://peepalmedia.com/?p=7807</guid>

					<description><![CDATA[(ಮಾಡರ್ನ್ ರಿವ್ಯೂ ಪತ್ರಿಕೆಯಲ್ಲಿ ರಮಾನಂದ ಚಟರ್ಜಿ ಅವರು ಕ್ರಾಂತಿ ಚಿರಾಯುವಾಗಲಿ ಎಂಬ ಘೋಷಣೆಯನ್ನು ಅಪಹಾಸ್ಯ ಮಾಡಿ ಬರೆದಿದ್ದ ಸಂಪಾದಕೀಯಕ್ಕೆ ‘ಸಂಪಾದಕರಿಗೊಂದು ಪತ್ರ’ದ ಮೂಲಕ ಪ್ರತಿಕ್ರಿಯೆ ನೀಡಿದ ಭಗತ್ ಸಿಂಗ್ ಆ ಘೋಷಣೆಯ ಅರ್ಥ, ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ಈ ಪತ್ರವನ್ನು 1929ರ ಡಿಸೆಂಬರ್ 24ರಂದು ‘ದ ಟೆಲಿಗ್ರಾಫ್’ ಪತ್ರಿಕೆ ಪ್ರಕಟಿಸಿತು.) ಸಂಪಾದಕರು, ಮಾಡರ್ನ್ ರಿವ್ಯೂ, ತಮ್ಮ ಮಾನ್ಯ ಪತ್ರಿಕೆಯ ಡಿಸೆಂಬರ್ (1929) ಸಂಚಿಕೆಯಲ್ಲಿ ‘ಕ್ರಾಂತಿ ಚಿರಾಯುವಾಗಲಿ’ ಎಂಬ ಶೀರ್ಷಿಕೆಯಡಿ ತಾವು ಟಿಪ್ಪಣಿಯೊಂದನ್ನು ಬರೆದಿದ್ದೀರಿ. ಅಲ್ಲದೆ ಆ [&#8230;]]]></description>
										<content:encoded><![CDATA[
<p>(<strong><em>ಮಾಡರ್ನ್ ರಿವ್ಯೂ ಪತ್ರಿಕೆಯಲ್ಲಿ ರಮಾನಂದ ಚಟರ್ಜಿ ಅವರು ಕ್ರಾಂತಿ ಚಿರಾಯುವಾಗಲಿ ಎಂಬ ಘೋಷಣೆಯನ್ನು ಅಪಹಾಸ್ಯ ಮಾಡಿ ಬರೆದಿದ್ದ ಸಂಪಾದಕೀಯಕ್ಕೆ ‘ಸಂಪಾದಕರಿಗೊಂದು ಪತ್ರ’ದ ಮೂಲಕ ಪ್ರತಿಕ್ರಿಯೆ ನೀಡಿದ ಭಗತ್ ಸಿಂಗ್ ಆ ಘೋಷಣೆಯ ಅರ್ಥ, ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ಈ ಪತ್ರವನ್ನು 1929ರ ಡಿಸೆಂಬರ್ 24ರಂದು ‘ದ ಟೆಲಿಗ್ರಾಫ್’ ಪತ್ರಿಕೆ ಪ್ರಕಟಿಸಿತು.</em></strong>)</p>



<p>ಸಂಪಾದಕರು,</p>



<p>ಮಾಡರ್ನ್ ರಿವ್ಯೂ, ತಮ್ಮ ಮಾನ್ಯ ಪತ್ರಿಕೆಯ ಡಿಸೆಂಬರ್ (1929) ಸಂಚಿಕೆಯಲ್ಲಿ ‘ಕ್ರಾಂತಿ ಚಿರಾಯುವಾಗಲಿ’ ಎಂಬ ಶೀರ್ಷಿಕೆಯಡಿ ತಾವು ಟಿಪ್ಪಣಿಯೊಂದನ್ನು ಬರೆದಿದ್ದೀರಿ. ಅಲ್ಲದೆ ಆ ಪದಪುಂಜದ ಅರ್ಥಹೀನತೆಯ ಬಗ್ಗೆಯೂ ಅದರಲ್ಲಿ ಬೊಟ್ಟು ಮಾಡಿದ್ದೀರಿ. ಎಚ್ಚೆತ್ತ ಭಾರತೀಯರೆಲ್ಲರ ಅಪಾರ ಮೆಚ್ಚುಗೆಗೆ ಪಾತ್ರರಾಗಿರುವ ತಮ್ಮಂತಹ ಒಬ್ಬ ಹಿರಿಯ, ಅನುಭವಿ, ಶ್ರೇಷ್ಠ ಮತ್ತು ಖ್ಯಾತ ಪತ್ರಕರ್ತನ ಹೇಳಿಕೆಯನ್ನು ಅಲ್ಲಗಳೆಯಲು ಅಥವಾ ವಿರೋಧಿಸಲು ಯತ್ನಿಸುವುದು ನಮ್ಮ ಪಾಲಿನ ಅಧಿಕಪ್ರಸಂಗತನವೇ ಆದೀತು. ಆದರೂ ಆ ಘೋಷಣೆಯ ಮೂಲಕ ಏನು ಹೇಳಲು ಹೊರಟಿದ್ದೇವೆಂದು ವಿವರಿಸುವುದು ನಮ್ಮ ಕರ್ತವ್ಯ ಎಂದು ಭಾವಿಸುತ್ತೇವೆ. ಹಾಗೆಯೇ ಈ ಕಾಲಘಟ್ಟದಲ್ಲಿ ನಮ್ಮ ದೇಶದಲ್ಲಿ ಈ “ಕೂಗುಗಳಿಗೆ” ಪ್ರಚಾರ ನೀಡಬೇಕಿದೆ ಎಂದೂ ಸಹ ನಮಗನ್ನಿಸಿದೆ.</p>



<p>ಈ ಕೂಗನ್ನು ಹುಟ್ಟುಹಾಕಿದವರು ನಾವಲ್ಲ. ಇದೇ ಕೂಗು ರಷ್ಯಾದ ಕ್ರಾಂತಿಕಾರಿ ಚಳವಳಿಯಲ್ಲೂ ಬಳಕೆಯಾಗಿತ್ತು. ಅಪ್ಟನ್ ಸಿಂಕ್ಲೇರ್ ಎಂಬ ಖ್ಯಾತ ಸಮಾಜವಾದಿ ಬರಹಗಾರ, ಬೋಸ್ಟನ್ ಮತ್ತು ಆಯಿಲ್ ಎಂಬ ತನ್ನ ಇತ್ತೀಚಿನ ಕಾದಂಬರಿಗಳಲ್ಲಿ ಕೆಲವು ಅರಾಜಕತಾವಾದಿ ಕ್ರಾಂತಿಕಾರಿ ಪಾತ್ರಗಳ ಮೂಲಕ ಈ ಘೋಷಣೆಯನ್ನು ಮೊಳಗಿಸಿದ. ರಕ್ತಪಾತದ ಹೋರಾಟ ಸದಾಕಾಲ ಮುಂದುವರಿಯಬೇಕು ಎಂದಾಗಲಿ ಅಥವಾ ಸ್ವಲ್ಪ ಸಮಯಕ್ಕಾದರೂ ಯಾವುದೊಂದೂ ಸ್ತಬ್ಧವಾಗಕೂಡದು ಎಂದಾಗಲಿ ಈ ಘೋಷಣೆಯ ಅರ್ಥವಲ್ಲ. ಈ ಘೋಷಣೆಯನ್ನು ದೀರ್ಘಕಾಲ ಬಳಸುವುದರಿಂದ ಅದು ಪಡೆಯುವ ಮಹತ್ವಕ್ಕೆ ವ್ಯಾಕರಣಾತ್ಮಕವಾಗಿ ಇಲ್ಲವೇ ಪದಸಂರಚನಾತ್ಮಕವಾಗಿ ಅಷ್ಟೇನೂ ಸಮರ್ಥನೆ ಸಿಗದಿರಬಹುದು. ಆದರೆ ನಾವು ಅದರ ಮೂಲಕವೇ ಈ ಘೋಷಣೆಗೆ ಸಂಬಂಧಿಸಿದ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಅಂತಹ ಎಲ್ಲ ಕೂಗುಗಳೂ ತಮ್ಮೊಳಗೆ ಭಾಗಶಃ ಅಂತರ್ಗತವಾಗಿರುವ ಮತ್ತು ಭಾಗಶಃ ಹೊರಗಿನಿಂದ ಪಡೆದುಕೊಂಡಿರುವ ಸಾಮಾನ್ಯ ಗ್ರಹಿಕೆಯನ್ನು ಸೂಚಿಸುತ್ತವೆ. ಉದಾಹರಣೆಗೆ, ನಾವು “ಜತಿನ್ ದಾಸ್ ಚಿರಾಯುವಾಗಲಿ” ಎಂಬ ಘೋಷಣೆಯನ್ನು ಮೊಳಗಿಸುವಾಗ ಅದರಿಂದ ದಾಸ್ ದೈಹಿಕವಾಗಿ ಬದುಕಿರಬೇಕೆಂದು ನಾವು ಅರ್ಥೈಸಲು ಸಾಧ್ಯವಿಲ್ಲ ಅಥವಾ ಅರ್ಥೈಸುವುದಿಲ್ಲ. ಅಷ್ಟೆಲ್ಲ ನೋವುಂಡ ಆ ಮಹಾ ಹುತಾತ್ಮನಿಗೆ ಇಂತಹ ಪರಮೋಚ್ಛ ತ್ಯಾಗ ಮಾಡಲು ಪ್ರೇರೇಪಿಸಿದ ಚಿಂತನೆಯ ಅದಮ್ಯ ಚೇತನದ ಜೊತೆಗೆ ಅವನ ಬದುಕಿನ ಶ್ರೇಷ್ಠ ವಿಚಾರಗಳು ಚಿರವಾಗಿ ಉಳಿಯಬೇಕು ಎಂಬುದನ್ನು ಈ ಘೋಷಣೆ ಮೊಳಗಿಸುವ ಮೂಲಕ ನಾವು ಹೇಳಲು ಬಯಸುತ್ತೇವೆ. ಈ ಕೂಗನ್ನು ಮೊಳಗಿಸುವುದರಿಂದ ನಾವು ನಮ್ಮ ಆದರ್ಶದ ಬೆಂಬತ್ತಿ ಹೋಗುವಾಗಲೂ ಅದೇ ಎದೆಗಾರಿಕೆಯನ್ನು ಪ್ರದರ್ಶಿಸಬಹುದೆಂದು ಅಪೇಕ್ಷಿಸುತ್ತೇವೆ. ಆ ಉತ್ಸಾಹವನ್ನೇ ನಾವಿಲ್ಲಿ ಪ್ರಾಸಂಗಿಕವಾಗಿ ಸೂಚಿಸುತ್ತಿರುವುದು.</p>



<p>ಹಾಗೆಯೆ ಯಾರೂ “ಕ್ರಾಂತಿ” ಪದವನ್ನು ಅದರ ಶಬ್ದಾರ್ಥದಲ್ಲಿ ವ್ಯಾಖ್ಯಾನಿಸಬಾರದು. ತಮ್ಮ ಅನುಕೂಲಕ್ಕಾಗಿ ಬಳಸುವ ಇಲ್ಲವೆ ದುರ್ಬಳಕೆ ಮಾಡಿಕೊಳ್ಳುವವರ ಮನಸ್ಥಿತಿಗೆ ಅನುಗುಣವಾಗಿ ಈ ಪದಕ್ಕೆ ಹಲವು ಅರ್ಥಗಳನ್ನೂ ತಾತ್ಪರ್ಯಗಳನ್ನೂ ಕಲ್ಪಿಸಲಾಗಿದೆ. ಸ್ಥಾಪಿತ ವ್ಯವಸ್ಥೆಯಿಂದ ಹಿಡಿದು ಶೋಷಕ ಸಂಸ್ಥೆಗಳವೆರಗೂ ಕ್ರಾಂತಿ ಶಬ್ದವು ರಕ್ತದ ಕಲೆ ಅಂಟಿರುವ ಭಯಾನಕ ಭಾವವನ್ನು ಕಣ್ಣಿಗೆ ಕಟ್ಟುತ್ತದೆ. ಆದರೆ ಕ್ರಾಂತಿಕಾರಿಗಳಿಗೆ ಅದು ಪವಿತ್ರ ಶಬ್ದವೇ ಸರಿ. ಶಾಸನಸಭೆಯ ಬಾಂಬ್ ಎಸೆತ ಪ್ರಕರಣದ ವಿಚಾರಣೆಯಲ್ಲಿ ನಾವು ದೆಹಲಿಯ ಸೆಷನ್ಸ್ ನ್ಯಾಯಾಧೀಶರ ಎದುರು ನೀಡಿದ ಹೇಳಿಕೆಯಲ್ಲಿ “ಕ್ರಾಂತಿ” ಪದದ ಅರ್ಥವನ್ನು ಸ್ಪಷ್ಟವಾಗಿ ವಿವರಿಸಲು ಯತ್ನಿಸಿದ್ದೆವು.</p>



<p></p>



<figure class="wp-block-image size-full"><img fetchpriority="high" decoding="async" width="540" height="405" src="https://peepalmedia.com/wp-content/uploads/2022/09/Bhagat-Singh-_17fb5e39284_medium.jpg" alt="" class="wp-image-7819" srcset="https://peepalmedia.com/wp-content/uploads/2022/09/Bhagat-Singh-_17fb5e39284_medium.jpg 540w, https://peepalmedia.com/wp-content/uploads/2022/09/Bhagat-Singh-_17fb5e39284_medium-300x225.jpg 300w, https://peepalmedia.com/wp-content/uploads/2022/09/Bhagat-Singh-_17fb5e39284_medium-150x113.jpg 150w" sizes="(max-width: 540px) 100vw, 540px" /></figure>



<p></p>



<p>ಕ್ರಾಂತಿ ಎಂದರೆ ರಕ್ತಪಾತದ ಹೋರಾಟ ಮಾತ್ರವೇ ಅಲ್ಲ ಎಂದು ಅಲ್ಲಿ ನಾವು ಹೇಳಿದ್ದೆವು. ಅದು ಬಾಂಬ್ ಮತ್ತು ಪಿಸ್ತೂಲು ಪಂಥಕ್ಕೆ ಸೇರಿದ್ದಲ್ಲ. ಕ್ರಾಂತಿಯ ಸಾಧನೆಗಾಗಿ ಅವು ಒಮ್ಮೊಮ್ಮೆ ಬರೀ ಸಾಧನಗಳಾಗುತ್ತವೆ, ಅಷ್ಟೇ. ಕೆಲವು ಚಳವಳಿಗಳಲ್ಲಿ ಅವು ಮಹತ್ವದ ಪಾತ್ರ ವಹಿಸುತ್ತವೆ ಎಂಬುದೂ ನಿಜವೇ. ಆದರೆ ಅದೊಂದೇ ಕಾರಣಕ್ಕಾಗಿ ಅವೆರಡೂ ಒಂದೇ ಆಗುವುದಿಲ್ಲ. ದಂಗೆಯೇ ಕ್ರಾಂತಿಯಲ್ಲ. ಅದು ಅಂತಿಮ ಗುರಿಯತ್ತ ಒಯ್ಯಬಹುದಷ್ಟೇ.</p>



<p>ಉತ್ತಮ ವ್ಯವಸ್ಥೆಯನ್ನು ರೂಪಿಸುವ ಸಲುವಾಗಿ ಬದಲಾವಣೆ ತರುವ ಹೆಬ್ಬಯಕೆ ಮತ್ತು ಉತ್ಸಾಹದಿಂದ ಆ ಪದಪುಂಜದಲ್ಲಿ ಕ್ರಾಂತಿ ಎಂಬ ಶಬ್ದದ ಪ್ರಯೋಗವಾಗಿದೆ. ಜನರು ಸಾಮಾನ್ಯವಾಗಿ ಸ್ಥಾಪಿತ ವ್ಯವಸ್ಥೆಗೆ ಹೊಂದಿಕೊಂಡಿರುತ್ತಾರೆ. ಅಲ್ಲದೆ ಬದಲಾವಣೆ ಎಂಬ ಒಂದು ಆಲೋಚನೆಯೇ ವ್ಯವಸ್ಥೆಯಲ್ಲಿ ನಡುಕ ಹುಟ್ಟಿಸುತ್ತದೆ. ಈ ಜಡತ್ವದ ಬದಲು ನಾವು ಕ್ರಾಂತಿಕಾರಿ ಚೈತನ್ಯವನ್ನು ಮೈಗೂಡಿಸಿಕೊಳ್ಳಬೇಕಿದೆ. ಇಲ್ಲವೆಂದಾದರೆ ಅವನತಿ ಮೇಲುಗೈ ಸಾಧಿಸುತ್ತದೆ ಮತ್ತು ಪ್ರತಿಗಾಮಿ ಶಕ್ತಿಗಳು ಇಡೀ ಮನುಷ್ಯತ್ವವನ್ನೇ ಕೆಟ್ಟ ದಾರಿಯಲ್ಲಿ ಒಯ್ಯುತ್ತವೆ. ಇದು ಮಾನವ ಪ್ರಗತಿಯಲ್ಲಿನ ಜಡv ಮತ್ತು ನಿಷ್ಕ್ರಿಯತೆಗೆ ಕಾರಣವಾಗುತ್ತದೆ. ಪ್ರತಿಗಾಮಿ ಶಕ್ತಿಗಳು ಒಟ್ಟುಗೂಡದಂತೆ (ಅವುಗಳ ಪ್ರಾಬಲ್ಯ ಹೆಚ್ಚಾಗದಂತೆ) ಮತ್ತು ಅವುಗಳ ಶಾಶ್ವತ ಮುನ್ನಡೆಯನ್ನು ತಡೆಗಟ್ಟುವ ಸಲುವಾಗಿ, ಕ್ರಾಂತಿಯ ಚಿಲುಮೆ ಸದಾಕಾಲ ಮಾನವೀಯತೆಯನ್ನು ವ್ಯಾಪಿಸುವಂತೆ ಗಮನ ವಹಿಸಬೇಕು. ಹೊಸದೊಂದು ವ್ಯವಸ್ಥೆಯ ಉದಯಕ್ಕೆ ದಾರಿ ಮಾಡಿಕೊಡಲು ಹಳೆಯ ವ್ಯವಸ್ಥೆ ಸ್ಥಿರವಾಗಿ ಮತ್ತು ಚಿರವಾಗಿ ಬದಲಾಗಬೇಕು. ಒಂದು “ಒಳ್ಳೆಯ” ವ್ಯವಸ್ಥೆ ಹುಟ್ಟಿದರೆ ಅದು ಇಡೀ ವಿಶ್ವವನ್ನೇ ಭ್ರಷ್ಟವಾಗದಂತೆ ತಡೆಗಟ್ಟುತ್ತದೆ. ನಾವು “ಕ್ರಾಂತಿ ಚಿರಾಯುವಾಗಲಿ” ಎಂಬ ಘೋಷಣೆ ಮೊಳಗಿಸುವುದು ಈ ಅರ್ಥದಿಂದಲೇ.</p>



<p>&nbsp;ತಮ್ಮ ವಿಶ್ವಾಸಿ,</p>



<p>&nbsp;ಸಹಿ/-</p>



<p>&nbsp;ಭಗತ್ ಸಿಂಗ್, ಬಿ. ಕೆ. ದತ್</p>



<p><strong><em>(ಈ ಲೇಖನವನ್ನು ನವಕರ್ನಾಟಕ ಪ್ರಕಾಶನ ಸಂಸ್ಥೆ ಪ್ರಕಟಿಸಿರುವ, ಜ್ಯೋತಿ ಎ. ಅನುವಾದಿಸಿರುವ “ಭಗತ್ ಸಿಂಗ್ ಇಂಕ್ವಿಲಾಬ್ ಜಿಂದಾಬಾದ್! ಆಯ್ದ ಬರಹಗಳು ಮತ್ತು ಭಾಷಣಗಳು” ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.)</em></strong></p>



<p></p>



<p></p>



<p></p>



<p></p>



<p></p>



<p><strong>ಇದನ್ನೂ ನೋಡಿ: </strong><a href="https://youtu.be/_GkiuaLBr9I">ಬಿಜೆಪಿ ಸರ್ಕಾರ ನಿಜಕ್ಕೂ 40% ಕಮಿಷನ್‌ ಪಡೆಯುತ್ತಿದೆಯೇ? ಈ ಕುರಿತು ಯುವ ರಾಜಕೀಯ ಮುಂದಾಳು ಸುರೇಶ್‌ ರಾಥೋಡ್‌ ಅವರ ವಿಶ್ಲೇಷಣೆ ಇಲ್ಲಿದೆ.</a></p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<iframe title="ಬಿಜೆಪಿ ಸರ್ಕಾರ ನಿಜಕ್ಕೂ 40% ಕಮಿಷನ್‌ ಪಡೆಯುತ್ತಿದೆಯೇ?" width="696" height="392" src="https://www.youtube.com/embed/_GkiuaLBr9I?feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture" allowfullscreen></iframe>
</div></figure>



<p></p>



<p></p>



<p></p>



<p></p>



<p></p>



<p></p>



<p></p>



<p></p>
]]></content:encoded>
					
		
		
			</item>
	</channel>
</rss>
