<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Bharath &#8211; Peepal Media</title>
	<atom:link href="https://peepalmedia.com/tag/bharath/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 19 Feb 2024 09:39:01 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Bharath &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಜೈನ ಧರ್ಮದ ಬೋಧನೆಗಳು</title>
		<link>https://peepalmedia.com/teachings-of-jainism2/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 30 Jan 2024 05:32:03 +0000</pubDate>
				<category><![CDATA[ಅಂಕಣ]]></category>
		<category><![CDATA[bahubali]]></category>
		<category><![CDATA[Bharath]]></category>
		<category><![CDATA[breaking]]></category>
		<category><![CDATA[breaking news]]></category>
		<category><![CDATA[india]]></category>
		<category><![CDATA[jain]]></category>
		<category><![CDATA[jainism]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[mahavir]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[philosophy]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[story]]></category>
		<category><![CDATA[teachings]]></category>
		<category><![CDATA[trend]]></category>
		<category><![CDATA[Trending]]></category>
		<category><![CDATA[trending news]]></category>
		<category><![CDATA[viral viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=35476</guid>

					<description><![CDATA[ಜೈನ ಧರ್ಮಾವಲಂಬಿಗಳ ನಂಬಿಕೆಯ ಪ್ರಕಾರ ಜೈನಮತ ಅತ್ಯಂತ ಪ್ರಾಚೀನ ವಾದುದೆಂದೂ ವೃಷಭದೇವನೇ ಆದಿಯಾಗಿ ಇಪ್ಪತ್ನಾಲ್ಕು ತೀರ್ಥಂಕರರು ಈ ಮತವನ್ನು ಪ್ರಚಾರ ಮಾಡಿದರೆಂದೂ ತಿಳಿದುಬರುತ್ತದೆ. ಆದರೆ ಮೊದಲಿನ ಇಪ್ಪತ್ತೆರಡು ತೀರ್ಥಂಕರರು ಪೌರಾಣಿಕ ವ್ಯಕ್ತಿಗಳೆಂದು ವೇದ್ಯವಾಗುತ್ತದೆ. ಇಪ್ಪತ್ತೂರನೇ ತೀರ್ಥಂಕರನಾದ ಪಾರ್ಶ್ವ ನಾಥ ಕ್ರಿ.ಪೂ. ಎಂಟನೇ ಶತಮಾನದಲ್ಲಿ ಜೀವಿಸಿದ್ದ. ಕ್ಷತ್ರಿಯ ವರ್ಗಕ್ಕೆ ಸೇರಿದ ಪಾರ್ಶ್ವ ನಾಥ ತನ್ನ ೩೦ನೇ ವಯಸ್ಸಿನಲ್ಲಿ ಸನ್ಯಾಸವನ್ನು ಸ್ವೀಕರಿಸಿ ಕಠಿಣ ತಪಸ್ಸನ್ನು ಆಚರಿಸಿದ. ತಪಶ್ಚರ್ಯೆಯಿಂದ ತನಗೆ ಸಿದ್ಧಿಸಿದ ಜ್ಞಾನವನ್ನು ಇತರರಿಗೆ ಪ್ರಸಾರ ಮಾಡಿದ. ತನ್ನ ತತ್ತ್ವಗಳನ್ನು ಪ್ರಸಾರ [&#8230;]]]></description>
										<content:encoded><![CDATA[
<pre class="wp-block-code"><code><strong>ಜೈನಮತವು ಅಹಿಂಸಾ ಪರಿಪಾಲನೆ, ಸತ್ಯ ನುಡಿಯುವುದು, ಕಳ್ಳತನ ಮಾಡದಿರುವುದು ಮತ್ತು ಆಸ್ತಿಯ ವ್ಯಾಮೋಹವನ್ನು ತ್ಯಜಿಸುವುದು-ಇವುಗಳು ಪಾರ್ಶ್ವನಾಥ ಬೋಧಿಸಿದ ಮುಖ್ಯ ತತ್ತ್ವಗಳು</strong>
- <strong>ಲೇಖಕರು:</strong> ಗೌತಮ ಆವರ್ತಿ</code></pre>



<p>ಜೈನ ಧರ್ಮಾವಲಂಬಿಗಳ ನಂಬಿಕೆಯ ಪ್ರಕಾರ ಜೈನಮತ ಅತ್ಯಂತ ಪ್ರಾಚೀನ ವಾದುದೆಂದೂ ವೃಷಭದೇವನೇ ಆದಿಯಾಗಿ ಇಪ್ಪತ್ನಾಲ್ಕು ತೀರ್ಥಂಕರರು ಈ ಮತವನ್ನು ಪ್ರಚಾರ ಮಾಡಿದರೆಂದೂ ತಿಳಿದುಬರುತ್ತದೆ. ಆದರೆ ಮೊದಲಿನ ಇಪ್ಪತ್ತೆರಡು ತೀರ್ಥಂಕರರು ಪೌರಾಣಿಕ ವ್ಯಕ್ತಿಗಳೆಂದು ವೇದ್ಯವಾಗುತ್ತದೆ. ಇಪ್ಪತ್ತೂರನೇ ತೀರ್ಥಂಕರನಾದ ಪಾರ್ಶ್ವ ನಾಥ ಕ್ರಿ.ಪೂ. ಎಂಟನೇ ಶತಮಾನದಲ್ಲಿ ಜೀವಿಸಿದ್ದ. ಕ್ಷತ್ರಿಯ ವರ್ಗಕ್ಕೆ ಸೇರಿದ ಪಾರ್ಶ್ವ ನಾಥ ತನ್ನ ೩೦ನೇ ವಯಸ್ಸಿನಲ್ಲಿ ಸನ್ಯಾಸವನ್ನು ಸ್ವೀಕರಿಸಿ ಕಠಿಣ ತಪಸ್ಸನ್ನು ಆಚರಿಸಿದ. ತಪಶ್ಚರ್ಯೆಯಿಂದ ತನಗೆ ಸಿದ್ಧಿಸಿದ ಜ್ಞಾನವನ್ನು ಇತರರಿಗೆ ಪ್ರಸಾರ ಮಾಡಿದ. ತನ್ನ ತತ್ತ್ವಗಳನ್ನು ಪ್ರಸಾರ ಮಾಡಲು ಭಿಕ್ಷುಗಳನ್ನು ನೇಮಿಸಿದ. ಅಹಿಂಸಾ ಪರಿಪಾಲನೆ, ಸತ್ಯ ನುಡಿಯುವುದು, ಕಳ್ಳತನ ಮಾಡದಿರುವುದು ಮತ್ತು ಆಸ್ತಿಯ ವ್ಯಾಮೋಹವನ್ನು ತ್ಯಜಿಸು ವುದು-ಇವುಗಳು ಪಾರ್ಶ್ವನಾಥ ಬೋಧಿಸಿದ ಮುಖ್ಯ ತತ್ತ್ವಗಳು. ವರ್ಧಮಾನ ಮಹಾ ವೀರನ ಮಾತಾಪಿತೃಗಳು ಪಾರ್ಶ್ವನಾಥನ ಪಂಥಕ್ಕೆ ಸೇರಿದವರಾಗಿದ್ದರು.</p>



<p>ವರ್ಧಮಾನ ಮಹಾವೀರ : ವೈಶಾಲಿಯ ಉಪನಗರವಾದ ಕುಂಡಲವನದಲ್ಲಿ ವಾಸಿಸುತ್ತಿದ್ದ ಜ್ಞಾತ್ರಿಕ ಕ್ಷತ್ರಿಯ ಪಂಗಡದ ಸಿದ್ದಾರ್ಥ ಮತ್ತು ತ್ರಿಶಾಲಿ ಎಂಬುವವರ ಮಗನಾದ ವರ್ಧಮಾನ ಕ್ರಿ.ಪೂ. ಸುಮಾರು ೫೪೦ ರಲ್ಲಿ ಹುಟ್ಟಿದ. ವರ್ಧಮಾನನಿಗೆ ಬಾಲ್ಯದಲ್ಲಿ ಸೂಕ್ತ ಶಿಕ್ಷಣ ಕೊಡಲಾಗಿತ್ತು. ಅವನು ಪ್ರಾಪ್ತವಯಸ್ಕನಾದಾಗ &#8216;ಯಶೋದ&#8217; ಎಂಬ ಕನೈಯನ್ನು ವರಿಸಿದ. ಅನೇಕ ವರ್ಷಗಳ ಕಾಲ ಅವರ ದಾಂಪತ್ಯ ಜೀವನ ಮುಂದುವರಿಯಿತು. ಅವರಿಗೆ ಒಬ್ಬಳು ಪುತ್ರಿಯೂ ಇದ್ದಳು. ಅವಳನ್ನು ಜಾಮಾಲಿ ಎಂಬುವವ ನಿಗೆ ಕೊಟ್ಟು, ವಿವಾಹಮಾಡಿದ್ದರು. ಜಾಮಾಲಿ ಅನಂತರ ವರ್ಧಮಾನನಿಂದ ದೀಕ್ಷೆ ಪಡೆ ದವರಲ್ಲಿ ಒಬ್ಬ. ವರ್ಧಮಾನನ ೩೦ ನೇ ವಯಸ್ಸಿನಲ್ಲಿ ಅವನ ಮಾತಾಪಿತೃಗಳು ಮರಣ ಹೊಂದಿದರು. ಮಾತಾಪಿತೃಗಳ ಅಗಲುವಿಕೆಯ ದುಃಖದಿಂದ ಬಹುವಾಗಿ ನೊಂದ ವರ್ಧ &#8211; ಮಾನ ಸಂಸಾರ ತ್ಯಾಗಮಾಡಿ ತಪಶ್ಚರ್ಯೆ ಕೈಗೊಂಡ. ಸುಮಾರು ೧೩ ವರ್ಷಗಳ ಕಾಲ ಅವನು ಕಠಿಣವಾದ ತಪಸ್ಸನ್ನಾಚರಿಸಿದ. ಈ ಅವಧಿಯ ಕೊನೆಯಲ್ಲಿ ಬಿಹಾರದ ಪಾರ್ಶ್ವ ತ ನಾಥ ಗುಡ್ಡದ ಬಳಿಯಲ್ಲಿ ವರ್ಧಮಾನ ಪರಮಜ್ಞಾನ ಪಡೆದ. ಅಂದಿನಿಂದ ಅವನಿಗೆ ಮಹಾವೀರ ಎಂಬ ಹೆಸರಾಯಿತು. ಅನಂತರ ಮಹಾವೀರ ಮತಪ್ರಚಾರ ಕಾರ್ಯದಲ್ಲಿ ತೊಡಗಿದ. ಅವನು ತನ್ನ ೭೨ನೇ ವಯಸ್ಸಿನಲ್ಲಿ ಪಾವಾ ಗ್ರಾಮದ ಬಳಿ ಕ್ರಿ.ಪೂ. ಸುಮಾರು ೨ ೪೬೮ ರಲ್ಲಿ ಕೈವಲ್ಯ ಹೊಂದಿದ. ಮಹಾವೀರ ಪ್ರಚಾರಮಾಡಿದ ಧರ್ಮಕ್ಕೆ ಜೈನಮತವೆಂದು &#8211; ಹೆಸರಾಗಿದೆ.</p>



<p>ಜೈನಮತದ ಮುಖ್ಯ ತತ್ತ್ವಗಳು: ಮಹಾವೀರ ಪಾರ್ಶ್ವನಾಥ ಬೋಧಿಸಿದ ತತ್ತ್ವಗಳ ಜೊತೆಗೆ ಕೆಲವು ಅಂಶಗಳನ್ನು ಸೇರಿಸಿದ. ಜೈನಮತದ ಮುಖ್ಯ ತತ್ತ್ವಗಳೇ ನೆಂದರೆ: (೧) ಅಸತ್ಯ ನುಡಿಯಬಾರದು, (೨) ಕಳ್ಳತನ ಮಾಡಬಾರದು, (೩) ಜೀವರಾಶಿಗಳನ್ನು ಹಿಂಸಿಸಬಾರದು, (೪) ಆಸ್ತಿಯನ್ನು ಹೊಂದಬಾರದು, (೫) ತಪಶ್ಚರೆಯನ್ನು ಅನುಸರಿಸಬೇಕು. ಮಹಾವೀರ ವೇದಗಳನ್ನು ಪ್ರಮಾಣವೆಂದಾಗಲಿ, ಅಪೌರುಷೇಯವೆಂದಾಗಲಿ ಒಪ್ಪಲಿಲ್ಲ. ಜಗತ್ತು ಭಗವಂತನ ನಿಯಾಮಕ ಮತ್ತು ಲೀಲೆ ಎಂಬುದನ್ನು ಜೈನಮತ ಪುರಸ್ಕರಿಸಲಿಲ್ಲ. ಜೈನಮತ ಅಹಿಂಸೆಗೆ ವಿಶೇಷ ಪ್ರಾಧಾನ್ಯ ಕೊಟ್ಟಿದೆ.</p>



<p>ಜೈನ ತತ್ತ್ವದ ಪ್ರಕಾರ ಆತ್ಮ ಪರಿಶುದ್ಧವಾದುದು, ಪರಿಶುದ್ಧವಾದ ಆತ್ಮವನ್ನು ಪುದ್ದಲ ಹೊಕ್ಕು ಅಶುದ್ಧಗೊಳಿಸುವುದರಿಂದ ಸಂಸಾರ ಬಂಧನವುಂಟಾಗುತ್ತದೆ. ಕಠಿಣ ತಪಸ್ಸನ್ನಾಚರಿಸುವುದರಿಂದ ಪುನಃ ಆತ್ಮ ಪರಿಶುದ್ಧವಾಗಿ ಮೋಕ್ಷ ಪಡೆಯುವುದು. ಸಮ್ಯಕ್ ಆಚಾರ, ಸಮ್ಯಕ್ ದರ್ಶನ, ಸಮ್ಯಕ್ ಚಿಂತನೆ ಇವು ಜೈನಮತದ ತ್ರಿರತ್ನಗಳು. ಜೈನಯತಿಗಳು ಕಠಿಣವಾದ ನಿಯಮಗಳನ್ನು ಆಚರಿಸಬೇಕು. ಗೃಹಸ್ಥರು ಜೈನಮತದ</p>



<p>ಮುಖ್ಯ ನಿಯಮಗಳ ಜೊತೆಗೆ ಪಂಚಪರಮೇಷ್ಠಿ ಯಜ್ಞವನ್ನಾಚರಿಸಬೇಕು. ಜೈನಮತದ ಪ್ರಚಾರ : ಮಹಾವೀರನಿಗೆ ಹನ್ನೊಂದು ಮಂದಿ ಆಪ್ತ ಶಿಷ್ಯ ರಿದ್ದರು. ಅವರಲ್ಲಿ ಸುಧಮ್ಮನ್ ಎಂಬುವನೊಬ್ಬನ ಹೊರತಾಗಿ ಉಳಿದವರು ಮಹಾವೀರನು ಜೀವಿಸಿರುವಾಗಲೆ ಮರಣ ಹೊಂದಿದರು. ಸುಧಮ್ಮನ್ ಮಹಾವೀರನ ಮರಣಾನಂತರ ಜೈನ ಯತಿಗಳ ಸಂಘದ ಮುಖ್ಯನಾದ. ಅವನ ಅನಂತರ ಒಬ್ಬೊಬ್ಬರಾಗಿ ಅನೇಕ ಆಚಾರೈರು ಶ್ರವಣ ಸಂಘದ ಮುಖ್ಯರಾಗಿದ್ದರು. ಅವರಲ್ಲಿ ಆರನೆಯವನಾದ ಭದ್ರಬಾಹು ಚಂದ್ರಗುಪ್ತ ಮೌಯ್ಯನ ಸಮಕಾಲೀನನಾಗಿದ್ದ. ಚಂದ್ರಗುಪ್ತಮೌಯ್ಯನ ಆಳ್ವಿಕೆಯ ಕೊನೆಗಾಲದಲ್ಲಿ ಮಗಧ ಸಾಮ್ರಾಜ್ಯದಲ್ಲಿ ಹನ್ನೆರಡು ವರ್ಷಗಳ ಅವಧಿಯ ಕ್ಷಾಮ ತಲೆದೋರಿತೆಂದೂ, ಆ ಸಮಯದಲ್ಲಿ ಮೌಲ್ಯ ಚಕ್ರವರ್ತಿ ಸಿಂಹಾಸನ ತ್ಯಾಗಮಾಡಿ ಭದ್ರಬಾಹು ಮತ್ತು ಇತರ ಅನೇಕ ಜೈನಭಿಕ್ಷುಗಳೊಡನೆ ದಕ್ಷಿಣಕ್ಕೆ ಬಂದು ಮೈಸೂರು ದೇಶದ ಶ್ರವಣಬೆಳಗೊಳದಲ್ಲಿ ತಂಗಿದನೆಂದೂ ತಿಳಿದುಬರುತ್ತದೆ. ಶ್ರವಣಬೆಳಗೊಳದ ಚಿಕ್ಕ ಬೆಟ್ಟದಲ್ಲಿರುವ ಚಂದ್ರಗುಪ್ತ ಬಸದಿ ಈ ಘಟನೆಯ ನೆನಪಾಗಿ ಇಂದಿಗೂ ಉಳಿದುಬಂದಿದೆ. ಭದ್ರಬಾಹುವಿನೊಡನೆ ಶ್ರವಣಬೆಳಗೊಳಕ್ಕೆ ಬಂದ ಮೌಲ್ಯ ಚಕ್ರವರ್ತಿ ಚಂದ್ರಗುಪ್ತನ ಮೊಮ್ಮಗ ಸಂಪ್ರಾತಿ ಚಂದ್ರಗುಪ್ತನಾಗಿರಬಹುದೆಂದು ಹಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಕ್ಷಾಮದ ಅವಧಿಯಲ್ಲಿ ಮಗಧರಾಜ್ಯದಲ್ಲೇ ನೆಲಸಿದ್ದ ಜೈನಭಿಕ್ಷುಗಳು ಒಂದು ಸಮ್ಮೇಳನ ನಡೆಸಿ ಆ ಸಮ್ಮೇಳನದ ನಿರ್ಣಯದ ಪ್ರಕಾರ ಜೈನದರ್ಶನದ ಹನ್ನೆರಡು ಅಂಗಗಳನ್ನೊಳಗೊಂಡ ಪವಿತ್ರಗ್ರಂಥಗಳನ್ನು ರಚಿಸಿದರು. ಅಲ್ಲದೆ ಬಿಳಿಬಟ್ಟೆಗಳನ್ನು ಧರಿಸುವ ಹಾಗೂ ಇತರ ಕೆಲವು ಪದ್ಧತಿಗಳನ್ನು ಅವರು ಆಚರಣೆಗೆ ತಂದುಕೊಂಡಿದ್ದರು. ಹಲವು ವರ್ಷಗಳ ಅನಂತರ ಭದ್ರ ಬಾಹು ಮತ್ತು ಅವನ ಅನುಯಾಯಿಗಳು ಮಗಧರಾಜ್ಯಕ್ಕೆ ಹಿಂದಿರುಗಿದರು. ತಮ್ಮ ಗೈರುಹಾಜರಿಯಲ್ಲಿ ಆಚರಣೆಗೆ ಬರದಿದ್ದ ನಿಯಮಗಳನ್ನು ಅವರು ಒಪ್ಪಲಿಲ್ಲ. ಆದ್ದರಿಂದ</p>



<p>ಜೈನಮತ &#8216;ದಿಗಂಬರ&#8217; ಮತ್ತು &#8216;ಶ್ವೇತಾಂಬರ&#8217; ಎಂಬ ಎರಡು ಶಾಖೆಗಳಾಗಿ ಮಾಲ್ಪಟ್ಟಿತು. ಜೈನಮತ ಕ್ರಿ.ಪೂ. ೪ನೇ ಶತಮಾನದ ವೇಳೆಗೆ ದಕ್ಷಿಣ ಭಾರತದಲ್ಲಿ ಪ್ರಚಾರ ವಾಯಿತು. ತಮಿಳು ಸಂಘಂ&#8217;ಕಾಲದಲ್ಲಿ ಮಧುರೆಯ ಪಾಂಡ್ಯರು ಜೈನಮತಕ್ಕೆ ಪ್ರೋತ್ಸಾಹ ನೀಡಿದರು. ಅನೇಕ ಜೈನಕವಿಗಳು ತಮಿಳು ಗ್ರಂಥಗಳನ್ನು ರಚಿಸಿರುವರು. ಕ್ರಿ.ಶ. ಎರಡನೇ ಶತಮಾನದಲ್ಲಿ ಕಳಿಂಗದ ಖಾರವೇಲ ಜೈನಮತಕ್ಕೆ ವಿಶೇಷ ಪ್ರೋತ್ಸಾಹ ನೀಡಿದ. ಕನ್ನಡ ನಾಡಿನ ಅರಸು ಮನೆತನಗಳಾದ ಗಂಗರು, ರಾಷ್ಟ್ರಕೂಟರು, ಹೊಯ್ಸಳರು ಜೈನಮತಕ್ಕೆ ವಿಶೇಷ ಪ್ರೋತ್ಸಾಹ ನೀಡಿದರು. ಈ ಮನೆತನಗಳ ಅನೇಕ ರಾಜರು ಜೈನಮತೀಯರಾಗಿ ದ್ದರು. ಸಿಂಹನಂದಿ ಕುಂದಕುಂದಾಚಾರ, ಪೂಜ್ಯಪಾದ ಮೊದಲಾದ ಪ್ರಸಿದ್ಧ ಜೈನಯತಿ ಗಳು ಸಂಸ್ಕೃತ ಭಾಷೆಯಲ್ಲಿ ದಾರ್ಶನಿಕ ಗ್ರಂಥಗಳನ್ನು ರಚಿಸಿದರು.</p>



<p>ತಲಕಾಡಿನ ಗಂಗರ ಕಾಲದಲ್ಲಿ ಕನ್ನಡನಾಡಿನಲ್ಲಿ ಜೈನಮತ ಸರ್ವತೋಮುಖ ಅಭಿ ವೃದ್ಧಿ ಹೊಂದಿತ್ತು. ಕ್ರಿ.ಶ. ೧೦ನೇ ಶತಮಾನದಲ್ಲಿ ಮಾರಸಿಂಹ ಗಂಗ ಮತ್ತು ಅವನ ಮಗ ರಾಚಮಲ್ಲನ ಅಮಾತ್ಯನಾಗಿದ್ದ ಚಾವುಂಡರಾಯ ಶ್ರವಣಬೆಳಗೊಳದ ಜಗತ್ರ ಸಿದ್ಧವಾದ ಏಕಶಿಲೆಯ ೫೮ ಅಡಿ ಎತ್ತರದ ಗೊಮ್ಮಟ ಪ್ರತಿಮೆಯನ್ನು ಕಡೆಸಿ ಸ್ಥಾಪಿಸಿದ. ಕನ್ನಡ ನಾಡಿನ ಬೇರೆಬೇರೆ ಸಂತತಿಗಳ ರಾಜರ ಆಸ್ಥಾನದಲ್ಲಿದ್ದ ಪಂಪ, ರನ್ನ, ಪೊನ್ನ, ಜನ್ನ ಮತ್ತು ಇತರ ಪ್ರಸಿದ್ಧ ಜೈನಕವಿಗಳು ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಶ್ರೇಷ್ಠ ಗ್ರಂಥಗಳನ್ನು ರಚಿಸಿದ್ದಾರೆ.</p>



<p>ಮಧ್ಯಕಾಲೀನ ಯುಗದ ರಜಪೂತರು ಜೈನ ದಾರ್ಶನಿಕರಿಗೂ ವಿದ್ವಾಂಸರಿಗೂ ಪ್ರೋತ್ಸಾಹ ನೀಡಿದರು. ಆ ಕಾಲದಲ್ಲಿ ಮೌಂಟ್ ಅಬು ಬೆಟ್ಟಗಳ ಮೇಲೆ ಅಮೃತಶಿಲೆಯ ಜೈನ ದೇವಾಲಯ ನಿರ್ಮಾಣವಾಯಿತು. ಮೊಗಲ್ ಸಾಮ್ರಾಟ ಅಕ್ಟರ್‌ನ ಆಸ್ಥಾನದಲ್ಲಿ ಪ್ರಸಿದ್ಧ ಜೈನ ದಾರ್ಶನಿಕರಾದ ಹೀರವಿಜಯಸೂರಿ ಮೊದಲಾದವರಿದ್ದರು. ಹೀರವಿಜಯಸೂರಿಯು ಅಕ್ಟರ್ ಸಾಮ್ರಾಟನ ವಿಶೇಷ ಮನ್ನಣೆಗೆ ಪಾತ್ರನಾಗಿದ್ದನು. ಜೈನಮತ ಬೌದ್ಧ ಮತದಷ್ಟು ವಿಶೇಷವಾಗಿ ಭಾರತದಲ್ಲಿ ಹರಡಲೂ ಇಲ್ಲ, ಸಂಪೂರ್ಣವಾಗಿ ಚ್ಯುತಿ ಹೊಂದಲೂ ಇಲ್ಲ.</p>



<p>ಜೈನಮತ ಅಹಿಂಸಾ ತತ್ತ್ವವನ್ನು ವಿಶೇಷವಾಗಿ ಪ್ರಚಾರಪಡಿಸಿತು. ಪ್ರಾಂತೀಯ ಭಾಷೆಗಳ ಬೆಳವಣಿಗೆಗೆ ಬಹುಮಟ್ಟಿಗೆ ಸಹಕಾರಿಯಾಯಿತು. ಭಾರತೀಯ ತತ್ತ್ವಶಾಸ್ತ್ರಕ್ಕೆ ಜೈನಮತ ತನ್ನ ಕೊಡುಗೆ ಸಲ್ಲಿಸಿದೆ. ಜೈನ ಮತೀಯರು ಪ್ರಾರಂಭದಲ್ಲಿ ಅನೇಕ ಗುಹಾಲಯಗಳನ್ನು ನಿರ್ಮಿಸಿದರು. ಶ್ರವಣಬೆಳಗೊಳ, ಮೌಂಟ್ ಅಬು, ಹಳೇಬೀಡು ಮೊದಲಾದ ಸ್ಥಳಗಳಲ್ಲಿರುವ ಜೈನ ದೇವಾಲಯಗಳು ಇಂದಿಗೂ ಪ್ರಸಿದ್ಧವಾಗಿವೆ. ಮೈಸೂರು ರಾಜ್ಯದ ಧರ್ಮಸ್ಥಳದಲ್ಲಿ ಬೃಹತ್ ಗೊಮ್ಮಟ ಶಿಲಾ ಪ್ರತಿಮೆ ಜೈನ ಧರ್ಮದ ಸಾಕ್ಷಿಯಾಗಿ ನಿಂತಿದೆ.</p>



<p style="font-size:17px"><strong>ಲೇಖಕರು:</strong> ಗೌತಮ ಆವರ್ತಿ </p>



<p>ಆಕರ: ಡಾ. ಬಿ. ಷೇಕ್ ಅಲಿ ಜಿ. ಆರ್. ರಂಗಸ್ವಾಮಯ್ಯ ಡಾ. ಎ. ವಿ. ವೆಂಕಟರತ್ನಂ. ಡಾ. ಬಿ. ಮುದ್ದಾಚಾರಿ, VARF &#8211; Visual Anthropology Research Foundation Varf Viewfinder ಕನ್ನಡದ ಐತಿಹಾಸಿಕ ದಾಖಲೆಗಳು</p>



<p></p>
]]></content:encoded>
					
		
		
			</item>
		<item>
		<title>ಎರಡು ವರ್ಷದಲ್ಲಿ ಅಕ್ಟೋಬರ್‌ನಲ್ಲಿ ನಿರುದ್ಯೋಗ 10.09% ಎರಿಕೆ! – ಸಿಎಂಐಇ ವರದಿ</title>
		<link>https://peepalmedia.com/unemployment-rate-rose-to-2-years-high-of-10-09-in-october/</link>
		
		<dc:creator><![CDATA[Charan Aivarnad]]></dc:creator>
		<pubDate>Fri, 03 Nov 2023 08:48:47 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[bengalure]]></category>
		<category><![CDATA[Bharath]]></category>
		<category><![CDATA[bjp]]></category>
		<category><![CDATA[breaking news]]></category>
		<category><![CDATA[congress]]></category>
		<category><![CDATA[crisis]]></category>
		<category><![CDATA[economic]]></category>
		<category><![CDATA[india]]></category>
		<category><![CDATA[jairamramesh]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Mallikarjun Kharge]]></category>
		<category><![CDATA[narendra modi]]></category>
		<category><![CDATA[NDA]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Rahul Gandhi]]></category>
		<category><![CDATA[state politics]]></category>
		<category><![CDATA[trending news]]></category>
		<category><![CDATA[Unemployment]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=31080</guid>

					<description><![CDATA[ಬೆಂಗಳೂರು,ನವೆಂಬರ್.‌03: ಅಕ್ಟೋಬರ್‌ನಲ್ಲಿ ಭಾರತದಲ್ಲಿ ನಿರುದ್ಯೋಗದ ಪ್ರಮಾಣ ಎರಡು ವರ್ಷಗಳಲ್ಲಿ ಗರಿಷ್ಠ 10.09% ಕ್ಕೆ ಏರಿಕೆಯಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (Centre for Monitoring Indian Economy &#8211; CMIE) ಡೇಟಾವನ್ನು ಉಲ್ಲೇಖಿಸಿ &#160;ಬ್ಲೂಮ್‌ಬರ್ಗ್ ವರದಿ ಮಾಡಿದೆ. ಆ ಅಂಕಿಅಂಶವು ಸೆಪ್ಟೆಂಬರ್‌ನಲ್ಲಿ ಇದ್ದ 7.09% &#160;ನಿರುದ್ಯೋಗದ ಪ್ರಮಾಣ ಸುಮಾರು ಶೇಕಡಾ ಮೂರರಷ್ಟು ಹೆಚ್ಚಳವನ್ನು ತೋರಿಸಿದೆ. ಬ್ಲೂಮ್‌ಬರ್ಗ್ ಪ್ರಕಾರ ಗ್ರಾಮೀಣ ನಿರುದ್ಯೋಗವು 6.2% ರಿಂದ 10.82% ಕ್ಕೆ ಏರಿಕೆಯಾಗಿದೆ. ನಗರ ಪ್ರದೇಶದಲ್ಲಿ ನಿರುದ್ಯೋಗ ಪ್ರಮಾಣ 8.44% [&#8230;]]]></description>
										<content:encoded><![CDATA[
<p><strong>ಬೆಂಗಳೂರು,ನವೆಂಬರ್.‌03:</strong> ಅಕ್ಟೋಬರ್‌ನಲ್ಲಿ ಭಾರತದಲ್ಲಿ ನಿರುದ್ಯೋಗದ ಪ್ರಮಾಣ ಎರಡು ವರ್ಷಗಳಲ್ಲಿ ಗರಿಷ್ಠ 10.09% ಕ್ಕೆ ಏರಿಕೆಯಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (<a href="https://www.cmie.com/" data-type="link" data-id="https://www.cmie.com/">Centre for Monitoring Indian Economy &#8211; CMIE</a>) ಡೇಟಾವನ್ನು ಉಲ್ಲೇಖಿಸಿ &nbsp;<a href="https://www.bloomberg.com/news/articles/2023-11-01/india-jobless-rate-rises-to-more-than-two-year-high-cmie-says?leadSource=uverify%20wall#xj4y7vzkg" data-type="link" data-id="https://www.bloomberg.com/news/articles/2023-11-01/india-jobless-rate-rises-to-more-than-two-year-high-cmie-says?leadSource=uverify%20wall#xj4y7vzkg">ಬ್ಲೂಮ್‌ಬರ್ಗ್ ವರದಿ</a> ಮಾಡಿದೆ.</p>



<p>ಆ ಅಂಕಿಅಂಶವು ಸೆಪ್ಟೆಂಬರ್‌ನಲ್ಲಿ ಇದ್ದ 7.09% &nbsp;ನಿರುದ್ಯೋಗದ ಪ್ರಮಾಣ ಸುಮಾರು ಶೇಕಡಾ ಮೂರರಷ್ಟು ಹೆಚ್ಚಳವನ್ನು ತೋರಿಸಿದೆ.</p>



<p>ಬ್ಲೂಮ್‌ಬರ್ಗ್ ಪ್ರಕಾರ ಗ್ರಾಮೀಣ ನಿರುದ್ಯೋಗವು 6.2% ರಿಂದ 10.82% ಕ್ಕೆ ಏರಿಕೆಯಾಗಿದೆ. ನಗರ ಪ್ರದೇಶದಲ್ಲಿ ನಿರುದ್ಯೋಗ ಪ್ರಮಾಣ 8.44% ಕ್ಕೆ ಕೊಂಚ ಇಳಿಕೆಯಾಗಿದೆ. &nbsp;<a href="https://pib.gov.in/PressReleasePage.aspx?PRID=1966154" data-type="link" data-id="https://pib.gov.in/PressReleasePage.aspx?PRID=1966154">ಸರ್ಕಾರ ನೀಡಿರುವ ಅಂಕಿಅಂಶಗಳ ಪ್ರಕಾರ</a> 2022-2023 ರಲ್ಲಿ ನಿರುದ್ಯೋಗ ಪ್ರಮಾಣ 3.2% ರಷ್ಟಿತ್ತು.</p>


<div class="wp-block-image">
<figure class="aligncenter size-large is-resized"><img fetchpriority="high" decoding="async" width="1024" height="566" src="https://peepalmedia.com/wp-content/uploads/2023/11/ytuyuy-1024x566.jpg" alt="" class="wp-image-31081" style="aspect-ratio:1.8091872791519434;width:434px;height:auto" srcset="https://peepalmedia.com/wp-content/uploads/2023/11/ytuyuy-1024x566.jpg 1024w, https://peepalmedia.com/wp-content/uploads/2023/11/ytuyuy-300x166.jpg 300w, https://peepalmedia.com/wp-content/uploads/2023/11/ytuyuy-768x424.jpg 768w, https://peepalmedia.com/wp-content/uploads/2023/11/ytuyuy-150x83.jpg 150w, https://peepalmedia.com/wp-content/uploads/2023/11/ytuyuy-696x384.jpg 696w, https://peepalmedia.com/wp-content/uploads/2023/11/ytuyuy-1068x590.jpg 1068w, https://peepalmedia.com/wp-content/uploads/2023/11/ytuyuy.jpg 1443w" sizes="(max-width: 1024px) 100vw, 1024px" /><figcaption class="wp-element-caption"><a href="https://pib.gov.in/PressReleasePage.aspx?PRID=1966154" data-type="link" data-id="https://pib.gov.in/PressReleasePage.aspx?PRID=1966154">Periodic Labour Force Survey (PLFS) Annual Report 2022-2023 Released</a></figcaption></figure></div>


<p>ಆದರೆ ಆರ್ಥಿಕ ತಜ್ಞರು ಕಾರ್ಮಿಕ ಮಾರುಕಟ್ಟೆಯನ್ನು ಉತ್ತಮ ರೀತಿಯಲ್ಲಿ ಮೌಲ್ಯಮಾಪನ ಮಾಡಲು CMIE ಡೇಟಾದ ಮೇಲೆ ಅವಲಂಬಿತರಾಗಿದ್ದಾರೆ. ಏಕೆಂದರೆ ಅದರ ಅಂಕಿಅಂಶಗಳು ತಿಂಗಳ ಸಮೀಕ್ಷೆಗಳ ಮೇಲೆ ಆಧಾರಿತವಾಗಿದೆ. ಆದರೆ, ಇದು ಸರ್ಕಾರಿ ಅಂಕಿಅಂಶಗಳಿಗೆ ವಿರುದ್ಧವಾಗಿದ್ದು, ಇದು ದೇಶಾದ್ಯಂತ ಡೇಟಾವನ್ನು ಹೆಚ್ಚು ಬಾರಿ ಬಿಡುಗಡೆ ಮಾಡುವುದಿಲ್ಲ ಎಂದು ಬ್ಲೂಮ್‌ಬರ್ಗ್ ವರದಿ ಹೇಳಿದೆ.</p>



<p>ಈ ವರ್ಷ ಭಾರತದ ಆರ್ಥಿಕತೆಯು 6% ರಿಂದ 6.5% ರಷ್ಟು ಏರಿಕೆಯಾಗಿದ್ದು ಕಂಡುಬಂದಿದೆ.</p>



<p>ದೇಶದ ಜನಸಂಖ್ಯೆ ದಿನೇ ದಿನೇ ಬೆಳೆಯುತ್ತಿದ್ದು, ಏಪ್ರಿಲ್‌ನಲ್ಲಿ ಭಾರತವು ಚೀನಾವನ್ನು ವಿಶ್ವದ ಜನಸಂಖ್ಯೆಯಲ್ಲಿ ಹಿಂದಿಕ್ಕಿದೆ. &nbsp;ಆದರೆ ಈ ಬೆಳವಣಿಗೆಯ ಹೊರತಾಗಿಯೂ, ಕಳೆದ ಐದು ವರ್ಷಗಳಿಂದ ಭಾರತದ ವರ್ಕ್‌ಫೋರ್ಸ್‌ ನಿಶ್ಚಲವಾಗಿದೆ ಎಂದು CMIE ಮುಖ್ಯ ಕಾರ್ಯನಿರ್ವಾಹಕ ಮಹೇಶ್ ವ್ಯಾಸ್ ಹೇಳಿಕೆ <a href="https://thewire.in/economy/indias-workforce-not-rising-quality-of-jobs-very-low-cmies-mahesh-vyas" data-type="link" data-id="https://thewire.in/economy/indias-workforce-not-rising-quality-of-jobs-very-low-cmies-mahesh-vyas">ದಿ ವೈರ್‌</a>ನಲ್ಲಿ ವರದಿಯಾಗಿದೆ.</p>



<p>ಅಕ್ಟೋಬರ್‌ನಲ್ಲಿ ಸುಮಾರು 10 ಮಿಲಿಯನ್ ಭಾರತೀಯರು ಕೆಲಸ ಔದ್ಯೋಗಿಕ ಮಾರುಕಟ್ಟೆಗೆ ಬಂದಿದ್ದಾರೆ.</p>



<p>ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (Centre for the Study of Developing Societies) ನಡೆಸಿದ ಸಮೀಕ್ಷೆಯ ಪ್ರಕಾರ ಈ ವರ್ಷದ ಆರಂಭದಲ್ಲಿ <a href="https://www.upscexamnotes.com/upsc-article.php?article=centre-for-the-study-of-developing-societies-(csds)-survey" data-type="link" data-id="https://www.upscexamnotes.com/upsc-article.php?article=centre-for-the-study-of-developing-societies-(csds)-survey">15 ರಿಂದ 34 ವರ್ಷ ವಯಸ್ಸಿನ 36%</a> ಭಾರತೀಯರು ನಿರುದ್ಯೋಗ ದೇಶದ ದೊಡ್ಡ ಸಮಸ್ಯೆ ಎಂದು ಭಾವಿಸಿದ್ದಾರೆ. &nbsp;</p>



<p>2016 ರಲ್ಲಿ ನಡೆಸಿದ ಇದೇ ರೀತಿಯ ಸಮೀಕ್ಷೆಯ ಜೊತೆಗೆ ತುಲನೆ ಮಾಡಿದರೆ, ನಿರುದ್ಯೋಗವು ದೇಶದ ಅತಿದೊಡ್ಡ ಸಮಸ್ಯೆ ಎಂದು ಭಾವಿಸಿರುವ ಭಾರತೀಯರ ಪ್ರಮಾಣವು ಶೇಕಡಾ 18ಕ್ಕೆ ಏರಿಕೆಯಾಗಿದೆ ಎಂದು <a href="https://indianexpress.com/article/explained/for-15-34-yr-olds-top-concern-is-jobs-economic-struggles-survey-8897399/" data-type="link" data-id="https://indianexpress.com/article/explained/for-15-34-yr-olds-top-concern-is-jobs-economic-struggles-survey-8897399/">ಇಂಡಿಯನ್ ಎಕ್ಸ್‌ಪ್ರೆಸ್</a> ವರದಿ ಮಾಡಿದೆ.</p>



<p>ಪದವೀಧರರು ಮತ್ತು ಅದಕ್ಕಿಂತ ಉನ್ನತ ಶಿಕ್ಷಣ ಪಡೆದ 40% ವಿದ್ಯಾವಂತರು ಈ ಸಮೀಕ್ಷೆಯಲ್ಲಿ ಪ್ರತಿಕ್ರಿಯೆ ನೀಡಿದ್ದು, ನಿರುದ್ಯೋಗವನ್ನು ದೊಡ್ಡ ಸವಾಲಾಗಿ ಗುರುತಿಸಿದ್ದಾರೆ. ಕೇವಲ 27% ಸಾಕ್ಷರರಲ್ಲದವರು ಪ್ರತಿಕ್ರಿಯೆ ನೀಡಿದ್ದಾರೆ.</p>
]]></content:encoded>
					
		
		
			</item>
		<item>
		<title>ಅನಿಯಂತ್ರಿತ ಮೋದಿ ಮೇಡ್-ಆರ್ಥಿಕ ಸಂಕಷ್ಟ: ನಿರುದ್ಯೋಗ ಹೆಚ್ಚಳದ ಬಗ್ಗೆ ಕಾಂಗ್ರೇಸ್‌ ವಾಗ್ದಾಳಿ</title>
		<link>https://peepalmedia.com/modi-made-economic-crisis-is-out-of-control-and-rising-unemployment-rate/</link>
		
		<dc:creator><![CDATA[Charan Aivarnad]]></dc:creator>
		<pubDate>Thu, 02 Nov 2023 11:11:36 +0000</pubDate>
				<category><![CDATA[Uncategorized]]></category>
		<category><![CDATA[ರಾಜಕೀಯ]]></category>
		<category><![CDATA[bengalure]]></category>
		<category><![CDATA[Bharath]]></category>
		<category><![CDATA[bjp]]></category>
		<category><![CDATA[breaking news]]></category>
		<category><![CDATA[congress]]></category>
		<category><![CDATA[crisis]]></category>
		<category><![CDATA[economic]]></category>
		<category><![CDATA[india]]></category>
		<category><![CDATA[jairamramesh]]></category>
		<category><![CDATA[karnataka]]></category>
		<category><![CDATA[Mallikarjun Kharge]]></category>
		<category><![CDATA[narendra modi]]></category>
		<category><![CDATA[NDA]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Rahul Gandhi]]></category>
		<category><![CDATA[state politics]]></category>
		<category><![CDATA[trending news]]></category>
		<category><![CDATA[Unemployment]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=31041</guid>

					<description><![CDATA[ನವದೆಹಲಿ,ನವೆಂಬರ್.‌02: ಎರಡು ವರ್ಷಗಳಲ್ಲಿ ನಿರುದ್ಯೋಗ ಹೆಚ್ಚಿನ ಏರಿಕೆಯಾಗಿದ್ದು, ದಾಖಲೆಯ ನಿರುದ್ಯೋಗವೇ ಮೋದಿಯವರ ಆಡಳಿತದ ದಾಖಲೆ ಎಂದು ಗುರುವಾರ ನರೇಂದ್ರ ಮೋದಿಯವರ ಮೇಲೆ ಮಾತಿನ ದಾಳಿ ನಡೆಸಿದೆ. ಅಲ್ಲದೇ, ಭಾರತದಲ್ಲಿ ಹೆಚ್ಚುತ್ತಿರುವ ಆರ್ಥಿಕ ಬಿಕ್ಕಟ್ಟು ನಿಯಂತ್ರಣ ತಪ್ಪಿದೆ ಎಂದು ಹೇಳಿದೆ. ಆರ್ಥಿಕ ಕುಸಿತ ಮತ್ತು ಹಣದುಬ್ಬರದ ನಡುವೆಯೇ ಮೋದಿ ಸರಕಾರ ಇಂತಹ ನಿರುದ್ಯೋಗ ಮೇಳವನ್ನು ಹಮ್ಮಿಕೊಂಡಿದ್ದು, ಇದರಿಂದ ಕೋಟ್ಯಂತರ ಯುವಕರು ಅಲೆದಾಡುವಂತಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಿರುದ್ಯೋಗ ದರವು ಎರಡು [&#8230;]]]></description>
										<content:encoded><![CDATA[
<p><strong>ನವದೆಹಲಿ,ನವೆಂಬರ್.‌02:</strong> ಎರಡು ವರ್ಷಗಳಲ್ಲಿ ನಿರುದ್ಯೋಗ ಹೆಚ್ಚಿನ ಏರಿಕೆಯಾಗಿದ್ದು, ದಾಖಲೆಯ ನಿರುದ್ಯೋಗವೇ ಮೋದಿಯವರ ಆಡಳಿತದ ದಾಖಲೆ ಎಂದು ಗುರುವಾರ ನರೇಂದ್ರ ಮೋದಿಯವರ ಮೇಲೆ ಮಾತಿನ ದಾಳಿ ನಡೆಸಿದೆ. ಅಲ್ಲದೇ, ಭಾರತದಲ್ಲಿ ಹೆಚ್ಚುತ್ತಿರುವ ಆರ್ಥಿಕ ಬಿಕ್ಕಟ್ಟು ನಿಯಂತ್ರಣ ತಪ್ಪಿದೆ ಎಂದು ಹೇಳಿದೆ.</p>



<p>ಆರ್ಥಿಕ ಕುಸಿತ ಮತ್ತು ಹಣದುಬ್ಬರದ ನಡುವೆಯೇ ಮೋದಿ ಸರಕಾರ ಇಂತಹ ನಿರುದ್ಯೋಗ ಮೇಳವನ್ನು ಹಮ್ಮಿಕೊಂಡಿದ್ದು, ಇದರಿಂದ ಕೋಟ್ಯಂತರ ಯುವಕರು ಅಲೆದಾಡುವಂತಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ <a href="https://x.com/kharge/status/1719996318586954133?s=20" data-type="link" data-id="https://x.com/kharge/status/1719996318586954133?s=20">ಮಲ್ಲಿಕಾರ್ಜುನ ಖರ್ಗೆ ಕೇಂದ್ರದ ವಿರುದ್ಧ ವಾಗ್ದಾಳಿ </a>ನಡೆಸಿದ್ದಾರೆ.</p>



<p>ನಿರುದ್ಯೋಗ ದರವು ಎರಡು ವರ್ಷಗಳಲ್ಲಿ ಹೆಚ್ಚಿನ ಮಟ್ಟಕ್ಕೆ ಏರಿದೆ ಎಂದು ಹೇಳಿರುವ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಲಿಮಿಟೆಡ್ ಡೇಟಾವನ್ನು ಉಲ್ಲೇಖಿಸಿದ ಖರ್ಗೆ &#8220;ನರೇಂದ್ರ ಮೋದಿ ಜೀ, ಈಗಾಗಲೇ ಮಂಜೂರಾದ ಕೆಲವು ಸಾವಿರ &#8216;ಬಡ್ತಿ&#8217; ನೇಮಕಾತಿ ಪತ್ರಗಳನ್ನು ಹಂಚುವ ಮೂಲಕ ನೀವು ಮಾಡುತ್ತಿರುವ ಪಿಆರ್‌ ಸ್ಟಂಟ್ ವರ್ಷಗಟ್ಟಲೆ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರ ಭರವಸೆ ಮತ್ತು ಗಾಯದ ಮೇಲೆ ಉಪ್ಪು ಎರಚುವಂತಿದೆ,&#8221; ಎಂದು ಹೇಳಿದ್ದಾರೆ.</p>


<div class="wp-block-image">
<figure class="aligncenter size-full is-resized"><img decoding="async" width="761" height="865" src="https://peepalmedia.com/wp-content/uploads/2023/11/image-1.png" alt="" class="wp-image-31046" style="aspect-ratio:0.8797687861271676;width:368px;height:auto" srcset="https://peepalmedia.com/wp-content/uploads/2023/11/image-1.png 761w, https://peepalmedia.com/wp-content/uploads/2023/11/image-1-264x300.png 264w, https://peepalmedia.com/wp-content/uploads/2023/11/image-1-150x170.png 150w, https://peepalmedia.com/wp-content/uploads/2023/11/image-1-300x341.png 300w, https://peepalmedia.com/wp-content/uploads/2023/11/image-1-696x791.png 696w" sizes="(max-width: 761px) 100vw, 761px" /></figure></div>


<p>“ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗಗಳಿಗೆ ಸೇರಿದ ಯುವಕರು ನಿಮ್ಮ ದೌರ್ಜನ್ಯದ ಭಾರವನ್ನು ಹೊತ್ತಿದ್ದಾರೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಕಳೆದುಕೊಂಡ ಉದ್ಯೋಗಗಳ ಪೈಕಿ 90 ಲಕ್ಷ ಉತ್ತಮ ಸಂಬಳದ ಉದ್ಯೋಗಗಳು ಸಂಪೂರ್ಣವಾಗಿ ಕಣ್ಮರೆಯಾಗಿವೆ. ಗ್ರಾಮೀಣ ಭಾರತದ ಸ್ಥಿತಿ ಕೆಟ್ಟದಾಗಿದೆ. MNREGA ದಲ್ಲಿ ಕೆಲಸದ ಬೇಡಿಕೆಯು 20% ರಷ್ಟು ಹೆಚ್ಚಾಗಿದೆ, ಇದು ಐತಿಹಾಸಿಕ 10.8% ನಿರುದ್ಯೋಗ ದರವನ್ನು ಸ್ಪಷ್ಟವಾಗಿ ತೋರಿಸುತ್ತದೆ,&#8221; ಎಂದು ಖರ್ಗೆ ಹೇಳಿದರು.</p>



<p>“ಪದವೀಧರರಲ್ಲಿ ನಿರುದ್ಯೋಗ ದರವು 13.4% ಇದೆ ಎಣದಯ ಸರ್ಕಾರದ Periodic Labour Force Survey (PLFS) ಡೇಟಾ ಹೇಳುತ್ತದೆ. ಈಗ ನಿಮ್ಮ ಸುಳ್ಳು ಜಾಹೀರಾತುಗಳು ಮತ್ತು ಜನರ ಗಮನವನ್ನು ಬೇರೆಡೆ ಸೆಳೆಯುವ ಹೊಸ ತಂತ್ರಗಳು ಇನ್ನು ಮುಂದೆ ಕೆಲಸಕ್ಕೆ ಬರುವುದಿಲ್ಲ. ಐದು ರಾಜ್ಯಗಳ ಚುನಾವಣೆಯಾಗಲಿ ಅಥವಾ ಮುಂಬರುವ ಲೋಕಸಭೆ ಚುನಾವಣೆಗಳಾಗಲಿ, ಭಾರತದ ಯುವಕರು ಖಂಡಿತವಾಗಿಯೂ ತಮಗೆ ಅನ್ಯಾಯ ಮಾಡಿದವರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾರೆ. ಕೇವಲ ನಿರುದ್ಯೋಗಿ ಯುವಕರು ಬಿಜೆಪಿ ಆಡಳಿತದ ಅಂತ್ಯದ ಕೌಂಟ್‌ಡೌನ್‌ &nbsp;ಮಾಡಲಿದ್ದಾರೆ,” ಎಂದು ಖರ್ಗೆ ಮಾತಿನ ದಾಳಿ ನಡೆಸಿದರು.</p>



<p>ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ <a href="https://x.com/Jairam_Ramesh/status/1719983973273575829?s=20" data-type="link" data-id="https://x.com/Jairam_Ramesh/status/1719983973273575829?s=20">ರಮೇಶ್ ಸರ್ಕಾರದ ವಿರುದ್ಧ ವಾಗ್ದಾಳಿ</a> ನಡೆಸಿ, X ನಲ್ಲಿ &#8220;ಭಾರತದಲ್ಲಿ ಬೆಳೆಯುತ್ತಿರುವ ಮೋದಿ-ನಿರ್ಮಿತ ಆರ್ಥಿಕ ಬಿಕ್ಕಟ್ಟು ನಿಯಂತ್ರಣ ತಪ್ಪುತ್ತಿದೆ. CMIE ಡೇಟಾವು ಭಾರತದಲ್ಲಿ ನಿರುದ್ಯೋಗ ದರವು ಈಗ 10% ಕ್ಕಿಂತ ಹೆಚ್ಚಿದೆ ಎಂದು ತೋರಿಸುತ್ತದೆ. ಇದು 2 ವರ್ಷಗಳಲ್ಲಿ ಅತಿ ಹೆಚ್ಚು. ಐದು ದಶಕಗಳಲ್ಲೇ ಅತ್ಯಧಿಕ. ಗ್ರಾಮೀಣ ನಿರುದ್ಯೋಗ 10.8%ಗೆ ಏರಿಕೆಯಾಗಿದೆ,&#8221; ಎಂದು ಪೋಸ್ಟ್‌ ಮಾಡಿದ್ದಾರೆ.</p>


<div class="wp-block-image">
<figure class="aligncenter size-full is-resized"><img decoding="async" width="752" height="774" src="https://peepalmedia.com/wp-content/uploads/2023/11/image.png" alt="" class="wp-image-31044" style="aspect-ratio:0.9715762273901809;width:421px;height:auto" srcset="https://peepalmedia.com/wp-content/uploads/2023/11/image.png 752w, https://peepalmedia.com/wp-content/uploads/2023/11/image-291x300.png 291w, https://peepalmedia.com/wp-content/uploads/2023/11/image-150x154.png 150w, https://peepalmedia.com/wp-content/uploads/2023/11/image-300x309.png 300w, https://peepalmedia.com/wp-content/uploads/2023/11/image-696x716.png 696w" sizes="(max-width: 752px) 100vw, 752px" /></figure></div>


<p>&#8221; MNREGA ಅಡಿಯಲ್ಲಿ ಉದ್ಯೋಗಕ್ಕಾಗಿ ಹೆಚ್ಚಿರುವ ದಾಖಲೆಯ ಬೇಡಿಕೆ ನಿರುದ್ಯೋಗ ಸಂಕಷ್ಟವನ್ನು ಮತ್ತಷ್ಟು ಸಾಬೀತು ಪಡಿಸಿದೆ. ನರೇಗಾ ಕೋಟಿಗಟ್ಟಲೆ ಭಾರತೀಯರಿಗೆ ಕೆಲಸ ಸಿಗುವ ಕೊನೆಯ ರೆಸಾರ್ಟ್. ಇದೂ ಕೂಡ ಕಳೆದ ವರ್ಷಕ್ಕಿಂತ 20% ಹೆಚ್ಚಾಗಿದೆ&#8221; ಎಂದು ಜೈರಾಮ್‌ ರಮೇಶ್‌ ಹೇಳಿದ್ದಾರೆ.</p>



<p>&#8220;ಒಂದು ಕೋಟಿ ಭಾರತೀಯರು ಅಕ್ಟೋಬರ್ 2023 ರಲ್ಲಿ ಕಾರ್ಮಿಕ ಮಾರುಕಟ್ಟೆಯನ್ನು ಪ್ರವೇಶಿಸಿದ್ದಾರೆ ಮತ್ತು ಲಕ್ಷಗಟ್ಟಲೆ ಜನರಿಗೆ ಕೆಲಸ ಸಿಗುತ್ತಿಲ್ಲ. ಕಳೆದ ವಾರವಷ್ಟೇ ನೂರಾರು ಇಂಜಿನಿಯರ್‌ಗಳು ಸರ್ಕಾರಿ ಗುಮಾಸ್ತ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಬಂದಿತ್ತು. ಇನ್ಫೋಸಿಸ್ ಮತ್ತು ವಿಪ್ರೋ ಅವರು ಕಾಲೇಜುಗಳಿಂದ ನೇಮಕಾತಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಈ ವರ್ಷ, ಬಹುಪಾಲು ಭಾರತೀಯರು, ವಿಶೇಷವಾಗಿ ವಿದ್ಯಾವಂತ ಯುವಕರು, ಮೋದಿ ನಿರ್ಮಿತ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದಾರೆ,” ಎಂದು ಅವರು ಹೇಳಿದ್ದಾರೆ.</p>



<p>&#8220;ಪ್ರಧಾನಿಯಾಗಿ ಶ್ರೀ ಮೋದಿಯವರ ಪರಂಪರೆಯೆಂದರೆ ಸೃಷ್ಟಿಯಾಗಿರುವ ದಾಖಲೆಯ ನಿರುದ್ಯೋಗ. ಆದ್ದರಿಂದ ಸರ್ಕಾರವು ಸಮಸ್ಯೆಯನ್ನು ಮರೆಮಾಚಲು ಯಾವುದೇ ಹಂತಕ್ಕೆ ಹೋಗಬಹುದು. ಹಾದಿತಪ್ಪಿಸುವುದು, ತಿರುಚುವುದು ಮಾಡಬಹುದು. ಆದರೆ ಭಾರತದ ಯುವಕರಿಗೆ ಸತ್ಯ ತಿಳಿದಿದೆ. ಪ್ರಧಾನಿಯವರ ನಿವೃತ್ತಿಯ ಸಮಯ ಬಂದಿದೆ,&#8221; ರಮೇಶ್ ಹೇಳಿದ್ದಾರೆ.</p>
]]></content:encoded>
					
		
		
			</item>
		<item>
		<title>ಪಠ್ಯಕ್ರಮದಲ್ಲಿ &#8216;ಇಂಡಿಯಾ&#8217; ಬದಲು &#8216;ಭಾರತ್&#8217; ಹೆಸರು : NCERT ನಿರ್ಧಾರ</title>
		<link>https://peepalmedia.com/name-bharat-instead-of-india-in-syllabus/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 25 Oct 2023 11:46:59 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[Bharath]]></category>
		<category><![CDATA[india]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=30516</guid>

					<description><![CDATA[ಶಾಲಾ ಪಠ್ಯಕ್ರಮವನ್ನು ಪರಿಷ್ಕರಿಸಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ರಚಿಸಿದ ಸಾಮಾಜಿಕ ವಿಜ್ಞಾನದ ಉನ್ನತ ಮಟ್ಟದ ಸಮಿತಿಯು ಪಠ್ಯಪುಸ್ತಕಗಳಲ್ಲಿ &#8216;ಇಂಡಿಯಾ&#8217; ಹೆಸರನ್ನು &#8216;ಭಾರತ್&#8217; ಎಂದು ಬದಲಾಯಿಸಲು ಮತ್ತು ಪಠ್ಯಕ್ರಮದಲ್ಲಿ ಪ್ರಾಚೀನ ಇತಿಹಾಸದ ಬದಲು &#8216;ಶಾಸ್ತ್ರೀಯ ಇತಿಹಾಸ&#8217; ವನ್ನು ಪರಿಚಯಿಸಲು ಶಿಫಾರಸು ಮಾಡಿದೆ ಎಂದು ಸಮಿತಿಯ ಅಧ್ಯಕ್ಷ ಸಿಐ ಐಸಾಕ್ ತಿಳಿಸಿದ್ದಾರೆ. ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ ಏಳು ಸದಸ್ಯರ ಸಮಿತಿಯು ನೀಡಿದ ಸರ್ವಾನುಮತದ ಶಿಫಾರಸಿನಲ್ಲಿ ಸಾಮಾಜಿಕ ವಿಜ್ಞಾನಗಳ ಬಗ್ಗೆ ತನ್ನ [&#8230;]]]></description>
										<content:encoded><![CDATA[
<p>ಶಾಲಾ ಪಠ್ಯಕ್ರಮವನ್ನು ಪರಿಷ್ಕರಿಸಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ರಚಿಸಿದ ಸಾಮಾಜಿಕ ವಿಜ್ಞಾನದ ಉನ್ನತ ಮಟ್ಟದ ಸಮಿತಿಯು ಪಠ್ಯಪುಸ್ತಕಗಳಲ್ಲಿ &#8216;ಇಂಡಿಯಾ&#8217; ಹೆಸರನ್ನು &#8216;ಭಾರತ್&#8217; ಎಂದು ಬದಲಾಯಿಸಲು ಮತ್ತು ಪಠ್ಯಕ್ರಮದಲ್ಲಿ ಪ್ರಾಚೀನ ಇತಿಹಾಸದ ಬದಲು &#8216;ಶಾಸ್ತ್ರೀಯ ಇತಿಹಾಸ&#8217; ವನ್ನು ಪರಿಚಯಿಸಲು ಶಿಫಾರಸು ಮಾಡಿದೆ ಎಂದು ಸಮಿತಿಯ ಅಧ್ಯಕ್ಷ ಸಿಐ ಐಸಾಕ್ ತಿಳಿಸಿದ್ದಾರೆ.</p>



<p>ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ ಏಳು ಸದಸ್ಯರ ಸಮಿತಿಯು ನೀಡಿದ ಸರ್ವಾನುಮತದ ಶಿಫಾರಸಿನಲ್ಲಿ ಸಾಮಾಜಿಕ ವಿಜ್ಞಾನಗಳ ಬಗ್ಗೆ ತನ್ನ ಅಂತಿಮ ಸ್ಥಾನ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ. ಇದು ಹೊಸ NCERT ಪಠ್ಯಪುಸ್ತಕಗಳ ಅಭಿವೃದ್ಧಿಗೆ ಅಡಿಪಾಯ ಹಾಕುವ ಪ್ರಮುಖ ಪೂರ್ವಭಾವಿ ದಾಖಲೆಯಾಗಿದೆ ಎಂದು ಐಸಾಕ್ ಹೇಳಿದ್ದಾರೆ.</p>



<p>ಮುಂದಿನ ಸೆಟ್ ಎನ್ ಸಿಇಆರ್ ಟಿ ಪುಸ್ತಕಗಳು ಈ ಹೆಸರು ಬದಲಾವಣೆಯನ್ನು ಪ್ರತಿಬಿಂಬಿಸುತ್ತವೆ. ಈ ಪ್ರಸ್ತಾಪವನ್ನು ಆರಂಭದಲ್ಲಿ ಹಲವಾರು ತಿಂಗಳ ಹಿಂದೆ ಮಂಡಿಸಲಾಗಿದ್ದರೂ, ಈಗ ಅದು ಔಪಚಾರಿಕ ಅನುಮೋದನೆಯನ್ನು ಪಡೆದಿದೆ. ಹೆಚ್ಚುವರಿಯಾಗಿ, ಪಠ್ಯಪುಸ್ತಕಗಳಲ್ಲಿ “ಹಿಂದೂ ವಿಜಯಗಳನ್ನು” ಒತ್ತಿಹೇಳಲು ಸಮಿತಿಯು ಸೂಚಿಸಿದೆ.</p>



<p>ಸಂವಿಧಾನದ ಅನುಚ್ಛೇದ 1 (1) ಈಗಾಗಲೇ “ಭಾರತ, ಅಂದರೆ ಭಾರತ, ರಾಜ್ಯಗಳ ಒಕ್ಕೂಟವಾಗಿರುತ್ತದೆ” ಎಂದು ಹೇಳುತ್ತದೆ.</p>



<p>ಭಾರತ್ ಎಂಬುದು ಬಹಳ ಹಳೆಯ ಹೆಸರು. 7,000 ವರ್ಷಗಳಷ್ಟು ಹಳೆಯದಾದ ವಿಷ್ಣು ಪುರಾಣದಂತಹ ಪ್ರಾಚೀನ ಗ್ರಂಥಗಳಲ್ಲಿ ಭಾರತ ಎಂಬ ಹೆಸರಿನ ಬಳಕೆಯನ್ನು ಉಲ್ಲೇಖಿಸಲಾಗಿದೆ ಎಂದು ಐಸಾಕ್ ಹೇಳಿದರು.</p>



<p>“ಈಸ್ಟ್ ಇಂಡಿಯಾ ಕಂಪನಿಯ ಸ್ಥಾಪನೆ ಮತ್ತು 1757 ರಲ್ಲಿ ಪ್ಲಾಸಿ ಯುದ್ಧದ ನಂತರವೇ ಭಾರತ ಎಂಬ ಪದವನ್ನು ಸಾಮಾನ್ಯವಾಗಿ ಬಳಸಲು ಪ್ರಾರಂಭಿಸಿತು” ಎಂದು ಅವರು ಹೇಳಿದರು. ಆದ್ದರಿಂದ, ಎಲ್ಲಾ ತರಗತಿಗಳ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳಲ್ಲಿ ‘ಭಾರತ್’ ಹೆಸರನ್ನು ಬಳಸಬೇಕೆಂದು ಸಮಿತಿಯು ಸರ್ವಾನುಮತದಿಂದ ಶಿಫಾರಸು ಮಾಡಿದೆ ಎಂದು ಐಸಾಕ್ ಹೇಳಿದರು.</p>
]]></content:encoded>
					
		
		
			</item>
		<item>
		<title>ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕುಸಿತ: USCIRF ಕಳವಳ</title>
		<link>https://peepalmedia.com/declining-religious-freedom-in-india-uscirf-worried/</link>
		
		<dc:creator><![CDATA[Charan Aivarnad]]></dc:creator>
		<pubDate>Wed, 04 Oct 2023 12:13:35 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[ವಿದೇಶ]]></category>
		<category><![CDATA[America]]></category>
		<category><![CDATA[bengalure]]></category>
		<category><![CDATA[Bharath]]></category>
		<category><![CDATA[communailism]]></category>
		<category><![CDATA[communal issues]]></category>
		<category><![CDATA[fascism]]></category>
		<category><![CDATA[india]]></category>
		<category><![CDATA[joe bide]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Religious Freedom]]></category>
		<category><![CDATA[state politics]]></category>
		<category><![CDATA[The United States Commission on International Religious Freedom]]></category>
		<category><![CDATA[Trending]]></category>
		<category><![CDATA[united states]]></category>
		<category><![CDATA[US congress]]></category>
		<category><![CDATA[USCIRF]]></category>
		<category><![CDATA[writing]]></category>
		<guid isPermaLink="false">https://peepalmedia.com/?p=29015</guid>

					<description><![CDATA[ಬೆಂಗಳೂರು,ಅಕ್ಟೋಬರ್‌.4: ಯುನೈಟೆಡ್ ಸ್ಟೇಟ್ಸ್ ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ (The United States Commission on International Religious Freedom &#8211; USCIRF) &#8220;ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಪರಿಸ್ಥಿತಿ ಗಮನಾರ್ಹವಾಗಿ ಕುಸಿದಿದೆ&#8221; ಎಂದು ಕಳವಳ ವ್ಯಕ್ತಪಡಿಸಿದೆ. ಸೆಪ್ಟೆಂಬರ್ 20 ರಂದು Advancing Religious Freedom within the US – India Bilateral Relationship ನ ಸಂದರ್ಭದಲ್ಲಿ USCIRF ಭಾರತದಲ್ಲಿ &#8220;ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ತಾರತಮ್ಯ ನೀತಿಗಳ&#8221; ಜಾರಿಯನ್ನು ಎತ್ತಿ ತೋರಿಸಿ ಪತ್ರಿಕಾ [&#8230;]]]></description>
										<content:encoded><![CDATA[
<p><strong>ಬೆಂಗಳೂರು,ಅಕ್ಟೋಬರ್‌.4:</strong> ಯುನೈಟೆಡ್ ಸ್ಟೇಟ್ಸ್ ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ (<a href="https://www.uscirf.gov/" data-type="link" data-id="https://www.uscirf.gov/">The United States Commission on International Religious Freedom</a> &#8211; USCIRF) &#8220;<a href="https://www.uscirf.gov/events/hearings/advancing-religious-freedom-within-us-india-bilateral-relationship-1" data-type="link" data-id="https://www.uscirf.gov/events/hearings/advancing-religious-freedom-within-us-india-bilateral-relationship-1">ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಪರಿಸ್ಥಿತಿ ಗಮನಾರ್ಹವಾಗಿ ಕುಸಿದಿದೆ</a>&#8221; ಎಂದು ಕಳವಳ ವ್ಯಕ್ತಪಡಿಸಿದೆ.</p>



<p>ಸೆಪ್ಟೆಂಬರ್ 20 ರಂದು Advancing Religious Freedom within the US – India Bilateral Relationship ನ ಸಂದರ್ಭದಲ್ಲಿ USCIRF ಭಾರತದಲ್ಲಿ &#8220;ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ತಾರತಮ್ಯ ನೀತಿಗಳ&#8221; ಜಾರಿಯನ್ನು ಎತ್ತಿ ತೋರಿಸಿ <a href="https://www.uscirf.gov/news-room/releases-statements/uscirf-reiterates-concerns-religious-freedom-india-calls-release" data-type="link" data-id="https://www.uscirf.gov/news-room/releases-statements/uscirf-reiterates-concerns-religious-freedom-india-calls-release">ಪತ್ರಿಕಾ ಹೇಳಿಕೆ</a>ಯನ್ನು ನೀಡಿದೆ.</p>



<p>USCIRF &nbsp;ವಿದೇಶಗಳಲ್ಲಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ವಿಶ್ಲೇಷಿಸಿ ವರದಿ ಮಾಡಲು ಯುನೈಟೆಡ್‌ ಸ್ಟೇಟ್‌ ಕಾಂಗ್ರೆಸ್ ಸ್ಥಾಪಿಸಿರುವ ಸ್ವತಂತ್ರ ಹಾಗೂ ಉಭಯಪಕ್ಷೀಯ ಫೆಡರಲ್ ಸರ್ಕಾರಿ ಸಂಸ್ಥೆಯಾಗಿದೆ. ಮತೀಯ ಹಿಂಸಾಚಾರ ತಡೆಯಲು ಮತ್ತು ಧರ್ಮ ಹಾಗೂ ನಂಬಿಕೆಯ ಸ್ವಾತಂತ್ರ್ಯವನ್ನು ರಕ್ಷಿಸುವ ಉದ್ದೇಶದಿಂದ ಇದು ಅಧ್ಯಕ್ಷರು, ರಾಜ್ಯ ಕಾರ್ಯದರ್ಶಿ ಮತ್ತು ಕಾಂಗ್ರೆಸ್‌ಗೆ ವಿದೇಶಾಂಗ ನೀತಿ ಶಿಫಾರಸುಗಳನ್ನು ಮಾಡುತ್ತದೆ.</p>



<p>ಸೆಪ್ಟೆಂಬರ್ 20 ರಂದು ನಡೆದ &nbsp;&#8220;ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಜಾರಿಗೊಂಡ ತಾರತಮ್ಯ ನೀತಿಗಳ&#8221; ಬಗೆಗಿನ ಚರ್ಚೆಯಲ್ಲಿ ಹರಿಯಾಣದ ನುಹ್‌ನಲ್ಲಿನ ಇತ್ತೀಚಿಗೆ ನಡೆದ ಹಿಂಸಾಚಾರ ಮತ್ತು ಮಣಿಪುರ ಹಿಂಸಾಚಾರಗಳ ಬಗ್ಗೆ ವಿಚಾರಣೆ ನಡೆಸಲಾಯಿತು. &nbsp;ಇದರಲ್ಲಿ ಭಾಗವಹಿಸಿದವರು ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಮತ್ತು ಮಾನವ ಹಕ್ಕುಗಳ ಕಾಪಾಡಲು &nbsp;ದೇಶದಲ್ಲಿ ಕೆಲಸ ಮಾಡಲು ಯುನೈಟೆಡ್‌ ಸ್ಟೇಟ್‌ಗೆ ನೀತಿಗಳನ್ನು ನೀಡಿದರು.</p>



<p><strong>ವಿಡಿಯೋ: </strong><a href="https://youtu.be/-qIJ-pew2ZI" data-type="link" data-id="https://youtu.be/-qIJ-pew2ZI">U.S. Commission on International Religious Freedom Hearing</a></p>



<p>&#8220;ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಪರಿಸ್ಥಿತಿಗಳು ಗಮನಾರ್ಹವಾಗಿ ಕುಸಿದಿವೆ&#8221; ಎಂದು USCIRF ಅಧ್ಯಕ್ಷ <a href="https://www.uscirf.gov/abraham-cooper" data-type="link" data-id="https://www.uscirf.gov/abraham-cooper">ಅಬ್ರಹಾಂ ಕೂಪರ್</a> ಹೇಳಿದ್ದಾರೆ. “ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರು, ದಲಿತರು ಮತ್ತು ಆದಿವಾಸಿಗಳು ಹೆಚ್ಚಿದ ಮಟ್ಟದ ದಾಳಿಗಳು ಮತ್ತು ಬೆದರಿಕೆ ಮೊದಲಾದ ಕೃತ್ಯಗಳನ್ನು ಎದುರಿಸುತ್ತಿದ್ದಾರೆ. ಅಧಿಕಾರ ಹೊಂದಿರುವವರು ಅಲ್ಪಸಂಖ್ಯಾತರ ಧ್ವನಿಗಳನ್ನು ಮತ್ತು ಅವರ ಪರವಾಗಿ ವಕಾಲತ್ತು ವಹಿಸುವವರನ್ನು ಹತ್ತಿಕ್ಕುವ ಕೆಲಸವನ್ನು ಮುಂದುವರೆಸಿದ್ದಾರೆ. ಈ ಪ್ರವೃತ್ತಿ ಅಮೇರಿಕಾದ ವಿದೇಶಾಂಗ ನೀತಿಯ ಮೇಲೆ ಬೀರುವ ಪರಿಣಾಮಗಳನ್ನು ನಿರ್ಲಕ್ಷಿಸಲಾಗದು,” ಎಂದಿದ್ದಾರೆ.</p>



<p>ಭಾರತದಲ್ಲಿನ ಧಾರ್ಮಿಕ ಕಾರಣಗಳಿಗೆ ಬಂಧನಕ್ಕೆ ಒಳಗಾದವರನ್ನು ಬಿಡುಗಡೆ ಮಾಡುವಂತೆ USನ ಈ ಸಂಸ್ಥೆ ಕರೆ ನೀಡಿದೆ. USCIRF ನ <a href="https://www.uscirf.gov/victims-list/" data-type="link" data-id="https://www.uscirf.gov/victims-list/">Frank R. Wolf Freedom of Religion or Belief Victims List</a>ನ ಡೇಟಾಬೇಸ್ ಪ್ರಕಾರ, ಅನ್ಯ ನಂಬಿಕೆಗಳನ್ನು ಹೊಂದಿರುವ ಒಟ್ಟು 37 ವ್ಯಕ್ತಿಗಳನ್ನು &nbsp;ಜೈಲಿಗೆ ಹಾಕಲಾಗಿದೆ.</p>



<p>ಈ ಚರ್ಚೆಯಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹದಗೆಡುತ್ತಿರುವುದನ್ನು ವಿರೋಧಿಸಿ ಜೈಲು ಪಾಲಾಗಿರುವ ಮೀರಾನ್ ಹೈದರ್ ಮತ್ತು ರೂಪೇಶ್ ಸಿಂಗ್ ಅವರ ಬಗ್ಗೆ ಚರ್ಚೆ ನಡೆಸಲಾಗಿದೆ. &nbsp;</p>



<p><strong>ವಿಚಾರಣೆಯನ್ನು ಇಲ್ಲಿ ಓದಿ:</strong> <a href="https://www.uscirf.gov/sites/default/files/India%20Hearing%20Transcript.pdf" data-type="link" data-id="https://www.uscirf.gov/sites/default/files/India%20Hearing%20Transcript.pdf">Advancing Religious Freedom within the U.S. &#8211; India Bilateral Relationship</a></p>



<p>ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಯುವ ನಾಯಕ <a href="https://thewire.in/rights/delhi-riots-fir-meeran-haider" data-type="link" data-id="https://thewire.in/rights/delhi-riots-fir-meeran-haider">ಮೀರಾನ್ ಹೈದರ್‌</a>ರನ್ನು ಫೆಬ್ರವರಿ 2020 ರಂದು ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ದೆಹಲಿ ಪೊಲೀಸರು ಬಂಧಿಸಿದ್ದರು. <a href="https://thewire.in/video/watch-was-independent-journalist-rupesh-kumar-singh-arrested-for-his-reportage" data-type="link" data-id="https://thewire.in/video/watch-was-independent-journalist-rupesh-kumar-singh-arrested-for-his-reportage">ರೂಪೇಶ್ ಸಿಂಗ್ </a>ಎಂಬ ಸ್ವತಂತ್ರ ಪತ್ರಕರ್ತನನ್ನು ಕಾನೂನುಬಾಹಿರವಾಗಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ನೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ಜುಲೈ 17, 2022 ರಂದು ಜಾರ್ಖಂಡ್ ಪೊಲೀಸರು ಬಂಧಿಸಿದ್ದರು.</p>



<p>“ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಶಾಂತಿಯುತ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದ ಹೈದರ್‌ರನ್ನು ಕಾನೂನುಬಾಹಿರ ಚಟುವಟಿಕೆಗಳು (ತಡೆ) ಕಾಯ್ದೆಯ (Unlawful Activities (Prevention) Act- UAPA) ಅಡಿಯಲ್ಲಿ ಬಂಧಿಸಲಾಗಿದೆ. ರಾಜ್ಯದಲ್ಲಿ ನಡೆಯುತ್ತಿದ್ದ ಹಿಂಸಾಚಾರ ಮತ್ತು ಆದಿವಾಸಿಗಳ ವಿರುದ್ಧದ ತಾರತಮ್ಯದ ಬಗ್ಗೆ ವರದಿ ಮಾಡಿ ಸಿಂಗ್‌ ಹೆಸರನ್ನು ಗಳಿಸಿದ್ದರು. &nbsp;ಜುಲೈ 2022 ರಿಂದ ಅವರನ್ನು ಯುಎಪಿಎ ಅಡಿಯಲ್ಲಿ ಬಂಧಿಸಲಾಗಿದೆ” ಎಂದು USCIRF ಉಪಾಧ್ಯಕ್ಷ ಫ್ರೆಡ್ರಿಕ್ ಎ ಡೇವಿ ಹೇಳಿದ್ದಾರೆ.</p>



<p><strong>ಇದನ್ನೂ ಓದಿ:</strong> <strong><a href="https://peepalmedia.com/raid-on-newsclick-journalists-by-delhi-police/" data-type="link" data-id="https://peepalmedia.com/raid-on-newsclick-journalists-by-delhi-police/">ಸಾಲು ಸಾಲು ಪತ್ರಕರ್ತರ ಮನೆಗಳ ಮೇಲೆ ದಾಳಿ &#8211; ಬಂಧನ! ಏನಾಗುತ್ತಿದೆ?</a></strong></p>



<p>USCIRF ಈ ಪ್ರಕರಣಗಳನ್ನು ತನಿಖೆ ನಡೆಸಿ, ಎಲ್ಲಾ ಕೈದಿಗಳನ್ನು ಮತ್ತು ಅವರ ಧರ್ಮ ಅಥವಾ ನಂಬಿಕೆಯನ್ನು ಶಾಂತಿಯುತವಾಗಿ ವ್ಯಕ್ತಪಡಿಸಿದ್ದಕ್ಕಾಗಿ ಬಂಧಿತರಾದವರನ್ನು ಬಿಡುಗಡೆ ಮಾಡಲು ಭಾರತ ಸರ್ಕಾರಕ್ಕೆ ಕರೆ ನೀಡಿದೆ ಎಂದು.</p>



<p>ಜೂನ್ 2020 ರಿಂದ &nbsp;USCIRF ಮೋದಿ ಸರ್ಕಾರದ ಅವಧಿಯಲ್ಲಿ ನಡೆಯುತ್ತಿರುವ ಧಾರ್ಮಿಕ ಸ್ವಾತಂತ್ರ್ಯದ ಅತಿರೇಕದ ಉಲ್ಲಂಘನೆಗಳಿಗಾಗಿ ಭಾರತವನ್ನು &#8220;ನಿರ್ದಿಷ್ಟ ಕಾಳಜಿಯ ದೇಶ &#8211; Country of Particular Concern &#8221; ಎಂದು ಗುರುತಿಸಲು ಅಧ್ಯಕ್ಷ ಜೋ ಬಿಡನ್ ಅವರಿಗೆ ಕರೆ ನೀಡುತ್ತಾ ಬಂದಿದೆ. ಈ ವರ್ಷ ಮೇ ತಿಂಗಳಲ್ಲಿ, ಸತತ ನಾಲ್ಕನೇ ವರ್ಷಕ್ಕೆ ಅಮೇರಿಕಾ ಭಾರತವನ್ನು &#8216;ನಿರ್ದಿಷ್ಟ ಕಾಳಜಿಯ ದೇಶ&#8217; ಎಂದು ಗುರುತಿಸಬೇಕು &nbsp;ಎಂಬ ಸಲಹೆಯನ್ನು ನೀಡಿದೆ.</p>
]]></content:encoded>
					
		
		
			</item>
		<item>
		<title>ಮರುನಾಮಕರಣ : &#8216;ಇಂಡಿಯಾ&#8217; (India) ಹೆಸರನ್ನು ತನ್ನದಾಗಿಸಿಕೊಳ್ಳುತ್ತಾ ಪಾಕಿಸ್ತಾನ?</title>
		<link>https://peepalmedia.com/renaming-pakistan-adopting-the-name-of-india/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 06 Sep 2023 05:16:04 +0000</pubDate>
				<category><![CDATA[ದೇಶ]]></category>
		<category><![CDATA[Bharath]]></category>
		<category><![CDATA[india]]></category>
		<category><![CDATA[Pakistan]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Rename]]></category>
		<guid isPermaLink="false">https://peepalmedia.com/?p=27250</guid>

					<description><![CDATA[&#8216;ಇಂಡಿಯಾ&#8217; ಹೆಸರನ್ನು ಭಾರತ್ ಎಂದು ಮರುನಾಮಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿರುವ ಬೆನ್ನಲ್ಲೇ, ಮುಂದೆ ಆಗಬಹುದಾದ ಪರಿಣಾಮದ ಬಗ್ಗೆ ಹೊಸ ಚರ್ಚೆಯೊಂದು ಹುಟ್ಟಿದೆ. ಈ ಬಗ್ಗೆ ದಕ್ಷಿಣ ಏಷ್ಯಾ ಇಂಡೆಕ್ಸ್ ತನ್ನ ಟ್ವಿಟ್ಟರ್ ನಲ್ಲಿ ಇದರ ದುಷ್ಪರಿಣಾಮ ಮತ್ತು ಭಾರತಕ್ಕೆ ಈ ಬಗ್ಗೆ ಎದುರಾಗುವ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದೆ. ದಕ್ಷಿಣ ಏಷ್ಯಾ ಇಂಡೆಕ್ಸ್‌ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ &#8220;ಇಂಡಿಯಾ ಯುಎನ್ ಮಟ್ಟದಲ್ಲಿ ಅಧಿಕೃತವಾಗಿ &#8220;ಇಂಡಿಯಾ&#8221; ಹೆಸರನ್ನು ರದ್ದುಗೊಳಿಸಿದರೆ ಪಾಕಿಸ್ತಾನವು ಅದರ [&#8230;]]]></description>
										<content:encoded><![CDATA[
<p>&#8216;ಇಂಡಿಯಾ&#8217; ಹೆಸರನ್ನು ಭಾರತ್ ಎಂದು ಮರುನಾಮಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿರುವ ಬೆನ್ನಲ್ಲೇ, ಮುಂದೆ ಆಗಬಹುದಾದ ಪರಿಣಾಮದ ಬಗ್ಗೆ ಹೊಸ ಚರ್ಚೆಯೊಂದು ಹುಟ್ಟಿದೆ. ಈ ಬಗ್ಗೆ ದಕ್ಷಿಣ ಏಷ್ಯಾ ಇಂಡೆಕ್ಸ್ ತನ್ನ ಟ್ವಿಟ್ಟರ್ ನಲ್ಲಿ ಇದರ ದುಷ್ಪರಿಣಾಮ ಮತ್ತು ಭಾರತಕ್ಕೆ ಈ ಬಗ್ಗೆ ಎದುರಾಗುವ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದೆ.</p>



<p>ದಕ್ಷಿಣ ಏಷ್ಯಾ ಇಂಡೆಕ್ಸ್‌ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ &#8220;ಇಂಡಿಯಾ ಯುಎನ್ ಮಟ್ಟದಲ್ಲಿ ಅಧಿಕೃತವಾಗಿ &#8220;ಇಂಡಿಯಾ&#8221; ಹೆಸರನ್ನು ರದ್ದುಗೊಳಿಸಿದರೆ ಪಾಕಿಸ್ತಾನವು ಅದರ ಮೇಲೆ ಹಕ್ಕು ಸಾಧಿಸಬಹುದು.&#8221; ಎಂದು ತನ್ನ ಖಾತೆಯಲ್ಲಿ ಬರೆದುಕೊಂಡಿದೆ‌.</p>



<p>&#8220;ಪಾಕಿಸ್ತಾನದ ರಾಷ್ಟ್ರೀಯವಾದಿಗಳು ಸಿಂಧೂ ಪ್ರದೇಶದ ಜನರು ನಾವು ಎಂದು ಉಲ್ಲೇಖಿಸುವುದರಿಂದ ಪಾಕಿಸ್ತಾನಕ್ಕೂ &#8216;ಇಂಡಿಯಾ&#8217; ಹೆಸರಿನ ಮೇಲೆ ಹಕ್ಕುಗಳಿವೆ ಎಂದು ಬಹಳ ಹಿಂದಿನಿಂದಲೂ ವಾದಿಸಿದ್ದಾರೆ.&#8221;</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">Just IN:— Pakistan may lay claim on name &quot;India&quot; if India derecongnises it officially at UN level. &#8211; local media<br><br>— Nationalists in Pakistan have long argued that Pakistan has rights on the name as it refers to Indus region in 🇵🇰.</p>&mdash; South Asia Index (@SouthAsiaIndex) <a href="https://twitter.com/SouthAsiaIndex/status/1699043065669751118?ref_src=twsrc%5Etfw">September 5, 2023</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಇದೇ ಟ್ವಿಟ್ಟರ್ ಹ್ಯಾಂಡಲ್ ನ ಹಿಂದಿನ ಟ್ವೀಟ್‌ನಲ್ಲಿ &#8216;ಭಾರತ ಸರ್ಕಾರವು ಭಾರತವನ್ನು &#8220;ಅವಸಾಹತೀಕರಣ&#8221; ಮಾಡುವ ಪ್ರಯತ್ನದಲ್ಲಿ ಭಾರತದ ಹೆಸರನ್ನು ಇಂಡಿಯಾದಿಂದ ಭಾರತಕ್ಕೆ ಬದಲಾಯಿಸಲು ಸಿದ್ಧವಾಗಿದೆ ಎಂದು ಹೇಳಿಕೊಂಡಿದೆ.</p>



<p>ಅಷ್ಟೇ ಅಲ್ಲದೆ &#8216;ಇದು ಸಂಸ್ಕೃತ ಭಾಷೆಯ ಬೇರು ಹೊಂದಿರುವ ಹಿನ್ನೆಲೆಯಲ್ಲಿ ಹಾಗೂ ಇದು ಮಧ್ಯಕಾಲೀನ ಯುಗದ ರಾಜನ ಹೆಸರನ್ನು ಹೊಂದಿರುವ ಹಿನ್ನೆಲೆಯಲ್ಲಿ ಈ ಹೆಸರು ಇಡಲು ಕಾರಣವಿರಬಹುದು&#8217; ಎಂದೂ ಸಹ ಹೇಳಿಕೊಂಡಿದೆ‌.</p>



<p>ಸಿಂಧೂ ನದಿ ತಟದಲ್ಲಿ ವಾಸಿಸುವ ಜನರೆಂದು ಕರೆಯಲ್ಪಡುವ ಜನರನ್ನು ವಾಸಸ್ಥಾನಕ್ಕೆ &#8216;India&#8217; ಎಂಬ ಹೆಸರಿನಿಂದ ಕರೆಯಲಾಗುತ್ತದೆ ಎಂಬ ವಾದ ಹಿಂದಿನಿಂದಲೂ ಇದೆ. ಈ ಹಿನ್ನೆಲೆಯಲ್ಲಿ ಸಿಂಧೂ ನದಿಯ ಬಹುಭಾಗ ಪಾಕಿಸ್ತಾನದಲ್ಲಿ ಹರಿಯುತ್ತಿರುವ ಕಾರಣ ಪಾಕಿಸ್ತಾನ &#8216;India&#8217; ಹೆಸರಿನ ಮೇಲೆ ಹೆಚ್ಚಿನ ಭಾಗ ಹಕ್ಕು ಸಾಧಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.</p>



<p>ಸ್ವಾತಂತ್ರ್ಯ ಪೂರ್ವದಲ್ಲಿ ಮೊಹಮ್ಮದ್ ಅಲಿ ಜಿನ್ನಾ ಅವರು ಹೊಸದಾಗಿ ಸ್ವತಂತ್ರ ದೇಶಕ್ಕೆ &#8220;ಇಂಡಿಯಾ&#8221; ಅನ್ನು ಅದರ ಹೆಸರಾಗಿ ಬ್ರಿಟಿಷ್ ಇಂಡಿಯಾ ಅಳವಡಿಸಿಕೊಳ್ಳುವುದನ್ನು ವಿರೋಧಿಸಿದ್ದರು ಮತ್ತು ಬದಲಿಗೆ ಹಿಂದೂಸ್ತಾನ್ ಅಥವಾ ಭಾರತ ಎಂದು ಇಡುವುದಾಗಿ ಸೂಚಿಸಿದ್ದರು. ಇದೂ ಸಹ ಈ ಹೆಸರಿನ ಹಿಂದೆ ಪಾಕಿಸ್ತಾನ ಹಕ್ಕು ಸಾಧಿಸುವ ಸಾಧ್ಯತೆಯನ್ನು ಹೊಂದಿದೆ.</p>



<p>ಗಮನಿಸಬೇಕಾದ ಅಂಶವೆಂದರೆ ದೇಶದ ಹೆಸರನ್ನು ಬದಲಾಯಿಸುವ ಬಗ್ಗೆ ಭಾರತ ಸರ್ಕಾರ (Governement of India) ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.</p>



<p>ಇನ್ನು ಈ ಹೆಸರು ಬದಲಾವಣೆ ಒಂದು ಅನವಶ್ಯಕ ವಿಚಾರ ಎಂದು ಬಣ್ಣಿಸಿರುವ ಅನೇಕರು, ಕೇಂದ್ರ ಸರ್ಕಾರ ಅಭಿವೃದ್ಧಿ ವಿಚಾರದ ಬಗೆಗಿನ ಚರ್ಚೆಯನ್ನು ಹಾದಿ ತಪ್ಪಿಸಲು ಇಂತಹ ಚರ್ಚೆ ಹುಟ್ಟು ಹಾಕಿದೆ ಎಂದಿದ್ದಾರೆ. ಜೊತೆಗೆ ಇದರಿಂದ ಭಾರತೀಯರು ತಮ್ಮ ಮೂಲ ದಾಖಲೆಗಳಾದ ಆಧಾರ್, PAN card, ಸೇರಿದಂತೆ RBI, ಪಾಸ್ಪೋರ್ಟ್ ನಂತಹ ದಾಖಲೆಗಳ ಬದಲಾವಣೆ ವಿಚಾರದಲ್ಲಿ ತೀರಾ ಕೆಟ್ಟ ಪರಿಣಾಮ ಎದುರಿಸುವ ಸಾಧ್ಯತೆ ಇದೆ ಎಂಬ ಚರ್ಚೆ ಶುರುವಾಗಿದೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">Since BJP has changed name from India to old Bharat, So all these documents will be invalid? <a href="https://t.co/BR6sBCtYZ3">pic.twitter.com/BR6sBCtYZ3</a></p>&mdash; KRK (@kamaalrkhan) <a href="https://twitter.com/kamaalrkhan/status/1699139001792487588?ref_src=twsrc%5Etfw">September 5, 2023</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಜೊತೆಗೆ ಮರುನಾಮಕರಣ ಆಗಿದ್ದೇ ಆದರೆ ಪಾಕಿಸ್ತಾನ India ಹೆಸರಿನ ಮೇಲೆ ಹಕ್ಕು ಸಾಧಿಸುತ್ತದೆ. ಆ ನಂತರ ದಾಖಲೆ ಬದಲಾವಣೆಯ ಗೊಂದಲ ಭಾರತದ ಆರ್ಥಿಕತೆ ಮೇಲೂ ಭಯಾನಕ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದು ಭಾರತದಲ್ಲಿ ನೋಟು ಅಮಾನ್ಯೀಕರಣ (Demonetization) ಸಂದರ್ಭದಲ್ಲಿ ಆದ ದುಷ್ಪರಿಣಾಮದ ಹತ್ತು ಪಟ್ಟು ಕೆಟ್ಟ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ.</p>
]]></content:encoded>
					
		
		
			</item>
	</channel>
</rss>
