<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>bigg boss &#8211; Peepal Media</title>
	<atom:link href="https://peepalmedia.com/tag/bigg-boss/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 07 Dec 2023 13:05:40 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>bigg boss &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಬಿಗ್ ಬಾಸ್ ಸ್ಪರ್ಧಿಗಳಿಗೆ ಗಾಯ! ಸರಣಿಯಿಂದ ಹೊರಗುಳಿಯುತ್ತಾರಾ ಸಂಗೀತ ಶೃಂಗೇರಿ, ಪ್ರತಾಪ್?</title>
		<link>https://peepalmedia.com/will-sangeet-sringeri-pratap-leave-the-series/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 07 Dec 2023 13:05:00 +0000</pubDate>
				<category><![CDATA[ಸಿನಿಮಾ]]></category>
		<category><![CDATA[bigg boss]]></category>
		<category><![CDATA[Drone Pratap]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Sangeetha Sringeri]]></category>
		<guid isPermaLink="false">https://peepalmedia.com/?p=33466</guid>

					<description><![CDATA[ಬಿಗ್ ಬಾಸ್ ಸರಣಿಯಲ್ಲಿ ಈ ಬಾರಿಯ ಕನ್ನಡದ ಬಿಗ್ ಬಾಸ್ 10 ವಿವಾದಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದೆ. ಶುರುವಿನಲ್ಲಿ ಹುಲಿಯುಗುರು ಧರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ತೂರು ಸಂತೋಷ್ ಜೈಲಿಗೆ ಹೋಗಿ ಬಂದರೆ, ಇನ್ನೊಂದು ದಿನ ಜಾತಿ ನಿಂದನೆ ಆರೋಪದ ಅಡಿಯಲ್ಲಿ ನಟಿ ತನಿಶಾ ಕುಪ್ಪಂಡ ಹೆಚ್ಚು ಸುದ್ದಿ ಮಾಡಿದ್ದರು. ಆ ವಿವಾದಗಳ ನಂತರ ಈಗ ಬಿಗ್ ಬಾಸ್ ನಲ್ಲಿ ನಡೆಯುತ್ತಿರುವ ಟಾಸ್ಕ್ ನಲ್ಲಿ ನಟಿ ಸಂಗೀತಾ ಶೃಂಗೇರಿ ಹಾಗೂ ಡ್ರೋನ್ ಪ್ರತಾಪ್ ಗೆ ಗಂಭೀರ ಗಾಯಗಳಾದ ಕಾರಣ [&#8230;]]]></description>
										<content:encoded><![CDATA[
<p>ಬಿಗ್ ಬಾಸ್ ಸರಣಿಯಲ್ಲಿ ಈ ಬಾರಿಯ ಕನ್ನಡದ ಬಿಗ್ ಬಾಸ್ 10 ವಿವಾದಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದೆ. ಶುರುವಿನಲ್ಲಿ ಹುಲಿಯುಗುರು ಧರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ತೂರು ಸಂತೋಷ್ ಜೈಲಿಗೆ ಹೋಗಿ ಬಂದರೆ, ಇನ್ನೊಂದು ದಿನ ಜಾತಿ ನಿಂದನೆ ಆರೋಪದ ಅಡಿಯಲ್ಲಿ ನಟಿ ತನಿಶಾ ಕುಪ್ಪಂಡ ಹೆಚ್ಚು ಸುದ್ದಿ ಮಾಡಿದ್ದರು.</p>



<p>ಆ ವಿವಾದಗಳ ನಂತರ ಈಗ ಬಿಗ್ ಬಾಸ್ ನಲ್ಲಿ ನಡೆಯುತ್ತಿರುವ ಟಾಸ್ಕ್ ನಲ್ಲಿ ನಟಿ ಸಂಗೀತಾ ಶೃಂಗೇರಿ ಹಾಗೂ ಡ್ರೋನ್ ಪ್ರತಾಪ್ ಗೆ ಗಂಭೀರ ಗಾಯಗಳಾದ ಕಾರಣ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.</p>



<p>ಟಾಸ್ಕ್ ನಲ್ಲಿ ಇಬ್ಬರಿಗೂ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಗಾಳಿ ಸುದ್ದಿ ಈಗ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಬಿಗ್ ಬಾಸ್ ತಂಡದ ಕಡೆಯಿಂದ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.</p>



<p>ಈ ನಡುವೆ ಬಿಗ್ ಬಾಸ್ ನಲ್ಲಿ ಎರಡು ಗುಂಪುಗಳಾಗಿದ್ದು, ತಂಡದ ಸದಸ್ಯರ ನಡುವೆ ಕೈಕೈ ಮಿಲಾಯಿಸುವ ಹಂತಕ್ಕೆ, ಅವಾಚ್ಯ ಶಬ್ದಗಳಿಂದ ನಿಂದಿಸುವ ಮಟ್ಟಕ್ಕೆ ಈಗ ಬಿಗ್ ಬಾಸ್ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಗದರಿಸುವುದು, ತಳ್ಳಾಟ, ನೂಕಾಟ, ಹೆಣ್ಣು ಮಕ್ಕಳ ನಿಂಧನೆ, ವಯಕ್ತಿಕ ವಿಚಾರದ ಬಗ್ಗೆ ವಿವಾದಿತ ಚರ್ಚೆಯ ಕಾರಣಕ್ಕೆ ಈ ಬಾರಿಯ ಬಿಗ್ ಬಾಸ್ ಹೆಚ್ಚು ಸುದ್ದಿಯಲ್ಲಿದೆ.</p>



<p>ಕೆಲವೇ ದಿನಗಳ ಹಿಂದೆ ನಟಿ ಕಾವ್ಯ ಶಾಸ್ತ್ರಿ ಬಿಗ್ ಬಾಸ್ ನೋಡದೇ ಇದ್ದರೆ ಒಳಿತು, ಅಷ್ಟೆ ಅಲ್ಲದೆ ಚಿಕ್ಕ ಮಕ್ಕಳಿಗೆ ಈ ಬಾರಿಯ ಬಿಗ್ ಬಾಸ್ ತೋರಿಸಿದರೆ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಈ ಬಾರಿ ಬಿಗ್ ಬಾಸ್ ನಿರಾಸೆ ಮೂಡಿಸಿದೆ ಎಂದು ಸ್ವತಃ ಬಿಗ್ ಬಾಸ್ ಹಿಂದಿನ ಸರಣಿಯಲ್ಲಿ ಸ್ಪರ್ಧಿಯೂ ಆಗಿದ್ದ ಕಾವ್ಯ ಶಾಸ್ತ್ರಿ ಹೇಳಿದ್ದರು.</p>
]]></content:encoded>
					
		
		
			</item>
		<item>
		<title>ಜಾತಿ ನಿಂದನೆ : ಬಿಗ್ ಬಾಸ್ ಸ್ಪರ್ಧಿ ತನಿಶಾ ವಿರುದ್ಧ FIR ದಾಖಲಿಸಿದ ಪೊಲೀಸರು</title>
		<link>https://peepalmedia.com/bigg-boss-contestant-tanisha-is-being-interrogated-by-the-police/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 14 Nov 2023 13:43:53 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[bigg boss]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Tanisha Kuppanda]]></category>
		<guid isPermaLink="false">https://peepalmedia.com/?p=32107</guid>

					<description><![CDATA[ಕನ್ನಡದ ಬಿಗ್ ಬಾಸ್ ಸೀಜನ್ 10 ಈ ಬಾರಿ ಒಂದಿಲ್ಲೊಂದು ವಿಚಾರದಲ್ಲಿ ಹೆಚ್ಚು ಸುದ್ದಿಯಾಗಿದೆ. ಇಲ್ಲಿಯವರೆಗೆ ಬಿಗ್ ಬಾಸ್ ಮನೆಯ ಒಳಗಿನ ಕೆಲವು ವಿಚಾರಕ್ಕೆ ಸುದ್ದಿಯಾದರೆ, ಈ ಬಾರಿ ಮನೆಯ ಹೊರಗೆ ಆದ ವಿವಾದಗಳಿಗೆ ಹೆಚ್ಚು ಸುದ್ದಿಯಾಗುತ್ತಿದೆ. ಹುಲಿಯುಗುರು ಪ್ರಕರಣಕ್ಕೆ ವರ್ತೂರು ಸಂತೋಷ್ ಅರೆಸ್ಟ್ ಆದರೆ ಈಗ ಜಾತಿ ನಿಂದನೆಯ ಆರೋಪಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಸ್ಪರ್ಧಿ ತನಿಶಾ ವಿರುದ್ಧ FIR ದಾಖಲಾಗಿದೆ, ಹಾಗೂ ಪ್ರತಾಪ್ ಮೇಲೆ ಪ್ರಕರಣ ದಾಖಲಾಗಿ ವಿಚಾರಣೆ ಎದುರಿಸಿದ್ದಾರೆ. ಆ ಮೂಲಕ ಬಿಗ್ [&#8230;]]]></description>
										<content:encoded><![CDATA[
<p>ಕನ್ನಡದ ಬಿಗ್ ಬಾಸ್ ಸೀಜನ್ 10 ಈ ಬಾರಿ ಒಂದಿಲ್ಲೊಂದು ವಿಚಾರದಲ್ಲಿ ಹೆಚ್ಚು ಸುದ್ದಿಯಾಗಿದೆ. ಇಲ್ಲಿಯವರೆಗೆ ಬಿಗ್ ಬಾಸ್ ಮನೆಯ ಒಳಗಿನ ಕೆಲವು ವಿಚಾರಕ್ಕೆ ಸುದ್ದಿಯಾದರೆ, ಈ ಬಾರಿ ಮನೆಯ ಹೊರಗೆ ಆದ ವಿವಾದಗಳಿಗೆ ಹೆಚ್ಚು ಸುದ್ದಿಯಾಗುತ್ತಿದೆ.</p>



<p>ಹುಲಿಯುಗುರು ಪ್ರಕರಣಕ್ಕೆ ವರ್ತೂರು ಸಂತೋಷ್ ಅರೆಸ್ಟ್ ಆದರೆ ಈಗ ಜಾತಿ ನಿಂದನೆಯ ಆರೋಪಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಸ್ಪರ್ಧಿ ತನಿಶಾ ವಿರುದ್ಧ FIR ದಾಖಲಾಗಿದೆ, ಹಾಗೂ ಪ್ರತಾಪ್ ಮೇಲೆ ಪ್ರಕರಣ ದಾಖಲಾಗಿ ವಿಚಾರಣೆ ಎದುರಿಸಿದ್ದಾರೆ. ಆ ಮೂಲಕ ಬಿಗ್ ಬಾಸ್​ ಮನೆಯ ಸ್ಪರ್ಧಿ ವಿರುದ್ಧ ದಾಖಲಾದ ಎರಡನೇ ಪ್ರಕರಣ ಇದಾಗಿದೆ.</p>



<p>ಇತ್ತೀಚಿನ ಸಂಚಿಕೆಯೊಂದರಲ್ಲಿ ನಟಿ ತನಿಷಾ ಹಾಗೂ ಡ್ರೋನ್​ ಪ್ರತಾಪ್ ನಡುವೆ ನಡೆದ ವಾಗ್ವಾದದಲ್ಲಿ ಬೋವಿ ಜನಾಂಗದ ಬಗ್ಗೆ ಅವಮಾನಕರ ಪದ ಬಳಸಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ.ಪದ್ಮಾ ಎಂಬುವವರು ಕುಂಬಳಗೋಡು ಪೊಲೀಸ್​ ಠಾಣೆಯಲ್ಲಿ ಜಾತಿ ನಿಂದನೆ (Atrocity), ಎಸ್​ಸಿ-ಎಸ್​ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ.</p>



<p>ಸಂಚಿಕೆಯೊಂದಲ್ಲಿ ತನಿಶಾ, ವಡ್ಡ ಎಂಬ ಪದ ಬಳಸುವ ಮೂಲಕ ಭೋವಿ ಸಮುದಾಯಕ್ಕೆ ಅಪಮಾನ ಎಸಗಿದ್ದಾರೆ. ಭೋವಿ ಸಮುದಾಯವು ಪರಿಶಿಷ್ಟ ಜಾತಿಗೆ ಸೇರಿದೆ ಎಂದು ತಿಳಿದೂ ಸಹ ಅಪಮಾನ ಮಾಡಲಾಗಿದೆ. ತನಿಷಾ ಅವರನ್ನು ಈ ಕೂಡಲೇ ಬಿಗ್​ಬಾಸ್ ಮನೆಯಿಂದ ಹೊರಗೆ ಕಳಿಸಬೇಕು, ಪೊಲೀಸರು ತನಿಷಾರನ್ನು ಬಂಧಿಸಬೇಕು ಎಂದು ಸಮುದಾಯದ ಮುಖ್ಯಸ್ಥರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಈ ಹಿನ್ನೆಲೆಯಲ್ಲಿ ತನಿಶಾ ಈಗ ಪ್ರಕರಣ ಎದುರಿಸಬೇಕಾಗಿದೆ.</p>



<p>ಈಗಾಗಲೇ ಕುಂಬಳಗೋಡು ಪೊಲೀಸರು ಬಿಗ್ ಬಾಸ್ ಸೆಟ್ ಗೆ ಹೋಗಿ ಪ್ರತಾಪ್ ಹಾಗೂ ತನಿಶಾ ಅವರನ್ನು ವಿಚಾರದಲ್ಲಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿ ತನಿಶಾ ವಿರುದ್ಧ ಪ್ರಕರಣ ದಾಖಲಾಗಿದೆ. ಹಾಗೆಯೇ ರಿಯಾಲಿಟಿ ಶೋ ಸೆಟ್ ಕಡೆಯಿಂದ ತನಿಶಾ ಹಾಗೂ ಪ್ರತಾಪ್ ಅವರ ಧ್ವನಿ ಮುದ್ರಿಕೆಯನ್ನು ಪೊಲೀಸರು ಸಂಪಾದಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅರೆಸ್ಟ್!</title>
		<link>https://peepalmedia.com/bigg-boss-contestant-varthur-santhosh-arrested/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 23 Oct 2023 04:45:30 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[bigg boss]]></category>
		<category><![CDATA[kannada]]></category>
		<category><![CDATA[peepal]]></category>
		<category><![CDATA[state politics]]></category>
		<category><![CDATA[Varturu santosh]]></category>
		<guid isPermaLink="false">https://peepalmedia.com/?p=30387</guid>

					<description><![CDATA[ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಪರ್ಧಿ ಒಬ್ಬರು ಅರೆಸ್ಟ್ ಆಗಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್‌ನನ್ನು ಅರಣ್ಯಾಧಿಕಾರಿಗಳು ಬಂಧಿಸಿ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ವರ್ತೂರು ಸಂತೋಷ್ ವಿರುದ್ಧ ಹುಲಿ ಉಗುರು ಧರಿಸಿರುವ ಆರೋಪ ಕೇಳಿ ಬಂದಿದೆ. ಬಿಗ್‌ಬಾಸ್ ಮನೆಗೆ ಏಕಾಏಕಿಯಾಗಿ ಎಂಟ್ರಿಕೊಟ್ಟ ಅರಣ್ಯಾಧಿಕಾರಿಗಳು ಸಂತೋಷ್‌ನನ್ನು ಬಂಧಿಸಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಿಂದ ಆರೋಪಿಯನ್ನು ಕರೆದುಕೊಂಡು ಹೋಗಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ರಾಮೋಹಳ್ಳಿ ಅರಣ್ಯಾಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ಸಂತೋಷ್ ನನ್ನು ಬಂಧಿಸಿದ್ದಾರೆ. ವರದಿಗಳ ಪ್ರಕಾರ ವೈಲ್ಡ್ ಲೈಫ್ [&#8230;]]]></description>
										<content:encoded><![CDATA[
<p>ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಪರ್ಧಿ ಒಬ್ಬರು ಅರೆಸ್ಟ್ ಆಗಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್‌ನನ್ನು ಅರಣ್ಯಾಧಿಕಾರಿಗಳು ಬಂಧಿಸಿ ಕಸ್ಟಡಿಗೆ ಪಡೆದುಕೊಂಡಿದ್ದಾರೆ.</p>



<p>ವರ್ತೂರು ಸಂತೋಷ್ ವಿರುದ್ಧ ಹುಲಿ ಉಗುರು ಧರಿಸಿರುವ ಆರೋಪ ಕೇಳಿ ಬಂದಿದೆ. ಬಿಗ್‌ಬಾಸ್ ಮನೆಗೆ ಏಕಾಏಕಿಯಾಗಿ ಎಂಟ್ರಿಕೊಟ್ಟ ಅರಣ್ಯಾಧಿಕಾರಿಗಳು ಸಂತೋಷ್‌ನನ್ನು ಬಂಧಿಸಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಿಂದ ಆರೋಪಿಯನ್ನು ಕರೆದುಕೊಂಡು ಹೋಗಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.</p>



<p>ರಾಮೋಹಳ್ಳಿ ಅರಣ್ಯಾಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ಸಂತೋಷ್ ನನ್ನು ಬಂಧಿಸಿದ್ದಾರೆ. ವರದಿಗಳ ಪ್ರಕಾರ ವೈಲ್ಡ್ ಲೈಫ್ ಪ್ರೊಟೆಕ್ಷನ್ ಆಕ್ಟ್ ಅಡಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.  </p>



<p>ಸಂತೋಷ್ ಅವರು ಕುತ್ತಿಗೆಯಲ್ಲಿ ಹುಲಿಯ ಉಗುರು ಇರುವ ಲಾಕೆಟ್ ಹಾಕಿಕೊಂಡಿದ್ದರು. ಈ ಕುರಿತು ವ್ಯಕ್ತಿಯೊಬ್ಬರ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ನೆಗೆಟಿವ್ ಅಭಿಪ್ರಾಯಗಳನ್ನು ಪಾಸಿಟಿವ್ ಪ್ರಚಾರ ಮಾಡಿಕೊಂಡ ಬಿಗ್ ಬಾಸ್!</title>
		<link>https://peepalmedia.com/negetive-abhipraayagalannu-paasitiv-prachaara-maadikonda-bigg-boss/</link>
		
		<dc:creator><![CDATA[Peepal Media]]></dc:creator>
		<pubDate>Mon, 08 Aug 2022 07:28:10 +0000</pubDate>
				<category><![CDATA[Uncategorized]]></category>
		<category><![CDATA[bengalure]]></category>
		<category><![CDATA[bigg boss]]></category>
		<category><![CDATA[entertainment]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[kannada bigg boss]]></category>
		<category><![CDATA[kannada reality show]]></category>
		<category><![CDATA[karnataka]]></category>
		<category><![CDATA[kichha sudeep]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[reality shows]]></category>
		<category><![CDATA[writing]]></category>
		<guid isPermaLink="false">https://peepalmedia.com/?p=904</guid>

					<description><![CDATA[ಯಾವುದೇ ಸಾಮಾಜಿಕ ಸಂದೇಶದ ಜವಾಬ್ದಾರಿ ಇಲ್ಲದೇ, ಕೇವಲ ಮನರಂಜನೆಯನ್ನಷ್ಟೇ ಮುಖ್ಯ ಉದ್ದೇಶವನ್ನಾಗಿಸಿಕೊಂಡದ್ದ ಬಿಗ್ ಬಾಸ್ ರಿಯಾಲಿಟಿ ಶೋ ಈ ಬಾರಿ ಕನ್ನಡದ ಬಿಗ್ ಬಾಸ್ ಸೀಜನ್ 9 ಬಹುಶಃ ಹಿಂದಿನ ಎಲ್ಲಾ ಸೀಜನ್ ಗಿಂತಲೂ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಪಡೆದುಕೊಳ್ಳುತ್ತಿದೆ. ಹಿಂದಿನ ಕೆಲವು ಸೀಜನ್ ಗಳು ಬಿಗ್ ಬಾಸ್ ಮನೆಯ ವಿನ್ಯಾಸದ ಮೂಲಕ ಗಮನ ಸೆಳೆದಿದ್ದರೆ ಇನ್ನು ಕೆಲವು ಶೋ ಪ್ರಾರಂಭವಾಗಿ ಸ್ಪರ್ಧಿಗಳ appearance ಅಥವಾ performance ಆಧಾರದಲ್ಲಿ ಸುದ್ದಿ ಆಗುತ್ತಿತ್ತು. ಆದರೆ ಈ ಸೀಜನ್ ಶೋ [&#8230;]]]></description>
										<content:encoded><![CDATA[
<p class="has-medium-font-size">ಯಾವುದೇ ಸಾಮಾಜಿಕ ಸಂದೇಶದ ಜವಾಬ್ದಾರಿ ಇಲ್ಲದೇ, ಕೇವಲ ಮನರಂಜನೆಯನ್ನಷ್ಟೇ ಮುಖ್ಯ ಉದ್ದೇಶವನ್ನಾಗಿಸಿಕೊಂಡದ್ದ ಬಿಗ್ ಬಾಸ್ ರಿಯಾಲಿಟಿ ಶೋ ಈ ಬಾರಿ ಕನ್ನಡದ ಬಿಗ್ ಬಾಸ್ ಸೀಜನ್ 9 ಬಹುಶಃ ಹಿಂದಿನ ಎಲ್ಲಾ ಸೀಜನ್ ಗಿಂತಲೂ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಪಡೆದುಕೊಳ್ಳುತ್ತಿದೆ. ಹಿಂದಿನ ಕೆಲವು ಸೀಜನ್ ಗಳು ಬಿಗ್ ಬಾಸ್ ಮನೆಯ ವಿನ್ಯಾಸದ ಮೂಲಕ ಗಮನ ಸೆಳೆದಿದ್ದರೆ ಇನ್ನು ಕೆಲವು ಶೋ ಪ್ರಾರಂಭವಾಗಿ ಸ್ಪರ್ಧಿಗಳ appearance ಅಥವಾ performance ಆಧಾರದಲ್ಲಿ ಸುದ್ದಿ ಆಗುತ್ತಿತ್ತು. ಆದರೆ ಈ ಸೀಜನ್ ಶೋ ಪ್ರಾರಂಭದಲ್ಲೇ ಹೆಚ್ಚು ಪ್ರಚಾರ ಗಿಟ್ಟಿಸಿದ್ದು ಆ ಮಟ್ಟಿಗೆ ಬಿಗ್ ಬಾಸ್ ಟೀಂ ಶುರುವಿನಲ್ಲೇ ಸಿಕ್ಸರ್ ಬಾರಿಸಿದ ಸಂಭ್ರಮದಲ್ಲಿದೆ.</p>



<p class="has-medium-font-size">ಇಂಗ್ಲಿಷ್ ನಾಣ್ಣುಡಿ &#8216;Any publicity is good Publicity&#8217; ಎಂಬುದನ್ನು ಈ ಬಿಗ್ ಬಾಸ್ ಟೀಂ ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಜೊತೆಗೆ ಅದನ್ನು ತನಗೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳುತ್ತಿದೆ ಕೂಡಾ. ಹಾಗಾಗಿ ಸಾರ್ವಜನಿಕ ಅಭಿಪ್ರಾಯ ಏನೇ ಬಂದರೂ ಪರವಾಗಿಲ್ಲ ಎಂಬಂತೆ ಶೋ ಮುಂದುವರೆಸಿದೆ. ಇದೇ ಮೊದಲ ಬಾರಿಗೆ ಬಿಗ್ ಬಾಸ್ ಕನ್ನಡದ ಈ ಸೀಜನ್ OTT ಪ್ಲಾಟಫಾರಂ ಅಡಿಯಲ್ಲಿ ಶೋ ಶುರು ಮಾಡಿದ್ದು ವಿಶೇಷ.</p>



<p class="has-medium-font-size">ಈ ಬಾರಿಯ ಶೋ ಅತಿ ಹೆಚ್ಚು ಸದ್ದು ಮಾಡಲು ಪ್ರಮುಖ ಕಾರಣವಾಗಿದ್ದು 15 ಮಂದಿ ಸ್ಪರ್ಧಿಗಳಲ್ಲಿ ಕೇವಲ ಇಬ್ಬರು ಸ್ಪರ್ಧಿಗಳ ಕಾರಣಕ್ಕೆ. ಒಬ್ಬರು &#8220;ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು&#8221; ಡೈಲಾಗ್ ಖ್ಯಾತಿಯ ಜ್ಯೋತಿಷಿ ಆರ್ಯವರ್ದನ್ ಕಾರಣಕ್ಕೆ, ಹಾಗೂ ಇನ್ನೊಂದು ಸೋಷಿಯಲ್ ಮೀಡಿಯಾ ಸೆನ್ಸೇಷನ್ ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ ಗೌಡ ಅವರ ಕಾರಣಕ್ಕೆ. ಈ ಇಬ್ಬರ ಆಯ್ಕೆ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಚರ್ಚೆ ನಡೆಯುತ್ತಿದ್ದು ಹೆಚ್ಚಿನ ಮಂದಿ ಈ ಆಯ್ಕೆಯನ್ನು ಅತ್ಯಂತ ಕಟುವಾಗಿ ಟೀಕಿಸಿ, ಟ್ರೋಲ್ ಮಾಡಿ ಸೋಷಿಯಲ್ ಪ್ಲಾಟಫಾರಂನಲ್ಲಿ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಸುದೀಪ್ ಅವರಿಗೆ ಇದು ಬೇಕಿತ್ತಾ? ಎನ್ನುವ ಮೂಲಕವೂ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.</p>



<p class="has-medium-font-size">ಜ್ಯೋತಿಷಿ ಆರ್ಯವರ್ದನ್ ಆಯ್ಕೆಗಿಂತ ಹೆಚ್ಚಾಗಿ ಸೋನು ಗೌಡ ಇಲ್ಲಿ ಅಗತ್ಯ ಇರಲಿಲ್ಲ ಎಂಬ ಮಾತು ಹೆಚ್ಚು ಪ್ರಚಲಿತದಲ್ಲಿದೆ. ಯಾವಾಗ ಬಿಗ್ ಬಾಸ್ ನ ಎರಡನೇ ಸ್ಪರ್ಧಿಯಾಗಿ ಸೋನು ಶ್ರೀನಿವಾಸ ಗೌಡ ಎಂಬ ಹೆಸರು ಹೊರಬಿತ್ತೋ ಸೋಷಿಯಲ್ ಮೀಡಿಯಾದಲ್ಲಿ ಅಕ್ಷರಶಃ ಬೆಂಕಿ ಬಿದ್ದಂತೆ ಬಿಸಿಬಿಸಿ ಚರ್ಚೆ ಶುರುವಾಗಿದೆ. ಕೆಲವೇ ದಿನಗಳ ಹಿಂದೆ ಸೋನು ಗೌಡ ಅವರ ಖಾಸಗಿ ವಿಡಿಯೋ ತುಣುಕು ಎಲ್ಲೆಡೆ ಹರಿದಾಡಿದ ಬೆನ್ನಲ್ಲೇ ಅವರ ಬಿಗ್ ಬಾಸ್ ಆಯ್ಕೆ ಈ ಟೀಕೆಗಳಿಗೆ ಪ್ರಮುಖ ಕಾರಣವಾಗಿದೆ. ಕೆಲವರ ಪ್ರಕಾರ ಆಕೆ ಹಣಕ್ಕಾಗಿ ಈ ರೀತಿ ವಿಡಿಯೋ ಮಾಡಿದ್ದು ಎನ್ನುವುದಾದರೆ, ಇನ್ನೂ ಕೆಲವರ ಪ್ರಕಾರ ಆಕೆಯ ಖಾಸಗಿ ವಿಡಿಯೋ Misuse ಆಗಿದೆ ಎಂಬಂತೆಯೂ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೆ ಸರಿಯಾಗಿ ಕನ್ನಡದ ಬಹುತೇಕ ಟ್ರೋಲ್ ಪೇಜ್ ಗಳಿಗೆ ಸೋನು ಗೌಡ ಅವರ ಆಯ್ಕೆ ಆಹಾರವಾಗಿದೆ. ಹೆಚ್ಚಿನ ಮಂದಿ ನಕಾರಾತ್ಮಕವಾಗಿ ಇದನ್ನು ಟೀಕಿಸುತ್ತಿದ್ದರೂ ಬಿಗ್ ಬಾಸ್  ಟೀಂ ಇವ್ಯಾವುದಕ್ಕೂ ಕ್ಯಾರೇ ಎನ್ನದೇ ತನ್ನ ಶೋ ಮುಂದುವರೆಸಿದೆ.</p>



<p class="has-medium-font-size">ಇನ್ನು ಮತ್ತೊಂದು ವಿಶೇಷ ಎಂದರೆ ಈ ಬಾರಿಯ ಬಿಗ್ ಬಾಸ್ ಆಯ್ಕೆಯಲ್ಲಿ ಬಹುತೇಕ ಯುವಕ ಯುವತಿಯರೇ ತುಂಬಿದ್ದಾರೆ. ಜ್ಯೋತಿಷಿ ಆರ್ಯವರ್ದನ್ ಬಿಟ್ಟರೆ ಮತ್ತೆಲ್ಲರೂ 40 ವರ್ಷದ ಒಳಗಿನ ಯಂಗ್ ಅಂಡ್ ಎನರ್ಜೆಟಿಕ್ ಟೀಂ ಇದಾಗಿದೆ. ಇದರ ಮಧ್ಯೆ ಇತ್ತೀಚಿನ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಕಾಫಿನಾಡು ಚಂದು ಈ ಬಾರಿಯ ಶೋಗೆ ಬರಬಹುದು ಎಂಬ ನಿರೀಕ್ಷೆ ಕೂಡಾ ಹೆಚ್ಚಿನವರಿಗೆ ಇತ್ತು. ಚಂದು ಅವರ ನಿರೀಕ್ಷಿಸಿದವರಿಗೆ ಈ ಬಾರಿ ನಿರಾಸೆಯಾಗಿದೆ.</p>



<p class="has-medium-font-size">ಎಂದಿನಂತೆ ಬಿಗ್ ಬಾಸ್ ಮನೆಯ ವಿನ್ಯಾಸದಲ್ಲಿಯೂ ಕ್ರಿಯೇಟಿವ್ ಹೆಡ್ ಪರಮೇಶ್ವರ್ ಗುಂಡಕಲ್ ಹೊಸತನ ಮೆರೆದಿದ್ದಾರೆ. ಬಿಗ್ ಬಾಸ್ OTT ಪ್ಲಾಟಫಾರಂ ನಲ್ಲಿ ಒಟ್ಟು 42 ದಿನ ನಡೆಯುವ ಈ ಶೋ ಹಿಂದಿಗಿಂತ ಹೆಚ್ಚು ಆಕರ್ಷಕವಾಗಿದೆ. ವಿಶೇಷವಾಗಿ ಒಂದು ಗೊಂಬೆಯ ಕಣ್ಣನ್ನು ಹಾಗೂ ಕುತ್ತಿಗೆಯನ್ನು 2 ಕೈಗಳು ಹಿಡಿರುವ ಚಿತ್ರ ಇದ್ದು ಒಟ್ಟಾರೆ ಈ ಬಾರಿಯ ಶೋ ಹೆಚ್ಚು ಕುತೂಹಲ ಮೂಡಿಸಿದೆ.</p>
]]></content:encoded>
					
		
		
			</item>
	</channel>
</rss>
