<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>bihar &#8211; Peepal Media</title>
	<atom:link href="https://peepalmedia.com/tag/bihar/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 19 Aug 2025 06:44:55 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>bihar &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಒಂದು ಮನೆ ವಿಳಾಸದಲ್ಲಿ ಬೇರೆ ಬೇರೆ ಸಮುದಾಯಗಳ 24 ಮತದಾರರು! &#8211; ತಂಡಗಳಿಂದ ಬಿಹಾರದ ಮತದಾರರ ಪಟ್ಟಿ ಪರಿಶೀಲನೆ</title>
		<link>https://peepalmedia.com/24-voters-from-different-communities-at-one-home-address-teams-verify-bihars-voter-list/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 19 Aug 2025 06:27:22 +0000</pubDate>
				<category><![CDATA[ಅಂಕಣ]]></category>
		<category><![CDATA[bengaluru]]></category>
		<category><![CDATA[bihar]]></category>
		<category><![CDATA[Election Commission of India]]></category>
		<category><![CDATA[Gyanesh Kumar]]></category>
		<category><![CDATA[jharkhand]]></category>
		<category><![CDATA[karnataka]]></category>
		<category><![CDATA[Rahul Gandhi]]></category>
		<category><![CDATA[vote theft]]></category>
		<guid isPermaLink="false">https://peepalmedia.com/?p=64362</guid>

					<description><![CDATA[ಅಗಸ್ಟ್ ಮೂರನೇ ವಾರದ ಒಂದು ಮುಂಜಾನೆ, ಅರಾ ಪಟ್ಟಣದ ಗೌಸ್‌ಗಂಜ್‌ನ ಬೀದಿಯೊಂದರ ಮೂಲೆಯಲ್ಲಿ ಮರದ ಮೇಜಿನ ಸುತ್ತಲೂ ಜನರ ಗುಂಪೊಂದು ಜಮಾಯಿಸಿತ್ತು. ಮಳೆಯಿಂದ ರಕ್ಷಿಸಿಕೊಳ್ಳಲು ನಿರ್ಮಿಸಲಾಗಿದ್ದ ಪ್ಲಾಸ್ಟಿಕ್ ಟೆಂಟಿನ ಅಡಿಯಲ್ಲಿ ಅವರು ಗುಂಪುಗೂಡಿದ್ದರು. ಮೇಜಿನ ಮೇಲೆ ಹರಡಿದ ಕಾಗದದ ಹಾಳೆಗಳನ್ನು ಒಟ್ಟುಮಾಡಿ ಪಿನ್‌ ಮಾಡಲಾಗಿತ್ತು: ಅವು ಆ ಪಟ್ಟಣದ ಉತ್ತರ ಹೊರವಲಯದಲ್ಲಿರುವ ಅರಾ ಕ್ಷೇತ್ರದ ಬೂತ್ ಸಂಖ್ಯೆ 103 ರ ಮತದಾರರ ಪಟ್ಟಿಯ ಪ್ರಿಂಟ್‌ಔಟ್. ಇವರೆಲ್ಲಾ ವಿರೋಧ ಪಕ್ಷದ ಮಹಾಘಟಬಂಧನ್‌ನ ಭಾಗವಾಗಿರುವ ಬಿಹಾರದಲ್ಲಿ ನೋಂದಾಯಿತ ರಾಜಕೀಯ ಪಕ್ಷವಾದ [&#8230;]]]></description>
										<content:encoded><![CDATA[
<pre class="wp-block-code"><code>‌<em>ಮತದಾರರ ಪಟ್ಟಿಯನ್ನು ಅಧ್ಯಯನ ಮಾಡಿದ ತಂಡವು ಒಂದೇ ವಿಳಾಸದಲ್ಲಿ 24 ಮತದಾರರನ್ನು ನೋಂದಾಯಿಸಿರುವುದನ್ನು ಕಂಡುಹಿಡಿದಿದೆ, ಮತ್ತೊಂದು ಪ್ರಕರಣದಲ್ಲಿ, ತಂದೆಯ ವಯಸ್ಸು ಮಗಳ ವಯಸ್ಸುಗಿಂತ ಕಡಿಮೆಯಿದೆ. ಹಾಗಿದ್ದೂ, ಈ ಅನುಮಾನಗಳನ್ನು ಪರಿಶೀಲಿಸುವುದು ಒಂದು ಸವಾಲಿನ ಸಂಗತಿ</em> - 
ತುಷಾರ್ ಧಾರಾ</code></pre>



<p>ಅಗಸ್ಟ್ ಮೂರನೇ ವಾರದ ಒಂದು ಮುಂಜಾನೆ, ಅರಾ ಪಟ್ಟಣದ ಗೌಸ್‌ಗಂಜ್‌ನ ಬೀದಿಯೊಂದರ ಮೂಲೆಯಲ್ಲಿ ಮರದ ಮೇಜಿನ ಸುತ್ತಲೂ ಜನರ ಗುಂಪೊಂದು ಜಮಾಯಿಸಿತ್ತು. ಮಳೆಯಿಂದ ರಕ್ಷಿಸಿಕೊಳ್ಳಲು ನಿರ್ಮಿಸಲಾಗಿದ್ದ ಪ್ಲಾಸ್ಟಿಕ್ ಟೆಂಟಿನ ಅಡಿಯಲ್ಲಿ ಅವರು ಗುಂಪುಗೂಡಿದ್ದರು. ಮೇಜಿನ ಮೇಲೆ ಹರಡಿದ ಕಾಗದದ ಹಾಳೆಗಳನ್ನು ಒಟ್ಟುಮಾಡಿ ಪಿನ್‌ ಮಾಡಲಾಗಿತ್ತು: ಅವು ಆ ಪಟ್ಟಣದ ಉತ್ತರ ಹೊರವಲಯದಲ್ಲಿರುವ ಅರಾ ಕ್ಷೇತ್ರದ ಬೂತ್ ಸಂಖ್ಯೆ 103 ರ ಮತದಾರರ ಪಟ್ಟಿಯ ಪ್ರಿಂಟ್‌ಔಟ್. ಇವರೆಲ್ಲಾ ವಿರೋಧ ಪಕ್ಷದ ಮಹಾಘಟಬಂಧನ್‌ನ ಭಾಗವಾಗಿರುವ ಬಿಹಾರದಲ್ಲಿ ನೋಂದಾಯಿತ ರಾಜಕೀಯ ಪಕ್ಷವಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಎಂಎಲ್) ಲಿಬರೇಶನ್‌ನ ಕಾರ್ಯಕರ್ತರಾಗಿದ್ದರು.</p>



<p>ಲಿಬರೇಶನ್‌ನ ಬಿಹಾರ ರಾಜ್ಯ ಸಮಿತಿಯ ಸದಸ್ಯರಾದ ಖುಯಾಮುದ್ದೀನ್ ಅನ್ಸಾರಿ, ಮತದಾರರ ಪಟ್ಟಿಯಲ್ಲಿ ಆಗಿರುವ ಮೋಸವನ್ನು ಪತ್ತೆಹಚ್ಚಲು, ಕಾಣೆಯಾಗಿರುವ ಹೆಸರುಗಳು ಅಥವಾ ಡಿಲಿಟ್‌ ಮಾಡಲಾಗಿರುವ ಹೆಸರುಗಳನ್ನು ಗುರುತಿಸಲು ಮತ್ತು ಕರಡು ಪಟ್ಟಿಯಲ್ಲಿರುವ ಮತದಾರರ ಮನೆ-ಮನೆ ಪರಿಶೀಲನೆಯನ್ನು ನಡೆಸಲು ರೂಪಿಸಲಾಗಿರುವ ತಂಡವೊಂದನ್ನು  ಮುನ್ನಡೆಸುತ್ತಿದ್ದರು. ಹಾಗಿದ್ದೂ, ಮಳೆಗಾಲದ ಕಾರಣ, ಇಡೀ ನೆರೆಹೊರೆಯ ಪ್ರದೇಶಗಳು ಪ್ರವಾಹಕ್ಕೆ ಸಿಲುಕಿದ್ದು, ಮುಖತಃ ಹೋಗಿ ಭೇಟಿ ಮಾಡುವುದು ಸವಾಲಿನ ಸಂಗತಿಯಾಗಿತ್ತು.</p>



<p>ಖ್ವಾಮುದ್ದೀನ್ ಮತ್ತು ವಿಶ್ವಕರ್ಮ ಪಾಸ್ವಾನ್ ಮತ್ತು ಹಿಮ್ಮತ್ ಯಾದವ್ ಅವರನ್ನು ಒಳಗೊಂಡಿರುವ ಅವರ ತಂಡ ಈ ವಂಚನೆಯ ಪ್ರಕರಣಗಳನ್ನು ಗುರುತಿಸಲು ಪ್ರಯತ್ನಿಸುತ್ತಾ, ಕರಡು ಮತದಾರರ ಪಟ್ಟಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಒಂದು ನಿದರ್ಶನದಲ್ಲೇ, ಮತದಾರರ ಪಟ್ಟಿಯಲ್ಲಿ ಮನೆ ಸಂಖ್ಯೆ 10 ಎಂಬ ಒಂದೇ ವಿಳಾಸದಲ್ಲಿ 24 ಮತದಾರರು ನೋಂದಾಯಿಸಲ್ಪಟ್ಟಿರುವುದನ್ನು ಅವರು ಕಂಡುಹಿಡಿದರು ಮತ್ತು ಇದನ್ನು ವಂಚನೆಯೆಂದು ಕರೆದರು. </p>



<p>ಪಟ್ಟಿಯಲ್ಲಿ ಠಾಕೂರರು, ಬ್ರಾಹ್ಮಣರು ಮತ್ತು ಬನಿಯಾ ಹೆಸರುಗಳು ಇದ್ದುದರಿಂದ ಅವರು ಈ ತೀರ್ಮಾನಕ್ಕೆ ಬಂದಿದ್ದರು. ಬಿಹಾರದ ಜಾತಿ ವ್ಯವಸ್ಥೆಯ ವಾಸ್ತವಗಳನ್ನು ನೋಡಿದರೆ ಇದೊಂದು ವಿಚಿತ್ರವೆಂಬಂತೆ ಅವರಿಗೆ ಅನ್ನಿಸಿತ್ತು. ಅಲ್ಲದಿದ್ದರೆ ಬೇರೆ ಬೇರೆ ಜಾತಿಯ ಜನರು ಒಂದೇ ಮನೆಯ ಸದಸ್ಯರಂತೆ ಒಂದು ಮನೆಯಲ್ಲಿ ವಾಸಿಸಲು ಹೇಗೆ ಸಾಧ್ಯ?  </p>



<p>ಆಪಾದಿತ ದುಷ್ಕೃತ್ಯದ ಮತ್ತೊಂದು ಉದಾಹರಣೆಯೆಂದರೆ ತಂದೆ-ಮಗಳನ್ನು ದಂಪತಿಯೆಂಬಂತೆ ಮತದಾರರ ಹೆಸರಿನಲ್ಲಿ ಪಟ್ಟಿ ಮಾಡಿರುವುದು! ಅದೂ ತಂದೆಯ ವಯಸ್ಸು 28 ಮತ್ತು ಮಗಳ ವಯಸ್ಸು 29 ಎಂದು ಉಲ್ಲೇಖಿಸಲಾಗಿದೆ!</p>



<p>&#8220;ಮನೆ ಮನೆ ಭೇಟಿಗಳಿಂದ ಈ ವಂಚನೆಯನ್ನು ದೃಢೀಕರಿಸಲು ಸಾಧ್ಯವಿಲ್ಲ, ಮತದಾರರ ಪಟ್ಟಿಯ ವಿಸ್ತೃತ ಅಧ್ಯಯನದಿಂದ ಮಾತ್ರ ಅದನ್ನು ಬಯಲಿಗೆಳೆಯಬಹುದು&#8221; ಎಂದು ಖುಯಮ್ಮುದ್ದೀನ್ ಹೇಳುತ್ತಾರೆ. ತಮ್ಮ ಹೆಸರುಗಳನ್ನು ತಪ್ಪಾಗಿ ಅಳಿಸಲಾಗಿದೆ ಎಂದು ಆರೋಪಿಸುತ್ತಿರುವ ನೂರಾರು ಜನರ ಸಾಕ್ಷ್ಯಗಳನ್ನು ಅವರು ತಮ್ಮ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ಇಟ್ಟಿದ್ದಾರೆ.</p>



<p><em>ಅನುಮಾನಾಸ್ಪದ ವಿಳಾಸದ ಮೊದಲ ನಿದರ್ಶನವನ್ನು ದಿ ವೈರ್</em>&nbsp;ಎರಡು ಕಾರಣಗಳಿಗಾಗಿ ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ: ಮೊದಲನೆಯದಾಗಿ, ಈ ನಿರ್ದಿಷ್ಟ ಮನೆ ಇರುವ ಪ್ರದೇಶವು ಪ್ರವಾಹಕ್ಕೆ ಸಿಲುಕಿದೆ, ಆದ್ದರಿಂದ ಭೇಟಿ ನೀಡುವುದು ಕಷ್ಟಕರವಾಗಿದೆ. ಎರಡನೆಯದಾಗಿ, ಮತದಾರರ ಪಟ್ಟಿಯಲ್ಲಿ ಅನುಗುಣವಾದ ವಿಳಾಸವನ್ನು ನೀಡದೆ ಮನೆ ಸಂಖ್ಯೆಯನ್ನು ಪಟ್ಟಿ ಮಾಡಲಾಗಿದೆ, ಇದರಿಂದಾಗಿ ಆ ಪ್ರದೇಶದ ಪರಿಚಯವಿಲ್ಲದವರನ್ನು ಕಂಡುಹಿಡಿಯುವುದು ಕಷ್ಟಕರವಾಗಿದೆ.&nbsp;</p>



<p>ಈ ಎರಡೂ ಪ್ರಕರಣಗಳು ಚುನಾವಣಾ ವಂಚನೆಗೆ ದೊಡ್ಡ ನಿದರ್ಶನಗಳಾಗಿವೆ ಎಂದು ಲಿಬರೇಶನ್ ತಂಡಕ್ಕೆ ಮನವರಿಕೆಯಾಗಿದೆಯಾದರೂ, ವಿಷಯವು ಅಷ್ಟು ಸ್ಪಷ್ಟವಾಗಿಲ್ಲ. ಅಲ್ಲದೇ, ಇದು ಪ್ರತಿಕೂಲ ಹವಾಮಾನ ಇರುವಾಗ ಕಡಿಮೆ ಅವಧಿಯಲ್ಲಿ ಮತದಾರರ ಪಟ್ಟಿಗಳನ್ನು ಪರಿಶೀಲಿಸುವಲ್ಲಿನ ತೊಂದರೆಗಳನ್ನು ಎತ್ತಿ ತೋರಿಸುತ್ತದೆ. </p>



<p>ಮತದಾರರು ವಿಳಾಸ ಕಾಲಮ್ ಅನ್ನು ಖಾಲಿ ಬಿಡುವುದು ಸೇರಿದಂತೆ ವಿವಿಧ ಕಾರಣಗಳಿಗಾಗಿ ಚುನಾವಣಾ ಆಯೋಗವು ಕಾಲ್ಪನಿಕ ಮನೆ ಸಂಖ್ಯೆಗಳನ್ನು ಬಳಸುತ್ತದೆ. <a href="https://indianexpress.com/article/political-pulse/election-commission-notional-house-numbers-inclusion-roll-standardised-addresses-10185846/" target="_blank" rel="noreferrer noopener"><em>ದಿ ಇಂಡಿಯನ್ ಎಕ್ಸ್‌ಪ್ರೆಸ್</em></a><a href="https://indianexpress.com/article/political-pulse/election-commission-notional-house-numbers-inclusion-roll-standardised-addresses-10185846/" target="_blank" rel="noreferrer noopener"> ವರದಿ ಮಾಡಿದಂತೆ</a> ಚುನಾವಣಾ ಸಂಸ್ಥೆಯು ರೋಲ್‌ಗಳನ್ನು ಗಣಕೀಕರಿಸಲು ಪ್ರಾರಂಭಿಸಿದಾಗ ಇದು ಪ್ರಾರಂಭವಾಯಿತು ಮತ್ತು ಡಿಜಿಟಲೀಕರಣಕ್ಕೆ ಬದಲಾವಣೆಯ ಸಮಯದಲ್ಲಿ ಕಾಲ್ಪನಿಕ ವಿಳಾಸಗಳನ್ನು ಬಳಸುವುದು ಪ್ರಮಾಣಿಕೃತವಾಯಿತು.  </p>



<p>ಆಗಸ್ಟ್ 7 ರಂದು ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳು &#8220;ಕಳ್ಳತನ&#8221;ವಾಗಿದ್ದು, ಅವುಗಳಲ್ಲಿ ಅರ್ಧದಷ್ಟು ವಿಳಾಸ ಅಕ್ರಮಗಳಾಗಿವೆ ಎಂದು ಹೇಳಿದಾಗ ಈ ವಿಚಾರ ಮುನ್ನಲೆಗೆ ಬಂತು.</p>



<p>&#8220;ಮತದಾರರ ಪಟ್ಟಿಯಲ್ಲಿ ವಿಳಾಸ ಅಕ್ರಮಗಳ ಬಗ್ಗೆ ಹಲವಾರು ವ್ಯಾಖ್ಯಾನಗಳಿವೆ ಮತ್ತು ಪರಿಶೀಲಿಸಲು ಏಕೈಕ ಮಾರ್ಗವೆಂದರೆ ಮನೆಗೆ ಭೇಟಿ ನೀಡುವುದು&#8221; ಎಂದು&nbsp; ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ನ ಸ್ಥಾಪಕ ಸದಸ್ಯ ಜಗದೀಪ್ ಛೋಕರ್,&nbsp;<em>ದಿ ವೈರ್</em>&nbsp;ಜೊತೆಗಿನ ದೂರವಾಣಿ ಸಂದರ್ಶನದಲ್ಲಿ ಹೇಳಿದರು.</p>



<p>&#8220;ನೀವು ರಾಜಕೀಯ ಪಕ್ಷಗಳನ್ನು ಅವಲಂಬಿಸಿದರೆ, ಅವರು ನಿಮಗೆ ಏನು ತೋರಿಸಬೇಕೆಂದು ಬಯಸುತ್ತಾರೋ ಅದನ್ನೇ ತೋರಿಸುತ್ತಾರೆ&#8221; ಎಂದು ಅವರು ಹೇಳಿದರು. ತಂದೆ-ಮಗಳ ವಯಸ್ಸಿನ ವ್ಯತ್ಯಾಸದ ಬಗ್ಗೆ ಜಗದೀಪ್ ಛೋಕರ್, ಇವುಗಳು ಸ್ಥೂಲ ದೋಷಗಳಾಗಿರಬಹುದು ಎಂದು ಹೇಳಿದರು. &#8220;ಸಣ್ಣ ಸಣ್ಣ ವೈಯಕ್ತಿಕ ದೋಷಗಳ ಬದಲು ವ್ಯವಸ್ಥಿತ ವಂಚನೆಯನ್ನು ಹುಡುಕಿ ಬಯಲಿಗೆಳೆಯಬೇಕು.&#8221; </p>



<p>ಬಿಹಾರದಲ್ಲಿ ನಡೆಸಿದ ವಿಶೇಷ ತೀವ್ರ ಪರಿಶೀಲನೆಯನ್ನು (Special Intensive Review) ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಅರ್ಜಿದಾರರಲ್ಲಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಕೂಡ ಒಂದು. ಆದರೆ ಹಲವಾರು ಕಾರಣಗಳಿಂದಾಗಿ, ಇದನ್ನು ಹೇಳುವುದು ಸುಲಭ, ಆದರೆ ಅನೇಕ ಕಾರಣಗಳಿಂದಾಗಿ ಮಾಡುವುದು ಅಷ್ಟು ಸುಲಭದಲ್ಲ.. </p>



<p>ಆಗಸ್ಟ್ 9 ರಂದು, ಚುನಾವಣಾ ಆಯೋಗವು ಕರಡು ಮತದಾರರ ಪಟ್ಟಿಯನ್ನು ಆನ್‌ಲೈನ್‌ನಲ್ಲಿ ದಿಲಿಟ್‌ ಮಾಡಿ, ಸ್ಕ್ಯಾನ್ ಮಾಡಿದ ಚಿತ್ರಗಳನ್ನು ಅಪ್‌ಲೋಡ್‌ ಮಾಡಲಾಗಿದೆ. ಇದರ ಮೆಷಿನ್‌ ರೀಡಿಂಗ್‌ ಮಾಡುವುದು ಕಷ್ಟದ ಕೆಲಸ, ಇದರಿಂದಾಗಿ ದೊಡ್ಡ ಪ್ರಮಾಣದ ಅಕ್ರಮಗಳನ್ನು ಪತ್ತೆಹಚ್ಚಲಾಯಿತು ಎಂದು <a href="https://scroll.in/latest/1085399/election-commission-removes-digital-draft-voter-lists-in-bihar" target="_blank" rel="noreferrer noopener"><em>ಸ್ಕ್ರೋಲ್</em> ವರದಿ ಮಾಡಿದೆ</a>. </p>



<p>ಎರಡನೆಯದಾಗಿ, ಚುನಾವಣಾ ಸಂಸ್ಥೆಯು SIR ಮತದಾರರ ಪಟ್ಟಿಯಿಂದ ಅಳಿಸಲಾದವರ ಪಟ್ಟಿಯನ್ನು (ಇಲ್ಲಿಯವರೆಗೆ 65 ಲಕ್ಷ) ನೀಡಿದ್ದರೂ, ಯಾಕೆ ಅಳಿಸಲಾಗಿದೆ ಎಂಬ ಕಾರಣಗಳ ವಿವರವನ್ನು ನೀಡಿಲ್ಲ. ಎಷ್ಟು ಹೆಸರುಗಳು ಸ್ಥಳಾಂತರಗೊಂಡಿವೆ, ಎಷ್ಟು ಜನ ಸತ್ತಿದ್ದಾರೆ ಅಥವಾ ನಕಲಿ ನಮೂದುಗಳಾಗಿದ್ದವು ಎಂದು ತಿಳಿಯಲು ಯಾವುದೇ ಮಾರ್ಗವಿಲ್ಲ. ಈ ಮಾಹಿತಿಯಿಲ್ಲದೆ, ನೆಲಮಟ್ಟದಲ್ಲಿ ಪರಿಶೀಲನೆ ನಡೆಸುವುದು ಇನ್ನಷ್ಟು ಕಷ್ಟಕರವಾಗುತ್ತದೆ. </p>



<p>ಆಗಸ್ಟ್ 14 ರಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿ ಅಳಿಸುವಿಕೆಗೆ ಕಾರಣಗಳ ಜೊತೆಗೆ ಪಟ್ಟಿಯನ್ನು ಪ್ರಕಟಿಸುವಂತೆ ನಿರ್ದೇಶನ ನೀಡಿದ್ದರೂ, ಕಡಿಮೆ ಅವಧಿ ಮತ್ತು ಮಳೆಯಲ್ಲಿ ಏರಿಕೆ ಕಂಡುಬಂದಿರುವುದರಿಂದ ಅಕ್ರಮಗಳನ್ನು ಪತ್ತೆಹಚ್ಚಲು ತಂಡಗಳು ಓಡುತ್ತಿವೆ. ಅಂತಿಮ ಮತದಾರರ ಪಟ್ಟಿಯನ್ನು ಸೆಪ್ಟೆಂಬರ್ 1 ರಂದು ಪ್ರಕಟಿಸಲಾಗುವುದು. </p>


<div class="wp-block-image">
<figure class="aligncenter size-full is-resized"><img fetchpriority="high" decoding="async" width="1024" height="989" src="https://peepalmedia.com/wp-content/uploads/2025/08/image-1.png" alt="" class="wp-image-64371" style="width:450px;height:auto" srcset="https://peepalmedia.com/wp-content/uploads/2025/08/image-1.png 1024w, https://peepalmedia.com/wp-content/uploads/2025/08/image-1-300x290.png 300w, https://peepalmedia.com/wp-content/uploads/2025/08/image-1-768x742.png 768w, https://peepalmedia.com/wp-content/uploads/2025/08/image-1-150x145.png 150w, https://peepalmedia.com/wp-content/uploads/2025/08/image-1-696x672.png 696w" sizes="(max-width: 1024px) 100vw, 1024px" /><figcaption class="wp-element-caption">ಬಿಹಾರದ ಕರಡು ಮತದಾರರ ಪಟ್ಟಿಯಲ್ಲಿ &#8216;ಮೃತ&#8217; ಎಂದು ಘೋಷಿಸಲ್ಪಟ್ಟಿರುವ ಮಿಂಟು ಪಾಸ್ವಾನ್. ಫೋಟೋ: ದಿ ವೈರ್ </figcaption></figure></div>


<p><a href="https://thewire.in/government/declared-dead-in-draft-electoral-roll-bihar-voter-appears-in-supreme-court" target="_blank" rel="noreferrer noopener">ಗೌಸ್‌ಗಂಜ್‌ನಲ್ಲಿ ಕೆಲಸ ಮಾಡುತ್ತಿರುವ ಲಿಬರೇಶನ್ ತಂಡವು ಮಿಂಟು ಪಾಸ್ವಾನ್ ಪ್ರಕರಣವನ್ನು ಪತ್ತೆಹಚ್ಚಿತು</a>. ಮಿಂಟು ಜೀವಂತವಾಗಿದ್ದರೂ ಮತದಾರರ ಪಟ್ಟಿಯಲ್ಲಿ ಅವರನ್ನು &#8216;ಸತ್ತಿದ್ದಾರೆ&#8217; ಎಂದು ಘೋಷಿಸಲಾಗಿದೆ. ನಿಜವೇನೆಂದರೆ, ಸುಪ್ರೀಂ ಕೋರ್ಟ್‌ನಲ್ಲಿ ಸಾಕ್ಷಿಯಾಗಿ ಹಾಜರಾಗಲು, ಎಸ್‌ಐಆರ್ ನಿಜವಾದ ಮತದಾರರನ್ನು ಪಟ್ಟಿಯಿಂದ ಹೇಗೆ ಅಳಿಸುತ್ತಿದೆ ಎಂಬುದನ್ನು ತೋರಿಸಲು ಮಿಂಟು ನವದೆಹಲಿಗೆ ಹೋಗಿದ್ದಾರೆ.</p>



<p>ಅರ್ರಾಹ್‌ನ ಇನ್ನೊಂದು ಭಾಗದಲ್ಲಿ, ಸುಧೀರ್ ಕುಮಾರ್ ತಮ್ಮ ಕಚೇರಿಯಲ್ಲಿ ಕಾಗದಗಳು ಮತ್ತು ನೋಟ್‌ಬುಕ್‌ಗಳ ಜೊತೆಗೆ ಕುಳಿತಿದ್ದಾರೆ. ಕುಮಾರ್ ಲಿಬರೇಶನ್‌ನ ಸದಸ್ಯರಾಗಿದ್ದಾರೆ ಮತ್ತು ಅರ್ರಾಹ್‌ನ ಪಟ್ಟಣ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಮೇಜಿನ ಮೇಲೆ ಅರ್ರಾಹ್ ಪಟ್ಟಣದ ಮತದಾರರ ಅಳಿಸುವಿಕೆಗಳನ್ನು ಒಳಗೊಂಡಿರುವ A4 ಹಾಳೆಗಳ ದಾಖಲೆಯಿದೆ, ಜೊತೆಗೆ ಪಕ್ಷವು ಆಡಳಿತದಲ್ಲಿನ ವಿಸ್ಲ್‌ಬ್ಲೋವರ್‌ಗಳ ಸಹಾಯದಿಂದ ಸಂಗ್ರಹಿಸಿರುವ ಕಾರಣಗಳನ್ನು ಸಹ ಹೊಂದಿದೆ. ಲಿಬರೇಶನ್ ತಕ್ಷಣವೇ ಅರ್ರಾಹ್ ಪಟ್ಟಣದಾದ್ಯಂತ ಹೋಗಿ ಮತದಾರರ ಪಟ್ಟಿಗಳನ್ನು ಭೌತಿಕ ಪರಿಶೀಲನೆ ನಡೆಸುವುದರೊಂದಿಗೆ ಅನೇಕ ತಂಡಗಳನ್ನು ರಚಿಸಿತು.</p>



<p>ಇದು ಕಷ್ಟದ ಕೆಲಸ. ಅರಾಹ್ ವಿಧಾನಸಭಾ ಕ್ಷೇತ್ರವು 45 ವಾರ್ಡ್‌ಗಳು ಮತ್ತು 242 ಬೂತ್‌ಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, 12 ಗ್ರಾಮ ಪಂಚಾಯತ್‌ಗಳಿವೆ. ಇಲ್ಲಿಯವರೆಗೆ, 16 ಪ್ರಕರಣಗಳನ್ನು ಮಾತ್ರ ಪತ್ತೆಹಚ್ಚಲು ಸಾಧ್ಯವಾಗಿದೆ: ಪಟ್ಟಿಯಲ್ಲಿ &#8216;ಸ್ಥಳಾಂತರಗೊಂಡ&#8217; ಎಂದು ಪಟ್ಟಿ ಮಾಡಲಾದ ಆರು ಪ್ರಕರಣಗಳು ಅರ್ರಾಹ್‌ನಲ್ಲಿವೆ, ಮತ್ತು &#8216;ಸತ್ತ&#8217; ಎಂದು ಘೋಷಿಸಲ್ಪಟ್ಟ 10 ಪ್ರಕರಣಗಳು ಇನ್ನೂ ಜೀವಂತವಾಗಿವೆ. ಆ 10 ಜನರಲ್ಲಿ ಏಳು ಜನರನ್ನು ಪಕ್ಷದ ಕಾರ್ಯಕರ್ತರು ಭೇಟಿ ಮಾಡಿದ್ದಾರೆ, ಮೂವರ ಬಗ್ಗೆ ಇನ್ನೂ ದೃಢೀಕರಿಸಬೇಕಾಗಿದೆ. </p>



<p>ಕುಮಾರ್ ಮತ್ತು ಅವರ ಉಪನಾಯಕ ರಣಧೀರ್ ರಾಣಾ ಅವರು &#8216;ಸತ್ತವರ&#8217; ಪಟ್ಟಿಯನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತಾರೆ ಮತ್ತು ಅದನ್ನು ಬೂತ್‌ವಾರು ಅಳಿಸಿದವರ ಪಟ್ಟಿಯೊಂದಿಗೆ ಹೋಲಿಸುತ್ತಾರೆ. ಹೆಸರುಗಳು ಹೊಂದಿಕೆಯಾದರೆ, ಆ ಮತದಾರರ ಸ್ಥಿತಿಗತಿಯನ್ನು ಪರಿಶೀಲಿಸಲು ಪಕ್ಷದ ಕಾರ್ಯಕರ್ತರನ್ನು ಬೂತ್‌ಗೆ ಕಳುಹಿಸಲಾಗುತ್ತದೆ, ಇದನ್ನು ಅವರು ನೆರೆಹೊರೆಯವರೊಂದಿಗೆ ಮಾತನಾಡುವುದು, ವಿಳಾಸವನ್ನು ಪಡೆಯುವುದು ಮತ್ತು ಭೇಟಿ ಮಾಡುವುದು ಮತ್ತು EC ಯ ಮತದಾರರ ಸಹಾಯವಾಣಿ ಅಪ್ಲಿಕೇಶನ್ ಅನ್ನು ಬಳಸುವುದು ಸೇರಿದಂತೆ ವಿವಿಧ ರೀತಿಯಲ್ಲಿ ಮಾಡುತ್ತಾರೆ.</p>



<p>SIR ಗೆ ಸಮಾನಾಂತರವಾಗಿ, ಚುನಾವಣಾ ಆಯೋಗವು ಮತದಾನ ಕೇಂದ್ರಗಳನ್ನು ವಿಭಜಿಸಿರುವುದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತದೆ. ನಿಜವಾಗಿ, ಪ್ರತಿ ಬೂತ್‌ಗೆ 1,200 ಕ್ಕಿಂತ ಹೆಚ್ಚು ಮತದಾರರು ಇರಬಾರದು, ಅದಕ್ಕೂ ಹೆಚ್ಚು ಮತದಾರರು ಇದ್ದರೆ ಹೊಸ ಬೂತ್ ಅನ್ನು ರಚಿಸಲಾಗುತ್ತದೆ ಅಥವಾ ಹೆಚ್ಚುವರಿ ಮತದಾರರನ್ನು ಮತ್ತೊಂದು ಬೂತ್‌ಗೆ ಸ್ಥಳಾಂತರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಬೂತ್ ಸಂಖ್ಯೆಗಳು ಬದಲಾಗುತ್ತವೆ, ಇದು ಗೊಂದಲವನ್ನು ಹೆಚ್ಚಿಸುತ್ತದೆ. </p>



<p>ಉದಾಹರಣೆಗೆ, ಆಗಸ್ಟ್ 11 ರಂದು, &#8216;ಸತ್ತವರು&#8217; ಎಂದು ಪಟ್ಟಿ ಮಾಡಲಾದ ನಾಲ್ವರು ಜನರು ಜೀವಂತವಾಗಿರುವುದು ಕಂಡುಬಂದಿತು, ಅದರಲ್ಲಿ ಮೂರು ಹೆಸರುಗಳು ಹತ್ತಿರದ ಮತಗಟ್ಟೆಯಲ್ಲಿ ಕಂಡುಬಂದವು. ಹೆಚ್ಚುವರಿಯಾಗಿ, ಕರಡು ಪಟ್ಟಿಯನ್ನು ಬಿಡುಗಡೆ ಮಾಡುವ ಮೊದಲು ದಾಖಲೆಗಳನ್ನು ಸಂಗ್ರಹಿಸುವ ಮತ್ತು ಮತದಾರರನ್ನು ಸೇರಿಸುವ ಹೆಚ್ಚಿನ ಕೆಲಸವನ್ನು ಮಾಡಿದ ಬ್ಲಾಕ್ ಮಟ್ಟದ ಅಧಿಕಾರಿಗಳು ಹೆಚ್ಚಿನ ಸಹಾಯವನ್ನು ನೀಡಲಿಲ್ಲ.&nbsp;</p>



<p>ಅವರಲ್ಲಿ ಹೆಚ್ಚಿನವರಿಗೆ ಸಾಕು ಸಾಕಾಗಿ ಹೋಗಿದೆ, ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ, ಕರೆಗಳನ್ನು ಸ್ವೀಕರಿಸುತ್ತಿಲ್ಲ. </p>



<p>&#8220;ಮುಂದಿನ 15 ದಿನಗಳಲ್ಲಿ ನಾವು ಎಷ್ಟು ಅಕ್ರಮಗಳನ್ನು ಕಂಡುಹಿಡಿಯಬಹುದು?&#8221; ಎಂದು ಕುಮಾರ್ ಕೇಳುತ್ತಾರೆ. ಬಿಹಾರದ ಹೆಚ್ಚಿನ ಜನರು ಇನ್ನೂ SIR ಮತ್ತು ಪೌರತ್ವದ ನಡುವಿನ ಸಂಬಂಧವನ್ನು ಕಂಡುಕೊಂಡಿಲ್ಲ ಮತ್ತು ವಿರೋಧ ಪಕ್ಷಗಳಿಗೆ ಇದನ್ನು ಸ್ಪಷ್ಟವಾಗಿ ವಿವರಿಸಲು ಸಾಧ್ಯವಾಗಿಲ್ಲ ಎಂದು ಅವರು ಒಪ್ಪಿಕೊಳ್ಳುತ್ತಾರೆ. </p>



<p>ಬಿಹಾರದಲ್ಲಿ ಲಿಬರೇಶನ್‌ನ ಪ್ರಮುಖ ಮತದಾರರು ದಲಿತರ ಮತ್ತು ಇಬಿಸಿ ಸಮುದಾಯಗಳಲ್ಲಿದ್ದಾರೆ. ಲಿಬರೇಶನ್ ಪಕ್ಷದ ಪ್ರಕಾರ, ಅಳಿಸಲಾಗಿರುವ ಗರಿಷ್ಠ ಮತದಾರರು ಈ ವರ್ಗಗಳಿಗೆ ಸೇರಿದವರು.  ಛತ್ತೀಸ್‌ಗಢದಲ್ಲಿ ಮಾವೋವಾದಿಗಳನ್ನು &#8220;ಮುಗಿಸಿದಂತೆ&#8221; ತಮ್ಮ ಮತದಾರರನ್ನು ನಿರ್ಮೂಲನೆ ಮಾಡುವ ಮೂಲಕ ಬಿಹಾರದಲ್ಲಿ ವಿಮೋಚನೆಯನ್ನು ಪೂರ್ಣಗೊಳಿಸಲು ಬಿಜೆಪಿ ಬಯಸುತ್ತಿದೆ ಎಂದು ಕುಮಾರ್ ಹೇಳುತ್ತಾರೆ. ‌ </p>



<p>“ಹಿಂದೆಲ್ಲಾ, ನೇರವಾಗಿ ಬೂತ್‌ಗಳನ್ನು ಕಬಳಿಸಲಾಗುತ್ತಿತ್ತು, ಈಗ ಪರೋಕ್ಷವಾಗಿ ಕಬಳಿಸಲಾಗುತ್ತಿದೆ,” ಎಂದು ಅವರು ಹೇಳುತ್ತಾರೆ.</p>



<p><em>ಇದು ದಿ ವೈರ್‌ ಪ್ರಕಟಿಸಿದ ತುಷಾರ್ ಧಾರಾ</em> ಅವರ<em> &#8216;<a href="https://thewire.in/rights/bihar-sir-voter-roll-scrutiny-teams-examining-election-commission-eletoral-rolls-24-voters-in-address">24 Voters in an Address&#8217;, Floods and a Ticking Clock: What Teams Examining Bihar&#8217;s Voter Rolls Encounter</a> ನ ಕನ್ನಡಾನುವಾದ</em></p>



<p></p>



<p></p>
]]></content:encoded>
					
		
		
			</item>
		<item>
		<title>ಭಯೋತ್ಪಾದಕ ದಾಳಿಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸುವುದು ಬಿಜೆಪಿಗೆ ಹೊಸದೇನಲ್ಲ!</title>
		<link>https://peepalmedia.com/using-terrorist-attacks-for-election-campaigning-is-nothing-new-for-the-bjp/</link>
		
		<dc:creator><![CDATA[Charan Aivarnad]]></dc:creator>
		<pubDate>Thu, 24 Apr 2025 12:19:23 +0000</pubDate>
				<category><![CDATA[ಅಂಕಣ]]></category>
		<category><![CDATA[bihar]]></category>
		<category><![CDATA[bjp]]></category>
		<category><![CDATA[Jammu & Kashmir]]></category>
		<category><![CDATA[jammu and kashmir]]></category>
		<category><![CDATA[Journalism]]></category>
		<category><![CDATA[kanpur]]></category>
		<category><![CDATA[Kathua]]></category>
		<category><![CDATA[media]]></category>
		<category><![CDATA[National conference]]></category>
		<category><![CDATA[Pahalgam]]></category>
		<category><![CDATA[Pahalgam terror attack]]></category>
		<category><![CDATA[Pakistan]]></category>
		<guid isPermaLink="false">https://peepalmedia.com/?p=57827</guid>

					<description><![CDATA[ದೇಶವನ್ನು ಬೆಚ್ಚಿಬೀಳಿಸಿದ, ಅತ್ಯಂತ ಹೇಯವಾದ ಭಯೋತ್ಪಾದಕ ದಾಳಿಯನ್ನು ಪಾಕಿಸ್ತಾನಿ ಉಗ್ರರು ಪಹಲ್ಗಾಮ್ ನಲ್ಲಿ ಏಪ್ರಿಲ್ 24 ರಂದು ನಡೆಸಿದ ನಂತರ, ಉತ್ತರ ಪ್ರದೇಶದ ಕಾನ್ಪುರದಲ್ಲಿ ನಿಗದಿಯಾಗಿದ್ದ ಅಧಿಕೃತ ಸರ್ಕಾರಿ ಕಾರ್ಯಕ್ರಮವನ್ನು ರದ್ದುಗೊಳಿಸಿದ ಪ್ರಧಾನಿ ನರೇಂದ್ರ ಮೋದಿ, 2025 ರ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿರುವ ಬಿಹಾರಕ್ಕೆ ಭೇಟಿ ನೀಡಿದ್ದಾರೆ. ʼಬಿಹಾರದ ಮಣ್ಣಿನಲ್ಲಿʼ ನಿಂತು ಭಯೋತ್ಪಾದಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮೋದಿಯವರು ಭಾಷಣದಲ್ಲಿ ಹೇಳಿದ್ದಾರೆ. &#8220;ಕಾನ್ಪುರದ ಧೈರ್ಯಶಾಲಿ ಪುಟ್ಟ ಮಗು ಶುಭಂ ಸೇರಿದಂತೆ ಹಲವಾರು ಜೀವಗಳನ್ನು ಬಲಿತೆಗೆದುಕೊಂಡ ಇತ್ತೀಚಿನ ಭಯೋತ್ಪಾದಕ [&#8230;]]]></description>
										<content:encoded><![CDATA[
<pre class="wp-block-code"><code><strong>ಮುಂಬೈ ದಾಳಿಯಾದ ಮೊದಲ ದಿನದಂದು ಬಿಜೆಪಿ ಈ ಸಂದರ್ಭದಲ್ಲಿ ಯುಪಿಎ ಜೊತೆಗೆ ನಿಲ್ಲುವುದಾಗಿ ಘೋಷಿಸಿತು. ಆದರೆ 24 ಗಂಟೆಗಳ ಒಳಗೆ ತನ್ನ ಮಾತನ್ನು ಹಿಂತೆಗೆದುಕೊಂಡಿತು. ಈ ದಾಳಿಯನ್ನು ಸಂಪೂರ್ಣವಾಗಿ ಚುನಾವಣಾ ರಾಜಕಾರಣಕ್ಕೆ ಬಳಸಿಕೊಳ್ಳಲು ತಂತ್ರ ಹೂಡಿತು. ಇದರ ನೇತೃತ್ವ ವಹಿಸಿದ್ದು ನಮ್ಮ ಈಗಿನ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರು</strong></code></pre>



<p>ದೇಶವನ್ನು ಬೆಚ್ಚಿಬೀಳಿಸಿದ, ಅತ್ಯಂತ ಹೇಯವಾದ ಭಯೋತ್ಪಾದಕ ದಾಳಿಯನ್ನು ಪಾಕಿಸ್ತಾನಿ ಉಗ್ರರು ಪಹಲ್ಗಾಮ್ ನಲ್ಲಿ ಏಪ್ರಿಲ್ 24 ರಂದು ನಡೆಸಿದ ನಂತರ, ಉತ್ತರ ಪ್ರದೇಶದ ಕಾನ್ಪುರದಲ್ಲಿ ನಿಗದಿಯಾಗಿದ್ದ ಅಧಿಕೃತ ಸರ್ಕಾರಿ ಕಾರ್ಯಕ್ರಮವನ್ನು ರದ್ದುಗೊಳಿಸಿದ ಪ್ರಧಾನಿ ನರೇಂದ್ರ ಮೋದಿ, 2025 ರ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿರುವ ಬಿಹಾರಕ್ಕೆ ಭೇಟಿ ನೀಡಿದ್ದಾರೆ.</p>



<p>ʼಬಿಹಾರದ ಮಣ್ಣಿನಲ್ಲಿʼ ನಿಂತು ಭಯೋತ್ಪಾದಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮೋದಿಯವರು ಭಾಷಣದಲ್ಲಿ ಹೇಳಿದ್ದಾರೆ. &#8220;ಕಾನ್ಪುರದ ಧೈರ್ಯಶಾಲಿ ಪುಟ್ಟ ಮಗು ಶುಭಂ ಸೇರಿದಂತೆ ಹಲವಾರು ಜೀವಗಳನ್ನು ಬಲಿತೆಗೆದುಕೊಂಡ ಇತ್ತೀಚಿನ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಮತ್ತು ಜನರ ದುಃಖಿತ ಮನಸ್ಥಿತಿ ಮತ್ತು ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ&#8221; ಎಂದು ಪ್ರಧಾನಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ ಎಂದು ಆಲ್&nbsp;ಇಂಡಿಯಾ ರೇಡಿಯೋ&nbsp;<a href="https://www.newsonair.gov.in/pm-modi-cancels-kanpur-visit-in-respect-of-one-of-the-phalagam-victims-from-kanpur/">ವರದಿ ಮಾಡಿತ್ತು.</a></p>



<p>ಒಂದು ಕಡೆ ಇಂತಹ ನೋವಿನ ಸಂದರ್ಭದಲ್ಲಿ ಕಾನ್ಪುರಕ್ಕೆ ಹೋಗುವುದು ಸರಿಯಲ್ಲ ಎಂದು ನಿರ್ಧರಿಸಿದ ಮೋದಿಯವರು ಬಿಹಾರದ ಮಧುಬನಿಗೆ ಹೋಗಿದ್ದಾರೆ. ಅಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಹಿನ್ನಲೆಯಲ್ಲಿ ಸಾರ್ವಜನಿಕ ಕಾರ್ಯಕ್ರಮ ಮಾಡಿದ್ದಾರೆ. 13,480 ಕೋಟಿ ರುಪಾಯಿಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ನೆರವೇರಿಸಿ, ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ.<br><br>ಇವತ್ತು ಸರ್ವಪಕ್ಷಗಳ ಸಭೆ ಕೂಡ ನಡೆಯಲಿದೆ. ಸಂಸತ್ತಿನಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷಗಳನ್ನು ಮಾತ್ರ ಆಹ್ವಾನಿಸಲು ಸರ್ಕಾರ ಯೋಜಿಸಿದೆ. ಎಲ್ಲಾ ಪಕ್ಷಗಳ ಒಬ್ಬೊಬ್ಬ ಸದಸ್ಯನನ್ನು ಕರೆದು ಅಭಿಪ್ರಾಯ ಕೇಳಬೇಕು ಎಂದು ವಿಪಕ್ಷಗಳು ಒತ್ತಾಯಿಸುತ್ತಿವೆ. ಈ ಸಭೆಯಲ್ಲಿ ಪ್ರಧಾನಿ ಮೋದಿಯವರು ಭಾಗವಹಿಸುವ ಸಾಧ್ಯತೆ ಇಲ್ಲ, ಅವರು ಬಿಹಾರದಲ್ಲಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.  ನರೇಂದ್ರ ಮೋದಿ ಸರ್ವಪಕ್ಷಗಳ ಸಭೆಯಲ್ಲಿ ಭಾಗವಹಿಸಬೇಕು ಅಂತ ಕಾಂಗ್ರೆಸ್ ಒತ್ತಾಯ ಮಾಡಿದರೂ ಬಿಹಾರ ಹೋಗಿದ್ದಾರೆ. <br><br>ನೇರ ಸೌದಿಯಿಂದ ಬಂದು, ತಮ್ಮ ಸಂತಾಪದ ಭಾಗವಾಗಿ ಕಾನ್ಪುರದ ಬೇಟಿಯನ್ನು ಮೊಟುಕುಗೊಳಿಸಿ, ಸರ್ವಪಕ್ಷಗಳ ಸಭೆಯನ್ನೂ ನಿರ್ಲಕ್ಷಿಸಿ, ಬಿಹಾರಕ್ಕೆ ಹೋದ ಮೋದಿಯವರು ಸೌದಿಯಿಂದ ಬಂದಿದ್ದಾದರು ಯಾಕೆ?</p>



<p>ಬಿಜೆಪಿ ಮತ್ತು ಪ್ರಧಾನಿ ಪಹಲ್ಗಾಮ್ ದಾಳಿಯನ್ನು ತಮ್ಮ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರಾ? ಈ ಪ್ರಶ್ನೆಯನ್ನು ಅನೇಕ ಜನರು ಕೇಳುತ್ತಿದ್ದಾರೆ. ಆದರೆ, ಜನರು ಭಾವನಾತ್ಮಕವಾಗಿ ಪ್ರತಿಕ್ರಿಯಿಸುವ ವಾತಾವರಣವನ್ನು ಸೃಷ್ಟಿ ಮಾಡಿ, ಹೊಣೆಗಾರ ಸರಕಾರ ತನ್ನ ಹಾಸಿಗೆಯ ಮೇಲೆ ಭದ್ರವಾಗಿ ಕೂರುತ್ತದೆ. ಈ ಹಿನ್ನಲೆಯಲ್ಲಿ 2008 ರ ಮುಂಬೈ ದಾಳಿಯ ಸಂದರ್ಭದಲ್ಲಿ, ಇಡೀ ದಾಳಿಯನ್ನು ಬಿಜೆಪಿ ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಂಡ ರೀತಿಯನ್ನು ನಾವು ನೆನಪಿಸಿಕೊಳ್ಳಬೇಕು.</p>


<div class="wp-block-image">
<figure class="aligncenter size-full"><img decoding="async" width="489" height="768" src="https://peepalmedia.com/wp-content/uploads/2025/04/unnamed-1.webp" alt="" class="wp-image-57829" srcset="https://peepalmedia.com/wp-content/uploads/2025/04/unnamed-1.webp 489w, https://peepalmedia.com/wp-content/uploads/2025/04/unnamed-1-191x300.webp 191w, https://peepalmedia.com/wp-content/uploads/2025/04/unnamed-1-150x236.webp 150w, https://peepalmedia.com/wp-content/uploads/2025/04/unnamed-1-300x471.webp 300w" sizes="(max-width: 489px) 100vw, 489px" /><figcaption class="wp-element-caption"><strong><em>ಇದು ನವೆಂಬರ್ 28, 2008 ರಂದು ಮುಂಬೈಯಲ್ಲಿ ನಡೆದ ಭೀಕರ ದಾಳಿಯನ್ನು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳಲು ಬಿಜೆಪಿ ರಾಷ್ಟ್ರೀಯ ಪತ್ರಿಕೆಗಳಲ್ಲಿ ನೀಡಿದ ಜಾಹೀರಾತು. </em></strong></figcaption></figure></div>


<p>ಮುಂಬೈ ದಾಳಿಯಾದ ಮೊದಲ ದಿನದಂದು ಬಿಜೆಪಿ ಈ ಸಂದರ್ಭದಲ್ಲಿ ಯುಪಿಎ ಜೊತೆಗೆ ನಿಲ್ಲುವುದಾಗಿ ಘೋಷಿಸಿತು. ಆದರೆ 24 ಗಂಟೆಗಳ ಒಳಗೆ ತನ್ನ ಮಾತನ್ನು ಹಿಂತೆಗೆದುಕೊಂಡಿತು. ಈ ದಾಳಿಯನ್ನು ಸಂಪೂರ್ಣವಾಗಿ <a href="https://www.hindustantimes.com/delhi/as-forces-fight-terrorists-bjp-is-busy-seeking-votes/story-SAtEaWSWdin2C8ii8uhwPK.html">ಚುನಾವಣಾ ರಾಜಕಾರಣಕ್ಕೆ ಬಳಸಿಕೊಳ್ಳಲು ತಂತ್ರ ಹೂಡಿತು</a>. ಇದು ನವೆಂಬರ್ 28, 2008 ರಂದು ಮುಂಬೈಯಲ್ಲಿ ನಡೆದ ಭೀಕರ ದಾಳಿಯನ್ನು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳಲು ಬಿಜೆಪಿ ರಾಷ್ಟ್ರೀಯ ಪತ್ರಿಕೆಗಳಲ್ಲಿ ನೀಡಿದ ಜಾಹೀರಾತು.<strong><em> </em></strong>ಇದರ ನೇತೃತ್ವ ವಹಿಸಿದ್ದು ನಮ್ಮ ಈಗಿನ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರು.</p>



<p>ನವೆಂಬರ್ 28 ರಂದು, ಮುಂಬೈ ದಾಳಿಯ ವಿರುದ್ಧ ಜನಾಕ್ರೋಶ ಹೆಚ್ಚಾಗುತ್ತಿತ್ತು. ದೇಶವೇ ಯುಪಿಎ ಸರ್ಕಾರದ ವಿರುದ್ಧ ಕೋಪವನ್ನು ತೋರಿಸುತ್ತಿತ್ತು. ಜನರು ಭದ್ರತಾ ವೈಫಲ್ಯವನ್ನು ಪ್ರಶ್ನೆ ಮಾಡುತ್ತಿದ್ದರು. ಆದರೆ ಬಿಜೆಪಿ ತನ್ನ ಜವಬ್ದಾರಿಯಾದ ಕೇಂದ್ರ ಸರ್ಕಾರವನ್ನು ಪ್ರಶ್ನಿಸುವ ಬದಲು ʼನಮಗೆ ಓಟ್‌ ಹಾಕಿʼ ಎಂದು ಅಮಾಯಕರ ರಕ್ತದ ಮಡುವಿನಲ್ಲಿಯೇ ಚುನಾವಣಾ ಪ್ರಚಾರವನ್ನು ಆರಂಭಿಸಿತು. &nbsp;</p>



<p>ಆ ಸಮಯದಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ, ದಾಳಿಯ ಸ್ಥಳಗಳಲ್ಲಿ ಒಂದಾದ ಒಬೆರಾಯ್ ಟ್ರೈಡೆಂಟ್ ಹೋಟೆಲ್‌ನ ಹೊರಗಿನಿಂದ&nbsp;<a href="https://www.youtube.com/watch?v=92LD42AKgV0">ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲು</a>&nbsp;ಮುಂಬೈಗೆ ಬಂದರು. ಎಂತಾ ದುರ್ದೈವ ನೋಡಿ, ತನ್ನ ಆಡಳಿತದಲ್ಲಿ ಪಹಲ್ಗಾಮ್&nbsp;ನಂತಹ ಒಂದು ಭೀಕರ ದಾಳಿಯಾದಾಗಲೂ ಒಂದೇ ಒಂದು ಅಧಿಕೃತ ಪತ್ರಿಕಾಗೋಷ್ಟಿ ನಡೆಸಲಿಲ್ಲ!</p>



<p>ಮುಂಬೈ ದಾಳಿ ನಡೆದು ಮೂರೇ ದಿನದಲ್ಲಿ, ಅಂದರೆ ನವೆಂಬರ್ 29 ಮತ್ತು ಡಿಸೆಂಬರ್ 4 ರಂದು ಕ್ರಮವಾಗಿ ಚುನಾವಣೆಗೆ ಸಜ್ಜಾಗುತ್ತಿದ್ದ ದೆಹಲಿ ಮತ್ತು ರಾಜಸ್ಥಾನಕ್ಕೆ ಭಾಷಣ ಮಾಡಲು ಹೋದರು. ಅದೇ ದಿನ ಬಿಜೆಪಿ &nbsp;ರಾಷ್ಟ್ರ ಮಟ್ಟದ ಪತ್ರಿಕೆಗಳಲ್ಲಿ ಮುಂಬೈ ದಾಳಿಯನ್ನು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳುವ ಜಾಹೀರಾತುಗಳನ್ನು ಬಿಡುಗಡೆ ಮಾಡಿತು.</p>



<p>ಕಪ್ಪು ಹಿನ್ನಲೆಯ ಮೇಲೆ, ಮುಂಬೈ ರಕ್ತಪಾತವನ್ನು ಸೂಚಿಸುವ ರಕ್ತದ ಕೆಂಬಣ್ಣವನ್ನು ಹರಡಿಸಿ, ಅದರ ಮೇಲೆ “Brutal Terror Strikes at Will, Weak Government, Unwilling and Incapable, ಭಯೋತ್ಪಾದನೆಯ ವಿರುದ್ಧ ಹೋರಾಡಿ. ಬಿಜೆಪಿಗೆ ಮತ ಹಾಕಿ” ಎಂದು ಆ ಜಾಹೀರಾತು ನೀಡಿತು.</p>



<p>ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ಈ ಪತ್ರಿಕಾ ಜಾಹೀರಾತು ನೀಡಿದಕ್ಕಾಗಿ ಚುನಾವಣಾ <a href="https://www.indiatoday.in/latest-headlines/story/election-commission-pulls-up-bjp-for-campaign-ads-34796-2008-12-08">ಆಯೋಗ ಛೀಮಾರಿ ಹಾಕಿತು</a>, ಇವು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿವೆ ಎಂದು ಹೇಳಿತು. ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಬರೆದ ಪತ್ರದಲ್ಲಿ, ಪಕ್ಷದ ಪ್ರಚಾರ ಜಾಹೀರಾತುಗಳಲ್ಲಿನ ಕೆಲವು ಹೇಳಿಕೆಗಳು ಮಾದರಿ ಚುನಾವಣಾ ನೀತಿ ಸಂಹಿತೆಯ ಅಕ್ಷರ ಮತ್ತು ಆಶಯವನ್ನು ಉಲ್ಲಂಘಿಸುತ್ತವೆ ಎಂದು ಆಯೋಗ ತಿಳಿಸಿತ್ತು.</p>



<p>ಪುಲ್ವಾಮ ಮತ್ತು ಈಗ ನಡೆದಿರುವ ಪಹಲ್ಗಾಮ್&nbsp; ಉಗ್ರರ ದಾಳಿಯ ಬಗ್ಗೆ ಸರ್ಕಾರವನ್ನು ಪ್ರಶ್ನೆ ಮಾಡುವವರನ್ನು ಗೋದಿ ಮೀಡಿಯಾಗಳು ಸೇರಿದಂತೆ, ಈ ಸಂದರ್ಭದಲ್ಲೂ ದೇಶದ ರಕ್ಷಣೆಯ ಬದಲಾಗಿ ಬಿಜೆಪಿಯ ಗುರಾಣಿಯಂತೆ ಕೆಲಸ ಮಾಡುವ ಅವರ ಬೆಂಬಲಿಗರು ಒಂದು ಘಟನೆಯನ್ನು ನೆನಪಿಡಬೇಕು<strong>.</strong></p>



<p>ಮುಂಬೈ ದಾಳಿಯ ಮಾರನೇ ದಿನ, ಅಂದರೆ<strong> </strong>2008 ರ ನವೆಂಬರ್ 27 ರಂದು ಇದೇ ಮೋದಿ ಭಯೋತ್ಪಾದಕ ದಾಲಿಯ ವಿಚಾರವಾಗಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರವೊಂದನ್ನು ಬರೆದಿದ್ದರು. ಆಂತರಿಕ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಲು ಸಿಂಗ್ ಎಲ್ಲಾ ಮುಖ್ಯಮಂತ್ರಿಗಳ, ವಿಶೇಷವಾಗಿ ಕರಾವಳಿ ಮತ್ತು ಗಡಿ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆಯಬೇಕೆಂದು ಅವರು ಸೂಚಿಸಿದರು. ಭಾರತದ ದುರ್ಬಲ ಸಮುದ್ರ ಭದ್ರತೆಯ ಬಗ್ಗೆಯೂ ಅವರು ಮಾತನಾಡಿದರು.</p>



<p>ಈ ಪತ್ರ ಒಂದು ದಿನದಲ್ಲಿ ಬಹಿರಂಗವಾಯಿತು. ಈ ಪತ್ರ ಬರೆಯುತ್ತಿದ್ದ ಸಂದರ್ಭದಲ್ಲಿ ಮೋದಿಜಿ ಯುಪಿಎ ಸರ್ಕಾರಕ್ಕೆ ಸಲಹೆಗಳನ್ನು ನೀಡುತ್ತಾ, ಆ ಸಂದರ್ಭದಲ್ಲಿ ಸರ್ಕಾರದ ಜೊತೆಗೆ ನಿಲ್ಲುವ ಯೋಚನೆಯಲ್ಲಿದ್ದರು. ಆ ದಿನ, ಆಗ ವಿರೋಧ ಪಕ್ಷದ ನಾಯಕ ಮತ್ತು 2009 ರ ಲೋಕಸಭಾ ಚುನಾವಣೆಗೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿದ್ದ ಎಲ್.ಕೆ. ಅಡ್ವಾಣಿ&nbsp;<a href="https://www.hindustantimes.com/delhi-news/bjp-backs-govt-in-hour-of-crisis/story-GgCJGVvaQwvP4dOX5O9gcK.html">ಮಾಧ್ಯಮಗಳ ಮುಂದೆ</a> ಬಂದು&nbsp;, &#8220;ಶಾಂತಿ, ನೆಮ್ಮದಿ, ಕೋಮು ಸಾಮರಸ್ಯ ಮತ್ತು ದೇಶಭಕ್ತಿಯ ಏಕತೆಯನ್ನು ಕಾಪಾಡಿಕೊಳ್ಳುವುದು ನಮ್ಮ ಅತ್ಯುನ್ನತ ಆದ್ಯತೆಯಾಗಿರಬೇಕು&#8221; ಎಂದು ಹೇಳಿದರು.<strong></strong></p>



<p>ಆದರೆ ಮರುದಿನವೇ ಕತೆ ಉಲ್ಟಾ ಹೊಡೆದಿತ್ತು. ಬಿಜೆಪಿ ಲಜ್ಜೆಗೆಟ್ಟು ಇಂತಹ ಒಂದು ಜಾಹೀರಾತುಗಳನ್ನು ಬಿಡುಗಡೆ ಮಾಡಿತು. ಪಕ್ಷವು ತನ್ನ ಹಿಂದಿ ಜಾಹೀರಾತಿನಲ್ಲಿ, &#8220;ಹುತಾತ್ಮರ ತ್ಯಾಗಗಳನ್ನು ನೆನಪಿಸಿಕೊಳ್ಳಿ&#8221; ಎಂದೂ, ಮತ್ತೊಂದು ಜಾಹೀರಾತಿನಲ್ಲಿ ಮಾಜಿ ಪ್ರಧಾನಿ ಮತ್ತು ಬಿಜೆಪಿಯ ದಿಗ್ಗಜ ಅಟಲ್ ಬಿಹಾರಿ ವಾಜಪೇಯಿ ಅವರ ಮುಕ್ತ ಪತ್ರವನ್ನೂ ಪ್ರಕಟಿಸಿತ್ತು. ಅದರಲ್ಲಿ &#8220;ಭಯೋತ್ಪಾದನೆ ಎಸೆದ ಸವಾಲನ್ನು ಒಟ್ಟಾಗಿ ಎದುರಿಸಬೇಕು. &#8220;ಸಾಂಪ್ರದಾಯಿಕ ಸಹೋದರತ್ವ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳುತ್ತಾ, ಭಯೋತ್ಪಾದನೆಯ ವಿರುದ್ಧ ಹೋರಾಡಬಲ್ಲ ಸರ್ಕಾರವನ್ನು ನಾವು ಆಯ್ಕೆ ಮಾಡಬೇಕು,&#8221; ಎಂದು ವಾಜಪೇಯಿ ಬರೆದಿದ್ದರು.<br><br>ಆ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಇದ್ದಂತ ಜನಾಕ್ರೋಶವನ್ನು ಕಂಡು, ಸರ್ಕಾರದ ವೈಫಲ್ಯಗಳ ವಿರುದ್ಧ ಅಭಿಯಾನ ನಡೆಸಲು ಬಿಜೆಪಿಗೆ ಒಂದು ಮುಖ ಬೇಕಾಗಿತ್ತು. ಅದುವೇ ನರೇಂದ್ರ ಮೋದಿ. ಹೀಗಾಗಿ, ಸರ್ಕಾರಕ್ಕೆ ಪತ್ರ ಬರೆದು ಸಲಹೆ ನೀಡಿದ್ದ ಮೋದಿ ನವೆಂಬರ್ 28 ರಂದು ಗುಜರಾತ್‌ನಿಂದ ಮುಂಬೈಗೆ ಬಂದು ಒಬೆರಾಯ್ ಟ್ರೈಡೆಂಟ್‌ನಲ್ಲಿ ಮಾಡಿದ ಭಾಷಣ ಮಾಡಿದರು. ಸಿಂಗ್‌ ಅವರು ದಾಳಿಯ ನಂತರ ಉದ್ದೇಶಿಸಿ ಮಾಡಿದ ಭಾಷಣ &nbsp;&#8220;ನಿರಾಶಾದಾಯಕ&#8221; ಎಂದು ಪತ್ರಕರ್ತರಿಗೆ ಮೋದಿ ತಿಳಿಸಿದರು. ಸಿಂಗ್‌ಗೆ ಬರೆದ ಪತ್ರದ ಬಗ್ಗೆಯೂ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು ಮತ್ತು ಭಾರತದ ಸಮುದ್ರ ಭದ್ರತೆಗೆ ಸಂಬಂಧಿಸಿದ ಪತ್ರದಲ್ಲಿದ್ದ ಮಾಹಿತಿಗಳನ್ನು ಮತ್ತೆ ಹೇಳಿದರು. &nbsp;</p>



<p>ಪಾಕಿಸ್ತಾನದ ದುಷ್ಟ ತಂತ್ರಗಳ ಎಚ್ಚರಿಕೆಯನ್ನು ಯುಪಿಎ ಸರ್ಕಾರ ನಿರ್ಲಕ್ಷಿಸಿದೆ ಎಂದು ಮೋದಿ ಆರೋಪಿಸಿದರು, ಪಾಕಿಸ್ತಾನಿ ನೌಕಾಪಡೆಗಳು ಗುಜರಾತಿ ಮೀನುಗಾರರನ್ನು ಬಂಧಿಸಿ, ಅವರನ್ನು ಬಿಡುಗಡೆ ಮಾಡಿದ ಮೇಲೂ ಅವರ ದೋಣಿಗಳನ್ನು ವಶಪಡಿಸಿಕೊಳ್ಳುತ್ತಿವೆ ಎಂಬ ಬಗ್ಗೆ ಮೋದಿ ಮಾತನಾಡಿದರು. &#8220;ದೋಣಿಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ನಾನು ಸರ್ಕಾರಕ್ಕೆ ಸೂಚಿಸಿದ್ದೆ&#8221; ಎಂದು ಮೋದಿ ಹೇಳಿದರು.</p>



<p>ಇಡೀ ಮುಂಬೈ ದಾಳಿಯಲ್ಲಿ ಸರ್ಕಾರವನ್ನು ಪ್ರಶ್ನಿಸಿದ ಬಿಜೆಪಿಯೇ ಈಗಿನ ದಾಳಿಯಲ್ಲಿ ತನ್ನನ್ನು ಯಾರೇ ಪ್ರಶ್ನಿಸಿದರೂ ದೇಶದ್ರೋಹಿಗಳು ಎಂದು ನಕಲಿ ದೇಶಪ್ರೇಮದ ಆಟವನ್ನು ಆಡುತ್ತಿದೆ.</p>



<p>ಮುಂಬೈ ದಾಳಿಯಲ್ಲಿ ಮೃತಪಟ್ಟ ಪೊಲೀಸ್ ಸಿಬ್ಬಂದಿಯ ಸಂಬಂಧಿಕರಿಗೆ ವಿತರಿಸಲು ಗುಜರಾತ್ ಸರ್ಕಾರವು ಮಹಾರಾಷ್ಟ್ರ ಸರ್ಕಾರಕ್ಕೆ 1 ಕೋಟಿ ರುಪಾಯಿಗಳನ್ನು ದೇಣಿಗೆ ನೀಡಿದೆ ಎಂದು ಮೋದಿ ತಮ್ಮ ಭಾಷಣದಲ್ಲಿ ಘೋಷಿಸಿದರು. ಹುತಾತ್ಮರಲ್ಲಿ ಮಹಾರಾಷ್ಟ್ರ ಪೊಲೀಸ್‌ನ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆ ಕೂಡ ಒಬ್ಬರಾಗಿದ್ದರು.</p>



<p>ಕರ್ಕರೆಯವರ ಕುಟುಂಬ ಯಾರನ್ನೂ ಬೇಟಿ ಮಾಡಲು ಒಪ್ಪದಿದ್ದರೂ, ಮೋದಿ ಮಾತ್ರ ಅವರ ಮನೆಗೆ ಹೋಗಿ ಸಂತ್ವಾನ ಹೇಳಿ ಬಂದರು. &nbsp;ಆದರೆ ಕರ್ಕರೆ ಪತ್ನಿ ಕವಿತಾ ಕರ್ಕರೆಯವರು <a href="https://www.indiatoday.in/latest-headlines/story/hemant-karkares-wife-turns-down-modis-offer-34231-2008-11-29">ಮೋದಿಯವರ ಒಂದು ಕೋಟಿ</a> ರುಪಾಯಿಗಳ ಆಫರನ್ನು ನಿರಾಕರಿಸಿದರು.</p>



<p>ಇದಕ್ಕೆ ಕಾರಣವೆಂದರೆ, ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಕರ್ಕರೆ ಅವರು ಸೆಪ್ಟೆಂಬರ್ 2008 ರಲ್ಲಿ ಮಹಾರಾಷ್ಟ್ರದ ಮಾಲೇಗಾಂವ್‌ನಲ್ಲಿ ನಡೆದ ಬಾಂಬ್ ಸ್ಫೋಟಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರ ಪಾತ್ರವಿದೆ ಎಂದು ಬಹಿರಂಗವಾಗಿ ಹೇಳಿದ್ದರು. ಆಗ ಬಿಜೆಪಿ ನಾಯಕರು ಯುಪಿಎ ಸರ್ಕಾರದ ಒತ್ತಡದಿಂದಾಗಿ ಆರ್‌ಎಸ್‌ಎಸ್‌ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯೆ ಕೊಟ್ಟರು. &nbsp;</p>



<p>ನವೆಂಬರ್ 28 ರಂದು,&nbsp;<a href="https://economictimes.indiatimes.com/news/politics-and-nation/advani-blames-intelligence-agencies-for-mumbai-terror-attacks/articleshow/3770137.cms">ಅಡ್ವಾಣಿ</a>&nbsp;ಪತ್ರಿಕೆಗಳಿಗೆ ನೀಡಿದ ಹೇಳಿಕೆಯಲ್ಲಿ, &#8220;ಒಬ್ಬ ಭಯೋತ್ಪಾದಕನ ಮೊಬೈಲ್ ಫೋನ್ ಪಾಕಿಸ್ತಾನಿ ಮೂಲದದ್ದಾಗಿ ಈಗ ಕಂಡುಬರುತ್ತಿದೆ. ʼಹಿಂದೂ ಭಯೋತ್ಪಾದನೆʼಯ ಬಗ್ಗೆ ಗುಪ್ತಚರ ಸಂಸ್ಥೆಗಳು ಕಾಳಜಿ ವಹಿಸಿದ್ದರಿಂದ ಭಯೋತ್ಪಾದಕರ ಸಂಚು ಪತ್ತೆಯಾಗದೆ ಹೋಗಿದೆ ಎಂದು ದಾಳಿಗೆ ಗುಪ್ತಚರ ಸಂಸ್ಥೆಗಳನ್ನು ದೂಷಿಸಿದರು.</p>



<p>ಹಿಂದಿನ ದಿನ, ಸಿಂಗ್ ಅವರು ಅಡ್ವಾಣಿಯವರಿಗೆ ಆಹ್ವಾನ ನೀಡಿ, ಇಬ್ಬರೂ ಜಂಟಿಯಾಗಿ ಮುಂಬೈಗೆ ಭೇಟಿ ನೀಡಿ ಭಾರತೀಯ ರಾಜಕೀಯ ವರ್ಗದ ನಡುವಿನ ಐಕ್ಯತೆಯನ್ನು ಪ್ರದರ್ಶಿಸಲು ಆ ದಿನ ರಾಷ್ಟ್ರವನ್ನುದ್ದೇಶಿಸಿ ಮಾತನಾಡುವಂತೆ ಸೂಚಿಸಿದ್ದರು. ಆದರೆ ಆ ಜಂಟಿ ಭೇಟಿ ಎಂದಿಗೂ ನಡೆಯಲಿಲ್ಲ.&nbsp;<a href="https://www.indiatoday.in/latest-headlines/story/modi-plays-politics-as-bodycount-increases-34205-2008-11-29">ಅಡ್ವಾಣಿ</a>&nbsp;ತಮ್ಮ ಹೇಳಿಕೆಯಲ್ಲಿ ವಿವರಿಸಿದರು, “ಪ್ರಧಾನಿಯವರು ನಾವು ಒಟ್ಟಿಗೆ ಮುಂಬೈಗೆ ಹೋಗಬೇಕೆಂದು ಸೂಚಿಸಿದ್ದರು. ನನ್ನ ಪ್ರಯಾಣ ಯೋಜನೆಗಳನ್ನು ಮುಂದೂಡುತ್ತಾ ನಾನು ತಕ್ಷಣ ಒಪ್ಪಿಕೊಂಡಿದ್ದೆ. ಆದರೆ ಮಧ್ಯಾಹ್ನ, ಕಮಾಂಡೋ ಕಾರ್ಯಾಚರಣೆಗಳು ಇನ್ನೂ ಮುಗಿದಿಲ್ಲದ ಕಾರಣ ಶುಕ್ರವಾರ [ನವೆಂಬರ್ 28] ಹೋಗುವುದು ಉತ್ತಮ ಎಂದು ನನಗೆ ತಿಳಿಸಲಾಯಿತು,” ಎಂದು ಹೇಳಿ ವಿಫಲವಾದ ಭೇಟಿಯ ಹೊಣೆಯನ್ನು ಸಿಂಗ್ ಮೇಲೆ ಹೊರಿಸಿದರು.</p>



<p>ಆದರೆ, ಇಡೀ ದಾಳಿಯನ್ನು ತಮ್ಮ ಚುನಾವಣಾ ಪ್ರಚಾರವಾಗಿ ಬಿಜೆಪಿ ಬಳಸಿಕೊಂಡು, ಪತ್ರಿಕೆಗಳಿಗೆ ಜಾಹೀರಾತುಗಳನ್ನು ನೀಡಿರುವಾಗ ಮನಮೋಹನ್‌ ಸಿಂಗ್‌ ಅಡ್ವಾಣಿಯನ್ನು ತಮ್ಮೊಂದಿಗೆ ಕರೆದುಕೊಂಡು ಹೇಗೆ ಹೋಗಲು ಸಾಧ್ಯ?</p>



<p>ಮುಂಬೈ ದಾಳಿಯಾಗಿ ಹತ್ತು ವರ್ಷಗಳಾದ <a href="https://www.livemint.com/Politics/pGPABBw5DnDwPhuimtqmTL/Mumbai-terror-attacks-2611-anniversary-2008-mumbai-attacks.html">ಮೇಲೆ ಮಿಂಟ್‌ &#8211; ಮಾಧ್ಯಮ</a> ಒಂದು ವರದಿಯನ್ನು ಮಾಡಿತ್ತು. ಆಗ, ದಾಳಿಯ ಸಂದರ್ಭದಲ್ಲಿ ಬಿಜೆಪಿ ಯೂಟರ್ನ್‌ ಹೊಡೆದ ಬಗ್ಗೆ ಕೇಳಿದಾಗ ಬಿಜೆಪಿ ನಾಯಕರೊಬ್ಬರು &#8220;ಅಡ್ವಾಣಿಜೀ ಸೇರಿದಂತೆ ನಮ್ಮ ಯಾವುದೇ ಹಿರಿಯ ನಾಯಕರು ಇಷ್ಟು ಬೇಗ ಮುಂಬೈಗೆ ಬಂದು ಇಲ್ಲಿಯೇ ಸ್ಥಾನಮಾನ ಪಡೆಯಲು ಬಯಸಲಿಲ್ಲ. ಅವರು ಅದನ್ನು ದೆಹಲಿಯಲ್ಲಿ ಮಾಡಿದರು, ಆದರೆ ಮುಂಬೈನಲ್ಲಿ ಯಾರನ್ನಾದರೂ ನೋಡಬೇಕಾಗಿತ್ತು. ಹಾಗಾಗಿ ಗೋಪಿನಾಥ್ ಮುಂಡೆಯವರು ಮೋದಿಜಿಯನ್ನು ಸಂಪರ್ಕಿಸಿದರು, ಅವರು ಬರಲು ಒಪ್ಪಿದರು,” ಎಂದು ಹೇಳಿರುವುದು ವರದಿಯಾಗಿದೆ. 2008 ರ ದಾಳಿಯನ್ನು ಮೋದಿಜಿ ತಮ್ಮ ಪ್ರಧಾನಿಯಾಗುವ ಕನಸಿಗೆ ಒಂದು ಕ್ಯಟಲಿಸ್ಟ್‌ ಆಗಿ ಬಳಸಿಕೊಂಡರು. &nbsp;&nbsp;</p>



<p>ರಾಜಸ್ಥಾನದಲ್ಲಿ, ಬಿಜೆಪಿ ಮುಂಬೈ ದಾಳಿಯನ್ನು ಬಳಸಿಕೊಂಡು ಮತಗಳನ್ನು ಗಳಿಸಲು ಪ್ರಯತ್ನಿಸಿತು. ನವೆಂಬರ್ 29, 2008 ರಂದು ಪ್ರಕಟವಾದ&nbsp;<em><a href="https://www.indiatoday.in/latest-headlines/story/modi-plays-politics-as-bodycount-increases-34205-2008-11-29">ಇಂಡಿಯಾ ಟುಡೇಯಲ್ಲಿ ವರದಿಯಾದಂತೆ,</a></em>&nbsp;ಕೇಂದ್ರ ಸರ್ಕಾರದ ಭಯೋತ್ಪಾದಕ ದಾಳಿಗಳನ್ನು ತಡೆಯುವಲ್ಲಿ ಅಸಮರ್ಥತೆಯನ್ನು ಪ್ರತಿಭಟಿಸಲು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ &#8220;ಭಯೋತ್ಪಾದನೆಯ ಪ್ರತಿಕೃತಿಗಳನ್ನು&#8221; ಸುಡುವ ಪಕ್ಷದ ಯೋಜನೆಗಳನ್ನು ಬಿಜೆಪಿ ಹಾಕಿಕೊಂಡಿತು. ಭಯೋತ್ಪಾದಕ ದಾಳಿಗಳನ್ನು ಕಾಂಗ್ರೆಸ್‌ನ ಅಲ್ಪಸಂಖ್ಯಾತ ಪರವಾದ ನಿಲುವಿಗೆ ಜೋಡಿಸಲು ಸಂಘಟಿತ ಪ್ರಯತ್ನವೂ ನಡೆಯಿತು. ಉದಾಹರಣೆಗೆ, ನವೆಂಬರ್ 29 ರ&nbsp;<em>ಇಂಡಿಯಾ ಟುಡೇ</em>&nbsp;ವರದಿಯು ರಾಜ್ಯದ ಹಿರಿಯ ಬಿಜೆಪಿ ನಾಯಕ ರಾಮದಾಸ್ ಅಗರ್ವಾಲ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, &#8220;ಕಾಂಗ್ರೆಸ್‌ಗೆ ಓಲೈಸುವ ಇತಿಹಾಸವಿದೆ. ಅವರು ಭಯೋತ್ಪಾದನೆಯ ಮೇಲೆ ಮೃದುವಾಗಿ ವರ್ತಿಸುವ ಮೂಲಕ ದೇಶವನ್ನು ಹಾಳುಮಾಡುತ್ತಾರೆ,&#8221; ಎಂದು ವರದಿ ಮಾಡಿತ್ತು.</p>



<p>ಮುಂಬೈ ದಾಳಿಯ ದುರಂತವನ್ನು ಮತಗಳಾಗಿ ಪರಿವರ್ತಿಸಲು ಮೋದಿ, ಅಡ್ವಾಣಿ ಮತ್ತು ಬಿಜೆಪಿ ಪ್ರಯತ್ನಿಸಿದ ರೀತಿಗೆ ಹೋಲಿಸಿದರೆ, ಪುಲ್ವಾಮಾ ದಾಳಿಯ ಸಂದರ್ಭದಲ್ಲಿ ವಿರೋಧ ಪಕ್ಷಗಳು ಸರ್ಕಾರದೊಂದಿಗೆ ಹೆಚ್ಚಿನ ಮಟ್ಟದ ಒಗ್ಗಟ್ಟನ್ನು ಪ್ರದರ್ಶಿಸಿದ್ದವು.</p>



<p>ಆದರೆ, ಪಹಲ್ಗಾಮ್ ಉಗ್ರರ ದಾಳಿಯ ಸಂದರ್ಭದಲ್ಲಿ ಕಾನ್ಪುರ ಬೇಟಿಯನ್ನು ರದ್ದು ಮಾಡಿದ ನರೇಂದ್ರ ಮೋದಿಯವರು ಬಿಹಾರಕ್ಕೆ ಹೋಗಿ ಭಾಷಣ ಮಾಡಿದ್ದು, ಸಾರ್ವಜನಿಕ ರ್ಯಾಲಿ ಮಾಡಿದ್ದು ವಿಚಿತ್ರವಾಗಿದೆ. ಅದೂ ಕೂಡ ದಾಳಿಯ ಬಗ್ಗೆ ಯಾವುದೇ ಅಧಿಕೃತ ಪತ್ರಿಕಾಗೋಷ್ಟಿಯನ್ನು ನಡೆಸದೆ!</p>
]]></content:encoded>
					
		
		
			</item>
		<item>
		<title>ಪಹಲ್ಗಾಮ್ ಉಗ್ರರ ದಾಳಿ: ಸಂತಾಪದ ಮಧ್ಯೆ ಚುನಾವಣೆಗೆ ಸಜ್ಜಾಗುತ್ತಿರುವ ಬಿಹಾರಕ್ಕೆ ಮೋದಿ ಬೇಟಿ</title>
		<link>https://peepalmedia.com/pahalgam-terror-attack-modi-visits-bihar-which-is-gearing-up-for-elections-amid-mourning/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 24 Apr 2025 10:03:29 +0000</pubDate>
				<category><![CDATA[ದೇಶ]]></category>
		<category><![CDATA[bihar]]></category>
		<category><![CDATA[bjp]]></category>
		<category><![CDATA[Jammu & Kashmir]]></category>
		<category><![CDATA[jammu and kashmir]]></category>
		<category><![CDATA[Journalism]]></category>
		<category><![CDATA[kanpur]]></category>
		<category><![CDATA[Kathua]]></category>
		<category><![CDATA[media]]></category>
		<category><![CDATA[National conference]]></category>
		<category><![CDATA[Pahalgam]]></category>
		<category><![CDATA[Pahalgam terror attack]]></category>
		<category><![CDATA[Pakistan]]></category>
		<category><![CDATA[sindhu river]]></category>
		<guid isPermaLink="false">https://peepalmedia.com/?p=57809</guid>

					<description><![CDATA[26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಏಪ್ರಿಲ್ 24 ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಿಗದಿಯಾಗಿದ್ದ ಅಧಿಕೃತ ಸರ್ಕಾರಿ ಕಾರ್ಯಕ್ರಮವನ್ನು ರದ್ದುಗೊಳಿಸಿದ ಪ್ರಧಾನಿ ನರೇಂದ್ರ ಮೋದಿ , 2025 ರ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿರುವ ಬಿಹಾರಕ್ಕೆ ಭೇಟಿ ನೀಡಿದ್ದಾರೆ. &#8220;ಕಾನ್ಪುರದ ಧೈರ್ಯಶಾಲಿ ಪುಟ್ಟ ಮಗು ಶುಭಂ ಸೇರಿದಂತೆ ಹಲವಾರು ಜೀವಗಳನ್ನು ಬಲಿತೆಗೆದುಕೊಂಡ ಇತ್ತೀಚಿನ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಮತ್ತು ಜನರ ದುಃಖಿತ ಮನಸ್ಥಿತಿ ಮತ್ತು ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ&#8221; ಎಂದು ಪ್ರಧಾನಿ ಕಚೇರಿ [&#8230;]]]></description>
										<content:encoded><![CDATA[
<p>26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಏಪ್ರಿಲ್ 24 ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಿಗದಿಯಾಗಿದ್ದ ಅಧಿಕೃತ ಸರ್ಕಾರಿ ಕಾರ್ಯಕ್ರಮವನ್ನು ರದ್ದುಗೊಳಿಸಿದ ಪ್ರಧಾನಿ ನರೇಂದ್ರ ಮೋದಿ , 2025 ರ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿರುವ ಬಿಹಾರಕ್ಕೆ ಭೇಟಿ ನೀಡಿದ್ದಾರೆ. </p>



<p>&#8220;ಕಾನ್ಪುರದ ಧೈರ್ಯಶಾಲಿ ಪುಟ್ಟ ಮಗು ಶುಭಂ ಸೇರಿದಂತೆ ಹಲವಾರು ಜೀವಗಳನ್ನು ಬಲಿತೆಗೆದುಕೊಂಡ ಇತ್ತೀಚಿನ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಮತ್ತು ಜನರ ದುಃಖಿತ ಮನಸ್ಥಿತಿ ಮತ್ತು ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ&#8221; ಎಂದು ಪ್ರಧಾನಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ ಎಂದು ಆಲ್ ಇಂಡಿಯಾ ರೇಡಿಯೋ <a href="https://www.newsonair.gov.in/pm-modi-cancels-kanpur-visit-in-respect-of-one-of-the-phalagam-victims-from-kanpur/">ವರದಿ ಮಾಡಿತ್ತು .</a></p>



<p>ಆಕಾಶವಾಣಿಯ ಪ್ರಕಾರ ಕಾನ್ಪುರದಲ್ಲಿ ಅವುಗಳ ಮೌಲ್ಯ 20,000 ಕೋಟಿ ರುಪಾಯಿಯ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಬೇಕಿತ್ತು. </p>



<p>&#8220;ಗೌರವದ ಸಂಕೇತವಾಗಿ, ಈ ದುಃಖದ ಸಮಯದಲ್ಲಿ ಕಾನ್ಪುರದಲ್ಲಿ ಯಾವುದೇ ಆಚರಣೆ ಅಥವಾ ಔಪಚಾರಿಕ ಸಾರ್ವಜನಿಕ ಕಾರ್ಯಕ್ರಮವನ್ನು ಮುಂದೂಡುವುದು ಸೂಕ್ತವೆಂದು ಪರಿಗಣಿಸಲಾಗಿದೆ&#8221; ಎಂದು ಪಿಎಂಒ ಉಲ್ಲೇಖಿಸಿ ವರದಿ ತಿಳಿಸಿದೆ.<br><br>ಆದರೆ ಚುನಾವಣೆಗೆ ಸಜ್ಜಾಗುತ್ತಿರುವ ಬಿಹಾರಕ್ಕೆ ಭೇಟಿ ನೀಡಿದ್ದಾರೆ. ಅವರು ಮಧುಬನಿಗೆ ಪ್ರಯಾಣಿಸಲಿದ್ದು, ಬೆಳಿಗ್ಗೆ 11:45 ರ ಸುಮಾರಿಗೆ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಗುರುತಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪಿಐಬಿಯ ಪೋರ್ಟಲ್‌ನಲ್ಲಿ ಪಿಎಂಒ ಬಿಡುಗಡೆ ಮಾಡಿತು.</p>



<p>ಅವರು 13,480 ಕೋಟಿ ರುಪಾಯಿಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ನೆರವೇರಿಸಿ,  ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ.<br><br>ಬಿಹಾರದ ಮಧುಬನಿಯಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ಮೋದಿ, &#8220;ನ್ಯಾಯ ದೊರಕುವಂತೆ ನೋಡಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು, ಇಡೀ ರಾಷ್ಟ್ರವು ದೃಢನಿಶ್ಚಯದಿಂದ ದೃಢವಾಗಿದೆ&#8221; ಎಂದು ಹೇಳಿದರು.</p>



<p>ಜಮ್ಮು ಮತ್ತು ಕಾಶ್ಮೀರ ದಾಳಿಯ ಬಗ್ಗೆ ಹಿಂದಿಯಲ್ಲಿ ಮಾತನಾಡಿದ ಪ್ರಧಾನಿ, ಇದ್ದಕ್ಕಿದ್ದಂತೆ ಇಂಗ್ಲಿಷ್‌ಗೆ ಬದಲಾಯಿಸಿದರು ಮತ್ತು &#8220;ಇಂದು, ಬಿಹಾರದ ಮಣ್ಣಿನಿಂದ, ನಾನು ಇಡೀ ಜಗತ್ತಿಗೆ ಇದನ್ನು ಹೇಳುತ್ತೇನೆ, ಭಾರತವು ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಅವರ ಬೆಂಬಲಿಗರನ್ನು ಗುರುತಿಸುತ್ತದೆ, ಪತ್ತೆಹಚ್ಚುತ್ತದೆ ಮತ್ತು ಶಿಕ್ಷಿಸುತ್ತದೆ. ನಾವು ಅವರನ್ನು ಭೂಮಿಯ ಎಲ್ಲೇ ಹೋದರೂ ಬೆನ್ನಟ್ಟುತ್ತೇವೆ&#8221; ಎಂದು ಹೇಳಿದರು.</p>



<p>&#8220;ಭಾರತದ ಚೈತನ್ಯವು ಭಯೋತ್ಪಾದನೆಯಿಂದ ಎಂದಿಗೂ ಮುರಿಯುವುದಿಲ್ಲ… ಭಯೋತ್ಪಾದನೆಗೆ ಶಿಕ್ಷೆಯಾಗದೆ ಉಳಿಯುವುದಿಲ್ಲ. ನ್ಯಾಯ ದೊರಕಿಸಿಕೊಡಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು&#8221; ಎಂದು ಪ್ರಧಾನಿ ಮೋದಿ ಜಗತ್ತಿಗೆ ತಿಳಿಸಿದರು &#8220;ಇಡೀ ರಾಷ್ಟ್ರವು ಈ ಸಂಕಲ್ಪದಲ್ಲಿ ದೃಢವಾಗಿದೆ&#8221; ಎಂದು ಅವರು ಹಿಂದಿ ಹೃದಯಭಾಗದಲ್ಲಿ ಹೇಳಿದರು.</p>



<p>ಜಗತ್ತಿಗೆ ಸ್ಪಷ್ಟ ಸಂದೇಶವನ್ನು ನೀಡಿದ ಪ್ರಧಾನಿ ಮೋದಿ, &#8220;ಮಾನವೀಯತೆಯನ್ನು ನಂಬುವ ಪ್ರತಿಯೊಬ್ಬರೂ ನಮ್ಮೊಂದಿಗಿದ್ದಾರೆ&#8221; ಎಂದು ಹೇಳಿದರು. ಇಂಗ್ಲಿಷ್‌ನಲ್ಲಿ ನಡೆದ ಅಪರೂಪದ ಭಾಷಣವು ಭಾರತೀಯರಿಗೆ ಅಲ್ಲ, ಜಗತ್ತಿಗೆ ಸ್ಪಷ್ಟವಾಗಿ ಸಂದೇಶವಾಗಿತ್ತು. &#8216;ನಮ್ಮೊಂದಿಗೆ ನಿಂತ ಜನರಿಗೆ, ದೇಶಗಳ ನಾಯಕರಿಗೆ ನಾನು ಧನ್ಯವಾದ ಹೇಳುತ್ತೇನೆ&#8221; ಎಂದು ಪ್ರಧಾನಿ ಮಧುಬನಿಯಲ್ಲಿ ಹೇಳಿದರು.</p>



<p>ಇಂದು ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ಮೋದಿ ಭಾಗವಹಿಸುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.</p>



<p>ದಾಳಿಯ ಸುದ್ದಿ ತಿಳಿದ ನಂತರ ಮೋದಿ ಅವರು ಸೌದಿ ಅರೇಬಿಯಾ ಪ್ರವಾಸವನ್ನು ಮೊಟಕುಗೊಳಿಸಿ ನಿನ್ನೆ ಬೆಳಿಗ್ಗೆ ಭಾರತಕ್ಕೆ ಮರಳಿದರು. ಅವರು ದೆಹಲಿ ವಿಮಾನ ನಿಲ್ದಾಣದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಸಭೆ ನಡೆಸಿದ್ದಾರೆಂದು ವರದಿಯಾಗಿದೆ.</p>
]]></content:encoded>
					
		
		
			</item>
		<item>
		<title>ಹೋಳಿ ಹಬ್ಬದಂದು ಬಣ್ಣ ಎರಚುವುದಕ್ಕೆ ಆಕ್ಷೇಪಣೆ ಇದ್ದರೆ ಮನೆಯಲ್ಲೇ ಇರಿ: ಬಿಹಾರದ ಬಿಜೆಪಿ ಶಾಸಕನಿಂದ ಮುಸ್ಲಿಮರಿಗೆ ಮನವಿ</title>
		<link>https://peepalmedia.com/if-you-have-objections-to-throwing-colours-on-holi-stay-home-bihar-bjp-mla-appeals-to-muslims/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 11 Mar 2025 06:37:02 +0000</pubDate>
				<category><![CDATA[ಕೋಮುವಾದ]]></category>
		<category><![CDATA[bihar]]></category>
		<category><![CDATA[bjp]]></category>
		<category><![CDATA[communalism]]></category>
		<category><![CDATA[fascism]]></category>
		<category><![CDATA[holi]]></category>
		<category><![CDATA[Ramzan]]></category>
		<guid isPermaLink="false">https://peepalmedia.com/?p=55085</guid>

					<description><![CDATA[ಬಿಹಾರದ ಭಾರತೀಯ ಜನತಾ ಪಕ್ಷದ ಶಾಸಕ ಹರಿಭೂಷಣ್ ಠಾಕೂರ್ ಬಚೌಲ್ ಮುಸ್ಲಿಮರು ಹೋಳಿ ಹಬ್ಬದಂದು ಬಣ್ಣ ಬಳಿದುಕೊಳ್ಳಲು ಸಿದ್ದರಿಲ್ಲದಿದ್ದರೆ ಮನೆಯೊಳಗೆ ಕುಳಿತುಕೊಳ್ಳಲಿ ಎಂದು ಸೋಮವಾರ ಹೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಈ ವರ್ಷ ಮಾರ್ಚ್ 14 ರಂದು ಹಿಂದೂಗಳ ಹೋಳಿ ಹಬ್ಬ ಮತ್ತು ಇದು ಇಸ್ಲಾಮಿಕ್ ಪವಿತ್ರ ರಂಜಾನ್ ತಿಂಗಳಿನ ಶುಕ್ರವಾರದ ಪ್ರಾರ್ಥನೆಯ ದಿನ ಬರುತ್ತದೆ. ಹೋಳಿಯಂದು ಯಾರಾದರೂ ಮುಸ್ಲಿಮರಿಗೆ ಬಣ್ಣ ಬಳಿದರೆ ಕೋಪ ಮಾಡಿಕೊಳ್ಳಬಾರದು ಎಂದು ಬಚೌಲ್ ಸೋಮವಾರ ಹೇಳಿದ್ದಾರೆ. &#8220;ಅವರಿಗೆ ಅಂತಹ ಸಮಸ್ಯೆ ಇದ್ದರೆ, [&#8230;]]]></description>
										<content:encoded><![CDATA[
<p>ಬಿಹಾರದ ಭಾರತೀಯ ಜನತಾ ಪಕ್ಷದ ಶಾಸಕ <a href="https://indianexpress.com/article/india/bihar-bjp-mla-haribhushan-thakur-asks-muslims-to-stay-indoors-during-holi-9879379/" target="_blank" rel="noreferrer noopener">ಹರಿಭೂಷಣ್ ಠಾಕೂರ್ ಬಚೌಲ್</a> ಮುಸ್ಲಿಮರು ಹೋಳಿ ಹಬ್ಬದಂದು ಬಣ್ಣ ಬಳಿದುಕೊಳ್ಳಲು ಸಿದ್ದರಿಲ್ಲದಿದ್ದರೆ ಮನೆಯೊಳಗೆ ಕುಳಿತುಕೊಳ್ಳಲಿ ಎಂದು ಸೋಮವಾರ ಹೇಳಿದ್ದಾರೆ ಎಂದು <em>ದಿ ಇಂಡಿಯನ್ ಎಕ್ಸ್‌ಪ್ರೆಸ್</em> ವರದಿ ಮಾಡಿದೆ.</p>



<p>ಈ ವರ್ಷ ಮಾರ್ಚ್ 14 ರಂದು ಹಿಂದೂಗಳ ಹೋಳಿ ಹಬ್ಬ ಮತ್ತು ಇದು ಇಸ್ಲಾಮಿಕ್ ಪವಿತ್ರ ರಂಜಾನ್ ತಿಂಗಳಿನ ಶುಕ್ರವಾರದ ಪ್ರಾರ್ಥನೆಯ ದಿನ ಬರುತ್ತದೆ.</p>



<p>ಹೋಳಿಯಂದು ಯಾರಾದರೂ ಮುಸ್ಲಿಮರಿಗೆ ಬಣ್ಣ ಬಳಿದರೆ ಕೋಪ ಮಾಡಿಕೊಳ್ಳಬಾರದು ಎಂದು ಬಚೌಲ್ ಸೋಮವಾರ ಹೇಳಿದ್ದಾರೆ. &#8220;ಅವರಿಗೆ ಅಂತಹ ಸಮಸ್ಯೆ ಇದ್ದರೆ, ಅವರು ಮನೆಯೊಳಗೆ ಇರಲಿ, ಕೋಮು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಇದು ಅತ್ಯಗತ್ಯ,&#8221; ಎಂದು ಅವರು <a href="https://www.deccanherald.com/india/bihar/bihar-bjp-mla-haribhushan-thakur-bachaul-asks-muslims-to-stay-indoors-on-holi-sparks-controversy-3439703" target="_blank" rel="noreferrer noopener">ಹೇಳಿದರು</a> ಎಂದು ಪಿಟಿಐ ವರದಿ ಮಾಡಿದೆ. </p>



<p>&#8220;52 ಶುಕ್ರವಾರಗಳಿವೆ, ಅವರು [ಮುಸ್ಲಿಮರು] ಹೋಳಿಯಂದು ಹೊರಗೆ ಬರುವುದನ್ನು ತಪ್ಪಿಸಬಹುದು&#8221; ಎಂದು ಮಧುಬನಿ ಜಿಲ್ಲೆಯ ಬಿಸ್ಫಿ ಕ್ಷೇತ್ರದ ಶಾಸಕರು ಹೇಳಿದರು.</p>



<p>ಈ ಹೇಳಿಕೆಗೆ ಪ್ರತಿಕ್ರಿಯೆಯಾಗಿ, ವಿರೋಧ ಪಕ್ಷದ ನಾಯಕ ಮತ್ತು ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್, ಬಿಜೆಪಿ ಶಾಸಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಒತ್ತಾಯಿಸಿದರು.</p>



<p>&#8220;ಈ ಬಚೌಲ್ ಯಾರು? ಮುಸ್ಲಿಮರ ಬಗ್ಗೆ ಅವರು ಅಂತಹ ಹೇಳಿಕೆಯನ್ನು ಹೇಗೆ ನೀಡಬಹುದು? ಬಚೌಲ್ ಅವರನ್ನು ಶಿಕ್ಷಿಸಲು ಮುಖ್ಯಮಂತ್ರಿಗೆ ಧೈರ್ಯವಿದೆಯೇ?&#8221; ಎಂದು ಯಾದವ್ ಪ್ರಶ್ನಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. </p>



<p>&#8220;ಇದು &#8216;ರಾಮ್ ಮತ್ತು ರಹೀಮ್&#8217; ನಲ್ಲಿ ನಂಬಿಕೆ ಇಡುವ ದೇಶ&#8230; ಇದು ಬಿಹಾರ. ಇಲ್ಲಿ ಐದಾರು ಹಿಂದೂಗಳು ಒಬ್ಬ ಮುಸ್ಲಿಂ ಸಹೋದರನನ್ನು ರಕ್ಷಿಸುತ್ತಾರೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು&#8221; ಎಂದು ಯಾದವ್ ಹೇಳಿದರು.</p>



<figure class="wp-block-image size-full"><img decoding="async" width="542" height="635" src="https://peepalmedia.com/wp-content/uploads/2025/03/image-1.png" alt="" class="wp-image-55086" srcset="https://peepalmedia.com/wp-content/uploads/2025/03/image-1.png 542w, https://peepalmedia.com/wp-content/uploads/2025/03/image-1-256x300.png 256w, https://peepalmedia.com/wp-content/uploads/2025/03/image-1-150x176.png 150w, https://peepalmedia.com/wp-content/uploads/2025/03/image-1-300x351.png 300w" sizes="(max-width: 542px) 100vw, 542px" /></figure>



<p>ಜನತಾದಳ (ಯುನೈಟೆಡ್) ನಾಯಕರೂ ಆಗಿರುವ ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮಾ ಖಾನ್, ಬಿಹಾರ ಅಧಿಕಾರಿಗಳು ಕೋಮು ಸೌಹಾರ್ದತೆಯನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುತ್ತಾರೆ ಎಂದು ಹೇಳಿದರು. ಜನತಾದಳ (ಯುನೈಟೆಡ್) ಬಿಜೆಪಿಯ ಮಿತ್ರ ಪಕ್ಷವಾಗಿದೆ.</p>



<p>&#8220;ನನ್ನ ಪ್ರಕಾರ, ಯಾವುದೇ ಹಬ್ಬವು ಸಹೋದರತ್ವದ ಸಂದೇಶವನ್ನು ನೀಡುತ್ತದೆ. ಹಬ್ಬಗಳು ಸಹೋದರತ್ವವನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿವೆ, ಮತ್ತು ಜುಮ್ಮಾ ಪ್ರಾರ್ಥನೆಗೆ ಸಂಬಂಧಿಸಿದಂತೆ, ಅವುಗಳನ್ನು ಮಸೀದಿಯಲ್ಲಿಯೇ ಮಾಡಲಾಗುತ್ತದೆ. ಜನರು ಅಲ್ಲಿಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಾರೆ,&#8221; ಎಂದು <a href="https://x.com/ians_india/status/1898987902719410315" target="_blank" rel="noreferrer noopener">ಖಾನ್ ಹೇಳಿದರು</a> . </p>



<p>ಬಚೌಲ್ ಅವರ ಹೇಳಿಕೆಗಳು ಮಾರ್ಚ್ 6 ರಂದು ಉತ್ತರ ಪ್ರದೇಶದ ಸಂಭಾಲ್‌ನಲ್ಲಿ&nbsp;<a href="https://scroll.in/latest/1080013/sambhal-police-officers-muslims-who-dont-want-holi-colours-should-stay-indoors-remark-sparks-row">ಪೊಲೀಸ್ ಅಧಿಕಾರಿಯೊಬ್ಬರು</a>&nbsp;ಮಾಡಿದ ಹೇಳಿಕೆಗಳಿಗೆ ಹೋಲುತ್ತವೆ .</p>



<p>ಸಂಭಾಲ್ ವೃತ್ತ ಅಧಿಕಾರಿ ಅನುಜ್ ಕುಮಾರ್ ಚೌಧರಿ ಅವರು, ಮುಸ್ಲಿಮರು ಹೋಳಿ ಬಣ್ಣಗಳನ್ನು ತಮ್ಮ ಮೇಲೆ ಎಸೆಯುವುದನ್ನು ಬಯಸದಿದ್ದರೆ ಮನೆಯಲ್ಲಿಯೇ ಇರಬೇಕು ಎಂದು ಹೇಳಿದ್ದರು. &#8220;ಮತ್ತು ಅವರು ತಮ್ಮ ಮನೆಯಿಂದ ಹೊರಗೆ ಹೋಗಲು ಬಯಸಿದರೆ, ಬಣ್ಣಗಳು ಅವರ ಮೇಲೆ ಬಿದ್ದರೆ ಆಕ್ಷೇಪಿಸದಷ್ಟು ದೊಡ್ಡ ಹೃದಯ ಹೊಂದಿರಬೇಕು,&#8221; ಎಂದು ಅವರು ಸೇರಿಸಿದ್ದರು.</p>



<p>ಪೊಲೀಸ್ ಅಧಿಕಾರಿಗಳು ಆಡಳಿತಾರೂಢ ಬಿಜೆಪಿಯ ಏಜೆಂಟರಂತೆ ವರ್ತಿಸಬಾರದು ಎಂದು ಹೇಳಿದ್ದ ವಿರೋಧ ಪಕ್ಷದ ನಾಯಕರು ಈ ಹೇಳಿಕೆಯನ್ನು ಟೀಕಿಸಿದರು.</p>



<p>ಪೊಲೀಸ್ ಅಧಿಕಾರಿಯ ಹೇಳಿಕೆಯನ್ನು ಸಮರ್ಥಿಸಿಕೊಂಡ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ಶುಕ್ರವಾರದ ಪ್ರಾರ್ಥನೆ ಮುಸ್ಲಿಮರಿಗೆ ಕಡ್ಡಾಯವಲ್ಲ ಎಂದು ಹೇಳಿದ್ದಾರೆ.</p>



<p>&#8220;ಯಾರಾದರೂ [ಆ ದಿನ] ನಮಾಜ್ ಮಾಡಲು ಬಯಸಿದರೆ, ಅವರು ಅದನ್ನು ಮನೆಯಲ್ಲಿಯೇ ಮಾಡಬಹುದು. ಅವರು ಮಸೀದಿಗೆ ಹೋಗುವುದು ಅನಿವಾರ್ಯವಲ್ಲ. ಅವರು ಹೋಗಲು ಬಯಸಿದರೆ, ಅವರು ಬಣ್ಣಗಳಿಗೆ ಆಕ್ಷೇಪಿಸಬಾರದು,&#8221; ಎಂದು ಅವರು ಹೇಳಿದರು. </p>
]]></content:encoded>
					
		
		
			</item>
		<item>
		<title>ಬಿಪಿಸಿಎಸ್ ಪ್ರತಿಭಟನೆ: ಐದನೇ ದಿನದ ಉಪವಾಸ ಹೋರಾಟದಂದು ಪ್ರಶಾಂತ್‌ ಕಿಶೋರ್‌ ಬಂಧನ</title>
		<link>https://peepalmedia.com/bpcs-protests-prashant-kishor-arrested-on-fifth-day-of-fast/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 06 Jan 2025 06:02:08 +0000</pubDate>
				<category><![CDATA[ದೇಶ]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[bihar]]></category>
		<category><![CDATA[BPSC]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Prashant Kishor]]></category>
		<category><![CDATA[protest]]></category>
		<guid isPermaLink="false">https://peepalmedia.com/?p=51718</guid>

					<description><![CDATA[ಹೊಸದಿಲ್ಲಿ:&#160;ಬಿಹಾರದ ಲೋಕಸೇವಾ ಆಯೋಗದ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕಳೆದ ವಾರ ಪಾಟ್ನಾದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ಪ್ರಶಾಂತ್ ಕಿಶೋರ್ ಅವರನ್ನು ಇಂದು ಮುಂಜಾನೆ ಬಂಧಿಸಲಾಗಿದೆ. ಜನ್ ಸೂರಾಜ್ ಎಂಬ ಸಂಘಟನೆಯನ್ನು ಸ್ಥಾಪಿಸಿದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ನಗರದ ಏಮ್ಸ್‌ಗೆ ಪೊಲೀಸರು ಕರೆದೊಯ್ದಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಗಾಂಧಿ ಮೈದಾನದಲ್ಲಿ ಕಿಶೋರ್ ಅವರ ಧರಣಿ &#8220;ಕಾನೂನುಬಾಹಿರ&#8221; ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಸಿಂಗ್ ಹೇಳಿದ್ದಾರೆ ಎಂದು ಸುದ್ದಿ [&#8230;]]]></description>
										<content:encoded><![CDATA[
<p><strong>ಹೊಸದಿಲ್ಲಿ:</strong>&nbsp;ಬಿಹಾರದ ಲೋಕಸೇವಾ ಆಯೋಗದ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕಳೆದ ವಾರ ಪಾಟ್ನಾದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ಪ್ರಶಾಂತ್ ಕಿಶೋರ್ ಅವರನ್ನು ಇಂದು ಮುಂಜಾನೆ ಬಂಧಿಸಲಾಗಿದೆ.</p>



<p>ಜನ್ ಸೂರಾಜ್ ಎಂಬ ಸಂಘಟನೆಯನ್ನು ಸ್ಥಾಪಿಸಿದ ಚುನಾವಣಾ ತಂತ್ರಗಾರ ಪ್ರಶಾಂತ್  ಕಿಶೋರ್ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ನಗರದ ಏಮ್ಸ್‌ಗೆ ಪೊಲೀಸರು ಕರೆದೊಯ್ದಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.</p>



<p>ಗಾಂಧಿ ಮೈದಾನದಲ್ಲಿ ಕಿಶೋರ್ ಅವರ ಧರಣಿ &#8220;ಕಾನೂನುಬಾಹಿರ&#8221; ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಸಿಂಗ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಉಲ್ಲೇಖಿಸಿದೆ. ಮೈದಾನ ಪ್ರತಿಭಟನೆ ಮಾಡಲು ನಿರ್ಬಂಧಿತವಾಗಿದೆ ಎಂದು ಸಿಂಗ್ ಅವರು ಅನೇಕ ಸುದ್ದಿ ವರದಿಗಳಲ್ಲಿ ಉಲ್ಲೇಖಿಸಿದ್ದಾರೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr"><a href="https://twitter.com/hashtag/WATCH?src=hash&amp;ref_src=twsrc%5Etfw">#WATCH</a> | BPSC protest | Bihar: Patna Police detains Jan Suraaj chief Prashant Kishor who was sitting on an indefinite hunger strike at Gandhi Maidan <a href="https://t.co/cOnoM7EGW1">pic.twitter.com/cOnoM7EGW1</a></p>&mdash; ANI (@ANI) <a href="https://twitter.com/ANI/status/1876037772609454397?ref_src=twsrc%5Etfw">January 5, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಪೊಲೀಸರು ಸ್ಥಳ ತೆರವು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮೈದಾನದಲ್ಲಿನ ಪೊಲೀಸ್ ಕ್ರಮದ ಕೆಲವು ವೀಡಿಯೊಗಳು ಪ್ರತಿಭಟನಾಕಾರರ ವಿರುದ್ಧ ಬಲ ಪ್ರಯೋಗ ಮಾಡಿರುವುದನ್ನು ತೋರಿಸುತ್ತವೆ. ಕಿಶೋರ್‌ಗೆ ಪೊಲೀಸರು ಕಪಾಳಕ್ಕೆ ಹೊಡೆದಿದ್ದಾರೆ ಎಂದು ದಿ <a href="https://www.thehindu.com/news/national/bihar/bpsc-protest-patna-police-detains-prashant-kishor-vacates-gandhi-maidan/article69066715.ece"><em>ಹಿಂದೂ ವರದಿ ಮಾಡಿದೆ.</em></a></p>



<p>ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ಪರೀಕ್ಷೆಯನ್ನು ರದ್ದುಗೊಳಿಸಲು &#8220;48 ಗಂಟೆಗಳ ಅಲ್ಟಿಮೇಟಮ್&#8221; ನೀಡಿದ ಮೂರು ದಿನಗಳ ನಂತರ ಕಿಶೋರ್ ಜನವರಿ 2 ರಂದು ತನ್ನ ಉಪವಾಸವನ್ನು ಪ್ರಾರಂಭಿಸಿದರು.</p>



<p>ಪೇಪರ್ ಸೋರಿಕೆಯ ಆರೋಪಗಳು ಕೇಳಿಬಂದ ನಂತರ BPSC ಯ 70 ನೇ ಸಂಯೋಜಿತ ಪ್ರಾಥಮಿಕ ಸ್ಪರ್ಧಾತ್ಮಕ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಬಿಹಾರದಾದ್ಯಂತ ಪ್ರತಿಭಟನೆ ನಡೆಯಿತು.</p>



<p>“ನನ್ನ ಪ್ರಾಥಮಿಕ ಬೇಡಿಕೆ, ಸಹಜವಾಗಿ, ಡಿಸೆಂಬರ್ 13 ರಂದು ನಡೆದ ಪರೀಕ್ಷೆಯನ್ನು ರದ್ದುಗೊಳಿಸುವುದು ಮತ್ತು ಹೊಸ ಪರೀಕ್ಷೆಯನ್ನು ನಡೆಸುವುದು. ಪರೀಕ್ಷೆಯ ಮೂಲಕ ಭರ್ತಿ ಮಾಡಬೇಕಾದ ಹುದ್ದೆಗಳನ್ನು ವಾಸ್ತವಿಕವಾಗಿ ಮಾರಾಟಕ್ಕೆ ಇಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಅಂತಹ ಭ್ರಷ್ಟ ಅಧಿಕಾರಿಗಳನ್ನು ಗುರುತಿಸಿ ನ್ಯಾಯಾಂಗದ ಮುಂದೆ ತರಬೇಕು,” ಎಂದು ಕಿಶೋರ್ ಅವರು ತಮ್ಮ ಉಪವಾಸವನ್ನು ಆರಂಭಿಸುವಾಗ ಹೇಳಿರುವುದನ್ನು ಪಿಟಿಐ ವರದಿ ಮಾಡಿದೆ.</p>
]]></content:encoded>
					
		
		
			</item>
		<item>
		<title>ಅದಾನಿ ಭ್ರಷ್ಟಾಚಾರ, ಮಣಿಪುರ ಹಿಂಸಾಚಾರದ ವಿರುದ್ಧ ಬಿಹಾರ ಕಾಂಗ್ರೆಸ್ ಪ್ರತಿಭಟನೆ</title>
		<link>https://peepalmedia.com/bihar-congress-protest-against-adani-corruption-manipur-violence/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 18 Dec 2024 12:12:25 +0000</pubDate>
				<category><![CDATA[ದೇಶ]]></category>
		<category><![CDATA[adani]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[bihar]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[gautham adani]]></category>
		<category><![CDATA[kananda]]></category>
		<category><![CDATA[karnataka]]></category>
		<category><![CDATA[modi]]></category>
		<category><![CDATA[narendra modi]]></category>
		<category><![CDATA[patna]]></category>
		<guid isPermaLink="false">https://peepalmedia.com/?p=50882</guid>

					<description><![CDATA[ಪಾಟ್ನಾ: ಆರ್ಥಿಕ ಅವ್ಯವಹಾರದ ಆರೋಪದ ಮೇಲೆ ಅಮೆರಿಕದ ಪ್ರಾಸಿಕ್ಯೂಟರ್‌ಗಳಿಂದ ಆರೋಪಗಳಿಗೆ ಒಳಗಾಗಿರುವ ಉದ್ಯಮಿ ಗೌತಮ್ ಅದಾನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಹಾರದ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ರಾಜಭವನ ಮೆರವಣಿಗೆ ನಡೆಸಿದರು. ಬಿಹಾರ ಪ್ರದೇಶ ಕಾಂಗ್ರೆಸ್ ಸಮಿತಿ (ಬಿಪಿಸಿಸಿ) ಮಾಜಿ ಅಧ್ಯಕ್ಷ ಕೌಕಬ್ ಖಾದ್ರಿ ನೇತೃತ್ವದಲ್ಲಿ, ಪಕ್ಷದ ಕಾರ್ಯಕರ್ತರು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸುವ ಘೋಷಣೆಗಳನ್ನು ಎತ್ತಿದರು. ಬಿಪಿಸಿಸಿ ಕೇಂದ್ರ ಕಚೇರಿ ಸದಾಕತ್ ಆಶ್ರಮದಲ್ಲಿ ಆರಂಭವಾದ ಮೆರವಣಿಗೆಯನ್ನು ರಾಜಭವನದಿಂದ ಒಂದು ಕಿಲೋಮೀಟರ್ ಮುಂದೆ ಪೊಲೀಸರು [&#8230;]]]></description>
										<content:encoded><![CDATA[
<p><strong>ಪಾಟ್ನಾ: </strong>ಆರ್ಥಿಕ ಅವ್ಯವಹಾರದ ಆರೋಪದ ಮೇಲೆ ಅಮೆರಿಕದ ಪ್ರಾಸಿಕ್ಯೂಟರ್‌ಗಳಿಂದ ಆರೋಪಗಳಿಗೆ ಒಳಗಾಗಿರುವ ಉದ್ಯಮಿ ಗೌತಮ್ ಅದಾನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಹಾರದ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ರಾಜಭವನ ಮೆರವಣಿಗೆ ನಡೆಸಿದರು.</p>



<p>ಬಿಹಾರ ಪ್ರದೇಶ ಕಾಂಗ್ರೆಸ್ ಸಮಿತಿ (ಬಿಪಿಸಿಸಿ) ಮಾಜಿ ಅಧ್ಯಕ್ಷ ಕೌಕಬ್ ಖಾದ್ರಿ ನೇತೃತ್ವದಲ್ಲಿ, ಪಕ್ಷದ ಕಾರ್ಯಕರ್ತರು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸುವ ಘೋಷಣೆಗಳನ್ನು ಎತ್ತಿದರು.</p>



<p>ಬಿಪಿಸಿಸಿ ಕೇಂದ್ರ ಕಚೇರಿ ಸದಾಕತ್ ಆಶ್ರಮದಲ್ಲಿ ಆರಂಭವಾದ ಮೆರವಣಿಗೆಯನ್ನು ರಾಜಭವನದಿಂದ ಒಂದು ಕಿಲೋಮೀಟರ್ ಮುಂದೆ ಪೊಲೀಸರು ತಡೆದರು. PTI</p>



<p></p>
]]></content:encoded>
					
		
		
			</item>
		<item>
		<title>ಗುಂಡು ತಗುಲಿದರೂ ಗಾಡಿ ನಿಲ್ಲಿಸದೆ ಪ್ರಯಾಣಿಕರನ್ನು ರಕ್ಷಿಸಿದ ಚಾಲಕ</title>
		<link>https://peepalmedia.com/shot-in-stomach-driver-keeps-driving-to-save-passengers/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 07 Dec 2024 07:57:34 +0000</pubDate>
				<category><![CDATA[ದೇಶ]]></category>
		<category><![CDATA[bengalure]]></category>
		<category><![CDATA[bihar]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=50369</guid>

					<description><![CDATA[ಬಿಹಾರ: ಬಿಹಾರದ ಭೋಜ್‌ಪುರ ಜಿಲ್ಲೆಯಲ್ಲಿ ಜೀಪ್ ಚಾಲಕ ಸಂತೋಷ್ ಸಿಂಗ್ ತಮ್ಮ ಹೊಟ್ಟೆಗೆ ಗುಂಡು ತಗುಲಿದರೂ ಕೆಲವು ಕಿಲೋಮೀಟರ್‌ಗಳವರೆಗೆ ಜೀಪನ್ನು ಚಲಾಯಿಸುವ ಮೂಲಕ ತನ್ನ ಪ್ರಯಾಣಿಕರನ್ನು ರಕ್ಷಿಸಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಸಿಂಗ್ ತನ್ನ ಜೀಪಿನಲ್ಲಿ 14-15 ಜನರೊಂದಿಗೆ &#8216;ತಿಲಕ್&#8217; ಸಮಾರಂಭದಿಂದ ಹಿಂದಿರುಗುತ್ತಿದ್ದಾಗ, ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಜೌನ್ ಗ್ರಾಮದ ಬಳಿ ವಾಹನವನ್ನು ಹಿಂಬಾಲಿಸಿದರು ಮತ್ತು ಸಿಂಗ್ ಅವರ ಹೊಟ್ಟೆಗೆ ಗುಂಡು ಹಾರಿಸಿದರು. ಗಾಯ ಮತ್ತು ಅಸಹನೀಯ ನೋವಿನ ಹೊರತಾಗಿಯೂ, ಜೀಪನ್ನು ನಿಲ್ಲಿಸದೆ ಪ್ರಯಾಣಿಕರ [&#8230;]]]></description>
										<content:encoded><![CDATA[
<p><strong>ಬಿಹಾರ:</strong> ಬಿಹಾರದ ಭೋಜ್‌ಪುರ ಜಿಲ್ಲೆಯಲ್ಲಿ ಜೀಪ್ ಚಾಲಕ ಸಂತೋಷ್ ಸಿಂಗ್ ತಮ್ಮ ಹೊಟ್ಟೆಗೆ ಗುಂಡು ತಗುಲಿದರೂ ಕೆಲವು ಕಿಲೋಮೀಟರ್‌ಗಳವರೆಗೆ ಜೀಪನ್ನು ಚಲಾಯಿಸುವ ಮೂಲಕ ತನ್ನ ಪ್ರಯಾಣಿಕರನ್ನು ರಕ್ಷಿಸಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.</p>



<p>ಸಿಂಗ್ ತನ್ನ ಜೀಪಿನಲ್ಲಿ 14-15 ಜನರೊಂದಿಗೆ &#8216;ತಿಲಕ್&#8217; ಸಮಾರಂಭದಿಂದ ಹಿಂದಿರುಗುತ್ತಿದ್ದಾಗ, ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಜೌನ್ ಗ್ರಾಮದ ಬಳಿ ವಾಹನವನ್ನು ಹಿಂಬಾಲಿಸಿದರು ಮತ್ತು ಸಿಂಗ್ ಅವರ ಹೊಟ್ಟೆಗೆ ಗುಂಡು ಹಾರಿಸಿದರು. ಗಾಯ ಮತ್ತು ಅಸಹನೀಯ ನೋವಿನ ಹೊರತಾಗಿಯೂ, ಜೀಪನ್ನು ನಿಲ್ಲಿಸದೆ ಪ್ರಯಾಣಿಕರ ಜೀವವನ್ನು ಕಾಪಾಡಿದ್ದಾರೆ. </p>



<p>ಜೀಪಿನಲ್ಲಿದ್ದ ಇತರೆ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಸಿಂಗ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಬುಧವಾರ ಮತ್ತು ಗುರುವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ.</p>



<p></p>
]]></content:encoded>
					
		
		
			</item>
		<item>
		<title>ಅತ್ಯಾಚಾರಿ ಆರೋಪಿ, ಸ್ವಯಂಘೋಷಿತ ದೇವಮಾನವ ರಾಮ್ ರಹೀಂ ಗುರ್ಮೀತ್‌ ಸಿಂಗ್ ಕೊಲೆ ಕೇಸಿನಿಂದ ಬಚಾವ್‌</title>
		<link>https://peepalmedia.com/accused-rapist-self-proclaimed-godman-ram-rahim-gurmeet-singh-acquitted-in-murder-case/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 28 May 2024 10:58:09 +0000</pubDate>
				<category><![CDATA[ಅಪರಾಧ]]></category>
		<category><![CDATA[bihar]]></category>
		<category><![CDATA[court]]></category>
		<category><![CDATA[crime]]></category>
		<category><![CDATA[hariyana]]></category>
		<category><![CDATA[karnataka]]></category>
		<category><![CDATA[national]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[politics]]></category>
		<category><![CDATA[ramrahimgurmithsingh]]></category>
		<category><![CDATA[writing]]></category>
		<guid isPermaLink="false">https://peepalmedia.com/?p=40010</guid>

					<description><![CDATA[ತನ್ನ ಮ್ಯಾನೇಜರ್‌ ರಂಜಿತ್ ಸಿಂಗನ ಕೊಲೆ ಮಾಡಿದ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಸಿರ್ಸಾದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಅನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಖುಲಾಸೆಗೊಳಿಸಿದೆ. ತನ್ಮ ಮಹಿಳಾ ಅನುಯಾಯಿಗಳ ಮೇಲೆ ಗುರ್ಮೀತ್ ಸಿಂಗ್ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಆರೋಪಿಸಿದ್ದ ಪತ್ರವೊಂದು 2001ರಲ್ಲಿ ಬಯಲಾಗಿತ್ತು. ಇದರ ಹಿಂದೆ ರಂಜಿತ್ ಸಿಂಗ್ ಪಾತ್ರವಿದೆ ಎಂದು ಶಂಕಿಸಿ, ಆತನನ್ನು ಜುಲೈ 10,2002ರಂದು ರಾಮ್‌ ರಹೀಮ್‌ ಗುರ್ಮೀತ್‌ ಸಿಂಗ್‌ ಗುಂಡಿಕ್ಕಿ ಕೊಂದಿದ್ದಾನೆ ಎಂದು ಆರೋಪಿಸಿ ಗುರ್ಮೀತ್ [&#8230;]]]></description>
										<content:encoded><![CDATA[
<p>ತನ್ನ ಮ್ಯಾನೇಜರ್‌ ರಂಜಿತ್ ಸಿಂಗನ ಕೊಲೆ ಮಾಡಿದ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಸಿರ್ಸಾದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಅನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಖುಲಾಸೆಗೊಳಿಸಿದೆ.</p>



<p>ತನ್ಮ ಮಹಿಳಾ ಅನುಯಾಯಿಗಳ ಮೇಲೆ ಗುರ್ಮೀತ್ ಸಿಂಗ್ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಆರೋಪಿಸಿದ್ದ ಪತ್ರವೊಂದು 2001ರಲ್ಲಿ ಬಯಲಾಗಿತ್ತು. ಇದರ ಹಿಂದೆ ರಂಜಿತ್ ಸಿಂಗ್ ಪಾತ್ರವಿದೆ ಎಂದು ಶಂಕಿಸಿ, ಆತನನ್ನು ಜುಲೈ 10,2002ರಂದು ರಾಮ್‌ ರಹೀಮ್‌ ಗುರ್ಮೀತ್‌ ಸಿಂಗ್‌ ಗುಂಡಿಕ್ಕಿ ಕೊಂದಿದ್ದಾನೆ ಎಂದು ಆರೋಪಿಸಿ ಗುರ್ಮೀತ್ ವಿರುದ್ದ ಸಿಬಿಐ ಚಾರ್ಜ್‌ ಶೀಟ್‌ನಲ್ಲಿ ದಾಖಲಿಸಿತ್ತು. ಪಂಚಕುಲದ ಸಿಬಿಐ ನ್ಯಾಯಾಲಯ ಕೂಡ ಆತನನ್ನು ದೋಷಿ ಎಂದು ಘೋಷಿಸಿ ಶಿಕ್ಷೆ ಪ್ರಕಟಿಸಿತ್ತು.</p>



<p>ಇದರ ವಿರುದ್ದ ಗುರ್ಮೀತ್ ಸಿಂಗ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಸುರೇಶ್ ಠಾಕೂರ್ ಮತ್ತು ನ್ಯಾಯಮೂರ್ತಿ ಲಲಿತ್ ಬಾತ್ರಾ ಅವರ ಹೈಕೋರ್ಟ್ ವಿಭಾಗೀಯ ಪೀಠ ಐಪಿಸಿ ಸೆಕ್ಷನ್ 120-ಬಿ, 302, 506 ರ ಅಡಿಯಲ್ಲಿ ಅಂಗೀಕರಿಸಿತ್ತು. ಹರಿಯಾಣದ ಪಂಚಕುಲದ ಸಿಬಿಐ ನ್ಯಾಯಾಲಯವು 2022ರಲ್ಲಿ ಗುರ್ಮೀತ್ ಸಿಂಗ್ ಮತ್ತು ಇತರ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.</p>



<p><strong>40 ವರ್ಷಗಳವರೆಗೆ ಜೀವವಾದಿ ಶಿಕ್ಷೆ</strong></p>



<p>ತನ್ನ ಇಬ್ಬರು ಶಿಷ್ಯಂದಿರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಡೇರಾ ಮುಖ್ಯಸ್ಥ ಈಗಾಗಲೇ 20 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. ಪತ್ರಕರ್ತ ರಾಮ್ ಚಂದರ್ ಛತ್ರಪತಿಯನ್ನು ಹತ್ಯೆ ಮಾಡಿದ ಮತ್ತೊಂದು ಪ್ರಕರಣದಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಈ 20 ವರ್ಷಗಳ ಅವಧಿ ಮುಗಿದ ನಂತರ ಇದು ಜಾರಿಯಾಗಲಿದೆ.</p>



<p>ಇತ್ತೀಚೆಗೆ ಹೈಕೋರ್ಟ್‌ನ ಅನುಮತಿಯಿಲ್ಲದೆ ಪೆರೋಲ್ ಮಂಜೂರು ಮಾಡದಂತೆ ಹರಿಯಾಣ ಸರ್ಕಾರಕ್ಕೆ ಸೂಚಿಸಿತ್ತು. ಈ ಆದೇಶವನ್ನು ತೆರವು ಮಾಡಲು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯು ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. </p>
]]></content:encoded>
					
		
		
			</item>
		<item>
		<title>ಬಿಹಾರದ ರಾಜಕೀಯ ಬೆಳವಣಿಗೆಯಲ್ಲಿ ಪ್ರಕ್ಷುಬ್ಧತೆ</title>
		<link>https://peepalmedia.com/political-development-in-bihar/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 27 Jan 2024 05:19:14 +0000</pubDate>
				<category><![CDATA[ಮೀಡಿಯಾ]]></category>
		<category><![CDATA[Bangalore]]></category>
		<category><![CDATA[bharat]]></category>
		<category><![CDATA[bihar]]></category>
		<category><![CDATA[breaking news]]></category>
		<category><![CDATA[india]]></category>
		<category><![CDATA[INDIA Alliance]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[news update]]></category>
		<category><![CDATA[nitish kumar]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[political]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[trend]]></category>
		<category><![CDATA[Trending]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=35421</guid>

					<description><![CDATA[ಪಾಟ್ನಾ: ಬಿಹಾರದ ಆಡಳಿತ &#8216;ಮಹಾಘಟಬಂಧನ್&#8217; ನಲ್ಲಿನ ಗೊಂದಲದ ನಡುವೆಯೇ, ಮುಂಬರುವ ಲೋಕಸಭಾ ಚುನಾವಣೆಯ ಕುರಿತು ಚರ್ಚಿಸಲು ಪ್ರತಿಪಕ್ಷ ಬಿಜೆಪಿ ತನ್ನ ಸಂಸದರು ಮತ್ತು ಶಾಸಕರ ಸಭೆಯನ್ನು ಶನಿವಾರ ಕರೆದಿದೆ. ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಸಾಮ್ರಾಟ್ ಚೌಧರಿ ಅವರ ಪ್ರಕಾರ, ಸಭೆಯಲ್ಲಿ ಸಾರ್ವತ್ರಿಕ ಚುನಾವಣೆಗೆ ಪಕ್ಷದ ಕಾರ್ಯತಂತ್ರದ ಕುರಿತು ಚರ್ಚಿಸಲಾಗುವುದು, ದಿನಾಂಕಗಳನ್ನು ಇನ್ನೂ ಘೋಷಿಸಿಲ್ಲ ಎಂಬ ಮಾಹಿತಿ ಇದೆ. ಜೆಡಿಯು ನಿತೀಶ್ ಕುಮಾರ್ ಅವರರೊಂದಿಗೆ ಬಿಜೆಪಿ ಮತ್ತೊಂದು ಇನ್ನಿಂಗ್ಸ್‌ಗೆ ಸಜ್ಜಾಗಿದೆಯೇ ಎಂಬ ಊಹಾಪೋಹಗಳ ಬಗ್ಗೆ ಕೇಳಿದ ಪ್ರಶ್ನೆಗೆ [&#8230;]]]></description>
										<content:encoded><![CDATA[
<pre class="wp-block-code"><code><strong>ಬಿಹಾರದ ರಾಜಕೀಯ ಬೆಳವಣಿಗೆಗಳು ಕ್ಷಣ ಕ್ಷಣಕ್ಕೂ ಎಲ್ಲರ ಗಮನ ಸೆಳೆಯುತ್ತಿದೆ. ಅತ್ತ ಪಟ್ನಾದಲ್ಲಿ ಬಿಜೆಪಿ ಪಕ್ಷವು ತನ್ನ ಪಕ್ಷದ ಸಂಸದರು, ಶಾಸಕರ ಸಭೆಗೆ ಕರೆ ಕೊಟ್ಟಿದ್ದರೆ, ಮತ್ತೊಂದು ಕಡೆ, ಪುರ್ನಿಯಾದಲ್ಲಿ ಕಾಂಗ್ರೆಸ್ ಮುಖಂಡರ ಸಭೆಗೆ ಕರೆ ಕೊಟ್ಟಿರುವುದು ಜನರಲ್ಲಿ ಕುತೂಹಲದ ಜೊತೆ, ಹಲವಾರು ಪ್ರಶ್ನೆಗಳನ್ನೂ ಹುಟ್ಟುಹಾಕುತ್ತಿದೆ</strong></code></pre>



<p><strong>ಪಾಟ್ನಾ:</strong> ಬಿಹಾರದ ಆಡಳಿತ &#8216;ಮಹಾಘಟಬಂಧನ್&#8217; ನಲ್ಲಿನ ಗೊಂದಲದ ನಡುವೆಯೇ, ಮುಂಬರುವ ಲೋಕಸಭಾ ಚುನಾವಣೆಯ ಕುರಿತು ಚರ್ಚಿಸಲು ಪ್ರತಿಪಕ್ಷ ಬಿಜೆಪಿ ತನ್ನ ಸಂಸದರು ಮತ್ತು ಶಾಸಕರ ಸಭೆಯನ್ನು ಶನಿವಾರ ಕರೆದಿದೆ.</p>



<p>ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಸಾಮ್ರಾಟ್ ಚೌಧರಿ ಅವರ ಪ್ರಕಾರ, ಸಭೆಯಲ್ಲಿ ಸಾರ್ವತ್ರಿಕ ಚುನಾವಣೆಗೆ ಪಕ್ಷದ ಕಾರ್ಯತಂತ್ರದ ಕುರಿತು ಚರ್ಚಿಸಲಾಗುವುದು, ದಿನಾಂಕಗಳನ್ನು ಇನ್ನೂ ಘೋಷಿಸಿಲ್ಲ ಎಂಬ ಮಾಹಿತಿ ಇದೆ.</p>



<p>ಜೆಡಿಯು ನಿತೀಶ್ ಕುಮಾರ್ ಅವರರೊಂದಿಗೆ ಬಿಜೆಪಿ ಮತ್ತೊಂದು ಇನ್ನಿಂಗ್ಸ್‌ಗೆ ಸಜ್ಜಾಗಿದೆಯೇ ಎಂಬ ಊಹಾಪೋಹಗಳ ಬಗ್ಗೆ ಕೇಳಿದ ಪ್ರಶ್ನೆಗೆ ಚೌಧರಿ, &#8220;ನಮ್ಮ ಮಟ್ಟದಲ್ಲಿ ಅಂತಹ ಯಾವುದೇ ವಿಷಯ ಚರ್ಚಿಸಲಾಗಿಲ್ಲ&#8221; ಎಂದು ಹೇಳಿದರು. ಇದೇ ಸಮಯದಲ್ಲಿ, ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ, “ರಾಜಕೀಯದಲ್ಲಿ ಯಾವುದೇ ಬಾಗಿಲು ಮುಚ್ಚಿಲ್ಲ, ಅಗತ್ಯ ಬಿದ್ದಾಗ ಬಾಗಿಲು ತೆರೆಯಬಹುದು” ಎಂದು ಹೇಳಿಕೆ ಕೊಡುವುದರ ಮೂಲಕ, ಪಕ್ಷದ ಹಿರಿಯ ನಾಯಕರೊಂದಿಗೆ ನಡೆಸಿದ ಚರ್ಚೆಯ ಬಗ್ಗೆ ಕೆಲವು ಸುಳಿವುಗಳನ್ನು ನೀಡಿದ್ದಾರೆ.</p>



<p>ಏತನ್ಮಧ್ಯೆ, ಬಿಹಾರ ಕಾಂಗ್ರೆಸ್ ನಾಯಕ ಶಕೀಲ್ ಅಹ್ಮದ್ ಖಾನ್ ಅವರು ಶನಿವಾರ ಮಧ್ಯಾಹ್ನ 2 ಗಂಟೆಗೆ ಪೂರ್ಣೆಯಾದಲ್ಲಿ, ಪಕ್ಷದ ಶಾಸಕರು ಮತ್ತು ಮಾಜಿ ಶಾಸಕರ ಸಭೆಯನ್ನು ಕರೆದಿದ್ದಾರೆ. ಈ ಸಭೆಗೂ ರಾಜ್ಯದ ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.</p>



<p>&#8220;ಎಲ್ಲಾ ಕಾಂಗ್ರೆಸ್ ಶಾಸಕರು (ಇಂದಿನ ಮತ್ತು ಮಾಜಿ) ಮತ್ತು ಪಕ್ಷದ ಹಿರಿಯ ನಾಯಕರು ನಾಳೆ ಪೂರ್ಣೆಯಾದಲ್ಲಿ ಸಭೆ ಸೇರಿ ರಾಹುಲ್ ಗಾಂಧಿಯವರ &#8216;ಭಾರತ್ ಜೋಡೋ ನ್ಯಾಯ್ ಯಾತ್ರೆ&#8217; ಜನವರಿ 29 ರಂದು ಬಿಹಾರಕ್ಕೆ ಪ್ರವೇಶಿಸಿದಾಗ ಅದಕ್ಕೆ ಸಂಬಂಧಿಸಿದ ಸಿದ್ಧತೆಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ಆದರೆ ಈ ಸಭೆಗೂ ರಾಜ್ಯದ ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಗೂ ಯಾವುದೇ ಸಂಬಂಧವಿಲ್ಲ ಎಂಬ ವರದಿಗಳನ್ನೂ &#8221; ಎಂದು ಖಾನ್ ತಿಳಿಸಿದರು.</p>



<p>ಜನವರಿ 29ರಂದು ಯಾತ್ರೆ ರಾಜ್ಯ ಪ್ರವೇಶಿಸಲಿದ್ದು, ಅದೇ ದಿನ ಕಿಶನ್‌ಗಂಜ್‌ನಲ್ಲಿ ಮೊದಲ ಸಾರ್ವಜನಿಕ ಸಭೆ ನಡೆಯಲಿದೆ. ತದ ನಂತರ ಜನವರಿ 30 ಮತ್ತು 31 ರಂದು ಕ್ರಮವಾಗಿ ಪೂರ್ಣೆಯಾ ಮತ್ತು ಕತಿಹಾರ್‌ನಲ್ಲಿ ಎರಡು ರ್ಯಾಲಿಗಳು ನಡೆಯಲಿವೆ&#8221; ಎಂದು ಖಾನ್ ಮಾಧ್ಯಮಗಳಿಗೆ ತಿಳಿಸಿದರು.</p>



<p></p>
]]></content:encoded>
					
		
		
			</item>
		<item>
		<title>ದ್ವೇಷ ಭಾಷಣದಲ್ಲಿ ಬಿಜೆಪಿಗೆ ಪ್ರಥಮ ಸ್ಥಾನ! -ಎಡಿಆರ್‌ ವರದಿ: ಕರ್ನಾಟಕದಲ್ಲಿ ಯಾರು ವಿಜೇತರು?</title>
		<link>https://peepalmedia.com/bjp-is-first-in-hate-speech/</link>
		
		<dc:creator><![CDATA[Charan Aivarnad]]></dc:creator>
		<pubDate>Fri, 06 Oct 2023 07:48:32 +0000</pubDate>
				<category><![CDATA[ವಿಶೇಷ]]></category>
		<category><![CDATA[AAP]]></category>
		<category><![CDATA[AIMIM]]></category>
		<category><![CDATA[AIUDF]]></category>
		<category><![CDATA[assam]]></category>
		<category><![CDATA[Association of Democratic Reforms]]></category>
		<category><![CDATA[bbmp]]></category>
		<category><![CDATA[bengalure]]></category>
		<category><![CDATA[bihar]]></category>
		<category><![CDATA[bjp]]></category>
		<category><![CDATA[communal]]></category>
		<category><![CDATA[communal issues]]></category>
		<category><![CDATA[communalism]]></category>
		<category><![CDATA[congress]]></category>
		<category><![CDATA[Delhi]]></category>
		<category><![CDATA[DMK]]></category>
		<category><![CDATA[election]]></category>
		<category><![CDATA[Election 2024]]></category>
		<category><![CDATA[fascism]]></category>
		<category><![CDATA[gujarat]]></category>
		<category><![CDATA[hate speech]]></category>
		<category><![CDATA[india]]></category>
		<category><![CDATA[jharkhand]]></category>
		<category><![CDATA[kannada]]></category>
		<category><![CDATA[karkala]]></category>
		<category><![CDATA[karnataka]]></category>
		<category><![CDATA[kerala]]></category>
		<category><![CDATA[law]]></category>
		<category><![CDATA[legal]]></category>
		<category><![CDATA[madhya pradesh]]></category>
		<category><![CDATA[maharashtra]]></category>
		<category><![CDATA[MDMK]]></category>
		<category><![CDATA[MLA]]></category>
		<category><![CDATA[MP]]></category>
		<category><![CDATA[muniratna]]></category>
		<category><![CDATA[news]]></category>
		<category><![CDATA[Odisha]]></category>
		<category><![CDATA[Pattali Makkal Katchi]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[punjab]]></category>
		<category><![CDATA[rjd]]></category>
		<category><![CDATA[Shiv Sena (Uddhav Thackeray)]]></category>
		<category><![CDATA[shivasena]]></category>
		<category><![CDATA[state politics]]></category>
		<category><![CDATA[Supreme Court]]></category>
		<category><![CDATA[tamil nadu]]></category>
		<category><![CDATA[telangana]]></category>
		<category><![CDATA[Trending]]></category>
		<category><![CDATA[trending news]]></category>
		<category><![CDATA[uttara pradesh]]></category>
		<category><![CDATA[v sunil kumar]]></category>
		<category><![CDATA[Viduthalai Chiruthaigal Katchi]]></category>
		<category><![CDATA[West Benga]]></category>
		<category><![CDATA[writing]]></category>
		<guid isPermaLink="false">https://peepalmedia.com/?p=29283</guid>

					<description><![CDATA[ಬೆಂಗಳೂರು, ಅಕ್ಟೋಬರ್‌.06: &#160;ಒಟ್ಟು 107 ಹಾಲಿ ಸಂಸದರು ಮತ್ತು ಶಾಸಕರ ವಿರುದ್ಧ ದ್ವೇಷ ಭಾಷಣದ ಪ್ರಕರಣಗಳಿದ್ದು, ಅವರಲ್ಲಿ &#160;ಸುಮಾರು 40% ಮಂದಿ ಬಿಜೆಪಿಯವರು ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ತಿಳಿಸಿದೆ. Association of Democratic Reforms (ADR) ಮತ್ತು National Election Watch (New) ತಯಾರಿಸಿರುವ ಈ ವರದಿ ಅಕ್ಟೋಬರ್‌ 3, ಮಂಗಳವಾರದಂದು ಬಿಡುಗಡೆಯಾಗಿದ್ದು, ಇದನ್ನು ಕಳೆದ ಚುನಾವಣೆಯ ಸಂದರ್ಭದಲ್ಲಿ ಹಾಲಿ ಸಂಸದ, ಶಾಸಕರು ಸಲ್ಲಿಸಿರುವ ಅಫಿಡವಿಟ್‌ನ ಮಾಹಿತಿಗಳಿಂದ ತಯಾರು ಮಾಡಲಾಗಿದೆ.   ವರದಿಯನ್ನು [&#8230;]]]></description>
										<content:encoded><![CDATA[
<p>ಬೆಂಗಳೂರು, ಅಕ್ಟೋಬರ್‌.06: &nbsp;ಒಟ್ಟು 107 ಹಾಲಿ ಸಂಸದರು ಮತ್ತು ಶಾಸಕರ ವಿರುದ್ಧ ದ್ವೇಷ ಭಾಷಣದ ಪ್ರಕರಣಗಳಿದ್ದು, ಅವರಲ್ಲಿ &nbsp;ಸುಮಾರು 40% ಮಂದಿ ಬಿಜೆಪಿಯವರು ಎಂದು <a href="https://adrindia.org/content/analysis-sitting-mpsmlas-declared-cases-related-hate-speech-0" data-type="link" data-id="https://adrindia.org/content/analysis-sitting-mpsmlas-declared-cases-related-hate-speech-0">ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್</a> ವರದಿ ತಿಳಿಸಿದೆ.</p>



<p>Association of Democratic Reforms (ADR) ಮತ್ತು National Election Watch (New) ತಯಾರಿಸಿರುವ ಈ ವರದಿ ಅಕ್ಟೋಬರ್‌ 3, ಮಂಗಳವಾರದಂದು ಬಿಡುಗಡೆಯಾಗಿದ್ದು, ಇದನ್ನು ಕಳೆದ ಚುನಾವಣೆಯ ಸಂದರ್ಭದಲ್ಲಿ ಹಾಲಿ ಸಂಸದ, ಶಾಸಕರು ಸಲ್ಲಿಸಿರುವ ಅಫಿಡವಿಟ್‌ನ ಮಾಹಿತಿಗಳಿಂದ ತಯಾರು ಮಾಡಲಾಗಿದೆ.  </p>



<p><strong>ವರದಿಯನ್ನು ಇಲ್ಲಿ ಓದಿ: </strong><a href="/Users/Admin/Downloads/Analysis_of_Sitting_MPs_and_MLAs_with_Declared_Cases_Related_to_Hate_Speech_2023_English.pdf" data-type="link" data-id="file:///C:/Users/Admin/Downloads/Analysis_of_Sitting_MPs_and_MLAs_with_Declared_Cases_Related_to_Hate_Speech_2023_English.pdf">Analysis of Sitting MPs/MLAs with Declared Cases Related to Hate Speech</a></p>



<p>ಭಾರತೀಯ ಕಾನೂನಿನಲ್ಲಿ ದ್ವೇಷಕಾರಿ ಭಾಷಣಕ್ಕೆ ಸಂಬಂಧ ಪಟ್ಟ ಯಾವುದೇ ವ್ಯಾಖ್ಯಾನಗಳಿಲ್ಲ. ಆದರೆ <strong>ಕಾನೂನು ಆಯೋಗದ ವರದಿ ಸಂಖ್ಯೆ 267</strong> ರ ಪ್ರಕಾರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153(A), 153(B), 295(A), 298, 505(1) ಮತ್ತು 505 (2) ದ್ವೇಷದ ಭಾಷಣಕ್ಕೆ ಸಂಬಂಧಿಸಿದೆ. ಅಲ್ಲದೇ ಸೆಕ್ಷನ್ 8, ಸೆಕ್ಷನ್ 123 (3A) ಮತ್ತು ಸೆಕ್ಷನ್ 125 ಸೆಪ್ರೆಸೆಂಟೇಷನ್ ಆಫ್ ಪೀಪಲ್ ಆಕ್ಟ್, 1951‌ ಮೂಲಕ ದ್ವೇಷ ಭಾಷಣಗಳ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು.</p>



<p><strong>ಕಾನೂನು ಆಯೋಗದ ವರದಿ-267ಯನ್ನು ಇಲ್ಲಿ ಓದಿ:</strong> <a href="https://www.scribd.com/document/362912579/Law-Commission-Report-No-267-Hate-Speech" data-type="link" data-id="https://www.scribd.com/document/362912579/Law-Commission-Report-No-267-Hate-Speech">Law Commission Report No. 267- on Hate Speech</a></p>



<p style="font-size:20px"><strong>ಏನಿದೆ <a href="https://adrindia.org/content/analysis-sitting-mpsmlas-declared-cases-related-hate-speech-0" data-type="link" data-id="https://adrindia.org/content/analysis-sitting-mpsmlas-declared-cases-related-hate-speech-0">ವರದಿ</a>ಯಲ್ಲಿ?</strong></p>



<p>ಎಡಿಆರ್‌ ವರದಿಯ ಪ್ರಕಾರ, ಒಟ್ಟು 763 ಹಾಲಿ ಸಂಸದರಲ್ಲಿ 33 ಮತ್ತು ಒಟ್ಟು 4,005 ಹಾಲಿ ಶಾಸಕರ ಪೈಕಿ 74 ಮಂದಿ ತಮ್ಮ ಅಫಿಡವಿಟ್‌ನಲ್ಲಿ ದ್ವೇಷ ಭಾಷಣಕ್ಕೆ ತಮ್ಮ ಮೇಲೆ ದಾಖಲಾಗಿರುವ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜಕೀಯ ಪಕ್ಷಗಳಲ್ಲಿ ಬಿಜೆಪಿಯೇ ಇಂತಹ ಹೆಚ್ಚು ಶಾಸಕ ಹಾಗೂ ಸಂಸದರನ್ನು ಹೊಂದಿದೆ.</p>



<p>ದ್ವೇಷ ಭಾಷಣದ ಪ್ರಕರಣವನ್ನು ಎದುರಿಸುತ್ತಿರುವ 33 ಹಾಲಿ ಸಂಸದರ ಪೈಕಿ 22 ಮಂದಿ ಬಿಜೆಪಿಯವರೇ ಆಗಿದ್ದಾರೆ.</p>



<p>ಇತರ ಪಕ್ಷಗಳ ಸಂಸದರ ಪೈಕಿ ಕಾಂಗ್ರೆಸ್‌ನ ಇಬ್ಬರು, ಆಮ್ ಆದ್ಮಿ ಪಕ್ಷ (AAP), AIMIM, AIUDF, DMK, MDMK , ಪಟ್ಟಾಲಿ ಮಕ್ಕಳ್ ಕಚ್ಚಿ, ಶಿವಸೇನೆ (ಉದ್ಧವ್ ಠಾಕ್ರೆ), ವಿಡುತಲೈ ಚಿರುತೈಗಲ್ ಕಚ್ಚಿಯ ತಲಾ ಒಬ್ಬರು ಮತ್ತು ಮತ್ತು ಒಬ್ಬ ಸ್ವತಂತ್ರ ಸಂಸದನ ಮೇಲೆ ಈ ಪ್ರಕರಣ ದಾಖಲಾಗಿದೆ.</p>



<p>74 ಶಾಸಕರ ಪೈಕಿ 20 ಮಂದಿ ಬಿಜೆಪಿಯವರು, ಕಾಂಗ್ರೆಸ್‌ನ 13, ಎಎಪಿಯ 6, ಸಮಾಜವಾದಿ ಪಕ್ಷ ಮತ್ತು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ತಲಾ 5, ಡಿಎಂಕೆ ಮತ್ತು ಆರ್‌ಜೆಡಿಯ ತಲಾ 4, ತೃಣಮೂಲ ಕಾಂಗ್ರೆಸ್ ಮತ್ತು ಶಿವಸೇನೆಯ ತಲಾ ಮೂರು ಶಾಸಕರ ಮೇಲೆ ದ್ವೇಷ ಭಾಷಣದ ಕೇಸ್‌ ದಾಖಲಾಗಿದೆ.</p>



<p>AIUDFನ ಇಬ್ಬರು ಮತ್ತು AIMIM, CPI(M), NCP, ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ, ಟಿಡಿಪಿ, ಟಿಪ್ರ ಮೋಥಾ ಪಾರ್ಟಿ ಮತ್ತು ಬಿಆರ್‌ಎಸ್‌ನ ತಲಾ ಒಬ್ಬರ ಹಾಗೂ ಇಬ್ಬರು ಸ್ವತಂತ್ರ ಶಾಸಕರ ವಿರುದ್ಧವೂ ದ್ವೇಷ ಭಾಷಣದ ಪ್ರಕರಣಗಳಿವೆ.</p>


<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2023/10/image-27.png" alt="" class="wp-image-29287" style="width:563px;height:262px" width="563" height="262" srcset="https://peepalmedia.com/wp-content/uploads/2023/10/image-27.png 915w, https://peepalmedia.com/wp-content/uploads/2023/10/image-27-300x139.png 300w, https://peepalmedia.com/wp-content/uploads/2023/10/image-27-768x357.png 768w, https://peepalmedia.com/wp-content/uploads/2023/10/image-27-150x70.png 150w, https://peepalmedia.com/wp-content/uploads/2023/10/image-27-696x323.png 696w" sizes="auto, (max-width: 563px) 100vw, 563px" /></figure></div>


<p style="font-size:20px"><strong>ಯಾವ ರಾಜ್ಯಕ್ಕೆ ಪ್ರಥಮ ಸ್ಥಾನ?</strong></p>



<p>ದ್ವೇಷಕಾರುವ ಭಾಷಣ ಮಾಡುವ ಹೆಚ್ಚು ಸಂಸದರನ್ನು ಹೊಂದಿರುವ ಉತ್ತರ ಪ್ರದೇಶ ಪ್ರಥಮ ಸ್ಥಾನವನ್ನು ಪಡೆದಿದೆ. ಇಲ್ಲಿನ ಏಳು ಹಾಲಿ ಸಂಸದರ ಮೇಲೆ ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ.</p>



<p>ದ್ವಿತೀಯ ಸ್ಥಾನ ಪಡೆದಿರುವ ತಮಿಳುನಾಡಿನ ನಾಲ್ಕು ಸಂಸದರ, ಬಿಹಾರ, ಕರ್ನಾಟಕ ಮತ್ತು ತೆಲಂಗಾಣದ ತಲಾ ಮೂರು ಸಂಸದರ ಮೇಲೆ ಈ ಕೇಸುಗಳಿವೆ. ಅಸ್ಸಾಂ, ಗುಜರಾತ್, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಿಂದ ತಲಾ ಇಬ್ಬರು ಸಂಸದರಿದ್ದು, ಈ ರಾಜ್ಯಗಳು ತೃತೀಯ ಸ್ಥಾನ ಪಡೆದಿವೆ. &nbsp;ಜಾರ್ಖಂಡ್, ಮಧ್ಯಪ್ರದೇಶ, ಕೇರಳ, ಒಡಿಶಾ ಮತ್ತು ಪಂಜಾಬ್‌ನಿಂದ ತಲಾ ಒಬ್ಬ ಸಂಸದರು ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.</p>



<p>ದ್ವೇಷ ಕಾರುವ ಭಾಷಣ ಮಾಡುವ ಶಾಸಕರ ಪೈಕಿ ತಲಾ ಒಂಬತ್ತು ಮಂದಿ ಬಿಹಾರ ಮತ್ತು ಉತ್ತರ ಪ್ರದೇಶದವರಾಗಿದ್ದು, ಈ ರಾಜ್ಯಗಳು ಶಾಸಕರ ವಿಭಾಗದಲ್ಲಿ ಪ್ರಥಮ ಸ್ಥಾನಗಳನ್ನು ಪಡೆದಿವೆ.</p>



<p>ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣದ ಆರು ಶಾಸಕರು ತಮ್ಮ ರಾಜ್ಯಗಳನ್ನು ದ್ವಿತೀಯ ಸ್ಥಾನಕ್ಕೆ ತಂದಿದ್ದಾರೆ, ಅಸ್ಸಾಂ ಮತ್ತು ತಮಿಳುನಾಡಿನ ತಲಾ ಐವರು ಹಾಗೂ ದೆಹಲಿ, ಗುಜರಾತ್, ಪಶ್ಚಿಮ ಬಂಗಾಳದ ತಲಾ ನಾಲ್ಕು ಜನ ಶಾಸಕರು ದ್ವೇಷ ಭಾಷಣದ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಜಾರ್ಖಂಡ್ ಮತ್ತು ಉತ್ತರಾಖಂಡದಿಂದ ತಲಾ ಮೂವರು ಶಾಸಕರು, ಕರ್ನಾಟಕ, ಪಂಜಾಬ್, ರಾಜಸ್ಥಾನ ಮತ್ತು ತ್ರಿಪುರದ ತಲಾ ಇಬ್ಬರು ಶಾಸಕರು ಹಾಗೂ ಮಧ್ಯಪ್ರದೇಶ, ಒಡಿಶಾದ ತಲಾ ಓರ್ವ ಶಾಸಕರು ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಅಫಿಡವಿಟ್‌ನಲ್ಲಿ ದಾಖಲಿಸಿಕೊಂಡಿದ್ದಾರೆ. </p>



<p>ಎಡಿಆರ್‌ ವರದಿಯ ಪ್ರಕಾರ ಕಳೆದ ಐದು ವರ್ಷಗಳಲ್ಲಿ&nbsp;ದ್ವೇಷ ಭಾಷಣದ ಪ್ರಕರಣವನ್ನು ಹೊಂದಿರುವ ಒಟ್ಟು 480 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗಳು, ಲೋಕಸಭೆ ಮತ್ತು ರಾಜ್ಯಸಭೆಯ ಚುನಾವಣೆಗಳಿಗೆ ಸ್ಪರ್ಧಿಸಿದ್ದಾರೆ.</p>



<p>“ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ, ಅದರಲ್ಲೂ ಮತೀಯ ದ್ವೇಷವನ್ನು ಉತ್ತೇಜಿಸುವ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಕೃತ್ಯಗಳನ್ನು ಎಸಗುವ ಆರೋಪ ಹೊಂದಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಮೂಲಕ ರಾಜಕೀಯ ಪಕ್ಷಗಳು ಗುಂಪುಗಳ ನಡುವೆ ಹಿಂಸಾಚಾರ &#8211; ಕೋಮುಗಲಭೆಯಂತಹ ಘಟನೆಗಳಿಗೆ ಕುಮ್ಮಕ್ಕು ನೀಡುತ್ತಿವೆ,&#8221; ಎಂದು ವರದಿ ತಿಳಿಸಿದೆ.</p>



<p style="font-size:20px"><strong>ಕರ್ನಾಟಕದಲ್ಲಿ ದ್ವೇಷ ಭಾಷಣ ಸ್ಪರ್ಧೆಯ ವಿಜೇತರು ಯಾರ್ಯಾರು?</strong></p>



<p>ಕರ್ನಾಟಕದಲ್ಲಿ ಕಾರ್ಕಳ ಶಾಸಕ ವಿ ಸುನೀಲ್‌ ಕುಮಾರ್‌ ಅವರ ಮೇಲೆ ದ್ವೇಷಕಾರಿ ಭಾಷಣಕ್ಕಾಗಿ IPC Sections &#8211; 153A, 505A ಅಡಿಯಲ್ಲಿ ಬಂಟ್ವಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (FIR No. &#8211; Crime No.16/2018)</p>


<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2023/10/image-24.png" alt="" class="wp-image-29284" style="width:537px;height:215px" width="537" height="215" srcset="https://peepalmedia.com/wp-content/uploads/2023/10/image-24.png 889w, https://peepalmedia.com/wp-content/uploads/2023/10/image-24-300x120.png 300w, https://peepalmedia.com/wp-content/uploads/2023/10/image-24-768x308.png 768w, https://peepalmedia.com/wp-content/uploads/2023/10/image-24-150x60.png 150w, https://peepalmedia.com/wp-content/uploads/2023/10/image-24-696x279.png 696w" sizes="auto, (max-width: 537px) 100vw, 537px" /></figure></div>


<p>ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನರವರ ಮೇಲೆ ಎಂಟು ಕೇಸುಗಳು ದಾಖಲಾಗಿವೆ. ಇದರಲ್ಲಿ ಅಶ್ಲೀಲ ಪುಸ್ತಕ, ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದ IPC Section-292, ಮಹಿಳೆಯ ಮೇಲೆ ಹಲ್ಲೆ IPC Section-354B, ಲೈಂಗಿಕ ದೌರ್ಜನ್ಯ IPC Section-354A, ಮೋಸ IPC Section420, ಫೋರ್ಜರಿ IPC Section-468, ಲಂಚ IPC Section-171B ಇತ್ಯಾದಿ ಕೇಸುಗಳೂ ಮುನಿರತ್ನ ಮೇಲೆ ದಾಖಲಾಗಿವೆ.</p>


<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2023/10/image-25.png" alt="" class="wp-image-29285" style="width:465px;height:402px" width="465" height="402" srcset="https://peepalmedia.com/wp-content/uploads/2023/10/image-25.png 919w, https://peepalmedia.com/wp-content/uploads/2023/10/image-25-300x260.png 300w, https://peepalmedia.com/wp-content/uploads/2023/10/image-25-768x664.png 768w, https://peepalmedia.com/wp-content/uploads/2023/10/image-25-150x130.png 150w, https://peepalmedia.com/wp-content/uploads/2023/10/image-25-696x602.png 696w" sizes="auto, (max-width: 465px) 100vw, 465px" /></figure></div>

<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2023/10/image-26.png" alt="" class="wp-image-29286" style="width:486px;height:163px" width="486" height="163" srcset="https://peepalmedia.com/wp-content/uploads/2023/10/image-26.png 889w, https://peepalmedia.com/wp-content/uploads/2023/10/image-26-300x101.png 300w, https://peepalmedia.com/wp-content/uploads/2023/10/image-26-768x257.png 768w, https://peepalmedia.com/wp-content/uploads/2023/10/image-26-150x50.png 150w, https://peepalmedia.com/wp-content/uploads/2023/10/image-26-696x233.png 696w" sizes="auto, (max-width: 486px) 100vw, 486px" /></figure></div>


<p>&nbsp;“ದ್ವೇಷ ಭಾಷಣವು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ ಸಂಕೀರ್ಣ ಸವಾಲು. ಆದ್ದರಿಂದ, ಈ ಸಮಸ್ಯೆಯನ್ನು ಪರಿಹರಿಸಲು ಐಪಿಸಿಯಲ್ಲಿ ಹೊಸ ನಿಬಂಧನೆಗಳನ್ನು ಸೇರಿಸುವ ಅಗತ್ಯವಿದೆ. IPC, 1860 ಮತ್ತು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ, 1973 (the Code of Criminal Procedure, 1973) ಗೆ ತಿದ್ದುಪಡಿಗಳು, ಕೆಲವು ಪ್ರಕರಣಗಳಲ್ಲಿ ಹಿಂಸಾಚಾರದ ಪ್ರಚೋದನೆಯನ್ನು &#8216;ದ್ವೇಷಕ್ಕೆ ಪ್ರಚೋದನೆಯನ್ನು ನಿಷೇಧಿಸುವುದು &#8211; Prohibiting incitement to hatred&#8217; ಎಂಬ ಹೊಸ ನಿಬಂಧನೆಗಳನ್ನು ಸೇರಿಸುವ ಮೂಲಕ IPC ಸೆಕ್ಷನ್ 505 ಅನ್ನು ಅನುಸರಿಸಿ, ಮತ್ತು ಅದಕ್ಕೆ ಅನುಗುಣವಾಗಿ CrPC ಯ ಮೊದಲ ಪರಿಚ್ಛೇದದಲ್ಲಿ ತಿದ್ದುಪಡಿ ಮಾಡಬೇಕು,” ಎಂಬ <a href="https://www.scribd.com/document/362912579/Law-Commission-Report-No-267-Hate-Speech" data-type="link" data-id="https://www.scribd.com/document/362912579/Law-Commission-Report-No-267-Hate-Speech">ಕಾನೂನು ಆಯೋಗದ ವರದಿ</a>ಯ ಶಿಫಾರಸ್ಸನ್ನು ಎಡಿಆರ್‌ ವರದಿ ಒಪ್ಪಿಕೊಂಡಿದೆ.</p>



<p>ಚುನಾವಣೆಯ ಮೊದಲು, ಚುನಾವಣಾ ಸಮಯದಲ್ಲಿ ಮತ್ತು ನಂತರ ದ್ವೇಷಪೂರಿತ ಭಾಷಣ ಮಾಡುವ ಅಭ್ಯರ್ಥಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. &#8220;ಕಾನೂನುಬಾಹಿರ&#8221; ಹೇಳಿಕೆಗಳನ್ನು ನೀಡಲು ರಾಜಕೀಯ ಪಕ್ಷಗಳು ಸಾಮಾಜಿಕ ಮಾಧ್ಯಮಗಳನ್ನು ದುರುಪಯೋಗಪಡಿಸಿಕೊಂಡಿವೆ ಎಂದು ಅದು ಎಡಿಆರ್ ಹೇಳಿದೆ. &#8220;ಆದ್ದರಿಂದ, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿರುವ ಇಂತಹ ಕಾನೂನುಬಾಹಿರ ಹೇಳಿಕೆಗಳನ್ನು ಪರಿಶೀಲಿಸಬೇಕು ಮತ್ತು ತಪ್ಪಿತಸ್ಥರಿಗೆ ದಂಡ ವಿಧಿಸಬೇಕು&#8221; ಎಂದು ಎಡಿಆರ್ ಶಿಫಾರಸು ಮಾಡಿದೆ.</p>
]]></content:encoded>
					
		
		
			</item>
	</channel>
</rss>
