<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>bikis bano &#8211; Peepal Media</title>
	<atom:link href="https://peepalmedia.com/tag/bikis-bano/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 19 Feb 2024 09:40:36 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>bikis bano &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಬಿಲ್ಕಿಸ್‌ ಬಾನೋ ಹಿಂದಿದ್ದ ʼನಾರಿ ವಂದನ್‌ʼ</title>
		<link>https://peepalmedia.com/activists-behind-bilkis-bano-justice/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 10 Jan 2024 08:42:43 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[ದೇಶ]]></category>
		<category><![CDATA[Bangalore]]></category>
		<category><![CDATA[bikis bano]]></category>
		<category><![CDATA[gujarat]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[maharastra]]></category>
		<category><![CDATA[narendra modi]]></category>
		<category><![CDATA[nari vandan]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[Supreme Court]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=34790</guid>

					<description><![CDATA[ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ &#160;ಮತ್ತು ಅವರ ಕುಟುಂಬಿಕರ ಕೊಲೆಗಳ ಆರೋಪದಲ್ಲಿ ಜೈಲಿನಲ್ಲಿದ್ದ 11 ಅಪರಾಧಿಗಳನ್ನು ಗುಜರಾತ್ ಸರ್ಕಾರ ಅವಧಿಗೆ ಮುನ್ನವೇ ಬಿಡುಗಡೆ &#160;ಮಾಡಿದಾಗ, ಅದನ್ನು ಪ್ರಶ್ನಿಸಿ &#160;ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಹೋರಾಟಗಾರ್ತಿಯರು 2022 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾತಂತ್ರ್ಯ ದಿನದ ಭಾಷಣವನ್ನು ನಿಜಗೊಳಿಸಿದ್ದಾರೆ. &#160; ಸ್ವಾತಂತ್ರ್ಯದ 75 ವರ್ಷಗಳ ಸಂಭ್ರಮಾಚರಣೆಯಲ್ಲಿ, ಮೋದಿ ಯವರು ಕೆಂಪು ಕೋಟೆಯಲ್ಲಿ ಮಹಿಳಾ ಶಕ್ತಿ ಅಥವಾ &#8216;ನಾರಿ ಶಕ್ತಿ&#8217;ಗೆ ಕರೆ ನೀಡಿದ್ದರು &#160;ಮತ್ತು &#8220;ಮಹಿಳೆಯರನ್ನು ಅಪಚಾರ ತರುವ [&#8230;]]]></description>
										<content:encoded><![CDATA[
<p>ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ &nbsp;ಮತ್ತು ಅವರ ಕುಟುಂಬಿಕರ ಕೊಲೆಗಳ ಆರೋಪದಲ್ಲಿ ಜೈಲಿನಲ್ಲಿದ್ದ 11 ಅಪರಾಧಿಗಳನ್ನು ಗುಜರಾತ್ ಸರ್ಕಾರ ಅವಧಿಗೆ ಮುನ್ನವೇ ಬಿಡುಗಡೆ &nbsp;ಮಾಡಿದಾಗ, ಅದನ್ನು ಪ್ರಶ್ನಿಸಿ &nbsp;ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಹೋರಾಟಗಾರ್ತಿಯರು 2022 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾತಂತ್ರ್ಯ ದಿನದ ಭಾಷಣವನ್ನು ನಿಜಗೊಳಿಸಿದ್ದಾರೆ. &nbsp;</p>



<p>ಸ್ವಾತಂತ್ರ್ಯದ 75 ವರ್ಷಗಳ ಸಂಭ್ರಮಾಚರಣೆಯಲ್ಲಿ, ಮೋದಿ ಯವರು ಕೆಂಪು ಕೋಟೆಯಲ್ಲಿ ಮಹಿಳಾ ಶಕ್ತಿ ಅಥವಾ &#8216;ನಾರಿ ಶಕ್ತಿ&#8217;ಗೆ ಕರೆ ನೀಡಿದ್ದರು &nbsp;ಮತ್ತು &#8220;ಮಹಿಳೆಯರನ್ನು ಅಪಚಾರ ತರುವ ಪ್ರತಿಯೊಂದು ನಡವಳಿಕೆ, ಸಂಸ್ಕೃತಿಯನ್ನು&#8221; ಕೊನೆಗೊಳಿಸಬೇಕೆಂದು ಕರೆ ನೀಡಿದ್ದರು.</p>



<p>ಅದೇ ಹೊತ್ತಿಗೆ,&nbsp; 2002 ರಲ್ಲಿ ಗುಜರಾತ್ ಗಲಭೆ ನಡೆಯುತ್ತಿರುವಾಗ ಗರ್ಭಿಣಿ ಬಿಲ್ಕಿಸ್ ಬಾನೊ ಅವರ&nbsp; ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಅವರ&nbsp; ಕುಟುಂಬದ 14 ಮಂದಿಯನ್ನು ಹತ್ಯೆ ಮಾಡಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಗಳು ಗೋಧ್ರಾ&nbsp; ಉಪ ಜೈಲಿನಿಂದ ಹೊರಬಂದಿದ್ದರು.</p>



<p>&#8220;ಆಗಸ್ಟ್ 15 ರಂದು, ಪ್ರಧಾನ ಮಂತ್ರಿಗಳು ಮಹಿಳೆಯರ ಸುರಕ್ಷತೆ ಮತ್ತು ಮಹಿಳೆಯರ ಗೌರವದ ಬಗ್ಗೆ ಮಾತನಾಡುತ್ತಿದ್ದಾಗ, ಗುಜರಾತ್ ಸರ್ಕಾರವು&nbsp; ಅವರಿಗೆ ರಿಮಿಷನ್ &nbsp;ಆದೇಶವನ್ನು ನೀಡಿತು &nbsp;ಮತ್ತು ಅಪರಾಧಿಗಳನ್ನು ಬಿಡುಗಡೆ ಮಾಡಿತು. ಬಿಲ್ಕಿಸ್ ಅವರು ಆಗ &nbsp;&#8216;ಇದು ನ್ಯಾಯದ ಅಂತ್ಯಕಾಲ&#8217; ಎಂಬ ಹೇಳಿಕೆಯನ್ನು ನೀಡಿದ್ದನ್ನು ನಾನು ಕೇಳಿದೆ. ಅದು ನಿಜವಾಗಿಯೂ ನನ್ನನ್ನು ಮತ್ತು ನನ್ನಂತಹ ಅನೇಕರನ್ನು ಬೆಚ್ಚಿಬೀಳಿಸಿತು, &#8216;ನಾವು&nbsp; ಇದ್ದು ಏನು ಪ್ರಯೋಜನ?” ಎಂದು ಸಿಪಿಐ(ಎಂ) ನಾಯಕಿ &nbsp;ಸುಭಾಷಿಣಿ ಅಲಿಯವರು ಹೇಳಿದ್ದು &nbsp;ದಿ ವೈರ್ ವರದಿ ಮಾಡಿದೆ.</p>



<p>ಮಾಜಿ ಪ್ರೊಫೆಸರ್ ರೂಪ್ ರೇಖಾ ವರ್ಮಾ ಮತ್ತು ಪತ್ರಕರ್ತೆ ರೇವತಿ ಲಾಲ್ ಕೂಡ &nbsp;ಗುಜರಾತ್ ಸರ್ಕಾರದ ಬಿಡುಗಡೆ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು.</p>



<p>&#8220;ನಾವು ಏನು ಮಾಡಬಹುದೆಂದು ಯೋಚಿಸುತ್ತಿದ್ದಾಗ ಕಪಿಲ್ ಸಿಬಲ್ ಮತ್ತು ಅಪರ್ಣಾ ಭಟ್ ಹಾಗೂ ಇತರ ವಕೀಲರು ಮುಂದೆ ಬಂದದ್ದು ದೊಡ್ದ &nbsp;ಅದೃಷ್ಟ&#8221; ಎಂದು ಸುಹಾಸಿನಿ ಹೇಳಿದ್ದಾರೆ.</p>



<p>ಜನವರಿ 8 ರಂದು, ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರದ ಬಿಡುಗಡೆ ಆದೇಶವನ್ನು ರದ್ದುಗೊಳಿಸಿ, ಗುಜರಾತ್ ಸರ್ಕಾರಕ್ಕೆ ಈ ರೀತಿ ಅಪರಾಧಿಗಳನ್ನು ಬಿಡುಗಡೆ ಮಾಡುವ &nbsp;ಅಧಿಕಾರ ಇಲ್ಲ ಎಂದು ಹೇಳಿ ಎರಡು ವಾರಗಳಲ್ಲಿ ಜೈಲಿಗೆ ಮರಳಲು ಆದೇಶ ನೀಡಿತು. ಗುಜರಾತ್ ಸರ್ಕಾರವು ಅಪರಾಧಿಗಳೊಂದಿಗೆ &#8220;ಸಂಘಟಿತವಾಗಿ&#8221; ವರ್ತಿಸಿದೆ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ವಲ್ ಭುಯಾನ್ ಅವರ ಪೀಠವು ಮೇ 13, 2022 ರಂದು ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ವಿಕ್ರಮ್ ನಾಥ್ ಅವರ ಪೀಠವು ಗುಜರಾತ್ ಸರ್ಕಾರಕ್ಕೆ ಅಪರಾಧಿಗಳನ್ನು ಬಿಡುಗಡೆ &nbsp;ಮಾಡುವಂತೆ ತೀರ್ಪು ನೀಡಿದ್ದು &#8220;ನಿರರ್ಥಕ&#8221; ಎಂದು ಹೇಳಿದೆ.</p>



<p style="font-size:20px"><strong>ರಾಷ್ಟ್ರದ ಬಗ್ಗೆ ಮೋದಿ ಮಾಡಿದ ಕ್ರೂರ ಹಾಸ್ಯ</strong></p>



<p>ದೆಹಲಿಯಲ್ಲಿದ್ದ ಲಕ್ನೋ ವಿಶ್ವವಿದ್ಯಾನಿಲಯದ ಮಾಜಿ ಪ್ರೊಫೆಸರ್ ರೂಪ್ ರೇಖಾ ವರ್ಮಾ, ಅಪರಾಧಿಗಳ ಬಿಡಿಗಡೆ ಆದೇಶದ ಸುದ್ದಿ ಬಂದಾಗ ಪ್ರಧಾನಿಯವರ ಸ್ವತಂತ್ರೋತ್ಸವದ ಭಾಷಣ &#8220;ರಾಷ್ಟ್ರದ&nbsp; ಮೇಲೆ &nbsp;ಮಾಡಿದ ಕ್ರೂರ ಹಾಸ್ಯ&#8221; ಎಂದು ಹೇಳಿದ್ದರು.</p>



<p>“ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಅಳಲು ತೋಡಿಕೊಂಡ ಪ್ರಧಾನಿಯವರು ಆಗಾಗಲೇ ಅಪರಾಧಿಗಳ ಬಿಡುಗಡೆಗೆ &nbsp;ಅನುಮತಿ ನೀಡಿದ್ದರು. ಅದು ರಾಷ್ಟ್ರದ ಮೇಲೆ ಮಾಡಿದ ಕ್ರೂರ ಹಾಸ್ಯವಾಗಿತ್ತು, ” ಎಂದು ಹೇಳಿದ್ದರು.</p>



<p>&#8220;ಆ ಸಮಯದಲ್ಲಿ ನ್ಯಾಯಾಲಯಗಳನ್ನು ಹೆಚ್ಚು ಭರವಸೆಯಿಂದ ನೋಡದಿರಲು ನಮ್ಮಲ್ಲಿ ಸಾಕಷ್ಟು ಉದಾಹರಣೆಗಳಿದ್ದರೂ, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯನ್ನು ಹೊರತುಪಡಿಸಿ ಬೇರೆ ದಾರಿ ಇರಲಿಲ್ಲ,” ಎಂದು &nbsp;ವರ್ಮಾ ಹೇಳಿದ್ದರು.</p>



<p>ಸುಪ್ರೀಂ ಕೋರ್ಟಿನಲ್ಲಿ ಬಿಡುಗಡೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲು ಮೂರನೇ ಮಹಿಳಾ ಅರ್ಜಿದಾರರನ್ನು ಹುಡುಕುತ್ತಿದ್ದಾಗ ಕಂಡದ್ದು ಪತ್ರಕರ್ತೆ ರೇವತಿ ಲಾಲ್ . ಅವರು ಗುಜರಾತ್ ಗಲಭೆಗಳನ್ನು ಆಧರಿಸಿ ಅನಾಟಮಿ ಆಫ್ ಹೇಟ್ ಎಂಬ ಪುಸ್ತಕವನ್ನು ಬರೆದಿದ್ದರು. ಆ ಸಂದರ್ಭದಲ್ಲಿ &nbsp;ಸ್ವಲ್ಪ ಸಮಯದವರೆಗೆ ಗುಜರಾತ್‌ನಲ್ಲಿ ನೆಲೆಸಿದ್ದರು.</p>



<p>ವಕೀಲರಾದ ಇಂದಿರಾ ಜೈಸಿಂಗ್ ಮೂಲಕ ತೃಣಮೂಲ ಕಾಂಗ್ರೆಸ್‌ನಿಂದ ಉಚ್ಛಾಟಿತರಾಗಿರುವ ಲೋಕಸಭಾ ಸಂಸದೆ ಮಹುವಾ ಮೊಯಿತ್ರಾ &nbsp;ಅವರು ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಜೊತೆಗೆ, ಸೆಪ್ಟೆಂಬರ್ 2022 ರಲ್ಲಿ ಮಾಜಿ ಐಪಿಎಸ್ ಅಧಿಕಾರಿ ಮೀರನ್ ಚಡಾ ಬೋರ್ವಾಂಕರ್ ಅವರು ಮತ್ತೊಂದು ಅರ್ಜಿಯನ್ನು ಸಲ್ಲಿಸಿದ್ದರು. &nbsp;ಆ ಗುಂಪಿನಲ್ಲಿ ಅರ್ಜಿದಾರರಾದ ಜಗದೀಪ್ ಚೋಖರ್ ಮತ್ತು ಮಧು ಭಂಡಾರಿ ಕೂಡ ಇದ್ದರು.</p>



<p>ಅರ್ಜಿದಾರರಿಗೆ ಈ ಆದೇಶವನ್ನು ಪ್ರಶ್ನಿಸಲು ಯಾವುದೇ ಸ್ಥಾನಮಾನವಿಲ್ಲ, ಇವರೆಲ್ಲರೂ ಈ ಪ್ರಕರಣಕ್ಕೆ ಸಂಬಂಧಿಸಿದವರಲ್ಲ ಎಂದು ಅಪರಾಧಿಗಳಲ್ಲಿ ಒಬ್ಬರು ಸಲ್ಲಿಸಿದ ಅರ್ಜಿಯ &nbsp;ನಂತರವೂ ಬಾನೊ ನವೆಂಬರ್ 2022 ರಲ್ಲಿ ಬಿಡುಗಡೆ ಆದೇಶಗಳ ವಿರುದ್ಧ ಸುಪ್ರೀಂ ಕೋರ್ಟ್‌ಗೆ ತೆರಳಿದ್ದರು.</p>
]]></content:encoded>
					
		
		
			</item>
	</channel>
</rss>
