<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>bjp karnataka &#8211; Peepal Media</title>
	<atom:link href="https://peepalmedia.com/tag/bjp-karnataka/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 03 Sep 2024 12:04:52 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>bjp karnataka &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಫೊರೆನಿಕ್ಸ್ ಲ್ಯಾಬಲ್ಲಿ ಪತ್ತೆಯಾದ ಮೊಸಳೆ ಕಣ್ಣೀರು (ರಾಜಕೀಯ ವಿಡಂಬನೆ)</title>
		<link>https://peepalmedia.com/crocodile-tears-discovered-in-forensics-lab-political-satire/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 03 Sep 2024 11:43:00 +0000</pubDate>
				<category><![CDATA[ಅಂಕಣ]]></category>
		<category><![CDATA[bengalure]]></category>
		<category><![CDATA[bjp]]></category>
		<category><![CDATA[bjp dirty politics]]></category>
		<category><![CDATA[bjp govt]]></category>
		<category><![CDATA[Bjp IT cell]]></category>
		<category><![CDATA[bjp karnataka]]></category>
		<category><![CDATA[BJP leader]]></category>
		<category><![CDATA[BJP leader Gurtaj Bhullar wife]]></category>
		<category><![CDATA[Boycott Modhi]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[modhiji]]></category>
		<category><![CDATA[modi]]></category>
		<category><![CDATA[Narendra modhi road show]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Satire]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=44863</guid>

					<description><![CDATA[ತಣ್ಣಗೆ ಮಲಗಿದ್ದ ಕತ್ತಲನ್ನು ಸೀಳುತ್ತ ಸುದ್ದಿ ನಿಧಾನವಾಗಿ ಹರಡುತ್ತಿತ್ತು. ಆ ತಡರಾತ್ರಿ ಅಶರೀರವಾಣಿಯಾಗಿ ಕೇಳಿ ಬಂದ ಸುದ್ದಿಯಿಂದ ಆತಂಕಗೊಂಡ ಅಖಿಲ ಬ್ರಹ್ಮಾಂಡ ಅಂಡಾಂಡ ಪಿಂಡ ಲಂಡ ಭಕ್ತರು ತಂಡೋಪತಂಡವಾಗಿ, ಪ್ರಜೆಗಳ ತೆರಿಗೆಯ ಬೆವರಲ್ಲಿ ಕಟ್ಟಿದ ನಮೋನ ಐಷಾರಾಮಿ ಅರಮನೆಯತ್ತ ದೌಡಾಯಿಸಿದ್ದರು. ವಿಷಯವೇನೆಂದು ವಿಶದವಾಗಿ ಯಾರಿಗೂ ತಿಳಿದಿರಲಿಲ್ಲ. ಮುಂಜಾನೆ ಎದ್ದಾಗಿಂದ, ಮೂಲೆ ಸಂದಿಯಲ್ಲಿದ್ದ ನಮೋ ವಿರೋಧಿಗಳನ್ನು ಹುಡುಕಿ, ಮತ್ತವರು ಉಸಿರೆತ್ತದಂತೆ ತದುಕಲು ಇಡಿ, ಐಟಿ, ಸಿಬಿಐಗಳನ್ನು ಛೂ ಬಿಟ್ಟು ಸುಸ್ತಾಗಿ ಮಲಗಿದ್ದ ಅಪರಿಮಿತ ಕುತಂತ್ರಿ ಮಂತ್ರಿ ಕೂಡ ಸುದ್ದಿ [&#8230;]]]></description>
										<content:encoded><![CDATA[
<p>ತಣ್ಣಗೆ ಮಲಗಿದ್ದ ಕತ್ತಲನ್ನು ಸೀಳುತ್ತ ಸುದ್ದಿ ನಿಧಾನವಾಗಿ ಹರಡುತ್ತಿತ್ತು. ಆ ತಡರಾತ್ರಿ ಅಶರೀರವಾಣಿಯಾಗಿ ಕೇಳಿ ಬಂದ ಸುದ್ದಿಯಿಂದ ಆತಂಕಗೊಂಡ ಅಖಿಲ ಬ್ರಹ್ಮಾಂಡ ಅಂಡಾಂಡ ಪಿಂಡ ಲಂಡ ಭಕ್ತರು ತಂಡೋಪತಂಡವಾಗಿ, ಪ್ರಜೆಗಳ ತೆರಿಗೆಯ ಬೆವರಲ್ಲಿ ಕಟ್ಟಿದ ನಮೋನ ಐಷಾರಾಮಿ ಅರಮನೆಯತ್ತ ದೌಡಾಯಿಸಿದ್ದರು. ವಿಷಯವೇನೆಂದು ವಿಶದವಾಗಿ ಯಾರಿಗೂ ತಿಳಿದಿರಲಿಲ್ಲ. ಮುಂಜಾನೆ ಎದ್ದಾಗಿಂದ, ಮೂಲೆ ಸಂದಿಯಲ್ಲಿದ್ದ ನಮೋ ವಿರೋಧಿಗಳನ್ನು ಹುಡುಕಿ, ಮತ್ತವರು ಉಸಿರೆತ್ತದಂತೆ ತದುಕಲು ಇಡಿ, ಐಟಿ, ಸಿಬಿಐಗಳನ್ನು ಛೂ ಬಿಟ್ಟು ಸುಸ್ತಾಗಿ ಮಲಗಿದ್ದ ಅಪರಿಮಿತ ಕುತಂತ್ರಿ ಮಂತ್ರಿ ಕೂಡ ಸುದ್ದಿ ಕೇಳಿ ಗೊಣಗುತ್ತ ಅರೆನಿದ್ದೆಯಿಂದ ಎಚ್ಚೆತ್ತ. ನಮೋ ಗ್ರಹಚಾರವನ್ನು ಹಳಿಯುತ್ತ ಅರಮನೆಯತ್ತ ಹೆಜ್ಜೆ ಹಾಕಿದ.</p>



<p>ಇನ್ನೇನು ಅರಮನೆ ಬಂತು ಅನ್ನುವಷ್ಟರಲ್ಲಿ ಗಕ್ಕನೆ ನಿಂತ ಅಪರಿಮಿತ ಕುತಂತ್ರಿ ಆಕಾಶದತ್ತ ದಿಟ್ಟಿಸಿದ. ಫಳಫಳನೆ ಹೊಳೆವ ನಕ್ಷತ್ರಗಳು, ಚಂದ್ರನ ಬಿಟ್ಟರೆ ಎಲ್ಲೂ ಚಾದರದಷ್ಟು ಮೋಡಗಳು ಕಾಣಲಿಲ್ಲ. ಹಾಗಿದ್ದರೆ, ರಸ್ತೆಯೆಲ್ಲಾ ತೇವಗೊಂಡು ನೀರು ಹರಿದು ಬರುತ್ತಿರುವುದಾದರೂ ಎಲ್ಲಿಂದ? ಗಾಬರಿಯಿಂದ ಅರಮನೆ ಹೊಕ್ಕಾಗ ಅಲ್ಲಿಯ ದೃಶ್ಯ ಕಂಡು ಗಕ್ಕನೆ ನಿಂತ. ನೆರೆದಿದ್ದ ನೂರಾರು ಲಂಡಭಕ್ತರ ರೋದನೆಯ ಕಣ್ಣೀರು ಹೊಳೆಯಾಗಿ ಹರಿದು ಬರುತ್ತಿತ್ತು.</p>



<p>ಹೆಜ್ಜೆ ಇರಿಸಲು ಜಾಗವಿಲ್ಲದಂತೆ ನೆರೆದಿದ್ದ ಭಕ್ತರ ಮಧ್ಯೆ ಇರುಕಿಸಿಕೊಂಡವನು ತಳ್ಳಾಡುತ್ತ ಅವರನ್ನು ದೂಡಿ ಕೊಂಡು ನಮೋ ಕೊಠಡಿಯತ್ತ ಬಂದ. ಅದಾಗಲೇ ಮಂತ್ರಿಗಳು, ಪೂರ್ವಾಶ್ರಮದ ಚಡ್ಡಿಧಾರಿಗಳು, ಗೋದಿ ಮಾಧ್ಯಮದ ಬಕೆಟ್ ಪತ್ರಕರ್ತರು &#8211; ಎಲ್ಲರೂ ಮ್ಲಾನವದನರಾಗಿ ನಿಂತದ್ದು ಕಂಡ ಅಪರಿಮಿತ ಕುತಂತ್ರಿಗೆ ಸುದ್ದಿ ತನಗೆ ತಡವಾಗಿ ಸಿಕ್ಕು ಕೊನೆಯವನಾಗಿ ಬಂದದ್ದಕ್ಕೆ ಮುಜುಗರವಾಯಿತು. ಏನು ನಡೆದಿದೆ? ಸಾಮ್ರಾಟನಿಗೆ ಏನಾದರೂ ವಿಪತ್ತು ಒದಗಿ ಬಂತೆ? ಏನೊಂದು ತಿಳಿಯದೆ ಕಮಲೀ ಮುಖಂಡ ಕಪಿ ದಡ್ಡನತ್ತ ಕಣ್ಸನ್ನೆಯಲ್ಲಿ ಕೇಳಿದರೆ ʼಎಲ್ಲಾ ಮುಗಿದು ಹೋದ ಹಾಗೆ!ʼ ಎನ್ನುವಂತೆ ಕೊಠಡಿಯತ್ತ ಜೋಲು ಮೋರೆ ಮಾಡಿದ. ಕೊಠಡಿಯ ಬಾಗಿಲ ಕೆಳಗಿನ ಸಂದಿಯಲ್ಲಿ ನೀರು ಹರಿದು ಬಂದು ಲಂಡಭಕ್ತರ ಕಣ್ಣೀರನ ಮುಖ್ಯವಾಹಿನಿಯಲ್ಲಿ ಸೇರುತ್ತಿತ್ತು.</p>



<p>ಮತ್ತಷ್ಟು ಗೊಂದಲಗೊಂಡ ಅಪರಿಮಿತ ಕುತಂತ್ರಿ, ಅಲ್ಲೇ ನಿಂತು ಕಣ್ಣೀರನ್ನು ಒರೆಸುತ್ತ ಕರ್ಚೀಫನ್ನು ಹಿಂಡುತ್ತಿದ್ದ ನಮೋ ಆಪ್ತಕಾರ್ಯದರ್ಶಿಗೆ “ಸಾಮ್ರಾಟರು ಎಲ್ಲಿ?” ಎಂದ.</p>



<p>“ವಿದೇಶಕ್ಕೆ ತೆರಳಿದ್ದ ನಮೋ ಮಹಾಸ್ವಾಮಿಗಳು ತಡರಾತ್ರಿ ಬಂದಾಗ ಬಹಳ ಚಿಂತೆಯಲ್ಲಿದ್ದಂತೆ ಕಂಡರು. ತುಟಿ ಎರಡು ಮಾಡದೆ ಬಿರುಗಾಳಿಯಂತೆ ಕೊಠಡಿ ಸೇರಿ ದಢಾರೆಂದು ಅಗುಳಿ ಹಾಕಿಕೊಂಡರು. ನಾನು ಮಾತಾಡಿಸುವ ಧೈರ್ಯ ಮಾಡಲಿಲ್ಲ. ಅರ್ಧತಾಸಿನ ನಂತರ “ಅಯ್ಯೋ!” ಎಂದು ಕೂಗಿದ ಹಾಗಾಯಿತು. ಎಷ್ಟು ಕೂಗಿದರೂ ಬಾಗಿಲು ತೆರೆಯಲಿಲ್ಲ. ಒಳಗಿನಿಂದ ಒಂದೇ ಸಮನೆ ನೀರು ಪ್ರವಾಹದಂತೆ ಹರಿದು ಬಂತು”</p>



<p>ಕಳೆದ ವರ್ಷ ಕೂಡ ಇಂಥದ್ದೇ ಪ್ರಸಂಗ ನಡೆದದ್ದು ಅ. ಕುತಂತ್ರಿಯ ನೆನಪಿಗೆ ಬಂತು. ʼಆಗ ಮಮ್ಮೀ…ಮಮ್ಮೀನ ನೋಡ್ಬೇಕು ಅಂತ ರಚ್ಚೆ ಹಿಡಿದಿದ್ದ. ಈಗ ಮಮ್ಮೀ ಇಲ್ಲ. ಮತ್ಯಾವ ಹೊಸ ನೌಟಂಕಿ ಶುರು ಮಾಡಿದ್ದಾನೊ! ಇತ್ತೀಚಿಗೆ ಮೆಥೆಡ್ ಆಕ್ಟಿಂಗ್ ಬೇರೆ ಪ್ರಾಕ್ಟಿಸ್ ಮಾಡ್ತಿದ್ದಾನೆʼ ಎಂದು ತಲೆ ಕೆರೆದುಕೊಂಡು, ಬಾಗಿಲನ್ನು ಒಡೆಯಲು ಕಾವಲುಗಾರರಿಗೆ ಹೇಳಿದ.</p>



<p>ಯಾರೂ ಒಳ ಬರದಂತೆ ಎಚ್ಚರಿಸಿ ತಾನೊಬ್ಬನೇ ರೂಮಿನೊಳಗೆ ಬಂದರೆ, ನಮೋ ಬಿಟ್ಟ ಕಣ್ಣು ಬಿಟ್ಟಂತೆ ಶೂನ್ಯದತ್ತ ದಿಟ್ಟಿಸುತ್ತ ಮಂಚದ ಮೇಲೆ ಕುಳಿತಿದ್ದ. ಮುಖದಲ್ಲಿ ದುಃಖ ಕೆರೆಯಂತೆ ನಿಂತಿತ್ತು. ಬಲಗಣ್ಣಿಂದ ಮಾತ್ರ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ʼಒಂದೇ ಕಣ್ಣಿನಿಂದ ಅಳು…ವಾಹ್! ಗ್ರೇಟ್ ಆಕ್ಟಿಂಗ್ʼ. ಯಾವುದಕ್ಕೂ ಇರಲಿ ಎಂದು ತನ್ನ ಮೊಬೈಲಲ್ಲಿ ಫೋಟೊ ಕ್ಲಿಕ್ಕಿಸಿದ. ಹಿನ್ನೆಲೆಯಲ್ಲಿ ಕಣ್ಣೀರಧಾರೆ…ಇದೇಕೆ…ಇದೇಕೆ…ಪ್ಯಾತೊ ಸಾಂಗ್ ಕೇಳಿಬರುತ್ತಿತ್ತು. “ಮಹಾಸ್ವಾಮಿಗಳೆ… ಏನಾಯಿತು? ಎಚ್ಚರಗೊಳ್ಳಿ” ಎಂದರೆ ನಮೋ ಅಲುಗಾಡದೆ ಶಿಲೆಯಾಗಿದ್ದ.</p>



<p>ಅ. ಕುತಂತ್ರಿ ಕೂಡಲೇ &#8211; ಆಪ್ತಕಾರ್ಯದರ್ಶಿ, ಕಪಿ ದಡ್ಡ, ಮಂತ್ರಿಮಂಡಲ, ಮಾ.ಕೃ.ಕುಟೀರದ ಪುರೋಹಿತ ಸೇರಿದಂತೆ ಎಲ್ಲಾ ಕೇಸರಿ ಪ್ರಮುಖರನ್ನು ಸೇರಿಸಿ ನಮೋ ಸಾಮ್ರಾಟರಿಗೆ ಆಗಿರುವ ಆಘಾತವನ್ನು ಅರಿಯಲು ತುರ್ತುಸಭೆಯನ್ನು ಕರೆದ. ಸಭೆಯಲ್ಲಿ ಕಳೆದೆರೆಡು ದಿನಗಳಿಂದ ನಮೋ ಸುತ್ತ ಆದ ಘಟನೆಗಳನ್ನು ಕೆದಕುತ್ತ ಶೋಧನೆ ನಡೆಯಿತು.</p>



<p>24&#215;7 – ನಮೋಗೆ ಸಕಲ ಇಷ್ಟಾರ್ಥ ಸೇವೆ ಸಲ್ಲಿಸುತ್ತ ಜೊತೆಗಿರುವ ಆಪ್ತಕಾರ್ಯದರ್ಶಿಯ ಅಭಿಪ್ರಾಯವನ್ನು ಮೊದಲು ಕೇಳಲಾಗಿ “ಬಾಲಕನಂತಿದ್ದ ರಾಗಾ ಈಗ ಬ್ಲಾಕ್ ಬೆಲ್ಟ್ ತೊಟ್ಟು, ತೊಡೆ ತಟ್ಟುತ್ತ ಅಗ್ನಿವೀರ್, ಶೇರ್ ಮಾರ್ಕೆಟ್ ಸ್ಕಾಂಡಲ್, ಪರೀಕ್ಷೆ ಪೇಪರ್ ಲೀಕ್, ಜಾತಿ ಜನಗಣತಿ..ಎಕ್ಸೆಟ್ರಾಂತ ಇತ್ತೀಚಿಗೆ ಎಸೆಯುವ ಸವಾಲುಗಳಿಗೆ ಕೌಂಟರ್ ಕೊಡಲಾಗದೆ ಮಹಾಸ್ವಾಮಿಗಳು ಕಂಗೆಟ್ಟಿದ್ದರು. ಅದೂ ಸಾಲದೂಂತ ತಮ್ಮದೇ ಕಮಲೀ ಸಭಾ ನಡಾವಳಿಗಳ ಬಗ್ಗೆ ಬಹಳ ಕಳವಳಗೊಂಡಿದ್ದರು. ತಾನು ಎತ್ತಿ ಆಡಿಸಿ, ಮುದ್ದಾಡಿ ಗದ್ದುಗೆ ಮೇಲೆ ಕೂರಿಸಿದ ಬುಲ್ಡ್ ಡೋಜರ್ ಭೋಗಿಬಾಬಾ, ಸಭೆಗಳಲ್ಲಿ ಎಲ್ಲರಂತೆ ಸಾಷ್ಟಾಂಗ ಬೀಳುವುದಿರಲಿ ಕನಿಷ್ಟ ನಮಸ್ಕರಿಸಿ ಗೌರವ ಕೊಡದೆ ಅಪಮಾನಿಸಿದ್ದು ಅವರನ್ನು ಚಿಂತೆಯ ಕೂಪಕ್ಕೆ ತಳ್ಳಿತ್ತು. ಮೊನ್ನೆ ಅವರ ಫ್ಯಾಷನ್ ಡಿಸೈನರ್ ಅಳತೆ ತೆಗೆದುಕೊಳ್ಳುವಾಗ ಐವತ್ತಾರು ಇದ್ದ ಎದೆ ಗಾತ್ರ ಇಂಚಿನ ಪಟ್ಟಿಯಲ್ಲಿ ಮೂವತ್ತಾರಕ್ಕೆ ಇಳಿದದ್ದನ್ನು ನೋಡಿ ಅವರು ಕುಸಿದು ಹೋಗಿದ್ದರು” ಎಂದು ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದ.</p>



<p>“ಅದು ಇರಬಹುದು. ಆದರೆ…” ಎಂದು ಮಧ್ಯೆ ಬಾಯಿ ಹಾಕಿದ ವಿದೇಶಾಂಗ ಮಂತ್ರಿ “ನೆನ್ನೆ ರೂಸ್ ಗೆ ಹೋಗಿದ್ದಾಗ ಎರಡೂ ದೇಶದ ಪ್ರಧಾನಿಗಳನ್ನು ಕೂಡಿಸಿ ʼಫಾರಿನ್ ಮಿತ್ರೋ…ಇದು ಕಲಹಕ್ಕೆ ಕಾಲವಲ್ಲ. ಯುದ್ದ ನಿಲ್ಲಿಸಿʼ ಎಂದು ಶಾಂತಿಯ ಮಂತ್ರ ಜಪಿಸಿದ ವಿಶ್ವಗುರುವಿನ ಮಾತಿಗೆ ಅವರುಗಳು ಮೊದಲಿಗೆ ತಲೆಯಾಡಿಸಿ, ಕೈ ಕುಲುಕಿ ಹಗ್ ಮಾಡಿದ್ದರು. ಆದರೆ…ಅನಿವಾಸಿಗಳನ್ನು ಸ್ಟೇಡಿಯಮ್ಮಲ್ಲಿ ಗುಡ್ಡೇ ಹಾಕಿ, ದೇಶದಲ್ಲಿ ಆಗುತ್ತಿರುವ ಬುಲೆಟ್ ಟ್ರೈನ್ ಸ್ಪೀಡಿನ ಡೆವಲಪ್ ಮೆಂಟ್ ಬಗ್ಗೆ ಬುರುಡೆ ಬಿಡುತ್ತಿರಬೇಕಾದರೆ ಬಾಂಬೊಂದು ನಮೋ ಸಾಹೇಬರ ಅಡಿಗೆ ಬಂದು ಬಿತ್ತು. ಎದ್ದೇನೊ ಬಿದ್ದೇನೆಂದು ಪುಷ್ಪಕ ವಿಮಾನ ಹತ್ತಿ ವಾಪಸ್ಸು ಬರೋವಾಗ ನಮೋ ಸಾಹೇಬರು ಭಯದಿಂದ ನಡುಗುತ್ತಿದ್ದರು. ಅದೂ ಒಂದು ಕಾರಣ ಇರಬಹುದು” ಎಂದದ್ದು ಅ.ಕುತಂತ್ರಿಗೆ ಸರಿಬರಲಿಲ್ಲ. “ಹು…ಹು…ಇಲ್ಲ..ನಮೋ ಸಾಹೇಬರು ರಾಕೆಟ್ಟುಗಳನ್ನು ಕೈಯಲ್ಲೇ ಹಿಡಿದು ಹಾರಿಸುವ ಎಂಟೆದೆ ಅಲ್ಲ…ಹದಿನೆಂಟೆದೆ ಭಂಟ. ಹೆದರಿಕೊಂಡು ಬಂದಿರಲಾರರು. ತಾನಿಲ್ಲದ ಟೈಮಲ್ಲಿ ವೈರಿಗಳು ದೇಶವನ್ನು ಒಡೆದು ಹಾಕುತ್ತಾರೆಂದು ಬೇಗ ಬಂದಿದ್ದಾರೆ…ಅಷ್ಟೇ” ಎಂದು ಕಿತ್ತು ಹೋದ ನಮೋ ಧೈರ್ಯಕ್ಕೆ ಒಂದಷ್ಟು ತೇಪೆ ಮೆತ್ತಿದ.</p>



<p>ಅಷ್ಟರಲ್ಲಿ ಕಪಿ ದಡ್ಡ “ಕುತಂತ್ರಿಗಳೇ…ಸಾಮ್ರಾಟರ ಮನೋ ವೇದನೆಗೆ ನಾನೂ ಕಾರಣ ಇರಬಹುದು. ಆ ಪೊಮೆರಿಯನ್ ತಳಿಯ ಮಂಗನಾ ಶೇಪೌಟನ್ನು ಕಮಲೀ ಪಕ್ಷಕ್ಕೆ ಸೇರಿಸಿ ತಪ್ಪು ಮಾಡಿದೆ. ಎಷ್ಟು ಹೇಳಿದರೂ ನಾಬಾಲಿಕ್ ಬುದ್ದಿಯ ಅದಕ್ಕೆ ಅರ್ಥವಾಗುತ್ತಿಲ್ಲ. ಚಳುವಳಿ ಮಾಡುತ್ತಿರುವ ರೈತರು ಟೆರರಿಷ್ಟ್ ಗಳು. ಅಲ್ಲಿ ರೇಪ್ ಗಳು ಆಗುತ್ತಿವೆ. ಮರ್ಡರ್ ಮಾಡಿ ಡೆಡ್ ಬಾಡಿಗಳನ್ನು ನೇತು ಹಾಕಿದ್ದಾರೆ…ಹೀಗೆ ತಲೆಬುಡ ಇಲ್ಲದೆ ಮಾತಾಡುತ್ತಿದ್ದಾಳೆ. ಜನರು, ವಿರೋಧಿಗಳು ಇವೆಲ್ಲ ನಮೋ ಹೇಳಿಕೊಟ್ಟ ಗಿಳಿಮಾತುಗಳು ಎಂದು ವೃಥಾ ಸಾಮ್ರಾಟರನ್ನು ಛೇಡಿಸುತ್ತಿದ್ದಾರೆ. ಅಕಟಕಟಾ…” ಎಂದು ಗದ್ಗದಿತನಾದ.</p>



<p>ಎಷ್ಟು ಚರ್ಚಿಸಿದರೂ ನಮೋ ರೋದನೆಯ ಮೂಲ ಯಾವುದೆಂದು ತಿಳಿಯಲು ಸಭೆ ಸೋತಾಗ ಅ.ಕುತಂತ್ರಿ ಫೋರೆನಿಕ್ಸ್ ಲ್ಯಾಬ್ ತಂತ್ರಜ್ಞರಿಗೆ ಬರಹೇಳಿದ. ಇಡೀ ದೇಹ ಮುಚ್ಚುವಂತೆ ಪಿಪಿಇ ತೊಟ್ಟು ಬಂದ ಪರಿಣಿತರು ಸ್ಟ್ಯಾಚು ಆಗಿದ್ದ ನಮೋ ಕಣ್ಣೀರಿನ ಸ್ಯಾಂಪಲ್ಲನ್ನು ಸಂಗ್ರಹಿಸಿ ಅ.ಕುತಂತ್ರಿಗೆ ವಂದಿಸಿ ಹೊರಟಾಗ, “ವರ್ಷಗಟ್ಟಲೆ ರಿಸರ್ಚ್ ಮಾಡುತ್ತ ಕೂರಬೇಡಿ. ಬೇಗ ರಿಸಲ್ಟ್ ಬೇಕು. ಇದು ದೇಶದ ಅಳಿವು ಉಳಿವಿನ ಪ್ರಶ್ನೆ” ಎಂದು ಗುಟುರು ಹಾಕಿದ. ಅಷ್ಟರಲ್ಲಿ ಕಾವಲುಗಾರ ಬಂದು ಆಪ್ತಕಾರ್ಯದರ್ಶಿಯ ಕಿವಿಗೆ ಉಸಿರಿದ್ದನ್ನು, ಅವನು ಅ.ಕುತಂತ್ರಿಯ ಕಿವಿಗೆ ಸುರಿದ.</p>



<p>ನಮೋ ಸಂಕಟದಲ್ಲಿ ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದ. “ಏನದು ಹೇಳಿ. ನಿಮ್ಮ ಬೇಗುದಿ ಕಡಿಮೆಯಾಗುತ್ತೆ” ಎಂದು ಅ.ಕುತಂತ್ರಿ ಬೆನ್ನನ್ನು ನೀವಿದ. “ಅಲ್ಲಿ…ಅಲ್ಲಿ…ಬಂಗಾಲದಲ್ಲಿ… ಅತ್ಯಾಚಾರ…ಬಲಾತ್ಕಾರ…ದೀದಿ…ದೀದಿ…ಬೇಟಿ ಬಚಾವ್…ಬೇಟಿ ಪಡಾವ್” ಎಂದು ತೊದಲುತ್ತ ತೆರೆದಿದ್ದ ಕಣ್ಣುಗಳನ್ನು ಮುಚ್ಚಿ ಹಾಸಿಗೆಗೆ ಒರಗಿದ. ಒಂಟಿ ಕಣ್ಣೀರು ಮತ್ತಷ್ಟು ಒಸರಿ ಬಂತು.</p>



<p>ಮಹಿಳೆ ಶೋಷಣೆ ಬಗ್ಗೆ ನಮೋ ಸುರಿಸಿದ ಕೊಳಗಗಟ್ಟಲೆ ಕಣ್ಣೀರ ಬಗ್ಗೆ ಬಕೆಟ್ ಮಾಧ್ಯಮಗಳು ತರಹೇವಾರಿ ಹೆಡ್ಡಿಂಗ್ ಗಳನ್ನು ಕೊಟ್ಟು ಪ್ರಸಾರ ಮಾಡಿದವು. ಮಾತೃಹೃದಯದ ನಮೋ ಸಂಕಟಕ್ಕೆ ಲಂಡಭಕ್ತರ ಕರುಳು ಕಿವಿಚಿ ಬಂದು ಕಣ್ಣೀರಧಾರೆಯನ್ನು ಹರಿಸಿ, ಅಂಗಡಿಮುಂಗಟ್ಟು ಆಸ್ಪತ್ರೆಗಳ ಮೇಲೆ ದಾಳಿ ಎಸಗಿ ಧ್ವಂಸ ಮಾಡಿದರು. ರಸ್ತೆಗಳನ್ನು ಬಂದು ಮಾಡಿ, ವಾಹನಗಳಿಗೆ ಬೆಂಕಿ ಹಚ್ಚಿ ಶೋಷಿತಳಿಗೆ ಸಂತಾಪ ಸೂಚಿಸಿದರು.</p>



<p>ಫೋರೆನಿಕ್ಸ್ ಲ್ಯಾಬ್ ನಲ್ಲಿ ತನಿಖೆ ನಡೆಸಿದ್ದ ತಂತ್ರಜ್ಞರಿಗೆ ಅಸಹಜ, ವಿಶೇಷವಾದ ಫಲಿತಾಂಶ ದೊರೆತು ʼಯುರೇಕಾ!ʼ ಎಂದು ಸಂಭ್ರಮಗೊಂಡರು. “ನಮೋ ಅವರ ಒಂದೇ ಕಣ್ಣಿನಲ್ಲಿ ಅಶ್ರು ಬಂದದ್ದಕ್ಕೆ ಕಾರಣ ಸಿಗುತ್ತಿಲ್ಲ. ಇನ್ನೂ ಹೆಚ್ಚಿನ ಸಂಶೋಧನೆಯಿಂದ ತಿಳಿಯಬಹುದು. ಆದರೆ, ನಮೋ ಅವರು ಸುರಿಸಿದ ಕಣ್ಣೀರು, ಮೊಸಳೆ ಕಣ್ಣೀರಿಗೆ ಹೋಲಿಕೆಯಾಗುತ್ತಿರುವುದು ತನಿಖೆಯಲ್ಲಿ ತಿಳಿದು ಬಂದು ಅಚ್ಚರಿ ತಂದಿದೆ” ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದರು.</p>



<p>“ದೇಶದಲ್ಲಿ ಇಪ್ಪತ್ತು ನಿಮಿಷಕ್ಕೊಮ್ಮೆ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದೆ. ಯೋಧರ ಪತ್ನಿಯರನ್ನು ಸೇರಿ ಹಲವು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ, ಮಾನಭಂಗ ಎಸಗಲಾಗಿದೆ. ಇದ್ಯಾವುದರ ಬಗ್ಗೆ ಉಸಿರೆತ್ತದೆ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡಿರುವ ಸಾಮ್ರಾಟ ಈಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾನೆ. ಎಂಥಾ ನಾಚಿಗೆಗೇಡು!” ಎಂದು ದೇಶವಾಸಿಗಳು ನಮೋ ಆಷಾಢಭೂತಿತನಕ್ಕೆ ಉಗಿದು ಉಪ್ಪಿನಕಾಯಿ ಹಾಕಿದರು.</p>



<p>ಚಂದ್ರಪ್ರಭ ಕಠಾರಿ<br>cpkatari@yahoo.com</p>
]]></content:encoded>
					
		
		
			</item>
		<item>
		<title>ಬಿಜೆಪಿಯೇ ಇಡಿ ಹೆಸರಿನಲ್ಲಿ ತನಿಖೆ ನಡೆಸುತ್ತಿದೆ: ಎಎಪಿ ಆರೋಪ</title>
		<link>https://peepalmedia.com/bjp-is-investigating-in-the-name-of-ed-aap-alleges/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 25 Mar 2024 13:26:37 +0000</pubDate>
				<category><![CDATA[Uncategorized]]></category>
		<category><![CDATA[ದೇಶ]]></category>
		<category><![CDATA[AAP]]></category>
		<category><![CDATA[aap candidate]]></category>
		<category><![CDATA[aap challeng bjp]]></category>
		<category><![CDATA[bjp]]></category>
		<category><![CDATA[bjp dirty politics]]></category>
		<category><![CDATA[bjp govt]]></category>
		<category><![CDATA[bjp karnataka]]></category>
		<category><![CDATA[india]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[politics]]></category>
		<guid isPermaLink="false">https://peepalmedia.com/?p=37485</guid>

					<description><![CDATA[ನವದೆಹಲಿ: ಇಡಿ ಸ್ವಾಯತ್ತ ಸಂಸ್ಥೆ ಎನ್ನುವುದು ಸಂಪೂರ್ಣ ಸುಳ್ಳು. ಬಿಜೆಪಿ ಕಚೇರಿಯೇ ಇಡಿ ಹೆಸರಿನಲ್ಲಿ ತನಿಖೆ ನಡೆಸುತ್ತಿದೆ ಎಂದು ಎಎಪಿ ಆರೋಪಿಸಿದೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ದೆಹಲಿ ಸಚಿವೆ ಅತಿಶಿ, ಜಾರಿ ನಿರ್ದೇಶನಾಲಯವು ಸ್ವತಂತ್ರ ತನಿಖಾ ಸಂಸ್ಥೆ ಎನ್ನುವುದು ಸುಳ್ಳು. ಇಡಿ ಆರೋಪಿತರಿಗೆ ಏನಾದರೂ ಹೇಳಬೇಕಾದರೆ, ಮೊದಲು ಆರೋಪಪಟ್ಟಿ ಸಿದ್ದಪಡಿಸಿಕೊಂಡು ಸಲ್ಲಿಸಬೇಕು. ಅದನ್ನು ನ್ಯಾಯಾಧೀಶರ ಮುಂದೆ ಒಪ್ಪಿಸಬೇಕು. ಇದ್ಯಾವುದು ಇಲ್ಲದೇ ಬಿಜೆಪಿ ತಾಳಕ್ಕೆ ಇಡಿ ಕುಣಿಯುತ್ತಿದೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅಬಕಾರಿ ಹಗರಣದ [&#8230;]]]></description>
										<content:encoded><![CDATA[
<p>ನವದೆಹಲಿ: ಇಡಿ ಸ್ವಾಯತ್ತ ಸಂಸ್ಥೆ ಎನ್ನುವುದು ಸಂಪೂರ್ಣ ಸುಳ್ಳು. ಬಿಜೆಪಿ ಕಚೇರಿಯೇ ಇಡಿ ಹೆಸರಿನಲ್ಲಿ ತನಿಖೆ ನಡೆಸುತ್ತಿದೆ ಎಂದು ಎಎಪಿ ಆರೋಪಿಸಿದೆ.</p>



<p>ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ದೆಹಲಿ ಸಚಿವೆ ಅತಿಶಿ, ಜಾರಿ ನಿರ್ದೇಶನಾಲಯವು ಸ್ವತಂತ್ರ ತನಿಖಾ ಸಂಸ್ಥೆ ಎನ್ನುವುದು ಸುಳ್ಳು. ಇಡಿ ಆರೋಪಿತರಿಗೆ ಏನಾದರೂ ಹೇಳಬೇಕಾದರೆ, ಮೊದಲು ಆರೋಪಪಟ್ಟಿ ಸಿದ್ದಪಡಿಸಿಕೊಂಡು ಸಲ್ಲಿಸಬೇಕು. ಅದನ್ನು ನ್ಯಾಯಾಧೀಶರ ಮುಂದೆ ಒಪ್ಪಿಸಬೇಕು. ಇದ್ಯಾವುದು ಇಲ್ಲದೇ ಬಿಜೆಪಿ ತಾಳಕ್ಕೆ ಇಡಿ ಕುಣಿಯುತ್ತಿದೆ ಎಂದು ಆರೋಪಿಸಿದರು.</p>



<p>ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅಬಕಾರಿ ಹಗರಣದ ದಾಖಲೆಗಳನ್ನು ಹೊಂದಿರುವ ಹಳೆಯ ಫೋನ್ ಅನ್ನು ಕಳೆದುಕೊಂಡಿದ್ದಾರೆ ಎನ್ನುವುದೆಲ್ಲ ಸುಳ್ಳು ಆರೋಪ ಎಂದು ತಿರಸ್ಕರಿಸಿರುವ ಅವರು, ಬಿಜೆಪಿ ಕಚೇರಿಯಿಂದಲೇ ತನಿಖೆ ನಡೆಸಲಾಗುತ್ತಿದೆ. ಜಾರಿ ನಿರ್ದೇಶನಾಲಯ ಬಿಜೆಪಿಯ ರಾಜಕೀಯ ಪಾಲುದಾರ &nbsp;ಪಕ್ಷದಂತೆ ವರ್ತಿಸುತ್ತಿದೆ ಎಂದು ದೂರಿದರು.</p>



<p>ದೇಶದ ಸಂವಿಧಾನ ಮತ್ತು ಕಾನೂನು ಇಡಿ ಅಧಿಕಾರಿಗಳಿಗೆ ಅಧಿಕಾರ ನೀಡಿದೆ ಎಂದು ಹೇಳಲು ಬಯಸುತ್ತೇನೆ. ನೀವು ಸಂವಿಧಾನವನ್ನು ಉಲ್ಲಂಘಿಸಬೇಡಿ; ಸಂವಿಧಾನವನ್ನು ಕೊಲ್ಲಬೇಡಿ. ನೀವು ಭಾರತೀಯ ಜನತಾ ಪಕ್ಷದ ಅಂಗಸಂಸ್ಥೆಯಲ್ಲ. ನೀವು ಈ ದೇಶದ ಕಾನೂನುಗಳ ಅಡಿಯಲ್ಲಿ ರಚಿಸಲಾದ ಸ್ವತಂತ್ರ ತನಿಖಾ ಸಂಸ್ಥೆ ಎಂಬುದನ್ನು ಮರೆಯಬಾರದು ಎಂದು ಅವರು ಎಚ್ಚರಿಕೆ ನೀಡಿದರು.</p>



<p>ಎರಡು ವರ್ಷಗಳ ಹಿಂದೆ ಕೇಜ್ರಿವಾಲ್ ಅವರು ಅಬಕಾರಿ ಹಗರಣ ನಡೆದಾಗ ಬಳಸಿದ್ದ ಫೋನ್ ಕಾಣೆಯಾಗಿದೆ ಎಂದು ಕೇಜ್ರಿವಾಲ್‌ ಹೇಳುತ್ತಿದ್ದಾರೆ ಎಂದು ಇಡಿ ಮೂಲಗಳು ನಿನ್ನೆ ಮಾಹಿತಿ ನೀಡಿದ್ದವು.</p>



<p>ಕೇಜ್ರಿವಾಲ್ ಅವರನ್ನು ಗುರುವಾರ ಸಂಜೆ ತಡರಾತ್ರಿ ಬಂಧಿಸಲಾಗಿದ್ದು, ಅವರು ಜೈಲಿನಿಂದಲೇ ಸಿಎಂ ಅಧಿಕಾರ ಚಲಾಯಿಸುವುದಾಗಿ ಘೋಷಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಇಲ್ಲಿ ನಮ್ಮವರಿಗೆ ಉದ್ಯೋಗ ಇಲ್ಲ, ಪಾಕಿಸ್ತಾನದಿಂದ ಕರೆತಂದು ಉದ್ಯೋಗ ಕೊಡುವುದು ಸರಿಯೇ?: CAA ಕುರಿತು ಕೇಜ್ರಿವಾಲ್‌ ಪ್ರತಿಕ್ರಿಯೆ</title>
		<link>https://peepalmedia.com/we-dont-have-jobs-here-is-it-right-to-bring-jobs-from-pakistan-kejriwals-response-on-caa/</link>
		
		<dc:creator><![CDATA[Peepal Media]]></dc:creator>
		<pubDate>Wed, 13 Mar 2024 12:01:59 +0000</pubDate>
				<category><![CDATA[ಚುನಾವಣೆ 2023- ಪರಿಣಾಮ]]></category>
		<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[ದೇಶ]]></category>
		<category><![CDATA[ವ್ಯಾಪಾರ- ವಹಿವಾಟು]]></category>
		<category><![CDATA[Aam Aadmi Party]]></category>
		<category><![CDATA[AAP]]></category>
		<category><![CDATA[aravind kejrival]]></category>
		<category><![CDATA[BJP ADVERTISMENT]]></category>
		<category><![CDATA[bjp dirty politics]]></category>
		<category><![CDATA[bjp govt]]></category>
		<category><![CDATA[Bjp IT cell]]></category>
		<category><![CDATA[bjp karnataka]]></category>
		<category><![CDATA[BJP leader]]></category>
		<category><![CDATA[bjp narendra modi]]></category>
		<category><![CDATA[india]]></category>
		<category><![CDATA[karnataka]]></category>
		<category><![CDATA[modi]]></category>
		<category><![CDATA[modi government]]></category>
		<category><![CDATA[modiji]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=36985</guid>

					<description><![CDATA[ನವದೆಹಲಿ: ಇಲ್ಲಿ ನಮ್ಮ ನಮ್ಮ ದೇಶದ ಯುವಜನರಿಗೆ ಉದ್ಯೋಗ ಇಲ್ಲ, ಪಾಕಿಸ್ತಾನ, ಅಪಘಾನಿಸ್ತಾನಗಳಿಂದ ಜನರನ್ನು ಕರೆತಂದು ಅವರಿಗೆ ಉದ್ಯೋಗ ಕೊಡುವುದು ಸರಿಯೇ ಎಂದು ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಪ್ರಶ್ನಿಸಿದ್ದಾರೆ. ಸಿಎಎ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನ ಈ ಮೂರು ದೇಶಗಳ ಹಿಂದೂ ಧಾರ್ಮಿಕ ಅಲ್ಪಸಂಖ್ಯಾತರು ಭಾರತೀಯ ಪೌರತ್ವ ಪಡೆಯಲು ಬಯಸಿದರೆ ಅಂಥವರಿಗೆ ಮಾತ್ರ ಸಿಎಎ ಕಾನೂನು ಅನ್ವಯ ಬಿಜೆಪಿಯ ಕೇಂದ್ರ ಸರ್ಕಾರ ಹೇಳುತ್ತದೆ. ಅಂದರೆ  ಹೆಚ್ಚಿನ [&#8230;]]]></description>
										<content:encoded><![CDATA[
<p>ನವದೆಹಲಿ: ಇಲ್ಲಿ ನಮ್ಮ ನಮ್ಮ ದೇಶದ ಯುವಜನರಿಗೆ ಉದ್ಯೋಗ ಇಲ್ಲ, ಪಾಕಿಸ್ತಾನ, ಅಪಘಾನಿಸ್ತಾನಗಳಿಂದ ಜನರನ್ನು ಕರೆತಂದು ಅವರಿಗೆ ಉದ್ಯೋಗ ಕೊಡುವುದು ಸರಿಯೇ ಎಂದು ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಪ್ರಶ್ನಿಸಿದ್ದಾರೆ.</p>



<p>ಸಿಎಎ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನ ಈ ಮೂರು ದೇಶಗಳ ಹಿಂದೂ ಧಾರ್ಮಿಕ ಅಲ್ಪಸಂಖ್ಯಾತರು ಭಾರತೀಯ ಪೌರತ್ವ ಪಡೆಯಲು ಬಯಸಿದರೆ ಅಂಥವರಿಗೆ ಮಾತ್ರ ಸಿಎಎ ಕಾನೂನು ಅನ್ವಯ ಬಿಜೆಪಿಯ ಕೇಂದ್ರ ಸರ್ಕಾರ ಹೇಳುತ್ತದೆ. ಅಂದರೆ  ಹೆಚ್ಚಿನ ಸಂಖ್ಯೆಯ ಹಿಂದೂ ಅಲ್ಪಸಂಖ್ಯಾತರು ನಮ್ಮ ದೇಶಕ್ಕೆ ಬರುವಂತೆ ಮಾಡುತ್ತೇವೆ,  ಕರೆ ತರುತ್ತೇವೆ. ಅವರಿಗೆ ಉದ್ಯೋಗ ಕೊಡಿಸುತ್ತೇವೆ, ಮನೆ ಕಟ್ಟಿಸಿಕೊಡುತ್ತೇವೆ, ಇಲ್ಲೇ ನೆಲೆಸುವಂತೆ ಮಾಡುತ್ತೇವೆ ಅನ್ನುವುದು ವಿಚಿತ್ರ ಅಲ್ಲವೇ ಎಂದು ಪ್ರಶ್ನಿಸಿದರು.</p>



<p> ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರದ ಮೋದಿ ಸರ್ಕಾರಕ್ಕೆ ಯಾವ ಒಳ್ಳೆಯ ಕೆಲಸವನ್ನು ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಈಗ ಚುನಾವಣೆ ಸಂದರ್ಭದಲ್ಲಿ CAA ಜಾರಿಗೆ ಅಧಿಸೂಚನೆ ಹೊರಡಿಸಿದೆ. ಬಿಜೆಪಿ ಸರ್ಕಾರ ಏನಾದರು ಒಳ್ಳೆ ಕೆಲಸ ಮಾಡಿದ್ದರೆ ಇವತ್ತು CAA ಬದಲಾಗಿ ತಾವು ಮಾಡಿದ ಕೆಲಸ ತೋರಿಸಿ ಓಟು ಕೇಳಬಹುದ್ದೀತು ಎಂದರು.</p>



<p>ಹಣದುಬ್ಬರ ಮತ್ತು ನಿರುದ್ಯೋಗ ಇಂದು ದೇಶ ಎದುರಿಸುತ್ತಿರುವ ದೊಡ್ಡ ಸಮಸ್ಯೆಗಳಾಗಿವೆ. ಮಧ್ಯಮವರ್ಗದ ಕುಟುಂಬಕ್ಕೂ ಇಂದು ಮನೆ ನಡೆಸುವುದು ಕಷ್ಟವಾಗುತ್ತಿದೆ. ಹಣದುಬ್ಬರ ಬೆನ್ನು ಮುರಿಯುತ್ತಿದೆ, ಮತ್ತೊಂದೆಡೆ ನಮ್ಮ ಯುವಕರು ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ. ಅವರ ಮೇಲೆ ಲಾಠಿ ಪ್ರಹಾರ ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಿರುದ್ಯೋಗ, ಮತ್ತು ಹಣದುಬ್ಬರಕ್ಕೆ ಸರಕಾರ ಪರಿಹಾರ ಹುಡುಕುವ ಬದಲು ಸಿಎ ಬಗ್ಗೆ ಮಾತನಾಡುತ್ತಿರುವುದು ತುಂಬಾ ದುಖಃಕರ ಸಂಗತಿ ಎಂದರು.</p>



<p>ಭಾರತದ ಅನೇಕ ಜನರು ನಿರಾಶ್ರಿತರಾಗಿದ್ದಾರೆ. &nbsp;ಆದರೆ ಬಿಜೆಪಿಯವರು ಪಾಕಿಸ್ತಾನದಿಂದ ಜನರನ್ನು ಕರೆತಂದು ಭಾರತದಲ್ಲಿ ನೆಲೆಸಲು ಬಯಸುತ್ತಾರೆ. &nbsp;ಅವರಿಗೆ ಮನೆಗಳನ್ನು ನೀಡಲು ಬಯಸುತ್ತಾರೆ. &nbsp;ನಮ್ಮ ಕುಟುಂಬ ಮತ್ತು ದೇಶದ ಅಭಿವೃದ್ಧಿಗೆ ಖರ್ಚು ಮಾಡಬೇಕಾದ ಭಾರತ ಸರ್ಕಾರದ ಸರ್ಕಾರಿ ಹಣ ಬೇರೆ ದೇಶದ ಜನರಿಗೆ ಖರ್ಚು ಮಾಡಲು ಹೊರಟಿರುವುದು ಎಷ್ಟು ಸರಿ? ಎಂದು ಅವರು ಪ್ರಶ್ನಿಸಿದರು.</p>



<p>ಆ ಮೂರು ದೇಶಗಳಲ್ಲಿ ಸುಮಾರು 2.5 ರಿಂದ 3 ಕೋಟಿ ಹಿಂದೂ ಧಾರ್ಮಿಕ ಅಲ್ಪಸಂಖ್ಯಾತರಿದ್ದಾರೆ. ಈ ಮೂರು ದೇಶಗಳು ಬಡ ದೇಶಗಳು ಹೌದು. ಭಾರತದ ಬಾಗಿಲು ತೆರೆದ ತಕ್ಷಣ ಈ ಮೂರು ದೇಶಗಳಿಂದ ಭಾರಿ ಜನಸಮೂಹವು ನಮ್ಮ ಭಾರತಕ್ಕೆ ಬರುತ್ತದೆ, ಈ 2.5 ಕೋಟಿ ಜನರಲ್ಲಿಯೂ ಸಹ. 1.5 ಕೋಟಿ ಜನರು ಭಾರತಕ್ಕೆ ಬರುತ್ತಾರೆ. ಹಾಗಾದರೆ ಅವರಿಗೆಲ್ಲ &nbsp;ಯಾರು ಉದ್ಯೋಗ ಕೊಡುತ್ತಾರೆ? &nbsp;ನೀವು ಅವರನ್ನು ಎಲ್ಲಿ ನೆಲೆಗೊಳಿಸುತ್ತೀರಿ? ಇವರಿಗೆಲ್ಲ ಬಿಜೆಪಿಯವರು ತಮ್ಮ &nbsp;ಮನೆಯಲ್ಲಿ ಪಾಲು ಕೊಡುತ್ತಾರೆಯೇ? ಅವರು ತಮಗೆ ಸಿಗುವ ಉದ್ಯೋಗವನ್ನು ಇವರಿಗೆಲ್ಲ ಬಿಟ್ಟುಕೊಡುತ್ತಾರೆಯೇ ಎಂದು ಕೇಜ್ರಿವಾಲ್‌ ಪ್ರಶ್ನಿಸಿದರು.</p>



<p>ಹಾಗಾದರೆ ಬಿಜೆಪಿ ಏಕೆ ಇಂಥ ಮಹಾನ್‌ ತಪ್ಪನ್ನು ಮಾಡುತ್ತಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.̤ ಉತ್ತರ ಬಹಳ ಸರಳವಾಗಿದೆ. ಕೇವಲ ವೋಟ್ ಬ್ಯಾಂಕ್ ಸೃಷ್ಟಿಸುವ ಕೊಳಕು ರಾಜಕೀಯವನ್ನು ಬಿಜೆಪಿ ಮಾಡುತ್ತಿದೆ. ಒಂದೂವರೆ ಕೋಟಿ ಜನರನ್ನು ಭಾರತಕ್ಕೆ ಕರೆತಂದು ಓಟ್‌ ಬ್ಯಾಂಕ್‌ ಮಾಡಿಕೊಳ್ಳುವುದು ಬಿಜೆಪಿ ಉದ್ದೇಶ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಇದರಿಂದ ಭಾರೀ ಲಾಭವಾಗಬಹುದು. ಒಂದೆಡೆ &nbsp;ಹರಿಯಾಣದ ಬಿಜೆಪಿಯ ಸರ್ಕಾರಕ್ಕೆ ಅಲ್ಲಿನ ಮಕ್ಕಳಿಗೆ ಉದ್ಯೋಗ ನೀಡಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಮಕ್ಕಳನ್ನು ಇಸ್ರೇಲ್‌ಗೆ ಉದ್ಯೋಗಕ್ಕಾಗಿ ಕಳುಹಿಸುತ್ತಿದೆ. &nbsp;ನಮ್ಮ ಮಕ್ಕಳನ್ನು ಯುದ್ಧಕ್ಕೆ ತಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು.</p>



<p>ಇಡೀ ಪ್ರಪಂಚದ ಯಾವುದೇ ದೇಶವು ತನ್ನ ನೆರೆಹೊರೆಯವರಿಗೆ ಸಹಾಯ ಮಾಡಲು ಸಾಧ್ಯವಿಲ್ಲ. ದೇಶಗಳ ಬಡವರನ್ನು ನೆರೆಯ ದೇಶಗಳ ಜನರು ತಮ್ಮ ದೇಶಕ್ಕೆ ಬರುವುದನ್ನು ತಡೆಯಲು ವಿವಿಧ ರೀತಿಯ ಕಾನೂನುಗಳನ್ನು ಮಾಡುತ್ತದೆ. ಗಡಿಗಳಲ್ಲಿ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ವಿದ್ಯುತ್ ತಂತಿಗಳನ್ನು ಅಳವಡಿಸಲಾಗುತ್ತಿದೆ. &nbsp;ಪಕ್ಕದ ದೇಶದ ಬಡವರಿಗೆ ದೇಶವನ್ನು ಪ್ರವೇಶಿಸಲು ಬಾಗಿಲು ಪ್ರವೇಶಿಸುವುತ್ತಿರುವುದು ನಮ್ಮಲ್ಲಿಯೇ ಮೊದಲು. ಇಂಥ ಕೊಳಕು ರಾಜಕೀಯ ಮಾಡುತ್ತಿರುವ ಪ್ರಪಂಚದಲ್ಲೇ ಏಕೈಕ ಪಕ್ಷವೆಂದರೆ ಅದು ಬಿಜೆಪಿಯಾಗಿದೆ ಎಂದು ಹರಿಹಾಯ್ದರು.</p>



<p>&nbsp;ಯೋಚಿಸಬೇಕಾದ ವಿಷಯವೆಂದರೆ ಕಳೆದ 10 ವರ್ಷಗಳಲ್ಲಿ ಭಾರತದ 11 ಲಕ್ಷಕ್ಕೂ ಹೆಚ್ಚು ದೊಡ್ಡ ಶ್ರೀಮಂತ ಕೈಗಾರಿಕೋದ್ಯಮಿಗಳು ಮತ್ತು ಉದ್ಯಮಿಗಳು ಭಾರತವನ್ನು ತೊರೆದಿದ್ದಾರೆ. ಈ ಜನರು ಭಾರತದಲ್ಲಿ ಕಾರ್ಖಾನೆಗಳು, ಕೈಗಾರಿಕೆಗಳನ್ನು ನಡೆಸುತ್ತಿದ್ದರು. &nbsp;ಜನರಿಗೆ ಉದ್ಯೋಗ ನೀಡುತ್ತಿದ್ದರು. &nbsp;ಬಿಜೆಪಿಯ ತಪ್ಪು ನೀತಿಗಳು ಮತ್ತು ಅವರ ದೌರ್ಜನ್ಯಗಳಿಂದ ಬೇಸತ್ತು ಅವರು ಭಾರತವನ್ನು ತೊರೆದರು. ನಿಜವಾಗಿಯೂ ವಾಪಸ್‌ ಕರೆತರಬೇಕಾದರೆ ಆ ಉದ್ಯಮಿಗಳನ್ನು ಕರೆತನ್ನಿ. ಅವರು ಭಾರತದಲ್ಲಿ ಹೂಡಿಕೆ ಮಾಡುತ್ತಾರೆ. &nbsp;ಅವರು ಹೊಸ ಕಾರ್ಖಾನೆಗಳನ್ನು ಮತ್ತು &nbsp;ಹೊಸ ಉದ್ಯಮಗಳನ್ನು ತೆರೆಯುತ್ತಾರೆ ಎಂದು ಅವರು ಕಿವಿಮಾತು ಹೇಳಿದರು.</p>



<p>2014ರ ಹಿಂದೆ ಬಂದ ನುಸುಳುಕೋರರಿಗೆ ಪೌರತ್ವ ನೀಡುತ್ತೇವೆ ಎಂದು ಬಿಜೆಪಿಯವರು ಹೇಳುತ್ತಿರುವುದು ಸುಳ್ಳು. ಇದು ಕೇವಲ ಆರಂಭ. &nbsp;ಒಮ್ಮೆ ಬಾಗಿಲು ತೆರೆದರೆ ಪಾಕಿಸ್ತಾನ, ಬಾಂಗ್ಲಾದೇಶಗಳಿಂದ ಸಮುದ್ರೋಪಾದಿಯಲ್ಲಿ ಜನ ಬರುತ್ತಾರೆ. &nbsp;ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಈಶಾನ್ಯ ರಾಜ್ಯಗಳು ಅದರಲ್ಲೂ ವಿಶೇಷವಾಗಿ ಅಸ್ಸಾಂ ಈ ವಲಸೆ ಜನರ ಭಾರವನ್ನು ಹೊರಬೇಕಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.</p>
]]></content:encoded>
					
		
		
			</item>
		<item>
		<title>ಮೋದಿ ಸರ್ಕಾರದಿಂದ ತೆರಿಗೆ ಪಾಲಿನಲ್ಲಿ ಕರ್ನಾಟಕ್ಕೆ ಅನ್ಯಾಯ!</title>
		<link>https://peepalmedia.com/injustice-to-karnataka-state-in-tax-devolution-by-mod-gvt/</link>
		
		<dc:creator><![CDATA[Charan Aivarnad]]></dc:creator>
		<pubDate>Wed, 07 Feb 2024 06:19:46 +0000</pubDate>
				<category><![CDATA[ಅಂಕಣ]]></category>
		<category><![CDATA[bjp]]></category>
		<category><![CDATA[bjp karnataka]]></category>
		<category><![CDATA[breaking]]></category>
		<category><![CDATA[breaking news]]></category>
		<category><![CDATA[Chalo Delhi]]></category>
		<category><![CDATA[congress narendra modi]]></category>
		<category><![CDATA[D.K. Shivakumar]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Karnataka Chief Minister Siddaramaiah]]></category>
		<category><![CDATA[modi]]></category>
		<category><![CDATA[news]]></category>
		<category><![CDATA[news updates]]></category>
		<category><![CDATA[Nirmala Sitharaman]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Siddaramaiah]]></category>
		<category><![CDATA[state politics]]></category>
		<category><![CDATA[tax devolution]]></category>
		<category><![CDATA[trend]]></category>
		<category><![CDATA[trending news]]></category>
		<category><![CDATA[viral]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=35633</guid>

					<description><![CDATA[ನಿರ್ಮಲಾ ಸೀತಾರಾಮನ್‌ ಅವರು ಕರ್ನಾಟಕದಿಂದ ಚುನಾಯಿತರಾದ ಸಂಸದೆ ಎಂಬುದನ್ನು ನೀವು ಮರೆತು ಬಿಟ್ಟಿದ್ದೀರಾ? ಸದ್ಯ ಮೋದಿ ಸರ್ಕಾರದಲ್ಲಿ ಹಣಕಾಸು ಸಚಿವೆ ಆಗಿರುವ ಇವರು, 2016 ರಿಂದ, ಕರ್ನಾಟಕದಿಂದ ಚುನಾಯಿತರಾದ ನಂತರ ನಮ್ಮ ರಾಜ್ಯಕ್ಕಾಗಿ ಏನು ಮಾಡಿದ್ದಾರೆ? ಗಣತಂತ್ರ ದೇಶವಾಗಿರುವ ಭಾರತದಲ್ಲಿ ಪ್ರತೀ ರಾಜ್ಯವೂ ತನ್ನ ಜನರ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಕೆಲಸ ಮಾಡುತ್ತದೆ. ಆಗ ಅಲ್ಲಿನ ಚುನಾಯಿತ ಪ್ರತಿನಿಧಿಗಳು ತಮ್ಮ ರಾಜ್ಯದ ಒಳಿತಿಗಾಗಿ ರಾಷ್ಟ್ರಮಟ್ಟದಲ್ಲಿ ದನಿಯೆತ್ತಬೇಕು. ಡಬಲ್‌ ಇಂಜೀನ್‌ ಸರ್ಕಾರ ಇದೆ ಎಂದು ತಕತೈ ಕುಣಿದು ಎನೂ ಸಾಧಿಸಲು [&#8230;]]]></description>
										<content:encoded><![CDATA[
<p>ನಿರ್ಮಲಾ ಸೀತಾರಾಮನ್‌ ಅವರು ಕರ್ನಾಟಕದಿಂದ ಚುನಾಯಿತರಾದ ಸಂಸದೆ ಎಂಬುದನ್ನು ನೀವು ಮರೆತು ಬಿಟ್ಟಿದ್ದೀರಾ? ಸದ್ಯ ಮೋದಿ ಸರ್ಕಾರದಲ್ಲಿ ಹಣಕಾಸು ಸಚಿವೆ ಆಗಿರುವ ಇವರು, 2016 ರಿಂದ, ಕರ್ನಾಟಕದಿಂದ ಚುನಾಯಿತರಾದ ನಂತರ ನಮ್ಮ ರಾಜ್ಯಕ್ಕಾಗಿ ಏನು ಮಾಡಿದ್ದಾರೆ?</p>



<p>ಗಣತಂತ್ರ ದೇಶವಾಗಿರುವ ಭಾರತದಲ್ಲಿ ಪ್ರತೀ ರಾಜ್ಯವೂ ತನ್ನ ಜನರ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಕೆಲಸ ಮಾಡುತ್ತದೆ. ಆಗ ಅಲ್ಲಿನ ಚುನಾಯಿತ ಪ್ರತಿನಿಧಿಗಳು ತಮ್ಮ ರಾಜ್ಯದ ಒಳಿತಿಗಾಗಿ ರಾಷ್ಟ್ರಮಟ್ಟದಲ್ಲಿ ದನಿಯೆತ್ತಬೇಕು. ಡಬಲ್‌ ಇಂಜೀನ್‌ ಸರ್ಕಾರ ಇದೆ ಎಂದು ತಕತೈ ಕುಣಿದು ಎನೂ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ನಮ್ಮ ಅರಿವಿಗೆ ಬಂದಿತ್ತು.</p>



<p>ಕರ್ನಾಟಕದ್ದೇ ಸಂಸದೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡನೆ ಮಾಡಿದ ನಂತರ ಕರ್ನಾಟಕ ಕಾಂಗ್ರೆಸ್ ಸಂಸದ, ಡಿಕೆ ಸುರೇಶ್ ಅವರ ಒಂದು ಹೇಳಿಕೆ ವ್ಯಾಪಕ ಚರ್ಚೆಗೆ ಘ್ರಾಸವಾಯ್ತು. ಫೆಬ್ರವರಿ 1 ರಂದು ಕೇಂದ್ರ ಸರ್ಕಾರ ಆರ್ಥಿಕವಾಗಿ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಮಾಡ್ತಾ ಇದೆ, ಹೀಗೇ ಆದರೆ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎಂದು ಡಿಕೆ ಸುರೇಶ್‌ ಹೇಳಿಕೆ ಕೊಟ್ಟರು.</p>



<p>&#8220;ಕೇಂದ್ರವು ದಕ್ಷಿಣ ಭಾರತದ ರಾಜ್ಯಗಳಿಗೆ ಜಿಎಸ್ಟಿ ಮತ್ತು ನೇರ ತೆರಿಗೆಯ ಸರಿಯಾದ ಪಾಲು ನೀಡುತ್ತಿಲ್ಲ. ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ. ದಕ್ಷಿಣ ರಾಜ್ಯಗಳಿಂದ ಸಂಗ್ರಹಿಸುವ ಹಣವನ್ನು ಉತ್ತರ ಭಾರತದ ರಾಜ್ಯಗಳಿಗೆ ನೀಡಲಾಗುತ್ತಿದೆ. ಇದು ಮುಂದುವರಿದರೆ ಪ್ರತ್ಯೇಕ ರಾಷ್ಟ್ರವಾಗಿ ವಿಭಜನೆಯಾಗುವ ಸಾಧ್ಯತೆ ಇದೆ,&#8221; ಎಂದು ಹೇಳಿದ್ದರು. ಆ ಹೇಳಿಕೆಯಲ್ಲಿ ಅನ್ಯಾಯವನ್ನು ನಿರ್ಭಯವಾಗಿ ಡಿಕೆ ಸುರೇಶ್‌ ವ್ಯಕ್ತಪಡಿಸಿದ್ದರು.</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<div class="youtube-embed" data-video_id="Hn7tdh3ux7Q"><iframe title="ತೆರಿಗೆ ಪಾಲಿನಲ್ಲಿ ಕರ್ನಾಟಕ್ಕೆ ಮೋದಿ ಅನ್ಯಾಯ | ಸರ್ಕಾರದಿಂದ ದೆಹಲಿ ಚಲೋ| Chalo Delhi" width="696" height="392" src="https://www.youtube.com/embed/Hn7tdh3ux7Q?start=12&#038;feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" allowfullscreen></iframe></div>
</div></figure>



<p>ಈಗ ಮತ್ತೆ ಸುರೇಶ್‌ ಹೇಳಿಕೆ ಬೆನ್ನಲ್ಲೇ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು &#8220;ನಮ್ಮ ತೆರಿಗೆಯ ಪಾಲನ್ನು ನಮಗೆ ಕೊಡಿ&#8221; ಎಂದು ದೆಹಲಿಯಲ್ಲಿ ಇಂದು, ಅಂದರೆ ಫೆಬ್ರವರಿ 7ಕ್ಕೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಬಿಜೆಪಿಯ ವಿರುದ್ಧದ ಪ್ರತಿಭಟನೆ ಅಲ್ಲ, ಹಾಗಾಗಿ ಬಿಜೆಪಿ ನಾಯಕರೂ ಬೆಂಬಲ ಕೊಡಿ ಎಂದು ಕೇಳಿಕೊಂಡು ಪತ್ರ ಬರೆದಿದ್ದಾರೆ.</p>



<p>ಈಗ ಉತ್ತರ ದ್ರುವದಿಂ ದಕ್ಷಿಣ ದ್ರುವಕೆ ಚುಂಬಕ ಗಾಳಿ ಬೀಸುತ್ತಿಲ್ಲ, ಉತ್ತರ-ದಕ್ಷಿಣ ಎಂಬ ಭಿನ್ನಾಭಿಪ್ರಾಯದ ದನಿ ಎದ್ದಿದೆ.</p>



<p>&#8220;ತೆರಿಗೆ ಹಂಚಿಕೆ ಕಡಿತದಿಂದ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದರಿಂದ ಕಳೆದ 4 ವರ್ಷಗಳಲ್ಲಿ ರಾಜ್ಯಕ್ಕೆ 45 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ಕನ್ನಡಿಗರು ಕಟ್ಟುವ ತೆರಿಗೆ ರಾಜ್ಯದ ಕಷ್ಟಕಾಲಕ್ಕೆ ಉಪಯೋಗವಾಗದೆ ಉತ್ತರದ ರಾಜ್ಯಗಳಿಗೆ ಹೋಗುತ್ತಿದೆ. ಈ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ&#8221; ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇದಕ್ಕೆ ಬಿಜೆಪಿ ನಾಯಕರೂ ಬೆಂಬಲ ನೀಡುವಂತೆ ಪತ್ರ ಬರೆದಿದ್ದಾರೆ.</p>



<p><strong>ಅನ್ಯಾಯ ಆಗಿದ್ಯಾ?</strong><br>ಕೇಂದ್ರ ಸರ್ಕಾರ ಈಗ ರಾಜ್ಯಗಳಿಂದ ಸಂಗ್ರಹಿಸುವ ನೇರ ಮತ್ತು ಪರೋಕ್ಷ ತೆರಿಗೆಗಳಲ್ಲಿ ಎಷ್ಟು ಪಾಲನ್ನು ರಾಜ್ಯಕ್ಕೆ ಕೊಡಬೇಕು ಎಂಬುದನ್ನು ಹಣಕಾಸು ಆಯೋಗ ನಿರ್ಧಾರ ಮಾಡುತ್ತದೆ. ಹೀಗೆ ಈ 15 ನೇ ಹಣಕಾಸು ಆಯೋಗ ದೇಶದ ಅನೇಕ ರಾಜ್ಯಗಳಿಗೆ ಹೆಚ್ಚಿನ ಪಾಲನ್ನು ನೀಡಿ, ಕರ್ನಾಟಕಕ್ಕೆ ಅನ್ಯಾಯ ಮಾಡಿದೆ. ಇದು ಕರ್ನಾಟಕದ ಆರೋಪ, ಇದರ ವಿರುದ್ಧ ಪ್ರತಿಭಟನೆ.</p>



<p>ಈಗ ಯಾವ ಮಾನದಂಡಗಳ ಮೂಲಕ ತೆರಿಗೆಗಳ ಪಾಲನ್ನು ಹಣಕಾಸು ಆಯೋಗ ಕೊಡ್ತದೆ? ಇದನ್ನು ನಿರ್ಧಾರ ಮಾಡುವಾ ಆ ರಾಜ್ಯದ ಜನಸಂಖ್ಯೆ, ತಲಾದಾಯದಲ್ಲಿ ಇರುವ ವ್ಯತ್ಯಾಸ, ರಾಜ್ಯದ ವಿಸ್ತೀರ್ಣತೆ ಎಷ್ಟಿದೆ..ಇವೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಎಷ್ಟು ತೆರಿಗೆ ಕೊಡಬೇಕು ಎಂಬುದನ್ನು ಹಣಕಾಸು ಆಯೋಗ ನಿರ್ಧಾರ ಮಾಡುತ್ತದೆ.</p>



<p>ಈ ಮಾನದಂಡಗಳ ಮೂಲಕ ತೆರಿಗೆಯ ಪಾಲನ್ನು ನಿರ್ಧಾರ ಮಾಡುವಾಗ ಕಡಿಮೆ ತೆರಿಗೆ ಪಾವತಿ ಮಾಡಿದ, ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ರಾಜ್ಯಗಳಿಗೆ ಹೆಚ್ಚಿನ ಪಾಲು ಹೋಗುತ್ತದೆ. ಆಗ ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ ಮೊದಲಾದ ರಾಜ್ಯಗಳು ಹೆಚ್ಚಿನ ಪಾಲನ್ನು ಪಡಿತವೆ.</p>



<p>ಆದರೆ, ಅತೀ ಹೆಚ್ಚು ತೆರಿಗೆ ಪಾವತಿ ಮಾಡುವ ದಕ್ಷಿಣದ ರಾಜ್ಯಗಳಾದ ಕರ್ನಾಟಕ, ತಮಿಳುನಾಡಿನಂತವಕ್ಕೆ ಕಡಿಮೆ ಪಾಲು ಸಿಗುತ್ತದೆ. 2020–21ನೇ ಆರ್ಥಿಕ ವರ್ಷದವರೆಗೂ ಈ ರೀತಿ ನಡೆಯುತ್ತಿತ್ತು.</p>



<p>ಈಗ 15 ನೇ ಹಣಕಾಸು ಆಯೋಗ ಬಂದಿದೆ. ಇದು ಪಾಲನ್ನು ಹಂಚುವಾಗ ಅತೀ ಹೆಚ್ಚು ತೆರಿಗೆ ಪಾವತಿ ಮಾಡುವ ಬೇರೆ ರಾಜ್ಯಗಳ ಪಾಲನ್ನು ಹೆಚ್ಚು ಮಾಡಿದೆ. ಆಂದ್ರ, ತಮಿಳುನಾಡು, ಮಹಾರಾಷ್ಟ್ರ, ಒಡಿಶಾ ರಾಜ್ಯಗಳಿಗೆ ಸಿಗಬೇಕಾದ ಹೆಚ್ಚಿನ ಪಾಲನ್ನು ಕೊಟ್ಟದ್ದಾರೆ.</p>



<p>ಆದರೆ, ಇಲ್ಲಿ ಅನಾಥವಾಗಿದ್ದು ಕರ್ನಾಟಕ. ಕನ್ನಡಿಗರಿಗೆ ಇರುವ ಸಿಟ್ಟೇ ಇದು. ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಾರೆ ಎಂದು. ಕರ್ನಾಟಕ ಬಿಟ್ಟು ಉಳಿದ ದಕ್ಷಿಣದ ರಾಜ್ಯಗಳಿಗೆ 2018–19ರಲ್ಲಿ ಸಿಕ್ಕಿದ್ದ ತೆರಿಗೆ ಪಾಲಿನ ಮೊತ್ತಕ್ಕಿಂತ ಹೆಚ್ಚು 2022–23ರಲ್ಲಿ ಸಿಕ್ಕಿದೆ.</p>



<p>2018–19ರಲ್ಲಿ ಕರ್ನಾಟಕಕ್ಕೆ ಸಿಕ್ಕಿದ ತೆರಿಗೆ ಆದಾಯದ ಪಾಲು 35,894 ಕೋಟಿ ರುಪಾಯಿಯಷ್ಟೇ. ಅದೇ ಕಡಿಮೆ ಅಂತ ಅಂದುಕೊಂಡರೆ, 2022–23ರಲ್ಲಿ ಸಿಕ್ಕಿದ್ದು ಕೇವಲ 34,496 ಕೋಟಿ ಮಾತ್ರ. ಹಿಂದಿಗಿಂತಲೂ ಕಡಿಮೆ.</p>



<p>ಈ 15 ನೇ ಹಣಕಾಸು ಆಯೋಗ ಲೆಕ್ಕ ಹಾಕಿದಂತೆ ನಾವು ತೆರಿಗೆ ಪಾಲನ್ನು ಹಂಚುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ಆಗಾಗ ಹೇಳುತ್ತದೆ. ಇದನ್ನು ನಾವು ನಂಬಿದರೆ, 2019–20ರವರೆಗೆ ಕರ್ನಾಟಕ್ಕೆ ಶೇ 4.74ರಷ್ಟು ತೆರಿಗೆ ಪಾಲು ಸಿಗುತ್ತಿತ್ತು. ಈ 15 ನೇ ಹಣಕಾಸು ಆಯೋಗ ಈಗ ಇದನ್ನು ಶೇ 3.64ಕ್ಕೆ ಇಳಿಸಿದೆ.</p>



<p>ಈ ಲೆಕ್ಕಾಚಾರವನ್ನು ಹಣಕಾಸು ಆಯೋಗ ಕೇರಳ ಮತ್ತೆ ಕರ್ನಾಟಕಕ್ಕೆ ಮಾತ್ರ ಯಾಕೆ ಉಲ್ಟಾ ಬರುವಂತೆ ಮಾಡಿದೆ? ಉತ್ತರ ಭಾರತದ, ಮಧ್ಯ ಭಾರತದ ರಾಜ್ಯಗಳಿಗೆ ಕೊಡುತ್ತಿದ್ದ ದೊಡ್ಡ ಪಾಲಿನಲ್ಲಿ ಹೇಳಿಕೊಳ್ಳುವಂತ ಹೆಚ್ಚು ಅಥವಾ ಕಡಿಮೆ ಆಗಿಲ್ಲ. ಆದರೂ ಅವೇ ಹೆಚ್ಚಿನ ಪಾಲನ್ನು ನುಂಗುತ್ತಿದ್ದಾವೆ.ಇಲ್ಲೆಲ್ಲಾ ಬಿಜೆಪಿ ಸರ್ಕಾರ ಕೂಡ ಇದೆ.</p>



<p>ಆದರೆ ಈ ಹಿಂದೆ ಕಡಿಮೆ ಪಾಲನ್ನು ಪಡೆಯುತ್ತಿದ್ದ ಆಂದ್ರ, ತಮಿಳುನಾಡಿನಂತ ಬಿಜೆಪಿ ಆಡಳಿತ ಇಲ್ಲದ ರಾಜ್ಯಗಳಿಗೆ ಈ ಬಾರಿ ಏರಿಕೆಯಾಗಿದೆ. ಯಾಕೆ?</p>



<p>2018–19ಕ್ಕೆ ಹೋಲಿಸಿದರೆ 2023–24ರಲ್ಲಿ ಒರಿಸ್ಸಾಗೆ ತೆರಿಗೆ ಪಾಲು ₹10,000 ಕೋಟಿಗಿಂತ ಹೆಚ್ಚಾಗಿದೆ. ಆಂದ್ರಕ್ಕೆ ₹8,551 ಕೋಟಿ ಹೆಚ್ಚು ಸಿಕ್ಕಿದೆ, ತಮಿಳುನಾಡಿಗೆ ₹11,026 ಕೋಟಿ ಹೆಚ್ಚು ಪಾಲು ಸಿಕ್ಕಿದೆ. ಅದರೆ ಕರ್ನಾಟಕಕ್ಕೆ ಸಿಕ್ಕಿದ್ದು ಎಷ್ಟು? ಕೇವಲ ಏರಿಕೆಯಾಗಿದ್ದು ಎಷ್ಟು? ₹1,358 ಕೋಟಿ ಮಾತ್ರ ಮಾತ್ರ ಏರಿಕೆಯಾಗಿದೆ. ಅದೂ 3.8% ಮಾತ್ರ!</p>



<p>ಈಗ 14 ನೇ ಹಣಕಾಸು ಆಯೋಗ ಹೇಳಿದಂತೆ ಪಾಲು ಕೊಟ್ಟರೂ 2023–24ರಲ್ಲಿ ಕರ್ನಾಟಕಕ್ಕೆ ಸಿಗಬೇಕಾಗಿದ್ದು ₹48,517 ಕೋಟಿ. ಆದರೆ ಸಿಕ್ಕಿದ್ದು ಎಷ್ಟು ಗೊತ್ತಾ? ₹37,252 ಕೋಟಿ! ಮೋದಿ ಸರ್ಕಾರ ಈ ಒಂದೇ ಆರ್ಥಿಕ ವರ್ಷದಲ್ಲಿ ಕರ್ನಾಟಕಕ್ಕೆ ₹11,265 ಕೋಟಿ ರುಪಾಯಿ ಮೋಸ ಮಾಡಿದೆ.</p>



<p>ಸರಿಯಪ್ಪಾ…. ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ತಮಿಳುನಾಡಿನ ಮಧುರೈ ಮೂಲದವರು. ಕರ್ನಾಟಕಕ್ಕೆ ಬಂದರು. 2016 ರಲ್ಲಿ ಕರ್ನಾಟಕದಿಂದ ಗೆದ್ದು ಸಂಸದೆ ಆದರು. ರಕ್ಷಣೆ ಅದೂ ಇದೂ ಅಂತ ಈಗ ಆರ್ಥಿಕ ಸಚಿವೆ. ಕರ್ನಾಟಕದವರು ಅಲ್ಲದೇ ಇರಬಹುದು. ಆದರೆ ಗೆದ್ದಿದ್ದು ಕರ್ನಾಟಕದ ಜನತೆಯ ಓಟಿನಿಂದ ಅಲ್ವಾ? ಈಗ ಕರ್ನಾಟಕವನ್ನೇ ಮರೆತು ಬಿಟ್ಟಿದ್ದಾರೆ.</p>



<p>ಗೆಲ್ಲಿಸಿದ ತಪ್ಪಿಗೆ ಇವತ್ತು ತೆರಿಗೆ ಹಂಚಿಕೆಯಲ್ಲಿ ಈ ರೀತಿ ಅನ್ಯಾಯ ಮಾಡಿದ್ದಾರೋ? ಸರಿ, ಇವರು ಗೆದ್ದಿದ್ದು ಮಾತ್ರ ಕರ್ನಾಟಕದಿಂದ, ಆದರೆ ಇವರು ಕರ್ನಾಟಕದವರು ಅಲ್ಲ ಅಂತಲೇ ಹೇಳೋಣ…. ತೆರಿಗೆ ಪಾಲಿನಲ್ಲಿ ಇಷ್ಟು ಕಡಿಮೆ ಮಾಡುವಾಗ ಕರ್ನಾಟಕದಲ್ಲೇ ಹುಟ್ಟಿ, ಕನ್ನಡಿಗರ ಓಟಿನಿಂದಲೇ ಗೆದ್ದ ಬಿಜೆಪಿ ಸಂಸದರು ಯಾಕೆ ಮೌನವಾಗಿದ್ದಾರೆ? ಮೋದಿಯವರು ಇವರಿಗೆ ಕಣ್‌ ಕಟ್…ಬಾಯ್‌ ಮುಚ್… ಎಂದು ಪಿನಿಷ್‌ಮೆಂಟ್‌ ಕೊಟ್ಟಿದ್ದಾರಾ?</p>



<p>ಮೋದಿಯವರು ಕನ್ನಡಿಗರಿಗೆ ಅನ್ಯಾಯ ಮಾಡಿದ್ದಾರೆ. ಇವರ ರಾಜ್ಯಕ್ಕೆ ಎಷ್ಟು ಕೊಟ್ಟಿದ್ದಾರೆ ಗೊತ್ತಾ? ಗುಜರಾತ್‌ಗೆ ಈ ಬಾರಿ ತೆರಿಗೆ ಪಾಲಿನಲ್ಲಿ ಶೇ 51ರಷ್ಟು ಏರಿಕೆಯಾಗಿದೆ. 2018–19ರಲ್ಲಿ ₹23,489 ಕೋಟಿ ತೆಗೆದುಕೊಂಡಿದ್ದ ಗುಜರಾತ್‌ಗೆ 2023–24ರಲ್ಲಿ ₹35,525 ಕೋಟಿ ಸಿಕ್ಕಿದೆ. ₹12,036 ಕೋಟಿ ಹೆಚ್ಚು ಸಿಕ್ಕಿದೆ.</p>



<p>ಗುಜರಾತ್‌ನಷ್ಟು ಬೇರೆ ಯಾವ ರಾಜ್ಯಕ್ಕೂ ಸಿಕ್ಕಿಲ್ಲ. ಇದಕ್ಕೆ ಕಾರಣ, ಬಿಜೆಪಿ ಗುಜರಾತ್‌ನಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಈಗ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಅವರಿಗೆ ಅಲ್ಲಿ ಗೆಲ್ಲುವುದಕ್ಕೆ ಎಲ್ಲವೂ ಸುಲಭವಾಗಿಲ್ಲ. ಗುಜರಾತ್‌ ಮಾಡೆಲ್‌ ಎಂಬುದು ಒಂದು ಸುಳ್ಳು ಎಂಬುದು ಗೊತ್ತಾಗಿದೆ. ಹೀಗಾಗಿ, ಇಲ್ಲಿಗೆ ಹೆಚ್ಚಿನ ಪಾಲನ್ನು ಕೊಟ್ಟಿದ್ದಾರೆ.</p>



<p>ಇನ್ನು ದಕ್ಷಿಣ ಭಾರತದಲ್ಲಿ ತಮ್ಮ ಹಿಡಿತವನ್ನು ಸರಿಯಾಗಿ ಸಾಧಿಸಲು, ತಮಿಳುನಾಡು, ಆಂದ್ರಗಳಿಗೆ ತರಿಗೆ ಪಾಲನ್ನು ಹೆಚ್ಚು ಮಾಡಲಾಗಿದೆ. ಆದರೆ ಕರ್ನಾಟಕಕ್ಕೆ ಮತ್ತೆ ಕೇರಳಕ್ಕೆ ಮೋದಿ ಅನ್ಯಾಯ ಮಾಡಿದ್ದಾರೆ.</p>



<p>&#8220;ಕೇರಳ ಕೂಡ ಕೇಂದ್ರದ ಈ ಅನ್ಯಾಯದ ನಡೆಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದೆ. ತೆರಿಗೆ ಆದಾಯದಲ್ಲಿ ರಾಜ್ಯ ಸಂಗ್ರಹಿಸುವ ಪ್ರತಿ 100 ರೂ.ಗೆ ಕೇರಳಕ್ಕೆ ಕೇವಲ 21 ರೂ ಸಿಗುತ್ತಿದೆ. ಉತ್ತರ ಪ್ರದೇಶಕ್ಕೆ 46 ರುಪಾಯಿ ಹೋಗುತ್ತದೆ,&#8221; ಎಂದು ಕೇರಳದ ಆರ್ಥಿಕ ಸಚಿವ ಕೆ.ಎನ್. ಬಾಲಗೋಪಾಲ್ ಹೇಳಿಕೆ ನೀಡಿದ್ದಾರೆ.</p>



<p>ಇನ್ನು ಹಣಕಾಸು ಆಯೋಗ ಒಂದು ಇಂಡಿಪೆಂಡೆಂಟ್‌ ಬಾಡಿ, ಕೇಂದ್ರ ಅದರ ಜೊತೆ ಯಾವುದೇ ರೀತಿಯ ಹಿಂಬಾಗಿಲಿನ, ಮುಂಬಾಗಿಲಿನ, ಫಾರ್ಮಲ್‌, ಇನ್‌ಫಾರ್ಮಲ್‌ ಮಾತುಕತೆ ಮಾಡಲು ಸಾಧ್ಯ ಇಲ್ಲ. ಹಾಗಾಗಿ ಹಣಕಾಸು ಆಯೋಗ ಏನು ಹೇಳಬೇಕು ಎಂಬುದು, ಹೇಗೆ ಆದಾಯವನ್ನು ಹಂಚಬೇಕು ಎಂಬುದನ್ನು ಕೇಂದ್ರ ನಿರ್ಧರಿಸಲು ಸಾಧ್ಯ ಇಲ್ಲ. ಹೀಗೆ ಯಾರೇ ಆದರೂ ಸಮರ್ಥನೆ ಮಾಡಿಕೊಂಡಾರು!</p>



<p>ಆದರೆ,<br>2014 ರಲ್ಲಿ ಮೋದಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ಹಣಕಾಸು ಆಯೋಗದ ಜೊತೆಗೆ ಹಿಂದಿನ ಬಾಗಿಲಿನಿಂದ, ಅಸಂವಿಧಾನಿಕವಾಗಿ ಮಾತುಕತೆ ನಡೆಸಿ ರಾಜ್ಯಗಳಿಗೆ ಸೇರಬೇಕಾದ ತೆರಿಗೆ ಆದಾಯದ ಪಾಲನ್ನು ಕಡಿಮೆ ಮಾಡುವಂತೆ ಒತ್ತಡ ಹೇರಿದ್ದರು. ಅದಕ್ಕೆ ಹಣಕಾಸು ಆಯೋಗ ಹಾಗೂ ಮೋದಿ ಮಧ್ಯೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದು ನೀತಿ ಆಯೋಗದ ಸಿಇಒ ಬಿವಿಆರ್‌ ಸುಬ್ರಹ್ಮಣ್ಯಂ.</p>



<p>ಆಗ ಹಣಕಾಸು ಆಯೋಗದ ಚೇರ್ಮನ್‌ ಆಗಿದ್ದ, ಆರ್‌ಬಿಐನ ಎಕ್ಸ್‌ ಗವರ್ನರ್‌ ವೈವಿ ರೆಡ್ಡಿ ವಿರೋಧ ಮಾಡಿದ್ದರು. ಅವರು ನೇರವಾಗಿ ಸುಬ್ರಹ್ಮಣ್ಯಂ ಅವರಿಗೆ &#8220;ಅಪ್ಪಾ, ಹೋಗಿ ನಿಮ್ಮ ಬಾಸ್ [ಪ್ರಧಾನಿ] ಗೆ ಹೇಳಿ, ಅವರಿಗೆ ಯಾವುದೇ ಆಯ್ಕೆಯಿಲ್ಲ ಅಂತ&#8221; ಎಂದು ಅವರು ಹೇಳಿದ್ದರು.</p>



<p>ಸೆಂಟರ್ ಫಾರ್ ಸೋಶಿಯಲ್ ಅಂಡ್ ಎಕನಾಮಿಕ್ ಪ್ರೋಗ್ರೆಸ್ (ಸಿಎಸ್‌ಇಪಿ) ಆಯೋಜಿಸಿದ್ದ ಭಾರತದಲ್ಲಿ ಹಣಕಾಸು ವರದಿ ಕುರಿತ ವಿಚಾರ ಸಂಕಿರಣದಲ್ಲಿ ಪ್ಯಾನೆಲಿಸ್ಟ್ ಆಗಿ ಮಾತನಾಡುತ್ತಾ ಸುಬ್ರಹ್ಮಣ್ಯಂ ಇದನ್ನು ಹೇಳಿದ್ದರು. ಅವರು ಭಾಷಣ ಮಾಡುವಾಗ ಆ ಕಾರ್ಯಕ್ರಮ ಯೂಟ್ಯೂಬ್‌ನಲ್ಲಿ ಲೈವ್‌ ಹೋಗುತ್ತಿತ್ತು. ತಕ್ಷಣ ಅದನ್ನು ನಿಲ್ಲಿಸಿ, ವಿಡಿಯೋವನ್ನು ಡಿಲಿಟ್‌ ಮಾಡಲಾಯ್ತು.</p>



<p>14 ನೇ ಹಣಕಾಸು ಆಯೋಗದ ರೆಕಮಂಡೇಷನ್‌ ಅನ್ನು ಮೋದಿ ಸರ್ಕಾರ ತಿರಸ್ಕರಿಸಿತ್ತು. ಯಾವಾಗ ಹಣಕಾಸು ಆಯೋಗ ಮೋದಿಗೆ ಬಗ್ಗಲಿಲ್ಲವೋ, ಎರಡೇ ದಿನಗಳಲ್ಲಿ ಇಡೀ ದೇಶದ ಬಜೆಟ್‌ ಅನ್ನು ಬರೆದರು. ಯಾಕೆಂದರೆ, ಆಯೋಗದ ವರದಿ ಬರುವುದು ತಡವಾಯ್ತು, ಆ ಹೊತ್ತಿಗೆ ಎಲ್ಲಾ ಬಜೆಟ್‌ ಬರೆಯಲಾಗಿದೆ ಅಂತ ಹೇಳಿಕೊಳ್ಳಲು ತುರಾತುರಿಯಲ್ಲಿ ಇದನ್ನು ಮಾಡಿದರು. ನೀತಿ ಆಯೋಗದ ಕಾನ್ಪರೆನ್ಸ್‌ ಹಾಲ್‌ನಲ್ಲಿ ಕೇವಲ ನಾಲ್ಕು ಜನ ಕೂತು ಎರಡೇ ದಿನದಲ್ಲಿ ಬಜೆಟ್‌ ಬರೆದೆವು ಅಂತ ಸುಬ್ಯಹ್ಮಣ್ಯಂ ಹೇಳಿದ್ದಾರೆ.</p>



<p>ಅಂದರೆ, ತಾವು ಅಧಿಕಾರಕ್ಕೆ ಬಂದ 2014 ರಲ್ಲೇ ಸ್ವತಂತ್ರ ಸಂಸ್ಥೆಯಾದ ಹಣಕಾಸು ಆಯೋಗವನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು, ಅದರ ಕತ್ತಿಗೆ ಸಂಕೋಲೆ ಹಾಕಲು ಮೋದಿ ಸರ್ಕಾರ ತಂತ್ರ ಹೂಡಿತ್ತು. ಈಗ ರಾಜ್ಯಗಳಿಗೆ ಎಷ್ಟು ಪಾಲು ಕೊಡಬೇಕು ಎಂಬುದನ್ನು ತನ್ನ ರಾಜಕೀಯ ತಂತ್ರಗಳ ಭಾಗವಾಗಿ ಹಣಕಾಸು ಆಯೋಗಕ್ಕೆ ಮೋದಿ ಸರ್ಕಾರವೇ ಯಾಕೆ ಹೇಳಿರಬಾರದು?</p>



<p>ಈಗ ಕರ್ನಾಟಕ, ಕೇರಳ, ತಮಿಳುನಾಡು ಮೊದಲಾದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಿದೆ. ಇಂದು, ಫೆಬ್ರವರಿ 7 ಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಲ್ಲಿ ಡೆಲ್ಲಿ ಚಲೋ ಮಾಡ್ತಾ ಇದ್ದಾರೆ. ಈ ಪ್ರತಿಭಟನೆಗೆ ತಮಿಳುನಾಡು, ಕೇರಳ, ತೆಲಂಗಾಣ ಕೂಡ ಬೆಂಬಲ ನೀಡಲಿದೆ. ಬಿಜೆಪಿಯ ಅನ್ಯಾಯದ ವಿರುದ್ಧ ದಕ್ಷಿಣದ ರಾಜ್ಯಗಳು ಒಂದಾಗುವ ಲಕ್ಷಣ ಕಾಣಿತ್ತಿದೆ. ಡಿಕೆ ಸುರೇಶ್‌ ಹೇಳಿದಂತೆ ನಮಗೆ ಪ್ರತ್ಯೇಕ ರಾಷ್ಟ್ರ ಬೇಡ. ಕನ್ನಡಿಗರಿಗೆ ಏನು ದಕ್ಕಬೇಕೋ..ಅದನ್ನು ಕೊಡಲಿ..ಅಷ್ಟೇ….</p>



<p><strong>ಲೇಖನ: ಚರಣ್‌ ಐವರ್ನಾಡು</strong></p>
]]></content:encoded>
					
		
		
			</item>
		<item>
		<title>ಪಿಎಫ್‌ಐ ಬ್ಯಾನ್‌ ಪ್ರಕರಣ :  ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ  ವಾಗ್ದಾಳಿ</title>
		<link>https://peepalmedia.com/pfi-ban-prakarana-priyanka-kharge-virudfd-bjp-vagdali/</link>
		
		<dc:creator><![CDATA[Peepal Media]]></dc:creator>
		<pubDate>Wed, 28 Sep 2022 09:54:56 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[bengalure]]></category>
		<category><![CDATA[bjp karnataka]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[pfi ban]]></category>
		<category><![CDATA[politics]]></category>
		<category><![CDATA[priyanka kharge]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=7730</guid>

					<description><![CDATA[ದೆಹಲಿ : ಪಿಎಫ್‌ಐ ಬ್ಯಾನ್‌ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಪ್ರಿಯಾಂಕ್ ಖರ್ಗೆ ವಿರುದ್ಧ ರಾಜ್ಯ ಬಿಜೆಪಿ ಘಟಕ ವಾಗ್ದಾಳಿ ನಡೆಸಿದೆ. ದೇಶದ್ಯಾಂತ 5 ವರ್ಷಗಳ ಕಾಲ  ಪಿಎಫ್‌ಐ ಬ್ಯಾನ್‌ ಮಾಡಿರುವ ಬಗ್ಗೆ ಮಾತಾನಾಡಿದ ಕೆಪಿಸಿಸಿ ವಕ್ತಾರ ಪ್ರಿಯಾಂಕ ಖರ್ಗೆ “ಕರ್ನಾಟಕ, ಅಸ್ಸಾಂ, ಮಧ್ಯಪ್ರದೇಶ ಸೇರಿದಂತೆ ದೇಶವ್ಯಾಪಿ ಇದ್ದಂತಹ ಭಯೋತ್ಪಾದನಾ ಚಟುವಟಿಕೆಗಳು, ಅಕ್ರಮ ಹಣ ವರ್ಗಾವಣೆಗಳು ಜಾರಿ ನಿರ್ದೇಶನಾಲಯಗಳಿಗೆ(ED), ಗುಪ್ತಚರ ಇಲಾಖೆಗಳಿಗೆ ಇಷ್ಟು ವರ್ಷ ಗಮನಕ್ಕೆ ಬಂದಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಪಿಎಫ್‌ಐ ಬ್ಯಾನ್‌ ಮಾಡಿರುವುದು ಸರ್ಕಾರದ ಒಳ್ಳೆಯ ನಿರ್ಧಾರವೇ [&#8230;]]]></description>
										<content:encoded><![CDATA[
<p style="font-size:20px"><strong>ದೆಹಲಿ :</strong> ಪಿಎಫ್‌ಐ ಬ್ಯಾನ್‌ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಪ್ರಿಯಾಂಕ್ ಖರ್ಗೆ ವಿರುದ್ಧ ರಾಜ್ಯ ಬಿಜೆಪಿ ಘಟಕ ವಾಗ್ದಾಳಿ ನಡೆಸಿದೆ.</p>



<p style="font-size:20px">ದೇಶದ್ಯಾಂತ 5 ವರ್ಷಗಳ ಕಾಲ  ಪಿಎಫ್‌ಐ ಬ್ಯಾನ್‌ ಮಾಡಿರುವ ಬಗ್ಗೆ ಮಾತಾನಾಡಿದ ಕೆಪಿಸಿಸಿ ವಕ್ತಾರ ಪ್ರಿಯಾಂಕ ಖರ್ಗೆ “ಕರ್ನಾಟಕ, ಅಸ್ಸಾಂ, ಮಧ್ಯಪ್ರದೇಶ ಸೇರಿದಂತೆ ದೇಶವ್ಯಾಪಿ ಇದ್ದಂತಹ ಭಯೋತ್ಪಾದನಾ ಚಟುವಟಿಕೆಗಳು, ಅಕ್ರಮ ಹಣ ವರ್ಗಾವಣೆಗಳು ಜಾರಿ ನಿರ್ದೇಶನಾಲಯಗಳಿಗೆ(ED), ಗುಪ್ತಚರ ಇಲಾಖೆಗಳಿಗೆ ಇಷ್ಟು ವರ್ಷ ಗಮನಕ್ಕೆ ಬಂದಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಪಿಎಫ್‌ಐ ಬ್ಯಾನ್‌ ಮಾಡಿರುವುದು ಸರ್ಕಾರದ ಒಳ್ಳೆಯ ನಿರ್ಧಾರವೇ ಆದರೆ ಇಷ್ಟು ತಡವಾಗಿ ಬ್ಯಾನ್‌ ಮಾಡಿರುವುದು ಗುಪ್ತಚರ ಇಲಾಖೆಗಳ ದೊಡ್ಡ ವೈಫಲ್ಯವಾಗಿದೆ” ಎಂದು ಹೇಳಿದರು. </p>



<p style="font-size:20px">ಈ ಕುರಿತು ಟ್ವೀಟ್‌ ಮಾಡಿದ ರಾಜ್ಯ ಬಿಜೆಪಿ ಘಟಕ ʼಪ್ರಿಯಾಂಕ್ ಖರ್ಗೆ ಅವರೇ, &#8220;ಉಗ್ರಭಾಗ್ಯ&#8221; ಯೋಜನೆಯಡಿ  ಸಿದ್ದರಾಮಯ್ಯ ಸರ್ಕಾರ 1400 ಕ್ಕೂ ಅಧಿಕ ಪಿಎಫ್‌ಐ ಉಗ್ರರ ಕೇಸ್‌ ರದ್ದು ಮಾಡುವ ಸಂದರ್ಭದಲ್ಲಿ ನೀವು ಶಾಸಕರಾಗಿದ್ದಿರಿ ಎನ್ನುವುದನ್ನು ಮರೆಯಬೇಡಿ. ಅಂದು &#8220;ಉಗ್ರ ಪರಿವಾರದ&#8221; ಮತ ಕಳೆದುಕೊಳ್ಳಬಹುದು ಎಂಬ ಭಯದಿಂದ ನೀವು ಮೌನವಾಗಿದ್ರಾ?ʼ ಎಂದು ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದೆ.</p>



<p></p>



<p style="font-size:20px">🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ<br><a href="https://chat.whatsapp.com/GBc6sg7E2FQLuXblEdBxSi">https://chat.whatsapp.com/GBc6sg7E2FQLuXblEdBxSi</a></p>



<p style="font-size:20px"><span style="background-color:#f7cc62" class="td_text_highlight_marker"><strong>ಇದನ್ನು ಓದಿ</strong> </span>: E=MC² ಸೂತ್ರವನ್ನು ಕಂಡುಹಿಡಿದ ಆಲ್ಬರ್ಟ್ ಐನ್‌ಸ್ಟಿನ್ ಮಹಾತ್ಮ ಗಾಂಧಿಯವರ ಅಭಿಮಾನಿಯಾಗಿದ್ದರು ಎಂಬುದು ನಿಮಗೆ ಗೊತ್ತೆ? ಪ್ರಖ್ಯಾತ ವಾಗ್ಮಿ ನಿಕೇತ್ ರಾಜ್ ಮೌರ್ಯ ಅವರ ಮಾತುಗಳನ್ನು ಕೇಳಿಸಿಕೊಳ್ಳಿ.</p>



<p style="font-size:20px"><a href="https://fb.watch/fPBGNUYrnC/">https://fb.watch/fPBGNUYrnC/</a></p>
]]></content:encoded>
					
		
		
			</item>
	</channel>
</rss>
