<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>BL Santosh &#8211; Peepal Media</title>
	<atom:link href="https://peepalmedia.com/tag/bl-santosh/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Fri, 01 Sep 2023 13:13:20 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>BL Santosh &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆಂದು ನಗೆಪಾಟಲಿಗೀಡಾದ್ರಾ ಬಿ.ಎಲ್.ಸಂತೋಷ್?</title>
		<link>https://peepalmedia.com/did-bl-santosh-laugh-that-mlas-are-in-contact/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 01 Sep 2023 13:12:38 +0000</pubDate>
				<category><![CDATA[ರಾಜಕೀಯ]]></category>
		<category><![CDATA[bjp]]></category>
		<category><![CDATA[bjp v/s congress]]></category>
		<category><![CDATA[BL Santosh]]></category>
		<category><![CDATA[congress]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=26991</guid>

					<description><![CDATA[&#8216;ಕಾಂಗ್ರೆಸ್ ಪಕ್ಷದ 40-45 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ದೆಹಲಿಯಿಂದ ಒಂದು ಆದೇಶ ಬಂದರೂ ಕಾಂಗ್ರೆಸ್ ಸರ್ಕಾರ ಪಥನ ನಿಶ್ಚಿತ&#8217; ಎಂದಿದ್ದ ಬಿ.ಎಲ್.ಸಂತೋಷ್ ಈಗ ಅಕ್ಷರಶಃ ನಗೆಪಾಟಲಿಗೀಡಾಗಿದ್ದಾರೆ. ತನ್ನದೇ ನೇತೃತ್ವದಲ್ಲಿ ಕರೆದಿದ್ದ ಪಕ್ಷದ ನಾಯಕರ ಸಭೆಗೆ ಪಕ್ಷದ ಘಟಾನುಘಟಿಗಳೇ ಗೈರಾದ ಬಗ್ಗೆ ಉಲ್ಲೇಖಿಸಿ ಕಾಂಗ್ರೆಸ್ ಪಕ್ಷ ಬಿ.ಎಲ್ ಸಂತೋಷರನ್ನು ಲೇವಡಿ ಮಾಡಿದೆ. ಚುನಾವಣೆಯಲ್ಲಿ ಯಡಿಯೂರಪ್ಪ ಅವರನ್ನು ಬದಿಗೊತ್ತಿ ತನ್ನದೇ ಚಾಣಾಕ್ಷತನ ತೋರುವ ಉಮೇದಿನಲ್ಲಿದ್ದ ಬಿ.ಎಲ್.ಸಂತೋಷ್ ಚುನಾವಣಾ ಸೋಲಿನ ನಂತರ ಪಕ್ಷದ ಸಂಘಟನೆಯಿಂದ ದೂರ ಉಳಿದಿದ್ದರು. ಸಧ್ಯ ಲೋಕಸಭಾ ಚುನಾವಣಾ [&#8230;]]]></description>
										<content:encoded><![CDATA[
<p>&#8216;ಕಾಂಗ್ರೆಸ್ ಪಕ್ಷದ 40-45 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ದೆಹಲಿಯಿಂದ ಒಂದು ಆದೇಶ ಬಂದರೂ ಕಾಂಗ್ರೆಸ್ ಸರ್ಕಾರ ಪಥನ ನಿಶ್ಚಿತ&#8217; ಎಂದಿದ್ದ ಬಿ.ಎಲ್.ಸಂತೋಷ್ ಈಗ ಅಕ್ಷರಶಃ ನಗೆಪಾಟಲಿಗೀಡಾಗಿದ್ದಾರೆ. ತನ್ನದೇ ನೇತೃತ್ವದಲ್ಲಿ ಕರೆದಿದ್ದ ಪಕ್ಷದ ನಾಯಕರ ಸಭೆಗೆ ಪಕ್ಷದ ಘಟಾನುಘಟಿಗಳೇ ಗೈರಾದ ಬಗ್ಗೆ ಉಲ್ಲೇಖಿಸಿ ಕಾಂಗ್ರೆಸ್ ಪಕ್ಷ ಬಿ.ಎಲ್ ಸಂತೋಷರನ್ನು ಲೇವಡಿ ಮಾಡಿದೆ.</p>



<p>ಚುನಾವಣೆಯಲ್ಲಿ ಯಡಿಯೂರಪ್ಪ ಅವರನ್ನು ಬದಿಗೊತ್ತಿ ತನ್ನದೇ ಚಾಣಾಕ್ಷತನ ತೋರುವ ಉಮೇದಿನಲ್ಲಿದ್ದ ಬಿ.ಎಲ್.ಸಂತೋಷ್ ಚುನಾವಣಾ ಸೋಲಿನ ನಂತರ ಪಕ್ಷದ ಸಂಘಟನೆಯಿಂದ ದೂರ ಉಳಿದಿದ್ದರು. ಸಧ್ಯ ಲೋಕಸಭಾ ಚುನಾವಣಾ ತಯಾರಿಗೆಂದು ಕರೆದಿದ್ದ ಪಕ್ಷದ ನಾಯಕರ ಸಭೆಯಲ್ಲಿ ಅರ್ಧಕ್ಕರ್ಧ ಘಟಾನುಘಟಿ ನಾಯಕರೇ ಕಣ್ಮರೆಯಾಗಿ ಈಗ ಮತ್ತೊಮ್ಮೆ ಬಿ.ಎಲ್.ಸಂತೋಷ್ ನಾಯಕತ್ವಕ್ಕೆ ಪಕ್ಷದ ಒಳಗೇ ವಿರೋಧ ಹುಟ್ಟಿಕೊಂಡಿದೆ.</p>



<p>ಈ ಬಗ್ಗೆ ಟ್ವಿಟ್ ಮಾಡಿರುವ ಕಾಂಗ್ರೆಸ್ ಪಕ್ಷ, &#8216;ಕಾಂಗ್ರೆಸ್ ಶಾಸಕರ ಸಂಪರ್ಕ ನಂತರ ಮಾಡಿ, ಮೊದಲು ನಿಮ್ಮ ಪಕ್ಷದವರನ್ನೇ ಹಿಡಿತಕ್ಕೆ ತಗೆದುಕೊಳ್ಳಿ&#8217; ಎನ್ನುವ ಮೂಲಕ ಬಿ.ಎಲ್ ಸಂತೋಷ್ ರನ್ನು ಲೇವಡಿ ಮಾಡಿದೆ.</p>



<p>ಯಡಿಯೂರಪ್ಪನವರಿಗೆ ಸೆಡ್ಡು ಹೊಡೆಯಲು ನಡೆಸಿದ ಸಭೆಗೆ ಹಲವು ಬಿಜೆಪಿ ಶಾಸಕರು, ನಾಯಕರೇ ಗೈರಾಗಿದ್ದರು. ಬಿ.ಎಲ್ ಸಂತೋಷ್ ಅವರು ಸ್ವತಃ ಬಿಜೆಪಿ ಶಾಸಕರೊಂದಿಗೇ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ, ಇನ್ನೂ ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ ಎನ್ನುವುದು ಶತಮಾನದ ಜೋಕ್ ಎಂದು ಲೇವಡಿ ಮಾಡಿದೆ. ಸುಳ್ಳು ಹೇಳಿಕೊಂಡು ತಿರುಗುವ ಮೊದಲು ಸಂತೋಷ್ ಅವರು ತಮ್ಮ ಪಕ್ಷದ ಶಾಸಕರೊಂದಿಗೆ ಸಂಪರ್ಕ ಹಾಗೂ ವಿಶ್ವಾಸವನ್ನು ಹೊಂದಲು ಪ್ರಯತ್ನಿಸಲಿ ಎಂದು ಕಾಂಗ್ರೆಸ್ ತಿವಿದಿದೆ.</p>



<p>ಬಿಜೆಪಿ ತನ್ನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡಲು ಸಭೆ ನಡೆಸಬೇಕಿತ್ತು, ನೂತನ ರಾಜ್ಯಾಧ್ಯಕ್ಷರ ನೇಮಕಕ್ಕಾದರೂ ಸಭೆ ನಡೆಸಬೇಕಿತ್ತು. ಆದರೆ ಒಬ್ಬ ವ್ಯಕ್ತಿಯ ಪ್ರತಿಷ್ಠೆಯ ಹಪಹಪಿಯನ್ನು ಸಂತೈಸಲು ಸಭೆ ನಡೆಸಿದೆ, ಬಿಜೆಪಿಯ ಅಸಮದಾನಿತರು ಈ ಸಭೆಯಿಂದ ದೂರ ಉಳಿಯುವ ಮೂಲಕ #BJPvsBJP ಕಿತ್ತಾಟ ಮತ್ತೊಮ್ಮೆ ಬಹಿರಂಗವಾಗಿದೆ ಹಾಗೂ ಬಿಎಲ್ ಸಂತೋಷ್ ಅವರಿಗೆ ನಯಾಪೈಸೆ ಕಿಮ್ಮತ್ತಿಲ್ಲ ಎಂಬುದನ್ನು ಅನಾವರಣಗೊಂಡಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.</p>



<p>ಬಿಜೆಪಿ ಪಕ್ಷಕ್ಕೆ ಸಭೆ ಕರೆಯಲು ಒಬ್ಬ ಅಧ್ಯಕ್ಷ ದಿಕ್ಕಿಲ್ಲ, ಬಿಜೆಪಿ ಶಾಸಕರ ಸಭೆ ನಡೆಸಲು ಒಬ್ಬ ಶಾಸಕಾಂಗ ಪಕ್ಷದ ನಾಯಕನಿಲ್ಲ. ಜನಪ್ರತಿನಿಧಿಯಾಗಲು ಅರ್ಹತೆ ಇಲ್ಲದ, ನಾಲ್ಕು ಮತಗಳನ್ನು ಸೆಳೆಯಲು ಶಕ್ತಿ ಇಲ್ಲದ ಬಿ ಎಲ್ ಸಂತೋಷ್ ಸಭೆ ನಡೆಸುವ ದುರ್ಗತಿ ಬಂದಿದೆ ಎಂದರೆ ಬಿಜೆಪಿ ಅದೆಷ್ಟು ರಾಜಕೀಯ ದಿವಾಳಿಯಾಗಿರಬಹುದು! ಎಂದೂ ಕಾಂಗ್ರೆಸ್ ಟ್ವಿಟ್ ಮಾಡಿದೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="kn" dir="ltr">ಬಿಜೆಪಿ ಪಕ್ಷಕ್ಕೆ ಸಭೆ ಕರೆಯಲು ಒಬ್ಬ ಅಧ್ಯಕ್ಷ ದಿಕ್ಕಿಲ್ಲ,<br>ಬಿಜೆಪಿ ಶಾಸಕರ ಸಭೆ ನಡೆಸಲು ಒಬ್ಬ ಶಾಸಕಾಂಗ ಪಕ್ಷದ ನಾಯಕನಿಲ್ಲ.<br><br>ಜನಪ್ರತಿನಿಧಿಯಾಗಲು ಅರ್ಹತೆ ಇಲ್ಲದ, ನಾಲ್ಕು ಮತಗಳನ್ನು ಸೆಳೆಯಲು ಶಕ್ತಿ ಇಲ್ಲದ ಬಿ ಎಲ್ ಸಂತೋಷ್ ಸಭೆ ನಡೆಸುವ ದುರ್ಗತಿ ಬಂದಿದೆ ಎಂದರೆ ಬಿಜೆಪಿ ಅದೆಷ್ಟು ರಾಜಕೀಯ ದಿವಾಳಿಯಾಗಿರಬಹುದು!<a href="https://twitter.com/BSYBJP?ref_src=twsrc%5Etfw">@BSYBJP</a> ಅವರಿಗೆ…</p>&mdash; Karnataka Congress (@INCKarnataka) <a href="https://twitter.com/INCKarnataka/status/1697199611679825921?ref_src=twsrc%5Etfw">August 31, 2023</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಇನ್ನು ವಿರೋಧ ಪಕ್ಷದ ನಾಯಕನ ಆಯ್ಕೆ ಮತ್ತು ರಾಜ್ಯಾಧ್ಯಕ್ಷನ ಆಯ್ಕೆ ಬಗ್ಗೆ ಬಿಜೆಪಿ ನಾಯಕರೇ ಬೇಡಿಕೆ ಎತ್ತಿರುವಾಗ, ಸಧ್ಯಕ್ಕೆ ಆ ಬಗ್ಗೆ ಕೇಳಬೇಡಿ ಎಂದಿರುವ ಬಿ.ಎಲ್ ಸಂತೋಷ್ ಬಗ್ಗೆ ಕಾಂಗ್ರೆಸ್ ತಿರುಗೇಟು ನೀಡಿದೆ. &#8216;ವಿರೋಧ ಪಕ್ಷದ ನಾಯಕನ ಆಯ್ಕೆಯಾಗಿಲ್ಲ, ರಾಜ್ಯಾಧ್ಯಕ್ಷನ ಆಯ್ಕೆ ಆಗಿಲ್ಲ ಎಂದು ಸ್ವತಃ ಬಿಜೆಪಿ ಶಾಸಕರು, ನಾಯಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದಾರೆ. @blsanthosh ಅವರು ಮಾತ್ರ ಈ ಬಗ್ಗೆ ಮಾತೇ ಆಡಬೇಡಿ ಎಂದು ಫಾರ್ಮಾನು ಹೊರಡಿಸಿದ್ದಾರೆ. ಇದರ ಅರ್ಥ ವಿರೋಧ ಪಕ್ಷದ ನಾಯಕನ ಆಯ್ಕೆ ಸದ್ಯಕ್ಕಂತೂ ಸಾಧ್ಯವಿಲ್ಲ ಎನ್ನುವುದಾಗಿದೆ. ತಮ್ಮಲ್ಲಿನ ಹುಳುಕುಗಳೇ ಕೊಳೆತು ನಾರುತ್ತಿದೆ, ಅದನ್ನು ಸರಿಪಡಿಸುವ ಯೋಗ್ಯತೆ ಇಲ್ಲದವರು ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿ ಸಾಧಿಸುವುದಾದರೂ ಏನು!&#8217; ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="kn" dir="ltr">ವಿರೋಧ ಪಕ್ಷದ ನಾಯಕನ ಆಯ್ಕೆಯಾಗಿಲ್ಲ, ರಾಜ್ಯಾಧ್ಯಕ್ಷನ ಆಯ್ಕೆ ಆಗಿಲ್ಲ ಎಂದು ಸ್ವತಃ ಬಿಜೆಪಿ ಶಾಸಕರು, ನಾಯಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದಾರೆ.<a href="https://twitter.com/blsanthosh?ref_src=twsrc%5Etfw">@blsanthosh</a> ಅವರು ಮಾತ್ರ ಈ ಬಗ್ಗೆ ಮಾತೇ ಆಡಬೇಡಿ ಎಂದು ಫಾರ್ಮಾನು ಹೊರಡಿಸಿದ್ದಾರೆ.<br><br>ಇದರ ಅರ್ಥ ವಿರೋಧ ಪಕ್ಷದ ನಾಯಕನ ಆಯ್ಕೆ ಸದ್ಯಕ್ಕಂತೂ ಸಾಧ್ಯವಿಲ್ಲ ಎನ್ನುವುದಾಗಿದೆ.…</p>&mdash; Karnataka Congress (@INCKarnataka) <a href="https://twitter.com/INCKarnataka/status/1697565110087409703?ref_src=twsrc%5Etfw">September 1, 2023</a></blockquote><script async src="https://platform.twitter.com/widgets.js" charset="utf-8"></script>
</div></figure>
]]></content:encoded>
					
		
		
			</item>
		<item>
		<title>ಜಾರಿ ನಿರ್ದೇಶನಾಲಯ v/s ವಿಶೇಷ ತನಿಖಾ ದಳ ; ಪ್ರತ್ಯೇಕ ಪ್ರಕರಣಗಳಲ್ಲಿ ಗಮನ ಸೆಳೆಯುವ ಅಂಶಗಳಿವು</title>
		<link>https://peepalmedia.com/ed-vs-sit-there-are-points-of-interest-in-individual-cases/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 02 Dec 2022 10:31:50 +0000</pubDate>
				<category><![CDATA[ರಾಜಕೀಯ]]></category>
		<category><![CDATA[BL Santosh]]></category>
		<category><![CDATA[K Kavitha]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[telangana]]></category>
		<guid isPermaLink="false">https://peepalmedia.com/?p=17297</guid>

					<description><![CDATA[ನವೆಂಬರ್ 30 ಮತ್ತು ಡಿಸೆಂಬರ್ 1 2022 ರ ನಡುವೆ ಎರಡು ಪ್ರತ್ಯೇಕ ಪ್ರಕರಣಗಳು ತೆಲಂಗಾಣದಲ್ಲಿ ಸಾರ್ವಜನಿಕ ಗಮನವನ್ನು ಸೆಳೆದಿವೆ. ಎರಡು ರಾಜಕೀಯ ಪಕ್ಷಗಳ ದೊಡ್ಡ ನಾಯಕರಾದ ಬಿಜೆಪಿಯ ಬಿಎಲ್ ಸಂತೋಷ್ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ನಾಯಕಿ ಕೆ. ಕವಿತಾ ಅವರಿಗೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣ ಎರಡು ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪ್ರಮುಖ ಆರೋಪಿ ಸ್ಥಾನದಲ್ಲಿ ನಿಂತಿರುವ ಬಿಜೆಪಿಯ ಬಿ.ಎಲ್.ಸಂತೋಷ್ ಮತ್ತು ಟಿಆರ್ಎಸ್ ನ ಕೆ. ಕವಿತಾ ಅವರು [&#8230;]]]></description>
										<content:encoded><![CDATA[
<p style="font-size:20px">ನವೆಂಬರ್ 30 ಮತ್ತು ಡಿಸೆಂಬರ್ 1 2022 ರ ನಡುವೆ ಎರಡು ಪ್ರತ್ಯೇಕ ಪ್ರಕರಣಗಳು ತೆಲಂಗಾಣದಲ್ಲಿ ಸಾರ್ವಜನಿಕ ಗಮನವನ್ನು ಸೆಳೆದಿವೆ. ಎರಡು ರಾಜಕೀಯ ಪಕ್ಷಗಳ ದೊಡ್ಡ ನಾಯಕರಾದ ಬಿಜೆಪಿಯ ಬಿಎಲ್ ಸಂತೋಷ್ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ನಾಯಕಿ ಕೆ. ಕವಿತಾ ಅವರಿಗೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣ ಎರಡು ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿದೆ.</p>



<p style="font-size:20px">ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪ್ರಮುಖ ಆರೋಪಿ ಸ್ಥಾನದಲ್ಲಿ ನಿಂತಿರುವ ಬಿಜೆಪಿಯ ಬಿ.ಎಲ್.ಸಂತೋಷ್ ಮತ್ತು ಟಿಆರ್ಎಸ್ ನ ಕೆ. ಕವಿತಾ ಅವರು ನಡೆಯುತ್ತಿರುವ ಎರಡು ತನಿಖೆಗಳಲ್ಲಿ ಭಾಗಿಯಾಗಿದ್ದಾರೆ.</p>



<p style="font-size:20px">ಅದರಲ್ಲಿ ತೆಲಂಗಾಣ ಪೊಲೀಸರು<a href="https://www.thequint.com/south-india/trs-mlas-poaching-case-remand-report-details-conspiracy-to-topple-state-govt"> </a>TRS ಶಾಸಕರ <a href="https://peepalmedia.com/bl-santosh-name-in-operation-kamala-what-is-in-the-evidence-released-by-kcr/" data-type="URL" data-id="https://peepalmedia.com/bl-santosh-name-in-operation-kamala-what-is-in-the-evidence-released-by-kcr/">ಕಳ್ಳತನದ</a> ಆರೋಪದ ಅಡಿಯಲ್ಲಿ&nbsp;ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಹೆಸರಿಸಿ ಆರೋಪಿಸಿ ಹೈಕೋರ್ಟ್‌ಗೆ ಸಾಕ್ಷ್ಯಗಳನ್ನು ಸಲ್ಲಿಸಿದ್ದಾರೆ.</p>



<p style="font-size:20px">ಮತ್ತೊಂದು ಪ್ರಕರಣದಲ್ಲಿ ದೆಹಲಿ ಅಬಕಾರಿ ಹಗರಣದ ಪ್ರಮುಖ&nbsp;ಆರೋಪಿ ಉದ್ಯಮಿ ಅಮಿತ್ ಅರೋರಾ ಅವರನ್ನು ವಶಕ್ಕೆ ಪಡೆಯುವಂತೆ ಜಾರಿ ನಿರ್ದೇಶನಾಲಯ ಕೋರಿದ್ದು, ಈ ಪ್ರಕರಣದಲ್ಲಿ ಟಿಆರ್‌ಎಸ್ ನಾಯಕ ಹಾಗೂ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ. ಕವಿತಾ ಅವರ ಹೆಸರು ಕೇಳಿ ಬಂದಿದೆ.</p>



<p style="font-size:20px">ಇಲ್ಲಿ ಗಮನಿಸಬಹುದಾದ ವಿಚಾರ ಎಂದರೆ ಅಬಕಾರಿ ಹಗರಣದಲ್ಲಿ ಆರೋಪಿ ಅಮಿತ್ ಅರೋರಾ ಅವರನ್ನು ಕಸ್ಟಡಿಗೆ ತಗೆದುಕೊಳ್ಳಲು ಸಲ್ಲಿಸಿರುವ ಅರ್ಜಿಯಲ್ಲಿ ಜಾರಿ ನಿರ್ದೇಶನಾಲಯ ಕೆ.ಕವಿತಾ ಹೆಸರನ್ನು ಬಳಸಿದೆಯೇ ಹೊರತು, ಇಲ್ಲಿಯವರೆಗೂ ಅವರು ಅಬಕಾರಿ ಹಗರಣದಲ್ಲಿ ಆರೋಪಿಯಾಗಿಲ್ಲ.<br>ಆದರೆ ತೆಲಂಗಾಣ SIT ಪೊಲೀಸರು ಸಿದ್ದಪಡಿಸಿರುವ ಶಾಸಕರ ಕಳ್ಳತನದ ಆರೋಪ ಪಟ್ಟಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ <a href="https://peepalmedia.com/b-l-santosh-is-threatened-with-arrest-summons-issued-by-telangana-sit-for-attendance/" data-type="URL" data-id="https://peepalmedia.com/b-l-santosh-is-threatened-with-arrest-summons-issued-by-telangana-sit-for-attendance/">ಬಿ.ಎಲ್.ಸಂತೋಷ್</a> ಹೆಸರು ಮುಂಚೂಣಿಯಲ್ಲಿ ಇದ್ದು ಪ್ರಕರಣದ 4 ನೇ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ.</p>



<figure class="wp-block-image size-full"><img fetchpriority="high" decoding="async" width="700" height="394" src="https://peepalmedia.com/wp-content/uploads/2022/12/images-2022-12-02T160003.435.jpeg" alt="" class="wp-image-17302" srcset="https://peepalmedia.com/wp-content/uploads/2022/12/images-2022-12-02T160003.435.jpeg 700w, https://peepalmedia.com/wp-content/uploads/2022/12/images-2022-12-02T160003.435-300x169.jpeg 300w, https://peepalmedia.com/wp-content/uploads/2022/12/images-2022-12-02T160003.435-150x84.jpeg 150w, https://peepalmedia.com/wp-content/uploads/2022/12/images-2022-12-02T160003.435-696x392.jpeg 696w" sizes="(max-width: 700px) 100vw, 700px" /></figure>



<p style="font-size:20px">ಈಗಾಗಲೇ ತೆಲಂಗಾಣ ಪೊಲೀಸರು ಬಂಧಿಸಿರುವ ಮೂವರು ಪ್ರಮುಖ ಆರೋಪಿಗಳಾದ &#8211; ರಾಮಚಂದ್ರ ಭಾರತಿ, ಸಿಂಹಯಾಜಿ ಮತ್ತು ಕೆ ನಂದ ಕುಮಾರ್ ಅವರ ಕಡೆಯಿಂದ ಬಂದ ಮಾಹಿತಿಯಂತೆ ಬಿ.ಎಲ್‌.ಸಂತೋಷ್ ಪ್ರಕರಣದ ಪ್ರಮುಖ ರೂವಾರಿ ಎಂದು ಹೇಳಿದ್ದಾರೆ ಎನ್ನಲಾಗಿದೆ. ಜೊತೆಗೆ ಬಿಜೆಪಿಗೆ ಸೇರಲು ನಾಲ್ವರು ಟಿಆರ್‌ಎಸ್ ಶಾಸಕರಿಗೆ 250 ಕೋಟಿ ಹಣದ ಆಮೀಷ ಒಡ್ಡಿದ ಗಂಭೀರ ಪ್ರಕರಣ ಇದಾಗಿದ್ದು ತೆಲಂಗಾಣ SIT ಇದರ ತನಿಖೆ ನಡೆಸುತ್ತಿದೆ.</p>



<p style="font-size:20px">ಇನ್ನು ದೆಹಲಿ ಮೂಲದ ಅಬಕಾರಿ ಹಗರಣದಲ್ಲಿ ಆಮ್ ಆದ್ಮಿ ಪಕ್ಷದ&nbsp; ನಾಯಕ ಮತ್ತು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸೌತ್ ಗ್ರೂಪ್ ಸೇರಿದಂತೆ ಕೆಲವು ಮದ್ಯದ ವ್ಯವಹಾರಗಳಿಗೆ ಒಲವು ತೋರಿದ್ದಾರೆ ಎಂದು ಆರೋಪಿಸಲಾಗಿದೆ. ಸೌತ್ ಗ್ರೂಪ್ ಸಂಸ್ಥೆ ತೆಲಂಗಾಣ ಎಂಎಲ್ಸಿ ಕೆ.ಕವಿತಾ ಅವರಿಗೆ ಸಂಬಂಧಿಸಿದ ಸಂಸ್ಥೆ ಎಂದು ಹೇಳಲಾಗಿದೆ. ಹಾಗಾಗಿ ಹಣದ ಕಿಕ್‌ಬ್ಯಾಕ್‌ಗಾಗಿ ಆರೋಪದ ಅಡಿಯಲ್ಲಿ ಕವಿತಾ ಹೆಸರನ್ನು ಇಲ್ಲಿ ಲಿಂಕ್ ಮಾಡಲಾಗಿದೆ.</p>



<figure class="wp-block-image size-full"><img decoding="async" width="725" height="423" src="https://peepalmedia.com/wp-content/uploads/2022/12/images-2022-12-02T160038.335.jpeg" alt="" class="wp-image-17303" srcset="https://peepalmedia.com/wp-content/uploads/2022/12/images-2022-12-02T160038.335.jpeg 725w, https://peepalmedia.com/wp-content/uploads/2022/12/images-2022-12-02T160038.335-300x175.jpeg 300w, https://peepalmedia.com/wp-content/uploads/2022/12/images-2022-12-02T160038.335-150x88.jpeg 150w, https://peepalmedia.com/wp-content/uploads/2022/12/images-2022-12-02T160038.335-696x406.jpeg 696w" sizes="(max-width: 725px) 100vw, 725px" /></figure>



<p style="font-size:20px"><font style="vertical-align: inherit;"><font style="vertical-align: inherit;">ಕಳೆದ ನವೆಂಬರ್ 30 ಮತ್ತು ಡಿಸೆಂಬರ್ 1 ರ ನಡುವೆ ನಡೆದ ಪ್ರತ್ಯೇಕ ಪ್ರಕರಣದ ಬೆಳವಣಿಗೆ ಇದಾದರೂ ಮೇಲ್ನೋಟಕ್ಕೆ ಇವೆರಡೂ ತೆಲಂಗಾಣ SIT ಮತ್ತು ಜಾರಿ ನಿರ್ದೇಶನಾಲಯದ ನಡುವೆ ಒಂದು ಒಳಜಗಳದಂತೆ ಭಾಸವಾಗಿದೆ. ಸಾರ್ವಜನಿಕವಾಗಿ ಕ್ರಮವಾಗಿ ಟಿಆರ್‌ಎಸ್ ಮತ್ತು ಬಿಜೆಪಿ ನಾಯಕರ ಮೇಲೆ ಇದು ಕೆಟ್ಟ ಅಭಿಪ್ರಾಯ ಹುಟ್ಟುವಂತೆ ಮಾಡಿದೆ</font></font> ಎಂದು <a href="https://www.google.com/amp/s/www.thequint.com/amp/story/south-india/trs-mlas-poaching-case-delhi-liquor-scam-k-kavitha-bl-santhosh-enforcement-directorate-telangana-police" data-type="URL" data-id="https://www.google.com/amp/s/www.thequint.com/amp/story/south-india/trs-mlas-poaching-case-delhi-liquor-scam-k-kavitha-bl-santhosh-enforcement-directorate-telangana-police">the quint</a> ವರದಿ ಮಾಡಿದೆ.</p>



<p style="font-size:20px">ಇಲ್ಲಿ ಜಾರಿ ನಿರ್ದೇಶನಾಲಯ ಕೇಂದ್ರ ಹಣಕಾಸು ಸಚಿವಾಲಯದ ಅಡಿಯಲ್ಲಿ ಬಂದರೆ, SIT ರಾಜ್ಯದ ಗೃಹ ಇಲಾಖೆಯ ಅಡಿಯಲ್ಲಿ ಬರುವ ತೆಲಂಗಾಣ ಪೊಲೀಸರ ಒಂದು ಅಂಗವಾಗಿದೆ.&nbsp;ಆದಾಗ್ಯೂ, ತೆಲಂಗಾಣ ಹೈಕೋರ್ಟ್, ನವೆಂಬರ್‌ನಲ್ಲಿ ಹೈಕೋರ್ಟ್ ನ್ಯಾಯಾಧೀಶರಿಗೆ ವರದಿ ಮಾಡುವಂತೆ ಎಸ್‌ಐಟಿ ಸ್ವತಂತ್ರವಾಗಿ ಆದೇಶ ನೀಡಿತ್ತು.&nbsp;ನಂತರ ಈ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.</p>



<p style="font-size:20px">ಈ ನಡುವೆ ಬಿಜೆಪಿ ನಾಯಕರನ್ನು ಗುರಿಯಾಗಿಸಲು TRS ಪಕ್ಷ ರಾಜ್ಯ ಪೊಲೀಸರನ್ನು ಬಳಸಿಕೊಂಡಿದೆ ಎಂದು BJP ಆರೋಪಿಸಿದೆ. ಹಾಗೂ ಎಲ್ಲಾ ಆರೋಪಗಳನ್ನು ನಿರಾಕರಿಸಿ, ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸುವಂತೆ ತೆಲಂಗಾಣ ಹೈಕೋರ್ಟ್‌ಗೆ ಬಿಜೆಪಿ ಮನವಿ ಮಾಡಿದೆ. ಬಿ.ಎಲ್.ಸಂತೋಷ್ ನೇರವಾಗಿ ಅವರ ಮೇಲಿನ ಆರೋಪವನ್ನು ತಳ್ಳಿ ಹಾಕದಿದ್ದರೂ ತೆಲಂಗಾಣ ಮೂಲದ ಭಾರತ ಧರ್ಮ ಜನಸೇನೆ ಅಧ್ಯಕ್ಷ ತುಷಾರ್ ವೆಲ್ಲಪಲ್ಲಿ (ಬಿ.ಎಲ್.ಸಂತೋಷ್ ಜೊತೆಗೆ ಶಾಸಕರ ಕಳ್ಳತನದ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾದ ವ್ಯಕ್ತಿ. ತೆಲಂಗಾಣ ಬಿಜೆಪಿ ಜೊತೆಗೆ ನಿಕಟ ಸಂಪರ್ಕ ಹೊಂದಿದ ವ್ಯಕ್ತಿ) ತನ್ನ ಮೇಲಿನ ಆರೋಪವನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ.</p>



<p style="font-size:20px"><font style="vertical-align: inherit;"><font style="vertical-align: inherit;">ಇನ್ನು ಕೆ.ಕವಿತಾ ಪತ್ರಿಕಾಗೋಷ್ಠಿ ಕರೆದಿದ್ದು ಈ ಸಂಬಂಧವನ್ನು ತಾನು ಎಂತಹ ವಿಚಾರಣೆಯನ್ನು ಎದುರಿಸಲಿದೆ, ತಪ್ಪಿಸಿಕೊಳ್ಳುವ ಮಾತೇ ಇಲ್ಲ. ಇನ್ನು ಈ ವಿಚಾರವಾಗಿ ಬಿಜೆಪಿ ತಂತ್ರಗಾರಿಕೆಯಿಂದ ನಾನು ಜೈಲಿಗೆ ಹೋಗಬೇಕಾಗಿ ಬಂದರೂ ಅದಕ್ಕೂ ಸಿದ್ಧಳಿದ್ದೇನೆ. ಆದರೆ ಬಿಜೆಪಿ ಪಕ್ಷದ ಬಂಡವಾಳ ಬಯಲು ಮಾಡುವ ನನ್ನ ನಿರ್ಧಾರದಿಂದ ಹಿಂದೆ ಉಳಿಯುವ ಮಾತೇ ಇಲ್ಲ ಎಂದು ಪುನರುಚ್ಛರಿಸಿದ್ದಾರೆ.</font></font></p>
]]></content:encoded>
					
		
		
			</item>
		<item>
		<title>ಶಾಸಕರ ಕಳ್ಳತನದ ಆರೋಪ ; ಬಿ.ಎಲ್.ಸಂತೋಷ್ ಗೆ ಮತ್ತೊಮ್ಮೆ ನೋಟೀಸ್!</title>
		<link>https://peepalmedia.com/allegation-of-mla-theft-attend-bl-santosh-notice-again/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 23 Nov 2022 17:22:09 +0000</pubDate>
				<category><![CDATA[ರಾಜಕೀಯ]]></category>
		<category><![CDATA[bjp]]></category>
		<category><![CDATA[BL Santosh]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[news]]></category>
		<category><![CDATA[operation kamala]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[telangana]]></category>
		<category><![CDATA[TRS]]></category>
		<guid isPermaLink="false">https://peepalmedia.com/?p=16334</guid>

					<description><![CDATA[ಶಾಸಕರ ಕಳ್ಳತನಕ್ಕೆ ಸಂಬಂಧಿಸಿದಂತೆ ಬಿ.ಎಲ್.ಸಂತೋಷ್ ಗೆ ಮತ್ತೊಮ್ಮೆ ನೋಟೀಸ್ ನೀಡುವಂತೆ ತೆಲಂಗಾಣ ಹೈಕೋರ್ಟ್ SIT ಗೆ ಸೂಚಿಸಿದೆ. ಬಿ.ಎಲ್.ಸಂತೋಷ್ SIT ನೀಡಿದ ನೋಟೀಸ್ ಹಿನ್ನೆಲೆಯಲ್ಲಿ ತನಿಖೆಗೆ ಹಾಜರಾಗದೇ ಇರುವುದಕ್ಕೆ SIT ಗರಂ ಆಗಿದೆ. ಕ್ರಿಮಿನಲ್ ಕಾಯ್ದೆ ಸಂಹಿತೆಯ ಸೆಕ್ಷನ್ 41 A ಅಡಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಗೆ ಈಗಾಗಲೇ ನೋಟಿಸ್ ನೀಡಲಾಗಿದೆ.&#160;ನೋಟೀಸ್ ನ ಅಡಿಯಲ್ಲಿ ನವೆಂಬರ್ 21 ರಂದು ಎಸ್‌ಐಟಿ ಮುಂದೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಬಿ.ಎಲ್.ಸಂತೋಷ್ ವಿಚಾರಣೆ ಎದುರಿಸಲು ಆಗದೇ SIT ನೋಟಿಸ್ [&#8230;]]]></description>
										<content:encoded><![CDATA[
<p style="font-size:20px">ಶಾಸಕರ ಕಳ್ಳತನಕ್ಕೆ ಸಂಬಂಧಿಸಿದಂತೆ ಬಿ.ಎಲ್.ಸಂತೋಷ್ ಗೆ ಮತ್ತೊಮ್ಮೆ ನೋಟೀಸ್ ನೀಡುವಂತೆ ತೆಲಂಗಾಣ ಹೈಕೋರ್ಟ್ SIT ಗೆ ಸೂಚಿಸಿದೆ. ಬಿ.ಎಲ್.ಸಂತೋಷ್ SIT ನೀಡಿದ ನೋಟೀಸ್ ಹಿನ್ನೆಲೆಯಲ್ಲಿ ತನಿಖೆಗೆ ಹಾಜರಾಗದೇ ಇರುವುದಕ್ಕೆ SIT ಗರಂ ಆಗಿದೆ.</p>



<p style="font-size:20px">ಕ್ರಿಮಿನಲ್ ಕಾಯ್ದೆ ಸಂಹಿತೆಯ ಸೆಕ್ಷನ್ 41 A ಅಡಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಗೆ ಈಗಾಗಲೇ ನೋಟಿಸ್ ನೀಡಲಾಗಿದೆ.&nbsp;ನೋಟೀಸ್ ನ ಅಡಿಯಲ್ಲಿ ನವೆಂಬರ್ 21 ರಂದು ಎಸ್‌ಐಟಿ ಮುಂದೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಬಿ.ಎಲ್.ಸಂತೋಷ್ ವಿಚಾರಣೆ ಎದುರಿಸಲು ಆಗದೇ SIT ನೋಟಿಸ್ ನ್ನು ನಿರ್ಲಕ್ಷಿಸಿ ದೂರವೇ ಉಳಿದಿದ್ದರು.</p>



<p style="font-size:20px">ಈ ಹಿನ್ನೆಲೆಯಲ್ಲಿ SIT ನ್ಯಾಯಾಲಯದ ಮೊರೆ ಹೋಗಿದ್ದು, ಬಿ.ಎಲ್.ಸಂತೋಷ್ ಅವರನ್ನು ಬಂಧಿಸಲು ಅವಕಾಶ ನೀಡುವಂತೆ ಮನವಿ ಮಾಡಿತ್ತು. ಈಗಾಗಲೇ ಬಿ.ಎಲ್.ಸಂತೋಷ್ ಬಂಧನದಿಂದ ತಪ್ಪಿಸಿಕೊಳ್ಳುವ ಹಿನ್ನೆಲೆಯಲ್ಲಿ ಕಾನೂನಾತ್ಮಕವಾಗಿ ತನಗೆ ಏನು ಸೂಕ್ತ ಭದ್ರತೆ ಬೇಕೋ ಅದನ್ನು ಮಾಡಿಕೊಂಡಿದ್ದರಿಂದ ಬಂಧಿಸುವ ಪ್ರಕ್ರಿಯೆಯಿಂದ ದೂರ ಇರುವಂತೆ SIT ಅಧಿಕಾರಿಗಳಿಗೆ ತೆಲಂಗಾಣ ಹೈಕೋರ್ಟ್ ಸೂಚಿಸಿದೆ.</p>



<p style="font-size:20px">ಕ್ರಿಮಿನಲ್ ಕಾಯ್ದೆ ಸಂಹಿತೆಯ ಸೆಕ್ಷನ್ 41 A ಅಡಿಯಲ್ಲಿ ಎಸ್‌ಐಟಿ ಈಗಾಗಲೇ ನೋಟಿಸ್ ಜಾರಿ ಮಾಡಿರುವುದರಿಂದ ಬಿ.ಎಲ್.ಸಂತೋಷ್ ರನ್ನು ಬಂಧಿಸಬಾರದು ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ.&nbsp;ಸಂತೋಷ್ ಬಂಧನಕ್ಕೆ ಒಳಗಾಗಬಾರದು ಎಂದು ಹೇಳಿದ ನ್ಯಾಯಾಧೀಶರು, ಎಸ್‌ಐಟಿ ನೋಟಿಸ್‌ನಲ್ಲಿ ವಿಧಿಸಿರುವ ಷರತ್ತುಗಳನ್ನು ಪಾಲಿಸುವಂತೆ ಸೂಚಿಸಿದರು.</p>



<p style="font-size:20px">ಕಳೆದ ತಿಂಗಳು ಟಿಆರ್‌ಎಸ್‌ ಪಕ್ಷದ ಫೈಲಟ್ ರೋಹಿತ್ ರೆಡ್ಡಿ ಸೇರಿದಂತೆ ನಾಲ್ವರು ಶಾಸಕರನ್ನು ಭಾರಿ ಹಣದ ಆಮಿಷವೊಡ್ಡಿ ಬಿಜೆಪಿಗೆ ಸೆಳೆಯಲು ಯತ್ನಿಸುತ್ತಿದ್ದಾಗ ಸಾಕ್ಷ್ಯ ಸಮೇತ ಮೂವರು ಬಿಜೆಪಿ ಏಜೆಂಟ್ ಗಳನ್ನು ಪೊಲೀಸರು ಬಂಧಿಸಿದ್ದರು. ಆ ಸಂದರ್ಭದಲ್ಲಿ ಮೂವರು ಬಿಜೆಪಿ ಏಜೆಂಟ್‌ಗಳ ನಡುವಿನ ಸಂಭಾಷಣೆಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೆಸರು ಪ್ರಮುಖವಾಗಿ ಕೇಳಿಬಂದ ಹಿನ್ನೆಲೆಯಲ್ಲಿ ಶಾಸಕರ ಕಳ್ಳತನದ ಪ್ರಮುಖ ಆರೋಪದ ಅಡಿಯಲ್ಲಿ ತೆಲಂಗಾಣ SIT ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತು.</p>



<figure class="wp-block-image size-large"><img decoding="async" width="1006" height="1024" src="https://peepalmedia.com/wp-content/uploads/2022/11/IMG_20221119_122717-1-1006x1024.jpg" alt="" class="wp-image-16335" srcset="https://peepalmedia.com/wp-content/uploads/2022/11/IMG_20221119_122717-1-1006x1024.jpg 1006w, https://peepalmedia.com/wp-content/uploads/2022/11/IMG_20221119_122717-1-295x300.jpg 295w, https://peepalmedia.com/wp-content/uploads/2022/11/IMG_20221119_122717-1-768x782.jpg 768w, https://peepalmedia.com/wp-content/uploads/2022/11/IMG_20221119_122717-1-150x153.jpg 150w, https://peepalmedia.com/wp-content/uploads/2022/11/IMG_20221119_122717-1-300x305.jpg 300w, https://peepalmedia.com/wp-content/uploads/2022/11/IMG_20221119_122717-1-696x708.jpg 696w, https://peepalmedia.com/wp-content/uploads/2022/11/IMG_20221119_122717-1-1068x1087.jpg 1068w, https://peepalmedia.com/wp-content/uploads/2022/11/IMG_20221119_122717-1.jpg 1080w" sizes="(max-width: 1006px) 100vw, 1006px" /></figure>



<p style="font-size:20px">ಬುಧವಾರ ಎಸ್‌ಐಟಿ ಅಧಿಕಾರಿಗಳು ಮತ್ತಿಬ್ಬರಿಗೆ ನೋಟಿಸ್ ನೀಡಿದೆ.&nbsp;ಹೈದರಾಬಾದ್‌ನ ಅಂಬರ್‌ಪೇಟ್ ಪ್ರದೇಶದ ವಕೀಲ ಪ್ರತಾಪ್ ಗೌಡ್ ಮತ್ತು ಪ್ರಕರಣದಲ್ಲಿ ಶಾಸಕರನ್ನು ಕುದುರಿಸಲು ಬಂದಿದ್ದ ಆರೋಪಿಗಳಲ್ಲಿ ಒಬ್ಬರಾದ ನಂದಕುಮಾರ್ ಅವರ ಪತ್ನಿ ಚಿತ್ರಲೇಖಾ ಅವರನ್ನು ವಿಚಾರಣೆಗೆ ಕರೆಯಲಾಗಿದೆ.</p>



<p style="font-size:20px">TRS ಶಾಸಕರ ಕಳ್ಳತನಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಖದೀಮರ ಬಂಧನವಾಗಿದೆ. ನಂತರ ವಿಡಿಯೋ, ಆಡಿಯೋ ಮತ್ತು ಮುಂಗಡ ವ್ಯಾಪಾರಕ್ಕೆ ತಂದಿದ್ದರು ಎನ್ನಲಾದ 15 ಕೋಟಿ ರೂ. ಹಣದ ಸಮೇತ ಭದ್ರ ಸಾಕ್ಷ್ಯಗಳ ಮೂಲಕ ಬಂಧಿಸಿ ವಿಚಾರಣೆ ನಡೆಸಲಾಗಿದೆ.</p>



<p style="font-size:20px">ಮೂಲಗಳ ಪ್ರಕಾರ ಸುಮಾರು 1 ಲಕ್ಷ ಪುಟಗಳ ಸಾಕ್ಷ್ಯವನ್ನು SIT ಅಧಿಕಾರಿಗಳು ಸಿದ್ದಪಡಿಸಿದ್ದು, ಬಿ.ಎಲ್.ಸಂತೋಷ್ ರನ್ನು ವಿಚಾರಣೆ ನಂತರ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ಜೊತೆಗೆ ಈ ಹಿಂದೆ ವಿವಿಧ ರಾಜ್ಯಗಳಲ್ಲಿ ಆದ ಶಾಸಕರ ಕಳ್ಳತನದ ಆರೋಪ ಕೂಡಾ ಸಂತೋಷ್ ಮೇಲೆ ಕೇಳಿ ಬರುತ್ತಿದೆ. ಅಂತೆಯೇ ತೆಲಂಗಾಣದಲ್ಲಿ ಶಾಸಕರ ಕಳ್ಳತನ ಮಾಡಲು ಹೋಗಿದ್ದ ವ್ಯಕ್ತಿಗಳೇ ವಿವಿಧ ರಾಜ್ಯಗಳಲ್ಲಿ ವ್ಯವಹಾರ ಕುದುರಿಸಲು ಮುಂದಾಗಿರಬಹುದು ಎಂದು ಶಂಕಿಸಲಾಗಿದೆ.</p>



<p style="font-size:20px">ಇನ್ನು ಈ ನಡುವೆ ತೆಲಂಗಾಣದ TRS ಶಾಸಕರ ಖರೀದಿಗೆ ಇರಿಸಿಕೊಂಡಿದ್ದರು ಎನ್ನಲಾದ 250 ಕೋಟಿ ರೂ. ಮೊತ್ತದ ಹಣವನ್ನು ಹುಡುಕಿಕೊಂಡು ತೆಲಂಗಾಣ ಪೊಲೀಸರು ಕರ್ನಾಟಕಕ್ಕೆ ಬಂದು ಹೋಗಿದ್ದಾರೆ. ಬಿ.ಎಲ್.ಸಂತೋಷ್ ಕೂಡಾ ಕರ್ನಾಟಕದ ಕರಾವಳಿ ಮೂಲದವರಾಗಿದ್ದು, ಅವರು ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಶೋಧ ಕಾರ್ಯ ನಡೆಸಿದ ಹಿನ್ನೆಲೆಯಲ್ಲಿ ಎಲ್ಲಾ ರೀತಿಯಲ್ಲೂ ಬಿ.ಎಲ್.ಸಂತೋಷ್ ಗೆ ಬಂಧನ ಸಾಧ್ಯತೆ ದಟ್ಟವಾಗಿದೆ.</p>



<p style="font-size:20px">ಈ ಹಿನ್ನೆಲೆಯಲ್ಲಿ ಬಿ.ಎಲ್.ಸಂತೋಷ್ ಬಂಧನವಾದರೆ ಇದು ಮುಂಬರುವ ಕರ್ನಾಟಕ ಚುನಾವಣೆ ಮೇಲೂ ಬಿಜೆಪಿಗೆ ಪ್ರತಿಕೂಲ ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳಿವೆ. ಹಲವಷ್ಟು ಶಾಸಕರ ಕಳ್ಳತನದ ಪ್ರಕರಣದಲ್ಲಿ ಬಿ.ಎಲ್.ಸಂತೋಷ್ ಹೆಸರು ಮುಂಚೂಣಿಯಲ್ಲಿ ಇದ್ದರೂ ಸಾಕ್ಷ್ಯದ ಕೊರತೆ ಇತ್ತು. ಆದರೆ ಇಲ್ಲಿ ತೆಲಂಗಾಣ ಸರ್ಕಾರ ಆರೋಪಿಗಳ ಬಂಧನಕ್ಕೂ ಮೊದಲೇ ಎಲ್ಲಾ ಅಗತ್ಯ ಸಾಕ್ಷ್ಯಗಳನ್ನು ಕಲೆ ಹಾಕಿದೆ. ಹಾಗಾಗಿ ಬಿಎಲ್ ಸಂತೋಷ್ ರನ್ನು ವಿಚಾರಣೆ ನಂತರವೇ ಬಂಧಿಸುವ ಬಗ್ಗೆಯೂ ತೆಲಂಗಾಣ SIT ಮಾಹಿತಿ ಕಲೆ ಹಾಕಿದೆ ಎನ್ನಲಾಗಿದೆ.</p>
]]></content:encoded>
					
		
		
			</item>
		<item>
		<title>ಶಾಸಕರ ಕಳ್ಳ ಬೇಟೆ ಯತ್ನ: ಬಿ. ಎಲ್‌ ಸಂತೋಷ್‌ಗೆ ತನಿಖಾ ದಳದ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸಲು ಕೋರ್ಟ್‌ ಸೂಚನೆ</title>
		<link>https://peepalmedia.com/trs-mlas-poaching-case-court-relieve-for-bl-santhosh/</link>
		
		<dc:creator><![CDATA[Peepal Media]]></dc:creator>
		<pubDate>Sun, 20 Nov 2022 04:20:13 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[BL Santosh]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[telangana]]></category>
		<guid isPermaLink="false">https://peepalmedia.com/?p=15980</guid>

					<description><![CDATA[ಟಿಆರ್‌ಎಸ್ ಶಾಸಕರ ಕಳ್ಳಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನು ಬಂಧಿಸದಂತೆ ತೆಲಂಗಾಣ ಹೈಕೋರ್ಟ್ ಶನಿವಾರ ವಿಶೇಷ ತನಿಖಾ ತಂಡಕ್ಕೆ ತಡೆಯಾಜ್ಞೆ ನೀಡಿದೆ. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 41ಎ ಅಡಿಯಲ್ಲಿ ಹಾಜರಾಗುವಂತೆ ಸಂತೋಷ್‌ಗೆ ನೋಟಿಸ್‌ ನೀಡಲಾಗಿದೆ ಎಂಬ ಅಂಶವನ್ನು ಗಮನಿಸಿ ನ್ಯಾಯಾಲಯ ಈ ನಿರ್ದೇಶನ ನೀಡಿದೆ. ಇದಲ್ಲದೆ, ನವೆಂಬರ್ 16ರಂದು ನೀಡಲಾದ ಸೆಕ್ಷನ್ 41 ಎ ನೋಟಿಸ್‌ಗೆ ಅನುಗುಣವಾಗಿ ಸಂತೋಷ್ ತೆಲಂಗಾಣ ಪೊಲೀಸ್ ಎಸ್‌ಐಟಿ ಮುಂದೆ ಹಾಜರಾಗಬೇಕು ಎಂದು ನ್ಯಾಯಾಲಯ [&#8230;]]]></description>
										<content:encoded><![CDATA[
<p>ಟಿಆರ್‌ಎಸ್ ಶಾಸಕರ ಕಳ್ಳಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನು ಬಂಧಿಸದಂತೆ ತೆಲಂಗಾಣ ಹೈಕೋರ್ಟ್ ಶನಿವಾರ ವಿಶೇಷ ತನಿಖಾ ತಂಡಕ್ಕೆ ತಡೆಯಾಜ್ಞೆ ನೀಡಿದೆ. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 41ಎ ಅಡಿಯಲ್ಲಿ ಹಾಜರಾಗುವಂತೆ ಸಂತೋಷ್‌ಗೆ ನೋಟಿಸ್‌ ನೀಡಲಾಗಿದೆ ಎಂಬ ಅಂಶವನ್ನು ಗಮನಿಸಿ ನ್ಯಾಯಾಲಯ ಈ ನಿರ್ದೇಶನ ನೀಡಿದೆ.</p>



<p>ಇದಲ್ಲದೆ, ನವೆಂಬರ್ 16ರಂದು ನೀಡಲಾದ ಸೆಕ್ಷನ್ 41 ಎ ನೋಟಿಸ್‌ಗೆ ಅನುಗುಣವಾಗಿ ಸಂತೋಷ್ ತೆಲಂಗಾಣ ಪೊಲೀಸ್ ಎಸ್‌ಐಟಿ ಮುಂದೆ ಹಾಜರಾಗಬೇಕು ಎಂದು ನ್ಯಾಯಾಲಯ ಸೂಚಿಸಿದೆ.</p>



<p class="has-vivid-red-color has-cyan-bluish-gray-background-color has-text-color has-background dropcapp3">ಈ ಸುದ್ದಿಯನ್ನೂ ಓದಿ: </p>



<figure class="wp-block-embed is-type-wp-embed is-provider-peepal-media wp-block-embed-peepal-media"><div class="wp-block-embed__wrapper">
<blockquote class="wp-embedded-content" data-secret="Telgnmhku9"><a href="https://peepalmedia.com/b-l-santosh-is-threatened-with-arrest-summons-issued-by-telangana-sit-for-attendance/">ಬಿ.ಎಲ್ ಸಂತೋಷ್ ಗೆ ಬಂಧನದ ಭೀತಿ; ವಿಚಾರಣೆಗೆ ಹಾಜರಾಗುವಂತೆ ತೆಲಂಗಾಣ SIT ಕಡೆಯಿಂದ ಸಮನ್ಸ್ ಜಾರಿ</a></blockquote><iframe loading="lazy" class="wp-embedded-content" sandbox="allow-scripts" security="restricted"  title="&#8220;ಬಿ.ಎಲ್ ಸಂತೋಷ್ ಗೆ ಬಂಧನದ ಭೀತಿ; ವಿಚಾರಣೆಗೆ ಹಾಜರಾಗುವಂತೆ ತೆಲಂಗಾಣ SIT ಕಡೆಯಿಂದ ಸಮನ್ಸ್ ಜಾರಿ&#8221; &#8212; Peepal Media" src="https://peepalmedia.com/b-l-santosh-is-threatened-with-arrest-summons-issued-by-telangana-sit-for-attendance/embed/#?secret=wP9tPxH5eQ#?secret=Telgnmhku9" data-secret="Telgnmhku9" width="600" height="338" frameborder="0" marginwidth="0" marginheight="0" scrolling="no"></iframe>
</div></figure>



<p>ಶಾಸಕರ ಕಳ್ಳಭೇಟೆ ಯತ್ನದಲ್ಲಿ ಸಿಕ್ಕಿಬಿದ್ದು ಕೇಸ್‌ ಹಾಕಿಸಿಕೊಂಡಿದ್ದ ಬಿಜೆಪಿ ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕಳೆದ ವಾರ ಕೋರ್ಟ್‌ ಮೊರೆ ಹೋಗಿತ್ತಾದರೂ ಕೋರ್ಟ್‌ ಅದಕ್ಕೆ ನಿರಾಕರಿಸಿ, ಕೋರ್ಟ್‌ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ದಳದ ಮೂಲಕ ಪ್ರಕರಣದ ತನಿಖೆ ನಡೆಸುವಂತೆ ಹೇಳಿತ್ತು. </p>



<p>&#8220;ಅಡ್ವೊಕೇಟ್ ಜನರಲ್ ಬಿಎಸ್ ಪ್ರಸಾದ್ ಮತ್ತು ಹೆಚ್ಚುವರಿ ಅಡ್ವೊಕೇಟ್ ಜನರಲ್ ಜೆ ರಾಮಚಂದ್ರ ರಾವ್ ಅವರು, ಬಿಎಲ್ ಸಂತೋಷ್ ಅವರು ಈ ಸಮಯದಲ್ಲಿ ಬಂಧನದ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಪೀಠಕ್ಕೆ ತಿಳಿಸಿದರು. ಎಸ್‌ಐಟಿ ತನಿಖೆಯಲ್ಲಿ ಸಂತೋಷ್‌ ಪಾತ್ರವನ್ನು ಪತ್ತೆ ಮಾಡಿದೆ ಮತ್ತು ಹೆಚ್ಚಿನ ತನಿಖೆಗಾಗಿ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಅವರು ಕೋರ್ಟಿಗೆ ತಿಳಿಸಿದರು. ನೋಟಿಸನ್ನು ಪ್ರಶ್ನಿಸುವಲ್ಲಿ ಬಿಜೆಪಿಯ ಸ್ಥಾನವನ್ನು ರಾಜ್ಯವು ಪ್ರಶ್ನಿಸಿದೆ ಮತ್ತು ಸಂತೋಷ್ ಅವರು ಅಸಮಾಧಾನಗೊಂಡಿದ್ದರೆ ಸ್ವತಂತ್ರ ರಿಟ್ ಅರ್ಜಿಯನ್ನು ಸಲ್ಲಿಸಬೇಕಿತ್ತು ಎಂದು ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿದ ಚಿತಾಂಬರೇಶ್, ಸಂತೋಷ್ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು,&#8221; ಎಂದು ಹೇಳಿದ್ದಾರೆಂದು ಲೈವ್‌ ಲಾ ಕಾನೂನು ಸುದ್ದಿ ಸಂಸ್ಥೆ ವರದಿ ಮಾಡಿದೆ.</p>
]]></content:encoded>
					
		
		
			</item>
		<item>
		<title>ಬಿ.ಎಲ್ ಸಂತೋಷ್ ಗೆ ಬಂಧನದ ಭೀತಿ; ವಿಚಾರಣೆಗೆ ಹಾಜರಾಗುವಂತೆ ತೆಲಂಗಾಣ SIT ಕಡೆಯಿಂದ ಸಮನ್ಸ್ ಜಾರಿ</title>
		<link>https://peepalmedia.com/b-l-santosh-is-threatened-with-arrest-summons-issued-by-telangana-sit-for-attendance/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 19 Nov 2022 07:00:48 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[BJP leader]]></category>
		<category><![CDATA[BL Santosh]]></category>
		<category><![CDATA[karnataka]]></category>
		<category><![CDATA[operation kamala]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[telangana]]></category>
		<guid isPermaLink="false">https://peepalmedia.com/?p=15884</guid>

					<description><![CDATA[ಹೈದರಾಬಾದ್ ನಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (TRS) ಪಕ್ಷದ ಶಾಸಕರ ಖರೀದಿಗೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಂಘ ಪರಿವಾರ ಹಿನ್ನೆಲೆಯ ಬಿ.ಎಲ್.ಸಂತೋಷ್ ಗೆ ತೆಲಂಗಾಣ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಈಗಾಗಲೇ ಶಾಸಕರ ಕುದುರೆ ವ್ಯಾಪಾರಕ್ಕೆ ಇಳಿದಿದ್ದ ಮಂದಿ ಬಿ.ಎಲ್.ಸಂತೋಷ್ ನೇತೃತ್ವದಲ್ಲೇ ಶಾಸಕರನ್ನು ಖರೀದಿ ಮಾಡಲಾಗುತ್ತಿದೆ ಎಂದು ಹೇಳಿದ ವಿಡಿಯೋ ಸಾಕ್ಷಿಯನ್ನು TRS ನಾಯಕರು ಬಿಡುಗಡೆ ಮಾಡಿದ್ದರು. ಸದ್ಯ ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ಸರ್ಕಾರವು ನೇಮಿಸಿದ್ದ ವಿಶೇಷ ತನಿಖಾ ತಂಡ (SIT) [&#8230;]]]></description>
										<content:encoded><![CDATA[
<p style="font-size:20px">ಹೈದರಾಬಾದ್ ನಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (TRS) ಪಕ್ಷದ ಶಾಸಕರ ಖರೀದಿಗೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಂಘ ಪರಿವಾರ ಹಿನ್ನೆಲೆಯ ಬಿ.ಎಲ್.ಸಂತೋಷ್ ಗೆ ತೆಲಂಗಾಣ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಈಗಾಗಲೇ ಶಾಸಕರ ಕುದುರೆ ವ್ಯಾಪಾರಕ್ಕೆ ಇಳಿದಿದ್ದ ಮಂದಿ ಬಿ.ಎಲ್.ಸಂತೋಷ್ ನೇತೃತ್ವದಲ್ಲೇ ಶಾಸಕರನ್ನು ಖರೀದಿ ಮಾಡಲಾಗುತ್ತಿದೆ ಎಂದು ಹೇಳಿದ ವಿಡಿಯೋ ಸಾಕ್ಷಿಯನ್ನು TRS ನಾಯಕರು ಬಿಡುಗಡೆ ಮಾಡಿದ್ದರು.</p>



<p style="font-size:20px">ಸದ್ಯ ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ಸರ್ಕಾರವು ನೇಮಿಸಿದ್ದ ವಿಶೇಷ ತನಿಖಾ ತಂಡ (SIT) ಬಿ.ಎಲ್.ಸಂತೋಷ್ ಗೆ ಸಮನ್ಸ್ ನೀಡಿದೆ. ಹೈದರಾಬಾದ್ ಪೊಲೀಸ್ ಕಮೀಷನರ್ ಸಿ.ವಿ.ಆನಂದ್ ನೇತೃತ್ವದ ವಿಶೇಷ ತನಿಖಾ ತಂಡ ಮತ್ತು ನ್ಯಾಯಾಧೀಶರ ಮೇಲ್ವಿಚಾರಣೆ ನಂತರ ಈ ಬಗ್ಗೆ ಹೈಕೋರ್ಟಿಗೆ ವರದಿ ಸಲ್ಲಿಸಿದೆ. ಅದರಂತೆ ನವೆಂಬರ್ 29 ರ ಒಳಗೆ ತನಿಖೆಗೆ ಸಂಬಂಧಿಸಿದ ಎಲ್ಲಾ ವರದಿಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಧೀಶರಿಗೆ ಮಾತ್ರ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.</p>



<p style="font-size:20px">ಈ ಹಿಂದೆಯೇ ವರದಿಯಾದಂತೆ ಟಿಆರ್ಎಸ್ ಶಾಸಕರ ಖರೀದಿಗೆ ಇಳಿದಿದ್ದ ಮೂವರು ಆರೋಪಿಗಳಾದ ಸತೀಶ್ ಶರ್ಮಾ, ನಂದಕುಮಾರ್ ಮತ್ತು ಸಿಂಹಯಾಜಿ ಸ್ವಾಮಿ ಎಂಬುವವರನ್ನು ಅಕ್ಟೋಬರ್ 26 ರಂದು ಹೈದರಾಬಾದ್ ರೆಸಾರ್ಟ್ ಒಂದರಲ್ಲಿ ಬಂಧಿಸಲಾಗಿತ್ತು. ಇದಕ್ಕೂ ಮುನ್ನ ತಮ್ಮ ಪಕ್ಷದ ಶಾಸಕರನ್ನು ಹಣದ ಮೂಲಕ ಬಿಜೆಪಿ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಆಡಳಿತ ಪಕ್ಷ TRS ಆರೋಪಿಸುತ್ತಲೇ ಬಂದಿತ್ತು, ಆದರೆ ಯಾವುದೇ ಗಟ್ಟಿಯಾದ ಸಾಕ್ಷ್ಯಗಳು ಇರಲಿಲ್ಲ.</p>



<p style="font-size:20px">ಆ ನಂತರ ಆದ ಮೂವರು ಖದೀಮರ ಬಂಧನದ ನಂತರ ವಿಡಿಯೋ, ಆಡಿಯೋ ಮತ್ತು ಮುಂಗಡ ವ್ಯಾಪಾರಕ್ಕೆ ತಂದಿದ್ದರು ಎನ್ನಲಾದ 15 ಕೋಟಿ ರೂ. ಹಣದ ಸಮೇತ ಭದ್ರ ಸಾಕ್ಷ್ಯಗಳ ಮೂಲಕ BJP ಹಿನ್ನೆಲೆಯ ವ್ಯಕ್ತಿಗಳನ್ನು ಹಿಡಿಯಲು TRS ಯಶಸ್ವಿಯಾಗಿತ್ತು.</p>



<figure class="wp-block-image size-large is-resized"><img loading="lazy" decoding="async" src="https://peepalmedia.com/wp-content/uploads/2022/11/IMG_20221119_122717-1006x1024.jpg" alt="" class="wp-image-15886" width="383" height="389" srcset="https://peepalmedia.com/wp-content/uploads/2022/11/IMG_20221119_122717-1006x1024.jpg 1006w, https://peepalmedia.com/wp-content/uploads/2022/11/IMG_20221119_122717-295x300.jpg 295w, https://peepalmedia.com/wp-content/uploads/2022/11/IMG_20221119_122717-768x782.jpg 768w, https://peepalmedia.com/wp-content/uploads/2022/11/IMG_20221119_122717-150x153.jpg 150w, https://peepalmedia.com/wp-content/uploads/2022/11/IMG_20221119_122717-300x305.jpg 300w, https://peepalmedia.com/wp-content/uploads/2022/11/IMG_20221119_122717-696x708.jpg 696w, https://peepalmedia.com/wp-content/uploads/2022/11/IMG_20221119_122717-1068x1087.jpg 1068w, https://peepalmedia.com/wp-content/uploads/2022/11/IMG_20221119_122717.jpg 1080w" sizes="auto, (max-width: 383px) 100vw, 383px" /></figure>



<p style="font-size:20px">ಇನ್ನು ಈ ನಡುವೆ ತೆಲಂಗಾಣದ TRS ಶಾಸಕರ ಖರೀದಿಗೆ ಇರಿಸಿಕೊಂಡಿದ್ದರು ಎನ್ನಲಾದ 250 ಕೋಟಿ ರೂ. ಮೊತ್ತದ ಹಣವನ್ನು ಹುಡುಕಿಕೊಂಡು ತೆಲಂಗಾಣ ಪೊಲೀಸರು ಕರ್ನಾಟಕಕ್ಕೆ ಬಂದಿದ್ದಾರೆ. ಅವರು ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಶೋಧ ಕಾರ್ಯ ನಡೆಸಿದ್ದೂ ಸಹ ವರದಿಯಾಗಿದೆ. ಈಗಾಗಲೇ ತೆಲಂಗಾಣ ಪೊಲೀಸರ ಆತಿಥ್ಯದಲ್ಲಿ ಇರುವ ಮೂವರು ಆರೋಪಿಗಳ ಹೇಳಿಕೆಯ ಅಡಿಯಲ್ಲಿ ತೆಲಂಗಾಣ ಪೊಲೀಸರು ಪುತ್ತೂರಿಗೆ ಆಗಮಿಸಿದ್ದಾರೆ ಎನ್ನಲಾಗಿದೆ.</p>



<p style="font-size:20px">ಸದ್ಯ ಬಿ.ಎಲ್.ಸಂತೋಷ್ ಕೂಡಾ ಕರ್ನಾಟಕ ಅದರಲ್ಲೂ ದಕ್ಷಿಣ ಕನ್ನಡ ಮೂಲದವರಾಗಿರುವ ಕಾರಣ ಶಾಸಕರ ಖರೀದಿ ಕಾರಣಕ್ಕೆ ಇರಿಸಿಕೊಂಡಿದ್ದರು ಎನ್ನಲಾದ ಹಣ ಮತ್ತು ಇನ್ನುಳಿದ ಆರೋಪಿಗಳ ಶೋಧಕ್ಕೆ ತೀವ್ರ ತಪಾಸಣೆಗೆ ತೆಲಂಗಾಣ ಪೊಲೀಸರು ಇಳಿದಿದ್ದಾರೆ.</p>



<p style="font-size:20px">ಬಿ.ಎಲ್.ಸಂತೋಷ್ ಗೆ ಈ ಪ್ರಕರಣದ ಹಿನ್ನೆಲೆಯಲ್ಲಿ ಬಂಧನದ ಭೀತಿ ಎದುರಾಗಿದ್ದು, ನವೆಂಬರ್ 21 ರ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ಸಮನ್ಸ್ ನಲ್ಲಿ ಸೂಚಿಸಲಾಗಿದೆ. ತೆಲಂಗಾಣ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಅಷ್ಟು ಸುಲಭವಾಗಿ ಬಿಡುವ ಪ್ರಶ್ನೆಯೇ ಇಲ್ಲ ಎಂಬ ಮಾಹಿತಿಯನ್ನು ಟಿಆರ್ಎಸ್ ಮುಖ್ಯಸ್ಥರು ತಿಳಿಸಿದ್ದಾರೆ.</p>



<figure class="wp-block-image size-full"><img loading="lazy" decoding="async" width="678" height="452" src="https://peepalmedia.com/wp-content/uploads/2022/11/images-2022-11-19T122118.297.jpeg" alt="" class="wp-image-15885" srcset="https://peepalmedia.com/wp-content/uploads/2022/11/images-2022-11-19T122118.297.jpeg 678w, https://peepalmedia.com/wp-content/uploads/2022/11/images-2022-11-19T122118.297-300x200.jpeg 300w, https://peepalmedia.com/wp-content/uploads/2022/11/images-2022-11-19T122118.297-150x100.jpeg 150w" sizes="auto, (max-width: 678px) 100vw, 678px" /></figure>



<p style="font-size:20px">ಈ ಹಿನ್ನೆಲೆಯಲ್ಲಿ ಬಿ.ಎಲ್.ಸಂತೋಷ್ ಬಂಧನವಾದರೆ ಇದು ಮುಂಬರುವ ಕರ್ನಾಟಕ ಚುನಾವಣೆ ಮೇಲೂ ಬಿಜೆಪಿಗೆ ಪ್ರತಿಕೂಲ ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳಿವೆ. ತೆಲಂಗಾಣದಲ್ಲಿ ಸಿಕ್ಕಿಬಿದ್ದ ಮೂವರು ಆರೋಪಿಗಳು ಸೂಚಿಸಿದ ಪ್ರಮುಖ ಹೆಸರುಗಳಲ್ಲಿ ಬಿ.ಎಲ್.ಸಂತೋಷ್ ಮೊದಲಿಗರಾಗಿ ನಂತರ ಅಮಿತ್ ಷಾ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹೆಸರು ಮುಂಚೂಣಿಯಲ್ಲಿದೆ.</p>
]]></content:encoded>
					
		
		
			</item>
	</channel>
</rss>
