<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Book review &#8211; Peepal Media</title>
	<atom:link href="https://peepalmedia.com/tag/book-review/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Wed, 10 Apr 2024 05:12:12 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Book review &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಹಿಂದು ರಾಷ್ಟ್ರದೆಡೆಗೆ ಹಿಂಸೆಯ ಹೆಜ್ಜೆಗಳು</title>
		<link>https://peepalmedia.com/hindu-rashtradedege-himseya-hejjegalu-kotresh-kotturu/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 10 Apr 2024 05:12:11 +0000</pubDate>
				<category><![CDATA[ಅಂಕಣ]]></category>
		<category><![CDATA[Book review]]></category>
		<category><![CDATA[books]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=38165</guid>

					<description><![CDATA[ಈ ಪುಸ್ತಕದ ಶೀರ್ಷಿಕೆಯನ್ನು ಕೇಳಿದ ಕೂಡಲೇ ನಾನು ಪುಳಕಿತಗೊಂಡಿದ್ದೆ. ಇಂತಹ ಶೀರ್ಷಿಕೆಗಳು ಗಂಭೀರವಾಗಿ ಸಾಹಿತ್ಯ ಓದುವವನನ್ನು ಪುಳಕಿಸದೇ ಇರಲಾರವು ಎನ್ನುವುದು ನನ್ನ ಪ್ರೊಫೆಷನಲ್ ಅನುಭವ. ಈ ಶೀರ್ಷಿಕೆಯೂ ನನ್ನನ್ನು ಬಹಳ ಕಾಡಿದೆ. ಹಿಂದು ಎಂಬ ಒಂದು ಧರ್ಮವನ್ನು ಹಿಡಿದುಕೊಂಡು ಅದು ಸಾಗುತ್ತಿರುವ ಹಾದಿಯು ನಮ್ಮನ್ನು ಯಾವ ದಿಕ್ಕಿನೆಡೆಗೆ ಚಲಿಸುತ್ತಿವೆ ಮತ್ತದು ರಕ್ತದ ಹೆಜ್ಜೆಗಳಿಂದ ತನ್ನ ಹಾದಿಯನ್ನು ಚಲಿಸುತ್ತಿದೆ ಎಂಬ ಅರ್ಥವನ್ನು ನೀಡುತ್ತದೆಯಾದ್ದರಿಂದ ಈ ಶೀರ್ಷಿಕೆ ನನ್ನನ್ನು ಆತಂಕಕ್ಕೀಡು ಮಾಡಿದೆ. ಬಾಬಾಸಾಹೇಬರು, ತನ್ನ ದೇಶದ ಪ್ರಜೆಗಳು ಸಮಾನತೆಯಿಂದ ಬದುಕಬೇಕು [&#8230;]]]></description>
										<content:encoded><![CDATA[
<p>ಈ ಪುಸ್ತಕದ ಶೀರ್ಷಿಕೆಯನ್ನು ಕೇಳಿದ ಕೂಡಲೇ ನಾನು ಪುಳಕಿತಗೊಂಡಿದ್ದೆ. ಇಂತಹ ಶೀರ್ಷಿಕೆಗಳು ಗಂಭೀರವಾಗಿ ಸಾಹಿತ್ಯ ಓದುವವನನ್ನು ಪುಳಕಿಸದೇ ಇರಲಾರವು ಎನ್ನುವುದು ನನ್ನ ಪ್ರೊಫೆಷನಲ್ ಅನುಭವ. ಈ ಶೀರ್ಷಿಕೆಯೂ ನನ್ನನ್ನು ಬಹಳ ಕಾಡಿದೆ.</p>



<p>ಹಿಂದು ಎಂಬ ಒಂದು ಧರ್ಮವನ್ನು ಹಿಡಿದುಕೊಂಡು ಅದು ಸಾಗುತ್ತಿರುವ ಹಾದಿಯು ನಮ್ಮನ್ನು ಯಾವ ದಿಕ್ಕಿನೆಡೆಗೆ ಚಲಿಸುತ್ತಿವೆ ಮತ್ತದು ರಕ್ತದ ಹೆಜ್ಜೆಗಳಿಂದ ತನ್ನ ಹಾದಿಯನ್ನು ಚಲಿಸುತ್ತಿದೆ ಎಂಬ ಅರ್ಥವನ್ನು ನೀಡುತ್ತದೆಯಾದ್ದರಿಂದ ಈ ಶೀರ್ಷಿಕೆ ನನ್ನನ್ನು ಆತಂಕಕ್ಕೀಡು ಮಾಡಿದೆ.</p>



<p>ಬಾಬಾಸಾಹೇಬರು, ತನ್ನ ದೇಶದ ಪ್ರಜೆಗಳು ಸಮಾನತೆಯಿಂದ ಬದುಕಬೇಕು ಮತ್ತು ತಾನು ಅನುಭವಿಸಿದ ನೋವನ್ನು ನನ್ನ ದೇಶದ ಪ್ರಜೆಗಳು ಮುಂದೆ ಅನುಭವಿಸಬಾರದು ಎಂಬ ಸದುದ್ದೇಶದಿಂದಲೇ ತಮ್ಮ ಸಂಪೂರ್ಣ ಜ್ಞಾನಭಂಡಾರವನ್ನು ಧಾರೆಯೆರೆದು ಸಂವಿಧಾನವನ್ನು ರಚಿಸಿಕೊಟ್ಟಿದ್ದಾರೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ನಡೆಯುತ್ತಿರುವ ವಿಶ್ವದಲ್ಲೇ ಅತೀದೊಡ್ಡ ಲಿಖಿತ ಸಂವಿಧಾನವನ್ನು ಹೊಂದಿರುವ ಭಾರತ ನಡೆಯುತ್ತಿರುವ ಪ್ರಸ್ತುತದ ಹಾದಿ ಬಹು ಕಠಿಣವಾಗಿದೆ. ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನಗಳು ನಮ್ಮನ್ನು ಆತಂಕಕ್ಕೆ, ಕಳವಳಕ್ಕೆ ದೂಡಿವೆ. ಹತ್ತು ವರ್ಷಗಳ ಈಚೆಗೆ ಧಮೀಯ, ಜಾತೀಯ ಕಲಹಗಳು ಹೆಚ್ಚಿವೆ. ಧರ್ಮ ಧರ್ಮಗಳ ಮಧ್ಯೆ ಜಗಳವಿಟ್ಟು ರಾಜಕೀಯ ಪಕ್ಷಗಳು ತಮ್ಮ ಬೇಳೆಯನ್ನು ಬೇಯಿಸಿಕೊಂಡು ಮುಗ್ಧ ಯುವಕರನ್ನು ಧರ್ಮದ ಅಫೀನ ಚಟಕ್ಕೆ ಹಚ್ಚಿ ನಿರಾತಂಕವಾಗಿ ಆಡಳಿತ ಚುಕ್ಕಾಣಿ ಹಿಡಿದು, ತಾವು ಮಾಡಿದ್ದೇ ಸರಿ, ನಮ್ಮನ್ನು ತಡೆಯುವವರು ಯಾರೂ ಇಲ್ಲ ಎಂಬ ಹಪಾಹಪಿತನದಿಂದ ಬೀಗುತ್ತಿವೆ. ಇದಕ್ಕೆ ನಾವು ಮಾಡಿದ ತಪ್ಪು ನಿರ್ಣಯಗಳೇ ಕಾರಣ.</p>



<p>2014ರವರೆಗೆ ನಮ್ಮಲ್ಲಿ ದೇಶದ್ರೋಹಿ ಎನ್ನುವ ಪದ ಸೀಮಿತವಾಗಿ ದೇಶದ ಮೇಲೆ ದಾಳಿ ಮಾಡುವ ಅಥವಾ ದೇಶಕ್ಕೆ ಕುತ್ತನ್ನು ತರುವವರನ್ನು ಮಾತ್ರ ದೇಶದ್ರೋಹಿ ಎಂದು ಕರೆಯಲಾಗುತ್ತಿತ್ತು. ಆದರೆ 2014ರ ನಂತರ ಬದಲಾದ ವರ್ತಮಾನದಲ್ಲಿ ಒಕ್ಕೂಟ ಸರ್ಕಾರವನ್ನು ಅಥವಾ ಒಬ್ಬ ವ್ಯಕ್ತಿಯ ವಿರುದ್ಧ ತಮ್ಮ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರೆ ಅಥವಾ ಅವರು ಮಾಡಿರುವ ಕೆಲಸಗಳ ಬಗ್ಗೆ ವಿರೋಧಿಸಿದರೆ, ಅವರು ಹೇಳುತ್ತಿರುವುದು ಸುಳ್ಳು ಎಂದು ಹೇಳಿದರೆ ಸಾಕು ನಮಗೆ ದೇಶದ್ರೋಹಿ ಎನ್ನುವ ಪಟ್ಟ ಬಹುಸುಲಭವಾಗಿ ಲಭಿಸಿಬಿಡುತ್ತದೆ. ಹಾಗಾಗಿ ವಿಶ್ವದಲ್ಲೇ ದೇಶದ್ರೋಹಿ ಎಂದು ಸುಲಭವಾಗಿ ಕರೆಸಿಕೊಳ್ಳುವುದು ಬಹುಶಃ ಭಾರತದಲ್ಲಿ ಬಿಟ್ಟು ಇನ್ನಾವ ದೇಶದಲ್ಲೂ ನಾವು ಕಾಣಲಾರೆವು.</p>



<p>ಪ್ರಜೆಗಳಿಂದ ಆಯ್ಕೆಯಾದ ಒಂದು ಸರ್ಕಾರ ಅಥವಾ ಒಬ್ಬ ವ್ಯಕ್ತಿ ತಾನು ತನ್ನ ದೇಶದ ಜನರ ಒಳಿತಿಗಾಗಿ, ಅವರ ಶೈಕ್ಷಣಿಕ, ಆರೋಗ್ಯ, ಉದ್ಯೋಗ ಇವುಗಳ ಬಗ್ಗೆ ಗಮನ ಹರಿಸಬೇಕೇ ಹೊರತು ಧಾರ್ಮಿಕ ಅಧಃಪತನಕ್ಕಿಳಿದು, ದೇಶದ ಅಭಿವೃದ್ಧಿಗೆ ಕಡೆಗೆ ಗಮನ ಹರಿಸದೇ, ಎಲ್ಲರನ್ನೂ ಮೂಢನಂಬಿಕೆಗೆ ತಳ್ಳಬಾರದು ಆದರೆ ಇಂತಹ ಘಟನೆಗಳು ಇತ್ತೀಚೆಗೆ ಜರುಗುತ್ತಲೇ ಇವೆ. ಅದನ್ನು ನಾವು ನೋಡಿದ್ದೇವೆ, ಅನುಭವಿಸಿದ್ದೇವೆ. ಪ್ರಜಾಪ್ರಭುತ್ವದ ಚುಕ್ಕಾಣಿ ಹಿಡಿದಿರುವವರು ವೈಜ್ಞಾನಿಕವಾಗಿ ಚಿಂತಿಸಬೇಕೇ ಹೊರತು, ದೇವಸ್ಥಾನದ ಪೂಜಾರಿಯಾಗಿ ವರ್ತಿಸುವುದಲ್ಲ, ಅಲ್ಲದೇ ಅದು ಪ್ರಜಾಪ್ರಭುತ್ವಕ್ಕೆ ಭೂಷಣವೂ ಅಲ್ಲ. ಅಲ್ಲದೇ ಇವರು ಚುನಾವಣೆಗೆ ನಿಂತಾಗ ಮತ ಹಾಕುವವರು ಪ್ರಜೆಗಳೇ ಹೊರತು, ತಾನು ಪೂಜಿಸಿದ ದೇವರಲ್ಲ ಎನ್ನುವುದನ್ನು ಅರಿಯಬೇಕು.</p>



<p>ಕರೋನಾ ಹೋಗಲಾಡಿಸಲು ತಟ್ಟೆ ಬಡಿಯಿರಿ ಎಂದು ದೆಹಲಿಯಲ್ಲಿ ಕುಳಿತವರು ಆದೇಶಿಸಿದರೆ, ಅದನ್ನು ಪಾಲಿಸಲು ಸಂವಿಧಾನಬದ್ಧ ಹುದ್ದೆಯಾದ ನಮ್ಮ ರಾಜ್ಯದ ರಾಜ್ಯಪಾಲರೇ ತಟ್ಟೆ ಹಿಡಿದು ಟಣ್ ಟಣ್ ಎಂದು ಬಾರಿಸಿದ್ದು ನಮಗೆಲ್ಲರಿಗೂ ಗೊತ್ತಿರುವ ಸಂಗತಿ. ಇದನ್ನು ನೋಡಿದ ಸಣ್ಣ ಸಣ್ಣ ಮಕ್ಕಳ ಮನಸ್ಸಿನ ಮೇಲೆ ಬೀರಬಹುದಾದ ಪರಿಣಾಮ ಎಂತಹುದು ಎಂಬ ಯೋಚನೆಯೂ ನಮಗೆ ಬರಲಿಲ್ಲ. ರೈತವಿರೋಧಿ ಕಾನೂನುಗಳನ್ನು ಜಾರಿಗೆ ತಂದಾಗ ಇವರು ಮಾತಾಡಿದ ಅಹಂಕಾರದ ಮಾತುಗಳಿಗೇನೂ ಕಡಿಮೆಯಿಲ್ಲ ಒಂದು ರೀತಿ ರೈತರನ್ನು ಕಾಲಕಸ ಮಾಡಿದ್ದೂ ಇವರೇ. ರೈತರ ಹೋರಾಟಕ್ಕೆ ರಸ್ತೆಗೆ ಮೊಳೆಗಳನ್ನು ಹೊಡೆದದ್ದು ಇತಿಹಾಸದಲ್ಲಿ ಇವರೇ ಮೊದಲು.</p>



<p>ಇಂತಹ ಮೂಢನಂಬಿಕೆಗಳನ್ನು ಪ್ರಚಾರ ಮಾಡಲು ಮಾಧ್ಯಮಗಳಿಗೆ ನಮ್ಮಲ್ಲೇನೂ ಕೊರತೆಯಿಲ್ಲ. ಸಂವಿಧಾನದ ನಾಲ್ಕನೇ ಅಂಗವೆಂದು ಕರೆಯುವ ಬಹುತೇಕ ಮಾಧ್ಯಮಗಳೂ ಸಹ ಬಿಕರಿಯಾಗಿವೆ ಎನ್ನುವುದಕ್ಕೆ ಸಾಕ್ಷಿ ನೀಡಬೇಕೆ? ಅವರು ತಮ್ಮ ದೊರೆ ಏನೇ ಮಾಡಿದರೂ ಅದಕ್ಕೊಂದು ಶೀರ್ಷಿಕೆ ಕೊಟ್ಟು ಅವರನ್ನು ವಿಜೃಂಬಿಸಿವೆ. ಒಬ್ಬ ವ್ಯಕ್ತಿಯನ್ನು ಅಷ್ಟೊಂದು ವಿಜೃಂಭಿಸುವುದು ಪ್ರಜಾಪ್ರಭುತ್ವದ ರಾಷ್ಟ್ರಕ್ಕೆ ಘನತೆಯನ್ನು ಖಂಡಿತಾ ತಂದುಕೊಡಲಾರದು. ಅಲ್ಲದೇ ಒಂದೇ ಒಂದು ಪ್ರೆಸ್ ಮೀಟ್ ಮಾಡದವರನ್ನು ಈ ರೀತಿಯಾಗಿ ವಿಜೃಂಭಿಸುವುದನ್ನು ನೋಡಿದರೆ ಇವರ ಕೈಗಳು ಶುದ್ಧವಾಗಿದೆ ಎಂದು ನಂಬುವುದಾದರೂ ಹೇಗೆ? ಇಂತಹ ಎಲ್ಲ ಕೆಲಸಗಳನ್ನು ಪರಾಮರ್ಶೆ ಮಾಡುವುದನ್ನು ಬಿಟ್ಟು, ರಾಜಾ ಪ್ರತ್ಯಕ್ಷಃ ದೇವರು ಎಂದು ಹೊಗಳುಭಟ್ಟರಂತಿರುವ ಈ ಮಾಧ್ಯಮಗಳಿಗೆ ಕಾಣುವುದೇ ಇಲ್ಲ. ಕಂಡಿದ್ದರೆ ಬೇರೆಯೇ ಇರುತ್ತಿತ್ತು.</p>



<p>ಸ್ವಾತಂತ್ರ್ಯ ಬಂದು 75ರ ವಸಂತದಲ್ಲಿರುವ ನಮ್ನನ್ನು ಇನ್ನೂ ಬಡತನ ಕಾಡುತ್ತಿದೆ, ನಿರುದ್ಯೋಗದಿಂದ ಯುವಕರು ಬೇಸತ್ತಿದ್ದಾರೆ. ಯುವಕರು ಕೋಮುವಾದಿತನಕ್ಕೆ ಬಲಿಯಾಗುತ್ತಿದ್ದಾರೆ. ಇಂತಹ ಗಂಭೀರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರ ತನ್ನ ಗಮನವನ್ನು ಹರಿಸುತ್ತಲೇ ಇಲ್ಲ. ಈಗಿನ ಸರ್ಕಾರಕ್ಕೆ ಬರೀ ಮತವೊಂದೇ ಬೇಕು ಮತ್ತು ಅದನ್ನು ಹೇಗೆ ಚುನಾವಣೆಯಲ್ಲಿ ಪಡೆಯಬೇಕು ಎನ್ನುವುದು ಇವರಿಗೆ ಚೆನ್ನಾಗಿ ಗೊತ್ತು. ಅದನ್ನು ಇವರು ಸಶಕ್ತವಾಗಿ ಮಾಡಿಕೊಂಡು ಬರುತ್ತಲೇ ಇದ್ದಾರೆ. ನಾವೂ ಸಹ ಏನೂ ಕಡಿಮೆಯಿಲ್ಲ ಎನ್ನುವ ಹಾಗೆ ಚುನಾವಣೆ ಬಂದರೆ ಸಾಕು ರಾಜಕೀಯ ಪಕ್ಷಗಳ ಬೆಣ್ಣೆಯ ಮಾತುಗಳಿಗೆ ಮರುಳಾಗಿ, ಹಸಿದಾಗ ಅನ್ನವನ್ನು ಕೊಡದ, ಧರ್ಮದ ಬಾವುಟವನ್ನು ಹಿಡಿದು ಕೋಮುವಾದಿತನವನ್ನು ಅನುಸರಿಸುತ್ತಾ, ಅವರ ಬೆನ್ನಹಿಂದೆ ಬಿದ್ದು, ನಮ್ಮ ಮೆದುಳಲ್ಲಿ ಧರ್ಮದ ಅಫೀನನ್ನು ತುಂಬಿಕೊಂಡು ಇತರೆ ಧರ್ಮಗಳನ್ನು ದ್ವೇಷಿಸುತ್ತಾ ಅವರನ್ನು ಹಿಂಬಾಲಿಸುತ್ತಿದ್ದೇವೆ. ಇದು ನಮ್ಮ ಶವದ ಪೆಟ್ಟಿಗೆಗೆ ಅಂತಿಮ ಮೊಳೆಗಳನ್ನು ನಾವೇ ಹೊಡೆದುಕೊಳ್ಳುತ್ತಿದ್ದೇವೆ ಎನ್ನುವುದರಲ್ಲಿ ನನಗೆ ಯಾವುದೇ ಅನುಮಾನಗಳು ಉಳಿದಿಲ್ಲ.</p>



<p>ಹಿಂದು ರಾಷ್ಟ್ರದೆಡೆಗೆ ಹಿಂಸೆಯ ಹೆಜ್ಜೆಗಳು ಪುಸ್ತಕದಲ್ಲಿ ಇಂತಹ ಗಂಭೀರವಾದ ವಿಷಯಗಳನ್ನು, ಸತ್ಯದ ವಿಚಾರಗಳನ್ನು ಸಾಕ್ಷಿಗಳ ಸಮೇತ ಉಲ್ಲೇಖಿಸಿದ್ದಾರೆ. ಸುಳ್ಳುಗಳೇ ಉಸಿರಾಡುತ್ತಿರುವ ಈ ಹೊತ್ತಿನಲ್ಲಿ, ಸತ್ಯವನ್ನು ಹೇಳುವುದೇ ದುಸ್ತರವಾಗಿರುವಾಗ, ಸತ್ಯವನ್ನು ಹೇಳುವ ಇಂತಹ ಪುಸ್ತಕಗಳ ಓದು ನಮ್ಮ ಕಣ್ಣುಗಳನ್ನು ತೆರೆಸುತ್ತವೆ. ಇಂತಹ ಸತ್ಯಗಳನ್ನು ಹೇಳುವಲ್ಲಿ ತೋರಿರುವ ಗಟ್ಟಿತನ ಪ್ರಶಂಸನೀಯವಾದದ್ದು. ಹಲವಾರು ವಿಷಯಗಳ ಬಗ್ಗೆ ತಿಳಿಸಿರುವ ಲೇಖಕರು ಹಿಂದೂ ರಾಷ್ಟ್ರವಾದರೆ ಆಗಬಹುದಾದ ಅನಾಹುತಗಳನ್ನು ಕಣ್ಣಿಗೆ ಕಟ್ಟುವಂತೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಪ್ರಜೆಗಳು ಎಚ್ಚೆತ್ತುಕೊಂಡು ಸರಿಯಾದವರನ್ನು ಆರಿಸದೇ ಇದ್ದರೆ ಇದರ ದುಷ್ಫಲವನ್ನು ನಮ್ಮ ಮುಂದಿನ ಪೀಳಿಗೆ ಅನುಭವಿಸಬೇಕಾಗುತ್ತದೆ.</p>



<p>ಈ ಪುಸ್ತಕದ ಲೇಖಕರಾದ ಲತಾಮಾಲ ಅವರು ಬಹಳ ಧೈರ್ಯವಂತರು ಎನ್ನುವುದನ್ನು ಈ ಪುಸ್ತಕದ ಮೂಲಕ ಸಾಬೀತುಪಡಿಸಿದ್ದಾರೆ. ಇವರು ಹೇಳಿರುವ ವಿಚಾರಗಳು ನಮ್ಮನ್ನು ಆಲೋಚನೆಗೆ ಹಚ್ಚುತ್ತವೆ. ಆ ಮೂಲಕ ಅವರು ಸಮಾಜದ ಬಗ್ಗೆ ಇರುವ ತಮ್ಮ ಪ್ರತಿರೋಧವನ್ನು ಸಶಕ್ತವಾಗಿ ದಾಖಲು ಮಾಡಿದ್ದಾರೆ. ಇಂತಹ ಪುಸ್ತಕವನ್ನು ಸಾಹಿತ್ಯಲೋಕಕ್ಕೆ ಕೊಟ್ಟಿರುವ ಲತಾಮಾಲ ಅವರು ನಿಜಕ್ಕೂ ಅಭಿನಂದನಾರ್ಹರು. ಇಂತಹ ಪುಸ್ತಕಗಳನ್ನು ಓದುವ ಮೂಲಕ ನಮ್ಮ ಕಣ್ಣುಗಳನ್ನು ಇನ್ನಷ್ಟು ತೆರೆದುಕೊಂಡು ಭವಿಷ್ಯದ ಭಾರತವನ್ನು ನಿರ್ಮಾಣ ಮಾಡುವಲ್ಲಿ ನಮ್ಮ ಪಾತ್ರ ಏನು ಎಂಬುದನ್ನು ಅರಿಯೋಣ.</p>
]]></content:encoded>
					
		
		
			</item>
		<item>
		<title>ತಾಜ್ ಮಹಲ್ಲಿನ ಖೈದಿಗಳು : ಪ್ರೀತಿ ಮತ್ತು ಆಧ್ಯಾತ್ಮದ ಬಂಧಿಖಾನೆ</title>
		<link>https://peepalmedia.com/prisoners-of-the-taj-mahal-a-prison-of-love-and-spirituality/</link>
		
		<dc:creator><![CDATA[Peepal Media Desk]]></dc:creator>
		<pubDate>Sun, 07 Jan 2024 07:34:19 +0000</pubDate>
				<category><![CDATA[ಕಲೆ – ಸಾಹಿತ್ಯ]]></category>
		<category><![CDATA[Book review]]></category>
		<category><![CDATA[Chand Pasha]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=34619</guid>

					<description><![CDATA[ಅಸಂಖ್ಯಾತ ಅಂತರ್ದೃಷ್ಠಿಯ ಅರಿವುಗಳನ್ನು ಸಮರ್ಪಕವಾಗಿ ನಿರೂಪಿಸಿದರೆ ಮಾತ್ರ ಸೃಜನಶೀಲ ಕಥೆಯೊಂದು ರೂಪುಗೊಳ್ಳಬಲ್ಲದು! ಇಂಥ ಅನೇಕ ನೋಟಕ್ರಮಗಳು ತಾಜ್ ಮಹಲ್ಲಿನ ಖೈದಿಗಳು ಸಂಕಲನ ಸಿದ್ಧಿಸಿಕೊಂಡಿದ್ದು ವಿಶೇಷ. ಲೇಖಕ ಚಾಂದ್ ಪಾಷ ಎನ್ ಎಸ್ ಅವರ ವಿಮರ್ಶೆ ನಿಮ್ಮ ಮುಂದೆ &#160;&#160; ಶಿಹಾಬುದ್ದೀನ್ ಪೊಯ್ತುಂಕಡವು ಅವರ &#8216;ತಾಜ್ ಮಹಲ್ಲಿನ ಖೈದಿಗಳು&#8217; ಕಥಾ ಸಂಕಲನವು ಮಲೆಯಾಳಂನಿಂದ ಹೊರಟ ಕನ್ನಡದ ಅವತರಣಿಕೆ ಆದರೂ ಕೂಡ, ಸಂವೇದನೆ ಮಾತ್ರ ಸಾರ್ವತ್ರಿಕವಾದದ್ದು! ಭಾಷೆಯ ಎಲ್ಲೆಯೊಂದಿಗೆ ಪ್ರಾದೇಶಿಕ ಪರಿಧಿಯನ್ನೂ ಮೀರಿ ನಿಲ್ಲಬಲ್ಲ ಅನಿಕೇತನ ಪ್ರಜ್ಞೆ ಎಂದು ಅನ್ನಿಸುತ್ತದೆ. [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p><strong>ಅಸಂಖ್ಯಾತ ಅಂತರ್ದೃಷ್ಠಿಯ ಅರಿವುಗಳನ್ನು ಸಮರ್ಪಕವಾಗಿ ನಿರೂಪಿಸಿದರೆ ಮಾತ್ರ ಸೃಜನಶೀಲ ಕಥೆಯೊಂದು ರೂಪುಗೊಳ್ಳಬಲ್ಲದು! ಇಂಥ ಅನೇಕ ನೋಟಕ್ರಮಗಳು ತಾಜ್ ಮಹಲ್ಲಿನ ಖೈದಿಗಳು ಸಂಕಲನ ಸಿದ್ಧಿಸಿಕೊಂಡಿದ್ದು ವಿಶೇಷ. ಲೇಖಕ ಚಾಂದ್ ಪಾಷ ಎನ್ ಎಸ್ ಅವರ ವಿಮರ್ಶೆ ನಿಮ್ಮ ಮುಂದೆ</strong></p>
</blockquote>



<p>&nbsp;&nbsp; ಶಿಹಾಬುದ್ದೀನ್ ಪೊಯ್ತುಂಕಡವು ಅವರ &#8216;ತಾಜ್ ಮಹಲ್ಲಿನ ಖೈದಿಗಳು&#8217; ಕಥಾ ಸಂಕಲನವು ಮಲೆಯಾಳಂನಿಂದ ಹೊರಟ ಕನ್ನಡದ ಅವತರಣಿಕೆ ಆದರೂ ಕೂಡ, ಸಂವೇದನೆ ಮಾತ್ರ ಸಾರ್ವತ್ರಿಕವಾದದ್ದು! ಭಾಷೆಯ ಎಲ್ಲೆಯೊಂದಿಗೆ ಪ್ರಾದೇಶಿಕ ಪರಿಧಿಯನ್ನೂ ಮೀರಿ ನಿಲ್ಲಬಲ್ಲ ಅನಿಕೇತನ ಪ್ರಜ್ಞೆ ಎಂದು ಅನ್ನಿಸುತ್ತದೆ. ಕಥೆಗಳು ಕಥೆಯಾಗುವುದು ಮನುಷ್ಯ ಕೇಂದ್ರಿತ ವಸ್ತುವಿದ್ದಾಗ ಮಾತ್ರ. ಇಲ್ಲದಿದ್ದರೆ ಕೇವಲ ಘಟಾನುಘಟಿ ಘಟನೆಗಳನ್ನು ಪೋಣಿಸಿದ ಒಣಗಾಮಾಲೆಯಂತೆ ಘಮಲುಹೀನ ಮತ್ತು ಅರ್ಥಹೀನವೂ ಕೂಡ. ತನ್ನ ಸುತ್ತಲಿನ ಲೋಕಸಂಸಾರದ ವಿಷಯವಸ್ತುಗಳನ್ನು ಗಮನಿಸುವ ಕಥೆಗಾರ ಅಥವಾ ಕಥೆಗಾರ್ತಿ ತನ್ನೊಳಗಿನ ಹತಾಶೆ, ಬಯಕೆ, ತುಡಿತ, ಪಾಪ ಪ್ರಜ್ಞೆ, ಅನಾಥ ಭಾವ, ಸತ್ಯ ನುಡಿಯಲಾಗದ ಸಂದಿಗ್ಧತೆ, ಅರಿವಿಲ್ಲದೆ ಸಿದ್ಧಿಯಾದ ಆಧ್ಯಾತ್ಮ, ಬಸಿರೊಳಗೆ ಬಲಿಯಾದ ಪ್ರೇಮ&#8230;. ಹೀಗೆ ಅಸಂಖ್ಯಾತ ಅಂತರ್ದೃಷ್ಠಿಯ ಅರಿವುಗಳನ್ನು ಸಮರ್ಪಕವಾಗಿ ನಿರೂಪಿಸಿದರೆ ಮಾತ್ರ ಸೃಜನಶೀಲ ಕಥೆಯೊಂದು ರೂಪುಕೊಳ್ಳಬಲ್ಲದು! ಇಂಥ ಅನೇಕ ನೋಟಕ್ರಮಗಳು ತಾಜ್ ಮಹಲ್ಲಿನ ಖೈದಿಗಳು ಸಂಕಲನ ಸಿದ್ಧಿಸಿಕೊಂಡಿದ್ದು ವಿಶೇಷ.</p>



<p>&nbsp;&nbsp;&nbsp; ಕೋಣೆಯೊಳಗೆ ಹಚ್ಚಿಟ್ಟ ಪುಟ್ಟ ಹಣತೆಯ ಬೆಳಕಿನೊಂದಿಗೆ ಕತ್ತಲೆಯು ಬೆಳಕಾಗಿ ಬೆಸೆಯುವಂತೆಯೇ, ಪ್ರೀತಿ ಆಧ್ಯಾತ್ಮವಾಗಿಯೋ, ಅಥವಾ ಆಧ್ಯಾತ್ಮವೇ ಪ್ರೀತಿಯಾಗಿಯೋ ಬೆಸೆದುಕೊಳ್ಳುತ್ತ ಪರಸ್ಪರ ಅಭಿನ್ನತೆಯ ಅಪೂರ್ವತೆಯನ್ನು ತೋರುವಂತೆ ಇಲ್ಲಿನ ಬಹುತೇಕ ಕಥೆಗಳು ಬೆಸೆಯುವಿಕೆಯ ಜಾಲವನ್ನೆ ಹರಡಿಕೊಂಡಿದೆ. ಬದುಕಿನ ಸಣ್ಣ ಪುಟ್ಟ ಕಿರಿಕಿರಿಗಳಿಗೆ ಕಿರೀಟ ತೊಡಿಸಿ ಮೆರವಣಿಗೆ ಮಾಡಿದರೆ, ಕಿರೀಟಕ್ಕಿಂತಲೂ ಕಿರಿಕಿರಿಗಳೆ ಹೆಚ್ಚು ಸುಂದರವಾಗಿ ಹಾಗೂ ಸಹಜವಾಗಿ ಕಾಣುವಂತೆಯೇ ಬದುಕಿನ ಬಹುತೇಕ ನಿರ್ಲಕ್ಷ್ಯಕೆ ಒಳಪಡುವ ಸಣ್ಣ ಪುಟ್ಟ ಸರಕುಗಳೇ ಮೋಹಕವಾಗುವಂತೆ ಕಥೆಗಳು ಚಿತ್ರಿಸಿದರೂ, ಕೆಲವೊಮ್ಮೆ ನಮ್ಮ ಕಷ್ಟ, ಸಣ್ಣತನ, ಜಾಣ್ಮೆ, ಪ್ರೀತಿ, ಮೋಸ, ಇತ್ಯಾದಿ ಭಾವಗಳಿಗೆ ಹಿಡಿದ ಕನ್ನಡಿಯಂತೆಯೆ. ಓದುತ್ತಾ ಹೋದ ಹಾಗೆ ಎಷೋ ಸಲ ನಾವೇ ಪಾತ್ರಗಳೂ ಆಗುವ ಆಶ್ಚರ್ಯವೂ ಮತ್ತು ಅಪಾಯವೂ ಇಲ್ಲುಂಟು ಎಂದರೆ ಅತಿರೇಕವಾಗಲಾರದು ಎಂಬುದು ನನ್ನ ಪ್ರಮಾಣಿಕ ಅನಿಸಿಕೆ.</p>



<p>&nbsp;&nbsp;&nbsp;&nbsp; &#8221; ಕತೆಗಾರ ಜೀವನದ ಬಗ್ಗೆ ಬಹಳ ಸುಲಭವಾಗಿ ತೀರ್ಮಾನಗಳಿಗೆ ಬರದೆ, ಲೋಕಾತೀತ ಸತ್ಯಸ್ಯಸತ್ಯಗಳನ್ನು ಕಂಡನೆಂದು ಸುದ್ದಿಗಳನ್ನು ಕೊಡದೆ, ಇಹದ ಸವಾಲು, ಸಂಕಷ್ಟಗಳನ್ನು ತಕ್ಕ ಭಾಷೆಯಲ್ಲಿ ಎದುರಿಸುತ್ತಾನೆ &#8221; ಎನ್ನುವ ಪಿ. ಲಂಕೇಶರ ಮಾತಿನಂತೆ, ಈ ಸಂಕಲನವೂ ಎಲ್ಲವನ್ನು ಒಂದೇ ಉಸಿರಲ್ಲಿ ಹೇಳಿಬಿಡುವ ವಾಚಾಳಿತನವಿಲ್ಲ. ಇಲ್ಲಿನ ಮೌನಕ್ಕೆ ಭಿನ್ನ ಅರ್ಥಗಳಿವೆ ಎಂಬುದಕ್ಕೆ ಹಲವು ಉದಾಹರಣೆಗಳಿವೆ.<br>&#8216;ಬೋಧೇಶ್ವರ&#8217; ಕತೆಯಲ್ಲಿ ಇರುವ ಉಳ್ಳವರ ಸಿನಿಕತನಗಳು, ಮತ್ತು ಅಸಹಾಯಕರ ಬದುಕಿನ ಭವಣೆಗಳು ನೇರವಾಗಿ ಮುಖಾಮುಖಿಯಾದರೂ ಕೂಡ ಕಾಳಗಕ್ಕೆ ಇಳಿಯಲಾರದು. ಗಾಂಧಿ ತತ್ವದ ಗಂಧವಿದ್ದರೂ, ಹಿಂಸೆಯ ಕ್ರೌರ್ಯದ ವಾಸನೆಯೂ ಅಲ್ಲಲ್ಲಿ ಉಸಿರುಗಟ್ಟಿಸುವಂತೆ ಇಲ್ಲಿ ಕಾಣಸಿಗುತ್ತದೆ. ಇದೇ ಬಗೆಯ ಸಣ್ಣ ಎಳೆ &#8216;ಜವಾನ್ ರೊಡ್&#8217;ನಲ್ಲೂ ಗಮನಿಸಬಹುದು. ಇನ್ನೂ ಬದುಕಿನ ತುಮುಲಗಳನ್ನೆ ಕೇಂದ್ರವಾಗಿಸಿಕೊಂಡ &#8216;ಒಂದು ಹಾಡಿನ ದೂರ&#8217; ದ ಕತೆಯೂ ತೀರಾ ಆಪ್ತವಾಗಿ ಉಳಿದು ಬಿಡುತ್ತದೆ. ಮಗಳ ಬದುಕಿನ ಅಭದ್ರತೆಯ ಭಯ ಮತ್ತು ಕಾಳಜಿಯು 120 ಕರೆ ಮಾಡುವಷ್ಟು ಗಾಬರಿ ಸೃಷ್ಟಿಸುವ ತಾಯಿಯ ಸ್ಥಿತಿಯೊಂದೆಡೆಯಾದರೆ, ದಾರಿ ತಪ್ಪಿದವಳಿಗೆ ಸರಿ ದಾರಿ ತೋರಿಸುವ ಹೆಂಗಸೊಬ್ಬಳ ಅಂತರ್ಕಾಳಜಿ ಮತ್ತೊಂದೆಡೆ. ಕಾಡ ಹಾದಿಯಲ್ಲಿ ಚಲಿಸುವ ಹಾಡುಗಾರಿಕೆ ಮತ್ತವಳ ಬದುಕಿನಲ್ಲಿ ಉಂಟಾಗಬಹುದಾದ ಅಪಘಾತ ಎಲ್ಲವೂ ಒಂದು ವಿಷಮಸ್ಥಿತಿಯನ್ನು ತಲುಪಿಸುತ್ತದೇನೊ ಎನ್ನುವಷ್ಟರಲ್ಲಿ ಕತೆ ಮತ್ತೊಂದು ತಿರುವು ಪಡೆದುಕೊಳ್ಳುತ್ತದೆ. ಬಹುಶಃ ಕತೆ ಗೆದ್ದಿದೆ ಈ ಹಂತದಲ್ಲಿ ಎಂದು ಕಾಣುತ್ತದೆ!</p>



<p>&nbsp;&nbsp;&nbsp; ಇನ್ನೂ &#8216;ಕೆ. ಪಿ ಉಮ್ಮರ್&#8217; , &#8216;ಸಿಂಡ್ರೆಲ್ಲ&#8217; ಮತ್ತು &#8216;ನಗರದ ಕೋಗಿಲೆ&#8217; ಯಂತ ಕತೆಗಳ ಕಥಾವಸ್ತುವೆ ಬಹಳ ಸೂಕ್ಷ್ಮವಾದದ್ದು. ಬದುಕಿನ ಅನಗತ್ಯ ಭಾವಜಂಜಾಟ ಮತ್ತು ಅನುಮಾನ ಹಾಗೂ ಸಾಂಗತ್ಯದ ಕಿರಿಕಿರಿಗಳು ಅದೆಷ್ಟು ಬದುಕಿನ ಸಣ್ಣ ಸುಖಗಳಿಗೂ ಕಾಮಲೆ ಅಂಟಿಸಬಲ್ಲವು ಎಂಬುದಕ್ಕೆ ಇವು ಒಳ್ಳೆಯ ನಿದರ್ಶನಗಳು. ಇವುಗಳಿಂದ ಬದುಕುವುದನ್ನು ಕಲಿಯದೇ ಹೋದರೆ, ಬದುಕು ಪ್ರಪಾತಕ್ಕೆ ಜಿಗಿಯಲು ತಯಾರಾಗಬೇಕಾಗುತ್ತದೆ. ಎಲ್ಲಕ್ಕಿಂತಲೂ ಭಿನ್ನವಾಗಿ &#8216;ತಾಜ್ ಮಹಲ್ಲಿನ ಖೈದಿಗಳು&#8217; ನಮ್ಮೆದುರು ನಿಲ್ಲುತ್ತದೆ. ಮಮ್ತಾಜ್ ಮತ್ತು ಷಹಜಾನ್ ರ ಸಂಸಾರದ ಚಡಪಡಿಕೆಗಳು ಸಾಮಾನ್ಯರಿಗೆ ವಿಶೇಷ ಆಸಕ್ತಿ ಮೂಡಿಸಬಲ್ಲದು. ನಮಗರಿವಿಲ್ಲದೆಯೇ ಚಲನಶೀಲ ಬದುಕು ಎಲ್ಲೋ ಬಂಧಿಯಾಗಿದೆ ಎಂಬ ಅರಿವು ಮೂಡುವ ಮೊದಲೆ ಬದುಕು ನಿಂತ್ತು ಬಿಡುತ್ತದೆ. ಇಂಥ ಲೋಕ ಸತ್ಯಗಳ ಸಂಗ್ರಹವಾಗಿ ಇಲ್ಲಿನ ಕಥೆಗಳು ಕಾಣುತ್ತವೆ.</p>



<p>&nbsp;&nbsp;&nbsp;&nbsp;&nbsp;&nbsp;&nbsp;&nbsp; ಕೆಲವು ಕತೆಗಳಲ್ಲಿ ಆಧ್ಯಾತ್ಮ ಸ್ಥಾಯಿ ಭಾವವಾದರೆ, ಪ್ರೀತಿ ಸಂಚಾರಿ ಭಾವವಾಗಿದೆ. ಇದೊಂದು ಬೇರ್ಪಡಿಸಲು ಅಸಾಧ್ಯವಾಗಬಹುದಾದ ಪರಿಕಲ್ಪನೆಗಳ ಸಮ್ಮಿಲನ. ಧಾರ್ಮಿಕ ಧಾಷ್ಟ್ಯದಿಂದ ಪಾರಾಗಬಲ್ಲ ಆಧ್ಯಾತ್ಮದ ಹಾದಿಯೊಂದು ಕತೆಗಳಲ್ಲಿ ಕಂಡಿದ್ದೆ ಆದರೆ ಅದೊಂದು ಮನುಷ್ಯ ಪ್ರಜ್ಞೆಯ ಕೃತಿಯಾಗಬಲ್ಲದು. ಬಹಳ ಮುಖ್ಯವಾಗಿ ಅನುವಾದದ ಭಾಷೆ ಸಹಜವೆಂಬಂತೆ ರೂಪುಗೊಂಡಿದೆ. ಕಾವ್ಯದ ರೂಪಕಾತ್ಮಕ ಭಾಷಾ ಶೈಲಿಯೂ ಓದುಗರನ್ನು ನಿಬ್ಬೆರಗಾಗಿಸದೇ ಇರದು. ಇಂಥ ಕೃತಿಯನ್ನು ಸುನೈಪ್ ಅವರು ಕನ್ನಡೀಕರಿಸಿದ್ದೆ ಕನ್ನಡ ಸಾಹಿತ್ಯಲೋಕಕ್ಕೊಂದು ಸಂಭ್ರಮದ ಸಂಕೇತವೆಂದೇ ಭಾವಿಸುತ್ತೇನೆ.</p>



<p>&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp; &#8211; ಚಾಂದ್ ಪಾಷ ಎನ್ ಎಸ್ ಬೆಂಗಳೂರು</p>
]]></content:encoded>
					
		
		
			</item>
	</channel>
</rss>
