<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Boycott Modhi &#8211; Peepal Media</title>
	<atom:link href="https://peepalmedia.com/tag/boycott-modhi/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 17 Oct 2024 08:50:53 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Boycott Modhi &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ನಮೋ ಕುರ್ಚಿಗಂಟಿದ ಫೆವಿಕಾಲ್‌ ನಂಟು (ರಾಜಕೀಯ ವಿಡಂಬನಾ ಬರಹ)</title>
		<link>https://peepalmedia.com/namo-churghantida-fevikal-nantu-political-satire/</link>
		
		<dc:creator><![CDATA[Peepal Media]]></dc:creator>
		<pubDate>Thu, 17 Oct 2024 08:50:52 +0000</pubDate>
				<category><![CDATA[ಅಂಕಣ]]></category>
		<category><![CDATA[bjp]]></category>
		<category><![CDATA[Boycott Modhi]]></category>
		<category><![CDATA[india]]></category>
		<category><![CDATA[karnataka]]></category>
		<category><![CDATA[modhiji]]></category>
		<category><![CDATA[modi]]></category>
		<category><![CDATA[narendra mdi]]></category>
		<category><![CDATA[Narendra modhi road show]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Satire]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=47386</guid>

					<description><![CDATA[“ಮೂರು ಬಿಟ್ಟವನು ಊರಿಗೆ…ಅಲ್ಲ…ಜಗತ್ತಿಗೆ ದೊಡ್ಡವನು” ಹತಾಶೆಯಿಂದ ಮಾ.ಕೃ.ಕುಟೀರದ ಪುರೋಹಿತ ನೆಲಕ್ಕೆ ಒದ್ದು ಹೊರಟಾಗ ಹೇಳಿದ ಮಾತು ನಮೋ ಸಾಮ್ರಾಟನ ಕಿವಿಯಲ್ಲಿ ಪ್ರತಿಧ್ವನಿಸಿ ಮೈ ಕಂಪಿಸಿ ಪುಳಕಗೊಂಡಿತು. ಹೆಂಡತಿ ಬಿಟ್ಟೆ. ಮನೆ ಬಿಟ್ಟೆ. ದುಡಿಮೆ ಬಿಟ್ಟೆ. ಹೌದು…ದೇಶಕ್ಕಾಗಿ ಮೂರು ಬಿಟ್ಟೆ. ಕೊನೆಗೂ ತನ್ನನ್ನು ಜಗತ್ತಿಗೆ ದೊಡ್ಡವನು &#8211; ವಿಶ್ವಗುರು ಎಂದು ಪುರೋಹಿತ ಒಪ್ಪಿಕೊಂಡನೆಂದು ನಮೋ ಗಡ್ಡ ನೀವುತ್ತ ಸಂಪ್ರೀತನಾದ. ಮೂಲೆಯಲ್ಲಿ ಕೈಕಟ್ಟಿ ನಿಂತು ಈರ್ವರ ಸಂಭಾಷಣೆಯನ್ನು ಆಲಿಸುತ್ತಿದ್ದ ಅ.ಕುತಂತ್ರಿ ಮಂತ್ರಿ ಹಣೆ ಚಚ್ಚಿಕೊಂಡ. &#160;ಅಷ್ಟವಿಧಾರ್ಚನೆ ಮಾಡಿ ಮುಖಕ್ಕೆ ಮಂಗಳಾರತಿ [&#8230;]]]></description>
										<content:encoded><![CDATA[
<p>“ಮೂರು ಬಿಟ್ಟವನು ಊರಿಗೆ…ಅಲ್ಲ…ಜಗತ್ತಿಗೆ ದೊಡ್ಡವನು”</p>



<p>ಹತಾಶೆಯಿಂದ ಮಾ.ಕೃ.ಕುಟೀರದ ಪುರೋಹಿತ ನೆಲಕ್ಕೆ ಒದ್ದು ಹೊರಟಾಗ ಹೇಳಿದ ಮಾತು ನಮೋ ಸಾಮ್ರಾಟನ ಕಿವಿಯಲ್ಲಿ ಪ್ರತಿಧ್ವನಿಸಿ ಮೈ ಕಂಪಿಸಿ ಪುಳಕಗೊಂಡಿತು. ಹೆಂಡತಿ ಬಿಟ್ಟೆ. ಮನೆ ಬಿಟ್ಟೆ. ದುಡಿಮೆ ಬಿಟ್ಟೆ. ಹೌದು…ದೇಶಕ್ಕಾಗಿ ಮೂರು ಬಿಟ್ಟೆ. ಕೊನೆಗೂ ತನ್ನನ್ನು ಜಗತ್ತಿಗೆ ದೊಡ್ಡವನು &#8211; ವಿಶ್ವಗುರು ಎಂದು ಪುರೋಹಿತ ಒಪ್ಪಿಕೊಂಡನೆಂದು ನಮೋ ಗಡ್ಡ ನೀವುತ್ತ ಸಂಪ್ರೀತನಾದ. ಮೂಲೆಯಲ್ಲಿ ಕೈಕಟ್ಟಿ ನಿಂತು ಈರ್ವರ ಸಂಭಾಷಣೆಯನ್ನು ಆಲಿಸುತ್ತಿದ್ದ ಅ.ಕುತಂತ್ರಿ ಮಂತ್ರಿ ಹಣೆ ಚಚ್ಚಿಕೊಂಡ. &nbsp;ಅಷ್ಟವಿಧಾರ್ಚನೆ ಮಾಡಿ ಮುಖಕ್ಕೆ ಮಂಗಳಾರತಿ ಎತ್ತಿದರೂ ಅದನ್ನೇ ಹೊಗಳಿಕೆ ಎಂದು ಸಂಭ್ರಮಿಸುವ ನಮೋ ಮೂರ್ಖತನಕ್ಕೆ ಮುಖ ಕಿವಿಚಿಕೊಂಡ. ಹಿನ್ನೆಲೆಯಲ್ಲಿ ʼನಗುವುದೋ…ಅಳುವುದೋ…ʼ ಎಂಬ ಪ್ಯಾಥೊ ಸಾಂಗ್‌ಕೇಳಿಬರುತ್ತಿತ್ತು.</p>



<p>ಆ ದಿನ ಬೆಳ್ಳಂಬೆಳಗ್ಗೆ ಅ.ಕು.ಮಂತ್ರಿ ಮತ್ತು ಕಮಲೀ ಪಡೆ ಮುಖ್ಯಸ್ಥ ಕಪಿ ದಡ್ಡನನ್ನು ಬರ ಹೇಳಿದ ಸಾಮ್ರಾಟ ನಮೋ, ಮಾಯಾದರ್ಪಣದಲ್ಲಿ ತನ್ನ ಫಾರಿನ್‌ಟೂರಿನ ಶೂಟಿಂಗನ್ನು ರೀವೈಂಡ್‌ಮಾಡುತ್ತ, ಡಯಾಸ್ಪೊರದಲ್ಲಿ ಅನಿವಾಸಿ ದೇಶಭಕ್ತರು ಭಜನೆ ಮಾಡುವುದನ್ನು ತೋರಿ ಆನಂದದಲ್ಲಿ ಮುಳುಗಿದ್ದ. ನಮೋವನ್ನು ಮೆಚ್ಚಿಸಲು ಕಪಿ ದಡ್ಡ ಆಗಾಗ್ಗೆ ಎದ್ದು “ಓಂ ನಮೋ…ಓಂ ನಮೋ” ಎನ್ನುತ್ತ ತಾಳ ಹಾಕಿ ಕುಣಿಯುವುದು ಕುತಂತ್ರಿಗೆ ಕಿರಿಕಿರಿಯುಂಟು ಮಾಡುತ್ತಿತ್ತು. ಆದರೂ, ದಡ್ಡನಿಗೆ ಉಗಿಯೋಕು ಆಗದೆ ಉಗುಳನ್ನು ನುಂಗೋಕು ಆಗದೇ &nbsp;ಕುಳಿತಲ್ಲಿಯೇ ಚಡಪಡಿಸಿದ.</p>



<p>ಅಷ್ಟರಲ್ಲಿ &#8211; ಮಾ.ಕೃ.ಕುಟೀರದ ಪೂಜಾರಿ ಗಣವೇಶಧಾರಿಯಾಗಿ ನೆಲಕ್ಕೆ ಕೋಲು ಬಡಿಯುತ್ತ “ಆಲ್‌ಇಸ್‌ನಾಟ್‌ವೆಲ್”‌ಎಂದು ಕೂಗುತ್ತ ಅಂತಃಪುರದತ್ತಲೇ ಬರುವುದನ್ನು ಕುತಂತ್ರಿ ಕಿಟಕಿಯಲ್ಲಿ ಗಮನಿಸಿದ. ಎಷ್ಟು ಬಾರಿ ಹೇಳಿ ಕಳಿಸಿದರೂ ಕುಟೀರದ ಕಡೆ ತಲೆ ಹಾಕದಿದ್ದಕ್ಕೆ ರೋಸಿ ಹೋದ ಪುರೋಹಿತ, ಕ್ಯಾತೆ ತೆಗೆಯಲೆಂದೇ ಅರಮನೆಗೆ ಬರುತ್ತಿರುವುದನ್ನು ಊಹಿಸಿದ ಕುತಂತ್ರಿ ಕಪಿ ದಡ್ಡನಿಗೆ ಕಣ್ಸನ್ನೆ ಮಾಡಿದ. ಅವನು ಹೆದರುತ್ತಲೇ ಓಡಿ ಹೋಗಿ ಮಂಚದ ಕೆಳಗೆ ಅವಿತುಕೊಂಡ.</p>



<p>ಕಾವಲಿಗಿದ್ದ ರಾಜಭಟರನ್ನು ದೂಡಿಕೊಂಡು ಅಂತಃಪುರಕ್ಕೆ ಸೀದಾ ನುಗ್ಗಿದ ಪೂಜಾರಿ&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp; ಕುರ್ಚಿಯೊಂದನ್ನು ಎಳೆದು ನಮೋನ ಎದುರಿಗೆ ಕಾಲು ಮೇಲಾಕಿ ಕುಳಿತು ಬುಸುಗುಟ್ಟ ತೊಡಗಿದ. ಆತ್ಮರತಿಯ ಸಂತೋಷದ ಅಲೆಗಳಲ್ಲಿ ತೇಲಾಡಿ, ಓಲಾಡುತ್ತಿದ್ದ ನಮೋ ದೊಪ್ಪೆಂದು ನೆಲಕ್ಕೆ ಬಿದ್ದ.</p>



<p>“ಏನ್…ಪುರೋಹಿತರೇ? ಸುದ್ದಿ ಕೊಡದೇ ಬಂದಿದ್ದೀರ? ಕುಟೀರದಲ್ಲಿ ಎಲ್ಲರೂ ಸೌಖ್ಯವೇ?” ಎಂದು ನಮೋ ಕೇಳಿದ್ದೇ ತಡ “ನಿನ್ನ ಸೌಖ್ಯ ನೆಗೆದುಬಿತ್ತು. ಎಲ್ಲಿ? ಆ ಕಪಿ…ಆ ದಡ್ಡ…ಎಷ್ಟು ಸರ್ತಿ ಹೇಳಿ ಕಳಿಸೋದು. ಕುಟೀರಕ್ಕೆ ಅಗೌರವ ತೋರುವುದೇ? ನಂಗೆ ಗೊತ್ತು. ಎಲ್ಲವೂ ನಿಮ್ಮಗಳದೇ ಚಿತಾವಣೆ” ಎಂದ ಕಣ್ಣಲ್ಲಿ ಕೆಂಡ ಕಾರಿದ. ವಿಷಯ ತನ್ನ ಬುಡಕ್ಕೇ ಬರುತ್ತಿರುವುದನ್ನು ಗಮನಿಸಿದ ಕುತಂತ್ರಿ ಮಂತ್ರಿ, ದೂರ ಹೋಗಿ ಮೂಲೆ ಹಿಡಿದು ಕೈ ಕಟ್ಟಿಕೊಂಡು ವಿನಮ್ರತೆಯಿಂದ ನಿಂತ.</p>



<p>“ಪುರೋಹಿತರೇ…ವಿಷಯ ಏನೆಂದು ತಿಳಿಸಬಾರದೇ? ಕುಟೀರದ ವ್ಯವಹಾರದಲ್ಲಿ ನಾವ್ಯಾಕೆ ಮೂಗು ತೂರಿಸೋಣ?”</p>



<p>“ನಿಮ್ಮ ನಟನಾ ಕೌಶಲ್ಯವನ್ನು ಸಗಣಿ ಭಕ್ತರ ಮುಂದಿಡಿ. ನನ್ನತ್ರ ನವರಂಗಿ ಆಟ ಬೇಡ. ಅವಧಿ ಮುಗಿದ ಕೂಡಲೇ ಕುರ್ಚಿ ತಂದು ಕುಟೀರಕ್ಕೆ ಒಪ್ಪಿಸಬೇಕು. ಅದು ಕುಟೀರದ ನಿಯಮ. ಆ ದಡ್ಡ ಕುರ್ಚಿಗೇ ಫೆವಿಕಾಲ್‌ಹಾಕಿ ಕುಂತಿದ್ದಾನೆ. ಹೇಳಿ ಕಳಿಸಿದರೆ ಬರೋ ಸೌಜನ್ಯವಿಲ್ಲ!”</p>



<p>“ಅಯ್ಯೋ…ಒಂದೆರೆಡು ತಿಂಗಳು ತಡ ಆದ್ರೆ ಆಕಾಶ ಕಳಚಿ ಬೀಳುತ್ತಾ? ಇಷ್ಟು ವರ್ಷ ಅಂಟಿಕೊಂಡಿರೊ ಫೆಲಿಕಾಲ್ನ ಬಿಡಿಸಬೇಡವೇ? ಅಧ್ಯಕ್ಷ ಕುರ್ಚಿನ ನಾನೇ ಖುದ್ದಾಗಿ ಮೆರವಣಿಗೆಲೀ ತಂದು ಕುಟೀರಕ್ಕೆ ಒಪ್ಪಿಸುತ್ತೇನೆ. ಸಮಾಧಾನ ಮಾಡಿಕೊಳ್ಳಿ”</p>



<p>“ನಿಮ್ಮೆಲ್ಲಾ ಕುತಂತ್ರಗಳು ಗೊತ್ತಿರೋದೆ” ಎಂದು ಒಮ್ಮೆ ಅ.ಕು.ಮಂತ್ರಿಯ ಕಡೆ ದಿಟ್ಟಿಸಿ “ನಮೋ ಸಾಮ್ರಾಟ ದೇವರ ಎತ್ತರಕ್ಕೆ ಬೆಳೆದಿದ್ದಾನೆ. ಈಗ ಕಮಲಿಗಳಿಗೆ ಕುಟೀರದ ಹಂಗಿಲ್ಲಾಂತ ಆ ದಡ್ಡನ ಬಾಯಲ್ಲಿ ಹೇಳಿಸಿದ್ದು ಯಾರೂಂತ ನಂಗೊತ್ತು. ತಿಪ್ಪೆ ಸಾರಿಸೋ ಮಾತು ಬೇಡ. ಇದು ನಾನು…ಅಂದರೆ ಕುಟೀರದ ಪೂಜಾರಿಯಾಗಿ ಕೊಡುತ್ತಿರೋ ಕೊನೆ ವಾರ್ನಿಂಗ್!‌ನಿಮಗೂ ಎಪ್ಪತೈದು ಆಯ್ತು. ರೂಲ್ಸ್‌ಎಲ್ಲರಿಗೂ ಒಂದೇ. ಇರೋದು ಎರಡೇ ಅಪ್ಷನ್.‌ಒಂದೋ ಸಿಂಹಾಸನದ ವ್ಯಾಮೋಹ ಬಿಡಿ. ಇಲ್ಲಾ…ಅಧ್ಯಕ್ಷ ಕುರ್ಚಿನಾ ಕುಟೀರಕ್ಕೆ ತಂದೊಪ್ಪಿಸಿ”</p>



<p>ಸುತ್ತಿಬಳಸಿ ಇಂಡೈರೆಕ್ಟಾಗಿ ಸಿಂಹಾಸನಕ್ಕೆ ಕೈ ಹಾಕಿದ್ದರಿಂದ ನಮೋ ಒಮ್ಮೆಗೆ ಕಂಗಾಲಾದ. ಸಿಂಹಾಸನವಿಲ್ಲದ ಶೋಕಿಲಾಲ ಬದುಕು ಹೇಗೆ? ಫಾರಿನ್‌ಟೂರು ಹೊಡೆಯುತ್ತ, ಫೋಟೊ ಶೂಟಿಂಗಂತ ಮೋಜು ಮಸ್ತಿ ಮಾಡೋದು ಹೇಗೆ? ದಶಕಗಳಿಂದ ಸಾಕಿದ ಅಖಂಡ ಲಂಡಭಕ್ತರ ಗತಿ ಏನು? ಕಣ್ಣಿಗೆ ಕತ್ತಲು ಕಟ್ಟಿದಂತಾಗಿ ತಳ ಮುಟ್ಟಿ ನೋಡಿಕೊಂಡ. ಫೆಲಿಕಾಲ್‌ಅಂಟು ಗಟ್ಟಿಯಾಗಿದ್ದು ನಿಟ್ಟುಸಿರು ಬಿಟ್ಟ. ಬೌನ್ಸ್‌ಬಾಲ್‌ಹಾಕಿ ಪ್ರಯೋಜನವಿಲ್ಲವೆಂದು ಗೂಗ್ಲೀ ಹಾಕಲು ಯೋಚಿಸಿದ.</p>



<p>“ಸ್ವಲ್ಪ ಸಮಯ ಕೊಡಿ. ಎಲ್ಲಾ ಸರಿ ಮಾಡ್ತೇನೆ. ಅದಿರಲಿ. ಆಶ್ರಮವಾಸಿಗಳಿಗೆ, ಯುವಕರ ತಲೇಲಿ &nbsp;&nbsp;&nbsp;ಸನಾತನ ಸಗಣಿ ತುಂಬೋರಿಗೆ, ಮಂದಿ ಮಧ್ಯೆ ಬೆಂಕಿ ಹಚ್ಚೋರಿಗೆ ಕೊಡಲು ದುಡ್ಡು ಸಾಕಾಗ್ತಿಲ್ಲ ಅಂತ ಕೇಳಿದೆ. ವ್ಯವಸ್ಥೆ ಮಾಡ್ತೀನಿ. ಚಿಂತೆ ಮಾಡ್ಬೇಡಿ” &nbsp;</p>



<p>“ಏನೂಂತ…ಮಾತಾಡ್ತಿದ್ದೀಯ. ಕೂತ ಸಿಂಹಾಸನಕ್ಕಾದರೂ ಗೌರವ ಬೇಡವೇ? ಅವರೆಲ್ಲ ದೇಶ ರಕ್ಷಣೆ, ಧರ್ಮ ರಕ್ಷಣೆ ಮಾಡ್ತಿರೋದು. ಅದು ನಿಂಗೆ ಗೊತ್ತಿರೋದೆ ಅಲ್ವಾ? ನಾಲಿಗೇನಾ ಇಷ್ಟು ಹಗುರ ಬಿಡಬಾರದು. ಆಯ್ತು…ಬೇಗ ವ್ಯವಸ್ಥೆ ಮಾಡು. ಆದರೆ, ಆಶ್ರಮವಾಸಿಗಳನ್ನು ಟುರುಪೀಸ್‌ಟ್ರೋಲ್ಗಳಿಗೆ ಹೋಲಿಸಿ ದುಡ್ಡು ಕೊಡೋವಾಗ ಕಂಜೂಸಿತನ ಬೇಡ. ಖರ್ಚು ಬಹಳಷ್ಟಿದೆ. ಹಾಗೆ ದಡ್ಡನ ಕುರ್ಚಿ ಬೇಗ ಕಳಿಸು…ಇಲ್ಲಾಂದ್ರೆ ಸಿಂಹಾಸನ ಬಿಡು. ರಾಜನಾಗಲು ನಿನಗಿಂತ ಯೋಗ್ತೆ ಇರೋ ಪೂರ್ವಾಶ್ರಮದ ನಿವಾಸಿಗಳು ಬಹಳ ಮಂದಿ ಇದ್ದಾರೆ” ಎಂದು ಕುಳಿತಲ್ಲಿಂದ ಎದ್ದವನು “ಕುರ್ಚಿ ಮೇಲೆ ಕೂತಾಕ್ಷಣ ರಾಜ್ಯಭಾರ ಮಾಡೋ ಕ್ಯಪ್ಯಾಸಿಟಿ ಬಂದ್ಬಿಡುತ್ತ!   ಬುದ್ದಿ ಬೇಕು. ಖಾಲಿ ಡಬ್ಬದಿಂದ ಬರೀ ಸೌಂಡೇ ಬರೋದು. ಟೆಲಿಪ್ರಾಂಟರ್‌ಇಲ್ಲದೆ ನೆಟ್ಟಗೆ ಮೂರು ಮಾತು ಆಡೋಕೆ ಬಾರದ ಸಾಮ್ರಾಟ ಅಂತ ಜನ ಉಗಿತ್ತಿದ್ದಾರೆ. ಯಾವ ಲೋಕದಿಂದ ಉದುರಿದ ದೇವರು ಇವ್ನು…ಮೂರು ಬಿಟ್ಟವ….ಊರಿಗೆ…ಅಲ್ಲಾ ಜಗತ್ತಿಗೆ ದೊಡ್ಡವ” ಎಂದು ಗೊಣಗುತ್ತ ಅಲ್ಲಿಂದ ಹೊರಟ. </p>



<p>(ಸಶೇಷ)</p>



<ul class="wp-block-list">
<li><strong>ಚಂದ್ರಪ್ರಭ ಕಠಾರಿ</strong></li>
</ul>



<p><strong>cpkatari@yahoo</strong><strong>.com</strong></p>
]]></content:encoded>
					
		
		
			</item>
		<item>
		<title>ಫೊರೆನಿಕ್ಸ್ ಲ್ಯಾಬಲ್ಲಿ ಪತ್ತೆಯಾದ ಮೊಸಳೆ ಕಣ್ಣೀರು (ರಾಜಕೀಯ ವಿಡಂಬನೆ)</title>
		<link>https://peepalmedia.com/crocodile-tears-discovered-in-forensics-lab-political-satire/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 03 Sep 2024 11:43:00 +0000</pubDate>
				<category><![CDATA[ಅಂಕಣ]]></category>
		<category><![CDATA[bengalure]]></category>
		<category><![CDATA[bjp]]></category>
		<category><![CDATA[bjp dirty politics]]></category>
		<category><![CDATA[bjp govt]]></category>
		<category><![CDATA[Bjp IT cell]]></category>
		<category><![CDATA[bjp karnataka]]></category>
		<category><![CDATA[BJP leader]]></category>
		<category><![CDATA[BJP leader Gurtaj Bhullar wife]]></category>
		<category><![CDATA[Boycott Modhi]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[modhiji]]></category>
		<category><![CDATA[modi]]></category>
		<category><![CDATA[Narendra modhi road show]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Satire]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=44863</guid>

					<description><![CDATA[ತಣ್ಣಗೆ ಮಲಗಿದ್ದ ಕತ್ತಲನ್ನು ಸೀಳುತ್ತ ಸುದ್ದಿ ನಿಧಾನವಾಗಿ ಹರಡುತ್ತಿತ್ತು. ಆ ತಡರಾತ್ರಿ ಅಶರೀರವಾಣಿಯಾಗಿ ಕೇಳಿ ಬಂದ ಸುದ್ದಿಯಿಂದ ಆತಂಕಗೊಂಡ ಅಖಿಲ ಬ್ರಹ್ಮಾಂಡ ಅಂಡಾಂಡ ಪಿಂಡ ಲಂಡ ಭಕ್ತರು ತಂಡೋಪತಂಡವಾಗಿ, ಪ್ರಜೆಗಳ ತೆರಿಗೆಯ ಬೆವರಲ್ಲಿ ಕಟ್ಟಿದ ನಮೋನ ಐಷಾರಾಮಿ ಅರಮನೆಯತ್ತ ದೌಡಾಯಿಸಿದ್ದರು. ವಿಷಯವೇನೆಂದು ವಿಶದವಾಗಿ ಯಾರಿಗೂ ತಿಳಿದಿರಲಿಲ್ಲ. ಮುಂಜಾನೆ ಎದ್ದಾಗಿಂದ, ಮೂಲೆ ಸಂದಿಯಲ್ಲಿದ್ದ ನಮೋ ವಿರೋಧಿಗಳನ್ನು ಹುಡುಕಿ, ಮತ್ತವರು ಉಸಿರೆತ್ತದಂತೆ ತದುಕಲು ಇಡಿ, ಐಟಿ, ಸಿಬಿಐಗಳನ್ನು ಛೂ ಬಿಟ್ಟು ಸುಸ್ತಾಗಿ ಮಲಗಿದ್ದ ಅಪರಿಮಿತ ಕುತಂತ್ರಿ ಮಂತ್ರಿ ಕೂಡ ಸುದ್ದಿ [&#8230;]]]></description>
										<content:encoded><![CDATA[
<p>ತಣ್ಣಗೆ ಮಲಗಿದ್ದ ಕತ್ತಲನ್ನು ಸೀಳುತ್ತ ಸುದ್ದಿ ನಿಧಾನವಾಗಿ ಹರಡುತ್ತಿತ್ತು. ಆ ತಡರಾತ್ರಿ ಅಶರೀರವಾಣಿಯಾಗಿ ಕೇಳಿ ಬಂದ ಸುದ್ದಿಯಿಂದ ಆತಂಕಗೊಂಡ ಅಖಿಲ ಬ್ರಹ್ಮಾಂಡ ಅಂಡಾಂಡ ಪಿಂಡ ಲಂಡ ಭಕ್ತರು ತಂಡೋಪತಂಡವಾಗಿ, ಪ್ರಜೆಗಳ ತೆರಿಗೆಯ ಬೆವರಲ್ಲಿ ಕಟ್ಟಿದ ನಮೋನ ಐಷಾರಾಮಿ ಅರಮನೆಯತ್ತ ದೌಡಾಯಿಸಿದ್ದರು. ವಿಷಯವೇನೆಂದು ವಿಶದವಾಗಿ ಯಾರಿಗೂ ತಿಳಿದಿರಲಿಲ್ಲ. ಮುಂಜಾನೆ ಎದ್ದಾಗಿಂದ, ಮೂಲೆ ಸಂದಿಯಲ್ಲಿದ್ದ ನಮೋ ವಿರೋಧಿಗಳನ್ನು ಹುಡುಕಿ, ಮತ್ತವರು ಉಸಿರೆತ್ತದಂತೆ ತದುಕಲು ಇಡಿ, ಐಟಿ, ಸಿಬಿಐಗಳನ್ನು ಛೂ ಬಿಟ್ಟು ಸುಸ್ತಾಗಿ ಮಲಗಿದ್ದ ಅಪರಿಮಿತ ಕುತಂತ್ರಿ ಮಂತ್ರಿ ಕೂಡ ಸುದ್ದಿ ಕೇಳಿ ಗೊಣಗುತ್ತ ಅರೆನಿದ್ದೆಯಿಂದ ಎಚ್ಚೆತ್ತ. ನಮೋ ಗ್ರಹಚಾರವನ್ನು ಹಳಿಯುತ್ತ ಅರಮನೆಯತ್ತ ಹೆಜ್ಜೆ ಹಾಕಿದ.</p>



<p>ಇನ್ನೇನು ಅರಮನೆ ಬಂತು ಅನ್ನುವಷ್ಟರಲ್ಲಿ ಗಕ್ಕನೆ ನಿಂತ ಅಪರಿಮಿತ ಕುತಂತ್ರಿ ಆಕಾಶದತ್ತ ದಿಟ್ಟಿಸಿದ. ಫಳಫಳನೆ ಹೊಳೆವ ನಕ್ಷತ್ರಗಳು, ಚಂದ್ರನ ಬಿಟ್ಟರೆ ಎಲ್ಲೂ ಚಾದರದಷ್ಟು ಮೋಡಗಳು ಕಾಣಲಿಲ್ಲ. ಹಾಗಿದ್ದರೆ, ರಸ್ತೆಯೆಲ್ಲಾ ತೇವಗೊಂಡು ನೀರು ಹರಿದು ಬರುತ್ತಿರುವುದಾದರೂ ಎಲ್ಲಿಂದ? ಗಾಬರಿಯಿಂದ ಅರಮನೆ ಹೊಕ್ಕಾಗ ಅಲ್ಲಿಯ ದೃಶ್ಯ ಕಂಡು ಗಕ್ಕನೆ ನಿಂತ. ನೆರೆದಿದ್ದ ನೂರಾರು ಲಂಡಭಕ್ತರ ರೋದನೆಯ ಕಣ್ಣೀರು ಹೊಳೆಯಾಗಿ ಹರಿದು ಬರುತ್ತಿತ್ತು.</p>



<p>ಹೆಜ್ಜೆ ಇರಿಸಲು ಜಾಗವಿಲ್ಲದಂತೆ ನೆರೆದಿದ್ದ ಭಕ್ತರ ಮಧ್ಯೆ ಇರುಕಿಸಿಕೊಂಡವನು ತಳ್ಳಾಡುತ್ತ ಅವರನ್ನು ದೂಡಿ ಕೊಂಡು ನಮೋ ಕೊಠಡಿಯತ್ತ ಬಂದ. ಅದಾಗಲೇ ಮಂತ್ರಿಗಳು, ಪೂರ್ವಾಶ್ರಮದ ಚಡ್ಡಿಧಾರಿಗಳು, ಗೋದಿ ಮಾಧ್ಯಮದ ಬಕೆಟ್ ಪತ್ರಕರ್ತರು &#8211; ಎಲ್ಲರೂ ಮ್ಲಾನವದನರಾಗಿ ನಿಂತದ್ದು ಕಂಡ ಅಪರಿಮಿತ ಕುತಂತ್ರಿಗೆ ಸುದ್ದಿ ತನಗೆ ತಡವಾಗಿ ಸಿಕ್ಕು ಕೊನೆಯವನಾಗಿ ಬಂದದ್ದಕ್ಕೆ ಮುಜುಗರವಾಯಿತು. ಏನು ನಡೆದಿದೆ? ಸಾಮ್ರಾಟನಿಗೆ ಏನಾದರೂ ವಿಪತ್ತು ಒದಗಿ ಬಂತೆ? ಏನೊಂದು ತಿಳಿಯದೆ ಕಮಲೀ ಮುಖಂಡ ಕಪಿ ದಡ್ಡನತ್ತ ಕಣ್ಸನ್ನೆಯಲ್ಲಿ ಕೇಳಿದರೆ ʼಎಲ್ಲಾ ಮುಗಿದು ಹೋದ ಹಾಗೆ!ʼ ಎನ್ನುವಂತೆ ಕೊಠಡಿಯತ್ತ ಜೋಲು ಮೋರೆ ಮಾಡಿದ. ಕೊಠಡಿಯ ಬಾಗಿಲ ಕೆಳಗಿನ ಸಂದಿಯಲ್ಲಿ ನೀರು ಹರಿದು ಬಂದು ಲಂಡಭಕ್ತರ ಕಣ್ಣೀರನ ಮುಖ್ಯವಾಹಿನಿಯಲ್ಲಿ ಸೇರುತ್ತಿತ್ತು.</p>



<p>ಮತ್ತಷ್ಟು ಗೊಂದಲಗೊಂಡ ಅಪರಿಮಿತ ಕುತಂತ್ರಿ, ಅಲ್ಲೇ ನಿಂತು ಕಣ್ಣೀರನ್ನು ಒರೆಸುತ್ತ ಕರ್ಚೀಫನ್ನು ಹಿಂಡುತ್ತಿದ್ದ ನಮೋ ಆಪ್ತಕಾರ್ಯದರ್ಶಿಗೆ “ಸಾಮ್ರಾಟರು ಎಲ್ಲಿ?” ಎಂದ.</p>



<p>“ವಿದೇಶಕ್ಕೆ ತೆರಳಿದ್ದ ನಮೋ ಮಹಾಸ್ವಾಮಿಗಳು ತಡರಾತ್ರಿ ಬಂದಾಗ ಬಹಳ ಚಿಂತೆಯಲ್ಲಿದ್ದಂತೆ ಕಂಡರು. ತುಟಿ ಎರಡು ಮಾಡದೆ ಬಿರುಗಾಳಿಯಂತೆ ಕೊಠಡಿ ಸೇರಿ ದಢಾರೆಂದು ಅಗುಳಿ ಹಾಕಿಕೊಂಡರು. ನಾನು ಮಾತಾಡಿಸುವ ಧೈರ್ಯ ಮಾಡಲಿಲ್ಲ. ಅರ್ಧತಾಸಿನ ನಂತರ “ಅಯ್ಯೋ!” ಎಂದು ಕೂಗಿದ ಹಾಗಾಯಿತು. ಎಷ್ಟು ಕೂಗಿದರೂ ಬಾಗಿಲು ತೆರೆಯಲಿಲ್ಲ. ಒಳಗಿನಿಂದ ಒಂದೇ ಸಮನೆ ನೀರು ಪ್ರವಾಹದಂತೆ ಹರಿದು ಬಂತು”</p>



<p>ಕಳೆದ ವರ್ಷ ಕೂಡ ಇಂಥದ್ದೇ ಪ್ರಸಂಗ ನಡೆದದ್ದು ಅ. ಕುತಂತ್ರಿಯ ನೆನಪಿಗೆ ಬಂತು. ʼಆಗ ಮಮ್ಮೀ…ಮಮ್ಮೀನ ನೋಡ್ಬೇಕು ಅಂತ ರಚ್ಚೆ ಹಿಡಿದಿದ್ದ. ಈಗ ಮಮ್ಮೀ ಇಲ್ಲ. ಮತ್ಯಾವ ಹೊಸ ನೌಟಂಕಿ ಶುರು ಮಾಡಿದ್ದಾನೊ! ಇತ್ತೀಚಿಗೆ ಮೆಥೆಡ್ ಆಕ್ಟಿಂಗ್ ಬೇರೆ ಪ್ರಾಕ್ಟಿಸ್ ಮಾಡ್ತಿದ್ದಾನೆʼ ಎಂದು ತಲೆ ಕೆರೆದುಕೊಂಡು, ಬಾಗಿಲನ್ನು ಒಡೆಯಲು ಕಾವಲುಗಾರರಿಗೆ ಹೇಳಿದ.</p>



<p>ಯಾರೂ ಒಳ ಬರದಂತೆ ಎಚ್ಚರಿಸಿ ತಾನೊಬ್ಬನೇ ರೂಮಿನೊಳಗೆ ಬಂದರೆ, ನಮೋ ಬಿಟ್ಟ ಕಣ್ಣು ಬಿಟ್ಟಂತೆ ಶೂನ್ಯದತ್ತ ದಿಟ್ಟಿಸುತ್ತ ಮಂಚದ ಮೇಲೆ ಕುಳಿತಿದ್ದ. ಮುಖದಲ್ಲಿ ದುಃಖ ಕೆರೆಯಂತೆ ನಿಂತಿತ್ತು. ಬಲಗಣ್ಣಿಂದ ಮಾತ್ರ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ʼಒಂದೇ ಕಣ್ಣಿನಿಂದ ಅಳು…ವಾಹ್! ಗ್ರೇಟ್ ಆಕ್ಟಿಂಗ್ʼ. ಯಾವುದಕ್ಕೂ ಇರಲಿ ಎಂದು ತನ್ನ ಮೊಬೈಲಲ್ಲಿ ಫೋಟೊ ಕ್ಲಿಕ್ಕಿಸಿದ. ಹಿನ್ನೆಲೆಯಲ್ಲಿ ಕಣ್ಣೀರಧಾರೆ…ಇದೇಕೆ…ಇದೇಕೆ…ಪ್ಯಾತೊ ಸಾಂಗ್ ಕೇಳಿಬರುತ್ತಿತ್ತು. “ಮಹಾಸ್ವಾಮಿಗಳೆ… ಏನಾಯಿತು? ಎಚ್ಚರಗೊಳ್ಳಿ” ಎಂದರೆ ನಮೋ ಅಲುಗಾಡದೆ ಶಿಲೆಯಾಗಿದ್ದ.</p>



<p>ಅ. ಕುತಂತ್ರಿ ಕೂಡಲೇ &#8211; ಆಪ್ತಕಾರ್ಯದರ್ಶಿ, ಕಪಿ ದಡ್ಡ, ಮಂತ್ರಿಮಂಡಲ, ಮಾ.ಕೃ.ಕುಟೀರದ ಪುರೋಹಿತ ಸೇರಿದಂತೆ ಎಲ್ಲಾ ಕೇಸರಿ ಪ್ರಮುಖರನ್ನು ಸೇರಿಸಿ ನಮೋ ಸಾಮ್ರಾಟರಿಗೆ ಆಗಿರುವ ಆಘಾತವನ್ನು ಅರಿಯಲು ತುರ್ತುಸಭೆಯನ್ನು ಕರೆದ. ಸಭೆಯಲ್ಲಿ ಕಳೆದೆರೆಡು ದಿನಗಳಿಂದ ನಮೋ ಸುತ್ತ ಆದ ಘಟನೆಗಳನ್ನು ಕೆದಕುತ್ತ ಶೋಧನೆ ನಡೆಯಿತು.</p>



<p>24&#215;7 – ನಮೋಗೆ ಸಕಲ ಇಷ್ಟಾರ್ಥ ಸೇವೆ ಸಲ್ಲಿಸುತ್ತ ಜೊತೆಗಿರುವ ಆಪ್ತಕಾರ್ಯದರ್ಶಿಯ ಅಭಿಪ್ರಾಯವನ್ನು ಮೊದಲು ಕೇಳಲಾಗಿ “ಬಾಲಕನಂತಿದ್ದ ರಾಗಾ ಈಗ ಬ್ಲಾಕ್ ಬೆಲ್ಟ್ ತೊಟ್ಟು, ತೊಡೆ ತಟ್ಟುತ್ತ ಅಗ್ನಿವೀರ್, ಶೇರ್ ಮಾರ್ಕೆಟ್ ಸ್ಕಾಂಡಲ್, ಪರೀಕ್ಷೆ ಪೇಪರ್ ಲೀಕ್, ಜಾತಿ ಜನಗಣತಿ..ಎಕ್ಸೆಟ್ರಾಂತ ಇತ್ತೀಚಿಗೆ ಎಸೆಯುವ ಸವಾಲುಗಳಿಗೆ ಕೌಂಟರ್ ಕೊಡಲಾಗದೆ ಮಹಾಸ್ವಾಮಿಗಳು ಕಂಗೆಟ್ಟಿದ್ದರು. ಅದೂ ಸಾಲದೂಂತ ತಮ್ಮದೇ ಕಮಲೀ ಸಭಾ ನಡಾವಳಿಗಳ ಬಗ್ಗೆ ಬಹಳ ಕಳವಳಗೊಂಡಿದ್ದರು. ತಾನು ಎತ್ತಿ ಆಡಿಸಿ, ಮುದ್ದಾಡಿ ಗದ್ದುಗೆ ಮೇಲೆ ಕೂರಿಸಿದ ಬುಲ್ಡ್ ಡೋಜರ್ ಭೋಗಿಬಾಬಾ, ಸಭೆಗಳಲ್ಲಿ ಎಲ್ಲರಂತೆ ಸಾಷ್ಟಾಂಗ ಬೀಳುವುದಿರಲಿ ಕನಿಷ್ಟ ನಮಸ್ಕರಿಸಿ ಗೌರವ ಕೊಡದೆ ಅಪಮಾನಿಸಿದ್ದು ಅವರನ್ನು ಚಿಂತೆಯ ಕೂಪಕ್ಕೆ ತಳ್ಳಿತ್ತು. ಮೊನ್ನೆ ಅವರ ಫ್ಯಾಷನ್ ಡಿಸೈನರ್ ಅಳತೆ ತೆಗೆದುಕೊಳ್ಳುವಾಗ ಐವತ್ತಾರು ಇದ್ದ ಎದೆ ಗಾತ್ರ ಇಂಚಿನ ಪಟ್ಟಿಯಲ್ಲಿ ಮೂವತ್ತಾರಕ್ಕೆ ಇಳಿದದ್ದನ್ನು ನೋಡಿ ಅವರು ಕುಸಿದು ಹೋಗಿದ್ದರು” ಎಂದು ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದ.</p>



<p>“ಅದು ಇರಬಹುದು. ಆದರೆ…” ಎಂದು ಮಧ್ಯೆ ಬಾಯಿ ಹಾಕಿದ ವಿದೇಶಾಂಗ ಮಂತ್ರಿ “ನೆನ್ನೆ ರೂಸ್ ಗೆ ಹೋಗಿದ್ದಾಗ ಎರಡೂ ದೇಶದ ಪ್ರಧಾನಿಗಳನ್ನು ಕೂಡಿಸಿ ʼಫಾರಿನ್ ಮಿತ್ರೋ…ಇದು ಕಲಹಕ್ಕೆ ಕಾಲವಲ್ಲ. ಯುದ್ದ ನಿಲ್ಲಿಸಿʼ ಎಂದು ಶಾಂತಿಯ ಮಂತ್ರ ಜಪಿಸಿದ ವಿಶ್ವಗುರುವಿನ ಮಾತಿಗೆ ಅವರುಗಳು ಮೊದಲಿಗೆ ತಲೆಯಾಡಿಸಿ, ಕೈ ಕುಲುಕಿ ಹಗ್ ಮಾಡಿದ್ದರು. ಆದರೆ…ಅನಿವಾಸಿಗಳನ್ನು ಸ್ಟೇಡಿಯಮ್ಮಲ್ಲಿ ಗುಡ್ಡೇ ಹಾಕಿ, ದೇಶದಲ್ಲಿ ಆಗುತ್ತಿರುವ ಬುಲೆಟ್ ಟ್ರೈನ್ ಸ್ಪೀಡಿನ ಡೆವಲಪ್ ಮೆಂಟ್ ಬಗ್ಗೆ ಬುರುಡೆ ಬಿಡುತ್ತಿರಬೇಕಾದರೆ ಬಾಂಬೊಂದು ನಮೋ ಸಾಹೇಬರ ಅಡಿಗೆ ಬಂದು ಬಿತ್ತು. ಎದ್ದೇನೊ ಬಿದ್ದೇನೆಂದು ಪುಷ್ಪಕ ವಿಮಾನ ಹತ್ತಿ ವಾಪಸ್ಸು ಬರೋವಾಗ ನಮೋ ಸಾಹೇಬರು ಭಯದಿಂದ ನಡುಗುತ್ತಿದ್ದರು. ಅದೂ ಒಂದು ಕಾರಣ ಇರಬಹುದು” ಎಂದದ್ದು ಅ.ಕುತಂತ್ರಿಗೆ ಸರಿಬರಲಿಲ್ಲ. “ಹು…ಹು…ಇಲ್ಲ..ನಮೋ ಸಾಹೇಬರು ರಾಕೆಟ್ಟುಗಳನ್ನು ಕೈಯಲ್ಲೇ ಹಿಡಿದು ಹಾರಿಸುವ ಎಂಟೆದೆ ಅಲ್ಲ…ಹದಿನೆಂಟೆದೆ ಭಂಟ. ಹೆದರಿಕೊಂಡು ಬಂದಿರಲಾರರು. ತಾನಿಲ್ಲದ ಟೈಮಲ್ಲಿ ವೈರಿಗಳು ದೇಶವನ್ನು ಒಡೆದು ಹಾಕುತ್ತಾರೆಂದು ಬೇಗ ಬಂದಿದ್ದಾರೆ…ಅಷ್ಟೇ” ಎಂದು ಕಿತ್ತು ಹೋದ ನಮೋ ಧೈರ್ಯಕ್ಕೆ ಒಂದಷ್ಟು ತೇಪೆ ಮೆತ್ತಿದ.</p>



<p>ಅಷ್ಟರಲ್ಲಿ ಕಪಿ ದಡ್ಡ “ಕುತಂತ್ರಿಗಳೇ…ಸಾಮ್ರಾಟರ ಮನೋ ವೇದನೆಗೆ ನಾನೂ ಕಾರಣ ಇರಬಹುದು. ಆ ಪೊಮೆರಿಯನ್ ತಳಿಯ ಮಂಗನಾ ಶೇಪೌಟನ್ನು ಕಮಲೀ ಪಕ್ಷಕ್ಕೆ ಸೇರಿಸಿ ತಪ್ಪು ಮಾಡಿದೆ. ಎಷ್ಟು ಹೇಳಿದರೂ ನಾಬಾಲಿಕ್ ಬುದ್ದಿಯ ಅದಕ್ಕೆ ಅರ್ಥವಾಗುತ್ತಿಲ್ಲ. ಚಳುವಳಿ ಮಾಡುತ್ತಿರುವ ರೈತರು ಟೆರರಿಷ್ಟ್ ಗಳು. ಅಲ್ಲಿ ರೇಪ್ ಗಳು ಆಗುತ್ತಿವೆ. ಮರ್ಡರ್ ಮಾಡಿ ಡೆಡ್ ಬಾಡಿಗಳನ್ನು ನೇತು ಹಾಕಿದ್ದಾರೆ…ಹೀಗೆ ತಲೆಬುಡ ಇಲ್ಲದೆ ಮಾತಾಡುತ್ತಿದ್ದಾಳೆ. ಜನರು, ವಿರೋಧಿಗಳು ಇವೆಲ್ಲ ನಮೋ ಹೇಳಿಕೊಟ್ಟ ಗಿಳಿಮಾತುಗಳು ಎಂದು ವೃಥಾ ಸಾಮ್ರಾಟರನ್ನು ಛೇಡಿಸುತ್ತಿದ್ದಾರೆ. ಅಕಟಕಟಾ…” ಎಂದು ಗದ್ಗದಿತನಾದ.</p>



<p>ಎಷ್ಟು ಚರ್ಚಿಸಿದರೂ ನಮೋ ರೋದನೆಯ ಮೂಲ ಯಾವುದೆಂದು ತಿಳಿಯಲು ಸಭೆ ಸೋತಾಗ ಅ.ಕುತಂತ್ರಿ ಫೋರೆನಿಕ್ಸ್ ಲ್ಯಾಬ್ ತಂತ್ರಜ್ಞರಿಗೆ ಬರಹೇಳಿದ. ಇಡೀ ದೇಹ ಮುಚ್ಚುವಂತೆ ಪಿಪಿಇ ತೊಟ್ಟು ಬಂದ ಪರಿಣಿತರು ಸ್ಟ್ಯಾಚು ಆಗಿದ್ದ ನಮೋ ಕಣ್ಣೀರಿನ ಸ್ಯಾಂಪಲ್ಲನ್ನು ಸಂಗ್ರಹಿಸಿ ಅ.ಕುತಂತ್ರಿಗೆ ವಂದಿಸಿ ಹೊರಟಾಗ, “ವರ್ಷಗಟ್ಟಲೆ ರಿಸರ್ಚ್ ಮಾಡುತ್ತ ಕೂರಬೇಡಿ. ಬೇಗ ರಿಸಲ್ಟ್ ಬೇಕು. ಇದು ದೇಶದ ಅಳಿವು ಉಳಿವಿನ ಪ್ರಶ್ನೆ” ಎಂದು ಗುಟುರು ಹಾಕಿದ. ಅಷ್ಟರಲ್ಲಿ ಕಾವಲುಗಾರ ಬಂದು ಆಪ್ತಕಾರ್ಯದರ್ಶಿಯ ಕಿವಿಗೆ ಉಸಿರಿದ್ದನ್ನು, ಅವನು ಅ.ಕುತಂತ್ರಿಯ ಕಿವಿಗೆ ಸುರಿದ.</p>



<p>ನಮೋ ಸಂಕಟದಲ್ಲಿ ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದ. “ಏನದು ಹೇಳಿ. ನಿಮ್ಮ ಬೇಗುದಿ ಕಡಿಮೆಯಾಗುತ್ತೆ” ಎಂದು ಅ.ಕುತಂತ್ರಿ ಬೆನ್ನನ್ನು ನೀವಿದ. “ಅಲ್ಲಿ…ಅಲ್ಲಿ…ಬಂಗಾಲದಲ್ಲಿ… ಅತ್ಯಾಚಾರ…ಬಲಾತ್ಕಾರ…ದೀದಿ…ದೀದಿ…ಬೇಟಿ ಬಚಾವ್…ಬೇಟಿ ಪಡಾವ್” ಎಂದು ತೊದಲುತ್ತ ತೆರೆದಿದ್ದ ಕಣ್ಣುಗಳನ್ನು ಮುಚ್ಚಿ ಹಾಸಿಗೆಗೆ ಒರಗಿದ. ಒಂಟಿ ಕಣ್ಣೀರು ಮತ್ತಷ್ಟು ಒಸರಿ ಬಂತು.</p>



<p>ಮಹಿಳೆ ಶೋಷಣೆ ಬಗ್ಗೆ ನಮೋ ಸುರಿಸಿದ ಕೊಳಗಗಟ್ಟಲೆ ಕಣ್ಣೀರ ಬಗ್ಗೆ ಬಕೆಟ್ ಮಾಧ್ಯಮಗಳು ತರಹೇವಾರಿ ಹೆಡ್ಡಿಂಗ್ ಗಳನ್ನು ಕೊಟ್ಟು ಪ್ರಸಾರ ಮಾಡಿದವು. ಮಾತೃಹೃದಯದ ನಮೋ ಸಂಕಟಕ್ಕೆ ಲಂಡಭಕ್ತರ ಕರುಳು ಕಿವಿಚಿ ಬಂದು ಕಣ್ಣೀರಧಾರೆಯನ್ನು ಹರಿಸಿ, ಅಂಗಡಿಮುಂಗಟ್ಟು ಆಸ್ಪತ್ರೆಗಳ ಮೇಲೆ ದಾಳಿ ಎಸಗಿ ಧ್ವಂಸ ಮಾಡಿದರು. ರಸ್ತೆಗಳನ್ನು ಬಂದು ಮಾಡಿ, ವಾಹನಗಳಿಗೆ ಬೆಂಕಿ ಹಚ್ಚಿ ಶೋಷಿತಳಿಗೆ ಸಂತಾಪ ಸೂಚಿಸಿದರು.</p>



<p>ಫೋರೆನಿಕ್ಸ್ ಲ್ಯಾಬ್ ನಲ್ಲಿ ತನಿಖೆ ನಡೆಸಿದ್ದ ತಂತ್ರಜ್ಞರಿಗೆ ಅಸಹಜ, ವಿಶೇಷವಾದ ಫಲಿತಾಂಶ ದೊರೆತು ʼಯುರೇಕಾ!ʼ ಎಂದು ಸಂಭ್ರಮಗೊಂಡರು. “ನಮೋ ಅವರ ಒಂದೇ ಕಣ್ಣಿನಲ್ಲಿ ಅಶ್ರು ಬಂದದ್ದಕ್ಕೆ ಕಾರಣ ಸಿಗುತ್ತಿಲ್ಲ. ಇನ್ನೂ ಹೆಚ್ಚಿನ ಸಂಶೋಧನೆಯಿಂದ ತಿಳಿಯಬಹುದು. ಆದರೆ, ನಮೋ ಅವರು ಸುರಿಸಿದ ಕಣ್ಣೀರು, ಮೊಸಳೆ ಕಣ್ಣೀರಿಗೆ ಹೋಲಿಕೆಯಾಗುತ್ತಿರುವುದು ತನಿಖೆಯಲ್ಲಿ ತಿಳಿದು ಬಂದು ಅಚ್ಚರಿ ತಂದಿದೆ” ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದರು.</p>



<p>“ದೇಶದಲ್ಲಿ ಇಪ್ಪತ್ತು ನಿಮಿಷಕ್ಕೊಮ್ಮೆ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದೆ. ಯೋಧರ ಪತ್ನಿಯರನ್ನು ಸೇರಿ ಹಲವು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ, ಮಾನಭಂಗ ಎಸಗಲಾಗಿದೆ. ಇದ್ಯಾವುದರ ಬಗ್ಗೆ ಉಸಿರೆತ್ತದೆ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡಿರುವ ಸಾಮ್ರಾಟ ಈಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾನೆ. ಎಂಥಾ ನಾಚಿಗೆಗೇಡು!” ಎಂದು ದೇಶವಾಸಿಗಳು ನಮೋ ಆಷಾಢಭೂತಿತನಕ್ಕೆ ಉಗಿದು ಉಪ್ಪಿನಕಾಯಿ ಹಾಕಿದರು.</p>



<p>ಚಂದ್ರಪ್ರಭ ಕಠಾರಿ<br>cpkatari@yahoo.com</p>
]]></content:encoded>
					
		
		
			</item>
		<item>
		<title>ಅಮೇರಿಕಾದಲ್ಲಿ ಮೋದಿಯ ಜಂಟಿ ಕಾಂಗ್ರೆಸ್ ಭಾಷಣವನ್ನು ಬಹಿಷ್ಕರಿಸಿರುವ ಶಾಸಕರು ಹೇಳೋದೇನು?</title>
		<link>https://peepalmedia.com/what-do-the-legislators-who-have-boycotted-modis-joint-congress-speech-in-america-say/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 22 Jun 2023 03:43:28 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[America visit]]></category>
		<category><![CDATA[Boycott Modhi]]></category>
		<category><![CDATA[india]]></category>
		<category><![CDATA[narendramodi]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=22590</guid>

					<description><![CDATA[ಪ್ರಧಾನಿ ನರೇಂದ್ರ ಮೋದಿಯವರ ಅಮೇರಿಕಾ ಭೇಟಿ ಮತ್ತು ಇಂದು ನಡೆಯಲಿರುವ ಜಂಟಿ ಕಾಂಗ್ರೆಸ್ ಭಾಷಣದ ವಿಚಾರವಾಗಿ ಮತ್ತೆ ಅಪಸ್ವರ ಕೇಳಿ ಬಂದಿದೆ. ಅಮೇರಿಕಾದ ಇಬ್ಬರು ಶಾಸಕರುಗಳಾದ ಇಲ್ಹಾನ್ ಒಮರ್ ಮತ್ತು ರಶೀದಾ ತ್ಲೈಬ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಪ್ರವಾಸದ ಸಂದರ್ಭದಲ್ಲಿ ಅವರ ಜಂಟಿ ಕಾಂಗ್ರೆಸ್ ಭಾಷಣವನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ಆಡಳಿತ ಪಕ್ಷದ ಧಮನಕಾರಿ ನಡೆ, ಭಾರತದಲ್ಲಿ ನಡೆಯುತ್ತಿರುವ ಹಿಂಸಾಚಾರ ಹಾಗೂ ಆತಂಕದಲ್ಲಿ ಬದುಕು ನಡೆಸುತ್ತಿರುವ ಭಾರತದ ಅಲ್ಪಸಂಖ್ಯಾತರನ್ನು [&#8230;]]]></description>
										<content:encoded><![CDATA[
<p>ಪ್ರಧಾನಿ ನರೇಂದ್ರ ಮೋದಿಯವರ ಅಮೇರಿಕಾ ಭೇಟಿ ಮತ್ತು ಇಂದು ನಡೆಯಲಿರುವ ಜಂಟಿ ಕಾಂಗ್ರೆಸ್ ಭಾಷಣದ ವಿಚಾರವಾಗಿ ಮತ್ತೆ ಅಪಸ್ವರ ಕೇಳಿ ಬಂದಿದೆ. ಅಮೇರಿಕಾದ ಇಬ್ಬರು ಶಾಸಕರುಗಳಾದ ಇಲ್ಹಾನ್ ಒಮರ್ ಮತ್ತು ರಶೀದಾ ತ್ಲೈಬ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಪ್ರವಾಸದ ಸಂದರ್ಭದಲ್ಲಿ ಅವರ ಜಂಟಿ ಕಾಂಗ್ರೆಸ್ ಭಾಷಣವನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ.</p>



<p>ಭಾರತದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ಆಡಳಿತ ಪಕ್ಷದ ಧಮನಕಾರಿ ನಡೆ, ಭಾರತದಲ್ಲಿ ನಡೆಯುತ್ತಿರುವ ಹಿಂಸಾಚಾರ ಹಾಗೂ ಆತಂಕದಲ್ಲಿ ಬದುಕು ನಡೆಸುತ್ತಿರುವ ಭಾರತದ ಅಲ್ಪಸಂಖ್ಯಾತರನ್ನು ಉಲ್ಲೇಖಿಸಿ ಇಬ್ಬರು ಶಾಸಕರು ಮೋದಿಯವರ ಜಂಟಿ ಕಾಂಗ್ರೆಸ್ ಭಾಷಣವನ್ನು ಬಹಿಷ್ಕರಿಸುವುದಾಗಿ ತಮ್ಮ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.</p>



<p>ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 21 ಮತ್ತು 25 ರ ನಡುವೆ ಅಮೇರಿಕಾ ಮತ್ತು ಈಜಿಪ್ಟ್‌ ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ. ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಅವರ ಆಹ್ವಾನದ ಮೇರೆಗೆ ಇಂದಿನ ಕೊನೆಯ ದಿನದ ಅಮೇರಿಕಾ ಭೇಟಿಯಲ್ಲಿ ಜೂನ್ 22 ರಂದು ಯುಎಸ್ ಕಾಂಗ್ರೆಸ್‌ನ ಜಂಟಿ ಅಧಿವೇಶನದಲ್ಲಿ ಮಾತನಾಡಲು ಅವರನ್ನು ಆಹ್ವಾನಿಸಲಾಗಿದೆ.</p>



<p>ಕಾಂಗ್ರೆಸ್ ಜಂಟಿ ಅಧಿವೇಶನವನ್ನು ಬಹಿಷ್ಕರಿಸಿರುವ ಶಾಸಕರಾದ ಇಲ್ಹಾನ್ ಒಮರ್ “ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ದಮನ ಮಾಡಿದೆ. ಹಿಂಸಾತ್ಮಕ ಹಿಂದೂ ರಾಷ್ಟ್ರೀಯತಾವಾದಿ ಗುಂಪುಗಳನ್ನು ಉತ್ತೇಜಿಸಿದೆ ಮತ್ತು ಭಾರತದ ಪತ್ರಕರ್ತರು / ಮಾನವ ಹಕ್ಕುಗಳ ಹೋರಾಟಗಾರರಿಗೆ ಭಯದ ವಾತಾವರಣ ನಿರ್ಮಿಸಿದೆ. ನಾನು ಮೋದಿ ಭಾಷಣದಲ್ಲಿ ಭಾಗವಹಿಸುವುದಿಲ್ಲ. ಮೋದಿಯವರ ದಮನ ಮತ್ತು ಹಿಂಸಾಚಾರದ ದಾಖಲೆಯನ್ನು ಚರ್ಚಿಸಲು ನಾನು ಮಾನವ ಹಕ್ಕುಗಳ ಗುಂಪುಗಳೊಂದಿಗೆ ಚರ್ಚೆ ನಡೆಸುತ್ತೇನೆ, ”ಎಂದು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.</p>



<figure class="wp-block-image size-full"><img fetchpriority="high" decoding="async" width="674" height="375" src="https://peepalmedia.com/wp-content/uploads/2023/06/images-2023-06-22T091049.519.jpeg" alt="" class="wp-image-22592" srcset="https://peepalmedia.com/wp-content/uploads/2023/06/images-2023-06-22T091049.519.jpeg 674w, https://peepalmedia.com/wp-content/uploads/2023/06/images-2023-06-22T091049.519-300x167.jpeg 300w, https://peepalmedia.com/wp-content/uploads/2023/06/images-2023-06-22T091049.519-150x83.jpeg 150w" sizes="(max-width: 674px) 100vw, 674px" /></figure>



<p><a href="https://twitter.com/IlhanMN/status/1671302972699996160?t=ZDCUtPqkmi1gbjoC6_fgiQ&amp;s=19">https://twitter.com/IlhanMN/status/1671302972699996160?t=ZDCUtPqkmi1gbjoC6_fgiQ&amp;s=19</a></p>



<p>ಅಮೇರಿಕಾದ ಮತ್ತೋರ್ವ ಕಾಂಗ್ರೆಸ್ ಶಾಸಕಿಯಾದ ರಶೀದಾ ತ್ಲೈಬ್, &#8220;ನಮ್ಮ ರಾಷ್ಟ್ರದ ರಾಜಧಾನಿಯಲ್ಲಿ ಮೋದಿಗೆ ವೇದಿಕೆ ನೀಡಿರುವುದು ನಾಚಿಕೆಗೇಡಿನ ಸಂಗತಿ. ಮಾನವ ಹಕ್ಕುಗಳ ಉಲ್ಲಂಘನೆ, ಪ್ರಜಾಪ್ರಭುತ್ವ ವಿರೋಧಿ ಕ್ರಮಗಳು, ಮುಸ್ಲಿಮರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸುವುದು ಮತ್ತು ಭಾರತೀಯ ಪತ್ರಕರ್ತರನ್ನು ದೂರವಿರಿಸುವುದನ್ನು ಮಾಡುವ ಮೋದಿಯವರ ಸುದೀರ್ಘ ಇತಿಹಾಸವು ಸ್ವೀಕಾರಾರ್ಹವಲ್ಲ. ನಾನು ಕಾಂಗ್ರೆಸ್ ಅನ್ನು ಉದ್ದೇಶಿಸುವ ಮೋದಿಯವರ ಜಂಟಿ ಭಾಷಣವನ್ನು ಬಹಿಷ್ಕರಿಸುತ್ತೇನೆ.&#8221; ಎಂದು ಬರೆದುಕೊಂಡಿದ್ದಾರೆ.</p>



<figure class="wp-block-image size-full"><img decoding="async" width="706" height="434" src="https://peepalmedia.com/wp-content/uploads/2023/06/images-2023-06-22T091210.452.jpeg" alt="" class="wp-image-22593" srcset="https://peepalmedia.com/wp-content/uploads/2023/06/images-2023-06-22T091210.452.jpeg 706w, https://peepalmedia.com/wp-content/uploads/2023/06/images-2023-06-22T091210.452-300x184.jpeg 300w, https://peepalmedia.com/wp-content/uploads/2023/06/images-2023-06-22T091210.452-150x92.jpeg 150w, https://peepalmedia.com/wp-content/uploads/2023/06/images-2023-06-22T091210.452-696x428.jpeg 696w" sizes="(max-width: 706px) 100vw, 706px" /></figure>



<p><a href="https://twitter.com/RepRashida/status/1671179922197340160?t=KCJI6cdYDRNZDI5j_XLkIw&amp;s=19">https://twitter.com/RepRashida/status/1671179922197340160?t=KCJI6cdYDRNZDI5j_XLkIw&amp;s=19</a></p>



<p>ಏತನ್ಮಧ್ಯೆ, ಅಮೇರಿಕಾ ಕಾಂಗ್ರೆಸ್‌ನ 70 ಕ್ಕೂ ಹೆಚ್ಚು ಡೆಮಾಕ್ರಟಿಕ್ ಸದಸ್ಯರು ಅಧ್ಯಕ್ಷ ಜೋ ಬಿಡೆನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸಭೆಯಲ್ಲಿ ಪ್ರಮುಖ ವಿಚಾರಗಳ ಬಗ್ಗೆ ಪ್ರಸ್ತಾಪಿಸಿ ಮಾತನಾಡುವ ಅಧಿವೇಶನಕ್ಕೆ ಸಾಕ್ಷಿಯಾಗಲಿದೆ. ನಂತರ ಅಧ್ಯಕ್ಷ ಜೋ ಬಿಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರು ಜೂನ್ 22 ರಂದು ಆಯೋಜಿಸಿರುವ ಭೋಜನಕೂಟದಲ್ಲಿ ಪ್ರಧಾನಿ ಮೋದಿಗೆ ಆತಿಥ್ಯ ನೀಡಲಿದ್ದಾರೆ.</p>



<p>ಇನ್ನು ಮೋದಿ ಭಾಷಣವನ್ನು ಬಹಿಷ್ಕರಿಸಿರುವ ಅಮೇರಿಕಾ ಶಾಸಕರು &#8220;ಭಾರತವು ತನ್ನ ಇತಿಹಾಸದಲ್ಲಿ ನಿಷ್ಪಕ್ಷಪಾತ ಮತ್ತು ಸ್ವತಂತ್ರ ಪತ್ರಿಕಾ ಮಾಧ್ಯಮಕ್ಕೆ ಹೆಸರುವಾಸಿಯಾಗಿತ್ತು. ಆದರೆ ಈಗ ಪತ್ರಿಕಾ ಸ್ವಾತಂತ್ರ್ಯದ ಶ್ರೇಯಾಂಕದಲ್ಲಿ ಗಣನೀಯವಾಗಿ ಕುಸಿದಿದೆ. ಭಾರತದಲ್ಲಿ ರಾಜಕೀಯ ಪಕ್ಷಗಳ ಮೇಲಿನ ಅಭಿವ್ಯಕ್ತಿಯ ಹಿಡಿತವನ್ನೂ ಕೂಡಾ ಅಲ್ಲಿನ ಮೋದಿ ಸರ್ಕಾರ ಬಿಗಿಗೊಳಿಸಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದ ಅಂಶ. ಅದೇ ರೀತಿ, ಭಾರತದಲ್ಲಿನ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಕುರಿತಾದ 2022 ರ ವರದಿಯು ಆತಂಕಕಾರಿ ಎನ್ನಿಸಿದೆ&#8221; ಎಂದು ಪ್ರತಿಕ್ರಿಯೆ ನೀಡಿದ್ದಾರೆ.</p>



<p>ಕಳೆದ ಒಂದು ವಾರದಿಂದ ಮೋದಿ ಅಮೇರಿಕಾ ಭೇಟಿಯ ಬಗ್ಗೆ ಅಲ್ಲಿನ ಮಾನವ ಹಕ್ಕು ಸಂಘಟನೆಗಳು &#8216;ವೈಟ್ ಹೌಸ್ ಗೆ ಅವಮಾನ&#8217; ಎಂಬಂತೆ ಅಭಿಯಾನ ಮಾಡುತ್ತಿವೆ. ಇದರ ಜೊತೆಗೆ ಭಾರತದ ಒಳಗಿನ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಬಗ್ಗೆಯೂ ಚರ್ಚೆ ಮತ್ತು ಸಂವಾದಗಳನ್ನು ಏರ್ಪಡಿಸಿವೆ. ಮೋದಿ ಅಮೇರಿಕಾ ಭೇಟಿಗೆ ಸರಿಯಾಗಿ ಅಲ್ಲಿನ ಹ್ಯೂಮನ್ ರೈಟ್ಸ್ ವಾಚ್ ಮತ್ತು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇತ್ತೀಚೆಗೆ BBC ಸಿದ್ದಪಡಿಸಿದ ಸಾಕ್ಷ್ಯಚಿತ್ರದ ಖಾಸಗಿ ಪ್ರದರ್ಶನವನ್ನು ನಿಗದಿಪಡಿಸಿದೆ. ಈ ಸಾಕ್ಷ್ಯಚಿತ್ರದಲ್ಲಿ ನರೇಂದ್ರ ಮೋದಿ ಮತ್ತು 2002 ರ ಗುಜರಾತ್ ಗಲಭೆಯಲ್ಲಿ ಅವರ ಪಾತ್ರದಿಂದ ಕನಿಷ್ಠ 1,000 ಜನರ ಹತ್ಯೆಗೆ ಕಾರಣವಾಗಿತ್ತು. ಅವರಲ್ಲಿ ಹೆಚ್ಚಿನವರು ಮುಸ್ಲಿಮರೇ ಆಗಿದ್ದಾರೆ. ಹತ್ಯಾಕಾಂಡದ ಸಮಯದಲ್ಲಿ, ಹಿಂದೂ ಉಗ್ರಗಾಮಿ ಗುಂಪುಗಳು ಮುಸ್ಲಿಂ ಮನೆಗಳು&nbsp;ಮತ್ತು ಮುಸ್ಲಿಂ ವ್ಯಾಪಾರಿಗಳನ್ನು ಅಕ್ಷರಶಃ ಸುಟ್ಟು ಹಾಕಿದ್ದರು. ಮುಸ್ಲಿಂ ಮಹಿಳೆಯರು ಮತ್ತು ಮಕ್ಕಳನ್ನು ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ಕೊಂದು ಹಾಕಿದ್ದರು. ಈ ಸಂದರ್ಭದಲ್ಲಿ ನರೇಂದ್ರ ಮೋದಿ ಗುಜರಾತ್ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಆ ಗಲಭೆಗಳು ಅವರ ಕುಮ್ಮಕ್ಕಿನಿಂದಲೇ ನಡೆದಿತ್ತು. ಈ ಬಗ್ಗೆ ಅಂದಿನ ಮಾಧ್ಯಮಗಳು ವಿಸ್ತೃತವಾಗಿ ವರದಿ ಮಾಡಿದ್ದವು. ಅದನ್ನೇ BBC ಕೂಡಾ ಇತ್ತೀಚೆಗೆ ಸಾಕ್ಷ್ಯಚಿತ್ರದ ಮೂಲಕ ಹೊರತಂದಿತ್ತು. ಈ ಸಾಕ್ಷ್ಯಚಿತ್ರ ಕೂಡಾ ಅಲ್ಲಿನ ಪ್ರತಿರೋಧ ಸಭೆಯಲ್ಲಿ ಪ್ರದರ್ಶನಗೊಳ್ಳುವ ಸಾಧ್ಯತೆ ಇದೆ.</p>
]]></content:encoded>
					
		
		
			</item>
	</channel>
</rss>
