<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>breaking news &#8211; Peepal Media</title>
	<atom:link href="https://peepalmedia.com/tag/breaking-news/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 11 Jul 2024 08:17:54 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>breaking news &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಕೇರಳದಲ್ಲಿ ನಿರೂಪಕಿ ದಿವ್ಯ ವಸಂತ ಬಂಧನ</title>
		<link>https://peepalmedia.com/anchor-divya-vasantha-arrested-in-kerala/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 11 Jul 2024 08:17:53 +0000</pubDate>
				<category><![CDATA[ಅಪರಾಧ]]></category>
		<category><![CDATA[ancor]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[divay vasanta]]></category>
		<category><![CDATA[divyavasanta]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<guid isPermaLink="false">https://peepalmedia.com/?p=42065</guid>

					<description><![CDATA[ಬೆಂಗಳೂರು: ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡಿರುವ ಆರೋಪ ಎದುರಿಸುತ್ತಿದ್ದ ಆ್ಯಂಕರ್ ದಿವ್ಯ ರಾಜ್ಯ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ. ಇಡೀ ರಾಜ್ಯವೇ ಖುಷಿ ಪಡೋ ಸುದ್ದಿಯಿದು&#8217; ಎಂದು ಹೇಳಿ ವೈರಲ್‌ ಆಗಿದ್ದ ದಿವ್ಯ ವಸಂತ ಕಳೆದ ವಾರವಷ್ಟೇ ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಯತ್ನ ಮಾಡಿರುವ ಆರೋಪ ಕೇಳಿ ಬಂದ ಬೆನ್ನಲ್ಲೇ ಕಾಣೆಯಾಗಿದ್ದರು. ಈಗ ಬೆಂಗಳೂರಿನ ಜೀವನ್ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ. . &#160;ಈ ಕೇಸ್‌ ನಲ್ಲಿ ತಮ್ಮನ ಬಂಧನ ನಂತರ ಪರಾರಿಯಾಗಿ &#160;ತಲೆಮರೆಸಿಕೊಂಡಿದ್ದಳು. ದಿವ್ಯ ವಸಂತ [&#8230;]]]></description>
										<content:encoded><![CDATA[
<p>ಬೆಂಗಳೂರು: ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡಿರುವ ಆರೋಪ ಎದುರಿಸುತ್ತಿದ್ದ ಆ್ಯಂಕರ್ ದಿವ್ಯ ರಾಜ್ಯ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ.</p>



<p>ಇಡೀ ರಾಜ್ಯವೇ ಖುಷಿ ಪಡೋ ಸುದ್ದಿಯಿದು&#8217; ಎಂದು ಹೇಳಿ ವೈರಲ್‌ ಆಗಿದ್ದ ದಿವ್ಯ ವಸಂತ ಕಳೆದ ವಾರವಷ್ಟೇ ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಯತ್ನ ಮಾಡಿರುವ ಆರೋಪ ಕೇಳಿ ಬಂದ ಬೆನ್ನಲ್ಲೇ ಕಾಣೆಯಾಗಿದ್ದರು. ಈಗ ಬೆಂಗಳೂರಿನ ಜೀವನ್ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ.</p>



<p>. &nbsp;ಈ ಕೇಸ್‌ ನಲ್ಲಿ ತಮ್ಮನ ಬಂಧನ ನಂತರ ಪರಾರಿಯಾಗಿ &nbsp;ತಲೆಮರೆಸಿಕೊಂಡಿದ್ದಳು. ದಿವ್ಯ ವಸಂತ ಕೇರಳದಲ್ಲಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.</p>



<p>ಒಂದು ವಾರದಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ದಿವ್ಯ&nbsp;ತಮಿಳುನಾಡಿನಿಂದ ಕೇರಳದಲ್ಲಿ ತಲೆ ಮರೆಸಿಕೊಂಡಿದ್ದಳು. ಸದ್ಯ&nbsp;ಕೇರಳದಿಂದ ಬಂಧಿಸಿ ಕರೆತಂದಿರುವ&nbsp; ಜೀವನ್ ಭೀಮಾನಗರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.</p>



<p>&nbsp;ದಿವ್ಯ ವಸಂತ &nbsp;ಮತ್ತು ಗ್ಯಾಂಗ್ ನಿಂದ ಇಂದಿರಾನಗರದಲ್ಲಿರುವ ಸ್ಪಾ ಮಾಲೀಕನಿಗೆ ಹಣ ಸುಲಿಗೆಗಾಗಿ ಬೆದರಿಕೆ ಹಾಕಿದ ಪ್ರಕರಣ ದಾಖಲಾಗಿತ್ತು &nbsp;&nbsp;&#8216;ಸ್ಪಾ&#8217; ವ್ಯವಸ್ಥಾಪಕನಿಗೆ ಬೆದರಿಸಿ 15 ಲಕ್ಷ ರು. ಹಣ ಸುಲಿಗೆಗೆ ಯತ್ನಿಸಿದ ಪ್ರಕರಣ ಸಂಬಂಧ&nbsp;&nbsp;ರಾಜ್ ನ್ಯೂಸ್‌ ಕಾರ್ಯನಿರ್ವಾಹಕ ರಾಜಾನುಕುಂಟೆ ವೆಂಕಟೇಶ್, ದಿವ್ಯ ತಮ್ಮ ಸಂದೇಶ್ ಸೇರಿ ಮೂವರನ್ನು ಈಗಾಗಲೇ ಬಂಧಿಸಿದ್ದಾರೆ.</p>



<p>ಸುಲಿಗೆ ಕೃತ್ಯಗಳಿಗೆ ವಾಟ್ಸ್ ಆಪ್‌ನಲ್ಲಿ &#8216;ಸೈ ರಿಸರ್ಚ್ ಟೀಂ&#8217; ಹೆಸರಿನ ಗ್ರೂಪ್ ಅನ್ನು ವೆಂಕಟೇಶ್‌ ಹಾಗೂ ದಿವ್ಯಾ ಮಾಡಿಕೊಂಡಿದ್ದರು. ಈ ಗ್ರೂಪ್‌ನಲ್ಲಿ ತಮ್ಮ ಕಾರ್ಯಸೂಚಿಗಳ ಬಗ್ಗೆ ಆರೋಪಿಗಳು ಚರ್ಚಿಸುತ್ತಿದ್ದರು.</p>



<p>ಈ ಪ್ರಕರಣ ಹೊರ ಬರುತ್ತಿದ್ದಂತೆಯೇ ಮತ್ತೊಂದು ಪ್ರಕರಣ ಬೆಳಕಿಗೆ ಬಂತು.&nbsp;ಇಂದಿರಾ ನಗರದ 80 ಅಡಿ ರಸ್ತೆಯ ಮೈಕಲ್ ಪಾಳ್ಯ ಸಮೀಪದ ಸಹರಾ ಇಂಟರ್ ನ್ಯಾಷನಲ್ ಸ್ಪಾದ ವ್ಯವಸ್ಥಾಪಕ ಮಹೇಶ್ ಶೆಟ್ಟಿಗೆ ಬೆದರಿಸಿ 1 ಲಕ್ಷ ರು ಸುಲಿಗೆ ಮಾಡಿದ್ದು, ಈ ಬಗ್ಗೆ ವ್ಯವಸ್ಥಾಪಕ ನೀಡಿದ ದೂರಿನ ಮೇರೆಗೆ ರಾಜ್ ನ್ಯೂಸ್‌ ಸಿಇಒ ವೆಂಕಟೇಶ್ ಹಾಗೂ ಇತರರ ವಿರುದ್ಧ ಇಂದಿರಾನಗರ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.&nbsp; ಈ ಎರಡೂ ಪ್ರಕರಣಗಳು ಇಂದಿರಾಗರದಲ್ಲಿ ನಡೆದಿದೆ.</p>



<p><strong>ರಾಜ್ </strong><strong>ನ್ಯೂಸ್‌ </strong><strong>ಹೆಸರು ಬಳಸಬೇಡಿ:</strong> ಬ್ಲ್ಯಾಕ್‌ಮೇಲ್ ಮಾಡಿ ಹಲವು ಕಡೆ ಹಣ ಸುಲಿಗೆ ಮಾಡಿರುವ ಆರೋಪದ ಮೇಲೆ ಬಂಧಿತರಾಗಿರುವ ಆರೋಪಿಗಳಿಗೂ ರಾಜ್‌ ನ್ಯೂಸ್‌ಗೂ ಯಾವುದೇ ಸಂಬಂಧವಿಲ್ಲವೆಂದು ಆ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ರಾಜ್‌ ನ್ಯೂಸ್‌ನಲ್ಲಿ ನಾವು ಯಾವುದೇ ಸಿಇಓ ಹುದ್ದೆಯನ್ನು ಸೃಷ್ಟಿಸಿಲ್ಲ. ರಾಜಾನುಕುಂಟೆ ವೆಂಕಟೇಶ್ ಎಂಬುವವರು 3 ತಿಂಗಳಿಂದ ನಮ್ಮ ಸಂಸ್ಥೆಯಲ್ಲಿ ಮಾರ್ಕೆಟಿಂಗ್‌ ವಿಭಾಗದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ಸಂಸ್ಥೆಯ ಸಿಇಓ ಹಾಗೂ ಉದ್ಯೋಗಿಯಲ್ಲ. ಸಿಇಓ ಎಂದು ವೆಂಕಟೇಶ್ ಹೇಳಿಕೊಂಡಿರುವುದಕ್ಕೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ರಾಜ್ ನ್ಯೂಸ್ ಎಂಡಿ ಸ್ಪಷ್ಟನೆ ನೀಡಿದ್ದಾರೆ.</p>
]]></content:encoded>
					
		
		
			</item>
		<item>
		<title>ಸಿಎಎ: ಕೇಂದ್ರ ಹೇಳಿದ ಎಂಟು ಅಪ್ಪಟ ಸುಳ್ಳುಗಳು!</title>
		<link>https://peepalmedia.com/positive-narrative-on-caa-2019-and-centres-8-lie/</link>
		
		<dc:creator><![CDATA[Charan Aivarnad]]></dc:creator>
		<pubDate>Wed, 13 Mar 2024 11:24:49 +0000</pubDate>
				<category><![CDATA[ರಾಜಕೀಯ]]></category>
		<category><![CDATA[bjp]]></category>
		<category><![CDATA[breaking]]></category>
		<category><![CDATA[breaking news]]></category>
		<category><![CDATA[CAA]]></category>
		<category><![CDATA[CAA NRC]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[modi]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[NRC]]></category>
		<category><![CDATA[peepal]]></category>
		<category><![CDATA[politics]]></category>
		<category><![CDATA[protest]]></category>
		<category><![CDATA[state politics]]></category>
		<category><![CDATA[trend]]></category>
		<category><![CDATA[Trending]]></category>
		<category><![CDATA[viral]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=36965</guid>

					<description><![CDATA[ನಿನ್ನೆ, ಮಾರ್ಚ್‌ 12, 2024 ಮಂಗಳವಾರ ಕೇಂದ್ರ ಗೃಹ ಸಚಿವಾಲಯ ಪೌರತ್ವ (ತಿದ್ದುಪಡಿ) ಕಾಯ್ದೆ-2019 ರ ಬಗ್ಗೆ ಎರಡು ಪುಟಗಳ ಒಂದು ಸಕಾರಾತ್ಮಕ ನಿರೂಪಣೆಯೊಂದನ್ನು ಪ್ರಕಟ ಮಾಡಿತ್ತು. ಇದರಲ್ಲಿ ಸಿಎಎ ಬಗ್ಗೆ ಅನೇಕ ಸುಳ್ಳು ಮತ್ತು ಅರ್ಧ ಸತ್ಯಗಳನ್ನು ಹೇಳಲಾಗಿದ್ದು, ಅತ್ಯಂತ ಕಳಪೆಯಾಗಿ ಇದ್ದನ್ನು ಡ್ರಾಫ್ಟ್‌ ಮಾಡಲಾಗಿದೆ. ಇದನ್ನು ತನ್ನ ಪ್ರೆಸ್‌ ಇನ್‌ಫರ್ಮೇಷನ್‌ ಬ್ಯೂರೋ (Press Information Bureau – PIB) ವೆಬ್‌ಸೈಟಿನಲ್ಲಿ ಪ್ರಕಟ ಮಾಡಿತ್ತು, ಅದರ X ನಲ್ಲಿಯೂ ಪ್ರಕಟ ಮಾಡಲಾಗಿತ್ತು. ಆದರೆ ಈಗ ಇದರ [&#8230;]]]></description>
										<content:encoded><![CDATA[
<p>ನಿನ್ನೆ, ಮಾರ್ಚ್‌ 12, 2024 ಮಂಗಳವಾರ ಕೇಂದ್ರ ಗೃಹ ಸಚಿವಾಲಯ ಪೌರತ್ವ (ತಿದ್ದುಪಡಿ) ಕಾಯ್ದೆ-2019 ರ ಬಗ್ಗೆ ಎರಡು ಪುಟಗಳ ಒಂದು ಸಕಾರಾತ್ಮಕ ನಿರೂಪಣೆಯೊಂದನ್ನು ಪ್ರಕಟ ಮಾಡಿತ್ತು. ಇದರಲ್ಲಿ ಸಿಎಎ ಬಗ್ಗೆ ಅನೇಕ ಸುಳ್ಳು ಮತ್ತು ಅರ್ಧ ಸತ್ಯಗಳನ್ನು ಹೇಳಲಾಗಿದ್ದು, ಅತ್ಯಂತ ಕಳಪೆಯಾಗಿ ಇದ್ದನ್ನು ಡ್ರಾಫ್ಟ್‌ ಮಾಡಲಾಗಿದೆ.</p>



<p>ಇದನ್ನು ತನ್ನ ಪ್ರೆಸ್‌ ಇನ್‌ಫರ್ಮೇಷನ್‌ ಬ್ಯೂರೋ (Press Information Bureau – PIB) ವೆಬ್‌ಸೈಟಿನಲ್ಲಿ ಪ್ರಕಟ ಮಾಡಿತ್ತು, ಅದರ X ನಲ್ಲಿಯೂ ಪ್ರಕಟ ಮಾಡಲಾಗಿತ್ತು. ಆದರೆ ಈಗ ಇದರ ಅಧಿಕೃತ ಪ್ರತಿಗಳನ್ನು ಅಲ್ಲಿಂದ ಡಿಲಿಟ್‌ ಮಾಡಲಾಗಿದ್ದು, ಎಲ್ಲಿಯೂ ಲಭ್ಯವಿಲ್ಲ!</p>



<p>ಇದನ್ನು ಮಂಗಳವಾರ ಸಂಜೆ 6:43 ಕ್ಕೆ ಪಿಐಬಿ ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಿ, ಆ ನಂತರ ಡಿಲಿಟ್‌ ಮಾಡಲಾಗಿದೆ. ತನ್ನ X ಖಾತೆಯಲ್ಲಿ CAA Myth Busters ಎಂದು ಪೋಸ್ಟ್‌ ಮಾಡಿತ್ತು, ಅಲ್ಲಿಂದಲೂ ಅದು ಕಾಣೆಯಾಗಿದೆ. Positive Narrative on Citizenship Amendment Act-2019 ಎಂಬ ಈ ಪ್ರಕಟಣೆಯನ್ನು ಯಾಕೆ ಎಲ್ಲಾ ಕಡೆಗಳಿಂದಲೂ ತೆಗೆದುಹಾಕಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.</p>



<p>ಈ ಎರಡು ಪುಟಗಳ ಪ್ರಕಟಣೆಯಲ್ಲಿ ಒಟ್ಟು ಎಂಟು ಪ್ರಶ್ನೆಗಳನ್ನು ಹಾಕಿ, ಅವುಗಳಿಗೆ ಉತ್ತರವನ್ನು ನೀಡಲಾಗಿದೆ. ಇದರ ತುಂಬಾ ಮೋದಿಯವರು ತಮ್ಮ ʼಮೇರೆ ಪ್ಯಾರೆ ದೇಶವಾಸಿಯೋ ..ʼಗಳ ತಲೆಗೆ ಸುಳ್ಳುಗಳನ್ನು ತುಂಬಲು ಯತ್ನಿಸಿದ್ದಾರೆ. ಇದರಲ್ಲಿ ಕೇಂದ್ರ ಸರ್ಕಾರ ಹಸಿ ಹಸಿ ಸುಳ್ಳುಗಳನ್ನೂ, ಅರ್ಧ ಸತ್ಯಗಳನ್ನೂ ಹೇಳಿದೆ. ಒಟ್ಟಾರೆ ಸಿಎಎ ಬಗ್ಗೆ ಪಾಸಿಟಿವ್‌ ಎಂದು ಕಳಪೆ ನಿರೂಪಣೆಗಳನ್ನು ನೀಡಲಾಗಿದೆ.</p>



<p>ಇಲ್ಲಿ, ಗೃಹ ಸಚಿವಾಲಯದ ಈ ಸುಳ್ಳು ಪ್ರಶ್ನೋತ್ತರಗಳನ್ನು ಭಾಷಾಂತರ ಮಾಡಿ, ವಿಶ್ಲೇಷಣೆ ನಡೆಸಲಾಗಿದ್ದು, ಒಂದೊಂದು ಪ್ರಶ್ನೆಗಳನ್ನೂ ʼಪ್ರಶ್ನಿಸಲಾಗಿದೆʼ. ಈ ಪ್ರಕಟಣೆಯ ಪಿಡಿಎಫ್‌ ಸಂಗ್ರಹಿಸಲಾಗಿದ್ದು ಇಲ್ಲಿ ಓದಿ: <a href="https://www.scribd.com/document/712812911/Positive-narrative-on-Citizenship-Amendment-Act-2019" data-type="link" data-id="https://www.scribd.com/document/712812911/Positive-narrative-on-Citizenship-Amendment-Act-2019">Positive Narrative on Citizenship Amendment Act-2019</a></p>


<div class="wp-block-image">
<figure class="aligncenter size-full is-resized"><img fetchpriority="high" decoding="async" width="560" height="799" src="https://peepalmedia.com/wp-content/uploads/2024/03/image-5.png" alt="" class="wp-image-36971" style="width:332px;height:auto" srcset="https://peepalmedia.com/wp-content/uploads/2024/03/image-5.png 560w, https://peepalmedia.com/wp-content/uploads/2024/03/image-5-210x300.png 210w, https://peepalmedia.com/wp-content/uploads/2024/03/image-5-150x214.png 150w, https://peepalmedia.com/wp-content/uploads/2024/03/image-5-300x428.png 300w" sizes="(max-width: 560px) 100vw, 560px" /></figure></div>

<div class="wp-block-image">
<figure class="aligncenter size-full is-resized"><img decoding="async" width="544" height="452" src="https://peepalmedia.com/wp-content/uploads/2024/03/image-6.png" alt="" class="wp-image-36972" style="width:314px;height:auto" srcset="https://peepalmedia.com/wp-content/uploads/2024/03/image-6.png 544w, https://peepalmedia.com/wp-content/uploads/2024/03/image-6-300x249.png 300w, https://peepalmedia.com/wp-content/uploads/2024/03/image-6-150x125.png 150w" sizes="(max-width: 544px) 100vw, 544px" /></figure></div>


<p class="has-text-align-center" style="font-size:20px"><strong><span style="text-decoration: underline;">ಸಿಎಎ-2019 ರ ಬಗ್ಗೆ ಧನಾತ್ಮಕ ನಿರೂಪಣೆ</span></strong></p>



<p class="has-text-align-center">ಪ್ರಕಟಣೆ: 12&nbsp; ಮಾರ್ಚ್‌ 2024 6:43PM, ಪಿಐಬಿ ದೆಹಲಿ</p>



<p>ಸ್ವತಂತ್ರ ನಂತರ ಇತರ ಧರ್ಮದ ಭಾರತೀಯ ನಾಗರಿಕರಂತೆ ತಮ್ಮ ಆಚರಣೆಗಳನ್ನು ನಡೆಸುತ್ತಾ, ಆನಂದದಿಂದ ಬದುಕುತ್ತಿರುವ ಭಾರತೀಯ ಮುಸ್ಲೀಮರು ತಮ್ಮ ಹಕ್ಕುಗಳನ್ನು ಸಂಭ್ರಮಿಸಲು ಅವರ ಸ್ವಾತಂತ್ರ್ಯ ಮತ್ತು ಅವಕಾಶಗಳನ್ನು ಮೊಟಕುಗೊಳಿಸದೆ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನದಲ್ಲಿ ಧಾರ್ಮಿಕ ಆಧಾರದ ಮೇಲೆ ಕಿರುಕುಳಕ್ಕೊಳಗಾಗಿ ಡಿಸೆಂಬರ್ 31, 2014 ರಂದು ಅಥವಾ ಅದಕ್ಕೂ ಮೊದಲು ಭಾರತವನ್ನು ಪ್ರವೇಶಿಸಿದ ಫಲಾನುಭವಿಗಳಿಗಾಗಿ, ಅವರಿಗಾದ ಕಿರುಕುಳವನ್ನು ಸಮಾಧಾನಪಡಿಸಲು ಪರಿಹಾರವಾಗಿ CAA (ಪೌರತ್ವ ತಿದ್ದುಪಡಿ ಕಾಯ್ದೆ) 2019 ರ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವ ಅರ್ಹತಾ ಅವಧಿಯನ್ನು 11 ರಿಂದ 5 ವರ್ಷಗಳಿಗೆ ಕಡಿಮೆ ಮಾಡಲಾಗಿದೆ.</p>



<p><strong>ಸತ್ಯ ಏನು? </strong>ಇಲ್ಲಿ ಉಲ್ಲೇಖ ಮಾಡಲಾಗಿರುವ &nbsp;“compensation for appeasing their persecution &#8211; ಅವರಿಗಾದ ಕಿರುಕುಳವನ್ನು ಸಮಾಧಾನಪಡಿಸಲು ಪರಿಹಾರವಾಗಿ ” ಎಂದರೆ ಎನು ಎಂಬುದು ಸ್ಪಷ್ಟವಾಗಿಲ್ಲ. ಈ ಹೇಳಿಕೆಯೇ ಆಪ್ರಾಮಾಣಿಕತೆಯಿಂದ ಕೂಡಿದೆ. ಈ ಮೂರು ದೇಶಗಳಲ್ಲಿ ಕಿರುಕುಳಕ್ಕೆ ಒಳಗಾದವರಿಗೆ ಪರಿಹಾರ ನೀಡುತ್ತೇವೆ, “generous treatment – ಉದಾರತೆಯಿಂದ ನಡೆಸಿಕೊಳ್ಳುತ್ತೇವೆ” ಎಂದು ಹೇಳುವ ಕೇಂದ್ರದ ಮುಂದೆ ಕೆಲವು ಪ್ರಶ್ನೆಗಳಿವೆ:</p>



<ol class="wp-block-list">
<li>ಅಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನದಲ್ಲಿ- ಈ ಮೂರು ದೇಶಗಳಿಂದ ಬಂದವರಿಗೆ ಮಾತ್ರ ಯಾಕೆ ಈ ಸೌಲಭ್ಯ?</li>



<li>ಧಾರ್ಮಿಕ ಕಿರುಕುಳ ಮಾತ್ರ ಯಾಕೆ? ಲಿಂಗಾಧಾರಿತ ಕಿರುಕುಳ, ಜನಾಂಗೀಯ ಕಿರುಕುಳ ಅಥವಾ ರಾಜಕೀಯ ಕಿರುಕುಳ, ವರ್ಣಬೇಧದ ಕಿರುಕುಳ, ಇತ್ಯಾದಿ ಕಿರುಕುಳದಿಂದ ಆ ದೇಶಗಳನ್ನು ಬಿಟ್ಟು ಬಂದವರನ್ನು ಯಾಕೆ ಪರಿಗಣಿಸಿಲ್ಲ?</li>



<li>ಈ ದೇಶಗಳಲ್ಲಿ ಮುಸ್ಲೀಂ ಸಮುದಾಯಕ್ಕೆ ಸೇರಿದ ಕೆಲ ಪಂಗಡಗಳೂ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿವೆ. ಅವುಗಳನ್ನು ಯಾಕೆ ಇಲ್ಲಿ ಸೇರಿಸಿಲ್ಲ?</li>



<li>ಡಿಸೆಂಬರ್ 31, 2014ರಂದು ಮತ್ತು ಅದಕ್ಕೆ ಮೊದಲು ಬಂದವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಮುಸ್ಲೀಮರು ಬಿಡಿ, ಆಮೇಲೆ ಸಕಾರಣಗಳನ್ನು ಇಟ್ಟುಕೊಂಡು ಭಾರತಕ್ಕೆ ಬಂದಿರುವ ʼಮುಸ್ಲೀಮೇತರರʼ ಕಥೆ ಏನು? ಅವರನ್ನು ಏನು ಮಾಡುತ್ತೀರಿ? ಮತ್ತು ಅದೇ ದಿನಾಂಕವನ್ನು ಯಾಕೆ ಪರಿಗಣಿಸಲಾಗಿದೆ?</li>
</ol>



<p>ಕೇಂದ್ರದ ಬಳಿ ಈ ಪ್ರಶ್ನೆಗಳಿಗೆ ಉತ್ತರವಿಲ್ಲ!</p>



<p></p>



<p class="has-text-align-center"><strong>***************</strong></p>



<p style="font-size:18px"><strong>ಪ್ರಶ್ನೋತ್ತರಗಳ ವಿಶ್ಲೇಷಣೆ:</strong></p>



<p style="font-size:16px">1. <strong>ಪ್ರಶ್ನೆ: ಭಾರತೀಯ ಮುಸ್ಲಿಮರ ಮೇಲೆ ಕಾಯಿದೆ ಬೀರುವ ಪರಿಣಾಮಗಳೇನು?</strong></p>



<p><strong>ಗೃಹ ಸಚಿವಾಲಯದ ಉತ್ತರ: </strong>ಭಾರತೀಯ ಮುಸ್ಲಿಮರು ಈ ಬಗ್ಗೆ ಚಿಂತೆ ಮಾಡಬೇಕಿಲ್ಲ, ಏಕೆಂದರೆ ಸಿಎಎ ಅವರ ಪೌರತ್ವದ ಮೇಲೆ ಪರಿಣಾಮ ಬೀರಬಲ್ಲ ಯಾವುದೇ ನಿಬಂಧನೆಯನ್ನು ಹೊಂದಿಲ್ಲ ಮತ್ತು ಇದು ಪ್ರಸ್ತುತ ದೇಶದಲ್ಲಿರುವ 18 ಕೋಟಿ ಮುಸ್ಲಿಮರಿಗೆ ಯಾವುದೇ ರೀತಿಯಲ್ಲೂ ಸಂಬಂಧ ಪಟ್ಟಿಲ್ಲ. ಅವರು ತಮ್ಮ ಹಿಂದೂ ಸಹ-ನಾಗರಿಕರಂತೆ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ. ಈ ಕಾಯಿದೆ ಯಾವುದೇ ಭಾರತೀಯ ನಾಗರಿಕನೂ ತನ್ನ ಪೌರತ್ವವನ್ನು ಸಾಬೀತುಪಡಿಸಲು ಯಾವುದೇ ದಾಖಲೆಯನ್ನು ನೀಡಬೇಕೆಂದು ಹೇಳುವುದಿಲ್ಲ.</p>



<p><strong>ನಿಜ ಏನು? </strong>ನಿರಾಶ್ರಿತರು ಮತ್ತು ನುಸುಳುಕೋರರ ಬಗೆಗಿನ ಮೋದಿ ಸರ್ಕಾರದ ನೀತಿಗಳ ವಿಚಾರದಲ್ಲಿ ಒಂದು ‘ಕ್ರೊನೋಲಜಿʼ  ಕೆಲಸ ಮಾಡುತ್ತಿದೆ ಎಂದು ಗೃಹ ಸಚಿವ ಅಮಿತ್ ಶಾ ಈ ಹಿಂದೆ ಅನೇಕ ಬಾರಿ ಹೇಳಿದ್ದರು. 2019ರ ಎಪ್ರಿಲ್‌ನಲ್ಲಿ, “ಮೊದಲು ನಾವು ಪೌರತ್ವ ತಿದ್ದುಪಡಿ ಮಸೂದೆಯನ್ನು (ಸಿಎಬಿ) ತರುತ್ತೇವೆ, ಪ್ರತಿಯೊಬ್ಬ ನಿರಾಶ್ರಿತರಿಗೂ ಪೌರತ್ವ ಸಿಗುತ್ತದೆ ಮತ್ತು ಅದರ ನಂತರ ನಾವು ನಾಗರಿಕರ ರಾಷ್ಟ್ರೀಯ ನೋಂದಣಿಯನ್ನು ತರುತ್ತೇವೆ. ಆದ್ದರಿಂದ ನಿರಾಶ್ರಿತರು ಚಿಂತಿಸಲು ಯಾವುದೇ ಕಾರಣವಿಲ್ಲ. ಆದರೆ ನುಸುಳುಕೋರರು ಖಂಡಿತವಾಗಿಯೂ ಚಿಂತೆಯಾಬೇಕು, ಅವರಲ್ಲಿ ಒಂದು ಕಾರಣವಿದೆ. ಆದ್ದರಿಂದ ಕ್ರೊನೋಲಜಿಯನ್ನು ಅರ್ಥಮಾಡಿಕೊಳ್ಳಿ,” ಎಂದು ಹೇಳಿದ್ದರು. “ಕ್ರೊನೋಲಜಿ ಸಮಜಿಯೇ” ಎಂಬ ಶಾ ಭಾಷಣದ ಈ ವಿಡಿಯೋ ತುಂಬಾ ವೈರಲ್‌ ಆಗಿತ್ತು. &#8220;ಎನ್‌ಆರ್‌ಸಿ ಬಂಗಾಳಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಇರುತ್ತದೆ, ಏಕೆಂದರೆ &#8220;ಎಲ್ಲೆಡೆ ನುಸುಳುಕೋರರು ತುಂಬಿದ್ದಾರೆ,&#8221; ಎಂದು ಅವರು ಹೇಳಿದ್ದರು. ಡಿಸೆಂಬರ್ 10, 2019 ರಂದು ಸಂಸತ್ತಿನಲ್ಲಿ NRC ಖಂಡಿತವಾಗಿಯೂ ಬರಲಿದೆ ಮತ್ತು ಅದನ್ನು ಜಾರಿಗೆ ತಂದಾಗ &#8220;ಒಬ್ಬ ನುಸುಳುಕೋರನಿಗೂ ಉಳಿಗಾಲವಿಲ್ಲ,” ಎಂದು ಅಮಿತ್‌ ಶಾ ಹೇಳಿದ್ದರು.</p>



<p>ಅಂದರೆ, ಶಾ ಹೇಳಿದ್ದು, ಎನ್‌ಆರ್‌ಸಿ ಒಂದು ಪ್ರಕ್ರಿಯೆ, &nbsp;ಭಾರತದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಪೌರತ್ವವನ್ನು ಅವರು ಒದಗಿಸುವ ದಾಖಲೆಗಳ ಆಧಾರದ ಮೇಲೆ ಪರೀಕ್ಷಿಸಲಾಗುತ್ತದೆ. ಎನ್‌ಆರ್‌ಸಿಯನ್ನು ಮೊದಲು ಜಾರಿಗೆ ತಂದ ಅಸ್ಸಾಂನಲ್ಲಿ ಅದು ಉಂಟುಮಾಡಿದ ಅಪಾಯಗಳು ನಮ್ಮ ಕಣ್ಣ ಮುಂದೆ ಇವೆ. ಅಸ್ಸಾಮಿನಲ್ಲಿ ಸರಿಯಾದ ದಾಖಲೆಗಳನ್ನು ನೀಡಿ ಸಾಬೀತು ಮಾಡಲಾಗದ ಸುಮಾರು 19 ಲಕ್ಷ ಜನರನ್ನು ಭಾರತೀಯ ನಾಗರಿಕರೆಂದು ಪರಿಗಣಿಸದೆ ಹೊರಗಿಡಲಾಗಿದೆ. ಇವರಲ್ಲಿ ಬಹುತೇಕರು ಹಿಂದೂಗಳು.</p>



<p>ಸಿಎಎ ಹಿಂದಿನ ಉದ್ದೇಶವೆಂದರೆ, ಎನ್‌ಆರ್‌ಸಿಯಲ್ಲಿ ದಾಖಲೆ ನೀಡಲಾಗದೆ ಪೌರತ್ವದಿಂದ ಹೊರಗಿಡಲ್ಪಟ್ಟ ಹಿಂದೂಗಳಿಗೆ ಸಿಎಎ ಪೌರತ್ವ ನೀಡುತ್ತದೆ. ಆದರೆ ಈ ಇಡೀ ಪ್ರಕ್ರಿಯೆಯಲ್ಲಿ ವಿಫಲರಾದ ಮುಸ್ಲಿಮರಿಗೆ ಯಾವುದೇ ಮಾರ್ಗವಿಲ್ಲ. ಅವರನ್ನು &#8216;ನುಸುಳುಕೋರರು&#8217; ಎಂದು ಬ್ರಾಂಡ್ ಮಾಡಿ ಹಿಂಸಿಸುವ ಸಾಧ್ಯತೆಗಳಿವೆ.</p>



<p>ಆದ್ದರಿಂದ ಸದ್ಯ ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಈ ‌ʼಪಾಸಿಟಿವ್ ನರೇಟಿವ್‌ʼ ಪ್ರಕಟಣೆಯಲ್ಲಿ ಹೇಳಿರುವುದಕ್ಕೆ ಅರ್ಥವಿಲ್ಲ, ಅದೊಂದು ಸುಳ್ಳು. ಸದ್ಯ ಎನ್‌ಆರ್‌ಸಿಯನ್ನು ಜಾರಿಗೆ ತರುವ ತನ್ನ ಯೋಜನೆಗಳನ್ನು ಮೋದಿ ಸರ್ಕಾರ ಕೈಬಿಟ್ಟಿದ್ದರೂ, ಭಾರತೀಯ ಮುಸ್ಲಿಮರು ತಮ್ಮ ಪೌರತ್ವದ ಮೇಲೆ ಸಿಎಎ ಪರಿಣಾಮ ಬೀರುತ್ತದೆ ಎಂದು ಚಿಂತೆ ಮಾಡಬೇಡಿ ಎಂದಿರುವುದರಲ್ಲಿ ಸತ್ಯವೇ ಇಲ್ಲ.</p>



<p>ಈಗ, ಭಾರತದ ಮುಸ್ಲೀಂ ಮತ್ತು ಹಿಂದೂ ಮಹಿಳೆಯರಿಬ್ಬರು ದಾಖಲೆ ಇಲ್ಲದ ಎಂದೋ ಹಿಂದೆ ಬಾಂಗ್ಲಾದಿಂದ ಬಂದಿರುವ ಅವರದೇ ಧರ್ಮದ ಪುರುಷರನ್ನು ಮದುವೆ ಆಗಿತ್ತಾರೆ ಎಂದುಕೊಳ್ಳಿ. ತಿದ್ದುಪಡಿ ಮಾಡದ ಪೌರತ್ವ ಕಾಯ್ದೆಯಡಿಯಲ್ಲಿ ತಾಯಂದಿರು ಭಾರತೀಯರಾದರೂ ಅವರ ಮಕ್ಕಳನ್ನು &#8216;ಅಕ್ರಮ ವಲಸಿಗರು&#8217; ಎಂದು ಪರಿಗಣಿಸಲಾಗುತ್ತದೆ ಮತ್ತು ಮಕ್ಕಳನ್ನು ಅವರ ತಂದೆಯೊಂದಿಗೆ ಗಡೀಪಾರು ಮಾಡಬೇಕಾಗುತ್ತದೆ. ಒಂದು ವೇಳೆ CAA ಈ ಹಿಂದೂ ಕುಟುಂಬಕ್ಕೆ ಭಾರತದಲ್ಲಿ ಬದುಕಲು ಅವಕಾಶ ನೀಡಿದರೂ, ಮುಸ್ಲೀಂ ಮಹಿಳೆ ಮಾತ್ರ ತನ್ನ ಪತಿ ಮತ್ತು ಮಕ್ಕಳನ್ನು ಬಾಂಗ್ಲಾಕ್ಕೆ ಕಳಿಸಬೇಕಾಗುತ್ತದೆ. ಆಕೆಗೆ ಇರುವ ಎರಡು ಅವಕಾಶಗಳೆಂದರೆ: ಒಂದೋ ತನ್ನ ಕುಟುಂಬದ ಜೊತೆಗೆ ಭಾರತವನ್ನು ಬಿಡಬೇಕು, ಇಲ್ಲವೇ ತನ್ನ ಪತಿ ಮತ್ತು ಮಕ್ಕಳನ್ನು ಬಾಂಗ್ಲಕ್ಕೆ ಕಳುಹಿಸಿ ಒಂಟಿಯಾಗಿ ಭಾರತದಲ್ಲೇ ಬದುಕಬೇಕು.</p>



<p style="font-size:16px"><strong>2. ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಕ್ಕೆ ಈ ಅಕ್ರಮ ಮುಸ್ಲಿಂ ವಲಸಿಗರನ್ನು ವಾಪಸು ಕಳುಹಿಸಲು ಯಾವುದೇ ನಿಬಂಧನೆ ಅಥವಾ ಒಪ್ಪಂದವಿದೆಯೇ?</strong></p>



<p><strong>ಗೃಹ ಸಚಿವಾಲಯದ ಉತ್ತರ:</strong> ಮುಸ್ಲೀಂ ವಲಸಿಗರನ್ನು ಈ ದೇಶಗಳಿಗೆ ಮರಳಿ ಕಳುಹಿಸಲು ಭಾರತ ಈ ದೇಶಗಳೊಂದಿಗೆ ಯಾವುದೇ ರೀತಿಯ ಒಪ್ಪಂದವನ್ನು ಮಾಡಿಕೊಂಡಿಲ್ಲ. ಈ ಪೌರತ್ವ ಕಾಯ್ದೆಗೂ ಅಕ್ರಮ ವಲಸಿಗರ ಗಡೀಪಾರಿಗೂ ಯಾವುದೇ ಸಂಬಂಧ ಇಲ್ಲ. ಆದ್ದರಿಂದ ಸಿಎಎ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧವಾಗಿದೆ ಎಂಬ ಮುಸ್ಲಿಮರು ಮತ್ತು ವಿದ್ಯಾರ್ಥಿಗಳು ಹಾಗೂ ಒಂದು ವರ್ಗದ ಜನರ ವಾದಕ್ಕೆ ಅರ್ಥವಿಲ್ಲ. </p>



<p><strong>ನಿಜ ಏನು?</strong> ಇದೊಂದು ಭಯಂಕರ ಮೋಸ ಮತ್ತು ಹಸಿಹಸಿ ಸುಳ್ಳು. ಭಾರತದಲ್ಲಿ <a href="https://www.indiacode.nic.in/bitstream/123456789/2259/3/A1946-31.pdf" data-type="link" data-id="https://www.indiacode.nic.in/bitstream/123456789/2259/3/A1946-31.pdf">ವಿದೇಶಿಯರ ಕಾಯಿದೆ (ವಿಭಾಗ 3)</a> &#8211; Foreigners Act (Section 3) &nbsp;ಮತ್ತು <a href="https://www.mha.gov.in/PDF_Other/act1920_17042017.pdf" data-type="link" data-id="https://www.mha.gov.in/PDF_Other/act1920_17042017.pdf">ಪಾಸ್‌ಪೋರ್ಟ್ (ಭಾರತಕ್ಕೆ ಪ್ರವೇಶ) ಕಾಯಿದೆ</a> (ವಿಭಾಗ 5) &#8211; Passport (Entry into India) Act (Section 5) ಎಂಬ ಎರಡು ಕಾಯಿದೆಗಳಿವೆ. ಇವು ಭಾರತದಲ್ಲಿ ಅಕ್ರಮವಾಗಿ ವಾಸಿಸುವವರನ್ನು ಗಡಿಪಾಡು ಮಾಡಲು ಸರ್ಕಾರಕ್ಕೆ ಅಧಿಕಾರವನ್ನು ನೀಡಿವೆ. ಈಗಾಗಲೇ ದೇಶದಲ್ಲಿ ಅಕ್ರಮವಾಗಿ ತಂಗಿದ್ದಾರೆ ಎಂದು ಕಂಡುಬಂದಿರುವ ವ್ಯಕ್ತಿಗಳನ್ನು ಗಡೀಪಾರು ಮಾಡಲು ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.</p>



<p>ಆ ವ್ಯಕ್ತಿಯನ್ನು ಆತನ ದೇಶಕ್ಕೆ ಗಡಿಪಾರು ಮಾಡಲು ಯಾವುದೇ ಒಪ್ಪಂದಗಳು ಇಲ್ಲದೇ ಇದ್ದಾಗ, ಆತನಿಗೆ ಜೈಲು ಶಿಕ್ಷೆ ನೀಡಲಾಗುತ್ತದೆ ಅಥವಾ ಡಿಟೆನ್ಷನ್‌ ಕ್ಯಾಂಪ್‌ಗೆ ಹಾಕಲಾಗುತ್ತದೆ. ಈ ಎರಡು ಕಾಯಿದೆಗಳನ್ನು ಬಳಸುವುದಿಲ್ಲ ಎಂಬುದು ಯಾವ ಗ್ಯಾರಂಟಿ? ಒಂದು ವೇಳೆ ʼಅಕ್ರಮ ವಲಸಿಗ ಮುಸ್ಲೀಮರನ್ನುʼ ಜೈಲು ಅಥವಾ ಡಿಟೆನ್ಸಷನ್‌ ಕ್ಯಾಂಪಿಗೆ ಹಾಕದೇ ಇದ್ದರೂ, ಅವರ ಮತದಾನದ ಹಕ್ಕನ್ನು ಕಸಿಯುವ ಸಾಧ್ಯತೆಯಿದೆ.</p>



<p style="font-size:16px"><strong>3. ಅಕ್ರಮ ವಲಸಿಗ ಎಂದರೆ ಯಾರು?</strong></p>



<p><strong>ಗೃಹ ಸಚಿವಾಲಯದ ಉತ್ತರ:</strong> ಪೌರತ್ವ ಕಾಯ್ದೆ, 1955 ರಂತೆ, ಈ ಸಿಎಎ ಕೂಡ ಕಾನೂನುಬಾಹಿರ ವಲಸಿಗರನ್ನು ಮಾನ್ಯತೆ ಇರುವ ಯಾವುದೇ ದಾಖಲೆಗಳಿಲ್ಲದೆ ಭಾರತವನ್ನು ಪ್ರವೇಶಿಸಿರುವ ವಿದೇಶಿ ಎಂದು ಪರಿಗಣಿಸುತ್ತದೆ.</p>



<p><strong>ನಿಜ ಏನು?</strong> 2003 ರಲ್ಲಿ <a href="https://www.refworld.org/legal/legislation/natlegbod/2004/en/14043" data-type="link" data-id="https://www.refworld.org/legal/legislation/natlegbod/2004/en/14043">ವಾಜಪೇಯಿ ಸರ್ಕಾರವು &#8216;ಅಕ್ರಮ ವಲಸಿಗರು&#8217; ನ್ಯಾಚುರಲೈಸೇಷನ್ </a>ಅಥವಾ ಮದುವೆಯ ಮೂಲಕ ಭಾರತೀಯ ಪೌರತ್ವವನ್ನು ಪಡೆದುಕೊಳ್ಳುವುದನ್ನು ನಿಷೇಧಿಸಲು ಪೌರತ್ವ ಕಾಯ್ದೆಯಲ್ಲಿ ತಿದ್ದುಪಡಿ ತಂದಿತು . 2016 ರಲ್ಲಿ ಮೋದಿ ಸರ್ಕಾರವು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದಿರುವ ಮುಸ್ಲಿಮೇತರ &#8216;ಅಕ್ರಮ ವಲಸಿಗರನ್ನು&#8217; ಈ ಕಾನೂನಿನಿಂದ ಹೊರಗಿಡಲು <a href="https://prsindia.org/billtrack/the-citizenship-amendment-bill-2016" data-type="link" data-id="https://prsindia.org/billtrack/the-citizenship-amendment-bill-2016">ಕಾಯಿದೆಯಲ್ಲಿ ತಿದ್ದುಪಡಿ</a>ಯನ್ನು ಮಾಡಿತು. ಇದು ಡಿಸೆಂಬರ್ 31, 2014 ರ ಮೊದಲು ಭಾರತಕ್ಕೆ ಬಂದಿರುವ ʼಅಕ್ರಮ ವಲಸಿಗ ಹಿಂದೂಗಳಿಗೆʼ ವಿನಾಯಿತಿಯನ್ನು ನೀಡಿದೆ. CAA-2019 ಈಗ ಇದನ್ನು ಒಂದು ಹೆಜ್ಜೆ ಮುಂದಕ್ಕೆ ತೆಗೆದುಕೊಂಡು ಹೋಗಿ, ಅವರ ಪೌರತ್ವದ ಟ್ರ್ಯಾಕಿಂಗ್ ಮಾಡುವ ಪ್ರಕ್ರಿಯೆಗೆ ವೇಗವನ್ನು ನೀಡಿದೆ. &nbsp;</p>



<p>ಸರಳವಾಗಿ ಹೇಳುವುದಾದರೆ, ಡಿಸೆಂಬರ್ 31, 2014 ರವರೆಗೆ ಮಾನ್ಯತೆ ಇರುವ ದಾಖಲೆಗಳಿಲ್ಲದೆ ಭಾರತಕ್ಕೆ ಬಂದಿರುವ ಪಾಕಿಸ್ತಾನ, ಬಾಂಗ್ಲಾದೇಶ ಅಥವಾ ಅಫ್ಘಾನಿಸ್ತಾನದ ಮುಸ್ಲೀಮರನ್ನು ಮಾತ್ರ ಅಕ್ರಮ ವಲಸಿಗರು ಎಂದು ಪರಿಗಣಿಸಲಾಗುತ್ತದೆ, ಮುಸ್ಲೀಮೇತರರನ್ನು ಅಲ್ಲ! ಧರ್ಮದ ಆಧಾರದ ಮೇಲೆ ಮಾಡುವ ಈ ತಾರತಮ್ಯ ಭಾರತೀಯ ಸಂವಿಧಾನಕ್ಕೆ ವಿರುದ್ಧವಾಗಿದೆ. ಇದು ಸಂವಿಧಾನದ ಆರ್ಟಿಕಲ್‌ 26ವನ್ನು ಉಲ್ಲಂಘಿಸುತ್ತದೆ.</p>



<p style="font-size:16px"><strong>4. ಇಸ್ಲಾಂ ಮೇಲೆ ಈ ಕಾಯಿದೆ ಬೀರುವ ಪ್ರಭಾವವೇನು?</strong></p>



<p><strong>ಗೃಹ ಸಚಿವಾಲಯದ ಉತ್ತರ: </strong>ಆ ಮೂರು ಮುಸ್ಲಿಂ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರ (ಮುಸ್ಲೀಮೇತರ) ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದಾಗಿ ಇಸ್ಲಾಂ ಧರ್ಮಕ್ಕೆ ಪ್ರಪಂಚದಾದ್ಯಂತ ಕೆಟ್ಟ ಕಳಂಕ ಬಂದಿದೆ. ಎಷ್ಟೇ ಆದರೂ ಇಸ್ಲಾಂ ಒಂದು ಶಾಂತಿಯುತ ಧರ್ಮ, ಧಾರ್ಮಿಕತೆಯ ಆಧಾರದಲ್ಲಿ ದ್ವೇಷ/ಹಿಂಸೆ/ ಕಿರುಕುಳ ನೀಡುವುದನ್ನು ಅದು ಎಂದಿಗೂ ಬೋಧಿಸುವುದಿಲ್ಲ. ಈ ಶೋಷಣೆಗೆ ಸಹಾನುಭೂತಿ ಮತ್ತು ಪರಿಹಾರವನ್ನು ನೀಡಲು ತಂದಿರುವ ಈ ಕಾಯಿದೆ ಇಸ್ಲಾಂ ಧರ್ಮವನ್ನು ಈ ಕಳಂಕದಿಂದ ರಕ್ಷಿಸುತ್ತದೆ. </p>



<p><strong>ನಿಜ ಏನು?</strong> ಧಾರ್ಮಿಕತೆಯ ಕಾರಣಕ್ಕೆ ಕಿರುಕುಳಕ್ಕೆ ಒಳಗಾದವರನ್ನು ಮುಸ್ಲೀಂ ರಾಷ್ಟ್ರಗಳಿಂದ ಮಾತ್ರ ಯಾಕೆ ಎತ್ತಿಕೊಳ್ಳಲಾಗಿದೆ ಎಂಬುದು ಅರ್ಥವಾಗಿಲ್ಲ. ಇಲ್ಲಿ ಮುಸ್ಲಿಮೇತರ ನೆರೆಯ ರಾಷ್ಟ್ರಗಳಾದ ಮ್ಯಾನ್ಮಾರ್, ಚೀನಾ ಮತ್ತು ಶ್ರೀಲಂಕಾದಲ್ಲಿ ದೌರ್ಜನ್ಯಕ್ಕೆ ಒಳಗಾದ ಮುಸ್ಲೀಮೇತರರಿಗೆ ಅವಕಾಶ ಇಲ್ಲವೇ? ಮುಸ್ಲಿಂ ರಾಷ್ಟ್ರಗಳಲ್ಲಿ ನಡೆದ ಶೋಷಣೆಯಲ್ಲಿ ಮಾತ್ರ ಏನು ಸ್ಪೆಷಾಲಿಟಿ ಇದೆ ಎಂಬುದನ್ನು ಕೇಂದ್ರ ವಿವರಿಸಿಲ್ಲ. ಈಗ ಚೀನಾದಲ್ಲಿ ಓರ್ವ ಹಿಂದೂವಿನ ಮೇಲೆ ದೌರ್ಜನ್ಯವಾದರೆ ಆತ ಏನು ಮಾಡಬೇಕು? ಇದಕ್ಕಾಗಿ ಕೇಂದ್ರ ಬೇರೆಯದೇ ಕಾನೂನನ್ನು ತರುತ್ತದೆಯೇ? &nbsp;ತಾನು ಕಳಂಕದಿಂದ ರಕ್ಷಿಸಲು ಹೊರಟಿರುವ ʼಇಸ್ಲಾಂʼನಿಂದ ಮುಸ್ಲೀಮರನ್ನು ಬೇರೆಯಾಗಿ ಕೇಂದ್ರ ಹೇಗೆ ನೋಡುತ್ತದೆ? </p>



<p>ಸಿಎಎ ಇಸ್ಲಾಂ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಇಟ್ಟುಕೊಳ್ಳೋಣ, ಆದರೆ ಇದು ನಮ್ಮ ʼಐಡಿಯಾ ಆಫ್‌ ಇಂಡಿಯಾʼ, ಭಾರತದ ಎಲ್ಲರನ್ನೂ ಒಳಗೊಂಡು ಬೆಳೆಯುವ ಸಾಂಸ್ಕೃತಿಕ ಮೌಲ್ಯಗಳಿಗೆ ವಿರುದ್ದವಾಗಿದೆ. ಭಾರತ ಮೂರು ಸಾವಿರ ವರ್ಷಗಳ ಹಿಂದಿನಿಂದಲೂ ಲೆಕ್ಕವಿಲ್ಲದಷ್ಟು ಜನಾಂಗಗಳಿಗೆ ನೆಲೆಯನ್ನು ನೀಡಿದೆ. ಆದರೆ ಇತಿಹಾಸದಲ್ಲಿ ಮೊದಲ ಬಾರಿಗೆ ಮನುಷ್ಯನ ಪೌರತ್ವವನ್ನು, ಬದುಕುವ ಹಕ್ಕನ್ನು ಹತ್ತಿಕ್ಕಲು ಧರ್ಮವನ್ನು ಮಾನದಂಡವಾಗಿ ಬಳಸಿದೆ, ಇದು ಭಾರತದ ಸಂಸ್ಕೃತಿ, ಮೌಲ್ಯಗಳಿಗೆ ಬಗೆದ ದ್ರೋಹ.</p>



<p style="font-size:16px"><strong>5. ಭಾರತದ ಪೌರತ್ವ ಪಡೆಯಲು ಮುಸ್ಲಿಮರಿಗೆ ನಿರ್ಬಂಧವಿದೆಯೇ?</strong></p>



<p><strong>ಗೃಹ ಸಚಿವಾಲಯದ ಉತ್ತರ:</strong> ಇಲ್ಲ, ಪೌರತ್ವ ಕಾಯ್ದೆಯ ಸೆಕ್ಷನ್ 6 ರ ಅಡಿಯಲ್ಲಿ ಭಾರತದ ಪೌರತ್ವವನ್ನು ಪಡೆಯಲು ಜಗತ್ತಿನ ಯಾವ ಮೂಲೆಯಿಂದಾದ ಮುಸ್ಲೀಮರು ಬಂದರೂ, ಅವರಿಗೆ ಯಾವುದೇ ನಿರ್ಬಂಧವಿಲ್ಲ, ಪೌರತ್ವವನ್ನು ನ್ಯಾಚುರಲೈಸೇಷನ್‌ ಆಧಾರದಲ್ಲಿ ನೀಡಲಾಗುತ್ತದೆ.</p>



<p><strong>ನಿಜ ಏನು?</strong> 2003 ರಿಂದ ಪೌರತ್ವ ಕಾಯಿದೆಯು ಅಕ್ರಮ ವಲಸಿಗರಾಗಿರುವ ಯಾರೇ ಆದರೂ ಭಾರತದ ಪೌರತ್ವವನ್ನು ಪಡೆದುಕೊಳ್ಳುವುದನ್ನು ನಿರ್ಬಂಧಿಸುತ್ತದೆ. ಆದರೆ, ಈ ಸಿಎಎ ಮಾತ್ರ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಬಂದಿರುವ ʼಮುಸ್ಲಿಮೇತರ ಅಕ್ರಮ ವಲಸಿಗರಿಗೆʼ ಮತ್ತು ಅವರಿಗೆ ಭಾರತದಲ್ಲಿ ಹುಟ್ಟಿದ ಅವರ ಮಕ್ಕಳಿಗೆ ಭಾರತದ ಪೌರತ್ವವನ್ನು ಪಡೆಯಲು ಅವಕಾಶ ನೀಡುತ್ತದೆ. ಆದರೆ ಅಕ್ರಮ ವಲಸಿಗರು ಮುಸ್ಲೀಮರಾದರೆ, ಅವರಿಗೆ ಇದು ಸಾಧ್ಯವಿಲ್ಲ. </p>



<p style="font-size:16px"><strong>6. ಈ ತಿದ್ದುಪಡಿಯ ಅಗತ್ಯವೇನು?</strong></p>



<p><strong>ಗೃಹ ಸಚಿವಾಲಯದ ಉತ್ತರ:</strong> ಆ ಮೂರು ದೇಶಗಳಲ್ಲಿ ಕಿರುಕುಳಕ್ಕೊಳಗಾಗಿರುವ (ಮುಸ್ಲೀಮೇತರ) ಅಲ್ಪಸಂಖ್ಯಾತರಿಗೆ ಕರುಣೆ ತೋರಿಸಲು, ಈ ಕಾಯಿದೆಯು ಭಾರತದ ಉದಾರ ಸಂಸ್ಕೃತಿಯ ಪ್ರಕಾರ ಅವರ ಸಂತೋಷ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಭಾರತೀಯ ಪೌರತ್ವವನ್ನು ಪಡೆಯಲು ಅವರಿಗೆ ಅವಕಾಶವನ್ನು ನೀಡುತ್ತದೆ. ಪೌರತ್ವ ವ್ಯವಸ್ಥೆಯನ್ನು ಕಸ್ಟಮೈಸ್ ಮಾಡಲು ಮತ್ತು ಅಕ್ರಮ ವಲಸಿಗರನ್ನು ನಿಯಂತ್ರಿಸಲು ಈ ಕಾಯಿದೆಯ ಅಗತ್ಯವಿದೆ.</p>



<p><strong>ನಿಜ ಏನು?</strong> ಕಿರುಕುಳಕ್ಕೊಳಗಾದ ಜನರಿಗೆ ಈ ಮಟ್ಟಿಗೆ ಔದಾರ್ಯ ತೋರಿಸಲು ಧರ್ಮ ಆಧಾರಿತ ವಿನಾಯಿತಿಯನ್ನು ನೀಡುವ ಅಗತ್ಯವಿರಲಿಲ್ಲ. ತಮ್ಮ ಮೂಲದ ದೇಶದಲ್ಲಿ ಶೋಷಣೆಗೆ ಒಳಗಾಗುವ ಭಯವನ್ನು ಹೊಂದಿರುವ ಯಾವುದೇ ಅಕ್ರಮ ವಲಸಿಗರಿಗೆ ಭಾರತದಲ್ಲಿ ಅನಿರ್ದಿಷ್ಟಾವಧಿಯ ವರೆಗೆ ಉಳಿಯಲು ಅನುಮತಿ ನೀಡಲಾಗುವುದು ಮತ್ತು ಸರಿಯಾದ ಸಮಯ ಸಂದರ್ಭದಲ್ಲಿ ಅವರು ಭಾರತೀಯ ಪೌರತ್ವಕ್ಕೆ ಅರ್ಹರಾಗುತ್ತಾರೆ ಎಂದು ಕೇಂದ್ರ ಸರ್ಕಾರ ಹೇಳಬೇಕಾಗಿತ್ತು. ಈ ರೀತಿಯೇ ಬೇರೆಲ್ಲಾ ದೇಶಗಳು ತಮ್ಮಲ್ಲಿ ಇರುವ ನಿರಾಶ್ರಿತರನ್ನು ʼನ್ಯಾಚುರಲೈಸ್‌ʼ ಮಾಡುವುದು, ಇದಕ್ಕೆ ನಿರಾಶ್ರಿತನ ಧರ್ಮವನ್ನು ನೀಡುವ ಅಗತ್ಯವಿಲ್ಲ.</p>



<p style="font-size:16px"><strong>7. ಸರ್ಕಾರ ತೆಗೆದುಕೊಂಡಿರುವ ಹಿಂದಿನ ಕ್ರಮಗಳೇನು?</strong></p>



<p><strong>ಗೃಹ ಸಚಿವಾಲಯದ ಉತ್ತರ:</strong> 2016 ರಲ್ಲಿ ಕೇಂದ್ರ ಸರ್ಕಾರ ಆ ಮೂರು ದೇಶಗಳ ಅಲ್ಪಸಂಖ್ಯಾತರನ್ನು ಭಾರತದಲ್ಲಿ ಉಳಿಯಲು ಬೇಕಾದ ದೀರ್ಘಾವಧಿ ವೀಸಾವನ್ನು ಪಡೆಯಲು ಅರ್ಹರನ್ನಾಗಿ ಮಾಡಿದೆ.</p>



<p><strong>ಸತ್ಯ ಏನು? </strong>&nbsp;ಆದರೆ ಕೇಂದ್ರ ಕೆಲವು ವಿಚಾರಗಳನ್ನು ಮರೆತಂತಿದೆ. ಅಫ್ಘಾನಿಸ್ತಾನದಲ್ಲಿರುವ ತಾಲಿಬಾನ್‌ ಆಡಳಿತದಿಂದ ಪಲಾಯನ ಮಾಡಿ ಭಾರತಕ್ಕೆ ಬರಲು ಬಯಸಿದ ಸಿಖ್‌ಗಳಿಗೆ ಭಾರತದ ವೀಸಾ ಸಿಗುವುದು ಸುಲಭವಿರಲಿಲ್ಲ. <a href="https://www.hindustantimes.com/world-news/hed-not-have-died-this-brutally-had-wife-of-sikh-man-killed-in-kabul-attack-101655656793779.html" data-type="link" data-id="https://www.hindustantimes.com/world-news/hed-not-have-died-this-brutally-had-wife-of-sikh-man-killed-in-kabul-attack-101655656793779.html">ಕಾಬೂಲ್‌ನಲ್ಲಿ ಭಯೋತ್ಪಾದಕರಿಂದ ಹತ್ಯೆಯಾದ ಸಿಖ್ ವ್ಯಕ್ತಿ</a>ಗೆ ಭಾರತ ವೀಸಾವನ್ನೇ ನೀಡಿರಲಿಲ್ಲ. 2021-22ರಲ್ಲಿ ಭಾರತದಲ್ಲಿ ಉಳಿಯಲು ಬಯಸಿದ <a href="https://timesofindia.indiatimes.com/city/jaipur/no-indian-citizenship-1500-pak-hindus-return-in-18-mths/articleshow/93699054.cms" data-type="link" data-id="https://timesofindia.indiatimes.com/city/jaipur/no-indian-citizenship-1500-pak-hindus-return-in-18-mths/articleshow/93699054.cms">1500 ಪಾಕಿಸ್ತಾನಿ ಹಿಂದೂಗಳು </a>ಭಾರತ ಸರ್ಕಾರ ಉಂಟು ಮಾಡಿದ ಒತ್ತಡ ಮತ್ತು ಅನೇಕ ಅಡೆತಡೆಗಳಿಂದಾಗಿ ಮರಳಿ ಪಾಕಿಸ್ತಾನಕ್ಕೆ ಹೋಗಬೇಕಾಯ್ತು. ಮ್ಯಾನ್ಮಾರ್‌ನಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಪಲಾಯನ ಮಾಡಿದ ರೋಹಿಂಗ್ಯಾಗಳನ್ನು ಭಾರತ ಸರ್ಕಾರ ಗಡಿಪಾರು ಮಾಡಿದೆ.</p>



<p style="font-size:16px"><strong>8. ಯಾವುದೇ ವಿದೇಶಿ ದೇಶದಿಂದ ಬರುವ ಮುಸ್ಲಿಂ ವಲಸಿಗರಿಗೆ ಯಾವುದಾದರೂ ನಿರ್ಬಂಧವಿದೆಯೇ?</strong></p>



<p><strong>ಗೃಹ ಸಚಿವಾಲಯದ ಉತ್ತರ:</strong> ಸಿಎಎ ನ್ಯಾಚುರಲೈಸೇಷನ್‌ ಕಾನೂನುಗಳನ್ನು ರದ್ದುಗೊಳಿಸುವುದಿಲ್ಲ. ಆದ್ದರಿಂದ, ಯಾವುದೇ&nbsp;ದೇಶದಿಂದ ವಲಸೆ ಬಂದಿರುವ ಮುಸಲ್ಮಾನ ಸೇರಿದಂತೆ ಯಾವುದೇ ವ್ಯಕ್ತಿ ಭಾರತೀಯ ಪ್ರಜೆಯಾಗಲು ಬಯಸಿದರೆ, ಆತ ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು. ಈ ಕಾಯಿದೆಯು ಆ ಮೂರು ಇಸ್ಲಾಮಿಕ್ ದೇಶಗಳಲ್ಲಿ ತಮ್ಮ ರೀತಿಯ ಇಸ್ಲಾಂ ಪದ್ದತಿಗಳನ್ನು ಅನುಸರಿಸಿದ ಕಾರಣಕ್ಕೆ ಕಿರುಕುಳಕ್ಕೊಳಗಾದ ಯಾವುದೇ ಮುಸಲ್ಮಾನನ್ನು ಸದ್ಯ ಇರುವ ಕಾನೂನುಗಳ ಅಡಿಯಲ್ಲಿ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವುದನ್ನು ತಡೆಯುವುದಿಲ್ಲ. </p>



<p><strong>ನಿಜ ಏನು? &nbsp;</strong>ಈ ಉತ್ತರವನ್ನು ನೋಡಿ, ಕೇಂದ್ರಕ್ಕೆ ಒಂದು ವಿಚಾರ ಚೆನ್ನಾಗಿ ತಿಳಿದಂತಿದೆ: ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಮುಸ್ಲಿಮರು ತಮ್ಮದೇ ಆದ ಭಿನ್ನ ಇಸ್ಲಾಂ ಸಂಸ್ಕೃತಿಯನ್ನು (ಡಿಫರೆಂಟ್‌ ವರ್ಷನ್‌ ಆಫ್‌ ಇಸ್ಲಾಂ) ಅನುಸರಿಸಿದ ಕಾರಣಕ್ಕೆ ಅಲ್ಲಿ ಅವರು ಕಿರುಕುಳಕ್ಕೆ ಒಳಗಾಗಿದ್ದಾರೆ ಎಂಬುದು. ಆದರೆ ಅವರು ಮಾನ್ಯತೆ ಇರುವ ದಾಖಲೆಗಳಿಲ್ಲದೆ ಭಾರತವನ್ನು ಪ್ರವೇಶಿಸಿದರೆ ಅಥವಾ ವೀಸಾದ ಅವಧಿಯನ್ನು ಮೀರಿದರೆ ಅವರು ಸಹಜವಾಗಿಯೇ &nbsp;ಅಕ್ರಮ ವಲಸಿಗರು ಎಂದು ಪರಿಗಣಿಸಲ್ಪಡುತ್ತಾರೆ.&nbsp;ಹೀಗಾಗಿ ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಭಾರತೀಯ ಪೌರತ್ವಕ್ಕೆ ಅವರು ಅನರ್ಹರಾಗುತ್ತಾರೆ. ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಅವರಿಗೆ ಸಾಧ್ಯವಿಲ್ಲ.</p>



<p>ಇವಿಷ್ಟು ಕೇಂದ್ರ ಸರ್ಕಾರದ ಅರೆಬೆಂದ ಸುಳ್ಳುಗಳಿಂದ ತುಂಬಿರುವ, ಜನರ ದಿಕ್ಕು ತಪ್ಪಿಸಲೆಂದೇ ಪ್ರಕಟ ಮಾಡಿರುವ ಸಿಎಎಯ ಬಗ್ಗೆ ಧನಾತ್ಮಕ ನಿರೂಪಣೆ. ಆದರೆ, ಇದನ್ನು ಪ್ರಕಟಿಸಿ ದಿನ ಒಂದು ಕಳೆಯುವ ಮೊದಲೇ ತೆಗೆದು ಹಾಕಿದ್ದಾರೆ. ಇದರಲ್ಲಿ ಇರುವ ಸುಳ್ಳು ಕೇಂದ್ರಕ್ಕೆ ಗೊತ್ತಿದೆ. ಜನ ಬುದ್ದಿವಂತರಾಗಿ, ಈ ಸುಳ್ಳು ಪ್ರಶ್ನೋತ್ತರಾವಳಿಯನ್ನು ವಿಶ್ಲೇಷಣೆ ಮಾಡಿದರೆ ಕೇಂದ್ರದ ಕಪಟ ತಂತ್ರ ಹೊರಗೆ ಬರುತ್ತದೆ ಎಂಬುದು ಅದಕ್ಕೆ ಗೊತ್ತಾಗಿದೆ, ಹಾಗಾಗಿ ಡಿಲಿಟ್‌ ಮಾಡಿದ್ದಾರೆ&#8230;ಅಷ್ಟೇ!</p>
]]></content:encoded>
					
		
		
			</item>
		<item>
		<title>ಪ್ರಪಂಚದಲ್ಲಿ ಅತೀ ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವ ದೇಶ ಭಾರತ!</title>
		<link>https://peepalmedia.com/india-is-worlds-largest-arms-importer/</link>
		
		<dc:creator><![CDATA[Charan Aivarnad]]></dc:creator>
		<pubDate>Tue, 12 Mar 2024 08:18:58 +0000</pubDate>
				<category><![CDATA[ವಿದೇಶ]]></category>
		<category><![CDATA[#America]]></category>
		<category><![CDATA[army]]></category>
		<category><![CDATA[breaking news]]></category>
		<category><![CDATA[import]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Military]]></category>
		<category><![CDATA[modi]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[russia]]></category>
		<category><![CDATA[state politics]]></category>
		<category><![CDATA[Trending]]></category>
		<category><![CDATA[us]]></category>
		<category><![CDATA[weapons]]></category>
		<category><![CDATA[writing]]></category>
		<guid isPermaLink="false">https://peepalmedia.com/?p=36902</guid>

					<description><![CDATA[ಬೆಂಗಳೂರು: ಜಾಗತಿಕ ಶಸ್ತ್ರಾಸ್ತ್ರ ವ್ಯಾಪಾರದಲ್ಲಿ 9.8% ರಷ್ಟು ಪಾಲನ್ನು ಹೊಂದಿರುವ ಭಾರತವು ವಿಶ್ವದ ಅಗ್ರ ಶಸ್ತ್ರಾಸ್ತ್ರ ಆಮದು ದೇಶವಾಗಿದೆ ಎಂದು ಜಾಗತಿಕ ಶಸ್ತ್ರಾಸ್ತ್ರ ಮಾರಾಟವನ್ನು ಪತ್ತೆಹಚ್ಚುವ ಯುರೋಪಿಯನ್ ಥಿಂಕ್ ಟ್ಯಾಂಕ್ ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟಿನ (ಎಸ್‌ಐಪಿಆರ್‌ಐ) ಇತ್ತೀಚಿನ ವರದಿ ಹೇಳಿದೆ. SIPRI ವರದಿಯಂತೆ, ರಷ್ಯಾವು ಭಾರತದ ಪ್ರಮುಖ ಶಸ್ತ್ರಾಸ್ತ್ರ ಪೂರೈಕೆದಾರ ದೇಶವಾಗಿದ್ದು, ಭಾರತ 36% ಶಸ್ತ್ರಾಸ್ತ್ರಗಳನ್ನು ದೇಶದಿಂದ ಆಮದು ಮಾಡಿಕೊಳ್ಳುತ್ತದೆ. ಆದರೂ ಭಾರತವು ಮಿಲಿಟರಿ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ಗಾಗಿ ಪಾಶ್ಚಿಮಾತ್ಯ ದೇಶಗಳು ಮತ್ತು ಸ್ಥಳೀಯ [&#8230;]]]></description>
										<content:encoded><![CDATA[
<p><strong>ಬೆಂಗಳೂರು: </strong>ಜಾಗತಿಕ ಶಸ್ತ್ರಾಸ್ತ್ರ ವ್ಯಾಪಾರದಲ್ಲಿ 9.8% ರಷ್ಟು ಪಾಲನ್ನು ಹೊಂದಿರುವ ಭಾರತವು ವಿಶ್ವದ ಅಗ್ರ ಶಸ್ತ್ರಾಸ್ತ್ರ ಆಮದು ದೇಶವಾಗಿದೆ ಎಂದು ಜಾಗತಿಕ ಶಸ್ತ್ರಾಸ್ತ್ರ ಮಾರಾಟವನ್ನು ಪತ್ತೆಹಚ್ಚುವ ಯುರೋಪಿಯನ್ ಥಿಂಕ್ ಟ್ಯಾಂಕ್ ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟಿನ (ಎಸ್‌ಐಪಿಆರ್‌ಐ) ಇತ್ತೀಚಿನ ವರದಿ ಹೇಳಿದೆ.</p>



<p><a href="https://www.sipri.org/media/press-release/2024/european-arms-imports-nearly-double-us-and-french-exports-rise-and-russian-exports-fall-sharply" data-type="link" data-id="https://www.sipri.org/media/press-release/2024/european-arms-imports-nearly-double-us-and-french-exports-rise-and-russian-exports-fall-sharply">SIPRI ವರದಿ</a>ಯಂತೆ, ರಷ್ಯಾವು ಭಾರತದ ಪ್ರಮುಖ ಶಸ್ತ್ರಾಸ್ತ್ರ ಪೂರೈಕೆದಾರ ದೇಶವಾಗಿದ್ದು, ಭಾರತ 36% ಶಸ್ತ್ರಾಸ್ತ್ರಗಳನ್ನು ದೇಶದಿಂದ ಆಮದು ಮಾಡಿಕೊಳ್ಳುತ್ತದೆ. ಆದರೂ ಭಾರತವು ಮಿಲಿಟರಿ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ಗಾಗಿ ಪಾಶ್ಚಿಮಾತ್ಯ ದೇಶಗಳು ಮತ್ತು ಸ್ಥಳೀಯ ಪೂರೈಕೆದಾರರನ್ನು ಹೆಚ್ಚಾಗಿ ಅವಲಂಬಿಸಿರುವುದರಿಂದ ರಷ್ಯಾದ ಜೊತೆಗಿನ ಒಟ್ಟಾರೆ ಆಮದಿನ ಪಾಲು ಕಡಿಮೆಯಾಗುತ್ತಿದೆ.  ರಷ್ಯಾದ ನಂತರ ಫ್ರಾನ್ಸ್ (33%) ಭಾರತದ ಎರಡನೇ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರ ದೇಶ ಮತ್ತು ಅಮೇರಿಕಾ (13%) ಭಾರತಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುವ ಮೂರನೇ ಅತಿದೊಡ್ಡ ದೇಶ. </p>



<p>2018-22ರ ನಡುವಿನ ಜಾಗತಿಕ ಶಸ್ತ್ರಾಸ್ತ್ರ ಮಾರಾಟದಲ್ಲಿ ಭಾರತದ ಶಸ್ತ್ರಾಸ್ತ್ರ ಆಮದು 11% ರಷ್ಟಿತ್ತು. 2019-2023 ಅವಧಿಯಲ್ಲಿ ಇದು ಸ್ವಲ್ಪ ಕುಸಿದಿದ್ದು &#8211; ಜಾಗತಿಕ ಮಾರಾಟದ 9.8% ಆಮದು ಮಾಡಿಕೊಳ್ಳುತ್ತದೆ ಎಂದು ವರದಿ ಹೇಳಿದೆ.</p>



<p>ಟಾಪ್ 10 ಶಸ್ತ್ರಾಸ್ತ್ರ ಆಮದುದಾರರಲ್ಲಿ, ಸೌದಿ ಅರೇಬಿಯಾ (8.4%), ಕತಾರ್ (7.6%), ಉಕ್ರೇನ್ (4.9%), ಪಾಕಿಸ್ತಾನ (4.3%), ಜಪಾನ್ (4.1%), ಈಜಿಪ್ಟ್ (4%), ಆಸ್ಟ್ರೇಲಿಯಾ (4%) 3.7%), ದಕ್ಷಿಣ ಕೊರಿಯಾ (3.1%) ಮತ್ತು ಚೀನಾ (2.9%). ಅಗ್ರ ಐದು ದೇಶಗಳು 2019-2023ರ ಅವಧಿಯಲ್ಲಿ ಎಲ್ಲಾ ಶಸ್ತ್ರಾಸ್ತ್ರಗಳ ಆಮದುಗಳಲ್ಲಿ 35% ಪಾಲನ್ನು ಹೊಂದಿವೆ. </p>



<p>ಇದಲ್ಲದೆ, 2019-23 ರ ನಡುವೆ ಪಾಕಿಸ್ತಾನದ ಶಸ್ತ್ರಾಸ್ತ್ರ ಆಮದಿನಲ್ಲಿ 43% ಏರಿಕೆ ಕಂಡಿದ್ದು, ಈ ದೇಶ 82% ಶಸ್ತ್ರಾಸ್ತ್ರಗಳನ್ನು ಚೀನಾದಿಂದ ಆಮದು ಮಾಡಿಕೊಂಡಿದೆ ಎಂದು ವರದಿ ತಿಳಿಸಿದೆ.</p>



<p>ಬಲವಾದ ರಕ್ಷಣಾ-ಕೈಗಾರಿಕಾ ನೆಲೆಯನ್ನು ನಿರ್ಮಿಸಲು ನರೇಂದ್ರ ಮೋದಿ ಸರ್ಕಾರ ಒತ್ತಡ ಹಾಕುತ್ತಿದ್ದರೂ ಭಾರತವು ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವ ಅಗ್ರ 25 ದೇಶಗಳಲ್ಲಿ ತನ್ನ ಸ್ಥಾನವನ್ನು ಪಡೆದಿಲ್ಲ. ಟಾಪ್ 10 ಶಸ್ತ್ರಾಸ್ತ್ರ ರಫ್ತು ಮಾಡುವ ದೇಶಗಳು ಅಮೇರಿಕಾ00000 (42%), ಫ್ರಾನ್ಸ್ (11%), ರಷ್ಯಾ (11%), ಚೀನಾ (5.8%), ಜರ್ಮನ್ (5.6%), ಇಟಲಿ (4.3%), ಯುಕೆ (3.7%), ಸ್ಪೇನ್ (2.7%), ಇಸ್ರೇಲ್ (2.4%) ಮತ್ತು ದಕ್ಷಿಣ ಕೊರಿಯಾ (2%). </p>



<p></p>
]]></content:encoded>
					
		
		
			</item>
		<item>
		<title>ವಿವಿಗಳಲ್ಲಿ ಮೋದಿ ಭಾಷಣ-ವಿಕಸಿತ್ ಭಾರತ್‌ ಪೋಸ್ಟರ್!‌ ಶಿಕ್ಷಣ ಸಂಸ್ಥೆಗಳಲ್ಲಿ ಚುನಾವಣಾ ಪ್ರಚಾರ?</title>
		<link>https://peepalmedia.com/ugc-direct-to-screen-modi-speech-and-posters-in-universities/</link>
		
		<dc:creator><![CDATA[Charan Aivarnad]]></dc:creator>
		<pubDate>Tue, 12 Mar 2024 07:42:10 +0000</pubDate>
				<category><![CDATA[ರಾಜಕೀಯ]]></category>
		<category><![CDATA[Bangalore]]></category>
		<category><![CDATA[breaking news]]></category>
		<category><![CDATA[education]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[modi]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[trend]]></category>
		<category><![CDATA[Trending]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=36892</guid>

					<description><![CDATA[ಗುಜರಾತ್ ಮತ್ತು ಅಸ್ಸಾಂನಲ್ಲಿ ಸೆಮಿಕಂಡಕ್ಟರ್ ಸೌಲಭ್ಯಗಳಿಗೆ ನಾಳೆ, ಮಾರ್ಚ್ 13, ಬುಧವಾರದಂದು ಪ್ರಧಾನಿ ನರೇಂದ್ರ ಮೋದಿಯವರು ಶಂಕುಸ್ಥಾಪನೆ ನಡೆಸಲಿದ್ದು, ಅವರ ಭಾಷಣವನ್ನು ಪ್ರದರ್ಶಿಸಲು ಕೇಂದ್ರ ಸರ್ಕಾರವು ಉನ್ನತ ಶಿಕ್ಷಣ ಸಂಸ್ಥೆಗಳಿಗೆ (ಎಚ್‌ಇಐ) ಸೂಚಿಸಿದೆ. ಟೆಲಿಗ್ರಾಫ್ ವರದಿ ಮಾಡಿದಂತೆ, 2024 ರ ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ (Model Code of Conduct) ಜಾರಿಗೆ ಬರುವ ಮೊದಲೇ ಮತದಾರರನ್ನು ತಲುಪಲು ಮೋದಿ ಸರ್ಕಾರ ಈ ಪ್ರಯತ್ನವನ್ನು ಮಾಡಿದೆ. ಗುಜರಾತ್‌ನ ಧೋಲೇರಾ ಮತ್ತು ಸನಂದ್ ಹಾಗೂ ಅಸ್ಸಾಂನ ಮೋರಿಗಾಂವ್‌ನಲ್ಲಿ [&#8230;]]]></description>
										<content:encoded><![CDATA[
<p>ಗುಜರಾತ್ ಮತ್ತು ಅಸ್ಸಾಂನಲ್ಲಿ ಸೆಮಿಕಂಡಕ್ಟರ್ ಸೌಲಭ್ಯಗಳಿಗೆ ನಾಳೆ, ಮಾರ್ಚ್ 13, ಬುಧವಾರದಂದು ಪ್ರಧಾನಿ ನರೇಂದ್ರ ಮೋದಿಯವರು ಶಂಕುಸ್ಥಾಪನೆ ನಡೆಸಲಿದ್ದು, ಅವರ ಭಾಷಣವನ್ನು ಪ್ರದರ್ಶಿಸಲು ಕೇಂದ್ರ ಸರ್ಕಾರವು ಉನ್ನತ ಶಿಕ್ಷಣ ಸಂಸ್ಥೆಗಳಿಗೆ (ಎಚ್‌ಇಐ) ಸೂಚಿಸಿದೆ.</p>



<p><a href="https://www.telegraphindia.com/india/ahead-of-poll-code-centre-asks-higher-educational-institutions-to-screen-pm-modis-class/cid/2006264" data-type="link" data-id="https://www.telegraphindia.com/india/ahead-of-poll-code-centre-asks-higher-educational-institutions-to-screen-pm-modis-class/cid/2006264">ಟೆಲಿಗ್ರಾಫ್ ವರದಿ</a> ಮಾಡಿದಂತೆ, 2024 ರ ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ (Model Code of Conduct) ಜಾರಿಗೆ ಬರುವ ಮೊದಲೇ ಮತದಾರರನ್ನು ತಲುಪಲು ಮೋದಿ ಸರ್ಕಾರ ಈ ಪ್ರಯತ್ನವನ್ನು ಮಾಡಿದೆ. </p>



<p>ಗುಜರಾತ್‌ನ ಧೋಲೇರಾ ಮತ್ತು ಸನಂದ್ ಹಾಗೂ ಅಸ್ಸಾಂನ ಮೋರಿಗಾಂವ್‌ನಲ್ಲಿ ಸೆಮಿಕಂಡಕ್ಟರ್ ಸೌಲಭ್ಯಗಳನ್ನು ಸ್ಥಾಪಿಸಲಾಗುತ್ತಿದೆ. ಇದನ್ನು ಒಂದು &#8220;ಚುನಾವಣಾ ಪ್ರಚಾರ ಕಾರ್ಯಕ್ರಮ&#8221; ಎಂದು ಹಲವು ಶಿಕ್ಷಣತಜ್ಞರು ಟೀಕಿಸಿದ್ದು, ಸರ್ಕಾರವು ಉನ್ನತ ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆ ಮಧ್ಯೆ ಹಸ್ತಕ್ಷೇಪ ನಡೆಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. </p>



<p style="font-size:20px"><strong>ಶಿಕ್ಷಣ ಸಂಸ್ಥೆಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸುತ್ತಿದೆ ಮೋದಿ ಸರ್ಕಾರ!</strong></p>



<p>ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಮೋದಿಯವರ ಫೋಟೋಗಳಿರುವ &#8216;ವಿಕಸಿತ್ ಭಾರತ್&#8217; ಪೋಸ್ಟರ್‌ಗಳನ್ನು ಹಾಕುವಂತೆ ಶಿಕ್ಷಣ ಸಚಿವಾಲಯ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದೆ. ಕಾರ್ಯಕ್ರಮದ ನಂತರ ತನ್ನ ನಿಯಂತ್ರಣದಲ್ಲಿರುವ ಸಂಸ್ಥೆಗಳಿಗೆ ವರದಿಗಳನ್ನು ಕಳುಹಿಸಬೇಕೆಂದು ಸಚಿವಾಲಯ ಸೂಚನೆ ನೀಡಿದೆ. </p>



<p>ಸಚಿವಾಲಯ ಮತ್ತು ವಿಶ್ವವಿದ್ಯಾನಿಲಯ ಅನುದಾನ ಆಯೋಗ (UGC) ರಾಜ್ಯ ಮಟ್ಟದ ವಿಶ್ವವಿದ್ಯಾನಿಲಯಗಳು ಮತ್ತು ಖಾಸಗಿ ವಿಶ್ವವಿದ್ಯಾನಿಲಯಗಳು ಸೇರಿದಂತೆ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಈ ಕಾರ್ಯಕ್ರಮವನ್ನು ಪ್ರಮಾಣಿತ ಕಾರ್ಯ ವಿಧಾನ (SOP) ಮತ್ತು ಕಾರ್ಯಕ್ರಮದ ಟಿಪ್ಪಣಿಯನ್ನು ನೀಡಿದೆ. </p>



<p>ಈ ಸಂಸ್ಥೆಗಳ ಉಪಕುಲಪತಿಗಳಿಗೆ ಪತ್ರಗಳನ್ನು ಬರೆದಿದ್ದು, ಅದರಲ್ಲಿ ಯುಜಿಸಿ ಕಾರ್ಯಕ್ರಮದಲ್ಲಿ ಪ್ರದರ್ಶಿಸಲು ತಿಳಿಸಿರುವ ಐದು ಪೋಸ್ಟರ್‌ಗಳನ್ನು ಲಗತ್ತಿಸಿದೆ. ಪೋಸ್ಟರ್‌ಗಳಲ್ಲಿ “India’s Techade: Chips for Viksit Bharat” ಎಂದು ಉಲ್ಲೇಖಿಸಲಾಗಿದ್ದು, ಸೆಮಿಕಂಡಕ್ಟರ್ ಸೌಲಭ್ಯಗಳಿಗೆ ಮೋದಿ ಅಡಿಗಲ್ಲು ಹಾಕುತ್ತಿರುವ ಫೋಟೋಗಳನ್ನು ಹೊಂದಿದೆ. ಎಲ್ಲಾ ವಿದ್ಯಾರ್ಥಿಗಳೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಒತ್ತಡ ಹೇರಳಾಗಿದೆ.</p>



<p style="font-size:20px"><strong>ಇದೇನು ಮೊದಲ ಬಾರಿ ಬಿಜೆಪಿ ಮಾಡುತ್ತಿಲ್ಲ!</strong></p>



<p>2024ರ ಆರಂಭದಲ್ಲಿ, ಯುಜಿಸಿ ದೇಶದ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಿಗೆ ಮೋದಿ ಸರ್ಕಾರದ ಬೇಟಿ ಬಚಾವೋ ಬೇಟಿ ಪಢಾವೋ (BBBP) ಲಾಂಛನವನ್ನು ತಮ್ಮ ಆವರಣದಲ್ಲಿ ಸ್ಥಾಪಿಸಲು &#8216;ಹೆಣ್ಣು ಮಗುವಿನ ಮೌಲ್ಯದ ಬಗ್ಗೆ ಜಾಗೃತಿ ಮೂಡಿಸಲು&#8217; ಸೂಚನೆ ನೀಡಿತ್ತು.</p>



<p>ಈ ಹಿನ್ನಲೆಯಲ್ಲಿ ಮೋದಿ ಅವರೊಂದಿಗೆ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸುವಂತೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಿಯಂತ್ರಣ ಸಂಸ್ಥೆ ದೇಶಾದ್ಯಂತದ ವಿಶ್ವವಿದ್ಯಾಲಯಗಳಿಗೆ ಪತ್ರ ಬರೆದಿತ್ತು . &#8220;ವಿವಿಧ ಕ್ಷೇತ್ರಗಳಲ್ಲಿ ಭಾರತದ ಸಾಧನೆಗಳ&#8221; ಬಗ್ಗೆ &#8220;ಸಾಮೂಹಿಕ ಹೆಮ್ಮೆ&#8221; ಪ್ರಜ್ಞೆಯನ್ನು ಮೂಡಿಸಲು ಕ್ಯಾಂಪಸ್ ಅಧಿಕಾರಿಗಳು ಈ ಹಂತಗಳಲ್ಲಿ ಮೋದಿಯವರ  3D  ಕಟೌಟ್‌ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ವಿದ್ಯಾರ್ಥಿಗಳು ಮತ್ತು ಸಂದರ್ಶಕರನ್ನು ಪ್ರೋತ್ಸಾಹಿಸಬೇಕು ಎಂದು ಅದು ಸೂಚಿಸಿತ್ತು.</p>



<p>ಈ ಸೂಚನೆ ಹೊರಡಿಸುವ ಕೆಲವು ದಿನಗಳ ಮೊದಲು, ಯುಜಿಸಿಯು ನವೆಂಬರ್, 2023 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನಾಯಕ ದತ್ತಾಜಿ ದಿದೋಲ್ಕರ್ ಅವರ ಜನ್ಮಶತಮಾನೋತ್ಸವವನ್ನು ಆಚರಿಸಲು ಮಹಾರಾಷ್ಟ್ರದಾದ್ಯಂತ ಇರುವ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪತ್ರ ಬರೆದಿತ್ತು.</p>
]]></content:encoded>
					
		
		
			</item>
		<item>
		<title>ಕೇರಳ ಸರ್ಕಾರದಿಂದ ದೇಶದಲ್ಲೇ ಮೊದಲ ಸರ್ಕಾರಿ ಓಟಿಟಿ ʼಸಿಸ್ಪೇಸ್‌ʼ ಆರಂಭ</title>
		<link>https://peepalmedia.com/ott-cspace-from-kerala-government/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 07 Mar 2024 09:27:44 +0000</pubDate>
				<category><![CDATA[ಸಿನಿಮಾ]]></category>
		<category><![CDATA[amazon prime]]></category>
		<category><![CDATA[Bangalore]]></category>
		<category><![CDATA[breaking]]></category>
		<category><![CDATA[breaking news]]></category>
		<category><![CDATA[CSpace]]></category>
		<category><![CDATA[hotstar]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[kerala]]></category>
		<category><![CDATA[netflix]]></category>
		<category><![CDATA[news]]></category>
		<category><![CDATA[ott]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[pinarayi vijayan]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[Trending]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<category><![CDATA[Zee cenema]]></category>
		<guid isPermaLink="false">https://peepalmedia.com/?p=36750</guid>

					<description><![CDATA[ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಾರ್ಚ್ 7, ಗುರುವಾರದಂದು ಕೈರಾಲಿ ಥಿಯೇಟರ್‌ನಲ್ಲಿ ರಾಜ್ಯ ಸರ್ಕಾರದ್ದೇ ಆದ ಓವರ್-ದಿ-ಟಾಪ್ (ಒಟಿಟಿ) ಪ್ಲಾಟ್‌ಫಾರ್ಮ್ ಉದ್ಘಾಟಿಸಿದರು. CSpace ಎಂದು ಕರೆಯಲ್ಪಡುವ ಪ್ಲಾಟ್‌ಫಾರ್ಮ್ ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಓಟಿಟಿ ಪ್ಲಾಟ್‌ಫಾರ್ಮ್ ಆಗಿದೆ. OTT ವಲಯದಲ್ಲಿನ ಸವಾಲುಗಳು ಮತ್ತು ಹೆಚ್ಚುತ್ತಿರುವ ಅಸಮತೋಲನಗಳನ್ನು ಪರಿಹರಿಸಲು CSpace ಅನ್ನು ಪ್ರಾರಂಭಿಸಲಾಗಿದೆ. ಖ್ಯಾತ ಚಲನಚಿತ್ರ ನಿರ್ದೇಶಕ ಮತ್ತು ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದ (KSFDC) ಅಧ್ಯಕ್ಷರಾದ ಶಾಜಿ ಎನ್. ಕರುಣ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ [&#8230;]]]></description>
										<content:encoded><![CDATA[
<p>ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಾರ್ಚ್ 7, ಗುರುವಾರದಂದು ಕೈರಾಲಿ ಥಿಯೇಟರ್‌ನಲ್ಲಿ ರಾಜ್ಯ ಸರ್ಕಾರದ್ದೇ ಆದ ಓವರ್-ದಿ-ಟಾಪ್ (ಒಟಿಟಿ) ಪ್ಲಾಟ್‌ಫಾರ್ಮ್ ಉದ್ಘಾಟಿಸಿದರು.</p>



<p>CSpace ಎಂದು ಕರೆಯಲ್ಪಡುವ ಪ್ಲಾಟ್‌ಫಾರ್ಮ್ ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಓಟಿಟಿ ಪ್ಲಾಟ್‌ಫಾರ್ಮ್ ಆಗಿದೆ. OTT ವಲಯದಲ್ಲಿನ ಸವಾಲುಗಳು ಮತ್ತು ಹೆಚ್ಚುತ್ತಿರುವ ಅಸಮತೋಲನಗಳನ್ನು ಪರಿಹರಿಸಲು CSpace ಅನ್ನು ಪ್ರಾರಂಭಿಸಲಾಗಿದೆ.</p>



<p>ಖ್ಯಾತ ಚಲನಚಿತ್ರ ನಿರ್ದೇಶಕ ಮತ್ತು ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದ (KSFDC) ಅಧ್ಯಕ್ಷರಾದ ಶಾಜಿ ಎನ್. ಕರುಣ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಸವಾಲುಗಳನ್ನು ಎದುರಿಸುವಲ್ಲಿ ಪ್ಲಾಟ್‌ಫಾರ್ಮ್‌ ಪಾತ್ರವನ್ನು ಒತ್ತಿ ಹೇಳಿದರು.</p>



<p>OTT ಪ್ಲಾಟ್‌ಫಾರ್ಮ್ ಅನ್ನು KSFDC ನಿರ್ವಹಿಸುತ್ತದೆ, ಇದು ಮಲಯಾಳಂ ಸಿನಿಮಾದ ಪ್ರಚಾರವನ್ನು ವಹಿಸಿಕೊಡುವ ಸರ್ಕಾರಿ ಸ್ವಾಮ್ಯದ ಘಟಕವಾಗಿದೆ. ಕೇರಳ ಸರ್ಕಾರದ ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಸಿಎಸ್‌ಸ್ಪೇಸ್ ರಾಜ್ಯದ ಖ್ಯಾತ ಸಾಂಸ್ಕೃತಿಕ ವ್ಯಕ್ತಿಗಳು ಸೇರಿದಂತೆ 60 ಸದಸ್ಯರನ್ನು ಒಳಗೊಂಡ ಕ್ಯುರೇಟರ್ ಪ್ಯಾನೆಲ್ ಅನ್ನು ಸ್ಥಾಪಿಸಿದೆ.</p>



<p>ಸಾಂಸ್ಕೃತಿಕ ವ್ಯಕ್ತಿಗಳಾದ ಬೆನ್ಯಾಮಿನ್, ಒ.ವಿ. ಉಷಾ, ಸಂತೋಷ್ ಶಿವನ್, ಶ್ಯಾಮಪ್ರಸಾದ್, ಸನ್ನಿ ಜೋಸೆಫ್ ಮತ್ತು ಜಿಯೋ ಬೇಬಿ ಕ್ಯುರೇಟರ್ ಪ್ಯಾನೆಲ್‌ನ ಭಾಗವಾಗಿದ್ದಾರೆ. ಪ್ಲಾಟ್‌ಫಾರ್ಮ್‌ಗೆ ಸಲ್ಲಿಸಲಾಗುವ ಪ್ರತೀ ಕಂಟೆಂಟ್ ಈ ಪ್ಯಾನೆಲ್‌ನ ಮೂರು ಕ್ಯುರೇಟರ್‌ಗಳಿಂದ ಮೌಲ್ಯಮಾಪನಕ್ಕೆ ಒಳಗಾಗುತ್ತದೆ, ಅದರ ಕಲಾತ್ಮಕ, ಸಾಂಸ್ಕೃತಿಕ ಮತ್ತು ಇನ್ಫೋಟೈನ್‌ಮೆಂಟ್ ಅರ್ಹತೆಯನ್ನು ನಿರ್ಣಯಿಸುತ್ತದೆ.</p>



<p>ವೇದಿಕೆಯು ಪ್ರಸ್ತುತ 35 ಚಲನಚಿತ್ರಗಳು, ಆರು ಸಾಕ್ಷ್ಯಚಿತ್ರಗಳು ಮತ್ತು ಒಂದು ಕಿರುಚಿತ್ರ ಸೇರಿದಂತೆ 42 ಚಲನಚಿತ್ರಗಳನ್ನು ಹೊಂದಿದೆ ಮತ್ತು Android ಮತ್ತು iOS ಸಾಧನಗಳಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ. ಪ್ಲಾಟ್‌ಫಾರ್ಮ್‌ನ ಪೇ-ಪರ್-ವ್ಯೂ ಮಾದರಿಯ ಭಾಗವಾಗಿ ಬಳಕೆದಾರರು ಪ್ರತಿ ಚಲನಚಿತ್ರಕ್ಕೆ ರೂ 75 ಪಾವತಿಸಬೇಕಾಗುತ್ತದೆ.</p>
]]></content:encoded>
					
		
		
			</item>
		<item>
		<title>ಮೂರ್ತಿ ಕ್ಲಾಸಿಕಲ್ ಲೈಬ್ರರಿ ಸಮಿತಿಯಿಂದ ವಿನಾಕಾರಣ ವಿದ್ವಾಂಸರ ವಜಾ</title>
		<link>https://peepalmedia.com/five-of-the-eight-members-of-the-murty-classical-library-of-india-editorial-board-were-allegedly-dismissed/</link>
		
		<dc:creator><![CDATA[Charan Aivarnad]]></dc:creator>
		<pubDate>Wed, 06 Mar 2024 08:22:11 +0000</pubDate>
				<category><![CDATA[ದೇಶ]]></category>
		<category><![CDATA[Bangalore]]></category>
		<category><![CDATA[bengalure]]></category>
		<category><![CDATA[breaking]]></category>
		<category><![CDATA[breaking news]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Murty Classical Library of India]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[trend]]></category>
		<category><![CDATA[trending news]]></category>
		<category><![CDATA[viral]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=36697</guid>

					<description><![CDATA[ಮೂರ್ತಿ ಕ್ಲಾಸಿಕಲ್ ಲೈಬ್ರರಿ ಆಫ್ ಇಂಡಿಯಾ (ಎಂಸಿಎಲ್‌ಐ) ಸಂಪಾದಕೀಯ ಮಂಡಳಿಯ ಎಂಟು ಸದಸ್ಯರಲ್ಲಿ ಐವರನ್ನು ಕಾರಣವಿಲ್ಲದೇ ಯಾವುದೇ ಸ್ಪಷ್ಟೀಕರಣ ನೀಡದೆ ವಜಾಗೊಳಿಸಲಾಗಿದೆ ಎಂದು ಇತಿಹಾಸಕಾರ ರಾಜೀವ್ ಕಿನ್ರಾ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಕಿನ್ರಾ ಸೇರಿದಂತೆ ಎಲ್ಲಾ ಐದು ಸದಸ್ಯರು ಮತ್ತು ಅದರ ಮೇಲ್ವಿಚಾರಣಾ ಮಂಡಳಿಯ ಅಧ್ಯಕ್ಷರಾದ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಮಾನವಿಕ ವಿಭಾಗದ ಜಾನ್ ಎಲ್ ಲೋಯೆಬ್‌ ಅಸೋಸಿಯೇಟ್ ಪ್ರೊಫೆಸರ್ ಪರಿಮಳ್ ಪಾಟೀಲ್ ನಡುವೆ ನಡೆಯುತ್ತಿರುವ ಗುದ್ದಾಟವನ್ನು ಬಹಿರಂಗಗೊಳಿಸಿದೆ. ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ [&#8230;]]]></description>
										<content:encoded><![CDATA[
<p>ಮೂರ್ತಿ ಕ್ಲಾಸಿಕಲ್ ಲೈಬ್ರರಿ ಆಫ್ ಇಂಡಿಯಾ (ಎಂಸಿಎಲ್‌ಐ) ಸಂಪಾದಕೀಯ ಮಂಡಳಿಯ ಎಂಟು ಸದಸ್ಯರಲ್ಲಿ ಐವರನ್ನು ಕಾರಣವಿಲ್ಲದೇ ಯಾವುದೇ ಸ್ಪಷ್ಟೀಕರಣ ನೀಡದೆ ವಜಾಗೊಳಿಸಲಾಗಿದೆ ಎಂದು ಇತಿಹಾಸಕಾರ ರಾಜೀವ್ ಕಿನ್ರಾ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.</p>



<p>ಇದರಲ್ಲಿ ಕಿನ್ರಾ ಸೇರಿದಂತೆ ಎಲ್ಲಾ ಐದು ಸದಸ್ಯರು ಮತ್ತು ಅದರ ಮೇಲ್ವಿಚಾರಣಾ ಮಂಡಳಿಯ ಅಧ್ಯಕ್ಷರಾದ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಮಾನವಿಕ ವಿಭಾಗದ ಜಾನ್ ಎಲ್ ಲೋಯೆಬ್‌ ಅಸೋಸಿಯೇಟ್ ಪ್ರೊಫೆಸರ್ ಪರಿಮಳ್ ಪಾಟೀಲ್ ನಡುವೆ ನಡೆಯುತ್ತಿರುವ ಗುದ್ದಾಟವನ್ನು ಬಹಿರಂಗಗೊಳಿಸಿದೆ. </p>



<p>ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರ ರೋಹನ್ ಸ್ಥಾಪಿಸಿದ MCLI, ಓದುಗರಿಗಾಗಿ ಭಾರತೀಯ ಸಾಹಿತ್ಯ ಪಠ್ಯಗಳನ್ನು ಭಾಷಾಂತರಿಸುವ ಕೆಲಸಕ್ಕಾಗಿ ಹೆಸರುವಾಸಿಯಾಗಿದೆ. ಜನವರಿ 2015 ರಲ್ಲಿ ಸ್ಥಾಪಿತವಾದ ಈ ಸಂಸ್ಥೆ ಬಂಗಾಳಿ, ಗುಜರಾತಿ, ಹಿಂದಿ, ಕನ್ನಡ, ಮರಾಠಿ, ಪಂಜಾಬಿ, ಸಂಸ್ಕೃತ, ತಮಿಳು, ತೆಲುಗು, ಉರ್ದು, ಇತರ ಭಾರತೀಯ ಭಾಷೆಗಳು ಮತ್ತು ಪರ್ಷಿಯನ್ ಭಾಷೆಗಳಲ್ಲಿ ಭಾರತೀಯ ಸಾಹಿತ್ಯಗಳನ್ನು ಪ್ರಕಟಿಸುತ್ತದೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">A public statement from myself and the other (now former) members of the editorial board of the Murty Classical Library of India.  Please share.  <a href="https://twitter.com/hashtag/academictwitter?src=hash&amp;ref_src=twsrc%5Etfw">#academictwitter</a> <a href="https://twitter.com/hashtag/MCLI?src=hash&amp;ref_src=twsrc%5Etfw">#MCLI</a> <a href="https://t.co/tkzZMzvMVg">pic.twitter.com/tkzZMzvMVg</a></p>&mdash; Rajeev Kinra (@rkkinra) <a href="https://twitter.com/rkkinra/status/1764702308741283932?ref_src=twsrc%5Etfw">March 4, 2024</a></blockquote><script async src="https://platform.twitter.com/widgets.js" charset="utf-8"></script>
</div></figure>



<p>2015 ರಲ್ಲಿ ಪ್ರಾರಂಭವಾದಾಗಿನಿಂದ ಹಿಂದುತ್ವವಾದಿಗಳಿಂದ ಗುರಿಯಾಗಿರುವ MCLI ಎರಡು ವರ್ಷಗಳ ಹಿಂದೆ ಅದರ ಸಂಪಾದಕ ಶೆಲ್ಡನ್ ಪೊಲಾಕ್ ಅವರನ್ನು ಹೊರಹಾಕಿದಾಗ ಸುದ್ದಿಯಾಗಿತ್ತು. ಸದ್ಯದ ಹೇಳಿಕೆಯಲ್ಲಿ ವಿಟ್ನಿ ಕಾಕ್ಸ್ (ಶಿಕಾಗೋ ವಿಶ್ವವಿದ್ಯಾಲಯ), ಮರಿಯಾ ಹೇಮ್ (ಅಮ್ಹೆರ್ಸ್ಟ್ ಕಾಲೇಜ್), ರಾಜೀವ್ ಕಿನ್ರಾ (ನಾರ್ತ್ವೆಸ್ಟರ್ನ್ ಯೂನಿವರ್ಸಿಟಿ), ಫ್ರಾನ್ಸೆಸ್ಕಾ ಒರ್ಸಿನಿ (ಎಸ್ಒಎಎಸ್, ಲಂಡನ್ ವಿಶ್ವವಿದ್ಯಾಲಯ) ಮತ್ತು ಅರ್ಚನಾ ವೆಂಕಟೇಶನ್ (ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ, ಡೇವಿಸ್) ಈ ಅನಿರೀಕ್ಷಿತ ಕ್ರಮವನ್ನು ಟೀಕಿಸಿದ್ದಾರೆ.</p>


<div class="wp-block-image">
<figure class="aligncenter size-full is-resized"><img decoding="async" width="862" height="896" src="https://peepalmedia.com/wp-content/uploads/2024/03/image-1.png" alt="" class="wp-image-36701" style="width:494px;height:auto" srcset="https://peepalmedia.com/wp-content/uploads/2024/03/image-1.png 862w, https://peepalmedia.com/wp-content/uploads/2024/03/image-1-289x300.png 289w, https://peepalmedia.com/wp-content/uploads/2024/03/image-1-768x798.png 768w, https://peepalmedia.com/wp-content/uploads/2024/03/image-1-150x156.png 150w, https://peepalmedia.com/wp-content/uploads/2024/03/image-1-300x312.png 300w, https://peepalmedia.com/wp-content/uploads/2024/03/image-1-696x723.png 696w" sizes="(max-width: 862px) 100vw, 862px" /></figure></div>


<p>ಹೇಳಿಕೆಯಲ್ಲಿ, ಸ್ಥಾಪಕ ಸಂಪಾದಕರಾದ ಪ್ರೊಫೆಸರ್ ಶೆಲ್ಡನ್ ಪೊಲಾಕ್ ಅವರನ್ನು &#8220;ನಿವೃತ್ತಿಗೂ ಎರಡು ವರ್ಷಗಳ ಮೊದಲು ಯಾವುದೇ ಕಾರಣವಿಲ್ಲದೆ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗಿತ್ತು&#8221; ಎಂದು ಹೇಳಲಾಗಿದ್ದು, 2022 ರಿಂದ ಗ್ರಂಥಾಲಯವು ಸಂಪಾದಕರಿಲ್ಲದೆ ಹೇಗೆ ಕೆಲಸ ಮಾಡುತ್ತಿದ್ದೆ ಎಂದು ಪ್ರಶ್ನಿಸಲಾಗಿದೆ.</p>



<p>“ಪ್ರೊ. ಪಾಟೀಲ್ ಉತ್ತರಾಧಿಕಾರಿಯನ್ನು ನೇಮಿಸುವುದಿಲ್ಲ ಎಂದು ನಿರ್ಧರಿಸಿದ್ದರು. ನಾವು ಪದೇ ಪದೇ ಆ ನಿರ್ಧಾರದ ಬಗ್ಗೆ ಮತ್ತು ಸಂಭವನೀಯ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದೇವೆ. ಆದರೆ ನಿರ್ಧಾರ ತೆಗೆದುಕೊಳ್ಳುವಿಕೆಯಲ್ಲಿ ಪಾರದರ್ಶಕತೆಯ ಕೊರತೆಯಿದ್ದು, ಹೊಸ ಯೋಜನೆಗಳ ಸ್ವಾಧೀನ ಮತ್ತು ಅನುಮೋದನೆ ಹಾಗೂ ಒಪ್ಪಂದಗಳ ವಿಚಾರದಲ್ಲಿ ಸಮಸ್ಯೆಗಳಿವೆ,&#8221; ಎಂದು ಪ್ರೊ. ಪಾಟೀಲ್ ಮತ್ತು ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್‌ನ ಅಪಾರದರ್ಶಕ ಮತ್ತು ನಿರ್ವಹಣಾ ಶೈಲಿಯ ಬಗ್ಗೆ ತಕರಾರು ಎತ್ತಲಾಗಿದೆ. </p>



<p>&#8220;ಕಳೆದ ಹದಿನೆಂಟು ತಿಂಗಳುಗಳಲ್ಲಿ, ಸಂಪಾದಕೀಯ ಮಂಡಳಿಯ ಪಾತ್ರಗಳು ಮತ್ತು ಜವಾಬ್ದಾರಿಗಳು ಹೆಚ್ಚು ಅಸ್ಪಷ್ಟವಾಗಿದ್ದರೂ, ಪ್ರೊ. ಪಾಟೀಲ್ ಅವರೊಂದಿಗಿನ ಸಂವಹನವು ಪರಿಣಾಮಕಾರಿಯಾಗಿ ನಡೆಯದೆ ನಿಂತುಹೋದಾಗ, ನಾವು ಪುಸ್ತಕದ ಹಸ್ತಪ್ರತಿಗಳೊಂದಿಗೆ ಅನುವಾದಕರೊಂದಿಗೆ ದಣಿವರಿಯಿಲ್ಲದೆ ಕೆಲಸ ಮಾಡಿದೆವು&#8221; ಎಂದು ಅವರು ಹೇಳಿಕೆಯಲ್ಲಿ ಹೇಳಿದ್ದಾರೆ. </p>



<p>“ಅಪಭ್ರಂಶ, ಬಾಂಗ್ಲಾ, ಹಿಂದಿ (ಬ್ರಜಭಾಷಾ ಮತ್ತು ಅವಧಿ), ಕನ್ನಡ, ಪಾಲಿ, ಪಂಜಾಬಿ, ಪರ್ಷಿಯನ್, ಸಂಸ್ಕೃತ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ 43 ಪುಸ್ತಕಗಳ ಅನುವಾದ ಮತ್ತು ಪ್ರಕಟಣೆಯನ್ನು ಸಂಪಾದನೆ ಮತ್ತು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ನಾವೆಲ್ಲಾ ಒಟ್ಟಾಗಿ ಹೊಂದಿದ್ದೇವೆ. ಭವಿಷ್ಯದಲ್ಲಿ ಈ ಕೆಲಸವನ್ನು ಯಾರು ಕೈಗೆತ್ತಿಕೊಳ್ಳಬೇಕು ಮತ್ತು ಪ್ರಸ್ತುತ ಸಂಪಾದಿಸುತ್ತಿರುವ ಭಾಷಾಂತರಗಳು ಏನಾಗುತ್ತವೆ?&#8221; ಎಂದು ಈ ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ</p>



<p><strong>ಹಿಂದಿನ ವಿವಾದ</strong></p>



<p>ಲೈಬ್ರರಿಯ ಸಂಪಾದಕತ್ವದಿಂದ ವಿದ್ವಾಂಸ ಶೆಲ್ಡಾನ್‌ ಪೋಲಕ್‌ ಅವರನ್ನು ತೆಗೆದುಹಾಕುವಂತೆ ಹಿಂದುತ್ವವಾದಿ ಶಿಕ್ಷಣತಜ್ಞರು 2016ರಲ್ಲಿ ಸಹಿ ಮಾಡಿ ಮನವಿ ಮಾಡಿದ್ದರು. </p>



<p>ಇದರಲ್ಲಿ ಪೊಲಾಕ್  ಅವರನ್ನು&#8221;ನಮ್ಮ ನಾಗರೀಕತೆಯಲ್ಲಿ ಪಾಲಿಸುವ ಮತ್ತು ಪಾಲಿಸುವ ಅನೇಕ ಆದರ್ಶಗಳು ಮತ್ತು ಮೌಲ್ಯಗಳ ಬಗ್ಗೆ ಆಳವಾದ ವಿರೋಧವನ್ನು ಹೊಂದಿದ್ದಾರೆ&#8221; ಎಂದು ಹೇಳಲಾಗಿತ್ತು. ನಮಗೆ &#8220;ಸಂಬಂಧಿತ ಭಾರತೀಯ ಭಾಷೆಗಳಲ್ಲಿ ಪಾಂಡಿತ್ಯ ಮಾತ್ರವಲ್ಲದೆ, ಭಾರತದ ಬೌದ್ಧಿಕ ಸಂಪ್ರದಾಯಗಳ ಬಗ್ಗೆ ಆಳವಾದ ಅರಿವು ಹೊಂದಿರುವ ವಿದ್ವಾಂಸರ ತಂಡದ&#8221; ಅಗತ್ಯವಿದೆ ಎಂದು ಅದರಲ್ಲಿ ಉಲ್ಲೇಖಿಸಲಾಗಿತು. </p>



<p>ಪೊಲಾಕ್ ಅತ್ಯಂತ ಪ್ರಸಿದ್ಧ ವಿದ್ವಾಂಸ. ಅರವಿಂದ್ ರಘುನಾಥನ್ ಕೊಲಂಬಿಯಾ ವಿಶ್ವವಿದ್ಯಾಲಯದ ದಕ್ಷಿಣ ಏಷ್ಯಾದ ಅಧ್ಯಯನಗಳ ಪ್ರಾಧ್ಯಾಪಕರಾಗಿರುವ ಇವರು, ಕೊಲಂಬಿಯಾದಲ್ಲಿ ಸಂಸ್ಕೃತ ಮತ್ತು ಭಾರತೀಯ ಅಧ್ಯಯನಗಳ ವಿಲಿಯಂ ಬಿ. ರಾನ್ಸ್‌ಫೋರ್ಡ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಪೊಲಾಕ್ ಅವರು ಸಂಸ್ಕೃತ ಮತ್ತು ಭಾರತೀಯ ಅಧ್ಯಯನಗಳಲ್ಲಿ ಸ್ನಾತಕೋತ್ತರ (1973) ಮತ್ತು ಪಿಎಚ್‌ಡಿ (1975) ಅನ್ನು ಸಹ ಹೊಂದಿದ್ದಾರೆ.</p>



<p>ಪೊಲಾಕ್ ಅವರ ವಿದ್ವತ್ತನ್ನು ಪ್ರಶ್ನಿಸುವುದರ ಜೊತೆಗೆ, ಅರ್ಜಿಯಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ 2016 ರಲ್ಲಿ ನಡೆದ ಪ್ರತಿಭಟನೆಯನ್ನು ಬೆಂಬಲಿಸುವುದಕ್ಕಾಗಿ ವಿರೋಧ ವ್ಯಕ್ತಪಡಿಸಲಾಗಿತ್ತು. &#8220;ಅವರು ಭಾರತದ ಸಮಗ್ರತೆಗೆ ಅಗೌರವ ತೋರಿಸಿದ್ದಾರೆ&#8221; ಎಂದು ಹೇಳಲಾಗಿತ್ತು.</p>



<p>ಹಿಂದುತ್ವ ಪ್ರೇರಿತ ವಿದ್ವಾಂಸರ ಈ ಆರೋಪಗಳನ್ನು ವಿರೋಧಿಸಿ ಲೇಖಕ ಮತ್ತು ಪತ್ರಕರ್ತ ರಘು ಕಾರ್ನಾಡ್, ಅರ್ಜಿದಾರರು ಮೂರ್ತಿ ಲೈಬ್ರರಿಯ ಯಾವುದೇ ಪ್ರಕಟಣೆಗಳನ್ನು ಓದಿಲ್ಲ, ಅವರು ಓದಿದ್ದರೆ ಈ ರೀತಿ ದೂರು ನೀಡುತ್ತಿರಲಿಲ್ಲ ಎಂದು 2016 ರಲ್ಲಿ ಬಿಸಿನೆಸ್ ಸ್ಟ್ಯಾಂಡರ್ಡ್‌ಗೆ ತಿಳಿಸಿದ್ದರು .</p>



<p>ರಾಮಚಂದ್ರ ಗುಹಾ ಅವರಂತಹ ಅನೇಕ ವಿದ್ವಾಂಸರು ಇದನ್ನು &#8220;ಕ್ಷುಲ್ಲಕ ಮತ್ತು ಪ್ರೇರಿತ&#8221; ಆರೋಪ ಎಂದು ಕರೆದಿದ್ದರು, ಕಾಂಚ ಇಲಯ್ಯ ಇದನ್ನು &#8220;ಬ್ರಾಹ್ಮಣೀಯ ಮತ್ತು ಬೌದ್ಧಿಕವಲ್ಲದ&#8221; ಎಂದು ಕರೆದಿದ್ದರು.</p>
]]></content:encoded>
					
		
		
			</item>
		<item>
		<title>ಬಿಜೆಪಿ ಸಂಸದ ಗೌತಮ್ ಗಂಭೀರ್ ರಾಜಕೀಯ ನಿವೃತ್ತಿ</title>
		<link>https://peepalmedia.com/bjp-mp-gautam-gambhir-retires-from-politics/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 02 Mar 2024 08:01:09 +0000</pubDate>
				<category><![CDATA[ರಾಜಕೀಯ]]></category>
		<category><![CDATA[Bangalore]]></category>
		<category><![CDATA[breaking]]></category>
		<category><![CDATA[breaking news]]></category>
		<category><![CDATA[cricket]]></category>
		<category><![CDATA[gowtham gambhir]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news updates]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[trend]]></category>
		<category><![CDATA[Trending]]></category>
		<category><![CDATA[viral]]></category>
		<category><![CDATA[writing]]></category>
		<guid isPermaLink="false">https://peepalmedia.com/?p=36593</guid>

					<description><![CDATA[ನವದೆಹಲಿ: ಅಲ್ಪಾವಧಿಯ ರಾಜಕೀಯ ಜೀವನದಿಂದ ಬೇಸತ್ತಿರುವ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು, ತಮ್ಮನ್ನು ರಾಜಕೀಯ ಕರ್ತವ್ಯಗಳಿಂದ ಬಿಡುಗಡೆಗೊಳಿಸುವಂತೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಶನಿವಾರ ಮನವಿ ಸಲ್ಲಿಸಿದ್ದಾರೆ. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಪೂರ್ವ ದೆಹಲಿಯ ಸಂಸದರಾಗಿರುವ ಗಂಭೀರ್, ತಮ್ಮ X ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ಜನರ ಸೇವೆ ಮಾಡಲು ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ [&#8230;]]]></description>
										<content:encoded><![CDATA[
<p><strong>ನವದೆಹಲಿ: </strong>ಅಲ್ಪಾವಧಿಯ ರಾಜಕೀಯ ಜೀವನದಿಂದ ಬೇಸತ್ತಿರುವ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು, ತಮ್ಮನ್ನು ರಾಜಕೀಯ ಕರ್ತವ್ಯಗಳಿಂದ ಬಿಡುಗಡೆಗೊಳಿಸುವಂತೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಶನಿವಾರ ಮನವಿ ಸಲ್ಲಿಸಿದ್ದಾರೆ.</p>



<p>ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಪೂರ್ವ ದೆಹಲಿಯ ಸಂಸದರಾಗಿರುವ ಗಂಭೀರ್, ತಮ್ಮ X ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ಜನರ ಸೇವೆ ಮಾಡಲು ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದ ಸಲ್ಲಸಿದ್ದಾರೆ.</p>



<p>“ನನ್ನ ಮೇಲೆ ಬೇಕಾದಷ್ಟು ಕ್ರಿಕೆಟ್ ಸಂಬಂಧಿತ ಜವಾಬ್ದಾರಿಗಳಿವೆ. ನಾನು ಆ ಕಡೆಗೆ ಗಮನ ನೀಡಬೇಕಿದೆ. ಹಾಗಾಗಿ ನನ್ನನ್ನು ರಾಜಕೀಯ ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಮನವಿ ಮಾಡಿದ್ದೇನೆ. ಜನರ ಸೇವೆ ಮಾಡಲು ನನಗೆ ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ನಾನು ಪ್ರಾಮಾಣಿಕವಾಗಿ ಧನ್ಯವಾದ ಅರ್ಪಿಸುತ್ತೇನೆ, ಜೈ ಹಿಂದ್,” ಎಂದು X ನಲ್ಲಿ ಪೋಸ್ಟ್ ಮಾಡಿದ್ದಾರೆ.</p>



<p>ಭಾರತೀಯ ಕ್ರಿಕೇಟ್ ತಂಡದ ಮಾಜಿ ಕ್ರಿಕೆಟಿಗರಾಗಿರುವ‌ ಗೌತಮ್ ಗಂಭೀರ್, 2007ರಲ್ಲಿ ಟಿ20 ಹಾಗೂ 2011ರಲ್ಲಿ ಏಕದಿನ‌ ಪಂದ್ಯದಲ್ಲಿ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತದ ಪರ 147 ಏಕದಿನ, 58 ಟೆಸ್ಟ್ ಹಾಗೂ 37 ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 5,238 ರನ್, 4,154 ರನ್ ಮತ್ತು 932 ರನ್. ಅವರು 154 ಐಪಿಎಲ್ ಪಂದ್ಯಗಳಿಂದ 4,218 ರನ್ ಭಾರಿಸಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಗಂಭೀರ್ ನಾಯಕತ್ವದಲ್ಲಿ 2012 ಮತ್ತು 2014 ರಲ್ಲಿ ಚಾಂಪಿಯನ್‌ಶಿಪ್ ಗೆದ್ದಿತ್ತು. ಕಳೆದ ಎರಡು ಎಡಿಷನ್‌ಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದ ಇವರು, ಈಗ ಮತ್ತೊಮ್ಮೆ ಕೆಕೆಆರ್ ತಂಡದ ಮೆಂಟರ್ ಆಗಿ ನೇಮಕಗೊಂಡಿರುವುದನ್ನು ನಾವು ನೆನಪಿಸಿಕೊಳ್ಳಬಹುದು. &nbsp;</p>
]]></content:encoded>
					
		
		
			</item>
		<item>
		<title>ಐಟಿ ಕಾಯ್ದೆ ಬಳಸಿ ಕೇಂದ್ರದಿಂದ ಪತ್ರಿಕಾ ಸ್ವಾತಂತ್ರ್ಯದ ಹರಣ:‌ ವರದಿ ತೆಗೆಯಲು ಕ್ಯಾರವನ್‌ಗೆ ಆದೇಶ</title>
		<link>https://peepalmedia.com/centre-uses-it-acts-to-attack-press-freedom-asks-the-caravan-to-remove-report/</link>
		
		<dc:creator><![CDATA[Peepal Media]]></dc:creator>
		<pubDate>Tue, 13 Feb 2024 07:29:01 +0000</pubDate>
				<category><![CDATA[ದೇಶ]]></category>
		<category><![CDATA[army]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[breaking news]]></category>
		<category><![CDATA[Central Government]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Military]]></category>
		<category><![CDATA[modi]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[news updates]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[poonch]]></category>
		<category><![CDATA[state politics]]></category>
		<category><![CDATA[the caravan \]]></category>
		<category><![CDATA[trend]]></category>
		<category><![CDATA[Trending]]></category>
		<category><![CDATA[trending news]]></category>
		<category><![CDATA[viral]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=35889</guid>

					<description><![CDATA[ವಿವಾದಾತ್ಮಕ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ 2021 ಮತ್ತು 2023 ರಲ್ಲಿ ತಿದ್ದುಪಡಿ ತಂದು, ಈ ಕಾಯ್ದೆಯನ್ನು ಮಾಧ್ಯಮ ಸಂಸ್ಥೆಗಳ ವಿರುದ್ಧ ಬಳಸಲಾಗುತ್ತಿದೆ. ದಿ ಕ್ಯಾರವಾನ್ ನಿಯತಕಾಲಿಕೆಯಲ್ಲಿ ಪ್ರಕಟವಾದ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಾರತೀಯ ಸೇನೆ ವಿರುದ್ಧ ಮಾಡಲಾಗಿರುವ ಚಿತ್ರಹಿಂಸೆ ಮತ್ತು ಕೊಲೆಯ ಆರೋಪಗಳ ಬಗೆಗಿನ ಲೇಖನವನ್ನು ತೆಗೆದುಹಾಕಲು ಆದೇಶಿಸಲಾಗಿದೆ. ಐಟಿ ಕಾಯಿದೆಯ ಸೆಕ್ಷನ್ 69 ಎ ಅಡಿಯಲ್ಲಿ ತಮಗೆ ನೋಟಿಸ್ ಕಳುಹಿಸಿದ್ದು. ಈ ಆದೇಶವನ್ನು ಪ್ರಶ್ನಿಸುವುದಾಗಿ ದಿ ಕ್ಯಾರವಾನ್ ತನ್ನ ಎಕ್ಸ್‌ನಲ್ಲಿ ಪ್ರಕಟಿಸಿತು. &#8220;ಆದೇಶದ [&#8230;]]]></description>
										<content:encoded><![CDATA[
<p>ವಿವಾದಾತ್ಮಕ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ 2021 ಮತ್ತು 2023 ರಲ್ಲಿ ತಿದ್ದುಪಡಿ ತಂದು, ಈ ಕಾಯ್ದೆಯನ್ನು ಮಾಧ್ಯಮ ಸಂಸ್ಥೆಗಳ ವಿರುದ್ಧ ಬಳಸಲಾಗುತ್ತಿದೆ. ದಿ ಕ್ಯಾರವಾನ್ ನಿಯತಕಾಲಿಕೆಯಲ್ಲಿ ಪ್ರಕಟವಾದ  ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಾರತೀಯ ಸೇನೆ ವಿರುದ್ಧ ಮಾಡಲಾಗಿರುವ ಚಿತ್ರಹಿಂಸೆ ಮತ್ತು ಕೊಲೆಯ ಆರೋಪಗಳ ಬಗೆಗಿನ ಲೇಖನವನ್ನು ತೆಗೆದುಹಾಕಲು ಆದೇಶಿಸಲಾಗಿದೆ.</p>



<p>ಐಟಿ ಕಾಯಿದೆಯ ಸೆಕ್ಷನ್ 69 ಎ ಅಡಿಯಲ್ಲಿ ತಮಗೆ ನೋಟಿಸ್ ಕಳುಹಿಸಿದ್ದು. ಈ ಆದೇಶವನ್ನು ಪ್ರಶ್ನಿಸುವುದಾಗಿ ದಿ ಕ್ಯಾರವಾನ್ ತನ್ನ ಎಕ್ಸ್‌ನಲ್ಲಿ ಪ್ರಕಟಿಸಿತು. &#8220;ಆದೇಶದ ವಿಷಯವು ಗೌಪ್ಯವಾಗಿದೆ&#8221; ಎಂದು ಮ್ಯಾಗಝೈನ್ ಹೇಳಿದೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">This is to inform readers we have received an order from the Ministry of Information &amp; Broadcasting under Section 69A of the IT Act, directing us to take down this story in 24 hrs:<a href="https://t.co/wbaEfoZsJ8">https://t.co/wbaEfoZsJ8</a>.<br><br>The order’s content is confidential. We will be challenging this order.</p>&mdash; The Caravan (@thecaravanindia) <a href="https://twitter.com/thecaravanindia/status/1757261541190385767?ref_src=twsrc%5Etfw">February 13, 2024</a></blockquote><script async src="https://platform.twitter.com/widgets.js" charset="utf-8"></script>
</div></figure>



<p>24 ಗಂಟೆಗಳ ಒಳಗೆ ತನ್ನ ವೆಬ್‌ಸೈಟ್‌ನಿಂದ‌ ಈ ಲೇಖನವನ್ನು ತೆಗೆದುಹಾಕದಿದ್ದರೆ, ಇಡೀ ವೆಬ್‌ಸೈಟ್ ಅನ್ನು ನಾಶಮಾಡಲಾಗುವುದು ಎಂದು ದಿ ಕ್ಯಾರವಾನ್‌ಗೆ ಎಚ್ಚರಿಕೆ ನೀಡಲಾಗಿದೆ. ಲೇಖನವನ್ನು ಚಂದಾದಾರರಿಗೆ ಕಳುಹಿಸುವ ಮತ್ತು ಮುದ್ರಿತ ಪತ್ರಿಕೆಯಲ್ಲಿಯೂ ಸೇರಿಸಲಾಗಿದೆ.</p>



<p>ನಿಯತಕಾಲಿಕದ ಫೆಬ್ರವರಿ ಸಂಚಿಕೆಯಲ್ಲಿ ಪ್ರಕಟವಾದ ಪತ್ರಕರ್ತೆ ಜತೀಂದರ್ ಕೌರ್ ತೂರ್ ಅವರು ಬರೆದಿರುವ ಲೇಖನ ‘Screams from the Army Post’&#8217; ಒಂದು ವಿಸ್ತೃತ ವರದಿಯಾಗಿದೆ. ಇದರಲ್ಲಿ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಚಾರವಾದ ಡಿಸೆಂಬರ್ 22, 2023 ರಂದು ಅಪರಿಚಿತ ಸೈನಿಕರಿಂದ ನಡೆದ ಮೂವರು ನಾಗರಿಕರ ಹತ್ಯೆಯ ಸುತ್ತ ವರದಿ ಮಾಡಲಾಗಿದೆ. ಸೇನಾ ಕಸ್ಟಡಿಯಲ್ಲಿ ನಾಗರಿಕರನ್ನು ಕೊಲ್ಲಲಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದು, ಈ ಚಿತ್ರಹಿಂಸೆ ನೀಡುತ್ತಿರುವ ವೀಡಿಯೊಗಳು ಕೂಡ ವೈರಲ್ ಆಗಿತ್ತು. ಆ ಸಂದರ್ಭದಲ್ಲಿ ಈ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಸೇನೆ ಹೇಳಿತ್ತು.</p>


<div class="wp-block-image">
<figure class="aligncenter size-large is-resized"><img loading="lazy" decoding="async" width="1024" height="512" src="https://peepalmedia.com/wp-content/uploads/2024/02/image-8-1024x512.png" alt="" class="wp-image-35895" style="width:481px;height:auto" srcset="https://peepalmedia.com/wp-content/uploads/2024/02/image-8-1024x512.png 1024w, https://peepalmedia.com/wp-content/uploads/2024/02/image-8-300x150.png 300w, https://peepalmedia.com/wp-content/uploads/2024/02/image-8-768x384.png 768w, https://peepalmedia.com/wp-content/uploads/2024/02/image-8-150x75.png 150w, https://peepalmedia.com/wp-content/uploads/2024/02/image-8-696x348.png 696w, https://peepalmedia.com/wp-content/uploads/2024/02/image-8-1068x534.png 1068w, https://peepalmedia.com/wp-content/uploads/2024/02/image-8.png 1200w" sizes="auto, (max-width: 1024px) 100vw, 1024px" /><figcaption class="wp-element-caption"><strong><em>ಅಪರಿಚಿತ ಸೈನಿಕರಿಂದ ನಾಗೆರಿಕರಿಗೆ ಹಿಂಸೆ, ವಿಡಿಯೋ ಸ್ಕ್ರೀನ್‌ಶಾಟ್</em></strong></figcaption></figure></div>


<p>ದಿ ಕ್ಯಾರವಾನ್‌ನ ಈ ವರದಿಯಲ್ಲಿ ಮೃತರ ಕುಟುಂಬಗಳನ್ನು ಮಾತನಾಡಿಸಲಾಗಿದ್ದು, ಸಾವಿನ ನಂತರ ಸೈನ್ಯವು ಇವುಗಳಲ್ಲಿ ಒಂದು ಕುಟುಂಬಕ್ಕೆ  10 ಲಕ್ಷ ಪರಿಹಾರ ನೀಡಿತ್ತು. 25 ಮಂದಿಗೆ ಸೈನ್ಯ &#8220;ಚಿತ್ರಹಿಂಸೆ&#8221; ನೀಡಿದ್ದು, ಇವರಲ್ಲಿ ಮೂವರು ಹತರಾಗಿದ್ದಾರೆ ಎಂದು ವರದಿ ಹೇಳಿದೆ. ಈ ಹಿಂಸೆಗೆ ಆದೇಶ ನೀಡಿದ ಬ್ರಿಗೇಡಿಯರ್ ಹೆಸರನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.</p>



<p>ದಿ ಕಾರವಾನ್  ಪೊಲೀಸ್, ಸೇನೆ ಮತ್ತು ಜಿಲ್ಲಾಡಳಿತ ಸೇರಿದಂತೆ ಅನೇಕ ಅಧಿಕಾರಿಗಳನ್ನು ಈ ಘಟನೆಯ ಬಗ್ಗೆ ಹೇಳಿಕೆ ನೀಡಲು ಸಂಪರ್ಕಿಸಿದೆ. ಆದರೆ ಈ ಯಾವುದೇ ಅಧಿಕಾರಿಗಳು ಪತ್ರಿಕೆಯ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರಲಿಲ್ಲ.</p>


<div class="wp-block-image">
<figure class="aligncenter size-full is-resized"><img loading="lazy" decoding="async" width="891" height="425" src="https://peepalmedia.com/wp-content/uploads/2024/02/image-9.png" alt="" class="wp-image-35903" style="width:540px;height:auto" srcset="https://peepalmedia.com/wp-content/uploads/2024/02/image-9.png 891w, https://peepalmedia.com/wp-content/uploads/2024/02/image-9-300x143.png 300w, https://peepalmedia.com/wp-content/uploads/2024/02/image-9-768x366.png 768w, https://peepalmedia.com/wp-content/uploads/2024/02/image-9-150x72.png 150w, https://peepalmedia.com/wp-content/uploads/2024/02/image-9-696x332.png 696w" sizes="auto, (max-width: 891px) 100vw, 891px" /></figure></div>


<p>ವಿವಾದಾತ್ಮಕ ಐಟಿ ನಿಯಮಗಳು ಯಾವುದೇ ವಿಚಾರಣೆ ನಡೆಸದೆ ಏಕಾಏಕಿ ಸುದ್ದಿ ವೆಬ್‌ಸೈಟ್‌ಗಳು ಸೇರಿದಂತೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ವರದಿಗಳನ್ನು, ಮಾಹಿತಿಗಳನ್ನು ತೆಗೆದುಹಾಕಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ತುರ್ತು ಅಧಿಕಾರವನ್ನು ನೀಡುತ್ತದೆ. ಹಲವಾರು ಮಾಧ್ಯಮ ಸಂಸ್ಥೆಗಳು ಮತ್ತು ನಾಗರಿಕ ಸಂಸ್ಥೆಗಳು ನ್ಯಾಯಾಲಯದಲ್ಲಿ ಈ ನಿಯಮಗಳನ್ನು ಪ್ರಶ್ನಿಸಿ ವಿಚಾರಣೆಗಾಗಿ ಅರ್ಜಿಗಳನ್ನು ಸಲ್ಲಿಸಿವೆ. </p>



<p></p>
]]></content:encoded>
					
		
		
			</item>
		<item>
		<title>ವಿವಿಗಳು ಸಾಲದಲ್ಲಿ&#8230; ಶಿಕ್ಷಣಕ್ಕೆ ಖರ್ಚು ಕಮ್ಮಿ&#8230; ಮೋದಿ ಆಡಳಿತದಲ್ಲಿ ಶಿಕ್ಷಣ ವ್ಯವಸ್ಥೆಯ ಕಥೆ!</title>
		<link>https://peepalmedia.com/condition-of-education-system-in-modi-government/</link>
		
		<dc:creator><![CDATA[Charan Aivarnad]]></dc:creator>
		<pubDate>Mon, 12 Feb 2024 08:12:37 +0000</pubDate>
				<category><![CDATA[ಅಂಕಣ]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[breaking]]></category>
		<category><![CDATA[breaking news]]></category>
		<category><![CDATA[department]]></category>
		<category><![CDATA[education]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[trend]]></category>
		<category><![CDATA[trending news]]></category>
		<category><![CDATA[universities]]></category>
		<category><![CDATA[viral viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=35851</guid>

					<description><![CDATA[ಮೋದಿ ಸರ್ಕಾರ ದೇಶದಲ್ಲಿ ಅಧಿಕಾರಕ್ಕೆ ಬಂದು ಒಂದು ದಶಕವಾಗುತ್ತಾ ಬಂತು. 2024ರ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಸದ್ಯ ದೇಶದಲ್ಲಿ ಶಿಕ್ಷಣ ವ್ಯವಸ್ಥೆಯ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಸಂಕ್ಷಿಪ್ತವಾಗಿ ನೋಡೋಣ. ಶಿಕ್ಷಣದ ಮೇಲೆ ಮಾಡಿದ ಹೂಡಿಕೆ ಹೆಚ್ಚಿನ ಲಾಭಾಂಶವನ್ನು ತರುತ್ತದೆ ಎಂದು ಬಿಜೆಪಿ ತನ್ನ 2014 ರ&#160; ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು. ಶಿಕ್ಷಣದ ಮೇಲಿನ ಸಾರ್ವಜನಿಕ ವೆಚ್ಚವನ್ನು ಒಟ್ಟು ದೇಶೀಯ ಉತ್ಪನ್ನದ 6% ಗೆ ಹೆಚ್ಚಿಸುವುದಾಗಿ ಭರವಸೆ ನೀಡಿತು. ಬಿಜೆಪಿ ಸರಕಾರದ ಭರವಸೆಯ ಹೊರತಾಗಿಯೂ, 2014 ಮತ್ತು [&#8230;]]]></description>
										<content:encoded><![CDATA[
<p>ಮೋದಿ ಸರ್ಕಾರ ದೇಶದಲ್ಲಿ ಅಧಿಕಾರಕ್ಕೆ ಬಂದು ಒಂದು ದಶಕವಾಗುತ್ತಾ ಬಂತು. 2024ರ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಸದ್ಯ ದೇಶದಲ್ಲಿ ಶಿಕ್ಷಣ ವ್ಯವಸ್ಥೆಯ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಸಂಕ್ಷಿಪ್ತವಾಗಿ ನೋಡೋಣ.</p>



<p>ಶಿಕ್ಷಣದ ಮೇಲೆ ಮಾಡಿದ ಹೂಡಿಕೆ ಹೆಚ್ಚಿನ ಲಾಭಾಂಶವನ್ನು ತರುತ್ತದೆ ಎಂದು ಬಿಜೆಪಿ ತನ್ನ 2014 ರ&nbsp; ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು. ಶಿಕ್ಷಣದ ಮೇಲಿನ ಸಾರ್ವಜನಿಕ ವೆಚ್ಚವನ್ನು ಒಟ್ಟು ದೇಶೀಯ ಉತ್ಪನ್ನದ 6% ಗೆ ಹೆಚ್ಚಿಸುವುದಾಗಿ ಭರವಸೆ ನೀಡಿತು. <a href="https://www.cbgaindia.org/publication/walking-the-tightrope-an-analysis-of-union-budget-2023-24/"> ಬಿಜೆಪಿ ಸರಕಾರದ ಭರವಸೆಯ</a> ಹೊರತಾಗಿಯೂ, 2014 ಮತ್ತು 2024 ರ ನಡುವೆ, ಪ್ರತಿ ವರ್ಷ ವಾರ್ಷಿಕ GDP ಯ ಸರಾಸರಿ 0.44% ಅನ್ನು ಶಿಕ್ಷಣಕ್ಕೆ ಮೀಸಲಿಟ್ಟಿತು.</p>



<p>ಇದಕ್ಕೆ ಹೋಲಿಸಿದರೆ, 2004 ಮತ್ತು 2014 ರ ನಡುವೆ, <a href="https://www.cbgaindia.org/wp-content/uploads/2016/03/Response-to-Union-Budget-2008-09.pdf">ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ</a> ಶಿಕ್ಷಣದ ಮೇಲೆ ಜಿಡಿಪಿಯ ಸರಾಸರಿ 0.61% ಅನ್ನು ಮೀಸಲಿಟ್ಟಿತು.</p>



<p>ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಅನುಮೋದಿಸಿದ್ದು ತಮ್ಮ ಸರ್ಕಾರದ ಒಂದು ಪ್ರಮುಖ ಸಾಧನೆ ಎಂದು ಸರ್ಕಾರವು ಹೇಳಿಕೊಂಡಿದೆ. ಈ ನೀತಿ<a href="https://www.researchgate.net/publication/337676989_Promising_but_Perplexing_Solutions_A_Critique_of_the_Draft_National_Education_Policy_2019"> ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಟೀಕೆ</a>ಗೆ ಗುರಿಯಾಯ್ತು.<a href="https://www.newsclick.in/professors-forum-flags-concerns-anti-teacher-NEP-teacher-day"> ಈ ಟೀಕೆಗಳ</a> ಮತ್ತು<a href="https://www.ndtv.com/education/nep-2020-student-teacher-bodies-call-new-education-policy-anti-democratic-2271135"> ವಿರೋಧಗಳ</a> ಹೊರತಾಗಿಯೂ ಸಾರ್ವಜನಿಕ ಸಂಸ್ಥೆಗಳ<a href="https://www.thehindu.com/news/national/andhra-pradesh/nep-leads-to-privatisation-of-education-say-student-unions/article65801394.ece"> ಖಾಸಗೀಕರಣ</a> ಮತ್ತು ತರಗತಿಗಳ ಡಿಜಿಟಲ್ ವರ್ಧನೆಗೆ ಉತ್ತೇಜನ ನೀಡಲಾಯ್ತು.  ಆದರೂ ಶಿಕ್ಷಣ ವಲಯ ಅನೇಕ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ವಿದ್ಯಾರ್ಥಿಗಳಿಗಾಗಿ ಹಲವಾರು <a href="https://www.newindianexpress.com/opinions/2020/Dec/28/the-trouble-with-neps-multiple-entryexit-system-2242001.html">&#8220;ಎಕ್ಸಿಟ್&#8221; ಆಯ್ಕೆಗಳನ್ನು</a> ನೀಡಿದರಿಂದ ಡ್ರಾಪ್‌ಔಟ್‌ ಕೂಡ ಹೆಚ್ಚಾಗುವ ಸಾಧ್ಯತೆಗಳಿವೆ.</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<iframe loading="lazy" title="ಹತ್ತು ವರ್ಷಗಳಲ್ಲಿ ಶಾಲಾ ಕಾಲೇಜುಗಳಿಗೆ ಮೋದಿ ಮಾಡಿದ್ದೇನು? |Peepal Media | ಪೀಪಲ್‌ ಮೀಡಿಯಾ" width="696" height="392" src="https://www.youtube.com/embed/pAoIPPvpz6Y?feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" allowfullscreen></iframe>
</div></figure>



<p>ಕಳೆದ ಒಂದು ದಶಕದಲ್ಲಿ <a href="https://img.asercentre.org/docs/ASER%202022%20report%20pdfs/allindiaaser202217_01_2023final.pdf">ಶಾಲಾ ದಾಖಲಾತಿ</a>ಯಲ್ಲಿ 2014 ರಲ್ಲಿ 96.7%, 2018 ರಲ್ಲಿ 97.2% ಮತ್ತು 2022 ರಲ್ಲಿ 98.4% ಸ್ಥಿರವಾದ ಹೆಚ್ಚಳವನ್ನು ಕಂಡಿದೆ. ಮಹಿಳಾ ದಾಖಲಾತಿಯೂ ಹೆಚ್ಚಾಗಿದೆ. 2006 ರಲ್ಲಿ 10%&nbsp; ಇದ್ದ ಶಾಲೆಗೆ ದಾಖಲಾಗದ 11 ಮತ್ತು 14 ರ ನಡುವಿನ ವಯಸ್ಸಿನ ಹುಡುಗಿಯರ ಪ್ರಮಾಣ 2022 ರಲ್ಲಿ 2% ರಷ್ಟು ಕಡಿಮೆಯಾಗಿದೆ.</p>



<p>ಸುಮಾರು 75% ಶಾಲೆಗಳು ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯಗಳನ್ನು ಹೊಂದಿವೆ ಮತ್ತು ಸುಮಾರು 40% ರಷ್ಟು ಗ್ರಂಥಾಲಯ ಪುಸ್ತಕಗಳನ್ನು ಹೊಂದಿವೆ. ಶೇ.7ರಷ್ಟು ಶಾಲೆಗಳು ಮಾತ್ರ ಕಂಪ್ಯೂಟರ್ ಹೊಂದಿದ್ದಾರೆ. <a href="https://img.asercentre.org/docs/ASER%202022%20report%20pdfs/allindiaaser202217_01_2023final.pdf">(ನೋಡಿ)</a></p>



<p>ದೇಶದಾದ್ಯಂತ, ಕಡಿಮೆ ದಾಖಲಾತಿ ಹೊಂದಿರುವ ಒಬ್ಬರೇ ಶಿಕ್ಷಕರನ್ನು ಹೋಂದಿರುವ <a href="https://scroll.in/article/1027639/indias-mass-closure-of-schools-is-leaving-lakhs-of-students-stranded">ಶಾಲೆಗಳನ್ನು ಮುಚ್ಚಲಾಯಿತು</a>. ಇದು ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿನ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರಿತು. ಸದ್ಯ, <a href="https://www.thehindu.com/data/data-one-in-seven-indian-primary-schools-run-by-a-lone-teacher/article66881043.ece">ಏಳು ಶಾಲೆಗಳಲ್ಲಿ ಒಂದನ್ನು ಒಬ್ಬ ಶಿಕ್ಷಕರೇ ನಡೆಸುತ್ತಿದ್ದಾರೆ</a>.</p>



<p>ಶಾಲಾ ಮಕ್ಕಳಲ್ಲಿ ಪೌಷ್ಠಿಕಾಂಶದ ಮಟ್ಟವನ್ನು ಹೆಚ್ಚಿಸಲು ಜಾರಿಗೆ ತಂದ ಮಧ್ಯಾಹ್ನದ ಊಟದ ಯೋಜನೆಯಾದ <a href="https://scroll.in/latest/1019739/underutilisation-pm-poshan-and-samagra-shiksha-abhiyan-funds-flagged-by-parliamentary-commitee">ಪಿಎಂ-ಪೋಷನ್‌ </a>ಯೋಜನೆಯಲ್ಲಿ ಹಣವನ್ನು ಸಮರ್ಪಕವಾಗಿ ಬಳಸಲಾಗಿಲ್ಲ. ತನ್ನ ಇತ್ತೀಚಿನ ವರದಿಯಲ್ಲಿ ಕೇಂದ್ರ ಸರ್ಕಾರದ ಮಧ್ಯಾಹ್ನದ ಊಟ ಯೋಜನೆ ಪಿಎಂ-ಪೋಶನ್ ಮತ್ತು ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮ ಸಮಗ್ರ ಶಿಕ್ಷಾ ಅಭಿಯಾನಕ್ಕೆ ನಿಗದಿಪಡಿಸಿದಕ್ಕಿಂತ ಹಣವನ್ನು ಕಡಿಮೆ ಬಳಸಲಾಗುತ್ತಿದೆ ಎಂದು ಸಂಸದೀಯ ಸ್ಥಾಯಿ ಸಮಿತಿ ಹೇಳಿದೆ.</p>



<p>ಬಿಜೆಪಿ ರಾಜ್ಯಸಭಾ ಸಂಸದ ವಿನಯ್ ಪಿ ಸಹಸ್ರಬುದ್ಧೆ ಅಧ್ಯಕ್ಷತೆಯ ಈ ಸಮಿತಿಯು ಜನವರಿ 31, 2022 ರ ಹೊತ್ತಿಗೆ ಸಮಗ್ರ ಶಿಕ್ಷಾ ಅಭಿಯಾನಕ್ಕಾಗಿ ಆ ವರ್ಷದ ಬಜೆಟ್‌ನಲ್ಲಿ ಮೀಸಲಿಟ್ಟ 37,383.36 ಕೋಟಿ ರುಪಾಯಿಯಲ್ಲಿ ಕೇವಲ 16,821.70 ಕೋಟಿ (55%) ರುಪಾಯಿ ಬಳಸಲಾಗಿದೆ ಎಂದು ವರದಿ ಮಾಡಿದೆ. ಪಿಎಂ-ಪೋಷನ್ ಯೋಜನೆಗಾಗಿ,ಒಟ್ಟು 11,500 ಕೋಟಿ ರುಪಾಯಿಯಲ್ಲಿ ಜನವರಿ 31 ರವರೆಗೆ ಕೇವಲ 6,660.54 ಕೋಟಿ (57.91%) ಮಾತ್ರ ಬಳಸಲಾಗಿದೆ.</p>



<p><a href="https://img.asercentre.org/docs/ASER%202022%20report%20pdfs/allindiaaser202217_01_2023final.pdf">The National Initiative for Proficiency in Reading with Understanding and Numeracy</a> &#8211; ನಿಪುಣ್‌ ಭಾರತ್‌ ಮಿಷನನ್ನು 2021 ರಲ್ಲಿ ಸ್ಥಾಪಿಸಲಾಯಿತು ಮತ್ತು 2025 ರ ವೇಳೆಗೆ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಸಂಖ್ಯೆಗಳ ಬಳಕೆ ಹಾಗೂ ಸಾಕ್ಷರತೆಯಲ್ಲಿ ಹಿಡಿತ ಸಾಧಿಸಿಲು ಈ ಮಿಷನ್‌ ಜಾರಿ ಮಾಡಲಾಗಿದೆ. 2022 ರಲ್ಲಿ, 3 ನೇ ತರಗತಿಯಲ್ಲಿ ನಾಲ್ಕನೇ ಒಂದು ಭಾಗದಷ್ಟು ಮಕ್ಕಳು ಮಾತ್ರ ಗಣಿತದಲ್ಲಿ ಮತ್ತು&nbsp; 20% ಮಕ್ಕಳು ಓದುವಿಕೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಒಳ್ಳೆಯ ಫಲಿತಾಂಶ ನೀಡಿದ್ದಾರೆ ಎಂದು Annual Status of Education Report 2022&nbsp; ಡೇಟಾ ತೋರಿಸುತ್ತದೆ.</p>



<p>2017 ರಿಂದ, NCERTಯ ಶಾಲಾ ಪಠ್ಯಪುಸ್ತಕಗಳಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ. 2022 ರಲ್ಲಿ, ಅಂದರೆ ತೀರ ಇತ್ತೀಚಿಗೆ ಕೂಡ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ: <a href="https://www.hindustantimes.com/india-news/ncert-drops-mughal-empire-chapters-kapil-mishra-says-akbar-101680590093526.html">ಮೊಘಲ್ ಯುಗ</a> ಮತ್ತು <a href="https://indianexpress.com/article/express-exclusive/express-investigation-part-2-key-deletions-on-caste-minorities-in-revised-school-textbooks-7977839/">ಜಾತಿ ವ್ಯವಸ್ಥೆಯ</a> ಉಲ್ಲೇಖಗಳನ್ನು ಡಿಲಿಟ್‌ ಮಾಡಲಾಗಿದೆ. <a href="https://frontline.thehindu.com/the-nation/cutting-to-shape/article32184586.ece">ಸಾಮಾಜಿಕ ಚಳುವಳಿಗಳ</a> ಅಧ್ಯಾಯಗಳು,<a href="https://www.thehindu.com/news/national/ncert-drops-texts-on-gandhi-hindu-muslim-unity-rss-ban-from-class-12-textbook/article66702224.ece"> ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲಿನ ನಿಷೇಧದ ಬಗೆಗಿನ ಪಠ್ಯ </a>ಮತ್ತು ಹಿಂದುತ್ವ ಮತ್ತು ಗಾಂಧಿ ಹತ್ಯೆಯ ಮಾಹಿತಿಗಳನ್ನು ತೆಗೆದುಹಾಕಲಾಗಿದೆ. 2023 ರಲ್ಲಿ, <a href="https://frontline.thehindu.com/news/when-creationism-takes-over-darwins-theory-of-evolution-in-indian-schools/article66780658.ece#:~:text=The%20erasure%20of%20Darwin,not%20be%20taught%20in%20schools.">ಚಾರ್ಲ್ಸ್ ಡಾರ್ವಿನ್‌ನ ವಿಕಾಸವಾದದ</a> ಅಧ್ಯಾಯವನ್ನು ಸಹ ತೆಗೆದುಹಾಕಲಾಯಿತು.<a href="https://frontline.thehindu.com/the-nation/communalism/targeting-young-minds-bjp-plans-to-introduce-bhagavad-gita-as-subject-in-gujarat/article38467823.ece"> ಹಿಂದುತ್ವಕ್ಕೆ </a>ಸವಾಲಾಗುವ ಎಲ್ಲಾ ಮಾಹಿತಿಗಳನ್ನು ಕೇಂದ್ರ ಸರ್ಕಾರ ಪಠ್ಯ ಪುಸ್ತಕಗಳಿಂದ ಕಿತ್ತುಹಾಕಿದೆ</p>



<p>ಕೇಂದ್ರ ಸರ್ಕಾರವು 2017 ರಲ್ಲಿ ಸ್ಥಾಪಿಸಿದ ಉನ್ನತ ಶಿಕ್ಷಣ ಹಣಕಾಸು ಸಂಸ್ಥೆಯು (Higher Education Financing Agency) UGC ಯ ಧನಸಹಾಯಕ್ಕೆ ಸಂಬಂಧಿಸಿದ ಹಲವಾರು ಕೆಲಸಗಳನ್ನು ತಾನು ವಹಿಸಿಕೊಂಡಿದೆ. ಸರ್ಕಾರವು ಹಣಕಾಸಿನ ವಿಧಾನವನ್ನು ಅನುದಾನದಿಂದ ಸಾಲಕ್ಕೆ ಬದಲಾಯಿಸಿತು. ಇದರಿಂದಾಗಿ ಅನೇಕ ಕೇಂದ್ರೀಯ ಸಂಸ್ಥೆಗಳು <a href="https://scroll.in/article/1047185/how-students-are-repaying-the-loans-that-universities-are-taking">ಸಾಲಗಳನ್ನು&nbsp; ಮರುಪಾವತಿಸಲು</a> ಹೆಣಗಾಡುವಂತೆ ಮಾಡಿತು. ಸಂಸ್ಥೆಗಳ ಆಡಳಿತ ಮಂಡಳಿ ಶುಲ್ಕವನ್ನು ಹೆಚ್ಚಿಸಲು ಅಥವಾ ಶಿಕ್ಷಣದ ಇತರ ಅಂಶಗಳಲ್ಲಿ ರಾಜಿ ಮಾಡಿಕೊಳ್ಳುವಂತೆ ಮಾಡಿತು.</p>



<p>ಸರ್ಕಾರವು &#8220;ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್&#8221; ಅನ್ನು ಗುರುತಿಸಿ, ಅವುಗಳನ್ನು ವಿಶ್ವ ದರ್ಜೆಯ ವಿಶ್ವವಿದ್ಯಾನಿಲಯಗಳಾಗಿ ಅಭಿವೃದ್ಧಿ ಪಡಿಸಲು ಯೋಜನೆಯನ್ನು ಹಾಕಿಕೊಂಡಿತು. ನಿಮಗೆ ನೆನಪಿರಬಹುದು, ಮುಕೇಶ್‌ ಅಂಬಾನಿ, ನೀತಾ ಅಂಬಾನಿ ಒಡೆತನದ <a href="https://scroll.in/article/886166/explainer-how-reliances-jio-institute-was-chosen-as-an-institution-of-eminence">ಜಿಯೋ ಯುನಿವರ್ಸಿಟಿ</a> ಕೋರ್ಸ್‌ ಆರಂಭಿಸುವ ಮೊದಲೇ, ಹುಟ್ಟುವ ಮೊದಲೇ ಮೋದಿ ಸರ್ಕಾರದಿಂದ ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್ ಎಂದು ಪರಿಗಣಿಸಲ್ಪಟ್ಟಿತು.</p>



<p>ಆದರೆ ಅನೇಕ ಟೀಕೆ- ದೂರುಗಳಿಂದಾಗಿ <a href="https://www.universityworldnews.com/post.php?story=20220930130425671">ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್ </a>ಯೋಜನೆ ನನೆಗುದಿಗೆ ಬಿದ್ದಿದೆ. 2019 ರಲ್ಲಿ, ಸರ್ಕಾರವು ತನ್ನ ಪ್ರಣಾಳಿಕೆಯಲ್ಲಿ 2024 ರ ವೇಳೆಗೆ 50 ಇನ್ಸ್ಟಿಟ್ಯೂಟ್ ಆಫ್ ಎಮಿನೆನ್ಸ್ ಅನ್ನು ಗುರುತಿಸುವುದಾಗಿ ಹೇಳಿತ್ತು. ಆದರೆ ಇದುವರೆಗೆ ಆಗಿದ್ದು 20 ಶಿಕ್ಷಣ ಸಂಸ್ಥೆಗಳು ಮಾತ್ರ.</p>



<p>ತನ್ನ 2014 ರ ಪ್ರಣಾಳಿಕೆಯಲ್ಲಿ, ಭಾರತೀಯ ವಿಶ್ವವಿದ್ಯಾನಿಲಯಗಳನ್ನು &#8220;ಜಾಗತಿಕ ವಿಶ್ವವಿದ್ಯಾನಿಲಯಗಳಿಗೆ ಸಮಾನವಾಗಿ&#8221; ಬೆಳೆಸಲು ಶೈಕ್ಷಣಿಕ ಮತ್ತು ಸಂಶೋಧನೆಯ ಗುಣಮಟ್ಟವನ್ನು ಹೆಚ್ಚಿಸುವುದಾಗಿ ಸರ್ಕಾರ ಹೇಳಿದೆ. ಹಾಗಿದ್ದೂ ವಿಜ್ಞಾನ ಸಂಸ್ಥೆಗಳು ಮೋದಿ ಆಡಳಿತದ ಅಡಿಯಲ್ಲಿ ಸಂಕಷ್ಟಕ್ಕೆ ಸಿಲುಕಿವೆ. ಇದಕ್ಕೆ ಪ್ರಮುಖ ಕಾರಣವೆಂದರೆ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್‌ಗೆ ಫಂಡ್‌ನಲ್ಲಿ 50% ಭಾಗವನ್ನು ಸ್ವತಃ ಸಂಗ್ರಹಿಸಲು, ಉದ್ಯಮಿಗಳಿಂದ ಮತ್ತು ಕೈಗಾರಿಕೆಗಳಿಂದ ಸಂಗ್ರಹಿಸಲು ಹೇಳಲಾಯ್ತು. <a href="https://www.thehindu.com/news/national/csir-faces-fund-crunch-asks-labs-to-look-outside/article18718763.ece">ಇದು ಬೃಹತ್ ಪ್ರಮಾಣದ ಫಂಡ್‌ನ ಕೊರತೆಗೆ ಕಾರಣವಾಯಿತು.&nbsp;</a></p>



<p>ಸರ್ಕಾರವು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ 10% ಮೀಸಲಾತಿಯನ್ನು ನೀಡಿತು. ಈ ಸಂಸ್ಥೆಗಳಿಗೆ ಹೆಚ್ಚಿನ ಸೀಟುಗಳನ್ನು ಸೃಷ್ಟಿಸಲು ಹೇಳಲಾಯ್ತು. ಆದರೆ, <a href="https://www.newindianexpress.com/nation/2019/Apr/03/central-institutes-face-admission-for-ews-quota-seats-in-current-academic-year-without-funds-1959587.html">EWS ಕೋಟಾದ ಸೀಟುಗಳನ್ನು ಹೆಚ್ಚಿಸಲು ಹಣವನ್ನೇ ಸರ್ಕಾರ ಕೊಡಲಿಲ್ಲ.</a></p>



<p><a href="https://scroll.in/article/1049603/a-dalit-scholars-death-and-brahmin-dominance-at-indias-premier-scientific-institute">ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯ</a> ಹೆಚ್ಚಾಗುತ್ತಲೇ ಇದೆ. <a href="https://sabrangindia.in/wp-content/uploads/2023/12/loksabhaquestions_annex_1714_AU188-1.pdf">ಶಿಕ್ಷಣ ಸಚಿವರು ಲೋಕಸಭೆಯಲ್ಲಿ</a> ಡಿಸೆಂಬರ್ 2023 ರಲ್ಲಿ ನೀಡಿದ ಉತ್ತರದ ಪ್ರಕಾರ, ಹಿಂದಿನ ಐದು ವರ್ಷಗಳಲ್ಲಿ, 2,622 ಪರಿಶಿಷ್ಟ ಪಂಗಡ, 2,424 ಪರಿಶಿಷ್ಟ ಜಾತಿ ಮತ್ತು 4,596 ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಕೇಂದ್ರೀಯ ವಿಶ್ವವಿದ್ಯಾಲಯಗಳಿಂದ ಡ್ರಾಪ್‌ಔಟ್‌ ಆಗಿದ್ದಾರೆ. (<a href="https://scroll.in/article/1018995/why-phds-are-a-minefield-for-indias-marginalised-students">ನೋಡಿ</a>)</p>



<p>ಮುಸ್ಲಿಂ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಮೌಲಾನಾ ಆಜಾದ್ ಫೆಲೋಶಿಪ್ ಅನ್ನು ಸಹ ಕೇಂದ್ರ ಸರ್ಕಾರ ನಿಲ್ಲಿಸಿದೆ. ಇದಲ್ಲದೆ, ಇದು ರಾಷ್ಟ್ರೀಯ ಸಾಗರೋತ್ತರ ಸ್ಕಾಲರ್‌ಶಿಪ್‌ನಿಂದ ಮಾನವಿಕ ಹಿನ್ನೆಲೆಯ ವಿದ್ಯಾರ್ಥಿಗಳನ್ನು ಹೊರಗಿಟ್ಟಿದೆ. ಅಂದರೆ ವಿದೇಶಗಳಲ್ಲಿ ಹೋಗಿ ಓದಲು ಕನಸು ಕಂಡ ಬಡ ವಿದ್ಯಾರ್ಥಿಗಳ ಮೇಲೆ ಮೋದಿ ಸರ್ಕಾರ ಚಪ್ಪಡಿಕಲ್ಲು ಹಾಕಿದೆ. ಇದು ಅಂಚಿನಲ್ಲಿರುವ ಸಮುದಾಯಗಳ ವಿದ್ಯಾರ್ಥಿಗಳನ್ನು ಟಾರ್ಗೆಟ್‌ ಮಾಡಿ ಮಾಡಲಾಗಿದೆ.</p>



<p>ಕಳೆದ ಒಂದು ದಶಕದಲ್ಲಿ <a href="https://www.indiatoday.in/india/story/india-bloc-backed-student-outfits-protest-against-education-policy-in-delhi-2488111-2024-01-13">ಖಾಸಗೀಕರಣ,</a> ಫೆಲೋಶಿಪ್‌ಗಳ <a href="https://www.aljazeera.com/news/2015/12/29/indian-students-protest-scrapping-of-fellowships">ರದ್ದತಿ</a>, ಸ್ಟೈಫಂಡ್‌ಗಳಲ್ಲಿ <a href="https://www.thehindu.com/news/cities/Delhi/students-protest-against-delay-in-scholarships/article33055331.ece">ವಿಳಂಬ</a> , <a href="https://timesofindia.indiatimes.com/city/pune/funding-cuts-hurt-top-scientific-institutions/articleshow/69208587.cms">ಸಂಶೋಧನೆಗಳಿಗೆ ಫಂಡ್‌ </a>ಕೊಡದೇ ಇರುವುದು, <a href="https://timesofindia.indiatimes.com/city/delhi/jnu-hostel-students-protest-lack-of-drinking-water-for-past-20-days/articleshow/93508613.cms">ಮೂಲಸೌಕರ್ಯಗಳ ಕೊರತೆ</a> ಮತ್ತು ಕ್ಯಾಂಪಸ್‌ಗಳಲ್ಲಿ <a href="https://www.deccanherald.com/india/saffronising-the-campus-students-plan-protest-at-hansraj-college-over-ban-on-non-veg-food-1182206.html">ಕೇಸರಿಕರಣದಂತಹ</a> ಅನೇಕ ಸಮಸ್ಯೆಗಳ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ಆದರೆ ಎಮ್ಮೆ ಚರ್ಮದ ಮೋದಿ ಸರ್ಕಾರಕ್ಕೆ ಯಾವುದೂ ನಾಟುತ್ತಿಲ್ಲ.</p>
]]></content:encoded>
					
		
		
			</item>
		<item>
		<title>ಮೋದಿ ಸರ್ಕಾರದಿಂದ ತೆರಿಗೆ ಪಾಲಿನಲ್ಲಿ ಕರ್ನಾಟಕ್ಕೆ ಅನ್ಯಾಯ!</title>
		<link>https://peepalmedia.com/injustice-to-karnataka-state-in-tax-devolution-by-mod-gvt/</link>
		
		<dc:creator><![CDATA[Charan Aivarnad]]></dc:creator>
		<pubDate>Wed, 07 Feb 2024 06:19:46 +0000</pubDate>
				<category><![CDATA[ಅಂಕಣ]]></category>
		<category><![CDATA[bjp]]></category>
		<category><![CDATA[bjp karnataka]]></category>
		<category><![CDATA[breaking]]></category>
		<category><![CDATA[breaking news]]></category>
		<category><![CDATA[Chalo Delhi]]></category>
		<category><![CDATA[congress narendra modi]]></category>
		<category><![CDATA[D.K. Shivakumar]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Karnataka Chief Minister Siddaramaiah]]></category>
		<category><![CDATA[modi]]></category>
		<category><![CDATA[news]]></category>
		<category><![CDATA[news updates]]></category>
		<category><![CDATA[Nirmala Sitharaman]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Siddaramaiah]]></category>
		<category><![CDATA[state politics]]></category>
		<category><![CDATA[tax devolution]]></category>
		<category><![CDATA[trend]]></category>
		<category><![CDATA[trending news]]></category>
		<category><![CDATA[viral]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=35633</guid>

					<description><![CDATA[ನಿರ್ಮಲಾ ಸೀತಾರಾಮನ್‌ ಅವರು ಕರ್ನಾಟಕದಿಂದ ಚುನಾಯಿತರಾದ ಸಂಸದೆ ಎಂಬುದನ್ನು ನೀವು ಮರೆತು ಬಿಟ್ಟಿದ್ದೀರಾ? ಸದ್ಯ ಮೋದಿ ಸರ್ಕಾರದಲ್ಲಿ ಹಣಕಾಸು ಸಚಿವೆ ಆಗಿರುವ ಇವರು, 2016 ರಿಂದ, ಕರ್ನಾಟಕದಿಂದ ಚುನಾಯಿತರಾದ ನಂತರ ನಮ್ಮ ರಾಜ್ಯಕ್ಕಾಗಿ ಏನು ಮಾಡಿದ್ದಾರೆ? ಗಣತಂತ್ರ ದೇಶವಾಗಿರುವ ಭಾರತದಲ್ಲಿ ಪ್ರತೀ ರಾಜ್ಯವೂ ತನ್ನ ಜನರ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಕೆಲಸ ಮಾಡುತ್ತದೆ. ಆಗ ಅಲ್ಲಿನ ಚುನಾಯಿತ ಪ್ರತಿನಿಧಿಗಳು ತಮ್ಮ ರಾಜ್ಯದ ಒಳಿತಿಗಾಗಿ ರಾಷ್ಟ್ರಮಟ್ಟದಲ್ಲಿ ದನಿಯೆತ್ತಬೇಕು. ಡಬಲ್‌ ಇಂಜೀನ್‌ ಸರ್ಕಾರ ಇದೆ ಎಂದು ತಕತೈ ಕುಣಿದು ಎನೂ ಸಾಧಿಸಲು [&#8230;]]]></description>
										<content:encoded><![CDATA[
<p>ನಿರ್ಮಲಾ ಸೀತಾರಾಮನ್‌ ಅವರು ಕರ್ನಾಟಕದಿಂದ ಚುನಾಯಿತರಾದ ಸಂಸದೆ ಎಂಬುದನ್ನು ನೀವು ಮರೆತು ಬಿಟ್ಟಿದ್ದೀರಾ? ಸದ್ಯ ಮೋದಿ ಸರ್ಕಾರದಲ್ಲಿ ಹಣಕಾಸು ಸಚಿವೆ ಆಗಿರುವ ಇವರು, 2016 ರಿಂದ, ಕರ್ನಾಟಕದಿಂದ ಚುನಾಯಿತರಾದ ನಂತರ ನಮ್ಮ ರಾಜ್ಯಕ್ಕಾಗಿ ಏನು ಮಾಡಿದ್ದಾರೆ?</p>



<p>ಗಣತಂತ್ರ ದೇಶವಾಗಿರುವ ಭಾರತದಲ್ಲಿ ಪ್ರತೀ ರಾಜ್ಯವೂ ತನ್ನ ಜನರ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಕೆಲಸ ಮಾಡುತ್ತದೆ. ಆಗ ಅಲ್ಲಿನ ಚುನಾಯಿತ ಪ್ರತಿನಿಧಿಗಳು ತಮ್ಮ ರಾಜ್ಯದ ಒಳಿತಿಗಾಗಿ ರಾಷ್ಟ್ರಮಟ್ಟದಲ್ಲಿ ದನಿಯೆತ್ತಬೇಕು. ಡಬಲ್‌ ಇಂಜೀನ್‌ ಸರ್ಕಾರ ಇದೆ ಎಂದು ತಕತೈ ಕುಣಿದು ಎನೂ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ನಮ್ಮ ಅರಿವಿಗೆ ಬಂದಿತ್ತು.</p>



<p>ಕರ್ನಾಟಕದ್ದೇ ಸಂಸದೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡನೆ ಮಾಡಿದ ನಂತರ ಕರ್ನಾಟಕ ಕಾಂಗ್ರೆಸ್ ಸಂಸದ, ಡಿಕೆ ಸುರೇಶ್ ಅವರ ಒಂದು ಹೇಳಿಕೆ ವ್ಯಾಪಕ ಚರ್ಚೆಗೆ ಘ್ರಾಸವಾಯ್ತು. ಫೆಬ್ರವರಿ 1 ರಂದು ಕೇಂದ್ರ ಸರ್ಕಾರ ಆರ್ಥಿಕವಾಗಿ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಮಾಡ್ತಾ ಇದೆ, ಹೀಗೇ ಆದರೆ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎಂದು ಡಿಕೆ ಸುರೇಶ್‌ ಹೇಳಿಕೆ ಕೊಟ್ಟರು.</p>



<p>&#8220;ಕೇಂದ್ರವು ದಕ್ಷಿಣ ಭಾರತದ ರಾಜ್ಯಗಳಿಗೆ ಜಿಎಸ್ಟಿ ಮತ್ತು ನೇರ ತೆರಿಗೆಯ ಸರಿಯಾದ ಪಾಲು ನೀಡುತ್ತಿಲ್ಲ. ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ. ದಕ್ಷಿಣ ರಾಜ್ಯಗಳಿಂದ ಸಂಗ್ರಹಿಸುವ ಹಣವನ್ನು ಉತ್ತರ ಭಾರತದ ರಾಜ್ಯಗಳಿಗೆ ನೀಡಲಾಗುತ್ತಿದೆ. ಇದು ಮುಂದುವರಿದರೆ ಪ್ರತ್ಯೇಕ ರಾಷ್ಟ್ರವಾಗಿ ವಿಭಜನೆಯಾಗುವ ಸಾಧ್ಯತೆ ಇದೆ,&#8221; ಎಂದು ಹೇಳಿದ್ದರು. ಆ ಹೇಳಿಕೆಯಲ್ಲಿ ಅನ್ಯಾಯವನ್ನು ನಿರ್ಭಯವಾಗಿ ಡಿಕೆ ಸುರೇಶ್‌ ವ್ಯಕ್ತಪಡಿಸಿದ್ದರು.</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<div class="youtube-embed" data-video_id="Hn7tdh3ux7Q"><iframe loading="lazy" title="ತೆರಿಗೆ ಪಾಲಿನಲ್ಲಿ ಕರ್ನಾಟಕ್ಕೆ ಮೋದಿ ಅನ್ಯಾಯ | ಸರ್ಕಾರದಿಂದ ದೆಹಲಿ ಚಲೋ| Chalo Delhi" width="696" height="392" src="https://www.youtube.com/embed/Hn7tdh3ux7Q?start=12&#038;feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" allowfullscreen></iframe></div>
</div></figure>



<p>ಈಗ ಮತ್ತೆ ಸುರೇಶ್‌ ಹೇಳಿಕೆ ಬೆನ್ನಲ್ಲೇ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು &#8220;ನಮ್ಮ ತೆರಿಗೆಯ ಪಾಲನ್ನು ನಮಗೆ ಕೊಡಿ&#8221; ಎಂದು ದೆಹಲಿಯಲ್ಲಿ ಇಂದು, ಅಂದರೆ ಫೆಬ್ರವರಿ 7ಕ್ಕೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಬಿಜೆಪಿಯ ವಿರುದ್ಧದ ಪ್ರತಿಭಟನೆ ಅಲ್ಲ, ಹಾಗಾಗಿ ಬಿಜೆಪಿ ನಾಯಕರೂ ಬೆಂಬಲ ಕೊಡಿ ಎಂದು ಕೇಳಿಕೊಂಡು ಪತ್ರ ಬರೆದಿದ್ದಾರೆ.</p>



<p>ಈಗ ಉತ್ತರ ದ್ರುವದಿಂ ದಕ್ಷಿಣ ದ್ರುವಕೆ ಚುಂಬಕ ಗಾಳಿ ಬೀಸುತ್ತಿಲ್ಲ, ಉತ್ತರ-ದಕ್ಷಿಣ ಎಂಬ ಭಿನ್ನಾಭಿಪ್ರಾಯದ ದನಿ ಎದ್ದಿದೆ.</p>



<p>&#8220;ತೆರಿಗೆ ಹಂಚಿಕೆ ಕಡಿತದಿಂದ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದರಿಂದ ಕಳೆದ 4 ವರ್ಷಗಳಲ್ಲಿ ರಾಜ್ಯಕ್ಕೆ 45 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ಕನ್ನಡಿಗರು ಕಟ್ಟುವ ತೆರಿಗೆ ರಾಜ್ಯದ ಕಷ್ಟಕಾಲಕ್ಕೆ ಉಪಯೋಗವಾಗದೆ ಉತ್ತರದ ರಾಜ್ಯಗಳಿಗೆ ಹೋಗುತ್ತಿದೆ. ಈ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ&#8221; ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇದಕ್ಕೆ ಬಿಜೆಪಿ ನಾಯಕರೂ ಬೆಂಬಲ ನೀಡುವಂತೆ ಪತ್ರ ಬರೆದಿದ್ದಾರೆ.</p>



<p><strong>ಅನ್ಯಾಯ ಆಗಿದ್ಯಾ?</strong><br>ಕೇಂದ್ರ ಸರ್ಕಾರ ಈಗ ರಾಜ್ಯಗಳಿಂದ ಸಂಗ್ರಹಿಸುವ ನೇರ ಮತ್ತು ಪರೋಕ್ಷ ತೆರಿಗೆಗಳಲ್ಲಿ ಎಷ್ಟು ಪಾಲನ್ನು ರಾಜ್ಯಕ್ಕೆ ಕೊಡಬೇಕು ಎಂಬುದನ್ನು ಹಣಕಾಸು ಆಯೋಗ ನಿರ್ಧಾರ ಮಾಡುತ್ತದೆ. ಹೀಗೆ ಈ 15 ನೇ ಹಣಕಾಸು ಆಯೋಗ ದೇಶದ ಅನೇಕ ರಾಜ್ಯಗಳಿಗೆ ಹೆಚ್ಚಿನ ಪಾಲನ್ನು ನೀಡಿ, ಕರ್ನಾಟಕಕ್ಕೆ ಅನ್ಯಾಯ ಮಾಡಿದೆ. ಇದು ಕರ್ನಾಟಕದ ಆರೋಪ, ಇದರ ವಿರುದ್ಧ ಪ್ರತಿಭಟನೆ.</p>



<p>ಈಗ ಯಾವ ಮಾನದಂಡಗಳ ಮೂಲಕ ತೆರಿಗೆಗಳ ಪಾಲನ್ನು ಹಣಕಾಸು ಆಯೋಗ ಕೊಡ್ತದೆ? ಇದನ್ನು ನಿರ್ಧಾರ ಮಾಡುವಾ ಆ ರಾಜ್ಯದ ಜನಸಂಖ್ಯೆ, ತಲಾದಾಯದಲ್ಲಿ ಇರುವ ವ್ಯತ್ಯಾಸ, ರಾಜ್ಯದ ವಿಸ್ತೀರ್ಣತೆ ಎಷ್ಟಿದೆ..ಇವೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಎಷ್ಟು ತೆರಿಗೆ ಕೊಡಬೇಕು ಎಂಬುದನ್ನು ಹಣಕಾಸು ಆಯೋಗ ನಿರ್ಧಾರ ಮಾಡುತ್ತದೆ.</p>



<p>ಈ ಮಾನದಂಡಗಳ ಮೂಲಕ ತೆರಿಗೆಯ ಪಾಲನ್ನು ನಿರ್ಧಾರ ಮಾಡುವಾಗ ಕಡಿಮೆ ತೆರಿಗೆ ಪಾವತಿ ಮಾಡಿದ, ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ರಾಜ್ಯಗಳಿಗೆ ಹೆಚ್ಚಿನ ಪಾಲು ಹೋಗುತ್ತದೆ. ಆಗ ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ ಮೊದಲಾದ ರಾಜ್ಯಗಳು ಹೆಚ್ಚಿನ ಪಾಲನ್ನು ಪಡಿತವೆ.</p>



<p>ಆದರೆ, ಅತೀ ಹೆಚ್ಚು ತೆರಿಗೆ ಪಾವತಿ ಮಾಡುವ ದಕ್ಷಿಣದ ರಾಜ್ಯಗಳಾದ ಕರ್ನಾಟಕ, ತಮಿಳುನಾಡಿನಂತವಕ್ಕೆ ಕಡಿಮೆ ಪಾಲು ಸಿಗುತ್ತದೆ. 2020–21ನೇ ಆರ್ಥಿಕ ವರ್ಷದವರೆಗೂ ಈ ರೀತಿ ನಡೆಯುತ್ತಿತ್ತು.</p>



<p>ಈಗ 15 ನೇ ಹಣಕಾಸು ಆಯೋಗ ಬಂದಿದೆ. ಇದು ಪಾಲನ್ನು ಹಂಚುವಾಗ ಅತೀ ಹೆಚ್ಚು ತೆರಿಗೆ ಪಾವತಿ ಮಾಡುವ ಬೇರೆ ರಾಜ್ಯಗಳ ಪಾಲನ್ನು ಹೆಚ್ಚು ಮಾಡಿದೆ. ಆಂದ್ರ, ತಮಿಳುನಾಡು, ಮಹಾರಾಷ್ಟ್ರ, ಒಡಿಶಾ ರಾಜ್ಯಗಳಿಗೆ ಸಿಗಬೇಕಾದ ಹೆಚ್ಚಿನ ಪಾಲನ್ನು ಕೊಟ್ಟದ್ದಾರೆ.</p>



<p>ಆದರೆ, ಇಲ್ಲಿ ಅನಾಥವಾಗಿದ್ದು ಕರ್ನಾಟಕ. ಕನ್ನಡಿಗರಿಗೆ ಇರುವ ಸಿಟ್ಟೇ ಇದು. ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಾರೆ ಎಂದು. ಕರ್ನಾಟಕ ಬಿಟ್ಟು ಉಳಿದ ದಕ್ಷಿಣದ ರಾಜ್ಯಗಳಿಗೆ 2018–19ರಲ್ಲಿ ಸಿಕ್ಕಿದ್ದ ತೆರಿಗೆ ಪಾಲಿನ ಮೊತ್ತಕ್ಕಿಂತ ಹೆಚ್ಚು 2022–23ರಲ್ಲಿ ಸಿಕ್ಕಿದೆ.</p>



<p>2018–19ರಲ್ಲಿ ಕರ್ನಾಟಕಕ್ಕೆ ಸಿಕ್ಕಿದ ತೆರಿಗೆ ಆದಾಯದ ಪಾಲು 35,894 ಕೋಟಿ ರುಪಾಯಿಯಷ್ಟೇ. ಅದೇ ಕಡಿಮೆ ಅಂತ ಅಂದುಕೊಂಡರೆ, 2022–23ರಲ್ಲಿ ಸಿಕ್ಕಿದ್ದು ಕೇವಲ 34,496 ಕೋಟಿ ಮಾತ್ರ. ಹಿಂದಿಗಿಂತಲೂ ಕಡಿಮೆ.</p>



<p>ಈ 15 ನೇ ಹಣಕಾಸು ಆಯೋಗ ಲೆಕ್ಕ ಹಾಕಿದಂತೆ ನಾವು ತೆರಿಗೆ ಪಾಲನ್ನು ಹಂಚುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ಆಗಾಗ ಹೇಳುತ್ತದೆ. ಇದನ್ನು ನಾವು ನಂಬಿದರೆ, 2019–20ರವರೆಗೆ ಕರ್ನಾಟಕ್ಕೆ ಶೇ 4.74ರಷ್ಟು ತೆರಿಗೆ ಪಾಲು ಸಿಗುತ್ತಿತ್ತು. ಈ 15 ನೇ ಹಣಕಾಸು ಆಯೋಗ ಈಗ ಇದನ್ನು ಶೇ 3.64ಕ್ಕೆ ಇಳಿಸಿದೆ.</p>



<p>ಈ ಲೆಕ್ಕಾಚಾರವನ್ನು ಹಣಕಾಸು ಆಯೋಗ ಕೇರಳ ಮತ್ತೆ ಕರ್ನಾಟಕಕ್ಕೆ ಮಾತ್ರ ಯಾಕೆ ಉಲ್ಟಾ ಬರುವಂತೆ ಮಾಡಿದೆ? ಉತ್ತರ ಭಾರತದ, ಮಧ್ಯ ಭಾರತದ ರಾಜ್ಯಗಳಿಗೆ ಕೊಡುತ್ತಿದ್ದ ದೊಡ್ಡ ಪಾಲಿನಲ್ಲಿ ಹೇಳಿಕೊಳ್ಳುವಂತ ಹೆಚ್ಚು ಅಥವಾ ಕಡಿಮೆ ಆಗಿಲ್ಲ. ಆದರೂ ಅವೇ ಹೆಚ್ಚಿನ ಪಾಲನ್ನು ನುಂಗುತ್ತಿದ್ದಾವೆ.ಇಲ್ಲೆಲ್ಲಾ ಬಿಜೆಪಿ ಸರ್ಕಾರ ಕೂಡ ಇದೆ.</p>



<p>ಆದರೆ ಈ ಹಿಂದೆ ಕಡಿಮೆ ಪಾಲನ್ನು ಪಡೆಯುತ್ತಿದ್ದ ಆಂದ್ರ, ತಮಿಳುನಾಡಿನಂತ ಬಿಜೆಪಿ ಆಡಳಿತ ಇಲ್ಲದ ರಾಜ್ಯಗಳಿಗೆ ಈ ಬಾರಿ ಏರಿಕೆಯಾಗಿದೆ. ಯಾಕೆ?</p>



<p>2018–19ಕ್ಕೆ ಹೋಲಿಸಿದರೆ 2023–24ರಲ್ಲಿ ಒರಿಸ್ಸಾಗೆ ತೆರಿಗೆ ಪಾಲು ₹10,000 ಕೋಟಿಗಿಂತ ಹೆಚ್ಚಾಗಿದೆ. ಆಂದ್ರಕ್ಕೆ ₹8,551 ಕೋಟಿ ಹೆಚ್ಚು ಸಿಕ್ಕಿದೆ, ತಮಿಳುನಾಡಿಗೆ ₹11,026 ಕೋಟಿ ಹೆಚ್ಚು ಪಾಲು ಸಿಕ್ಕಿದೆ. ಅದರೆ ಕರ್ನಾಟಕಕ್ಕೆ ಸಿಕ್ಕಿದ್ದು ಎಷ್ಟು? ಕೇವಲ ಏರಿಕೆಯಾಗಿದ್ದು ಎಷ್ಟು? ₹1,358 ಕೋಟಿ ಮಾತ್ರ ಮಾತ್ರ ಏರಿಕೆಯಾಗಿದೆ. ಅದೂ 3.8% ಮಾತ್ರ!</p>



<p>ಈಗ 14 ನೇ ಹಣಕಾಸು ಆಯೋಗ ಹೇಳಿದಂತೆ ಪಾಲು ಕೊಟ್ಟರೂ 2023–24ರಲ್ಲಿ ಕರ್ನಾಟಕಕ್ಕೆ ಸಿಗಬೇಕಾಗಿದ್ದು ₹48,517 ಕೋಟಿ. ಆದರೆ ಸಿಕ್ಕಿದ್ದು ಎಷ್ಟು ಗೊತ್ತಾ? ₹37,252 ಕೋಟಿ! ಮೋದಿ ಸರ್ಕಾರ ಈ ಒಂದೇ ಆರ್ಥಿಕ ವರ್ಷದಲ್ಲಿ ಕರ್ನಾಟಕಕ್ಕೆ ₹11,265 ಕೋಟಿ ರುಪಾಯಿ ಮೋಸ ಮಾಡಿದೆ.</p>



<p>ಸರಿಯಪ್ಪಾ…. ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ತಮಿಳುನಾಡಿನ ಮಧುರೈ ಮೂಲದವರು. ಕರ್ನಾಟಕಕ್ಕೆ ಬಂದರು. 2016 ರಲ್ಲಿ ಕರ್ನಾಟಕದಿಂದ ಗೆದ್ದು ಸಂಸದೆ ಆದರು. ರಕ್ಷಣೆ ಅದೂ ಇದೂ ಅಂತ ಈಗ ಆರ್ಥಿಕ ಸಚಿವೆ. ಕರ್ನಾಟಕದವರು ಅಲ್ಲದೇ ಇರಬಹುದು. ಆದರೆ ಗೆದ್ದಿದ್ದು ಕರ್ನಾಟಕದ ಜನತೆಯ ಓಟಿನಿಂದ ಅಲ್ವಾ? ಈಗ ಕರ್ನಾಟಕವನ್ನೇ ಮರೆತು ಬಿಟ್ಟಿದ್ದಾರೆ.</p>



<p>ಗೆಲ್ಲಿಸಿದ ತಪ್ಪಿಗೆ ಇವತ್ತು ತೆರಿಗೆ ಹಂಚಿಕೆಯಲ್ಲಿ ಈ ರೀತಿ ಅನ್ಯಾಯ ಮಾಡಿದ್ದಾರೋ? ಸರಿ, ಇವರು ಗೆದ್ದಿದ್ದು ಮಾತ್ರ ಕರ್ನಾಟಕದಿಂದ, ಆದರೆ ಇವರು ಕರ್ನಾಟಕದವರು ಅಲ್ಲ ಅಂತಲೇ ಹೇಳೋಣ…. ತೆರಿಗೆ ಪಾಲಿನಲ್ಲಿ ಇಷ್ಟು ಕಡಿಮೆ ಮಾಡುವಾಗ ಕರ್ನಾಟಕದಲ್ಲೇ ಹುಟ್ಟಿ, ಕನ್ನಡಿಗರ ಓಟಿನಿಂದಲೇ ಗೆದ್ದ ಬಿಜೆಪಿ ಸಂಸದರು ಯಾಕೆ ಮೌನವಾಗಿದ್ದಾರೆ? ಮೋದಿಯವರು ಇವರಿಗೆ ಕಣ್‌ ಕಟ್…ಬಾಯ್‌ ಮುಚ್… ಎಂದು ಪಿನಿಷ್‌ಮೆಂಟ್‌ ಕೊಟ್ಟಿದ್ದಾರಾ?</p>



<p>ಮೋದಿಯವರು ಕನ್ನಡಿಗರಿಗೆ ಅನ್ಯಾಯ ಮಾಡಿದ್ದಾರೆ. ಇವರ ರಾಜ್ಯಕ್ಕೆ ಎಷ್ಟು ಕೊಟ್ಟಿದ್ದಾರೆ ಗೊತ್ತಾ? ಗುಜರಾತ್‌ಗೆ ಈ ಬಾರಿ ತೆರಿಗೆ ಪಾಲಿನಲ್ಲಿ ಶೇ 51ರಷ್ಟು ಏರಿಕೆಯಾಗಿದೆ. 2018–19ರಲ್ಲಿ ₹23,489 ಕೋಟಿ ತೆಗೆದುಕೊಂಡಿದ್ದ ಗುಜರಾತ್‌ಗೆ 2023–24ರಲ್ಲಿ ₹35,525 ಕೋಟಿ ಸಿಕ್ಕಿದೆ. ₹12,036 ಕೋಟಿ ಹೆಚ್ಚು ಸಿಕ್ಕಿದೆ.</p>



<p>ಗುಜರಾತ್‌ನಷ್ಟು ಬೇರೆ ಯಾವ ರಾಜ್ಯಕ್ಕೂ ಸಿಕ್ಕಿಲ್ಲ. ಇದಕ್ಕೆ ಕಾರಣ, ಬಿಜೆಪಿ ಗುಜರಾತ್‌ನಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಈಗ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಅವರಿಗೆ ಅಲ್ಲಿ ಗೆಲ್ಲುವುದಕ್ಕೆ ಎಲ್ಲವೂ ಸುಲಭವಾಗಿಲ್ಲ. ಗುಜರಾತ್‌ ಮಾಡೆಲ್‌ ಎಂಬುದು ಒಂದು ಸುಳ್ಳು ಎಂಬುದು ಗೊತ್ತಾಗಿದೆ. ಹೀಗಾಗಿ, ಇಲ್ಲಿಗೆ ಹೆಚ್ಚಿನ ಪಾಲನ್ನು ಕೊಟ್ಟಿದ್ದಾರೆ.</p>



<p>ಇನ್ನು ದಕ್ಷಿಣ ಭಾರತದಲ್ಲಿ ತಮ್ಮ ಹಿಡಿತವನ್ನು ಸರಿಯಾಗಿ ಸಾಧಿಸಲು, ತಮಿಳುನಾಡು, ಆಂದ್ರಗಳಿಗೆ ತರಿಗೆ ಪಾಲನ್ನು ಹೆಚ್ಚು ಮಾಡಲಾಗಿದೆ. ಆದರೆ ಕರ್ನಾಟಕಕ್ಕೆ ಮತ್ತೆ ಕೇರಳಕ್ಕೆ ಮೋದಿ ಅನ್ಯಾಯ ಮಾಡಿದ್ದಾರೆ.</p>



<p>&#8220;ಕೇರಳ ಕೂಡ ಕೇಂದ್ರದ ಈ ಅನ್ಯಾಯದ ನಡೆಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದೆ. ತೆರಿಗೆ ಆದಾಯದಲ್ಲಿ ರಾಜ್ಯ ಸಂಗ್ರಹಿಸುವ ಪ್ರತಿ 100 ರೂ.ಗೆ ಕೇರಳಕ್ಕೆ ಕೇವಲ 21 ರೂ ಸಿಗುತ್ತಿದೆ. ಉತ್ತರ ಪ್ರದೇಶಕ್ಕೆ 46 ರುಪಾಯಿ ಹೋಗುತ್ತದೆ,&#8221; ಎಂದು ಕೇರಳದ ಆರ್ಥಿಕ ಸಚಿವ ಕೆ.ಎನ್. ಬಾಲಗೋಪಾಲ್ ಹೇಳಿಕೆ ನೀಡಿದ್ದಾರೆ.</p>



<p>ಇನ್ನು ಹಣಕಾಸು ಆಯೋಗ ಒಂದು ಇಂಡಿಪೆಂಡೆಂಟ್‌ ಬಾಡಿ, ಕೇಂದ್ರ ಅದರ ಜೊತೆ ಯಾವುದೇ ರೀತಿಯ ಹಿಂಬಾಗಿಲಿನ, ಮುಂಬಾಗಿಲಿನ, ಫಾರ್ಮಲ್‌, ಇನ್‌ಫಾರ್ಮಲ್‌ ಮಾತುಕತೆ ಮಾಡಲು ಸಾಧ್ಯ ಇಲ್ಲ. ಹಾಗಾಗಿ ಹಣಕಾಸು ಆಯೋಗ ಏನು ಹೇಳಬೇಕು ಎಂಬುದು, ಹೇಗೆ ಆದಾಯವನ್ನು ಹಂಚಬೇಕು ಎಂಬುದನ್ನು ಕೇಂದ್ರ ನಿರ್ಧರಿಸಲು ಸಾಧ್ಯ ಇಲ್ಲ. ಹೀಗೆ ಯಾರೇ ಆದರೂ ಸಮರ್ಥನೆ ಮಾಡಿಕೊಂಡಾರು!</p>



<p>ಆದರೆ,<br>2014 ರಲ್ಲಿ ಮೋದಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ಹಣಕಾಸು ಆಯೋಗದ ಜೊತೆಗೆ ಹಿಂದಿನ ಬಾಗಿಲಿನಿಂದ, ಅಸಂವಿಧಾನಿಕವಾಗಿ ಮಾತುಕತೆ ನಡೆಸಿ ರಾಜ್ಯಗಳಿಗೆ ಸೇರಬೇಕಾದ ತೆರಿಗೆ ಆದಾಯದ ಪಾಲನ್ನು ಕಡಿಮೆ ಮಾಡುವಂತೆ ಒತ್ತಡ ಹೇರಿದ್ದರು. ಅದಕ್ಕೆ ಹಣಕಾಸು ಆಯೋಗ ಹಾಗೂ ಮೋದಿ ಮಧ್ಯೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದು ನೀತಿ ಆಯೋಗದ ಸಿಇಒ ಬಿವಿಆರ್‌ ಸುಬ್ರಹ್ಮಣ್ಯಂ.</p>



<p>ಆಗ ಹಣಕಾಸು ಆಯೋಗದ ಚೇರ್ಮನ್‌ ಆಗಿದ್ದ, ಆರ್‌ಬಿಐನ ಎಕ್ಸ್‌ ಗವರ್ನರ್‌ ವೈವಿ ರೆಡ್ಡಿ ವಿರೋಧ ಮಾಡಿದ್ದರು. ಅವರು ನೇರವಾಗಿ ಸುಬ್ರಹ್ಮಣ್ಯಂ ಅವರಿಗೆ &#8220;ಅಪ್ಪಾ, ಹೋಗಿ ನಿಮ್ಮ ಬಾಸ್ [ಪ್ರಧಾನಿ] ಗೆ ಹೇಳಿ, ಅವರಿಗೆ ಯಾವುದೇ ಆಯ್ಕೆಯಿಲ್ಲ ಅಂತ&#8221; ಎಂದು ಅವರು ಹೇಳಿದ್ದರು.</p>



<p>ಸೆಂಟರ್ ಫಾರ್ ಸೋಶಿಯಲ್ ಅಂಡ್ ಎಕನಾಮಿಕ್ ಪ್ರೋಗ್ರೆಸ್ (ಸಿಎಸ್‌ಇಪಿ) ಆಯೋಜಿಸಿದ್ದ ಭಾರತದಲ್ಲಿ ಹಣಕಾಸು ವರದಿ ಕುರಿತ ವಿಚಾರ ಸಂಕಿರಣದಲ್ಲಿ ಪ್ಯಾನೆಲಿಸ್ಟ್ ಆಗಿ ಮಾತನಾಡುತ್ತಾ ಸುಬ್ರಹ್ಮಣ್ಯಂ ಇದನ್ನು ಹೇಳಿದ್ದರು. ಅವರು ಭಾಷಣ ಮಾಡುವಾಗ ಆ ಕಾರ್ಯಕ್ರಮ ಯೂಟ್ಯೂಬ್‌ನಲ್ಲಿ ಲೈವ್‌ ಹೋಗುತ್ತಿತ್ತು. ತಕ್ಷಣ ಅದನ್ನು ನಿಲ್ಲಿಸಿ, ವಿಡಿಯೋವನ್ನು ಡಿಲಿಟ್‌ ಮಾಡಲಾಯ್ತು.</p>



<p>14 ನೇ ಹಣಕಾಸು ಆಯೋಗದ ರೆಕಮಂಡೇಷನ್‌ ಅನ್ನು ಮೋದಿ ಸರ್ಕಾರ ತಿರಸ್ಕರಿಸಿತ್ತು. ಯಾವಾಗ ಹಣಕಾಸು ಆಯೋಗ ಮೋದಿಗೆ ಬಗ್ಗಲಿಲ್ಲವೋ, ಎರಡೇ ದಿನಗಳಲ್ಲಿ ಇಡೀ ದೇಶದ ಬಜೆಟ್‌ ಅನ್ನು ಬರೆದರು. ಯಾಕೆಂದರೆ, ಆಯೋಗದ ವರದಿ ಬರುವುದು ತಡವಾಯ್ತು, ಆ ಹೊತ್ತಿಗೆ ಎಲ್ಲಾ ಬಜೆಟ್‌ ಬರೆಯಲಾಗಿದೆ ಅಂತ ಹೇಳಿಕೊಳ್ಳಲು ತುರಾತುರಿಯಲ್ಲಿ ಇದನ್ನು ಮಾಡಿದರು. ನೀತಿ ಆಯೋಗದ ಕಾನ್ಪರೆನ್ಸ್‌ ಹಾಲ್‌ನಲ್ಲಿ ಕೇವಲ ನಾಲ್ಕು ಜನ ಕೂತು ಎರಡೇ ದಿನದಲ್ಲಿ ಬಜೆಟ್‌ ಬರೆದೆವು ಅಂತ ಸುಬ್ಯಹ್ಮಣ್ಯಂ ಹೇಳಿದ್ದಾರೆ.</p>



<p>ಅಂದರೆ, ತಾವು ಅಧಿಕಾರಕ್ಕೆ ಬಂದ 2014 ರಲ್ಲೇ ಸ್ವತಂತ್ರ ಸಂಸ್ಥೆಯಾದ ಹಣಕಾಸು ಆಯೋಗವನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು, ಅದರ ಕತ್ತಿಗೆ ಸಂಕೋಲೆ ಹಾಕಲು ಮೋದಿ ಸರ್ಕಾರ ತಂತ್ರ ಹೂಡಿತ್ತು. ಈಗ ರಾಜ್ಯಗಳಿಗೆ ಎಷ್ಟು ಪಾಲು ಕೊಡಬೇಕು ಎಂಬುದನ್ನು ತನ್ನ ರಾಜಕೀಯ ತಂತ್ರಗಳ ಭಾಗವಾಗಿ ಹಣಕಾಸು ಆಯೋಗಕ್ಕೆ ಮೋದಿ ಸರ್ಕಾರವೇ ಯಾಕೆ ಹೇಳಿರಬಾರದು?</p>



<p>ಈಗ ಕರ್ನಾಟಕ, ಕೇರಳ, ತಮಿಳುನಾಡು ಮೊದಲಾದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಿದೆ. ಇಂದು, ಫೆಬ್ರವರಿ 7 ಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಲ್ಲಿ ಡೆಲ್ಲಿ ಚಲೋ ಮಾಡ್ತಾ ಇದ್ದಾರೆ. ಈ ಪ್ರತಿಭಟನೆಗೆ ತಮಿಳುನಾಡು, ಕೇರಳ, ತೆಲಂಗಾಣ ಕೂಡ ಬೆಂಬಲ ನೀಡಲಿದೆ. ಬಿಜೆಪಿಯ ಅನ್ಯಾಯದ ವಿರುದ್ಧ ದಕ್ಷಿಣದ ರಾಜ್ಯಗಳು ಒಂದಾಗುವ ಲಕ್ಷಣ ಕಾಣಿತ್ತಿದೆ. ಡಿಕೆ ಸುರೇಶ್‌ ಹೇಳಿದಂತೆ ನಮಗೆ ಪ್ರತ್ಯೇಕ ರಾಷ್ಟ್ರ ಬೇಡ. ಕನ್ನಡಿಗರಿಗೆ ಏನು ದಕ್ಕಬೇಕೋ..ಅದನ್ನು ಕೊಡಲಿ..ಅಷ್ಟೇ….</p>



<p><strong>ಲೇಖನ: ಚರಣ್‌ ಐವರ್ನಾಡು</strong></p>
]]></content:encoded>
					
		
		
			</item>
	</channel>
</rss>
