<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>brith anniversary &#8211; Peepal Media</title>
	<atom:link href="https://peepalmedia.com/tag/brith-anniversary/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sat, 20 Aug 2022 13:16:47 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>brith anniversary &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಸಂಪರ್ಕ ಕ್ರಾಂತಿಯ ಹರಿಕಾರ ರಾಜೀವ ಗಾಂಧಿ</title>
		<link>https://peepalmedia.com/samparka-krantiya-harikaara-rajiv-gandhi/</link>
		
		<dc:creator><![CDATA[Udyavara Nagesh Kumar]]></dc:creator>
		<pubDate>Sat, 20 Aug 2022 13:16:42 +0000</pubDate>
				<category><![CDATA[ವಿಶೇಷ]]></category>
		<category><![CDATA[brith anniversary]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[rajiv gandhi]]></category>
		<category><![CDATA[special]]></category>
		<category><![CDATA[special story]]></category>
		<category><![CDATA[writing]]></category>
		<guid isPermaLink="false">https://peepalmedia.com/?p=2407</guid>

					<description><![CDATA[‘ರಾಜಕೀಯದಲ್ಲಿ ಅವರಿಗೆ ಆಸಕ್ತಿ ಇರಲಿಲ್ಲ ಎಂಬುದು ಸ್ಪಷ್ಟವಾಗಿತ್ತು. ಅವರ ಸಹಪಾಠಿಗಳು ಹೇಳುವಂತೆ, ಅವರ ಪುಸ್ತಕದ ಕಪಾಟಿನಲ್ಲಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕುರಿತ ಸಂಪುಟಗಳು ಸಾಲು ಸಾಲಾಗಿದ್ದವು. ತತ್ವಶಾಸ್ತ್ರ, ರಾಜಕೀಯ ಅಥವಾ ಇತಿಹಾಸದ ಪುಸ್ತಕಗಳು ಅಲ್ಲಿರಲಿಲ್ಲ. ಆ ಜಾಗವನ್ನು ಸಂಗೀತದ ಆಸಕ್ತಿ ತುಂಬಿತ್ತು’.ಹೀಗೆಂದು ಮಾಜಿ ಪ್ರಧಾನಿ ರಾಜೀವ ಗಾಂಧಿಯವರನ್ನು ಅವರ ಜನ್ಮದಿನದ ಅಂಗವಾಗಿ ಉದ್ಯಾವರ ನಾಗೇಶ್ ಕುಮಾರ್ ಸ್ಮರಿಸಿದ್ದಾರೆ. ರಾಜೀವ &#160;ಗಾಂಧಿ ಅಂದ ಕೂಡಲೇ ನಮ್ಮ ಕಣ್ಣ ಮುಂದೆ ಬರುವುದು ಈ ದೇಶದ ಐಟಿ ಕ್ಷೇತ್ರ. ತಾನು ಪ್ರಧಾನಿಯಾಗಿ [&#8230;]]]></description>
										<content:encoded><![CDATA[
<blockquote class="wp-block-quote has-medium-font-size is-layout-flow wp-block-quote-is-layout-flow"><p><strong>‘ರಾಜಕೀಯದಲ್ಲಿ ಅವರಿಗೆ ಆಸಕ್ತಿ ಇರಲಿಲ್ಲ ಎಂಬುದು ಸ್ಪಷ್ಟವಾಗಿತ್ತು. ಅವರ ಸಹಪಾಠಿಗಳು ಹೇಳುವಂತೆ, ಅವರ ಪುಸ್ತಕದ ಕಪಾಟಿನಲ್ಲಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕುರಿತ ಸಂಪುಟಗಳು ಸಾಲು ಸಾಲಾಗಿದ್ದವು. ತತ್ವಶಾಸ್ತ್ರ, ರಾಜಕೀಯ ಅಥವಾ ಇತಿಹಾಸದ ಪುಸ್ತಕಗಳು ಅಲ್ಲಿರಲಿಲ್ಲ. ಆ ಜಾಗವನ್ನು ಸಂಗೀತದ ಆಸಕ್ತಿ ತುಂಬಿತ್ತು’.ಹೀಗೆಂದು ಮಾಜಿ ಪ್ರಧಾನಿ ರಾಜೀವ ಗಾಂಧಿಯವರನ್ನು ಅವರ ಜನ್ಮದಿನದ ಅಂಗವಾಗಿ ಉದ್ಯಾವರ ನಾಗೇಶ್ ಕುಮಾರ್ ಸ್ಮರಿಸಿದ್ದಾರೆ.</strong></p></blockquote>



<p class="has-text-align-justify has-medium-font-size">ರಾಜೀವ &nbsp;ಗಾಂಧಿ ಅಂದ ಕೂಡಲೇ ನಮ್ಮ ಕಣ್ಣ ಮುಂದೆ ಬರುವುದು ಈ ದೇಶದ ಐಟಿ ಕ್ಷೇತ್ರ. ತಾನು ಪ್ರಧಾನಿಯಾಗಿ ಈ ದೇಶದ ಹೊಣೆಯನ್ನು ಹೊತ್ತ ಸಂದರ್ಭ. ಅದು ಅತ್ಯಂತ ಅಸಹನೀಯ ಹೊತ್ತು. ಪ್ರಧಾನಿಯಾಗಿದ್ದ ತಾಯಿ ಇಂದಿರಾ ಗಾಂಧಿ ತನ್ನದೇ ಅಂಗರಕ್ಷಕರ ಗುಂಡಿಗೆ ಬಲಿಯಾದ ಹೊತ್ತು ಅನಿವಾರ್ಯವಾಗಿ ಪ್ರಧಾನಿ ಹುದ್ದೆಯನ್ನು ವಹಿಸಿ ಕೊಂಡರು. ಆ ನಂತರ ಅವರು ಕಂಡ ಕನಸು ಮಾತ್ರ ಅದು ದೇಶದ ದಿಕ್ಕನ್ನೇ ಬದಲಾಯಿಸುವಂತದ್ದು. ದೇಶವನ್ನು ಇಪ್ಪತ್ತನೇ ಶತಮಾನಕ್ಕೆ ಒಯ್ಯುವುದಕ್ಕಾಗಿ ಸಜ್ಜು ಮಾಡುವ ಗುರುತರ ಜವಾಬ್ದಾರಿ ಅವರದ್ದಾಗಿತ್ತು.ವಿದೇಶದಲ್ಲಿ ಸೇವೆ ಮಾಡುತ್ತಿದ್ದ ಸ್ಯಾಮ್ ಪಿತ್ರೋಡ ಅನ್ನುವ ತಂತ್ರಜ್ಞನನ್ನು ಭಾರತಕ್ಕೆ ಕರೆಸಿಕೊಂಡು ಸಿ ಡಾಟ್ ತಂತ್ರಜ್ಞಾನದ ಮೂಲಕ&nbsp; ಐಟಿ ಕ್ಷೇತವನ್ನು ಅಭಿವೃದ್ದಿ ಪಡಿಸಲು ಹೆಣಗಿದರು. ಇಂದು ಡಿಜಿಟಲ್ ಇಂಡಿಯಾ ಎಂದು ಬೊಬ್ಬಿಡುವ ಸರಕಾರಗಳು ಇದಕ್ಕೆ ಓ ನಾಮ ಬರೆದವರು ರಾಜೀವ ಗಾಂಧಿ ಎನ್ನುವುದನ್ನು‌ ಹೇಳಲು ಜಾಣ ಮರೆವು ತೋರುತ್ತಾರೆ .</p>



<p class="has-text-align-justify has-medium-font-size"> ಶ್ರೀ ರಾಜೀವ ಗಾಂಧಿಯವರು <mark style="background-color:rgba(0, 0, 0, 0)" class="has-inline-color has-vivid-red-color">40ರ ವಯಸ್ಸಿನಲ್ಲಿ ಭಾರತ ದೇಶದ ಪ್ರಧಾನಿಯಾದರು.</mark> ಅದು ವಿಶ್ವದ ಸರಕಾರಗಳ ಅತ್ಯಂತ ಕಿರಿಯ  ಆಡಳಿತ ಮುಖ್ಯಸ್ಥರು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅಷ್ಟೆ ಅಲ್ಲದೆ ನೆಹರೂ ಕುಟುಂಬದ ಮೂರನೇ ತಲೆ ಮಾರಿನ ಪ್ರಧಾನಿ. ಅಜ್ಜ ಪಂಡಿತ್ ಜವಾಹರ್ ಲಾಲ್ ನೆಹರೂರವರು 58ನೇ ವಯಸಿನಲ್ಲಿ  ಪ್ರಧಾನಿಯಾದರೆ, ತಾಯಿ ಇಂದಿರಾ ಗಾಂಧಿ 48 ವಯಸ್ಸಿನಲ್ಲಿ ಪ್ರಧಾನಿಯಾಗಿದ್ದರು.</p>



<figure class="wp-block-image size-full is-resized"><img fetchpriority="high" decoding="async" src="https://peepalmedia.com/wp-content/uploads/2022/08/rajiv-gandhi-3.webp" alt="" class="wp-image-2412" width="840" height="480" srcset="https://peepalmedia.com/wp-content/uploads/2022/08/rajiv-gandhi-3.webp 700w, https://peepalmedia.com/wp-content/uploads/2022/08/rajiv-gandhi-3-300x171.webp 300w" sizes="(max-width: 840px) 100vw, 840px" /><figcaption><strong> ಶ್ರೀ ರಾಜೀವ ಗಾಂಧಿ</strong></figcaption></figure>



<p class="has-text-align-justify has-medium-font-size">ರಾಷ್ಟ್ರದಲ್ಲಿ ಯುವ ಪೀಳಿಗೆಯ ಐಕಾನ್ ಆಗಿದ್ದ ರಾಜೀವ ಗಾಂಧಿಯವರು ದೇಶದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಜನಾದೇಶವನ್ನು ಪಡೆದರು. ತಾಯಿಯ ಮರಣದ ಸಂದಿಗ್ಧ ಕಾಲದಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ರಾಜೀವ ಗಾಂಧಿ ತಾಯಿಯ ಶೋಕಾಚರಣೆ ಪೂರ್ಣಗೊಂಡ ಕೂಡಲೆ ಹೊಸ ಜನಾದೇಶಕ್ಕಾಗಿ ಲೋಕ ಸಭಾ ಚುನಾವಣೆಗೆ ಆದೇಶ ನೀಡಿದರು. ಅದರ ಫಲವಾಗಿ ಕಾಂಗ್ರೆಸ್ ಪಕ್ಷ 508 ಲೋಕ ಸಭಾ ಸ್ಥಾನಗಳಲ್ಲಿ401 ಸ್ಥಾನವನ್ನು ಪಡೆಯಿತು ಮತ್ತು ಈ ತನಕದ ಚುನಾವಣೆಗಳಿಗಿಂತ  ಕಾಂಗ್ರೆಸ್ ಹೆಚ್ಚಿನ ಪ್ರತಿಶತ ಮತವನ್ನು ಪಡೆಯಿತು.</p>



<p class="has-text-align-justify has-medium-font-size">ಶ್ರೀ&nbsp; ರಾಜೀವ ಗಾಂಧಿಯವರ ಬಗ್ಗೆ ವಿಶೇಷವಾಗಿ&nbsp; ಹೇಳುವುದಾದರೆ, ಸ್ವಾತಂತ್ರ್ಯ ಸಂಗ್ರಾಮ ಮತ್ತು ನಂತರ ಎರಡೂ ಸಮಯದಲ್ಲೂ ನಾಲ್ಕು ದಶಕಗಳು ಭಾರತಕ್ಕೆ ಸೇವೆ ಸಲ್ಲಿಸಿದ ರಾಜಕೀಯ ಕುಟುಂಬಕ್ಕೆ ಸೇರಿದ್ದರೂ ಅವರು ರಾಜಕೀಯಕ್ಕೆ ಸೇರಿದ್ದು ತಡವಾಗಿ ಮತ್ತು ಇಷ್ಟವಿಲ್ಲದೆ.</p>


<div class="wp-block-image">
<figure class="alignleft size-full"><img decoding="async" width="390" height="468" src="https://peepalmedia.com/wp-content/uploads/2022/08/Rajiv_Gandhi.jpg" alt="" class="wp-image-2415" srcset="https://peepalmedia.com/wp-content/uploads/2022/08/Rajiv_Gandhi.jpg 390w, https://peepalmedia.com/wp-content/uploads/2022/08/Rajiv_Gandhi-250x300.jpg 250w" sizes="(max-width: 390px) 100vw, 390px" /><figcaption><strong>ಶ್ರೀ  ರಾಜೀವ ಗಾಂಧಿ</strong></figcaption></figure></div>


<p class="has-text-align-justify has-medium-font-size">ರಾಜೀವ್ ಗಾಂಧಿ ಅವರು ಆಗಸ್ಟ್ 20, 1944ರಲ್ಲಿ ಬಾಂಬೆಯಲ್ಲಿ ಜನಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದಾಗ ಅವರಿಗೆ ಕೇವಲ ಮೂರು ವರ್ಷ ಹಾಗೂ ಆಗ ಅವರ ತಾತ ಪ್ರಧಾನ ಮಂತ್ರಿಯಾಗಿದ್ದರು. ಅವರ ಕುಟುಂಬ ನವ ದೆಹಲಿಯಿಂದ ಲಕ್ನೋಗೆ ಸ್ಥಳಾಂತರಗೊಂಡಿತ್ತು. ಅವರ ತಂದೆ ಫಿರೋಜ್ ಗಾಂಧಿ ಸಂಸತ್ ಸದಸ್ಯರಾಗಿದ್ದರು ಹಾಗೂ ನಿರ್ಭಯ ಮತ್ತು ಪರಿಶ್ರಮದ ಸಂಸದೀಯ ಪಟು ಎಂಬ ಹೆಸರನ್ನೂ ಪಡೆದಿದ್ದರು.</p>



<p class="has-text-align-justify has-medium-font-size">ಶ್ರೀಮತಿ ಇಂದಿರಾ ಗಾಂಧಿ ಅವರು ಪ್ರಧಾನಮಂತ್ರಿಯವರ ಆತಿಥ್ಯಕಾರಿಣಿಯಾಗಿ ಕಾರ್ಯನಿರ್ವಹಿಸುತ್ತಿದ್ದ ತೀನ್ ಮೂರ್ತಿ ಭವನದಲ್ಲಿ ತಮ್ಮ ತಾತನೊಂದಿಗೆ ತಮ್ಮ ಬಾಲ್ಯದ ದಿನಗಳನ್ನು ರಾಜೀವ ಗಾಂಧಿ ಕಳೆದರು. ಡೆಹ್ರಾಡೂನ್ ನಲ್ಲಿ&nbsp; ಕೆಲಕಾಲ&nbsp; ವ್ಯಾಸಂಗ ಮಾಡಿದರು. ನಂತರ ಹಿಮಾಲಯದ ತಪ್ಪಲಿನ ಡೂನ್ ವಸತಿ ಶಾಲೆಯಲ್ಲಿ ಶಿಕ್ಷಣ ಮುಂದುವರೆಸಿದರು. ಅಲ್ಲಿ ಅವರು ತಮ್ಮ ಜೀವನದ ಅನೇಕ ಆಪ್ತಮಿತ್ರರನ್ನು ಸಂಪಾದಿಸಿದರು. ಅವರ ಕಿರಿಯ ಸಹೋದರ ಸಂಜಯ್ ಗಾಂಧಿ ಸಹ ಇದೇ ಶಾಲೆಗೆ ಸೇರಿದರು.</p>



<p class="has-text-align-justify has-medium-font-size">ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ಬಳಿಕ, ಶ್ರೀ ರಾಜೀವ್ ಗಾಂಧಿಯವರು ಕೇಂಬ್ರಿಡ್ಜ್ನ ಟ್ರಿನಿಟಿ ಕಾಲೇಜಿಗೆ ಸೇರಿದರು. ಆದರೆ, ನಂತರ ಅವರು ಲಂಡನ್ನಿನ ಇಂಪೀರಿಯಲ್ ಕಾಲೇಜಿಗೆ ಸ್ಥಳಾಂತರಗೊಂಡರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದರು.</p>



<p class="has-text-align-justify has-medium-font-size">ರಾಜಕೀಯದಲ್ಲಿ ಅವರಿಗೆ ಆಸಕ್ತಿ ಇರಲಿಲ್ಲ ಎಂಬುದು ಸ್ಪಷ್ಟವಾಗಿತ್ತು. ಅವರ ಸಹಪಾಠಿಗಳು ಹೇಳುವಂತೆ, ಅವರ ಪುಸ್ತಕದ ಕಪಾಟಿನಲ್ಲಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕುರಿತ ಸಂಪುಟಗಳು ಸಾಲು ಸಾಲಾಗಿದ್ದವು. ತತ್ವಶಾಸ್ತ್ರ, ರಾಜಕೀಯ ಅಥವಾ ಇತಿಹಾಸ ಪುಸ್ತಕಗಳು ಅಲ್ಲಿರಲಿಲ್ಲ. ಅವರಿಗೆ ಸಂಗೀತದಲ್ಲಿ ತುಂಬಾ ಆಸಕ್ತಿ ಇತ್ತು. ಅವರು ಪಾಶ್ಚಿಮಾತ್ಯ ಮತ್ತು ಹಿಂದೂಸ್ತಾನಿ, ಶಾಸ್ತ್ರೀಯ ಹಾಗೆಯೇ ಆಧುನಿಕ ಸಂಗೀತವನ್ನು ತುಂಬಾ ಇಷ್ಟಪಡುತ್ತಿದ್ದರು. ಛಾಯಾಗ್ರಹಣ ಮತ್ತು ಹವ್ಯಾಸಿ ರೇಡಿಯೊದಲ್ಲಿ ಅವರಿಗೆ ವಿಶೇಷ ಆಸಕ್ತಿ ಇತ್ತು.</p>



<p class="has-text-align-justify has-medium-font-size">ಅವರಿಗೆ ತುಂಬಾ ಖುಷಿ ಕೊಡುತ್ತಿದ್ದ ಸಂಗತಿ ಎಂದರೆ ಫ್ಲೈಯಿಂಗ್. ಇಂಗ್ಲೆಂಡ್ ನಿಂದ &nbsp;ತಾಯ್ನಾಡಿಗೆ ಹಿಂದಿರುಗಿದ ನಂತರ ಅವರು ದೆಹಲಿ ಫ್ಲೈಯಿಂಗ್ ಕ್ಲಬ್ ನ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದರು ಹಾಗೂ ಕಮರ್ಷಿಯಲ್ ಪೈಲೆಟ್ ಲೈಸನ್ಸ್ ಪಡೆದರು. ಬಳಿಕ ಅವರು ಭಾರತದ ದೇಶೀಯ ವಿಮಾನ ಸಂಸ್ಥೆ ಇಂಡಿಯನ್ ಏರ್ ಲೈನ್ಸ್ ನಲ್ಲಿ ಪೈಲೆಟ್ ಆದರು.</p>



<p class="has-text-align-justify has-medium-font-size">ಕೇಂಬ್ರಿಡ್ಜ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವೇಳೆ ಇಂಗ್ಲಿಷ್ ಅಧ್ಯಯನ ಮಾಡುತ್ತಿದ್ದ ಇಟೆಲಿಯ ಸೋನಿಯಾ ಮೈನೋ ಅವರನ್ನು ರಾಜೀವ್ ಭೇಟಿಯಾದರು. ಭೇಟಿ ವಿವಾಹದಲ್ಲಿ ಸುಖಾಂತ್ಯವಾಯಿತು. ಬಳಿಕ ನವ ದೆಹಲಿಯಲ್ಲಿ &nbsp;ಇಂದಿರಾಗಾಂಧಿ ಅವರ ನಿವಾಸದಲ್ಲಿ ನೆಲೆಸಿದ ಆವರಿಗೆ ರಾಹುಲ್ ಮತ್ತು ಪ್ರಿಯಾಂಕ ಎಂಬ ಮಕ್ಕಳಿರುವುದು ಎಲ್ಲರಿಗೂ ತಿಳಿದಿರುವಂತದ್ದೇ ಆಗಿದೆ.</p>



<figure class="wp-block-image size-full"><img decoding="async" width="800" height="533" src="https://peepalmedia.com/wp-content/uploads/2022/08/1583294019.webp" alt="" class="wp-image-2413" srcset="https://peepalmedia.com/wp-content/uploads/2022/08/1583294019.webp 800w, https://peepalmedia.com/wp-content/uploads/2022/08/1583294019-300x200.webp 300w, https://peepalmedia.com/wp-content/uploads/2022/08/1583294019-768x512.webp 768w" sizes="(max-width: 800px) 100vw, 800px" /><figcaption>imege- fpj web desk</figcaption></figure>



<p class="has-text-align-justify has-medium-font-size">1980ರಲ್ಲಿ ಅವರ ಸೋದರ ಸಂಜಯ್ ಗಾಂಧಿ ವಿಮಾನ ಅಪಘಾತದಲ್ಲಿ ದುರಂತ ಸಾವಿಗೀಡಾದ ನಂತರ ಸನ್ನಿವೇಶ ಬದಲಾಯಿತು. ರಾಜಕೀಯ ರಂಗ ಪ್ರವೇಶಿಸಿ ತಾಯಿಯವರಿಗೆ ನೆರವು ನೀಡುವಂತೆ ಶ್ರೀ ಗಾಂಧಿ ಅವರಿಗೆ ಒತ್ತಡಗಳು ಬಂದವು. ನಂತರ ಅನೇಕ ಆಂತರಿಕ ಮತ್ತು ಬಾಹ್ಯ ಸವಾಲುಗಳು ಎದುರಾದವು. ಮೊದಲಿಗೆ ಈ ಒತ್ತಡಗಳಿಗೆ ಅವರು ಪ್ರತಿರೋಧ ವ್ಯಕ್ತಪಡಿಸಿದ್ದರೂ ಬಳಿಕ ಅವರ ಸಿದ್ಧಾಂತಗಳಿಗೆ &nbsp;ತಲೆ ಬಾಗಿದರು. ತಮ್ಮ ಸೋದರನ ಸಾವಿನಿಂದ ತೆರವಾದ ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾದರು.</p>



<p class="has-text-align-justify has-medium-font-size">&nbsp;ನವೆಂಬರ್ 1982ರಲ್ಲಿ ಭಾರತವು ಏಷ್ಯನ್ ಕ್ರೀಡಾಕೂಟದ ಆತಿಥ್ಯ ವಹಿಸಿದಾಗ, ಕೆಲವು ವರ್ಷಗಳ ಹಿಂದೆಯೇ ಕ್ರೀಡಾಂಗಣ ನಿರ್ಮಾಣ ಹಾಗೂ ಇತರೆ ಮೂಲಸೌಕರ್ಯಗಳ ವ್ಯವಸ್ಥೆಗೆ ಕೈಗೊಂಡ ಬದ್ಧತೆಯನ್ನು ಪೂರೈಸಲಾಯಿತು. ಸಕಾಲದಲ್ಲಿ ಎಲ್ಲ ಕಾರ್ಯಗಳನ್ನು ಪೂರ್ಣಗೊಳಿಸುವ ಹೊಣೆಯನ್ನು ರಾಜೀವ್ ಗಾಂಧಿ ಅವರಿಗೆ ವಹಿಸಲಾಯಿತು. ಯಾವುದೇ ಅಡೆತಡೆ ಮತ್ತು ಗೊಂದಲಗಳಿಲ್ಲದೇ ಕ್ರೀಡಾಕೂಟಗಳನ್ನು ನಡೆಸಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಯಿತು. ಈ ಸವಾಲಿನ ಹೊಣೆಯನ್ನು ಯಶಸ್ವಿಯಾಗಿ ನಿಭಾಯಿಸಿದ ಅವರು ತಮ್ಮ ಸಾಮರ್ಥ್ಯ ಮತ್ತು ಸುಗಮ ಸಮನ್ವಯತೆಯನ್ನು ಸಾಬೀತು ಮಾಡಿ ತಮ್ಮ ಮೊದಲ ನಾಯಕತ್ವವನ್ನು ಪ್ರದರ್ಶಿಸಿದರು. ಇದೇ ವೇಳೆ, ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿ ಅವರು ಸಮಾನತೆಯೊಂದಿಗೆ ಪಕ್ಷದ ಸಂಘಟನೆಯನ್ನು ಕ್ರಮ ಬದ್ಧಗೊಳಿಸಿದರು. ಈ ಎಲ್ಲ ನಾಯಕತ್ವ ಗುಣಗಳು ಅವರನ್ನು ಮುಂದಿನ ದಿನಗಳಲ್ಲಿ ದೇಶವನ್ನು ಮುನ್ನೆಡೆಸುವ ಅಧಿಕಾರದ ಚುಕ್ಕಾಣಿ ಹಿಡಿಯಲು ನೆರವಾಯಿತು.</p>



<p class="has-text-align-justify has-medium-font-size">ಶ್ರೀ ರಾಜೀವ್ ಗಾಂಧಿ ಅವರು ಭಾರತದ ಪ್ರಧಾನಮಂತ್ರಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಈ ಎರಡು ಮಹತ್ವದ ಹುದ್ದೆಗಳ ಅಧಿಕಾರ ಪಡೆದಿದ್ದು ದುರಂತದ ಸನ್ನಿವೇಶದಲ್ಲಿ. 31ನೇ ಅಕ್ಟೋಬರ್, 1984ರಲ್ಲಿ ತಮ್ಮ ತಾಯಿಯವರ ಬರ್ಬರ ಹತ್ಯೆ ನಂತರ ಅವರು ವೈಯಕ್ತಿಕ ದು:ಖ ಮತ್ತು ರಾಷ್ಟ್ರದ ಹೊಣೆಯನ್ನು ಸಮತೋಲನ, ಘನತೆ ಮತ್ತು ಸಂಯಮದಿಂದ ನಿಭಾಯಿಸಿದರು.</p>



<p class="has-text-align-justify has-medium-font-size">ಸುದೀರ್ಘ ಚುನಾವಣಾ ಪ್ರಚಾರದ ವೇಳೆ, ಶ್ರೀ ಗಾಂಧಿ ಅವರು ದೇಶದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ದಣಿವಿಲ್ಲದೇ ಪ್ರವಾಸ ಮಾಡಿದರು. ಅವರು ಭೂಮಿ ಸುತ್ತಳತೆಯ ಒಂದೂವರೆ ಪಟ್ಟುವಿಗೆ ಸಮನಾದ ಅಂತರವನ್ನು ವ್ಯಾಪಿಸಿ ಬಹುತೇಕ ಸ್ಥಳಗಳಲ್ಲಿ 250ಕ್ಕೂ ಸಭೆಗಳನ್ನು ಉದ್ದೇಶಿಸಿ ಮಾತನಾಡಿ, ಲಕ್ಷಾಂತರ ಮಂದಿಯನ್ನು ಭೇಟಿ ಮಾಡಿದರು.</p>



<figure class="wp-block-image size-full"><img loading="lazy" decoding="async" width="760" height="443" src="https://peepalmedia.com/wp-content/uploads/2022/08/rajiv-russia.jpg" alt="" class="wp-image-2414" srcset="https://peepalmedia.com/wp-content/uploads/2022/08/rajiv-russia.jpg 760w, https://peepalmedia.com/wp-content/uploads/2022/08/rajiv-russia-300x175.jpg 300w" sizes="auto, (max-width: 760px) 100vw, 760px" /><figcaption>imege- the week desk</figcaption></figure>



<p class="has-text-align-justify has-medium-font-size">ಪ್ರಧಾನಿಯಾಗಿದ್ದಾಗ ದೇಶದಲ್ಲಿ ಐಟಿ ಉದ್ಯಮ, ದೂರ ಸಂಪರ್ಕ  ಕ್ರಾಂತಿ ಮಾಡಿದ ಖ್ಯಾತಿ ರಾಜೀವ ಗಾಂಧಿ ಅವರಿಗೆ ಸಲ್ಲುತ್ತದೆ. ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿ ಕೈಗೊಂಡ ಯೋಜನೆಗಳು ಇಂದಿಗೂ ಪ್ರಸ್ತುತ. ರಾಜೀವ ಗಾಂಧಿಯವರು ಈ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಅವರನ್ನು ಭಾರತದ ಫಾದರ್‌ ಆಫ್‌ ಐಟಿ ಮತ್ತು ಟೆಲಿಕಮ್ಯುನಿಕೇಷನ್‌ ಕ್ರಾಂತಿ ಹರಿಕಾರ ಎಂದು ಗುರುತಿಸುವುದು ಅವರ ದೂರದರ್ಶಿತ್ವಕ್ಕೆ ಸಲ್ಲುವ ಗೌರವ ಎಂದೇ ಭಾವಿಸಬೇಕು.</p>



<p class="has-text-align-justify has-medium-font-size">ರಾಜೀವ್ ದೇಶದಲ್ಲಿ ಪಂಚಾಯತ್‌ ರಾಜ್‌ ವ್ಯವಸ್ಥೆ ಬಲವರ್ಧನೆ, ನವೋದಯ ಶಾಲೆಗಳ ನಿರ್ಮಾಣ, ಕಂಪ್ಯೂಟರೀಕರಣ, ಟೆಲಿಕಮ್ಯೂನಿಕೇಷನ್‌ ನಲ್ಲಿ ಕ್ರಾಂತಿ ಮಾಡಿದ್ದರು. ಯುವ ಜನತೆಯ ಮೇಲೆ ಅಪಾರವಾದ ನಂಬಿಕೆ ಇಟ್ಟ ರಾಜೀವ್ ಗಾಂಧಿಯವರು ಯುವ ಜನತೆ ರಾಜಕೀಯ ತೀರ್ಮಾನವನ್ನು ಕೈಗೊಳ್ಳಬೇಕು ಅನ್ನುವ ಅವರ ನಂಬಿಕೆಯಂತೆ‌ ಆ ತನಕ&nbsp; ಇದ್ದ ಮತದಾನದ ಹಕ್ಕನ್ನು 21 ವರ್ಷದಿಂದ 18 ಕ್ಕೆ ಇಳಿಸಿದರು. ಈ ಹೊತ್ತು ನಿಂತು ಆಲೋಚಿಸುತ್ತಿರುವಾಗ ಅವರ ಈ ತೀರ್ಮಾನ ಮತ್ತು ಐಟಿ ಕ್ರಾಂತಿಯೇ ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಕಾರಣವಾಯಿತೋ‌ ಎಂಬ ಸಂಶಯ ಕಾಡುತ್ತಿದೆ.&nbsp;</p>



<p class="has-text-align-justify has-medium-font-size">ರಾಜೀವ ಗಾಂಧಿಯವರ ಪ್ರಧಾನ ಮಂತ್ರಿ ಅಧಿಕಾರಾವಧಿಯು (1984-1989) ಭಾರತವನ್ನು ಸಶಕ್ತವಾಗಿ ಕಟ್ಟುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಅಸ್ಸಾಂ, ತ್ರಿಪುರಾ, ತಮಿಳುನಾಡಿನ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಅವರು ಏಕಾಂಗಿಯಾಗಿ ಪರಿಹರಿಸಿದ್ದರು. ರಾಜೀವ್ ಗಾಂಧಿ ಆಳ್ವಿಕೆಯ ಲಕ್ಷಣಗಳೆಂದರೆ ಅಭಿವೃದ್ಧಿ, ಏಕತೆ, ಶಾಂತಿ ಮತ್ತು ಕೋಮು ಸೌಹಾರ್ದತೆ. ಅವರು ರಾಜಕೀಯದಲ್ಲಿ ನೈತಿಕ ಮೌಲ್ಯಗಳಿಗೆ ಹೆಚ್ಚು ಬೆಲೆ ಕೊಡುತ್ತಿದ್ದರು. ಶ್ರೀ ಲಂಕಾ ತಮಿಳರ ಸಮಸ್ಯೆಯ ಬಗ್ಗೆ ಅವರು ತೆಗೆದು ಕೊಂಡ ನಿಲುವಿನಿಂದಾಗಿ ಎಲ್ಟಿಟಿಇ ಅವರ ಮೇಲೆ ದ್ಷೇಷ ಕಾರಲು ಪ್ರಾರಂಭಿಸಿತು  ಅದರ ಫಲಶ್ರುತಿಯೇ  1991 ಲೋಕ ಸಭಾ ಚುನಾವಣಾ ಪ್ರಚಾರ ಕಾರ್ಯದಲ್ಲಿ‌ ತಮಿಳುನಾಡಿನ  ಶ್ರೀ ಪೆರಂಬುದೂರಿನಲ್ಲಿ ಮೇ 21ರಂದು  ಭಾಗವಹಿಸುತ್ತಿರುವಾಗ <mark style="background-color:rgba(0, 0, 0, 0)" class="has-inline-color has-vivid-red-color">ಮಾನವ ಬಾಂಬಿಗೆ ಬಲಿಯಾದರು</mark>. ಅಲ್ಲಿಗೆ ಭಾರತವನ್ನು  ಇಪ್ಪತ್ತನೇ ಶತಮಾನಕ್ಕೆ ಕೊಂಡೊಯ್ಯವ ಕನಸೊಂದು ಕಮರಿತು.</p>



<p class="has-text-align-right"><strong>(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)</strong></p>



<figure class="wp-block-image size-full is-resized"><img loading="lazy" decoding="async" src="https://peepalmedia.com/wp-content/uploads/2022/08/udyavara-nagesh-kumar.jpg" alt="" class="wp-image-2416" width="197" height="197" srcset="https://peepalmedia.com/wp-content/uploads/2022/08/udyavara-nagesh-kumar.jpg 399w, https://peepalmedia.com/wp-content/uploads/2022/08/udyavara-nagesh-kumar-300x300.jpg 300w, https://peepalmedia.com/wp-content/uploads/2022/08/udyavara-nagesh-kumar-150x150.jpg 150w" sizes="auto, (max-width: 197px) 100vw, 197px" /></figure>



<p class="has-medium-font-size"><strong>ಉದ್ಯಾವರ ನಾಗೇಶ ಕುಮಾರ್</strong><br>ರಂಗ ಕರ್ಮಿ</p>
]]></content:encoded>
					
		
		
			</item>
		<item>
		<title>‘ದೇವರಾಜ ಅರಸು’ ಎಂಬ  ತಬ್ಬಲಿ ಜಾತಿಗಳ ತಂದೆ</title>
		<link>https://peepalmedia.com/devaraj-arasu-emba-tabbali-jaatigala-tande/</link>
		
		<dc:creator><![CDATA[Ravi Kumar N]]></dc:creator>
		<pubDate>Sat, 20 Aug 2022 11:22:22 +0000</pubDate>
				<category><![CDATA[ವಿಶೇಷ]]></category>
		<category><![CDATA[brith anniversary]]></category>
		<category><![CDATA[D. Devaraj Urs]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[special]]></category>
		<category><![CDATA[special story]]></category>
		<category><![CDATA[writing]]></category>
		<guid isPermaLink="false">https://peepalmedia.com/?p=2386</guid>

					<description><![CDATA[ದೇವರಾಜ ಅರಸು ಅವರ 107ನೆಯ ಜನ್ಮದಿನದ &#160;ಈ ಸಂದರ್ಭದಲ್ಲಿ ಅರಸು ಅವರು ಕಟ್ಟಿಕೊಟ್ಟ ಬಹುಜನ ರಾಜಕಾರಣವನ್ನು , ಸೌಹಾರ್ದ ಕರ್ನಾಟಕವನ್ನು ಉಳಿಸಿಕೊಳ್ಳುವ , ಮುನ್ನಡೆಸುವ ದೊಡ್ಡ&#160; ಸವಾಲು ಮತ್ತು ಹೊಣೆಗಾರಿಕೆ ಈ ನಾಡಿನ&#160; ದಲಿತ, ದಮನಿತ&#160; ಮತೀಯ ಅಲ್ಪಸಂಖ್ಯಾತ &#160;ಸಮುದಾಯಗಳ ಮುಂದಿದೆ. ಅದನ್ನು ಸಾಕಾರಗೊಳಿಸಿದ್ದೇ &#160;ಅದರೆ ಅದುವೇ ದೇವರಾಜ ಅರಸು ಎಂಬ ತಬ್ಬಲಿ ಜಾತಿಗಳ ತಂದೆಗೆ ಸಲ್ಲಿಸಬಹುದಾದ ನಿಜ&#160; ಗೌರವ ಎನ್ನುತ್ತಾ ತಮ್ಮ ಭಾವಲೋಕಕ್ಕೆ ದಕ್ಕಿದ&#160;&#160; ಅರಸು ಅವರ ರಾಜಕೀಯ ಬದುಕಿನ ಈಜುಗಾರಿಕೆಯನ್ನು ಸೊಗಸಾಗಿ &#160;ಕಟ್ಟಿಕೊಟ್ಟಿದ್ದಾರೆ ಎನ್ [&#8230;]]]></description>
										<content:encoded><![CDATA[
<blockquote class="wp-block-quote has-medium-font-size is-layout-flow wp-block-quote-is-layout-flow"><p><strong>ದೇವರಾಜ ಅರಸು ಅವರ 107ನೆಯ ಜನ್ಮದಿನದ &nbsp;ಈ ಸಂದರ್ಭದಲ್ಲಿ ಅರಸು ಅವರು ಕಟ್ಟಿಕೊಟ್ಟ ಬಹುಜನ ರಾಜಕಾರಣವನ್ನು , ಸೌಹಾರ್ದ ಕರ್ನಾಟಕವನ್ನು ಉಳಿಸಿಕೊಳ್ಳುವ , ಮುನ್ನಡೆಸುವ ದೊಡ್ಡ&nbsp; ಸವಾಲು ಮತ್ತು ಹೊಣೆಗಾರಿಕೆ ಈ ನಾಡಿನ&nbsp; ದಲಿತ, ದಮನಿತ&nbsp; ಮತೀಯ ಅಲ್ಪಸಂಖ್ಯಾತ &nbsp;ಸಮುದಾಯಗಳ ಮುಂದಿದೆ. ಅದನ್ನು ಸಾಕಾರಗೊಳಿಸಿದ್ದೇ &nbsp;ಅದರೆ ಅದುವೇ ದೇವರಾಜ ಅರಸು ಎಂಬ ತಬ್ಬಲಿ ಜಾತಿಗಳ ತಂದೆಗೆ ಸಲ್ಲಿಸಬಹುದಾದ ನಿಜ&nbsp; ಗೌರವ ಎನ್ನುತ್ತಾ ತಮ್ಮ ಭಾವಲೋಕಕ್ಕೆ ದಕ್ಕಿದ&nbsp;&nbsp; ಅರಸು ಅವರ ರಾಜಕೀಯ ಬದುಕಿನ ಈಜುಗಾರಿಕೆಯನ್ನು ಸೊಗಸಾಗಿ &nbsp;ಕಟ್ಟಿಕೊಟ್ಟಿದ್ದಾರೆ ಎನ್ ರವಿಕುಮಾರ್. </strong></p></blockquote>



<p class="has-text-align-justify has-medium-font-size">ಬಲಾಢ್ಯ ಜಾತಿಗಳ ವಿಕೃತ ಹರಿವಿನ ಉಸುಕಿನಲ್ಲಿ ಹುದುಗಿ ಹೋದ ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಬಗೆದು&nbsp; ಈ ನಾಡಿನ ಬಹುಸಂಖ್ಯಾತ ದುರ್ಬಲ ಜಾತಿಗಳ ನ್ಯಾಯದ ಹಕ್ಕು ಮತ್ತು ಅನ್ನವನ್ನಾಗಿ ಮಾಡಿದವರು ದೇವರಾಜ ಅರಸು. ಅರಸು ಬಲಾಢ್ಯ ಜಾತಿಗಳ ಜಾತಿಕೋರರ ಕಣ್ಣಿಗೆ ಕೆಂಡದುಂಡೆಯಂತೆ ಕಂಡರೆ, ಇದೇ ಅರಸು ಅನಾಥ ಜಾತಿಗಳ ಪಾಲಿಗೆ ಅಂತಃಕರಣ ತುಂಬಿದ ತಂದೆಯಂತೆ ಸದಾ ಕಾಣುತ್ತಾರೆ. ಇಂತಹ&nbsp; ತಂದೆಯ ಕುರಿತು ಮಾತಾಡುವುದು ಎಂದರೆ ಈ ನಾಡಿನ ತಬ್ಬಲಿ ಜಾತಿಗಳ ಹಸಿವು, ಅವಮಾನ, ರಾಜಕಾರಣ, ಸಾಮಾಜಿಕ ಸಂಘರ್ಷಗಳ ಬದುಕಿನ ಕುರಿತು ಮಾತಾಡಿದಂತೆಯೇ.</p>



<p class="has-text-align-justify has-medium-font-size">1915 ಆಗಸ್ಟ್ 20 ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಕಲ್ಲಳ್ಳಿಯಲ್ಲಿ ಜನಿಸಿದ ದೇವರಾಜ ಅರಸು(ತಂದೆ ದೇವರಾಜ ಅರಸು, ತಾಯಿ ದೇವಿರಮ್ಮಣ್ಣಿ) ಅಂತಹ ಸ್ಥಿತಿವಂತರಲ್ಲದ ಅಪ್ಪಟ ರೈತಾಪಿ ಕುಟುಂಬದವರು. 1941 ರಿಂದ ಆರಂಭಗೊಂಡ ಅರಸು ಅವರ ರಾಜಕೀಯ ಹೋರಾಟದ ಬದುಕು ನಿರಂತರ ಸಂಘರ್ಷಗಳಿಂದಲೇ 1982 ರಂದು ಅಕಾಲಿಕವಾಗಿ ಕೊನೆಗೊಂಡಿತು (1942 ಜೂನ್ 6). ಎಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಈ ನಾಡನ್ನು ಆಳಿದ ಅರಸು ಅವರು ಕರ್ನಾಟಕ ರಾಜಕೀಯ ಚರಿತ್ರೆ ಮತ್ತು ವರ್ತಮಾನ ಎಂದೆಂದಿಗೂ ಕೃತಜ್ಞತೆಯಿಂದ ನೆನಪಿಸಿಕೊಳ್ಳುವ, ಮಾದರಿ ಆದರ್ಶ&nbsp; ರಾಜಕಾರಣ ಅಳವಡಿಸಿಕೊಳ್ಳಬಹುದಾದ &nbsp;ಹತ್ತಾರು ಜನಕಲ್ಯಾಣ ಯೋಜನೆಗಳನ್ನು ಬಿಟ್ಟು ಹೋಗಿದ್ದಾರೆ. ಸಮಸಮಾಜದ ದಾರಿಯನ್ನು&nbsp; ಹಾಕಿಕೊಟ್ಟಿದ್ದಾರೆ.</p>



<figure class="wp-block-image size-large"><img loading="lazy" decoding="async" width="1024" height="838" src="https://peepalmedia.com/wp-content/uploads/2022/08/WhatsApp-Image-2022-08-19-at-5.52.18-PM-1024x838.jpeg" alt="" class="wp-image-2360" srcset="https://peepalmedia.com/wp-content/uploads/2022/08/WhatsApp-Image-2022-08-19-at-5.52.18-PM-1024x838.jpeg 1024w, https://peepalmedia.com/wp-content/uploads/2022/08/WhatsApp-Image-2022-08-19-at-5.52.18-PM-300x246.jpeg 300w, https://peepalmedia.com/wp-content/uploads/2022/08/WhatsApp-Image-2022-08-19-at-5.52.18-PM-768x629.jpeg 768w, https://peepalmedia.com/wp-content/uploads/2022/08/WhatsApp-Image-2022-08-19-at-5.52.18-PM.jpeg 1280w" sizes="auto, (max-width: 1024px) 100vw, 1024px" /></figure>



<p class="has-text-align-justify has-medium-font-size">ಕರ್ನಾಟಕದ ರಾಜಕಾರಣ ಬಲಾಢ್ಯ ಜಾತಿಗಳ ಹಿಡಿತದಲ್ಲಿ ವಿಜೃಂಭಿಸುತ್ತಿದ್ದ ಕಾಲಘಟ್ಟದಲ್ಲಿ ಸಾಮಾನ್ಯ ರೈತ ಕುಟುಂಬದಿಂದ ಬಂದ ಸಣ್ಣ ಜಾತಿಯೊಂದರ ದೇವರಾಜ ಅರಸು ಅವರು ಈ ರಾಜ್ಯದ ರಾಜಕಾರಣದ ಮುಂಚೂಣಿ ನಾಯಕನಾಗಿ ಬೆಳೆದು ನಿಂತದ್ದು ಅಷ್ಟು ಸುಲಭದ ಮಾತಲ್ಲ. ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತ ಆ ದಿನಗಳು ನಾಡಿನ ಅನಾಥ ಜನಜಾತಿಗಳ ಪಾಲಿಗೆ ಸುವರ್ಣ ಯುಗವೇ ಆಗಿತ್ತು. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಸೂತ್ರವನ್ನು ಅತ್ಯಂತ ಕರಾರುವಕ್ಕಾಗಿ ಅನುಷ್ಠಾನಗೊಳಿಸುವಲ್ಲಿ ಅರಸು ತೋರಿದ ದಾರ್ಷ್ಟ್ಯತೆ ಗೆ ಸರಿಸಾಟಿ ಇಲ್ಲ. ಈ ಸಮಾಜ ಜಾತಿ, ಧರ್ಮದ ಕೇಡಿನಲ್ಲಿ&nbsp; ತನ್ನಂತೆ ಇರುವ ಜನಸಮುದಾಯವೊಂದರಲ್ಲಿ ಮಲಹೊರುವಂತಹ ಅಸಹ್ಯ ನರಕವನ್ನು ಸೃಷ್ಟಿಸಿತ್ತು. ಅರಸು&nbsp; 1977 ರಲ್ಲಿ “ಮಲಹೊರುವ ಪದ್ಧತಿ ನಿಷೇಧ ಶಾಸನ” ತರುವ ಮೂಲಕ ದಲಿತರ ಬದುಕನ್ನು&nbsp; ಜಾತಿ ನಿರ್ಮಿತ ಕ್ರೌರ್ಯದಿಂದ ಬಿಡುಗಡೆಗೊಳಿಸಿ&nbsp; ಮಹಾ ವಿಮೋಚಕನಂತೆ ಕಂಡರು.</p>



<p class="has-text-align-justify has-medium-font-size">ಬಸವಲಿಂಗಪ್ಪ ಎಂಬ ಇನ್ನೋರ್ವ ಜನನಾಯಕ ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಮೂಲಕ ಅರಸು ಅವರ ಬೆನ್ನಿಗೆ ನಿಂತಿದ್ದರು. 1972 ರಿಂದ 1977 ರವರೆಗಿನ ಕರ್ನಾಟಕ ಕಂಡ ಅರಸು ಯುಗ ಸಾಮಾಜಿಕ ಪರಿವರ್ತನೆ ಯುಗವಾಗಿ ಜನದನಿ ಮೊಳಗಿಸಿತ್ತು. ಹಿಂದುಳಿದ ವರ್ಗಗಳಿಗೆ ಉದ್ಯೋಗ, ಶೈಕ್ಷಣಿಕ ಮೀಸಲಾತಿಗೆ ಹಾವನೂರು ಆಯೋಗ ರಚಿಸುವ ಮೂಲಕ ಹಿಂದುಳಿದ ಜಾತಿಗಳಲ್ಲಿ ಹಕ್ಕಿನ ಎಚ್ಚರವನ್ನು ಬಿತ್ತಿದವರು ಅರಸು. ‘ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಯೋಜನೆ’, ‘ಜೀತಪದ್ಧತಿ ನಿಷೇಧ ಕಾಯ್ದೆ’, ಶ್ರೀಮಂತರ ಸಾಲದ ಶೂಲದಲ್ಲಿ ಸಿಲುಕಿ ನರಳುತ್ತಿದ್ದ ಬಡವರ ಸಾಲ ಮನ್ನಕ್ಕಾಗಿ ‘ಋಣ ಪರಿಹಾರ ಕಾಯ್ದೆ’, ‘ಕನಿಷ್ಟ ಕೂಲಿ ನಿಗದಿ ಕಾಯ್ದೆ’, ‘ ಭಾಗ್ಯಜ್ಯೋತಿ ಯೋಜನೆ’, ಇಂದಿರಾ ಗಾಂಧಿ ಅವರ ಮಹತ್ವಾಕಾಂಕ್ಷೆಯ 20 ಅಂಶಗಳ ಕಾರ್ಯಕ್ರಮಗಳನ್ನು ಬದ್ಧತೆಯಿಂದ ಅನುಷ್ಠಾನ , ‘ಆಹಾರ ದಂಗೆ’ ಯನ್ನು ಹತ್ತಿಕ್ಕಿದ್ದಲ್ಲದೆ ಅದಕ್ಕೆ ಕಾರಣವಾದ ನಿರುದ್ಯೋಗ ಸಮಸ್ಯೆಯ ನಿವಾರಣೆಗೆ &nbsp;‘ಸ್ಟೈಫಂಡ್ ಯೋಜನೆ’ ಹೀಗೆ.. ಒಂದು ನಾಡಿನ ಬಹುಜನರ ಏಳಿಗೆಗಾಗಿ ಹತ್ತಾರು ಯೋಜನೆಗಳನ್ನು ತಪಸ್ಸಿನಂತೆ ಜಾರಿಗೊಳಿಸಿದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ.</p>



<p class="has-text-align-justify has-medium-font-size">ಜನರಿಗೆ ಶಿಕ್ಷಣ ಮತ್ತು ಭೂಮಿಯ ಹಕ್ಕನ್ನು ಕೊಟ್ಟಾಗ ಮಾತ್ರ ಅವರ ಮತ್ತು ಈ ನಾಡಿನ ಅಭ್ಯುದಯ ಮತ್ತು ಸಾಮಾಜಿಕ ಅಸಮಾನತೆ ನಿವಾರಣೆ ಸಾಧ್ಯ ಎಂಬ ಸತ್ಯವನ್ನು ಮನಗಂಡ ಅರಸು ಅವರು ತಂದ ಕ್ರಾಂತಿಕಾರಿ ಕಾಯ್ದೆಯೆಂದರೆ ಅದು ‘ಭೂ ಸುಧಾರಣ ಕಾಯ್ದೆ’ (1974). ಇದುವರೆಗೂ ಇದ್ದ ಮೇಲ್ಜಾತಿ ಮತ್ತು ಕೆಳಜಾತಿಗಳ ನಡುವಿನ ಸಾಮಾಜಿಕ ಸಂಘರ್ಷವನ್ನು ಆರ್ಥಿಕ ಸಂಘರ್ಷಕ್ಕೆ ತಂದು ನಿಲ್ಲಿಸಿದರು ಅರಸು. ಇದು ಭೂಮಾಲೀಕರೇ ಆಗಿದ್ದ ಬಲಾಢ್ಯ ಜಾತಿಗಳನ್ನು ಕೆರಳಿಸಿದರೂ ಅದಾವುದಕ್ಕೂ ಸೊಪ್ಪು ಹಾಕದೆ ನಿರ್ಗತಿಕ ಜಾತಿಗಳಲ್ಲಿ ಆರ್ಥಿಕ ಮತ್ತು ರಾಜಕೀಯ ಬಲವನ್ನು ತುಂಬುವ ಕೆಲಸವನ್ನು ತಪಸ್ಸಿನಂತೆ, ರಾಜಧರ್ಮದಂತೆ ಪರಿಪಾಲಿಸುತ್ತಾ ನಡೆದರು.</p>


<div class="wp-block-image">
<figure class="alignleft size-full is-resized"><img loading="lazy" decoding="async" src="https://peepalmedia.com/wp-content/uploads/2022/08/WhatsApp-Image-2022-08-20-at-4.22.03-PM-1.jpeg" alt="" class="wp-image-2395" width="355" height="266" srcset="https://peepalmedia.com/wp-content/uploads/2022/08/WhatsApp-Image-2022-08-20-at-4.22.03-PM-1.jpeg 640w, https://peepalmedia.com/wp-content/uploads/2022/08/WhatsApp-Image-2022-08-20-at-4.22.03-PM-1-300x225.jpeg 300w" sizes="auto, (max-width: 355px) 100vw, 355px" /><figcaption><strong>ದೇವರಾಜ ಅರಸು</strong></figcaption></figure></div>


<p class="has-text-align-justify has-medium-font-size">ಜಾತಿ ಶ್ರೇಷ್ಠತೆಯ ಮಲವನ್ನೇ ಮೆದುಳಲ್ಲಿ ತುಂಬಿಕೊಂಡ ಪತ್ರಕರ್ತರಿಗೆ ಎಂದಿಗೂ ಅರಸು ಓರ್ವ ಜನನಾಯಕ, ಪರಿವರ್ತನೆಯ ಹರಿಕಾರ, ಅಸಂಖ್ಯಾತ ದುರ್ಬಲ ಜಾತಿಗಳನ್ನು ಪರಂಪರಾಗತ ದುಃಖ ಮತ್ತು ದೌರ್ಜನ್ಯ-ಅವಮಾನಗಳಿಂದ ಬಿಡುಗಡೆ ಗೊಳಿಸಿದ ವಿಮೋಚಕ ಎಂದು ಅನ್ನಿಸಲೇ ಇಲ್ಲ. ಬದಲಾಗಿ ಅವರನ್ನು ಭ್ರಷ್ಟ, ದುರಹಂಕಾರಿ ಎಂದು ಬಿಂಬಿಸಿದವು. ಅವತ್ತಿನ ಪತ್ರಿಕಾ ಕ್ಷೇತ್ರದಲ್ಲಿ ಮೇಲ್ಜಾತಿಗಳವರೆ ಪತ್ರಕರ್ತರಾಗಿ ಇದ್ದಿದ್ದರಿಂದ ಅರಸು ಅವರ ಜನಕಲ್ಯಾಣ ಕೆಲಸಗಳನ್ನು ಜನರಿಗೆ ತಲುಪಿಸುವಲ್ಲಿ ಮಾಧ್ಯಮಗಳೇ ಇಲ್ಲವಾಗಿ ಹೋಗಿ ಬಿಟ್ಟವು. (ಹಾಗಂತ ಅವರು ಪತ್ರಿಕೆಗಳ ವಿರುದ್ದ ಸೇಡಿಗೆ ಇಳಿಯಲಿಲ್ಲ. ಬ್ರಾಹ್ಮಣರೇ ತುಂಬಿದ್ದ ‘ಸಂಯುಕ್ತ ಕರ್ನಾಟಕ’ ಪತ್ರಿಕೆಯನ್ನು ಉಳಿಸಿದ್ದು ಅವರ ಉದಾತ್ತತೆಗೆ ನಿದರ್ಶನ) ಅರಸು ಅವರ ತೇಜೋವಧೆಯ ಹನನ ನಡೆಯಿತು.</p>



<p class="has-text-align-justify has-medium-font-size">ಬಲಾಢ್ಯ ಜಾತಿಗಳ ಸೊಕ್ಕು ಮುರಿದು ದುರ್ಬಲ ಮತ್ತು ಮತೀಯ ಅಲ್ಪಸಂಖ್ಯಾತ ಜಾತಿಗಳ ಬೆನ್ನುಮೂಳೆ&nbsp; ಬಲಪಡಿಸಿದ ಅರಸು 1972 ರ ವಿಧಾನಸಭಾ ಚುನಾವಣೆಯಲ್ಲಿ ದನಿಸತ್ತ ದುರ್ಬಲ ಜಾತಿಗಳಿಗೆ ಮಣೆ ಹಾಕಿ ಹೊಸ ರಾಜಕೀಯ ಕ್ರಾಂತಿಯನ್ನೆ ಮಾಡಿದರು. ಅದುವರೆಗೂ ಕಾಂಗ್ರೆಸ್ 223 ವಿಧಾನಸಭಾ ಕ್ಷೇತ್ರಗಳಲ್ಲಿ, 150 ಕ್ಷೇತ್ರಗಳಲ್ಲಿ&nbsp; ಲಿಂಗಾಯಿತರು, ಒಕ್ಕಲಿಗರು, ಬ್ರಾಹ್ಮಣರಿಗೆ ಟಿಕೆಟ್ ನೀಡುತ್ತಿದ್ದರೆ, ಉಳಿದ 73 ಸ್ಥಾನಗಳನ್ನು ದಲಿತರು, ಶೂದ್ರರು, ಅಲ್ಪಸಂಖ್ಯಾತರಿಗೆ ಹಂಚಿ ತಮ್ಮ ಉದಾರತೆಯನ್ನು ತೋರುತ್ತಿತ್ತು. 1972 ರಲ್ಲಿ ಇಂತಹ ಕಣ್ಕಟ್ಟು ‘ಉದಾರತೆ’ಯನ್ನು ಧಿಕ್ಕರಿಸಿದ ಅರಸು ಅವರು 223 ಕ್ಷೇತ್ರಗಳ ಪೈಕಿ 133 ಕ್ಷೇತ್ರಗಳಲ್ಲಿ&nbsp; ದಲಿತರು, ಹಿಂದುಳಿದ ವರ್ಗಗಳು, ಮತೀಯ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿ ಸಾಮಾಜಿಕ ನ್ಯಾಯದ ದಿಟ್ಟತನವನ್ನು ತೋರಿದರು. 163 ಕ್ಷೇತ್ರಗಳಲ್ಲಿ ಜಯ ಸಾಧಿಸಿದ ಕಾಂಗ್ರೆಸ್ ನಲ್ಲಿ&nbsp; 92 ಜನ ದುರ್ಬಲ ಜಾತಿಗಳ ಅಪ್ರತಿಷ್ಠರನ್ನು ನೆಲೆಗೊಳಿಸುವ ಮೂಲಕ ಅಹಿಂದ ರಾಜಕಾರಣಕ್ಕೆ ಭಾಷ್ಯವನ್ನೆ ಬರೆದರು!</p>



<p class="has-text-align-justify has-medium-font-size">ಸಂಘಟಿತ ಜಾತಿಗಳ ಮತ ಬ್ಯಾಂಕುಗಳ ಮುಂದೆ ತಮಗೆ ‘ಅದೃಶ್ಯ ಮತದಾರರೇ’ ಅಗಿದ್ದ ಅಸಂಘಟಿತ ತಬ್ಬಲಿ ಜಾತಿಗಳಲ್ಲಿ ಆತ್ಮವಿಶ್ವಾಸವನ್ನು ಬಿತ್ತಿ ಅದರ ಬಲದಿಂದಲೇ ಪರ‍್ಯಾಯ ರಾಜಕಾರಣವನ್ನು ಕಟ್ಟಿದರು.&nbsp; ರಾಜಕೀಯ ಗೆಲುವು ಸಾಧಿಸುತ್ತಾ ಬಂದ ಅರಸು ಚಿಕ್ಕಮಗಳೂರಿನಲ್ಲಿ ಚುನಾವಣೆಗೆ ನಿಲ್ಲಿಸಿ ಇಂದಿರಾಗಾಂಧಿ ಎಂಬ ದೈತ್ಯ ನಾಯಕಿಗೆ ರಾಜಕೀಯ ಮರುಹುಟ್ಟು ಕೊಡುವ ಮೂಲಕ ಭಾರತದ ರಾಜಕಾರಣದಲ್ಲಿ ತನಗಿದ್ದ ಜನಶಕ್ತಿಯನ್ನು ಸಾಬೀತು ಪಡಿಸಿದರು.&nbsp; ಇಂದಿರಾಗಾಂಧಿ ಅವರ ವಿರೋಚಿತ ಗೆಲುವಿನ ಹಿಂದಿದ್ದ ಅರಸು ಅವರ ಖ್ಯಾತಿ ಇಮ್ಮಡಿಸಿತು. ಆದರೆ ಸಂಚುಗಳನ್ನು ಅರಿಯದ ಮುಗ್ಧ ಅರಸು ಅವರು ಇಂದಿರಾಗಾಂಧಿ ಕೂಟದ ಸಂಚಿಗೆ ಬಲಿಯಾಗಿ ಪಕ್ಷದಿಂದಲೇ ಹೊರಬಿದ್ದರು.</p>



<div class="wp-block-cover is-light" style="min-height:173px;aspect-ratio:unset;"><span aria-hidden="true" class="wp-block-cover__background has-light-green-cyan-background-color has-background-dim-100 has-background-dim"></span><div class="wp-block-cover__inner-container is-layout-flow wp-block-cover-is-layout-flow">
<p class="has-text-align-justify has-medium-font-size"><strong>“ಬಡವರಿಗಾಗಿ ನಾವು ಏನೂ ಮಾಡದೆ ಹೋದರೆ ಅವರ ಬಿಸಿಯುಸಿರಿನಲ್ಲಿ ಸುಟ್ಟು ಹೋಗುತ್ತೇವೆ. ಶೇ. 10 ರಷ್ಟು ಇರುವ ಮೇಲ್ವರ್ಗದ ಜನ ಕೈ ಕಟ್ಟಿ ಕುಳಿತರೆ ಯಾವ ಅನಾಹುತವೂ ಆಗುವುದಿಲ್ಲ. ಆದರೆ ಈ ದುಡಿಮೆಗಾರರೆಲ್ಲ ಒಂದು ವರ್ಷ ಕೈ ಕಟ್ಟಿ ಕುಳಿತರೆ ಇಡೀ ಸಮಾಜ ಸತ್ತು ಹೋಗುತ್ತದೆ. ಆದುದರಿಂದ ದುಡಿಯುವ ವರ್ಗಕ್ಕೆ ಸಲ್ಲಬೇಕಾದ ಗೌರವ, ಪ್ರತಿಫಲ, ನೆಮ್ಮದಿಯನ್ನು ಒದಗಿಸಿಕೊಡದಿದ್ದರೆ ಸರಕಾರಗಳು ಯಾತಕ್ಕಾದರೂ ಇರಬೇಕು”</strong></p>



<p class="has-text-align-center has-medium-font-size"><mark style="background-color:rgba(0, 0, 0, 0)" class="has-inline-color has-vivid-red-color"><strong>~ ಡಿ</strong>. <strong>ದೇವರಾಜ ಅರಸು</strong></mark></p>
</div></div>



<p class="has-text-align-justify has-medium-font-size">ಅಪ್ಪಟ ಸ್ವಾಭಿಮಾನಿ ಅರಸು ಕಾಂಗ್ರೆಸ್ ತೊರೆದು&nbsp; ಸಮಾಜವಾದಿ ಚಳವಳಿಯ ತಾತ್ವಿಕ ನಿಲುವುಗಳನ್ನು ಬೆಂಬಲಿಸುವ ಮೂಲಕ ಕ್ರಾಂತಿರಂಗವನ್ನು ಬಲಪಡಿಸುವ ಕೆಲಸಕ್ಕೆ ಕೈ ಹಾಕಿದ್ದು ಒಂದು ಸಾಹಸ.&nbsp; ಯಾವ ಅರಸು ತಮ್ಮೊಳಗಿನ ಆತ್ಮ ಬಲ, ಛಲ ಅದಕ್ಕೂ ಮಿಗಿಲಾದ ಬಹುಜನರ ಬಗೆಗಿನ ಬದ್ಧತೆಯಿಂದ&nbsp; ದಲಿತ-ಹಿಂದುಳಿದ ವರ್ಗಗಳಲ್ಲಿ ರಾಜಕೀಯ ಅಸ್ಮಿತೆಯ ಬೀಜ ಬಿತ್ತಿದರೋ, ಸಾಮಾಜಿಕ ನ್ಯಾಯದ ಹಕ್ಕುದಾರಿಕೆಯನ್ನು ಹೆಪ್ಪುಗಟ್ಟಿಸಿದರೋ ಅದೇ ದಲಿತ-ಹಿಂದುಳಿದ ವರ್ಗಗಳ ರಾಜಕೀಯ ನಾಯಕರುಗಳಾದ ವೀರಪ್ಪ ಮೊಯ್ಲಿ, ಧರಂ ಸಿಂಗ್, ಬಂಗಾರಪ್ಪ, ಖರ್ಗೆ ಸೇರಿದಂತೆ 35 ಕ್ಕೂ ಹೆಚ್ಚು ಶಾಸಕರುಗಳು ಅರಸು ಅವರನ್ನು ಹೊತ್ತಲ್ಲದ ಹೊತ್ತಲ್ಲಿ ಇರಿದು ಹೋದರು.</p>



<figure class="wp-block-image size-full is-resized"><img loading="lazy" decoding="async" src="https://peepalmedia.com/wp-content/uploads/2022/08/d-devaraj-urs.jpg" alt="" class="wp-image-2394" width="841" height="577" srcset="https://peepalmedia.com/wp-content/uploads/2022/08/d-devaraj-urs.jpg 592w, https://peepalmedia.com/wp-content/uploads/2022/08/d-devaraj-urs-300x206.jpg 300w" sizes="auto, (max-width: 841px) 100vw, 841px" /></figure>



<p class="has-text-align-justify has-medium-font-size">ಬಲಾಢ್ಯ ಜಾತಿಗಳು&nbsp; ಅರಸು ವಿರುದ್ದ ಪಿತೂರಿಗಿಳಿದವು.&nbsp; ಇದಾವುದಕ್ಕೂ ತಲೆ ಕೆಡಿಸಿಕೊಳ್ಳದ ಅರಸು ಅವರು ಪ್ರವಾಹದ ವಿರುದ್ಧ ಈಜುವಂತೆ ರಾಜಕೀಯ ಬದುಕಿನಲ್ಲಿ ಈಜುತ್ತಲೆ ಇದ್ದರು. ಕೊನೆಗಾಲದಲ್ಲಿ ರಾಜಕೀಯ ಕಾರಣಕ್ಕಾಗಿ ದೆಹಲಿಗೆ ಹೋಗಲು ವಿಮಾನದ ಟಿಕೆಟ್ ಗೂ ಅವರಲ್ಲಿ ದುಡ್ಡಿರಲಿಲ್ಲ ಎಂದರೆ ನಂಬಲಾದೀತಾ? ಇದುವರೆಗೂ ವಿಮಾನ ಬುಕ್ ಮಾಡುತ್ತಿದ್ದ ಏಜೆನ್ಸಿ ಸಾಲ ಜಾಸ್ತಿಯಾಗಿದೆ ಎಂದು ಎಂಟು ವರ್ಷ ಈ ನಾಡಿನ ಸುಭಿಕ್ಷೆಗಾಗಿ ಆಳಿದ, ಅಸಂಖ್ಯಾತ ಜನರ ಬದುಕನ್ನು ಬೆಳಕಾಗಿಸಿದ ಅರಸು ಎಂಬ ನಾಯಕನಿಗೆ ಒಂದು ವಿಮಾನದ ಟಿಕೆಟ್ ಬುಕ್ ಮಾಡಲು ನಿರಾಕರಿಸಿತು. ಜೇಬಿನಲ್ಲಿ ದುಡ್ಡು, ಹೊಲ, ಗದ್ದೆ, ಮಹಲುಗಳಿಲ್ಲದೆ ಅರಸು ಬದುಕಿರುವಾಗ ಅವರು ಕರ್ನಾಟಕವನ್ನು ಲೂಟಿ ಹೊಡೆದ ಭ್ರಷ್ಟಾಚಾರಿ ಎಂದು ಮನುವ್ಯಾಧಿ ಪತ್ರಕರ್ತರು, ಪತ್ರಿಕೆಗಳು ಅವರ ವಿರುದ್ಧ ಜಾತಿಯ ಸೇಡು ಬಗೆಯುತ್ತಿದ್ದವು. ಇದು ಕರ್ನಾಟಕದ ಪತ್ರಿಕೋದ್ಯಮ ಈ ನಾಡಿನ ಜನನಾಯಕನೊಬ್ಬನಿಗೆ ಬಗೆದ ದ್ರೋಹವೇ ಆಗಿತ್ತು.</p>



<p class="has-text-align-justify has-medium-font-size">ಅರಸು ಕೂಡ ಕಲ್ಯಾಣದ ಬಸವಣ್ಣನಂತೆ ವಿದ್ರೋಹಗಳಿಗೆ ತುತ್ತಾಗಿ ನಲುಗಿದರು. ಅದು 1982ನೇ ಇಸವಿ. ಅರಸು ಯುಗ ಪುನರುತ್ಥಾನಗೊಳ್ಳುವ ಕಾಲಘಟ್ಟ. ರಾಷ್ಟ್ರ ರಾಜಕಾರಣವೂ ಅರಸು ಇದ್ದ ಕರ್ನಾಟಕದತ್ತ ನೋಡುತ್ತಿತ್ತು. ಈ ನಾಡಿನ ಸಾಮಾಜಿಕ ಮತ್ತು ರಾಜಕೀಯದ ಮತ್ತೊಂದು ಅಭಿವೃದ್ಧಿ ಪರ್ವ ಎದ್ದುನಿಲ್ಲುವ ಸಂದರ್ಭದಲ್ಲಿ ಯುಗ ಪುರುಷ ದೇವರಾಜ ಅರಸು ಎಂಬ ‘ತಂದೆಯನ್ನು’ ಕಳೆದು ಕೊಂಡ ತಬ್ಬಲಿ ಜಾತಿಗಳು&nbsp; ಕಣ್ಣೀರಿನ ಮಡುವಿಗೆ ಬಿದ್ದವು.</p>



<p class="has-text-align-justify has-medium-font-size">ಅರಸು ಅವರ ದಿಟ್ಟ ಸೈದ್ಧಾಂತಿಕತೆ ಕಾರಣದಿಂದಲೇ ಜಾತಿ ವ್ಯವಸ್ಥೆಯ ಗುಲಾಮಗಿರಿಯಿಂದ ಮುಕ್ತಿಗೊಂಡು ಸುಖವುಂಡ ಜನಜಾತಿ ಸಮುದಾಯಗಳು ಮತ್ತು ಅರಸು ಹೆಸರೇಳಿಕೊಂಡೆ ರಾಜಕೀಯ ಅಸ್ತಿತ್ವ ಉಳಿಸಿಕೊಂಡ ಹಿಂದುಳಿದ- ದಮನಿತ ಸಮುದಾಯಗಳ ಸೋಕಾಲ್ಡ್ ನಾಯಕರುಗಳು ವರ್ತಮಾನದ ರಾಜಕಾರಣದಲ್ಲಿ ಅರಸು ವಿಚಾರಧಾರೆಯ ವಿರೋಧಿ ರಾಜಕೀಯ ಚಕ್ರಾಧಿಪತ್ಯಕ್ಕೆ, ಜಾತಿ ವ್ಯವಸ್ಥೆ ಮತ್ತು ಧರ್ಮ ರಕ್ಷಕರ ಪರಿವಾರಕ್ಕೆ ಸೇರುತ್ತಾ , ನೀರೆರೆಯುತ್ತಾ ಕೃತಘ್ನರಂತೆ ವರ್ತಿಸುತ್ತಿರುವುದು ಘೋರ ವಿಪರ್ಯಾಸ.</p>



<p class="has-text-align-justify has-medium-font-size">&nbsp;‘ದೇವರಾಜ ಅರಸು’ ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ಬದುಕಿನ ದೊಡ್ಡ ಪರಿವರ್ತಕ ಶಕ್ತಿ. ಅರಸು ಅವರ 107ನೆಯ ಜನ್ಮದಿನದ ಈ ಸಂದರ್ಭದಲ್ಲಿ ದೇವರಾಜ ಅರಸು ಅವರು ಕಟ್ಟಿಕೊಟ್ಟ&nbsp; ಬಹುಜನ ರಾಜಕಾರಣವನ್ನು , ಸೌಹಾರ್ದ ಕರ್ನಾಟಕವನ್ನು ಉಳಿಸಿಕೊಳ್ಳುವ , ಮುನ್ನಡೆಸುವ ದೊಡ್ಡ&nbsp; ಸವಾಲು ಮತ್ತು ಹೊಣೆಗಾರಿಕೆ ಈ ನಾಡಿನ&nbsp; ದಲಿತ, ದಮನಿತ ಮತೀಯ ಅಲ್ಪಸಂಖ್ಯಾತ ಸಮುದಾಯಗಳ ಮುಂದಿದೆ. ಅದನ್ನು ಸಾಕಾರಗೊಳಿಸಿದ್ದೇ ಅದರೆ ಅದುವೇ ದೇವರಾಜ ಅರಸು ಎಂಬ ತಬ್ಬಲಿ ಜಾತಿಗಳ ತಂದೆಗೆ ಸಲ್ಲಿಸಬಹುದಾದ ನಿಜ ಗೌರವ. ದೇವರಾಜ ಅರಸು ಅವರ ತ್ಯಾಗ, ಹೋರಾಟದ ಮುಂಬೆಳಕಲ್ಲಿ ಕರ್ನಾಟಕವನ್ನು ಮುನ್ನಡೆಸಲು ಸಂಕಲ್ಪ ಮಾಡಬೇಕಿದೆ.</p>



<p class="has-text-align-right"><strong><mark style="background-color:rgba(0, 0, 0, 0)" class="has-inline-color has-vivid-red-color">(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)</mark></strong></p>



<figure class="wp-block-image size-large is-resized"><img loading="lazy" decoding="async" src="https://peepalmedia.com/wp-content/uploads/2022/08/WhatsApp-Image-2022-08-20-at-2.55.21-PM-682x1024.jpeg" alt="" class="wp-image-2389" width="144" height="216" srcset="https://peepalmedia.com/wp-content/uploads/2022/08/WhatsApp-Image-2022-08-20-at-2.55.21-PM-682x1024.jpeg 682w, https://peepalmedia.com/wp-content/uploads/2022/08/WhatsApp-Image-2022-08-20-at-2.55.21-PM-200x300.jpeg 200w, https://peepalmedia.com/wp-content/uploads/2022/08/WhatsApp-Image-2022-08-20-at-2.55.21-PM-768x1152.jpeg 768w, https://peepalmedia.com/wp-content/uploads/2022/08/WhatsApp-Image-2022-08-20-at-2.55.21-PM.jpeg 853w" sizes="auto, (max-width: 144px) 100vw, 144px" /></figure>



<p class="has-medium-font-size"><strong>ಎನ್.ರವಿಕುಮಾರ್</strong><br>ಕಳೆದ 28‍ ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರು. ಕವಿ, ಸಾಮಾಜಿಕ ಹೋರಾಟಗಾರ ಹಾಗೂ ‘ಶಿವಮೊಗ್ಗ ಟೆಲೆಕ್ಸ್’ ಕನ್ನಡ ದಿನಪತ್ರಿಕೆಯ ಸಂಪಾದಕ.</p>
]]></content:encoded>
					
		
		
			</item>
	</channel>
</rss>
