<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>charan Aivarnad &#8211; Peepal Media</title>
	<atom:link href="https://peepalmedia.com/tag/charan-aivarnad/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 02 Sep 2024 15:01:07 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>charan Aivarnad &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಎಲ್ಲಾ ಭಾಷೆಗಳ ತಾಯಿ ಸಂಸ್ಕೃತ ಎಂಬ ಸುಳ್ಳು!</title>
		<link>https://peepalmedia.com/is-sanskrit-mother-to-all-the-languages/</link>
		
		<dc:creator><![CDATA[Charan Aivarnad]]></dc:creator>
		<pubDate>Mon, 02 Sep 2024 10:24:55 +0000</pubDate>
				<category><![CDATA[ಅಂಕಣ]]></category>
		<category><![CDATA[ಧರ್ಮ- ಸಂಸ್ಕೃತಿ]]></category>
		<category><![CDATA[charan Aivarnad]]></category>
		<category><![CDATA[history]]></category>
		<category><![CDATA[language]]></category>
		<category><![CDATA[languages]]></category>
		<category><![CDATA[lingustics]]></category>
		<category><![CDATA[sanskrit]]></category>
		<category><![CDATA[udpi]]></category>
		<category><![CDATA[udupi]]></category>
		<guid isPermaLink="false">https://peepalmedia.com/?p=44798</guid>

					<description><![CDATA[ಉಡುಪಿ ಪುತ್ತಿಗೆ ಮಠದ ಸ್ವಾಮಿಗಳಾದ ಸುಗುಣೇಂದ್ರ ತೀರ್ಥರು ಸಂಸ್ಕೃತ ಮಾತನಾಡಲು ಬಾರದವರಿಗೆ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ, ಸಂಸ್ಕೃತ ವಿಶ್ವ ಭಾಷೆ, ಎಲ್ಲಾ ಭಾಷೆಗಳ ತಾಯಿ, ತಮಿಳು, ತುಳು, ಕನ್ನಡದಂತಹ ದೇಶದ ಭಾಷೆಗಳಿಗೆ ಮಾತ್ರವಲ್ಲ, ಇಂಗ್ಲೀಷಿನ ಮೂಲವೂ ಸಂಸ್ಕೃತ ಎಂದು ಹೇಳಿದ್ದಾರೆ. ಪುತ್ತಿಗೆ ಮಠದ ಈ ಸ್ವಾಮಿ ಅಷ್ಟ ಮಠಗಳ ಸ್ವಾಮಿಗಳಲ್ಲಿ ವಿಭಿನ್ನವಾಗಿ ನಿಂತವರು. ಸಮುದ್ರ ದಾಟಿ ಬೇರೆ ದೇಶಗಳಿಗೆ ಹೋಗಿ ಬಂದ ಮೇಲೆ ಮಾತ್ರವಲ್ಲ, ತಮ್ಮ ಅನೇಕ ನಡೆಗಳಿಂದಾಗಿ ಉಳಿದ ಸ್ವಾಮಿಗಳಿಂದ ಟೀಕೆಗೆ ಒಳಗಾದವರು. ಈಗ ಸಂಸ್ಕೃತವೇ ಎಲ್ಲಾ [&#8230;]]]></description>
										<content:encoded><![CDATA[
<p>ಉಡುಪಿ ಪುತ್ತಿಗೆ ಮಠದ ಸ್ವಾಮಿಗಳಾದ ಸುಗುಣೇಂದ್ರ ತೀರ್ಥರು ಸಂಸ್ಕೃತ ಮಾತನಾಡಲು ಬಾರದವರಿಗೆ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ, ಸಂಸ್ಕೃತ ವಿಶ್ವ ಭಾಷೆ, ಎಲ್ಲಾ ಭಾಷೆಗಳ ತಾಯಿ, ತಮಿಳು, ತುಳು, ಕನ್ನಡದಂತಹ ದೇಶದ ಭಾಷೆಗಳಿಗೆ ಮಾತ್ರವಲ್ಲ, ಇಂಗ್ಲೀಷಿನ ಮೂಲವೂ ಸಂಸ್ಕೃತ ಎಂದು ಹೇಳಿದ್ದಾರೆ.</p>



<p>ಪುತ್ತಿಗೆ ಮಠದ ಈ ಸ್ವಾಮಿ ಅಷ್ಟ ಮಠಗಳ ಸ್ವಾಮಿಗಳಲ್ಲಿ ವಿಭಿನ್ನವಾಗಿ ನಿಂತವರು. ಸಮುದ್ರ ದಾಟಿ ಬೇರೆ ದೇಶಗಳಿಗೆ ಹೋಗಿ ಬಂದ ಮೇಲೆ ಮಾತ್ರವಲ್ಲ, ತಮ್ಮ ಅನೇಕ ನಡೆಗಳಿಂದಾಗಿ ಉಳಿದ ಸ್ವಾಮಿಗಳಿಂದ ಟೀಕೆಗೆ ಒಳಗಾದವರು. ಈಗ ಸಂಸ್ಕೃತವೇ ಎಲ್ಲಾ ಭಾಷೆಗಳ ತಾಯಿ ಎಂದಿದ್ದಾರೆ. ಈ ಸುಳ್ಳನ್ನು ಈ ದೇಶದಲ್ಲಿ ಮತ್ತೆ ಮತ್ತೆ ಹರಡಲಾಗುತ್ತಿದೆ. ಈಗ ಸಂಸ್ಕೃತ ಗೊತ್ತಿಲ್ಲದೇ ಇದ್ದರೆ ಸ್ವರ್ಗಕ್ಕೆ ಹೋಗುವುದೂ ಕಷ್ಟವಾಗಿದೆ.&nbsp;</p>



<p>ಸಂಸ್ಕೃತ ಒಂದು ಅಗಾದ ಜ್ಞಾನ ಪರಂಪರೆ ಇರುವ ಭಾಷೆ. ಇದರಲ್ಲಿ ಕೇವಲ ವೈದಿಕರು ಮಾತ್ರವಲ್ಲ, ಅವೈದಿಕ ಪರಂಪರೆಗಳೂ ತಮ್ಮ ಕೃತಿಗಳನ್ನು ಬರೆದಿವೆ. ಮಾಳವಿಕಾಗ್ನಿಮಿತ್ರಂ, ಅಭಿಜ್ಞಾನ ಶಾಕುಂತಲಂ, ವಿಕ್ರಮೋರ್ವಶೀಯಂ ಬರೆದ ಕಾಳಿದಾಸ, ಕಿರತಾರ್ಜುನೀಯ ಬರೆದ ಭಾರವಿ, ಉತ್ತರರಾಮಚರಿತ ಬರೆದ ಎಂಟನೇ ಶತಮಾನದ ಕವಿ &#8211; ನಾಟಕಕಾರ ಭವಭೂತಿ, ಕ್ರಿ.ಪೂ 7 ರಿಂದ 4 ನೇ ಶತಮಾನದ ವರೆಗೆ ಜೀವಿಸಿದ್ದ ಅಷ್ಟಾಧ್ಯಾಯಿ ಬರೆದ ಮಹಾವೈಯಾಕರಣಿ ಪಾಣಿನಿ…ಇವರೆಲ್ಲರೂ ಸಂಸ್ಕೃತದಲ್ಲಿ ಬರೆದರು. ಇವರೆಲ್ಲರ ಬಗ್ಗೆ ಅಪಾರ ಗೌರವವಿದೆ.&nbsp;</p>



<p>ಬೌದ್ಧರು ಜನಸಾಮಾನ್ಯನನ್ನು ತಲುಪಲು, ವರ್ಣಾಶ್ರಮವನ್ನು ಪ್ರತಿಪಾದಿಸಲು ಬಳಸಲ್ಪಟ್ಟ ಸಂಸ್ಕೃತವನ್ನು ಬಿಟ್ಟು ಪ್ರಾಕೃತವನ್ನು ಬಳಸಿದರು. ದೇವನಾಂಪಿಯ ಪಿಯದಸಿ ಅಸೋಕ ಸೇರಿದಂತೆ ಮೌರ್ಯರೂ, ಶಾತವಾಹನರು ಪ್ರಾಕೃತದಲ್ಲಿಯೇ ಶಾಸನಗಳನ್ನು ಬರೆದರು. ಆ ನಂತರ ಬಂದ ಕದಂಬರು ಬ್ರಾಹ್ಮಣರಿಗೆ ಹೇರಳವಾಗಿ ಊರುಗಳನ್ನು, ಭೂಮಿಯನ್ನು ದಾನ ಕೊಡುತ್ತಾ, ದಕ್ಷಿಣ ಭಾರತದಲ್ಲಿ ಅವರನ್ನು ನೆಲೆಯೂರಿಸುವಾಗ ತಮ್ಮ ಆರಂಭಿಕ ಶಾಸನಗಳನ್ನು ಸಂಸ್ಕೃತದಲ್ಲಿ ಹಾಕಿಸಿದರು.&nbsp;</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<iframe title="ಸಂಸ್ಕೃತ ಎಲ್ಲಾ ಭಾಷೆಗಳ ತಾಯಿಯೇ? | SANSKRIT | CHARAN AIVARNAD" width="696" height="392" src="https://www.youtube.com/embed/1faJR9AUS40?feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" referrerpolicy="strict-origin-when-cross-origin" allowfullscreen></iframe>
</div></figure>



<p>ಸಂಸ್ಕೃತದ ಬಗ್ಗೆ ವೈಯಕ್ತಿಕವಾಗಿ ಕನ್ನಡ, ತುಳು, ತಮಿಳು, ಮಲಯಾಳಂ, ಹಿಂದಿ, ಇಂಗ್ಲೀಷ್‌ ಭಾಷೆಗಳನ್ನು ಮಾತನಾಡಲು ಬರುವ ನಂಗೆ ಆ ಭಾಷೆಗಳಿಗೆ ಕೊಡುವಷ್ಟೇ ಗೌರವವವನ್ನು, ಎಲ್ಲಾ ಭಾಷೆಗಳಿಗೆ ಕೊಡುವ ಗೌರವವನ್ನು ಸಂಸ್ಕೃತಕ್ಕೂ ಕೊಡುತ್ತೇನೆ. ನನಗೆ ಇಲ್ಲಿ ಯಾವ ಭಾಷೆಯೂ ಮೇಲಲ್ಲ, ಕೀಳಲ್ಲ. ಯಾವದೇ ಭಾಷೆಯನ್ನು ಮಾತನಾಡಿದರೂ ಸ್ವರ್ಗ ಸಿಗುತ್ತದೆ ಎಂಬ ನಂಬಿಕೆಯೂ ಇಲ್ಲ. ಬದಲಾಗಿ, ಯಾವುದೇ ಭಾಷೆಯನ್ನು ಮಾತನಾಡಲು ಕಲಿತರೆ ಅದರಲ್ಲಿ ಇರುವ ಜ್ಞಾನ ಸಂಪತ್ತನ್ನು ದಕ್ಕಿಸಿಕೊಳ್ಳುವುದೇ ಒಂದು ಸ್ವರ್ಗ. ಕನ್ನಡದಲ್ಲಿ ಪಂಪನ ಆದಿಪುರಾಣ, ರನ್ನನ ಗದಾಯುದ್ಧ ಮೊದಲಾದ ಕಾವ್ಯಗಳೂ, ಮಂಟೇಸ್ವಾಮಿ ಕಾವ್ಯ ಮೊದಲಾದ ಹೇರಳವಾದ ಜಾನಪದ ಪರಂಪರೆಯಿದೆ. ತುಳುನಾಡಿನಲ್ಲಿ ತುಳು ಪಾಡ್ದನ ಹಾಡುವ ಕನಿಷ್ಟ ಒಬ್ಬ ಕವಿಯಾದರೂ ಸಿಗುತ್ತಾನೆ. ತಮಿಳಿನಲ್ಲಿ ತಮಿಳಕಂನ ಇತಿಹಾಸವನ್ನು ಬಿಚ್ಚಿಡುವ ಅಗನಾನೂರು, ಪುರನಾನೂರು, ಕುರುತ್ತೊಕೈ, ಮಣಿಮೇಖಲೈ ಮೊದಲಾದ ಸಂಗಂ ಸಾಹಿತ್ಯವಿದೆ, ತೋಳ್ಕಾಪ್ಪಿಯಂನಂತಹ ವ್ಯಾಕರಣವಿದೆ. ಎಲ್ಲದರ ಮೇಲೂ ಗೌರವ, ಆಸಕ್ತಿ ನನಗಿದೆ.</p>



<p>ಆದರೆ ಸಂಸ್ಕೃತ ಮಾತನಾಡಿದರೆ ಸ್ವರ್ಗ ಸಿಗುತ್ತದೆ ಎಂಬ ನಂಬಿಕೆಯಿಲ್ಲ. ನಾನು ಸ್ವರ್ಗದ ಮೇಲೆ ನಂಬಿಕೆಯಿಲ್ಲದ ಸಮುದಾಯದಿಂದ ಬಂದವನು. ನಮ್ಮ ಮನೆಯಲ್ಲಿ ಯಾರಾದರು ಸತ್ತರೆ ಅವರು ಹಿಂದೆ ಸಂದಿಹೋಗಿರುವ ಹದಿನಾರು ಮಂದಿ ಹಿರಿಯರ ಜೊತೆಗೆ ಸೇರುತ್ತಾನೆ ಎಂದು ನಂಬಿದ್ದೇವೆಯೇ ಹೊರತು, ಸ್ವರ್ಗಕ್ಕೆ ಹೋಗುತ್ತಾನೆ ಎಂಬ ನಂಬಿಕೆ ನಮ್ಮಲ್ಲಿ ಇಲ್ಲ. ಬಹುತೇಕ ಭಾರತೀಯ ಸಮುದಾಯಗಳಲ್ಲಿ ಸ್ವರ್ಗದ ಪರಿಕಲ್ಪನೆಯೇ ಇಲ್ಲ.</p>



<p>ಇರುವುದು ಒಂದೇ ಸ್ವರ್ಗ, ಅದು ಕಾಸರಗೋಡಿನಿಂದ ಸುಮಾರು ಮೂಮತ್ತಮೂರು ಕಿಲೋಮೀಟರ್‌ ದೂರದಲ್ಲಿ ಇರುವ ಸ್ವರ್ಗವೆಂಬ ಊರು. ಅದೂ ಎಂಡೋಸಲ್ಫಾನ್‌ ಬಾಧೆಗೆ ತುತ್ತಾಗಿ ನರಕವಾಗಿದೆ! ಅಲ್ಲಿಗೆ ಹೋಗುವವರಿಗೆ ಸಂಸ್ಕೃತ ಬರಬೇಕಾಗಿಲ್ಲ, ಕನ್ನಡ, ತುಳು, ಮಲಯಾಳಂ ಮಾತನಾಡಲು ಬಂದರೆ ಸಾಕು.&nbsp;</p>



<p class="has-regular-font-size"><strong>ಸಂಸ್ಕೃತ ಎಲ್ಲಾ ಭಾಷೆಗಳ ತಾಯಿಯೇ?</strong></p>



<p>ಸಂಸ್ಕೃತ ಇಂಡೀ-ಯುರೋಪಿಯನ್‌ ಭಾಷಾವರ್ಗಕ್ಕೆ ಸೇರಿದ ಭಾಷೆ. ಭಾರತದಲ್ಲಿ ಸಂಸ್ಕೃತ ಹೇಗೋ, ಯುರೋಪಿನಲ್ಲಿ ಗ್ರೀಕ್‌, ಲ್ಯಾಟಿನ್‌ ಭಾಷೆಗಳೂ ಅದೇ ಸ್ಥಾನವನ್ನು ಹೊಂದಿವೆ. ಋಗ್ವೇದದಲ್ಲಿ ಇರುವ ಸಂಸ್ಕೃತವೇ ಬೇರೆ, ಈಗ ಬಳಕೆಯಲ್ಲಿ ಇರುವ ಸಂಸ್ಕೃತವೇ ಬೇರೆ ಎಂಬಂತೆ ಬದಲಾವಣೆಗಳಾಗಿವೆ. ಋಗ್ವೇದದ ಭಾಷೆಯನ್ನು “ಋಗ್ವೇದಿಕ್‌ ಸಂಸ್ಕೃತ” ಅಥವಾ “ಹಳೆಯ ಇಂಡಿಕ್‌ ಭಾಷೆ” ಎಂದು ಕರೆಯುತ್ತೇವೆ. ಈ&nbsp; ಋಗ್ವೇದಿಕ್‌ ಸಂಸ್ಕೃತದ ಮೊದಲ ಶಾಸನ ಪತ್ತೆಯಾಗಿದ್ದು ಭಾರತದಲ್ಲಿ ಅಲ್ಲ, ಉತ್ತರ ಸಿರಿಯಾದಲ್ಲಿ.&nbsp;</p>



<p>ಪ್ರಾಚೀನ ಕಾಲದಲ್ಲಿ ಧಾರ್ಮಿಕ ಜಿಜ್ಞಾಸೆಗಳಿಗೆ ಬಳಸಲಾಗುತ್ತಿದ್ದ ಸಂಸ್ಕೃತಕ್ಕೂ ಆಗ ಮಾತನಾಡಲು ಬಳಸುತ್ತಿದ್ದ ಬೇರೆ ಬೇರೆ ಸಂಸ್ಕೃತಗಳಿಗೂ ವ್ಯತ್ಯಾಸವಿತ್ತು. ನಮಗೆ ಸದ್ಯ ಲಭ್ಯವಿರುವ ಸಂಸ್ಕೃತದ ಅತ್ಯಂತ ಹಳೆಯ ವ್ಯಾಕರಣವೆಂದರೆ ಕ್ರಿ.ಪೂ ಐದನೇ ಶತಮಾನದಲ್ಲಿ ಪಾಣಿನಿ ಬರೆದ ಅಷ್ಟಾಧ್ಯಾಯಿ. ವೇದಗಳ ಕಾಲದ ನಂತರ ಸಂಸ್ಕೃತವನ್ನು ಧಾರ್ಮಿಕ ಗ್ರಂಥಗಳನ್ನು ಬರೆಯಲು ಮಾತ್ರವಲ್ಲದೆ, ಸ್ವತಂತ್ರ ಸಾಹಿತ್ಯ ರಚನೆಗೂ ಬಳಸಲಾಯಿತು, ನಾಟಕ, ಕಾವ್ಯಗಳು ಬಂದವು.&nbsp;</p>



<p>ಶಾತವಾಹನರ ಕಾಲದಲ್ಲಿ ಸಂಸ್ಕೃತ ಮೆಲ್ಲನೆ ದಕ್ಷಿಣ ಭಾರತವನ್ನು ಹರಡಲು ಆರಂಭಿಸಿತು. ಕರ್ನಾಟಕದಲ್ಲಿ ಲಭ್ಯವಿರುವ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನವೆಂದರೆ ಕದಂಬ ದೊರೆ ಕಾಕುಸ್ಥವರ್ಮನ ಐದನೇ ಶತಮಾನದ ತಾಳೆಗುಂದ ಸ್ಥಂಭ ಶಾಸನ. ಕದಂಬರು ಬ್ರಾಹ್ಮಣರಿಗೆ ಊರು, ಹಳ್ಳಿಗಳನ್ನು ದತ್ತಿಕೊಡುತ್ತಿದ್ದರು. ಕೇರಳ, ತುಳುನಾಡಿಗೆ ಇವರು ಬ್ರಾಹ್ಮಣರನ್ನು ಕರೆತಂದರು. ಐದನೇ ಶತಮಾನದಲ್ಲಿ ಕದಂಬ ದೊರೆ ರವಿವರ್ಮ ಬ್ರಾಹ್ಮಣರಿಗೆ ಊರನ್ನು ದತ್ತಿಕೊಟ್ಟ ಉಲ್ಲೇಖ ಕೇರಳದ ನಿಲಂಬೂರು ತಾಮ್ರಶಾಸನದಲ್ಲಿ ಬರುತ್ತದೆ. ತುಳುನಾಡಿನ ಮತ್ತು ಕೇರಳದ ಬ್ರಾಹ್ಮಣರು ತಮ್ಮನ್ನು ಅಹಿಚ್ಛತ್ರಕ್ಷೇತ್ರದಿಂದ ಕದಂಬ ದೊರೆ ಮಯೂರವರ್ಮ ಕರೆತಂದ ಎಂದು ಈಗಲೂ ಹೇಳಿಕೊಳ್ಳುತ್ತಾರೆ. ಇದೇ ಕಥೆಯನ್ನು ಕೇರಳೋತ್ಪತ್ತಿ, ಗ್ರಾಮಪದ್ಧತಿ, ಸ್ಕಂದಪುರಾಣದ ಸಹ್ಯಾದ್ರಿಖಂಡ ಕೂಡ ಹೇಳುತ್ತದೆ. ಹೀಗೆ ಸಂಸ್ಕೃತ ದಕ್ಷಿಣ ಭಾರತಕ್ಕೆ ಲಗ್ಗೆ ಇಟ್ಟಿತು.&nbsp;</p>



<p>ಮೌರ್ಯರ ಕಾಲದಿಂದ ಶಾತವಾಹನರ ಕಾಲದ ವರೆಗೆ ಪ್ರಚಾರದಲ್ಲಿದ್ದ ಬೌದ್ಧರು ನಿಧಾನವಾಗಿ ಕಣ್ಮರೆಯಾಗುತ್ತಾ ಬಂದರು. ಕದ್ರಿ ಮೊದಲಾದ ಬೌದ್ಧ ವಿಹಾರಗಳು (ಹತ್ತನೇ ಶತಮಾನದ ಆಲೂಪ ದೊರೆ ಕುಂದವರ್ಮ ಸ್ಥಾಪಿಸಿದ ಕದರಿಯ ಅವಲೋಕಿತೇಶ್ವರ ಪ್ರತಿಮೆಯಲ್ಲಿರುವ ಗ್ರಂಥ ಲಿಪಿಯ ಶಾಸನದಲ್ಲಿ ಇದು ಕದರಿಕಾ ವಿಹಾರ) ದೇವಾಲಯಗಳಾಗಿ ಬದಲಾದವು. ಜನರನ್ನು ಬೆಸೆಯಲು ಪ್ರಯತ್ನಿಸಿದ ಪ್ರಾಕೃತ ಕೂಡ ವಿಫಲವಾಗಿ ದಕ್ಷಿಣ ಭಾರತದಿಂದ ಇಲ್ಲವಾಯಿತು.</p>



<p>ಸಾಮಾನ್ಯವಾಗಿ ಎಲ್ಲಾ ಭಾಷೆಗಳೂ ಸಂಸ್ಕೃತದಿಂದ ಹುಟ್ಟಿದವು ಎಂಬ ವಾದವನ್ನು ಮಾಡುವವರು ಕನ್ನಡ, ತುಳು ಮೊದಲಾದ ಭಾಷೆಗಳಲ್ಲಿ ಇರುವ ಪದಗಳ ಎಟಿಮೊಲಾಜಿಕಲ್‌ ಮೂಲವನ್ನು ಸಂಸ್ಕೃತಕ್ಕೆ ಜೋಡಿಸಿ ಹೇಳುತ್ತಾರೆ.</p>



<p>ಉದಾಹರಣೆಗೆ: ಕನ್ನಡ-ತುಳುವಿನ ಸಕ್ಕರೆ ಸಂಸ್ಕೃತದ ಶರ್ಕರದಿಂದ ಬಂದಿದೆ ಎಂದು. ಇದು ಸಂಸ್ಕೃತದಿಂದಲೇ ಬಂದಿದ್ದು ಎಂದು ಹೇಗೆ ಹೇಳುವುದು? ಇದು ಪ್ರಾಕೃತ ಭಾಷೆಯ ಸಕ್ಕರ ಅಥವಾ ಸುಕ್ಕರ ಎಂಬ ಪದದಿಂದಲೂ ಬಂದಿರಬಹುದು. ತುಳುವರು ಸತ್ತವರನ್ನು ಹೂಳುವ ಅಥವಾ ಸುಟ್ಟ ನಂತರ ಆ ಜಾಗದಲ್ಲಿ ಕಟ್ಟುವ ಸಮಾಧಿಗೆ “ದೂಪೆ” ಎಂದು ಕರೆಯುತ್ತಾರೆ, ಇದು ಬೌದ್ಧರು ಬುದ್ಧನ ಅವಶೇಷಗಳನ್ನು ಇಟ್ಟಿರುವ “ಸ್ತೂಪ” ಎಂಬ ಪದದಿಂದ ಬಂದಿದೆ. ತುಳುವರು ಹೆಣ ಸುಡುವ ಕಟ್ಟಿಗೆಯ ರಾಶಿಗೆ “ಕಾಟ” ಎಂದು ಕರೆಯುತ್ತಾರೆ. ಪ್ರಾಕೃತದಲ್ಲಿಯೂ ಕಾಟ ಎಂದೇ ಕರೆಯುತ್ತಾರೆ.</p>



<p>ಕನ್ನಡ, ತುಳು, ಮಲಯಾಳಂ, ತಮಿಳು, ತೆಲುಗು ಮೊದಲಾದ ದಕ್ಷಿಣ ಭಾರತದ ಭಾಷೆಗಳೂ, ಪಾಕಿಸ್ತಾನದಲ್ಲಿ ಮಾತನಾಡುವ ಬ್ರಾಹುಯಿ, ಉತ್ತರ ಭಾರತದದಲ್ಲಿ ಮಾತನಾಡುವ ಮಾಲ್ಟೋ, ಕುರುಕ್‌, ಮಧ್ಯಭಾರತದಲ್ಲಿ ಮಾತನಾಡುವ ಕೊಲಮಿ, ನೈಕಿ, ಪರ್ಜಿ, ಒಲ್ಲಾರಿ, ಗಡಬ, ಗೊಂಡ, ಮಂಡ, ಕುಯ್‌, ಪೆಂಗೋ ಮೊದಲಾದ ಭಾಷೆಗಳು ದ್ರಾವಿಡ ಭಾಷಾವರ್ಗಕ್ಕೆ ಸೇರಿದ ಭಾಷೆಗಳು.&nbsp;</p>



<p>ಹಿಂದಿ, ಸಂಸ್ಕೃತ, ಅವಧಿ, ಭೋಜ್‌ಪುರಿ, ಪ್ರಾಕೃತ, ಲ್ಯಾಟಿನ್‌, ಗ್ರೀಕ್‌, ಇಂಗ್ಲೀಷ್ ಮೊದಲಾದವು‌ ಯುರೋಪಿಯನ್‌ ಭಾಷೆಗಳು ಇಂಡೋ ಆರ್ಯನ್‌ ಭಾಷಾವರ್ಗಕ್ಕೆ ಸೇರಿದವರು.&nbsp;</p>



<p>ಆಗಲೇ ಹೇಳಿದಂತೆ, ಇಂದು ಬಳಕೆಯಲ್ಲಿ ಇಲ್ಲದ ಋಗ್ವೇದದ ಸಂಸ್ಕೃತದ ಮೊದಲ ಶಾಸನ ಸಿಕ್ಕಿದ್ದು ಉತ್ತರ ಸಿರಿಯಾದಲ್ಲಿ . ಇದು 1500 ಮತ್ತು 1350 BC ನಡುವೆ, ಅಪ್ಪರ್‌ ಯೂಫ್ರಟಿಸ್-ಟೈಗ್ರಿಸ್ ಜಲಾನಯನ ಪ್ರದೇಶವನ್ನು ಆಳಿದ ಮಿಟಾನಿ ಎಂಬ ರಾಜವಂಶದ ಶಾಸನ. ಇವರ ಸಾಮ್ರಾಜ್ಯ ಈಗಿನ ಸಿರಿಯಾ, ಇರಾಕ್ ಮತ್ತು ಟರ್ಕಿ ದೇಶಗಳಿಗೆ ಹರಡಿಕೊಂಡಿತ್ತು. ಮಿಟಾನಿಗಳು ಸಂಸ್ಕೃತಕ್ಕೆ ಸಂವಾದಿಯಾದ ಹುರಿಯನ್ ಎಂಬ ಭಾಷೆಯನ್ನು ಮಾತನಾಡುತ್ತಿದ್ದರು. ಮಿಟಾನಿ ರಾಜರು ತಮಗೆ <a href="https://global.oup.com/academic/product/the-quest-for-the-origins-of-vedic-culture-9780195169478">ಸಂಸ್ಕೃತದ ಹೆಸರನ್ನು </a>ಇಟ್ಟುಕೊಂಡಿದ್ದರು. ಉದಾಹರಣೆಗೆ ಪುರುಷ, ತುಸ್ರತ್ತಾ, ಸುವರ್ದತ, ಸುಬಂಧು, ಇಂದ್ರೊತ ಇತ್ಯಾದಿ. ಸಂಖ್ಯೆಗಳು ಕೂಡ&nbsp; ಐಕ ಅಂದ್ರೆ ಏಕ, ತೇರಾ ಅಂದ್ರೆ ಮೂರು, ಸತ್ತಾ ಎಂದರೆ ಸಪ್ತ.&nbsp; ಸಂಸ್ಕೃತಗಳನ್ನು ಮಾತನಾಡುವ ಆರ್ಯನ್‌ ಬುಡಕಟ್ಟಿನಂತೆ ಇವರಲ್ಲೂ ಕುದುರೆಗಳಿಗೆ ಅಸುವಾ ಎಂದು ಕರೆಯುತ್ತಾರೆ.&nbsp;</p>



<p>ಕ್ರಿ.ಪೂ 1380 ರಲ್ಲಿ ಪ್ರತಿಸ್ಪರ್ಧಿ ರಾಜನೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವಾಗ ಮಿಟಾನಿ ರಾಜನೊಬ್ಬ <a href="https://www.azargoshnasp.net/history/Aryan/mitanniaryanpantheons.pdf">ಇಂದ್ರ, ವರುಣ, ಮಿತ್ರ </a>ಮತ್ತು ನಾಸತ್ಯರನ್ನು (ಅಶ್ವಿನಿ ದೇವತೆಗಳು) ದೈವಸಾಕ್ಷಿಗಳಾಗಿ <a href="https://www.heritageinstitute.com/zoroastrianism/ranghaya/suppiluliuma_shattiwaza_treaty.htm">ಶಾಸನದಲ್ಲಿ </a>ಹೆಸರಿಸುತ್ತಾನೆ .ಇವರೆಲ್ಲಾ ಋಗ್ವೇದದ ಪ್ರಮುಖ ದೇವರುಗಳು.</p>


<div class="wp-block-image">
<figure class="aligncenter size-full is-resized"><img fetchpriority="high" decoding="async" width="728" height="414" src="https://peepalmedia.com/wp-content/uploads/2024/09/Captureಜ.jpg" alt="" class="wp-image-44799" style="width:468px;height:auto" srcset="https://peepalmedia.com/wp-content/uploads/2024/09/Captureಜ.jpg 728w, https://peepalmedia.com/wp-content/uploads/2024/09/Captureಜ-300x171.jpg 300w, https://peepalmedia.com/wp-content/uploads/2024/09/Captureಜ-150x85.jpg 150w, https://peepalmedia.com/wp-content/uploads/2024/09/Captureಜ-696x396.jpg 696w" sizes="(max-width: 728px) 100vw, 728px" /></figure></div>


<p>ಈ ಲ್ಯಾಟಿನ್‌, ಸಂಸ್ಕತ, ಗ್ರೀಕ್‌ ಮೊದಲಾದ ಭಾಷೆಗಳ ಮೂಲ ಭಾಷೆಯನ್ನು ಪ್ರೋಟೋ ಇಂಡೋ ಯುರೋಪಿಯನ್ ಭಾಷೆ ಎಂದು ಕರೆಯಲಾಗುತ್ತದೆ. ತಮಿಳು, ಕನ್ನಡ, ತುಳು, ತೆಲುಗು, ಕೊರಗ ಮೊದಲಾದ ಭಾಷೆಗಳ ಮೂಲ ಭಾಷೆಯನ್ನು ಪ್ರೋಟೋ ದ್ರಾವಿಡಿಯನ್‌ ಭಾಷೆ ಎಂದು ಕರೆಯಲಾಗುತ್ತದೆ. ಇವೆರಡೂ ಬೇರೆ ಬೇರೆ ಭಾಷಾ ಕುಟುಂಬಗಳು.&nbsp;</p>



<p>ಈ “ಪ್ರೋಟೋ ಇಂಡೋ ಯುರೋಪಿಯನ್ ಭಾಷೆಯ” ಮಗಳನ್ನು ಅಂದರೆ, ಒಂದು ಕವಲನ್ನು ಭಾಷಾಶಾಸ್ತ್ರದಲ್ಲಿ “ಪ್ರೋಟೋ-ಇಂಡೋ-ಇರಾನಿಯನ್‌” ಎಂದು ಕರೆಯಲಾಗುತ್ತದೆ. ಇದರಿಂದಲೇ ಸಂಸ್ಕೃತ, ಹಿಂದಿ ಮೊದಲಾದ ಉತ್ತರ ಭಾರತದ ಭಾಷೆಗಳೂ, ಇರಾನಿನ ಭಾಷೆಗಳೂ ಹುಟ್ಟಿದ್ದು.&nbsp;</p>



<p>ಜೆಪಿ ಮಲ್ಲೋರಿ ಮತ್ತು ಡಿಕ್ಯೂ ಆಡಮ್ಸ್‌ ಸಂಪಾದನೆ ಮಾಡಿರುವ “<a href="https://www.jstor.org/stable/417487?seq=1#page_scan_tab_contents" data-type="link" data-id="https://www.jstor.org/stable/417487?seq=1#page_scan_tab_contents">ಎನ್‌ಸೈಕ್ಲೋಪಿಡಿಯಾ ಆಫ್‌ ಇಂಡೋ-ಯುರೋಪಿಯನ್‌ ಕಲ್ಚರ್‌</a>ನಲ್ಲಿ” ಈ ಪ್ರೋಟೋ-ಇಂಡೋ-ಇರಾನಿಯನ್‌ ಭಾಷಿಕರು ಮೊದಲು ಉರಾಲ್ ಶ್ರೇಣಿಗಳ ದಕ್ಷಿಣದಲ್ಲಿ ಮತ್ತು ಕಝಕಿಸ್ತಾನ್‌ನಲ್ಲಿ ಕಾಣಿಸಿಕೊಂಡರು ಎಂದು ಹೇಳಲಾಗಿದೆ. ಕ್ರಿ.ಪೂ 2000 ರ ಮೊದಲು ಜೀವಿಸಿದ್ದ ಈ ಸ್ಟೆಪ್ಪಿ ಜನರು <a href="https://en.wikipedia.org/wiki/Andronovo_culture">ಆಂಡ್ರೋನೊವೊ</a> ಸಂಸ್ಕೃತಿಯವರು.</p>



<p>ಇವರಿಂದ ಬೇರೆಯಾದ ಒಂದು ಗುಂಪು&nbsp; ಪ್ರೋಟೋ-ಇಂಡೋ-ಇರಾನಿಯನ್‌ ಭಾಷೆಯನ್ನು ಬಿಟ್ಟು, ತಮ್ಮ ತಾಯ್ನೆಲವಾದ ಮಧ್ಯ ಏಷ್ಯಾವನ್ನು ತೊರೆದು ಸಂಸ್ಕೃತದ ಮೂಲ ಭಾಷೆಯನ್ನು ಮಾತನಾಡಲು ಶುರು ಮಾಡಿದರು. ಇವರ ಒಂದು ಗುಂಪು ಪಶ್ಚಿಮಕ್ಕೆ ನಡೆದು ಸಿರಿಯಾ ಸೇರಿದರೆ, ಇನ್ನೊಂದು ಗುಂಪು ಪೂರ್ವಕ್ಕೆ ನಡೆದು ಭಾರತದ ಪಂಜಾಬ್‌ ಪ್ರದೇಶಕ್ಕೆ ಬಂತು.</p>



<p>The Horse, the Wheel, and Language: How Bronze-Age Riders from the Eurasian Steppes Shaped the Modern World ಯಲ್ಲಿ <a href="https://press.princeton.edu/books/paperback/9780691148182/the-horse-the-wheel-and-language">ಡೇವಿಡ್ ಆಂಥೋನಿ </a>ಹೇಳುವಂತೆ ಪಶ್ಚಿಮದ ಕಡೆಗೆ ಹೋದ ಜನರ ಗುಂಪು ಬಹುಶಃ ಸಿರಿಯಾದ ಹುರಿಯನ್ ರಾಜರಿಂದ ಸಾರಥಿಗಳಾಗಿ ನೇಮಕಗೊಂಡರು. ಈ ಸಾರಥಿಗಳು ಅವರದೇ ಭಾಷೆಯಲ್ಲಿ ಮಾತನಾಡುತ್ತಿದ್ದರು. ಪೂರ್ವಕ್ಕೆ ಬಂದ ಅವರದೇ ಜನರಿಂದ ಋಗ್ವೇದ ರಚನೆಯಾಯಿತು. ಈ ಎರಡೂ ಪಂಗಡಗಳೂ ಋಗ್ವೇದಿಕ್‌ ಸಂಸ್ಕೃತ ಮಾತನಾಡುತ್ತಿದ್ದರು.</p>



<p>ಈ ಋಗ್ವೇದ ಸಂಸ್ಕೃತ ಭಾಷೆಯನ್ನು ಮಾತನಾಡುವ ಜನರು ಸಿರಿಯಾಗೆ ಹೋಗಿ ಅಲ್ಲಿನ ಮೂಲ ರಾಜರನ್ನು ಪತನ ಮಾಡಿ ಅವರ ಸಿಂಹಾಸನದಲ್ಲಿ ಮಿಟಾನಿ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಕ್ರಮೇಣ ತಮ್ಮ ಮೂಲ ಸಂಸ್ಕೃತಿಯನ್ನು ಕಳೆದುಕೊಂಡರು. ಸ್ಥಳೀಯ ಹುರಿಯನ್ ಭಾಷೆ ಮತ್ತು ಧರ್ಮವನ್ನು ಅಳವಡಿಸಿಕೊಂಡರು. ಆದರೂ ರಾಜಮನೆತನದ ಹೆಸರುಗಳು, ರಥಕ್ಕೆ ಸಂಬಂಧಿಸಿದ ಕೆಲವು ತಾಂತ್ರಿಕ ಪದಗಳು ಮತ್ತು ಸಹಜವಾಗಿಯೇ ಅವರ ಮೂಲದೇವತೆಗಳಾದ ಇಂದ್ರ, ವರುಣ, ಮಿತ್ರ ಮತ್ತು ನಾಸತ್ಯರ ಹೆಸರುಗಳನ್ನು ಹಾಗೆಯೇ ಉಳಿಸಿಕೊಂಡರು.&nbsp;</p>



<p>ಪೂರ್ವದ ಕಡೆಗೆ ನಡೆದ ಗುಂಪು ಋಗ್ವೇದವನ್ನು ರಚಿಸಿತು. ಅವರು ತಮ್ಮ ಸಂಸ್ಕೃತಿಯನ್ನು ರಕ್ಷಿಸಲು ಮತ್ತು ತಮ್ಮ ಭಾಷೆಯನ್ನು ಹರಡಲು ಸಶಕ್ತರಾದರು. ಅವರ ಭಾಷೆ ಮತ್ತು ಸಂಸ್ಕೃತಿ ಭಾರತದಲ್ಲಿ ಬೇರೂರಿತು.&nbsp;</p>



<p>ಸುಮಾರು 1500 ವರ್ಷಗಳ ಹಿಂದೆ ದಕ್ಷಿಣ ಭಾರತವನ್ನು ಸಂಸ್ಕೃತ ಪ್ರವೇಶಿಸಿತು. ಇಲ್ಲಿನ ಬ್ರಾಹ್ಮಣರು ತಮ್ಮ ಸಾಹಿತ್ಯಗಳಲ್ಲಿಯೇ ತಮ್ಮನ್ನು ವಲಸೆ ಬಂದವರು ಎಂದು ಕರೆಸಿಕೊಂಡಿದ್ದಾರೆ. ತುಳುವ ಬ್ರಾಹ್ಮಣರೂ ತಮ್ಮನ್ನು ಅಹಿಚ್ಛತ್ರ ಕ್ಷೇತ್ರದಿಂದ ಕದಂಬರ ಅರಸ&nbsp; ಮಯೂರವರ್ಮನೇ ಕರೆತಂದು ಘಟ್ಟದ ಕೆಳಗಿನ ದೇಶವನ್ನು ಅರವತ್ನಾಲ್ಕು ಭಾಗಗಳಾಗಿ ಹಂಚಿಕೊಟ್ಟಿದ್ದಾಗಿ ನಂಬುತ್ತಾರೆ.</p>



<p>ಕೇರಳ ನಂಬೂದಿರಿ ಬ್ರಾಹ್ಮಣರೂ ಕೇರಳೋತ್ಪತಿ ಮತ್ತು ಕೇರಳಮಾಹಾತ್ಮ್ಯ ವೃತ್ತಾಂತಗಳನ್ನು ಆಧರಿಸಿ ತಮ್ಮದೇ ಆದ ಕಥನವನ್ನು ಹೊಂದಿದ್ದಾರೆ. ಕೇರಳೋತ್ಪತಿಯ ಪ್ರಕಾರ ಪೌರಾಣಿಕ ವೀರನಾದ ಪರಶುರಾಮನು ಪಶ್ಚಿಮ ಕರಾವಳಿಯಲ್ಲಿ ಬ್ರಾಹ್ಮಣರಿಗಾಗಿ ಗ್ರಾಮಗಳನ್ನು ಸ್ಥಾಪಿಸಿದನು, ಅದರಲ್ಲಿ 32 ತುಳು ದೇಶದಲ್ಲಿಯೂ ಮತ್ತು ಉಳಿದವು ಕೇರಳದಲ್ಲಿಯೂ ಇದ್ದವು. ಅಯ್ಯಪುರಂ ಅಥವಾ ಅಹಿಚ್ಛತ್ರವು ಅವರ ಪೂರ್ವಜರ ಮನೆಯಾಗಿತ್ತು ಎಂದು ಅವರು ನಂಬುತ್ತಾರೆ.&nbsp;</p>



<p>ನಂಬೂದಿರಿ ಬ್ರಾಹ್ಮಣರು ಪರಶುರಾಮನ ನಂತರ ಮಯೂರವರ್ಮನ್&nbsp; ತಮಗೆ ಆಶ್ರಯ ನೀಡಿದವನು ಎಂದು ಹೇಳುತ್ತಾರೆ. ಕೇರಳದಲ್ಲಿ ಕದಂಬರು ಬ್ರಾಹ್ಮಣರನ್ನು ನೆಲೆಗೊಳಿಸಿದ್ದಕ್ಕೆ ಪೂರಕವಾದ ಮಾಹಿತಿಯನ್ನು ಐದನೇ ಶತಮಾನದ ಕದಂಬ ದೊರೆ ರವಿಮರ್ಮನ ನಿಲಂಬೂರಿನ ತಾಮ್ರಶಾಸನ ನೀಡುತ್ತದೆ.</p>


<div class="wp-block-image">
<figure class="aligncenter size-full is-resized"><img decoding="async" width="715" height="494" src="https://peepalmedia.com/wp-content/uploads/2024/09/WhatsApp-Image-2024-09-02-at-3.16.21-PM.jpeg" alt="" class="wp-image-44802" style="width:599px;height:auto" srcset="https://peepalmedia.com/wp-content/uploads/2024/09/WhatsApp-Image-2024-09-02-at-3.16.21-PM.jpeg 715w, https://peepalmedia.com/wp-content/uploads/2024/09/WhatsApp-Image-2024-09-02-at-3.16.21-PM-300x207.jpeg 300w, https://peepalmedia.com/wp-content/uploads/2024/09/WhatsApp-Image-2024-09-02-at-3.16.21-PM-150x104.jpeg 150w, https://peepalmedia.com/wp-content/uploads/2024/09/WhatsApp-Image-2024-09-02-at-3.16.21-PM-218x150.jpeg 218w, https://peepalmedia.com/wp-content/uploads/2024/09/WhatsApp-Image-2024-09-02-at-3.16.21-PM-696x481.jpeg 696w" sizes="(max-width: 715px) 100vw, 715px" /></figure></div>


<p>ಹೀಗಿರುವಾಗ ಪುತ್ತಿಗೆ ಸ್ವಾಮಿಗಳು ಮಾತ್ರವಲ್ಲ, ಹಿಂದುತ್ವ ಕಟ್ಟುವ ಸುಳ್ಳು ಚರಿತ್ರೆಗಳು ಯಾವ ಸಂಸ್ಕೃತವನ್ನು ಎಲ್ಲಾ ಭಾಷೆಗಳ ತಾಯಿ ಎಂದು ಹೇಳುತ್ತಿವೆ? ತುಳುವಿನ ಮದಿಮೆ, ಹೆಣ್ಣು, ಗಂಡು, ಅಣ್ಣ, ಅಕ್ಕ ಮೊದಲಾದ ಪದಗಳ ಸಂಸ್ಕೃತ ಮೂಲ ಏನು? ಎಲ್ಲಾ ಭಾಷೆಗಳೂ ಬೇರೆ ಭಾಷೆಗಳಿಂದ ಪದಗಳನ್ನು ಎರವಲು ಪಡೆದು ಬೆಳೆಯುತ್ತವೆ. ಇಡೀ ಜಗತ್ತೇ ಬಳಸುವ ರಿಕ್ಷಾ ಎಂಬ ಪದ ಜಪಾನಿ ಭಾಷೆಯ ಜಿನ್‌ರಿಕಿಶಾ (Jinrikisha) ಎಂಬ ಪದದಿಂದ ಬಂದಿದೆ. ಜಿನ್‌ ಅಂದ್ರೆ ಮನುಷ್ಯ, ರಿಕಿ ಅಂದ್ರೆ ಶಕ್ತಿ, ಶಾ ಅಂದ್ರೆ ಗಾಡಿ.</p>



<p>ಮಲಯಾಳಂ, ತುಳು, ಕನ್ನಡ ಭಾಷೆಗಳ ಅಡಕೆ, ಅರಕ್ಕವನ್ನು ಇಂಗ್ಲೀಷ್‌ ಅರೇಕಾ ಮಾಡಿಕೊಂಡಿದೆ. ತಮಿಳು, ಮಲಯಾಳಂನ ವೆತ್ತಲೈ, ವೆತ್ತಲೆ ಎಂಬ ವೀಳ್ಯದೆಲೆಯನ್ನು ಇಂಗ್ಲೀಷರು ಮತ್ತು ಪೋರ್ಜುಗೀಸರು ಬೀಟೆಲ್‌ ಎಂದು ಬಳಸಿದರು. ತಮಿಳಿನಿ ಅರ್ಸಿ, ತುಳುವಿನ ಅರಿ ಇಂಗ್ಲೀಷಿನ ರೈಸ್‌ ಆಗಿದೆ. ನಾವು ಬಳಸುವ ತಾಂಬೂಲ ಎಂಬ ಪದವೇ ಫರ್ಷಿಯನ್‌ ಪದ. ಈ ರೀತಿ ಸಂಸ್ಕೃತವನ್ನು ಎಲ್ಲಾ ಭಾಷೆಗಳ ತಾಯಿ. ಎಲ್ಲಾ ಭಾಷೆಗಳೂ ಅದರಿಂದಲೇ ಹುಟ್ಟಿದ್ದು ಎನ್ನುವುದು ಅಪ್ಪಟ ಸುಳ್ಳು. ಅದು ಸಂಸ್ಕೃತಕ್ಕೆ ಮಾಡಿದ ಅವಮಾನ.</p>



<p></p>



<p><strong>ಚರಣ್‌ ಐವರ್ನಾಡು,</strong> ಬೆಂಗಳೂರು</p>
]]></content:encoded>
					
		
		
			</item>
		<item>
		<title>300 ರಾಮಾಯಣಗಳ ವಿರುದ್ಧ ನಿಂತ ಎಬಿವಿಪಿ!</title>
		<link>https://peepalmedia.com/abvp-protested-against-300-ramayanas/</link>
		
		<dc:creator><![CDATA[Charan Aivarnad]]></dc:creator>
		<pubDate>Fri, 19 Jan 2024 12:34:05 +0000</pubDate>
				<category><![CDATA[ಅಂಕಣ]]></category>
		<category><![CDATA[ABVP]]></category>
		<category><![CDATA[ak ramanujan]]></category>
		<category><![CDATA[ayodhya]]></category>
		<category><![CDATA[Bangalore]]></category>
		<category><![CDATA[bjp]]></category>
		<category><![CDATA[breaking news]]></category>
		<category><![CDATA[charan Aivarnad]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[modi]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[ram]]></category>
		<category><![CDATA[Ram Mandira]]></category>
		<category><![CDATA[rama]]></category>
		<category><![CDATA[ramayana]]></category>
		<category><![CDATA[state politics]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=35181</guid>

					<description><![CDATA[ಎಷ್ಟು&#160; ರಾಮಾಯಣಗಳಿವೆ ? ಮುನ್ನೂರು? ಮೂರು ಸಾವಿರ? ಕೆಲವು ರಾಮಾಯಣಗಳ ಕೊನೆಯಲ್ಲಿ, ಕೆಲವೊಮ್ಮೆ ಪ್ರಶ್ನೆಯೊಂದನ್ನು ಕೇಳಲಾಗುತ್ತದೆ: ಎಷ್ಟು &#160;ರಾಮಾಯಣಗಳಿವೆ ? ಈ ಪ್ರಶ್ನೆಗೆ ಉತ್ತರಿಸುತ್ತಾ ಕೆಲವು ರಾಮಯಣಗಳು, ಇಲ್ಲೊಂದಿದೆ..ಎನ್ನುತ್ತವೆ! ಹೀಗೆ ಭಾರತದ ಹೆಸರಾಂತ ಕವಿ ಮತ್ತು ವಿದ್ವಾಂಸ ಎ ಕೆ ರಾಮಾನುಜನ್ ಅವರ ‘ಮುನ್ನೂರು ರಾಮಾಯಣಗಳು’ ಎಂಬ ಪ್ರಬಂಧ ಆರಂಭವಾಗುತ್ತದೆ. 1987ರಲ್ಲಿ ಪಿಟ್ಸ್‍ಬರ್ಗ್ ವಿವಿಯಲ್ಲಿ ಮಂಡಿಸಲಾದ ಈ ಪ್ರಬಂಧವನ್ನು ದೆಹಲಿ ವಿವಿಯ ಇತಿಹಾಸ ಪಠ್ಯದಲ್ಲಿ ಸೇರಿಸಲಾಗಿತ್ತು. 2008ರಲ್ಲಿ ಈ ಪ್ರಬಂಧ ದೊಡ್ಡ ವಿವಾದವನ್ನು ಸೃಷ್ಟಿಸಿತ್ತಲ್ಲದೆ ಹಿಂದೂ ಸಂಘಟನೆಗಳು, [&#8230;]]]></description>
										<content:encoded><![CDATA[
<p>ಎಷ್ಟು&nbsp; <em>ರಾಮಾಯಣಗಳಿವೆ</em> ? ಮುನ್ನೂರು? ಮೂರು ಸಾವಿರ? <em>ಕೆಲವು ರಾಮಾಯಣಗಳ</em> ಕೊನೆಯಲ್ಲಿ, ಕೆಲವೊಮ್ಮೆ ಪ್ರಶ್ನೆಯೊಂದನ್ನು ಕೇಳಲಾಗುತ್ತದೆ: ಎಷ್ಟು <em>&nbsp;ರಾಮಾಯಣಗಳಿವೆ </em>? ಈ ಪ್ರಶ್ನೆಗೆ ಉತ್ತರಿಸುತ್ತಾ ಕೆಲವು ರಾಮಯಣಗಳು, ಇಲ್ಲೊಂದಿದೆ..ಎನ್ನುತ್ತವೆ!</p>



<p>ಹೀಗೆ ಭಾರತದ ಹೆಸರಾಂತ ಕವಿ ಮತ್ತು ವಿದ್ವಾಂಸ ಎ ಕೆ ರಾಮಾನುಜನ್ ಅವರ ‘ಮುನ್ನೂರು ರಾಮಾಯಣಗಳು’ ಎಂಬ ಪ್ರಬಂಧ ಆರಂಭವಾಗುತ್ತದೆ. 1987ರಲ್ಲಿ ಪಿಟ್ಸ್‍ಬರ್ಗ್ ವಿವಿಯಲ್ಲಿ ಮಂಡಿಸಲಾದ ಈ ಪ್ರಬಂಧವನ್ನು ದೆಹಲಿ ವಿವಿಯ ಇತಿಹಾಸ ಪಠ್ಯದಲ್ಲಿ ಸೇರಿಸಲಾಗಿತ್ತು. 2008ರಲ್ಲಿ ಈ ಪ್ರಬಂಧ ದೊಡ್ಡ ವಿವಾದವನ್ನು ಸೃಷ್ಟಿಸಿತ್ತಲ್ಲದೆ ಹಿಂದೂ ಸಂಘಟನೆಗಳು, ಬಿಜೆಪಿ, ಎಬಿವಿಪಿ ಬೃಹತ್ ಪ್ರತಿಭಟನೆ ನಡೆಸಿದವು.</p>



<p>ಎಬಿವಿಪಿಯ ಪುಂಡರು ವಿಶ್ವವಿದ್ಯಾನಿಲಯದ ಹಿಸ್ಟರಿ ಡಿಪಾರ್ಟ್‌ಮೆಂಟ್‌ಗೆ ನುಗ್ಗಿ, ದಾಂಧಲೆ ಎಬ್ಬಿಸಿದರು. ತರಗತಿಗಳ ಬಾಗಿಲು ಕಿಟಕಿ ಒಡೆದರು!</p>



<p>ನೂರಾರು ರಾಮಾಯಣಗಳು ಸುಮಾರು 2,500 ವರ್ಷಗಳಿಗೂ ಹೆಚ್ಚು ಕಾಲದಿಂದ ಹೇಗೆ ಭಾರತ ಹಾಗೂ ಏಷ್ಯಾದಾದ್ಯಂತ ಹರಡಿರುವ ಇತಿಹಾಸವನ್ನು ಈ ಪ್ರಬಂಧ ಸರಳ ಸುಂದರವಾಗಿ ವಿವರಿಸುತ್ತದೆ. ರಾಮನ ಒಂದೇ ಕಥೆ ಬೇರೆ ಬೇರೆ ಭಾಷೆಗಳು, ಸಮಾಜಗಳು, ಪ್ರಾದೇಶಿಕತೆ, ಧರ್ಮಗಳು ಮತ್ತು ವಿವಿಧ ಚಾರಿತ್ರಿಕ ಘಟ್ಟಗಳಲ್ಲಿ ಪ್ರಸಾರವಾಗುತ್ತಿರುವಾಗ ಹಲವಾರು ಬದಲಾವಣೆಗಳಿಗೆ ಒಳಗಾಗಿದೆ ಎಂಬುದನ್ನು ಇದು ವಿದ್ವತ್ಪೂರ್ಣವಾಗಿ ಇದು ಹೇಳುತ್ತದೆ.&nbsp;</p>



<p>ಮುಖ್ಯವಾಗಿ ಈ ಪ್ರಬಂಧದಲ್ಲಿ ರಾಮಾಯಣದ ಐದು ಪಠ್ಯಗಳನ್ನು ಪರಿಗಣಿಸಲಾಗಿದೆ: ವಾಲ್ಮೀಕಿ ರಾಮಾಯಣ, ತಮಿಳಿನ ಕಂಬನ್ ರಾಮಾಯಣ, ಜೈನ ರಾಮಾಯಣ ಪಠ್ಯಗಳು, ಥಾಯ್ಲಾಂಡಿನ ಥಾಯ್ ರಾಮಕಿಯನ್ ಮತ್ತು ದಕ್ಷಿಣ ಭಾರತೀಯ ಜಾನಪದ ರಾಮಾಯಣದ ಪಠ್ಯಗಳು.</p>



<p>ಇವುಗಳನ್ನು ಪ್ರಬಂಧದಲ್ಲಿ ತರುವಾಗ ರಾಮಾನುಜನ್‌ ʼವರ್ಷನ್ಸ್‌ʼ ಮತ್ತು ʼವೇರಿಯೆಂಟ್ಸ್‌ʼ ಎಂಬ ಪದಗಳ ಬದಲಾಗಿ ʼಟೆಲ್ಲಿಂಗ್ಸ್‌ʼ ಎಂಬ ಪದವನ್ನು ಬಳಸುತ್ತಾರೆ. ಯಾಕೆರಂದರೆ ಈ ಕಥೆ ಒಂದು ವರ್ಷನ್ (ಆವೃತ್ತಿ) ಎಂದು ಹೇಳಬೇಕಾದರೆ, ಮೂಲದಲ್ಲಿ ಒಂದು ಕಥೆ ಇರಲೇ ಬೇಕು. ಇದು ಆ ಮೂಲಕಥೆಯ ಇನ್ನೊಂದು ವರ್ಷನ್ ಎಂದು ಹೇಳುವುದು ಮೂಲ ಪಠ್ಯದ ಅಸ್ತಿತ್ವವನ್ನು ಸೂಚಿಸುತ್ತದೆ. ಆದರೆ, ಇಡೀ ಪ್ರಬಂಧದಲ್ಲಿ ರಾಮಾನುಜನ್‌ ಅವರ ಮುಖ್ಯ ಅವಲೋಕನವೆಂದರೆ ಅಂತಹ ಒಂದು ಮೂಲ ರಾಮಾಯಣ ಎಂಬುದೇ ಇಲ್ಲ ಎಂಬುದು. ವಾಲ್ಮೀಕಿ ರಾಮಾಯಣ ಕಥೆʼ ಎಂತಹ ಅನೇಕ ರಾಮಾಯಣಗಳ ಕಥೆಗಳಲ್ಲಿ ಒಂದು. ಅದರ ಅರ್ಥ, ವಾಲ್ಮೀಕಿ ರಾಮಾಯಣ ಬರೆಯುವುದಕ್ಕೆ ಮೊದಲೇ ಈ ಕಥೆ ಜನಪದದಲ್ಲಿ ಇದ್ದಿರಬೇಕು.&nbsp;</p>



<p>ಹೀಗಾಗಿ, ರಾಮಾಯಣವಿರಲಿ…ಮಹಾಭಾರತವಿರಲಿ, ಕವಿಗಳಿಗೆ ತಮಗಿಂತ ಹಿಂದೆಯೇ ಕಥೆಯನ್ನು ಅನೇಕರು ಹೇಳಿದ್ದಾರೆ ಎಂಬ ಅರಿವು ಇತ್ತು. ಕನ್ನಡದ ಕವಿ ಕುಮಾರವ್ಯಾಸ ತನ್ನ ʼಕರ್ಣಾಟ ಭಾರತ ಕಥಾಮಂಜರಿʼಯಲ್ಲಿ “ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ; ತಿಂತಿಣಿಯ ರಘುವರಚರಿತೆಯಲಿ ಕಾಲಿಡಲು ತೆರಪಿಲ್ಲ,” ಎನ್ನುತ್ತಾನೆ. ಕವಿ ಕುಮಾರವ್ಯಾಸ ಪೀಠಿಕಾ ಸಂಧಿಯಲ್ಲೇ ಇದನ್ನು ಹೇಳಿ ತನ್ನ ಕಾವ್ಯ ರಚನೆಗೆ ತೊಡಗುತ್ತಾನೆ. ಎಷ್ಟು ರಾಮಾಯಣಗಳಿವೆ ಎಂದರೆ, ಅದರ ಭಾರಕ್ಕೆ ಭೂಮಿಯನ್ನೇ ತಲೆಯ ಮೇಲೆ ಹೊತ್ತಿರುವ ಆದಿಶೇಷ ರಾಮಾಯಣದ ಕವಿಗಳನ್ನು ಹೊರಲಾರದೆ ತಿಣುಕಿದ್ದಾನೆ, ರಘುಚರಿತೆಯ ರಾಶಿಯಲ್ಲಿ ಕಾಲಿಡಲು ಜಾಗವಿಲ್ಲ ಎಂದು ವರ್ಣಿಸಿದ್ದಾನೆ.</p>



<p>ಕವಿಗೆ ಇರುವ ಅರಿವು ಭಾರತದಾದ್ಯಂತ ಬಹುತೇಕ ಕವಿಗಳಿಗೆ, ಜಾನಪದರಿಗೆ ಇತ್ತು. ಹಾಗಾಗಿ, ಎ ಕೆ ರಾಮಾನುಜನ್‌ ಅವರ ಪ್ರಬಂಧ ಆರಂಭವಾಗುವುದೇ ʼಎಷ್ಟು ರಾಮಾಯಣಗಳಿವೆ, ಇಕೋ ಇಲ್ಲೊಂದಿದೆ..ʼ ಎಂಬ ಹೇಳಿಕೆಯಿಂದ</p>



<p>ಎ ಕೆ ರಾಮಾನುಜನ್‌ ನಮಗೆ ಕೊಡುವ ಮಹತ್ವದ ಅರಿವು ಏನೆಂದರೆ ಭಾರತದ ಬಹುತೇಕ ಎಲ್ಲಾ ಭಾಷೆಗಳು, ಸಮುದಾಯಗಳು ರಾಮಾಯಣವನ್ನು ತಮಗೆ ಬೇಕಾದಂತೆ ಬರೆದುಕೊಂಡಿವೆ ಎಂಬುದು. ಇದು ನಮ್ಮ ಅರಿವಿನಲ್ಲಿದ್ದರೆ ಸಹಜವಾಗಿಯೇ ಎಬಿವಿಪಿ ಈ ಪ್ರಬಂಧದ ವಿರುದ್ಧ ನಡೆಸಿದ ಪ್ರತಿಭಟನೆಯ ಹಿಂದಿರುವ ಅವರ ಉದ್ದೇಶ ನಮಗೆ ಗೊತ್ತಾಗುತ್ತದೆ. ಭಾರತ ರಾಮನ ಕಥೆಯನ್ನು ಹೇಳುವ ಬಗೆಯೇ ಬಿಜೆಪಿ ಹಾಗೂ ಸಂಘ ಪರಿವಾರ ರಾಮನನ್ನು ರಾಜಕಾರಣಕ್ಕೆ ಬಳಸುವ ಕುತಂತ್ರಕ್ಕೆ ವಿರೋಧವಾಗಿ ನಿಲ್ಲುತ್ತದೆ.&nbsp;</p>



<div data-wp-interactive="core/file" class="wp-block-file">&lt;object class=&quot;wp-block-file__embed&quot; data=&quot;https://peepalmedia.com/wp-content/uploads/2024/01/three-hundred-Ramayanas-A-K-Ramanujan-1.pdf&quot; type=&quot;application/pdf&quot; style=&quot;width:100%;height:600px&quot; aria-label=&quot;&lt;strong&gt;ಮುನ್ನೂರು ರಾಮಾಯಣಗಳು &#8211; ಎ ಕೆ ರಾಮಾನುಜನ್</strong></object><a id="wp-block-file--media-81f31f28-8478-4e67-b4ae-e9bc98387a74" href="https://peepalmedia.com/wp-content/uploads/2024/01/three-hundred-Ramayanas-A-K-Ramanujan-1.pdf"><strong>ಮುನ್ನೂರು ರಾಮಾಯಣಗಳು &#8211; ಎ ಕೆ ರಾಮಾನುಜನ್</strong></a><a href="https://peepalmedia.com/wp-content/uploads/2024/01/three-hundred-Ramayanas-A-K-Ramanujan-1.pdf" class="wp-block-file__button wp-element-button" download aria-describedby="wp-block-file--media-81f31f28-8478-4e67-b4ae-e9bc98387a74">Download</a></div>



<p>ಇದು ಕೇವಲ ರಾಮಾಯಣಕ್ಕೆ ಮಾತ್ರವಲ್ಲ, ಮಹಾಭಾರತದ ಸಂದರ್ಭದಲ್ಲೂ ಇದೇ.</p>



<p>&nbsp;“ವಾಲ್ಮೀಕಿ, ವ್ಯಾಸರು ರಾಮಾಯಣ , ಮಹಾಭಾರತಗಳ ಮೊಟ್ಟ ಮೊದಲ&nbsp; ಸೃಷ್ಟಿಕರ್ತರಲ್ಲ. ಅವರಿಗಿಂತಲೂ ಪೂರ್ವದಲ್ಲಿ ಈ ಕತೆಗಳು ಜನತೆಯಲ್ಲಿ ಇದ್ದುವು, ಅವರ ತರುವಾಯವೂ ಇದ್ದುವು, ಇವತ್ತಿಗೂ ಇವೆ.ವಾಲ್ಮೀಕಿ ವ್ಯಾಸರು ತಮ್ಮ ಕಾವ್ಯಗಳನ್ನು ರಚಿಸಿದ ಮಾತ್ರಕ್ಕೆ ಇವರಿಗೂ ಪ್ರೇರಕವಾದ,ವಸ್ತುಗಳನ್ನು ಒದಗಿಸಿದ ಜನಪದ ಕಥಾವಾಹಿನಿ ನಿಂತುಹೋಗಿಲ್ಲ.ಸತತವಾಗಿ ಹರಿದಿದೆ. ಆದ್ದರಿ೦ದ ಸಾಮಾನ್ಯ ಜನತೆಗೆ ತಿಳಿದಿರುವುದು ಅಥವಾ ಪ್ರಭಾವ ಬೀರಿರುವುದು ವಾಲ್ಮೀಕಿ,ವ್ಯಾಸರುಗಳ ರಾಮಾಯಣ, ಮಹಾಭಾರತ ಕಥೆಗಳಾಗಿರದೆ,ಅವರಿಗೂ ಮೂಲವಾಗಿ ಇದ್ದ ಇವತ್ತಿಗೂ ಇದ್ದು ಬಂದಿರುವ ಜನಪದ ರಾಮಾಯಣ, ಮಹಾಭಾರತಗಳೆಂಬುದು ಅತ್ಯಂತ ಸ್ಪಷ್ಟವಿರುವ ವಿಷಯ”(ರಾ ಗೌ;ಸಂ.ಜನಪದ ರಾಮಾಯಣ;1973:ix)&nbsp;</p>



<p>ರಾಮಾಯಣ, ಮಹಾಭಾರತಗಳು ಒಂದು ಸ್ಥಳದಿಂದ ಅನಾಮಿಕ ಕರ್ತೃವಿನಿಂದ ಹುಟ್ಟಿ ಕ್ರಮೇಣ ಇತರ ಸಮುದಾಯಗಳಿಂದಲೂ ಸ್ವೀಕರಿಸಲ್ಪಟ್ಟು ಮೌಖಿಕ ಪರಂಪರೆಗಳಾಗಿ ಸಾಗಿ ಬಂದಿವೆ.ಈ ಪ್ರವಾಹದಲ್ಲಿ ಭಿನ್ನ ಕಥನಗಳು,ಹೊಸ ಅಂಶಗಳು ಸೇರ್ಪಡೆಯಾಗಿ ಅನನ್ಯತೆಯನ್ನು ಮೆರೆದಿವೆ.ಜಾನಪದ ವಸ್ತುಗಳಿಂದ ಪ್ರೇರಿತರಾಗಿ ವಾಲ್ಮೀಕಿ ವ್ಯಾಸಾದಿಗಳು ರಚಿಸಿದ ಕಾವ್ಯಗಳು ಜನಪ್ರಿಯತೆಯನ್ನು ಪಡೆದವು. ಕನ್ನಡದಲ್ಲೂ ಪೊನ್ನನ ‘ ಭುವನೈಕ್ಯ ರಾಮಾಭ್ಯುದಯ'(ಕ್ರಿ.ಶ.ಸು 950), ನಾಗಚಂದ್ರನ ‘ರಾಮಚಂದ್ರ ಚರಿತ ಪುರಾಣ'(ಕ್ರಿ.ಶ.ಸು1100), ಕುಮುದೇಂದುವಿನ ರಾಮಾಯಣ(ಕ್ರಿ.ಶ.ಸು1270), ನಾಗರಾಜನ ‘ಪುಣ್ಯಾಸ್ರವ’ ಗಳಂತ ಜೈನರಾಮಾಯಣಗಳು ಬಂದವು. ಹದಿನಾಲ್ಕನೆ ಶತಮಾನದ ಬಳಿಕ ವೈದಿಕ ಕವಿಗಳು ವಾಲ್ಮೀಕಿ ರಾಮಾಯಣದಿಂದ ಪ್ರೇರಿತರಾಗಿ ಜೈನ ರಾಮಾಯಣಗಳಿಗಿಂತ ಭಿನ್ನವಾದ ಕಾವ್ಯಗಳನ್ನು ರಚಿಸಿದರು. ಕುಮಾರ ವಾಲ್ಮೀಕಿಯ ‘ತೊರವೆ ರಾಮಾಮಣ’ (ಕ್ರಿ.ಶ.1500), ಚಾಮರಾಜ ‘ರಾಮಾಯಣ'(ಕ್ರಿ.ಶ.1630),ಮಲ್ಲರಸನ ‘ ದಶಾವತಾರ ಚರಿತೆ'(ಕ್ರಿ.ಶ.1680) ಮುಂತಾದವುಗಳಿಂದ ಹಿಡಿದು ಕುವೆಂಪು, ಮೋಯ್ಲಿಗಳ ವರೆಗೆ ರಚಿತವಾಗಿರುವ ರಾಮಾಯಣಗಳಿಂದ ʼತಿಂತಿಣಿಯ ರಘುವರಚರಿತೆಯಲಿ ಕಾಲಿಡಲು ತೆರಪಿಲ್ಲ.&#8217;</p>



<p>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : <a href="https://chat.whatsapp.com/Lec6jB78EHu04TNvY80Tu6" data-type="link" data-id="https://chat.whatsapp.com/Lec6jB78EHu04TNvY80Tu6"><strong>ಪೀಪಲ್‌ ಮೀಡಿಯಾ</strong></a></p>



<p>ಅಂತೆಯೇ ಮಹಾಭಾರತವೂ ಅನೇಕ ಜೈನ ಕವಿಗಳಿಂದ, ವೈದಿಕ ಕವಿಗಳಿಂದ ಪುನರ್ರಚನೆಗೊಂಡಿದೆ. ಪಂಪನ&nbsp; ‘ವಿಕ್ರಮಾರ್ಜುನ ವಿಜಯ’, ರನ್ನನ ‘ಗದಾಯುದ್ಧ’ ಕುಮಾರವ್ಯಾಸನ ‘ ಕರ್ನಾಟ ಭಾರತ ಕಥಾಮಂಜರಿ’ ಇತ್ಯಾದಿಗಳು. ಕ್ರಮೇಣ 16-17 ಶತಮಾನದಲ್ಲಿ ಶ್ರೋತೃಗಳನ್ನು ಕೇಂದ್ರೀಕರಿಸಿಕೊಂಡು ಕುಂಬಳೆಯ ಪಾರ್ತಿಸುಬ್ಬನಂತಹ ಅನೇಕ ಯಕ್ಷಗಾನ ಕವಿಗಳು ಪ್ರಸಂಗಗಳನ್ನು ಕಾವ್ಯಗಳ ಮೇಲೆ ಬರೆದಿದ್ದಾರೆ. ಕರಾವಳಿಯ ಜನರಿಗೆ ಮಹಾಕಾವ್ಯಗಳು, ಪುರಾಣಗಳು ಯಕ್ಷಗಾನದ ಮೂಲಕ ಚಿರ ಪರಿಚಿತವಾಗಿವೆ.&nbsp;&nbsp;&nbsp;</p>



<p>&nbsp;ತುಳುವಿನಲ್ಲಿ ಅರುಣಾಬ್ಜ ಕವಿ ವಿರಜಿತ ‘ಮಹಾಭಾರತೊ’ (ಕ್ರಿ.ಶ.1657) ಇದೆ,’ ಮಂದಾರ ರಾಮಾಯಣ’ ಇದೆ.ಆದರೆ ಇವೆಲ್ಲ ಶಿಷ್ಟ ಕಾವ್ಯಗಳಿಗೆ ನಿಷ್ಠವಾಗಿದ್ದು ಜಾನಪದ ಕಾವ್ಯಗಳಿಗೆ ಭಿನ್ನತೆಗಳವೆ.</p>



<p>ಬ್ರಿಟೀಷ್‌ ಆಡಳಿತದಲ್ಲಿ 1866 ರಲ್ಲಿ ಬಾಂಬೆ ಸರ್ಕಾರ ಭಾರತದಲ್ಲಿ ಲಭ್ಯವಿರುವ ಹಸ್ತಪ್ರತಿಗಳನ್ನು ಸಂಗ್ರಹಿಸುವ ಯೋಜನೆಯನ್ನು ಕೈಗೆತ್ತಿಕೊಂಡಿತು. ಜಾರ್ಜ್ ಬುಹ್ಲರ್, ಎಫ್ ಕೀಲ್ಹಾರ್ನ್, ಪೀಟರ್ ಪೀಟರ್ಸನ್, ರಾಮಕೃಷ್ಣ ಗೋಪಾಲ್ ಭಂಡಾರ್ಕರ್, ಎಸ್ ಆರ್ ಭಂಡಾರ್ಕರ್, ಕಥಾವಟೆ ಮತ್ತು ಘಾಟೆ ಮುಂತಾದ ಪ್ರಸಿದ್ಧ ವಿದ್ವಾಂಸರು ಈ ಯೋಜನೆಯಡಿಯಲ್ಲಿ 17,000 ಕ್ಕೂ ಹೆಚ್ಚು ಪ್ರಮುಖ ಹಸ್ತಪ್ರತಿಗಳನ್ನು ಸಂಗ್ರಹಿಸಿದರು. 1917ರಲ್ಲಿ ಭಂಡಾರ್ಕರ್ ಓರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ (BORI) ಸ್ಥಾಪನೆಯಾದ ನಂತರ ಬಾಂಬೆ ಪ್ರೆಸಿಡೆನ್ಸಿಯ ಆಗಿನ ಗವರ್ನರ್ ಮತ್ತು BORI ನ ಮೊದಲ ಅಧ್ಯಕ್ಷರಾದ ಲಾರ್ಡ್ ವಿಲಿಂಗ್ಡನ್ ಅವರು 1 ಏಪ್ರಿಲ್ 1918 ರಂದು ಈ ಎಲ್ಲಾ ಹಸ್ತಪ್ರತಿಗಳನ್ನು BORI ಗೆ ಸ್ಥಳಾಂತರಿಸಿದರು.</p>



<p>ಇದರ ಭಾಗವಾಗಿಯೇ, ಪಿ ವಿ ಕಾಣೆ, ವಿ ಎಸ್ ಸೂಕ್ತಂಕರ್, ಎಸ್ ಕೆ ಬೆಲ್ವಲ್ಕರ್, ಎಸ್ ಕೆ ಡೇ ಪ್ರೊ.ಡಾ. ಆರ್ ಎನ್.ದಾಂಡೇಕರ್ ಮುಂತಾದ ವಿದ್ವಾಂಸರು ಸುಮಾರು ಐದು ವರ್ಷಗಳ ಕಾಲ 1,259 ಹಸ್ತಪ್ರತಿಗಳನ್ನು ಅವಲೋಕಿಸಿ ಮಹಾಭಾರತದ ಒಂದು ವಿಮರ್ಶಾತ್ಮಕ ಆವೃತ್ತಿಯನ್ನು ಹೊರಗೆ ತಂದರು. ಸೆಪ್ಟೆಂಬರ್ 22, 1966 ರಂದು ಭಾರತದ ಅಂದಿನ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅದನ್ನು ಬಿಡುಗಡೆ ಮಾಡಿದರು. 18 ಪರ್ವಗಳು; 89000+ ಪದ್ಯಗಳು, 15000+ ಪುಟಗಳ 19 ಸಂಪುಟಗಳನ್ನು ಇದು ಹೊಂದಿದೆ.&nbsp;</p>



<p>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : <a href="https://chat.whatsapp.com/Lec6jB78EHu04TNvY80Tu6" data-type="link" data-id="https://chat.whatsapp.com/Lec6jB78EHu04TNvY80Tu6"><strong>ಪೀಪಲ್‌ ಮೀಡಿಯಾ</strong></a></p>



<p>ಇದರಲ್ಲಿ ಸೂಕ್ತಂಕರ್ ಹೇಳುತ್ತಾರೆ- “ವ್ಯಾಸರು ರಚಿಸಿದ ಪಠ್ಯ ಹೇಗಿದ್ದಿರಬಹುದೆಂದು ಸಾಧಿಸುವುದು ಅಸಾಧ್ಯ.ಈಗ ನಾವು ಸಿದ್ಧಪಡಿಸಿದ್ದು ಮಹಾಭಾರತದ ಇನ್ನೊಂದು ಪಠ್ಯ” ಈ ಮಾತು ಗಮನಾರ್ಹವಾದುದು.</p>



<p>ಸಂಶೋಧಕ ರಾಗೌ ಹಾಗೂ ಇತರರು ಸಂಪಾದಿಸಿದ ‘ಜನಪದ ರಾಮಾಯಣ’ದಲ್ಲಿ ತಂಬೂರಿಯವರ ರಾಮಾಯಣವು ರಾವಣ ಹಾಗೂ ಸೀತೆಯರ ತಂದೆ-ಮಗಳ ಸಂಬಂಧದ ಕಥೆಯಿದೆ. “ಇದು ಸೀತೆಯ ಜೀವನ ದುರಂತತೆಯನ್ನು ಧ್ವನಿಸುವುದು ಮಾತ್ರವಲ್ಲ, ಇಡೀ ರಾಮಾಯಣ ಕಥಾ ಕಟ್ಟಡವನ್ನೇ ತನ್ನಲ್ಲಿ ನಿಲ್ಲಿಸಿಕೊಂಡಿರುವಂತಿದೆ. ಇಲ್ಲಿ ಶಿವನಿಂದ ರಾವಣ ಮಾವಿನಹಣ್ಣೊಂದನ್ನು ಪಡೆದು, ಅದನ್ನು ತಿಂದು ವಾಟೆಯನ್ನು ಹೆಂಡತಿಗೆ ನೀಡುತ್ತಾನೆ. ಆಗ ಅವನೇ ಗರ್ಭ ಧರಿಸಿ ಸೀತೆಯನ್ನು ಹೆರುತ್ತಾನೆ. ವಾಲ್ಮೀಕಿಯ ರಾಮಾಯಣದಲ್ಲಿ ದಶರಥ ಹಣ್ಣಿನಿಂದ ಮಕ್ಕಳನ್ನು ಪಡೆಯುವುದನ್ನು ನೋಡಬಹುದು.</p>



<p>&nbsp;ಇವರದೇ ಸಂಪಾದನೆಯ ‘ಹೊನ್ನಾಜಮ್ಮನ ರಾಮಾಯಣ’ದಲ್ಲಿ ಸೀತೆ ಕಮಲದ ರೂಪದಲ್ಲಿರುವುದು, ತಾವರೆಯನ್ನು ಆಘ್ರಾಣಿಸಿದ ರಾವಣನ ಮೂಗಿನ ಹೊಳ್ಳೆಗಳ ಒಳಗೆ ಸೇರಿಕೊಳ್ಳುವುದು, ಸೀನಿದಾಗ ಮೂಗಿನಿಂದ ಸೀತೆ ಹುಟ್ಟುವುದು- ಇಲ್ಲಿ ಸೀತೆಯ ಜನನ ಅಸಹಜ ಹಾಗೂ ಅಮಂಗಳಕರ. ತಂಬೂರಿಯವರ ರಾಮಾಯಣದಂತೆ ಇಲ್ಲೂ ರಾವಣನಿಂದ ನೀರಿನಲ್ಲಿ ತೇಲಿ ಬಿಟ್ಟ ಸೀತೆ ಜನಕನಿಗೆ ಸಿಗುತ್ತಾಳೆ.</p>



<p>&nbsp;ಹೊನ್ನಾಜಮ್ಮನ ರಾಮಾಯಣದ ಸೀತೆಯ ಪಾವಿತ್ರ್ಯತೆಯ ಪರೀಕ್ಷೆಯೂ ವಿಶಿಷ್ಟ. ಇಲ್ಲಿ ರಾಮ ಇವಳಿಗೆ ಸರ್ಪವನ್ನು ಸಿಂಬಿಯಾಗಿಸಿಕೊಂಡು ಮರಳಿನ ಮಡಿಕೆಯಲ್ಲಿ ನೀರು ತರುವ ಹಾಗೂ ಮಲ್ಲಿಗೆ ಬಾಡದಂತೆ;ಉಟ್ಟ ಬಟ್ಟೆ ಹಾಳಾಗದಂತೆ, ಅರಶಿನ ಕುಂಕುಮ ಕೆಡದಂತೆ ಅಗ್ನಿ ಕೊಂಡದಲ್ಲಿ ನಿಂತುಕೊಳ್ಳುವ ಪರೀಕ್ಷೆಗಳನ್ನು ಒಡ್ಡುತ್ತಾನೆ.</p>



<p>ಹನುಮಂತನ ಬಗ್ಗೆ ಗಂಗಾ ಯಮುನಾ ಬಯಲಿನಲ್ಲಿ ಪ್ರಚಲಿತದಲ್ಲಿರುವ ಹಲವಾರು ಕತೆಗಳಲ್ಲಿ ಕೆಲವನ್ನು ಅಯೋವಾ ವಿ.ವಿ.ಯ ಪ್ರಾಧ್ಯಾಪಕರಾದ ಡಾ. ಫಿಲಿಪ್ ಲಟ್ಗೆಂಡಾರ್ಫ್ ಪ್ರಕಟಿಸುತ್ತಾರೆ.ಇದರಲ್ಲೊಂದು ಕತೆಯಲ್ಲಿ ಪಾತ್ರಗಳೇ ನಿರೂಪಕರಾಗುತ್ತಾ ತಮ್ಮದೇ ಪಾತ್ರಗಳಿಗೆ ಮುಖಾಮುಖಿಯಾಗುವ ಅದ್ಭುತ ಸನ್ನಿವೇಷವಿದೆ.ಇದರಲ್ಲಿ ಅಂಜನಾದೇವಿ ಬಾಲ ಆಂಜನೇಯನಿಗೆ ರಾತ್ರಿ ರಾಮನ ಕತೆಯನ್ನು ಹೇಳುತ್ತಾಳೆ. ಆಂಜನೇಯ-ರಾಮನ ಬೇಟಿಯ ಬಗ್ಗೆ ಹೇಳುವಾಗ ಬಾಲ ಆಂಜನೇಯ “ಈ ಆಂಜನೇಯ ಯಾರು?” ಎಂದು ಅಚ್ಚರಿಯಿ೦ದ ಕೇಳುತ್ತಾನೆ. ರಾವಣ-ಆಂಜನೇಯರ ಬೇಟಿಯ ಬಗ್ಗೆ ಹೇಳುವಾಗ ಆಂಜನೇಯ ರಾವಣನನ್ನು ಅಲ್ಲೇ ಕೊಲ್ಲದ್ದಕ್ಕೆ ಬಾಲಾಂಜನೇಯ ಆಕ್ರೋಶ ವ್ಯಕ್ತ ಪಡಿಸುತ್ತಾನೆ! ರಾಮಾಂಜನೇಯರ ಆಲಿಂಗನದ ಬಗ್ಗೆ ಹೇಳುವಾಗ ಆ ಆಂಜನೇಯ ತಾನಾಗಬಾರದಿತ್ತೇ ಎಂದು ಆಸೆ ಪಡುತ್ತಾನೆ. ರಾಮನನ್ನು ಈಗಲೇ ತೋರಿಸುವಂತೆ ಹಠ ಹಿಡಿದಾಗ ಅಂಜನಾದೇವಿ “ರಾಮ ಈಗಷ್ಟೇ ಅಯೋಧ್ಯೆಯಲ್ಲಿ ಹುಟ್ಟಿದ್ದಾನೆ. ಅವನದು ಇನ್ನೊಂದು ರಾಮಾಯಣ” ಎನ್ನುತ್ತಾಳೆ. ಆಂಜನೇಯ ತಕ್ಷಣ ಅಯೋಧ್ಯೆಗೆ ಹೊರಡಲನುವಾದಾಗ ತಾಯಿ ತಡೆದು “ಅಲ್ಲಿ ಮಾನವರು ವಾಸಿಸುತ್ತಾರೆ. ಕಪಿಗಳಿಗೆ ಅಲ್ಲಿ ಜಾಗವಿಲ್ಲ. ಕಾಲ ಕೂಡಿ ಬಂದಾಗ ಬೇಟಿಯಾಗು” ಎನ್ನುತ್ತಾಳೆ. ಈ ಕಥಾನಿರೂಪಣೆಯ ಶೈಲಿ ಅದ್ಭುತವಾದುದು.</p>



<p>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : <a href="https://chat.whatsapp.com/Lec6jB78EHu04TNvY80Tu6" data-type="link" data-id="https://chat.whatsapp.com/Lec6jB78EHu04TNvY80Tu6"><strong>ಪೀಪಲ್‌ ಮೀಡಿಯಾ</strong></a></p>



<p>&nbsp;ಹಿ.ಚಿ.ಬೋರಲಿಂಗಯ್ಯರವರು ಸಂಪಾದಿಸಿದ ‘ಗೊಂಡರ ರಾಮಾಯಣ’ ಬಹಳ ವಿಶಿಷ್ಟವಾದದು. ಕೋವಿ ಹಿಡಿದು ಬೇಟೆಗೆ ಹೊರಡುವ ದಶರಥನನ್ನು ಸಾಮಾನ್ಯ ಗೊಂಡನಂತೆ ಚಿತ್ರಿಸಲಾಗಿದೆ.ಕೆರೆಯಲ್ಲಿ ಆನೆಯೊಂದು ನೀರು ಕುಡಿಯುವಾಗ ಅದಕ್ಕೆ ಗುಂಡು ಹಾರಿಸುವ ದಶರಥ ” ನೀನು ನಿನ್ನ ಮಗನಿಂದಲೇ ಮರಣ ಹೊಂದು” ಎಂದು ಆನೆಯಿಂದ ಶಪಿಸಲ್ಪಡುತ್ತಾನೆ. ವಾಲ್ಮೀಕಿಯ ರಾಮಾಯಣದಲ್ಲಿ ಆನೆಯೆಂದು ಭಾವಿಸಿ ಶ್ರವಣ ಕುಮಾರನ ಹತ್ಯೆಯಾಗುತ್ತದೆ.</p>



<p>ಗೊಂಡರ ರಾಮಾಯಣದಲ್ಲಿ ಮಡಿವಾಳ ಮಾಜಯ್ಯ(?) ಹೀಯಾಳಿಸುವಾಗ ರಾಮ ತನ್ನ ಘನತೆಯನ್ನು ಕಾಯ್ದುಕೊಳ್ಳಲು ಸೀತೆಯನ್ನು ಕಾಡಿನಲ್ಲಿ ಕೊಂದು ಬರುವಂತೆ ಕಿರಾತಕರಲ್ಲಿ ಆಜ್ಞಾಪಿಸುತ್ತಾನೆ. ಕೊಲ್ಲುವಾಗ ಕಿರಾತಕರಿಗೆ ಕತ್ತಿಯ ಅರಗಿನಲ್ಲಿ ಮಗುವಿನ ಬಿಂಬ ಕಂಡು ಶಿಶುಹತ್ಯಾ ದೋಷಕ್ಕೆ ಹೆದರಿ ಕಾಡಲ್ಲಿ ಬಿಟ್ಟು ಬರುತ್ತಾರೆ.ಇಲ್ಲಿಯೂ ವಾಲ್ಮೀಕಿಯ ರಾಮಾಯಣದಂತೆ ಸೀತೆಗೆ ಅವಳಿ ಮಕ್ಕಳ ಜನನವಾಗುವುದಿಲ್ಲ. ಬದಲಾಗಿ ‘ಚಿತ್ರಪಟ ರಾಮಾಯಣ’ದಂತೆ ಕುಶನು ವಾಲ್ಮೀಕಿಯ ದರ್ಬೆಯಿಂದ ಜನಿಸುತ್ತಾನೆ.</p>



<p>ವಿಲಿಯಮ್ ಡಾಲ್ರಿಂಪಲ್ ನ&nbsp; &#8221;ನೈನ್ ಲೈವ್ಸ್&#8221;&nbsp; ನಲ್ಲಿ ರಾಜಸ್ಥಾನದ ನಾಲ್ಕು ಸಾವಿರ ಸಾಲುಗಳ ‘ಪಭುಜೀಯ’ ಮಾಖಿಕ ಕಾವ್ಯದ ಬಗ್ಗೆ&nbsp; ಬರವು ಇದೆ. ಕೇಂಬ್ರಿಡ್ಜ್ ನ ಸಂಶೋಧಕ ಜಾನ್ ಡಿ ಸ್ಮಿತ್ 1970 ರಲ್ಲಿ ಈ ವೀರ ಪಭುಜೀಯ ಕಾವ್ಯ ಹಾಗೂ ಅದನ್ನು ಹಾಡುವ ಭೋಪರ ಮೇಲೆ ಪಿ.ಎಚ್.ಡಿ ಮಾಡಿದ್ದಾರೆ. ಅಖಿಲ ಭಾರತ ಮಟ್ಟದ ರಾಮಾಯಣದಂತೆ ರಾಮ ತನ್ನ ಅಪಹೃತ ಪತ್ನಿಗಾಗಿ ಲಂಕೆಗೆ ಹೋಗುವುದಿಲ್ಲ,ಬದಲಾಗಿ ರಾವಣನ ಒಂಟೆಗಳನ್ನು ಕದಿಯಲು ಹೋಗುತ್ತಾನೆ. ರಾಜಸ್ಥಾನದ ಮರಳುಗಾಡಿಗೆ ಒಂಟೆಗಳನ್ನು ತಂದ ಪಭುಜೀಯನ್ನು ಅಲ್ಲಿಯ ಜನರು ಆರಾಧಿಸುತ್ತಾರೆ. ರೋಬರಿ ಜನಾಂಗದ ಭೋಪ ತನ್ನ ಸಂಗಡಿಗರೊಂದಿಗೆ ಕಾವ್ಯವನ್ನು ಹಾಡುತ್ತಾನೆ.ಜೊತೆಗೆ ‘ಪಾಡ್’ ಎಂಬ ಪವಿತ್ರವಾದ ಚಿತ್ರಪಟವನ್ನು ಕಥಾ ನಿರೂಪಣೆಗೆ ಬಳಸುತ್ತಾರೆ.</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<div class="youtube-embed" data-video_id="aek9tIplPWA"><iframe loading="lazy" title="#rammandir ರಾಮನ  ಕಥನಗಳನ್ನ ಸ್ಥಳೀಯಗೊಳಿಸುವ ಗುಣವನ್ನು ನಿರ್ಲಕ್ಷ್ಯ ಮಾಡುತ್ತಿರುವ ಬಿಜೆಪಿ...  |Peepal Media" width="696" height="392" src="https://www.youtube.com/embed/aek9tIplPWA?start=10&#038;feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" allowfullscreen></iframe></div>
</div></figure>



<p>ರಾಮಾಯಣವನ್ನು ಹಿಂದೂ ಧರ್ಮದ ಅಧಿಕೃತ ಕಾವ್ಯವೆಂದು ಭಾವಿಸುವ ಸಂದರ್ಭದಲ್ಲಿ ಮತೀಯ ವ್ಯಾಪ್ತಿಯನ್ನು ಮೀರಿ ಅದು ಬೆಳೆದ ಬಗೆಯನ್ನು ಕೇರಳದ ಮಾಪಿಳ್ಳೆ ರಾಮಾಯಣದಲ್ಲಿ ನೋಡಬಹುದು. ಇದು ಮುಸಲ್ಮಾನ ಮಾಪಿಳ್ಳೆಗಳ ಜಾನಪದ ಹಾಡುಗಳಲ್ಲಿ ರಾಮ ಕಾಣಿಸಿಕೊಂಡ ಬಗೆ. ರಾಮನ ಹೆಸರನ್ನು &#8220;ಲಾಮನ್&#8221; ಎಂದು ಬದಲಿಸಿದ್ದಷ್ಟೇ, ಉಳಿದ ಪಾತ್ರಗಳು ಅಂತೆಯೇ ಇವೆ. ಮುಸ್ಲಿಂ ಮಾಪಿಳ್ಳೆಗಳ ಬದುಕು-ಸಂಸ್ಕøತಿಗೆ ಹೊಂದಿಕೊಳ್ಳುವಂತೆ ರಾಮಾಯಣ ಮರುರೂಪುಗೊಂಡಿದೆ, ಇದು ರಾಮನ ಹೆಸರಿನಲ್ಲಿ ನಡೆಯುವ ರಾಜಕೀಯ ಪ್ರೇರಿತ ಮತೀಯ ಸಂಘರ್ಷಗಳಿಗೆ ಮುಖಾಮುಖಿಗೊಳ್ಳುವ ಅಗತ್ಯತೆ ತುಂಬಾ ಇದೆ.</p>



<p>ರಾಮಾಯಣಕ್ಕಿಂತ ತುಸು ಹೆಚ್ಚು ಜನಮಾನಸವನ್ನು ಹೊಕ್ಕಿರುವ ಕಾವ್ಯ ಮಹಾಭಾರತ. ಅದಕ್ಕೆ ಅದರ ಸರ್ವ ರಸೋದಯ ಕಾರಣವೇನೋ…. ಜನರ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಪ್ರಸಿದ್ಧ ಜಾನಪದ ವಿದ್ವಾಂಸ ಎನ್.ಆರ್.ನಾಯಕರು ಸಂಪಾದಿಸಿದ ‘ಗ್ರಾಮೊಕ್ಕಲ ಮಹಾಭಾರತ’ ಕರಾವಳಿ ಕರ್ನಾಟಕ ಭಾಗದಲ್ಲಿರುವ ಗ್ರಾಮೊಕ್ಕಲು ಸಮುದಾಯದ ಭಾರತ. ಇದರಲ್ಲಿ ಧರ್ಮರು, ಗೀಚಕ(ಕೀಚಕ), ಸುಭದ್ರೆ,ಲಕ್ಷ್ಮಣ,ಅರ್ಜುನ,ಕುಸುಮಾಲಿ(ಚಿತ್ರಾಂಗದೆ),ಕನಕಾಂಗಿ ಕಲ್ಯಾಣ,ಅಭಿಮನ್ಯು ಹಾಗೂ ಸಾವಿತ್ರಿ ಹೀಗೆ ಒಂಬತ್ತು ಬಿಡಿ ಕಥನಗಳಿವೆ.ಈ ಮಹಾಭಾರತ ಅನಕ್ಷರಸ್ಥ ಜನರ ಮೂಲಕ ಮೌಖಿಕವಾಗಿ ಹರಿದು ಬಂದಿದೆ.</p>



<p>ಈ ಮಹಾಭಾರತದಲ್ಲಿ ಪಾಂಡವರನ್ನು ಸೋಲಿಸಿದ ದುರ್ಯೋಧನನನ್ನು ದ್ರೌಪದಿಯು ಪಗಡೆಯಾಟದಲ್ಲಿ ಗೆಲ್ಲುತ್ತಾಳೆ. ದ್ರೌಪದಿ ಕರ್ಣನ ನೆರವಿನಿಂದ ನಾರಾಯಣ ದೇವರ ಪಗಡೆ ಮಣೆಯನ್ನು ತರಿಸಿ ಕೌರವನ ಮೋಸದ ಮಣೆಯನ್ನು ಬದಲಿಸುತ್ತಾಳೆ. ಪಗಡೆಯಾಡುವಾಗ ಗಾಳಿ ಬೀಸಿ ದ್ರೌಪದಿಯ ಸೆರಗು ಜಾರಿ, ಇದರಿಂದ ಚಿತ್ತ ಚಂಚಲಗೊಂಡ ಕೌರವ ಸೋಲುತ್ತಾನೆ. ಕಾವ್ಯದಲ್ಲಿ ಕರ್ಣನ ಧರ್ಮಬೀರುತನ, ಸಹೋದರತ್ವ, ನೈತಿಕತೆ ಸುಂದರವಾಗಿ ವ್ಯಕ್ತಗೊಂಡಿದೆ. ಇತರರಂತೇ ದುರ್ಯೋಧನನು ಇವನನ್ನು ಸೂತನೆಂದು ಕರೆಯುವ ನವೀನ ಆಶಯ &nbsp; ಇದೆ. ದ್ರೌಪದಿ ವಸ್ತ್ರಾಪಹರಣದಂತಹ ಅನೈತಿಕ ಪ್ರಸಂಗವನ್ನು ನಿರೂಪಕ ಬದಲಿಸಿದ್ದಾನೆ. ಪಗಡೆಯಾಟದಲ್ಲಿ ದ್ರೌಪದಿ ಗೆದ್ದರೂ ಈ&nbsp; ಮಹಾಭಾರತದಲ್ಲಿ ಪಾಂಡವರನ್ನು ಸೋಲಿಸಿದ ದುರ್ಯೋಧನನನ್ನು ದ್ರೌಪದಿಯು ಪಗಡೆಯಾಟದಲ್ಲಿ ಗೆಲ್ಲುತ್ತಾಳೆ. ದ್ರೌಪದಿ ಕರ್ಣನ ನೆರವಿನಿಂದ&nbsp; ನಾರಾಯಣದೇವರ ಪಗಡೆ ಮಣೆಯನ್ನು ತರಿಸಿ ಕೌರವನ ಮೋಸದ ಮಣೆಯನ್ನು ಬದಲಿಸುತ್ತಾಳೆ. ಪಗಡೆಯಾಡುವಾಗ ಗಾಳಿ ಬೀಸಿ ದ್ರೌಪದಿಯ ಸೆರಗು ಜಾರಿ,ಇದರಿಂದ ಚಿತ್ತ ಚಂಚಲಗೊಂಡ ಕೌರವ ಸೋಲುತ್ತಾನೆ. ಕಾವ್ಯದಲ್ಲಿ ಕರ್ಣನ ಧರ್ಮ ಬೀರುತನ, ಸಹೋದರತ್ವ, ನೈತಿಕತೆ ಸುಂದರವಾಗಿ ವ್ಯಕ್ತಗೊಂಡಿದೆ.ಇತರರಂತೇ ದುರ್ಯೋಧನನೂ ಇವನನ್ನು ಸೂತನೆಂದು ಕರೆಯುವ ವನವಾಸಕ್ಕೆ ಕಾರಣ ಅಸ್ಪಷ್ಟ.</p>



<p>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : <a href="https://chat.whatsapp.com/Lec6jB78EHu04TNvY80Tu6" data-type="link" data-id="https://chat.whatsapp.com/Lec6jB78EHu04TNvY80Tu6"><strong>ಪೀಪಲ್‌ ಮೀಡಿಯಾ</strong></a></p>



<p>ಈ ಮಹಾಭಾರತದಲ್ಲಿ ‘ಸುಭದ್ರೆಯ ಹಾಡು’ ಅಭಿಜಾತ ಮಹಾಭಾರತಕ್ಕಿಂತ ಭಿನ್ನ . ಜೋಗಿಯಾಗಿ ಬಂದು ಭಿಕ್ಷೆಗಾಗಿ ಪೀಡಿಸುವ ಅರ್ಜುನನ ಉಪಟಳವನ್ನು ತಾಳಲಾರದೆ ಸುಭದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದು,ಅರ್ಜುನ ತನ್ನ ನಾಗರ ಬೆತ್ತ- ಅಮೃತ ನೀರಿನಿಂದ ಬದುಕಿಸುವ ವಿಶಿಷ್ಟ ಪ್ರಕರಣಗಳು ಇದರಲ್ಲಿವೆ.ಅರ್ಜುನ ಚದುರಂಗಿ ಕುಸುಮಾಲಿಯನ್ನು ಮದುವೆಯಾಗಿ ಹನ್ನೆರಡು ವರ್ಷದ ನಂತರ ಜೋಗಿ ವೇಷಧಾರಿಯಾಗಿ ಬಂದು ಪರೀಕ್ಷಿಸಿ ಹಸ್ತಿನಾವತಿಗೆ ಕರೆದೊಯ್ಯುವ ಪ್ರಸಂಗ ಇದರಲ್ಲಿ ಮಾತ್ರ ಕಾಣಸಿಗುತ್ತದೆ.</p>



<p>ಮಧ್ಯಭಾರತದ ಗೊಂಡರಲ್ಲಿ ಪ್ರಸಿದ್ಧವಾದ ‘ ಭೀಮ ಸಿದಿ’ ಕಥನ ಕಾವ್ಯದಲ್ಲಿ ಭೀಮನೇ ವಸ್ತ್ರಾಪಹರಣ ಮಾಡುವವನು.ಸುಂದರಿಯರನ್ನು ನೋಡುವಾಗ ತನ್ನ ತಂದೆ ಪವನಾರನನ್ನು ಪ್ರಾರ್ಥಿಸುತ್ತಾನೆ. ತಂದೆ ಜೋರಾಗಿ ಗಾಳಿ ಬೀಸಿ ಹೆಂಗಳೆಯರು ಬಟ್ಟೆ ಹಾರಿಸುತ್ತಾನೆ. ಗೊಂಡರಿಗೆ ಭೀಮ ಫಲವಂತಿಕೆಯ ದೈವ, ಮಳೆ ತರುವವನು.</p>



<p>ಛತ್ತೀಸಘಡದ ಕಥನವೊಂದರಲ್ಲಿ ಕೃಷ್ಣ ಬಾಣ ಹರಿತಗೊಳಿಸುವಾಗ ಕೈ ಬೆರಳಿಗೆ ಗಾಯ ಮಾಡಿಕೊಳ್ಳುತ್ತಾನೆ. ಆಗ ದ್ರೌಪದಿ ತನ್ನ ಸೆರಗಿನ ಬಟ್ಟೆ ತುಂಡೊಂದನ್ನು ಹರಿದು ಅವನ ಬೆರಳಿಗೆ ಕಟ್ಟುತ್ತಾಳೆ. ಇನ್ನೊಂದು ಕಥನದಲ್ಲಿ ಪಾಂಡವರೊಂದಿಗೆ ಕೃಷ್ಣ ಈಜಾಡುವಾಗ ತನ್ನ ಲಂಗೋಟಿಯನ್ನು ಕಳೆದುಕೊಳ್ಳುತ್ತಾನೆ. ಆಗ ದ್ರೌಪದಿ ತನ್ನ ಸೆರಗಿನ ತುಂಡೊಂದನ್ನು ನೀಡುತ್ತಾಳೆ. ಈ ಉಪಕಾರವನ್ನು ಅಕ್ಷಯಾಂಬರ ವಿಲಾಸದಲ್ಲಿ ತೀರಿಸುತ್ತಾನೆ.</p>



<p>&nbsp;ಮಹಾಭಾರತದ ಪ್ರಮುಖ ಪಾತ್ರ ದ್ರೌಪದಿಯು ತಮಿಳುನಾಡಿನಲ್ಲಿ ದೈವವಾಗಿ ಆರಾಧಿಸಲ್ಪಡುತ್ತಾಳೆ. ಕೊಯಮ್ಬತ್ತೂರಿನ ‘ಅರವನ್ ಜಾತ್ರೆ’ ಯಲ್ಲಿ ಇವಳು ಒಂದು ದೈವ. ಕೃಷ್ಣ ಮೋಹಿನಿಯಾಗಿ ಆರವನ್ ನನ್ನು ಮದುವೆಯಾದ ದಿನದಂದು ಈ ಜಾತ್ರೆ ನಡೆಯುತ್ತದೆ. ಇದರಲ್ಲಿ ತೃತೀಯ ಲಿಂಗಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಆರವನ್ ಉಲೂಪಿಯ ಮಗ ಇರಾವಂತನೆಂಬ ವಾದ ವಿದ್ವಾಂಸರದ್ದು. ತಮಿಳುನಾಡಿನ ನೃತ್ಯ ಪ್ರಕಾರ ‘ತೆರಕೂತ್ತು’ವಿನಲ್ಲಿ ಮಹಾಭಾರತದ ಪ್ರಸಂಗಗಳಿವೆ.</p>



<p>ತೆಲುಗಿನ ಮಹಾಭಾರತದಲ್ಲಿ ಪಾಂಡವರು ತಾವು ಚಿರಂಜೀವಿಗಳಾಗಲು ತಂದೆ ಪಾಂಡುವಿನ ಹೆಣವನ್ನು ತಿನ್ನುವ ಪ್ರಸಂಗವಿದ್ದು, ಇದನ್ನು ಕೃಷ್ಣ ತಪ್ಪಿಸುತ್ತಾನೆ. ಗ್ರಾಮೊಕ್ಕಲು ಮಹಾಭಾರತದಂತೆ ಇಲ್ಲೂ ದ್ರೌಪದಿ ಕೌರವನೊಂದಿಗೆ ಪಗಡೆಯಾಡುತ್ತಾಳೆ, ಆದರೆ ಕಾಲ ಬೆರಳಿನಲ್ಲಿ!</p>



<p>ಭಾರತದ ಅನೇಕ ಜನಾಂಗಗಳು ಮಹಾಭಾರತದ ಪಾತ್ರಗಳನ್ನು ತಮ್ಮ ಪೂರ್ವಜರೆಂದು ಬಗೆಯುತ್ತವೆ.ಹಿಮಾಚಲಪ್ರದೇಶದ ‘ಮಂಡಿ’ಯಲ್ಲಿ ಹಿಡಿಂಬೆಯ ದೇಗುಲವಿದೆ. ಉತ್ತರಾಖಾಂಡದಾದ್ಯಂತ ಇರುವ ಗಿಡ್ಡಿ ಜನಾಂಗೀಯರಿಗೆ ಜರಾಸಂಧ ದೈವ! ರಾಜಸ್ಥಾನದ ಜೋದಾಪುರದಲ್ಲಿ ಮುದ್ಗಲ್ ಗೋತ್ರದ ದವೆ ಬ್ರಾಹ್ಮಣರು ತಮ್ಮನ್ನು ರಾವಣನ ವಂಶಸ್ಥರೆಂದು ಕರೆಸಿಕೊಂಡು ಅವನಿಗೆ ದೇವಾಲಯ ನಿರ್ಮಿಸಿ ಆರಾಧಿಸುತ್ತಾರೆ.</p>



<p>ಹಿಮಾಚಲಪ್ರದೇಶದ ಕಿನ್ನೂರು ಪ್ರದೇಶದ ನಿರೂಪಣೆಯೊಂದರ ಪ್ರಕಾರ ಕುಂತಿಗೆ ಮಂಗಗಳನ್ನು ನೋಡಿ ಮಗುವಿನ ಬಯಕೆಯಾಗಿ ‘ಋಷಿ ಮಾಮ’ನ ಸೇವೆ ಮಾಡಿ ಮಕ್ಕಳನ್ನು ಪಡೆಯುತ್ತಾಳೆ.ಇಲ್ಲಿ ಬೆಟ್ಟದ ಮೇಲೆ ವಾಸಿಸುವ ಪಾಂಡವರಿಗೂ ಕೆಳಗೆ ವಾಸಿಸುವ ಕೌರವರಿಗೂ ನೀರಿಗಾಗಿ ಜಗಳವಾಗುತ್ತದೆ. ಅಸ್ಸಾಂನ ಜನರು ರುಕ್ಮ, ಭಗದತ್ತ,ಬಾಣಾಸುರರನ್ನು ತಮ್ಮ ಪೂರ್ವಜರೆಂದು ಭಾವಿಸುತ್ತಾರೆ. ಕೃಷ್ಣನ ಪತ್ನಿ ರುಕ್ಮಿಣಿ&nbsp; ಬೋಡೋಗಳ ಕನ್ಯೆ!!!</p>



<p>ಭಾರತದಲ್ಲಿ ಅನೇಕ ಸ್ಥಳನಾಮಗಳು ಮಹಾಭಾರತ ರಾಮಾಯಣ ಕೇಂದ್ರಿತವಾಗಿವೆ. ಪಾಂಡವರ ಗುಡ್ಡ, ಪಾಂಡವಪುರ, ಪಾಂಡವ ಪಣೆ, ಹಂಪಿಯ ಸೀತೆಯ ಸೆರಗು, ಭೀಮನ ಕಲ್ಲು ಇತ್ಯಾದಿ. ಸಾಮಾನ್ಯ ಮಾನವ ಮಾಡಲಾಗದ ಅಸಾಮಾನ್ಯ, ಅತಿಮಾನುಷ ಕಾರ್ಯಗಳನ್ನು ಪುರಾಣ ಪಾತ್ರಗಳಿಗೆ ಆರೋಪಿಸುವುದು ಜನಸಮುದಾಯದ ಸಾಮಾನ್ಯ ನಂಬಿಕೆ. ಯಾರೂ ಎತ್ತಲಾಗದ ಭಾರೀ ಗಾತ್ರದ ಕಲ್ಲು ‘ ಭೀಮನ ಕಲ್ಲು’ ಆಗುವುದು ಭೀಮನ ದೇಹ ದಾಢ್ಯತೆಯ ಅರಿವು ಇರುವುದರಿಂದ.ಅನೇಕ ಗ್ರಾಮಗಳು ತಮ್ಮ ಊರಿನ ಐತಿಹ್ಯವನ್ನು ಪಾಂಡವರ ವನವಾಸದೊಂದಿಗೆ ಸಂಬಂಧ ಕಲ್ಪಿಸಿಕೊಳ್ಳುತ್ತವೆ. ನನ್ನ ಊರು ಐವರ್ನಾಡಿಗೆ ಪಾಂಡವರು ಬಂದಿದ್ದರು, ಅವರು ಸ್ಥಾಪಿಸಿದ ಲಿಂಗಗಳೇ ಪಂಚಲಿಂಗೇಶ್ವರ.</p>



<p>ಹೀಗೆ, ಜನಮಾನಸದಲ್ಲಿ ರಾಮ-ಕೃಷ್ಣರ ಕಥೆಗಳು ಬೇರೆ ಬೇರೆ ಭಾಷೆಗಳಲ್ಲಿ, ಜನಪದದಲ್ಲಿ ಹೊಸದಾಗಿ ಕಟ್ಟುವ ಪರಂಪರೆ ಭಾರತ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ರಾಮ ಕೋಮುವಾದಿ ಶಕ್ತಿಗಳ ಕೈಗೆ ಸಿಕ್ಕಿದ್ದಾನೆ. ನಿಜವಾದ ʼರಾಮಂದಿರುʼ ಮರೆಯಾಗಿ ಹಿಂದುತ್ವದ ರಾಮ ನಮ್ಮ ಮುಂದೆ ಬಂದಿದ್ದಾನೆ. ರಾಮ ದೇವಾಲಯದ ಒಳಗೆ ಬಂಧಿಯಾಗುತ್ತಿದ್ದಾನೆ. ಈ ಸಂದರ್ಭದಲ್ಲಿ ರಾಮನ ಭಾರತ ಕಥನಗಳನ್ನು ನಾವು ಸ್ಮರಿಸಿಕೊಳ್ಳಬೇಕು.     </p>



<p style="font-size:20px"><strong>ಲೇಖನ: ಚರಣ್ ಐವರ್ನಾಡು</strong></p>
]]></content:encoded>
					
		
		
			</item>
		<item>
		<title>&#8220;ಮನೆಯಿಂದಲೇ ದಿನಕ್ಕೆ 20,000 ಸಂಪಾದಿಸಿ!&#8221;: ವಂಚನೆಯ ಆಳ-ಅಗಲ</title>
		<link>https://peepalmedia.com/earn-rs-20000-daily-scam/</link>
		
		<dc:creator><![CDATA[Charan Aivarnad]]></dc:creator>
		<pubDate>Fri, 20 Oct 2023 13:56:34 +0000</pubDate>
				<category><![CDATA[ಅಂಕಣ]]></category>
		<category><![CDATA[Bangalore]]></category>
		<category><![CDATA[bank]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[CBI]]></category>
		<category><![CDATA[charan Aivarnad]]></category>
		<category><![CDATA[cyber crime]]></category>
		<category><![CDATA[cypto]]></category>
		<category><![CDATA[fake]]></category>
		<category><![CDATA[Fake news]]></category>
		<category><![CDATA[financial crime]]></category>
		<category><![CDATA[fool]]></category>
		<category><![CDATA[fraud]]></category>
		<category><![CDATA[india]]></category>
		<category><![CDATA[investigation]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[money]]></category>
		<category><![CDATA[news]]></category>
		<category><![CDATA[news.viral news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Police Department]]></category>
		<category><![CDATA[politics]]></category>
		<category><![CDATA[Scam]]></category>
		<category><![CDATA[state politics]]></category>
		<category><![CDATA[trend]]></category>
		<category><![CDATA[Trending]]></category>
		<category><![CDATA[trending news]]></category>
		<category><![CDATA[viral]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=30265</guid>

					<description><![CDATA[ಬೆಂಗಳೂರು,ಅಕ್ಟೋಬರ್.‌20: &#8220;ಮನೆಯಲ್ಲಿಯೇ ಕೆಲಸ ಮಾಡಿ ದಿನಕ್ಕೆ 10,000 ರುಪಾಯಿ ಗಳಿಸಿ&#8221; ಎಂಬ ಮೆಸೆಜ್‌ಗಳನ್ನು ನಿಮ್ಮ ಫೋನ್‌ನಲ್ಲಿ ನೋಡಿರುತ್ತೀರಿ. ರಿಪ್ಲೈ ಮಾಡಿದ್ದೀರಾ? ಹಾಗಾದರೆ ಎಚ್ಚರವಾಗಿರಿ! ಈಗ ಸೆಂಟ್ರಲ್‌ ಬ್ಯೂರೋ ಆಫ್‌ ಇನ್ವಿಸ್ಟಿಗೇಷನ್‌ (ಸಿಬಿಐ) ಇಂತಹ ಮೋಸದ ಪ್ರಕರಣಗಳ ಬೆನ್ನ ಹಿಂದೆ ಬಿದ್ದಿದೆ. ವಂಚನೆಗಳ ಜಾಡನ್ನು ಬೇಧಿಸಲು ಹೊರಡಿದೆ. ಈ ಆಪರೇಷನ್‌ಗೆ ಸಿಬಿಐ ಇಟ್ಟ ಹೆಸರು &#8220;ಆಪರೇಷನ್ ಚಕ್ರ 2&#8221;. ಭಾರತದ ನಿರುದ್ಯೋಗಿಗಳನ್ನೇ ಬಂಡವಾಳವಾಗಿ ಮಾಡಿಕೊಂಡಿರುವ ಈ ಸ್ಕ್ಯಾಮರ್‌ಗಳು ಹಲವಾರು ವಾಟ್ಸಾಪ್ ನಂಬರ್‌ಗಳನ್ನು ಬಳಸಿಕೊಂಡು ದೇಶ-ವಿದೇಶಗಳಲ್ಲಿ ಕುಳಿತುಕೊಂಡು ಕೆಲಸದ ಆಮಿಷ [&#8230;]]]></description>
										<content:encoded><![CDATA[
<pre class="wp-block-code"><code><strong>ಮನೆಯಿಂದಲೇ ನೀವು 20,000 ರುಪಾಯಿ ಗಳಿಸಬಹುದು. ಇದು ವರ್ಕ್‌ ಫ್ರೊಂ ಹೋಮ್‌ ಉದ್ಯೋಗ..ಈ ರೀತಿಯ ಮೆಸೆಜ್‌ಗಳು ನಿಮ್ಮ ವಾಟ್ಸಾಪ್‌, ಟೆಲಿಗ್ರಾಮಿಗೆ ಬಂದಿರಬಹುದು. ಆರಂಭದಲ್ಲಿ ಚೆನ್ನಾಗಿ ಸಂವಹನ ನಡೆಸಿ ವಿಶ್ವಾಸವನ್ನು ಗಳಿಸುತ್ತಾರೆ. ಅವರು ಹೇಳಿದಂತೆ ನಡೆದುಕೊಂಡರೆ ಮೋಸ ಖಚಿತ. ಈ ವಂಚನೆಯ ಆಳ-ಅಗಲ ಇಲ್ಲಿದೆ</strong></code></pre>



<p><strong>ಬೆಂಗಳೂರು,ಅಕ್ಟೋಬರ್.‌20:</strong> &#8220;ಮನೆಯಲ್ಲಿಯೇ ಕೆಲಸ ಮಾಡಿ ದಿನಕ್ಕೆ 10,000 ರುಪಾಯಿ ಗಳಿಸಿ&#8221; ಎಂಬ ಮೆಸೆಜ್‌ಗಳನ್ನು ನಿಮ್ಮ ಫೋನ್‌ನಲ್ಲಿ  ನೋಡಿರುತ್ತೀರಿ. ರಿಪ್ಲೈ ಮಾಡಿದ್ದೀರಾ? ಹಾಗಾದರೆ ಎಚ್ಚರವಾಗಿರಿ! ಈಗ ಸೆಂಟ್ರಲ್‌ ಬ್ಯೂರೋ ಆಫ್‌ ಇನ್ವಿಸ್ಟಿಗೇಷನ್‌ (ಸಿಬಿಐ) ಇಂತಹ ಮೋಸದ ಪ್ರಕರಣಗಳ ಬೆನ್ನ ಹಿಂದೆ ಬಿದ್ದಿದೆ. ವಂಚನೆಗಳ ಜಾಡನ್ನು ಬೇಧಿಸಲು ಹೊರಡಿದೆ. ಈ ಆಪರೇಷನ್‌ಗೆ ಸಿಬಿಐ ಇಟ್ಟ ಹೆಸರು &#8220;ಆಪರೇಷನ್ ಚಕ್ರ 2&#8221;.</p>



<p>ಭಾರತದ ನಿರುದ್ಯೋಗಿಗಳನ್ನೇ ಬಂಡವಾಳವಾಗಿ ಮಾಡಿಕೊಂಡಿರುವ ಈ ಸ್ಕ್ಯಾಮರ್‌ಗಳು ಹಲವಾರು ವಾಟ್ಸಾಪ್ ನಂಬರ್‌ಗಳನ್ನು ಬಳಸಿಕೊಂಡು ದೇಶ-ವಿದೇಶಗಳಲ್ಲಿ ಕುಳಿತುಕೊಂಡು ಕೆಲಸದ ಆಮಿಷ ಒಡ್ಡಿ ಜನರಿಗೆ ಹಣದ ವಂಚನೆ ಮಾಡುತ್ತಿದ್ದಾರೆ.  ಈ ಹಣವನ್ನು ನಂತರ ಶೆಲ್ ಕಂಪನಿಗಳ ಮೂಲಕ ಕಳುಹಿಸಿ, ಲಾಂಡರಿಂಗ್ ಮಾಡಲಾಗುತ್ತಿದೆ. ಸಿಬಿಐ ಪ್ರಕಾರ, ಇದೊಂದು ದೇಶದ ಅತ್ಯಂತ ದೊಡ್ಡ ಸೈಬರ್-ಮನಿ ಲಾಂಡರಿಂಗ್‌ ವಂಚನೆಯ ಜಾಲ.</p>



<p>ಈ ವಾರ ಸಿಬಿಐ &#8220;ಆಪರೇಷನ್ ಚಕ್ರ 2&#8221; ಎಂಬ ಕಾರ್ಯಾಚರಣೆಯನ್ನು ಕೈಗೊಂಡಿದ್ದು, ಮಧ್ಯಪ್ರದೇಶ, ಉತ್ತರ ಪ್ರದೇಶ, ಕರ್ನಾಟಕ, ಹರಿಯಾಣ, ಕೇರಳ, ತಮಿಳುನಾಡು, ಪಂಜಾಬ್, ಬಿಹಾರ, ದೆಹಲಿ, ಪಶ್ಚಿಮ ಬಂಗಾಳ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳ 76 ಸ್ಥಳಗಳಲ್ಲಿ ಐದು ಪ್ರತ್ಯೇಕ ಪ್ರಕರಣಗಳಲ್ಲಿ ದಾಳಿಯನ್ನು ನಡೆಸಿದೆ. ಈ ಬಗ್ಗೆ <a href="https://cbi.gov.in/press-detail/NTk0MQ==" data-type="link" data-id="https://cbi.gov.in/press-detail/NTk0MQ==">ಅಕ್ಟೋಬರ್‌  19</a> ಮತ್ತು <a href="https://cbi.gov.in/press-detail/NTk0Mg==" data-type="link" data-id="https://cbi.gov.in/press-detail/NTk0Mg==">ಅಕ್ಟೋಬರ್‌ 20</a> ರ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತನಿಖೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ತನಿಖೆ ಇನ್ನೂ ಪ್ರಗತಿಯಲ್ಲಿದೆ.</p>



<p>ಈ ಸಂದರ್ಭದಲ್ಲಿ 32 ಮೊಬೈಲ್ ಫೋನ್‌ಗಳು, 48 ಲ್ಯಾಪ್‌ಟಾಪ್‌ಗಳು-ಹಾರ್ಡ್ ಡಿಸ್ಕ್‌ಗಳು, ಎರಡು ಸರ್ವರ್‌ಗಳ ಫೋಟೋಗಳು, 33 ಸಿಮ್ ಕಾರ್ಡ್‌ಗಳು ಮತ್ತು ಪೆನ್ ಡ್ರೈವ್‌ಗಳನ್ನು ಜಪ್ತಿ ಮಾಡಲಾಗಿದೆ. ಹಲವಾರು ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ. ಸಿಬಿಐ 15 ಇಮೇಲ್ ಖಾತೆಗಳ ಡಂಪ್‌ ಅನ್ನು ವಶಪಡಿಸಿಕೊಂಡಿದ್ದು, ಆರೋಪಿಗಳು ಹೆಣೆದಿರುವ ವಂಚನೆಯ ಸಂಕೀರ್ಣ ಜಾಲವನ್ನು ಬೆಳಕಿಗೆ ತಂದಿದೆ.</p>



<p>ಹೂಡಿಕೆ ಮತ್ತು ಉದ್ಯೋಗದ ಆಸೆ ತೋರಿಸಿ ಅಮಾಯಕರನ್ನು ವಂಚಿಸುತ್ತಿರುವ ಈ ಹಗರಣದ ವಿರುದ್ಧ ಸಿಬಿಐನಲ್ಲಿ ಕಳೆದ ವರ್ಷ ಎಫ್‌ಐಆರ್ ದಾಖಲಿಸಲಾಗಿತ್ತು. ಸತತ ಅಧ್ಯಯನಗಳ ನಂತರ ಸಿಬಿಐ ಈ ಜಾಲದ ಒಳಸುಳಿವು, ತಂತ್ರಜ್ಞಾನಗಳ ಬಳಕೆಯನ್ನು ಬೇಧಿಸಿ ದಂಧೆಯನ್ನು ಬಹಿರಂಗಪಡಿಸಿದೆ.</p>



<p>ಈ ದಂಧೆಯಲ್ಲಿ ಹಲವು ವಂಚಕರು ಬೇರೆ ಬೇರೆ ಮೊಬೈಲ್‌ ಸಂಖ್ಯೆಗಳ ಮೂಲಕ ಜನರನ್ನು ಸಂಪರ್ಕಿಸಿ ಹೂಡಿಕೆ , ಇಲ್ಲವೇ ಅರೆಕಾಲಿಕ ಉದ್ಯೋಗ ನೀಡುವುದಾಗಿ ನಂಬಿಸಿ ಹಣವನ್ನು ಸಂಗ್ರಹಿಸುತ್ತಾರೆ. ಇದಕ್ಕಾಗಿ ಬೇರೆ ಬೇರೆ ಬ್ಯಾಂಕ್ ಖಾತೆಗಳು ಮತ್ತು ಯುಪಿಐಗಳನ್ನು ಬಳಸಿದ್ದಾರೆ ಎಂದು ಸಿಬಿಐ ಮೂಲಗಳು ತಿಳಿಸಿವೆ.</p>



<p>ವಿವಿಧ ಬ್ಯಾಂಕ್ ಖಾತೆಗಳು ಮತ್ತು ವಿದೇಶಿ ಮೂಲದ ಕ್ರಿಪ್ಟೋ ವ್ಯಾಲೆಟ್‌ಗಳಲ್ಲಿನ ಹಣವನ್ನು ಡ್ರಾ ಮಾಡಲು ವಿವಿಧ ಶೆಲ್ ಕಂಪನಿಗಳನ್ನು ಬಳಸಲಾಗಿದೆ ಎಂಬುದು ಸಿಬಿಐ ತನಿಖೆಯಿಂದ ತಿಳಿದು ಬಂದಿದೆ. ಅಲ್ಲದೇ, ಈ ಹೆಚ್ಚಿನ ಶೆಲ್‌ ಕಂಪನಿಗಳು ಚೀನಾದ ಜೊತೆಗೆ ಸಂಬಂಧವನ್ನು ಹೊಂದಿದ್ದು, ತನಿಖೆ ಪ್ರಗತಿಯಲ್ಲಿದೆ. &nbsp;</p>



<p>ಸೈಬರ್ ವಂಚನಕರು &#8220;ಗೂಗಲ್ ಜಾಹೀರಾತುಗಳು, ಎಸ್‌ಎಂಎಸ್, ಸಿಮ್ ಬಾಕ್ಸ್ ಆಧಾರಿತ ಎಸ್‌ಎಂಎಸ್, ಕ್ಲೌಡ್ ಸೇವೆಗಳು, ಫಿನ್‌ಟೆಕ್ ಕಂಪನಿಗಳು, ಪಾಪ್‌ಅಪ್‌ ಮೆಸೆಜ್‌ಗಳು ಮತ್ತು ಎಪಿಐ&#8221; ಗಳನ್ನು ಬಳಸುತ್ತಾರೆ ಎಂಬುದು ತಿಳಿದುಬಂದಿದೆ. ಸಿಬಿಐ ಪ್ರಕಾರ &#8220;ಸಾಮಾಜಿಕ ಮಾಧ್ಯಮಗಳು ಮತ್ತು ಜಾಹೀರಾತು ಪೋರ್ಟಲ್‌ಗಳು, ಎನ್‌ಕ್ರಿಪ್ಟ್ ಮಾಡಿದ ಚಾಟ್ ಅಪ್ಲಿಕೇಶನ್‌ಗಳು, ಪೊಂಜಿ ಸ್ಕೀಮ್‌ಗಳು ಮತ್ತು ಮಲ್ಟಿ-ಲೆವೆಲ್ ಮಾರ್ಕೆಟಿಂಗ್ ಬಳಸಿ ಜನರ ಗಮನ ಸೆಳೆಯುತ್ತಾರೆ.&#8221; ಅಲ್ಲದೇ, ವಂಚಕರ ಸರ್ಚ್ ಇಂಜಿನ್‌ನ ಜಾಹೀರಾತು ಟೂಲ್‌ಗಳನ್ನು ಬಳಸುತ್ತಿದ್ದಾರೆ, ಜೊತೆಗೆ ಬೃಹತ್ ಗಾತ್ರದಲ್ಲಿ ಬಲ್ಕ್‌ SMS ಕಳುಹಿಸಲು ರೆಂಟೆಡ್ ಹೆಡರ್‌ಗಳನ್ನು ಬಳಸುತ್ತಿದ್ದಾರೆ.</p>



<p>ವಿದೇಶಿ ಪ್ರಜೆಗಳನ್ನು ವಂಚಿಸಲು ಮೈಕ್ರೋಸಾಫ್ಟ್ ಮತ್ತು ಅಮೆಜಾನ್‌ಗೆ ತಾಂತ್ರಿಕ ಬೆಂಬಲ ನೀಡುವವರಂತೆ‌ ತಮ್ಮನ್ನು ಬಿಂಬಿಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದ್ದು, ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ 72 ಸ್ಥಳಗಳಲ್ಲಿ ರಾಷ್ಟ್ರವ್ಯಾಪಿ ದಾಳಿ ನಡೆಸಿದೆ. ಚೀನೀ ಲಿಂಕ್‌ಗಳನ್ನು ಹೊಂದಿರುವ ಕಂಪನಿಗಳ &#8220;ಕ್ರಿಪ್ಟೋಕರೆನ್ಸಿ ವಂಚನೆ&#8221; ಗೆ ಸಂಬಂಧಿಸಿದ ಇತರ ಮೂರು ಪ್ರಕರಣಗಳಲ್ಲಿ ಹುಡುಕಾಟಗಳನ್ನು ನಡೆಸಲಾಗಿದೆ.</p>



<p>ಫೈನಾನ್ಶಿಯಲ್ ಇಂಟೆಲಿಜೆನ್ಸ್ ಯುನಿಟ್-ಇಂಡಿಯಾ (ಎಫ್‌ಐಯು-ಇಂಡಿಯಾ)ದ ಮಾಹಿತಿಯಂತೆ ಆಪರೇಷನ್ ಚಕ್ರ-II ಕ್ರಿಪ್ಟೋ-ಕರೆನ್ಸಿ ವಂಚನೆಯನ್ನು ಭೇದಿಸಿತು. ಈ ವಂಚನೆಯನ್ನು ಭಾರತೀಯರನ್ನು ಗುರಿಯಾಗಿಸಿ ನಡೆಸಲಾಗುತ್ತಿದ್ದು, ಸುಮಾರು 100 ಕೋಟಿ ರುಪಾಯಿಗೂ ಅಧಿಕ ಹಣ ವಂಚಕರ ಪಾಲಾಗಿದೆ.</p>



<p>ವಂಚಕ ಇದಕ್ಕಾಗಿ ಫೇಕ್ ಕ್ರಿಪ್ಟೋಕರೆನ್ಸಿ ಟೋಕನ್ ಅನ್ನು ಅಭಿವೃದ್ಧಿಪಡಿಸಿದ್ದಾನೆ ಎಂದು ಸಿಬಿಐ ತಿಳಿಸಿದೆ.  ಈ ಪ್ರಕರಣದಲ್ಲಿ ಆರೋಪಿಯು ಭಾರತ ಮೂಲದ ಹೆಸರಾಂತ ಅಮೇರಿಕನ್ ಕ್ರಿಪ್ಟೋ ಟೆಕ್ನಾಲಜಿಸ್ಟ್‌ ಒಬ್ಬರ ಫೋಟೋವನ್ನು ಬಳಸಿಕೊಂಡು ವೆಬ್‌ಸೈಟ್ ಮಾಡಿದ್ದಾನೆ. ಗಣಿಗಾರಿಕೆ ಯಂತ್ರಗಳನ್ನು ಖರೀದಿಸಲು ಹೂಡಿಕೆದಾರರ ಹಣವನ್ನು ಬಳಸುತ್ತಾರೆ ಎಂಬಂತೆ ನಂಬಿಸಿ,  ಬಂದ ಲಾಭವನ್ನು ಮುದ್ರಿಸಲಾದ ಕ್ರಿಪ್ಟೋಕರೆನ್ಸಿಗಳ ಮೂಲಕ ವಿತರಿಸಲಾಗಿದೆ.</p>



<p>ಈ ಅಪ್ಲಿಕೇಷನ್‌ ಆಗಸ್ಟ್ 2021 ರವರೆಗೆ ಕಾರ್ಯನಿರ್ವಹಿಸಿತ್ತು. ಈ ಸಮಯದಲ್ಲಿ ಅನೇಕ ಭಾರತೀಯರು ವಿವಿಧ ಗೇಟ್‌ವೇಗಳ ಮೂಲಕ ಹೂಡಿಕೆ ಮಾಡಿದ್ದರು. ಆರಂಭದಲ್ಲಿ, ಹೂಡಿಕೆದಾರರ ವಿಶ್ವಾಸವನ್ನು ಗಳಿಸಲು ರಿಟರ್ನ್ಸ್ ಕೂಡ ನೀಡಲಾಯಿತು, ಆದರೆ ಆಗಸ್ಟ್ 2021ರ ನಂತರ ಎಲ್ಲಾ ಪಾವತಿಗಳು ಸ್ಥಗಿತಗೊಂಡವು.</p>



<p>Payment aggregator ಸರ್ವಿಸ್‌ಗಳನ್ನು ಬಳಸಿ ಆರೋಪಿಯು ಅಂದಾಜು 168.75 ಕೋಟಿ ರುಪಾಯಿಯ ವಂಚನೆ ನಡೆಸಿದ್ದ. ತನಿಖೆಯ ಸಮಯದಲ್ಲಿ 150 ಖಾತೆಗಳನ್ನು ಪತ್ತೆಮಾಡಲಾಗಿದ್ದು, ಇದರಲ್ಲಿ 46 ಶೆಲ್ ಕಂಪನಿಗಳು, 42 ಮಾಲೀಕತ್ವ ಸಂಸ್ಥೆಗಳು ಮತ್ತು 50 ವೈಯಕ್ತಿಕ ಖಾತೆಗಳು, ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಲು, ಸ್ವೀಕರಿಸಿದ ಹಣವನ್ನು ಲಾಂಡರಿಂಗ್ ಮಾಡಲು ಮತ್ತು ಅಂತಿಮ ಫಲಾನುಭವಿಗಳಿಗೆ ವರ್ಗಾಯಿಸಲು ಮಾರ್ಗಗಳಾಗಿ ಕಾರ್ಯನಿರ್ವಹಿಸಿರುವುದು ಕಂಡು ಬಂದಿದೆ. ಎರಡು ಖಾಸಗಿ ಕಂಪನಿಗಳು, ಅದರ ನಿರ್ದೇಶಕರು ಸೇರಿದಂತೆ ಅನೇಕರ ವಿರುದ್ಧ ಈ ಪ್ರಕರಣವನ್ನು ದಾಖಲಿಸಲಾಗಿದೆ.</p>



<p>ಯುಎಸ್ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಸೇರಿದಂತೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಏಜೆನ್ಸಿಗಳ ಸಹಯೋಗದೊಂದಿಗೆ ಆಪರೇಷನ್ ಚಕ್ರ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಸಿಬಿಐ ತಿಳಿಸಿವೆ.</p>



<p style="font-size:20px"><strong>ಬೆಂಗಳೂರಿನಲ್ಲಿ ಕೂತು ಸಿಂಗಾಪುರದವರಿಗೆ ವಂಚನೆ!</strong></p>



<p>ಈ ವಂಚಕರ 137 ಶೆಲ್ ಕಂಪನಿಗಳನ್ನು ಸಿಬಿಐ ಗುರುತಿಸಿದ್ದು, ಹೆಚ್ಚಿನ ಸಂಖ್ಯೆಯ ಘಟಕಗಳು ಬೆಂಗಳೂರಿನ ಕಂಪನಿಗಳ ರಿಜಿಸ್ಟ್ರಾರ್‌ನಲ್ಲಿ ನೋಂದಾಯಿಸಲ್ಪಟ್ಟಿವೆ. ಸಿಬಿಐಯ ತನಿಖೆಯ ನಂತರ ಈ ಕಂಪನಿಗಳ ನಿರ್ದೇಶಕರನ್ನು ಗುರುತಿಸಲಾಗಿದ್ದು, ಹೆಚ್ಚಿನವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈ ಕೆಲವು ನಿರ್ದೇಶಕರು ಬೆಂಗಳೂರು ಮೂಲದ ಪಾವತಿ ವ್ಯಾಪಾರಿಯೊಂದಿಗೆ (ಪೇಮೆಂಟ್‌ ಮರ್ಚೆಂಟ್‌) ಸಂಬಂಧ ಹೊಂದಿದ್ದರು. ವಂಚನೆಯ ಕೇಂದ್ರವಾಗಿರುವ ಈ ವ್ಯಾಪಾರಿ ಸುಮಾರು 16 ವಿಭಿನ್ನ ಬ್ಯಾಂಕ್ ಖಾತೆಗಳನ್ನು ನಿಯಂತ್ರಿಸುತ್ತಿದ್ದಾನೆ, ಅಲ್ಲಿ ಬೃಹತ್ ಮೊತ್ತ ಅಂದಾಜು 357 ಕೋಟಿ ರುಪಾಯಿಯ ಹಣ ಹರಿದು ಬಂದಿದೆ. </p>



<p>ಈ ಹಣದ ಜಾಡನ್ನು ಯಾರಿಗೂ ಪತ್ತೆ ಮಾಡಲು ಸಾಧ್ಯವಾಗದಂತೆ ಉದ್ದೇಶಪೂರ್ವಕವಾಗಿ ಹಣ ಜಮೆಯಾದ ನಂತರ ನಂತರ ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿದೆ. ಬೆಂಗಳೂರು, ಕೊಚ್ಚಿನ್ ಮತ್ತು ಗುರ್‌ಗಾಂವ್‌ನಲ್ಲಿ ನಡೆಸಲಾದ ಹುಡುಕಾಟಗಳಿಂದ ಸಿಬಿಐಗೆ ಗಣನೀಯ ಸಂಖ್ಯೆಯ ಪುರಾವೆಗಳನ್ನು ಸಿಕ್ಕಿದ್ದು, ಶೆಲ್ ಕಂಪನಿಗಳ ನಿರ್ದೇಶಕರ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲಿದೆ.</p>



<p>ಈ ಆರೋಪಿಗೆ ವಿದೇಶಿ ಪ್ರಜೆಯ ಜತೆಗಿನ ಒಡನಾಟವೂ ಇದ್ದು, ಈ ವಂಚಕ ಘಟಕಗಳ ನಿರ್ದೇಶಕರು ಮತ್ತು ಸಂಪರ್ಕ ಮಾಹಿತಿಯನ್ನು ಬದಲಾಯಿಸುವಲ್ಲಿ ಬೆಂಗಳೂರಿನ ಇಬ್ಬರು ಚಾರ್ಟರ್ಡ್ ಅಕೌಂಟೆಂಟ್‌ಗಳ ಪಾತ್ರವೂ ಕಂಡುಬಂದಿದೆ. </p>



<p>ಸಿಂಗಾಪುರದ ನಾಗರಿಕರನ್ನು ಗುರಿಯಾಗಿಸಿಕೊಂಡು ಮಾಡಿರುವ ಸೈಬರ್ ಆರ್ಥಿಕ ಅಪರಾಧಗಳ ಆರೋಪದ ಮೇಲೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಎರಡನೇ ಪ್ರಕರಣವನ್ನು ಸಿಬಿಐ ದಾಖಲಿಸಲಾಗಿದೆ. ಹತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 100 ಭಾರತೀಯ ಬ್ಯಾಂಕ್ ಖಾತೆಗಳನ್ನು ಒಳಗೊಂಡಿರುವ ಸಿಂಗಾಪುರ ನಾಗರಿಕರ ಮೇಲೆ ನಡೆಸಲಾದ 300 ಕ್ಕೂ ಹೆಚ್ಚು ಸೈಬರ್ ವಂಚನೆಗಳು ನಡೆದಿವೆ. ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು INTERPOL ಚಾನೆಲ್‌ಗಳ ಮೂಲಕ ಸಿಂಗಾಪುರ್ ಪೋಲೀಸ್ ಫೋರ್ಸ್‌ ನೀಡಿದೆ. </p>



<p>ಫಿಶಿಂಗ್, ವಿಶಿಂಗ್, ಸ್ಮಿಶಿಂಗ್ ಮತ್ತು ಮೋಸದ ತಂತ್ರಜ್ಞಾನ (phishing, vishing, smishing, &amp; fraudulent tech support) ದಂತಹ ಸೋಷಿಯಲ್ ಎಂಜಿನಿಯರಿಂಗ್ ವಿಧಾನಗಳನ್ನು ಬಳಸಿ ಅಪರಾಧಿಗಳು 400 ಸಿಂಗಾಪುರ್ ನಾಗರಿಕರಿಗೆ ವಂಚನೆ ಮಾಡಿದ್ದಾರೆ. ಈ ತಂತ್ರಗಾರಿಕೆಯನ್ನು ಬಳಸಿಕೊಂಡು ವಂಚಕರು ಸಿಂಗಪುರದ ಬ್ಯಾಂಕ್‌ ಖಾತೆಗಳಿಂದ ಭಾರತೀಯ ವಿವಿಧ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾಯಿಸಿದ್ದಾರೆ.ಇದಕ್ಕೆ ಸಂಬಂಧಿಸಿದಂತೆ 150 ಕ್ಕೂ ಅಧಿಕ ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.</p>



<p>ಪಾಟ್ನಾ, ಕೋಲ್ಕತ್ತಾ, ಲಕ್ನೋ, ವಾರಣಾಸಿ, ಚಂಡೀಗಢ, ಜಲಂಧರ್, ಭೋಪಾಲ್, ಚೆನ್ನೈ, ಕೊಚ್ಚಿ ಮತ್ತು ಮಧುರೈ ಸೇರಿದಂತೆ 35 ಸ್ಥಳಗಳಲ್ಲಿ ಆರೋಪಿಗಳ ಸಮ್ಮುಖದಲ್ಲೇ ಶೋಧ ನಡೆಸಿದಾಗ ಗುರುತಿನ ಪುರಾವೆಗಳಿಗೆ ಸಂಬಂಧಿಸಿದ ದೋಷಾರೋಪಣೆ ದಾಖಲೆಗಳು, ಮೋಸದ ಬ್ಯಾಂಕಿಂಗ್ ವ್ಯವಹಾರಗಳು ಮತ್ತು ಇತರ ಸಾಕ್ಷ್ಯಗಳು ಲಭ್ಯವಾಗಿವೆ. </p>



<p style="font-size:20px"><strong>ಹೇಗೆ ಮೋಸ ಮಾಡುತ್ತಾರೆ?</strong></p>



<p>ಸಿಬಿಐ ಮೂಲಗಳ ಪ್ರಕಾರ, ಸಂತ್ರಸ್ತರನ್ನು ಮೊದಲು ಗೂಗಲ್, ಫೇಸ್‌ಬುಕ್ ಜಾಹೀರಾತುಗಳು, ಟೆಲಿಗ್ರಾಮ್ ಅಪ್ಲಿಕೇಶನ್ ಮತ್ತು ಎಸ್‌ಎಂಎಸ್‌ಗಳ ಮೂಲಕ ಸಂಪರ್ಕಿಸಲಾಗುತ್ತದೆ. ಬೇಗ ಹಣ ಗಳಿಸಲು ಅವರಿಗೆ ಉದ್ಯೋಗಗಳನ್ನು ನೀಡುವ ಬರವಸೆ ನೀಡುತ್ತವೆ.</p>



<p>ಸಾಮಾನ್ಯವಾಗಿ ಈ ಮೆಸೆಜ್‌ಗಳು, </p>



<p>“ಸರ್, ಅಮೆಜಾನ್ &nbsp;ಅರೆಕಾಲಿಕ ಉದ್ಯೋಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ, ನೀವು ದಿನನಿತ್ಯ 3000-10000 ರುಪಾಯಿ ಗಳಿಸಬಹುದು”</p>



<p>“ಆತ್ಮೀಯ ನಾನು ಎಚ್‌ಆರ್‌. ನೀವು ಪಾರ್ಟ್‌ಟೈಮ್‌ ಹಾಗೂ ಫುಲ್‌ ಟೈಮ್ ಉದ್ಯೋಗಕ್ಕೆ ಆಯ್ಕೆಯಾಗಿದ್ದೀರಿ, ಈಗ ನೀವು ದಿನಕ್ಕೆ 20000 ರುಪಾಯಿ ಗಳಿಸಬಹುದು. ಅದಕ್ಕಾಗಿ, ನೀವು ಈ ಲಿಂಕ್ ಅನ್ನು ಕ್ಲಿಕ್ ಮಾಡಿ…”.</p>


<div class="wp-block-image">
<figure class="aligncenter size-large is-resized"><img loading="lazy" decoding="async" width="590" height="1024" src="https://peepalmedia.com/wp-content/uploads/2023/10/cab08340-da47-4818-ab51-7c02192c58d1-590x1024.jpg" alt="" class="wp-image-30268" style="aspect-ratio:0.576171875;width:246px;height:auto" srcset="https://peepalmedia.com/wp-content/uploads/2023/10/cab08340-da47-4818-ab51-7c02192c58d1-590x1024.jpg 590w, https://peepalmedia.com/wp-content/uploads/2023/10/cab08340-da47-4818-ab51-7c02192c58d1-173x300.jpg 173w, https://peepalmedia.com/wp-content/uploads/2023/10/cab08340-da47-4818-ab51-7c02192c58d1-150x260.jpg 150w, https://peepalmedia.com/wp-content/uploads/2023/10/cab08340-da47-4818-ab51-7c02192c58d1-300x520.jpg 300w, https://peepalmedia.com/wp-content/uploads/2023/10/cab08340-da47-4818-ab51-7c02192c58d1-696x1207.jpg 696w, https://peepalmedia.com/wp-content/uploads/2023/10/cab08340-da47-4818-ab51-7c02192c58d1.jpg 738w" sizes="auto, (max-width: 590px) 100vw, 590px" /><figcaption class="wp-element-caption">ಲೇಖಕರ ವೈಯಕ್ತಿಕ ಸಂಭಾಷಣೆ</figcaption></figure></div>


<p>ಸಾಮಾನ್ಯವಾಗಿ ಇಂತಹ ಮೆಸೆಜ್‌ಗಳ ಜೊತೆಗೆ ವಾಟ್ಸಾಪ್‌ ಅಥವಾ ಟೆಲಿಗ್ರಾಮ್‌ಗಳ ಲಿಂಕ್‌ಗಳು ಇರುತ್ತವೆ. ಇದರ ಮೇಲೆ ಕ್ಲಿಕ್‌ ಮಾಡಿದರೆ, ಅದು ನೇರವಾಗಿ ಚ್ಯಾಟಿಂಗ್‌ಗೆ ಹೋಗುತ್ತದೆ. ಈ ಸಂದರ್ಭದಲ್ಲಿ ವಂಚಕ ಸಂಭಾಷಣೆಯನ್ನು ನಡೆಸಿ, ಹೂಡಿಕೆಯ ವೆಬ್‌ಸೈಟ್‌ ಲಿಂಕ್‌ ಕಳಿಸುತ್ತಾನೆ.</p>



<p>ಇಷ್ಟು ಮಾತ್ರವಲ್ಲದೇ, ಕೆಲವೊಮ್ಮೆ ಚ್ಯಾಟಿಂಗ್‌ನಲ್ಲಿ ಹಣ ಹೂಡಿಕೆ ಮಾಡಿ, ತಕ್ಷಣವೇ ಲಾಭವನ್ನು ಪಡೆಯುವ ಬಗ್ಗೆ ಜನರಿಗೆ ಹೇಳಲಾಗುತ್ತದೆ. ಜೊತೆಗೆ, ಡಾಕ್ಯುಮೆಂಟ್‌ ಟೈಪ್‌ ಮಾಡುವ, ಯೂಟ್ಯೂಬ್‌ ಚಾನೆಲ್‌ ಲೈಕ್‌ ಮಾಡುವ, ಇ-ಮೇಲ್‌ ಟೈಪ್‌ ಮಾಡುವ ಸಣ್ಣ ಸಣ್ಣ ಕೆಲಸಗಳನ್ನು ನೀಡಲಾಗುತ್ತದೆ. ಇದರಲ್ಲಿ ಕಡ್ಡಾಯದ ಷರತ್ತು ಏನೆಂದರೆ, ವ್ಯಕ್ತಿ ತನ್ನ ಕ್ರೆಡೆನ್ಷಿಯಲ್ಸ್‌ ಪ್ರೂವ್‌ (ವಿಶ್ವಾಸಾರ್ಹತೆ) ಮಾಡಲು ತನ್ನ UPI ವ್ಯಾಲೆಟ್‌ನಲ್ಲಿ ಹಣ ಹಾಕಬೇಕು. ಇದಕ್ಕಾಗಿ ವಂಚಕರ ಸೈಟ್‌ಗಳು ಅನಧಿಕೃತ ಪೇಮೆಂಟ್‌ ಗೇಟ್‌ವೇಗಳನ್ನು ನೀಡುತ್ತಾರೆ.</p>


<div class="wp-block-image">
<figure class="aligncenter size-large is-resized"><img loading="lazy" decoding="async" width="643" height="1024" src="https://peepalmedia.com/wp-content/uploads/2023/10/27cb28cb-a716-400c-aed5-a6743f0788c4-643x1024.jpg" alt="" class="wp-image-30269" style="aspect-ratio:0.6279296875;width:269px;height:auto" srcset="https://peepalmedia.com/wp-content/uploads/2023/10/27cb28cb-a716-400c-aed5-a6743f0788c4-643x1024.jpg 643w, https://peepalmedia.com/wp-content/uploads/2023/10/27cb28cb-a716-400c-aed5-a6743f0788c4-188x300.jpg 188w, https://peepalmedia.com/wp-content/uploads/2023/10/27cb28cb-a716-400c-aed5-a6743f0788c4-768x1223.jpg 768w, https://peepalmedia.com/wp-content/uploads/2023/10/27cb28cb-a716-400c-aed5-a6743f0788c4-964x1536.jpg 964w, https://peepalmedia.com/wp-content/uploads/2023/10/27cb28cb-a716-400c-aed5-a6743f0788c4-150x239.jpg 150w, https://peepalmedia.com/wp-content/uploads/2023/10/27cb28cb-a716-400c-aed5-a6743f0788c4-300x478.jpg 300w, https://peepalmedia.com/wp-content/uploads/2023/10/27cb28cb-a716-400c-aed5-a6743f0788c4-696x1108.jpg 696w, https://peepalmedia.com/wp-content/uploads/2023/10/27cb28cb-a716-400c-aed5-a6743f0788c4-1068x1701.jpg 1068w, https://peepalmedia.com/wp-content/uploads/2023/10/27cb28cb-a716-400c-aed5-a6743f0788c4.jpg 1080w" sizes="auto, (max-width: 643px) 100vw, 643px" /><figcaption class="wp-element-caption">ಲೇಖಕರ ವೈಯಕ್ತಿಕ ಸಂಭಾಷಣೆ</figcaption></figure></div>


<p>ಇಂತಹ &nbsp;ಗೇಟ್‌ವೇಗಳು ಭಾರತದಲ್ಲಿ ಕೆಲಸ ಮಾಡಲು ಯಾವುದೇ ಅಧಿಕಾರ ಹೊಂದಿಲ್ಲ. ಈ ಎಲ್ಲಾ ಪಾವತಿಗಳನ್ನು ಇಂಟರ್ನೆಟ್ ಲಿಂಕ್‌ಗಳನ್ನು ಬಳಸಿಕೊಂಡು UPI ಮೂಲಕ ಮಾಡಲಾಗುತ್ತದೆ.</p>



<p>ಕೆಲವು ಬಾರಿ, ಟೆಲಿಗ್ರಾಮ್‌ಗಳಲ್ಲಿ ಸಂಪರ್ಕಿಸಿ, ಉದ್ಯೋಗದ ಆಮಿಷವನ್ನು ತೋರಿಸಿ ಯೂಟ್ಯೂಬ್‌ ಚಾನೆಲ್‌ಗಳಿಗೆ ಸಬ್‌ಸ್ಕ್ರೈಬ್‌ ಮಾಡುವ ಸಣ್ಣ ಸಣ್ಣ ಟಾಸ್ಕ್‌ಗಳನ್ನು ನೀಡಲಾಗುತ್ತದೆ. ಇದರ ಸ್ಕ್ರೀನ್‌ಶಾಟ್‌ಗಳನ್ನು ಕಳಿಸಬೇಕು. ಇದಾದ ನಂತರ, ಬೋನಸ್‌ ಹಣಕ್ಕಾಗಿ ಇನ್ನೊಂದು ಟೆಲಿಗ್ರಾಮ್‌ ಲಿಂಕ್‌ ಕಳಿಸುತ್ತಾರೆ. ಆ ಲಿಂಕ್‌ ತೆರೆದು ಮೊದಲಿನ ವ್ಯಕ್ತಿ ನೀಡಿದ ಕೋಡ್‌ ಒಂದನ್ನು ನೀಡಬೇಕು… ಹೀಗೆ ವಂಚಕರು ಇ-ಮೇಲ್, UPI ಮೊದಲಾದ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳುತ್ತಾರೆ.</p>



<p>ಈ ರೀತಿಯ ಮೆಸೆಜ್‌ಗಳನ್ನುವಾಟ್ಸಾಪ್‌, ಟೆಲಿಗ್ರಾಮ್‌ ಮೊದಲಾದ ಕಡೆ ಲಿಂಕ್‌ಗಳನ್ನು ಕಳುಹಿಸಲು ಬಳಸುವ‌ ಮೊಬೈಲ್ ಸಂಖ್ಯೆಗಳು ಬೇರೆ ಬೇರೆ ಸ್ಥಳಗಳನ್ನು ಆಧರಿಸಿರುತ್ತವೆ.‌ ಟೆಲಿಗ್ರಾಮಿನಲ್ಲಿ ಯಾವುದೇ ಮೊಬೈಲ್‌ ಸಂಖ್ಯೆ ಇರುವುದಿಲ್ಲ. ವಾಟ್ಸಾಪ್‌ನಲ್ಲಿ ಬಳಸುವ ಸಂಖ್ಯೆಗಳು ಅವುಗಳ ಮೂಲ ಬಳಕೆದಾರರಿಗೆ ತಿಳಿಯದಂತೆ ವಂಚಕರು ಬಳಸುತ್ತಿರುತ್ತಾರೆ.</p>



<p>ಈ ಜಾಲದಲ್ಲಿ ವಂಚಕರು ಕಾಲ್‌ ಸೆಂಟರ್‌ಗಳನ್ನು ಮಾಡಿಕೊಂಡು ಕೆಲಸ ಮಾಡುತ್ತಾರೆ. ಬೆಳಗ್ಗೆಯಿಂದ ಸಂಜೆಯವರೆಗೆ ಜನರೊಂದಿಗೆ ಸಂಭಾಷನೆ ನಡೆಸುವ ಇವರು, ಉಳಿದ ಸಮಯದಲ್ಲಿ ಬೇರೆ ಬೇರೆ ಸ್ಥಳಗಳಿಂದ ವಾಟ್ಸಾಪ್‌, ಟೆಲಿಗ್ರಾಮ್ ಮೂಲಕ ಚಾಟಿಂಗ್‌ ನಡೆಸುತ್ತಾರೆ. ಸಾಮಾನ್ಯವಾಗಿ ಇಂಗ್ಲೀಷಿನಲ್ಲಿ ಚಾಟಿಂಗ್‌ ನಡೆಸುವ ಇವರು, ಗೂಗಲ್‌ ಟ್ರಾನ್ಸ್‌ಲೇಷನ್‌ ಕೂಡಾ ಬಳಸುತ್ತಾರೆ.</p>



<p>ಹಣದ ವ್ಯವಹಾರಕ್ಕೆ ವಿದೇಶಿಗರು ಉಪಯೋಗಿಸುವ ಗೇಟ್‌ವೇಗಳನ್ನು ಬಳಸುತ್ತಾರೆ. ಈ ಪೇಮೆಂಟ್‌ ಗೇಟ್‌ವೇಗಳು UPI ಮೂಲಕ ಹಣವನ್ನು ಸ್ವೀಕರಿಸುತ್ತವೆ. ಯುಪಿಐಗಳನ್ನು RazorPay, BharatPe, ಇತ್ಯಾದಿಗಳ ಹಿಂದೆ ಲೇಯರಿಂಗ್ ರಚಿಸಲು ಬಳಸಿ, ದಿನದ ಕೊನೆಯಲ್ಲಿ ವ್ಯವಹಾರವನ್ನು ಮುಗಿಸುತ್ತಾರೆ. ರೇಜರ್ ಪೇ, ಈಸ್ ಬಝ್, ಪೇಟಿಎಂ, ಸ್ಪೀಡಿ ಪೇ, ಇನ್‌ಸ್ಟಂಟ್ ಪೇ, ಕ್ಯಾಶ್ ಫ್ರೀ ಮುಂತಾದ ಫಿನ್‌ಟೆಕ್ ಕಂಪನಿಗಳನ್ನು ಪಾವತಿಗಳಿಗೆ ಬಳಸಲಾಗುತ್ತದೆ.</p>



<p>ಆದರೆ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದೊಂದಿಗೆ ಶೆಲ್ ಕಂಪನಿಗಳು ಮತ್ತು ಬಾಡಿಗೆ ಕಂಪನಿಗಳು ಹೇಗೆ ವ್ಯವಹರಿಸಲು ಸಾಧ್ಯ? ಪಾವತಿಗಳಿಗೆ ಸೇವೆಗಳನ್ನು ಪಡೆಯಲು ನೋಂದಣಿ ಪ್ರಮಾಣಪತ್ರಗಳನ್ನು ಬಳಸಲಾಗುತ್ತದೆ. ಈ ಫಿನ್‌ಟೆಕ್ ಕಂಪನಿಗಳಲ್ಲಿ ಹೆಚ್ಚಿನವು ಮಾನ್ಯತೆ ಪಡೆದಿಲ್ಲ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ನೇರವಾಗಿ ನಿಯಂತ್ರಿಸಲ್ಪಡುವುದಿಲ್ಲ.</p>



<p>ನಿಮ್ಮ ಫೋನ್‌ಗೆ ಇಂತಹ ಮೆಸೆಜ್‌ಗಳು ಬಂದರೆ ಅವುಗಳನ್ನು ಬ್ಲಾಕ್‌ ಮಾಡುವುದೇ ಒಳಿತು. ಅವರ ನಿರ್ದೇಶನದಂತೆ ನಾವು ಮುಂದುವರಿಸಿ, ನಮ್ಮೆಲ್ಲಾ ಮಾಹಿತಿಗಳನ್ನು ಅವರಿಗೆ ನೀಡಿದರೆ ಅಥವಾ ಹಣದ ವ್ಯವಹಾರ ನಡೆಸಿದರೆ ಮೋಸ ಖಚಿತ. ಹಣದ ವ್ಯವಹಾರ ಮುಗಿದ ತಕ್ಷಣ ನಾವು ಹಣ ಕಳುಹಿಸಿದ ವ್ಯಕ್ತಿ ಪತ್ತಯೇ ಇರುವುದಿಲ್ಲ!</p>



<p>ಎಚ್ಚರ….</p>



<p></p>



<p><strong>ಲೇಖನ: </strong>ಚರಣ್‌ ಐವರ್ನಾಡು, ಬೆಂಗಳೂರು</p>
]]></content:encoded>
					
		
		
			</item>
		<item>
		<title>ಅಮರಸುಳ್ಯದ ಸಮರ ಕಥನ</title>
		<link>https://peepalmedia.com/story-of-amara-sulya-by-charan-ivarnad/</link>
		
		<dc:creator><![CDATA[Charan Aivarnad]]></dc:creator>
		<pubDate>Sat, 19 Nov 2022 10:24:54 +0000</pubDate>
				<category><![CDATA[ವಿಶೇಷ]]></category>
		<category><![CDATA[amara sulya]]></category>
		<category><![CDATA[bavuta gudde]]></category>
		<category><![CDATA[charan Aivarnad]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[madikeri]]></category>
		<category><![CDATA[mangalore]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[victoria gouramma]]></category>
		<guid isPermaLink="false">https://peepalmedia.com/?p=15893</guid>

					<description><![CDATA[ಬ್ರಿಟೀಷರ ವಿರುದ್ದ ಹೋರಾಡಿ ಹಾಲೇರಿಯ ಧ್ವಜವನ್ನು ಹಾರಿಸಿದ ರಾಮೇಗೌಡರ ಪ್ರತಿಮೆ ಮಂಗಳೂರಿನ ಬಾವುಟಗುಡ್ಡೆಯಲ್ಲಿ ಇಂದು (ನ.೧೯)‌ ಪ್ರತಿಷ್ಠಾಪನೆ ಗೊಳ್ಳುತ್ತಿದ್ದು, ನಾಡಿನ ಚರಿತ್ರೆಯಲ್ಲಿ ತಡವಾಗಿ ಚರ್ಚೆಯಾಗಿರುವ ಕೊಡಗು&#8211;ಕೆನರಾ ಬಂಡಾಯವನ್ನು ಕರ್ನಾಟಕದ ಜನತೆ ಸ್ಮರಿಸಿಕೊಳ್ಳುತ್ತಿದ್ದಾರೆ. ಚರಣ್‌ ಐವರ್ನಾಡ್ ಈ ಸಂದರ್ಭದಲ್ಲಿ ಅಮರಸುಳ್ಯ ಸಮರದ ಕಥನವನ್ನು ಸಂಕ್ಷಿಪ್ತವಾಗಿ ಮೊಗೆದು ಕೊಟ್ಟಿದ್ದಾರೆ ಅಮರಸುಳ್ಯ ದಂಗೆ ಎಂದೇ ಕರೆಯಲ್ಪಡುವ ಕೊಡಗು-ಕೆನರಾ ಬಂಡಾಯದಲ್ಲಿ ಹುತಾತ್ಮರಾದ ಕೆದಂಬಾಡಿ ರಾಮೇಗೌಡರ ಪ್ರತಿಮೆ ಮಂಗಳೂರಿನಲ್ಲಿ ಇಂದು ಲೋಕಾರ್ಪಣೆಗೊಳ್ಳುತ್ತಿದೆ. ಕೆದಂಬಾಡಿ ರಾಮೇಗೌಡರು ೧೮೩೭ರ ಅಮರಸುಳ್ಯ ಸಮರದ ನೇತೃತ್ವ ವಹಿಸಿ ಬ್ರಿಟೀಷ್‌ ಸರ್ಕಾರದ [&#8230;]]]></description>
										<content:encoded><![CDATA[
<h5 class="has-text-align-center wp-block-heading"><strong>ಬ್ರಿಟೀಷರ ವಿರುದ್ದ ಹೋರಾಡಿ ಹಾಲೇರಿಯ ಧ್ವಜವನ್ನು ಹಾರಿಸಿದ ರಾಮೇಗೌಡರ ಪ್ರತಿಮೆ ಮಂಗಳೂರಿನ ಬಾವುಟಗುಡ್ಡೆಯಲ್ಲಿ ಇಂದು (ನ.೧೯)‌ ಪ್ರತಿಷ್ಠಾಪನೆ ಗೊಳ್ಳುತ್ತಿದ್ದು, ನಾಡಿನ ಚರಿತ್ರೆಯಲ್ಲಿ ತಡವಾಗಿ ಚರ್ಚೆಯಾಗಿರುವ ಕೊಡಗು</strong><strong>&#8211;</strong><strong>ಕೆನರಾ ಬಂಡಾಯವನ್ನು ಕರ್ನಾಟಕದ ಜನತೆ ಸ್ಮರಿಸಿಕೊಳ್ಳುತ್ತಿದ್ದಾರೆ</strong><strong>. </strong><strong>ಚರಣ್‌ ಐವರ್ನಾಡ್ ಈ ಸಂದರ್ಭದಲ್ಲಿ ಅಮರಸುಳ್ಯ ಸಮರದ ಕಥನವನ್ನು ಸಂಕ್ಷಿಪ್ತವಾಗಿ ಮೊಗೆದು ಕೊಟ್ಟಿದ್ದಾರೆ</strong></h5>



<p>ಅಮರಸುಳ್ಯ ದಂಗೆ ಎಂದೇ ಕರೆಯಲ್ಪಡುವ ಕೊಡಗು-ಕೆನರಾ ಬಂಡಾಯದಲ್ಲಿ ಹುತಾತ್ಮರಾದ ಕೆದಂಬಾಡಿ ರಾಮೇಗೌಡರ ಪ್ರತಿಮೆ ಮಂಗಳೂರಿನಲ್ಲಿ ಇಂದು ಲೋಕಾರ್ಪಣೆಗೊಳ್ಳುತ್ತಿದೆ. ಕೆದಂಬಾಡಿ ರಾಮೇಗೌಡರು ೧೮೩೭ರ ಅಮರಸುಳ್ಯ ಸಮರದ ನೇತೃತ್ವ ವಹಿಸಿ ಬ್ರಿಟೀಷ್‌ ಸರ್ಕಾರದ ವಿರುದ್ಧ ವ್ಯವಸ್ಥಿತ ಹೋರಾಟವನ್ನು ರೂಪಿಸಿದವರು. ಇಡೀ ಕೆನರಾ ಜಿಲ್ಲೆ ಹಾಗೂ ಕೊಡಗನ್ನು ಈ ಹೋರಾಟದಲ್ಲಿ ಸಂಘಟಿಸಿ ಮುನ್ನಡೆಸಿದವರು.</p>



<p><strong>ಸ್ವಾತಂತ್ರ್ಯ ಸಂಗ್ರಾಮ 1837ರಲ್ಲೇ ನಡೆದಿತ್ತು&#8230;!!</strong></p>



<p>೧೮೫೭ರ ಸಿಪಾಯಿ ದಂಗೆಯ ಮೂಲಕ ಬ್ರಿಟೀಷರ ವಿರುದ್ಧದ ಹೋರಾಟದ ಚರಿತ್ರೆಯನ್ನು ಆರಂಭಿಸಲಾಗುತ್ತಿತ್ತು. ಆದರೆ ಈಗ ೧೮೫೭ಕ್ಕೂ ಹಿಂದೆ ದೇಶದ ಅಲ್ಲಲ್ಲಿ ನಡೆದಿರುವ ಹೋರಾಟಗಳ ಕುರಿತಾದ ಅಧ್ಯಯನಗಳು, ಅರಿವು ಹೆಚ್ಚಾಗುತ್ತಿವೆ. ೧೮೩೪-೧೮೩೭ರಲ್ಲಿ ಕೊಡಗು ಹಾಗೂ ಕೆನರಾ ಜಿಲ್ಲೆಗಳಲ್ಲಿ ನಡೆದಿರುವ ಹೋರಾಟ ಈಗ ಚರಿತ್ರೆಯ ಪುಟಗಳಲ್ಲಿ ಮಹತ್ವದ ಸ್ಥಾನವನ್ನು ಪಡೆದಿದೆ. ೧೮೫೭ರಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮವನ್ನು ʼಸಿಪಾಯಿಗಳ ದಂಗೆʼಎಂದು ಸಂಕುಚಿತಗೊಳಿಸುವ ವಸಾಹತು ಪ್ರಭುತ್ವದ ತಂತ್ರವು ಸ್ವಾತಂತ್ರ್ಯ ಸಂಗ್ರಾಮ 1837ರಲ್ಲೇ ನಡೆದಿತ್ತು….!!!! ಹೌದು…ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಇಪ್ಪತ್ತು ವರ್ಷ ಮೊದಲೇ ರಾಷ್ಟ್ರೀಯತೆಯ ಅರಿವು ಇದ್ದೋ ಇಲ್ಲದೆಯೋ ಆಂಗ್ಲರಿಗೆ ತಮ್ಮ ಸ್ವಾತಂತ್ರ್ಯದ ಹಸಿವಿನ ಬಿಸಿಯನ್ನು ಮುಟ್ಟಿಸಿದವರು ಕೊಡಗು-ಸುಳ್ಯದ ಜನರು. ಇದು ಭಾರತದ ಇತಿಹಾಸದಲ್ಲಿ ದಾಖಲಾಗದ ಮೊದಲ ಸ್ವಾತಂತ್ರ್ಯ ಸಂಗ್ರಾಮ, ಆಂಗ್ಲರು ಹೀಗಳೆದ ದರೋಡೆ. ಈ ಹೋರಾಟವನ್ನು ‘ಕಲ್ಯಾಣಪ್ಪನ ಕಾಟಕಾಯಿ’ ಎಂದು ಕರೆದು ಅದನ್ನು ದರೋಡೆ ಎಂಬಂತೆ ಬಿಂಬಿಸಲಾಯಿತು. ಇದಕ್ಕೆ ಕೆನರಾ &#8211; ಕೊಡಗಿನ ಜನರು ಬೆಂಬಲ ನೀಡದಂತೆ ಮಾಡುವ ಸರ್ವ ಪ್ರಯತ್ನಗಳನ್ನೂ ಬ್ರಿಟೀಷ್‌ ಸರ್ಕಾರ ಮಾಡಿದೆ.</p>



<p><strong>ಚಿಕವೀರ ರಾಜೇಂದ್ರನ ಶರಣಾಗತಿ &nbsp;</strong></p>



<p>1834ರ ವರೆಗೆ ಅಮರಸುಳ್ಯವು ಕೊಡಗಿನ ಹಾಲೇರಿಯ ಲಿಂಗಾಯಿತ ಅರಸರ ಸುಪರ್ದಿಯಲ್ಲಿತ್ತು. ಕೊನೆಯ ಅರಸ ಚಿಕವೀರ ರಾಜೇಂದ್ರನು ಸ್ತ್ರೀ ಸುಖ ಲೋಲುಪನಾಗಿ ಕೊಡಗಿನ ಜನ ಅವನನ್ನು ದ್ವೇಷಿಸಲಾರಂಭಿಸಿದರು. ಚರಿತ್ರೆಕಾರರು ಚಿಕವೀರ ರಾಜೇಂದ್ರನ ಬಗ್ಗೆ ಇದೊಂದು ಅಪಪ್ರಚಾರ ಎಂದು ದಾಖಲಿಸಿದ್ದಾರೆ. ಟಿಪ್ಪು ಸುಲ್ತಾನನ ಮರಣದ ನಂತರ ಕೊಡಗು ಮತ್ತೆ ಹಾಲೇರಿ ರಾಜರ ಆಡಳಿತಕ್ಕೆ ಒಳಪಟ್ಟಿತು. ಆದರೆ ಕೊಡಗಿನ ಆಡಳಿತ ಹದಗೆಟ್ಟಿದೆ ಎಂಬ ಕಾರಣ ನೀಡಿ ಆಂಗ್ಲರು 1834ರ ಎಪ್ರಿಲ್ ತಿಂಗಳಲ್ಲಿ ಮೈಸೂರಿನ ಕರ್ನಲ್ ಫ್ರೇಸರ್ ನ ನೇತೃತ್ವದಲ್ಲಿ ಕೊಡಗನ್ನು ವಶಪಡಿಸಿಕೊಳ್ಳಲು ಮುಂದಾಗುತ್ತಾರೆ. ಎಪ್ರಿಲ್ 6 ರಂದು ಮಡಿಕೇರಿಯ ಕೋಟೆ ಫ್ರೇಸರ್ ನ ವಶವಾಗುತ್ತದೆ. ಅರಸ ನಾಲ್ಕುನಾಡಿನ ಅರಮನೆಗೆ ಹೆದರಿ ಪಲಾಯನ ಮಾಡುತ್ತಾನೆ. ದಿವಾನ್ ಲಕ್ಷ್ಮೀನಾರಾಯಣ, ಬೋಪು ಶರಣಾಗತರಾಗುವ ಸಲಹೆ ನೀಡುತ್ತಾರೆ. ಎಪ್ರಿಲ್‌ 10ರಂದು ಮಡಿಕೇರಿಯಲ್ಲಿ ಶರಣಾದ ಚಿಕವೀರ ರಾಜೇಂದ್ರ ಒಡೆಯರ್‌ ನನ್ನು ಫ್ರೇಸರ್ ಎಪ್ರಿಲ್‌ 24ರಂದು ಬೆಂಗಳೂರಿಗೆ ಕಳುಹಿಸಿದನು. ಮುಂದೆ ಮಗಳು ಗೌರಮ್ಮನ ಸಮೇತ ರಾಜಪರಿವಾರವನ್ನು ವಾರಣಾಸಿಗೆ ಕಳುಹಿಸಿ ಅಲ್ಲಿಂದ ಲಂಡನ್‌ ಗೆ ಸಾಗಿಸುತ್ತಾರೆ. 1859, ಸೆಪ್ಟೆಂಬರ್‌ 24ರಂದು ಒಡೆಯರ್ ಅನಾರೋಗ್ಯದಿಂದ ಬಳಲಿ ಲಂಡನ್ ನಲ್ಲೇ ಮರಣ ಹೊಂದುತ್ತಾನೆ. ಅವನ ಮಗಳನ್ನು ಕ್ರೈಸ್ತ ಮತಕ್ಕೆ ಮತಾಂತರ ಮಾಡಿ ವಿಕ್ಟೋರಿಯಾ ಗೌರಮ್ಮ ಎಂದು ಹೆಸರಿಡಲಾಗುತ್ತದೆ.</p>



<p>ಕೊಡಗಿನಲ್ಲಿ ಅರಸ ಲಿಂಗರಾಜೇಂದ್ರ ಜಾರಿಗೆ ತಂದ ಆಡಳಿತ ವ್ಯವಸ್ಥೆ ಚಾಲ್ತಿಯಲ್ಲಿತ್ತು. ಕೊಡಗಿನ ಆಡಳಿತ &#8211; ಕಾನೂನು ವ್ಯವಸ್ಥೆ ʼಲಿಂಗರಾಜೇಂದ್ರನ ಹುಕುಂನಾಮೆಗಳುʼ (೧೮೧೧) ಮೂಲಕ ನಡೆಯುತ್ತಿತ್ತು. ಆದರೆ ಆಂಗ್ಲರು ಕೊಡಗನ್ನು ಆಕ್ರಮಿಸಿದ ನಂತರ ಹಣದ ಮೂಲಕ ಕಂದಾಯ ಸಲ್ಲಿಸಲು ಆಜ್ಞಾಪಿಸಿದಾಗ ವಸ್ತು ರೂಪದಲ್ಲಿ ಕಂದಾಯವನ್ನು ಪಾವತಿಸುತ್ತಿದ್ದ ಕೊಡಗರಿಗೆ ಅಸಮಾಧಾನ ಉಂಟಾಗುತ್ತದೆ.</p>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow">
<figure class="wp-block-image size-full"><img loading="lazy" decoding="async" width="363" height="256" src="https://peepalmedia.com/wp-content/uploads/2022/11/Chikka-Veerarajendra-The-Last-King-of-Coorg-with-the-princess-Gowramma.jpg" alt="" class="wp-image-15897" srcset="https://peepalmedia.com/wp-content/uploads/2022/11/Chikka-Veerarajendra-The-Last-King-of-Coorg-with-the-princess-Gowramma.jpg 363w, https://peepalmedia.com/wp-content/uploads/2022/11/Chikka-Veerarajendra-The-Last-King-of-Coorg-with-the-princess-Gowramma-300x212.jpg 300w, https://peepalmedia.com/wp-content/uploads/2022/11/Chikka-Veerarajendra-The-Last-King-of-Coorg-with-the-princess-Gowramma-150x106.jpg 150w" sizes="auto, (max-width: 363px) 100vw, 363px" /></figure>
</div>



<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="1024" height="683" src="https://peepalmedia.com/wp-content/uploads/2022/11/Chikka-Veera-raja-1024x683.jpg" alt="" class="wp-image-15898" srcset="https://peepalmedia.com/wp-content/uploads/2022/11/Chikka-Veera-raja-1024x683.jpg 1024w, https://peepalmedia.com/wp-content/uploads/2022/11/Chikka-Veera-raja-300x200.jpg 300w, https://peepalmedia.com/wp-content/uploads/2022/11/Chikka-Veera-raja-768x512.jpg 768w, https://peepalmedia.com/wp-content/uploads/2022/11/Chikka-Veera-raja-1536x1024.jpg 1536w, https://peepalmedia.com/wp-content/uploads/2022/11/Chikka-Veera-raja-2048x1366.jpg 2048w, https://peepalmedia.com/wp-content/uploads/2022/11/Chikka-Veera-raja-150x100.jpg 150w, https://peepalmedia.com/wp-content/uploads/2022/11/Chikka-Veera-raja-696x464.jpg 696w, https://peepalmedia.com/wp-content/uploads/2022/11/Chikka-Veera-raja-1068x712.jpg 1068w, https://peepalmedia.com/wp-content/uploads/2022/11/Chikka-Veera-raja-1920x1280.jpg 1920w" sizes="auto, (max-width: 1024px) 100vw, 1024px" /></figure>
</div>
</div>



<p><strong>ಸ್ವಾಮಿ ಅಪರಂಪಾರ ಎಂಬ ಜಂಗಮ</strong></p>



<p>1833ರಲ್ಲಿ ಮಂಜರಾಬಾದ್ ಭಾಗಗಳಲ್ಲಿ ಸ್ವಾಮಿ ಅಪರಂಪಾರ ಎಂಬ ಓರ್ವ ಜಂಗಮ ಕಾಣಿಸಿಕೊಳ್ಳುತ್ತಾನೆ. ಕೊಡಗಿನ ಜನ ಇವನನ್ನು ಹಿಂದಿನ ಅರಸ ಲಿಂಗರಾಜೇಂದ್ರನ ಅಣ್ಣ ಅಪ್ಪಾಜಿಯ ಹಿರಿಮಗ ವೀರಪ್ಪನೆಂದು ಭಾವಿಸುತ್ತಾರೆ. ಆದರೆ ಇವನು ತುಮಕೂರಿನ ಮಾಯಸಂದ್ರದ ಕಡಗನೂರಿನವ ಎನ್ನಲಾಗಿದೆ. ಸಾಹಿತಿ ನಿರಂಜನರು ಇವನ ಬಗ್ಗೆಯೇ ‘ಸ್ವಾಮಿ ಅಪರಂಪಾರ’ ಎಂಬ ಕಾದಂಬರಿ ಬರೆದಿದ್ದಾರೆ. ರಾಜ ಪರದೇಶಿಯಾದ ಮೇಲೆ ಸೂಕ್ತ ನಾಯಕತ್ವ ಇಲ್ಲದ್ದರಿಂದ ಅಪರಂಪಾರನನ್ನೇ ತಮ್ಮ ನಾಯಕನನ್ನಾಗಿ ಸ್ವೀಕರಿಸುತ್ತಾರೆ. ಇವನು ಸೋಮವಾರಪೇಟೆ, ಹಾರಂಗಿ, ಹಾಲೇರಿ, ಹೊಸಕೋಟೆ ಮೊದಲಾದೆಡೆ ಆಂಗ್ಲರ ವಿರುದ್ಧ ಜನ ಸಂಘಟನೆ ನಡೆಸಿ ಸುಬ್ರಹ್ಮಣ್ಯಕ್ಕೆ ಬರುತ್ತಾನೆ. ಇವನನ್ನು ರಾಜವಂಶಸ್ಥನೆಂದು ಪರಿಗಣಿಸಿ ಕೂಜುಗೋಡಿನ ಅಪ್ಪಯ್ಯ ಗೌಡ ಹಾಗೂ ಮಲ್ಲಪ್ಪ ಗೌಡರು ಸತ್ಕರಿಸುತ್ತಾರೆ. ಇವನೊಂದಿಗೆ ಸೇರಿ ಕೊಡಗಿನಿಂದ ಬ್ರಿಟಿಷರನ್ನು ಓಡಿಸುವ ಯೋಜನೆ ಹಾಕಿಕೊಳ್ಳುತ್ತಾರೆ. ಇವರ ಸಾವಿರಾರು ಮಂದಿ ಸೈನಿಕರಿದ್ದ ಪಟ್ಟಾಳ ಮಡಿಕೇರಿಯ ಕಡೆಗೆ ನಡೆಯುತ್ತದೆ. ಆದರೆ ಅಪರಂಪಾರ ಗೌಡಳ್ಳಿ ತಲುಪುವ ಮುನ್ನವೇ ಮೋಸದಿಂದ ಸೆರೆಯಾಗುತ್ತಾನೆ. ಕೂಜುಗೋಡು ಸಹೋದರರು ಪಾರಾಗುತ್ತಾರೆ. ಅಪರಂಪಾರನನ್ನು ತಿರುಚಿನಾಪಳ್ಳಿಯ ಜೈಲಿಗೆ ಕಳುಹಿಸಲಾಯಿತು. ಆತ 1869ರಲ್ಲಿ ಬಿಡುಗಡೆಯಾಗಿ 1870ರಲ್ಲಿ ಶ್ರೀರಂಗಪಟ್ಟಣದಲ್ಲಿ ನಿಧನ ಹೊಂದಿದ.</p>



<p><strong>ಕಲ್ಯಾಣ ಸ್ವಾಮಿಯ ಪ್ರವೇಶ</strong></p>



<p>ಅಪರಂಪಾರನ ಆಪ್ತರಲ್ಲಿ ಓರ್ವನಾದ ಕಲ್ಯಾಣ ಬಸವ-ಕಲ್ಯಾಣಪ್ಪ ತನ್ನನ್ನು ಅಪ್ಪಾಜಿಯ ದ್ವಿತೀಯ ಪುತ್ರನೆಂದು ಕರೆಸಿಕೊಂಡು ಕಲ್ಯಾಣಸ್ವಾಮಿ ಎಂಬ ಹೆಸರಿನಿಂದ ಹಾಲೇರಿಯ ಗದ್ದುಗೆ ಏರಲು ಜನ ಬೆಂಬಲ ಪಡೆಯುತ್ತಾನೆ. ಆದರೆ ದಿವಾನ ಚೆಪ್ಪುಡಿರ ಪೊನ್ನಪ್ಪ ಮಡಿಕೇರಿಯಲ್ಲಿ ಆಂಗ್ಲ ಅಧಿಕಾರಿ ಕ್ಯಾಪ್ಟನ್ ಲೀಹಾರ್ಡಿಯ ಮುಂದೆ ಕಲ್ಯಾಣಪ್ಪನನ್ನು ಹಾಲೇರಿ ರಾಜವಂಶಸ್ಥನಲ್ಲ ಎಂದು ಸಾಬೀತುಪಡಿಸಿದ. ಆದರೂ ಜನ ಬೆಂಬಲ ಕಲ್ಯಾಣಪ್ಪನಿಗೆ ಕಡಿಮೆಯಾಗಲಿಲ್ಲ. ಏಳು ಸಾವಿರ ಸೀಮೆಯ ಹುಲಿ ಕಡಿದ ನಂಜಯ್ಯ, ಗುಡ್ಡೆಮನೆ ಅಪ್ಪಯ್ಯ ಗೌಡ ಇವನಿಗೆ ಬೆಂಗಾವಲಾಗಿ ನಿಂತರು. ಕೆದಂಬಾಡಿ ರಾಮ ಗೌಡ, ಕೂಜುಗೋಡು ಸಹೋದರರು, ಪೆರಾಜೆ ಊಕಣ್ಣ ಬಂಟ, ಕುಂಬ್ಳೆಯ ಅರಸ ಸುಬ್ರಾಯ ಹೆಗ್ಡೆ, ಧರ್ಮಸ್ಥಳದ ಹೆಗ್ಡೆ ಮೊದಲಾದವರು ಬೆಂಬಲ ಸೂಚಿಸಿದರು.</p>



<p>ತನ್ನ ಕಾರ್ಯವನ್ನು ಕಲ್ಯಾಣಸ್ವಾಮಿ ದಕ್ಷಿಣ ಕನ್ನಡಕ್ಕೆ ವಿಸ್ತರಿಸಲು ತೀರ್ಮಾನಿಸಿದರೂ ಅವನನ್ನು ಸೆರೆ ಹಿಡಿಯುವ ಆಂಗ್ಲರ ಯೋಜನೆಯನ್ನು ಅರಿತು ಕೊಡ್ಲಿಪೇಟೆಯ ಮೂಲಕ ವೈನಾಡಿನ ಕಡೆ ಪ್ರಯಾಣ ಬೆಳೆಸುತ್ತಾನೆ. ಆದರೆ ಲೀಹಾರ್ಡಿ ಮಲಬಾರಿನ ಸೈನಿಕರ ನೆರವಿನಿಂದ ಇವನನ್ನು 1837ರಲ್ಲಿ ಸೆರೆ ಹಿಡಿದು ಮೈಸೂರಿನ ಸೆರೆಮನೆಗೆ ತಳ್ಳುತ್ತಾನೆ.</p>


<div class="wp-block-image">
<figure class="aligncenter size-large is-resized"><img loading="lazy" decoding="async" src="https://peepalmedia.com/wp-content/uploads/2022/11/for-auction-by-10th-may-2013-A.-H.-Balwin-Sons-1024x606.jpg" alt="" class="wp-image-15899" width="395" height="233" srcset="https://peepalmedia.com/wp-content/uploads/2022/11/for-auction-by-10th-may-2013-A.-H.-Balwin-Sons-1024x606.jpg 1024w, https://peepalmedia.com/wp-content/uploads/2022/11/for-auction-by-10th-may-2013-A.-H.-Balwin-Sons-300x178.jpg 300w, https://peepalmedia.com/wp-content/uploads/2022/11/for-auction-by-10th-may-2013-A.-H.-Balwin-Sons-768x455.jpg 768w, https://peepalmedia.com/wp-content/uploads/2022/11/for-auction-by-10th-may-2013-A.-H.-Balwin-Sons-150x89.jpg 150w, https://peepalmedia.com/wp-content/uploads/2022/11/for-auction-by-10th-may-2013-A.-H.-Balwin-Sons-696x412.jpg 696w, https://peepalmedia.com/wp-content/uploads/2022/11/for-auction-by-10th-may-2013-A.-H.-Balwin-Sons-1068x632.jpg 1068w, https://peepalmedia.com/wp-content/uploads/2022/11/for-auction-by-10th-may-2013-A.-H.-Balwin-Sons.jpg 1500w" sizes="auto, (max-width: 395px) 100vw, 395px" /></figure></div>


<p><strong>ಪುಟ್ಟ ಬಸವ ಕಲ್ಯಾಣಪ್ಪನಾದನು!</strong></p>



<p>ಬಂಧನದ ವಿಚಾರ ಹುಲಿಕಡಿದ ನಂಜಯ್ಯನಿಗೆ ಮಾತ್ರ ಗೊತ್ತಿತ್ತು. ಸಂಘಟನೆ ಉಳಿಸಿಕೊಳ್ಳುವುದಕ್ಕಾಗಿ ಜನರಿಗೆ ಇದನ್ನು ಗೊತ್ತಾಗದಂತೆ ಗೌಪ್ಯವಾಗಿಡಲಾಗುತ್ತದೆ. ಕೆದಂಬಾಡಿ ರಾಮಗೌಡನೊಂದಿಗೆ ಚರ್ಚಿಸಿ ಅಪರಂಪಾರನ ಸಹಾಯಕ ಹಾಗೂ ಕಲ್ಯಾಣ ಸ್ವಾಮಿಯ ಆಪ್ತ ಪುಟ್ಟ ಬಸವನನ್ನು ಕಲ್ಯಾಣಪ್ಪನೆಂದು ಬಿಂಬಿಸಲಾಯ್ತು. ಇವನಿಗೆ ಕೊಡಗಿನ ಪಟ್ಟವನ್ನು ಕಟ್ಟಲು ಜನರು ಬೆಂಬಲ ನೀಡಿದರು. ಜನರು ಬಸವನನ್ನೇ ಕಲ್ಯಾಣಪ್ಪ ಎಂದು ನಂಬಿದ್ದರು!</p>



<p><strong>ಅಟ್ಲೂರು ರಾಮಪ್ಪಯ್ಯನ ಹತ್ಯೆ</strong></p>



<p>ಅಮರಸುಳ್ಯವನ್ನು ಕೊಡಗಿನಿಂದ ಬೇರ್ಪಡಿಸಿ ನಗದು ರೂಪದ ಕಂದಾಯವನ್ನು ಹೇರಿದ್ದರಿಂದ ಸುಳ್ಯ ಮಾಗಣೆಯವರಿಗೆ ಆಂಗ್ಲರ ಮೇಲೆ ಅಸಾಧ್ಯ ಕೋಪವಿತ್ತು. ಇದರಿಂದ ನಂಜಯ್ಯ ಹಾಗೂ ಕೆದಂಬಾಡಿ ರಾಮ ಗೌಡ 1837 ಎಪ್ರಿಲ್‌ 6 ರಂದು ಸುಳ್ಯದಿಂದಲೇ ಹೋರಾಟ ಆರಂಭಿಸಲು ತೀರ್ಮಾನಿಸುತ್ತಾರೆ. ಆದರೆ ಕೊಡಗಿನ ದಿವಾನ ಲಕ್ಷ್ಮೀನಾರಾಯಣನ ಸೋದರ ಅಟ್ಲೂರು ರಾಮಪ್ಪಯ್ಯನ ಕುತಂತ್ರ ಅರಿತು ಮುಂಚೆಯೇ ದಂಗೆ ಅರಂಭಿಸಲಾಯ್ತು. ಇವನು ಅಮರಸುಳ್ಯದ ಅಮಲ್ದಾರನಾಗಿದ್ದು ಆಂಗ್ಲರ ಪರವಾಗಿ ಕೆಲಸಮಾಡುತ್ತಿದ್ದ. ಒಂದು ಬಾರಿ ಅಟ್ಲೂರು ರಾಮಪ್ಪಯ್ಯ ಕೆದಂಬಾಡಿ ರಾಮಗೌಡನನ್ನು ಅವಮಾನಿಸಿದ್ದರಿಂದ ಗೌಡನ ಕಡೆಯವರು ಕಾಂತಮಂಗಲದಲ್ಲಿ ಅಡ್ಡಗಟ್ಟಿ ಕತ್ತಿಯಿಂದ ಅವನನ್ನು ಕಡಿದರು. ಆದರೆ ಅವನ ಕುದುರೆಯ ವೇಗದ ಓಟ ಅವನನ್ನು ಉಳಿಸಿತ್ತು.&nbsp; ಸುಳ್ಯದ ಮದುವೆಗದ್ದೆಗೆ ಬಂದಾಗ ಅವನನ್ನು ಕೊಚ್ಚಿ ಕೊಲ್ಲುವುದರೊಂದಿಗೆ ರಣಕಹಳೆ ಊದಲಾಯಿತು.</p>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow">
<figure class="wp-block-image size-full is-resized"><img loading="lazy" decoding="async" src="https://peepalmedia.com/wp-content/uploads/2022/11/madikeri-fort-coorg.jpg" alt="" class="wp-image-15900" width="338" height="169" srcset="https://peepalmedia.com/wp-content/uploads/2022/11/madikeri-fort-coorg.jpg 708w, https://peepalmedia.com/wp-content/uploads/2022/11/madikeri-fort-coorg-300x150.jpg 300w, https://peepalmedia.com/wp-content/uploads/2022/11/madikeri-fort-coorg-150x75.jpg 150w, https://peepalmedia.com/wp-content/uploads/2022/11/madikeri-fort-coorg-696x348.jpg 696w" sizes="auto, (max-width: 338px) 100vw, 338px" /><figcaption class="wp-element-caption">ಮಡಿಕೇರಿ ಕೋಟೆ</figcaption></figure>
</div>



<div class="wp-block-column is-layout-flow wp-block-column-is-layout-flow">
<figure class="wp-block-image size-full"><img loading="lazy" decoding="async" width="300" height="405" src="https://peepalmedia.com/wp-content/uploads/2022/11/Bavutagudde_Light_House.jpg" alt="" class="wp-image-15901" srcset="https://peepalmedia.com/wp-content/uploads/2022/11/Bavutagudde_Light_House.jpg 300w, https://peepalmedia.com/wp-content/uploads/2022/11/Bavutagudde_Light_House-222x300.jpg 222w, https://peepalmedia.com/wp-content/uploads/2022/11/Bavutagudde_Light_House-150x203.jpg 150w" sizes="auto, (max-width: 300px) 100vw, 300px" /><figcaption class="wp-element-caption">ಬಾವುಟ ಗುಡ್ಡೆ ಲೈಟ್‌ ಹೌಸ್</figcaption></figure>
</div>
</div>



<p><strong>ಮಂಗಳೂರು ಕೈವಶವಾಯಿತು!</strong></p>



<p>ಕಲ್ಯಾಣಸ್ವಾಮಿಯೊಂದಿಗೆ ನಂಜಯ್ಯ, ಕೆದಂಬಾಡಿ ರಾಮ ಗೌಡ, ಚೆಟ್ಟಿ-ಕುರ್ತು ಕುಡಿಯರು, ಕರಡಿಮಲೆ ಅಣ್ಣಿಗೌಡ, ಪೆರಾಜೆ ಊಕಣ್ಣ ಬಂಟ, ಕರಣಿಕ ಕೃಷ್ಣಯ್ಯ, ಕರಣಿಕ ಸುಬ್ಬಯ್ಯ, ಕೋಲ್ಚಾರು ಕೂಸಪ್ಪ ಗೌಡ ಮೊದಲಾದವರ ಪಡೆ 1837ರ ಮಾರ್ಚ್ ನಲ್ಲಿ ಬೆಳ್ಳಾರೆಗೆ ಲಗ್ಗೆ ಇಟ್ಟಿತು. ಇಲ್ಲಿಂದ ಕಲ್ಯಾಣಪ್ಪ (ಪುಟ್ಟ ಬಸವ) ಮಾರ್ಚ್ 30ರಂದು ಕೊಡಗಿಗೆ ನಿರೂಪವೊಂದನ್ನು ಕಳುಹಿಸುತ್ತಾನೆ.. ಅಮರ ಸುಳ್ಯವನ್ನು ಪುನಃ ಕೊಡಗಿನ ಸಂಸ್ಥಾನಕ್ಕೆ ಸೇರಿಸುವುದು; ಕಂದಾಯ ಮನ್ನಾ; ತಂಬಾಕು, ಉಪ್ಪಿನ ಮೇಲಿನ ತೆರಿಗೆ ರದ್ದು ಸೇರಿದಂತೆ ಪ್ರಸಿದ್ಧ ಇಸ್ತಿಹಾರ್ ಪ್ರಕಟಿಸಿದ. ಇದರಿಂದ ಪಂಜ, ಪುತ್ತೂರು, ಕಡಬ, ವಿಟ್ಲ ಸುಲಭದಲ್ಲಿ ಕೈವಶವಾಯಿತು. ವಿಟ್ಲದ ಅರಸು, ನಂದಾವರದ ಲಕ್ಷ್ಮಪ್ಪ ಬಂಗರಸ ಮೊದಲಾದವರು ಕಲ್ಯಾಣಪ್ಪನ ಪಡೆಯನ್ನು ಸೇರಿಕೊಂಡರು. ಧರ್ಮಸ್ಥಳದ ಹೆಗ್ಡೆ ಫಿರಂಗಿಗಳನ್ನು ಕಳುಹಿಸಿದರು. ಪಡೆ ಯಾವುದೇ ಸಮಸ್ಯೆ ಇಲ್ಲದೆ ಮಂಗಳೂರು ಸೇರಿ ಬಾವುಟಗುಡ್ಡೆಯನ್ನು, ಖಜಾನೆ, ಜೈಲು, ಶಸ್ತ್ರಗಳನ್ನು ವಶಮಾಡಿಕೊಂಡು ಹಾಲೇರಿಯ ಕೊಡಿಯನ್ನು ಹಾರಿಸಿದರು. ಹೆದರಿ ಪಲಾಯನ ಮಾಡುತ್ತಿದ್ದ ಬ್ರಿಟೀಷರ ಕೈಗೆ ದುರ್ದೈವದಿಂದ ಸಿಕ್ಕಿದ ಕುಂಬಳೆ ಸುಬ್ರಾಯ ಹೆಗ್ಗಡೆ ಹಾಗೂ ಪಡೆಯನ್ನು ನೇತ್ರಾವತಿ ನದಿಯಲ್ಲಿ ಫಿರಂಗಿ ಹಾರಿಸಿ ಸಾಯಿಸಲಾಯಿತು.</p>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow">
<figure class="wp-block-image size-full"><img loading="lazy" decoding="async" width="640" height="360" src="https://peepalmedia.com/wp-content/uploads/2022/11/WhatsApp-Image-2022-11-19-at-2.38.52-PM.jpeg" alt="" class="wp-image-15902" srcset="https://peepalmedia.com/wp-content/uploads/2022/11/WhatsApp-Image-2022-11-19-at-2.38.52-PM.jpeg 640w, https://peepalmedia.com/wp-content/uploads/2022/11/WhatsApp-Image-2022-11-19-at-2.38.52-PM-300x169.jpeg 300w, https://peepalmedia.com/wp-content/uploads/2022/11/WhatsApp-Image-2022-11-19-at-2.38.52-PM-150x84.jpeg 150w" sizes="auto, (max-width: 640px) 100vw, 640px" /><figcaption class="wp-element-caption">ಬ್ರಿಟಿಷ್ ಖಜಾನೆ &#8211; ಬಂಗ್ಲೆಗುಡ್ಡೆ ಬೆಳ್ಳಾರೆ</figcaption></figure>
</div>



<div class="wp-block-column is-layout-flow wp-block-column-is-layout-flow">
<figure class="wp-block-image size-large is-resized"><img loading="lazy" decoding="async" src="https://peepalmedia.com/wp-content/uploads/2022/11/WhatsApp-Image-2022-11-19-at-2.38.53-PM-788x1024.jpeg" alt="" class="wp-image-15903" width="228" height="295" srcset="https://peepalmedia.com/wp-content/uploads/2022/11/WhatsApp-Image-2022-11-19-at-2.38.53-PM-788x1024.jpeg 788w, https://peepalmedia.com/wp-content/uploads/2022/11/WhatsApp-Image-2022-11-19-at-2.38.53-PM-231x300.jpeg 231w, https://peepalmedia.com/wp-content/uploads/2022/11/WhatsApp-Image-2022-11-19-at-2.38.53-PM-768x997.jpeg 768w, https://peepalmedia.com/wp-content/uploads/2022/11/WhatsApp-Image-2022-11-19-at-2.38.53-PM-1183x1536.jpeg 1183w, https://peepalmedia.com/wp-content/uploads/2022/11/WhatsApp-Image-2022-11-19-at-2.38.53-PM-150x195.jpeg 150w, https://peepalmedia.com/wp-content/uploads/2022/11/WhatsApp-Image-2022-11-19-at-2.38.53-PM-300x390.jpeg 300w, https://peepalmedia.com/wp-content/uploads/2022/11/WhatsApp-Image-2022-11-19-at-2.38.53-PM-696x904.jpeg 696w, https://peepalmedia.com/wp-content/uploads/2022/11/WhatsApp-Image-2022-11-19-at-2.38.53-PM-1068x1387.jpeg 1068w, https://peepalmedia.com/wp-content/uploads/2022/11/WhatsApp-Image-2022-11-19-at-2.38.53-PM.jpeg 1232w" sizes="auto, (max-width: 228px) 100vw, 228px" /><figcaption class="wp-element-caption">ವಿಕ್ಟೋರಿಯಾ ಗೌರಮ್ಮ</figcaption></figure>
</div>
</div>



<p><strong>ಹೋರಾಟಗಾರರನ್ನು ಗಲ್ಲಿಗೇರಿಸಿದರು!</strong></p>



<p>ಮಂಗಳೂರು ಹೋರಾಟಗಾರರ ವಶವಾಗುತ್ತಿದ್ದಂತೆ ಕಣ್ಣಾನೂರಿನಿಂದ ಆಂಗ್ಲರ ಫಿರಂಗಿ &#8211; ಶಸ್ತ್ರ ಸಜ್ಜಿತ ಪಡೆ ಮಂಗಳೂರಿಗೆ ಮೂರು ಹಡಗುಗಳಲ್ಲಿ ಬಂದು ರಾತ್ರೋರಾತ್ರೆ ಧಾಳಿ ಇಟ್ಟಿತು. ಕೆಲವರು ಸೆರೆ ಸಿಕ್ಕರೆ ಅಪ್ಪಯ್ಯ ಗೌಡ, ಬಂಗರಸ, ರಾಮಗೌಡ, ಕುಕ್ಕನೂರು ಚೆನ್ನಯ್ಯ, ಕಲ್ಯಾಣಪ್ಪ, ಕುಡಿಯರು, ನಾಲ್ಕುನಾಡಿನ ಉತ್ತ ಇತರರು ತಪ್ಪಿಸಿಕೊಂಡರು. ಕಲ್ಯಾಣಪ್ಪನೆಂದು ಕರೆಯುತ್ತಿದ್ದ ಪುಟ್ಟ ಬಸವನ ತಲೆಗೆ ಆಗಲೇ ಹತ್ತು ಸಾವಿರ ರುಪಾಯಿಗಳ ಬೆಲೆ ಕಟ್ಟಲಾಗಿತ್ತು. ಕೊಡ್ಲಿಪೇಟೆಗೆ ಬಂದಾಗ ಇವನ ಮಾವನೇ ಕರಿ ಬಸವಯ್ಯ ದುಡ್ಡಿನ ಆಸೆಗೆ ಸುಬೇದಾರ ಮಾದಯ್ಯನಿಗೆ ಹಿಡಿದುಕೊಟ್ಟ. 1837 ಮೇ 15ರಂದು ಕ್ಯಾ. ಲೀಹಾರ್ಡಿ ಮಡಿಕೇರಿಯ ಕೋಟೆಯಲ್ಲಿ ಬಸವನನ್ನು ವಿಚಾರಿಸಿ ಗಲ್ಲಿಗೇರಿಸಿದ!</p>



<p>ಲಕ್ಷ್ಮಪ್ಪ ಬಂಗರಸ, ವಿಟ್ಲದ ಅರಸ ಮೊದಲಾದವರನ್ನು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಬಹಿರಂಗವಾಗಿ ಗಲ್ಲಿಗೇರಿಸಲಾಯ್ತು. ಕುಡಿಯ ಸಹೋದರರು, ಪೆರಾಜೆ ಕೃಷ್ಣಯ್ಯ ಮೊದಲಾದವರನ್ನು ಸಿಂಗಾಪುರಕ್ಕೆ ಕಳುಹಿಸಲಾಯ್ತು. ನಾಯಕ ಗುಡ್ಡೆಮನೆ ಅಪ್ಪಯ್ಯನನ್ನು 1837 ಅಕ್ಟೋಬರ್ 31 ರಂದು ಮಡಿಕೇರಿಯ ಕೋಟೆಯ ಎದುರು&nbsp; ಬಹಿರಂಗವಾಗಿ ಗಲ್ಲಿಗೇರಿಸಲಾಯ್ತು.</p>


<div class="wp-block-image">
<figure class="aligncenter size-large is-resized"><img loading="lazy" decoding="async" src="https://peepalmedia.com/wp-content/uploads/2022/11/0a507fd1-c925-4d3c-a5d9-bf3e389bbc58-768x1024.jpg" alt="" class="wp-image-15905" width="565" height="750" srcset="https://peepalmedia.com/wp-content/uploads/2022/11/0a507fd1-c925-4d3c-a5d9-bf3e389bbc58-225x300.jpg 225w, https://peepalmedia.com/wp-content/uploads/2022/11/0a507fd1-c925-4d3c-a5d9-bf3e389bbc58-150x200.jpg 150w" sizes="auto, (max-width: 565px) 100vw, 565px" /></figure></div>


<p><strong>ದಂಗೆ ದರೋಡೆ ಅಲ್ಲ&#8230;</strong></p>



<p>ಅನೇಕ ಮಂದಿ ಆಂಗ್ಲರ ಪರವಾಗಿ&nbsp; ನಿಂತು ರಾಜದ್ರೋಹ ಎಸಗಿದ್ದರು. ಈ ದಂಗೆಯನ್ನು ಹತ್ತಿಕ್ಕಲು ನೆರವಾದವರಿಗೆ ಮೆಡಲ್‌, ಕೋವಿ, ಕುದುರೆಗಳನ್ನು ನೀಡಲಾಯಿತು. ದಂಗೆಯನ್ನು ದರೋಡೆ ಎಂಬುದಾಗಿ ಬಿಂಬಿಸಿ ಕಲ್ಯಾಣಪ್ಪನ ಕಾಟಕಾಯಿ-ಸುಲಿಗೆ ಎಂದರು. ಆದರೆ ಇದನ್ನು ಖ್ಯಾತ ಕಾದಂಬರಿಕಾರ ನಿರಂಜನರು(ಕುಳ್ಕುಂದ ಶಿವರಾಯ)ರು ಸಕಾರಣವಾಗಿಯೆ ನಿರಾಕರಿಸಿದ್ದಾರೆ.</p>



<p>ಉಳುವಾರು ರಾಮಯ್ಯ ಗೌಡ, ಕುಡೆಕಲ್ಲು ಗುಡ್ಡಜ್ಜ, ತಿಮ್ಮಯ್ಯ, ಸುಳ್ಯಕೋಡಿ ಕೃಷ್ಣಪ್ಪ, ಕಳಗಿ ಅಣ್ಣು, ಕುಕ್ಕೆಟ್ಟಿ ಚೆನ್ನ ಮುಂತಾದ ಗೌಡರು ದಂಗೆಯಲ್ಲಿದ್ದರಿಂದ ಕೆನರ ಜಿಲ್ಲೆಯ ಕಲೆಕ್ಟರ್ ಎಂ.ಲೆವಿನ್, ಮೇಜರ್ ಜನರಲ್ ವಿಗೋರ್(Vigourheux) ಹಾಗೂ ಚಾರ್ಲ್ಸ್ ರಾಬರ್ಟ್ ಕಾಟನ್ ಅವರಿಗೆ ಒಪ್ಪಿಸಿದ ವರದಿ ಹಾಗೂ ಜಿ.ರಿಕ್ಟರ್ ಕೊಡಗು ಗಜೇಟಿಯರ್ ನಲ್ಲಿ ʼಕೊಡಗು ಬಂಡಾಯʼವೆಂದು ಕರೆಯಲ್ಪಡುವ ಈ ದಂಗೆ ನಿಜವಾಗಿಯೂ ಹೇಳುವುದಾದರೆ ʼಗೌಡರ ಮೇಲ್ಬೀಳುವಿಕೆ ಎಂದು ದಾಖಲಿಸಲಾಗಿದೆ. (ಎನ್.ಎಸ್.ದೇವಿಪ್ರಸಾದ್ ಸಂಪಾಜೆ: ಅಮರ ಸುಳ್ಯದ ದಂಗೆ) ಇಲ್ಲಿ ಪೆರಾಜೆಯ ಬೀರಣ್ಣ ರೈ, ಮುಳ್ಯ ಈಶ್ವರ ಸೋಮಾಯಾಜಿ, ಚೆಟ್ಟಿ-ಕುರ್ತು ಕುಡಿಯರಂತಹ ಬಂಟ, ಬಿಲ್ಲವ, ಮಲೆಕುಡಿಯ, ಜೈನ ಮೊದಲಾದ ಸಮುದಾಯಗಳ ವೀರರು ಹೋರಾಡಿದ್ದಾರೆ.</p>



<p></p>



<p></p>



<p><strong>ಚರಣ್‌ ಐವರ್ನಾಡು, ಸುಳ್ಯ</strong></p>
]]></content:encoded>
					
		
		
			</item>
		<item>
		<title>ತುಳುವ ಕಥನ: ಬಹುಸಮುದಾಯಗಳ ತುಳುನಾಡು</title>
		<link>https://peepalmedia.com/diversity-of-tulunadu-buddism/</link>
		
		<dc:creator><![CDATA[Charan Aivarnad]]></dc:creator>
		<pubDate>Thu, 15 Sep 2022 08:19:49 +0000</pubDate>
				<category><![CDATA[ಧರ್ಮ- ಸಂಸ್ಕೃತಿ]]></category>
		<category><![CDATA[ವಿಶೇಷ]]></category>
		<category><![CDATA[charan Aivarnad]]></category>
		<category><![CDATA[culture]]></category>
		<category><![CDATA[history]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[mangalore]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[special story]]></category>
		<category><![CDATA[writing]]></category>
		<guid isPermaLink="false">https://peepalmedia.com/?p=5457</guid>

					<description><![CDATA[ತುಳುನಾಡು ಎಂದು ಕರೆಯಲ್ಪಡುವ ಅವಿಭಜಿತ ದಕ್ಷಿಣ ಕನ್ನಡವನ್ನು ಬಹು ಸಮುದಾಯಗಳು ಕಟ್ಟಿವೆ. ಇಲ್ಲಿನ ದೈವಗಳು ಎಲ್ಲರನ್ನೂ ಒಳಗೊಳ್ಳುವ ಶಕ್ತಿಯನ್ನು ಹೊಂದಿವೆ. ಕೊರಗ, ಮೇರ, ಮಾಯಿಲ, ಮಲೆಕುಡಿಯ, ಬಂಟ, ಬಿಲ್ಲವ, ಪಂಬದ, ಮೊಗವೀರ, ಮುಸಲ್ಮಾನರ, ಕ್ರೈಸ್ತ ಮೊದಲಾದ ಸಮುದಾಯಗಳು ಈ ನೆಲದ ಸಂಸ್ಕೃತಿಯನ್ನು ರೂಪಿಸಿವೆ. ತುಳುನಾಡು ಬೌದ್ಧರ, ಜೈನರ, ಅಜೀವಕರ, ನಾಥರ, ಗಾಣಪತ್ಯರ, ಸೌರಮತದವರ, ಕಾಲಮುಖಾದಿ ತಾಂತ್ರಿಕ ಪಂಥಗಳ, ಮೊದಲಾದ ಮತ- ಪಂಥಗಳ ಆಡುಂಬಲವಾಗಿದೆ. ತುಳುನಾಡಿನ ಬಹುರೂಪಿ ಸಂಸ್ಕೃತಿಯ ಭಿನ್ನ ನೆಲೆಗಳ ಬಗ್ಗೆ ಚರಣ್‌ ಐವರ್ನಾಡು ʼತುಳುವ ಕಥನʼ [&#8230;]]]></description>
										<content:encoded><![CDATA[
<blockquote class="wp-block-quote has-medium-font-size is-layout-flow wp-block-quote-is-layout-flow"><p><strong>ತುಳುನಾಡು ಎಂದು ಕರೆಯಲ್ಪಡುವ ಅವಿಭಜಿತ ದಕ್ಷಿಣ ಕನ್ನಡವನ್ನು ಬಹು ಸಮುದಾಯಗಳು ಕಟ್ಟಿವೆ. ಇಲ್ಲಿನ ದೈವಗಳು ಎಲ್ಲರನ್ನೂ ಒಳಗೊಳ್ಳುವ ಶಕ್ತಿಯನ್ನು ಹೊಂದಿವೆ. ಕೊರಗ, ಮೇರ, ಮಾಯಿಲ, ಮಲೆಕುಡಿಯ, ಬಂಟ, ಬಿಲ್ಲವ, ಪಂಬದ, ಮೊಗವೀರ, ಮುಸಲ್ಮಾನರ, ಕ್ರೈಸ್ತ ಮೊದಲಾದ ಸಮುದಾಯಗಳು ಈ ನೆಲದ ಸಂಸ್ಕೃತಿಯನ್ನು ರೂಪಿಸಿವೆ. ತುಳುನಾಡು ಬೌದ್ಧರ, ಜೈನರ, ಅಜೀವಕರ, ನಾಥರ, ಗಾಣಪತ್ಯರ, ಸೌರಮತದವರ, ಕಾಲಮುಖಾದಿ ತಾಂತ್ರಿಕ ಪಂಥಗಳ, ಮೊದಲಾದ ಮತ- ಪಂಥಗಳ ಆಡುಂಬಲವಾಗಿದೆ. ತುಳುನಾಡಿನ ಬಹುರೂಪಿ ಸಂಸ್ಕೃತಿಯ ಭಿನ್ನ ನೆಲೆಗಳ ಬಗ್ಗೆ ಚರಣ್‌ ಐವರ್ನಾಡು ʼತುಳುವ ಕಥನʼ ಸರಣಿ ಲೇಖನ ಬರೆಯಲಿದ್ದಾರೆ. ಇದರ ಮೊದಲ ಲೇಖನ ಇಲ್ಲಿದೆ&#8230;..</strong></p></blockquote>



<p class="has-text-align-justify has-medium-font-size">&#8220;ಬಡಗು ಅಂಕೋಲೆಯಿಂದ, ತೆಂಕರಾಮೇಶ್ವರ, ಮೂಡಗಟ್ಟ ಪಡು ಸಮುದ್ರ” ನಡುವಿನ ತುಳುನಾಡಿನ ಸಂಸ್ಕೃತಿ ಬಹು ಸಮದಾಯಗಳಿಂದ ರೂಪಿಸಲ್ಪಟ್ಟಿದೆ. ತುಳು ಪ್ರಧಾನ ಭಾಷೆಯಾಗಿದ್ದರೂ ತುಳುನಾಡು ಬಹುಭಾಷಿಕ ಪ್ರದೇಶ. ಹೀಗಾಗಿ ಆ ನೆಲದ ಮಣ್ಣಿಗೆ ಎಲ್ಲರನ್ನೂ ಒಳಗೊಳ್ಳುವ ಗುಣವಿರಿವುದರಿಂದ ಅದಕ್ಕೊಂದು ಸೌಹಾರ್ದತೆಯ ಪರಂಪರೆಯಿದೆ. ತುಳುನಾಡಿನ ದೈವಗಳು “ಕೂಡಿಂಚಿ ಕಳೊಟ್ಟು ಮುತ್ತುಂಡು ಪನ್ಪಿ ಕಟ್ಟ್!” ಎಂದು ತನ್ನನ್ನು ನಂಬಿದ ಭಕ್ತರಿಗೆ ಹೇಳುತ್ತವೆ. ಜನ ಒಗ್ಗಟ್ಟಾಗಿರುವ ಸ್ಥಳದಲ್ಲಿ ಮುತ್ತಿದೆ ಎಂಬುದು ಅದರರ್ಥ. ದೈವಗಳ ನೇಮ ನಡಾವಳಿ ನಡೆಯುವಾಗ ಕುಟುಂಬದ ಓರ್ವ ಸದಸ್ಯನೋ ಅಥವಾ ಒಂದು ಸಮುದಾಯದ ಮುಖಂಡನೋ ಭಾಗವಹಿಸದೇ ಇದ್ದಲ್ಲಿ ದೈವ ಅವರೆಲ್ಲಿ….? ಎಂದು ಕೇಳುತ್ತದೆ.</p>



<p class="has-text-align-justify has-medium-font-size"><br>ಮಂಗಳೂರಿನ ಮಲ್ಲೂರು ಜುಮಾದಿ ದೈವದ ದೈವಸ್ಥಾನದಲ್ಲಿ ಮಾಜಿ ಶಾಸಕ ಮೊಯಿದ್ದೀನ್‌ ಬಾವ ಬೇಟಿ ನೀಡಿದಾಗ ದೈವ ಅವರಿಗೆ ಹೂವಿನ ಹಾರವನ್ನು ಹಾಕಿ ಪ್ರಸಾದ ನೀಡಿ ಗೌರವಿಸುತ್ತದೆ. ಇದಕ್ಕೆ ಕೆಲವು ಯುವಕರು ಆಕ್ಷೇಪ ಎತ್ತಿದಾಗ ದೈವಕ್ಕೆ ಕೋಪ ಬಂತು. ದೈವ ತನ್ನ ಕಣ್ಣಲ್ಲಿ ಎಲ್ಲಾ ಧರ್ಮ, ಜಾತಿಯವರೂ ಸಮಾನರು ಎನ್ನುತ್ತಾ ತನ್ನ ಕೈಯಲ್ಲಿದ್ದ ಆಯುಧ ಕಡ್ಸಲೆಯನ್ನು ನೆಲಕ್ಕೆ ಮೂರು ಬಾರಿ ಊರಿ ಆಕ್ರೋಶ ವ್ಯಕ್ತ ಪಡಿಸುತ್ತದೆ. ಜಾನಪದ ದೇವತೆಗಳಿಗಿರುವ ವಿಶೇಷವಾದ ಶಕ್ತಿ ಎಂದರೆ ಎಲ್ಲರನ್ನೂ ಒಳಗೊಳ್ಳುವ ಗುಣ.</p>


<div class="wp-block-image">
<figure class="aligncenter size-large is-resized"><img loading="lazy" decoding="async" src="https://peepalmedia.com/wp-content/uploads/2022/09/86292286_2974661645918422_4738521926006210560_n-1024x577.jpg" alt="" class="wp-image-5474" width="595" height="335" srcset="https://peepalmedia.com/wp-content/uploads/2022/09/86292286_2974661645918422_4738521926006210560_n-1024x577.jpg 1024w, https://peepalmedia.com/wp-content/uploads/2022/09/86292286_2974661645918422_4738521926006210560_n-300x169.jpg 300w, https://peepalmedia.com/wp-content/uploads/2022/09/86292286_2974661645918422_4738521926006210560_n-768x433.jpg 768w, https://peepalmedia.com/wp-content/uploads/2022/09/86292286_2974661645918422_4738521926006210560_n-1536x866.jpg 1536w, https://peepalmedia.com/wp-content/uploads/2022/09/86292286_2974661645918422_4738521926006210560_n.jpg 1824w" sizes="auto, (max-width: 595px) 100vw, 595px" /></figure></div>


<p class="has-text-align-justify has-medium-font-size"><br>ತುಳುವ ಸಮುದಾಯಗಳು ಕಟ್ಟಿದ ಸಂಸ್ಕೃತಿ, ಅದು ಬೆಳದು ಬಂದ ಚರಿತ್ರೆಗೆ ಒಂದು ಸುದೀರ್ಘವಾದ ಪರಂಪರೆಯಿದೆ. ತುಳುನಾಡಿನ ಮೂಲ ನಿವಾಸಿಗಳು ಯಾರು ಎಂಬ ಸ್ಪಷ್ಟತೆ ನಮ್ಮಲ್ಲಿ ಇಲ್ಲ. ತುಳುನಾಡಿನ ಪೂರ್ವ ಇತಿಹಾಸವನ್ನು ತಿಳಿಯಲು ನಾವು ಸ್ಥಳನಾಮೆಗಳ ಅಧ್ಯಯನ ಮಾಡಬೇಕು. ತುಳುನಾಡಿನಲ್ಲಿ ಮುಂಡರು, ಕನ್ನರು, ಕೋಳಿಗಳು ಮೊದಲಾದ ಜನಾಂಗಗಳು ನೆಲೆಸಿದ್ದವು. ಮುಂಡಾಜೆ, ಮುಂಡ್ಕೂರು, ಪೆರುಮುಂಡ ಮೊದಲಾದ ಊರುಗಳಲ್ಲಿ ಮುಂಡ ಜನಾಂಗ ನೆಲೆಸಿದ್ದರು. ಕಂದ್ರಪ್ಪಾಡಿ, ಕನ್ಯಾಡಿ, ಕನ್ಯಾರು, ಕಣಿಯೂರು ಮೊದಲಾದ ಊರುಗಳಿಗೆ ಅಲ್ಲಿ ನೆಲೆಸಿದ್ದ ಕನ್ನ ಎಂಬ ಜನಾಂಗ ಕಾರಣ. ಕೋಳಿ ಜನಾಂಗದವರು ಕೋಳ್ಯೂರು, ಕೊಲ್ಲೂರು, ಕೊಳ್ನಾಡು ಮೊದಲಾದ ಕಡೆ ನೆಲೆಸಿದ್ದರು. ಇಂದು ಈ ಪಂಗಡಗಳಲ್ಲಿ ಕೆಲವು ಭಾರತದ ಇತರ ಕಡೆಗಳಲ್ಲಿ ನೆಲೆಸಿದ್ದರೂ ತುಳುನಾಡಿನಲ್ಲಿ ಮುಂಡಾಲರನ್ನು ಬಿಟ್ಟು ಕೋಳಿಗಳು, ಕನ್ನರ ಪಂಗಡದವರು ಕಂಡುಬರುವುದಿಲ್ಲ.</p>



<p class="has-text-align-justify has-medium-font-size">ಇಂದು ಅನೇಕ ಸ್ಥಳನಾಮೆಗಳು ಇಂದು ಮರುನಾಮಕರಣಗೊಳ್ಳುತ್ತಿವೆ. ಶಿವಾಜಿ ನಗರ, ವಿಜಯನಗರ….ಇಂತ ಹೆಸರುಗಳನ್ನು ಇಡಲಾಗುತ್ತದೆ. ಇದು ಇಂದಿನ ಬೆಳವಣಿಗೆ ಮಾತ್ರವಲ್ಲ. ಉದಾಹರಣೆಗೆ ಕಡುಮ ಧರ್ಮಸ್ಥಳವಾಯಿತು,ಪುರಾಲ್‌ ಅಥವಾ ಪೊಳಲಿ ಪುಳಿನಾಪುರವಾಗಿದೆ, ಬೆದ್ರ ಅಥವಾ ಮೂಡುಬಿದ್ರೆ ವೇಣುಪುರವಾಗಿದೆ, ಪೀಪಳ್ಳ ಅಶ್ವತ್ಥಪುರವಾಗಿದೆ, ಮಾಪ್ಳಡ್ಕ ಮಹಾಬಲಡ್ಕವಾಗಿದೆ. ಹೀಗಾಗಿ ಸ್ಥಳನಾಮೆಗಳ ಹಿಂದೆ ಅಡಗಿರುವ ತುಳುನಾಡಿನ ಜನರ ಚರಿತ್ರೆ ನಿಧಾನವಾಗಿ ನಾಶವಾಗುತ್ತಾ ಹೋಗುತ್ತಿದೆ.</p>



<p class="has-text-align-justify has-medium-font-size">ತುಳುನಾಡಿನ ಮೂಲ ನಿವಾಸಿಗಳ ಕುರಿತು ಗೋವಿಂದ ಪೈಯವರ ಬರಹಗಳನ್ನು ನಾವು ಗಮನಿಸಬೇಕು. ಹರಿವಂಶದ ವಿಷ್ಣುಪರ್ವದಲ್ಲಿ ಬರುವ ʼಮುದ್ಗರʼ ಜನಾಂಗವೇ ತುಳುನಾಡಿನ ಮುಗೇರ ಜನಾಂಗ ಎಂದು ಗೋವಿಂದ ಪೈ ಹೇಳುತ್ತಾರೆ. ಬೆಸ್ತರಾಗಿರುವ ಇವರು ನೆಲೆಸಿದ್ದ ಪ್ರದೇಶಗಳೇ ಇಂದಿನ ಮೊಗ್ರ, ಕೊಲ್ಲಮೊಗ್ರ, ಮುಗೇರಡ್ಕ ಮೊದಲಾದವು. ಮಾರ್ಕಂಡೇಯ ಪುರಾಣ ಹಾಗೂ ವರಹಮಿಹಿರನ ಬೃಹತ್ಸಂಹಿತೆಯಲ್ಲಿ ಉಲ್ಲೇಖಿಸಿರುವ ಶಾಂತಿಕವು ತುಳುನಾಡೇ ಆಗಿದೆ ಎಂದು ಗೋವಿಂದ ಪೈಗಳು ಹೇಳುತ್ತಾರೆ. ಎಂಟನೇ ಶತಮಾನದ ರಾಷ್ಟ್ರಕೂಟ ದೊರೆ ಮೂರನೇ ಗೋವಿಂದನ ಶಾಸನಗಳಲ್ಲಿ ಬರುವ ಆಳ್ವಖೇಡ, ಕ್ರಿ.ಶ ೬೦೨ರ ಮಹಾ ಕೂಟಸ್ತಂಭ ಲೇಖದಲ್ಲಿ ವೈಜಯಂತಿ (ಬನಾವಾಸಿ) ಜೊತೆಯಲ್ಲಿ ಉಲ್ಲೇಖವಾಗಿರುವ ಆಳುಕ- ಇವು ತುಳುನಾಡಿನ ಹೆಸರುಗಳೇ ಎಂದು ಗೋವಿಂದ ಪೈ ಹೇಳುತ್ತಾರೆ.</p>



<p class="has-text-align-justify has-medium-font-size">ತುಳುವ ಸಂಸ್ಕೃತಿಯನ್ನು ಭಿನ್ನ ಮೂಲಸಮುದಾಯಗಳು ಹೇಗೆ ರೂಪಿಸಿದೆಯೋ ಆರಂಭದಲ್ಲಿ ಬೌದ್ಧ ಧರ್ಮ ಕೂಡ ತುಳುವ ಸಂಸ್ಕೃತಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕದ್ರಿಯ ಮಂಜುನಾಥ ದೇವಾಲಯ, ಉಡುಪಿಯ ಕಾಪು ಸಮೀಪದ ಮಾಲೂರಿನ ಬಾರ್ಯ ಮುಂತಾದವು ಒಂದು ಕಾಲದ ಬೌದ್ಧ ಕೇಂದ್ರಗಳು. ಇಲ್ಲಿ ನಾವು ಬುದ್ದನ ವಿಗ್ರಹಗಳನ್ನು ಕಾಣಬಹುದು. ತುಳುವರು ಹೆಣವನ್ನು ಸುಟ್ಟ ನಂತರ ಕಟ್ಟುವ ʼದೂಪೆʼ ಕೂಡ ಬೌದ್ಧರ ಸ್ತೂಪದ ಕಲ್ಪನೆ. ಒಂದು ಕಾಲದಲ್ಲಿ ಉಚ್ಚ್ರಾಯವಾಗಿದ್ದ ಬೌದ್ಧ ಧರ್ಮ ಮಧ್ಯಕಾಲೀನ ತುಳುನಾಡಿನಲ್ಲಿ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾ ನಾಥ ಮೊದಲಾದ ತಾಂತ್ರಿಕ ಪಂಥಗಳೂ, ವೈದಿಕ ಧರ್ಮವೂ ಪ್ರವರ್ಧಮಾನಕ್ಕೆ ಬಂತು.</p>


<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2022/09/10402566_296666113848826_6431824392336393127_n.jpg" alt="" class="wp-image-5477" width="321" height="458" srcset="https://peepalmedia.com/wp-content/uploads/2022/09/10402566_296666113848826_6431824392336393127_n.jpg 635w, https://peepalmedia.com/wp-content/uploads/2022/09/10402566_296666113848826_6431824392336393127_n-210x300.jpg 210w" sizes="auto, (max-width: 321px) 100vw, 321px" /><figcaption>ಕದ್ರಿ ಮಂಜುನಾಥೇಶ್ವರ ದೇವರು</figcaption></figure></div>


<p class="has-text-align-justify has-medium-font-size"><br>ಕದ್ರಿಯ ಮಂಜುನಾಥ ದೇವಾಲಯ ಅತ್ಯಂತ ಪ್ರಸಿದ್ಧ ಪುಣ್ಯಕ್ಷೇತ್ರ. ಅದೊಂದು ಲಿಂಗಾರಾಧನೆಯ ಶೈವಕ್ಷೇತ್ರವಾದರೂ ಶಿವನಿಗೆ ಮಂಜುನಾಥ ಎಂಬ ಹೆಸರು ಯಾವುದೇ ಪ್ರಾಚೀನ ದಾಖಲೆಗಳಲ್ಲಿ ಇಲ್ಲ. ಗೋವಿಂದ ಪೈಗಳು ಪ್ರಾಚೀನ ಶಿವಸಹಸ್ರನಾಮದಲ್ಲೂ ಇಲ್ಲವೆನ್ನುತ್ತಾರೆ. ಕದಿರೆಯ ಮಂಜುನಾಥನೊಬ್ಬನೇ ಅಖಿಲಭಾರತದಾದ್ಯಂತ ಇರುವ ಏಕೈಕ ಮಂಜುನಾಥನ ಲಿಂಗ. ಧರ್ಮಸ್ಥಳಕ್ಕೆ ದೇವರನ್ನು ಇಲ್ಲಿಂದಲೇ ಕೊಂಡುಹೋದದ್ದು ಎಂಬ ಐತಿಹ್ಯ ಇದೆ. ಕದ್ರಿ ಮಂಜುನಾಥೇಶ್ವರ ದೇವಾಲಯ ಭಾರತದ ಪ್ರಮುಖ ನಾಥ ಪೀಠ. ಕದ್ರಿ ಸೇರಿದಂತೆ ಕ್ರಿ.ಶ ಎಂಟನೇ ಶತಮಾನದ ವರೆಗೆ ವಜ್ರಾಯಾನದ ನೆಲೆಗಳು ಸುಮಾರು ಹತ್ತನೇ ಶತಮಾನದ ಕಾಲಕ್ಕೆ ನಾಥಪಂಥದ ನೆಲೆಗಳಾಗಿ ಬದಲಾದವು.</p>


<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2022/09/54996-1.jpg" alt="" class="wp-image-5476" width="468" height="312" srcset="https://peepalmedia.com/wp-content/uploads/2022/09/54996-1.jpg 768w, https://peepalmedia.com/wp-content/uploads/2022/09/54996-1-300x200.jpg 300w" sizes="auto, (max-width: 468px) 100vw, 468px" /><figcaption>ಕದ್ರಿ ದೇವಾಲಯದ ರಥೋತ್ಸವ, BM Archives</figcaption></figure></div>

<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2022/09/67570.jpg" alt="" class="wp-image-5475" width="480" height="320" srcset="https://peepalmedia.com/wp-content/uploads/2022/09/67570.jpg 768w, https://peepalmedia.com/wp-content/uploads/2022/09/67570-300x200.jpg 300w" sizes="auto, (max-width: 480px) 100vw, 480px" /><figcaption>ಕದ್ರಿ ಮಂಜುನಾಥ ದೇವಾಲಯ, BM Archives</figcaption></figure></div>


<p class="has-text-align-justify has-medium-font-size">ಪ್ರತೀ ಹನ್ನೆರಡು ವರ್ಷಗಳಿಗೊಮ್ಮೆ ನಾಸಿಕ್‌ ನ ತ್ರಯಂಬಕೇಶ್ವರದಿಂದ ಹೊರಡುವ ನಾಥ ಪಂಥದ ಯೋಗಿಗಳ ಝುಂಡಿ ಯಾತ್ರೆ ಸುಮಾರು 1750 ಕಿ. ಮೀ ಕ್ರಮಿಸಿ ಮಂಗಳೂರಿನ ಕದ್ರಿಯ ಕಾಲಭೈರವ ಯೋಗೇಶ್ವರ ಮಠಕ್ಕೆ ಬರುತ್ತದೆ. ಕುಂಭಮೇಳದ ಸಂದರ್ಭದಲ್ಲಿ ಹೊರಡುವ ಈ ಯಾತ್ರೆ ತ್ರಯಂಬಕೇಶ್ವರದಿಂದ ಹೊರಟು ಕದ್ರಿ ತಲುಪುವ ತನಕ 93 ಸ್ಥಳಗಳಲ್ಲಿ ಮೊಕ್ಕಾಂ ಹೂಡುತ್ತದೆ. ಅಲ್ಲಿರುವ ಎಲ್ಲಾ ನಾಥ ಪೀಠಗಳಿಗೆ ಹೊಸ ಪೀಠಾಧಿಪತಿಯನ್ನು ನೇಮಿಸುತ್ತಾರೆ. ಕರ್ನಾಟದಲ್ಲಿ ಚಂದ್ರಗುತ್ತಿ ಮಠಕ್ಕೆ ಪೀಠಾಧಿಪತಿಯನ್ನು ನೇಮಿಸಿ ಕದ್ರಿಯಲ್ಲಿ ಕೊನೆಯಾಗುತ್ತದೆ. ಕದ್ರಿಯಲ್ಲಿಯೇ ವಿಟ್ಲದ ನಾಥ ಮಠದ ಪೀಠಾಧಿಪತಿಯನ್ನು ನೇಮಿಸುತ್ತಾರೆ. ಕದ್ರಿಯ ಪೀಠಾಧಿಪತಿಯನ್ನು ರಾಜಾ ಅಥವಾ ಅರಸು (ಮಹಾರಾಜ್) ಎಂದು ಕರೆಯುತ್ತಾರೆ. ಹೀಗೆ ಇಡೀ ಭಾರತದ ಪ್ರಮುಖ ಶೈವ ಪಂಥದ ಐತಿಹಾಸಿಕ ಸಂಗತಿಯೊಂದು ತುಳುನಾಡಿನಲ್ಲಿ ಸಮಾಪನೆಗೊಳ್ಳುತ್ತದೆ.</p>


<div class="wp-block-image">
<figure class="aligncenter size-large is-resized"><img loading="lazy" decoding="async" src="https://peepalmedia.com/wp-content/uploads/2022/09/IMG_20220915_121959-769x1024.jpg" alt="" class="wp-image-5480" width="429" height="571" srcset="https://peepalmedia.com/wp-content/uploads/2022/09/IMG_20220915_121959-769x1024.jpg 769w, https://peepalmedia.com/wp-content/uploads/2022/09/IMG_20220915_121959-225x300.jpg 225w, https://peepalmedia.com/wp-content/uploads/2022/09/IMG_20220915_121959-768x1023.jpg 768w, https://peepalmedia.com/wp-content/uploads/2022/09/IMG_20220915_121959-1153x1536.jpg 1153w, https://peepalmedia.com/wp-content/uploads/2022/09/IMG_20220915_121959.jpg 1201w" sizes="auto, (max-width: 429px) 100vw, 429px" /><figcaption>ಕದ್ರಿ ಯೋಗೇಶ್ವರ ಮಠದ (ಜೋಗಿ ಮಠ) ಅರಸು, BM Archives</figcaption></figure></div>

<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2022/09/07mn_mnrmm3_Jog08BGMNGSAINT.jpg.jpg" alt="" class="wp-image-5488" width="461" height="287" srcset="https://peepalmedia.com/wp-content/uploads/2022/09/07mn_mnrmm3_Jog08BGMNGSAINT.jpg.jpg 615w, https://peepalmedia.com/wp-content/uploads/2022/09/07mn_mnrmm3_Jog08BGMNGSAINT.jpg-300x187.jpg 300w" sizes="auto, (max-width: 461px) 100vw, 461px" /><figcaption>ಕದ್ರಿಯ ಪೀಠಾಧಿಪತಿಗೆ ಪಟ್ಟಾಭಿಷೇಕ, The Hindu</figcaption></figure></div>

<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2022/09/Zhundi-yatra-1.jpg" alt="" class="wp-image-5489" width="467" height="314" srcset="https://peepalmedia.com/wp-content/uploads/2022/09/Zhundi-yatra-1.jpg 520w, https://peepalmedia.com/wp-content/uploads/2022/09/Zhundi-yatra-1-300x202.jpg 300w" sizes="auto, (max-width: 467px) 100vw, 467px" /><figcaption>ನಾಥ ಸಂತರ ಝುಂಡಿ ಯಾತ್ರೆ</figcaption></figure></div>


<p class="has-text-align-justify has-medium-font-size">ಶಿವನಿಗೆ ಮಂಜುನಾಥನೆಂಬ ಹೆಸರು ಬರಲು ಕಾರಣವನ್ನು ಗೋವಿಂದ ಪೈಗಳು ವಿಸ್ತೃತವಾಗಿ ಹೀಗೆ ರ‍್ಚಿಸುತ್ತರೆ. ಮಂಜುಶ್ರೀ ಅಥವಾ ಮಂಜುಘೋಷನೆಂಬ ಬೋಧಿಸತ್ವನಿಗೆ ಮಂಜುನಾಥ ಎಂಬ ಹೆಸರು ಇದ್ದದ್ದು ಮಹಾಯನದ ಕೃತಿಗಳಿಂದ ತಿಳಿದು ಬರುತ್ತದೆ. ನೇಪಾಳದ ಬೌದ್ಧಕವಿ ಅಮೃತಾನಂದನ ಕಲ್ಯಾಣಪಂಚವಿಂಶತಿಕಾ ಸ್ತೋತ್ರದ ಸ್ರಗ್ಧರೆಯೊಂದರಲ್ಲಿ…….ಸ್ವಸ್ತೀಭೂತಾಬ್ಜಸಂಸ್ಥಂ ಸಕಲ ಜಿನವರಂ ಪ್ರಾಭಜನ್ ಮಂಜುನಾಥಃ……ಎಂದಿದೆ. ಮಂಜುನಾಥವೆಂಬುದು ಕದ್ರಿಯ ಗುರು ಮಚ್ಚೇಂದ್ರನಾಥನಿಂದಲೂ ಬಂದಿರಬಹುದು. ಮಚ್ಚಿನಾಥವೇ ಮಂಜುನಾಥವಾಗಿರಹುದೆಂಬ ರ‍್ಚೆಯೂ ಇದೆ.</p>


<div class="wp-block-image">
<figure class="aligncenter size-large is-resized"><img loading="lazy" decoding="async" src="https://peepalmedia.com/wp-content/uploads/2022/09/IMG_20220915_120018-694x1024.jpg" alt="" class="wp-image-5479" width="445" height="656" srcset="https://peepalmedia.com/wp-content/uploads/2022/09/IMG_20220915_120018-694x1024.jpg 694w, https://peepalmedia.com/wp-content/uploads/2022/09/IMG_20220915_120018-203x300.jpg 203w, https://peepalmedia.com/wp-content/uploads/2022/09/IMG_20220915_120018.jpg 711w" sizes="auto, (max-width: 445px) 100vw, 445px" /><figcaption>ವಿಷ್ಣು ಎಂದು ಮರುನಾಮಕರಣಗೊಂಡಿರುವ ಮಂಜುಶ್ರೀ ಬೋಧಿಸತ್ವ</figcaption></figure></div>


<p class="has-text-align-justify has-medium-font-size"><br>ದೇವಾಲಯದ ಗರ್ಭಗೃಹದ ಹೊರ ಅಂತಃಪ್ರಾಕಾರದಲ್ಲಿ ಅತ್ಯಂತ ಸುಂದರವಾದ ಲೋಕೇಶ್ವರನ ಕಂಚಿನ ವಿಗ್ರಹವಿದೆ. ಇದನ್ನು ರ‍್ಚಕರು ತ್ರಿಲೋಕೇಶ್ವರನೆಂದು ಕರೆಯುತ್ತಾರೆ. ಅಡಿಯಿಂದ ಮುಡಿಯವರೆಗೆ ೧೫೦ ಸೆಂ.ಮೀ. ಇರುವ ಈ ಪ್ರತಿಮೆ ಮೂರು ಮುಖಗಳನ್ನೂ ಆರು ಕೈಗಳನ್ನೂ ಹೊಂದಿದೆ. ಕೈಗಳಲ್ಲಿ ಮಣಿ, ಪದ್ಮಾದಿಗಳಿವೆ. ಪ್ರಭಾವಳಿಯ ನಡುವೆ ಮತ್ತು ಶಿರೋಭಾಗದಲ್ಲಿ ಧ್ಯಾನ ಮಾಡುತ್ತಿರುವ ಬುದ್ಧನಿದ್ದಾನೆ. ಕಣ್ಣುಗಳು ಬಹಳ ಹೊಳಪಿನವು. ಇದರ ಪೀಠದ ಮೇಲೆ ಗ್ರಂಥಲಿಪಿಯಲ್ಲಿರುವ ಒಂಬತ್ತು ಸಾಲುಗಳ ಸಂಸ್ಕೃತ ಶಾಸನವಿದೆ. ಮಂಗಳೂರನ್ನು ಆಳುತ್ತಿದ್ದ ಶ್ರೀಕುಂದರ‍್ಮಾ ಗುಣವಾನಾಳುಪೇಂದ್ರನು ಈ ಸುಮನೋಹರವಾದ ಕದರಿಕಾ ವಿಹಾರದಲ್ಲಿ ಕ್ರಿ.ಶ.೯೬೮ರಲ್ಲಿ ಲೋಕೇಶ್ವರನ ಪ್ರತಿಮೆಯನ್ನು ಸ್ಥಾಪಿಸಿದ.</p>



<p class="has-medium-font-size"><br>ಲೋಕೇಶ್ವರಸ್ಯ ದೇವಸ್ಯ ಪ್ರತಿಷ್ಠಾಮಕರೋತ್ಪ್ರಭುಃ<br>ಶ್ರೀಮತ್ ಕದರಿಕಾ ನಾಮ್ನಿ ವಿಹಾರೇ ಸುಮನೋಹರೇ…..</p>



<p class="has-text-align-justify has-medium-font-size">ಆಲೂಪ ಅರಸ ಕುಂದವರ್ಮ ಶೈವಮತದವನು ಎಂಬುದು ಸ್ಪಷ್ಟ. ಇದೇ ಶಾಸನದಲ್ಲಿ&#8221;ಪಾದಾರವಿಂದ ಭ್ರಮರೋ ಬಾಲಚಂದ್ರ ಶೀಖಾಮಣೇಃ&#8221; ಎಂಬುದು ಶಿವನನ್ನು ಉದ್ದೇಶಿಸಿಯೇ ಹೇಳಲಾಗಿದೆ. ವಿಹಾರ ಎಂಬುದು ಶೈವ ದೇವಾಲಯಕ್ಕೆ ಹೆಸರಲ್ಲ, ಅದು ಬೌದ್ಧಕೇಂದ್ರವೇ. ಶ್ರೀಲಂಕಾದಲ್ಲಿ ಅವಲೋಕಿತೇಶ್ವರನನ್ನು ಲೋಕೇಶ್ವರನಾಥನೆಂದೇ ಕರೆಯುತ್ತಾರೆ. ಲೋಕೇಶ್ವರನ ಪ್ರತಿಮೆಯಲ್ಲಿ ಶಿವ ಸಂಬಂಧದ ಲಕ್ಷಣಗಳಾದ ಸರ್ಪ, ಅರ್ಧಚಂದ್ರ ಇತ್ಯಾದಿಗಳಿಲ್ಲ. ಅದು ಅವಲೋಕಿತೇಶ್ವರನ ಪ್ರತಿಮೆಯೇ.</p>


<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2022/09/Kadri-Manjunath-Temple2-1.webp" alt="" class="wp-image-5481" width="517" height="439" srcset="https://peepalmedia.com/wp-content/uploads/2022/09/Kadri-Manjunath-Temple2-1.webp 680w, https://peepalmedia.com/wp-content/uploads/2022/09/Kadri-Manjunath-Temple2-1-300x255.webp 300w" sizes="auto, (max-width: 517px) 100vw, 517px" /><figcaption>ತ್ರಿಲೋಕೇಶ್ವರ ಪ್ರತಿಮೆ</figcaption></figure></div>


<p class="has-text-align-justify has-medium-font-size"><br>ಅಂತಃ ಪೌಳಿಯ ಎಡಭಾಗದಲ್ಲಿ ಪರ‍್ವಾಭೀಮುಖವಾಗಿರುವ ನಾಲ್ಕು ಕೈಗಳ ಮಂಜುಶ್ರೀ ಬೋಧಿಸತ್ವನ ಪ್ರತಿಮೆಯಿದೆ. ಅದಕ್ಕೆ ಎದುರಾಗಿ ಬಹಳ ಸುಂದರವಾದ ಸಾಕ್ಷಾತ್ ಬುದ್ಧನ ಪ್ರತಿಮೆಯಿದೆ. ಮಂಜುಳ ಅಥವಾ ಮಂಜು ಎಂಬ ಪದಕ್ಕೆ ಸಂಸ್ಕೃತದಲ್ಲಿ ಮನೋಹರವೆಂಬ ಅರ್ಥವಿದೆ.</p>



<p class="has-text-align-justify has-medium-font-size"><br>ಮಂಜುಶ್ರೀ ಮೂಲಕಲ್ಪ ಮತ್ತು ಗುಹ್ಯಸಮಾಜತಂತ್ರಗಳಂತಹ ಬೌದ್ಧ ತಾಂತ್ರಿಕ ಕೃತಿಗಳಲ್ಲಿ ಮಂಜುಶ್ರೀಯ ವಿವರಣೆಗಳಿವೆ. ಎಸ್ ಶ್ರೀಕಂಠ ಶಾಸ್ತ್ರಿಗಳು ಚೀನೀ ಭಾಷೆಯ ಮಾನ್-ಚು ಎಂಬುದೇ ಮಂಜುವಾಗಿದೆ ಎನ್ನತ್ತಾರೆ. ಈ ಮಂಜುಘೋಷನ ಪ್ರತಿಮೆಯನ್ನು ಬ್ರಹ್ಮನೆಂದು ಮರುನಾಮಕರಣ ಮಾಡಿದರೂ ಇದು ನಿಖರವಾಗಿ ಬ್ರಹ್ಮನಲ್ಲ. ಬುದ್ಧನನ್ನು ವ್ಯಾಸನೆಂದು ಕರೆಯಲಾಗುತ್ತದೆ.</p>



<p class="has-text-align-justify has-medium-font-size"><br></p>


<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2022/09/IMG_20220915_120052-1.jpg" alt="" class="wp-image-5484" width="397" height="640" srcset="https://peepalmedia.com/wp-content/uploads/2022/09/IMG_20220915_120052-1.jpg 623w, https://peepalmedia.com/wp-content/uploads/2022/09/IMG_20220915_120052-1-186x300.jpg 186w" sizes="auto, (max-width: 397px) 100vw, 397px" /><figcaption>ವ್ಯಾಸ ಎಂದು ಮರುನಾಮಕರಣಗೊಂಡಿರುವ ಬುದ್ಧನ ಪ್ರತಿಮೆ</figcaption></figure></div>

<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2022/09/IMG_20220915_120035.jpg" alt="" class="wp-image-5485" width="401" height="541" srcset="https://peepalmedia.com/wp-content/uploads/2022/09/IMG_20220915_120035.jpg 755w, https://peepalmedia.com/wp-content/uploads/2022/09/IMG_20220915_120035-222x300.jpg 222w" sizes="auto, (max-width: 401px) 100vw, 401px" /><figcaption>ಮಂಜುಶ್ರೀ ಬೋಧಿಸತ್ವ ಹಾಗೂ ಬುದ್ಧ</figcaption></figure></div>


<p class="has-text-align-justify has-medium-font-size">ಈ ದೇವಾಲಯದ ಒಳಪೌಳಿಯ ಹೊರಗೆ ಆಯಕವನ್ನು ಹೋಲುವ ಶಿಲಾಸ್ಥಂಭವಿದೆ.ಅದರ ನಾಲ್ಕು ಬದಿಗಳಲ್ಲಿ ಧ್ಯಾನಸ್ಥ ಬುದ್ಧನ ವಿಗ್ರಹಗಳಿವೆ. ಶೈವ ದೇಗುಲಗಲಲ್ಲಿ ಬುದ್ಧನ ಕೆತ್ತನೆಗಳಿರುವ ಸಂಪ್ರದಾಯವಿಲ್ಲ. ಕದ್ರಿಯ ಗುಡ್ಡದಲ್ಲಿರುವ ಪಾಂಡವರ ಗುಹೆಗಳು ಬೌದ್ಧ ಅವಶೇಷಗಳೇ. ಈ ಗುಡ್ಡೆಯಲ್ಲಿ ಬೋಧಿಸತ್ವನ ಪಟ್ಟಿಕೆಯೊಂದು ದೊರೆತಿದೆ.(ಡಾ,ಗುರುರಾಜ ಭಟ್ಟ:೧೯೭೫,೨೯೮) ಕದ್ರಿಯ ಕೆರೆಯಲ್ಲಿ ಮತ್ತು ಮೇಲ್ಬಾಗದ ಶಿವಲಿಂಗದ ಹಿಂದಿನ ಕಸದ ರಾಶಿಯಲ್ಲಿ ರುಂಡವಿಲ್ಲದ ಬುದ್ಧನ ಕೆತ್ತನೆಗಳಿವೆ.</p>


<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2022/09/IMG_20220915_120120.jpg" alt="" class="wp-image-5486" width="382" height="422" srcset="https://peepalmedia.com/wp-content/uploads/2022/09/IMG_20220915_120120.jpg 898w, https://peepalmedia.com/wp-content/uploads/2022/09/IMG_20220915_120120-271x300.jpg 271w, https://peepalmedia.com/wp-content/uploads/2022/09/IMG_20220915_120120-768x850.jpg 768w" sizes="auto, (max-width: 382px) 100vw, 382px" /><figcaption>ಕದ್ರಿ ಕೆರೆಯಲ್ಲಿರುವ ಭಗ್ನ ಬುಧ್ಧನ ವಿಗ್ರಹ</figcaption></figure></div>


<p class="has-text-align-justify has-medium-font-size"><br></p>


<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2022/09/IMG_20220915_120105.jpg" alt="" class="wp-image-5487" width="503" height="378" srcset="https://peepalmedia.com/wp-content/uploads/2022/09/IMG_20220915_120105.jpg 988w, https://peepalmedia.com/wp-content/uploads/2022/09/IMG_20220915_120105-300x226.jpg 300w, https://peepalmedia.com/wp-content/uploads/2022/09/IMG_20220915_120105-768x578.jpg 768w" sizes="auto, (max-width: 503px) 100vw, 503px" /><figcaption>ಬುದ್ಧನ ಭಗ್ನ ಪ್ರತಿಮೆ</figcaption></figure></div>


<p class="has-text-align-justify has-medium-font-size">ಬೌದ್ಧ ಧರ್ಮ ಕದರಿಯಲ್ಲಿ ನೆಲೆಸಿತ್ತಾದರೂ ಕ್ರಿ.ಶ.೭-೮ರಲ್ಲಿ ತುಳುನಾಡಿನಿಂದ ತೀರ ಲುಪ್ತವಾಯಿತು. ಆದ ಕಾರಣ ಕ್ರಿ.ಶ.೧೧ರಲ್ಲಿ ಪ್ರತಿಷ್ಠಿತವಾದ ಲೋಕೇಶ್ವರನ ವಿಗ್ರಹವೂ ಶಾಸನದಲ್ಲಿರುವ ಕದಿರೆಯ ವಿಹಾರವು ಖಾಸಾ ಬೌದ್ಧ ಮತದಿಂದಲ್ಲ ಉತ್ತರಭಾರತ ಹಿಂದೂ ಪಂಥದ ಪ್ರೇರಣೆಯಿಂದ ನಿರ್ಮಿಸಲ್ಪಟ್ಟಿರಬೇಕು. ಅದು ಕದಿರೆ ಗುಡ್ಡದಲ್ಲಿ ಮಠಮಾಡಿಕೊಂಡಿರುವ ಜೋಗಿಗಳೆಂಬ ಶೈವ ಧರ್ಮದ ನಾಥಪಂಥದವರು.(ಗೋವಿಂದ ಪೈ:೬೦೧) ಕದ್ರಿಯ ಮಂಜುನಾಥನ ಉಲ್ಲೇಖ ಮೊದಲಿಗೆ ಬರುವುದು ಕ್ರಿ.ಶ.೧೨೭೭-೧೨೯೨ರ ಬಲ್ಲ ಮಹಾದೇವಿಯ ಶಾಸನದಲ್ಲಿ. (ಡಾ.ಗುರುರಾಜ ಭಟ್ಟ:೧೯೭೫,೨೯೫)</p>


<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2022/09/Mathsyendranth-MangaloreMuseum.jpg" alt="" class="wp-image-5490" width="404" height="538" srcset="https://peepalmedia.com/wp-content/uploads/2022/09/Mathsyendranth-MangaloreMuseum.jpg 720w, https://peepalmedia.com/wp-content/uploads/2022/09/Mathsyendranth-MangaloreMuseum-225x300.jpg 225w" sizes="auto, (max-width: 404px) 100vw, 404px" /><figcaption>ಮಚ್ಚೇಂದ್ರನಾಥ, ಶ್ರೀಮಂತಿ ಭಾಯಿ ಸರ್ಕಾರಿ ವಸ್ತುಸಂಗ್ರಹಾಲಯ, ಮಂಗಳೂರು</figcaption></figure></div>


<p class="has-text-align-justify has-medium-font-size"><br></p>


<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2022/09/66275-1.jpg" alt="" class="wp-image-5491" width="462" height="308" srcset="https://peepalmedia.com/wp-content/uploads/2022/09/66275-1.jpg 768w, https://peepalmedia.com/wp-content/uploads/2022/09/66275-1-300x200.jpg 300w" sizes="auto, (max-width: 462px) 100vw, 462px" /><figcaption>ನಾಥ ಸನ್ಯಾಸಿಗಳ ಸಮಾಧಿ, ಕದ್ರಿ ಯೋಗೇಶ್ವರ ಮಠ, ಮಂಗಳೂರು, BM Archives</figcaption></figure></div>


<p class="has-text-align-justify has-medium-font-size">ಲೋಕೇಶ್ವರನು ಕದರಿಯ ಪ್ರಧಾನ ದೇವತೆಯಾಗಿದ್ದು ೧೨-೧೩ ಶತಮಾನದಲ್ಲಿ ಸಂಪರ‍್ಣ ಶೈವಾಲಯವಾಗಿ ಬದಲಾಗಿರಬೇಕು. ನಾಥಪಂಥವೂ ಬೌದ್ಧರ‍್ಮದ ಮಹಾಯಾನ ಶಾಖೆಯ ವಜ್ರಾಯಾನದಿಂದ ಹುಟ್ಟಿಕೊಂಡ ಪಂಥ. ನಾಥಸಾಹಿತ್ಯಗಳಲ್ಲಿ ಬೌದ್ಧ ನಿಂದನೆಗಳಿದ್ದರೂ ಚೌರಾಸಿ ಬೌದ್ಧ ಸಿದ್ದರಲ್ಲಿ ಮತ್ಸ್ಯೇಂದ್ರ ಮತ್ತು ಗೋರಖರೂ ಇದ್ದಾರೆ. ಇವರ ಶಿಷ್ಯೆ ಕೇರಳದ ಪರಿಮಳೆಯು ಇವರನ್ನು ಅನುಸರಿಸಿ ಮಂಗಳೂರಿಗೆ ಬರುತ್ತಾಳೆ. ಇವಳಿಗೆ ಮಂಗಳಾ ಎಂಬ ಹೆಸರಿಟ್ಟರು. ಬೋಳಾರದಲ್ಲಿ ಮಂಗಳದೇವಿ ನೆಲೆಯಗುತ್ತಾಳೆ. ಆದರೆ ಇದೊಂದು ಸ್ತ್ರೀಯಂತೆ ಭಾಸವಾಗುವ ಕರಿಕಲ್ಲೇ ಹೊರತು ಶಿಲ್ಪವಲ್ಲ. ಮಂಗಳಾದೇವಿಯನ್ನು ತಾರಾಭಗವತಿ ಎಂದಿದ್ದಾರೆ. ಕದರಿಯಲ್ಲಿ ಲೋಕೇಶ್ವರನ ಆರಾಧನೆ ನಡೆಯುತ್ತಿದ್ದ ಸಮಯದಲ್ಲಿ ಇಲ್ಲಿ ತಾರಾದೇವಿಯ ಕ್ಷೇತ್ರ ಇದ್ದಿರಬೇಕು. ಕೇರಳದಲ್ಲಿ ಬುದ್ಧನ ವಿಗ್ರಹಗಳು ದೊರೆತಲ್ಲೆಲ್ಲಾ ಭಗವತಿ ಸಾನಿಧ್ಯಗಳಿವೆ. ಅಲ್ಲದೆ ಪೊಳಲಿಯ ರಾಜರಾಜೇಶ್ವರಿಗೆ ಹೊಳಲಭಟ್ಟಾರಕಿ ಎಂಬ ಬೌದ್ಧಮೂಲದ ಅಭಿದಾನವಿದೆ(ಸಾಲೆತ್ತೂರು:೧೯೩೬,೩೭೮&amp;೩೮೧)</p>



<p class="has-text-align-justify has-medium-font-size"><br>ಸನ್ನತ್ತಿಯಲ್ಲಿನ ತಾರಾಗುಡಿಯು ಈಗ ಚಂದ್ರಲಾಂಬಾ ಗುಡಿಯಾಗಿದೆ. ಈಕೆಗೆ ಹಿಂಗುಳಾದೇವಿ ಎಂಬ ಹೆಸರಿದೆ. ತಾರಾ ಟಿಬೇಟಿನಿಂದ ಬಂದ ಬೌದ್ಧದೇವತೆ. ಕಾಳಿ, ತಾಂತ್ರಿಕ ಸರಸ್ವತಿ ಕೂಡ ಮೂಲತಃ ಬೌದ್ಧದೇವತೆಗಳು ಎಂಬ ಅಭಿಪ್ರಾಯವಿದೆ.(ಡಾ.ಚಿದಾನಂದ ಮೂರ್ತಿ:೧೯೬೬,೧೩೬)</p>



<p class="has-text-align-justify has-medium-font-size"><br>ಪಾಕಿಸ್ತಾನದ ಬಲೂಚಿಸ್ತಾನದ ಹಿಂಗ್ಲಜಾ ಒಂದು ಕಾಲದ ಪ್ರಸಿದ್ಧ ವಜ್ರಾಯಾನದ ಬೌದ್ಧ ನೆಲೆ. ಹಿಂಗ್ಲಜಾ ಒಂದು ಶಕ್ತಿಪೀಠ. ಬಾರ್ಕೂರಿನಲ್ಲೂ ಹಿಂಗಳಾ ಗುಡಿಯಿದ್ದು ಅದು ಶೈವ ದೇವತೆಯ ಆರಾಧನೆಯ ಕೇಂದ್ರವಾಗಿದೆ. ಮಂಗಳೂರಿನ ಬೋಳಾರಿನಲ್ಲಿರುವ ಮಂಗಳದೇವಿಯೂ ಹಿಂಗಳೆಯೇ ಇರಬೇಕು. ಈಕೆ ಗುರು ಗೋರಖನಾಥ ಮತ್ತು ಮಚ್ಚೇಂದ್ರನಾಥನನ್ನು ಹಿಂಬಾಲಿಸಿ ಕೇರಳದಿಂದ ಬಂದ ದೇವತೆ.</p>



<p><br>ಮುಂದುವರಿಯುತ್ತದೆ&#8230;..</p>



<p><strong>ಪರಾಮರ್ಶಿತ ಗ್ರಂಥಗಳು</strong></p>



<ol class="wp-block-list"><li>ಪ್ರೊ. ಲಕ್ಷ್ಮಣ್ ತೆಲಗಾವಿ 2004, ಮೌರ್ಯ ಮತ್ತು ಶಾತವಾಹನ ಯುಗ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ</li><li>ಡಾ. ತಾಳ್ತಾಜೆ ವಸಂತಕುಮಾರ2015, ಬೌದ್ಧಾಯನ, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು</li><li>ಡಾ. ಚಿದಾನಂದ ಮೂರ್ತಿ 1966, ಕನ್ನಡ ಶಾಸನಗಳ ಸಾಂಸ್ಕøತಿಕ ಅಧ್ಯಯನ, ಮೈಸೂರು</li><li>ಡಾ. ಚಿದಾನಂದ ಮೂರ್ತಿ 1970, ಸಂಶೋಧನ ತರಂಗ, ಬೆಂಗಳೂರು</li><li>ಡಾ. ಗುರುರಾಜ ಭಟ್ 1963, ತುಳುನಾಡು, ಉಡುಪಿ</li><li>ಡಾ. ಪುರುಷೋತ್ತಮ ಬಿಳಿಮಲೆ, ಕೊರಗರು ಸಮಕಾಲೀನ ಸ್ಪಂದನ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ</li><li>ರಮೇಶ್ ಕೆ ವಿ 1969, ತುಳುನಾಡಿನ ಇತಿಹಾಸ, ಮೈಸೂರು</li><li>ಧರ್ಮಾನಂದ ಕೋಸಂಬಿ 1998, ಪ್ರಾಚೀನ ಭಾರತದ ಚರಿತ್ರೆ (ಕನ್ನಡ:ಎಚ್.ಎಸ್.ಶ್ರೀಮತಿ), ಬೆಳ್ಳಿಚುಕ್ಕಿ ಬುಕ್ ಟ್ರಸ್ಟ್, ಬೆಂಗಳೂರು</li><li>ಗಣಪತಿ ರಾವ್ ಐಗಳ್ 1923, ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ, ಮಂಗಳೂರು</li><li>10 ಕಮಲಾ ಹಂಪನಾ 2011, ಮಹಮಂಡಲೇಶ್ವರಿ ರಾಣಿ ಚೆನ್ನಭೈರಾದೇವಿ ಮತ್ತು ಇತರ ಕರಾವಳಿ ರಾಣಿಯರು, ಸ್ವಪ್ನ ಬುಕ್ ಹೌಸ್, ಬೆಂಗಳೂರು</li><li>ಗೋವಿಂದ ಪೈ ಸಂಶೋಧನಾ ಸಂಪುಟ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ</li><li>ಪೊಲಿ: ಪ್ರ.ಸಂ. ಶ್ರೀ ಎಂ ಮುಕುಂದ ಪ್ರಭು, ಪ್ರ. ಜಿಲ್ಲಾಧಿಕಾರಿ, ದ.ಕ ಜಿಲ್ಲೆ ಮಂಗಳೂರು</li><li>ಅಮೃತ ಸೋಮೇಶ್ವರ 1983, ಕೊರಗರು, ಬೆಂಗಳೂರು<br>14 ತುಳುನಾಡಿನ ಶಾಸನಗಳು, ಸಂ. ಕೆ ವಿ ರಮೇಶ್ ಮತ್ತು ಶರ್ಮ ಎಂ ಜೆ</li><li>Dr. Paduru Gururaja Bhat 2014, Studies in Tuluva History and Culture, Dr. Paduru Gururaja Bhat Memorial Trust, Udupi<br>16.  B A Saletore 1936, History of Tuluva, Poona<br>17.  D N Jha 2015 (3rd edition), Ancient India: An Introductory Outline, Manohar publishers &amp; Distributors, New Delhi<br>18.  Amara-kosha 1873, Luis Rice, Mysore Government Press, Bangalore<br>19.  Romila Thapar 1998, Ashoka and the Mauryas, Oxford University Press, USA<br>20.  Paduru Gururaja Bhat 1969, Antiquities of South Kanara</li></ol>


<div class="wp-block-image">
<figure class="alignleft size-full is-resized"><img loading="lazy" decoding="async" src="https://peepalmedia.com/wp-content/uploads/2022/09/264199119_2766563190310430_8296267707764684622_n.jpg" alt="" class="wp-image-5499" width="174" height="176" srcset="https://peepalmedia.com/wp-content/uploads/2022/09/264199119_2766563190310430_8296267707764684622_n.jpg 953w, https://peepalmedia.com/wp-content/uploads/2022/09/264199119_2766563190310430_8296267707764684622_n-298x300.jpg 298w, https://peepalmedia.com/wp-content/uploads/2022/09/264199119_2766563190310430_8296267707764684622_n-768x774.jpg 768w" sizes="auto, (max-width: 174px) 100vw, 174px" /><figcaption><strong><mark style="background-color:rgba(0, 0, 0, 0)" class="has-inline-color has-black-color">ಚರಣ್‌ ಐವರ್ನಾಡು</mark></strong>,<strong> ಲೇಖಕ</strong></figcaption></figure></div>


<p></p>



<p></p>
]]></content:encoded>
					
		
		
			</item>
		<item>
		<title>ಬುಡಕಟ್ಟು ಗಣನಾಯಕನಿಂದ  ಗಜಮುಖನ ವರೆಗೆ.!</title>
		<link>https://peepalmedia.com/charan-aivarnadu-ganesha-festival-special-article/</link>
		
		<dc:creator><![CDATA[Charan Aivarnad]]></dc:creator>
		<pubDate>Wed, 31 Aug 2022 12:28:02 +0000</pubDate>
				<category><![CDATA[ಜನ-ಗಣ-ಮನ]]></category>
		<category><![CDATA[ಧರ್ಮ- ಸಂಸ್ಕೃತಿ]]></category>
		<category><![CDATA[bengalure]]></category>
		<category><![CDATA[charan Aivarnad]]></category>
		<category><![CDATA[ganesha chaturthi]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[special]]></category>
		<category><![CDATA[special story]]></category>
		<category><![CDATA[writing]]></category>
		<guid isPermaLink="false">https://peepalmedia.com/?p=3423</guid>

					<description><![CDATA[ಗಣಪತಿಯ ಹಿನ್ನಲೆ ಬಹಳ ವಿಚಿತ್ರವಾಗಿದೆ. ಗಣಪತಿಯದು  ಓರ್ವ ಪ್ರಖ್ಯಾತ ದೇವತೆಯಲ್ಲದ  ಕಾಲವಿದ್ದಂತೆ  ತೋರುತ್ತದೆ. ಅವನನ್ನು ಕಂಡು ಭಯಪಡುವವರೂ ಇದ್ದರು! ಗಣಪತಿಯ ಪರಿಕಲ್ಪನೆ ಸಾವಿರಾರು ವರ್ಷಗಳಿಂದ ಬೇರೆ ಬೇರೆ ಸ್ಥಿತ್ಯಂತರಗಳಿಗೆ ಒಳಗಾಗಿರುವುದು ಗಮನಿಸಬೇಕಾದ ವಿಶಿಷ್ಟತೆ. ಚರಣ್ ಐವರ್ನಾಡು ಬರೆದ  ಗಣೇಶ ಹಬ್ಬದ ಪ್ರಯುಕ್ತದ   ವಿಶೇಷ ಲೇಖನ ನಿಮ್ಮ ಓದಿಗಾಗಿ.  ಗಣಪತಿಯ ಪರಿಕಲ್ಪನೆ ಬಗ್ಗೆ ಬೇರೆ ಬೇರೆ ವಿಶ್ಲೇಷಣೆಗಳು ಬಂದಿವೆ. ವೇದಗಳ ಬೃಹ್ಮಣಸ್ಪತಿಯಿಂದ ಹಿಡಿದು ಆನೆ ಮುಖವನ್ನು ಹೊಂದಿರುವ ಗಣಪ ಅನೇಕ ರೂಪಾಂತರಗಳಿಗೆ ಒಳಗಾದವನು. ಅವನು ಕೆಲವರಿಗೆ ವೇದಮೂರ್ತಿ, ಕೆಲವರಿಗೆ [&#8230;]]]></description>
										<content:encoded><![CDATA[
<blockquote class="wp-block-quote has-medium-font-size is-layout-flow wp-block-quote-is-layout-flow"><p><strong>ಗಣಪತಿಯ ಹಿನ್ನಲೆ ಬಹಳ ವಿಚಿತ್ರವಾಗಿದೆ. ಗಣಪತಿಯದು  ಓರ್ವ ಪ್ರಖ್ಯಾತ ದೇವತೆಯಲ್ಲದ  ಕಾಲವಿದ್ದಂತೆ  ತೋರುತ್ತದೆ. ಅವನನ್ನು ಕಂಡು ಭಯಪಡುವವರೂ ಇದ್ದರು! ಗಣಪತಿಯ ಪರಿಕಲ್ಪನೆ ಸಾವಿರಾರು ವರ್ಷಗಳಿಂದ ಬೇರೆ ಬೇರೆ ಸ್ಥಿತ್ಯಂತರಗಳಿಗೆ ಒಳಗಾಗಿರುವುದು ಗಮನಿಸಬೇಕಾದ ವಿಶಿಷ್ಟತೆ. ಚರಣ್ ಐವರ್ನಾಡು ಬರೆದ  ಗಣೇಶ ಹಬ್ಬದ ಪ್ರಯುಕ್ತದ   ವಿಶೇಷ ಲೇಖನ ನಿಮ್ಮ ಓದಿಗಾಗಿ. </strong></p></blockquote>



<p class="has-text-align-justify has-medium-font-size">ಗಣಪತಿಯ ಪರಿಕಲ್ಪನೆ ಬಗ್ಗೆ ಬೇರೆ ಬೇರೆ ವಿಶ್ಲೇಷಣೆಗಳು ಬಂದಿವೆ. ವೇದಗಳ ಬೃಹ್ಮಣಸ್ಪತಿಯಿಂದ ಹಿಡಿದು ಆನೆ ಮುಖವನ್ನು ಹೊಂದಿರುವ ಗಣಪ ಅನೇಕ ರೂಪಾಂತರಗಳಿಗೆ ಒಳಗಾದವನು. ಅವನು ಕೆಲವರಿಗೆ ವೇದಮೂರ್ತಿ, ಕೆಲವರಿಗೆ ಅನಾರ್ಯರ ದೇವತೆ. ಅನೇಕರಿಗೆ ಆತ ಜಾನಪದ ಮೂಲದ ಕೃಷಿಯ ದೇವತೆ. ತುಳುವರಿಗೆ ಅವನು ಕೃಷಿಮೂಲದ ದೇವತೆ. ಆಧ್ಯಾತ್ಮಿಕವಾಗಿ ಅವನು ಪ್ರಣವ ಸ್ವರೂಪಿ ಎಂದೂ ವಿವರಿಸಲಾಗಿದೆ. ಅವನಿಗೆ ಲೋಕದಲ್ಲಿ ಯಾರಿಗೂ ಇಲ್ಲದಷ್ಟು ಹೆಸರುಗಳು ಬೇರೆ. ಕೆಲವಂತು ಅವನ ದೇಹವನ್ನು ತಮಾಷೆ ಮಾಡುವಂತವೇ&#8230;! ಅವನ ಬಗ್ಗೆ ಇರುವ ಕತೆಗಳನ್ನು, ಪುರಾಣಗಳನ್ನು ಕೆದಕಿ, ವಿಶ್ಲೇಷಿಸುತ್ತಾ ಹೋದಂತೆ ಭಾರತೀಯ ಆರಾಧನಾ ಪರಂಪರೆಗಳ ವಿರಾಟ್ ಸ್ವರೂಪದ ದರ್ಶನವಾಗುತ್ತದೆ.</p>


<div class="wp-block-image">
<figure class="alignleft size-full is-resized"><img loading="lazy" decoding="async" src="https://peepalmedia.com/wp-content/uploads/2022/08/IMG-20220831-WA0008.jpg" alt="" class="wp-image-3424" width="254" height="219" srcset="https://peepalmedia.com/wp-content/uploads/2022/08/IMG-20220831-WA0008.jpg 660w, https://peepalmedia.com/wp-content/uploads/2022/08/IMG-20220831-WA0008-300x258.jpg 300w" sizes="auto, (max-width: 254px) 100vw, 254px" /><figcaption><strong>ಟರ್ರಕೋಟ್ ಗಣಪತಿ, ದಿ ವೀಕ್ ಕ್ರಿ.ಶ 531</strong></figcaption></figure></div>


<p class="has-text-align-justify has-medium-font-size">ಗಣಪತಿಯ ಬಗ್ಗೆ ಬಹಳ ಇಂಟರೆಸ್ಟಿಂಗ್ ಆದ ಸಂಗತಿಗಳು ಬರುತ್ತಿವೆ. ನಮ್ಮ ಗೌರವಾನ್ವಿತ ಪ್ರಧಾನಿ ಮೋದಿಯವರು ಐಐಟಿಯೊಂದರಲ್ಲಿ ಗಣಪತಿ &#8216;ಪ್ಲಾಸ್ಟಿಕ್&#8217; ಅಥವಾ &#8216;ಕಾಸ್ಮೆಟಿಕ್&#8217; ಸರ್ಜರಿಯ ಉತ್ಪಾದನೆ ಎಂದರು! ಅನೇಕರು ಇಂತಹ ನಿಲುವು ಹೊಂದಿದ್ದಾರೆ. ಪೆರಿಯಾರ್ ಕೂಡ ಹೀಗೆ  ಗಣಪತಿಯನ್ನು ಟೀಕಿಸಿದ್ರಂತೆ! ಇದು ಗಣಪತಿಯ ಬಗ್ಗೆ ಸಾವಿರಾರು ವರ್ಷಗಳಿಂದ ಬೆಳೆದಿರುವ ಸಾಂಸ್ಕೃತಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಬಲ್ಲ ವ್ಯಾಖ್ಯಾನ. ಗಣಪತಿಯನ್ನು ಈ ರೀತಿ ಅರ್ಥೈಸುವುದು ತಪ್ಪು ಮಾತ್ರವಲ್ಲ ಪುರಾಣಗಳನ್ನ, ಕಾವ್ಯಗಳನ್ನು ನೋಡುವ ರೀತಿಯೂ  ಇದಲ್ಲ. ಗಣಪತಿ, ತನ್ನ ಬಗ್ಗೆ ಸ್ತುತಿಸುವಾಗ ಭಕ್ತರು ಮಾಡುವ ಹಾಸ್ಯವನ್ನು ಸುಖಿಸುತ್ತಾನೆ, ಇನ್ನೊಂದೆಡೆ ಗಂಭೀರ ಅನ್ವೇಷಣೆಗಳಿಗೂ ಒಳಗಾಗಿದ್ದಾನೆ. ಅವನನ್ನು ಬ್ರಹ್ಮಚಾರಿ ಅಂತ ಹೇಳುತ್ತಾ ಸಿದ್ಧಿ-ಬುದ್ಧಿಯರ ಗಂಡ ಅಂತ ಕರಿತಾರೆ. ಸಿದ್ಧಿ-ಬುದ್ಧಿಯರಿಗೆ ಇವ ತಾಳಿ ಕಟ್ಟಿ ಮದುವೆಯಾಗಿದ್ದಾನೆ ಎಂದಲ್ಲ. ಅವ ಸಿದ್ಧಿಯನ್ನೂ ಬುದ್ಧಿಯನ್ನೂ ಯಥೇಚ್ಛವಾಗಿ ಸಂಪಾದಿಸಿದವನು ಮತ್ತು ನೀಡುವವನು.</p>



<p class="has-text-align-justify has-medium-font-size">ಶಂಕರಾಚಾರ್ಯರು ಉಗ್ರಪಂಥೀಯ ಗಾಣಪತ್ಯರ ಬಗ್ಗೆ ಪ್ರಸ್ತಾಪಿಸುತ್ತಾರೆ. ಇವರದ್ದು ಭಾರತದ ಎಲ್ಲೆಡೆ ಹರಡಿದ್ದ ಒಂದು ಪಂಥ. ಮನುವು ಗಣಪತಿಯನ್ನು ಶೂದ್ರರೆಲ್ಲಾ ಆರಾಧಿಸುವ ದೇವತೆ ಎಂದಿದ್ದಾನೆ. ಶಿವನನ್ನು ದ್ವೇಷಿಸುತ್ತಿದ್ದ ವೀರವೈಷ್ಣವರಿಗೆ ಅವನ ಮಗ ಗಣಪತಿ ಇಲ್ಲದಿದ್ದರೆ ಆಗುವುದಿಲ್ಲ. ನಾವು ತುಳುನಾಡಿನಲ್ಲಿ &#8216;ಗಣಪತಿಗ್ ಸುತ್ಯೆ ದೀಪುನೆ&#8217; ಅಂತ ಯಾವ ಕಾರ್ಯ ಮಾಡುವ ಮುನ್ನ ಬೆಳ್ತಕ್ಕಿ ಮೇಲೆ ಕಾಯಿ ಇಟ್ಟು ಪ್ರಾರ್ಥಿಸುತ್ತೇವೆ. ಮೂಲದಲ್ಲಿ ಇದನ್ನು ದೇವೆರೆಗ್ ದೀಪುನಿ ಎನ್ನುತ್ತಾರೆ. ಚೌತಿಯಂದು ಕಬ್ಬನ್ನು ಮಂಟಪದಂತೆ ಪೇರಿಸಿ ಅವಲಕ್ಕಿ ಬಡಿಸುತ್ತೇವೆ.</p>



<p class="has-text-align-justify has-medium-font-size">ಆದರೆ ಗಣಪತಿಯ ಹಿನ್ನಲೆ ಬಹಳ ವಿಚಿತ್ರವಾಗಿದೆ. ಗಣಪತಿ ಓರ್ವ ಪ್ರಖ್ಯಾತ ದೇವತೆಯಲ್ಲದ ಕಾಲವಿದ್ದಂತೆ ತೋರುತ್ತದೆ. ಅವನನ್ನು ಕಂಡು ಭಯಪಡುವವರೂ ಇದ್ದರು! ಗಣಪತಿಯ ಪರಿಕಲ್ಪನೆ ಸಾವಿರಾರು ವರ್ಷಗಳಿಂದ ಬೇರೆ ಬೇರೆ ಸ್ಥಿತ್ಯಂತರಗಳಿಗೆ ಒಳಗಾಗಿರುವುದು ಗಮನಿಸಬೇಕಾದ ವಿಶಿಷ್ಟತೆ.</p>



<p class="has-text-align-justify has-medium-font-size">ನಮ್ಮಲ್ಲಿ ವೇದಗಳು ಉಲ್ಲೇಖಿಸಿದ, ಪೂಜಿಸಲ್ಪಟ್ಟ ಅನೇಕ ದೇವತೆಗಳಿಗೆ ಆರಾಧನೆ ಇಲ್ಲ. ಇಂದ್ರ, ವರುಣ, ಬೃಹಸ್ಪತಿ, ಅಗ್ನಿ, ವಾಯು ಮೊದಲಾದವರಿಗೆ ಒಂದು ದೇವಾಲಯವೇ ಇಲ್ಲ! ಅವರು ಮಂತ್ರಗಳಲ್ಲಿ ಮಾತ್ರ ಕಾಣಿಸುತ್ತಾರೆ. ವೇದಗಳು ಆರಂಭದಲ್ಲಿ ಮೂರ್ತಿ ಪೂಜೆಯನ್ನು ಒಪ್ಪಲಿಲ್ಲ. ಏನಿದ್ದರೂ ಯಾಗದಲ್ಲೇ ಕೆಲಸ. ಆಗಮಶಾಸ್ತ್ರಗಳು ಮೂರ್ತಿ ಪೂಜೆ ನಿಲ್ಲಿಸದ ಹೊರತು ಮುಕ್ತಿ ದೊರೆಯದು ಎನ್ನುತ್ತವೆ.&nbsp; ಪ್ರತಿಮೆ ಎಂದರೆ ಒಂದು ಅಧಿಷ್ಠಾನ ಅಷ್ಟೇ, ದೇವರು ಅದರಲ್ಲಿದ್ದಾನೆ ಎಂಬುದು ಭಕ್ತನ ಊಹೆ. &#8220;ಅಜ್ಞಾನಂ ಭಾವನಾರ್ಥಾಯ ಪ್ರತಿಮಾಃ ಪರಿಕಲ್ಪಿತಾಃ&#8221;- ಪ್ರತಿಮೆ ಅಜ್ಞಾನಿಗಳಿಗೆ ಮಾತ್ರ. ಸಾಧಕನಾದವನು ಪ್ರತಿಮೆಯನ್ನು ಮೀರಿ ದೇವರನ್ನು ಕಾಣುತ್ತಾನೆ, ಮೂರ್ತಿಯ ಮೊರೆ ಹೋಗುವುದಿಲ್ಲ!&nbsp; ಶಿಲ್ಪಶಾಸ್ತ್ರ ಪ್ರತಿಮೆಗಿಂತ ಅದನ್ನು ಮಾಡಿದ ಶಿಲ್ಪಿ ಮೊದಲು ಪೂಜಾರ್ಹ ಎನ್ನುತ್ತದೆ. &#8220;ಶಿಲ್ಪಿನಂ ಪೂಜಯೇತ್ ಪೂರ್ವಂ&#8221;</p>



<p class="has-text-align-justify has-medium-font-size">ಆರಂಭದಲ್ಲಿ ಗಣಪತಿಯ ಆರಾಧನೆ ಅವೈದಿಕ ಸಮುದಾಯದಲ್ಲಿ ಮೂರ್ತರೂಪ ಆರಾಧನೆಯ ನೆಲೆಯಲ್ಲಿತ್ತು. ಅದನ್ನು ವೈದಿಕ ಕೃತಿಗಳು ಸ್ವೀಕರಿಸಿರಬಹುದು. ಋಗ್ವೇದದಲ್ಲಿ ಗಣಪತಿಯ ಪ್ರಸ್ತಾಪ ಎರಡೇ ಎರಡು ಬಾರಿ ಬರುವುದು. ಒಂದು ಅತ್ಯಂತ ಪ್ರಾಚೀನ ಎಂದು ಭಾವಿಸಲಾದ ಎರಡನೇ ಮಂಡಲದಲ್ಲಾದರೆ ಇನ್ನೊಂದು ಅರ್ವಾಚೀನವೆಂದು ಪರಿಗಣಿಸಲಾದ ಹತ್ತನೇ ಮಂಡಲದಲ್ಲಿ. ಮೊದಲ ಪ್ರಸ್ತಾಪವನ್ನು ನಾವು ಗಣಹೋಮದಲ್ಲಿ  ಕೇಳಿರುತ್ತೇವೆ.</p>



<p class="has-text-align-justify has-medium-font-size"><mark style="background-color:rgba(0, 0, 0, 0)" class="has-inline-color has-vivid-red-color">&#8220;ಗಣಾನಾಂ ತ್ವಾ ಗಣಪತಿಂ ಹವಾಮಹೇ<br>ಕವಿಃ ಕವೀನಾಂ ಉಪಮಶ್ರವಸ್ತಮಂ<br>ಜ್ಯೇಷ್ಠರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ<br>ಅ ನಃ ಶೃಣ್ವನ್ನೂ ತಿಭಿಃ ಸೀದಸಾದನಂ||&#8221;</mark></p>



<p class="has-text-align-justify has-medium-font-size">ಇಲ್ಲಿ ಗಣಪತಿಯನ್ನು &#8216;ಬ್ರಹ್ಮಣಸ್ಪತಿ&#8217; ಎಂದು ಕರೆಯಲಾಗಿದೆ. ಇವನೇ ಬೃಹಸ್ಪತಿಯೂ. ಈತ ಕವಿಗಳಲ್ಲಿ ಕವಿ, ದೊಡ್ಡ ರಾಜ. &#8220;ಬಾ&#8230;.ನಾನು ಯಜ್ಞ ಮಾಡ್ತಿದ್ದೇನೆ. ನಿನಗಿಲ್ಲಿ ಆಸನ ಇದೆ. ಬಾ ಕೂತ್ಕೊ&#8230;&#8221; ಅಂತ ಕರೆದಿದ್ದಾರೆ. ಪ್ರಶ್ನೆ ಎಂದರೆ ಈ ಗಣಪತಿ ನಮ್ಮ ಆನೆ ತಲೆಯ ಗಣಪತಿಯೋ&#8230;ಎಂದು. ಐತ್ತರೇಯ ಬ್ರಾಹ್ಮಣದ ಇದು ಬೃಹಸ್ಪತಿಯ ಮಂತ್ರ!<br>ಆಚಾರ್ಯ ಸಾಯಣರು &#8220;ಗಣಾನಾಂ&#8221; ಎಂದರೆ ದೇವತೆಗಳ ಗಣ(ಗುಂಪು) ದೇವ ಗಣಗಳ ನಾಯಕ.&nbsp; ಇಲ್ಲಿ ಗಣಪತಿ ಎಂದರೆ&nbsp; ಅದು ಬೃಹಸ್ಪತಿಯೇ.</p>



<p class="has-text-align-justify has-medium-font-size"><mark style="background-color:rgba(0, 0, 0, 0)" class="has-inline-color has-vivid-red-color">ಎರಡನೇ ಮಂತ್ರವೆಂದರೆ&#8230;.<br>ನಿ ಷು ಸೀದ ಗಣಪತೇ ಗಣೇಷು<br>ತ್ವಾ ಮಾಹುರ್ವಿಪ್ರತಮಂ ಕವೀನಾಂ|<br>ನ ಋತೇ&#8230; ಹೀಗೆ&#8230;</mark></p>



<p class="has-text-align-justify has-medium-font-size"><br>&#8220;ಹೇ&#8230;ಗಣಪತಿ&#8230;.ಬಾ&#8230;ಗಣಗಳ ಮಧ್ಯೆ ಕೂತ್ಕೊ. ನೀನು ಕವಿಗಳಲ್ಲೇ ಬುದ್ಧಿವಂತ. ನಿನ್ನನ್ನು ಬಿಟ್ಟು ಯಾವುದೂ ನಡೆಯದು. ನೀನು ಸಂಪತ್ತನ್ನು ಪಡೆದವ. ಬಾ ಚಿತ್ರವಿಚಿತ್ರನಾದ ಸೂರ್ಯನನ್ನು ಹೊಗಳು- ಮಹಾಂ ಅರ್ಕಂ ಮಘವಙ್ ಚಿತ್ರಮರ್ಚ&#8221; ಅಂತ. ಸಾಯಣರು ಮಂತ್ರಘೋಷ ಮಾಡುವ ಗುಂಪಿನ ಜೊತೆ ಕೂತು ಸೂರ್ಯನನ್ನು ಹಾಡು. ನಿನ್ನನ್ನು ಬಿಡ್ಲಿಕ್ಕಾಗ್ತದೊ&#8230;? ಎಂಬರ್ಥದಲ್ಲಿ ಈ ಗಣಪತಿ ಇಂದ್ರನೇ ಅಂತಾರೆ!</p>



<p class="has-text-align-justify has-medium-font-size">ಹೀಗೆ ಋುಗ್ವೇದದಲ್ಲಿ ಬರುವ ಗಣಪತಿ ನಮ್ಮ ಆನೆತಲೆಯ ಗಣಪತಿಯಲ್ಲ! ಇಲ್ಲಿ ಬರುವ ಗಣಪತಿ ದೇವತೆಯ ಹೆಸರಲ್ಲ ಎನಿಸುತ್ತದೆ. ಅವನು ವೇದಗಳಲ್ಲಿ ಆಗಾಗ ಬರುವ &#8216;ಮರುತ್ತಗಳ ಗಣ&#8217;, &#8216;ಅಂಗಿರಸ ಗಣ&#8217; ಮೊದಲಾದ ಜನರ ಗುಂಪಿನ ಒಡೆಯನ ಪದವಿ. ಗಣಗಳ ಅಧಿಪತಿ ಆತ !</p>



<p class="has-text-align-justify has-medium-font-size">ಋಗ್ವೇದದದಲ್ಲಿ ಗಣಪತಿ ಬೃಹಸ್ಪತಿಯಾದರೆ ಯಜುರ್ವೇದವು ರುದ್ರನನ್ನು ಬೃಹಸ್ಪತಿ ಎನ್ನುತ್ತದೆ&#8230;&#8230;.ರುದ್ರಸ್ಯ ಗಾಣಪತ್ಯಾನ್ ಮಯೋಭೂರೇಹಿ. ಸಾಯಣಾಚಾರ್ಯರು ಈ ಗಾಣಪತ್ಯವು &#8216;ಪಶುಸಮೂಹ&#8217; ಎನ್ನುತ್ತಾರೆ. ರುದ್ರನು ಪಶುಪತಿಯೇ. ಮಹೀಧರನು ತನ್ನ ವಾಜಸನೇಯಿ ಮಂತ್ರಕ್ಕೆ ಬರೆದ ಭಾಷ್ಯದಲ್ಲಿ ಈ ಗಣವು ದೇವತೆಗಳ ಜೊತೆಗಿರುವ ಭೂತವಿಶೇಷಗಳ ಗುಂಪು, ಅದರ ಒಡೆಯ ಗಣಪತಿ ಎನ್ನುತ್ತಾರೆ. (&#8230;ತೇಷಾಂ ಪಾಲಕಾ ಗಣಪತಯ)</p>



<p class="has-text-align-justify has-medium-font-size">ಕೆಲ ವೇದೋಕ್ತ ದೇವತೆಗಳು ಕಾಲಾನಂತರದಲ್ಲಿ ಆರಾಧನೆಯನ್ನು ಕಳೆದುಕೊಂಡವು. ಅನಾರ್ಯ ಸಮುದಾಯಗಳ ದೇವತೆಗಳ ಆರಾಧನೆ ಪ್ರಬಲವಾಯಿತು. ಅಗ್ನಿ,ವಾಯು,ವರುಣರು ತ್ರಿಮೂರ್ತಿಗಳೊಂದಿಗೆ  ಸಮೀಕರಿಸಲ್ಪಟ್ಟರು. ವೇದಗಳಲ್ಲಿ ಉಲ್ಲೇಖವಾಗದ ಗಣಪತಿ ಬಹುತೇಕ ಅವೈದಿಕ ಸಮುದಾಯಗಳ ಪ್ರಮುಖ ದೇವತೆಯಾಗಿದ್ದವನಿರಬೇಕು. ಗೃಹ್ಯಸೂತ್ರಗಳು ವೈದಿಕ ಸಂಪ್ರದಾಯವನ್ನು ಸ್ವೀಕರಿಸಿ ಮೂಲ ನಂಬಿಕೆಗಳನ್ನು ಬಿಡದ ಸಾಮಾನ್ಯರನ್ನು ಪ್ರಸ್ತಾಪಿಸುತ್ತದೆ. ಈ ಸಾಮಾನ್ಯರು ಗಣಪತಿಯನ್ನು &#8216;ವಿನಾಯಕ&#8217; (ವಿಶಿಷ್ಟ ನಾಯಕ) ನೆಂದು ಕರೆದರು. ಈ ವಿನಾಯಕ ಭೂತಗಣಗಳ ನಾಯಕನಾದ ಭೂತನೆ. ಈ ವಿನಾಯಕ ವಿಘ್ನಕಾರಕ, ಉಪದ್ರ,ಆತಂಕ ಉಂಟು ಮಾಡುವವನು. ಗಣಪತಿ ವಿಘ್ನಕಾರಕನೂ ಎಂದು ಹೇಳುವ ನಮಗೆ ಅದಕ್ಕೆ ಕಾರಣ ತಿಳಿದಿಲ್ಲ. ಮಕ್ಕಳಿಗೆ ಬಾಲಗ್ರಹ ಉಂಟುಮಾಡುವವರಲ್ಲಿ ವಿನಾಯಕರೂ ಇದ್ದಾನೆ.</p>



<p class="has-text-align-justify has-medium-font-size"><mark style="background-color:rgba(0, 0, 0, 0)" class="has-inline-color has-vivid-red-color">ನ ರಾಕ್ಷಸಾ ನ ಪಿಶಾಚಾ ನ ಭೂತಾ ನ ವಿನಾಯಕಾ&#8230;&#8230;.<br>ಹೀಗೆ ಭೂತಪ್ರೇತಪಿಶಾಚಶ್ಚ ಯಕ್ಷರಕ್ಷೋ ವಿನಾಯಕಃ||</mark></p>



<p class="has-text-align-justify has-medium-font-size">ವಿನಾಯಕರಿಗೆ ಮಂದಿ ಭಯ ಪಡುತ್ತಿದ್ದರು. ವಿನಾಯಕರ ಸಂಖ್ಯೆ ದೊಡ್ಡದಾದರೂ ನಾಲ್ವರು ಪ್ರಮುಖರು-ಉಸ್ಮಿತ, ಕೂಷ್ಮಾಂಡರಾಜಪುತ್ರ, ಶಾಲಕಟಂಕಟ,ದೇವಯಜನ. ಬೇರೆ ಬೇರೆ ಸೂತ್ರಗಳಲ್ಲಿ ಬೇರೆ ಬೇರೆಯವರು ಪ್ರಮುಖರು. ವಿನಾಯಕರಲ್ಲಿ ವಿರೂಪಾಕ್ಷ, ವೈಶ್ರವಣ,ಮಹಾಸೇನರೂ ಇದ್ದಾರೆ. ಇವರು ಕ್ರಮವಾಗಿ ಶಿವ, ಕುಬೇರ (ಇವನು  ಓರ್ವ ಯಕ್ಷ), ಸ್ಕಂದನೇ ಇರಬಹುದು. ವಿನಾಯಕರು ಮೈಯಲ್ಲಿ ಬರುವುದನ್ನು ಗೃಹ್ಯಸೂತ್ರಗಳು ಪ್ರಸ್ತಾಪಿಸುತ್ತವೆ. ಆಗ ವಿನಾಯಕ ಹಿಡಿದವ ಮಣ್ಣು ಪುಡಿ ಮಾಡುವುದು, ಹುಲ್ಲು ಕೀಳುವುದು,ಮೈಮೇಲೆ ಬರೆ ಹಾಕಿಕೊಳ್ಳುವುದು ಮಾಡುತ್ತಾನೆ. ಇವನೊಬ್ಬ ರಾಜಪುತ್ರನಾದರೆ ಪಟ್ಟ ಕಳೆದುಕೊಳ್ಬೇಕಿತ್ತು. ಹೆಣ್ಮಕ್ಕಳಿಗೆ ಮದುವೆಯಾಗದಿದ್ದರೆ, ಮಕ್ಕಳಾಗದಿದ್ದರೆ ಈ ಎಲ್ಲಾ ವಿಘ್ನಗಳನ್ನು ತರುವವನು ವಿನಾಯಕನೇ. ಅವನನ್ನು ಸಂತೃಪ್ತಿ ಪಡಿಸಿ ಒಲಿಸಿಕೊಳ್ಳಬೇಕು. ಅದಕ್ಕೆ ಅವನನ್ನೇ ಮೊದಲು ಪೂಜಿಸಿದರೆ ವಿಘ್ನಗಳು ಬರುವುದಿಲ್ಲ!</p>



<p class="has-text-align-justify has-medium-font-size">ಅಚ್ಚರಿ ಎಂದರೆ ಇಷ್ಟೆಲ್ಲಾ ವಿನಾಯಕರಲ್ಲಿ ಗಣಮುಖದ ಗಣಪತಿ ಮಾತ್ರ ಆರಾಧನೆಗೆ ಒಳಪಟ್ಟು ಮುಂದುವರಿದದ್ದು ಹೇಗೆ? ದೈವಗಳನ್ನು ಏಕೀಕರಿಸಿಲಾಯಿತೆ? ಆಚಾರ್ಯ ಶಂಕರರು ಪಂಚಾಯತನ ಪದ್ಧತಿ ತಂದದ್ದು ಇದೇ ರೀತಿ. ನೀವು ಯಾವುದೇ ದೈವವನ್ನೂ ಪೂಜಿಸಿ ಅದು ವಿಷ್ಣು, ಶಿವ, ಅಂಬಿಕೆ, ಗಣಪತಿ, ಸೂರ್ಯ &#8211; ಇವರಲ್ಲಿ ಒಬ್ಬರಾಗಿರುತ್ತಾರೆ! ಶಿವ,ರುದ್ರ,ಪಶುಪತಿ ಮೊದಲಾದ ದೈವಗಳು ಒಂದೇ ಈಶ್ವರನ ಅಡಿಗೆ ಬಂದಂತೆ! ಗಣಪತಿಯೊಬ್ಬನನ್ನು ಪೂಜಿಸಿದರೆ ಅಷ್ಟೂ&nbsp; ವಿನಾಯಕರನ್ನು ನೆನೆದಂತೆ.</p>



<p class="has-text-align-justify has-medium-font-size">ವಿನಾಯಕ ವಿಘ್ನಗಳ ರಾಜ. ಅವನ ಜೋಳಿಗೆಯಲ್ಲಿ ತಿಂಡಿಗಳ ಜೊತೆ ವಿಘ್ನಗಳೂ ಪೊಟ್ಟಣ ಕಟ್ಟಿ ಇರುತ್ತವೆ. ಅವನ ಪೂಜೆಗೆ ಮೊದಲು ವಿಘ್ನಕರ್ತೃ (ಕಾರಕ) ನಂತರ ವಿಘ್ನಹರ್ತೃ(ನಿವಾರಕ) ಎನ್ನುತ್ತಾರೆ. ಇವನೊಡನೆ ದೇವತೆಗಳೂ ಕಾದಾಡಿದ್ದಾರಂತೆ!</p>



<p class="has-text-align-justify has-medium-font-size">ಪಾರ್ವತಿ ಸ್ನಾನದಲ್ಲಿ ಇರುವಾಗ ಶಿವನನ್ನು ತಡೆದ ವಿನಾಯಕ ತನ್ನ ತಲೆಯನ್ನು  ಕಡಿದುಕೊಳ್ಳುತ್ತಾನೆ. ಇದು ಬ್ರಹ್ಮವೈವರ್ತ ಪುರಾಣದ ಕತೆ.  ವರಹಪುರಾಣದಲ್ಲಿ ಶಿವ ಸುಂದರಾಂಗನಾದ ವಿನಾಯಕನನ್ನು ನೋಡಿ ಅಸೂಯೆಯಿಂದ ಡೊಳ್ಳು ಹೊಟ್ಟೆ, ಆನೆ ತಲೆ ಹೊಂದುವಂತೆ ಶಪಿಸಿದ ಕತೆ ಇದೆ. ಇನ್ನೊಂದೆಡೆ ಶನಿಯೋರ್ವನ ಕಣ್ಣೋಟದಿಂದ ಶಿಶು ಗಣೇಶನ ತಲೆ ಉದುರಿದ ಕತೆಯೂ ಇದೆ. ಇನ್ನು ಜನಪದರಲ್ಲಿ ಅವನು ದನದ ಸೆಗಣಿಯಿಂದ ಹುಟ್ಟಿದ. ಗಣಪತಿಯ ಆನೆಯ ಮುಖವನ್ನು ಕೇಂದ್ರವಾಗಿರಿಸಿಕೊಂಡು ಈ ಕಥೆಗಳು ಹುಟ್ಟಿವೆ. ಪ್ಲಾಸ್ಟಿಕ್ ಸರ್ಜರಿಯಿಂದ ತಲೆ ಜೋಡಿಸಿದ್ದಲ್ಲ!</p>



<p class="has-text-align-right has-medium-font-size"><mark style="background-color:rgba(0, 0, 0, 0)" class="has-inline-color has-vivid-red-color">(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)</mark></p>



<figure class="wp-block-image size-large is-resized"><img loading="lazy" decoding="async" src="https://peepalmedia.com/wp-content/uploads/2022/08/WhatsApp-Image-2022-08-15-at-5.48.16-PM-1-1024x1024.jpeg" alt="" class="wp-image-2130" width="187" height="187" srcset="https://peepalmedia.com/wp-content/uploads/2022/08/WhatsApp-Image-2022-08-15-at-5.48.16-PM-1-1024x1024.jpeg 1024w, https://peepalmedia.com/wp-content/uploads/2022/08/WhatsApp-Image-2022-08-15-at-5.48.16-PM-1-300x300.jpeg 300w, https://peepalmedia.com/wp-content/uploads/2022/08/WhatsApp-Image-2022-08-15-at-5.48.16-PM-1-150x150.jpeg 150w, https://peepalmedia.com/wp-content/uploads/2022/08/WhatsApp-Image-2022-08-15-at-5.48.16-PM-1-768x768.jpeg 768w, https://peepalmedia.com/wp-content/uploads/2022/08/WhatsApp-Image-2022-08-15-at-5.48.16-PM-1.jpeg 1151w" sizes="auto, (max-width: 187px) 100vw, 187px" /></figure>



<p class="has-medium-font-size"><strong>ಚರಣ್ ಐವರ್ನಾಡು</strong><br>ಲೇಖಕ, ಪತ್ರಕರ್ತ</p>
]]></content:encoded>
					
		
		
			</item>
		<item>
		<title>ಒತ್ತೆಕೋಲ: ಕೆಂಡದ ರಾಶಿಯ ಮೇಲೆ  ವಿಷ್ಣುಮೂರ್ತಿ ದೈವದ ನರ್ತನ</title>
		<link>https://peepalmedia.com/ottekola-kendada-raashiya-mele-vishnumoorthi-daivada-nartana/</link>
		
		<dc:creator><![CDATA[Charan Aivarnad]]></dc:creator>
		<pubDate>Wed, 17 Aug 2022 13:00:53 +0000</pubDate>
				<category><![CDATA[ಧರ್ಮ- ಸಂಸ್ಕೃತಿ]]></category>
		<category><![CDATA[charan Aivarnad]]></category>
		<category><![CDATA[india]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[samskruti]]></category>
		<category><![CDATA[special story]]></category>
		<category><![CDATA[writing]]></category>
		<guid isPermaLink="false">https://peepalmedia.com/?p=2129</guid>

					<description><![CDATA[ಸಂಸ್ಕಂತಿಯೊಂದು ತಾನು ಹುಟ್ಟಿದ ಸಮುದಾಯ ಮತ್ತು ನೆಲೆಯನ್ನು ಮೀರಿ ಬೆಳೆಯುವುದು ಒಳ್ಳೆಯ ಲಕ್ಷಣ. ಇದು ಭಾಷೆಗೂ ಅನ್ವಯಿಸುತ್ತದೆ. ಕೊಡುಕೊಳ್ಳುವಿಕೆ ನಡೆಯದ ಹೊರತು ಭಾಷೆ ಮತ್ತು ಸಂಸ್ಕಂತಿ ಬೆಳೆಯಲು ಸಾಧ್ಯವಿಲ್ಲ. ಭಾರತ ಸೇರಿದಂತೆ ವಿಶ್ವ ಜನಪದಗಳಲ್ಲಿ ಕಾಣುವ ಈ ಲಕ್ಷಣ ಆ ಸಂಸ್ಕಂತಿಯ ಅಮೂಲಾಗ್ರ ಸ್ಥಿತ್ಯಂತರ ಮಾಡದೆ ಬೆಳೆಸಿದೆ. ಒಂದು ಸಮುದಾಯ ಬೆಳೆಸಿಕೊಂಡು ಬಂದ ಆಚರಣೆಗಳನ್ನು ಇತರ ಸಮುದಾಯಗಳು ಸ್ವೀಕರಿಸುವುದನ್ನು ಕೇರಳದ ತೆಯ್ಯಂನ ಒತ್ತೆಕೋಲವನ್ನು ತುಳುನಾಡಿನ ಸಮುದಾಯಗಳು ಸ್ವೀಕರಿಸಿದ ಬಗೆಯನ್ನು ಇಲ್ಲಿ ಉದಾಹರಿಸುತ್ತೇನೆ. ನಿಗಿ ನಿಗಿ ಕೆಂಡದ ರಾಶಿಯ [&#8230;]]]></description>
										<content:encoded><![CDATA[
<blockquote class="wp-block-quote has-medium-font-size is-layout-flow wp-block-quote-is-layout-flow"><p><strong><mark style="background-color:rgba(0, 0, 0, 0)" class="has-inline-color has-vivid-red-color">ಸಂಸ್ಕಂತಿಯೊಂದು ತಾನು ಹುಟ್ಟಿದ ಸಮುದಾಯ ಮತ್ತು ನೆಲೆಯನ್ನು ಮೀರಿ ಬೆಳೆಯುವುದು ಒಳ್ಳೆಯ ಲಕ್ಷಣ. ಇದು ಭಾಷೆಗೂ ಅನ್ವಯಿಸುತ್ತದೆ. ಕೊಡುಕೊಳ್ಳುವಿಕೆ ನಡೆಯದ ಹೊರತು ಭಾಷೆ ಮತ್ತು ಸಂಸ್ಕಂತಿ ಬೆಳೆಯಲು ಸಾಧ್ಯವಿಲ್ಲ. ಭಾರತ ಸೇರಿದಂತೆ ವಿಶ್ವ ಜನಪದಗಳಲ್ಲಿ ಕಾಣುವ ಈ ಲಕ್ಷಣ ಆ ಸಂಸ್ಕಂತಿಯ ಅಮೂಲಾಗ್ರ ಸ್ಥಿತ್ಯಂತರ ಮಾಡದೆ ಬೆಳೆಸಿದೆ. ಒಂದು ಸಮುದಾಯ ಬೆಳೆಸಿಕೊಂಡು ಬಂದ ಆಚರಣೆಗಳನ್ನು ಇತರ ಸಮುದಾಯಗಳು ಸ್ವೀಕರಿಸುವುದನ್ನು ಕೇರಳದ ತೆಯ್ಯಂನ ಒತ್ತೆಕೋಲವನ್ನು ತುಳುನಾಡಿನ ಸಮುದಾಯಗಳು ಸ್ವೀಕರಿಸಿದ ಬಗೆಯನ್ನು ಇಲ್ಲಿ ಉದಾಹರಿಸುತ್ತೇನೆ.</mark></strong></p></blockquote>



<p class="has-text-align-justify has-medium-font-size">ನಿಗಿ ನಿಗಿ ಕೆಂಡದ ರಾಶಿಯ ಮೇಲೆ ಸರ್ವಾಲಂಕಾರಭೂಷಿತವಾದ ದೈವವೊಂದರ ಕಾರ್ಣಿಕವನ್ನು ನೋಡಲು ದಕ್ಷಿಣಕನ್ನಡ ಮತ್ತು ಕೇರಳದ ಗಡಿ ಪ್ರದೇಶಗಳಿಗೆ ಬರಬೇಕು. ಇಲ್ಲಿತಾವು ನಂಬಿದ ದೈವ ಮೈದಳೆದು ತಮ್ಮ ಎದುರು ನಿಂತಾಗ ಭಕ್ತರು ಭಾವುಕರಾಗಿ ಮೈಮರೆಯುತ್ತಾರೆ! ಸ್ವತಃ ಮಹಾವಿಷ್ಣು ಧರೆಗೆ ಇಳಿದು ಬರುವ ವಿಶಿಷ್ಟ ಜಾನಪದ ಆಚರಣೆ ಒತ್ತೆಕೋಲ!</p>


<div class="wp-block-image">
<figure class="aligncenter size-large is-resized"><img loading="lazy" decoding="async" src="https://peepalmedia.com/wp-content/uploads/2022/08/DSC_0311-1-1024x683.jpg" alt="" class="wp-image-2146" width="599" height="399" srcset="https://peepalmedia.com/wp-content/uploads/2022/08/DSC_0311-1-1024x683.jpg 1024w, https://peepalmedia.com/wp-content/uploads/2022/08/DSC_0311-1-300x200.jpg 300w, https://peepalmedia.com/wp-content/uploads/2022/08/DSC_0311-1-768x512.jpg 768w, https://peepalmedia.com/wp-content/uploads/2022/08/DSC_0311-1-1536x1024.jpg 1536w, https://peepalmedia.com/wp-content/uploads/2022/08/DSC_0311-1-2048x1365.jpg 2048w" sizes="auto, (max-width: 599px) 100vw, 599px" /></figure></div>


<p class="has-text-align-justify has-medium-font-size">ರಥದೋಪಾದಿಯಲ್ಲಿ ನಿರ್ಮಿಸಿದ ಕಟ್ಟಿಗೆಯ ರಾಶಿ ರಾತ್ರಿಯಿಡೀ ಉರಿದ ಕೆಂಡದ ಮೇಲೆ ಮುಂಜಾನೆ ತೆಂಗಿನ ಗರಿಗಳಿಂದ ಹಾಗೂ ಮುಖವರ್ಣಿಕೆಯಿಂದ ಸಿಂಗಾರಗೊಂಡ ವಿಷ್ಣುಮೂರ್ತಿ&nbsp; ದೈವ ತನ್ನ ಪ್ರತಾಪವನ್ನು ತೋರಿಸುವ ವಿಶಿಷ್ಟ ಆಚರಣೆ ಒತ್ತೆಕೋಲ. ತುಳುನಾಡಿನ ದೈವಾರಾಧನೆಗೆ ಸಂವಾದಿಯಾದ ಕೇರಳದ ತೆಯ್ಯಂನ ಈ ಆಚರಣೆಯನ್ನು ಮೇ-ಎಪ್ರಿಲ್ ತಿಂಗಳಲ್ಲಿ ದಕ್ಷಿಣಕನ್ನಡ, ಕೇರಳ ಹಾಗೂ ಕೊಡಗಿನ ಅನೇಕ ಭಾಗಗಳಲ್ಲಿ ನೋಡಬಹುದು. ಕೇರಳ ಮೂಲದ ಒತ್ತೆಕೋಲದಲ್ಲಿ ಕೇರಳದ ಮಲಯ ಸಮುದಾಯದ ದೈವ ಪಾತ್ರಿ ಉರಿಯುವ ಕೆಂಡದ ರಾಶಿಯ ಮೇಲೆ ಬಿದ್ದೇಳುತ್ತಾನೆ. ದೈವದ ಜೊತೆಗೆ ಹತ್ತಾರು ಬೆಳ್ಚಪ್ಪಾಡ ಸಮುದಾಯದವರು ಕೆಂಡದ ಮೇಲೇರಿ ಹೋಗುತ್ತಾರೆ. ಒತ್ತೆಕೋಲವೆಂದರೆ ಒಂದೇ ದೈವದ ಕೋಲ.</p>


<div class="wp-block-image">
<figure class="aligncenter size-large is-resized"><img loading="lazy" decoding="async" src="https://peepalmedia.com/wp-content/uploads/2022/08/DSC_0389-1024x683.jpg" alt="" class="wp-image-2137" width="573" height="382" srcset="https://peepalmedia.com/wp-content/uploads/2022/08/DSC_0389-1024x683.jpg 1024w, https://peepalmedia.com/wp-content/uploads/2022/08/DSC_0389-300x200.jpg 300w, https://peepalmedia.com/wp-content/uploads/2022/08/DSC_0389-768x512.jpg 768w, https://peepalmedia.com/wp-content/uploads/2022/08/DSC_0389-1536x1024.jpg 1536w, https://peepalmedia.com/wp-content/uploads/2022/08/DSC_0389-2048x1365.jpg 2048w" sizes="auto, (max-width: 573px) 100vw, 573px" /></figure></div>


<p class="has-text-align-justify has-medium-font-size">ಇಲ್ಲಿ ವಿಷ್ಣುಮೂರ್ತಿಯ ಆರಾಧನೆ ನಡೆಯುತ್ತದೆ. ವಿಷ್ಣುವಿನ ನರಸಿಂಹಾವತಾರವನ್ನು ಪ್ರತಿಬಿಂಬಿಸುವ ಈ ಆಚರಣೆ ಅವತಾರದ ಭಿನ್ನ ನೆಲೆಗಳನ್ನು ತೋರಿಸುತ್ತದೆ. ಆರಾಧನೆಯ ಪ್ರತೀ ಪ್ರಕ್ರಿಯೆಯಲ್ಲಿ ನರಸಿಂಹಾವತಾರ ಅಭಿವ್ಯಕ್ತಗೊಳ್ಳುತ್ತದೆ. ಸಾತ್ವಿಕ ಹಾಗೂ ತಾಮಸಿಕ ಕ್ರಿಯೆಗಳೆರಡರಲ್ಲೂ ಆರಾಧನೆಗೊಳಪಡುವ ವಿಷ್ಣುಮೂರ್ತಿದೈವ ಕುಳಿಚ್ಚಾಟ್ನಲ್ಲಿ ಹಿರಣ್ಯಕಶಿಪುವಿನ ಸಂಹಾರದ ಅಭಿನಯವನ್ನು ಮಾಡುತ್ತದೆ.</p>


<div class="wp-block-image">
<figure class="aligncenter size-large is-resized"><img loading="lazy" decoding="async" src="https://peepalmedia.com/wp-content/uploads/2022/08/DSC_0400-1024x683.jpg" alt="" class="wp-image-2136" width="582" height="388" srcset="https://peepalmedia.com/wp-content/uploads/2022/08/DSC_0400-1024x683.jpg 1024w, https://peepalmedia.com/wp-content/uploads/2022/08/DSC_0400-300x200.jpg 300w, https://peepalmedia.com/wp-content/uploads/2022/08/DSC_0400-768x512.jpg 768w, https://peepalmedia.com/wp-content/uploads/2022/08/DSC_0400-1536x1024.jpg 1536w, https://peepalmedia.com/wp-content/uploads/2022/08/DSC_0400-2048x1365.jpg 2048w" sizes="auto, (max-width: 582px) 100vw, 582px" /></figure></div>


<p class="has-text-align-justify has-medium-font-size">ಒತ್ತೆಕೋಲಕ್ಕೆ ದಿನ ನಿಗದಿಪಡಿಸಿದ ನಂತರ ಕೊಳ್ಳಿ ಕಡಿಯುವ ಮುಹೂರ್ತ ಏರ್ಪಡಿಸುತ್ತಾರೆ. ಊರವರ ಸಮಕ್ಷಮದಲ್ಲಿ ದೈವದ ಪೂಜಾರಿಗಳಾದ ಬೆಳ್ಚಪ್ಪಾಡರು (ತೀಯ ಸಮುದಾಯದವರು) ಹಾಲು ಒಸರುವ ಹಲಸಿನ ಇಲ್ಲವೇ ಹಾಲೆಮರದ ಕೊಳ್ಳಿಗಳನ್ನು ಕಡಿಯುವುದರ ಮೂಲಕ ಮುಹೂರ್ತವನ್ನಿಡುತ್ತಾರೆ. ಊರಿನವರೆಲ್ಲರೂ ತಮ್ಮ ತಮ್ಮ ಮನೆಗಳಿಂದ ಕಟ್ಟಿಗೆಗಳನ್ನು ಒಯ್ದು ರಾಶಿಹಾಕುತ್ತಾರೆ. ಇಲ್ಲಿ ಕಾಸರಕ, ಮಾವು ಮೊದಲಾದ ಮರಗಳ ಕಟ್ಟಿಗೆಗಳು ನಿಷಿದ್ದ. ಒತ್ತೆಕೋಲದ ದಿನ ಪೂರ್ವಾಹ್ನ ಈ ಕಟ್ಟಿಗೆಗಳನ್ನು ಓರಣವಾಗಿ ಜೋಡಿಸಿ ತೆಂಗಿನ ಮಡಲುಗಳನ್ನು ಪೇರಿಸಿಡುತ್ತಾರೆ. ವ್ಯವಸ್ಥಿತವಾಗಿ ಜೋಡಿಸಲಾದ ಈ ಕಟ್ಟಿಗೆಯ ರಾಶಿ ರಥವನ್ನು ಹೋಲುತ್ತದೆ. ದೈವಸ್ಥಾನದಿಂದ ದೈವದ ಭಂಡಾರವನ್ನು ಕೊಡಿಯಡಿಗೆ ಬಂದಂತೆ ಈ ಮೇಲೇರಿಗೆ ಅಗ್ನಿಸ್ಪರ್ಷ ನೀಡಲಾಗುತ್ತದೆ.</p>



<p class="has-text-align-justify has-medium-font-size">ಕುಳಿಚ್ಚಾಟ್ ಎಂಬುದು ಒಂದು ವಿಶಿಷ್ಟ ಆಚರಣೆ. ಇಲ್ಲಿದೈವದ ನರ್ತನ ಹಿರಣ್ಯಕಶಿಪುವಿನ ಸಂಹಾರವನ್ನು ಬಿಂಬಿಸುವ ಕಥಕ್ಕಳಿ ಯನ್ನು ಹೋಲುತ್ತದೆ. ದೈವನರ್ತಕ ಹಿರಣ್ಯಕಶಿಪುವಿನ ಕರುಳನ್ನು ಬಗೆದು ರಕ್ತ ಹೀರುವ ಅಭಿನಯವನ್ನು ಮಾಡುತ್ತಾನೆ. ಕುಳಿಚ್ಚಾಟ್ ದೈವ ಉರಿಯುವ ಬೆಂಕಿ ರಾಶಿಯ ಸುತ್ತ ಓಡುತ್ತಾಅದರ ಮೇಲೆ ಏರಿ ಹೋಗಲು ಯತ್ನಿಸುತ್ತದೆ. ತೀಯರು ಕೋಟೆಕಟ್ಟಿ ದೈವವನ್ನು ತಡೆಯುತ್ತಾರೆ. ಇಲ್ಲಿ ಪಾತ್ರಿ ಹಾಡುವ ಸಂಸ್ಕಂತ ಮಿಶ್ರಿತ ಮಲಯಾಳದ ವಿಷ್ಣು ಸ್ತುತಿಯಲ್ಲಿ ವೈಷ್ಣವ ಪ್ರಭಾವವನ್ನು ಕಾಣಬಹುದು. ಇಲ್ಲಿಆರಾಧನೆಯ ಜಾನಪದ ಮೂಲದ ಸಂಕಥನವನ್ನು ನೋಡಲು ಸಾಧ್ಯವಿಲ್ಲ. ಇದು ಸರಿಸುಮಾರು ಮಧ್ಯರಾತ್ರಿ ನಡೆಯುವಆಚರಣೆ.</p>


<div class="wp-block-image">
<figure class="aligncenter size-large is-resized"><img loading="lazy" decoding="async" src="https://peepalmedia.com/wp-content/uploads/2022/08/DSC_0454-1024x683.jpg" alt="" class="wp-image-2139" width="628" height="419" srcset="https://peepalmedia.com/wp-content/uploads/2022/08/DSC_0454-1024x683.jpg 1024w, https://peepalmedia.com/wp-content/uploads/2022/08/DSC_0454-300x200.jpg 300w, https://peepalmedia.com/wp-content/uploads/2022/08/DSC_0454-768x512.jpg 768w, https://peepalmedia.com/wp-content/uploads/2022/08/DSC_0454-1536x1024.jpg 1536w, https://peepalmedia.com/wp-content/uploads/2022/08/DSC_0454-2048x1365.jpg 2048w" sizes="auto, (max-width: 628px) 100vw, 628px" /></figure></div>


<p class="has-text-align-justify has-medium-font-size">ಮುಂಜಾನೆಯಾಗುತ್ತಿದ್ದಂತೆ ವಿಷ್ಣುಮೂರ್ತಿದೈವ ಸಿರಿಸಿಂಗಾರಗೊಂಡು ಗಾಂಭಿರ್ಯದಿಂದ ಎದ್ದು ನಿಲ್ಲುತ್ತದೆ. ದೈವ ನರ್ತನವನ್ನು ಆರಂಭಿಸುತ್ತಿದ್ದಂತೆ ತೀಯ ಪೂಜಾರಿಗಳಿಗೆ ಆವೇಶವಾಗಿ ಕೆಂಡದ ರಾಶಿಯ ಮೇಲೆ ಏರಿ ಹೋಗುತ್ತಾರೆ. ಅವರೊಂದಿಗೆ ವಿಷ್ಣುಮೂರ್ತಿಯೂ ಅಂಗಾತವಾಗಿ ಮತ್ತು ಮೇಲ್ಮುಖವಾಗಿ ಬೀಳುತ್ತದೆ. ದೈವ ಬೀಳುತ್ತಿದ್ದಂತೆ ಮಲಯರು ದರದರನೆ ಹೊರಗೆಳೆಯುತ್ತಾರೆ. ರೋಮಾಂಚನಕಾರಿಯಾದ ಈ ಸನ್ನಿವೇಶವನ್ನು ಭಕ್ತರು ಭಾವುಕರಾಗಿ ಅನುಭವಿಸುತ್ತಾರೆ. ದೈವವು ನೆರೆದ ಭಕ್ತರನ್ನು&nbsp; ಮಾತನಾಡಿಸಿ ಅಭಯ ನೀಡುತ್ತದೆ. ಭಾರಣೆ, ಮಾರಿಕಳ (ಕೋಳಿ ಬಲಿ) ಹಾಗೂ ಪ್ರಸಾದ ವಿತರಣೆ ಮುಂತಾದ ವಿಧಿ ವಿಧಾನಗಳು ಮುಗಿದುದೈವದ ಭಂಡಾರ ಯಥಾ ಸ್ಥಾನವನ್ನು ಸೇರುವ ಮೂಲಕ ಒತ್ತೆಕೋಲ ಸಮಾಪನಗೊಳ್ಳುತ್ತದೆ.</p>



<p class="has-text-align-justify has-medium-font-size">ವಿಷ್ಣುಮೂರ್ತಿದೈವದ ಬಗ್ಗೆ ಮೌಖಿಕ ಕಥನವೊಂದಿದೆ. ಇದು ದೈವ ತುಳುನಾಡಿಗೆ ಪ್ರಸರಣ ಹೊಂದಿದ ಹಿನ್ನಲೆಯನ್ನು ತಿಳಿಸುತ್ತದೆ. ತೀಯ ಸಮುದಾಯದ ಪಾಲತಾಯಿ ಕಣ್ಣನ್ ಎಂಬ ನೀಲೇಶ್ವರ ಮೂಲದ ತೀಯ ಯುವಕ “ಕುರುವತ್ ಕುರುಪ್” ಎಂಬಾತನಿಗೆ ಸೇರಿದ ಮಾವಿನ ಮರದಿಂದ ಹಣ್ಣನ್ನು ಕೀಳುತ್ತಾನೆ. ಇದರಿಂದ ಕೋಪೋದ್ರಿಕ್ತನಾದ ಕುರುಪ್ ತನ್ನ ಸಂಗಡಿಗರೊಂದಿಗೆ ಸೇರಿ ಕಣ್ಣನ್ ಅನ್ನು ಹೊಡೆದು ನೀಲೇಶ್ವರದಿಂದ ಹೊರಹಾಕುತ್ತಾನೆ.</p>


<div class="wp-block-image">
<figure class="aligncenter size-large is-resized"><img loading="lazy" decoding="async" src="https://peepalmedia.com/wp-content/uploads/2022/08/DSC_0435-1024x683.jpg" alt="" class="wp-image-2138" width="642" height="428" srcset="https://peepalmedia.com/wp-content/uploads/2022/08/DSC_0435-1024x683.jpg 1024w, https://peepalmedia.com/wp-content/uploads/2022/08/DSC_0435-300x200.jpg 300w, https://peepalmedia.com/wp-content/uploads/2022/08/DSC_0435-768x512.jpg 768w, https://peepalmedia.com/wp-content/uploads/2022/08/DSC_0435-1536x1024.jpg 1536w, https://peepalmedia.com/wp-content/uploads/2022/08/DSC_0435-2048x1365.jpg 2048w" sizes="auto, (max-width: 642px) 100vw, 642px" /></figure></div>


<p class="has-text-align-justify has-medium-font-size">ಇಲ್ಲಿಂದ ಮಂಗಳೂರಿನ ಜೆಪ್ಪಿಗೆ ಬಂದ ಈತನಿಗೆ ಬ್ರಾಹ್ಮಣ ಸ್ತ್ರೀಯೋರ್ವಳು ಆಶ್ರಯ ನೀಡುತ್ತಾಳೆ. ಕೆಲ ದಿನಗಳ ನಂತರ ತನ್ನ ಊರಿಗೆ ಹೊರಡಿ ನಿಂತ ಕಣ್ಣನ್‍ಗೆ ಆ ಹೆಂಗಸು ತಾನು ನಂಬಿದ ವಿಷ್ಣುವಿನ ಕತ್ತಿ ಹಾಗೂ ತತ್ರವನ್ನು (ಒಲಿಯ ಕೊಡೆ) ಕೊಡುತ್ತಾಳೆ. ಆಗ ಅವನ ಶರೀರಕ್ಕೆ ದೈವದ ಆವೇಶವಾಗುತ್ತದೆ. ಕಣ್ಣನ್ ನೀಲೇಶ್ವರಕ್ಕೆ ಬರುತ್ತಿದ್ದಂತೆ ಆತನನ್ನು ಕುರುಪ್ ಕೊಲ್ಲುತ್ತಾನೆ. ಇದರಿಂದ ಕುರುಪನ ಕುಟುಂಬ ವಿಷ್ಣುಮೂರ್ತಿಯ ಕೋಪಕ್ಕೆ ತುತ್ತಾಗಿ ಸಿಡುಬು ಬಾಧಿಸುತ್ತದೆ. ಮುಂದೆ ಕುರುಪ್ ದೈವವನ್ನು ಆರಾಧಿಸಲು ತೊಡಗುತ್ತಾನೆ. ಮುಂದೆ ಒತ್ತೆಕೋಲ ಕೇರಳ, ತುಳುನಾಡು ಹಾಗೂ ಕೊಡಗಿನೆಲ್ಲೆಡೆ ಪ್ರಸರಣ ಹೊಂದುತ್ತದೆ. ಸುಳ್ಯ ಹಾಗೂ ಕೊಡಗಿನಲ್ಲಿ ಅರೆಭಾಷಿಕ ಗೌಡರು ತಮ್ಮ ಕುಟುಂಬದ ದೈವವಾಗಿ ಆರಾಧಿಸುತ್ತಾರೆ.</p>



<p class="has-text-align-justify has-medium-font-size">ಒತ್ತೆಕೋಲದಲ್ಲಿ ವೈಷ್ಣವತೆಯ ಗಾಢ ಪ್ರಭಾವ ಕಂಡು ಬಂದರೂ ಜಾನಪದ ಮೂಲದ ತಾಂತ್ರಿಕ ಆಚರಣೆಗಳು ಕಂಡು ಬರುತ್ತದೆ. ಇಲ್ಲಿ ಸಾಂಸ್ಕಂತಿಕ ಹಾಗೂ ಆರಾಧನಾ ಪರಿಧಿಯ ಒಳಗೆ ಮಲವ, ಮಡಿವಾಳ ಮತ್ತು ತೀಯರನ್ನು ಹೊರತು ಇತರ ಜನಾಂಗದವರಿಗೆ ಪ್ರವೇಶವಿಲ್ಲ, ಅವರು ಕೇವಲ ಭಕ್ತರಷ್ಟೇ! ಇದು ಒತ್ತೆಕೋಲದ ಒಳಗೆ ವೈದಿಕ ಆಚರಣೆಗಳ ಪ್ರವೇಶವನ್ನು ತಡೆದಿದೆ. ಆಡಂಬರದ ವೈಭವೀಕೃತ ಆಚರಣೆಗಳಿಂದ ಘಟಿಸುವ ಸಾಂಸ್ಕøತಿಕ ಸ್ಥಿತ್ಯಂತರದ ಸಂದರ್ಭದಲ್ಲಿ ಒತ್ತೆಕೋಲದಂತಹ ಆರಾಧನಾ ಪರಂಪರೆ ತನ್ನತನವನ್ನು ಉಳಿಸಿಕೊಳ್ಳುವುದು ಸವಾಲಾಗಿದೆ.</p>



<p class="has-text-align-right"><mark style="background-color:rgba(0, 0, 0, 0)" class="has-inline-color has-vivid-red-color">(</mark><strong><mark style="background-color:rgba(0, 0, 0, 0)" class="has-inline-color has-vivid-red-color">ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)</mark></strong></p>



<figure class="wp-block-image size-large is-resized"><img loading="lazy" decoding="async" src="https://peepalmedia.com/wp-content/uploads/2022/08/WhatsApp-Image-2022-08-15-at-5.48.16-PM-1-1024x1024.jpeg" alt="" class="wp-image-2130" width="235" height="235" srcset="https://peepalmedia.com/wp-content/uploads/2022/08/WhatsApp-Image-2022-08-15-at-5.48.16-PM-1-1024x1024.jpeg 1024w, https://peepalmedia.com/wp-content/uploads/2022/08/WhatsApp-Image-2022-08-15-at-5.48.16-PM-1-300x300.jpeg 300w, https://peepalmedia.com/wp-content/uploads/2022/08/WhatsApp-Image-2022-08-15-at-5.48.16-PM-1-150x150.jpeg 150w, https://peepalmedia.com/wp-content/uploads/2022/08/WhatsApp-Image-2022-08-15-at-5.48.16-PM-1-768x768.jpeg 768w, https://peepalmedia.com/wp-content/uploads/2022/08/WhatsApp-Image-2022-08-15-at-5.48.16-PM-1.jpeg 1151w" sizes="auto, (max-width: 235px) 100vw, 235px" /></figure>



<p class="has-medium-font-size"><strong>ಚರಣ್ ಐವರ್ನಾಡು</strong><br>ಬರಹಗಾರ, ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರು.<br>ಇತಿಹಾಸ, ಜಾನಪದ, ರಾಜಕೀಯ ಮತ್ತು ಸಬಾಲ್ಟ್ರನ್ ಅಧ್ಯಯನಗಳು<br>ಇವರ ಬರವಣಿಗೆಯ ಕ್ಷೇತ್ರಗಳು</p>
]]></content:encoded>
					
		
		
			</item>
	</channel>
</rss>
