<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>charan Ivarnadu &#8211; Peepal Media</title>
	<atom:link href="https://peepalmedia.com/tag/charan-ivarnadu/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 24 Nov 2022 03:12:22 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>charan Ivarnadu &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಕಾಂತಾರ ಗೆದ್ದಿದೆ… ದೈವಾರಾಧನೆ ಸೋತಿದೆ&#8230;!</title>
		<link>https://peepalmedia.com/kanthara-geddide-daivaaraadhane-sothide-article-by-charan-ivarnad/</link>
		
		<dc:creator><![CDATA[Charan Aivarnad]]></dc:creator>
		<pubDate>Thu, 24 Nov 2022 03:12:22 +0000</pubDate>
				<category><![CDATA[ಧರ್ಮ- ಸಂಸ್ಕೃತಿ]]></category>
		<category><![CDATA[charan Ivarnadu]]></category>
		<category><![CDATA[daivaaradhane]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=16340</guid>

					<description><![CDATA[ತುಳುಭಾಷಿಕ ಕಾಂತಾರ ಸಿನೆಮಾದ ಅಭಿಮಾನಿಗಳು ಇಂದು ಈ ಸಿನೆಮಾದ ಪ್ರಭಾವದಿಂದ ಘಟಿಸುತ್ತಿರುವ “ದೈವಗಳ ಅವಹೇಳನ”ದ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ತುಳುನಾಡಿನಿಂದ ಹೊರಗೆ ಇಂದು ದೈವಸ್ಥಾನ, ಕಟ್ಟೆಗಳು ಆರಂಭವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಹಣ ಸಂಗ್ರಹಿಸುವ ಬಗ್ಗೆ ಅವರಿಗೆ ಆಕ್ರೋಶ ಇದೆ ಎನ್ನುವುದನ್ನು ಗುರುತಿಸುತ್ತಾರೆ  ಚರಣ್‌ ಐವರ್ನಾಡು ಕಾಂತಾರ ಸಿನೇಮಾದ ನಂತರ ಕರ್ನಾಟಕದಲ್ಲಿ ಮಾತ್ರವಲ್ಲ ಭಾರತದಾದ್ಯಂತ ತುಳುನಾಡಿನ ದೈವಾರಾಧನೆಯ ಬಗ್ಗೆ ಒಂದು ರೋಮ್ಯಾಂಟಿಸೈಸ್ಡ್‌ ಆಸಕ್ತಿ ಹುಟ್ಟಿಕೊಂಡಿದೆ. ಕಾಂತಾರ ಸಿನೇಮಾ ದೈವಾರಾಧನೆಯನ್ನು ಪ್ರತಿನಿಧಿಸಿದ ರೀತಿಯಲ್ಲಿರುವ ದೋಷಗಳ ಬಗ್ಗೆ ಚರ್ಚೆಗಳು ನಡೆದವು. ಇದು [&#8230;]]]></description>
										<content:encoded><![CDATA[
<h5 class="alignfull has-text-align-center has-very-light-gray-to-cyan-bluish-gray-gradient-background has-background wp-block-heading"><strong>ತುಳುಭಾಷಿಕ ಕಾಂತಾರ ಸಿನೆಮಾದ ಅಭಿಮಾನಿಗಳು ಇಂದು ಈ ಸಿನೆಮಾದ ಪ್ರಭಾವದಿಂದ ಘಟಿಸುತ್ತಿರುವ “ದೈವಗಳ ಅವಹೇಳನ”ದ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ತುಳುನಾಡಿನಿಂದ ಹೊರಗೆ ಇಂದು ದೈವಸ್ಥಾನ, ಕಟ್ಟೆಗಳು ಆರಂಭವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಹಣ ಸಂಗ್ರಹಿಸುವ ಬಗ್ಗೆ ಅವರಿಗೆ ಆಕ್ರೋಶ ಇದೆ ಎನ್ನುವುದನ್ನು ಗುರುತಿಸುತ್ತಾರೆ  ಚರಣ್‌ ಐವರ್ನಾಡು</strong></h5>



<p>ಕಾಂತಾರ ಸಿನೇಮಾದ ನಂತರ ಕರ್ನಾಟಕದಲ್ಲಿ ಮಾತ್ರವಲ್ಲ ಭಾರತದಾದ್ಯಂತ ತುಳುನಾಡಿನ ದೈವಾರಾಧನೆಯ ಬಗ್ಗೆ ಒಂದು ರೋಮ್ಯಾಂಟಿಸೈಸ್ಡ್‌ ಆಸಕ್ತಿ ಹುಟ್ಟಿಕೊಂಡಿದೆ. ಕಾಂತಾರ ಸಿನೇಮಾ ದೈವಾರಾಧನೆಯನ್ನು ಪ್ರತಿನಿಧಿಸಿದ ರೀತಿಯಲ್ಲಿರುವ ದೋಷಗಳ ಬಗ್ಗೆ ಚರ್ಚೆಗಳು ನಡೆದವು. ಇದು ಸಿನೇಮಾ ಮಾತ್ರ, ಸಂಸ್ಕೃತಿಯೊಂದರ ದಾಖಲೀಕರಣ ಅಲ್ಲ ಎಂಬ ವಾದಗಳನ್ನು ಕಾಂತಾರದ ಅಭಿಮಾನಿಗಳು ಟೀಕಿಸಿದ್ದರು. ಸಿನೇಮಾ ಆರಾಧನಾ ಪರಂಪರೆಯೊಂದರ ಮೇಲೆ ಬೀರಬಲ್ಲ ಪ್ರಭಾವದ ಬಗ್ಗೆ ಚಿಕಿತ್ಸಕ ನೋಟಗಳ ಬರಹಗಳನ್ನು ಕೌಂಟರ್‌ ಮಾಡಲೆಂದು ಕಾಂತಾರವನ್ನು ದೈವಾರಾಧನೆಯ ನಿಜವಾದ ಪ್ರತಿನಿಧೀಕರಣದ ಮಾಧ್ಯಮ ಎಂಬಂತೆ ಬಿಂಬಿಸಲಾಯಿತು. ಒಂದು ಹೆಜ್ಜೆ ಮುಂದಕ್ಕೆ ಹೋಗಿ “ಕಾಂತಾರ ಸಿನೇಮಾದಿಂದ ಇಡೀ ಜಗತ್ತಿಗೆ ದೈವ ಎಂದರೇನು ಮತ್ತು ಅದರ ಮಹಿಮೆ ಏನು ಎಂಬುದು ತಿಳಿಯಿತು!” ಎಂಬ ಮಾತು ವ್ಯಾಪಕವಾಗಿ ಪ್ರಚಾರಕ್ಕೆ ಬಂತು.</p>



<p><strong>ಎಲ್ಲೆಲ್ಲೂ ಕಾಂತಾರದ ದೈವಗಳೇ..</strong></p>



<p>ಈ ಸಿನೇಮಾದ ನಂತರ “ಕಾಂತಾರದ ದೈವ” ಎಂಬ ಮಾತು ಚಾಲ್ತಿಗೆ ಬಂದಿದೆ. ಎಲ್ಲಾ ದೈವಗಳನ್ನು ಕಾಂತಾರದ ದೈವ ಎಂದು ಹೇಳುವ ಪರಿಪಾಠ ಕರ್ನಾಟಕದಲ್ಲಿ ಶುರುವಾಗಿದೆ. ಜನ ದೈವದ ವೇಷಭೂಷಣಗಳನ್ನು ಧರಿಸಿ ರಸ್ತೆಗಳಲ್ಲಿ, ವೇದಿಕೆಗಳಲ್ಲಿ, ಪೊಲೀಸ್‌ ಪೆರೇಡ್‌, ಇನ್ಸ್ಟಾಗ್ರಾಂ ರೀಲ್ಸ್‌ ಗಳಲ್ಲಿ ಹೋ….ಎಂದು ಅರೆಬಾಯಿ ಹಾಕುತ್ತಿದ್ದಾರೆ. ಬೆಂಗಳೂರು, ಮೈಸೂರು ಮೊದಲಾದ ಕಡೆಗಳಲ್ಲಿ ಕೊರಗಜ್ಜನ ದೈವಸ್ಥಾನಗಳು ಏಳುತ್ತಿವೆ. ಮೈಸೂರಿನಲ್ಲಿ ಗುಳಿಗನ ನೇಮ ನಡೆಯುತ್ತದೆ. ಇದರಿಂದ ತುಳುನಾಡಿನ ಜನರಲ್ಲಿ ಒಂದು ರೀತಿಯ ಆಕ್ರೋಶ ಹುಟ್ಟಿಕೊಂಡಿದೆ.</p>



<p>ಕಾಂತಾರ ಸಿನೇಮಾಗಿಂತ ಹಿಂದೆ ಯಾವುದೇ ದೈವದ ವೇಷವನ್ನು ತೊಟ್ಟು ರಸ್ತೆಗಳಲ್ಲಿ, ವೇದಿಕೆಗಳಲ್ಲಿ ಕುಣಿಯುವುದನ್ನು ಅವಿಭಜಿತ ದಕ್ಷಿಣ ಕನ್ನಡದಲ್ಲಿ ವಿರೋಧಿಸುತ್ತಿದ್ದರು. ಅನೇಕರ ಮೇಲೆ ಕೇಸ್‌ ಕೂಡ ಹಾಕಲಾಗಿತ್ತು. ಒಂದು ಬಾರಿ ಜಾದೂ ಒಂದರಲ್ಲಿ ದೈವದ ಪಾತ್ರವನ್ನು ತಂದಾಗ ಅದಕ್ಕೆ ತೀವ್ರವಾದ ವಿರೋಧ ವ್ಯಕ್ತವಾಯಿತು. ಯಕ್ಷಗಾನ, ನಾಟಕಗಳಲ್ಲಿ ದೈವಗಳ ಪಾತ್ರಗಳನ್ನು ತರುವ ಬಗ್ಗೆ ತಕರಾರುಗಳಿದ್ದರೂ ಅವುಗಳನ್ನು ರಂಗದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.</p>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow">
<figure class="wp-block-image size-full"><img fetchpriority="high" decoding="async" width="720" height="991" src="https://peepalmedia.com/wp-content/uploads/2022/11/image-16.png" alt="" class="wp-image-16342" srcset="https://peepalmedia.com/wp-content/uploads/2022/11/image-16.png 720w, https://peepalmedia.com/wp-content/uploads/2022/11/image-16-218x300.png 218w, https://peepalmedia.com/wp-content/uploads/2022/11/image-16-150x206.png 150w, https://peepalmedia.com/wp-content/uploads/2022/11/image-16-300x413.png 300w, https://peepalmedia.com/wp-content/uploads/2022/11/image-16-696x958.png 696w" sizes="(max-width: 720px) 100vw, 720px" /></figure>
</div>



<div class="wp-block-column is-layout-flow wp-block-column-is-layout-flow">
<figure class="wp-block-image size-large"><img decoding="async" width="1024" height="1024" src="https://peepalmedia.com/wp-content/uploads/2022/11/image-18-1024x1024.png" alt="" class="wp-image-16344" srcset="https://peepalmedia.com/wp-content/uploads/2022/11/image-18-1024x1024.png 1024w, https://peepalmedia.com/wp-content/uploads/2022/11/image-18-300x300.png 300w, https://peepalmedia.com/wp-content/uploads/2022/11/image-18-150x150.png 150w, https://peepalmedia.com/wp-content/uploads/2022/11/image-18-768x768.png 768w, https://peepalmedia.com/wp-content/uploads/2022/11/image-18-696x696.png 696w, https://peepalmedia.com/wp-content/uploads/2022/11/image-18-1068x1068.png 1068w, https://peepalmedia.com/wp-content/uploads/2022/11/image-18.png 1080w" sizes="(max-width: 1024px) 100vw, 1024px" /></figure>
</div>
</div>



<p><strong>ಜನ ಸಿನೇಮಾವನ್ನು ಸಂಭ್ರಮಿಸಿದರು..</strong></p>



<p>ಇಷ್ಟೆಲ್ಲಾ ರಿಜಿಡಿಟಿಯನ್ನು ಕಾಯ್ದುಕೊಂಡಿದ್ದ ತುಳುವರು ಕಾಂತಾರ ಸಿನೇಮಾ ಬಂದಾಗ ಅದನ್ನು ಮುಕ್ತವಾಗಿ ಒಪ್ಪಿಕೊಂಡರು. ಇದರಲ್ಲಿ ದೈವಾರಾಧನೆಯನ್ನು ನಿರೂಪಿಸಿದ ರೀತಿಯಲ್ಲಿ ದೋಷಗಳಿದ್ದರೂ ಸಿನೇಮಾವನ್ನು ಸಂಭ್ರಮಿಸಿದರು. ಇದರ ಹಿಂದೆ ಇರುವ ರಾಜಕೀಯವನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂಬುದನ್ನು ನಾವು ಚರ್ಚೆ ಮಾಡಬೇಕಷ್ಟೇ. ಆದರೆ ಯಾವುದೇ ವಿರೋಧಗಳು ವ್ಯಕ್ತವಾದರೂ ಅವನ್ನು ನಿವಾರಿಸಲು ಬೇಕಾದ ಸಿದ್ಧತೆಯನ್ನು ಸಿನೇಮಾ ತಂಡ ಮಾಡಿಕೊಂಡಿದ್ದಂತೆ ತೋರುತ್ತದೆ. ಮತ್ತು ಈ ವಿರೋಧಗಳನ್ನು ಬಗ್ಗುಬಡಿಯಲು ಪ್ರೇಕ್ಷಕರೇ ನಿಂತರು.</p>



<p><strong>ತುಳು ಭಾಷಿಕರು ಯಾಕೆ ಸಿಟ್ಟಾಗಿದ್ದಾರೆ?</strong></p>



<p>ಆದರೆ ತುಳುಭಾಷಿಕ ಕಾಂತಾರ ಸಿನೆಮಾದ ಅಭಿಮಾನಿಗಳು ಇಂದು ಈ ಸಿನೆಮಾದ ಪ್ರಭಾವದಿಂದ ಘಟಿಸುತ್ತಿರುವ “ದೈವಗಳ ಅವಹೇಳನ”ದ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ತುಳುನಾಡಿನಿಂದ ಹೊರಗೆ ಇಂದು ದೈವಸ್ಥಾನ, ಕಟ್ಟೆಗಳು ಆರಂಭವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಹಣ ಸಂಗ್ರಹಿಸುವ ಬಗ್ಗೆ ಅವರಿಗೆ ಆಕ್ರೋಶ ಇದೆ. ಆದರೆ ಜನರು ಮಾತ್ರ ಕಾಂತಾರ ಸಿನೆಮಾಕ್ಕೆ ಮರುಳಾಗಿ ತಮ್ಮ ಹಕ್ಕು ಎಂಬಂತೆ ದೈವದ ವೇಷವನ್ನು ಕಟ್ಟಿ ಕುಣಿಯುತ್ತಿದ್ದಾರೆ. “ಸಿನೆಮಾ ಮಾಡುವಾಗ ಮಾಡದ ವಿರೋಧ ನಾವು ಭಕ್ತಿಯಿಂದ ಮಾಡುವಾಗ ಯಾಕೆ ?” ಎಂಬ ಪ್ರಶ್ನೆ ಕೇಳುತ್ತಿದ್ದಾರೆ.</p>



<p><strong>ಟ್ರೆಂಡಿಂಗ್‌ ನಲ್ಲಿ ಇರುವ ಕೊರಗಜ್ಜ</strong></p>



<p>ಸದ್ಯ ತುಳುನಾಡಿನಲ್ಲಿ ಟ್ರೆಂಡಿಂಗ್‌ ನಲ್ಲಿ ಇರುವ ದೈವ ಕೊರಗಜ್ಜ. ಕೊರಗಜ್ಜನ ಕಟ್ಟೆಗಳು ಅಲ್ಲಲ್ಲಿ ತಲೆ ಎತ್ತಿವೆ. ಅನೇಕ ಪವಾಡ ಕಥೆಗಳು ಹುಟ್ಟಿಕೊಂಡು ರಾಜ್ಯ – ಪರ ರಾಜ್ಯದಿಂದ ಭಕ್ತರು ತುಳುನಾಡಿಗೆ ಬರುತ್ತಿದ್ದಾರೆ. ಇದು ಕಳೆದ ಒಂದು ದಶಕದಲ್ಲಿ ನಡೆದಿರುವ ಬದಲಾವಣೆ. ಹಿಂದೆ ಕೊರಗಜ್ಜ ಇಷ್ಟೊಂದು ಖ್ಯಾತಿಯ ದೈವ ಆಗಿರಲಿಲ್ಲ. ಒಂದು ದಶಕದಿಂದ ಈಚೆಗೆ ವ್ಯಾಪಕವಾದ ಪ್ರಚಾರವನ್ನು ಪಡೆದ ಕೊರಗಜ್ಜನಿಗೆ ಅಲ್ಲಲ್ಲಿ ನೇಮ ನಡೆಯುತ್ತಿದೆ.</p>



<figure class="wp-block-image size-large"><img decoding="async" width="1024" height="381" src="https://peepalmedia.com/wp-content/uploads/2022/11/image-19-1024x381.png" alt="" class="wp-image-16345" srcset="https://peepalmedia.com/wp-content/uploads/2022/11/image-19-1024x381.png 1024w, https://peepalmedia.com/wp-content/uploads/2022/11/image-19-300x112.png 300w, https://peepalmedia.com/wp-content/uploads/2022/11/image-19-768x286.png 768w, https://peepalmedia.com/wp-content/uploads/2022/11/image-19-150x56.png 150w, https://peepalmedia.com/wp-content/uploads/2022/11/image-19-696x259.png 696w, https://peepalmedia.com/wp-content/uploads/2022/11/image-19-1068x398.png 1068w, https://peepalmedia.com/wp-content/uploads/2022/11/image-19.png 1080w" sizes="(max-width: 1024px) 100vw, 1024px" /></figure>



<p>ಕೊರಗ ತನಿಯ ಎಂಬ ಹುಡುಗ ದೈವವಾಗಿ ಅವನದೇ ಕೊರಗ ಸಮುದಾಯದವರ ದೈವವಾಗುತ್ತಾನೆ. ಈ ಸಮುದಾಯದಲ್ಲಿ ಕೊರಗ ತನಿಯನಿಗೆ ಕಲ್ಲು ಹಾಕಿ ನಂಬುತ್ತಾರೆಯೇ ಹೊರತು ಕೋಲ ಮಾಡುವುದಿಲ್ಲ. ಯುವಕನಾದ ತನಿಯ ಕೊರಗ ಸಮುದಾಯದಲ್ಲಿ ಸಂದಿ ಹೋದ ಹಿರಿಯ ವ್ಯಕ್ತಿಯಾದ್ದರಿಂದ ಅವರು ಅವನನ್ನು ಅಜ್ಜೆರ್‌ / ಅಜ್ಜ ಎಂದು ಕರೆಯುತ್ತಾರೆ. ಕ್ರಮೇಣ ಇತರ ಸಮುದಾಯಗಳೂ ಈ ದೈವವನ್ನು ನೇಮದ ಮೂಲಕ ಆರಾಧಿಸಲು ಆರಂಭ ಮಾಡಿ ಕೊರಗಜ್ಜ ಎಂದು ಕರೆದರು.</p>



<p>ಅಷ್ಟೇನು ಖ್ಯಾತವಲ್ಲದ ದೈವ ಇದ್ದಕ್ಕಿದ್ದಂತೆ ಪ್ರಚಾರವನ್ನು ಪಡೆಯುತ್ತದೆ. ಸಾವಿರಾರು ಭಕ್ತರು ಸೃಷ್ಟಿಯಾಗುತ್ತಾರೆ. ಭಕ್ತಿಯನ್ನು ಬಂಡವಾಳವಾಗಿ ಮಾಡಿಕೊಂಡು ಅಲ್ಲಲ್ಲಿ ಕಟ್ಟೆಗಳು ನಿರ್ಮಾಣವಾಗುತ್ತವೆ. ಈಗ ಕೊರಗ ತನಿಯನನ್ನು “ಕರಿಯಜ್ಜ” ಎಂದೆಲ್ಲಾ ಕರೆಯಲು ಶುರು ಮಾಡಿದ್ದಾರೆ. ಈಗ “ಕರಿ ಹೈದ ಕರಿ ಅಜ್ಜ” ಎಂಬ ಅಸಂಬದ್ಧ ಟೈಟಲ್‌ ಇರುವ ಕನ್ನಡ ಸಿನೇಮಾ ಒಂದು ಬರುತ್ತಿದೆ. ಬೇರೆ ಬೇರೆ ಭಕ್ತಿ ಗೀತೆಗಳು ಹುಟ್ಟಿಕೊಂಡಿವೆ. ಈ ಮೂಲಕ ದುರಂತ ನಾಯಕ ಕೊರಗ ತನಿಯನ ಜೀವನಗಾಥೆಯನ್ನು, ಪಾಡ್ದನವನ್ನು ವ್ಯವಸ್ಥಿತವಾಗಿ ತಿರುಚುತ್ತಿದ್ದಾರೆ.</p>



<p><strong>ವ್ಯಾಪಕ ಪ್ರಚಾರ ಪಡೆದ ಶಬರಿಮಲೆ ಅಯ್ಯಪ್ಪ..</strong></p>



<p>ಎಪ್ಪತ್ತು – ಎಂಬತ್ತರ ದಶಕದಲ್ಲಿ ಶಬರಿಮಲೆ ಅಯ್ಯಪ್ಪ ಅತ್ಯಂತ ವ್ಯಾಪಕ ಪ್ರಚಾರವನ್ನು ಪಡೆದ ದೈವ. ಸಾಲು ಸಾಲು ಚಲನಚಿತ್ರಗಳು ಅಯ್ಯಪ್ಪನ ಬಗ್ಗೆ ನಿರ್ಮಾಣವಾದವು. ಭಕ್ತಿ ಗೀತೆಗಳು, ಕ್ಯಾಸೆಟ್‌ ಗಳು ಬಂದವು. ಗಾಯಕ ಏಸುದಾಸ್‌ ಹಾಡಿದ “ಹರಿವರಾಸನಂ” ಎಂಬ ಗೀತೆಗೆ ಅಯ್ಯಪ್ಪನ ಬಾಗಿಲು ತೆರೆಯಿತು ಎಂಬ ಕಥೆಗಳು ಸೃಷ್ಟಿಯಾದವು. ದೇಶದ ಮೂಲೆ ಮೂಲೆಯಿಂದ “ಮಕರ ಜ್ಯೋತಿ” ನೋಡಲು ಭಕ್ತರು ಸಾಗರೋಪಾದಿಯಲ್ಲಿ ಬರುತ್ತಾರೆ. ಜ್ಯೋತಿ ಮನುಷ್ಯ ನಿರ್ಮಿತ ಎಂದು ತಿರುವಂಕೂರ್ ದೇವಸ್ವಂ ಬೋರ್ಡ್‌ ಸ್ಪಷ್ಟನೆ ನೀಡಿದರೂ ಭಕ್ತರ ಸಂಖ್ಯೆ ಕಡಿಮೆಯಾಗಿಲ್ಲ.</p>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="918" height="1024" src="https://peepalmedia.com/wp-content/uploads/2022/11/image-20-918x1024.png" alt="" class="wp-image-16346" srcset="https://peepalmedia.com/wp-content/uploads/2022/11/image-20-918x1024.png 918w, https://peepalmedia.com/wp-content/uploads/2022/11/image-20-269x300.png 269w, https://peepalmedia.com/wp-content/uploads/2022/11/image-20-768x857.png 768w, https://peepalmedia.com/wp-content/uploads/2022/11/image-20-150x167.png 150w, https://peepalmedia.com/wp-content/uploads/2022/11/image-20-300x335.png 300w, https://peepalmedia.com/wp-content/uploads/2022/11/image-20-696x777.png 696w, https://peepalmedia.com/wp-content/uploads/2022/11/image-20-1068x1192.png 1068w, https://peepalmedia.com/wp-content/uploads/2022/11/image-20.png 1080w" sizes="auto, (max-width: 918px) 100vw, 918px" /></figure>
</div>



<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="724" height="1024" src="https://peepalmedia.com/wp-content/uploads/2022/11/image-21-724x1024.png" alt="" class="wp-image-16347" srcset="https://peepalmedia.com/wp-content/uploads/2022/11/image-21-724x1024.png 724w, https://peepalmedia.com/wp-content/uploads/2022/11/image-21-212x300.png 212w, https://peepalmedia.com/wp-content/uploads/2022/11/image-21-768x1087.png 768w, https://peepalmedia.com/wp-content/uploads/2022/11/image-21-150x212.png 150w, https://peepalmedia.com/wp-content/uploads/2022/11/image-21-300x424.png 300w, https://peepalmedia.com/wp-content/uploads/2022/11/image-21-696x985.png 696w, https://peepalmedia.com/wp-content/uploads/2022/11/image-21-1068x1511.png 1068w, https://peepalmedia.com/wp-content/uploads/2022/11/image-21.png 1080w" sizes="auto, (max-width: 724px) 100vw, 724px" /></figure>
</div>
</div>



<p><strong>ಸಿನೆಮಾದಿಂದ ಹುಟ್ಟಿದ ದೇವರು </strong><strong>–</strong><strong> ಸಂತೋಷಿ ಮಾತಾ</strong></p>



<p>ಸಂತೋಷಿ ಮಾತಾ ಎಂಬ ದೇವತೆಯನ್ನು ಇಂದು ಭಾರತದಾದ್ಯಂತ ಪೂಜೆ ಮಾಡುತ್ತಾರೆ. ಅನೇಕ ದೇವಾಲಯಗಳು ಕಟ್ಟಲ್ಪಟ್ಟಿವೆ. ಅಚ್ಚರಿಯಾದರೂ ಸತ್ಯ, ಸಂತೋಷಿ ಮಾತಾ ಎಂಬುದು ಎಂದು ಸೆಲ್ಯುಲಾಯಿಡ್‌ ರೀಲ್‌ ನಿಂದ ಹುಟ್ಟಿದ ದೇವಿ. ಎಪ್ಪತ್ತರ ದಶಕದಲ್ಲಿ ಬಂದ ಸಿನೇಮಾವೊಂದು ಸೃಷ್ಟಿಸಿದ ದೇವತೆ.</p>



<p>೧೯೭೫ರಲ್ಲಿ ಶೋಲೇ ಹಾಗೂ ದೀವಾರ್‌ ಸಿನೇಮಾದ ಜೊತೆ ಜೊತೆಗೆ ಅತ್ಯಂತ ಕಡಿಮೆ ಬಜೆಟ್‌ ನ “ಜೈ ಸಂತೋಷಿ ಮಾ” ಎಂಬ ಸಿನೇಮಾ ಬಂತು. ಇದರಲ್ಲಿ ಅಭಿನಯಿಸಲು ರೆಡ್‌ ಲೈಟ್‌ ಏರಿಯಾಗಳಿಂದ ಕಲಾವಿದೆಯರನ್ನು ಕರೆತರಲಾಯಿತು. ಬಜೆಟ್‌ ಜೊತೆಗೆ ತುಲನೆ ಮಾಡಿದರೆ ಸಿನೇಮಾ ಒಳ್ಳೆಯ ಗಳಿಕೆಯನ್ನು ಕೂಡ ಕಂಡಿತ್ತು. ಕಾಂತಾರದ ರೀತಿ ಕಡಿಮೆ ಬಜೆಟ್‌ &#8211; ಹೆಚ್ಚಿನ ಗಳಿಕೆ!</p>



<p>ಸಿನೇಮಾದಲ್ಲಿ ಸಂತೋಷಿ ಮಾತಾ ಪಾತ್ರವನ್ನು ಮಾಡಿದ್ದ ಅನಿತಾ ಗುಹ ತನ್ನ ಅನುಭವವನ್ನು ಹಂಚಿಕೊಳ್ಳುತ್ತಾ “ಜನರು ಸಿನೇಮಾ ನೋಡುತ್ತಾ ಸ್ಕ್ರೀನ್‌ ಮೇಲೆ ಅಕ್ಕಿ, ನಾಣ್ಯ ಹೂಗಳನ್ನು ಎಸೆಯುತ್ತಿದ್ದರು. ಥಿಯೇಟರ್‌ ಒಳಗಡೆ ಬರುವಾಗ ಚಪ್ಪಲಿಯನ್ನು ಕಳಚಿ ಬರುತ್ತಿದ್ದರು. ಹೊರಗಡೆ ಸಣ್ಣ ಗುಡಿಯನ್ನು ಕೂಡ ಕಟ್ಟಿದ್ದರು. ಭಕ್ತಿಪ್ರಧಾನ ಸಿನೇಮಾಗಳು ಪ್ರದರ್ಶನಗೊಳ್ಳದ ಬಾಂದ್ರದಲ್ಲಿ ಈ ಸಿನೇಮಾ ಐವತ್ತು ವಾರಗಳ ಕಾಲ ಓಡಿತು&#8221; ಎನ್ನುತ್ತಾರೆ. ಯಾವುದೇ ಪೌರಾಣಿಕ ಹಿನ್ನಲೆ ಇಲ್ಲದ ಹೊಸದಾಗಿ ಸಿನೇಮಾದಿಂದ ಹುಟ್ಟಿಕೊಂಡ ಸಂತೋಷಿ ಮಾತಾನನ್ನು ಇಡೀ ಭಾರತವೇ ಆರಾಧಿಸಲು ಆರಂಭ ಮಾಡಿತ್ತು. ಇಂದಿಗೂ ವೇಶ್ಯಾಗೃಹಗಳಲ್ಲಿ, ಟ್ರಾನ್ಸ್‌ ಜೆಂಡರ್‌ ಗಳ ಮನೆಗಳಲ್ಲಿ ಈ ಸಂತೋಷಿ ಮಾತಾನ ಫೋಟೋಗಳನ್ನು ನೋಡಬಹುದು.</p>



<p><strong>ಕಾಂತಾರ ಬೀರಿದ ಪ್ರಭಾವ..</strong></p>



<p>ಇಂದು ಕಾಂತಾರ ಕೂಡ ಜನರ ಮೇಲೆ ಇಂತಹ ಪ್ರಭಾವವನ್ನು ಬೀರಿದಂತೆ ತೋರುತ್ತದೆ. ಸಿನೇಮಾವನ್ನು ಮಾಡುವಾಗ ಮಾಂಸಾಹಾರ ತ್ಯಜಿಸಿದ್ದೆ, ವೃತ ಮಾಡಿದ್ದೆ ಎಂದು ನಿರ್ದೇಶಕ-ನಟ ರಿಷಬ್‌ ಶೆಟ್ಟಿ ಹೇಳಿಕೆಗಳನ್ನು ನೀಡಿ ಇಡೀ ಸಿನೇಮಾವನ್ನು “ಭಕ್ತಿ ಭಾವ”ದಿಂದ ಜನರು ನೋಡುವಂತೆ ಮಾಡಿದರು. ಜೈ ಸಂತೋಷಿ ಮಾ ಸಿನೇಮಾವನ್ನು ನೋಡಿದಂತೆ ಜನರು ಚಪ್ಪಲಿ ಕಳಚಿ ಸಿನೇಮಾ ನೋಡಿದರು. ಥಿಯೇಟರ್‌ ಒಳಗಡೆ ಕೆಲವರಿಗೆ ದೈವದ ಆವಾಹನೆಯಾಗಿ ವಿಚಿತ್ರವಾಗಿ ಕುಣಿಯಲು ಶುರು ಮಾಡಿದರು. ರಾತ್ರಿಯಾದರೆ ಟೆರೇಸ್‌ ಹತ್ತಿ “ಹೋ……….ಗುತ್ತಿನಾರೇ…..!” ಎಂದು ಕಿರುಚುತ್ತಿದ್ದಾರೆ.</p>



<p>ಸಿನೇಮಾದಿಂದಾಗಿ ಈಗಾಗಲೇ ಕರ್ನಾಟಕದಾದ್ಯಂತ ಪ್ರಚಾರ ಪಡೆದಿದ್ದ ಕೊರಗಜ್ಜನ ಸಾಲಿಗೆ ಪಂಜುರ್ಲಿ – ಗುಳಿಗವೂ ಸೇರಿವೆ. ಕರ್ನಾಟಕದಾದ್ಯಂತ ಭಕ್ತರು ಸೃಷ್ಟಿಯಾಗಿ ತಮ್ಮ ತಮ್ಮ ಊರುಗಳಲ್ಲಿ ನೇಮ ಮಾಡಲು ಮುಂದಾಗುತ್ತಿದ್ದಾರೆ. ಹೀಗೆ ತುಳುನಾಡಿನ ಹೊರಗೆ ಗುಳಿಗ ದೈವದ ಕಟ್ಟೆ ನಿರ್ಮಾಣ ಮಾಡಿದವರಿಗೆ ಕಾಂತಾರ ಸಿನೇಮಾದ ನಟ ಪ್ರಮೋದ್‌ ಶೆಟ್ಟಿ ಅಭಿನಂದಿಸಿದ್ದರು ಕೂಡ.</p>



<p><strong>ತುಳುವರ ಅಳಲು..</strong></p>



<p>ರಿಷಬ್‌ ಶೆಟ್ಟಿ ಯಶಸ್ವಿಯಾಗಿ ಸಿನೇಮಾವನ್ನು ತೆಗೆದಿದ್ದಾರೆ. ನಾಲ್ಕುನೂರು ಕೋಟಿಗೂ ಅಧಿಕ ಆದಾಯವನ್ನು ಗಳಿಸಿದ್ದಾರೆ. ಅವರ ಈ ಪ್ರಾಜೆಕ್ಟ್‌ ಮುಗಿದಿದೆ. ಮುಂದೆ ಕಾಂತಾರ ಭಾಗ -೨ ಬಂದರೂ ಬರಬಹುದು. ಎಲ್ಲಾ ತುಳುವ ಸಮಾಜವೇ ಕಟ್ಟಿಕೊಂಡ ವಿಧಿ ನಿಷೇಧಗಳನ್ನು ಮೀರಿ ತೆಗೆದ ಈ ಚಿತ್ರವನ್ನು ತುಳುವರೇ ಪ್ರೋತ್ಸಾಹಿಸಿ ಇಂದು ಸಿನೇಮಾದ ಪ್ರಭಾವದಿಂದ ದೈವಾರಾಧನೆಗೆ ಜನರು ಅವಮಾನ ಮಾಡುತ್ತಿದ್ದಾರೆ ಎಂದು ಗೋಗರೆಯುತ್ತಿದ್ದಾರೆ.</p>



<p><strong>ಇದೊಂದು ಅಚ್ಚರಿಯ ಸಂಗತಿ..</strong></p>



<p>ದೈವಾರಾಧನೆ ಒಂದು ಸಂಕೀರ್ಣ ವ್ಯವಸ್ಥೆ. ಇದರಲ್ಲಿ ನಲಿಕೆ, ಪರವ, ಪಂಬದ ಸಮುದಾಯಗಳು ಪಾತ್ರಿಗಳಾಗಿ ಭಾಗವಹಿಸಿದರೆ, ಮಡಿವಾಳ, ಬಿಲ್ಲವ, ಬಂಟ, ಗೌಡ, ಕುಲಾಲ ಮೊದಲಾದ ಸಮುದಾಯಗಳೂ ಪ್ರಧಾನ ಪಾತ್ರಗಳನ್ನು ವಹಿಸುತ್ತಾರೆ. ಇಲ್ಲೊಂದು ಜಾತೀಯ ಶ್ರೇಣೀಕೃತ ವ್ಯವಸ್ಥೆ ಇದೆ. ಇದು ಹಾಗೆಯೇ ಮುಂದುವರಿಯುತ್ತದೆ. ಅಲ್ಲದೇ ಇದೇ ಶ್ರೇಣೀಕೃತ ವ್ಯವಸ್ಥೆ ದೈವಗಳಲ್ಲೂ ಇವೆ. ಪಂಜುರ್ಲಿ, ಗುಳಿಗ ದೈವಗಳಿಗಿಂತ ಪ್ರಧಾನ ದೈವಗಳು ಅನೇಕ ಇವೆ. ಕೊಡಮಣಿತ್ತಾಯ, ವೈದ್ಯನಾಥ, ಕಿನ್ನಿಮಾಣಿ-ಪೂಮಾಣಿ, ಜಾರಂದಾಯ, ಜುಮಾದಿ, ಅರಸು ದೈವಗಳು ಮೊದಲಾದ ಪ್ರಧಾನ ದೈವಗಳಿವೆ. ಇವ್ಯಾವುವೂ ಇಷ್ಟೊಂದು ಪ್ರಚಾರ ಪಡೆಯದೆ ಪಂಜುರ್ಲಿ, ಕೊರಗಜ್ಜ, ಗುಳಿಗ ದೈವಗಳು ಪಡೆದಿರುವುದು ಅಚ್ಚರಿಯ ಸಂಗತಿ.</p>



<p><strong>ದೈವಗಳ ಓಡಾಟಕ್ಕೆ ನಿರ್ಧಿಷ್ಟ ವ್ಯಾಪ್ತಿಯಿದೆ..</strong></p>



<p>ಒಂದು ದೈವಕ್ಕೆ ನಿರ್ಧಿಷ್ಟ ಭೌಗೋಳಿಕ ವ್ಯಾಪ್ತಿ ಇರುತ್ತದೆ. ಇದು ತುಳುನಾಡಿನ ಆಡಳಿತ ವ್ಯವಸ್ಥೆ ರೂಪಿಸಿರುವ ವ್ಯಾಪ್ತಿ. ದೈವಗಳು ಆ ವ್ಯಾಪ್ತಿಯನ್ನು ಮೀರಿ ಹೋಗುವುದಿಲ್ಲ. ಒಂದು ಕಡೆಯಿಂದ ಇನ್ನೊಂದು ಕಡೆಗೆ ದೈವಗಳು ಹೋಗುವುದು ಅಪರೂಪದ ಸಂಗತಿ. ಹೆರಿಗೆಯಾಗಿ ತವರಿನಿಂದ ಗಂಡನ ಮನೆಗೆ ಹೋಗುವಾಗ ದೈವ ಮಗುವಿನ ತೊಟ್ಟಿಲಿನ&nbsp; ಜೊತೆಗೆ ಹೋಗುವುದು, ಬಾಲೊಳಿಗಳಿಂದ ದೈವಗಳನ್ನು ತರುವುದು, ಕುಟುಂಬ ವಲಸೆ ಹೋಗುವಾಗ ದೈವಗಳೂ ಹೋಗುವುದು -ಅವೆಲ್ಲವಕ್ಕೂ ಒಂದು ವ್ಯಾಪ್ತಿ – ನಿರ್ಬಂಧಗಳಿವೆ. ಇನ್ನು ಇವು ಕನ್ನಡ ಭಾಷಿಕ ಪ್ರದೇಶಗಳಿಗೆ ಹೋಗುವುದಿದೆ. ಹೆಚ್ಚೆಂದರೆ ಕೊಡಗು, ಶಿವಮೊಗ್ಗ, ಮಲೆನಾಡು ಭಾಗಗಳಲ್ಲಿ ನೇಮ ನಡೆಯುತ್ತದೆ. ಇದು ಕುಟುಂಬಗಳು ವಲಸೆ ಹೋಗಿ ನಡೆಯುವ ಪ್ರಕರಣಗಳು.</p>



<p><strong>ಸಿನೇಮಾ ಗೆದ್ದಿದೆ, ಆದರೆ ದೈವಾರಾಧನೆಯ ಆಶಯಗಳು ಸೋತಿವೆ..</strong></p>



<p>ಇಂದು ಮೈಸೂರು, ಬೆಂಗಳೂರಿಗೆ ದೈವಗಳು ಹೋಗುತ್ತಿವೆ. ಕಲ್ಲು ಬಿಟ್ಟು ಬ್ಯಾನರ್‌ ಗಳಲ್ಲಿ ದೈವಗಳು ಪ್ರತಿಷ್ಠೆ ಗೊಳ್ಳುತ್ತಿವೆ. ದುಡ್ಡು ಮಾಡುವ ದಂಧೆಯಾಗಿ ಬಳಕೆಯಾಗುತ್ತಿದೆ. ದೈವಗಳನ್ನು ಕಾಂತಾರದ ದೈವಗಳು ಎಂದು ಕರೆಯುವ ಪರಿಪಾಠ ಶುರುವಾಗಿದೆ. ಒಟ್ಟಿನಲ್ಲಿ ಸಿನೇಮಾ ಗೆದ್ದಿದೆ, ಆದರೆ ದೈವಾರಾಧನೆಯ ಆಶಯಗಳು ಸೋತಿವೆ.</p>



<p></p>



<p></p>



<p><strong>ಚರಣ್‌ ಐವರ್ನಾಡು</strong></p>
]]></content:encoded>
					
		
		
			</item>
		<item>
		<title>ಭೋರ್ಗರೆಯುವ ಪಯಸ್ವಿನಿಯೊಳಗಿನ ಆತ್ಮಗಳು</title>
		<link>https://peepalmedia.com/charan-ivarnad-story/</link>
		
		<dc:creator><![CDATA[Charan Aivarnad]]></dc:creator>
		<pubDate>Sun, 06 Nov 2022 09:17:51 +0000</pubDate>
				<category><![CDATA[ಕಲೆ – ಸಾಹಿತ್ಯ]]></category>
		<category><![CDATA[ಯುವ ನೋಟ]]></category>
		<category><![CDATA[charan Ivarnadu]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[writing]]></category>
		<guid isPermaLink="false">https://peepalmedia.com/?p=14399</guid>

					<description><![CDATA[ಪಯಸ್ವಿನಿಯನ್ನು ನೋಡುವಾಗ ನಾನು ಹಿಂದೆ ನೋಡಿದ್ದಕ್ಕಿಂತ ಹೆಚ್ಚು ರಭಸದಿಂದ ಹರಿಯುತ್ತಿದ್ದಳು. ಆತ್ಮಗಳು ಮುಕ್ತಿಹೊಂದಿಯೋ ಇಲ್ಲ ಪೂಮಲೆಯ ಕಾಡುಗಳಲ್ಲಿರುವ ಮರಗಳನ್ನು ಸೇರಿ ಮೇಲೆ ಉಳಿದ ನಿರ್ಜೀವ ಶರೀರಗಳ ರಕ್ತವೇ ಪಯಸ್ವಿನಿಯ ತುಂಬೆಲ್ಲಾ ಹರಿಯುತ್ತಿದೆ ಎಂಬಂತೆ ಕೆಂಪು ಕೆಂಪಾದ ನೀರು ಕೇರಳದ ಕಡೆಗೆ ಹರಿದು ಹೋಗುತ್ತಿತ್ತು. ಕೇರಳದಲ್ಲಿ ಕೆಲವು ಮಾಂತ್ರಿಕರಿದ್ದಾರೆ. ಕವಡೆ ಹಾಕಿ ಮೋಕ್ಷ ಸಿಗದ ಆತ್ಮಗಳ ಲೆಕ್ಕ ಹಾಕಿ ಮೋಕ್ಷಕ್ಕಾಗಿ ಗೋಗರೆಯುವ ಪ್ರೇತಾತ್ಮಗಳಿಗೆ ಮುಕ್ತಿ ನೀಡುತ್ತಾರೆ. ಬಹುಶಃ ಪಯಸ್ವಿನಿಯಲ್ಲಿ ಆಗೊಂದು ಈಗೊಂದು ಹರಿದು ಹೋಗುವ ಆತ್ಮಗಳಿಗೆ ಅವರು ಮುಕ್ತಿ [&#8230;]]]></description>
										<content:encoded><![CDATA[
<p>ಪಯಸ್ವಿನಿಯನ್ನು ನೋಡುವಾಗ ನಾನು ಹಿಂದೆ ನೋಡಿದ್ದಕ್ಕಿಂತ ಹೆಚ್ಚು ರಭಸದಿಂದ ಹರಿಯುತ್ತಿದ್ದಳು. ಆತ್ಮಗಳು ಮುಕ್ತಿಹೊಂದಿಯೋ ಇಲ್ಲ ಪೂಮಲೆಯ ಕಾಡುಗಳಲ್ಲಿರುವ ಮರಗಳನ್ನು ಸೇರಿ ಮೇಲೆ ಉಳಿದ ನಿರ್ಜೀವ ಶರೀರಗಳ ರಕ್ತವೇ ಪಯಸ್ವಿನಿಯ ತುಂಬೆಲ್ಲಾ ಹರಿಯುತ್ತಿದೆ ಎಂಬಂತೆ ಕೆಂಪು ಕೆಂಪಾದ ನೀರು ಕೇರಳದ ಕಡೆಗೆ ಹರಿದು ಹೋಗುತ್ತಿತ್ತು. ಕೇರಳದಲ್ಲಿ ಕೆಲವು ಮಾಂತ್ರಿಕರಿದ್ದಾರೆ. ಕವಡೆ ಹಾಕಿ ಮೋಕ್ಷ ಸಿಗದ ಆತ್ಮಗಳ ಲೆಕ್ಕ ಹಾಕಿ ಮೋಕ್ಷಕ್ಕಾಗಿ ಗೋಗರೆಯುವ ಪ್ರೇತಾತ್ಮಗಳಿಗೆ ಮುಕ್ತಿ ನೀಡುತ್ತಾರೆ. ಬಹುಶಃ ಪಯಸ್ವಿನಿಯಲ್ಲಿ ಆಗೊಂದು ಈಗೊಂದು ಹರಿದು ಹೋಗುವ ಆತ್ಮಗಳಿಗೆ ಅವರು ಮುಕ್ತಿ ನೀಡಬಹುದು ಎನ್ನುತ್ತಾ ಬದುಗಳಲ್ಲಿ ಹರಿಯುತ್ತಿದ್ದ ತಿಳಿನೀರಿಗೆ ಪಾದಗಳನ್ನು ಅದ್ದಿ ಸಣ್ಣ ಸಣ್ಣ ಮೀನಿಗಳ ಜೊತೆಗೆ ಆಟವಾಡಿದೆ.</p>



<p>ಮೀನುಗಳು ಮಾತನಾಡುತ್ತವೆ. ಅವುಗಳನ್ನು ನಮಗೆ ಸ್ಪರ್ಶಿಸುವ ಹಕ್ಕಿಲ್ಲ. ಆದರೆ ಅವುಗಳಷ್ಟೇ ನಮ್ಮನ್ನು ಮುಟ್ಟಬಹುದು. ಬಲೆ ಹಾಕಿ ಮೀನು ಹಿಡಿಯುವವನಿಗೆ ಜೀವಂತ ಮೀನುಗಳು ಬೇಕಿಲ್ಲ. ಮನುಷ್ಯರಲ್ಲೂ ಅಷ್ಟೇ, ಜೀವಂತವನಾಗಿರುವ ಮನುಷ್ಯ ಸುತ್ತಲಿನವರಿಗೆ ಬೇಕಿಲ್ಲ. ಸತ್ತ ಮೇಲೆ ಅವನ ಅಂತಿಮ ಕ್ರಿಯೆಗಳನ್ನು ಮುಗಿಸಿ ಹಂದಿ ಕೋಳಿ ಮಾಂಸದ ಊಟ ಮಾಡಿ ಹೆಂಡ ಕುಡಿದು ಕೈ ತೊಳೆಯುತ್ತಾರೆ. ಆದರೆ ಸಾವಿನ ಊಟದ ಮಸಾಲೆಯ ಪರಿಮಳ ನಮ್ಮ ಸಾವು ನಮ್ಮ ಬಳಿ ಬರುವ ವರೆಗೆ ಹಾಗೇ ಘಮ್ಮನೆ ಇರುತ್ತದೆ. ಆಗಾಗ ಕೈ ಮೂಸಿ ನೋಡಲು ಮರೆತಿರುತ್ತೇವೆ ಅಷ್ಟೇ!</p>



<p>ಹಿಂದೆಲ್ಲಾ ಪಯಸ್ವಿನಿಯನ್ನು ದಾಟಿ ನಮ್ಮ ಅಜ್ಜಿಯ ಮನೆಗೆ ಬರಲು ಒಂದು ಮರದ ದೋಣಿ ಇತ್ತು. &nbsp;ಒಂದು ಕಡೆಯಿಂದ ದೋಣಿ ಹತ್ತಿದರೆ ಹಾಯಾಗಿ ಸಾಗುವ ದೋಣಿಯಲ್ಲಿ ಕುಳಿತು ಹರಿಯುತ್ತದ್ದ ಕೆಂಪಾದ ನೀರನ್ನು ಕೈಲ್ಲಿ ಮುಟ್ಟಿ ಅಂಜಿಕೆ ಪಡುತ್ತಿದ್ದೆ. ಎಲ್ಲಾದರೂ ಸತ್ತು ಹೋಗಿರುವವರ ಆತ್ಮ ನನ್ನ ಕೈಗೆ ಸಿಕ್ಕಿದರೆ ಎಂದು. ಸುತ್ತ ಕಣ್ಣು ಹಾಯಿಸಿ ನೋಡುತ್ತಿದ್ದೆ. ಕಾಣಿಸಿಕೊಳ್ಳಲು ಅವುಗಳಿಗೆ ರೂಪವೆಲ್ಲಿದೆ! ರೂಪವಿಲ್ಲದ್ದನ್ನು ನಾವು ನಂಬುವಾಗ ಭಯವೂ ಜಾಸ್ತಿ. ದೆವ್ವವಾದರೂ ಅಷ್ಟೇ, ದೇವರಾದರೂ ಅಷ್ಟೇ! ಎಷ್ಟೋ ಸಾವುಗಳು ಈ ದೋಣಿಯಲ್ಲಿ ಬರುವಾಗ ತಲೆಯಲ್ಲಿ ಭಯಾನಕ ಕಥೆಗಳನ್ನು ಸೃಷ್ಟಿಸುತ್ತವೆ. ದೋಣಿ ಇನ್ನೊಂದು ದಡವನ್ನು ಸೇರುವಾಗ ಪಾದಗಳನ್ನು ಒದ್ದೆ ಮಾಡಿಕೊಂಡು ಇಳಿಬೇಕು.</p>


<div class="wp-block-image">
<figure class="aligncenter size-large is-resized"><img loading="lazy" decoding="async" src="https://peepalmedia.com/wp-content/uploads/2022/11/ಚರಣ್-768x1024.jpg" alt="" class="wp-image-14402" width="508" height="677" srcset="https://peepalmedia.com/wp-content/uploads/2022/11/ಚರಣ್-768x1024.jpg 768w, https://peepalmedia.com/wp-content/uploads/2022/11/ಚರಣ್-225x300.jpg 225w, https://peepalmedia.com/wp-content/uploads/2022/11/ಚರಣ್-1152x1536.jpg 1152w, https://peepalmedia.com/wp-content/uploads/2022/11/ಚರಣ್-150x200.jpg 150w, https://peepalmedia.com/wp-content/uploads/2022/11/ಚರಣ್-300x400.jpg 300w, https://peepalmedia.com/wp-content/uploads/2022/11/ಚರಣ್-696x928.jpg 696w, https://peepalmedia.com/wp-content/uploads/2022/11/ಚರಣ್-1068x1424.jpg 1068w, https://peepalmedia.com/wp-content/uploads/2022/11/ಚರಣ್.jpg 1200w" sizes="auto, (max-width: 508px) 100vw, 508px" /></figure></div>


<p>ಆದರೆ ಈಗ ಒಂದು ಸೇತುವೆಯಾಗಿದೆ. ಇಲ್ಲಿಯವರೇ, ನನ್ನ ಸಂಬಂಧಿಕರೇ ಒಬ್ಬರು ರಾಜ್ಯದ ಮುಖ್ಯಮಂತ್ರಿಯಾದರು. ಆವಾಗ ಈ ತೂಗುವ ಸೇತುವೆಯನ್ನು ಮಾಡಿದ್ದರು. &#8220;ಇವರು ಮುಖ್ಯಮಂತ್ರಿಯಾದದ್ದಕ್ಕೆ ಧಕ್ಕಿದ್ದು ಈ ಸೇತುವೆ ಮಾತ್ರ!&#8221; ಎಂದು ಆಗಾಗ ಜನ ತಮಾಷೆ ಮಾಡುತ್ತಾರೆ!</p>



<p>ಸೇತುವೆಯಾದ ಮೇಲೆ ಜನರು ನೀರಿನಲ್ಲಿ ಪಾದಗಳನ್ನು ಇಳಿಸಿ ಮೀನುಗಳ ಜೊತೆಗೆ ಆಟವಾಡುವುದನ್ನು ಮರೆತಿದ್ದಾರೆ. ಅವರೆಂತಾ ದೌರ್ಭಾಗ್ಯರು ಎಂದರೆ ಈ ಮೀನುಗಳು ಹೇಳುವ ನೀರಿನಲ್ಲಿ ಬರುವ ಆತ್ಮಗಳ ಕತೆಗಳನ್ನು ಕೇಳುವ ಅದೃಷ್ಟವನ್ನು ಕಳೆದುಕೊಂಡಿದ್ದಾರೆ! ಮೀನುಗಳೂ ಅಷ್ಟೇ&#8230;.ಮುಕ್ತಿ ಸಿಗದ ಆತ್ಮಗಳ ಕಥೆಗಳನ್ನು ಮನುಷ್ಯರಿಗೆ ಹೇಳಬೇಕು ಎಂಬ ಹುಚ್ಚು ತವಕದಿಂದ ಅಲ್ಲಲ್ಲಿ ಕಟ್ಟಿರುವ ಬಲೆಗಳಿಗೆ ನುಗ್ಗಿ ಸಿಕ್ಕಿಹಾಕಿಕೊಂಡು ಮುಕ್ತಿಗಾಗಿ ಹಲುಬುತ್ತವೆ.</p>



<p>ಅಮ್ಮ ಪ್ರತೀ ಬಾರಿ ಹೇಳುತ್ತಿರುತ್ತಾರೆ, ಅವರು ಹುಟ್ಟೂರಿನಿಂದ ಈ ಊರಿಗೆ ಗಂಟು ಮೂಟೆ ಕಟ್ಟಿ ಬರುವಾಗ ಹೀಗೇ&#8230;ಥೇಟ್‌ ರಕ್ತವೋ ಎಂಬಂತೆ ಕೆಸರುಮಯವಾಗಿ ಪಯಸ್ವಿನಿ ಭೋರ್ಗರೆದು ಹರಿಯುತ್ತಿದ್ದಳಂತೆ! ಒಂದುವರೆ ವಾರ ನದಿಯ ದಡದಲ್ಲಿ ಬಿಡಾರ ಹೂಡಿ ನೀರು ಕಡಿಮೆಯಾದ ಮೇಲೆ ಇನ್ನೊಂದು ದಡಕ್ಕೆ ಬಂದು ದಟ್ಟ ಕಾಡಿನಲ್ಲಿ ಗುಡಿಸಲು ಕಟ್ಟಿದರಂತೆ!‌</p>



<p>&#8220;ನಿಂಗೆ ಯಾವಾಗಲಾದರೂ ಈ ನೀರಿನಲ್ಲಿ ಆತ್ಮಗಳು ಸಂಚರಿಸುವುದನ್ನು ನೋಡಿದ ನೆನಪಿದ್ಯೋ?&#8221; ಎಂದು ಕೇಳಿದೆ.</p>



<p>&#8220;ಆತ್ಮಗಳೇನು ಕಣ್ಣಿಗೆ ಕಾಣುತ್ತವೆಯೇ? ಹಿಂದೊಮ್ಮೆ ದಡದಲ್ಲಿ ಬಂದು ನಿಂತಿದ್ದ ಹೆಣವೊಂದನ್ನು ಕೋಲಿನಿಂದ ಕುಟ್ಟಿ ನೀರಿನಲ್ಲಿ ಹರಿದುಹೋಗುವಂತೆ ಮಾಡಿದ್ದೆ!&#8221; ಎಂದಾಗ ಅವಳಲ್ಲಿ ಭಯವೇನೂ ಇರಲಿಲ್ಲ.</p>



<p>&#8220;ನಿನಗೆ ಆ ಹೆಣ ಅಸಹ್ಯ ಅಂತ ಅನ್ನಿಸಲೇ ಇಲ್ಲವೇ?&#8221;</p>



<p>&#8220;ಜೀವ ಬಿಟ್ಟು ಹೆಣಗಳಾದವರು ಅಸಹ್ಯವಾಗಿರುವುದಿಲ್ಲ!&#8221; ಎಂದಳು.</p>



<p>&#8220;ಮೈತುಂಬಾ ದುಬಾರಿ ಸೆಂಟು ಬಳಿದು, ಕರಿ ಕೋಟು ಹಾಕಿ, ಬಾಯಿಯಲ್ಲಿರುವ ಸಿಗರೇಟನ್ನು ತುಟಿಯ ಒಂದು ಬದಿಯಿಂದ ಇನ್ನೊಂದು ಬದಿಗೆ ಸೆಕೆಂಡಿಗೊಮ್ಮೆ ಬದಲಿಸುತ್ತಾ ಕೈಯಲ್ಲಿ ಅದ್ಯಾವುದೋ ರೋಮದ ನಾಯಿಯನ್ನು ಸಂಕೋಲೆಯಲ್ಲಿ ಹಿಡಿದುಕೊಂಡು ಹೋಗುವುದನ್ನು ನಾನು ಒಮ್ಮೆ ನೋಡಿದ್ದೆ! ಅದು ಅಸಹ್ಯವಾಗಿಯೇ ಕಾಣುತ್ತಿತ್ತು! ಎಷ್ಟೊಂದು ಹೆಣ್ಣು ಮಕ್ಕಳು ಆ ಹಳೆಯ ಮನೆಯಲ್ಲಿ ಗೋಗರೆದು ಬೇಡಿಕೊಂಡರೂ ಈ ಮನುಷ್ಯ ಎಡೆ ಬಿಡದೆ ಕಾಡು ಕೋಣದಂತೆ ಧಾಳಿ ಮಾಡಿ ಹೊರಗೆ ಎಸೆಯುವುದನ್ನು ಕೇಳಿದ ಮೇಲೆ ಆ ಮನುಷ್ಯನನ್ನು ನೋಡಿದಾಗೆಲ್ಲಾ ಮೈಮೇಲೆ ಹಾವೊಂದು ಸಂಚರಿಸಿದಂತೆ ತಣ್ಣಗಾಗುತ್ತಿತ್ತು!&#8221;</p>



<p>ನಾನು ಮಾತನಾಡದೆ ತೂಗು ಸೇತುವೆಯಿಂದ ಇಳಿದು ಉಚ್ಚೆ ಹೊಯ್ಯಲು ಬೇಲಿಗೆ ಮುಖ ಮಾಡಿ ನಿಂತೆ.</p>



<p>&#8220;ಬಹುಶಃ ಆ ಮನುಷ್ಯನ ಮಾವ ನನ್ನ ಅಜ್ಜನಿಗೆ ಮೋಸ ಮಾಡಿರದೇ ಇದ್ದಿದ್ದರೆ ನಾವಿಂದು ಇಷ್ಟು ಕಷ್ಟ ಪಡುವ ಅಗತ್ಯ ಇರುತ್ತಿರಲಿಲ್ಲ. ನಾವು ಈ ನದಿ ದಾಟಿ ಈ ಕಾಡಿನಲ್ಲಿ ಮನೆ ಮಾಡಿ ದೊಡ್ಡ ದೊಡ್ಡ ಮರಗಳನ್ನು ರಾತ್ರೋ ರಾತ್ರೆ ಕಡಿದು ಅಡಿಕೆ ಸಸಿಗಳನ್ನು ನೆಡುತ್ತಿರಲಿಲ್ಲ!&#8221;</p>



<p>&#8220;ಒಂದು ದಿನ ನನ್ನ ಅಜ್ಜನನ್ನು ಪಟೇಲರು ಮಂಗ್ಳೂರಿಗೆ ಕೆರದುಕೊಂಡು ಹೋದರು. ಮೊದಲ ಬಾರಿ ಮಂಗ್ಳೂರಿಗೆ&#8230;.ಅದೂ ಪಟೇಲರ ಜೊತೆಗೆ ಹೋಗುವ ಖುಷಿ ಅಜ್ಜನದ್ದು. ಪಟೇಲರು ಮಂಗ್ಳೂರಲ್ಲಿ ಚಹಾ ಮತ್ತು ಬನ್ಸ್‌ ತಿನ್ನಿಸಿದರು. ರಥಬೀದಿಯ ಕೊಂಕಣಿಗಳ ಅಂಗಡಿಯೊಂದರಿಂದ ಒಂದು ಟೊಪ್ಪಿ ಖರೀದಿಸಿ ಅಜ್ಜನ ತಲೆಗೆ ಹಾಕಿ&#8230;&#8230;ಭಾರಿ ಸೋಕು ತೋಜುಂಡು&#8230;.ಎಂದರು. ಆಮೇಲೆ ಪಕ್ಕದ ಸರ್ಕಾರಿ ಕಚೇರಿಗೆ ಕರೆದುಕೊಂಡು ಹೋಗಿ ತಾವೇ ಅವರ ಹಬ್ಬೆರಳನ್ನು ಶಾಯಿಗೆ ಅದ್ದಿ ಯಾವುದೋ ಪೇಪರ್‌ಮೇಲೆ ಒತ್ತಿಸಿದರು. ಒಂದು ಬಸ್‌ನಲ್ಲಿ ಕೂರಿಸಿ ಕಿಸೆಗೆ ಚಿಲ್ಲರೆ ಹಾಕಿ ಸುಳ್ಯಕ್ಕೆ ಕಳಿಸಿದರು.&#8221;</p>



<p>&#8220;ಪಟೇಲರಿಗೆ ಅಷ್ಟು ಸುಲಭದಲ್ಲಿ ನಮ್ಮ ಅಜ್ಜ ಮತ್ತು ಅಪ್ಪನನ್ನು ಆ ಜಾಗದಿಂದ ಓಡಿಸಲು ಸಾಧ್ಯವಿರಲಿಲ್ಲ. ಒಂದೇ ಜಾತಿಯವರೂ&#8230; ನೋಡಿದರೆ ಹತ್ತಿರದ ನೆಂಟರು ಬೇರೆ! ಆದರೆ ಅಲ್ಲಿದ್ದ ದಲಿತ ಮನ್ಸರ ಮನೆಗೆ ಒಂದು ರಾತ್ರಿ ಬೆಂಕಿ ಇಟ್ಟರು. ತನ್ನ ಭೂತಕ್ಕೆ ಮನ್ಸರು ಆ ಜಾಗದಲ್ಲಿ ಇರುವುದು ಸಮಾಧಾನ ಇಲ್ಲ, ಹೀಗಾಗಿ ಈ ಬೆಂಕಿ ಅವಘಡವಾಗಿದೆ ಎಂಬ ಪುಕಾರು ಎಬ್ಬಿಸಿ ಹಿಂಡು ಹಿಂಡಾಗಿ ಅವರನ್ನು ಬೇರೆ ಸ್ಥಳಕ್ಕೆ ಸಾಗಿಸಿದರು. ಕೆಲವು ಮರಾಠಿ ನಾಯ್ಕರನ್ನು ಹೆದರಿಸಿ ಬೆದರಿಸಿ ಜಾಗ ಬಿಟ್ಟು ಓಡುವಂತೆ ಮಾಡಿದರು. ಎಂದೆದೂ ಭೂಮಿಯೇ ಇರದ, ಇದ್ದರೂ ಕೃಷಿ ಮಾಡಲು ಅನುಮತಿಯೇ ಇಲ್ಲದ ಮನ್ಸರು ಬೇರೆ ಜಾಗಕ್ಕೆ ಹೋದ ಮೇಲೆ ಅವರ ಬದುಕಿನಲ್ಲಿ ಹೆಚ್ಚು ಬದಲಾವಣೆಗಳೇನು ಆಗಲಿಲ್ಲ. ಪಟೇಲರ ಮನೆಯ ಚಾಕರಿ ಮಾಡಬೇಕಿತ್ತು ಅಷ್ಟೇ! ಆದರೆ ನಮ್ಮ ಅಜ್ಜನ, ಅಪ್ಪನ.. ನಾನು ಹುಟ್ಟಿದ ಮೇಲೆ ನನ್ನ ಬದುಕು ಎಲ್ಲವೂ ಕಷ್ಟದಿಂದಲೇ ತುಂಬಿತ್ತು!&#8221;</p>



<p>&#8220;ಒಂದು ಕಾಲದಲ್ಲಿ ಭೂಮಿಯಿದ್ದ ನಮ್ಮ ಅಜ್ಜ ಯಾರದೋ ಭೂಮಿಯಲ್ಲಿ ಮನೆ ಕಟ್ಟಿ ಕೂರಬೇಕಾಗಿ ಬಂತು. ನಾನು ಹುಟ್ಟಿದ್ದೂ ಅಲ್ಲೇ.. ಅಣ್ಣ ಹುಟ್ಟಿದ್ದೂ ಅಲ್ಲೇ! ಅಮೇಲೆ ನೋಡು ನಾನೂ, ನನ್ನ ಅಪ್ಪ-ಅಮ್ಮ ಎಲ್ಲರೂ ಆ ಜಾಗ ಬಿಟ್ಟು ಇಲ್ಲಿಗೆ ಬಂದದ್ದು. ಅದೂ ಇಂತದ್ದೇ ಒಂದು ಮಳೆಗಾಲದಲ್ಲಿ. ಬೇಸಿಗೆಯ ತನಕ ಕಾಯುವ ಅವಕಾಶವೇ ಇರಲಿಲ್ಲ. ಆಗ ಪಯಸ್ವಿನಿಯ ಭೋರ್ಗರೆತ ನೋಡಿ ಆದ ಭಯ ಇಂದೂ ಹಾಗೆಯೇ ಇದೆ!&#8221; ಎಂದು ನಿಟ್ಟುಸಿರು ಬಿಡುತ್ತಾ ನನ್ನ ಜೊತೆಗೆ ಗುಡ್ಡ ಹತ್ತಿದಳು.</p>



<p>ಅವಳಿಗೆ ತವರಿಗೆ ಹೋಗುವ ಸಂಭ್ರಮ ಏನೂ ಇರಲಿಲ್ಲ. ಒಮ್ಮೆಯಾದರೂ ಹೋಗಬೇಕು&#8230;ವರ್ಷಕ್ಕೆ ಒಮ್ಮೆ! ನಾನು ಹೋಗಲು ಹಿಂಜರಿಯುವಾಗ ಸತ್ತು ಸ್ವರ್ಗ ಸೇರಿರುವ ಅಜ್ಜ ಅಜ್ಜಿಗಾದರೂ ಖುಷಿಯಾಗಲಿ ಎಂದು ನನ್ನನ್ನು ಒತ್ತಾಯಿಸಿ ಕರೆದುಕೊಂಡು ಹೋಗುತ್ತಿದ್ದಳು. ನನಗೆ ಆ ದಟ್ಟ ಕಾಡಿನ ಮಧ್ಯೆ ಇರುವ ಗವಿಯಂತಹ ಮನೆ ಭಯಾನಕವಾಗಿ ಕಾಣುತ್ತಿತ್ತು. ಸಂಜೆಯಾದರೆ ಸಾಕು&#8230;..ವೀಂ&#8230;.ವಯ ವಯ ವಯಾಂ&#8230;ಎಂದು ಎಡೆಬಿಡದೆ ಚೀರುವ ಜೀರುಂಡೆಗಳು ಯಾವುದೋ ಆತ್ಮ ಸಂಚಾರಕ್ಕೆ ಹೊರಟ ಸೂಚನೆ ನೀಡುತ್ತಿದ್ದವು. ಮುಗಿಲು ಮುಟ್ಟುವ ಮರಗಳಲ್ಲಿ ಪ್ರೇತಗಳು ಹೆಬ್ಬಾವುಗಳಂತೆ ಸುರುಳಿ ಸುತ್ತಿ ನನ್ನ ಕಡೆಗೇ ಕೆಕ್ಕರಿಸಿ ನೋಡಿದಂತೆ ಭಾಸವಾಗುತ್ತಿತ್ತು.</p>



<p>ಸಂಜೆ ಗಂಟೆ ಆರಾದ ಮೇಲೆ ಪಯಸ್ವಿನಿಯ ನೀರಿನಲ್ಲಿ ಅಡಲು ಹೋಗುವ ಹೋಗುವ ಹಾಗೆ ಇಲ್ಲ. ತೋಟದ ಕಡಗೆ ಹೋದರೆ ಒಂದು ಶರತ್ತು ಯಾವಾಗಲೂ ಮಾವನ ಬಾಯಿಯಿಂದ ಬರುತ್ತಿತ್ತು!</p>



<p>&#8220;ನಿಂಗೆ ಹೋಯ್… ಎಂದು ಸದ್ದು ಕೇಳಿದರೆ ತಿರುಗಿ ನೋಡಬೇಡ!&#8221;<br></p>



<p>ನಾನು ಯಾವತ್ತೂ ಅದೇಕೆ ಹಾಗೆ… ಯಾರು ಹೋಯ್‌ ಎಂದು ನನ್ನನ್ನು ಕರೆಯುತ್ತಾರೆ ಎಂದು ಮರು ಪ್ರಶ್ನೆ ಹಾಕುವ ಧೈರ್ಯ ಮಾಡಿರಲೇ ಇಲ್ಲ. ಪ್ರಶ್ನೆ ಕೇಳುವಷ್ಟು ಮಾವನ ಜೊತೆಗೆ ಅನ್ಯೋನ್ಯತೆಯೂ ಇರಲಿಲ್ಲ!</p>



<p>&#8220;ಅಲ್ಲಾ&#8230; ಮಾವ ಸಂಜೆಯಾದಾಗ ಹೋಯ್‌ ಎಂದು ಯಾರಾದರೂ ಕರೆದರೆ ತಿರುಗಿ ನೋಡಬೇಡ ಎನ್ನುತ್ತಿದ್ದರಲ್ಲಾ? ಯಾಕೆ&#8230;&#8221; ಎಂದು ಕಾಡಿನ ದಾರಿಯಲ್ಲಿ&nbsp; ಬೆತ್ತದ ಕೊಂಬೆಗಳನ್ನು ಸರಿಸುತ್ತಾ ಕೇಳಿದೆ.</p>



<p>&#8220;ಹೋ&#8230;ಅದಾ&#8230; ರಾತ್ರಿಯಾದರೆ ನೀರಿನಲ್ಲಿ ಹಗಲೆಲ್ಲಾ ಅಡಗಿಕೊಂಡಿರುವ ಪೀಡೆಗಳು ನೀರಿನಿಂದ ಮೇಲೆ ಎದ್ದು ಸವಾರಿ ಹೋಗಲು ಶುರು ಮಾಡುತ್ತವೆ. ನೀನು ಅವು ಕರೆದರೆ ತಿರುಗಿ ನೋಡಿದೆ ಎಂದು ಇಟ್ಕೋ&#8230; ನಿನ್ನ ಬೆನ್ನು ಹತ್ತಿ ನಿನ್ನ ಮೈಯಲ್ಲಿ ಸೇರಿಕೊಳ್ಳುತ್ತವೆ! ಸಂಜೆಯಾದಾಗ ನಾನು ಕೆಲವು ಬಾರಿ ಯಾರೋ ಆ ಕಯದಲ್ಲಿ ಸ್ನಾನ ಮಾಡಿದಂತೆ ಸದ್ದು ಮಾಡುವುದನ್ನು ಕೇಳಿದ್ದೇನೆ. ಜಲಕನ್ಯೆಗಳು ಅವು. ನಂಗೇನೂ ಮಾಡುವುದಿಲ್ಲ ಬಿಡು&#8230; ನಿನ್ನ ಹಾಗೆ ವಯಸ್ಸಾದ ಹುಡುಗರನ್ನು ಹಿಡ್ಕೊಂಡರೆ ಕೇರಳದ ಯಾವ ತಂತ್ರಿ, ಮಾಂತ್ರಿಕನಿಗೂ ಬಿಡಿಸಲು ಸಾಧ್ಯವಿಲ್ಲ!&#8221; ಎಂದು ಮುಸಿ ಮುಸಿ ನಕ್ಕರು.</p>



<p>ಪೀಡೆಗಳ ಕತೆ ಕೇಳಿ ಒಮ್ಮೆ ಬೆಚ್ಚಿ ಬಿದ್ದೆ. ಯಾಕಾಗಿ ನಮ್ಮನ್ನು ಕರೆಯುತ್ತವೆ? ಬಹುಶಃ ಕತೆ ಹೇಳಲು ಇರಬೇಕು. ದೇಹವಿಲ್ಲದ ಅವು ನನ್ನ ದೇಹವನ್ನು ಸೇರಿ ತಾವು ಹೇಗೆ ಸತ್ತೆವು ಎಂಬ ಕತೆ ಹೇಳುತ್ತವೆಯೋ? ನನ್ನ ದೇಹವನ್ನು ಸೇರಿ ಕತೆ ಹೇಳಿದರೆ ಆ ಕತೆ ನನಗೆ ಹೇಗೆ ಗೊತ್ತಾಗಬೇಕು. ಕತೆ ಕೇಳಿಸಿಕೊಂಡವರು ಪೀಡೆ ನನ್ನ ದೇಹವನ್ನು ಬಿಟ್ಟ ಮೇಲೆ ಹೇಳಬೇಕಷ್ಟೇ!</p>



<p>ಯಾವ ಕತೆಗಳು? ಪಟೇಲನಂತಹ ಜಮೀನ್ದಾರ ಭೂ-ಮಸೂದೆ ಕಾಯ್ದೆ ಬಂದಾಗ ಕೊಂದ ಮನ್ಸ, ಮೇರ, ಕೊರಗರ ಕತೆಯೋ? ಪಟೇಲರ ಅಳಿಯ ರೇಪ್‌ಮಾಡಿ ಬಿಸಾಕಿದ ಹೆಂಗಸರ ಕತೆಯೋ? ಯಾವ ಕತೆಗಳು? ಮರ ಹುಟ್ಟಿ ಮರ ಸತ್ತಂತೆ ಬದುಕಿದವರಲ್ಲಿ ಕತೆಗಳೇ ಇರುವುದಿಲ್ಲ. ಅವರು ಸತ್ತ ಮೇಲೆ ಜನರ ಸ್ಮೃತಿಯಲ್ಲಿಯೂ ಇರುವುದಿಲ್ಲ. ಅವರು ಒಂದು ವೇಳೆ ಪ್ರೇತಗಳಾದರೆ ಆರಾಮವಾಗಿ ಜಲಕ್ರೀಡೆಯಾಡುತ್ತಾ ದಿನ ಕಳೆದಾವೆಯೇ ಹೊರತು ನನ್ನಂತ ತಿಕ್ಕಲು ಹುಡುಗನಿಗೆ ಕತೆ ಹೇಳಲು ಬೆನ್ನು ಹತ್ತಲಿಕ್ಕಿಲ್ಲ! ಕತೆಗಳಿಲ್ಲದ ಬದುಕು ಬದುಕೇ ಇಲ್ಲ&#8230; ಸುಖಾಂತ್ಯವೋ&#8230; ದುಃಖಾಂತ್ಯವೋ&#8230; ಏನೋ ಒಂದು!</p>



<p>ಕಾಡಿನ ದಾರಿಯನ್ನು ಸ್ವಲ್ಪ ದೂರ ಯಾರೋ ಕಡಿದು ಸಪಾಟು ಮಾಡಿದಂತೆ ತೋರುತ್ತಿತ್ತು. ಎದುರಿನಿಂದ ಒಂದು ಹೆಂಗಸು ಮತ್ತು ಗಂಡಸು ತರಾತುರಿಯಲ್ಲಿ ನಡೆದು ಬರುತ್ತಿದ್ದರು. ಅಸ್ವಸ್ಥನಂತೆ ಕಂಡುಬರುತ್ತಿದ್ದ ಗಂಡಸಿಗೆ ಹೆಂಗಸಿನಷ್ಟು ವೇಗವಾಗಿ ನಡೆಯಲು ಸಾಧ್ಯವಿರಲಿಲ್ಲ. ನಮ್ಮನ್ನು ನೋಡಿದಂತೆ ಹೆಂಗಸು ಸಂಭ್ರಮದಿಂದ ಅಮ್ಮನ ಕೈ ಹಿಡಿದು ಮಾತನಾಡಲು ಶುರು ಮಾಡಿದರು. ಕುಶಲೋಪರಿ ಮಾತುಗಳ ನಂತರ &#8220;ಜೋಯಿಸರಲ್ಲಿಗೆ ಹೋಗುತ್ತಿದ್ದೇವೆ!&#8221; ಎಂದು ಇಬ್ಬರೂ ಮುಂದುವರಿದರು!</p>



<p>&#8220;ಮುವತ್ತಮೂರು ವರ್ಷಗಳಾದವು. ಈ ಹೆಂಗಸಿಗೆ ನೆಮ್ಮದಿಯ ರಾತ್ರಿಗಳೇ ಸಿಗಲಿಲ್ಲ. ಇವರಿಬ್ಬರ ಮದುವೆ ಮದುವೆಯಾಗಿ ಮೂರೇ ಮೂರು ದಿನಗಳು ಆಗಿವೆ. ಗಂಡಿನ ಮನೆಯಿಂದ ಹೆಣ್ಣಿನ ಮನೆಗೆ ತುಪ್ಪ ತೆಗೆದುಕೊಂಡು ಹೋಗುವ ಕಾರ್ಯ ಕೂಡ ಆಗಿಲ್ಲ. ಒಂದು ರಾತ್ರಿ ಇದ್ದಕ್ಕಿದ್ದಂತೆ ಯಾರಿಗೂ ಸುಳಿವು ನೀಡದೆ ಈ ಗಂಡಸಿನ ತಾಯಿ&#8230; ನನಗೆ ಅತ್ತೆಯಾಗಬೇಕು, ಮನೆ ಬಿಟ್ಟು ಹೋದರು. ಮಾರನೇ ದಿನ ಊರಿನ ಇಂಚು ಇಂಚಿನಲ್ಲಿ ಹುಡುಕಲಾಯಿತು. ಮದುವೆಗೆ ಬಂದು ಉಳಿದುಕೊಂಡಿದ್ದ ಕೆಲವು ನೆಂಟರೆಲ್ಲಾ ತೋಟ, ನದಿ, ಕಾಡು ಬಿಡದೆ ಎಲ್ಲಾ ಕಡೆ ಹುಡುಕಿದರು. ಅವತ್ತು ರಾತ್ರಿ ನಾನೂ ಇದ್ದೆ. ಇದ್ದಕ್ಕಿದ್ದ ಹಾಗೆ ಹಸಿ ಹಸಿ ಮದುಮಗ ʼಅಯ್ಯೋ&#8230; ಅಮ್ಮ ತೋಜುವೆರೋ&#8230; ಅಯ್ಯೋ!ʼ ಎಂದು ಅರೆಬಾಯಿ ಹಾಕಿ ಎರಡೂ ಕೈಗಳನ್ನೂ ತಲೆಗೆ ಹೊಡದುಕೊಂಡು ಅಂಗಳಕ್ಕೆ ಓಡಿ ತೋಟದ ತುಂಬಾ ಓಡಿದ. ನಾಲ್ಕೈದು ಜನ ಹಿಂದೆಯೇ ಓಡಿದರು. ಹಿಡಿದು ಕೈ ಕಾಲು ಕಟ್ಟಿ ಅಂಗಳದಲ್ಲಿ ಹೊತ್ತು&nbsp; ಹಾಕಿದರು.&#8221;</p>



<p>&#8220;ಅವತ್ತು ತಲೆಗೆ ಆದ ಆಘಾತ ಇನ್ನೂ ಹಾಗೇ ಇದೆ. ಮೂರು ದಿನಗಳ ನಂತರ ಸಂಜೆ ಈ ದೋಣಿ ನಿಲ್ಲುವ ಜಾಗದಲ್ಲಿ ನೀರು ತುಂಬಿ ವಿಕಾರವಾಗಿ ಊದಿಕೊಂಡ ಕೊಳೆತ ಮಾಂಸದ ಮುದ್ದೆಯೊಂದು ಬಿದ್ದುಕೊಂಡಿತ್ತು. ಮೈ ತುಂಬಾ ಏಡಿಗಳು ಹರಿದಾಡುತ್ತಿದ್ದವು. ಎರಡು ಏಡಿಗಳಂತೂ ಹೊರಗೆ ಕಿತ್ತು ಬಂದಿದ್ದ ಕಣ್ಣ ಗುಡ್ಡೆಯನ್ನು ಕುಕ್ಕಿ ತಿನ್ನುತ್ತಿದ್ದವು. ಇನ್ನೊಂದು ಕಣ್ಣು ಅಲ್ಲಿ ಇರಲಿಲ್ಲವೇನೋ ಎಂಬಂತೆ ಆಳವಾಗಿ ಗುಂಡಿಯಂತಾಗಿ ನೀರಿನಲ್ಲಿ ಕೊಳೆದು ಹೋಗಿರುವ ಮಾಂಸ ಹೊರಗೆ ಕಾಣುತ್ತಿತ್ತು. ಹೊಟ್ಟೆ ಮತ್ತು ಎರಡೂ ತೊಡೆಗಳಲ್ಲಿ ಹಿಂಡು ಹಿಂಡಾಗಿ ಏಡಿಗಳು ಕುಕ್ಕಿ ಕುಕ್ಕಿ ತಿನ್ನುತ್ತಿದ್ದವು. ಅಷ್ಟು ಭಯಂಕರ ಗಾತ್ರದ ಏಡಿಗಳನ್ನು ನಾನು ಹಿಂದೆಂದೂ ನೋಡಿರಲೇ ಇಲ್ಲ! ಒಂದು ಕೈಯಲ್ಲಿ ಬೆರಳುಗಳೇ ಇರಲಿಲ್ಲ, ಮತ್ತೊಂದರಲ್ಲಿ ಮೂರಿದ್ದವು!&#8221;</p>



<p>&#8220;ಹೆಣದ ಮೈ ತುಂಬಾ ನೊಣಗಳು ಗುಂಯ್‌ಗುಡುತ್ತಾ ಹಾರುತ್ತಿದ್ದವು. ಗವ್ವನೆ ಹೆಣದ ಮೈಯಿಂದ ಎದ್ದ ಹೊಲಸು ವಾಸನೆ ಗಾಳಿಯ ತುಂಬೆಲ್ಲಾ ಸೇರಿ ಸಂಜೆಯ ಮಯ ಮಯ ಕತ್ತಲಿಗೆ ಭಯಾನಕತೆಯನ್ನು ತಂದಿತ್ತು. ಕೆಲವರು ಹೊಟ್ಟೆ ಕಿವುಚಿದಂತಾಗಿ ವಾಂತಿ ಮಾಡಲು ಓಡಿದರು. ನನ್ನ ಮೂಗಿನ ವಾಸನೆಯ ಪ್ರಜ್ಜೆ ಸತ್ತೇ ಹೋಗಿತ್ತೇನೋ, ಹೆಣದ ವಾಸನೆ ಮೂಗಿಗೆ ಬಡಿದರೂ ಅಸಹ್ಯವೇ ಆಗಲಿಲ್ಲ. ನಾನೇ ಅಲ್ಲಿ ಸತ್ತು ಕೊಳೆತು ಮಲಗಿದ್ದೇನೆ ಎಂಬಂತೆ ತೋರಿ ಬೆಚ್ಚಿ ಬಿದ್ದೆ!&#8221;</p>



<p>&#8220;ಕೆಲವು ಗಂಡಸರು ಈ ವಾಸನೆ ಬರುತ್ತಿದ್ದರೂ ಏನೂ ಆಗದವರಂತೆ ಹೆಣವನ್ನು ಕೋಲಿನಿಂದ ದೂಡುತ್ತಾ ತಾವು ತಂದಿದ್ದ ಚಾಪೆಯಲ್ಲಿ ಪ್ಲಾಸ್ಟಿಕ್‌ಸುತ್ತಿ ಮೂಟೆ ಮಾಡಿದರು. ಕೋಲುಗಳಿಂದ ಚಟ್ಟವೊಂದನ್ನು ಮಾಡಿ ಹೆಣವನ್ನು ಮಲಗಿಸಿ ಹೊತ್ತುಕೊಂಡು ಮನೆಯ ಕಡೆ ಸಾಗಿದರು. ವಾಸನೆ ಹಾಗೇ ಗಾಳಿಯಲ್ಲಿ ಊರ ತುಂಬೆಲ್ಲಾ ಹರಡಲಾರಂಭಿಸಿತು. ಮತಿ ಕಳೆದುಕೊಂಡು ಬಿದ್ದಿದ್ದ ಮದುಮಗನನ್ನು ಹೊತ್ತುಕೊಂಡು ಮುಸಿಮುಸಿ ಅಳುತ್ತಾ ಮನೆಯವರು, ನೆಂಟರಿಷ್ಟರು ಹೆಣವನ್ನು ಹಿಂಬಾಲಿಸಿದರು. ಬಾಯಿ ತೆರೆದು ಅಳುವುದಕ್ಕೂ ಅಸಾಧ್ಯವಾಗಿತ್ತು. ಉಸಿರು ತೆಗೆಯಲು ಬಾಯಿ ತೆರೆದರೆ ಹೆಣದ ವಾಸನೆ ಬಾಯಿಯನ್ನು ಹಸಿ ಹಸಿಯಾಗಿಯೇ ಹೊಕ್ಕು ಹೆಣವೇ ಬಾಯಿಯಿಂದ ಗಂಟಲ ಮೂಲಕ ಹೊಟ್ಟೆಯನ್ನು ಸೇರಿದಂತಾಗುತ್ತಿತ್ತು!&#8221;</p>



<p>&#8220;ಎಲ್ಲಾದರೂ ಆ ಕೊಳೆತ ಮಾಂಸದ ಮುದ್ದೆ ಎದ್ದು ನಡೆಯಲು ಶುರು ಮಾಡಿದರೆ&#8230; ಅಹ್&#8230; ನೆನೆದುಕೊಂಡಾಗ ನನ್ನ ಮೈ ಜುಮ್ಮೆಂದು ಶೀತಗಟ್ಟಿತು! ಅಂಗಳಕ್ಕೆ ಬಂದಾಗ ಮದುಮಗನಿಗೆ ಮತಿ ಬಂದು ಹೆಣದ ಮೇಲೆ ಬಿದ್ದು ಅಳುವುದಕ್ಕೆ ಮುಂದಾದಾಗ ಕೆಲವರು ಗಟ್ಟಿಯಾಗಿ ಹಿಡಿದು ತಡೆದರು. ಅಂಗಳದಲ್ಲಿ ಎರಡು ನಿಮಿಷಗಳ ಕಾಲ ಹೆಣವನ್ನು ಇಟ್ಟು ಆಗಾಗಲೇ ಸಿದ್ದ ಪಡಿಸಿದ್ದ ಕಾಟದ ಕಡೆಗೆ ಹೊತ್ತುಕೊಂಡು ಹೋದರು. ಹೆಣವನ್ನು ಕಾಟದ ಮೇಲೆ ಮಲಗಿಸಿ ಯಾವ ವಿಧಿಗಳನ್ನೂ ಮಾಡದೆ ಬೆಂಕಿಯಿಟ್ಟರು!&#8221;</p>



<p>&#8220;ಒದ್ದೆಯಾಗಿದ್ದ ಕಟ್ಟಿಗೆ ಉರಿಯಲು ತೆಂಗಿನ ಗರಿಯನ್ನು ಹರಡಲಾಯಿತು. ವಾಸನೆ ಬರುತ್ತಿರುವ ಈ ಹೆಣ ಒಮ್ಮೆ ಸುಟ್ಟು ಬೂದಿಯಾಗಲಿ ಎಂದು ಸೀಮೆಎಣ್ಣೆಯನ್ನೂ ಸುರಿದರು! ಹಿಂದಿನ ದಿನ ಮಳೆ ಬಂದು ಒದ್ದೆಯಾಗಿದ್ದ ಕಟ್ಟಿಗೆಗಳಿಗೆ ಅಷ್ಟು ಸುಲಭದಲ್ಲಿ ಬೆಂಕಿ ಹತ್ತುವುದಿಲ್ಲ. ಕಟ್ಟಿಗೆಯ ಮೇಲೆ ಬಿಳಿ ಕೋರ ಬಟ್ಟೆಯ ರಾಶಿಯನ್ನೂ, ಅಗರ ಬತ್ತಿಯ ರಾಶಿ ಕಟ್ಟುಗಳನ್ನೂ, ಗಂಧದ ಹಾರ ಎಂದು ಕರೆಯುವ ಯಾವುದೋ ಮರದಿಂದ ಮಾಡಿದ ಮಾಲೆಗಳನ್ನೂ ಹಾಕಿ ಮತ್ತೆ ಮತ್ತೆ ಬೆಂಕಿ ಕೊಟ್ಟರು!&#8221;</p>



<p>&#8220;ಮಾನವಾಕಾರದ ಗಾಢ ಬಣ್ಣದ ಹೊಗೆಯೊಂದು ಕಟ್ಟಿಗೆಗಳ ಸಂದಿನಿಂದ ಹೇಗೋ ಮೇಲೆ ಬಂದು ಆಕಾಶದ ಕಡೆಗೆ ಚಲಿಸಲಾರಂಭಿಸಿತು. ಕೊಳೆತು ಮಾಂಸದ ಮುದ್ದೆಯಾಗಿದ್ದ ಹೆಣವೇ ಕಾಟದಿಂದ ಎದ್ದು ಆಕಾಶದ ಕಡೆಗೆ ಚಲಿಸಿದಂತೆ! ನಾರಿ ಹೋಗಿರುವ ಹೆಣವನ್ನು ಸುಟ್ಟಾಗ ಬರುವ ಉರಿ ಉರಿ ವಾಸನೆ ಸೇರಿದವರ ಮೂಗಿನ ಹೊಳ್ಳೆಗಳ ಮೂಲಕ ದೇಹವನ್ನು ಹೊಕ್ಕು ಅಸಹನೀಯವಾದ ಸ್ಥಿತಿಯನ್ನು ತಂದಿತ್ತು. ಕೆಲವರು ವಾಂತಿ ಮಾಡಿದರು. ಕೆಲವರು ಮೂಗಿಗೆ ಬಟ್ಟೆ ಸುತ್ತಿಕೊಂಡು ಮನೆಗೆ ಓಡಿದರು. ಆದರೆ ಹೆಣ ಸುಡುತ್ತಿದ್ದಂತೆ ಅದರ ದೇಹದಲ್ಲಿದ್ದ ನೀರು ಕಾಟದಿಂದ ಹಾಗೇಯೇ ಇಳಿದು ನೆಲದಲ್ಲಿ ಮಡುಗಟ್ಟಿತ್ತು. ಮಧ್ಯೆ ಮಧ್ಯೆ ಟುಷ್&#8230; ಎಂಬ ಸದ್ದು! ಅದರ ಜೊತೆ ಜೊತೆಗೆ ಹುಟ್ಟುವ ಕಮಟು ವಾಸನೆ&#8230; ಇಡೀ ಊರಿಗೇ ವ್ಯಾಪಿಸಿತು!&#8221;</p>



<p>&#8220;ನನಗಂತೂ ಇದ್ಯಾವುದೂ ಅಸಹ್ಯ ಅನ್ನಿಸಲೇ ಇಲ್ಲ. ಏಕೆಂದರೆ ಅದೊಂದು ಕೇವಲ ಹೆಣ&#8230; ಕೇವಲ ಹೆಣವಷ್ಟೇ!&#8221;</p>



<p>ಅಮ್ಮನ ಬಾಯಿಂದ ಯಾವ ಅಳುಕು ಅಂಜಿಕೆಗಳೂ ಇಲ್ಲದೆ ಹೊರಬರುತ್ತಿದ್ದ ಮಾತುಗಳು ನನ್ನನ್ನು ಒಮ್ಮೆ ಕಣ್ಣು ಕತ್ತಲಾಗುವಂತೆ ಮಾಡಿತ್ತು. ಕಾಡಿನ ದಾರಿಯಲ್ಲಿ ನಡೆಯುತ್ತಾ&#8230;&#8221;ಅದೋ&#8230; ಅವರನ್ನು ಸುಟ್ಟದ್ದು ಅಲ್ಲಿ!&#8221; ಎಂದಾಗ ಕೊಳೆತ ಹೆಣದ ವಾಸನೆ ನನ್ನ ಮೂಗಿಗೆ ಬಡಿದಂತಾಗಿ ವಾಕರಿಕೆ ಬಂದಂತಾಯ್ತು! ಇನ್ನೂ ಆ ವಾಸನೆ ಈ ಗಾಳಿಯಲ್ಲಿಯೇ ಇದೆ ಅನ್ನಿಸಿತು!</p>



<p>&#8220;ಅವತ್ತು ಈ ಮನುಷ್ಯನಿಗೆ ಸುರುವಾದ ಮಾನಸಿಕ ರೋಗ ಇನ್ನೂ ಸರಿಯಾಗಿಲ್ಲ. ಒಮ್ಮೊಮ್ಮೆ ಸರಿಯಾಗಿರುತ್ತಾರೆ. ಇದ್ದಕ್ಕಿದ್ದಂತೆ ʼಓಯ್&#8230; ಓ&#8230; ಅಲ್ಲಿ ನೋಡು, ಅಮ್ಮ ಕೂತಿದ್ದಾರೆ!” ಎಂದು ನಮ್ಮನ್ನು ಕರೆದು ಏನೂ ಇಲ್ಲದ ಕಡೆಗೆ ಬೆರಳು ತೋರಿಸುತ್ತಿದ್ದರು. ಮನೆಯ ಅಟ್ಟದ ಮೇಲೆ ಕೈ ತೋರಿಸಿ ʼಇಕೋ&#8230; ಅಲ್ಲಿ ಅಮ್ಮ ಅಟ್ಟದ ಮೇಲೆ!ʼ ಎನ್ನುತ್ತಿದ್ದರು. ನನಗೇನು ದಿಗಿಲಾಗುತ್ತಿರಲಿಲ್ಲ. ಆದರೆ ಅವರ ಹೆಂತಿಯನ್ನು ನೋಡುವಾಗ ವ್ಯಥೆಯಾಗುತ್ತಿತ್ತು! ಯಾರೂ ಮನೆಯಲ್ಲಿ ಇಲ್ಲದ ಸಮಯದಲ್ಲಿ ಇದ್ದಕ್ಕಿದ್ದಂತೆ ಅಮ್ಮಾ&#8230; ಅಮ್ಮಾ&#8230; ಎಂದು ಕೆರೆಯುತ್ತಾ ಇವರು ಕೆರೆ, ಬರೆ ನೋಡದೆ ಓಡುವಾಗ ಅವರ ಹಿಂದೆಯೇ ಓಡುವ ಹೆಂತಿ ಯಾವ ಪಾಪಕ್ಕಾಗಿ ಈ ಕಷ್ಟ ಅನುಭವಿಸುತ್ತಿದ್ದಾರೋ! ಮೂವತ್ತಮೂರು ವರ್ಷ! ಯಾವ ಕರ್ಮಕ್ಕೆ ನಾಳೆ ಸರಿಯಾದೀತೋ ಎಂಬ ನಂಬಿಕೆಯಿಂದ ದಿನ ದೂಡುತ್ತಾ ಇಡೀ ಯೌವ್ವನವನ್ನು ಹೀಗೆ ಬದುಕಿದರೋ&#8230;!&#8221; ಎಂದಾಗ ಅಮ್ಮನ ಮಾತಿನಲ್ಲಿ ತುಂಬಾ ತೂಕದ ನೋವಿತ್ತು. ಬಹುಶಃ ಗಂಡಸರಿಗೆ ಈ ವ್ಯಥೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವಷ್ಟು!</p>



<p>ದೋಣಿ ಹೋಗಿ ತೂಗುವ ಸೇತುವೆ ಬಂದಿದೆ. ಜನರು&#8230; ಅಗಲೇ ಹೇಳಿದಂತೆ ನದಿಯ ನೀರಿನಲ್ಲಿ ಪಾದಗಳನ್ನಿಟ್ಟು ಮೀನುಗಳ ಜೊತೆಗೆ ಮಾತನಾಡುವುದನ್ನು ನಿಲ್ಲಿಸಿದ್ದಾರೆ. ಪೀಡೆಗಳ ಓಯ್&#8230;ಗೆ ಓಗೊಟ್ಟು ತಿರುಗಿ ನೋಡಲು ಹಿಂದೆಯೂ ಯಾರೂ ಇರಲಿಲ್ಲ, ಈಗಲೂ ಯಾರೂ ಇಲ್ಲ. ಅಡಿಕೆಗೆ ಕೆಜಿಗೆ ಐನೂರು ದಾಟುವಾಗ, ರಬ್ಬರ್‌ಗೆ ಒಳ್ಳೆಯ ಬೆಲೆ ಬಂದಾಗ ಕೊಂಡ ಸೆಕೆಂಡ್‌ಹ್ಯಾಂಡ್‌ಕಾರುಗಳು ಮನೆಗಳ ಮುಂದೆ ನಿಂತಿದ್ದಾವೆ. ಅಂಗಳದ ತುಂಬೆಲ್ಲಾ ಕೋಳಿಗಳು ಹಿಕ್ಕೆ ಹಾಕುತ್ತವೆ ಇಲ್ಲಾ ನಾಗರಹಾವುಗಳು ಬರುತ್ತಾವೆ ಎಂದು ಕೋಳಿ ಸಾಕುವುದನ್ನೇ ನಿಲ್ಲಿಸಿದ್ದಾರೆ, ಕೊಳೆ ರೋಗ ಬಂದ ಅಡಿಕೆ ಮರಗಳ ಬುಡದಲ್ಲಿ ಕರಟಿ ಹೋದ ಹಿಂಗಾರಗಳು ಹಾಗೂ ಹಾಳಾದ ಅಡಿಕೆ ಕಾಯಿಗಳು ಬಿದ್ದಿವೆ, ಮಕ್ಕಳು ಟೆರೇಸ್‌ಮೇಲೆ ಹತ್ತಿ ಮೊಬೈಲ್‌ನಲ್ಲಿ ಏನೋ ಮಾಡುತ್ತಿರುತ್ತಾರೆ, ಬ್ರಿಸ್ಟಾಲ್‌ಸೇದುತ್ತಿದ್ದ ಮಾವ ಮಾತ್ರ ಇದ್ದಕ್ಕಿದ್ದಂತೆ ಗಣೇಶ್‌ಬೀಡಿ ಸೇದಲು ಸುರು ಮಾಡಿದ್ದರು. ಯಾವುದೂ ಒಂದಕ್ಕೊಂದು ಸಂಬಂಧ ಇಲ್ಲವೆಂಬಂತೆ ತೋರಿದರೂ ಇವೆಲ್ಲವೂ ಪರಸ್ಪರ ಮಾತಿಗಿಳಿಯುತ್ತವೆ ಎಂದೆನಿಸುತ್ತಿತ್ತು! &nbsp;</p>



<p>ನಾನೂ ಅಷ್ಟೇ&#8230; ತಮ್ಮವರನ್ನು ಹಿಂಸಿಸಿ ಶೋಷಿಸಿದ ಜಮೀನ್ದಾರನ ಮಕ್ಕಳ ಅಂಡು ತೊಳೆಯುವ ಅವಕಾಶಕ್ಕಾಗಿ ಕಾಯುತ್ತಾ ಕುಳಿತ ಹೊಸ ಬಗೆಯ ಗುಲಾಮರ ನಡುವೆ ಪ್ರಕ್ಷುಬ್ಧತೆಯನ್ನು ಕಾಯ್ದುಕೊಂಡು ಹುಚ್ಚನಂತಿದ್ದೂ ಶಾಂತ ಕಣ್ಣುಗಳಿಂದ ಸರ್ವಾಧಿಕಾರಿಯೊಬ್ಬ ಸತ್ತು ಮತ್ತೊಬ್ಬ ಬರುವುದನ್ನು ಕಾಯುತ್ತಿದ್ದೆ!</p>
]]></content:encoded>
					
		
		
			</item>
	</channel>
</rss>
