<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>childrens &#8211; Peepal Media</title>
	<atom:link href="https://peepalmedia.com/tag/childrens/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 14 Nov 2022 12:43:44 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>childrens &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಸಂಕಷ್ಟ ಕಾಲದಲ್ಲಿ ದೇಶವನ್ನು ಮುನ್ನಡೆಸಿದ ನೆಹರೂ</title>
		<link>https://peepalmedia.com/shrini-coloumn-on-nehru-children-day-special/</link>
		
		<dc:creator><![CDATA[Peepal Media]]></dc:creator>
		<pubDate>Mon, 14 Nov 2022 12:43:41 +0000</pubDate>
				<category><![CDATA[ಅಂಕಣ]]></category>
		<category><![CDATA[childrens]]></category>
		<category><![CDATA[childrenʼs day]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[nehru]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=15528</guid>

					<description><![CDATA[ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ನೆನಪನ್ನು ಜನಮಾನಸದಿಂದ ಅಳಿಸಿಹಾಕುವ ಪ್ರಯತ್ನ ದೇಶದಲ್ಲಿ ಇನ್ನಿಲ್ಲದಂತೆ ನಡೆಯುತ್ತಿದೆ. ನೆಹರೂ ಅವರ ೧೩೩ನೆಯ ಜನ್ಮದಿನದ ಹಿನ್ನೆಲೆಯಲ್ಲಿ ಚಾರಿತ್ರಿಕ ದಾಖಲೆಗಳ ಮೂಲಕ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ಶ್ರೀನಿವಾಸ ಕಾರ್ಕಳ ʼಶ್ರೀನಿ ಕಾಲಂʼ ನಲ್ಲಿ ನೋಡಿದರೆ ಪ್ರಾಥಮಿಕ ಶಾಲಾ ಓದನ್ನೂ ಪೂರ್ತಿ ಮಾಡಿರಲಿಕ್ಕಿಲ್ಲ. ಆದರೆ, ಆತ ನೆಹರೂ ಬಗ್ಗೆ ಎಲ್ಲವನ್ನೂ ತಿಳಿದಂತೆ ಮಾತನಾಡುತ್ತಿದ್ದ! ದೇಶ ವಿಭಜನೆ, ಇಂದಿನ ಬಡತನ, ಆರೋಗ್ಯ ಕ್ಷೇತ್ರದ ಸಮಸ್ಯೆ, ಆರ್ಥಿಕ ಸಮಸ್ಯೆ, ಗಡಿ ಸಮಸ್ಯೆ, [&#8230;]]]></description>
										<content:encoded><![CDATA[
<h4 class="has-text-align-center wp-block-heading"><strong>ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ನೆನಪನ್ನು ಜನಮಾನಸದಿಂದ ಅಳಿಸಿಹಾಕುವ ಪ್ರಯತ್ನ ದೇಶದಲ್ಲಿ ಇನ್ನಿಲ್ಲದಂತೆ ನಡೆಯುತ್ತಿದೆ. ನೆಹರೂ ಅವರ ೧೩೩ನೆಯ ಜನ್ಮದಿನದ ಹಿನ್ನೆಲೆಯಲ್ಲಿ ಚಾರಿತ್ರಿಕ ದಾಖಲೆಗಳ ಮೂಲಕ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ಶ್ರೀನಿವಾಸ ಕಾರ್ಕಳ ʼಶ್ರೀನಿ ಕಾಲಂʼ ನಲ್ಲಿ</strong></h4>



<p><br>ನೋಡಿದರೆ ಪ್ರಾಥಮಿಕ ಶಾಲಾ ಓದನ್ನೂ ಪೂರ್ತಿ ಮಾಡಿರಲಿಕ್ಕಿಲ್ಲ. ಆದರೆ, ಆತ ನೆಹರೂ ಬಗ್ಗೆ ಎಲ್ಲವನ್ನೂ ತಿಳಿದಂತೆ ಮಾತನಾಡುತ್ತಿದ್ದ! ದೇಶ ವಿಭಜನೆ, ಇಂದಿನ ಬಡತನ, ಆರೋಗ್ಯ ಕ್ಷೇತ್ರದ ಸಮಸ್ಯೆ, ಆರ್ಥಿಕ ಸಮಸ್ಯೆ, ಗಡಿ ಸಮಸ್ಯೆ, ಒಟ್ಟಿನಲ್ಲಿ ದೇಶದ ಎಲ್ಲ ಸಮಸ್ಯೆಗಳಿಗೂ ನೆಹರೂ ಕಾರಣ ಎನ್ನುತ್ತಾ, ನೆಹರೂ ಬಗ್ಗೆ ಮಾನಹಾನಿಕರವಾಗಿ ಬರೆಯುವುದು, ಅವಾಚ್ಯ ಪದಗಳಿಂದ ನಿಂದಿಸುವುದು ಎಲ್ಲ ಮಾಡುತ್ತಿದ್ದ. ಸಹಿಸಲಾಗದೆ, “ನೀನು ನೆಹರೂ ಅವರ ಬಗೆಗಿನ ಅಥವಾ ನೆಹರೂ ಬರೆದ ಯಾವುದಾದರೂ ಪುಸ್ತಕ ಓದಿದ್ದೀಯಾ?” ಎಂದು ತಾಳ್ಮೆಯಿಂದ ಕೇಳಿದೆ. “ನಾನು ನೆಹರೂ ಬಗ್ಗೆ ಏನನ್ನೂ ಓದಿಯೂ ಇಲ್ಲ, ಓದುವುದೂ ಇಲ್ಲ” ಎಂಬ ಸಿಟ್ಟಿನ ಉತ್ತರ ತಕ್ಷಣ ಬಂತು. ಇದು ಇಂದಿನ ಹೊಸ ಕಾಲದ ಹುಡುಗರ ಮನಸ್ಥಿತಿಯ ಒಂದು ರೂಪಕದಂತಿದೆ.<br>ನನಗೆ ಆತನ ಬಗ್ಗೆ ಸಿಟ್ಟು ಬರಲಿಲ್ಲ, ಬೇಸರವೂ ಅಗಲಿಲ್ಲ; ಬದಲಿಗೆ ಮರುಕ ಹುಟ್ಟಿತು. ಈವತ್ತು ನೆಹರೂ ಅವರನ್ನು ದುರುಳೀಕರಿಸುವ ಮತ್ತು ಅವರ ತೇಜೋವಧೆ ಮಾಡುವುದಕ್ಕಾಗಿಯೇ ಬಹುದೊಡ್ಡ ಒಂದು ‘ಪ್ರೊಪಗಾಂಡಾ ಮಶಿನರಿ’ ದೇಶದಾದ್ಯಂತ ದಶಕ ದಶಕಗಳಿಂದ ಕೆಲಸ ಮಾಡುತ್ತಿದೆ. ಈಗ ಪ್ರಭುತ್ವದ ಆಶೀರ್ವಾದ ಮತ್ತು ಆರ್ಥಿಕ, ಸಂಘಟನಾತ್ಮಕ ಸರ್ವ ರೀತಿಯ ಬೆಂಬಲ ಇರುವುದರಿಂದ ಅದರ ಕಾರ್ಯ ಇನ್ನಷ್ಟು ವೇಗ ಪಡೆದುಕೊಂಡಿದೆ. ವಾಟ್ಸಪ್, ಫೇಸ್ ಬುಕ್, ಟ್ವಿಟರ್ ನಂತಹ ಸಾಮಾಜಿಕ ಮಾಧ್ಯಮಗಳು ಬಂದ ಮೇಲೆ ಮನೆ ಮನೆಗಳಿಗೆ, ಮನ ಮನಗಳಿಗೆ ಸುಳ್ಳುಗಳನ್ನು ತಲಪಿಸುವ ಕೆಲಸ ಭರದಿಂದ ಸಾಗಿದೆ. ಎಳೆಯ ಮನಸುಗಳು ಏನನ್ನೂ ಓದದೆ, ಆಲೋಚಿಸದೆ, ವಿಮರ್ಶಿಸದೆ ಎಲ್ಲವನ್ನೂ ಪರಮ ಸತ್ಯ ಎಂಬಂತೆ ಒಪ್ಪಿಕೊಳ್ಳುತ್ತಿವೆ. ಆ ಪರಮ ಸುಳ್ಳನ್ನು ಮತ್ತೆ ನೂರಾರು ಮಂದಿಗೆ ಹಂಚುತ್ತಿವೆ. ನೆಹರೂ ‘ಅವರೊಂದಿಗೆ ಮಲಗಿದ, ಇವರೊಂದಿಗೆ ಮಲಗಿದ’ ಅನ್ನುತ್ತವೆ, ಗಾಂಧಿ ‘ಕಳ್ಳ’ ಎನ್ನುತ್ತವೆ! ನೆಹರೂ ಯಾರೊಂದಿಗೆ ಮಲಗಿದರೇನು, ಅದು ಅವರ ಖಾಸಗಿ ವಿಚಾರ, ನಮಗೆ ಅವರ ಕೆಲಸ ಮುಖ್ಯ ಎನ್ನುವ ವಿಶಾಲ ಮನಸು ಯಾರಿಗೂ ಇಲ್ಲವಾಗಿದೆ. ನಮ್ಮ ಸಿದ್ಧಾಂತಕ್ಕೆ ಅವರು ಸಲ್ಲದವರೋ, ತೇಜೋವಧೆ ಶುರು ಮಾಡುವುದೇ; ಗಾಂಧಿಯಾದರೇನು, ನೆಹರೂ ಆದರೇನು? ಒಟ್ಟಿನಲ್ಲಿ ಭಯಂಕರ ಕೃತಘ್ನ ಭಾರತವೊಂದು ಸೃಷ್ಟಿಯಾಗಿದೆ.</p>


<div class="wp-block-image">
<figure class="aligncenter size-full"><img fetchpriority="high" decoding="async" width="875" height="656" src="https://peepalmedia.com/wp-content/uploads/2022/11/Prime-Minister-Nehru.jpg" alt="" class="wp-image-15531" srcset="https://peepalmedia.com/wp-content/uploads/2022/11/Prime-Minister-Nehru.jpg 875w, https://peepalmedia.com/wp-content/uploads/2022/11/Prime-Minister-Nehru-300x225.jpg 300w, https://peepalmedia.com/wp-content/uploads/2022/11/Prime-Minister-Nehru-768x576.jpg 768w, https://peepalmedia.com/wp-content/uploads/2022/11/Prime-Minister-Nehru-150x112.jpg 150w, https://peepalmedia.com/wp-content/uploads/2022/11/Prime-Minister-Nehru-696x522.jpg 696w" sizes="(max-width: 875px) 100vw, 875px" /></figure></div>


<p><strong>ಜಗತ್ತು ನಿದ್ರಿಸುವಾಗ ಭಾರತ ಎದ್ದು ಕುಳಿತಿತು</strong></p>



<p><br>ದೇಶ ಸ್ವತಂತ್ರಗೊಳ್ಳತ್ತಿರುವ ರಾತ್ರಿ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಒಂದು ಚಾರಿತ್ರಿಕ ಭಾಷಣ ಮಾಡಿದ್ದರು. ಅದರಲ್ಲಿ &#8211; “ಹಲವು ವರ್ಷಗಳ ಹಿಂದೆ ನಾವು ಒಂದು ಪ್ರತಿಜ್ಞೆಯನ್ನು ಮಾಡಿದ್ದೆವು. ಇಂದು ಆ ಪ್ರತಿಜ್ಞೆಯು ಸಂಪೂರ್ಣ ಸಫಲವಾಗುವ ಸಮಯ ಬಂದಿದೆ ಈ ಮಧ್ಯರಾತ್ರಿಯ ಸಮಯದಲ್ಲಿ, ಇಡೀ ಜಗತ್ತೇ ನಿದ್ರಿಸುತ್ತಿರುವಾಗ, ಭಾರತವು ಸ್ವತಂತ್ರಗೊಂಡು ಹೊಸ ಜೀವ ಪಡೆಯುತ್ತಿದೆ. ಈಗ ಬಂದಿರುವ ಕ್ಷಣವು ಇತಿಹಾಸದಲ್ಲಿ ಒಂದು ಅಪರೂಪದ ಕ್ಷಣ. ಹಳೆಯ ಯುಗದಿಂದ ನವಯುಗಕ್ಕೆ ನಾವು ಕಾಲಿಡುತ್ತಿದ್ದೇವೆ. ಬಹುವರ್ಷಗಳ ಕಾಲ ಹತ್ತಿಕ್ಕಲ್ಪಟ್ಟಿದ್ದ ದೇಶವೊಂದರ ಚೇತನವು ಪುನಃ ಜೀವವನ್ನು ಪಡೆಯುತ್ತಿದೆ. ಈ ಅಮೂಲ್ಯ ಕ್ಷಣದಲ್ಲಿ ನಾವು ಭಾರತಾಂಬೆಗೆ, ಇಲ್ಲಿನ ಜನರಿಗೆ ಮತ್ತು ಮಾನವೀಯತೆಯ ಪ್ರತಿಷ್ಠಾಪನೆಗೆ ನಮ್ಮ ಜೀವನವನ್ನು ಸಮರ್ಪಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಿದ್ದೇವೆ.<br>ಹೋರಾಟದ ಯುಗವೊಂದು ಮುಗಿದು ಹೊಸ ಇತಿಹಾಸವೊಂದು ನಮ್ಮ ಮುಂದೆ ತೆರೆದುಕೊಳ್ಳಲಿದೆ. ಇನ್ನು ಮುಂದೆ ನಾವು ಬದುಕುವ ಮತ್ತು ಕಾರ್ಯ ನಿರ್ವಹಿಸುವ ರೀತಿಯು ನಾಳೆ ಬರುವವರಿಗೆ ಇತಿಹಾಸ ಆಗಲಿದೆ. ಈ ಕ್ಷಣವು ಭಾರತಕ್ಕೆ, ಏಷ್ಯಾ ಖಂಡಕ್ಕೆ ಹಾಗೂ ಇಡೀ ಜಗತ್ತಿಗೇ ಶುಭ ಸಂದರ್ಭವಾಗಿದೆ. ಪೌರ್ವಾತ್ಯ ದೇಶವೊಂದು ಸ್ವತಂತ್ರಗೊಂಡು ನವತಾರೆಯಾಗಿ ಉದಯಿಸುತ್ತದೆ. ಹೊಸ ಭರವಸೆಯು ಚಿಗುರುತ್ತದೆ. ಸುದೀರ್ಘಕಾಲದ ಧ್ಯೇಯವೊಂದು ಹೊಸ ಜನ್ಮ ಪಡೆದು ಚಿಮ್ಮುತ್ತದೆ” ಎಂದಿದ್ದರು.</p>



<p><br><strong>ಬೆಟ್ಟದಂತಹ ಸವಾಲಿನ ದಿನಗಳವು</strong></p>



<p><br>ನೆಹರೂ ಅವರ ಬಳಿ ಭಾರತದ ಬಗ್ಗೆ ಒಂದು ಸುಂದರ ಕನಸಿತ್ತು. ದೂರದೃಷ್ಟಿಯ ಯೋಜನೆಯೂ ಇತ್ತು. ಅದೇ ಹೊತ್ತಿನಲ್ಲಿ, ಅವರ ಮುಂದೆ ಒಂದು ಕಟು ವಾಸ್ತವವೂ ಇತ್ತು. ಬ್ರಿಟಿಷರು ಉಳಿಸಿ ಹೋದದ್ದು ‘mud and filth’ ” (ಮಣ್ಣು ಮತ್ತು ಕೊಚ್ಚೆ) ಎಂದಿದ್ದರು ವಿಶ್ವಕವಿ ರವೀಂದ್ರನಾಥ ಠಾಗೋರ್ ಅಂದಿನ ಭಾರತದ ಪರಿಸ್ಥಿತಿಯ ಬಗ್ಗೆ. ಸರಿ ಸುಮಾರು 200 ವರ್ಷಗಳ ಆಳ್ವಿಕೆಯಲ್ಲಿ, ಒಂದು ಅಂದಾಜಿನ ಪ್ರಕಾರ ಇಂದಿನ ಮೌಲ್ಯದಲ್ಲಿ 45 ಟ್ರಿಲಿಯನ್ ಡಾಲರ್ ನಷ್ಟು ಸಂಪತ್ತನ್ನು ವಸಾಹತುಶಾಹಿ ಶಕ್ತಿಗಳು ದೋಚಿ ತಮ್ಮ ದೇಶಕ್ಕೆ ಒಯ್ದಿದ್ದವು. ಹಾಗಾಗಿ ಭಾರತ ಸ್ವತಂತ್ರವಾದಾಗ ಭಾರತದ ಕೈಯಲ್ಲಿ ಅಕ್ಷರಶಃ ಏನೂ ಇರಲಿಲ್ಲ. ಇದ್ದುದು ಖಾಲಿ ಖಜಾನೆ, ಬಡತನ, ಅನಕ್ಷರತೆ, ಅನಾರೋಗ್ಯ, ಅವ್ಯವಸ್ಥೆ ಇತ್ಯಾದಿಗಳು ಮಾತ್ರ. ಎಲ್ಲವನ್ನೂ ಶುರುವಿನಿಂದ ಆರಂಭಿಸಬೇಕು ಎನ್ನುವ ಪರಿಸ್ಥಿತಿ. ದೇಶಕ್ಕೊಂದು ಸಂವಿಧಾನ ಇನ್ನೂ ಬಂದಿರಲಿಲ್ಲ. ಸೂಕ್ತ ಆರೋಗ್ಯ ಸೇವೆಯ ಕೊರತೆಯಿಂದ ಅಂದಿನ ಭಾರತೀಯರ ಸರಾಸರಿ ಆಯುಷ್ಯ ಕೇವಲ 30 ವರ್ಷವಿತ್ತು. ದೇಶದ ಸಾಕ್ಷರತೆ ಕೇವಲ 17 ಪ್ರತಿಶತ (ಇಂದು 75%), ತಲಾವಾರು ವಾರ್ಷಿಕ ಆದಾಯ ಕೇವಲ 249.6 ರುಪಾಯಿ (ಇಂದು 1,28,829). ಸಾಲದೆಂಬಂತೆ, ದೇಶದ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿ ರಾಷ್ಟ್ರಪಿತ ಅನಿಸಿಕೊಂಡ ಗಾಂಧೀಜಿಯ ಹತ್ಯೆಯಾಗಿತ್ತು (1948). ದೇಶವಿಭಜನೆಯಿಂದ ಲಕ್ಷಾಂತರ ಮಂದಿ ಸತ್ತರು, ಮಿಲಿಯಗಟ್ಟಲೆ ಮಂದಿ ನಿರಾಶ್ರಿತರಾದರು. ನಿರಾಶ್ರಿತರಾಗಿ ಬಂದ 80 ಲಕ್ಷ ಜನಕ್ಕೆ ಬದುಕಿನ ವ್ಯವಸ್ಥೆ ಮಾಡಬೇಕಾಯಿತು. ಕೋಮುಗಲಭೆಯಿಂದಾಗಿ ‘ಹೋಲೋಕಾಸ್ಟ್’ ನಂತಹ ಪರಿಸ್ಥಿತಿ ನಿರ್ಮಾಣವಾಯಿತು. ದೇಶ ಸ್ವತಂತ್ರವಾಗುತ್ತಿದ್ದಂತೆಯೇ ಭಾರತ ಪಾಕಿಸ್ತಾನ ಯುದ್ಧ (1947-48) ನಡೆಯಿತು, ಸ್ವತಂತ್ರಗೊಂಡ ಕೇವಲ 14 ವರ್ಷಗಳಲ್ಲಿ ಭಾರತ ಚೀನಾ ಯುದ್ಧ ನಡೆಯಿತು (1962). ಅದೇ ಹೊತ್ತಿನಲ್ಲಿ ‘ಮುಸ್ಲಿಂ ಪಾಕಿಸ್ತಾನ’ದ ಹಾಗೆಯೇ ‘ಹಿಂದೂ ಪಾಕಿಸ್ತಾನ’ ಮಾಡುವ ಯತ್ನವೂ ನಡೆದಿತ್ತು.<br>ಇಂತಹ ದಟ್ಟ ದಾರಿದ್ರ್ಯದ ಮತ್ತು ಕಡುಕಷ್ಟದ ಕಾಲದಲ್ಲಿ ಜವಾಹರಲಾಲ್ ನೆಹರೂ ಅವರು ಈ ದೇಶದ ನಾಯಕತ್ವ ವಹಿಸಿಕೊಂಡರು. 1951- 52 ರ ಸಾರ್ವತ್ರಿಕ ಚುನಾವಣೆಯನ್ನು ‘ಸೆಕ್ಯುಲರ್ ಇಂಡಿಯಾ ಬೇಕೋ?’, ‘ಹಿಂದೂ ಇಂಡಿಯಾ ಬೇಕೋ?’ ಎಂಬುದರ ಜನಮತ ಗಣನೆಯಾಗಿ ಪರಿವರ್ತಿಸಿದರು ನೆಹರೂ. 40,000 ಕಿಲೋಮೀಟರ್ ಸಂಚರಿಸಿ 35 ದಶಲಕ್ಷ ಜನರನ್ನು ಉದ್ದೇಶಿಸಿ ಮಾತನಾಡಿದರು, ಸೆಕ್ಯುಲರ್ ತತ್ತ್ವವನ್ನು ಪ್ರೋತ್ಸಾಹಿಸಿದರು. ಪರಿಣಾಮವಾಗಿ, ಭಯಾನಕ ಕೋಮುಗಲಭೆಯ ಬೆನ್ನಿಗೇ ನಡೆದ ಚುನಾವಣೆಯಲ್ಲಿಯೂ ಹಿಂದೂ ಕೋಮುವಾದಿ ಪಕ್ಷಗಳು, ಹಿಂದೂ ಮಹಾಸಭಾ, ಜನಸಂಘ, ರಾಮರಾಜ್ಯ ಪರಿಷತ್ ಇವೆಲ್ಲ ನೆಲಕಚ್ಚಿದವು. ಅವು ಗೆದ್ದುದು ಒಟ್ಟು 6 ಪ್ರತಿಶತ ಮತ, 489 ಸ್ಥಾನಗಳಲ್ಲಿ ಗಳಿಸಿದ್ದು ಕೇವಲ 10 ಸ್ಥಾನ. ಹೀಗೆ ದೇಶವು ಕೋಮುವಾದಿಗಳ ಕೈಗೆ ಹೋಗದಂತೆ ನೋಡಿಕೊಂಡರು; ‘ಐಡಿಯಾ ಆಫ್ ಇಂಡಿಯಾ’ವನ್ನು ಉಳಿಸಿಕೊಟ್ಟರು ನೆಹರೂ.</p>


<div class="wp-block-image">
<figure class="aligncenter size-full"><img decoding="async" width="795" height="447" src="https://peepalmedia.com/wp-content/uploads/2022/11/1605472429_16edittopsepia-1.jpg" alt="" class="wp-image-15533" srcset="https://peepalmedia.com/wp-content/uploads/2022/11/1605472429_16edittopsepia-1.jpg 795w, https://peepalmedia.com/wp-content/uploads/2022/11/1605472429_16edittopsepia-1-300x169.jpg 300w, https://peepalmedia.com/wp-content/uploads/2022/11/1605472429_16edittopsepia-1-768x432.jpg 768w, https://peepalmedia.com/wp-content/uploads/2022/11/1605472429_16edittopsepia-1-150x84.jpg 150w, https://peepalmedia.com/wp-content/uploads/2022/11/1605472429_16edittopsepia-1-696x391.jpg 696w" sizes="(max-width: 795px) 100vw, 795px" /><figcaption class="wp-element-caption">Jawaharlal Nehru at Konar Dam &#8211; Oct. 1955</figcaption></figure></div>


<p><br><strong>ವಿಜ್ಞಾನ ತಂತ್ರಜ್ಞಾನಕ್ಕೆ ಆದ್ಯತೆ</strong></p>



<p><br>‘ಬಡತನ ಮತ್ತು ಕೆಳಮಟ್ಟದ ಜೀವನ ಮುಂದುವರಿದರೆ ಪ್ರಜಾತಂತ್ರದಲ್ಲಿ ಎಷ್ಟೇ ಶ್ರೇಷ್ಠ ಸಂಸ್ಥೆಗಳಿರಲೀ, ಆದರ್ಶಗಳಿರಲೀ, ಅವು ವಿಮೋಚನಾ ಶಕ್ತಿಗಳಾಗುವುದು ಅಸಾಧ್ಯ. ಆದ್ದರಿಂದ ಬಡತನ ನಿವಾರಣೆಯತ್ತ ನಿರಂತರ ಯತ್ನ ನಡೆಯಬೇಕು’ ಎಂದು ಅವರು 1952 ರಲ್ಲಿ ಹೇಳಿದ್ದರು. ಆಹಾರ ಸ್ವಾವಲಂಬನೆಯಿಲ್ಲದೆ ಸಾರ್ವಭೌಮತೆಯನ್ನು ಸಾಕಾರಗೊಳಿಸುವುದು ಸಾಧ್ಯವಿಲ್ಲ ಎಂಬುದು ಅವರಿಗೆ ಗೊತ್ತಿತ್ತು. ಆದ್ದರಿಂದ ಪಂಚ ವಾರ್ಷಿಕ ಯೋಜನೆಗಳ ಮೂಲಕ ಸ್ವಯಂಪರಿಪೂರ್ಣ ಭಾರತದ ನಿರ್ಮಾಣಕ್ಕೆ ನಾಂದಿ ಹಾಡಿದರು. ಭೂಸುಧಾರಣೆ ಮತ್ತು ಅಗತ್ಯ ತಂತ್ರಜ್ಞಾನ ಬದಲಾವಣೆಯ ಮೂಲಕ ಹಸಿರು ಕ್ರಾಂತಿಯ ಹಾದಿಯಲ್ಲಿ ಭಾರತವನ್ನು ಇರಿಸಿದರು. ಪ್ರಸಿದ್ಧ ಆರ್ಥಿಕ ತಜ್ಞ ಡೇನಿಯಲ್ ಥಾರ್ನರ್ ಹೇಳುವಂತೆ, ಭಾರತದಲ್ಲಿ ‘ಹಿಂದಿನ 200 ವರ್ಷಗಳಲ್ಲಿ ಮಾಡಿದುದಕ್ಕಿಂತ ಹೆಚ್ಚು ಕೃಷಿ ಪೋಷಣೆಯ ನಿಟ್ಟಿನ ಬದಲಾವಣೆಯನ್ನು ಸ್ವಾತಂತ್ರ್ಯದ ಮೊದಲ 21 ವರ್ಷಗಳಲ್ಲಿ ಮಾಡಲಾಯಿತು’.<br>ವಿಜ್ಞಾನ ಮತ್ತು ತಂತ್ರಜ್ಞಾನ ವಲಯವನ್ನು ವಸಾಹತು ಕಾಲದಲ್ಲಿ ಬರಡು ಬಿಡಲಾಗಿತ್ತು. ಈ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವುದರ ಅನಿವಾರ್ಯತೆಯ ಅರಿವಿತ್ತು ನೆಹರೂ ಅವರಿಗೆ. ಎಂದೇ ಜ್ಞಾನ ಕ್ರಾಂತಿಯ ಹಾದಿಯಲ್ಲಿ 1950ರ ದಶಕದ ಆದಿಯಲ್ಲಿಯೇ IIT. IIM, NPL, NCL, BARC, AIIMS ಗಳನ್ನು ಸ್ಥಾಪಿಸಿದರು. ಈವತ್ತು ಭಾರತದಲ್ಲಿ ಸೇವಾವಲಯವು ಪ್ರಧಾನ ವಲಯವಾಗಿದ್ದು, ದೇಶದ ಜಿಡಿಪಿಗೆ ಅರ್ಧದಷ್ಟು ಕೊಡುಗೆ ಕೊಡುತ್ತಿದೆಯಾದರೆ ಅದಕ್ಕೆ ಮುಖ್ಯ ಕಾರಣ, ಅಂದು ಹಾಕಿದ ಜ್ಞಾನ ಕ್ರಾಂತಿಯ ಬುನಾದಿ.<br>1947 ರಲ್ಲಿ ಯಾವುದೇ ಹೂಡಿಕೆಗೆ, ಕ್ಯಾಪಿಟಲ್ ಗೂಡ್ಸ್ ಮತ್ತು ಯಂತ್ರಗಳಿಗೆ ಮುಂದುವರಿದ ರಾಷ್ಟ್ರಗಳನ್ನು ನೂರಕ್ಕೆ ನೂರು ಅವಲಂಬಿಸಬೇಕಾಗಿತ್ತು. ನೆಹರೂ ಅದನ್ನು ಬದಲಾಯಿಸಿದರು. ಅವರ ಯೋಜನೆಗಳ ಕಾರಣವಾಗಿ 1960 ಕ್ಕಾಗುವಾಗ ಈ ಅವಲಂಬನೆ ತೀರಾ ಕಡಿಮೆಯಾಗಿ, ಕೇವಲ 43 ಪ್ರತಿಶತ ಮತ್ತು 1970 ಕ್ಕಾಗುವಾಗ ಕೇವಲ 9 ಪ್ರತಿಶತ ಮಾತ್ರ ಆಮದು ಮಾಡುವಂತಾಯಿತು. ಸ್ವಾವಲಂಬನೆಯ ಈ ನಡೆಯ ಪರಿಣಾಮವಾಗಿಯೇ ಸ್ವತಂತ್ರ ವಿದೇಶನೀತಿ ಹೊಂದುವುದು ಸಾಧ್ಯವಾಯಿತು, ಭಾರತವು 100 ದೇಶಗಳ ಅಲಿಪ್ತ ಚಳುವಳಿಯ ನಾಯಕತ್ವ ವಹಿಸಿತು. ಬಲಾಢ್ಯ ಶಕ್ತಿಗಳಿಗೆ ತಲೆಬಾಗಲು ನಿರಾಕರಿಸಿತು.<br>ಎಲ್ಲಕ್ಕಿಂತ ಮುಖ್ಯವಾಗಿ ಶತಶತಮಾನಗಳಿಂದ ಅಜ್ಞಾನ, ಮೂಢ ನಂಬಿಕೆಗಳಲ್ಲಿ ತೊಳಲಾಡುತ್ತಿದ್ದ ದೇಶಕ್ಕೆ ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕ ಚಿಂತನೆಯ ಒಂದು ಭದ್ರ ಬುನಾದಿ ಹಾಕಿದರು ನೆಹರೂ. ಪೂಜೆ ಪುನಸ್ಕಾರಗಳಿಗಿಂತ ಶಿಕ್ಷಣ ವಿಜ್ಞಾನಕ್ಕೆ ಅವರು ಆದ್ಯತೆ ನೀಡಿದರು, ಮಂದಿರಗಳಿಗಿಂತ ಕಾರ್ಖಾನೆ, ಅಣೆಕಟ್ಟುಗಳಿಗೆ ಮಹತ್ತ್ವ ನೀಡಿದರು. ಆರಾಧನಾಲಯಗಳಿಗಿಂತ ಸಂಶೋಧನಾಲಯ ಅವರಿಗೆ ಮುಖ್ಯವೆನಿಸಿತ್ತು. ಪ್ರಧಾನಿಯ ಘನತೆಯ ಸ್ಪಷ್ಟ ಅರಿವಿದ್ದ ಅವರು ಎಂದೂ ಗುಡಿಗುಡಾರಗಳನ್ನು ಸುತ್ತಲಿಲ್ಲ, ಗುಹೆಯಲ್ಲಿ ಕುಳಿತು ತಪಸ್ಸಿನ ಸೋಗು ಹಾಕಲಿಲ್ಲ, ಯಾವುದೇ ಧಾರ್ಮಿಕ ಗುರುತುಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಿಲ್ಲ, ಕಾವಿ ವಸ್ತ್ರ ತೊಟ್ಟು ಹೋಮ ಹವನಗಳಲ್ಲಿ ಭಾಗವಹಿಸಲಿಲ್ಲ. ಖಾಸಗಿಯಾಗಬೇಕಾದ ಧಾರ್ಮಿಕ ನಂಬಿಕೆ ಆಚರಣೆಗಳನ್ನು ಖಾಸಗಿ ಜಾಗಕ್ಕೇ ಮೀಸಲಿಟ್ಟು ಸಂವಿಧಾನದ ತತ್ತ್ವಗಳಿಗೆ ಮತ್ತು ಕುವೆಂಪು ಅವರ ವಿಶ್ವಮಾನವ ತತ್ತ್ವಗಳಿಗೆ ಬದ್ಧವಾಗಿ ನಡೆದುಕೊಳ್ಳುತ್ತಾ ಒಂದು ರೋಲ್ ಮಾಡೆಲ್ (ಅನುಕರಣೀಯ ಮಾದರಿ) ಎನಿಸಿಕೊಂಡರು.</p>



<p><br><strong>ನೆಹರೂ ಬಗ್ಗೆ ಮೆಚ್ಚಿ ನುಡಿದರು ಕುವೆಂಪು</strong></p>



<p><br>ಈ ಬಗ್ಗೆ ಬೇರಾರೂ ಅಲ್ಲ, ನಮ್ಮ ರಾಷ್ಟ್ರಕವಿ ಕುವೆಂಪು ಅವರೇ, “ವೈಜ್ಞಾನಿಕ ದೃಷ್ಟಿ ಮತ್ತು ವಿಚಾರಬುದ್ಧಿ ಎರಡೂ ಮೂರ್ತಿವೆತ್ತಂತಿದ್ದ ಶ್ರೀ ಜವಾಹರಲಾಲ್ ನೆಹರೂ ಆಧ್ಯಾತ್ಮ ಮತ್ತು ವಿಜ್ಞಾನಗಳಿಗೆ ಸರ್ವೋಚ್ಚ ಪ್ರತಿನಿಧಿಯಾಗಿದ್ದಾರೆ. ಇದುವರೆಗಿನ ನಮ್ಮ ಆಧುನಿಕ ರಾಜಕೀಯ ಮುಂದಾಳುಗಳಲ್ಲಿ ವಿಜ್ಞಾನ ಮತ್ತು ವಿಚಾರಗಳನ್ನು ಬೇರೆ ಯಾರೂ ಅವರಂತೆ ಎತ್ತಿ ಹಿಡಿದಿಲ್ಲ. ಬೇರೆ ಯಾರೂ ಅವರಷ್ಟು ಅನನ್ಯತೆಯಿಂದ ಅವುಗಳ ಪ್ರತಿಷ್ಠಾಪನೆಗೆ ದುಡಿದಿಲ್ಲ.<br>ಕಾರ್ಖಾನೆ ಕಟ್ಟಿಸಿದರು, ಅಣೆಕಟ್ಟು ಹಾಕಿಸಿದರು, ಮಹಾ ಕಟ್ಟಡಗಳನ್ನು ನಿರ್ಮಿಸಿದರು, ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆಗಳನ್ನೂ, ಸಂಶೋಧನಾಲಯಗಳನ್ನು ಸ್ಥಾಪಿಸಿದರು, ವಿಜ್ಞಾನಿಗಳಿಗೆ ಮತ್ತು ತಾಂತ್ರಿಕ ತಜ್ಞರಿಗೆ ಪ್ರೋತ್ಸಾಹ ಕೊಟ್ಟರು.<br>ಜನಿವಾರ ಹಾಕಿಕೊಳ್ಳಲಿಲ್ಲ, ನಾಮ ಹಚ್ಚಿಕೊಳ್ಳಲಿಲ್ಲ, ವಿಭೂತಿ ಬಳಿದುಕೊಳ್ಳಲಿಲ್ಲ, ದೇವಾಲಯಗಳಿಗೆ ಆರಾಧನೆಗೆ ಹೋಗಲಿಲ್ಲ, ತೀರ್ಥಗಳಿಗೆ ಯಾತ್ರೆ ಹೋಗಿ ಮೀಯಲಿಲ್ಲ, ಪುರೋಹಿತರ ಪಾದ ತೊಳೆದು ನೀರು ಕುಡಿಯಲಿಲ್ಲ, ಪೂಜಾರಿಗಳಿಗೆ ಅಡ್ಡಬೀಳಲಿಲ್ಲ, ಅಡ್ಡ ಪಲ್ಲಕ್ಕಿಯ ಜಗದ್ಗುರುಗಳಿಗೆ ಕೈ ಮುಗಿದು ಮಾಲೆ ಹಾಕಲಿಲ್ಲ, ರಾಹುಕಾಲ ಗುಳಿಕ ಕಾಲ ನೋಡಲಿಲ್ಲ, ಜ್ಯೋತಿಷ್ಯವನ್ನು ನಂಬಲಿಲ್ಲ, ಗ್ರಹಣ ಕಾಲದಲ್ಲಿ ತಂಬಟೆ ಬಡಿದು ಸೂರ್ಯನನ್ನು ರಾಹುವಿನಿಂದ ಪಾರು ಮಾಡು ಎನ್ನಲಿಲ್ಲ” ಎಂದು ಅಭಿಮಾನದಿಂದ ಹೇಳಿದರು.<br>ಬುನಾದಿಯು ಭದ್ರವಿದ್ದಾಗ ಮಾತ್ರ ಅದರ ಮೇಲೆ ನಿಲ್ಲುವ ಸೌಧವು ಗಟ್ಟಿಯಾಗಿರಬಲ್ಲುದು, ದೀರ್ಘಾಯುಷ್ಯ ಹೊಂದಬಲ್ಲುದು. ದೇಶ ಸ್ವತಂತ್ರಗೊಂಡ ಹೊತ್ತು ಆಧುನಿಕ ಭಾರತದ ನಿರ್ಮಾಣಕ್ಕೆ ಇಂತಹ ಒಂದು ಭದ್ರ ಬುನಾದಿ ಹಾಕುವ ಅಗತ್ಯವಿತ್ತು. ಈ ಕೆಲಸಕ್ಕೆ ಆಧುನಿಕ ಮನೋಭಾವ, ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ, ಪ್ರಜಾತಂತ್ರದಲ್ಲಿ ಆಳ ನಂಬಿಕೆ, ಭಾರತದ ಬಹುತ್ವ ಪರಂಪರೆಯ ಪೂರ್ಣ ಅರಿವು, ಸೆಕ್ಯುಲರ್ ತತ್ತ್ವದಲ್ಲಿ ಅಚಲ ವಿಶ್ವಾಸ, ಬಡವರ ಪರ ಕಾಳಜಿ ಇರುವ ಒಂದು ಸಮರ್ಥ ನಾಯಕತ್ವದ ಅಗತ್ಯವಿತ್ತು. ಆ ಅಗತ್ಯವನ್ನು ನೆಹರೂ ಅವರು ಯಶಸ್ವಿಯಾಗಿ ಪೂರೈಸಿದರು. ಜವಾಹರಲಾಲ್ ನೆಹರೂರಂಥವರ ಆಧುನಿಕ ಚಿಂತನೆಯ ಮತ್ತು ದೂರದರ್ಶಿತ್ವದ ನಾಯಕನೊಬ್ಬ ಸಿಗದಿದ್ದರೆ ಇಂದಿನ ಭಾರತದ ಸ್ಥಿತಿ ಹೇಗಿರುತ್ತಿತ್ತು ಎಂಬುದನ್ನು ಊಹಿಸಿಕೊಂಡರೂ ಸಾಕು ನೆಹರೂ ಅವರ ಮಹತ್ತ್ವ ನಮಗೆ ಅರ್ಥವಾದೀತು. ಈ ಅರ್ಥದಲ್ಲಿ ‘ಜವಾಹರಲಾಲ್ ಒಂದು ಅನರ್ಘ್ಯ ರತ್ನ, ಅವನನ್ನು ಪಡೆದ ಈ ಭೂಮಿ ಧನ್ಯ’ ಎಂಬ ಮಹಾತ್ಮ ಗಾಂಧಿಯವರ ಮಾತು ನೂರಕ್ಕೆ ನೂರು ಸತ್ಯ.</p>



<p><br>ಶ್ರೀನಿವಾಸ ಕಾರ್ಕಳ<br>ಚಿಂತಕರು, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.</p>
]]></content:encoded>
					
		
		
			</item>
		<item>
		<title>ಮಕ್ಕಳ ಪಾಲಿಗೆ ಅಪರಾಧಿ ಭಾರತ!</title>
		<link>https://peepalmedia.com/india-is-guilty-of-children/</link>
		
		<dc:creator><![CDATA[Rupa Hassan]]></dc:creator>
		<pubDate>Mon, 14 Nov 2022 08:54:05 +0000</pubDate>
				<category><![CDATA[ವಿಶೇಷ]]></category>
		<category><![CDATA[bengalure]]></category>
		<category><![CDATA[childrens]]></category>
		<category><![CDATA[childrenʼs day]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[writing]]></category>
		<guid isPermaLink="false">https://peepalmedia.com/?p=15439</guid>

					<description><![CDATA[ಮಕ್ಕಳ ದಿನಾಚರಣೆ ಮಕ್ಕಳಿಗೆ ಹಬ್ಬವಾಗಬೇಕಾದರೆ ಪ್ರತಿ ಮಗುವಿಗೆ ಅತ್ಯವಶ್ಯಕವಾದ ಕನಿಷ್ಠ ಕಾಳಜಿ, ಗಮನಿಸುವಿಕೆ ಮತ್ತು ಪ್ರೀತಿಯನ್ನು ಕಡು ಎಚ್ಚರಿಕೆಯಿಂದ ನಿರ್ಮಾಣ ಮಾಡುವ ಬಹು ದೊಡ್ಡ ಜವಾಬ್ದಾರಿಯನ್ನು ಪೋಷಕರು, ವ್ಯವಸ್ಥೆ ಮತ್ತು ಸರ್ಕಾರ ಹೊರಬೇಕಿದೆ ಎನ್ನುತ್ತಾ ಮಕ್ಕಳ ದಿನಾಚರಣೆಯ ದಿನದಂದು ಮಕ್ಕಳ ಪಾಲಿಗೆ ಅಪರಾಧಿ ಸ್ಥಾನದಲ್ಲಿ ನಿಂತ ಭಾರತವನ್ನು ವಿಶ್ಲೇಷಿಸಿದ್ದಾರೆ ಲೇಖಕಿ ಹಾಗೂ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ರೂಪ ಹಾಸನ.&#160; ಇಂದು ಮತ್ತೊಂದು ಮಕ್ಕಳ ದಿನಾಚರಣೆ! ಆದರೆ ಇದೂ ಕೂಡ ಇತರ ದಿನಾಚರಣೆಗಳಂತೆ ಒಂದು ಕಾಟಾಚಾರದ ಆಚರಣೆಯಾಗಿಬಿಟ್ಟಿದೆ. ಅಥವಾ [&#8230;]]]></description>
										<content:encoded><![CDATA[
<p><strong>ಮಕ್ಕಳ</strong><strong> </strong><strong>ದಿನಾಚರಣೆ</strong><strong> </strong><strong>ಮಕ್ಕಳಿಗೆ</strong><strong> </strong><strong>ಹಬ್ಬವಾಗಬೇಕಾದರೆ</strong><strong> </strong><strong>ಪ್ರತಿ</strong><strong> </strong><strong>ಮಗುವಿಗೆ</strong><strong> </strong><strong>ಅತ್ಯವಶ್ಯಕವಾದ</strong><strong> </strong><strong>ಕನಿಷ್ಠ</strong><strong> </strong><strong>ಕಾಳಜಿ</strong><strong>, </strong><strong>ಗಮನಿಸುವಿಕೆ</strong><strong> </strong><strong>ಮತ್ತು</strong><strong> </strong><strong>ಪ್ರೀತಿಯನ್ನು</strong><strong> </strong><strong>ಕಡು</strong><strong> </strong><strong>ಎಚ್ಚರಿಕೆಯಿಂದ</strong><strong> </strong><strong>ನಿರ್ಮಾಣ</strong><strong> </strong><strong>ಮಾಡುವ</strong><strong> </strong><strong>ಬಹು</strong><strong> </strong><strong>ದೊಡ್ಡ</strong><strong> </strong><strong>ಜವಾಬ್ದಾರಿಯನ್ನು</strong><strong> </strong><strong>ಪೋಷಕರು</strong><strong>, </strong><strong>ವ್ಯವಸ್ಥೆ</strong><strong> </strong><strong>ಮತ್ತು</strong><strong> </strong><strong>ಸರ್ಕಾರ</strong><strong> </strong><strong>ಹೊರಬೇಕಿದೆ</strong><strong> </strong><strong>ಎನ್ನುತ್ತಾ</strong><strong> </strong><strong>ಮಕ್ಕಳ</strong><strong> </strong><strong>ದಿನಾಚರಣೆಯ</strong><strong> </strong><strong>ದಿನದಂದು</strong><strong> </strong><strong>ಮಕ್ಕಳ</strong><strong> </strong><strong>ಪಾಲಿಗೆ</strong><strong> </strong><strong>ಅಪರಾಧಿ</strong><strong> </strong><strong>ಸ್ಥಾನದಲ್ಲಿ</strong><strong> </strong><strong>ನಿಂತ</strong><strong> </strong><strong>ಭಾರತವನ್ನು</strong><strong> </strong><strong>ವಿಶ್ಲೇಷಿಸಿದ್ದಾರೆ</strong><strong> </strong><strong>ಲೇಖಕಿ</strong><strong> </strong><strong>ಹಾಗೂ</strong><strong> </strong><strong>ಮಕ್ಕಳ</strong><strong> </strong><strong>ಹಕ್ಕುಗಳ</strong><strong> </strong><strong>ಹೋರಾಟಗಾರ್ತಿ</strong><strong> </strong><strong>ರೂಪ</strong><strong> </strong><strong>ಹಾಸನ</strong><strong>.</strong><strong>&nbsp;</strong></p>



<figure class="wp-block-image size-full"><img decoding="async" width="600" height="338" src="https://peepalmedia.com/wp-content/uploads/2022/11/ನೆಹರು-1.jpg" alt="" class="wp-image-15454" srcset="https://peepalmedia.com/wp-content/uploads/2022/11/ನೆಹರು-1.jpg 600w, https://peepalmedia.com/wp-content/uploads/2022/11/ನೆಹರು-1-300x169.jpg 300w, https://peepalmedia.com/wp-content/uploads/2022/11/ನೆಹರು-1-150x85.jpg 150w" sizes="(max-width: 600px) 100vw, 600px" /><figcaption class="wp-element-caption">ಮಕ್ಕಳೊಂದಿಗೆ ಜವಾಹರಲಾಲ್‌ ನೆಹರು</figcaption></figure>



<p>ಇಂದು ಮತ್ತೊಂದು ಮಕ್ಕಳ ದಿನಾಚರಣೆ! ಆದರೆ ಇದೂ ಕೂಡ ಇತರ ದಿನಾಚರಣೆಗಳಂತೆ ಒಂದು ಕಾಟಾಚಾರದ ಆಚರಣೆಯಾಗಿಬಿಟ್ಟಿದೆ. ಅಥವಾ ಉಳ್ಳವರ ಮಕ್ಕಳಿಗಾಗಿ ನಡೆಯುವ ಅದ್ದೂರಿ ಆಡಂಬರದ ಒಂದು ದಿನದ ಆಚರಣೆ ಮಾತ್ರವಾಗಿ ಉಳಿದುಬಿಟ್ಟಿದೆ. ಇದಕ್ಕೆ ವಿರುದ್ಧವಾಗಿ, ಭಾರತದಲ್ಲಿ ದಿನದಿಂದ ದಿನಕ್ಕೆ ಮಕ್ಕಳ ಬದುಕು ಅಪಾಯಕಾರಿಯಾಗುತ್ತಾ ಸಾಗಿದೆ. ಭಾರತದಲ್ಲಿ ಸದ್ಯ ಎರಡೂವರೆ ಕೋಟಿ ಅನಾಥ ಮಕ್ಕಳಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಪ್ರತಿ ದಿನ ಅಂದಾಜು ಮೂರು ಸಾವಿರ ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ. ಹಾಗೂ ನೂರಕ್ಕೆ ನಲವತ್ತೈದಕ್ಕೂ ಹೆಚ್ಚು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆಂದು ‘ಯೂನಿಸೆಫ್’ ಇತ್ತೀಚೆಗೆ ವರದಿ ನೀಡಿದೆ. ಸದ್ಯ ದೇಶದಲ್ಲಿ ಅಪೌಷ್ಟಿಕತೆಯಿಂದ ನರಳುತ್ತಿರುವ 6 ಕೋಟಿ ಮಕ್ಕಳಿದ್ದು, ಕರ್ನಾಟಕದಲ್ಲಿ ಅಂದಾಜು ಅಂತಹ 12 ಲಕ್ಷ ಮಕ್ಕಳಿದ್ದಾರೆ. ಜನ್ಮ ನೀಡುವ ತಾಯಿ ಹಾಗೂ ನವಜಾತ ಶಿಶು ಇಬ್ಬರ ಪಾಲಿಗೂ ಭಾರತ ಜಗತ್ತಿನಲ್ಲೇ ಅತ್ಯಂತ ಅಪಾಯಕಾರಿ ರಾಷ್ಟ್ರವಾಗಿದೆ. ಭಾರತದಲ್ಲಿ ಹುಟ್ಟುವ ಪ್ರತಿ ಮೂರರಲ್ಲಿ ಒಂದು ಮಗು ಹುಟ್ಟಿದ ದಿನದಂದೇ ಅಸುನೀಗುತ್ತದೆಂದರೆ, ನಮ್ಮದು ಅದಿನ್ಯಾವ ಸೀಮೆ ಅಭಿವೃದ್ಧಿ? ಎಂದು ಸರ್ಕಾರಗಳನ್ನು ಗಟ್ಟಿಸಿ ಕೇಳಬೇಕಿದೆ. ನಮ್ಮ ರಾಷ್ಟ್ರದಲ್ಲಿ ಪ್ರತಿ ವರ್ಷ ಸರಾಸರಿ ಮೂರು ಲಕ್ಷದಷ್ಟು ಶಿಶುಗಳು ಹುಟ್ಟಿದ ದಿನದಂದೇ ಸಾವಿಗೀಡಾಗುತ್ತಿವೆ. ಹುಟ್ಟಿದ ದಿನದಂದೇ ಶಿಶುಗಳು ಅತ್ಯಧಿಕವಾಗಿ ಸಾವನ್ನಪ್ಪುವ 10 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸದಾ ಇರುತ್ತದೆ ಎಂದರೆ ಮಕ್ಕಳ ಪಾಲಿಗೆ ಇದಕ್ಕಿಂಥಾ ನಿಷ್ಕಾಳಜಿಯ ವಿಷಯ ಇನ್ಯಾವುದಿದೆ? ಹಾಗಾದರೆ ನಮ್ಮ ಮಕ್ಕಳ ಪರವಾದ ನೀತಿ, ಕಾಯ್ದೆ, ಕಾರ್ಯಕ್ರಮ, ಯೋಜನೆಗಳು, ಅದರ ಅನುಷ್ಠಾನಕ್ಕಿರುವ ವಿವಿಧ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸಚಿವಾಲಯ, ಇಲಾಖೆಗಳು, ಸಮಿತಿಗಳು, ಆಯೋಗಗಳು ಏನು ಮಾಡುತ್ತಿವೆ? ವರ್ಷಕ್ಕೆ ಕೋಟ್ಯಾಂತರ ರೂಪಾಯಿಗಳನ್ನು ಮಕ್ಕಳ ರಕ್ಷಣೆ, ಪೋಷಣೆಗಾಗಿಯೇ ವ್ಯಯಿಸುತ್ತಿದ್ದರೂ, ಭವಿಷ್ಯದ ಕುಡಿಗಳ ವಿಷಯದಲ್ಲಿ ನಿರೀಕ್ಷಿತ ಫಲ ಇನ್ನೂ ಕಾಣಲಾಗಿಲ್ಲವೆಂದರೆ ದೇಶವೊಂದರ ಪಾಲಿಗೆ ಇದಕ್ಕಿಂತಾ ದುರಂತ ಬೇರೇನಿದೆ?</p>



<p><strong>ಮಕ್ಕಳ</strong><strong> </strong><strong>ಪೋಷಣೆ</strong><strong> </strong><strong>ತೃಪ್ತಿಕರವಾಗಿಲ್ಲ</strong><strong>&#8230;</strong><strong>&nbsp;</strong></p>



<p>2011ರ ಜನಗಣತಿಯಂತೆ ಭಾರತದಲ್ಲಿ 47 ಕೋಟಿ ಮಕ್ಕಳಿದ್ದಾರೆ. ಅಂದರೆ ಒಟ್ಟು ಜನಸಂಖ್ಯೆಯ ಶೇಕಡಾ 39ರಷ್ಟು ಮಕ್ಕಳು. ಇದರಲ್ಲಿ 73% ಮಕ್ಕಳು ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಒಟ್ಟಾರೆ ಜಗತ್ತಿನ ಆರು ಮಕ್ಕಳಲ್ಲಿ ಒಂದು ಮಗು ಭಾರತದಲ್ಲಿದೆ.</p>



<figure class="wp-block-image size-full"><img loading="lazy" decoding="async" width="620" height="413" src="https://peepalmedia.com/wp-content/uploads/2022/11/0999c1b8-bb75-4bf8-8167-3f45b2598f82-1.jpg" alt="" class="wp-image-15455" srcset="https://peepalmedia.com/wp-content/uploads/2022/11/0999c1b8-bb75-4bf8-8167-3f45b2598f82-1.jpg 620w, https://peepalmedia.com/wp-content/uploads/2022/11/0999c1b8-bb75-4bf8-8167-3f45b2598f82-1-300x200.jpg 300w, https://peepalmedia.com/wp-content/uploads/2022/11/0999c1b8-bb75-4bf8-8167-3f45b2598f82-1-150x100.jpg 150w" sizes="auto, (max-width: 620px) 100vw, 620px" /></figure>



<p>ಜಗತ್ತಿನ ಅತಿ ಹೆಚ್ಚಿನ ಮಕ್ಕಳನ್ನು ಹೊಂದಿರುವ ದೇಶವೆಂದು ಹೆಗ್ಗಳಿಕೆಗೆ ಪಾತ್ರವಾಗಿದ್ದರೂ ಮಕ್ಕಳ ಹಕ್ಕುಗಳ ಸಂರಕ್ಷಣೆಯ ದೃಷ್ಟಿಯಿಂದ ನಮ್ಮ ಸಾಧನೆ ಅತ್ಯಂತ ಕಳಪೆ. ನಮ್ಮ ದೇಶದಲ್ಲಿ ಕಳೆದ ಒಂದೆರಡು ದಶಕದಲ್ಲಿ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕತೆ ವಿಚಾರದಲ್ಲಿ ಸಾಕಷ್ಟು ಸುಧಾರಣೆಯಾಗಿದ್ದರೂ ಮಧ್ಯಮ ಆದಾಯವಿರುವ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮಕ್ಕಳ ಪೋಷಣೆ ಅಷ್ಟೊಂದು ತೃಪ್ತಿಕರವಾಗಿಲ್ಲವೆಂದು ಅಂತಾರಾಷ್ಟ್ರೀಯ ಮಾನದಂಡಗಳು ನಮ್ಮನ್ನು ಅಪಹಾಸ್ಯ ಮಾಡುತ್ತಿವೆ. ಮಕ್ಕಳ ಪೋಷಣೆ ವಿಚಾರದಲ್ಲಿ 1995ರವರೆಗೆ ಭಾರತ ವಿಶ್ವದಲ್ಲಿಯೇ 12ನೇ ಸ್ಥಾನದಲ್ಲಿ ಇತ್ತು. ನಂತರದ ಇತ್ತೀಚೆಗಿನ ವರ್ಷಗಳಲ್ಲಿ ಅದು 100 ಸ್ಥಾನದಿಂದ ಮೇಲಕ್ಕೆ ಏರುತ್ತಲೇ ಹೋಗುತ್ತಿದೆಯೆಂದು ಮಕ್ಕಳ ಹಕ್ಕುಗಳ ಬಗ್ಗೆ ಕಾರ್ಯ ನಿರ್ವಹಿಸುತ್ತಿರುವ “ಸೇವ್ ದಿ ಚೈಲ್ಡ್” ಅಂತಾರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆಯು ಬಿಡುಗಡೆ ಮಾಡಿರುವ ವರದಿ ತಿಳಿಸುತ್ತದೆ.</p>



<p>ಶಿಕ್ಷಣ, ಆರೋಗ್ಯ, ಮತ್ತು ಪೌಷ್ಟಿಕಾಂಶಗಳನ್ನು ಮಾನದಂಡವಾಗಿ ಇಟ್ಟುಕೊಂಡು ಎಲ್ಲ ರಾಷ್ಟ್ರಗಳಲ್ಲಿ ಮಕ್ಕಳ ಪೋಷಣೆಯ ಗುಣಮಟ್ಟವನ್ನು ಸಮೀಕ್ಷೆ ಮಾಡಲಾಗಿದೆ. ‘ಭಾರತದಲ್ಲಿ ಆರ್ಥಿಕಾಭಿವೃದ್ಧಿಯ ಸಾಧನೆಯಾಗಿದ್ದರೂ ಈ ಪ್ರಗತಿ ಬಡವರು ಮತ್ತು ಕಡುಬಡವರಿಗೆ ತಲುಪದೇ ಈ ವರ್ಗದ ಮಕ್ಕಳ ಅಭಿವೃದ್ಧಿಯಾಗಿಲ್ಲ’ ಎಂದು ಸಂಸ್ಥೆಯ ವರದಿ ತಿಳಿಸುತ್ತದೆ. ಮಕ್ಕಳನ್ನು ಉತ್ತಮವಾಗಿ ಪೋಷಣೆ ಮಾಡುವ ವಿಚಾರದಲ್ಲಿ ಜಪಾನ್ ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಸ್ಪೇನ್, ಜರ್ಮನಿ, ಇಟಲಿ, ಫ್ರಾನ್ಸ್, ಕೆನಡಾ, ಸ್ವಿಟ್ಜರ್‍ಲ್ಯಾಂಡ್, ಬ್ರಿಟನ್ ಮತ್ತು ನಾರ್ವೆ ದೇಶಗಳಿವೆ.</p>



<p><strong>ಯೋಜನೆಗಳು</strong><strong> </strong><strong>ಮಕ್ಕಳನ್ನು</strong><strong> </strong><strong>ಮುಟ್ಟುತ್ತಿವೆಯೇ</strong><strong>?</strong></p>



<p>ಮಕ್ಕಳ ಹಕ್ಕುಗಳ ನಿರ್ಲಕ್ಷ್ಯ, ಅವರು ಅನುಭವಿಸುತ್ತಿರುವ ಅವಿರತ ಶೋಷಣೆಯನ್ನು ಗಮನಿಸಿ, ಭಾರತದಲ್ಲಿ ಅದೇ ಮೊದಲ ಬಾರಿಗೆ ಜಾರಿಯಾದ 1974ರ ಮಕ್ಕಳ ರಾಷ್ಟ್ರೀಯ ನೀತಿ, ಅಲ್ಲಿಂದ ಮುಂದೆ 1986ರ ರಾಷ್ಟ್ರೀಯ ಶಿಕ್ಷಣ ನೀತಿ, 1993ರ ರಾಷ್ಟ್ರೀಯ ಪೌಷ್ಟಿಕಾಂಶ ನೀತಿ, 2000ದ ರಾಷ್ಟ್ರೀಯ ಜನಸಂಖ್ಯಾ ನೀತಿ, 2003ರ ರಾಷ್ಟ್ರೀಯ ಮಕ್ಕಳ ಶಾಸನಾಧಿಕಾರ, 2005ರ ರಾಷ್ಟ್ರೀಯ ಮಕ್ಕಳ ಕಾರ್ಯಯೋಜನೆ, ಮತ್ತೆ ಇತ್ತೀಚೆಗಿನ 2013ರ ರಾಷ್ಟ್ರೀಯ ಮಕ್ಕಳ ನೀತಿ&#8230; ಎಲ್ಲವೂ ಮಕ್ಕಳನ್ನೂ ವ್ಯಕ್ತಿಗಳೆಂದು ಗಣಿಸಿದ್ದಕ್ಕೊಂದು ಉದಾಹರಣೆ.</p>



<p>ಮಕ್ಕಳ ವಿವಿಧ ರೋಗನಿರೋಧಕ ಲಸಿಕೆಯನ್ನು ಕಡ್ಡಾಯವಾಗಿ 100ಶೇಕಡಾ ಹಾಕಿಸಬೇಕೆಂದು, ಜನನ-ಮರಣ ನೋಂದಣಿ, ಗರ್ಭಿಣಿ ಹಾಗು ಮಗುವಿನ ಸುರಕ್ಷತೆ, ಮಕ್ಕಳ ಶಿಕ್ಷಣ, ಹೆಣ್ಣುಭ್ರೂಣ ಹತ್ಯೆಯ ಸಂಪೂರ್ಣ ನಿಷೇಧ, ಮಕ್ಕಳ ಮರಣ ಪ್ರಮಾಣ ಕಡಿಮೆ ಮಾಡುವುದು, ಬಾಲ್ಯವಿವಾಹ ನಿಷೇಧ, ಎಲ್ಲ ರೀತಿಯ ದೌರ್ಜನ್ಯ ನಿಷೇಧ, ಆರೈಕೆ, ಪೋಷಣೆ ಮತ್ತು ರಕ್ಷಣೆ ಬಗ್ಗೆ ಮಕ್ಕಳ ಮೂಲಭೂತ ಅವಶ್ಯಕತೆ ಪೂರೈಕೆ&#8230; ಈ ಎಲ್ಲ ಕಾರಣಗಳಿಗಾಗಿ ಸಂವಿಧಾನಾತ್ಮಕ ಹಕ್ಕುಗಳನ್ನಾಧರಿಸಿ ಅನೇಕ ಕಾನೂನು, ನೀತಿ ನಿಯಮಗಳನ್ನೂ ಇದರೊಂದಿಗೇ ರೂಪಿಸಲಾಗಿದೆ. ಇದರಲ್ಲಿ ಸಾಮುದಾಯಿಕವಾದ ಮಕ್ಕಳೆಲ್ಲರ ಜೊತೆಗೆ ಬಡತನ ರೇಖೆಗಿಂತಾ ಕೆಳಗಿರುವ ಮಕ್ಕಳು, ಬೀದಿಮಕ್ಕಳು, ಹೆಣ್ಣುಮಕ್ಕಳು, ಅಂಗವಿಕಲ ಮಕ್ಕಳು, ಗುಡ್ಡಗಾಡಿನ ಮಕ್ಕಳು, ತಳಸಮುದಾಯದ ಮಕ್ಕಳ ಕುರಿತು ವಿಶೇಷ ಯೋಜನೆಗಳನ್ನು ಸಹ ರೂಪಿಸಲಾಗಿದೆ. ಎಲ್ಲವೂ ಪ್ರತಿನಿತ್ಯ ಕಡತಗಳಲ್ಲಿ ದಾಖಲಾಗುತ್ತವೆ. ಕೋಟ್ಯಾಂತರ ರೂಪಾಯಿಗಳು ಇದಕ್ಕಾಗಿ ವ್ಯಯವಾಗುತ್ತದೆ. ಆದರೆ ಯಾವುದೂ ನಿಜವಾದ ಸಂಕಷ್ಟದಲ್ಲಿರುವ ಮಕ್ಕಳನ್ನು ಪರಿಣಾಮಕಾರಿಯಾಗಿ ಮುಟ್ಟುತ್ತಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಬದಲಾವಣೆಯಾಗಿಲ್ಲ. </p>



<p>ಮಕ್ಕಳ ಬದುಕು ಇಲ್ಲಿ ದಿನದಿಂದ ದಿನಕ್ಕೆ ಆತಂಕಕಾರಿಯಾಗುತ್ತಲೇ ಸಾಗುತ್ತಿದೆ. ಅದಕ್ಕೆ ತಾಜಾ ಉದಾಹರಣೆಯಾಗಿ ತುಮಕೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ತುಂಬು ಗರ್ಭಿಣಿಗೆ ಹೆರಿಗೆಗೆ ನಿರಾಕರಿಸಿದ್ದರಿಂದಾಗಿ, ಸಮರ್ಪಕ ವೈದ್ಯಕೀಯ ಸೌಲಭ್ಯಗಳು ಸಿಗದೇ, ಮನೆಯಲ್ಲಿಯೇ ಹೆರಿಗೆಯಾಗುವ ಸಂದರ್ಭದಲ್ಲಿ ತಾಯಿ ಹಾಗೂ ಅವಳಿಜವಳಿ ಹಸುಗೂಸುಗಳು ಸಾವಿಗೀಡಾದ ಹೃದಯ ವಿದ್ರಾವಕ ದಾರುಣ ಘಟನೆ ಕಣ್ಣ ಮುಂದಿದೆ.</p>



<p><strong>ಹೆಣ್ಣುಮಕ್ಕಳು</strong><strong> </strong><strong>ಎಲ್ಲಿಯೂ</strong><strong> </strong><strong>ಸುರಕ್ಷಿತವಾಗಿಲ್ಲ</strong><strong>…</strong></p>



<figure class="wp-block-image size-full"><img loading="lazy" decoding="async" width="650" height="488" src="https://peepalmedia.com/wp-content/uploads/2022/11/minor.jpg" alt="" class="wp-image-15457" srcset="https://peepalmedia.com/wp-content/uploads/2022/11/minor.jpg 650w, https://peepalmedia.com/wp-content/uploads/2022/11/minor-300x225.jpg 300w, https://peepalmedia.com/wp-content/uploads/2022/11/minor-150x113.jpg 150w" sizes="auto, (max-width: 650px) 100vw, 650px" /></figure>



<p>‘ಹೆಣ್ಣುಮಕ್ಕಳ ಮೇಲೆ ಪ್ರತಿ 20 ನಿಮಿಷಕ್ಕೊಂದು ಅತ್ಯಾಚಾರ ನಡೆಯುತ್ತಿದೆಯೆಂಬ, ದಾಖಲಾದ ಅತ್ಯಾಚಾರಗಳ ಅಧ್ಯಯನ ವರದಿ ಸುಳ್ಳಾಗಲಿ’ ಎಂದು ನಾವೆಷ್ಟು ಬೇಡಿಕೊಂಡರೂ ಈ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇನ್ನೂ ದಾಖಲಾಗದ ಪ್ರಮಾಣವನ್ನು ನೆನೆದು ಉಸಿರು ಕಟ್ಟಿ, ಜೀವ ನಡುಗುತ್ತದೆ. ಇತ್ತೀಚೆಗಷ್ಟೇ ಚಿತ್ರದುರ್ಗದ ಮುರುಘಾ ಮಠದಲ್ಲಿ ಬಾಲೆಯರ ಮೇಲೆ, ಅಲ್ಲಿನ ಪೀಠಾಧ್ಯಕ್ಷನಿಂದಲೇ ನಡೆದಿದೆ ಎನ್ನಲಾದ ನಿರಂತರ ಲೈಂಗಿಕ ಶೋಷಣೆಯ ಪ್ರಕರಣ, ಮಳವಳ್ಳಿಯಲ್ಲಿ ಟ್ಯೂಷನ್ ಶಿಕ್ಷಕನಿಂದ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಆರನೆಯ ತರಗತಿಯ ವಿದ್ಯಾರ್ಥಿನಿಯ ಪ್ರಕರಣ, ಅಪ್ಪನಿಂದಲೇ ಅತ್ಯಾಚಾರಕ್ಕೊಳಗಾಗಿ ಬಸಿರಾದ ಬಾಲೆಯ ಪ್ರಕರಣ, ದಲಿತ ಹೆಣ್ಣು ಮಕ್ಕಳ ಮೇಲೆ ಎಗ್ಗಿಲ್ಲದಂತೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು, ಹೆಣ್ಣುಮಕ್ಕಳು ಎಲ್ಲಿಯೂ ಸುರಕ್ಷಿತವಾಗಿಲ್ಲವೆಂಬ ಸತ್ಯವನ್ನು ಬಿಚ್ಚಿಟ್ಟು, ಆತಂಕದಿಂದ ಬೆಚ್ಚಿಬೀಳುವಂತೆ ಮಾಡುತ್ತಿವೆ. ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತ ಹೆಣ್ಣುಮಕ್ಕಳಿಗೆ ಸಮರ್ಪಕ ಪುನರ್ವಸತಿ ದೊರೆಯದಿರುವುದು, ವರ್ಷಗಟ್ಟಲೆಯಾದರೂ ಪರಿಹಾರ ಧನ ವಿತರಣೆಯಾಗದಿರುವುದು, ಸಂತ್ರಸ್ತರು ತಮ್ಮ ಬದುಕನ್ನು, ವ್ಯಕ್ತಿತ್ವವನ್ನು ಪುನರ್ ರೂಪಿಸಿಕೊಳ್ಳುವುದಕ್ಕೆ ಸರ್ಕಾರ ಮೂಲಮಟ್ಟದಲ್ಲಿ ಸಮರ್ಪಕ ಸಹಾಯ ಹಸ್ತವನ್ನೂ ಚಾಚದಿರುವುದು, ವ್ವವಸ್ಥೆಯ ಬಗೆಗೆ ಆಕ್ರೋಶವನ್ನು ಮೂಡಿಸುತ್ತಿದೆ. ಇಲ್ಲಿ ಈ ಪುಟ್ಟ ಬಾಲೆಯರು ಬದುಕುಳಿಯುವುದಾದರೂ ಹೇಗೆ?</p>



<p><strong>ಕಾಣೆಯಾಗುವ</strong><strong> </strong><strong>ಮಕ್ಕಳು</strong></p>



<p>ಹಾಗೇ ಭಾರತದಲ್ಲಿ ಮಕ್ಕಳ ನಾಪತ್ತೆ ಪ್ರಕರಣಗಳು ಕೂಡ ವರ್ಷದಿಂದ ವರ್ಷಕ್ಕೆ ವಿಪರೀತ ಪ್ರಮಾಣದಲ್ಲಿ ಹೆಚ್ಚುತ್ತಿದ್ದು ನಾಪತ್ತೆಯಾಗಿ ಪ್ರಕರಣ ದಾಖಲಾದವರ ಪೈಕಿ ಕೆಲವರಷ್ಟೇ ಪತ್ತೆಯಾಗುತ್ತಿದ್ದಾರೆ. ಉಳಿದವರ ಶಾಶ್ವತ ಕಣ್ಮರೆ ಆತಂಕ ಮೂಡಿಸುತ್ತಿದೆ. ಪ್ರತಿದಿನ ನಮ್ಮ ರಾಜ್ಯದಲ್ಲಿಯೇ ಸುಮಾರು 18ರಿಂದ 20 ಮಕ್ಕಳು ಕಾಣೆಯಾಗುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಮಕ್ಕಳ ಬ್ಯೂರೋ ದಾಖಲಿಸಿರುವ ಅಂಕಿ ಅಂಶಗಳ ಪ್ರಕಾರ 2008ರಿಂದ 2012ರವರೆಗೆ ಹದಿನೆಂಟು ವರ್ಷದೊಳಗಿನ ಒಟ್ಟು 19,724 ಗಂಡು ಮತ್ತು ಹೆಣ್ಣುಮಕ್ಕಳು ಕಣ್ಮರೆಯಾಗಿದ್ದಾರೆ. ಅದರಲ್ಲಿ ಪತ್ತೆಯಾಗಿರುವುದು 9,245 ಮಕ್ಕಳು ಮಾತ್ರ! ಇನ್ನುಳಿದ 10,479 ಮಕ್ಕಳ ನಾಪತ್ತೆಯ ನಿಗೂಢತೆಯನ್ನು ನಮ್ಮ ಪೊಲೀಸರಿಂದ ಇನ್ನೂ ಭೇದಿಸಲಾಗಿಲ್ಲ. ಮಕ್ಕಳ ಕಳ್ಳಸಾಗಾಣಿಕೆ, ಮಾರಾಟ, ಅಪಹರಣ, ವೇಶ್ಯಾವಾಟಿಕೆಗೆ ತಳ್ಳುವ ಜಾಲಕ್ಕೆ, ಕಡಿವಾಣ ಬಿದ್ದಿಲ್ಲದಿರುವುದೇ ಇಷ್ಟು ದೊಡ್ಡ ಮೊತ್ತದ ಮಕ್ಕಳು ಶಾಶ್ವತವಾಗಿ ಕಾಣೆಯಾಗಿರುವುದಕ್ಕೆ ಕಾರಣ ಎಂಬುದನ್ನು ಯಾರು ಬೇಕಿದ್ದರೂ ಊಹಿಸಬಹುದಾಗಿದೆ.</p>



<p><strong>ಕಟುಕರು</strong><strong> </strong><strong>ಯಾರು</strong><strong>?</strong></p>



<p>ಕೇಂದ್ರ ಸರ್ಕಾರ ರೂಪಿಸಿರುವ ಭ್ರೂಣಲಿಂಗ ಪತ್ತೆ ಮಾಡುವ ತಂತ್ರ-1994 (ದುರ್ಬಳಕೆ ಮತ್ತು ತಡೆ)ಕಾಯ್ದೆ ಜಾರಿಯಲ್ಲಿದ್ದರೂ ಕಟ್ಟುನಿಟ್ಟಾಗಿ ಅನುಷ್ಠಾನಗೊಂಡಿಲ್ಲವಾದ ಕಾರಣ ಗಂಡು ಮತ್ತು ಹೆಣ್ಣು ಮಕ್ಕಳಲ್ಲಿ ಲಿಂಗ ಅನುಪಾತ ಅಸಮತೋಲನ ಮಿತಿ ಮೀರುತ್ತಿರುವುದು ಆತಂಕಕಾರಿಯಾದ ಬೆಳವಣಿಗೆಯಾಗಿದೆ. ಕಳೆದೊಂದು ದಶಕದಲ್ಲಿ ನಡೆದ ವೈದ್ಯಕೀಯ ಕ್ಷೇತ್ರದ ಕ್ಷಿಪ್ರ ಬೆಳವಣಿಗೆ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೇರಿ ಇತರೆ ಆಧುನಿಕ ಪರಿಕ್ಷಾ ವಿಧಾನಗಳಿಂದ ಭ್ರೂಣಲಿಂಗ ‘ಪತ್ತೆ’ ಅಥವಾ ‘ಆಯ್ಕೆ’ ಚಟುವಟಿಕೆ ಸದ್ದಿಲ್ಲದೇ ನಡೆಯುತ್ತಿದೆ. ಇದು ನಿಸ್ಸಂಶಯವಾಗಿ ಹೆಣ್ಣು ಸಂಕುಲದ ಮೇಲೆ ನಡೆಸುತ್ತಿರುವ ‘ಸಾಂಸ್ಕೃತಿಕ ಅತ್ಯಾಚಾರ’ವೇ ಸರಿ. ಇದರ ಪರಿಣಾಮವಾಗಿ ಹೆಣ್ಣುಶಿಶುಗಳು ಗರ್ಭದಲ್ಲೇ ನಿಷ್ಕರುಣೆಯಿಂದ ಹತ್ಯೆಗೀಡಾಗುತ್ತಿವೆ. ಇದರಿಂದ ಗಂಡು ಮಕ್ಕಳ ಜನನ ಪ್ರಮಾಣಕ್ಕೆ ಹೋಲಿಸಿದರೆ ಹೆಣ್ಣುಮಕ್ಕಳ ಜನನ ಪ್ರಮಾಣ ಸಾವಿರಾರು ಸಂಖ್ಯೆಯಷ್ಟು ಗಣನೀಯವಾಗಿ ಇಳಿಮುಖವಾಗುತ್ತಿದೆ. ಕಟುಕರು ಯಾರು? &#8211; ಎಂದರೆ ನಾವಲ್ಲ ಎಂಬ ಉತ್ತರ ಎಲ್ಲರಿಂದಲೂ ಬರುತ್ತದೆ. ಹಾಗಾದರೆ ಹೆಣ್ಣುಮಕ್ಕಳೇಕೆ ಮತ್ತು ಹೇಗೆ ಗರ್ಭದಲ್ಲೇ ಕರಗಿ ಕಾಣೆಯಾಗಿ ಹೋಗುತ್ತಿದ್ದಾರೆ?</p>



<p><strong>ಮಕ್ಕಳ</strong><strong> </strong><strong>ಕುಂಠಿತ</strong><strong> </strong><strong>ಬೆಳವಣಿಗೆ</strong></p>



<p>ದಾಖಲೆಯಂತೆ, ಭಾರತದಲ್ಲಿ ಐದು ವರ್ಷದೊಳಗಿನ ಪ್ರತಿ ಐದು ಮಕ್ಕಳಲ್ಲಿ ಎರಡು ಮಕ್ಕಳ ಬೆಳವಣಿಗೆ ಕುಂಠಿತಗೊಂಡಿರುತ್ತದೆ. ಹೀಗಾಗಿ ಜಗತ್ತಿನ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಭಾರತದಲ್ಲಿ ಬೆಳವಣಿಗೆ ಕುಂಠಿತಗೊಂಡ ಅತಿ ಹೆಚ್ಚು ಮಕ್ಕಳಿದ್ದಾರೆ. ವಯಸ್ಸಿಗೆ ತಕ್ಕಂತೆ ಎತ್ತರ ಬೆಳವಣಿಗೆ ಆಗದಿರುವುದು ಮತ್ತು ದೈಹಿಕ ಹಾಗೂ ಮಿದುಳು ಸಾಮರ್ಥ್ಯ ಅಭಿವೃದ್ಧಿ ಹೊಂದದಿರುವುದನ್ನು ಮಾನದಂಡವಾಗಿ ಇಟ್ಟುಕೊಂಡು ಬೆಳವಣಿಗೆ ಕುಂಠಿತಗೊಂಡಿರುವುದನ್ನು ನಿರ್ಧರಿಸಲಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ತಾಯಂದಿರ ಬಾಲ್ಯವಿವಾಹ! ಮತ್ತೊಂದು ಕಾರಣ ಬಯಲು ಶೌಚದ ಮೂಲಕ ಹರಡುವ ರೋಗ ಮತ್ತು ಸೋಂಕು! ಆ ಮೂಲಕ ಭಾರತದಲ್ಲಿ ಪ್ರತಿ ವರ್ಷ ಅಂದಾಜು 1.4ಲಕ್ಷ ಮಕ್ಕಳು ಭೇದಿಯಿಂದಾಗಿ ಸಾಯುತ್ತಿದ್ದಾರೆ. ಶುದ್ಧ ನೀರಿನ ಕೊರತೆ, ನೈರ್ಮಲ್ಯ ಕೊರತೆಗಳೇ ಶೇಕಡಾ 50ರಷ್ಟು ಭೇದಿ ಪ್ರಕರಣಗಳಿಗೆ ಕಾರಣ. ಬೆಳವಣಿಗೆ ಕುಂಠಿತಗೊಳ್ಳುವ ಸಮಸ್ಯೆಯನ್ನು ಇದು ಇನ್ನಷ್ಟು ಹೆಚ್ಚಿಸುತ್ತದೆ.</p>



<p><strong>ಮಕ್ಕಳ</strong><strong> </strong><strong>ಸ್ಥಿತಿ</strong><strong> </strong><strong>ಅಪಾಯಕಾರಿ</strong><strong> </strong><strong>ಹಂತವನ್ನು</strong><strong> </strong><strong>ತಲುಪಿದೆ</strong><strong>!</strong></p>



<p>ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಸಮಿತಿ 2014ರಲ್ಲಿಯೇ, “ಭಾರತದ ಕಾನೂನು ಅನುಷ್ಠಾನ ಸಂಸ್ಥೆಗಳು ಹಾಗೂ ನ್ಯಾಯಾಂಗ ಇಲಾಖೆಗಳು ಭಾರತ ದೇಶದಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ತಡೆಗಟ್ಟುವಲ್ಲಿ ತಮ್ಮ ಜವಾಬ್ದಾರಿಯಿಂದ ವಿಫಲವಾಗಿವೆ. ದೇಶಾದ್ಯಂತ ಮಕ್ಕಳ ಮೇಲೆ ನಡೆಯುತ್ತಿರುವ ವ್ಯಾಪಕವಾದ ಹಿಂಸೆ, ದೌರ್ಜನ್ಯ, ಲೈಂಗಿಕ ಕಿರುಕುಳ ಮತ್ತು ಮಕ್ಕಳ ನಿರ್ಲಕ್ಷ್ಯ ಆಘಾತ ಹುಟ್ಟಿಸುವಂತಿದೆ” ಎಂದು ತನ್ನ ವರದಿಯಲ್ಲಿ ಭಾರತ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಆದರೆ ಇಷ್ಟು ವರ್ಷಗಳೇ ಕಳೆದು ಹೋದರೂ ನಾವಿನ್ನೂ ಎಚ್ಚೆತ್ತುಕೊಂಡಿಲ್ಲ. ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಕುರಿತು ಯಾವುದೇ ಪರಿಣಾಮಕಾರಿಯಾದ ರಕ್ಷಣಾ ಯೋಜನೆಯನ್ನೂ ಜಾರಿಗೊಳಿಸಿಲ್ಲ. ಹೀಗೆಂದೇ ಭಾರತದಲ್ಲಿ ಮಕ್ಕಳ ಸ್ಥಿತಿ ನಿಜಕ್ಕೂ ಅಪಾಯಕಾರಿ ಹಂತವನ್ನು ತಲುಪಿದೆ.</p>



<p><strong>ಪೋಷಕರು</strong><strong>, </strong><strong>ವ್ಯವಸ್ಥೆ</strong><strong> </strong><strong>ಮತ್ತು</strong><strong> </strong><strong>ಸರ್ಕಾರದ</strong><strong> </strong><strong>ಜವಾಬ್ದಾರಿ</strong></p>



<p>ಸಮಾಜದ ವಿವಿಧ ಅಂಗಗಳನ್ನು ಬಗೆದು ನೋಡುತ್ತಾ ಹೋದರೆ ರಾಜಾರೋಷವಾಗಿ ಮಕ್ಕಳ ಶೋಷಣೆಯ, ನಿರ್ಲಕ್ಷ್ಯದ, ಸ್ಪಷ್ಟ ಮಾನವ ಹಕ್ಕು ಉಲ್ಲಂಘನೆಯ ರಾಶಿ ರಾಶಿ ಪ್ರಕರಣಗಳು ಹಾಗೂ ಅಂಕಿಅಂಶಗಳು ಎಲ್ಲೆಂದರಲ್ಲಿ, ಅತ್ಯಂತ ಸಾಮಾನ್ಯವಾಗಿ ಕಾಣಸಿಗುತ್ತವೆ. ಪ್ರತಿ ಮಗುವಿಗೆ ಅತ್ಯವಶ್ಯಕವಾದ ಕನಿಷ್ಠ ಕಾಳಜಿ, ಗಮನಿಸುವಿಕೆ ಮತ್ತು ಪ್ರೀತಿಯನ್ನು ಕಡು ಎಚ್ಚರಿಕೆಯಿಂದ ನಿರ್ಮಾಣ ಮಾಡುವ ಬಹು ದೊಡ್ಡ ಜವಾಬ್ದಾರಿ ಪೋಷಕರು, ವ್ಯವಸ್ಥೆ ಮತ್ತು ಸರ್ಕಾರದ ಮೇಲಿದೆ. ಈ ಹೊಣೆಯನ್ನು ಪ್ರತಿಯೊಂದು ಅಂಗವೂ ಅಕ್ಕರೆಯಿಂದ ಹೊತ್ತುಕೊಳ್ಳಲು ನಿಜಕ್ಕೂ ತಯಾರಿವೆಯೆ? ಇಲ್ಲವೆಂದಾದರೆ ನಾವು ಮಕ್ಕಳ ದಿನಾಚರಣೆಯ ಹೆಸರಿನಲ್ಲಿ ನಡೆಸುವ ಯಾವುದೇ ಆಡಂಬರದ ಆಚರಣೆಗಳು ಆತ್ಮವಂಚನೆಯಷ್ಟೇ!</p>



<p></p>



<figure class="wp-block-image size-full is-resized"><img loading="lazy" decoding="async" src="https://peepalmedia.com/wp-content/uploads/2022/11/411b8f9f-0534-4fbc-8612-ed0c5bec1b68.jpg" alt="" class="wp-image-15466" width="277" height="363"/><figcaption class="wp-element-caption"><strong>ರೂಪ ಹಾಸನ</strong></figcaption></figure>



<p>ಜೀವಪರ ಕಾಳಜಿಯೊಂದಿಗೆ ಸಾಹಿತ್ಯ ಕೃಷಿ ಮಾಡುವ ಇವರು ತಮ್ಮದೇ ಆದ ʼಪ್ರೇರಣಾ ವಿಕಾಸ ವೇದಿಕೆʼಯ ಮೂಲಕ ಮಕ್ಕಳ ಹಕ್ಕುಗಳಿಗೆ ದನಿಯಾಗುತ್ತಿದ್ದಾರೆ.</p>
]]></content:encoded>
					
		
		
			</item>
	</channel>
</rss>
