<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>climate change &#8211; Peepal Media</title>
	<atom:link href="https://peepalmedia.com/tag/climate-change/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sat, 09 Nov 2024 10:12:02 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>climate change &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಹವಾಮಾನ ವೈಪರಿತ್ಯದಿಂದ ಸಾವಿನ ಸಂಖ್ಯೆ, ಬೆಳೆಹಾನಿ ಹೆಚ್ಚಳ: ಆತಂಕ ಸೃಷ್ಟಿಸುವ ಭಾರತ ಹವಾಮಾನ ವರದಿ 2024</title>
		<link>https://peepalmedia.com/traumatic-data-of-death-in-india-climate-report-2024/</link>
		
		<dc:creator><![CDATA[Charan Aivarnad]]></dc:creator>
		<pubDate>Sat, 09 Nov 2024 10:08:46 +0000</pubDate>
				<category><![CDATA[ಹವಾಮಾನ]]></category>
		<category><![CDATA[climate change]]></category>
		<category><![CDATA[Delhi]]></category>
		<category><![CDATA[Extreme Weather Events]]></category>
		<category><![CDATA[global warming]]></category>
		<category><![CDATA[himalaya]]></category>
		<category><![CDATA[India Climate Report 2024]]></category>
		<category><![CDATA[India Meteorological Department Ministry of Earth Sciences Government of India]]></category>
		<category><![CDATA[karnataka]]></category>
		<category><![CDATA[natural disasters]]></category>
		<category><![CDATA[UP]]></category>
		<category><![CDATA[wayanad]]></category>
		<guid isPermaLink="false">https://peepalmedia.com/?p=48673</guid>

					<description><![CDATA[ಬೆಂಗಳೂರು : 3,200ಕ್ಕೂ ಅಧಿಕ ಮಂದಿಯ ಮರಣ, 32 ಲಕ್ಷ ಹೆಕ್ಟೇರ್ ಫಸಲು ಹಾನಿ, ಸುಮಾರು 2.3 ಲಕ್ಷ ಮನೆಗಳು ಮತ್ತು ಕಟ್ಟಡಗಳು ನೆಲಸಮ ಮತ್ತು 9,400 ಕ್ಕೂ ಹೆಚ್ಚು ಜಾನುವಾರುಗಳು ಸಾವು &#8211; ಇದು 2024 ರ ಮೊದಲ ಒಂಬತ್ತು ತಿಂಗಳ 274 ದಿನಗಳಲ್ಲಿ 255 ದಿನಗಳಲ್ಲಿ ಭಾರತದಾದ್ಯಂತ ನಡೆದ ಹವಾಮಾನ ವೈಪರೀತ್ಯದ ಪರಿಣಾಮ. ಇವು ಇತ್ತೀಚಿಗೆ ಬಿಡುಗಡೆಯಾದ ಇಂಡಿಯಾ ಕ್ಲೈಮೇಟ್ ರಿಪೋರ್ಟ್ 2024 ರಲ್ಲಿರುವ ಆತಂಕಕಾರಿ ಅಂಕಿಅಂಶ. ಇಂಡಿಯಾ ಕ್ಲೈಮೇಟ್ ರಿಪೋರ್ಟ್ 2024‌ &#8211; ಇದನ್ನು ನವೆಂಬರ್ [&#8230;]]]></description>
										<content:encoded><![CDATA[
<p><strong>ಬೆಂಗಳೂರು</strong> : 3,200ಕ್ಕೂ ಅಧಿಕ ಮಂದಿಯ ಮರಣ, 32 ಲಕ್ಷ ಹೆಕ್ಟೇರ್ ಫಸಲು ಹಾನಿ, ಸುಮಾರು 2.3 ಲಕ್ಷ ಮನೆಗಳು ಮತ್ತು ಕಟ್ಟಡಗಳು ನೆಲಸಮ ಮತ್ತು 9,400 ಕ್ಕೂ ಹೆಚ್ಚು ಜಾನುವಾರುಗಳು ಸಾವು &#8211; ಇದು 2024 ರ ಮೊದಲ ಒಂಬತ್ತು ತಿಂಗಳ 274 ದಿನಗಳಲ್ಲಿ 255 ದಿನಗಳಲ್ಲಿ ಭಾರತದಾದ್ಯಂತ ನಡೆದ ಹವಾಮಾನ ವೈಪರೀತ್ಯದ ಪರಿಣಾಮ. <a href="https://www.cseindia.org/climate-india-2024-an-assessment-of-extreme-weather-events-12460">ಇವು ಇತ್ತೀಚಿಗೆ ಬಿಡುಗಡೆಯಾದ ಇಂಡಿಯಾ ಕ್ಲೈಮೇಟ್ ರಿಪೋರ್ಟ್ 2024</a> ರಲ್ಲಿರುವ ಆತಂಕಕಾರಿ ಅಂಕಿಅಂಶ. </p>



<p>ಇಂಡಿಯಾ ಕ್ಲೈಮೇಟ್ ರಿಪೋರ್ಟ್ 2024‌ &#8211; ಇದನ್ನು ನವೆಂಬರ್ 8, ಶುಕ್ರವಾರದಂದು ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್‌ಮೆಂಟ್ (ಸಿಎಸ್‌ಇ) ಮತ್ತು ಅದರ ಪಾಕ್ಷಿಕ ಪತ್ರಿಕೆ ʼ<em>ಡೌನ್ ಟು ಅರ್ಥ್</em>ʼ ಪ್ರಕಟಿಸಿವೆ. </p>



<p>2024 ರಲ್ಲಿ ಭಾರತ ಅತ್ಯಂತ ಹೆಚ್ಚು ಹವಾಮಾನ ವೈಪರಿತ್ಯದ ಸಂಕಷ್ಟಗಳನ್ನು ಕಂಡಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಸಿಎಸ್‌ಇ ಪ್ರಕಟಿಸಿರುವ ಈ ವರದಿ ಮಹತ್ವದ ಅಂಶಗಳನ್ನು ನಮ್ಮ ಮುಂದೆ ಇಡುತ್ತದೆ. ಭಾರತದ ಹವಾಮಾನ ವರದಿ 2023 ಯು 2023 ರ ಮೊದಲ ಒಂಬತ್ತು ತಿಂಗಳುಗಳಲ್ಲಿ 273 ದಿನಗಳಲ್ಲಿ 235 ದಿನಗಳಲ್ಲಿ ಸಂಭವಿಸಿರುವ ವಿಪರೀತ ಹವಾಮಾನ ವೈಪರಿತ್ಯದ ಘಟನೆಗಳನ್ನು ವರದಿ ಮಾಡಿದೆ. ಆ ವರ್ಷ 2,923 ಜನರು ಸತ್ತಿದ್ದರು, 18.4 ಲಕ್ಷ ಹೆಕ್ಟೆರ್ ಕೃಷಿ ಭೂಮಿಯ ಹಾನಿಯಾಗಿತ್ತು. </p>



<p>ಪ್ರತೀ ವರ್ಷ ಹವಾಮಾನ ವೈಪರಿತ್ಯದಿಂದ ಸಂಭವಿಸುವ ದುರಂತಗಳು ಹೆಚ್ಚಾಗುತ್ತಲೇ ಇವೆ ಎಂಬುದನ್ನೇ 2024 ರ ಭಾರತದ ಹವಾಮಾನ ವರದಿಯೂ ಹೇಳುತ್ತದೆ. </p>



<p>ಪೆಟ್ರೋಲ್‌ ಮೊದಲಾದ ಪಳೆಯುಳಿಕೆ ಇಂಧನಗಳಿಂದ ಹೊರಸೂಸುವ ವಿಷಕಾರಿ ಅನಿಲಗಳಿಂದಾಗಿ ಭೂಮಿಯ ತಾಪಮಾನದಲ್ಲಿ ಏರಿಕೆಯಾಗುತ್ತಲೇ ಇದೆ. ಜಗತ್ತಿನ ಬೇರೆ ಬೇರೆ ಭಾಗಗಳು ಹವಾಮಾನ ಬದಲಾವಣೆಯಿಂದಾಗಿ ಸಮಸ್ಯೆಗಳನ್ನು ಎದುರಿಸಿವೆ. ಒಮ್ಮೆ ತಾಪಮಾನ ಹೆಚ್ಚಾದರೆ, ಮತ್ತೊಮ್ಮೆ ವಾಡಿಕೆಗಿಂತ ಹೆಚ್ಚು ಮಳೆ ಸುರಿಯುತ್ತಿದೆ, ಅದರಲ್ಲೂ ಅಕಾಲಿಕ ಮಳೆ ಸುರಿಯುತ್ತಿದೆ. </p>



<p>ಇದಕ್ಕೆ ಭಾರತವೂ ಹೊರತಾಗಿಲ್ಲ. ಭಾರತದಲ್ಲಿ ಒಮ್ಮೆ ತೀವ್ರ ಮಳೆಯಾದರೆ, ಇನ್ನೊಮ್ಮೆ ಮೈ ಸುಡುವ ಬಿಸಿಲು. </p>



<p>ಹವಾಮಾನ ವೈಪರೀತ್ಯಗಳಿಗೆ ಭಾರತವೂ ಸಾಕ್ಷಿಯಾಗಿದೆ. ಇವು ತೀವ್ರ ಮಳೆಯಿಂದ ಹಿಡಿದು ಶಾಖದ ಅಲೆಗಳವರೆಗೆ ಇರುತ್ತದೆ. ಭಾರತೀಯ ಹವಾಮಾನ ಇಲಾಖೆ (IMD) ಹವಾಮಾನವನ್ನು ಮಿಂಚು ಮತ್ತು ಗುಡುಗು, ಭಾರೀ ಮಳೆಯಿಂದ ವಿಪರೀತ ಮಳೆ, ವಿಪರೀತ ಭಾರೀ ಮಳೆ, ಭೂಕುಸಿತ ಮತ್ತು ಪ್ರವಾಹ, ಚಳಿ ಗಾಳಿ, ಶಾಖದ ಅಲೆಗಳು, ಚಂಡಮಾರುತಗಳು, ಹಿಮಪಾತಗಳು, ಧೂಳು ಮತ್ತು ಮರಳು ಬಿರುಗಾಳಿಗಳು, ಸ್ಕ್ವಾಲ್ಸ್, ಆಲಿಕಲ್ಲುಗಳು ಮತ್ತು ಬಿರುಗಾಳಿಗಳು  ಎಂದು ವರ್ಗೀಕರಿಸಿದೆ. ( lightning and thunderstorms, heavy to very heavy, and extremely heavy rainfall, landslides and floods, cold waves, heatwaves, cyclones, snowfall, dust and sandstorms, squalls, hailstorms and gales)</p>



<p>ಸಿಎಸ್‌ಇ ಮತ್ತು ಅದರ ಪತ್ರಿಕೆ ಡೌನ್ ಟು ಅರ್ಥ್‌ನ ಸಂಶೋಧಕರು ಕಳೆದ ಮೂರು ವರ್ಷಗಳಿಂದ ಭಾರತದಾದ್ಯಂತ ಹವಾಮಾನ ವೈಪರೀತ್ಯದ ಘಟನೆಗಳ ಮಾಹಿತಿಯನ್ನು ಕಳೆಹಾಕುತ್ತಿದ್ದಾರೆ. ಭಾರತೀಯ ಹವಾಮಾನ ಇಲಾಖೆ ಬಿಡುಗಡೆ ಮಾಡಿದ ದೈನಂದಿನ ಮತ್ತು ಮಾಸಿಕ ಹವಾಮಾನ ವರದಿಗಳು, ಕೇಂದ್ರ ಗೃಹ ಸಚಿವಾಲಯದ ವಿಪತ್ತು ನಿರ್ವಹಣಾ ವಿಭಾಗ (DMD) ಬಿಡುಗಡೆ ಮಾಡಿದ ಡೇಟಾ ಮತ್ತು ಮಾಧ್ಯಮ ವರದಿಗಳನ್ನು (ಮಾರ್ಚ್‌ನಿಂದ ಮೇ ವರೆಗಿನ ಪೂರ್ವ ಮಾನ್ಸೂನ್ ಅವಧಿಯಲ್ಲಿ ಘಟನೆಗಳಿಗಾಗಿ) ಅಧ್ಯಯನ ಮಾಡಿದ್ದಾರೆ.</p>



<p>2024 ರ ಮೊದಲ ಒಂಬತ್ತು ತಿಂಗಳುಗಳಲ್ಲಿ (ಜನವರಿ 1 ರಿಂದ ಸೆಪ್ಟೆಂಬರ್ 30) 93% ದಿನಗಳಲ್ಲಿ ಭಾರತವು ಹವಾಮಾನ ವೈಪರೀತ್ಯವನ್ನು ಎದುರಿಸಿದೆ. ಇದು ಒಟ್ಟು 274 ದಿನಗಳಲ್ಲಿ 255 ದಿನಗಳಲ್ಲಿ ಸಂಭವಿಸಿದ ಘಟನೆಗಳ ಗಂಭೀರತೆಯನ್ನು ಈ ವರದಿ ನಮ್ಮ ಮುಂದಿಡುತ್ತದೆ. ಮಿಂಚು ಮತ್ತು ಚಂಡಮಾರುತಗಳಿಂದ ಹಿಡಿದು ಭಾರೀ ಮಳೆ, ಪ್ರವಾಹ, ಭೂಕುಸಿತಗಳು ಮತ್ತು ಶಾಖದ ಅಲೆಗಳಂತಹ ವಿಕೋಪಗಳಿಗೆ 3,238 ಜನರು ಬಲಿಯಾಗಿದ್ದಾರೆ, 32 ಲಕ್ಷ ಹೆಕ್ಟೇರ್ ಬೆಳೆಹಾನಿಯಾಗಿದೆ, 2,35,862 ಮನೆಗಳು ಮತ್ತು ಕಟ್ಟಡಗಳು ನೆಲಸಮವಾಗಿವೆ, 9,457 ಜಾನುವಾರುಗಳು ಸತ್ತಿವೆ. ಇದು ಇಡೀ ಭಾರತದಲ್ಲಿ ನಡೆದಿದೆ.</p>



<p>ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ವರ್ಷ 27 ರಾಜ್ಯಗಳು ಮತ್ತು ಕೇಂದ್ರಾಡಳಿ ಪ್ರದೇಶಗಳು ಹೆಚ್ಚಿನ ಸಂಖ್ಯೆಯ ಹವಾಮಾನ ವೀಕೋಪಗಳನ್ನು ಎದುರಿಸಿವೆ. ಕರ್ನಾಟಕ, ಕೇರಳ ಮತ್ತು ಉತ್ತರ ಪ್ರದೇಶ ಈ ವರ್ಷ 40 ಅಥವಾ ಅದಕ್ಕಿಂತ ಹೆಚ್ಚು ದಿನಗಳ ಕಾಲ ವಿಪರೀತ ಹವಾಮಾನ ವಿಕೋಪವನ್ನು ಕಂಡಿವೆ. ಹಾಗಾಗಿ ಕೇರಳ (550) ಅತೀ ಹೆಚ್ಚು ಸಾವನ್ನು ದಾಖಲಿಸಿದೆ, ಆ ನಂತರ ಮಧ್ಯಪ್ರದೇಶ (353) ಮತ್ತು ಅಸ್ಸಾಂ (256). ಆಂಧ್ರಪ್ರದೇಶದಲ್ಲಿ ಅತೀ ಹೆಚ್ಚು ಮನೆಗಳು (85,806) ಹಾನಿಗೀಡಾಗಿದ್ದು, ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಪ್ರಮಾಣದ ಬೆಳೆ ಹಾನಿಯಾಗಿದೆ.</p>



<p>ಈ ಒಂಬತ್ತು ತಿಂಗಳಲ್ಲಿ 274 ದಿನಗಳಲ್ಲಿ 77 ದಿನಗಳ ಕಾಲ ದೇಶ ಬಿಸಿ ಶಾಖದ ಅಲೆಗಳಿಗೆ ತತ್ತರಿಸಿ ಹೋಗಿತ್ತು, ದೇಶದಾದ್ಯಂತ ಉರಿ ತಾಳಲಾರದೆ  210 ಮಂದಿ ಸಾವನ್ನಪ್ಪಿದರು. ಜೂನ್ ನಿಂದ ಸೆಪ್ಟೆಂಬರ್ ವರೆಗಿನ  ಮಾನ್ಸೂನ್ ಸೀಸನ್‌ನಲ್ಲಿ ದೇಶದಾದ್ಯಂತ ಪ್ರತಿ ದಿನ ಪ್ರಕೃತಿ ವಿಕೋಪದ ಘಟನೆಗಳು ಕಂಡುಬಂದಿವೆ. 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂತಹ ಘಟನೆಗಳು ವರದಿಯಾಗಿವೆ. ಈ ನಾಲ್ಕು ತಿಂಗಳಲ್ಲಿ 122 ದಿನ ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸಿದ್ದವು,103 ದಿನ ಮಿಂಚು ಮತ್ತು ಬಿರುಗಾಳಿಗಳು ಕಂಡುಬಂದಿದ್ದವು. ಇದರಲ್ಲಿ ಅತೀ ಹೆಚ್ಚು ಹಾನಿಗೊಳಗಾದ ರಾಜ್ಯ ಅಸ್ಸಾಂ (111 ದಿನ). ಮಾನ್ಸೂನ್‌ನಲ್ಲಿ ದೇಶದಾದ್ಯಂತ 2,716 ಜನರು ಸಾವನ್ನಪ್ಪಿದ್ದಾರೆ ಮತ್ತು 30.4 ಲಕ್ಷ ಹೆಕ್ಟೆರ್ ಬೆಳೆ ಹಾನಿಯಾಗಿದೆ.</p>



<p>2024 ರ ಜನವರಿ ತಿಂಗಳಲ್ಲಿ ತಾಪಮಾನ ಏರಿಕೆಯಿಂದ ಕಂಡುಬಂದ ಒಣಗಿದಂತ ವಾತಾವರಣ 1901 ರಿಂದ ಕಂಡುಬಂದಿರುವ ಒಂಬತ್ತನೇ ಪರಿಸ್ಥಿತಿಯಾಗಿದೆ. ಫೆಬ್ರವರಿಯಲ್ಲಿ 123 ವರ್ಷಗಳಲ್ಲೇ ಎರಡನೇ ಬಾರಿಹೆ ಅತೀ ಹೆಚ್ಚು ತಾಪಮಾನ ದಾಖಲಾಗಿತ್ತು. ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್‌ನ ಅತ್ಯಧಿಕ ಕನಿಷ್ಠ ತಾಪಮಾನವು 1901 ರಿಂದ ಅತಿ ಹೆಚ್ಚಿನದಾಗಿದೆ. ಪೂರ್ವ ಮತ್ತು ಈಶಾನ್ಯ ಭಾರತವು 123 ವರ್ಷಗಳಲ್ಲಿ 12 ನೇ ಡ್ರೈ ಜುಲೈಯನ್ನು ಕಂಡಿದೆ.</p>



<p>ಭಾರತದ ಹವಾಮಾನ ಇಲಾಖೆಯು ಉರಿಬಿಸಿಯ ರಾತ್ರಿಗಳ ಬಗೆಗಿನ ಡೇಟಾವನ್ನು ಕೂಡ ಕೊಟ್ಟಿದೆ. 2024 ರಲ್ಲಿ ಭಾರತ ಕಂಡ ಅತ್ಯಂತ ಬಿಸಿಯ ರಾತ್ರಿ ಎಂದರೆ 40 ° ಸೆಲ್ಸಿಯಸ್‌ ತಾಪಮಾನದ ರಾತ್ರಿ, ಕನಿಷ್ಠ ತಾಪಮಾನದ ರಾತ್ರಿ ಎಂದರೆ ಸಾಮಾನ್ಯಕ್ಕಿಂತ 4.5 ° &#8211; 6.4 ° ಸೆಲ್ಸಿಯಸ್‌ನ ರಾತ್ರಿ. ಇದರಿಂದ ಜನರ ಆರೋಗ್ಯದ ಮೇಲೆ ವ್ಯತಿರೀಕ್ತ ಪರಿಣಾಮಗಳು ಕಂಡುಬಂದಿದ್ದವು. ಫ್ಯಾನ್‌ಗಳ ಅಡಿಯಲ್ಲಿ ಕೂತರೂ ಬಿಸಿಗಾಳಿ ಬರುತ್ತಿತ್ತು, ಹೊರಗೆ ಹೋದರೆ ವಾತಾವರಣ ಇನ್ನೂ ಬಿಸಿ. ಒಟ್ಟಾರೆ ಕೆಂಡದ ಮೇಲೆ ನಿದ್ದೆ ಮಾಡಿದ ಅನುಭವವಾಗುತ್ತಿತ್ತು. 2024 ರ ಮಾರ್ಚ್ ಮತ್ತು ಜೂನ್ ನಡುವೆ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಬಿಸಿರಾತ್ರಿಯ ಉರಿಯಲ್ಲಿ ಬೆಂದಿವೆ.</p>



<p>ಚಂಡೀಗಢ, ದೆಹಲಿ, ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶ ಜೂನ್ ಮಧ್ಯದಲ್ಲಿ ವಿಪರೀತ ತಾಪಮಾನದ ರಾತ್ರಿಗಳನ್ನು ಕಳೆದಿವೆ. ಇವುಗಳಲ್ಲಿ ಚಂಡೀಗಢ, ದೆಹಲಿ ಮತ್ತು ಹರಿಯಾಣವು ಜೂನ್ 15 ರಿಂದ ಜೂನ್ 18 ರವರೆಗೆ ನಾಲ್ಕು ಬಾರಿ &#8220;ತೀವ್ರ ತಾಪಮಾನದ ರಾತ್ರಿಗಳನ್ನು&#8221; ದಾಖಲಿಸಿವೆ. </p>



<p>ಆದರೂ ಭಾರತ ಹವಾಮಾನ ವರದಿ 2024 ಹೇಳುವಂತೆ, ಭಾರತದ ಹವಾಮಾನ ಇಲಾಖೆಯು ತಾಪ ಹೆಚ್ಚಿರುವ ರಾತ್ರಿಗಳ ಡೇಟಾವನ್ನು ನೀಡಿಲು ಆರಂಭಿಸಿದರೂ ಉಳಿದ ದೇಶಗಳಂತೆ ಇದು ಸಂಪೂರ್ಣ ತಾಪಮಾನದ ಮಿತಿಯ ಡೇಟಾ ಕೊಡುತ್ತಿಲ್ಲ. 2024 ರಿಂದ ಸಂಚಿತ ಡೇಟಾವನ್ನು ಒದಗಿಸುವುದನ್ನು ನಿಲ್ಲಿಸಿರುವುದರಿಂದ, ವಿಪತ್ತು ನಿರ್ವಹಣಾ ಇಲಾಖೆ ಕೊಡುವ ಮಾಹಿತಿಯಲ್ಲಿ ಸಮಗ್ರತೆ ಇಲ್ಲದೆ, ಅದನ್ನು ಹವಮಾನ ವೈಪರಿತ್ಯದಿಂದ ಉಂಟಾದ ಹಾನಿಯನ್ನು ನಿರ್ಧರಿಸಲು ಬಳಸುವುದರಲ್ಲಿ ಸಮಸ್ಯೆ ಇದೆ. ಅಲ್ಲಿರುವ ಅಂಕಿಅಂಶಗಳು ಅಂದಾಜಿನ ಮೇಲೆ ನಿರ್ಧರಿಸಲ್ಪಟ್ಟಿರುತ್ತವೆ. ಭಾರತದ ಹವಾಮಾನ ವರದಿ 2024 ಹವಾಮಾನ ವೈಪರಿತ್ಯಗಳ ಸಮಗ್ರ ಮಾಹಿತಿ ತಯಾರಿಸುವುದನ್ನು ಒತ್ತಾಯಿಸುತ್ತದೆ.</p>



<p>ಉದಾಹರಣೆಗೆ, ಭಾರತವು ಹವಾಮಾನ ವೈಪರೀತ್ಯಗಳಿಗೆ ಸಾಕ್ಷಿಯಾಗಿರುವ ದಿನಗಳ ಸಂಖ್ಯೆಯು 2022 ರಿಂದ 2024 ಕ್ಕೆ ಸ್ಥಿರವಾಗಿ ಏರಿದೆ. 2022 ರಲ್ಲಿ ಇದು ಮೊದಲ ಒಂಬತ್ತು ತಿಂಗಳಲ್ಲಿ 86% ದಿನಗಳು; 2023 ಕ್ಕೆ ಇದು 88% ಕ್ಕೆ ಏರಿತು ಮತ್ತು ಈಗ 2024 ರಲ್ಲಿ 93% ಆಗಿದೆ. ಜೀವಹಾನಿ ಮತ್ತು ಆರ್ಥಿಕ ನಷ್ಟಗಳು ಕೂಡ ಹೆಚ್ಚಾಗಿವೆ. 2022 ರಲ್ಲಿ 2,755 ಇದ್ದ ಜನರ ಜೀವಹಾನಿಯ ಸಂಖ್ಯೆ 2024 ರಲ್ಲಿ 3,238 ಕ್ಕೆ ಏರಿಕೆಯಾಗಿದೆ. ಕೇವಲ ಮೂರು ವರ್ಷಗಳಲ್ಲಿ 18% ಹೆಚ್ಚಳವಾಗಿದೆ ಎಂದು ವರದಿ ಹೇಳುತ್ತದೆ.</p>



<pre class="wp-block-code"><code>“ಕೇರಳವು ಅತ್ಯಂತ ಕೆಟ್ಟ ಭೂಕುಸಿತವನ್ನು ಕಂಡಿದೆ, ಕೇರಳದ ಪಶ್ಚಿಮ ಘಟ್ಟಗಳ ಅನೇಕ ಭಾಗಗಳಲ್ಲಿ ಇನ್ನೂ ಕಲ್ಲಿನ ಕ್ವಾರಿಗಳು ಕೆಲಸ ಮಾಡುತ್ತಿವೆ. ನಾಳೆ ಇಲ್ಲವೇನೋ ಎಂಬಂತೆ ಅಭಿವೃದ್ಧಿಯ ಕೆಲಸ ನಡೆಯುತ್ತಿದೆ. ಅದೇ ರೀತಿ ಹಿಮಾಲಯ, ದೆಹಲಿ ನಗರವೂ ​​ಅಷ್ಟೇ. ದೆಹಲಿಯ ಪ್ರವಾಹ ಬರೀ ಹೆಚ್ಚು ಮಳೆಯಾದ ಕಾರಣಕ್ಕೆ ಮಾತ್ರ ಅಲ್ಲ, ನಮ್ಮ ನಗರಗಳಲ್ಲಿರುವ ಕೆರೆಗಳು, ಕೊಳಗಳು ಮತ್ತು ಚರಂಡಿಗಳನ್ನು ನಾಶಪಡಿಸಿದ್ದೇ ಕಾರಣ" -  <strong>ಸುನೀತಾ ನರೇನ್</strong>, ಸಿಎಸ್‌ಇಯ ಮಹಾನಿರ್ದೇಶಕಿ ಮತ್ತು <em>ಡೌನ್ ಟು ಅರ್ಥ್</em> ಸಂಪಾದಕಿ</code></pre>
]]></content:encoded>
					
		
		
			</item>
		<item>
		<title>ಹವಾಮಾನ ವೈಪರೀತ್ಯ ಸಂಬಂಧಿತ ವ್ಯಾಜ್ಯಗಳು, ಕಟಕಟೆಯಲ್ಲಿ ಸರ್ಕಾರಗಳು</title>
		<link>https://peepalmedia.com/climate-related-litigation-governments-at-stake/</link>
		
		<dc:creator><![CDATA[Ranjita G H]]></dc:creator>
		<pubDate>Mon, 31 Jul 2023 07:21:27 +0000</pubDate>
				<category><![CDATA[ವಿಶೇಷ]]></category>
		<category><![CDATA[climate change]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=24645</guid>

					<description><![CDATA[ಫಿನ್ಲೆಂಡ್ ಸೇರಿದಂತೆ ಉತ್ತರ ಯೂರೋಪಿನ ದೇಶಗಳ ನಾಗರೀಕರು ತಮ್ಮ ಎರಡು ತಿಂಗಳ ಬೇಸಿಗೆಯನ್ನು, 30 ದಿನಗಳ ರಜೆಯನ್ನು ಅತ್ಯಮೂಲ್ಯವೆಂದು ಪರಿಗಣಿಸುತ್ತಾರೆ. ಸರ್ಕಾರೀ ಕಛೇರಿ ಸಿಬ್ಬಂದಿಯೂ ರಜೆಯಲ್ಲಿರುತ್ತಾರೆಯಾದ್ದರಿಂದ ಈ ಅವಧಿಯಲ್ಲಿ ಸರ್ಕಾರವೇ ಸ್ತಬ್ಧವಾಗಿದೆಯೇನೋ ಅನಿಸುತ್ತದೆ. ಸದ್ಯ ಫಿನ್ಲೆಂಡ್ನ ಹೊಸ ಪ್ರಧಾನಿ ಕೂಡ ಬೇಸಿಗೆ ರಜೆಯ ಸುಖ ಅನುಭವಿಸುತ್ತಿದ್ದಾರೆ ಹಾಗೂ ಮೂವರು ಮಂತ್ರಿಗಳು ಸರದಿಯಲ್ಲಿ ಈ ಅವಧಿಗೆ ಹಂಗಾಮಿ ಪ್ರಧಾನಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.&#160;ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಬೇಸಿಗೆಯ ಪ್ರವಾಸ ಭತ್ಯೆಯ ಕೊಡಬೇಕೆಂಬ ಕಾನೂನು ಫಿನ್ಲೆಂಡ್ ನಲ್ಲಿಯಂತೂ ಇದೆ, &#8211; [&#8230;]]]></description>
										<content:encoded><![CDATA[
<p>ಫಿನ್ಲೆಂಡ್ ಸೇರಿದಂತೆ ಉತ್ತರ ಯೂರೋಪಿನ ದೇಶಗಳ ನಾಗರೀಕರು ತಮ್ಮ ಎರಡು ತಿಂಗಳ ಬೇಸಿಗೆಯನ್ನು, 30 ದಿನಗಳ ರಜೆಯನ್ನು ಅತ್ಯಮೂಲ್ಯವೆಂದು ಪರಿಗಣಿಸುತ್ತಾರೆ. ಸರ್ಕಾರೀ ಕಛೇರಿ ಸಿಬ್ಬಂದಿಯೂ ರಜೆಯಲ್ಲಿರುತ್ತಾರೆಯಾದ್ದರಿಂದ ಈ ಅವಧಿಯಲ್ಲಿ ಸರ್ಕಾರವೇ ಸ್ತಬ್ಧವಾಗಿದೆಯೇನೋ ಅನಿಸುತ್ತದೆ. ಸದ್ಯ ಫಿನ್ಲೆಂಡ್ನ ಹೊಸ ಪ್ರಧಾನಿ ಕೂಡ ಬೇಸಿಗೆ ರಜೆಯ ಸುಖ ಅನುಭವಿಸುತ್ತಿದ್ದಾರೆ ಹಾಗೂ ಮೂವರು ಮಂತ್ರಿಗಳು ಸರದಿಯಲ್ಲಿ ಈ ಅವಧಿಗೆ ಹಂಗಾಮಿ ಪ್ರಧಾನಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.&nbsp;ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಬೇಸಿಗೆಯ ಪ್ರವಾಸ ಭತ್ಯೆಯ ಕೊಡಬೇಕೆಂಬ ಕಾನೂನು ಫಿನ್ಲೆಂಡ್ ನಲ್ಲಿಯಂತೂ ಇದೆ, &#8211; ಇತರೆ ಯೂರೋಪಿನ ದೇಶಗಳಲ್ಲೂ ಇರಬಹುದು &#8211; ಆದ್ದರಿಂದ ಹತ್ತಿರದ ದಕ್ಷಿಣ ಯೂರೋಪಿನ ದೇಶಗಳು ಈ ಅವಧಿಯಲ್ಲಿ ಪ್ರವಾಸಿಗಳಿಂದ ತುಂಬಿ ತುಳುಕುತ್ತವೆ.&nbsp;</p>



<p>ಬೇಸಿಗೆಯಲ್ಲಿ ಹೆಚ್ಚುವ ವಾಹನ/ವಿಮಾನ ಪ್ರಯಾಣಗಳೂ ಸಹ ಹವಾಮಾನ ವೈಪರೀತ್ಯಕ್ಕೆ ತನ್ನದೇ ರೀತಿಯಲ್ಲಿ ಕೊಡುಗೆ ನೀಡುತ್ತವೆಯಾದರೂ ಉತ್ತರ ಯೂರೋಪ್ ನ ಕಡು ಚಳಿಗಾಲದ ಅನುಭವವಾಗಿರುವುದರಿಂದ ಕ್ಷಣಿಕ ಬೇಸಿಗೆಯ ಆನಂದ ಅನುಭವಿಸಲು ಇತರೆ ದೇಶಗಳಿಗೆ ಸೈಕಲ್/ಕಾಲ್ನಡಿಗೆ/ವ್ಯಾನು/ವಿಮಾನ ಪ್ರಯಾಣ ಮಾಡುವ ಉತ್ತರ ಯರೋಪ್ ದೇಶವಾಸಿಗಳ ಈ ನಡೆಯನ್ನು ಖಂಡಿಸುವುದೇ ಬೇಡವೇ ಎಂದು ನಾನೂ ಗೊಂದಲಕ್ಕೆ ಬಿದ್ದಿದ್ದೇನೆ.</p>


<div class="wp-block-image">
<figure class="aligncenter size-full"><img fetchpriority="high" decoding="async" width="1000" height="640" src="https://peepalmedia.com/wp-content/uploads/2023/07/RhodesIslandwildfire.jpg" alt="" class="wp-image-24647" srcset="https://peepalmedia.com/wp-content/uploads/2023/07/RhodesIslandwildfire.jpg 1000w, https://peepalmedia.com/wp-content/uploads/2023/07/RhodesIslandwildfire-300x192.jpg 300w, https://peepalmedia.com/wp-content/uploads/2023/07/RhodesIslandwildfire-768x492.jpg 768w, https://peepalmedia.com/wp-content/uploads/2023/07/RhodesIslandwildfire-150x96.jpg 150w, https://peepalmedia.com/wp-content/uploads/2023/07/RhodesIslandwildfire-696x445.jpg 696w" sizes="(max-width: 1000px) 100vw, 1000px" /><figcaption class="wp-element-caption"><strong>ಗ್ರೀಸ್ ಕಾಡ್ಗಿಚ್ಚಿನಿಂದ ರಕ್ಷಿಸಲ್ಪಟ್ಟು ಸ್ಟೇಡಿಯಂಗಳಲ್ಲಿ ಆಶ್ರಯ ಪಡೆದಿರುವ ಪ್ರವಾಸಿಗಳು</strong></figcaption></figure></div>


<p>ಆದರೆ ಹವಾಮಾನ ವೈಪರೀತ್ಯದಿಂದಾಗಿ ಯೂರೋಪ್ ಅದರಲ್ಲೂ ದಕ್ಷಿಣ ಯೂರೋಪಿನ ಹಲವು ದೇಶಗಳು ಇತ್ತೀಚಿನ ವರ್ಷಗಳ ಬೇಸಿಗೆಯಲ್ಲಿ ಉರಿಯುವ ಒಲೆಗಳಂತಾಗುತ್ತಿವೆ. ಈ ವರ್ಷ ಗ್ರೀಸ್ ನ ಪ್ರಸಿದ್ಧ ಪ್ರವಾಸಿ ತಾಣ ಅಥೆನ್ಸ್ ಕಳೆದ 50 ವರ್ಷಗಳಲ್ಲಿ ಅತೀ ಹೆಚ್ಚು ತಾಪಮಾನವನ್ನು ದಾಖಲಿಸಿತು. ಕ್ರಿ .ಪೂ 5ನೇ ಶತಮಾನದ ಐತಿಹಾಸಿಕ ಸ್ಮಾರಕ ಆಕ್ರೊಪೊಲಿಸ್ ಹಾಗೂ ಇನ್ನಿತರ ಪುರಾತತ್ವ ಸ್ಥಳಗಳನ್ನು ಕುದಿ ಬೇಸಿಗೆಯ ಕಾರಣದಿಂದಾಗಿ ಮುಚ್ಚಬೇಕಾಯಿತು. ಅಥೆನ್ಸ್ ಸಮೀಪದ ರಹೋಡ್ಸ್ ದ್ವೀಪದಲ್ಲಿ ಸಂಭವಿಸಿದ ಮಹಾ ಕಾಡ್ಗಿಚ್ಚಿನ ಬಗ್ಗೆ ಸಾಕಷ್ಟು ಸುದ್ದಿಯಾಗಿದೆ. 700ಕ್ಕೂ ಹೆಚ್ಚು ಫಿನ್ಲೆಂಡಿಗರು ಸೇರಿದಂತೆ ಹಲವು ಯೂರೋಪಿನ ಪ್ರವಾಸಿಗಳು ಕಾಡ್ಗಿಚ್ಚಿಗೆ ಸಿಲುಕದಂತೆ ರಕ್ಷಿಸಿ ಅವರನ್ನು ವಾಪಸು ಕಳಿಸಿದ ಗ್ರೀಸ್ ಜನತೆ ಹಾಗೂ ಸರ್ಕಾರದ ಪ್ರಯತ್ನಕ್ಕೆ ಆಯಾ ದೇಶಗಳು ಅಭಿನಂದನೆ ಸಲ್ಲಿಸಿವೆ, ಕಾಡ್ಗಿಚ್ಚು ನಂದಿಸಲು ತಮ್ಮ ಸಿಬ್ಬಂದಿಗಳನ್ನೂ ಕಳುಹಿಸಿವೆ.ಸುಮಾರು 30000 ಜನರನ್ನು ಸ್ಥಳಾಂತರಿಸಬೇಕಾದ ಪರಿಸ್ಥಿತಿ ನಿರ್ಮಿಸಿದ, ಗ್ರೀಸ್ ನ ಇತಿಹಾಸದಲ್ಲೇ ಅತಿ ಗಂಭೀರ ಕಾಡ್ಗಿಚ್ಚು ಇದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.ಹವಾಮಾನ ವೈಪರೀತ್ಯಗಳ ‘ಹಾಟ್ ಸ್ಪಾಟ್’ ಎಂದೇ ಕರೆಯಲಾಗುವ ಮೆಡಿಟರೇನಿಯನ್ ಸಮುದ್ರ ತೀರದ ಈ ದಕ್ಷಿಣ ಯೂರೋಪಿನ ದೇಶಗಳಲ್ಲಿ ಈಗ ಮಕ್ಕಳನ್ನು ,ವೃದ್ಧರನ್ನು ಬೇಸಿಗೆಯಿಂದ ರಕ್ಷಿಸುವುದೇ ಮನೆಯ ಇತರೆ ಸದಸ್ಯರಿಗೆ ಅತೀ ಕಷ್ಟದ ಕೆಲಸ. ಮೇ -ಜೂನ್ ಅವಧಿಯಲ್ಲಿ ಕೆನಡಾದಲ್ಲಿಯೂ ಇದೇ ರೀತಿಯ ಕಾಡ್ಗಿಚ್ಚು ಹಬ್ಬಿ (ಅಮೆರಿಕದ ) ನ್ಯೂಯಾರ್ಕ್ ರಾಜ್ಯದಲ್ಲಿ ಧೂಳಿನ ಕಪ್ಪು ಮೋಡ ಆವರಿಸಿ ಉಸಿರಾಟ ಸಂಬಂಧಿ ಸಮಸ್ಯೆಗಳು ವರದಿಯಾಗಿದ್ದವು. ಮಾರ್ಚ್ನಲ್ಲಿ ಕೇರಳದ ಕೊಚ್ಚಿಯ ಅತೀ ದೊಡ್ಡ ಕಸದ ಬೆಟ್ಟಕ್ಕೆ ಹೊತ್ತಿದ ಬೆಂಕಿಯು, ಹಲವು ದಿನಗಳವರೆಗೆ ನಗರ ವಾಸಿಗಳನ್ನು ಗೃಹ ಬಂಧನದಲ್ಲಿರುವಂತೆ ಮಾಡಿ ಇಂತಹ ತಾಪಮಾನ ಹೆಚ್ಚಳ ಸಂಭಂದಿತ ಆಕಸ್ಮಿಕಗಳನ್ನು ನಿರ್ವಹಿಸಲು ಸರ್ಕಾರಗಳ ಸಿದ್ಧತೆಯಲ್ಲಿನ ಕೊರತೆಯನ್ನು ಜನರಿಗೆ ಬಯಲು ಮಾಡಿತು.</p>


<div class="wp-block-image">
<figure class="aligncenter size-full"><img decoding="async" width="599" height="400" src="https://peepalmedia.com/wp-content/uploads/2023/07/SwissSeniorsAganistClimateChange.jpg" alt="" class="wp-image-24648" srcset="https://peepalmedia.com/wp-content/uploads/2023/07/SwissSeniorsAganistClimateChange.jpg 599w, https://peepalmedia.com/wp-content/uploads/2023/07/SwissSeniorsAganistClimateChange-300x200.jpg 300w, https://peepalmedia.com/wp-content/uploads/2023/07/SwissSeniorsAganistClimateChange-150x100.jpg 150w" sizes="(max-width: 599px) 100vw, 599px" /><figcaption class="wp-element-caption"><strong>ಪ್ರತಿಭಟನಾ ನಿರತ ಸ್ವಿಟ್ಸರ್ಲೆಂಡ್ ನ ಹಿರಿಯ ಮಹಿಳೆಯರ ಗುಂಪು</strong></figcaption></figure></div>


<p>ಹವಾಮಾನ ವೈಪರೀತ್ಯದ ಕುರಿತ ನ್ಯಾಯಾಲಯ ಪ್ರಕರಣಗಳ ಸಂಖ್ಯೆಯನ್ನು 2017 ರಲ್ಲಿ ಕಲೆಹಾಕಲು ಆರಂಭಿಸಿದಾಗ 884 ವ್ಯಾಜ್ಯಗಳ ಕುರಿತ ವರದಿ ಸಲ್ಲಿಸಲಾಗಿತ್ತು .ಆದರೆ 5 ವರ್ಷಗಳಲ್ಲಿ ಈ ಮೊಕದ್ದಮೆಗಳ ಸಂಖ್ಯೆಯು ದ್ವಿಗುಣಗೊಂಡು -ಇಂದು 2180 ಮೊಕದ್ದಮೆಗಳು &#8211; ಹೆಚ್ಚಳವಾಗುತ್ತಿವೆ ಎಂದು ಯುಎನ್ ಎನ್ವಿರಾನ್‌ಮೆಂಟ್ ಪ್ರೋಗ್ರಾಂ (ಯುಎನ್‌ಇಪಿ) ಮತ್ತು ಕೊಲಂಬಿಯಾ ವಿಶ್ವವಿದ್ಯಾನಿಲಯದ ಸಬಿನ್ ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್ ಆಂಡ್ ಲಾ ಕಳೆದ ವಾರ ಪ್ರಕಟಿಸಿದ ವರದಿಯು ಹೇಳುತ್ತಿದೆ. ವಿಶ್ವದ ಹಲವು ಸರ್ಕಾರ ಅಥವಾ ಪಳೆಯುಳಿಕೆ ಇಂಧನೋದ್ಯಮಗಳ ವಿರುದ್ಧ ಈ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು &#8211; ಅಮೆರಿಕದಲ್ಲಿ ಹೆಚ್ಚಿನ ಪ್ರಕರಣಗಳನ್ನು ದಾಖಲಾಗಿಸಲಾಗಿದೆ &#8211; ಸುಮಾರು 17 ಪ್ರತಿಶತ ಪ್ರಕರಣಗಳು ಈಗ ಸಣ್ಣ ದ್ವೀಪಗಳನ್ನೊಳಗೊಂಡಂತೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವರದಿಯಾಗುತ್ತಿವೆ.ಪಾಕಿಸ್ತಾನ ಮತ್ತು ಭಾರತದಲ್ಲಿ ಕ್ರಮವಾಗಿ ಏಳು ಮತ್ತು ಒಂಬತ್ತು ವರ್ಷ ವಯಸ್ಸಿನ(ರಿದ್ಧಿಮಾ ಪಾಂಡೆ Vs ಭಾರತ ಸರ್ಕಾರ) ಹುಡುಗಿಯರು ಸೇರಿದಂತೆ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ಯುವಜನರೇ 34 ಪ್ರಕರಣಗಳನ್ನು ದಾಖಲಿಸಿದ್ದಾರೆ.</p>



<p>ಸ್ವಿಟ್ಜರ್ಲೆಂಡ್‌ ನ ಸರ್ಕಾರದ ಹವಾಮಾನ ಬದಲಾವಣೆಯ ಕುರಿತ ನೀತಿಯು ತಮ್ಮ ಜೀವನ ಮತ್ತು ಆರೋಗ್ಯದ ಹಕ್ಕನ್ನು ಉಲ್ಲಂಘಿಸುತ್ತಿದೆ ಎಂದು 2,000 ಕ್ಕೂ ಹೆಚ್ಚು ಹಿರಿಯ ಮಹಿಳೆಯರು(Club of Climate Seniors ) ತಮ್ಮ ದೇಶದ ಸರ್ಕಾರದ ವಿರುದ್ಧ ಯುರೋಪಿಯನ್ ಕೋರ್ಟ್ ಆಫ್ ಹ್ಯೂಮನ್ ರೈಟ್ಸ್ (ECHR) ನಲ್ಲಿ ದಾವೆ ಹೂಡಿದ್ದಾರೆ. ಇದು ಮಾನವ ಹಕ್ಕುಗಳ ಮೇಲೆ ಹವಾಮಾನ ಬದಲಾವಣೆಯ ಪ್ರಭಾವದ ಕುರಿತ ಮೊತ್ತ ಮೊದಲ ಪ್ರಕರಣವಾಗಿದ್ದು ಈ ಮಹಿಳೆಯರು ಸಾಕ್ಷಿಯಾಗಿ ತಮ್ಮ ವೈದ್ಯಕೀಯ ದಾಖಲೆಗಳನ್ನು ಮುಂದಿಟ್ಟಿದ್ದಾರೆ .&nbsp;</p>



<p>ಯುರೋಪಿಯನ್ ಹವಾಮಾನ ಮತ್ತು ಆರೋಗ್ಯ ವೀಕ್ಷಣಾಲಯದ ಅಧ್ಯಯನವು ಸರಾಸರಿ ತಾಪಮಾನದಲ್ಲಿನ ಹೆಚ್ಚಳವು ಯುರೋಪಿನಾದ್ಯಂತ, &#8220;ಸಾರ್ವಜನಿಕರ -ವಿಶೇಷವಾಗಿ ಹಿರಿಯ ನಾಗರಿಕರ &#8211; ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುವ ಸಾಧ್ಯತೆಯಿದೆ” ಎಂದಿದೆ. ಕಳೆದ 20 ವರ್ಷಗಳಲ್ಲಿ, ಯುರೋಪ್‌ನಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಉಷ್ಣ ಅಲೆಗಳ (Heat wave )ಸಂಬಂಧಿತ ಮರಣ ಪ್ರಮಾಣವು 30% ಕ್ಕಿಂತ ಹೆಚ್ಚಾಗಿದೆ ಎಂದು ಅದು ಹೇಳುತ್ತದೆ.</p>


<div class="wp-block-image">
<figure class="aligncenter size-full"><img decoding="async" width="600" height="408" src="https://peepalmedia.com/wp-content/uploads/2023/07/HeldVsMontonaCaseTrial.jpg" alt="" class="wp-image-24649" srcset="https://peepalmedia.com/wp-content/uploads/2023/07/HeldVsMontonaCaseTrial.jpg 600w, https://peepalmedia.com/wp-content/uploads/2023/07/HeldVsMontonaCaseTrial-300x204.jpg 300w, https://peepalmedia.com/wp-content/uploads/2023/07/HeldVsMontonaCaseTrial-150x102.jpg 150w" sizes="(max-width: 600px) 100vw, 600px" /><figcaption class="wp-element-caption"><strong>ಮೊಂಟಾನಾ ಸರ್ಕಾರದ ವಿರುದ್ಧ ಉತ್ತಮ ಪರಿಸರ ಹಕ್ಕಿಗಾಗಿ ದಾವೆ ಹೂಡಿರುವ ಮಕ್ಕಳ ಗುಂಪು</strong></figcaption></figure></div>


<p>ಅಮೇರಿಕಾದ ಸಾಂವಿಧಾನಿಕ ಹವಾಮಾನ ಮೊಕದ್ದಮೆಯೊಂದರ ಮೊಟ್ಟಮೊದಲ ವಿಚಾರಣೆಯು ಈ ವರ್ಷದ ಜೂನ್ ನಲ್ಲಿ ಮೊಂಟಾನಾ ರಾಜ್ಯದ ಹೆಲೆನಾ ನ್ಯಾಯಾಲಯದಲ್ಲಿ ಪ್ರಾರಂಭವಾಯಿತು . ಹೆಲ್ಡ್ Vs ಮೊಂಟಾನಾ ಸರ್ಕಾರ ಎಂಬ ಈ ಮೊಕದ್ದಮೆಯನ್ನು 2020 ರಲ್ಲಿ ರಾಜ್ಯದಾದ್ಯಂತ ಐದು ಮತ್ತು 22 ವರ್ಷದೊಳಗಿನ 16 ಮಕ್ಕಳು ಫಿರ್ಯಾದುದಾರರಾಗಿ ತಮ್ಮ ರಾಜ್ಯ ಸರ್ಕಾರವು ಪಳೆಯುಳಿಕೆ ಇಂಧನ ಪರ ನೀತಿಗಳನ್ನು ಜಾರಿಗೊಳಿಸುವ ಮೂಲಕ ಆರೋಗ್ಯಕರ ಪರಿಸರಕ್ಕೆ ತಮಗಿರುವ ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ .</p>



<p>ಹವಾಮಾನ ಬದಲಾವಣೆಯ ಕುರಿತಾದ ಇಂಟರ್‌ಗವರ್ನಮೆಂಟಲ್ ಪ್ಯಾನಲ್‌ನ ಸದಸ್ಯರಾಗಿ ಸಲ್ಲಿಸಿದ ಸೇವೆಗಾಗಿ, 2007 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರಾದ &#8211; ಮೊಂಟಾನಾ ವಿಶ್ವವಿದ್ಯಾನಿಲಯದಲ್ಲಿ ಪರಿಸರ ವ್ಯವಸ್ಥೆ ಮತ್ತು ಸಂರಕ್ಷಣಾ ವಿಜ್ಞಾನದ ಪ್ರಾಧ್ಯಾಪಕ &#8211; ಸ್ಟೀವನ್ ರನ್ನಿಂಗ್ ಈ ಮಕ್ಕಳ ಬೆಂಬಲಕ್ಕೆ ನಿಂತು ವಿಚಾರಣೆಯ ಪ್ರಗತಿಯನ್ನು ಗಮನಿಸುತ್ತಿದ್ದಾರೆ.</p>



<p>ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿ ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ ರೈತ ಹೋರಾಟವನ್ನು ಸಮರ್ಥಿಸಿಕೊಂಡ ಟ್ವೀಟ್ ಸಲುವಾಗಿ ಬಂಧನಕ್ಕೊಳಗಾಗುವ ವರ್ಷದ ಮುಂಚೆಯೇ ತಾವು ನಡೆಸಿದ ಈಮೇಲ್ ಅಭಿಯಾನವೊಂದರ ಕಾರಣದಿಂದಾಗಿ, ಕೇಂದ್ರ ಪರಿಸರ ಸಚಿವಾಲಯದ ಕೆಂಗಣ್ಣಿಗೆ ತಾವು ಗುರಿಯಾಗಿದ್ದನ್ನು ನೆನಪಿಸಿಕೊಂಡರು. ‘ಪರಿಸರವಾದವನ್ನು ಭಾರತದಲ್ಲಿ ಅಪರಾಧೀಕರಿಸುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ಅವರು ಅಭಿಪ್ರಾಯಪಟ್ಟರೂ ಇದು ಭಾರತಕ್ಕಷ್ಟೇ ಸೀಮಿತವಾದುದೇನಲ್ಲ. </p>


<div class="wp-block-image">
<figure class="aligncenter size-large"><img loading="lazy" decoding="async" width="1024" height="768" src="https://peepalmedia.com/wp-content/uploads/2023/07/DishaRavi-1024x768.webp" alt="" class="wp-image-24650" srcset="https://peepalmedia.com/wp-content/uploads/2023/07/DishaRavi-1024x768.webp 1024w, https://peepalmedia.com/wp-content/uploads/2023/07/DishaRavi-300x225.webp 300w, https://peepalmedia.com/wp-content/uploads/2023/07/DishaRavi-768x576.webp 768w, https://peepalmedia.com/wp-content/uploads/2023/07/DishaRavi-1536x1152.webp 1536w, https://peepalmedia.com/wp-content/uploads/2023/07/DishaRavi-2048x1536.webp 2048w, https://peepalmedia.com/wp-content/uploads/2023/07/DishaRavi-150x112.webp 150w, https://peepalmedia.com/wp-content/uploads/2023/07/DishaRavi-696x522.webp 696w, https://peepalmedia.com/wp-content/uploads/2023/07/DishaRavi-1068x801.webp 1068w, https://peepalmedia.com/wp-content/uploads/2023/07/DishaRavi-1920x1440.webp 1920w" sizes="auto, (max-width: 1024px) 100vw, 1024px" /><figcaption class="wp-element-caption"><strong>ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿ</strong></figcaption></figure></div>


<p> ಭಾರತದಲ್ಲಿ ಹವಾಮಾನ ವೈಪರೀತ್ಯ ಹಾಗೂ ಸಂಬಂಧಿಸಿದ ಮೊಕದ್ದಮೆ &#8211; ವಿಚಾರಣೆಗಳ ಕಡೆ ಜನರ &#8211; ಮಾಧ್ಯಮಗಳ ಗಮನ ಹರಿಯುವುದು ಕಡಿಮೆಯೇ,ಇನ್ನು ಸಾಕ್ಷರತೆಯಲ್ಲಿ ನಮ್ಮ ಸಾಧನೆಯ ಹೊರತಾಗಿಯೂ ಪರಿಸರವಾದಿ ಹೋರಾಟಗಳಿಗೆ ಬೆಂಬಲ ಸದ್ಯದ ಪರಿಸ್ಥಿತಿಯಲ್ಲಿ ನಿರೀಕ್ಷಿಸಲೂ ಅಸಾಧ್ಯ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.ಗ್ರೀಸ್ ನ ಕಾಡ್ಗಿಚ್ಚಿನಲ್ಲಿ ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶವಾಯಿತು,ಆ ಪ್ರದೇಶವು ಪ್ರವಾಸೀ ತಾಣವಾಗಿದ್ದರೂ ಹಾಗೂ ಕಾಡ್ಗಿಚ್ಚಿನ ಸಂಧರ್ಭದಲ್ಲಿ ಪ್ರವಾಸಿಗಳಿಂದ ತುಂಬಿ ತುಳುಕುತ್ತಿದ್ದರೂ ಹೆಚ್ಚಿನ ಪ್ರಾಣ ಹಾನಿ ಸಂಭವಿಸಲಿಲ್ಲ. ಆದರೆ ಎರಡು ದಿನಗಳ ಪಂಜಾಬ್ ಪ್ರವಾಹದಲ್ಲಿ 40ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮೇಘಸ್ಪೋಟ ,ಪ್ರವಾಹ ,ಬರ ,ಕಾಡ್ಗಿಚ್ಚು ನಮ್ಮಲ್ಲಿ &#8216;ಹಣೆಬರಹ&#8217; ಎಂಬುದಕ್ಕಿಂತ ವಿಭಿನ್ನವಾದ ಪ್ರತಿಕ್ರಿಯೆ -ಸಂಘಟಿತ ಆಕ್ರೋಶವನ್ನೇನೂ ಸೃಷ್ಟಿಸುವುದಿಲ್ಲ. </p>



<p></p>



<p>ಪರಿಸರ ಕಾಳಜಿ ಭಾರತದಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ಮುಖ್ಯವಾಗಿ ಕಾಣುವ ವಿಷಯವೇನಲ್ಲ. ಹವಾಮಾನ ಬದಲಾವಣೆ ಸೃಷ್ಠಿಸಲಿರುವ ಅರೋಗ್ಯ ಹಾಗೂ ಆಹಾರ ಪೂರೈಕೆ -ಹಂಚಿಕೆಯ ಸಮಸ್ಯೆಯು, ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಸೋಲು &#8211; ಗೆಲುವನ್ನು ನಿರ್ಧರಿಸುವಷ್ಟು ನಿರ್ಣಾಯಕವಾಗುವುವವರೆಗೂ ಹವಾಮಾನ ವೈಪರೀತ್ಯದ ಕುರಿತ ಮಕ್ಕಳ ಪ್ರಶ್ನೆಗಳು ಹಾಗೂ ಪರಿಸರ ರಕ್ಷಣೆಯ ಕುರಿತಾದ ನಿಯಮಗಳನ್ನು ಉಲ್ಲಂಘನೆ ಮಾಡುವ ಉದ್ಯಮಗಳು /ಸರ್ಕಾರ ವಿರುದ್ಧದ ಮೊಕದ್ದಮೆ ,ಹೋರಾಟಗಳನ್ನು ‘ಟೂಲ್ ಕಿಟ್, ವಿದೇಶೀ ಕೈವಾಡ‘ ಎಂದು ತಳ್ಳಿ ಹಾಕಿ ಭಾರತೀಯರು ಹಾಗೂ ಸರ್ಕಾರಗಳು ಹುಸಿ ಸಮಾಧಾನದಲ್ಲಿ ಜೀವನ ಮುಂದುವರೆಸಲಿದ್ದಾರೆ.</p>



<p></p>



<pre class="wp-block-verse"><strong>- ರಂಜಿತಾ ಜಿ. ಎಚ್.</strong></pre>
]]></content:encoded>
					
		
		
			</item>
	</channel>
</rss>
