<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>congress &#8211; Peepal Media</title>
	<atom:link href="https://peepalmedia.com/tag/congress/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 11 Aug 2025 06:30:25 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>congress &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ತನ್ನ ವೈಫಲ್ಯವನ್ನು ಮುಚ್ಚಿ ಹಾಕಲು ರಾಹುಲ್‌ ಗಾಂಧಿಯನ್ನು ಟಾರ್ಗೆಟ್‌ ಮಾಡಿದ ಚುನಾವಣಾ ಆಯೋಗ!</title>
		<link>https://peepalmedia.com/the-election-commission-targeted-rahul-gandhi-to-cover-up-its-failure/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 11 Aug 2025 06:30:25 +0000</pubDate>
				<category><![CDATA[ಅಂಕಣ]]></category>
		<category><![CDATA[bengaluru]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[Election Commission of India]]></category>
		<category><![CDATA[mahadevapura]]></category>
		<category><![CDATA[Rahul Gandhi]]></category>
		<category><![CDATA[vote theft]]></category>
		<guid isPermaLink="false">https://peepalmedia.com/?p=63987</guid>

					<description><![CDATA[ಆಗಸ್ಟ್ 8, 2025ರಂದು, ಭಾರತದ ಚುನಾವಣಾ ಆಯೋಗ (ECI) ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಒಂದು ಒತ್ತಾಯವನ್ನು ನೀಡಿತು. ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ &#8220;ವ್ಯಾಪಕ ಮತದಾನ ಕಳ್ಳತನ&#8221; ಎಂದು ಅವರು ಮಾಡಿದ ಆರೋಪಕ್ಕೆ ಪ್ರತಿಕ್ರಿಯೆಯಾಗಿ, ಆರೋಪಗಳನ್ನು ಕಾನೂನಿನ ಪ್ರಕಾರ ಪ್ರಮಾಣದ ಮೂಲಕ ಸಲ್ಲಿಸಿ, ಅಥವಾ &#8220;ಸಾರ್ವಜನಿಕರನ್ನು ದಾರಿತಪ್ಪಿಸುವುದನ್ನು ನಿಲ್ಲಿಸಿ,&#8221; ಎಂದು ಆಯೋಗವು ಅವರಿಗೆ ಸವಾಲು ಹಾಕಿತು. ಆದರೆ ಇದು ಕೇವಲ ರಾಜಕೀಯ ವಾಗ್ವಾದವಲ್ಲ. ಇದು ಚುನಾವಣಾ ಆಯೋಗದ ಒಂದು ದಶಕದ ದಾಖಲಿತ ವೈಫಲ್ಯಗಳ ಫಲವಾಗಿದೆ. ಮಹದೇವಪುರದಲ್ಲಿ, [&#8230;]]]></description>
										<content:encoded><![CDATA[
<p>ಆಗಸ್ಟ್ 8, 2025ರಂದು, ಭಾರತದ ಚುನಾವಣಾ ಆಯೋಗ (ECI) <a href="https://x.com/INCIndia/status/1953419885108773194">ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ</a>ಗೆ ಒಂದು ಒತ್ತಾಯವನ್ನು ನೀಡಿತು. ಬೆಂಗಳೂರಿನ <a href="https://x.com/ECISVEEP/status/1953419769564254699">ಮಹದೇವಪುರ ಕ್ಷೇತ್ರದಲ್ಲಿ &#8220;ವ್ಯಾಪಕ ಮತದಾನ ಕಳ್ಳತನ&#8221; ಎಂದು ಅವರು ಮಾಡಿದ ಆರೋಪಕ್ಕೆ ಪ್ರತಿಕ್ರಿಯೆಯಾಗಿ</a>, ಆರೋಪಗಳನ್ನು ಕಾನೂನಿನ ಪ್ರಕಾರ ಪ್ರಮಾಣದ ಮೂಲಕ ಸಲ್ಲಿಸಿ, ಅಥವಾ &#8220;ಸಾರ್ವಜನಿಕರನ್ನು ದಾರಿತಪ್ಪಿಸುವುದನ್ನು ನಿಲ್ಲಿಸಿ,&#8221; ಎಂದು ಆಯೋಗವು ಅವರಿಗೆ ಸವಾಲು ಹಾಕಿತು.</p>



<p>ಆದರೆ ಇದು ಕೇವಲ ರಾಜಕೀಯ ವಾಗ್ವಾದವಲ್ಲ. ಇದು ಚುನಾವಣಾ ಆಯೋಗದ ಒಂದು ದಶಕದ ದಾಖಲಿತ ವೈಫಲ್ಯಗಳ ಫಲವಾಗಿದೆ.</p>



<p>ಮಹದೇವಪುರದಲ್ಲಿ, ಚುನಾವಣಾ ಆಯೋಗವು ವರ್ಷಗಳಿಂದ ತನ್ನದೇ ಆದ ಸುರಕ್ಷತಾ ನಿಯಮಗಳನ್ನು ನಿರ್ಲಕ್ಷಿಸಿದೆ, ಆದರೂ ಕ್ಷೇತ್ರದ ಮತದಾರರ ಪಟ್ಟಿಯು ಅಸಾಮಾನ್ಯ ಮತ್ತು ಅಸಂಭವ ದರದಲ್ಲಿ ಬೆಳೆಯುತ್ತಿತ್ತು. ಆಯೋಗದ ದತ್ತಾಂಶ, ಸುದ್ದಿ ವರದಿಗಳು ಮತ್ತು ಹಿಂದಿನ ಹಗರಣಗಳು, ಸ್ವತಂತ್ರ ಮತ್ತು ನ್ಯಾಯಯುತ ಚುನಾವಣೆಯನ್ನು ಖಾತರಿಪಡಿಸುವ ಏಕೈಕ ಜವಾಬ್ದಾರಿಯನ್ನು ಹೊಂದಿರುವ ಸಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗವು, ಬಿಕ್ಕಟ್ಟನ್ನು ಬೆಳೆಯಲು ಅವಕಾಶ ನೀಡಿತ್ತು ಮತ್ತು ಈಗ ಅದನ್ನು ಬಹಿರಂಗವಾಗಿ ನಿರಾಕರಿಸುತ್ತಿದೆ. </p>



<p>ಮಹದೇವಪುರದ ಕಥೆ ಚುನಾವಣಾ ಆಯೋಗದ ಸ್ವಂತ<a href="https://www.eci.gov.in/Documents/Final-ER-FAQ.pdf"> ಕೈಪಿಡಿಯಿಂದ</a> ಆರಂಭವಾಗುತ್ತದೆ. ಈ ಕೈಪಿಡಿ ಒಂದು ಪರಿಷ್ಕರಣೆಯ ಸಂದರ್ಭದಲ್ಲಿ ಮತದಾರರ ಸಂಖ್ಯೆಯ ಶೇ.4ಕ್ಕಿಂತ ಹೆಚ್ಚು ನಿವ್ವಳ ಸೇರ್ಪಡೆಯಾದರೆ &#8220;ಹೆಚ್ಚುವರಿ ಹಂತಗಳ ದೃಢೀಕರಣವನ್ನು&#8221; ಮಾಡಬೇಕೆಂದು ಹೇಳುತ್ತದೆ.  ಈ ಶೇ.4 ರ ಗಡಿಯು ಸಿಂಗಲ್‌ ರಿವಿಷನ್‌ ಸೈಕಲ್‌ಗೆ ಆಯೋಗದ ಎಚ್ಚರಿಕೆಯ ಗಂಟೆಯಾಗಿದೆ.</p>



<p>ಮಹದೇವಪುರದಲ್ಲಿ, ದತ್ತಾಂಶವು ಈ ಎಚ್ಚರಿಕೆಯ ಗಂಟೆ ಒಂದು ದಶಕಕ್ಕಿಂತಲೂ ಹೆಚ್ಚು ಕಾಲ ಬಡಿಯುತ್ತಿತ್ತು ಎಂಬುದನ್ನು ತೋರಿಸುತ್ತದೆ. ಅಧಿಕೃತ ಮತದಾರ ದತ್ತಾಂಶವು ತೀವ್ರವಾದ ಬೆಳವಣಿಗೆಯನ್ನು ಬಹಿರಂಗಪಡಿಸುತ್ತದೆ. ಆಯೋಗವು ಸ್ವಂತ ಮಾನದಂಡದ ಅಡಿಯಲ್ಲಿ ನಿರಂತರ ವಿಶೇಷ ಪರಿಶೀಲನೆಯನ್ನು ಮಾಡಬೇಕಿತ್ತು. </p>



<h4 class="wp-block-heading">ವಿವರಣೆ:</h4>



<figure class="wp-block-image size-large"><img fetchpriority="high" decoding="async" width="1024" height="366" src="https://peepalmedia.com/wp-content/uploads/2025/08/image-1024x366.png" alt="" class="wp-image-63988" srcset="https://peepalmedia.com/wp-content/uploads/2025/08/image-1024x366.png 1024w, https://peepalmedia.com/wp-content/uploads/2025/08/image-300x107.png 300w, https://peepalmedia.com/wp-content/uploads/2025/08/image-768x274.png 768w, https://peepalmedia.com/wp-content/uploads/2025/08/image-1536x549.png 1536w, https://peepalmedia.com/wp-content/uploads/2025/08/image-150x54.png 150w, https://peepalmedia.com/wp-content/uploads/2025/08/image-696x249.png 696w, https://peepalmedia.com/wp-content/uploads/2025/08/image-1068x381.png 1068w, https://peepalmedia.com/wp-content/uploads/2025/08/image.png 1596w" sizes="(max-width: 1024px) 100vw, 1024px" /></figure>



<ul class="wp-block-list">
<li>ಪ್ರತಿ ಐದು ವರ್ಷಗಳ ಗುಂಪಿನಲ್ಲಿ, ಸರಾಸರಿ ವಾರ್ಷಿಕ ಬೆಳವಣಿಗೆ ದರವು ಶೇ.5.5 ರಿಂದ ಶೇ.6.8 ರವರೆಗೆ ಇತ್ತು, ಇದರಿಂದ ಆಯೋಗದ ಶೇ.4 ರ ಗಡಿಯನ್ನು ಹಲವಾರು ಬಾರಿ ಉಲ್ಲಂಘಿಸಲಾಗಿದೆ ಎಂಬುದು ಖಚಿತವಾಗಿದೆ.</li>



<li>ಒಂದು ವರ್ಷದಲ್ಲಿ, ಮತದಾರರ ಸಂಖ್ಯೆ ಶೇ.8.54 ರಷ್ಟು ಏರಿಕೆಯಾಗಿದೆ. 2023 ರ ರಾಜ್ಯ ಚುನಾವಣೆ ಮತ್ತು 2024 ರ ಸಾರ್ವತ್ರಿಕ ಚುನಾವಣೆಯ ನಡುವೆ, ಮತದಾರರ ಸಂಖ್ಯೆ ಶೇ.8.54 ರಷ್ಟು ಗಣನೀಯವಾಗಿ ಬೆಳೆಯಿತು. ಈ ಸಿಂಗಲ್‌ ರಿವಿಷನ್‌ ಸೈಕಲ್‌ ಆಯೋಗದ ಶೇ.4 ರ ಕೆಂಪು ಗೆರೆಯನ್ನು ಎರಡು ಪಟ್ಟು ಮೀರಿತು. ಆಯೋಗ ಸ್ವಯಂಚಾಲಿತ ಪರಿಶೀಲನೆಯನ್ನು ಆರಂಭಿಸಬೇಕಿತ್ತು.</li>
</ul>



<p>ಇದು ನಗರವ್ಯಾಪಿ ಪ್ರವೃತ್ತಿಯಾಗಿರಲಿಲ್ಲ. 2008 ರಿಂದ 2024 ರವರೆಗೆ ಮಹದೇವಪುರದ ಶೇ.140 ರ ಬೆಳವಣಿಗೆಯು, ಅದೇ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಇತರ ಏಳು ವಿಧಾನಸಭಾ ಭಾಗಗಳ ಬೆಳವಣಿಗೆಯನ್ನು ಕುಗ್ಗಿಸಿತು. <a href="https://archive.ph/JYREo"><em>ದಿ ಇಂಡಿಯನ್ ಎಕ್ಸ್‌ಪ್ರೆಸ್</em> ವರದಿ</a>ಯಂತೆ, ಎರಡನೇ ವೇಗವಾಗಿ ಬೆಳೆಯುತ್ತಿರುವ ಭಾಗವಾದ ಸರ್ವಜ್ಞನಗರವು ಇದೇ ಅವಧಿಯಲ್ಲಿ ಕೇವಲ ಶೇ.26.5 ರಷ್ಟು ಬೆಳೆಯಿತು. ಉಳಿದ ಆರು ಭಾಗಗಳ ಬೆಳವಣಿಗೆ ಇದಕ್ಕಿಂತಲೂ ಕಡಿಮೆಯಾಗಿತ್ತು.</p>



<p>ಮಹದೇವಪುರದಲ್ಲಿ ಐಟಿ ಕಾರಿಡಾರ್‌ನಿಂದಾಗಿ ರಿಯಲ್ ಎಸ್ಟೇಟ್ ಮತ್ತು ಜನಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ ಎಂಬುದು ನಿರಾಕರಿಸಲಾಗದ ಸತ್ಯ. ಆದರೆ, ಇಂತಹ ಜನಸಂಖ್ಯಾಶಾಸ್ತ್ರೀಯ ಬದಲಾವಣೆಗಳನ್ನು ನಿರ್ವಹಿಸಲು ಚುನಾವಣಾ ಆಯೋಗದ ನಿಯಮಗಳನ್ನು ರೂಪಿಸಲಾಗಿದೆ. ಅಸಾಧಾರಣ ಬೆಳವಣಿಗೆಯು ಅಧಿಕಾರಿಗಳನ್ನು ತಮ್ಮ ಕರ್ತವ್ಯ ಮಾಡುವುದರಿಂದ ವಿನಾಯಿತಿ ನೀಡುವುದಿಲ್ಲ; ಇದಕ್ಕೆ ವಿರುದ್ಧವಾಗಿ, ಇದು &#8220;additional layers of cross-verification&#8221; ಮಾಡಬೇಕೆಂದು ಒತ್ತಾಯಿಸುತ್ತದೆ, ಆದರೆ ಇವುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ತೋರುತ್ತದೆ.</p>



<p>ದತ್ತಾಂಶವು ಎರಡು ವಿಷಯಗಳನ್ನು ಸಾಬೀತುಪಡಿಸುತ್ತದೆ. ಮೊದಲನೆಯದಾಗಿ, ಮಹದೇವಪುರವು ಒಂದು ತೀವ್ರವಾದ ವಿಚಲನವಾಗಿತ್ತು. ಎರಡನೆಯದಾಗಿ, ಚುನಾವಣಾ ಆಯೋಗವು ತನ್ನದೇ ಆದ ನಿಯಮಗಳ ಪ್ರಕಾರ ವರ್ಷದಿಂದ ವರ್ಷಕ್ಕೆ ತನಿಖೆ ನಡೆಸಬೇಕಿತ್ತು, ಆದರೂ ಅದು ಮತದಾರರ ಪಟ್ಟಿಯನ್ನು ಹತ್ತಿರದಲ್ಲೇ ಇದ್ದ ಮುಂದಿನ ದೊಡ್ಡ ಕ್ಷೇತ್ರಕ್ಕಿಂತ ಎರಡು ಪಟ್ಟು ದೊಡ್ಡದಾಗಲು ಅವಕಾಶ ನೀಡಿತು.</p>



<p><strong>ಸಾರ್ವಜನಿಕ ಎಚ್ಚರಿಕೆಗಳು ಮತ್ತು ದಾಖಲಿತ ಹಗರಣಗಳು</strong></p>



<p>ಎಚ್ಚರಿಕೆಗಳು ಕೇವಲ ದತ್ತಾಂಶದಲ್ಲಿ ಮಾತ್ರ ಇರಲಿಲ್ಲ. ಬೆಂಗಳೂರಿನ ನಾಗರಿಕರು ಮತ್ತು ಕಾರ್ಯಕರ್ತರು ವರ್ಷಗಳಿಂದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು, ಆದರೆ ಪ್ರತಿಕ್ರಿಯೆ ಮಾತ್ರ ನೀರಸವಾಗಿತ್ತು. </p>



<p>2017 ರಲ್ಲಿ, ವೈಟ್‌ಫೀಲ್ಡ್‌ನಲ್ಲಿ &#8220;ಮಿಲಿಯನ್ ವೋಟರ್ಸ್ ರೈಸಿಂಗ್&#8221; ಎಂಬ ನಾಗರಿಕರ ಸಂಘಟನೆಯೊಂದು ಆಳವಾದ ಸಮಸ್ಯೆಗಳನ್ನು ಕಂಡುಕೊಂಡಿತು. <a href="https://www.thehindu.com/news/national/karnataka/mahadevapura-has-seen-allegations-over-electoral-roll-manipulation-earlier-too/article69909837.ece"><em>ದಿ ಹಿಂದೂ</em> </a>ವರದಿಯಂತೆ, ಶೇ.66 ರಷ್ಟು ಮತದಾರರ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿತ್ತು. ಸಾರ್ವಜನಿಕರು ಆಕ್ರೋಶಿತರಾದರು, ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಗೆ ಫಾರ್ಮ್‌ಗಳ ಮರುಪರಿಶೀಲನೆಗೆ ಆದೇಶಿಸಲು ಒತ್ತಾಯಿಸಿದರು. ಆದರೂ ಇದರಿಂದ ತೃಪ್ತರಾಗದ ನಾಗರಿಕರು ಈ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಬಾಗಿಲಿಗೆ ತಂದರು. </p>



<p>ನಂತರ, 2022 ರಲ್ಲಿ, ಚಿಲುಮೆ ವಿವಾದವು ಮತದಾರರ ಪಟ್ಟಿಯ ದುರ್ಬಳಕೆಯ ಒಂದು ಭಯಾನಕತೆಯನ್ನು ನಮ್ಮ ಮುಂದೆ ಇಟ್ಟಿತು. <em><a href="https://www.thenewsminute.com/karnataka/probe-finds-chilume-collected-bengaluru-voter-data-illegally-and-stored-foreign-servers">ದಿ ನ್ಯೂಸ್‌ಮಿನಿಟ್</a></em> ಮತ್ತು ಪ್ರತಿಧ್ವನಿ ನಡೆಸಿದ ತನಿಖಾ ವರದಿಯಲ್ಲಿ, ನಗರರಾಡಳಿತದಿಂದ &#8216;ಮತದಾರರ ಜಾಗೃತಿಯನ್ನು ಹೆಚ್ಚಿಸಲು&#8217; ಅಧಿಕಾರ ಪಡೆದ ಚಿಲುಮೆ ಟ್ರಸ್ಟ್ ಎಂಬ ಎನ್‌ಜಿಒ ಮೇಲೆ, ಮತದಾರರ ವೈಯಕ್ತಿಕ ದತ್ತಾಂಶವನ್ನು ಕಾನೂನುಬಾಹಿರವಾಗಿ ಸಂಗ್ರಹಿಸಿದ ಆರೋಪ ಮಾಡಲಾಗಿತ್ತು. ಆಗ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಪಕ್ಷವು, ಈ ಸಂಸ್ಥೆಯು ಈ ದತ್ತಾಂಶವನ್ನು ರಾಜಕೀಯ ಕ್ಲೈಂಟ್‌ಗಳಿಗಾಗಿ ಮತದಾರರನ್ನು ಪಟ್ಟಿಯಿಂದ ಅಳಿಸಲು ಬಳಸಿದೆ ಎಂದು ಆರೋಪಿಸಿತು.</p>



<p>ಸರ್ಕಾರಿ ತನಿಖೆಯು ನಂತರ ಚಿಲುಮೆ &#8220;ಕಾನೂನುಬಾಹಿರವಾಗಿ&#8221; ಮತದಾರರ ದತ್ತಾಂಶವನ್ನು ಸಂಗ್ರಹಿಸಿ ಖಾಸಗಿ ಸರ್ವರ್‌ಗಳಲ್ಲಿ ಸಂಗ್ರಹಿಸಿತು ಎಂದು ಒಪ್ಪಿಕೊಂಡಿತು, ಆದರೂ &#8220;ದುರ್ಬಳಕೆಯಾಗಿದೆ&#8221; ಎಂದು ತನಿಖೆ ಕಂಡುಹಿಡಿಯಲಿಲ್ಲ. ಮತದಾರರ ಜಾಗೃತಿಯ ಹೆಸರಿನಲ್ಲಿ ಅಧಿಕೃತ ಪ್ರಕ್ರಿಯೆಯನ್ನು ಕಾನೂನುಬಾಹಿರ ಉದ್ದೇಶಗಳಿಗಾಗಿ ಉಲ್ಲಂಘಿಸಲಾಗಿತ್ತು. ಮಹದೇವಪುರವು ಚಿಲುಮೆ ಸಂಸ್ಥೆ ಸಕ್ರಿಯವಾಗಿ ಕೆಲಸ ಮಾಡಿದ್ದ ಮೂರು ಕ್ಷೇತ್ರಗಳಲ್ಲಿ ಒಂದಾಗಿತ್ತು.</p>



<p><strong>ಪ್ರಮಾಣ ಎಂಬ ವಿಡಂಬನೆ</strong></p>



<p>ಇದು ಆಗಸ್ಟ್ 7, 2025 ರಂದು ರಾಹುಲ್ ಗಾಂಧಿಯವರು ನಡೆಸಿದ ಪತ್ರಿಕಾಗೋಷ್ಠಿಯ ಹಿನ್ನೆಲೆಯಾಗಿತ್ತು. ಅವರ 1,00,250 &#8220;ಕದ್ದ ಮತಗಳ&#8221; ಆರೋಪಕ್ಕೆ ವರ್ಷಗಳಿಂದ ಏರಿಳಿಯುತ್ತಿರುವ ಮತದಾರರ ಸಂಖ್ಯೆಗಳು, ನಿರ್ಲಕ್ಷಿತ ದೂರುಗಳು ಮತ್ತು ಸಾರ್ವಜನಿಕ ಹಗರಣಗಳು ಆಧಾರಿತವಾಗಿದ್ದವು.</p>



<p>ಚುನಾವಣಾ ಆಯೋಗದ ಪ್ರತಿಕ್ರಿಯೆ, ಆರೋಪವನ್ನು ಅಧಿಕೃತವಾಗಿ ಸಲ್ಲಿಸಲು ಒತ್ತಾಯಿಸುವುದು ವಿಡಂಬನೆಯಾಗಿದೆ. ವಿವರವಾದ ಆರೋಪಗಳನ್ನು ತನಿಖೆ ಮಾಡುವ ಬದಲು, ಆಯೋಗವು ಆಕ್ರಮಣಕಾರಿಯಾಗಿ ನಡೆದುಕೊಂಡಿದೆ. ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕಾನೂನು ತಜ್ಞ ಅಭಿಷೇಕ್ ಮನು ಸಿಂಗ್ವಿ <a href="https://www.thehindu.com/news/national/eci-is-shooting-the-messenger-and-ignoring-the-message-says-congresss-abhishek-singhvi/article69916195.ece"><em>ದಿ ಹಿಂದೂ</em>ಗೆ </a>ತಿಳಿಸಿದಂತೆ, ಆಯೋಗವು ತಕ್ಷಣವೇ &#8220;ಸಂದೇಶವಾಹಕನನ್ನು ಗುರಿಯಾಗಿಸಿ ಸಂದೇಶವನ್ನು ನಿರ್ಲಕ್ಷಿಸಿತು &#8211; shooting the messenger and ignoring the message.&#8221;</p>



<p>ಆರೋಪವನ್ನು ಪ್ರಮಾಣೀಕರಿಸಲು ಒತ್ತಾಯಿಸುವುದು ಒಂದು ತಂತ್ರವಾಗಿದೆ. ಇದು ಆಯೋಗದ ಜವಾಬ್ದಾರಿಯಾದ ವ್ಯವಸ್ಥಿತ ಸಮಸ್ಯೆಯನ್ನು, ರಾಜಕಾರಣಿಯ ವೈಯಕ್ತಿಕ ವಿಶ್ವಾಸಾರ್ಹತೆಯ ಸಮಸ್ಯೆಯಾಗಿ ಬದಲಾಯಿಸುತ್ತದೆ. ಸಿಂಗ್ವಿ ಕಾನೂನು ದೋಷವನ್ನು ಎತ್ತಿ ತೋರಿಸಿದರು, ಈ ನಿಯಮವನ್ನು &#8220;ಪೂರ್ಣವಾಗಿ ತಪ್ಪಾಗಿ ಅರ್ಥೈಸಲಾಗಿದೆ&#8221; ಎಂದು ಕರೆದರು. ಪ್ರಮಾಣವು ನಿರ್ದಿಷ್ಟ, ವೈಯಕ್ತಿಕ ಚುನಾವಣಾ ವಿವಾದಗಳಿಗಾಗಿ ರೂಪಿಸಲಾಗಿದೆ ಮತ್ತು &#8220;ಒಂದು ಸಂಪೂರ್ಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಬೃಹತ್‌ ವಂಚನೆಯ ಆರೋಪಕ್ಕೆ ಯಾವುದೇ ಸಂಬಂಧವಿಲ್ಲ&#8221; ಎಂದು ಅವರು ವಾದಿಸಿದರು.</p>



<p>ಚುನಾವಣಾ ಆಯೋಗವು ವಿರೋಧ ಪಕ್ಷದ ನಾಯಕನ ಮೇಲೆ ಒಂದು ಲಕ್ಷಕ್ಕಿಂತ ಹೆಚ್ಚು ವೈಯಕ್ತಿಕ ಪ್ರಕರಣಗಳನ್ನು ಸ್ವತಃ ದೃಢೀಕರಿಸುವ ಅಸಾಧ್ಯ ಕಾನೂನು ಭಾರವನ್ನು ಹೇರಲು ಹೊರಟಿದೆ. ಆಯೋಗ ಮಾಡಬೇಕಾದ ಕೆಲಸವನ್ನು ಸರಿಯಾಗಿ ಮಾಡದೆ ಇಷ್ಟು ದೊಡ್ಡದಾಗಿ ಈ ಸಂಖ್ಯೆ ಬೆಳೆದಿದೆ.  ಸಿಂಗ್ವಿ ಈ ಪರಿಸ್ಥಿತಿಯನ್ನು ಒಬ್ಬ ನಾಗರಿಕನು ಕಳ್ಳತನವನ್ನು ವರದಿ ಮಾಡಿದಾಗ, ಪೊಲೀಸರು ಕಳ್ಳರನ್ನು ನಿರ್ಲಕ್ಷಿಸಿ, ದೂರುದಾರನಿಗೆ ಪ್ರಮಾಣದ ಮೇಲೆ ಹೇಳಿಕೆಯನ್ನು ನೀಡಲು ಒತ್ತಾಯಿಸುವಂತೆ ಆಗಿದೆ ಎಂದು ಹೋಲಿಸಿದರು.</p>



<p><strong>ಕೇಂದ್ರ ವಿಷಯ</strong></p>



<p>ಸ್ವತಂತ್ರ ಮತ್ತು ನ್ಯಾಯಯುತ ಚುನಾವಣೆಯನ್ನು ಖಾತರಿಪಡಿಸಲು ಸಂವಿಧಾನದಿಂದ ಬದ್ಧರಾದವರು ಚುನಾವಣಾ ಆಯೋಗದ ಅಧಿಕಾರಿಗಳೇ. ಮಹದೇವಪುರದಲ್ಲಿ, ಒಂದು ದಶಕಕ್ಕಿಂತಲೂ ಹೆಚ್ಚು ಕಾಲ ತಮ್ಮದೇ ಆದ ದತ್ತಾಂಶ ಮತ್ತು ನಿಯಮಗಳ ಮೇಲೆ ಕಾರ್ಯನಿರ್ವಹಿಸಲು ಅವರು ವಿಫಲರಾದರು ಎಂಬುದಕ್ಕೆ ಸಾಕ್ಷಿಯಿದೆ. ಈಗ, ಅದೇ ಸಂಸ್ಥೆಯು ಒಂದು ಬೇರೆ ನಿಯಮವನ್ನು ಆಯುಧವಾಗಿ ಬಳಸಿಕೊಂಡು, ಸಮಸ್ಯೆಯನ್ನು ಮುನ್ನಲೆಗೆ ತಂದ ವ್ಯಕ್ತಿಯನ್ನು ಮೌನಗೊಳಿಸಲು ಪ್ರಯತ್ನಿಸುತ್ತಿದೆ. ಸಿಂಗ್ವಿ ಕೇಳಿದಂತೆ, &#8220;ಸಂವಿಧಾನಿಕ ಕಾವಲುಗಾರರು ತಮ್ಮ ಜವಾಬ್ದಾರಿಗಳನ್ನು ತ್ಯಜಿಸಿದಾಗ&#8230; ವಿರೋಧ ಪಕ್ಷವು ಕಾವಲುಗಾರರನ್ನು ಕಾಯದಿರೆ ಬೇರೆ ಯಾರುಕಾಯುತ್ತಾರೆ &#8211; When constitutional custodians… abdicate their responsibilities… Who will guard the guardians if not the opposition?&#8221;</p>



<p>ಮಹದೇವಪುರದ ಕಥೆಯು ಈಗ ಒಂದು ಕ್ಷೇತ್ರಕ್ಕೆ ಅಥವಾ ಒಬ್ಬ ರಾಜಕಾರಣಿಯ ಮೇಲಿನ ಆರೋಪಕ್ಕೆ ಸೀಮಿತವಾಗಿಲ್ಲ. ಇದು ಸಾಂಸ್ಥಿಕ ವೈಫಲ್ಯಕ್ಕೆ ಕೈಗನ್ನಡಿಯಾಗಿದೆ, ಇದು ಚುನಾವಣಾ ಆಯೋಗವು ಸ್ವತಂತ್ರ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸಲು ಬದ್ಧವಾಗಿದೆಯೇ ಎಂಬ ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತದೆ.</p>
]]></content:encoded>
					
		
		
			</item>
		<item>
		<title>ಇದ್ದಕ್ಕಿದ್ದಂತೆ ಮೋದಿಗೆ ಜಾತಿ ಜನಗಣತಿ ಏಕೆ ಬೇಕಾಯ್ತು?</title>
		<link>https://peepalmedia.com/why-did-modi-suddenly-need-a-caste-census/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 13 Jun 2025 07:50:23 +0000</pubDate>
				<category><![CDATA[ಅಂಕಣ]]></category>
		<category><![CDATA[bihar election]]></category>
		<category><![CDATA[bjp]]></category>
		<category><![CDATA[caste census]]></category>
		<category><![CDATA[congress]]></category>
		<category><![CDATA[INIDIA]]></category>
		<category><![CDATA[narendra modi]]></category>
		<guid isPermaLink="false">https://peepalmedia.com/?p=60926</guid>

					<description><![CDATA[ಏಪ್ರಿಲ್ 30 ರಂದು ಪ್ರಧಾನಿ ನರೇಂದ್ರ ಮೋದಿ ಸಂಪುಟದ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ (CCPA) ಮುಂಬರುವ ಜನಗಣತಿಯ ಭಾಗವಾಗಿ ಜಾತಿ ಗಣತಿಯನ್ನುಮಾಡುವುದಾಗಿ ನಿರ್ಧರಿಸಿತು. ಈ ನಿರ್ಧಾರವು ಜಾತಿ ಗಣತಿಯು ಹಿಂದೂಗಳನ್ನು ವಿಭಜಿಸುತ್ತದೆ ಎಂದು ಪ್ರತಿಪಾದಿಸುವ ಸಂಘ ಪರಿವಾರದ ಚಿಂತನೆಗೆ ವಿರುದ್ಧವಾಗಿದೆ. 2023 ರ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷವು ಜಯಗಳಿಸಿದ ನಂತರ, ಈ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ನಡೆಸಿದ ಜಾತಿ ಜನಗಣತಿ ಅಭಿಯಾನವನ್ನು ಪರೋಕ್ಷವಾಗಿ ಉಲ್ಲೇಖಿಸುತ್ತಾ ಮೋದಿ ಹೀಗೆ ಹೇಳಿದ್ದರು: &#8216;ಚುನಾವಣೆಯ ಸಮಯದಲ್ಲಿ [&#8230;]]]></description>
										<content:encoded><![CDATA[
<pre class="wp-block-code"><code><em>ಅಲ್ಪಾವಧಿಯ ಚುನಾವಣಾ ನಿರೀಕ್ಷೆಗಳನ್ನು ಮೀರಿ, ಜಾತಿ ಜನಗಣತಿ ನಡೆಸುವ ನಿರ್ಧಾರವು ಭಾರತೀಯ ರಾಜಕೀಯ ಮತ್ತು ಸಮಾಜದ ಮೇಲೆ ರಚನಾತ್ಮಕ ಪರಿಣಾಮ ಬೀರುತ್ತದೆ</em> - <em><strong>ಕ್ರಿಸ್ಟೋಫ್ ಜಾಫ್ರೆಲಾಟ್</strong> </em></code></pre>



<p>ಏಪ್ರಿಲ್ 30 ರಂದು ಪ್ರಧಾನಿ ನರೇಂದ್ರ ಮೋದಿ ಸಂಪುಟದ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ (CCPA) ಮುಂಬರುವ ಜನಗಣತಿಯ ಭಾಗವಾಗಿ ಜಾತಿ ಗಣತಿಯನ್ನುಮಾಡುವುದಾಗಿ <a href="https://www.pib.gov.in/PressReleasePage.aspx?PRID=2125526">ನಿರ್ಧರಿಸಿತು</a>. ಈ ನಿರ್ಧಾರವು ಜಾತಿ ಗಣತಿಯು ಹಿಂದೂಗಳನ್ನು ವಿಭಜಿಸುತ್ತದೆ ಎಂದು ಪ್ರತಿಪಾದಿಸುವ ಸಂಘ ಪರಿವಾರದ ಚಿಂತನೆಗೆ ವಿರುದ್ಧವಾಗಿದೆ. </p>



<p>2023 ರ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷವು ಜಯಗಳಿಸಿದ ನಂತರ, ಈ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ನಡೆಸಿದ ಜಾತಿ ಜನಗಣತಿ ಅಭಿಯಾನವನ್ನು ಪರೋಕ್ಷವಾಗಿ ಉಲ್ಲೇಖಿಸುತ್ತಾ <a href="https://indianexpress.com/article/political-pulse/pm-modis-four-key-castes-women-youth-farmers-poor-figure-in-i-day-speech-9515371/">ಮೋದಿ ಹೀಗೆ ಹೇಳಿದ್ದರು</a>: &#8216;ಚುನಾವಣೆಯ ಸಮಯದಲ್ಲಿ ಜನರು ಜಾತಿಯ ಆಧಾರದ ಮೇಲೆ ದೇಶವನ್ನು ವಿಭಜಿಸಲು ಪ್ರಯತ್ನಿಸಿದರು. ನನಗೆ, ಕೇವಲ ನಾಲ್ಕು ಜಾತಿಗಳಿವೆ: ಮಹಿಳೆಯರು, ಯುವಕರು, ರೈತರು ಮತ್ತು ಬಡವರು.&#8217; ಈ ಹೇಳಿಕೆ ನೀಡುವ ಎರಡು ವರ್ಷಗಳ ಮೊದಲು, ಲೋಕಸಭೆಗೆ ನೀಡಿದ ಉತ್ತರದಲ್ಲಿ, ಮೋದಿ ಸರ್ಕಾರವು ಭಾರತ ಸರ್ಕಾರವು ಪರಿಶಿಷ್ಟ ಜಾತಿಗಳನ್ನು ಮೀರಿ ಜಾತಿವಾರು ಡೇಟಾವನ್ನು ಲೆಕ್ಕಹಾಕದಿರಲು  <a href="https://timesofindia.indiatimes.com/india/no-caste-census-since-independence-govt-tells-lok-sabha/articleshow/89434827.cms">ನಿರ್ಧರಿಸಿದೆ ಎಂದು ಹೇಳಲಾಗಿತ್ತು.</a><a href="https://indianexpress.com/article/political-pulse/pm-modis-four-key-castes-women-youth-farmers-poor-figure-in-i-day-speech-9515371/"></a><a href="https://timesofindia.indiatimes.com/india/no-caste-census-since-independence-govt-tells-lok-sabha/articleshow/89434827.cms"></a></p>



<p>ಮೋದಿ ಯು-ಟರ್ನ್!</p>



<p>ನಾವು ಗಮನದಲ್ಲಿ ಇಟ್ಟುಕೊಳ್ಳಬೇಕಾದ ಪ್ರಮುಖ ಅಂಶವೆಂದರೆ, <a href="https://m.thewire.in/article/government/eyeing-bihar-polls-cabinet-approves-caste-census-in-next-population-count-but-gives-no-timeline">ಬಿಹಾರದಲ್ಲಿ ನಡೆಯಲಿರುವ ಚುನಾವಣೆಗಳು</a>. ಈ ರಾಜ್ಯದಲ್ಲಿ, ವಸಾಹತುಶಾಹಿ ಕಾಲದಿಂದಲೂ ಜಾತಿಯು ಚುನಾವಣಾ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸಿದೆ. <a href="https://m.thewire.in/article/caste/ground-report-most-people-unaware-of-schemes-based-on-the-bihar-caste-census/amp">ನಿತೀಶ್ ಕುಮಾರ್ ಸರ್ಕಾರ 2022 ರಲ್ಲಿ ಜಾತಿ ಸಮೀಕ್ಷೆಯನ್ನು ನಡೆಸಿತು</a> . ಸಂಸತ್ತಿನಲ್ಲಿ ಬಿಜೆಪಿಗೆ ಪ್ರಮುಖ ಬೆಂಬಲವಾಗಿ ನಿಂತಿರುವ ನಿತೀಶ್ ಅವರ ಪಕ್ಷವಾದ ಜನತಾದಳ (ಯುನೈಟೆಡ್), ಮೋದಿ ಸರ್ಕಾರದ ಜಾತಿ ಜನಗಣತಿ ನಿರ್ಧಾರವನ್ನು (ಮತ್ತು ಕೇವಲ ಸಮೀಕ್ಷೆಯಲ್ಲ) ಬೆಂಬಲಿಸದೆ ಇದ್ದರೆ ಅಥವಾ ವಿರೋಧಿಸಿದರೆ, ತನ್ನನ್ನು ತಾನೇ ವಿರೋಧಿಸಿದಂತಾಗುತ್ತದೆ. ಮೋದಿ ಸರ್ಕಾರ ಜಾತಿ ಜನಗಣತಿಯನ್ನು ಅನುಮೋದಿಸದಿದ್ದರೆ, ಮುಂಬರುವ ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್-ರಾಷ್ಟ್ರೀಯ ಜನತಾದಳ ಮೈತ್ರಿ ಬಹುಶಃ ಆ ವಿಷಯವನ್ನು ಬಹಳ ಪರಿಣಾಮಕಾರಿಯಾಗಿ ಬಳಸುತ್ತಿತ್ತು. ಪ್ರಾಸಂಗಿಕವಾಗಿ, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸೇರಿದಂತೆ ಬಿಜೆಪಿ ನಾಯಕರು ಈಗ ಜಾತಿ ಜನಗಣತಿಯನ್ನು ಅನುಮೋದಿಸಿರುವುದು ಮೋದಿಯವರ ಅದ್ಭುತ ನಡೆ ಎಂದು ಹೊಗಳುತ್ತಿದ್ದಾರೆ. ಅಲ್ಲದೇ ಇವರು, ಸ್ವಾತಂತ್ರ್ಯದ ನಂತರ ಯಾವುದೇ ಜನಗಣತಿಯಲ್ಲಿ ಕಾಂಗ್ರೆಸ್ ನೇತೃತ್ವದ ಯಾವುದೇ ಸರ್ಕಾರ ಜಾತಿಯನ್ನು ಎಣಿಸಿಲ್ಲ ಎಂದು ವಾದಿಸುತ್ತಿದ್ದಾರೆ. 2011 ರ ಜನಗಣತಿಯಲ್ಲಿ ಜಾತಿಯನ್ನು ದಾಖಲಿಸಲಾಗಿದೆ, <a href="https://www.hindustantimes.com/india-news/ht-explainer-why-2011-caste-data-was-not-made-public-101724995302387.html">ಆದರೆ ಮೋದಿ ಸರ್ಕಾರ ಆ ಡೇಟಾವನ್ನು ಸಾರ್ವಜನಿಕರ ಮುಂದೆ ಇಟ್ಟಿಲ್ಲ ಎಂಬ ವಿಚಾರವನ್ನು ಅವರು ಮುಚ್ಚಿಹಾಕುತ್ತಿದ್ದಾರೆ.</a></p>



<p>ಬಿಹಾರ ಚುನಾವಣೆ ಮತ್ತು ಸಾಮಾನ್ಯವಾಗಿ ಹೇಳುವುದಾದರೆ, ಸಾಮಾಜಿಕ ನ್ಯಾಯ ಆಧಾರಿತ ಜಾತಿ ಜನಗಣತಿಯ ಹೆಸರಿನಲ್ಲಿ ರಾಹುಲ್ ಗಾಂಧಿ ಹೇರಿದ ಒತ್ತಡದ ನಂತರ ಯೂಟರ್ನ್‌ ಹೊಡೆದ ಮೋದಿ ಸರ್ಕಾರ ವಿರೋಧ ಪಕ್ಷದ ಒಂದು ಆಶಯವನ್ನು ಕಸಿದುಕೊಳ್ಳುವ ಉದ್ದೇಶದಿಂದ ಜಾತಿ ಜನಗಣತಿಯ ನಿರ್ಧಾರವನ್ನು ತೆಗೆದುಕೊಂಡಿದೆ.  ಮೋದಿ ಈ ವಿಚಾರದಲ್ಲಿ ಉಲ್ಟಾ ಹೊಡೆದದ್ದಕ್ಕೆ ಇರುವ ಕಾರಣಗಳನ್ನು ನೋಡಬೇಕು.</p>



<p>ಮೋದಿ ಮತ್ತು ಮಧ್ಯಮ ವರ್ಗದ ನಡುವೆ ಬಿಗಿಗೊಳ್ಳುತ್ತಿರುವ ಸಂಬಂಧವು ಅವುಗಳಲ್ಲಿ ಒಂದು. 1990 ರ ದಶಕದಿಂದ ಮಂಡಲ್ ವರದಿಯ ಅನುಷ್ಠಾನಕ್ಕೆ ಪ್ರತಿಕ್ರಿಯೆಯಾಗಿ &#8216;ಮೇಲ್&#8217; ಜಾತಿ, ಮಧ್ಯಮ ವರ್ಗದ ಮತದಾರರು ಬಿಜೆಪಿಯತ್ತ ಮುಖ ಮಾಡಿದರು, ಏಕೆಂದರೆ ಅವರು ಬಿಜೆಪಿ ಸರ್ಕಾರ ಬಂದರೆ ಜಾತಿ ಆಧಾರಿತ ಮೀಸಲಾತಿಗಳನ್ನು ದುರ್ಬಲಗೊಳ್ಳುತ್ತದೆ (ಅಥವಾ ಇನ್ನೂ ಹೆಚ್ಚಿನದನ್ನು) ಅವರು ನಿರೀಕ್ಷಿಸಿದ್ದರು. ಅವರು ಹೇಳಿದ್ದು ಸರಿ: ಮೋದಿ ಸರ್ಕಾರವು ಸಾರ್ವಜನಿಕ ವಲಯವನ್ನು ತುಂಬಾ ಕುಗ್ಗಿಸಿದೆ, ಕೋಟಾದ ಅಡಿಯಲ್ಲಿ ಉದ್ಯೋಗಗಳು ಮೀಸಲಾತಿಗೆ ಅನುಗುಣವಾಗಿ ಕಡಿಮೆಯಾಗಿದೆ. ಬಿಜೆಪಿ &#8216;ಮೇಲ್&#8217; ಜಾತಿಗಳಿಗೆ 10% ಕೋಟಾವನ್ನು ನೀಡಿತು ( <a href="https://m.thewire.in/article/government/10-percent-quota-ews-narendra-modi">ಆರ್ಥಿಕ ಪರ-ದುರ್ಬಲ ವರ್ಗದ ಸಕಾರಾತ್ಮಕ ತಾರತಮ್ಯದ</a> ನೆಪದಲ್ಲಿ ). ಇದಲ್ಲದೆ, ಉನ್ನತ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗದ ಪ್ರಾತಿನಿಧ್ಯವು ನಿಗದಿಪಡಿಸಿದ ಕೋಟಾಗಳಿಗಿಂತ ಕಡಿಮೆಯಾಗಿದೆ.  <a href="https://m.thewire.in/article/government/10-percent-quota-ews-narendra-modi"></a></p>



<p>ಇದರರ್ಥ, ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಮಧ್ಯಮ ವರ್ಗದವರಿಗೆ ಕೋಟಾ ಪ್ರಯೋಜನಗಳು ಒಟ್ಟಾರೆಯಾಗಿ ಕಡಿಮೆಯಾಗಿವೆ, ಇದು ಈ ಗುಂಪಿನ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಮೋದಿ ಅವರ 2014 ರ ಧ್ಯೇಯವಾಕ್ಯಕ್ಕೆ &#8211; ನವ-ಮಧ್ಯಮ ವರ್ಗದ ಸೃಷ್ಟಿಯನ್ನು ಸಂಭ್ರಮಿಸುವುದಕ್ಕೆ ( celebrating the making of a neo-middle class which was supposed to make the middle class larger and larger) ವಿರುದ್ಧವಾಗಿ  ಈ ವರ್ಗವು ಕುಗ್ಗುತ್ತಿದೆ. ಶ್ರೀಮಂತ 10% ಜನರು ಎಲ್ಲಾ ಪ್ರಯೋಜನಗಳನ್ನು ಪಡೆಯುತ್ತಿದ್ದರೆ, ಅವರಿಗಿಂತ ಕೆಳಗಿರುವವರಿಗೆ ಏನೂ ಇಲ್ಲ. </p>



<p>2024 ರಲ್ಲಿ ಪ್ರಕಟವಾದ ವರ್ಲ್ಡ್‌ ಇನ್‌ಇಕ್ವಾಲಿಟಿ ಲ್ಯಾಬ್ ವರದಿಯ ಪ್ರಕಾರ, 1947 ರಲ್ಲಿ ಒಟ್ಟು ಆದಾಯದ 37% ರಿಂದ 1982 ರಲ್ಲಿ 30% ಕ್ಕೆ ಇಳಿದ ನಂತರ, 10% ಅತ್ಯಂತ ಶ್ರೀಮಂತರ ರಾಷ್ಟ್ರೀಯ ಆದಾಯದ ಪಾಲು (ಅದರ ಅತ್ಯಂತ ಕಡಿಮೆ ಹಂತ) 1990 ರಲ್ಲಿ 33.5% ಕ್ಕೆ ಏರಿತು ಮತ್ತು ನಂತರ 2022-23 ರಲ್ಲಿ 57.7% ಕ್ಕೆ ಏರಿತು. ಇತರ ಸೂಚಕಗಳು ಅದೇ ತೀರ್ಮಾನಗಳನ್ನು ನೀಡುತ್ತವೆ. ಆದಾಯದ ಬಳಕೆಯ ವಿಚಾರದಲ್ಲೂ ಇದೇ ಪರಿಸ್ಥಿತಿ. ನಗರವಾಸಿಗಳಲ್ಲಿ ಶೇ. 50 ರಷ್ಟು ಬಡವರು ತಿಂಗಳಿಗೆ ಸರಾಸರಿ 5000 ರೂ. ಗಿಂತ ಕಡಿಮೆ ಖರ್ಚು ಮಾಡುತ್ತಾರೆ, ಶೇ. 5 ರಷ್ಟು ಶ್ರೀಮಂತರು 20,824 ರೂ., ಮುಂದಿನ ಶೇ. 5 ರಷ್ಟು ಜನ 12,399 ರೂ., ಶೇ. 10 ರಷ್ಟು ಜನ 9,582 ರೂ. ಮತ್ತು ಉಳಿದ ಶೇ. 50 ರಿಂದ ಶೇ. 20 ರಷ್ಟು ಜನರು(ಭಾರತದ ಬೇರೆಡೆ ಕೆಲವೊಮ್ಮೆ ಇವರನ್ನು &#8216;ಮಧ್ಯಮ ವರ್ಗ&#8217; ಎಂದು ಕರೆಯಲಾಗುತ್ತದೆ) ತಿಂಗಳಿಗೆ 5,662 ರಿಂದ ಶೇ. 7,673 ರೂ. ವರೆಗೆ ಖರ್ಚುಮಾಡುತ್ತಾರೆ.</p>



<p>ಆದ್ದರಿಂದ, ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಅಧ್ಯಕ್ಷ ಆರ್‌ಸಿ ಭಾರ್ಗವ ಅವರ <a href="https://www.business-standard.com/companies/news/car-buying-restricted-to-12-households-in-india-maruti-s-r-c-bhargava-125042501243_1.html">ಹೇಳಿಕೆಯಂತೆ</a>, ಭಾರತೀಯ ಕುಟುಂಬಗಳಲ್ಲಿ ಕೇವಲ 12% ಮಾತ್ರ ಕಾರುಗಳನ್ನು ಖರೀದಿಸಲು ಶಕ್ತರು. ಈ ಭಾಗ್ಯವು ನವ-ಮಧ್ಯಮ ವರ್ಗದವರಿಗೆ ಬರಲು ಆಶಿಸಿದ ಎಲ್ಲರಿಗೂ ನಿರಾಶೆಯಾಗಿದೆ. ಈಗ, ಅವರಲ್ಲಿ ಅನೇಕರು &#8216;ಕೆಳ&#8217; ಜಾತಿ ಸಮುದಾಯಗಳಿಂದ ಬಂದವರು ಮತ್ತು ಇವರು ಜಾತಿ ರಾಜಕೀಯವು ತಮಗೆ ಲಾಭ ತರಬಹುದು ಎಂದು ನಂಬಬಹುದು.  <a href="https://www.business-standard.com/companies/news/car-buying-restricted-to-12-households-in-india-maruti-s-r-c-bhargava-125042501243_1.html"></a></p>



<p>ಇದಕ್ಕೆ ವ್ಯತಿರಿಕ್ತವಾಗಿ, ಜಾತಿ ರಾಜಕೀಯ &#8216;ಮೇಲ್ವರ್ಗ&#8217;ದ ಮಧ್ಯಮ ವರ್ಗವನ್ನು ಕೆರಳಿಸಬಹುದು, ಅವರು ಹಿಂದುತ್ವ ಸೇರಿದಂತೆ ಮೋದಿಯ ಇತರ ರಾಜಕೀಯದ  ನಡೆಗಳನ್ನು ಮೆಚ್ಚುತ್ತಾರೆ. ಅವರು ಬೇರೆ ಯಾರನ್ನು ಬೆಂಬಲಿಸಬಹುದು? ಅವರು ಎಷ್ಟು ಶೇಕಡಾ ಮತದಾರರನ್ನು ಪ್ರತಿನಿಧಿಸುತ್ತಾರೆ?</p>



<p>ಇದು ಮೋದಿಯವರ ಯೂಟರ್ನ್ ಗೆ ಎರಡನೇ ವಿವರಣೆಯನ್ನು ನೀಡುತ್ತದೆ: ಪ್ಲೆಬಿಯನ್ ಮತದಾರರ ಮೇಲೆ ಅವರ ಹೆಚ್ಚುತ್ತಿರುವ ಅವಲಂಬನೆ. <a href="https://www.thehindu.com/elections/lok-sabha/csds-lokniti-post-poll-survey-the-bjps-pro-rich-skew-becomes-moderate/article68260481.ece">CSDS-ಲೋಕ್ನಿಟಿ ಪ್ರಕಾರ, ಬಿಜೆಪಿಯನ್ನು ಆಯ್ಕೆ ಮಾಡಿದ ಬಡ ಮತದಾರರಲ್ಲಿ 2009 ರಲ್ಲಿ 16% ರಿಂದ 2014 ರಲ್ಲಿ 24%, 2019 ರಲ್ಲಿ 36% ಮತ್ತು 2024 ರಲ್ಲಿ 37% ಕ್ಕೆ ಏರಿಕೆಯಾಗಿದೆ. </a>ಪರಿಣಾಮವಾಗಿ, ಬಿಜೆಪಿ ಮತದಾರರೊಳಗಿನ ಎರಡು ತೀವ್ರ ಗುಂಪುಗಳ ನಡುವಿನ ಅಂತರವು ಕೇವಲ ನಾಲ್ಕು ಶೇಕಡಾವಾರು ಅಂಕಗಳಿಗೆ ಇಳಿದಿದೆ.  35% ಮಧ್ಯಮ ವರ್ಗದವರಿಗೆ ವಿರುದ್ಧವಾಗಿ 41% ಶ್ರೀಮಂತರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಬಹುಸಂಖ್ಯಾತ ಬಡವರು ಮೋದಿಯ ಹಿಂದೆ ಇರುವಾಗ, ಮೋದಿ ಯಾಕೆ ಈ<a href="https://www.thehindu.com/elections/lok-sabha/csds-lokniti-post-poll-survey-the-bjps-pro-rich-skew-becomes-moderate/article68260481.ece"> </a> &#8216;ಮೇಲ್ವರ್ಗ&#8217; ಜಾತಿಯ ಮಧ್ಯಮ ವರ್ಗದ ಅಗತ್ಯಗಳನ್ನು ಪೂರೈಸಬೇಕು ? </p>



<p>ಮೋದಿ ತಮ್ಮ &#8216;ಘನತೆಯ ರಾಜಕೀಯ&#8217;ವನ್ನು ಪ್ರಚಾರ ಮಾಡಿ ಬಡವರನ್ನು ಪರಿಣಾಮಕಾರಿಯಾಗಿ ಆಕರ್ಷಿಸಿದ್ದಾರೆ. ಇದಕ್ಕಾಗಿ ಅವರ ಸಾವಿರಾರು ಭಾಷಣಗಳಲ್ಲಿ ಮತ್ತು ವಿಶೇಷವಾಗಿ ಮಾನ್ ಕಿ ಬಾತ್ ಕಾರ್ಯಕ್ರಮದಲ್ಲಿ ತಮ್ಮದು ಘನತೆಯ ರಾಜಕಾರಣ ಎಂಬುದನ್ನು ಮತ್ತೆ ಮತ್ತೆ ಬಡವರ ಮುಂದೆ ಇಟ್ಟಿದ್ದಾರೆ. ಅವರು ಸಮಾಜದಲ್ಲಿ ಪ್ಲೆಬಿಯನ್ನರ, ಹಾಗೆಯೇ ಕಷ್ಟಪಟ್ಟು ಕೆಲಸ ಮಾಡುವವರ ಪ್ರಮುಖ ಪಾತ್ರದ ಬಗ್ಗೆ ಒತ್ತಿ ಹೇಳಿದ್ದಾರೆ. ಆದರೆ ಬಡವರಲ್ಲಿ ಅವರ ಬಗ್ಗೆ ಇರುವ ಜನಪ್ರಿಯತೆಯು ಪ್ರಧಾನ ಮಂತ್ರಿ ಆವಾಸ್ ಯೋಜನೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಥವಾ ಪ್ರಧಾನ ಮಂತ್ರಿ ಜನ ಧನ ಯೋಜನೆ ಮುಂತಾದ ಹಲವಾರು ಯೋಜನೆಗಳ &#8216;ಕಲ್ಯಾಣವಾದಿ ಜನಪ್ರಿಯತೆ&#8217;ಯಿಂದ ಬಂದಿದೆ.</p>



<p>CSDS ಸಮೀಕ್ಷೆಗಳು ಈ ಕಾರ್ಯಕ್ರಮಗಳಿಂದ ಪ್ರಯೋಜನ ಪಡೆಯುವ ಬಡವರು ಬಿಜೆಪಿಗೆ ಮತ ಹಾಕದವರಿಗಿಂತ ಹೆಚ್ಚು ಮತ ಹಾಕುತ್ತಾರೆ ಎಂದು ತೋರಿಸುತ್ತವೆ. ಈ ಪರಸ್ಪರ ಸಂಬಂಧವು ಪ್ರಸ್ತುತ ಆರ್ಥಿಕ ಕುಸಿತದ ಸಂದರ್ಭದಲ್ಲಿ ಬಡವರಲ್ಲಿ ಮೋದಿ ಮತ್ತು ಅವರ ಕಲ್ಯಾಣ ಕಾರ್ಯಕ್ರಮಗಳ ಅಗತ್ಯವಿದೆ ಎಂಬ ಭಾವನೆ ಇರುವುದರಿಂದ ಅವರ ಬೆಂಬಲ ನೆಲೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸೂಚಿಸುತ್ತದೆ. ವಾಸ್ತವವಾಗಿ, ಸಂಪೂರ್ಣವಾಗಿ ಅಧಿಕಾರ ಕೇಂದ್ರಿತ ಆಡಳಿತಗಾರನು ಜನಸಾಮಾನ್ಯರಲ್ಲಿರುವ ಬಡತನದ ಬಗ್ಗೆ ಚಿಂತಿಸುವುದಿಲ್ಲ, ಈ ಹೊಸ clientelist logic ಸಂದರ್ಭದಲ್ಲಿ ಅವರು ಇವನ ಮೇಲೆ ಅವಲಂಬಿತರಾಗಿರುತ್ತಾರೆ. </p>



<p>ಜಾತಿಗೂ ಇದೇ ರೀತಿಯ ತಾರ್ಕಿಕ ಮಾರ್ಗ ಅನ್ವಯಿಸಬಹುದು. ಬಿಜೆಪಿಗೆ ಬೆಂಬಲ ನೀಡುವ ವಿಷಯಕ್ಕೆ ಬಂದಾಗ ಹಿಂದೂ ಮೇಲ್ಜಾತಿಗಳು ಮತ್ತು ಹಿಂದೂ ಕೆಳ OBC ಗಳ ನಡುವಿನ ವ್ಯತ್ಯಾಸವು ಈಗಾಗಲೇ ಕಡಿಮೆಯಾಗಿದೆ: 2024 ರಲ್ಲಿ ಪಕ್ಷಕ್ಕೆ ಮತ ಚಲಾಯಿಸಿದವರಲ್ಲಿ 53% ಮತ್ತು ನಂತರದವರಲ್ಲಿ 49% ಆಗಿದೆ. ಹಿಂದೂ ಬಹುಸಂಖ್ಯಾತತೆಯ ಪ್ರಭಾವವು ಮೊದಲು ಈ ಗಮನಾರ್ಹ ಒಮ್ಮುಖವನ್ನು ವಿವರಿಸಬಹುದು. 1990 ರ ದಶಕದಿಂದ, ರಾಮ ಜನ್ಮಭೂಮಿ ಚಳುವಳಿಯೊಂದಿಗೆ, ಸಂಘ ಪರಿವಾರವು ಜಾತಿ ಗುರುತುಗಳನ್ನು ಇಲ್ಲವಾಗಿಸಲು ಕೇಸರಿ ಅಲೆಯನ್ನು ಉತ್ತೇಜಿಸಲಾಯಿತು. ಈ ತಂತ್ರವು ಮುಸ್ಲಿಮರ ನಿರಂತರ ಟೀಕೆಯ ಮೇಲೆ ನಿಂತಿದೆ, ಜಾತಿ ರಾಜಕೀಯದ ಬದಲು ಮತೀಯ ಮಾರ್ಗಗಳಲ್ಲಿ ಸಮಾಜವನ್ನು ಧ್ರುವೀಕರಿಸುವ ಗುರಿ. 2024 ರ ಚುನಾವಣಾ ಪ್ರಚಾರದ ಸಮಯದಲ್ಲಿ CSDS ನಡೆಸಿದ ಸಮೀಕ್ಷೆಯು ಈ ತಂತ್ರವು ಫಲ ನೀಡಿದೆ ಎಂದು ತೋರಿಸುತ್ತದೆ, ಏಕೆಂದರೆ ಮುಸ್ಲಿಂ ವಿರೋಧಿ ಪೂರ್ವಾಗ್ರಹವು &#8216;ಮೇಲ್ಜಾತಿಯ ಹಿಂದೂಗಳಂತೆ&#8217; ಕೆಳಜಾತಿಯ ಹಿಂದೂಗಳಲ್ಲಿ ಪ್ರಚಲಿತವಾಗಿದೆ. ಉದಾಹರಣೆಗೆ,<a href="https://www.studocu.com/in/document/aligarh-muslim-university/political-science/jaffrelot-ahmed-2024-indian-muslims-self-perceptions-voting-trends/124730562"> ಹಿಂದೂಗಳಲ್ಲಿ ಶೇ. 27 ರಷ್ಟು ಜನರು</a> ಮುಸ್ಲಿಮರು ಬೇರೆಯವರಂತೆ &#8216;ವಿಶ್ವಾಸಾರ್ಹರಲ್ಲ&#8217; ಎಂದು &#8216;ಸಂಪೂರ್ಣವಾಗಿ&#8217; ಅಥವಾ &#8216;ಸ್ವಲ್ಪ ಮಟ್ಟಿಗೆ&#8217; ಒಪ್ಪಿಕೊಂಡರೂ, ಅವರಲ್ಲಿ ಶೇ. 28.7 ರಷ್ಟು ಜನ ದಲಿತರು ಮುಸ್ಲಿಮರ ಬಗ್ಗೆ ಅತ್ಯಂತ ನಕಾರಾತ್ಮಕ ದೃಷ್ಟಿಕೋನಗಳನ್ನು ಬೆಳೆಸಿಕೊಂಡಿರುವುದು ಕಂಡು ಬಂದಿತ್ತು. </p>



<p>&#8216;ಕೆಳವರ್ಗದ&#8217; ಹಿಂದೂಗಳನ್ನು ಈಗಾಗಲೇ ಗೆದ್ದಿರುವ ಬಿಜೆಪಿ ಜಾತಿ ಜನಗಣತಿ ಕಾರ್ಡ್ ಬಳಸಿ ಈ ಲಾಭಗಳನ್ನು ಕ್ರೋಢೀಕರಿಸಬಹುದು. </p>



<p>ಮೊದಲನೆಯದಾಗಿ, ಬಿಜೆಪಿಯಲ್ಲಿ &#8216;ಮೇಲ್ವರ್ಗ&#8217;ದವರ ಪ್ರಾಬಲ್ಯ ಇನ್ನೂ ಹೆಚ್ಚಾಗಿದೆ. ಇದು ಪಕ್ಷದ ಕಾರ್ಯಕರ್ತರ ಸೋಷಿಯಾಲಜಿಯಿಂದ ಸ್ಪಷ್ಟವಾಗಿದೆ, ಅವರು ಹೆಚ್ಚಾಗಿ ಆರ್‌ಎಸ್‌ಎಸ್‌ ಹಿನ್ನಲೆಯಿಂದ ಬಂದವರು. ಅದರ ಸಂಸದರ ಪ್ರೊಫೈಲ್‌ನಿಂದಲೂ ಇದು ಸ್ಪಷ್ಟವಾಗಿದೆ. ಜರ್ನಲ್ <em>ಆಫ್ ಇಂಡಿಯನ್ ಪಾಲಿಟಿಕ್ಸ್ ಅಂಡ್ ಪಾಲಿಸಿಯಲ್ಲಿ ಪ್ರಕಟವಾಗಲಿರುವ ಮುಂಬರುವ ಗಿಲ್ಲೆಸ್ ವರ್ನಿಯರ್ಸ್</em> ಅವರ<em> ಲೇಖನದಲ್ಲಿ ತೋರಿಸಿರುವಂತೆ</em>, 2024 ರಲ್ಲಿ ಎನ್‌ಡಿಎ ಅಭ್ಯರ್ಥಿಗಳಲ್ಲಿ ಶೇ. 31 ಕ್ಕಿಂತ ಹೆಚ್ಚು ಮತ್ತು ಭಾರತ ಮೈತ್ರಿಕೂಟದ ಅಭ್ಯರ್ಥಿಗಳಲ್ಲಿ ಶೇ. 19 ರಷ್ಟು ಅಭ್ಯರ್ಥಿಗಳು &#8216;ಮೇಲ್ವರ್ಗ&#8217;ದವರು. ಹೀಗಿರುವಾಗ, &#8216;ಕೆಳವರ್ಗ&#8217; ಪರವಾದ ಬದಲಾವಣೆಗೆ ಈ ನಾಯಕರು ಹೇಗೆ ಪ್ರತಿಕ್ರಿಯಿಸುತ್ತಾರೆ, ವಿಶೇಷವಾಗಿ ಪಕ್ಷವು ಹೆಚ್ಚಿನ ಸಂಖ್ಯೆಯಲ್ಲಿ &#8216;ಕೆಳವರ್ಗ&#8217; ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡುವ ವಿಚಾರದಲ್ಲಿ?</p>



<p>ಎರಡನೆಯದಾಗಿ, 2024 ರಲ್ಲಿ ಬಿಜೆಪಿ ಅನೇಕ &#8216;ಕೆಳ&#8217; ಒಬಿಸಿಗಳನ್ನು ತನ್ನೆಡೆಗೆ ಸೆಳೆದುಕೊಂಡಿತ್ತು, ಏಕೆಂದರೆ ಈ ಜಾತಿ ಗುಂಪುಗಳನ್ನು ವಿರೋಧ ಪಕ್ಷಗಳು ನಿರ್ಲಕ್ಷಿಸಿದ್ದವು. ಅವು &#8216;ಮೇಲ್ವರ್ಗ&#8217; ಒಬಿಸಿಗಳ ಮೇಲೆ ಕೇಂದ್ರೀಕರಿಸಿದವು (ಮತ್ತು ಪರಿಣಾಮವಾಗಿ, ಈ ಗುಂಪುಗಳು 2024 ರಲ್ಲಿ ಬಿಜೆಪಿಗೆ ತುಂಬಾ ಕಡಿಮೆ ಮತ ಹಾಕಿದವು, 39% ರಷ್ಟು). ಇಲ್ಲಿ ಕುತೂಹಲಕಾರಿಯಾದ ಅಪವಾದವೊಂದಿದೆ: ಯುಪಿಯಲ್ಲಿ, ಸಮಾಜವಾದಿ ಪಕ್ಷವು &#8216;ಕೆಳವರ್ಗ&#8217; ಒಬಿಸಿಗಳಿಗೆ ಹೆಚ್ಚಿನ ಟಿಕೆಟ್ ನೀಡುವ ಮೂಲಕ ಅವರನ್ನು ಓಲೈಸಲು ಸ್ವಲ್ಪ ಸಂಖ್ಯೆಯ ಯಾದವರ (&#8216;ಮೇಲ್ವರ್ಗ&#8217; ಒಬಿಸಿಗಳು) ನಾಮನಿರ್ದೇಶನ ಮಾಡಿತು &#8211; ಆ ತಂತ್ರ ಕೆಲಸ ಮಾಡಿತು, ಮುಖ್ಯವಾಗಿ ಯಾದವರು ಎಸ್‌ಪಿಗೆ ಮತ ಹಾಕಿದರು. ಆದರೆ ಪಕ್ಷದ &#8216;ಕೆಳವರ್ಗ&#8217; ಒಬಿಸಿ ಅಭ್ಯರ್ಥಿಗಳು ಬದಲಾವಣೆಗಾಗಿ, ತಮ್ಮ ಸಮುದಾಯದ ಅಭ್ಯರ್ಥಿಗಳನ್ನು ಬೆಂಬಲಿಸಲು ಅವರೊಂದಿಗೆ ಸೇರಿಕೊಂಡರು.</p>



<p>ಬಿಹಾರದಲ್ಲಿ ಈ ಪ್ರಯೋಗವನ್ನು ಪುನರಾವರ್ತಿಸಬಹುದೇ? ಚೆಂಡು ವಿರೋಧ ಪಕ್ಷದ ಅಂಗಳದಲ್ಲಿದೆ: ಆರ್‌ಜೆಡಿ ಮತ್ತು ಕಾಂಗ್ರೆಸ್ ಎಸ್‌ಪಿಯ ತಂತ್ರವನ್ನು ಅನುಕರಿಸಿದರೆ, ಮೋದಿ ಆಡಲು ಪ್ರಯತ್ನಿಸುತ್ತಿರುವ ಜಾತಿ ಜನಗಣತಿ ಕಾರ್ಡ್ ಅನ್ನು ಬಿಜೆಪಿ-ಜೆಡಿ (ಯು) ಒಕ್ಕೂಟವು ಲಾಭ ಮಾಡಿಕೊಳ್ಳುವುದನ್ನು ತಡೆಯಬಹುದು.</p>



<p>ಈ ಅಲ್ಪಾವಧಿಯ ನಿರೀಕ್ಷೆಯನ್ನು ಮೀರಿ, ಜಾತಿ ಜನಗಣತಿ ನಡೆಸುವ ನಿರ್ಧಾರವು ಭಾರತೀಯ ರಾಜಕೀಯ ಮತ್ತು ಸಮಾಜದ ಮೇಲೆ ರಚನಾತ್ಮಕ ಪರಿಣಾಮ ಬೀರುತ್ತದೆ. ಜಾತಿ ಜನಗಣತಿಯು ಸ್ವತಃ ಒಂದು ಅಂತ್ಯವಲ್ಲ. ಇದು ಅಧಿಕಾರಶಾಹಿ, ಸಾರ್ವಜನಿಕ ವಲಯದ ಉದ್ಯಮಗಳು ಇತ್ಯಾದಿಗಳಲ್ಲಿ ವಿವಿಧ ಜಾತಿ ಗುಂಪುಗಳ ಕಡಿಮೆ/ಅಥವಾ ಹೆಚ್ಚಿನ ಪ್ರಾತಿನಿಧ್ಯವನ್ನು ಅಳೆಯಲು ಬಳಸಲಾಗುವ ಸಂಖ್ಯಾಶಾಸ್ತ್ರೀಯ ಸಾಧನವಾಗಿದೆ. ಇದು ಸಾಮಾಜಿಕ ನ್ಯಾಯಕ್ಕಾಗಿ ವಿವಿಧ ಗುಂಪುಗಳಿಂದ ಹೊಸ ಬೇಡಿಕೆಗಳಿಗೆ ಕಾರಣವಾಗುತ್ತದೆ. ಈ ಪ್ರಕ್ರಿಯೆಯು ಬಹುಶಃ ಮಂಡಲ್ ಸಮಯದಲ್ಲಿ ಇದ್ದ ಹಾಗೆ ಅದೇ ಪ್ರತಿರೋಧವನ್ನು ಬೆಳೆಸುತ್ತದೆ, ಇದನ್ನು ಆರ್‌ಎಸ್‌ಎಸ್‌ನ ಮಖವಾಣಿ ಆರ್ಗನೈಸರ್ &#8216;ಶೂದ್ರ ಕ್ರಾಂತಿ&#8217; ಎಂದು ವಿವರಿಸಿದೆ. ಆದ್ದರಿಂದ, ಭಾರತೀಯ ರಾಜಕೀಯದ ಕೇಂದ್ರಬಿಂದುವು ಜನಾಂಗೀಯತೆ-ಮತೀಯತೆಯಿಂದ ಸಾಮಾಜಿಕ-ಆರ್ಥಿಕ ಜಾತಿ ಆಧಾರಿತ ವಿಚಾರಕ್ಕೆ ಮತ್ತೆ ಹಿಂತಿರುಗುತ್ತದೆ. ನರೇಂದ್ರ ಮೋದಿ ಈ ದೀರ್ಘಕಾಲೀನ ಪರಿಣಾಮವನ್ನು ನಿರೀಕ್ಷಿಸದೇ ಇರಬಹುದು, ಆದರೆ ಕೆಲವೊಮ್ಮೆ ಯುದ್ಧತಂತ್ರದ ಕ್ರಮಗಳು ಗಣನೀಯ ಪ್ರಮಾಣದ ಅನಿರೀಕ್ಷಿತ ಪರಿಣಾಮಗಳನ್ನು ಬೀರುತ್ತವೆ. </p>



<p><em><strong>ಕ್ರಿಸ್ಟೋಫ್ ಜಾಫ್ರೆಲಾಟ್</strong> ಅವರು ಪ್ಯಾರಿಸ್‌ನ CERI-ಸೈನ್ಸಸ್ ಪೋ/CNRS ನಲ್ಲಿ ಹಿರಿಯ ಸಂಶೋಧನಾ ಸಹೋದ್ಯೋಗಿಯಾಗಿ, ಲಂಡನ್‌ನ ಕಿಂಗ್ಸ್ ಕಾಲೇಜಿನಲ್ಲಿ ಭಾರತೀಯ ರಾಜಕೀಯ ಮತ್ತು ಸಮಾಜಶಾಸ್ತ್ರದ ಪ್ರಾಧ್ಯಾಪಕರು ಮತ್ತು ಬ್ರಿಟಿಷ್ ಅಸೋಸಿಯೇಷನ್ ​​ಫಾರ್ ಸೌತ್ ಏಷ್ಯನ್ ಸ್ಟಡೀಸ್‌ನ ಅಧ್ಯಕ್ಷರು</em>. ಇದು ದಿ ವೈರ್‌ನಲ್ಲಿ ಪ್ರಕಟವಾದ <a href="https://thewire.in/caste/why-does-narendra-modi-suddenly-want-a-caste-census">Why Does Narendra Modi Suddenly Want a Caste Census?</a> ದ ಕನ್ನಡಾನುವಾದ</p>



<p></p>
]]></content:encoded>
					
		
		
			</item>
		<item>
		<title>ಮನರೇಗಾ ವೆಚ್ಚದಲ್ಲಿ 12% ಹೆಚ್ಚಳ ಕೇಳಿದ ಗ್ರಾಮೀಣಾಭಿವೃದ್ಧಿ ಸಚಿವಾಲಯ: ವರದಿ</title>
		<link>https://peepalmedia.com/rural-development-ministry-seeks-12-hike-in-mnrega-expenditure-report/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 02 Jun 2025 07:31:14 +0000</pubDate>
				<category><![CDATA[ದೇಶ]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[Mahatma Gandhi National Rural Employment Guarantee Scheme]]></category>
		<category><![CDATA[MGNREGS]]></category>
		<category><![CDATA[NDA]]></category>
		<category><![CDATA[Rural Development Ministry]]></category>
		<category><![CDATA[UPA]]></category>
		<guid isPermaLink="false">https://peepalmedia.com/?p=60182</guid>

					<description><![CDATA[ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪ್ರಾಮುಖ್ಯತೆಯನ್ನು ಕಡಿಮೆ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿದ್ದರೂ, 2029-30 ರವರೆಗೆ ಐದು ವರ್ಷಗಳ ಕಾಲ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಈ ಯೋಜನೆಗಾಗಿ 5.23 ಲಕ್ಷ ಕೋಟಿ ರುಪಾಯಿಗಳ ಹೆಚ್ಚಿನ ವೆಚ್ಚವನ್ನು ಕೋರಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ . ಈ ವರದಿಯು ಗ್ರಾಮೀಣಾಭಿವೃದ್ಧಿ ಸಚಿವಾಲಯವು ಮೇ 15 ರಂದು ಖರ್ಚು ಹಣಕಾಸು ಸಮಿತಿಗೆ ಸಲ್ಲಿಸಿದ ಪ್ರಸ್ತಾವನೆಯಿಂದ ಸಾರ್ವಜನಿಕ ಸಂಶೋಧನೆಗಳನ್ನು ಬಹಿರಂಗಪಡಿಸಿದೆ. ಈ ಸಂಶೋಧನೆಯು ಹಣಕಾಸು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಎಲ್ಲಾ [&#8230;]]]></description>
										<content:encoded><![CDATA[
<p>ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪ್ರಾಮುಖ್ಯತೆಯನ್ನು ಕಡಿಮೆ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿದ್ದರೂ, 2029-30 ರವರೆಗೆ ಐದು ವರ್ಷಗಳ ಕಾಲ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಈ ಯೋಜನೆಗಾಗಿ 5.23 ಲಕ್ಷ ಕೋಟಿ ರುಪಾಯಿಗಳ ಹೆಚ್ಚಿನ ವೆಚ್ಚವನ್ನು ಕೋರಿದೆ ಎಂದು <a href="https://indianexpress.com/article/india/mgnregs-rural-ministry-12-percent-hike-outlay-5-years-10042931/?ref=hometop_hp"><em>ಇಂಡಿಯನ್ ಎಕ್ಸ್‌ಪ್ರೆಸ್</em></a><a href="https://indianexpress.com/article/india/mgnregs-rural-ministry-12-percent-hike-outlay-5-years-10042931/?ref=hometop_hp"> ವರದಿ ತಿಳಿಸಿದೆ .</a></p>



<p>ಈ ವರದಿಯು ಗ್ರಾಮೀಣಾಭಿವೃದ್ಧಿ ಸಚಿವಾಲಯವು ಮೇ 15 ರಂದು ಖರ್ಚು ಹಣಕಾಸು ಸಮಿತಿಗೆ ಸಲ್ಲಿಸಿದ ಪ್ರಸ್ತಾವನೆಯಿಂದ ಸಾರ್ವಜನಿಕ ಸಂಶೋಧನೆಗಳನ್ನು ಬಹಿರಂಗಪಡಿಸಿದೆ. ಈ ಸಂಶೋಧನೆಯು ಹಣಕಾಸು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಎಲ್ಲಾ ಸರ್ಕಾರಿ ಯೋಜನೆಗಳು ಮತ್ತು ಯೋಜನೆಗಳನ್ನು ಮೌಲ್ಯಮಾಪನ ಮಾಡುತ್ತದೆ.</p>



<p>2020-2021 ರಿಂದ 2024-2025 ರವರೆಗಿನ ಐದು ವರ್ಷಗಳ ಅವಧಿಯಲ್ಲಿ ಮನರೇಗಾಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ 4.68 ಲಕ್ಷ ಕೋಟಿ ರುಪಾಯಿಗಿಂತ 2029-2030 ರವರೆಗಿನ ಐದು ವರ್ಷಗಳ ವೆಚ್ಚವು ಸುಮಾರು 12% ಹೆಚ್ಚಾಗಿದೆ ಎಂದು ವರದಿ ಹೇಳುತ್ತದೆ.</p>



<p>2025 ರ ಕೇಂದ್ರ ಬಜೆಟ್‌ನಲ್ಲಿ, ನರೇಂದ್ರ ಮೋದಿ ಸರ್ಕಾರವು ಯುಪಿಎ ಸರ್ಕಾರದ ಅವಧಿಯ ಯೋಜನೆಗೆ 86,000 ಕೋಟಿ ರುಪಾಯಿಗಳನ್ನು ನಿಗದಿಪಡಿಸಿತು &#8211; 2024 -2025  ರ ಪರಿಷ್ಕೃತ ಅಂದಾಜಿನ ಪ್ರಕಾರ ಈ ಯೋಜನೆಗೆ ಖರ್ಚು ಮಾಡಿದ ಮೊತ್ತಕ್ಕೆ ಸಮ. ಎನ್‌ಡಿಎ ಸರ್ಕಾರವು ಮತ್ತೆ ಅಧಿಕಾರಕ್ಕೆ ಬಂದ ನಂತರ, 2024 ರ ಜುಲೈನಲ್ಲಿ ಮಂಡಿಸಲಾದ 2024-25 ರ ಕೇಂದ್ರ ಬಜೆಟ್‌ನಲ್ಲಿ 86,000 ಕೋಟಿ ರುಪಾಯಿಗಳ ಭರವಸೆ ನೀಡಲಾಗಿತ್ತು.</p>


<div class="wp-block-image">
<figure class="aligncenter size-full is-resized"><img decoding="async" width="568" height="419" src="https://peepalmedia.com/wp-content/uploads/2025/06/image.png" alt="" class="wp-image-60183" style="width:460px;height:auto" srcset="https://peepalmedia.com/wp-content/uploads/2025/06/image.png 568w, https://peepalmedia.com/wp-content/uploads/2025/06/image-300x221.png 300w, https://peepalmedia.com/wp-content/uploads/2025/06/image-150x111.png 150w" sizes="(max-width: 568px) 100vw, 568px" /><figcaption class="wp-element-caption">ಕೃಪೆ: ಕೇಂದ್ರ ಸರ್ಕಾರದ ಬಜೆಟ್‌ ದಾಖಲೆ</figcaption></figure></div>


<p><a href="https://thewire.in/politics/demand-for-work-under-mgnregs-goes-up-actual-job-creation-declines"><em>ಗ್ರಾಮೀಣ ಭಾರತದಲ್ಲಿ ಹೊಸ ಆರ್ಥಿಕ ಒತ್ತಡದ ಸೂಚನೆಯಾಗಿ, ಈ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ MGNREGS ಅಡಿಯಲ್ಲಿ ಕೌಶಲ್ಯರಹಿತ ಕೆಲಸಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ದಿ ವೈರ್</em> ಈ ಹಿಂದೆ ವರದಿ ಮಾಡಿತ್ತು</a>. ಈ ವರದಿಯಲ್ಲಿ ಅದೇ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಂಕಿಅಂಶಗಳನ್ನು ಇಟ್ಟುಕೊಂಡು ವರದಿ ಮಾಡಲಾಗಿತ್ತು. ಏಪ್ರಿಲ್‌ನಲ್ಲಿ ಈ ಯೋಜನೆಯಡಿ ಉದ್ಯೋಗವನ್ನು ಬಯಸಿದವರಲ್ಲಿ 2.012 ಕೋಟಿ ಗ್ರಾಮೀಣ ಕುಟುಂಬಗಳು ಸೇರಿದ್ದವು. ಮೇ ತಿಂಗಳಲ್ಲಿ (ತಿಂಗಳ 18 ನೇ ತಾರೀಖಿನವರೆಗೆ) ಈ ಸಂಖ್ಯೆ 2.037 ಕೋಟಿಗೆ ಏರಿಕೆಯಾಗಿತ್ತು.</p>



<p>ಕೋವಿಡ್-19 ನಂತರದ ಮೊದಲ ಪೂರ್ಣ ವರ್ಷವಾದ 2020-21ರಲ್ಲಿ ಯೋಜನೆಯಡಿಯಲ್ಲಿ ಹಣ ಬಿಡುಗಡೆಯು ಗರಿಷ್ಠ 1,09,810 ಕೋಟಿ ರುಪಾಯಿಗಳಿಗೆ ತಲುಪಿತ್ತು ಎಂದು ಎಕ್ಸ್‌ಪ್ರೆಸ್ ವರದಿ ಉಲ್ಲೇಖಿಸುತ್ತದೆ. ದಾಖಲೆಯ 7.55 ಕೋಟಿ ಗ್ರಾಮೀಣ ಕುಟುಂಬಗಳು ಈ ಯೋಜನೆಯ ಪ್ರಯೋಜನ ಪಡೆದುಕೊಂಡವು.</p>



<p>ಮುಂದಿನ ಹಣಕಾಸು ಆಯೋಗದ ಚಕ್ರಕ್ಕಾಗಿ ಸರ್ಕಾರವು ತನ್ನ ಯೋಜನೆಗಳನ್ನು ಮೌಲ್ಯಮಾಪನ ಮಾಡಲು ಮತ್ತು ಅನುಮೋದಿಸಲು ನಡೆಸುವ ಭಾಗವಾಗಿ EFC ಮೌಲ್ಯಮಾಪನ ಮತ್ತು ಅನುಮೋದನೆ ಇದೆ ಎಂದು ಸರ್ಕಾರದ ಮೂಲಗಳನ್ನು ವರದಿ ಉಲ್ಲೇಖಿಸಿದೆ. ಮನರೇಗಾ ಕಾನೂನಿನಿಂದ ಬೆಂಬಲಿತವಾಗಿದೆ ಮತ್ತು ಆದ್ದರಿಂದ EFC ಅನುಮೋದನೆಯು &#8220;ಕೇವಲ ಔಪಚಾರಿಕತೆ&#8221; ಎಂದು ವರದಿ ಹೇಳಿದೆ. ಸಚಿವಾಲಯದ ವೆಚ್ಚವು ಸಹ ಬದಲಾವಣೆಗೆ ಒಳಪಟ್ಟಿರುತ್ತದೆ ಎಂದು ಮೂಲಗಳು ಪತ್ರಿಕೆಗೆ ತಿಳಿಸಿವೆ.</p>
]]></content:encoded>
					
		
		
			</item>
		<item>
		<title>ಗ್ರಾಮ ಪಂಚಾಯಿತಿಗಳು ಆರ್ಥಿಕವಾಗಿ ಸದೃಢವಾದರೆ ಪಂಚಾಯತ್ ರಾಜ್‌ಗೆ ಬಲ: ಪ್ರಿಯಾಂಕ್ ಖರ್ಗೆ</title>
		<link>https://peepalmedia.com/if-gram-panchayats-are-financially-strong-panchayat-raj-will-be-strong-priyank-kharge/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 31 May 2025 07:13:11 +0000</pubDate>
				<category><![CDATA[ರಾಜ್ಯ]]></category>
		<category><![CDATA[banaglore]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[karnataka]]></category>
		<category><![CDATA[local bodies]]></category>
		<category><![CDATA[panchayat raj]]></category>
		<guid isPermaLink="false">https://peepalmedia.com/?p=60093</guid>

					<description><![CDATA[ಬೆಂಗಳೂರು: ಗ್ರಾಮ ಪಂಚಾಯಿತಿಗಳನ್ನು ಆರ್ಥಿಕವಾಗಿ ಸದೃಢಗೊಳಿಸಿದರೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಗೊಳಿಸಿದಂತೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈಗಾಗಲೇ ಸುಮಾರು ₹1,200 ಕೋಟಿಯ ದಾಖಲೆ ಮೊತ್ತದ ತೆರಿಗೆ ಸಂಗ್ರಹಿಸುವ ಮೂಲಕ ಗ್ರಾಮ ಪಂಚಾಯಿತಿಗಳ ಆರ್ಥಿಕ ಸಂಪನ್ಮೂಲ ಕ್ರೋಡೀಕರಣದ ವಿಷಯದಲ್ಲಿ ಯಶಸ್ಸಿನ ಹಾದಿಯಲ್ಲಿದ್ದೇವೆ. ಇದಲ್ಲದೆ ಗ್ರಾಮ ಪಂಚಾಯಿತಿಗಳಿಗೆ ಸಂಬಂಧಿಸಿದ ಆಸ್ತಿ ನಗದೀಕರಣ ಯೋಜನೆಯನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಕುರಿತು ಪಂಚಾಯತ್ ರಾಜ್ ಅಧಿಕಾರಿಗಳ ಸಭೆ ನಡೆಸಿ, ಗ್ರಾಮ ಪಂಚಾಯಿತಿಗಳ [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ಗ್ರಾಮ ಪಂಚಾಯಿತಿಗಳನ್ನು ಆರ್ಥಿಕವಾಗಿ ಸದೃಢಗೊಳಿಸಿದರೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಗೊಳಿಸಿದಂತೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.</p>



<p>ಈಗಾಗಲೇ ಸುಮಾರು ₹1,200 ಕೋಟಿಯ ದಾಖಲೆ ಮೊತ್ತದ ತೆರಿಗೆ ಸಂಗ್ರಹಿಸುವ ಮೂಲಕ ಗ್ರಾಮ ಪಂಚಾಯಿತಿಗಳ ಆರ್ಥಿಕ ಸಂಪನ್ಮೂಲ ಕ್ರೋಡೀಕರಣದ ವಿಷಯದಲ್ಲಿ ಯಶಸ್ಸಿನ ಹಾದಿಯಲ್ಲಿದ್ದೇವೆ. ಇದಲ್ಲದೆ ಗ್ರಾಮ ಪಂಚಾಯಿತಿಗಳಿಗೆ ಸಂಬಂಧಿಸಿದ ಆಸ್ತಿ ನಗದೀಕರಣ ಯೋಜನೆಯನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.</p>



<p>ಈ ಕುರಿತು ಪಂಚಾಯತ್ ರಾಜ್ ಅಧಿಕಾರಿಗಳ ಸಭೆ ನಡೆಸಿ, ಗ್ರಾಮ ಪಂಚಾಯಿತಿಗಳ ಆಸ್ತಿಗಳನ್ನು ಗುರುತಿಸುವ ಬಗ್ಗೆ ಸಲಹಾ ಸಮಿತಿಯ ಸಲಹೆಗಳನ್ನು ಪಡೆಯಬೇಕು, ಕಾಲಮಿತಿಯಲ್ಲಿ ಆಸ್ತಿಗಳ ಸರ್ವೇ ನಡೆಸಬೇಕು ಹಾಗೂ ಸರ್ವೇಯಾದ ಆಸ್ತಿಗಳ ವಿವರಗಳನ್ನು ಪಂಚತಂತ್ರ 2.0 ತಂತ್ರಾಂಶದಲ್ಲಿ ಅಪ್ಲೋಡ್ ಮಾಡಬೇಕು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.</p>



<p>ಗ್ರಾಮ ಪಂಚಾಯಿತಿಗಳ ಆಸ್ತಿಗಳ ಸರ್ವೇ ಮಾಡುವುದರಿಂದ ಅಭಿವೃದ್ಧಿ ಕಾಮಗಾರಿಗಳ ನೀಲನಕ್ಷೆ ತಯಾರಿಸಲು, ಗ್ರಾಮ ಪಂಚಾಯಿತಿಯ ಆದಾಯ ಹೆಚ್ಚಿಸಲು, ಗ್ರಾಮಗಳ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳನ್ನು ಅಂದಾಜಿಸಲು ಸೇರಿದಂತೆ ಹಲವು ಆಯಾಮಗಳಲ್ಲಿ ಅನುಕೂಲತೆಗಳು ಸಾಧ್ಯವಾಗುತ್ತವೆ.<br>ಇದರೊಂದಿಗೆ, ಗ್ರಾಮ ಪಂಚಾಯಿತಿಗಳ ಸಂಪನ್ಮೂಲಗಳು ಸಮರ್ಥವಾಗಿ ಸದ್ಬಳಕೆಯಾದಲ್ಲಿ ಸ್ಥಳೀಯ ಸರ್ಕಾರಗಳಿಗೆ ಹೆಚ್ಚಿನ ಬಲ ಬರಲಿದೆ ಎಂದಿದ್ದಾರೆ.</p>
]]></content:encoded>
					
		
		
			</item>
		<item>
		<title>ನಗರದಲ್ಲಿ ಮಳೆ ಸಮಸ್ಯೆ, ಶಾಶ್ವತ ಪರಿಹಾರ ನಮ್ಮ ಆದ್ಯತೆ: ಡಿ.ಸಿ.ಎಂ</title>
		<link>https://peepalmedia.com/rain-problem-in-the-city-permanent-solution-is-our-priority-dcm/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 22 May 2025 08:00:13 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[dk shivakumar]]></category>
		<category><![CDATA[dks]]></category>
		<guid isPermaLink="false">https://peepalmedia.com/?p=59493</guid>

					<description><![CDATA[ಬೆಂಗಳೂರು: ರಾಜಧಾನಿಯಲ್ಲಿ ಮಳೆಯಿಂದಾಗಿರುವ ಸಮಸ್ಯೆ ಕುರಿತು ಜನರಿಗೆ ಆಕ್ರೋಶ ಇದೆ ನಿಜ. ಆದರೆ, ಮಳೆ ಪರಿಸ್ಥಿತಿ ನಿಭಾಯಿಸಲು ಶಾಶ್ವತ ಪರಿಹಾರ ನಮ್ಮ ಆದ್ಯತೆಯಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು. ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ನಾಡಿನಲ್ಲಿ ಮಳೆ ಹೆಚ್ಚಾಗಬೇಕು ಎಂದುಕೊಳ್ಳುತ್ತೇನೆ. ಅದರಿಂದ ಬೆಳೆ ಉತ್ತಮವಾಗಿ ನಾಡು ಸುಭಿಕ್ಷವಾಗಿರುತ್ತದೆ. ಆದರೆ, ಬೆಂಗಳೂರಿನಲ್ಲಿ ನಿರಂತರ ಮಳೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ನಮ್ಮ ಜವಾಬ್ದಾರಿ. ಹೀಗಾಗಿ ಮೂಲಸೌಕರ್ಯಗಳಲ್ಲಿನ ಬಹುಕಾಲದ ನ್ಯೂನ್ಯತೆಗಳನ್ನು ಸರಿಪಡಿಸುವ ಕಾರ್ಯ ಮಾಡುತ್ತಿದ್ದೇವೆ [&#8230;]]]></description>
										<content:encoded><![CDATA[
<p><strong>ಬೆಂಗಳೂರು: </strong>ರಾಜಧಾನಿಯಲ್ಲಿ ಮಳೆಯಿಂದಾಗಿರುವ ಸಮಸ್ಯೆ ಕುರಿತು ಜನರಿಗೆ ಆಕ್ರೋಶ ಇದೆ ನಿಜ. ಆದರೆ, ಮಳೆ ಪರಿಸ್ಥಿತಿ ನಿಭಾಯಿಸಲು ಶಾಶ್ವತ ಪರಿಹಾರ ನಮ್ಮ ಆದ್ಯತೆಯಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.</p>



<p>ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ನಾಡಿನಲ್ಲಿ ಮಳೆ ಹೆಚ್ಚಾಗಬೇಕು ಎಂದುಕೊಳ್ಳುತ್ತೇನೆ. ಅದರಿಂದ ಬೆಳೆ ಉತ್ತಮವಾಗಿ ನಾಡು ಸುಭಿಕ್ಷವಾಗಿರುತ್ತದೆ. ಆದರೆ, ಬೆಂಗಳೂರಿನಲ್ಲಿ ನಿರಂತರ ಮಳೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ನಮ್ಮ ಜವಾಬ್ದಾರಿ. ಹೀಗಾಗಿ ಮೂಲಸೌಕರ್ಯಗಳಲ್ಲಿನ ಬಹುಕಾಲದ ನ್ಯೂನ್ಯತೆಗಳನ್ನು ಸರಿಪಡಿಸುವ ಕಾರ್ಯ ಮಾಡುತ್ತಿದ್ದೇವೆ ಎಂದು ಹೇಳಿದರು.</p>



<p>ಇತ್ತೀಚಿಗೆ ಕೆರೆ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿ, ಅಗತ್ಯ ಕ್ರಮಗಳಿಗೆ ಸೂಚಿಸಿದಂತೆ ಅಧಿಕಾರಿಗಳು ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ. ₹ 2,000 ಕೋಟಿಯಲ್ಲಿ ಇಡೀ ಬೆಂಗಳೂರಿನ ರಾಜಕಾಲುವೆಗಳ ಸಮಸ್ಯೆಗಳನ್ನು ಒಂದೇ ಸಾರಿ ಪೂರ್ಣಗೊಳಿಸಬೇಕೆಂದುಕೊಂಡು ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.</p>



<p>ಮಳೆ ಬಾಧಿತ ಪ್ರದೇಶಗಳಲ್ಲಿ ಬೇಸ್‌ಮೆಂಟ್ ಪಾರ್ಕಿಂಗ್, ಕೆಳ ಹಂತದಲ್ಲಿ ಮನೆ ನಿರ್ಮಾಣಕ್ಕೆ ಅವಕಾಶ ನೀಡದಂತೆ ಟೌನ್ ಪ್ಲಾನಿಂಗ್‌ ನಲ್ಲಿ ಬದಲಾವಣೆ ತರುವ ಬಗ್ಗೆ ತೀರ್ಮಾನ ಮಾಡಿದ್ದೇವೆ. ಮಳೆ ನೀರು ನುಗ್ಗದಿದ್ದರೂ, ಕೆಲವೆಡೆ ನೆಲಮಹಡಿಗಳಲ್ಲಿ ಅಂತರ್ಜಲ ಬರುತ್ತಿದೆ. ಇದರಿಂದ ವಿದ್ಯುತ್‌ ಶಾರ್ಟ್‌ ಸರ್ಕೀಟ್‌ಗಳಾಗುತ್ತಿದೆ, ಇದರಿಂದ ಪ್ರಾಣ ಹಾನಿಗಳಾಗಿದೆ ಎಂದರು.</p>



<p>ಹೀಗಾಗಿ, ಹೊಸ ಕಟ್ಟಡಗಳಲ್ಲಿ ಈ ನೆಲಮಹಡಿಗಳಿಗೆ ಸಂಬಂಧಿಸಿದಂತೆ ತಾಂತ್ರಿಕವಾಗಿ ಸಮಾಲೋಚಿಸಿ, ತೀರ್ಮಾನ ಕೈಗೊಳ್ಳುತ್ತಿದ್ದೇವೆ. ಪರಿಹಾರ ಕ್ರಮಗಳು ಸದ್ಯಕ್ಕೆ ಸಮರೋಪಾದಿಯಲ್ಲಿದೆ. ಜನ ನೆಮ್ಮದಿಯಿಂದ ಬದುಕುವ, ಸುಸ್ಥಿರ ಬೆಂಗಳೂರು ನಿರ್ಮಾಣ ನಮ್ಮ ಕರ್ತವ್ಯವಾಗಿದ್ದು, ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.</p>
]]></content:encoded>
					
		
		
			</item>
		<item>
		<title>ಮನೆ-ಮನೆಗೆ ತೆರಳಿದ ಆರೋಗ್ಯ ಸಚಿವ: ಆರೋಗ್ಯ ಸುರಕ್ಷತಾ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು</title>
		<link>https://peepalmedia.com/health-minister-goes-door-to-door-public-aware-of-health-safety-measures/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 22 May 2025 07:29:00 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[dk shivakumar]]></category>
		<category><![CDATA[dks]]></category>
		<category><![CDATA[flood]]></category>
		<guid isPermaLink="false">https://peepalmedia.com/?p=59490</guid>

					<description><![CDATA[ಬೆಂಗಳೂರು: ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಹಿನ್ನೆಲೆಯಲ್ಲಿ ನಿನ್ನೆ(ಬುಧವಾರ) ಗಾಂಧಿನಗರ ವಿಧಾನಸಭಾ ಕ್ಷೇತ್ರದ ಚಿಕ್ಕಪೇಟೆ ವ್ಯಾಪ್ತಿಯ ಕುಂಬಾರಗುಂಡಿ ಬಡಾವಣೆಯಲ್ಲಿ ,ಮನೆ ಮನೆಗೆ ತೆರಳಿ ಡೆಂಗ್ಯೂ ವಿರುದ್ಧ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್‌ ಗುಂಡೂರಾವ್‌ ಸಾರ್ವಜನಿಕರಿಗೆ ಅರಿವು ಮೂಡಿಸಿದ್ದಾರೆ. ನೀರಿನ ಘಟಕಗಳು, ನೀರಿನ ಟ್ಯಾಂಕ್, ಮನೆಯಲ್ಲಿನ ಬಿಂದಿಗೆ, ಮನೆಯ ಬಳಿಯ ಹಳೆಯ ಟೈರ್‌ಗಳು ಜೊತೆಗೆ ತೆಂಗಿನ ಚಿಪ್ಪುಗಳಲ್ಲಿ, “ಈಡಿಸ್ ಸೊಳ್ಳೆ”- “ಲಾರ್ವಾ” ಹುಳು ಹುಟ್ಟಲು ಕಾರಣವಾಗುತ್ತದೆ, ಆದ್ದರಿಂದ ಸಾಧ್ಯವಾದಷ್ಟು ಈ ಎಲ್ಲಾ [&#8230;]]]></description>
										<content:encoded><![CDATA[
<p><strong>ಬೆಂಗಳೂರು: </strong>ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಹಿನ್ನೆಲೆಯಲ್ಲಿ ನಿನ್ನೆ(ಬುಧವಾರ) ಗಾಂಧಿನಗರ ವಿಧಾನಸಭಾ ಕ್ಷೇತ್ರದ ಚಿಕ್ಕಪೇಟೆ ವ್ಯಾಪ್ತಿಯ ಕುಂಬಾರಗುಂಡಿ ಬಡಾವಣೆಯಲ್ಲಿ ,ಮನೆ ಮನೆಗೆ ತೆರಳಿ ಡೆಂಗ್ಯೂ ವಿರುದ್ಧ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್‌ ಗುಂಡೂರಾವ್‌ ಸಾರ್ವಜನಿಕರಿಗೆ ಅರಿವು ಮೂಡಿಸಿದ್ದಾರೆ.</p>



<p>ನೀರಿನ ಘಟಕಗಳು, ನೀರಿನ ಟ್ಯಾಂಕ್, ಮನೆಯಲ್ಲಿನ ಬಿಂದಿಗೆ, ಮನೆಯ ಬಳಿಯ ಹಳೆಯ ಟೈರ್‌ಗಳು ಜೊತೆಗೆ ತೆಂಗಿನ ಚಿಪ್ಪುಗಳಲ್ಲಿ, “ಈಡಿಸ್ ಸೊಳ್ಳೆ”- “ಲಾರ್ವಾ” ಹುಳು ಹುಟ್ಟಲು ಕಾರಣವಾಗುತ್ತದೆ, ಆದ್ದರಿಂದ ಸಾಧ್ಯವಾದಷ್ಟು ಈ ಎಲ್ಲಾ ತಾಣಗಳ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.</p>



<p>ನಗರದಲ್ಲಿ 40% ರಿಂದ 50ರಷ್ಟು ಡೆಂಗ್ಯೂ ಪ್ರಕರಣಗಳು ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ನಾಗರಿಕರು ಸಹ ಹೆಚ್ಚಿನ ಮುನ್ನೆಚ್ಚರಿಕೆ ‌ ವಹಿಸುವುದು ಅಗತ್ಯವಾಗಿದೆ. ಸ್ವಚ್ಛತೆಯಿಂದ ಡೆಂಗಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ. ಮೊದಲು ನಮ್ಮ ಮನೆ ಸುತ್ತಾಮುತ್ತಾ ಪ್ರದೇಶಗಳು ಸ್ವಚ್ಚವಾಗಿಟ್ಟುಕೊಳ್ಳಬೇಕು ಎಂದು ಸಾರ್ವಜನಿಕರಿಗೆ ತಿಳಿಹೇಳಿದ್ದಾರೆ.</p>



<p>ಈ ಹಿನ್ನಲೆಯಲ್ಲಿ, ಡೆಂಗ್ಯೂ ನಿಯಂತ್ರಣಕ್ಕೆ ನಗರದಲ್ಲಿ 240 ಆರೋಗ್ಯ ನಿರೀಕ್ಷಣಾಧಿಕಾರಿಗಳು ಮತ್ತು 700 ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.</p>



<p>ನಮ್ಮ ಆರೋಗ್ಯಕ್ಕೆ ನಾವು ಮೊದಲ ಪ್ರಾಮುಖ್ಯ ನೀಡಬೇಕಿದೆ. ಉತ್ತಮ ಆರೋಗ್ಯಕ್ಕೆ ಉತ್ತಮ ವಾತಾವರಣ ನಿರ್ಮಾಣ ಅಗತ್ಯವಿದ್ದು ನಮ್ಮ ಸುತ್ತಮುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಎಲ್ಲೆಲ್ಲಿ ಬಿಜೆಪಿ ಶಾಸಕರಿದ್ದಾರೋ ಅಲ್ಲಿ ಮಾತ್ರ ಮಳೆಹಾನಿ ಸಮಸ್ಯೆ: ಡಿ.ಕೆ.ಶಿ</title>
		<link>https://peepalmedia.com/rain-damage-problem-only-exists-wherever-there-are-bjp-mlas-d-k-s/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 22 May 2025 06:50:21 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[dk shivakumar]]></category>
		<category><![CDATA[dks]]></category>
		<category><![CDATA[flood]]></category>
		<category><![CDATA[Siddaramaiah]]></category>
		<guid isPermaLink="false">https://peepalmedia.com/?p=59487</guid>

					<description><![CDATA[ಬೆಂಗಳೂರು: ಎಲ್ಲೆಲ್ಲಿ ಬಿಜೆಪಿ ಶಾಸಕರಿದ್ದಾರೋ ಆ ಪ್ರದೇಶಗಳಲ್ಲಿ ಮಾತ್ರ ಮಳೆಹಾನಿ ಸಮಸ್ಯೆ ಎದುರಾಗಿದೆ. ಇದು ಅವರು ಯಾವುದೇ ಕೆಲಸ ಮಾಡಿಲ್ಲ ಎಂಬುದಕ್ಕೆ ಸಾಕ್ಷಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಟೀಕಿಸಿದ್ದಾರೆ. ರಾಜ್ಯದಲ್ಲಿ ಮೂರ್ನಾಲ್ಕು ದಿನಗಳಿಂದ ಮಳೆಯಾಗಿದ್ದು, ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗಳು ಮಳೆ ನೀರಿನಿಂದ ಜಲಾವೃತವಾಗಿ, ಸಾವರ್ಜನಿಕರಿಗೆ ತೊಂದರೆಯಾಗಿರುವ ಹಿನ್ನಲೆಯಲ್ಲಿ, ರಾಜ್ಯದ ಮುಖ್ಯಮಂತ್ರಿ ಜೊತೆಗೆ ಉಪಮುಖ್ಯಮಂತ್ರಿಗಳು ಸಿಟಿ ರೌಂಡ್‌ ಹಾಕಿದ ಬಳಿಕ, ಈ ಕುರಿತು ರಾಜ್ಯ ಕಾಂಗ್ರೆಸ್‌ ಘಟಕ ತಮ್ಮ ʼಎಕ್ಸ್‌ʼ ಖಾತೆಯಲ್ಲಿ ಪೋಸ್ಟ್‌ ಮಾಡಿದೆ. ಪೋಸ್ಟ್‌ನಲ್ಲಿ, [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ಎಲ್ಲೆಲ್ಲಿ ಬಿಜೆಪಿ ಶಾಸಕರಿದ್ದಾರೋ ಆ ಪ್ರದೇಶಗಳಲ್ಲಿ ಮಾತ್ರ ಮಳೆಹಾನಿ ಸಮಸ್ಯೆ ಎದುರಾಗಿದೆ. ಇದು ಅವರು ಯಾವುದೇ ಕೆಲಸ ಮಾಡಿಲ್ಲ ಎಂಬುದಕ್ಕೆ ಸಾಕ್ಷಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಟೀಕಿಸಿದ್ದಾರೆ.</p>



<p>ರಾಜ್ಯದಲ್ಲಿ ಮೂರ್ನಾಲ್ಕು ದಿನಗಳಿಂದ ಮಳೆಯಾಗಿದ್ದು, ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗಳು ಮಳೆ ನೀರಿನಿಂದ ಜಲಾವೃತವಾಗಿ, ಸಾವರ್ಜನಿಕರಿಗೆ ತೊಂದರೆಯಾಗಿರುವ ಹಿನ್ನಲೆಯಲ್ಲಿ, ರಾಜ್ಯದ ಮುಖ್ಯಮಂತ್ರಿ ಜೊತೆಗೆ ಉಪಮುಖ್ಯಮಂತ್ರಿಗಳು ಸಿಟಿ ರೌಂಡ್‌ ಹಾಕಿದ ಬಳಿಕ, ಈ ಕುರಿತು ರಾಜ್ಯ ಕಾಂಗ್ರೆಸ್‌ ಘಟಕ ತಮ್ಮ ʼಎಕ್ಸ್‌ʼ ಖಾತೆಯಲ್ಲಿ ಪೋಸ್ಟ್‌ ಮಾಡಿದೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="kn" dir="ltr">ಎಲ್ಲೆಲ್ಲಿ ಬಿಜೆಪಿ ಶಾಸಕರಿದ್ದಾರೋ ಆ ಪ್ರದೇಶಗಳಲ್ಲಿ ಮಾತ್ರ ಮಳೆಹಾನಿ ಸಮಸ್ಯೆ ಎದುರಾಗಿದೆ. ಇದು ಅವರು ಯಾವುದೇ ಕೆಲಸ ಮಾಡಿಲ್ಲ ಎಂಬುದಕ್ಕೆ ಸಾಕ್ಷಿ.<br><br>ಕಾಂಗ್ರೆಸ್ ಶಾಸಕರು ಕಾಮಗಾರಿಗಳನ್ನು ಬೇಗ ಮುಗಿಸಿ ತಮ್ಮ ಕ್ಷೇತ್ರಗಳಲ್ಲಿನ ಸಮಸ್ಯೆ ಬಗೆಹರಿಸಿದ್ದಾರೆ. ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಕ್ಷೇತ್ರದಲ್ಲೂ ಪರಿಶೀಲನೆ ಮಾಡಿದ್ದೇವೆ. ಅವರು ಈ… <a href="https://t.co/LNayDsCK0a">pic.twitter.com/LNayDsCK0a</a></p>&mdash; Karnataka Congress (@INCKarnataka) <a href="https://twitter.com/INCKarnataka/status/1925415832018202991?ref_src=twsrc%5Etfw">May 22, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಪೋಸ್ಟ್‌ನಲ್ಲಿ, ಬೆಂಗಳೂರಿನಲ್ಲಿ ಎಲ್ಲೇಲ್ಲಿ ಮಳೆ ಹಾನಿಯಾಗಿದೇಯೋ ಆ ಎಲ್ಲಾ ಪ್ರದೇಶಗಳು ಬಿಜೆಪಿ ಶಾಸಕರು ಇರುವಂತಹ ಸ್ಥಳಗಳು, ಇವು ಬಿಜೆಪಿ ಶಾಸಕರ ಕೆಲಸದ ವೈಕರಿಯನ್ನ ತಿಳಿಸುತ್ತದೆ ಎಂದು ಡಿ.ಕೆ.ಶಿವಕುಮಾರ್‌ ಅವರು ವ್ಯಂಗಿಸಿದ್ದಾರೆ ಎಂದು ಹೇಳಿದೆ.</p>



<p>ಜೊತೆಗೆ ಕಾಂಗ್ರೆಸ್ ಶಾಸಕರು ಕಾಮಗಾರಿಗಳನ್ನು ಬೇಗ ಮುಗಿಸಿ ತಮ್ಮ ಕ್ಷೇತ್ರಗಳಲ್ಲಿನ ಸಮಸ್ಯೆ ಬಗೆಹರಿಸಿದ್ದಾರೆ. ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಕ್ಷೇತ್ರದಲ್ಲೂ ಪರಿಶೀಲನೆ ಮಾಡಿದ್ದೇವೆ. ಅವರು ಈ ಭಾಗದ ರಸ್ತೆ ಅಗಲೀಕರಣ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ಅವರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.</p>



<p>ಈ ವಿಚಾರವಾಗಿ ಎಲ್ಲೆಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಸಮಸ್ಯೆಯಾಗಿದೆಯೋ‌ ಆ ಜಾಗಗಳ ಫೋಟೊ, ವಿಡಿಯೊ ಮಾಡಿಕೊಂಡು ತುರ್ತು ವರದಿ ಸಲ್ಲಿಕೆ ಮಾಡುವಂತೆ ಡಿ.ಕೆ.ಶಿ ಅವರು ತಿಳಿಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ಘಟಕ ತಮ್ಮ ಪೋಸ್ಟ್‌ ಹಂಚಿಕೊಂಡಿದೆ.</p>
]]></content:encoded>
					
		
		
			</item>
		<item>
		<title>ರಾಜಸ್ಥಾನ: ಅಂಬೇಡ್ಕರ್ ಪ್ರತಿಮೆಯ ಬಳಿ ಬ್ಯಾನರ್‌ ಕಟ್ಟಲು ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ</title>
		<link>https://peepalmedia.com/rajasthan-bjp-congress-workers-clash-over-placing-banners-for-ambedkar-statue/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 15 Apr 2025 06:13:01 +0000</pubDate>
				<category><![CDATA[ದೇಶ]]></category>
		<category><![CDATA[Ambedkar]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[DR B R AMBEDKAR]]></category>
		<category><![CDATA[Rajasthan]]></category>
		<category><![CDATA[Sawai Madhopur]]></category>
		<guid isPermaLink="false">https://peepalmedia.com/?p=57232</guid>

					<description><![CDATA[ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಬೋನ್ಲಿ ನಗರದಲ್ಲಿ ಸೋಮವಾರ ಮುಂಜಾನೆ ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯ ಬಳಿ ಬ್ಯಾನರ್‌ ಕಟ್ಟಲು ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷದ ಸದಸ್ಯರ ನಡುವೆ ಘರ್ಷಣೆ ನಡೆದಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಸೋಮವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಘರ್ಷಣೆ ಪ್ರಾರಂಭವಾಗಿ ಸುಮಾರು ಎರಡು ಗಂಟೆಗಳ ಕಾಲ ನಡೆಯಿತು ಎಂದು ಪತ್ರಿಕೆ ವರದಿ ಮಾಡಿದೆ. ಎರಡು ವರ್ಷಗಳ ಹಿಂದೆ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೋನ್ಲಿಯಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಅನಾವರಣಗೊಳಿಸಲಾಗಿತ್ತು. ಅಂಬೇಡ್ಕರ್ ಜಯಂತಿಗೂ [&#8230;]]]></description>
										<content:encoded><![CDATA[
<p><a href="https://indianexpress.com/article/india/ambedkar-statue-rajasthan-nameplate-car-congress-bjp-mla-indira-meena-hanumat-dixit-9943233/" target="_blank" rel="noreferrer noopener">ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಬೋನ್ಲಿ ನಗರದಲ್ಲಿ ಸೋಮವಾರ ಮುಂಜಾನೆ</a> ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯ ಬಳಿ ಬ್ಯಾನರ್‌ ಕಟ್ಟಲು ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷದ ಸದಸ್ಯರ ನಡುವೆ ಘರ್ಷಣೆ ನಡೆದಿದೆ ಎಂದು <em>ದಿ ಇಂಡಿಯನ್ ಎಕ್ಸ್‌ಪ್ರೆಸ್</em> ವರದಿ ಮಾಡಿದೆ.</p>



<p>ಸೋಮವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಘರ್ಷಣೆ ಪ್ರಾರಂಭವಾಗಿ ಸುಮಾರು ಎರಡು ಗಂಟೆಗಳ ಕಾಲ ನಡೆಯಿತು ಎಂದು ಪತ್ರಿಕೆ ವರದಿ ಮಾಡಿದೆ.</p>



<p>ಎರಡು ವರ್ಷಗಳ ಹಿಂದೆ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೋನ್ಲಿಯಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಅನಾವರಣಗೊಳಿಸಲಾಗಿತ್ತು. ಅಂಬೇಡ್ಕರ್ ಜಯಂತಿಗೂ ಮುನ್ನ ಭಾನುವಾರ, ಪ್ರತಿಮೆಯ ಮೇಲೆ ಕಾಂಗ್ರೆಸ್ ಶಾಸಕಿ ಇಂದಿರಾ ಮೀನಾ ಮತ್ತು ಇತರ ಪಕ್ಷದ ಕಾರ್ಯಕರ್ತರ ಹೆಸರನ್ನು ಹೊಂದಿರುವ ಬ್ಯಾನರ್‌ ಕಟ್ಟಲಾಯಿತು.</p>



<p>ಇದರ ತಿಳಿದ ಬಿಜೆಪಿ ಕಾರ್ಯಕರ್ತರು ತಮ್ಮ ಪಕ್ಷದ ಸ್ಥಳೀಯ ನಾಯಕರಿಗೆ ಮಾಹಿತಿ ನೀಡಿದರು. ನಂತರ ಬಿಜೆಪಿ ಬ್ಲಾಕ್ ಅಧ್ಯಕ್ಷ ಹನುಮಾನ್ ದೀಕ್ಷಿತ್ ಮತ್ತು ಪಂಚಾಯತ್ ಸಮಿತಿ ಪ್ರಧಾನ್ ಕ್ರಿಶನ್ ಪೋಸ್ವಾಲ್ ಸ್ಥಳಕ್ಕೆ ಆಗಮಿಸಿ ಅದನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದರು.</p>



<p>ಇದಾದ ನಂತರ, ಮೀನಾ ಕೂಡ ಸ್ಥಳಕ್ಕೆ ಆಗಮಿಸಿ ಬಿಜೆಪಿ ನಾಯಕರ ಈ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು. ನಂತರದ ಗಲಾಟೆಯ ಸಮಯದಲ್ಲಿ, ಅವರು ದೀಕ್ಷಿತ್ ಅವರ ಕಾರಿನ ಮೇಲೆ ಹತ್ತಿ ಅವರ ಕಾಲರ್ ಹಿಡಿದಿರುವ <a href="https://x.com/AkashgauravJR/status/1911657939170951201" target="_blank" rel="noreferrer noopener">ವೀಡಿಯೊಗಳು ಕಂಡುಬಂದಿವೆ.</a></p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="hi" dir="ltr">कांग्रेस विधायक इंदिरा मीणा ने फाड़े भाजपा नेता के कपड़े। <br><br>बामनवास विधायक इंदिरा मीणा और BJP मंडल अध्यक्ष हनुमत दीक्षित के बीच अंबेडकर मूर्ति पर पुनः शिलापट्टिका लगाने को लेकर विवाद हुआ। विवाद इतना बढ़ा कि इंदिरा मीणा ने मंडल अध्यक्ष के कपड़े तक फाड़ दिए।  <br><br>वीडियो बौंली (सवाई… <a href="https://t.co/x3tKN7gHK8">pic.twitter.com/x3tKN7gHK8</a></p>&mdash; Akash Tiwari (@AkashgauravJR) <a href="https://twitter.com/AkashgauravJR/status/1911657939170951201?ref_src=twsrc%5Etfw">April 14, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಘರ್ಷಣೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಬ್ಯಾನರ್‌ ಅನ್ನು <a href="https://www.thehindu.com/news/national/rajasthan/clash-between-bjp-congress-party-workers-over-plaque-at-ambedkar-statues-pedestal-in-rajasthan/article69449607.ece" target="_blank" rel="noreferrer noopener">ವಶಪಡಿಸಿಕೊಳ್ಳಲಾಗಿದ್ದು</a>, ಈಗ ಬೋನ್ಲಿ ಪೊಲೀಸ್ ಠಾಣೆಯಲ್ಲಿದೆ ಎಂದು <em>ದಿ ಹಿಂದೂ</em> ವರದಿ ಮಾಡಿದೆ.</p>



<p>ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಕುಡಿದ ಮತ್ತಿನಲ್ಲಿದ್ದ ಬಿಜೆಪಿ ಕಾರ್ಯಕರ್ತರ ಗುಂಪೊಂದು ಸ್ಥಳಕ್ಕೆ ಆಗಮಿಸಿ, ಕಾರ್ಮಿಕರೊಂದಿಗೆ ಅನುಚಿತವಾಗಿ ವರ್ತಿಸಿ, ಬಲವಂತವಾಗಿ ಬ್ಯಾನರನ್ನು ತೆಗೆದು, ನಡೆಯುತ್ತಿರುವ ಕೆಲಸಕ್ಕೆ ಅಡ್ಡಿಪಡಿಸಿದೆ ಎಂದು ಮೀನಾ ಆರೋಪಿಸಿದ್ದಾರೆ.</p>



<p>&#8220;ಬಾಬಾ ಸಾಹೇಬ್ ಕೇವಲ ಒಬ್ಬ ವ್ಯಕ್ತಿಯಲ್ಲ, ಬದಲಾಗಿ ಕೋಟ್ಯಂತರ ದಲಿತರು, ವಂಚಿತರು ಮತ್ತು ಶೋಷಿತ ಜನರ ಭರವಸೆ ಮತ್ತು ಧ್ವನಿ. ಇದು ಅವರ ಮೇಲಿನ ದಾಳಿಯೇ ಹೊರತು, ಪ್ರತಿಮೆಯ ಮೇಲೆ ಅಲ್ಲ, ಸಮಾನತೆ, ಸಮಾನತೆ ಮತ್ತು ನ್ಯಾಯದ ಹಕ್ಕನ್ನು ನೀಡಿದ ಸಂವಿಧಾನದ ಮೇಲೆ ನಡೆಸಿದ ದಾಳಿ&#8221; ಎಂದು ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.</p>



<p>ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿರುವುದರಿಂದ ಪೊಲೀಸರು ಬಿಜೆಪಿ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ಮೀನಾ ಆರೋಪಿಸಿದ್ದಾರೆ ಎಂದು&nbsp;<em>ದಿ ಹಿಂದೂ</em>&nbsp;ವರದಿ ಮಾಡಿದೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="hi" dir="ltr">आज बौली (सवाईमाधोपुर) में संविधान विरोधी और बाबा साहब भीमराव अंबेडकर विरोधियों का चेहरा बेनकाब हो गया ।<br>हमने बौंली मे 2022 में अंबेडकर सर्कल का निर्माण कराया था जिसका सौन्दर्यकरण कार्य चल रहा है लेकिन बाबा साहब की  जयंती के कुछ घंटे पहले ही बाबा साहब विरोधी कुछ भाजपा के असमाजिक… <a href="https://t.co/jEQ6SAGFjy">pic.twitter.com/jEQ6SAGFjy</a></p>&mdash; Indira Meena (@IndiraMeena_) <a href="https://twitter.com/IndiraMeena_/status/1911605656353722641?ref_src=twsrc%5Etfw">April 14, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಬಿಜೆಪಿ ಕಾರ್ಯಕರ್ತರು ಕಾರ್ಮಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪವನ್ನು ದೀಕ್ಷಿತ್ ನಿರಾಕರಿಸಿದರು.</p>



<p>&#8220;ನಾನು ಪರಿಸ್ಥಿತಿಯನ್ನು ಪ್ರಬುದ್ಧವಾಗಿ ನಿಭಾಯಿಸಲು ಪ್ರಯತ್ನಿಸಿದೆ, ಆದರೆ ಶಾಸಕಿ ಇಂದಿರಾ ಮೀನಾ ನನ್ನೊಂದಿಗೆ ಕೆಟ್ಟದಾಗಿ ವರ್ತಿಸಿದರು. ಪ್ರತಿಮೆಯ ಅಲಂಕಾರದ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದ್ದರೆ, ಎರಡು ವರ್ಷಗಳ ಹಿಂದೆ ಪೂರ್ಣಗೊಂಡಿರುವ ಒಂದು ಕೆಲಸಕ್ಕೆ ಕಾಂಗ್ರೆಸ್ ಶಾಸಕರು ತಮ್ಮ ನಾಮಫಲಕವನ್ನು ಹಾಕಲು ಏಕೆ ಪ್ರಯತ್ನಿಸುತ್ತಿದ್ದರು?&#8221; ಎಂದು ಅವರು ಹೇಳಿದರು ಎಂದು <em>ಇಂಡಿಯನ್ ಎಕ್ಸ್‌ಪ್ರೆಸ್</em> ವರದಿ ಮಾಡಿದೆ . </p>
]]></content:encoded>
					
		
		
			</item>
		<item>
		<title>ಸಾವರ್ಕರ್ ಮಾನನಷ್ಟ ಪ್ರಕರಣ: ದಾಖಲೆಗಳಲ್ಲಿ ಐತಿಹಾಸಿಕ ಸಾಕ್ಷ್ಯಗಳನ್ನು ನೀಡಲು ರಾಹುಲ್ ಗಾಂಧಿಗೆ ಪುಣೆ ನ್ಯಾಯಾಲಯ ಅನುಮತಿ</title>
		<link>https://peepalmedia.com/savarkar-defamation-case-pune-court-allows-rahul-gandhi-to-file-historical-evidence/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 08 Apr 2025 06:57:46 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[congress]]></category>
		<category><![CDATA[hindutva]]></category>
		<category><![CDATA[Rahul Gandhi]]></category>
		<category><![CDATA[Savarkar defamation case]]></category>
		<category><![CDATA[VD Savarkar]]></category>
		<category><![CDATA[Vinayak Damodar Savarkar]]></category>
		<guid isPermaLink="false">https://peepalmedia.com/?p=56852</guid>

					<description><![CDATA[ಹಿಂದುತ್ವ ಸಿದ್ಧಾಂತವಾದಿ ವಿ.ಡಿ. ಸಾವರ್ಕರ್ ಅವರನ್ನು ಮಾನಹಾನಿ ಮಾಡಿದ ಆರೋಪ ಹೊತ್ತಿರುವ ಪ್ರಕರಣದ ವಿಚಾರಣೆಯ ಸ್ವರೂಪವನ್ನು ಸಾರಾಂಶ ವಿಚಾರಣೆಯಿಂದ ಸಮನ್ಸ್ ವಿಚಾರಣೆಗೆ ಪರಿವರ್ತಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಪುಣೆ ನ್ಯಾಯಾಲಯ ಸೋಮವಾರ ಪುರಸ್ಕರಿಸಿದೆ ಎಂದು ಬಾರ್ ಆಂಡ್ ಬೆಂಚ್ ವರದಿ ಮಾಡಿದೆ. ಇದು‌ ರಾಹುಲ್ ಗಾಂಧಿಯವರು ಈ ವಿಚಾರದಲ್ಲಿ ತಮ್ಮ ಹೇಳಿಕೆಗಳನ್ನು ಬೆಂಬಲಿಸಲು ನ್ಯಾಯಾಲಯದಲ್ಲಿ ಐತಿಹಾಸಿಕ ದಾಖಲೆಗಳನ್ನು ಪ್ರಸ್ತುತಪಡಿಸಲು ಅನುವು ಮಾಡಿಕೊಡುತ್ತದೆ. ಈ ಪ್ರಕರಣವು ಏಪ್ರಿಲ್ 2023 ರಲ್ಲಿ ವಿ.ಡಿ. ಸಾವರ್ಕರ್ ಅವರ ಸೋದರಳಿಯ ಸಾತ್ಯಕಿ ಸಾವರ್ಕರ್ ಅವರು ಗಾಂಧಿಯವರ [&#8230;]]]></description>
										<content:encoded><![CDATA[
<p>ಹಿಂದುತ್ವ ಸಿದ್ಧಾಂತವಾದಿ ವಿ.ಡಿ. ಸಾವರ್ಕರ್ ಅವರನ್ನು ಮಾನಹಾನಿ ಮಾಡಿದ ಆರೋಪ ಹೊತ್ತಿರುವ ಪ್ರಕರಣದ ವಿಚಾರಣೆಯ ಸ್ವರೂಪವನ್ನು ಸಾರಾಂಶ ವಿಚಾರಣೆಯಿಂದ ಸಮನ್ಸ್ ವಿಚಾರಣೆಗೆ ಪರಿವರ್ತಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಪುಣೆ ನ್ಯಾಯಾಲಯ ಸೋಮವಾರ <a href="https://www.barandbench.com/news/savarkar-defamation-case-pune-court-allows-plea-rahul-gandhi-bring-historical-evidence-on-record" target="_blank" rel="noreferrer noopener">ಪುರಸ್ಕರಿಸಿದೆ ಎಂದು </a><em>ಬಾರ್ ಆಂಡ್ ಬೆಂಚ್</em> ವರದಿ ಮಾಡಿದೆ.</p>



<p>ಇದು‌ ರಾಹುಲ್ ಗಾಂಧಿಯವರು ಈ ವಿಚಾರದಲ್ಲಿ ತಮ್ಮ ಹೇಳಿಕೆಗಳನ್ನು ಬೆಂಬಲಿಸಲು ನ್ಯಾಯಾಲಯದಲ್ಲಿ ಐತಿಹಾಸಿಕ ದಾಖಲೆಗಳನ್ನು ಪ್ರಸ್ತುತಪಡಿಸಲು ಅನುವು ಮಾಡಿಕೊಡುತ್ತದೆ.</p>



<p>ಈ ಪ್ರಕರಣವು ಏಪ್ರಿಲ್ 2023 ರಲ್ಲಿ ವಿ.ಡಿ. ಸಾವರ್ಕರ್ ಅವರ ಸೋದರಳಿಯ ಸಾತ್ಯಕಿ ಸಾವರ್ಕರ್ ಅವರು ಗಾಂಧಿಯವರ ವಿರುದ್ಧ ಸಲ್ಲಿಸಿದ ದೂರಿಗೆ ಸಂಬಂಧಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಸಾವರ್ಕರ್‌ ಬಗ್ಗೆ ಕಾಲ್ಪನಿಕ, ಸುಳ್ಳು ಮತ್ತು ದುರುದ್ದೇಶಪೂರಿತ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದರು.</p>



<p>&#8220;ಆರೋಪಗಳು ಸುಳ್ಳು ಎಂದು ತಿಳಿದೂ, ಸಾವರ್ಕರ್ ಅವರ ಖ್ಯಾತಿಗೆ ಹಾನಿ ಮಾಡುವ ಮತ್ತು ಅವರ ಉಪನಾಮವನ್ನು ಕೆಣಕುವ ನಿರ್ದಿಷ್ಟ ಉದ್ದೇಶದಿಂದ ಗಾಂಧಿಯವರು ಈ ಹೇಳಿಕೆಗಳನ್ನು ನೀಡಿದ್ದಾರೆ&#8230;&#8221; ಎಂದು ಸಾತ್ಯಕಿ ಸಾವರ್ಕರ್ ಆರೋಪಿಸಿದ್ದಾರೆ.</p>



<p>ಫೆಬ್ರವರಿ 18 ರಂದು, ಪ್ರಕರಣದ ವಿಚಾರಣೆಯ ಸ್ವರೂಪವನ್ನು ಸಾರಾಂಶ ವಿಚಾರಣೆಯಿಂದ ಸಮನ್ಸ್ ವಿಚಾರಣೆಗೆ ಪರಿವರ್ತಿಸಲು ಗಾಂಧಿಯವರು ಪುಣೆಯ ವಿಶೇಷ ಸಂಸದ/ಶಾಸಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು.</p>



<p>ಸಮನ್ಸ್ ವಿಚಾರಣೆಯು ವಿವರವಾದ ಪಾಟೀಸವಾಲನ್ನು ಒಳಗೊಂಡಿರುತ್ತದೆ ಮತ್ತು ಸಾರಾಂಶ ವಿಚಾರಣೆಗೆ ಹೋಲಿಸಿದರೆ ಇದು ದೀರ್ಘವಾದ ಕಾನೂನು ಪ್ರಕ್ರಿಯೆಯಾಗಿದೆ.</p>



<p>ಸೋಮವಾರ, ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಮೋಲ್ ಶ್ರೀರಾಮ್ ಶಿಂಧೆ, ಗಾಂಧಿಯವರು ತಮ್ಮ ಹೇಳಿಕೆಗಳು ಐತಿಹಾಸಿಕ ಸಂಗತಿಗಳನ್ನು ಆಧರಿಸಿವೆ ಎಂದು ಹೇಳಿಕೊಂಡಿದ್ದಾರೆ ಎಂದು <em>ಬಾರ್ ಆಂಡ್ ಬೆಂಚ್</em> ವರದಿ ಮಾಡಿದೆ.</p>



<p>&#8220;ಆದ್ದರಿಂದ, ನನ್ನ ಅಭಿಪ್ರಾಯದಲ್ಲಿ ಈ ಪ್ರಕರಣವನ್ನು ಸಾರಾಂಶ ವಿಚಾರಣೆಯಾಗಿ ಪ್ರಯತ್ನಿಸುವುದು ಅನಪೇಕ್ಷಿತ.‌ ಏಕೆಂದರೆ ಸಾರಾಂಶ ವಿಚಾರಣೆಯಲ್ಲಿ ವಿವರವಾದ ಸಾಕ್ಷ್ಯ ಮತ್ತು ಅಡ್ಡ ಪರೀಕ್ಷೆಯನ್ನು ತೆಗೆದುಕೊಳ್ಳಲಾಗುವುದಿಲ್ಲ. ಈ ಪ್ರಕರಣದಲ್ಲಿ, ಆರೋಪಿಯು ವಿವರವಾದ ಸಾಕ್ಷ್ಯವನ್ನು ಮುನ್ನಡೆಸಬೇಕು ಮತ್ತು ದೂರುದಾರರ ಸಾಕ್ಷಿಗಳನ್ನು ಸಂಪೂರ್ಣವಾಗಿ ಅಡ್ಡ ಪರೀಕ್ಷೆ ಮಾಡಬೇಕು,&#8221; ಎಂದು ಶಿಂಧೆ ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ ಎಂದು <em>ಬಾರ್ ಆಂಡ್ ಬೆಂಚ್</em> ಉಲ್ಲೇಖಿಸಿದೆ. </p>



<p>ಗಾಂಧಿಯವರ ಅರ್ಜಿಯನ್ನು ಪುರಸ್ಕರಿಸಿದ ಶಿಂಧೆ, ಈ ವಿಷಯದಲ್ಲಿ ಆಪಾದಿತ ಅಪರಾಧವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500 ರ ಅಡಿಯಲ್ಲಿದೆ ಎಂದು ಹೇಳಿದರು, ಇದು ಕ್ರಿಮಿನಲ್ ಮಾನನಷ್ಟಕ್ಕಾಗಿ ಇರುವ ದಂಡದ ಜೊತೆಗೆ ಎರಡು ವರ್ಷಗಳವರೆಗೆ ಸರಳ ಜೈಲು ಶಿಕ್ಷೆಯನ್ನು ವಿಧಿಸುತ್ತದೆ.</p>



<p>ಆದ್ದರಿಂದ, ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 2(w) ಮತ್ತು 2(x) ಆಧರಿಸಿದ ವರ್ಗೀಕರಣವನ್ನು ಗಣನೆಗೆ ತೆಗೆದುಕೊಂಡು, ಮೇಲ್ನೋಟಕ್ಕೆ ಪ್ರಕರಣವು ಸಮನ್ಸ್ ಪ್ರಕರಣದ ವರ್ಗದಲ್ಲಿದೆ ಎಂದು ನ್ಯಾಯಾಧೀಶರು ಹೇಳಿದರು.</p>



<p>ಸಂಹಿತೆಯ ಸೆಕ್ಷನ್ 2(w) &#8220;ಸಮನ್ಸ್ ಕೇಸ್&#8221; ಅನ್ನು &#8220;ವಾರೆಂಟ್-ಕೇಸ್&#8221; ಅಲ್ಲದ ಅಪರಾಧಕ್ಕೆ ಸಂಬಂಧಿಸಿದ ಯಾವುದೇ ಪ್ರಕರಣ ಎಂದು ವ್ಯಾಖ್ಯಾನಿಸುತ್ತದೆ. ಸೆಕ್ಷನ್ 2(x) &#8220;ವಾರೆಂಟ್-ಕೇಸ್&#8221; ಅನ್ನು ಮರಣದಂಡನೆ, ಜೀವಾವಧಿ ಶಿಕ್ಷೆ ಅಥವಾ ಎರಡು ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಜೈಲು ಶಿಕ್ಷೆಗೆ ಒಳಪಡುವ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣ ಎಂದು ವ್ಯಾಖ್ಯಾನಿಸುತ್ತದೆ.</p>



<p>&#8220;ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 260(2), ವಿಚಾರಣೆಯ ಸಮಯದಲ್ಲಿ ಸಂಕ್ಷಿಪ್ತವಾಗಿ ವಿಚಾರಣೆ ನಡೆಸುವುದು ಅನಪೇಕ್ಷಿತವೆಂದು ಕಂಡುಬಂದರೂ, ಮ್ಯಾಜಿಸ್ಟ್ರೇಟ್ ಪ್ರಕರಣವನ್ನು ಮರು ವಿಚಾರಣೆ ಮಾಡಬಹುದು ಎಂದು ನ್ಯಾಯಾಲಯಕ್ಕೆ ಒದಗಿಸುತ್ತದೆ ಮತ್ತು ಸುಗಮಗೊಳಿಸುತ್ತದೆ. ಆದ್ದರಿಂದ, ನ್ಯಾಯದ ಹಿತದೃಷ್ಟಿಯಿಂದ, ಈ ವಿಷಯವನ್ನು ಸಮನ್ಸ್ ಪ್ರಕರಣವಾಗಿ ವಿಚಾರಣೆ ನಡೆಸುವುದು ಕಡ್ಡಾಯವಾಗಿದೆ,&#8221; ಎಂದು <em>ಬಾರ್ ಆಂಡ್ ಬೆಂಚ್</em> ಆದೇಶವನ್ನು ಉಲ್ಲೇಖಿಸಿದೆ.</p>



<p>&#8220;ಪ್ರಸ್ತುತ ಪ್ರಕರಣವನ್ನು ಸಮನ್ಸ್ ಪ್ರಕರಣವಾಗಿ ವಿಚಾರಣೆ ನಡೆಸಿದರೆ ಯಾವುದೇ ಪಕ್ಷಕ್ಕೆ ಯಾವುದೇ ಪೂರ್ವಾಗ್ರಹ ಉಂಟಾಗುವುದಿಲ್ಲ,&#8221; ಎಂದು ಶಿಂಧೆ ಹೇಳಿದರು.</p>



<p>ಹಿಂದಿನ ವಿಚಾರಣೆಯಲ್ಲಿ, ಸಾತ್ಯಕಿ ಸಾವರ್ಕರ್ ಅವರು ವಿಚಾರಣೆಯ ಸ್ವರೂಪವನ್ನು ಪರಿವರ್ತಿಸುವ ಗಾಂಧಿಯವರ ಅರ್ಜಿಯನ್ನು ವಿರೋಧಿಸಿದ್ದರು ಮತ್ತು ಕಾಂಗ್ರೆಸ್ ನಾಯಕರು &#8220;ಭಾರತೀಯ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ವೀರ್ ಸಾವರ್ಕರ್ ಅವರ ಕೊಡುಗೆಗಳ ಬಗ್ಗೆ ಅಪ್ರಸ್ತುತ ವಾದಗಳನ್ನು ಎತ್ತುವ ಮೂಲಕ ವಿಷಯವನ್ನು ಬೇರೆಡೆಗೆ ತಿರುಗಿಸಲು,&#8221; ಪ್ರಯತ್ನಿಸುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.</p>



<p>ಜನವರಿ 10 ರಂದು ನ್ಯಾಯಾಲಯವು ಈ ಪ್ರಕರಣದಲ್ಲಿ ಗಾಂಧಿಯವರಿಗೆ 25,000 ರೂ.ಗಳ ಶ್ಯೂರಿಟಿ ಬಾಂಡ್ ಮೇಲೆ ಜಾಮೀನು ನೀಡಿತು. ಫೆಬ್ರವರಿ 18 ರಂದು, ರಾಹುಲ್‌ಗೆ ಕೋರ್ಟ್‌ಗೆ ಹಾಜರಾಗುವುದರಿಂದ ಶಾಶ್ವತ ವಿನಾಯಿತಿ ನೀಡಲಾಯಿತು.</p>
]]></content:encoded>
					
		
		
			</item>
		<item>
		<title>ಸೌಗತ್-ಎ-ಮೋದಿ ಕಿಟ್: ಸ್ವಯಂ ಘೋಷಿತ ಹಿಂದೂ ಹುಲಿಗಳ ಬಗ್ಗೆ ಕನಿಕರ ಮೂಡುತ್ತಿದೆ ಎಂದ ಪ್ರಿಯಾಂಕ್‌ ಖರ್ಗೆ</title>
		<link>https://peepalmedia.com/saugat-e-modi-kit-feeling-sorry-for-self-proclaimed-hindu-tigers-says-priyank-kharge/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 26 Mar 2025 08:50:19 +0000</pubDate>
				<category><![CDATA[ರಾಜಕೀಯ]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[fascism]]></category>
		<category><![CDATA[hindutva]]></category>
		<category><![CDATA[narendra modi]]></category>
		<category><![CDATA[priyank kharge]]></category>
		<category><![CDATA[Ramzan]]></category>
		<category><![CDATA[Saugat-e-Modi]]></category>
		<guid isPermaLink="false">https://peepalmedia.com/?p=55866</guid>

					<description><![CDATA[ಬೆಂಗಳೂರು: &#8220;ವಕ್ಫ್, ಹಲಾಲ್ ಬಜೆಟ್ ಮತ್ತು ಕಾಂಟ್ರಾಕ್ಟ್ ಜಿಹಾದ್‌ಗಾಗಿ ಹೋರಾಡಿದ ಕರ್ನಾಟಕದ ಬಿಜೆಪಿ ಹುಲಿಗಳು ಹಾಗೂ ಮಸೀದಿಗಳ ಮುಂದೆ ಡಿಜೆ ಹಾಕಿ ಕುಣಿದವರು, ಹೋಳಿ ಬಣ್ಣ ಎರಚಿದವರು. ಈಗ ಮಸೀದಿಗಳ ಮುಂದೆ ಸಾಲುಗಟ್ಟಿ ನಿಂತು ‘ಸೌಗತ್-ಎ-ಮೋದಿ’ ಕಿಟ್‌ಗಳನ್ನು ವಿತರಿಸಲಿದ್ದಾರೆ. ಇದನ್ನ ನೋಡಿದರೆ ಎಲ್ಲಾ ಸ್ವಯಂ ಘೋಷಿತ ಹಿಂದೂ ಹುಲಿಗಳ ಬಗ್ಗೆ ಕನಿಕರ ಮೂಡುತ್ತಿದೆ,&#8221; ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯ ಬಿಜೆಪಿಯನ್ನು ಟೀಕಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್‌ನಲ್ಲಿ ಬರೆದು ಕೊಂಡಿರುವ [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> &#8220;ವಕ್ಫ್, ಹಲಾಲ್ ಬಜೆಟ್ ಮತ್ತು ಕಾಂಟ್ರಾಕ್ಟ್ ಜಿಹಾದ್‌ಗಾಗಿ ಹೋರಾಡಿದ ಕರ್ನಾಟಕದ ಬಿಜೆಪಿ ಹುಲಿಗಳು ಹಾಗೂ ಮಸೀದಿಗಳ ಮುಂದೆ ಡಿಜೆ ಹಾಕಿ ಕುಣಿದವರು, ಹೋಳಿ ಬಣ್ಣ ಎರಚಿದವರು. ಈಗ ಮಸೀದಿಗಳ ಮುಂದೆ ಸಾಲುಗಟ್ಟಿ ನಿಂತು ‘ಸೌಗತ್-ಎ-ಮೋದಿ’ ಕಿಟ್‌ಗಳನ್ನು ವಿತರಿಸಲಿದ್ದಾರೆ. ಇದನ್ನ ನೋಡಿದರೆ ಎಲ್ಲಾ ಸ್ವಯಂ ಘೋಷಿತ ಹಿಂದೂ ಹುಲಿಗಳ ಬಗ್ಗೆ ಕನಿಕರ ಮೂಡುತ್ತಿದೆ,&#8221; ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯ ಬಿಜೆಪಿಯನ್ನು ಟೀಕಿಸಿದ್ದಾರೆ.</p>



<p>ಈ ಕುರಿತು ತಮ್ಮ ಎಕ್ಸ್‌ನಲ್ಲಿ  ಬರೆದು ಕೊಂಡಿರುವ ಅವರು, ‘ಸೌಗತ್-ಎ-ಮೋದಿ’ ಕಿಟ್‌ಗಳನ್ನು ವಿತರಿಸಲಿರುವ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾಹೇಬರು ಕಾತರರಾಗಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="kn" dir="ltr">ಎಲ್ಲಾ ಸ್ವಯಂ ಘೋಷಿತ ಹಿಂದೂ ಹುಲಿಗಳ ಬಗ್ಗೆ ಕನಿಕರ ಮೂಡುತ್ತಿದೆ!<br><br>ವಕ್ಫ್, ಹಲಾಲ್ ಬಜೆಟ್ ಮತ್ತು ಕಾಂಟ್ರಾಕ್ಟ್ ಜಿಹಾದ್‌ಗಾಗಿ ಹೋರಾಡಿದ <a href="https://twitter.com/BJP4Karnataka?ref_src=twsrc%5Etfw">@BJP4Karnataka</a> ಹುಲಿಗಳು ಹಾಗೂ ಮಸೀದಿಗಳ ಮುಂದೆ ಡಿಜೆ ಹಾಕಿ ಕುಣಿದವರು, ಹೋಳಿ ಬಣ್ಣ ಎರಚಿದವರು ಈಗ ಮಸೀದಿಗಳ ಮುಂದೆ ಸಾಲುಗಟ್ಟಿ ನಿಂತು ‘ಸೌಗತ್-ಎ-ಮೋದಿ’ ಕಿಟ್‌ಗಳನ್ನು ವಿತರಿಸಲಿದ್ದಾರೆ.<br><br>ಈ ಸುಂದರ… <a href="https://t.co/pv760kFcEq">pic.twitter.com/pv760kFcEq</a></p>&mdash; Priyank Kharge / ಪ್ರಿಯಾಂಕ್ ಖರ್ಗೆ (@PriyankKharge) <a href="https://twitter.com/PriyankKharge/status/1904768581101117770?ref_src=twsrc%5Etfw">March 26, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>&#8220;ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ವಾಟ್ಸಾಪ್ ಯೂನಿವರ್ಸಿಟಿಯನ್ನು ಬಿಟ್ಟು, ಸಂವಿಧಾನವನ್ನು ಚೆನ್ನಾಗಿ ಓದಬೇಕು ಹಾಗೂ ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳಿವೆ ಎನ್ನುವ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು. ವಾಟ್ಸಾಪ್ ಯೂನಿವರ್ಸಿಟಿಯನ್ನೇ ನಂಬಿಕೊಂಡರೆ ಇದೇ ರೀತಿ ತಮ್ಮ ಪಕ್ಷದ ಅನಿರೀಕ್ಷಿತ ಮಾಸ್ಟರ್ ಸ್ಟ್ರೋಕ್ ಗಳಿಂದ ಬೆಪ್ಪರಾಗಬೇಕಾಗುತ್ತದೆ!&#8221; ಎಂದು ಖರ್ಗೆ ಟೀಕಿಸಿದ್ದಾರೆ.</p>



<p>ಇನ್ನೂ ಮುಂದುವರೆದು, ಬಿಜೆಪಿಗರಿಗೆ ನನ್ನ ಸಲಹೆ, ಈ ಕಾರ್ಯಕ್ರಮಕ್ಕೆ ಬರುವಾಗ ದಯವಿಟ್ಟು ನಿಮ್ಮ ಅಲ್ಪಸಂಖ್ಯಾತ ಮೋರ್ಚಾಗೆ ಕುಫಿ(ಟೋಪಿ)ಗಳನ್ನು ತರಲು ಹೇಳಲು ಮರೆಯಬೇಡಿ ಎಂದು ಸಲಹೆ ಸೂಚಿಸಿದ್ದಾರೆ.</p>



<p><strong>ಅಷ್ಟಕ್ಕೂ ಏನಿದು ‘ಸೌಗತ್-ಎ-ಮೋದಿ’ ಕಿಟ್‌?</strong></p>



<p>ರಂಜಾನ್‌ ಹಿನ್ನಲೆಯಲ್ಲಿ, ಬಿಜೆಪಿ ಅಲ್ಪಾ ಸಂಖ್ಯಾತ ಮೂರ್ಚಾದಿಂದ ವತಿಯಿಂದ ‘ಸೌಗತ್-ಎ-ಮೋದಿʼ ಕಿಟ್‌ ವಿತರಿಸುವ ಅಭಿಯಾನವನ್ನು ಆರಂಭಿಸಿದ್ದು, ಭಾರತ ದೇಶದಾದ್ಯಂತ, 32 ಲಕ್ಷ ಬಡ ಮುಸ್ಲೀಮರಿಗೆ ವಿಶೇಷ ಕಿಟ್‌ಗಳನ್ನ ವಿರಿಸುವ ಗುರಿಯನ್ನ ಭಾರತೀಯ ಜನತಾ ಪಾರ್ಟಿ ಹೊಂದಿದೆ. ಈ ಅಭಿಯಾನವು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ. ಇದು ಬಡ ಮುಸ್ಲಿಮರು ಯಾವುದೇ ಕಷ್ಟವಿಲ್ಲದೇ ಹಬ್ಬವನ್ನ ನಡೆಸಲು ಸಹಾಯಕವಾಗುವ ಗುರಿಯನ್ನೂ ಕೂಡ ಹೊಂದಿದೆ ಎನ್ನುವುದು ರಾಷ್ಟ್ರಾಧ್ಯಕ್ಷ ಅಭಿಪ್ರಾಯವಾಗಿದೆ</p>



<p><strong>ಕಿಟ್‌ ನಲ್ಲಿ ಏನೇನಿದೆ?</strong></p>



<p>ಈ ಕಿಟ್‌ಗಳಲ್ಲಿ, ಆಹಾರ ಪದಾರ್ಥಗಳು, ಬಟ್ಟೆ, ಶಾವಿಗೆ, ಡ್ರೈ ಫ್ರೂಟ್ಸ್‌ ಗಳು ಇರಲಿವೆ.</p>
]]></content:encoded>
					
		
		
			</item>
	</channel>
</rss>
