<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>constitution &#8211; Peepal Media</title>
	<atom:link href="https://peepalmedia.com/tag/constitution/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Wed, 25 Jun 2025 13:12:05 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>constitution &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಘೋಷಿತ ಮತ್ತು ಅಘೋಷಿತ ತುರ್ತು ಪರಿಸ್ಥಿತಿ</title>
		<link>https://peepalmedia.com/declared-and-undeclared-emergency/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 25 Jun 2025 13:06:43 +0000</pubDate>
				<category><![CDATA[ಅಂಕಣ]]></category>
		<category><![CDATA[1975]]></category>
		<category><![CDATA[bjp]]></category>
		<category><![CDATA[constitution]]></category>
		<category><![CDATA[Declared emergency]]></category>
		<category><![CDATA[Emergency]]></category>
		<category><![CDATA[fascism]]></category>
		<category><![CDATA[indira gandi]]></category>
		<category><![CDATA[modi]]></category>
		<category><![CDATA[narendra modi]]></category>
		<category><![CDATA[undeclared emergency]]></category>
		<guid isPermaLink="false">https://peepalmedia.com/?p=61565</guid>

					<description><![CDATA[ಇವತ್ತು, ಜೂನ್ 25, 2025, ಪ್ರಧಾನಿ ಇಂದಿರಾ ಗಾಂಧಿ ಘೋಷಿಸಿದ ತುರ್ತು ಪರಿಸ್ಥಿತಿಗೆ 50 ವರ್ಷಗಳಾಗಿವೆ &#8211; ಭಾರತ ಗಣರಾಜ್ಯದ ಇತಿಹಾಸದಲ್ಲಿ ಪ್ರಜಾಪ್ರಭುತ್ವವನ್ನೇ ಅಲುಗಾಡಿಸಿದ ಕಾಲಘಟ್ಟ ಅದು. 1975 ರಿಂದ 1977 ರವರೆಗೆ ಜಾರಿಯಲ್ಲಿದ್ದ ಘೋಷಿತ ತುರ್ತು ಪರಿಸ್ಥಿತಿಯು ಕೇವಲ ಪ್ರಜಾಪ್ರಭುತ್ವದ ಮಾನದಂಡಗಳಿಗೆ ಮಾತ್ರ ತೊಡಕಾಗಲಿಲ್ಲ, ಸಾಂವಿಧಾನಿಕತೆಯನ್ನು ಮಾತ್ರ ದುರ್ಬಲಗೊಳಿಸಲಿಲ್ಲ; ಅದು ಸಂವಿಧಾನವನ್ನು ಕಾನೂನುಬದ್ಧಗೊಳಿಸುವ ಪ್ರಕ್ರಿಯೆಯ ಆಳದಲ್ಲಿ ಹುದುಗಿದ್ದ ಕ್ರೂರ ಸರ್ವಾಧಿಕಾರಿ ಮನೋಭಾವವನ್ನು ಸ್ಪಷ್ಟವಾಗಿ ಬಹಿರಂಗಪಡಿಸಿತು. ಇಂದಿರಾ ಗಾಂಧಿಯವರ ಚುನಾವಣಾ ಅಕ್ರಮದ ಆರೋಪದ ಮೇಲೆ ಅಲಹಾಬಾದ್ ಹೈಕೋರ್ಟ್ [&#8230;]]]></description>
										<content:encoded><![CDATA[
<pre class="wp-block-code"><code>ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಗೆ 50 ವರ್ಷವಾಗಿರುವ ಈ ಸಂದರ್ಭದಲ್ಲಿ, ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎದುರಾಗುತ್ತಿದೆಯೇ ಎಂಬುದು ನಮ್ಮ ಪ್ರಶ್ನೆಯಲ್ಲ - ಬದಲಾಗಿ ಪ್ರಜಾಪ್ರಭುತ್ವ ಒಳಗಿನಿಂದಲೇ ನಿಧಾನವಾಗಿ ಕೊಳೆತು ನಾಶವಾಗುತ್ತಿದೆಯೇ ಎಂಬುದು - <em>ಎಂ ಡಿ ಜೀಶನ್ ಅಹ್ಮದ್ , ದೆಹಲಿ ಮೂಲದ ವಕೀಲರು</em></code></pre>



<p>ಇವತ್ತು, ಜೂನ್ 25, 2025, ಪ್ರಧಾನಿ ಇಂದಿರಾ ಗಾಂಧಿ ಘೋಷಿಸಿದ ತುರ್ತು ಪರಿಸ್ಥಿತಿಗೆ 50 ವರ್ಷಗಳಾಗಿವೆ &#8211; ಭಾರತ ಗಣರಾಜ್ಯದ ಇತಿಹಾಸದಲ್ಲಿ ಪ್ರಜಾಪ್ರಭುತ್ವವನ್ನೇ ಅಲುಗಾಡಿಸಿದ ಕಾಲಘಟ್ಟ ಅದು. 1975 ರಿಂದ 1977 ರವರೆಗೆ ಜಾರಿಯಲ್ಲಿದ್ದ ಘೋಷಿತ ತುರ್ತು ಪರಿಸ್ಥಿತಿಯು ಕೇವಲ ಪ್ರಜಾಪ್ರಭುತ್ವದ ಮಾನದಂಡಗಳಿಗೆ ಮಾತ್ರ ತೊಡಕಾಗಲಿಲ್ಲ, ಸಾಂವಿಧಾನಿಕತೆಯನ್ನು ಮಾತ್ರ ದುರ್ಬಲಗೊಳಿಸಲಿಲ್ಲ; ಅದು ಸಂವಿಧಾನವನ್ನು ಕಾನೂನುಬದ್ಧಗೊಳಿಸುವ ಪ್ರಕ್ರಿಯೆಯ ಆಳದಲ್ಲಿ ಹುದುಗಿದ್ದ ಕ್ರೂರ ಸರ್ವಾಧಿಕಾರಿ ಮನೋಭಾವವನ್ನು ಸ್ಪಷ್ಟವಾಗಿ ಬಹಿರಂಗಪಡಿಸಿತು. ಇಂದಿರಾ ಗಾಂಧಿಯವರ ಚುನಾವಣಾ ಅಕ್ರಮದ ಆರೋಪದ ಮೇಲೆ ಅಲಹಾಬಾದ್ ಹೈಕೋರ್ಟ್ 1971 ರ ಚುನಾವಣೆಯನ್ನು ಅಮಾನ್ಯಗೊಳಿಸಿದ್ದು ಅವರ ಈ ನಡೆಗೆ ತಕ್ಷಣದ ಪ್ರಚೋದನೆಯಾಗಿದ್ದರೂ, ವಿಶಾಲ ರಾಜಕೀಯ ಸಂದರ್ಭದಲ್ಲಿ &#8211; 1960 ರ ದಶಕದ ಅಂತ್ಯ ಮತ್ತು 1970 ರ ದಶಕದ ಆರಂಭದಲ್ಲಿ ಹೆಚ್ಚುತ್ತಿದ್ದ ಆರ್ಥಿಕ ಸಂಕಷ್ಟ ಮತ್ತು ಬೆಳೆಯುತ್ತಿದ್ದ ಸಾಮಾಜಿಕ ಅಶಾಂತಿ &#8211; ಅಂತಹ ಒಂದು ಪರಿಸ್ಥಿತಿಯನ್ನು ತಂದಿತ್ತು. </p>



<p>ಹೆಚ್ಚುತ್ತಿರುವ ಪ್ರತಿಭಟನೆಗಳು ಮತ್ತು ಜಾಗತಿಕ ಮಟ್ಟದ ಖಂಡನೆಯ ನಡುವೆಯೂ, ಇಂದಿರಾ ಗಾಂಧಿಯವರು ಅಂತಿಮವಾಗಿ 1977 ರಲ್ಲಿ ಚುನಾವಣೆಗಳಿಗೆ ಕರೆ ನೀಡಿದರು. ನಿರ್ಣಾಯಕವಾಗಿ ಸೋತರು, ಮತ್ತು ಭಾರತವು ಔಪಚಾರಿಕವಾಗಿ ಮತ್ತೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮರಳಿತು. ಆದರೂ, ಇಂದಿರಾರ ಆ ನಡೆಯಿಂದ ರಾಷ್ಟ್ರದ ರಾಜಕೀಯ ಸಂರಚನೆಯು ಎಂದೆಂದಿಗೂ ಬದಲಾಯಿಸಲಾಗದಂತೆ ಬದಲಾಯಿತು.</p>



<p>ಇದೆಲ್ಲಾ ಆಗಿ ಅರ್ಧ ಶತಮಾನ ಕಳೆದಿದೆ, ಭಾರತವು ವಿಭಿನ್ನ ರೀತಿಯ ಬಿಕ್ಕಟ್ಟನ್ನು ಎದುರಿಸುತ್ತಿದೆ &#8211; ಚಿಂತಕರು, ಸಾಹಿತಿಗಳು, ಸಾಮಾಜಿಕ ಕಾರ್ಯಕರ್ತರು, ವಿದ್ವಾಂಸರು ಮತ್ತು  ಸಾಮಾಜಿಕ ವಿಮರ್ಶಕರು ಈಗಿನ ಕಾಲಘಟ್ಟವನ್ನು &#8220;ಅಘೋಷಿತ ತುರ್ತುಸ್ಥಿತಿ&#8221; ಎಂದು ಕರೆಯುತ್ತಿದ್ದಾರೆ. 1975 ಕ್ಕಿಂತ ಇದು ಭಿನ್ನ, ಇಂದಿರಾ ಕಾಲದಂತೆ ಈಗ ನಾಗರಿಕರ ಹಕ್ಕುಗಳನ್ನು ಔಪಚಾರಿಕ ಅಮಾನತುಗೊಳಿಸುತ್ತಿಲ್ಲ, ಬದಲಿಗೆ ಚುನಾವಣಾ ನ್ಯಾಯಸಮ್ಮತತೆಯ ಸೋಗಿನಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ನಿಧಾನವಾಗಿ, ವ್ಯವಸ್ಥಿತವಾಗಿ ಮಣ್ಣು ಮಾಡಲಾಗುತ್ತಿದೆ.</p>



<p><strong>ಸಮಕಾಲೀನ ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಹಿನ್ನಡೆ!</strong></p>



<p><a href="https://thewire.in/politics/v-dem-india-2025-fall-liberal-democracy-index">ವಿ-ಡೆಮ್</a> (V- Dem)&nbsp;ಮತ್ತು&nbsp;<a href="https://thewire.in/world/india-freedom-house-report-authoritarian-controls-on-the-freedom-of-movement/?mid_related_new">ಫ್ರೀಡಂ ಹೌಸ್‌ನ</a>&nbsp;2025 ರ ವರದಿಗಳ ಪ್ರಕಾರ, ಭಾರತವನ್ನು ಸದ್ಯ ಕ್ರಮವಾಗಿ &#8220;ಚುನಾವಣಾ ನಿರಂಕುಶಾಧಿಕಾರ &#8211; electoral autocracy&#8221; ಮತ್ತು &#8220;ಅರ್ಧ ಸ್ವತಂತ್ರದ &#8211; partly free&#8221; ದೇಶ ಎಂದು ವರ್ಗೀಕರಿಸಲಾಗಿದೆ. ಈ ಗಂಭೀರವಾದ ಪದಗಳು 2014 ರಿಂದ ಆಡಳಿತದಲ್ಲಿ ಇರುವ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಬೆಳವಣಿಗೆಯೊಂದಿಗೆ ಹೊಂದಿಕೆಯಾಗುವ ಪ್ರಜಾಪ್ರಭುತ್ವದ ವ್ಯವಸ್ಥಿತ ಹಿನ್ನಡೆಯನ್ನು ತೋರಿಸುತ್ತವೆ. </p>



<p>ಇದಕ್ಕಿರುವ ಪ್ರಮುಖ ಕಾರಣಗಳಲ್ಲಿ ಕೆಲವೆಂದರೆ: ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಸಾಂಸ್ಥಿಕ ಧ್ವಂಸ, ಕಾನೂನನ್ನು ಬಳಸಿಕೊಂಡು ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವುದು ಮತ್ತು ಹಿಂದುತ್ವ ಪ್ರಣೀತ ರಾಷ್ಟ್ರೀಯತೆಯ ಸಿದ್ಧಾಂತದ ಜೊತೆಗೆ ಬಹಿರಂಗವಾಗಿ ಗುರುತಿಸಿಕೊಳ್ಳುವುದು. ಈ ಬೆಳವಣಿಗೆಗಳು ಭಾರತವು ದೊಡ್ಡ ಮಟ್ಟದ ಸಾಂವಿಧಾನಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂಬುದನ್ನು ತೋರಿಸುತ್ತವೆ. ಇವು 1975 ರಲ್ಲಿ ಇದ್ದ ಪರಿಸ್ಥಿತಿಗಿಂತ ಕಡಿಮೆ ಎಂಬಂತೆ ಕಂಡು ಬಂದರೂ, ಈಗಿನದ್ದು ತುಂಬಾ ಅಪಾಯಕಾರಿ ಬೆಳವಣಿಗೆಗಳಾಗಿವೆ.</p>



<p>ಅತ್ಯಂತ ಕಳವಳಕಾರಿ ಅಂಶವೆಂದರೆ, ರಾಜಕೀಯದ ತುಂಬಾ ಕೋಮುವಾದವನ್ನು ತುಂಬುವುದು, ಇದರ ಫಲವನ್ನು ನಾವು ಹೆಚ್ಚಾಗಿ ಮುಸಲ್ಮಾನರನ್ನು ಗುರಿಯಿಟ್ಟುಕೊಂಡು ನಡೆಯುವ ಜನಾಂಗೀಯ ಹತ್ಯೆಯಲ್ಲಿ ನೋಡಬಹುದು. ಜಿನೊಸೈಡ್ ವಾಚ್‌ನ ಸಂಸ್ಥಾಪಕ ಗ್ರೆಗೊರಿ ಸ್ಟಾಂಟನ್,&nbsp;&#8220;ಭಾರತದಲ್ಲಿ ನರಮೇಧದ ಆರಂಭಿಕ ಲಕ್ಷಣಗಳು ಈಗಾಗಲೇ ಗೋಚರಿಸುತ್ತಿವೆ&#8221; ಎಂದು&nbsp;<a href="https://www.genocidewatch.com/single-post/india-at-risk-rwanda-killings-predictor-sounds-genocide-warning">ಎಚ್ಚರಿಸಿದ್ದಾರೆ .</a></p>



<p><strong>1975 ಮತ್ತು 2014 ರ ನಂತರದ ಅವಧಿಯ ತುಲನೆ</strong></p>



<p>ಇಂದಿರಾ ಗಾಂಧಿಯವರು ತಮ್ಮ ರಾಜಕೀಯ ಅಸ್ತಿತ್ವವನ್ನು ರಕ್ಷಿಸಿಕೊಳ್ಳಲು 1975 ರಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಸಾಂವಿಧಾನಿಕ ಕಾರ್ಯವಿಧಾನಗಳ ಮೂಲಕ ನಾಗರಿಕ ಸ್ವಾತಂತ್ರ್ಯಗಳನ್ನು ಅಮಾನತುಗೊಳಿಸಿದರು, ಮಾಧ್ಯಮಗಳಿಗೆ ಸೆನ್ಸಾರ್ ಹಾಕಿದರು ಮತ್ತು ಸಾಂಸ್ಥಿಕ ಸ್ವಾತಂತ್ರ್ಯವನ್ನು ಬಲಿಕೊಟ್ಟರು. ಇತಿಹಾಸಕಾರ&nbsp;<a href="https://thewire.in/media/gyan-prakash-modi-govt-prabir-purkayastha">ಜ್ಞಾನ್ ಪ್ರಕಾಶ್</a>&nbsp;ಇದನ್ನು &#8220;ಕಾನೂನುಬದ್ಧ ಕಾನೂನು ಅಮಾನತು &#8211; lawful suspension of law&#8221; ಎಂದು ಕರೆದರು. ಆದರೂ, ಅದೊಂದು ಬಹಿರಂಗ ಬಿಕ್ಕಟ್ಟಾಗಿತ್ತು &#8211; ಅದರೆ ಘೋಷಣೆ ಮಾಡುವಾಗ ಪಾರದರ್ಶಕತೆಯನ್ನು ಕಾಯ್ದುಕೊಂಡಿತು. 1977 ರಲ್ಲಿ, ಭಾರತೀಯ ಮತದಾರರು ಇದಕ್ಕೆ ತಕ್ಕುದಾದ ಉತ್ತರವನ್ನು ನೀಡಿದರು, ಇಂದಿರಾ ಗಾಂಧಿಯವರನ್ನು ಅಧಿಕಾರದಿಂದ ಕಿತ್ತು ಹಾಕಿ, ಪ್ರಜಾಪ್ರಭುತ್ವದ ಶಕ್ತಿಯನ್ನು ತೋರಿಸಿದರು. </p>



<p>ಈಗಿನ ಕಾಲ ಇಂದಿರೆಯ ಕಾಲಕ್ಕಿಂತ ಭಿನ್ನವಾಗಿದೆ, ಮೋದಿ ಯುಗವು ಹೆಚ್ಚು ಹೆಚ್ಚು ಕಪಟತೆಯಿಂದ ಕೂಡಿದೆ. ತುರ್ತು ಪರಿಸ್ಥಿತಿಯನ್ನು ಅಧಿಕೃತವಾಗಿ ಘೋಷಿಸಿಲ್ಲ. ಬದಲಾಗಿ, ಕಾನೂನುಬದ್ಧವಾಗಿ ನಿರಂಕುಶವಾಗಿ ವರ್ತಿಸುವುದು ಮತ್ತು ಅಧಿಕಾರವನ್ನು ಕಸಿದುಕೊಳ್ಳುವ ಮೂಲಕ ಸಾರ್ವಜನಿಕ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತಿದೆ. ನ್ಯಾಯಾಂಗ ಸ್ವಾತಂತ್ರ್ಯ ದುರ್ಬಲಗೊಂಡಿದೆ, ಭಿನ್ನಾಭಿಪ್ರಾಯವನ್ನು ಅಪರಾಧವೆಂಬಂತೆ ಬಿಂಬಿಸಲಾಗುತ್ತಿದೆ ಮತ್ತು ಕಾನೂನುಗಳನ್ನು ಸರ್ವಾಧಿಕಾರದ ಆಯುಧಗಳೆಂಬಂತೆ ಬಳಸಲಾಗುತ್ತಿದೆ. ಇನ್ನೊಂದು ಕಡೆ ಇದಕ್ಕೆ ಸಮಾನಾಂತರವಾಗಿ ಸಾಂವಿಧಾನಿಕ ಕ್ರಮಗಳನ್ನು ಕಾನೂನುಬದ್ಧವಾಗಿ ಜಾರಿಗೆ ತಂದರೂ ನೈತಿಕವಾಗಿ ಶೂನ್ಯವಾಗಿರುತ್ತದೆ.</p>



<p>&#8220;ಸಾರ್ವಭೌಮ ಯಾರು ಎಂದರೆ ಕಾನೂನು ಯಾವಾಗ ಅನ್ವಯ ಆಗುತ್ತದೆ, ಯಾವಾಗ ಅಗುವುದಿಲ್ಲ ಎಂದು ನಿರ್ಧರಿಸುವವನು &#8211; sovereign is he who decides on the exception&#8221; ಎಂಬ ಕಾರ್ಲ್ ಸ್ಮಿತ್ ಹಿಂದೆಯೇ ಹೇಳಿದ್ದು ಇಂದಿಗೆ ಪ್ರಸ್ತುತವೆನಿಸುತ್ತದೆ. ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯಲ್ಲಿ ಕಾನೂನನ್ನು ತನಗೆ ಬೇಕಾದಂತೆ ವೈಯಕ್ತಿಕವಾಗಿ ಅನ್ವಯಿಸಿದರೆ ಇದಕ್ಕೆ, ಮೋದಿಯವರ ಆಡಳಿತದಲ್ಲಿ ಅಂತಹ ಒಂದು ಪ್ರವೃತ್ತಿಯನ್ನು ಸಾಮಾನ್ಯಗೊಳಿಸುತ್ತಿದೆ &#8211; ಕಾನೂನನ್ನು ಯಾವಾಗಲೂ ಬೇಕಾದಾಗ ಬಳಸಬಹುದಾದಂತ ಆಯುಧವಾಗಿ ಬದಲಾಯಿಸಲಾಗುತ್ತಿದೆ. ತತ್ವಜ್ಞಾನಿ ಜಾರ್ಜಿಯೊ ಅಗಾಂಬೆನ್ ಹೇಳಿದಂತೆ, &#8220;state of exception ನಲ್ಲಿ (ತುರ್ತು ಪರಿಸ್ಥಿತಿಯಂತೆ) ಕಾನೂನು ಮತ್ತು ಅಕ್ರಮದ ನಡುವಿನ ಗೋಡೆ ಕುಸಿಯುತ್ತದೆ &#8211; state of exception collapses the boundary between legality and illegality. ಸದ್ಯದ ಭಾರತದಲ್ಲಿ, ಆ ಕುಸಿತ ಬಹುತೇಕ ಪೂರ್ಣಗೊಂಡಂತೆ ಭಾಸವಾಗುತ್ತದೆ.</p>



<p><strong>ಸಾಂವಿಧಾನಿಕ ಭರವಸೆಯನ್ನು ದುರ್ಬಲಗೊಳಿಸುವುದು</strong>:</p>



<p>ಕಾನೂನು ವಿದ್ವಾಂಸ ಅರವಿಂದ್ ನರೈನ್ ಅವರು ಮೋದಿಯವರ ಭಾರತವು &#8220;ಸರ್ವಾಧಿಕಾರವನ್ನು ಮೀರಿದ ಒಂದು ರೀತಿಯ ಸರ್ಕಾರ &#8211; a kind of State going beyond authoritarianism&#8221; ಎಂದು ಕರೆಯುತ್ತಾರೆ. ರಾಜಕೀಯ ವಿಜ್ಞಾನಿ ಕ್ರಿಸ್ಟೋಫ್ ಜಾಫ್ರೆಲಾಟ್ ಅವರು ಬೆಳೆಯುತ್ತಿರುವ ಹಿಂದೂ&nbsp;<em>ರಾಷ್ಟ್ರದ ಬಗ್ಗೆ ಎಚ್ಚರಿಸಿದ್ದಾರೆ &#8211;</em>&nbsp;ಅಲ್ಲಿ ಧಾರ್ಮಿಕ ಬಹುಸಂಖ್ಯಾತತೆಯು ಸರ್ವಾಧಿಕಾರ ಆಡಳಿತದೊಂದಿಗೆ ಸಂಬಂಧ ಹೊಂದಿರುತ್ತದೆ. ಈ ದೃಷ್ಟಿಕೋನವು ಬಹುತ್ವ, ಜಾತ್ಯತೀತತೆ ಮತ್ತು ಭ್ರಾತೃತ್ವದ ಸಾಂವಿಧಾನಿಕ ಆದರ್ಶಗಳಿಗೆ ನೇರವಾಗಿ ವಿರುದ್ಧವಾಗಿರುತ್ತದೆ.</p>



<p>ಈ ಕುಸಿತದ ಕಡೆಗೆ ಬೊಟ್ಟು ಮಾಡುತ್ತಾ, ರಾಜಕೀಯ ವಿದ್ವಾಂಸ ಪ್ರತಾಪ್ ಭಾನು ಮೆಹ್ತಾ &#8211; ಭಾರತವು 1950 ರ ದಶಕದಲ್ಲಿ ಪ್ರಜಾಪ್ರಭುತ್ವಕ್ಕೆ ಬದಲಾಗಿದ್ದು &#8211; &#8220;ಮಾನವ ಇತಿಹಾಸದಲ್ಲಿ ಯಾವುದೇ ಪೂರ್ವನಿದರ್ಶನವಿಲ್ಲದ ಒಂದು ನಂಬಿಕೆಯನ್ನು ಸ್ವೀಕರಿಸಿದ್ದು &#8211; a leap of faith for which there was no precedent in human history&#8221; ಎಂದು ಒಮ್ಮೆ ವಿವರಿಸಿದ್ದರು. ಇದು ನಮ್ಮಲ್ಲಿ ಕೆಲವು ಪ್ರಮುಖ ಪ್ರಶ್ನೆಗಳನ್ನು ಹಾಕಿಕೊಳ್ಳುವಂತೆ ಮಾಡುತ್ತದೆ: ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತೆ ಯಾಕೆ ಕುಸಿತಯುತ್ತಿದೆ? ಅದನ್ನು ಯಾವುದು ಉಳಿಸಿಕೊಳ್ಳುತ್ತದೆ? ಮತ್ತು ಅವು ಯಾವ ಸಾಂವಿಧಾನಿಕ ಭವಿಷ್ಯವನ್ನು ಸೂಚಿಸುತ್ತವೆ?</p>



<p><strong>1950 ರಿಂದ ಇಂದಿನವರೆಗೆ: ಪ್ರಜಾಪ್ರಭುತ್ವದ ಮೇಲಿನ ಪ್ರಯೋಗ</strong></p>



<p>ಭಾರತದ ಪ್ರಜಾಪ್ರಭುತ್ವ ಪ್ರಯೋಗವು ಆರಂಭದಿಂದಲೂ ಆಮೂಲಾಗ್ರವಾಗಿ ಮಹತ್ವಾಕಾಂಕ್ಷೆಯಿಂದ ಕೂಡಿತ್ತು. ಸ್ವಾತಂತ್ರ್ಯದ ಸಮಯದಲ್ಲಿ, ದೇಶದ ಅಗಾಧ ವೈವಿಧ್ಯತೆ, ಸಾಮಾಜಿಕ ಶ್ರೇಣಿಗಳು ಮತ್ತು ವಸಾಹತುಶಾಹಿ ಪರಂಪರೆಯನ್ನು ಗಮನದಲ್ಲಿಟ್ಟುಕೊಂಡು ಜಾಗತಿಕ ಚಿಂತಕರು ಭಾರತ ಪ್ರಜಾಪ್ರಭುತ್ವವನ್ನು ಒಪ್ಪಿಕೊಳ್ಳುವ ಸಾಧ್ಯತೆಯನ್ನು ಅನುಮಾನಿಸಿದ್ದರು. ಆದರೂ, ಸಂವಿಧಾನವು ಸಾರ್ವತ್ರಿಕವಾಗಿ ಎಲ್ಲಾ ವಯಸ್ಕರಿಗೆ ಮತದಾನದ ಹಕ್ಕನ್ನು ನೀಡಿತು ಮತ್ತು ವಸಾಹತುಶಾಹಿ ಪ್ರಜೆಗಳಿಗೂ ಆ ಹಕ್ಕುಗಳನ್ನು ಹೊಂದಿರುವ ನಾಗರಿಕರನ್ನಾಗಿ ಮಾಡಿತು. </p>



<p>ಆದರೂ, ಬಿ.ಆರ್. ಅಂಬೇಡ್ಕರ್ ಎಚ್ಚರಿಸಿದಂತೆ- ಭಾರತೀಯ ಪ್ರಜಾಪ್ರಭುತ್ವವು ಪ್ರಜಾಪ್ರಭುತ್ವ ವಿರೋಧಿ ಅಡಿಪಾಯಗಳ ಮೇಲೆ ನಿರ್ಮಿಸಲ್ಪಟ್ಟಿದೆ &#8211; Indian democracy was built on undemocratic foundations. ಅದಕ್ಕಾಗಿ ಅವರು ಸಾಂವಿಧಾನಿಕ ನೈತಿಕತೆಯನ್ನು&nbsp;ಬೆಳೆಸಬೇಕೆಂದು ಕರೆ ನೀಡಿದರು, ಅದು ಇಂದಿಗೂ ಆಗಿಲ್ಲ. ಕಾಲಾನಂತರದಲ್ಲಿ, ಕಾಂಗ್ರೆಸ್‌ನ ಸ್ವಾತಂತ್ರ್ಯಾನಂತರದ ಪ್ರಾಬಲ್ಯವು ಪ್ರಾದೇಶಿಕ ವಿಘಟನೆಗೆ ದಾರಿ ಮಾಡಿಕೊಟ್ಟಿತು, ಪ್ರಜಾಪ್ರಭುತ್ವಕ್ಕೆ ಪ್ರತಿಕೂಲವಾದ ಸ್ವಜನ ಪಕ್ಷಪಾತ ಮತ್ತು ರಾಜಶ್ರಯಕ್ಕೆ ದಾರಿ ಮಾಡಿಕೊಟ್ಟಿತು.</p>



<p>1970 ರ ದಶಕದ ಆರಂಭದ ಸ್ವಜನ ಪಕ್ಷಪಾತ ತುರ್ತು ಪರಿಸ್ಥಿತಿಯಲ್ಲಿ ಪರಾಕಾಷ್ಠೆಗೆ ತಲುಪಿತು. ಇಂದು, ಇದೇ ರೀತಿಯ ಸ್ವಜನ ಪಕ್ಷಪಾತವನ್ನು &#8211; ಈಗಿನ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಮತ್ತು ಸಮೂಹ ಸಂವಹನದಲ್ಲಿ ಉತ್ತೇಜಿಸಲಾಗುತ್ತಿದೆ &#8211; ಮೋದಿ ಆಡಳಿತವು ಇದಕ್ಕಾಗಿ ಕೆಲಸ ಮಾಡುತ್ತದೆ. ಆದರೆ ಈ ಬಾರಿ, ಅವು ವಿಶಾಲ ಮತ್ತು ಹೆಚ್ಚು ಶಾಶ್ವತ ಪರಿಣಾಮಗಳನ್ನು ಉಂಟುಮಾಡಬಲ್ಲ ಆಳವಾದ ಸೈದ್ಧಾಂತಿಕ ಯೋಜನೆಯನ್ನು ಹಾಕಿಕೊಂಡಿದೆ. </p>



<p><strong>ಮೋದಿಯ ಭಾರತದಲ್ಲಿ ಸರ್ವಾಧಿಕಾರ ಕಾನೂನುಬದ್ಧ</strong>!</p>



<p>ಹಂಗೇರಿಯ ದೇಶಕ್ಕೆ ಸಂಬಂಧಿಸಿ ಕಿಮ್ ಲೇನ್ ಶೆಪ್ಪೆಲೆ ನೀಡಿದ ವ್ಯಾಖ್ಯಾನ &#8220;ಸರ್ವಾಧಿಕಾರದ ಕಾನೂನುಬದ್ಧತೆ&#8221;ಯ ಪರಿಕಲ್ಪನೆಯು ಇಲ್ಲಿಗೆ ಹೆಚ್ಚು ಪ್ರಸ್ತುತ ಎನಿಸುತ್ತದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ನಾಯಕರು ಸರ್ವಾಧಿಕಾರದ ಗುರಿಗಳನ್ನು ಕಾರ್ಯಗತಗೊಳಿಸಲು ಕಾನೂನು ಸಾಧನಗಳನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಇದು ವಿವರಿಸುತ್ತದೆ. ಇದರಲ್ಲಿ ಸಂಸ್ಥೆಗಳನ್ನು ವಶಪಡಿಸಿಕೊಳ್ಳುವುದು, ನಿಯಮಗಳನ್ನು ತಿರುಚಿ ಬರೆಯುವುದು ಮತ್ತು ಕಾನೂನಿನ ಹೆಸರಿನಲ್ಲಿ ನಾಗರಿಕರನ್ನು ನಿಯಂತ್ರಿಸುವುದು. </p>



<p>ಮೋದಿ ನೇತೃತ್ವದ ಭಾರತವು ಶೆಪ್ಪೆಲೆ ನೀಡಿದ ವ್ಯಾಖ್ಯಾನಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆ, ಇದು ಆತಂಕಕಾರಿ!</p>



<ul class="wp-block-list">
<li><a href="https://thewire.in/government/five-years-after-370-jk-continues-to-be-a-tragic-saga-of-control-and-erasure/?mid_related_new">* 370 ನೇ ವಿಧಿಯನ್ನು ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದು</a> ರಾಜಕೀಯ ಒಮ್ಮತವಿಲ್ಲದೆಯೇ ಕಾರ್ಯಗತಗೊಳಿಸಲಾಯಿತು &#8211; ಇದು ಭಾರತೀಯ ಸಾಂವಿಧಾನಿಕತೆಯ ಕೇಂದ್ರಬಿಂದುವಾಗಿರುವ ಫೆಡರಲ್ ಮಾನದಂಡಗಳನ್ನು ಉಲ್ಲಂಘಿಸಿದಂತೆ.</li>



<li>* ಚುನಾವಣಾ ಹಣಕಾಸು ಸುಧಾರಣೆಯ ನೆಪದಲ್ಲಿ ಪರಿಚಯಿಸಲಾದ ಚುನಾವಣಾ ಬಾಂಡ್ ಯೋಜನೆಯು ದೊಡ್ಡ ಮಟ್ಟದ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿತು ಮತ್ತು ಆಡಳಿತ ಪಕ್ಷಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡಿತು &#8211; ಈಗ ಅದನ್ನು ರದ್ದುಪಡಿಸಲಾಗಿದ್ದರೂ ಸಹ, ಇದರ ವಿಚಾರಣೆ ನ್ಯಾಯಾಲಯದಲ್ಲಿ <a href="https://thewire.in/politics/peeling-back-the-layers-electoral-bonds-and-the-quest-for-transparency">ಅರ್ಧದಲ್ಲಿ ಬಾಕಿಯಾಗಿದೆ.</a></li>



<li>* ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಪೌರತ್ವ ತಿದ್ದುಪಡಿ ಕಾಯ್ದೆ (2019) ಧರ್ಮವನ್ನು ಪೌರತ್ವಕ್ಕೆ ಮಾನದಂಡವಾಗಿ ಪರಿಚಯಿಸಿತು. ರಾಜಕೀಯ ತಜ್ಞ <a href="https://journals.sagepub.com/doi/10.1177/23210230221082799">ನೀರಜ ಗೋಪಾಲ್ ಜಯಲ್ ಹೇಳಿದಂತೆ,</a> ಈ ಕ್ರಮವು ಜನಾಂಗೀಯ-ಧಾರ್ಮಿಕ ಮಾರ್ಗಗಳಲ್ಲಿ ಭಾರತೀಯ ಪೌರತ್ವವನ್ನು ಮರು ವ್ಯಾಖ್ಯಾನಿಸುವ ಪ್ರಯತ್ನವನ್ನು ತೋರಿಸುತ್ತದೆ.</li>
</ul>



<p>ಇವು ಕೇವಲ ಕೆಲವು ಉದಾಹರಣೆಗಳು. ಇದನ್ನು  ಸೂಕ್ಷ್ಮವಾಗಿ ನೋಡಿದರೆ ಇದರ ಹಿಂದಿರುವ ಲೆಕ್ಕಾಚಾರದ ತಂತ್ರ ಕಾಣುತ್ತದೆ: ಪ್ರಜಾಪ್ರಭುತ್ವ ವಿರೋಧಿ ಉದ್ದೇಶಗಳನ್ನು ಪೂರೈಸಲು ಪ್ರಜಾಸತ್ತಾತ್ಮಕ ವಿಧಾನಗಳ ಮೂಲಕ ದೇಶವನ್ನು ರೂಪಿಸುವುದು. </p>



<p>ಪ್ರಸ್ತುತ ಸಂದರ್ಭವನ್ನು ಅಪಾಯಕಾರಿಯನ್ನಾಗಿ ಮಾಡುವುದು ಸಂವಿಧಾನವನ್ನು ತಿರುಚುವುದು ಮಾತ್ರವಲ್ಲ, ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಹಕ್ಕನ್ನು ನೀಡುವುದು. ನಾಗರಿಕ ಸ್ವಾತಂತ್ರ್ಯಗಳನ್ನು ನಿಯಮಿತವಾಗಿ ಉಲ್ಲಂಘಿಸಲಾಗುತ್ತಿದೆ. ವಿದ್ಯಾರ್ಥಿಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಪತ್ರಕರ್ತರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ ಮತ್ತು ದೇಶದ್ರೋಹದಂತಹ ಕಾನೂನುಗಳನ್ನು ಬಳಸಲಾಗುತ್ತದೆ. 2019 ರ ಯುಎಪಿಎ ತಿದ್ದುಪಡಿಯು ಸರ್ಕಾರವು ಯಾರೇ ಒಬ್ಬನನ್ನು ಯಾವುದೇ ವಿಚಾರಣೆಯಿಲ್ಲದೆ &#8220;ಭಯೋತ್ಪಾದಕ&#8221; ಎಂದು ಹೆಸರಿಸಲು ಅನುಮತಿ ನೀಡುತ್ತದೆ.</p>



<p>ಮೂಲತಃ ಅಸಾಧಾರಣ ಸಂದರ್ಭಗಳ ಬಳಕೆಗಾಗಿ ತರಲಾಗಿರುವ ತುರ್ತು ಕಾನೂನುಗಳನ್ನು ಹೇಗೆ ಈಗಿನ ದೈನಂದಿನ ಆಡಳಿತದ ಆಯುಧಗಳಾಗಿ ಸಾಮಾನ್ಯೀಕರಿಸಲಾಗಿದೆ ಎಂಬುದನ್ನು ಕಾನೂನು ವಿದ್ವಾಂಸ ನಾಸರ್ ಹುಸೇನ್ ತೋರಿಸಿದ್ದಾರೆ. ಮೋದಿ ಆಡಳಿತದ ಅಡಿಯಲ್ಲಿ, ದಮನವೆಂಬುದು ಈ ಕಾನೂನು ವ್ಯವಸ್ಥೆಯ ಒಳಗೆ ನಾಟಕೀಯವಾಗಿ ಹರಡಿಕೊಂಡಿದೆ &#8211; ಕಾನೂನಾತ್ನಕ ಆಳ್ವಿಕೆಯ ಅಡಿಪಾಯವನ್ನೇ ಹಾಳುಮಾಡುತ್ತಿದೆ.</p>



<p>ಭಾರತವು ಸರ್ವಾಧಿಕಾರದತ್ತ ಸಾಗುತ್ತಿಲ್ಲ. ಅದನ್ನು ಸಾಂಸ್ಥಿಕಗೊಳಿಸುತ್ತಿದೆ.</p>



<p><strong>ತೊಡಕಿನ ದಾರಿ</strong></p>



<p>1975 ರ ತುರ್ತು ಪರಿಸ್ಥಿತಿ ಮತ್ತು 2014 ರ ನಂತರದ ಕಾಲಘಟ್ಟವನ್ನು ತುಲನೆ ಮಾಡಿ ನೋಡಿದರೆ ತೊಡಕಿನ ದಾರಿಯೊಂದು ನಮಗೆ ಕಾಣಿಸುತ್ತದೆ. ಇಂದಿರಾ ಗಾಂಧಿಯವರ ಸರ್ವಾಧಿಕಾರವು ವೈಯಕ್ತಿಕವಾಗಿತ್ತು, ಎಲ್ಲರ ಕಣ್ಣಿಗೆ ಕಾಣುವಂತಿತ್ತು ಮತ್ತು ಅಂತಿಮವಾಗಿ ಜನರೇ ಅದನ್ನು ಒದ್ದು ತಿರಸ್ಕರಿಸಿದರು. ಮೋದಿಯವರ ವರ್ಷನ್‌ ಇಂದಿರೆಗಿಂತ ಭಿನ್ನ, ಇದಕ್ಕೊಂದು ಉದ್ದೇಶ ಇದೆ, ಸೈದ್ಧಾಂತಿಕವಾಗಿದೆ ಮತ್ತು &#8211; ಅತ್ಯಂತ ಅಪಾಯಕಾರಿಯಾಗಿದೆ &#8211; ಸಮಾಜವೇ ಇದನ್ನು ಸಾಮಾನ್ಯೀಕರಿಸುತ್ತದೆ.</p>



<p>ಈ ಬದಲಾವಣೆಯು ನಮ್ಮಲ್ಲಿ ಕೆಲವು ಕಠಿಣ ಪ್ರಶ್ನೆಗಳನ್ನು ಹಾಕಿಕೊಳ್ಳುವಂತೆ ಮಾಡುತ್ತದೆ: ಪ್ರಜಾಪ್ರಭುತ್ವ ಮೌಲ್ಯಗಳಿಲ್ಲದೆ ಪ್ರಜಾಪ್ರಭುತ್ವದ ಸಂಸ್ಥೆಗಳು ಉಳಿಯಬಹುದೇ? ಸಂವಿಧಾನದ ಚೈತನ್ಯ ನಿರಂತರವಾಗಿ ಖಾಲಿಯಾದಾಗ ಸಂವಿಧಾನ ಉಳಿಯಬಹುದೇ?</p>



<p>ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಗೆ 50 ವರ್ಷವಾಗಿರುವ ಈ ಸಂದರ್ಭದಲ್ಲಿ, ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎದುರಾಗುತ್ತಿದೆಯೇ ಎಂಬುದು ನಮ್ಮ ಪ್ರಶ್ನೆಯಲ್ಲ &#8211; ಬದಲಾಗಿ ಪ್ರಜಾಪ್ರಭುತ್ವ ಒಳಗಿನಿಂದಲೇ ನಿಧಾನವಾಗಿ ಕೊಳೆತು ನಾಶವಾಗುತ್ತಿದೆಯೇ ಎಂಬುದು.</p>



<p>ಬಲವಾದ ಮತ್ತು ಸ್ಥಿತಿಸ್ಥಾಪಕ ಪ್ರಜಾಪ್ರಭುತ್ವವು ಜಾಗರೂಕ ನಾಗರಿಕ ಸಮಾಜದ ಲಕ್ಷಣ. ಭಾರತದಲ್ಲಿ ಘೋಷಿತ ಮತ್ತು ಅಘೋಷಿತ ತುರ್ತು ಪರಿಸ್ಥಿತಿಗಳ ಅವಳಿ ಇತಿಹಾಸಗಳು ನಮಗೆ ಅಗತ್ಯದ ಪಾಠಗಳನ್ನು ಹೇಳುತ್ತವೆ: ಪ್ರಜಾಪ್ರಭುತ್ವವನ್ನು ಹಗುರವಾಗಿ ನೋಡುವಂತಿಲ್ಲ. ಈ ದಿನದಂದು, ನಾವು ಮತ್ತೊಮ್ಮೆ &#8211; ಪ್ರಜಾಪ್ರಭುತ್ವವನ್ನು ಸರ್ವಾಧಿಕಾರದ ಹಿಡಿತದಿಂದ ರಕ್ಷಿಸಲು ಮತ್ತು ಅದನ್ನು ಅದರ ಸರಿಯಾದ ಹಾದಿಗೆ ಕೊಂಡೊಯ್ಯಲು ಸಂಕಲ್ಪ ಮಾಡಬೇಕು: ಸಾಂವಿಧಾನಿಕ ಮೌಲ್ಯಗಳಲ್ಲಿ ಬೇರೂರಿದ, ಸಾರ್ವಜನಿಕ ಹೊಣೆಗಾರಿಕೆಯಿಂದ ಬೆಳೆದಿರುವ ಮತ್ತು ಬಹುಸಂಖ್ಯಾತವಾದದಿಂದ ಪೋಷಿಸಲ್ಪಟ್ಟಿರುವ ಸರ್ವಾಧಿಕಾರದಿಂದ ಪ್ರಜಾಪ್ರಭುತ್ವವನ್ನು ಉಳಿಸಬೇಕು.</p>



<p>ಲೇಖನ: <em><strong>ಎಂ ಡಿ ಜೀಶನ್ ಅಹ್ಮದ್ </strong>,ದೆಹಲಿ ಮೂಲದ ವಕೀಲರು.</em></p>



<p>(ಇದು ದಿ ವೈರ್ ಪ್ರಕಟಿಸಿದ <a href="https://thewire.in/politics/democracy-in-retreat-comparing-the-emergency-with-modis-india">Democracy in Retreat: Comparing the Emergency with Modi’s India</a> ಲೇಖನದ ಕನ್ನಡ ಭಾವಾನುವಾದ)</p>



<p></p>
]]></content:encoded>
					
		
		
			</item>
		<item>
		<title>ಅಂಬೇಡ್ಕರ್ ಅವರು ಮಾನವ ಘನತೆಗೆ ನೀಡಿದ ವ್ಯಾಖ್ಯಾನವೇನು?</title>
		<link>https://peepalmedia.com/ambedkars-definition-of-human-dignity/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 14 Apr 2025 10:41:03 +0000</pubDate>
				<category><![CDATA[ಅಂಕಣ]]></category>
		<category><![CDATA[Ambedkar]]></category>
		<category><![CDATA[constitution]]></category>
		<category><![CDATA[Dalit]]></category>
		<category><![CDATA[DR B R AMBEDKAR]]></category>
		<category><![CDATA[india]]></category>
		<guid isPermaLink="false">https://peepalmedia.com/?p=57184</guid>

					<description><![CDATA[ಏಪ್ರಿಲ್ 14, ಇವತ್ತು ಅಂಬೇಡ್ಕರ್ ಜಯಂತಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನ. ಏಪ್ರಿಲ್ 11, 1925 ರಂದು ಬೆಳಗಾವಿ ಜಿಲ್ಲೆಯಲ್ಲಿ ನಡೆದ ಮುಂಬೈ ಪ್ರಾಂತ್ಯ ಬಹಿಷ್ಕೃತ ಪರಿಷತ್&#160;(&#8216;ಬಹಿಷ್ಕೃತರ ಸಮ್ಮೇಳನ&#8217;)&#160;ದಲ್ಲಿ ಮಾಡಿದ ಭಾಷಣದಲ್ಲಿ , ಡಾ. ಬಿ.ಆರ್. ಅಂಬೇಡ್ಕರ್ ದಲಿತರೊಂದಿಗೆ &#8220;ನೀವು ತೀವ್ರ ಹೋರಾಟವನ್ನು ಮಾಡಿದರೆ ಮಾತ್ರ ನೀವು ನಿಮ್ಮ&#160;ಮಾನುಸ್ಕಿ&#160;[ಮಾನವ ಘನತೆ]ಯನ್ನು ಮರಳಿ ಪಡೆಯಬಹುದು,&#8221; ಅಂದರೆ ಸಮಾಜದಲ್ಲಿ ಮನುಷ್ಯರು ಎಂದು ಪರಿಗಣಿಸಲ್ಪಡಬಹುದು ಎಂದು ವಾದಿಸಿದರು. ಅಂಬೇಡ್ಕರ್ ಅಸ್ಪೃಶ್ಯರನ್ನು ಪದೇ ಪದೇ ಕೇಳುತ್ತಿದ್ದ ಪ್ರಶ್ನೆಯೆಂದರೆ: “ನಿಮಗೆ&#160;ಸುಖ ಬೇಕೇ [&#8230;]]]></description>
										<content:encoded><![CDATA[
<pre class="wp-block-code"><code><em>ಮಾನುಸ್ (ಮಾನವ) ಮತ್ತು ಮಾನುಸ್ಕಿ (ಮಾನವ ಘನತೆ) ಬಗ್ಗೆ ಅಂಬೇಡ್ಕರ್ ಅವರ ಚಿಂತನೆಗಳು ಕೇವಲ ಉದಾರವಾದಿ ಪಾಶ್ಚಿಮಾತ್ಯ ಮಾನವತಾವಾದದಿಂದ ಬಂದದ್ದಲ್ಲ. ಅವರಿಗೆ ಮಾನುಸ್ ಎಂಬುದು ಮಾನವೀಯತೆಯ ಆಚರಣೆಯಾಗಿತ್ತು - ಇದು ಕೇವಲ ಜೈವಿಕವಲ್ಲ, ಬದಲಾಗಿ ಮಾನವ ನೈತಿಕತೆಯ ಸಾಮಾಜಿಕ ಅನುಷ್ಠಾನವಾಗಿತ್ತು</em>
ಲೇಖಕಿ: <em><strong>ಡಾ. ಶೈಲಜಾ ಪೈಕ್ ,</strong> ಇತಿಹಾಸ ಪ್ರಾಧ್ಯಾಪಕಿ ಮತ್ತು 2024 ರ ಮ್ಯಾಕ್‌ಆರ್ಥರ್ ಫೆಲೋ.</em></code></pre>



<p><em>ಏಪ್ರಿಲ್ 14, ಇವತ್ತು ಅಂಬೇಡ್ಕರ್ ಜಯಂತಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನ.</em></p>



<p><em>ಏಪ್ರಿಲ್ 11, 1925 ರಂದು ಬೆಳಗಾವಿ ಜಿಲ್ಲೆಯಲ್ಲಿ ನಡೆದ ಮುಂಬೈ ಪ್ರಾಂತ್ಯ ಬಹಿಷ್ಕೃತ ಪರಿಷತ್</em>&nbsp;(&#8216;ಬಹಿಷ್ಕೃತರ ಸಮ್ಮೇಳನ&#8217;)&nbsp;ದಲ್ಲಿ ಮಾಡಿದ ಭಾಷಣದಲ್ಲಿ , ಡಾ. ಬಿ.ಆರ್. ಅಂಬೇಡ್ಕರ್ ದಲಿತರೊಂದಿಗೆ &#8220;ನೀವು ತೀವ್ರ ಹೋರಾಟವನ್ನು ಮಾಡಿದರೆ ಮಾತ್ರ ನೀವು ನಿಮ್ಮ&nbsp;<em>ಮಾನುಸ್ಕಿ</em>&nbsp;[ಮಾನವ ಘನತೆ]ಯನ್ನು ಮರಳಿ ಪಡೆಯಬಹುದು,&#8221; ಅಂದರೆ ಸಮಾಜದಲ್ಲಿ ಮನುಷ್ಯರು ಎಂದು ಪರಿಗಣಿಸಲ್ಪಡಬಹುದು ಎಂದು ವಾದಿಸಿದರು.</p>



<p>ಅಂಬೇಡ್ಕರ್ ಅಸ್ಪೃಶ್ಯರನ್ನು ಪದೇ ಪದೇ ಕೇಳುತ್ತಿದ್ದ ಪ್ರಶ್ನೆಯೆಂದರೆ: “ನಿಮಗೆ&nbsp;<em>ಸುಖ</em> ಬೇಕೇ ಅಥವಾ ಮಾನುಸ್ಕಿ ಬೇಕೇ (&nbsp;<em>ಬಹಿಷ್ಕೃತ್ ಭಾರತ್,</em>&nbsp;ಫೆಬ್ರವರಿ 3, 1928)?” ಅಸ್ಪೃಶ್ಯ ಮತ್ತು ದಮನಿತ ದಲಿತರಿಗೆ ರಾಜಕೀಯ ಪ್ರಾತಿನಿಧ್ಯದ ಜೊತೆಗೆ ಮಾನವ ಘನತೆ ಮತ್ತು ವ್ಯಕ್ತಿತ್ವವು ಅತ್ಯಂತ ಮುಖ್ಯವಾಗಿತ್ತು, ಇದು ಅವರನ್ನು ಅವಮಾನದಿಂದ ನೋಡುವ ಸಾಮಾಜಿಕ ಸ್ಥಾನದಿಂದ ಉಳಿದವರಂತೆ ಮಾನವರು ಎಂದು ಪರಿಗಣಿಸುವಂತೆ ಹೋರಾಡಲು ಪ್ರೇರಣೆಯನ್ನು ನೀಡಿತು.</p>



<p>ವಸಾಹತುಶಾಹಿ ಭಾರತದ ಚುನಾವಣಾ ಸಂಸ್ಥೆಗಳಲ್ಲಿ ಪ್ರಮಾಣಾನುಗುಣ ಪ್ರಾತಿನಿಧ್ಯದ (proportional representation) ಮೂಲಕ ದಲಿತರಿಗೆ ಮನ್ನಣೆ, ಹಕ್ಕುಗಳು ಮತ್ತು ಪರಿಹಾರ ಸಿಗಬೇಕಾದ ಅಗತ್ಯವನ್ನು ಅಂಬೇಡ್ಕರ್ ಒತ್ತಿಹೇಳಿದರು. ದಲಿತರು ಇಡೀ ಭಾರತೀಯ ಸಮಾಜದೊಂದಿಗೆ ತಮ್ಮ ಸಂಬಂಧಗಳನ್ನು ಪುನರ್ ವ್ಯಾಖ್ಯಾನಿಸುವ ಮತ್ತು ಪುನರ್ರಚಿಸುವ ಪ್ರಕ್ರಿಯೆಗಳನ್ನು ರಾಜಕೀಯಗೊಳಿಸಲು ಅವರು ಒಂದು ಸಿದ್ಧಾಂತ ಮತ್ತು ನಾಯಕತ್ವವನ್ನು ಒದಗಿಸಿದರು.</p>



<p>ಅಂಬೇಡ್ಕರ್ ಅವರಿಗೆ, ಶ್ರೇಣೀಕೃತ ಹಿಂದೂ ಧರ್ಮವು&nbsp;<em>ಮಾನುಸ್</em>&nbsp;(ಮಾನವ) ಕೇಂದ್ರಿತ ಸಮಾನತೆ ಮತ್ತು ಘನತೆಯ ನಾಗರಿಕ ಸಮಾಜವನ್ನು ಒದಗಿಸಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿ ತಿಳಿದಿತ್ತು. ಇದಕ್ಕಾಗಿ, ಅಂಬೇಡ್ಕರ್ ತಮ್ಮ ಪ್ರಸಿದ್ಧ ಮೇ 1936 ರ ಭಾಷಣ &#8221;&nbsp;<em>ಜಾತಿ ನಿರ್ಮೂಲನೆ&#8221;</em>&nbsp;ಯಲ್ಲಿ ಪ್ರತಿಪಾದಿಸಿದಂತೆ ಮಾನುಸ್ಕಿಯನ್ನು ಪುನಶ್ಚೇತನಗೊಳಿಸಲು ಜಾತಿಯನ್ನು ಅಕ್ಷರಶಃ ನಾಶ ಮಾಡಬೇಕಾಗಿತ್ತು. ಹಿಂದೂ ಧರ್ಮವು ದಲಿತರಿಗೆ ಮಾನುಸ್ಕಿಯನ್ನು ನೀಡಲು ಸಾಧ್ಯವಿಲ್ಲ. ಅದೇ ಸಮಯದಲ್ಲಿ, ಜಾತಿ ವಿನಾಶವೆಂದರೆ ಅಸ್ಪೃಶ್ಯರಿಗೆ ನಿರಾಕರಿಸಲ್ಪಟ್ಟ, ಸ್ಪರ್ಶ್ಯರಿಗಾಗಿ ಮಾತ್ರ ನೀಡಲಾಗಿರುವ ಮಾನುಸ್ಕಿಯನ್ನು ನಿರ್ಮೂಲನೆ ಮಾಡುವುದಾಗಿದೆ. ಮಾನುಸ್ಕಿಯನ್ನು ಬೆಳೆಸಲು ಅಂಬೇಡ್ಕರ್ ಮತ್ತು ದಲಿತ ಮಹಿಳೆಯರು ಮತ್ತು ಪುರುಷರು ಏನು ಮಾಡಬಹುದು? ಸಾಮಾನ್ಯವಾಗಿ ಮೇಲ್ಜಾತಿಯ ಸ್ಪರ್ಶ ಸಮಾಜ ಸುಧಾರಕರಂತೆ ಅಲ್ಲ, ಅಂಬೇಡ್ಕರ್‌ ಅವರು ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಕಾನೂನು ಮತ್ತು ಧಾರ್ಮಿಕ &#8211; ಬಹುಮುಖಿ ತಂತ್ರದ ಮೂಲಕ ದಲಿತ ಸುಧಾರಣೆಗಾಗಿ ಕೆಲಸ ಮಾಡಿದರು. ಮಾನುಸ್ಕಿಯನ್ನು ಬೆಳೆಸಲು ಬಾಹ್ಯ ಮತ್ತು ಆಂತರಿಕ ಬದಲಾವಣೆಗಳ ಮೇಲೆ ಕೇಂದ್ರೀಕರಿಸಿದರು.&nbsp;</p>



<p><strong>ಅಂಬೇಡ್ಕರ್ ಮತ್ತು ಮಾನುಸ್ಕಿ: ಹೊಸ ಬಗೆಯ ಸ್ವಾಭಿಮಾನ ಮತ್ತು ಸ್ವ-ನಿರ್ಮಾಣದ ಕಡೆಗೆ</strong></p>



<p>&#8220;ಹ್ಯುಮಾನಿಟಿ&#8221; ಎಂಬ ಇಂಗ್ಲಿಷ್ ಪದವು ದಲಿತ ನಿಘಂಟಿನಲ್ಲಿರುವ ಒಂದೇ ಒಂದು ಪದಕ್ಕೂ ಹೊಂದಿಕೆಯಾಗುವುದಿಲ್ಲ. ಮಾನುಸ್ಕಿ ಸ್ಥಳೀಯ ಮರಾಠಿ ಪರಿಕಲ್ಪನೆಗಳನ್ನು ಹೊಂದಿದೆ:&nbsp;<em>ನೀತಿಮತ್ತ/ನೈತಿಕ್ತ</em>&nbsp;(ನೈತಿಕತೆ),&nbsp;<em>ಸ್ವಾಭಿಮಾನ್</em>&nbsp;(ಸ್ವಾಭಿಮಾನ),&nbsp;<em>ಸ್ವಾವಲಂಬನ್</em>&nbsp;(ಸ್ವಾವಲಂಬನೆ),&nbsp;<em>ಶೀಲಾ</em>&nbsp;(ಉತ್ತಮ ಸ್ವಭಾವ),&nbsp;<em>ಇಜ್ಜತ್</em>&nbsp;(ಘನತೆ),&nbsp;<em>ಮಾನ್ಸಿಕ್ತ</em>&nbsp;(ಮನಸ್ಸಿನ ಸಾಮರ್ಥ್ಯಗಳು), ಮತ್ತು&nbsp;<em>ಅಬ್ರು</em>&nbsp;(ಗೌರವ), ಇವು ದಲಿತರಿಗೆ ಗೌರವಯುತವಾದ ಮಾನವೀಯ ಘನತೆಯನ್ನು ನೀಡಲು ಅತ್ಯಗತ್ಯವಾಗಿದ್ದವು. </p>



<p>ಈ ಆಂತರಿಕ ಸಂಪನ್ಮೂಲಗಳು ಮತ್ತು ಅಂತರ್ಗತವಾಗಿ ಕಾಳಜಿಯುಳ್ಳ ಮತ್ತು ಸುಸಂಸ್ಕೃತ ಮಾನವೀಯ ಪರಸ್ಪರ ಸಂಬಂಧ ಹೊಂದಿರುವ ವಿಚಾರಗಳ ಮೂಲಕ ಅಂಬೇಡ್ಕರ್ ಹೊಸ ದಲಿತ ಮಹಿಳೆಯನ್ನು ರೂಪಿಸಿದರು. ದಲಿತರು ಸಾರ್ವತ್ರಿಕ, ಜಾಗತಿಕ ಮಾನವತೆ ಮತ್ತು ಮಾನವೀಯತೆಯೊಂದಿಗೆ ಸಂಪರ್ಕ ಸಾಧಿಸಲು ಸ್ಥಳೀಯ ಭಾಷೆಯ ಪರಿಕಲ್ಪನೆಗಳನ್ನು ಬಳಸಿದರು, ಇದರಿಂದಾಗಿ ಅವರ ವ್ಯಕ್ತಿತ್ವ ಮತ್ತು ಮಾನವತಾವಾದದ ತಮ್ಮದೇ ಆದ ಪರಿಕಲ್ಪನೆಯನ್ನು ಕಂಡುಕೊಂಡರು. ದಲಿತರು ಮಾನವತಾವಾದವನ್ನು ಹೊಸ ಜ್ಞಾನ ಮತ್ತು ತಿಳುವಳಿಕೆಗಳೊಂದಿಗೆ ರೂಪಿಸಿದರು. ಆದರೂ, ಅವರ ನೈತಿಕ ಸಂವೇದನೆಯು ಸ್ಪಶ್ಯರ ಮಾನವತಾವಾದದ ಪರಿಕಲ್ಪನೆಯ ಒಳಗೆ ಬರುವುದಿಲ್ಲ. ದಲಿತ ಮಾನುಸ್ಕಿಗೆ ಸಂವೇದನಾಶೀಲರಾಗದ ಸ್ಪಶ್ಯರ ಪ್ರಬಲ ಪ್ರಪಂಚವು ದಲಿತರ ಮಾನವತೆಯ ವಿಧಾನಗಳನ್ನು ದೂರ ಇಟ್ಟಿತು. ಪರಿಣಾಮವಾಗಿ, ಸ್ಪಶ್ಯರು ದಲಿತರನ್ನು ಸಂಪೂರ್ಣವಾಗಿ ಹೊರಗಿಟ್ಟರು. ಪ್ರಬಲರ ಮತ್ತು ತುಳಿಯಲ್ಪಟ್ಟವರ ನೈತಿಕತೆಗಳು ಸ್ಪಷ್ಟವಾಗಿ ಭಿನ್ನವಾಗಿದ್ದವು. ಆದಾಗ್ಯೂ, ಅವುಗಳನ್ನು ಒಂದಕ್ಕೊಂದು ಜೋಡಿಸಬಹುದು.</p>



<p>ಐತಿಹಾಸಿಕವಾಗಿ, ಅಂಬೇಡ್ಕರ್ ಕಂಡುಕೊಂಡಂತೆ, ವಿಶಾಲ ಭಾರತೀಯ ಸಮಾಜವು ದಲಿತರಿಗೆ ಸಿಗಬೇಕಾದ ಮಾನುಸ್ಕಿಯನ್ನು ನಿರಾಕರಿಸಿತು. ಜಾತಿಯು ದಲಿತರ ಹಕ್ಕುಗಳನ್ನು ವ್ಯಕ್ತಿತ್ವಕ್ಕೆ ಸೀಮಿತಗೊಳಿಸಿವ ಕೆಲಸವನ್ನು ಮಾಡಿತು, ಏಕೆಂದರೆ ದಲಿತ ಮಾನವತಾವಾದವು ಗಾಯ ಮತ್ತು ಶಿಕ್ಷೆಯ ಸ್ಥಿತಿಯಾಗಿ ರೂಪುಗೊಂಡಿತ್ತು. ಕನಿಷ್ಠ ಭದ್ರತೆಯೂ ಇಲ್ಲದ ದಲಿತ ಮಹಿಳೆಯರಿಗೆ ಇದರ ಪರಿಣಾಮಗಳು ಅಪಾಯಕಾರಿಯಾಗಿದ್ದವು. ನಾನು ಉದಾರವಾದಿ ವಿಶ್ವಮಾನವತಾವಾದ ಮತ್ತು ಆಧುನಿಕ ಮಾನವತಾವಾದದ ಸಂಪ್ರದಾಯಗಳನ್ನು ತೊರೆಯುತ್ತಿದ್ದೇನೆ, ಇದು ದಲಿತರನ್ನು ಆರಂಭದಲ್ಲೇ ಹೊರಗಿಟ್ಟಿತು ಎಂದು ಅವರು ಹೇಳಿದರು. ದಲಿತ ಮಾನವತಾವಾದವು &#8220;ಸಹಿಷ್ಣುತೆಯ ಉದಾರ ಮಾನವತಾವಾದವಲ್ಲ, ಆದರೆ ದೃಢೀಕರಣದ ಆಮೂಲಾಗ್ರ ಮಾನವತಾವಾದ &#8211; not a liberal humanism of tolerance, but a radical humanism of assertion&#8221; ಎಂದು ಸುಬ್ರಮಣಿಯನ್ ಶಂಕರ್&nbsp;<em><em>Flesh and Fish Blood</em></em> ನ<em>ಲ್ಲಿ</em>&nbsp;ಬರೆಯುತ್ತಾರೆ. ಹಾಗೆಯೇ, ಅಮೇರಿಕಾದಲ್ಲಿ ಇರುವ &#8220;Black Lives Matter moment -ಕಪ್ಪು ಜನರ ಜೀವಕ್ಕೆ ಬೆಲೆಯಿದೆ&#8221; ಎಂಬ ಹೋರಾಡದಲ್ಲಿರುವಂತೆ &#8220;ನಾವೆಲ್ಲರೂ ಮಾನುಷ್ಯರು&#8221; ಅಥವಾ &#8220;ಎಲ್ಲಾ ಜೀವಗಳು ಮುಖ್ಯ&#8221; ಎಂದು ಪ್ರತಿಪಾದಿಸುವ ವಿಶ್ವಮಾನವತಾವಾದದ ಐಷಾರಾಮಿ ಇದಕ್ಕೆ ದಲಿತ ಮಾನವತಾವಾದಕ್ಕೆ ಇಲ್ಲ. ಬದಲಾಗಿ, ಇದು ಸಹಿಷ್ಣು, ವಿಸ್ತಾರವಾದ ಮತ್ತು ದೃಢವಾದ ಮಾನವತಾವಾದವಾಗಿದ್ದು, ಶಂಕರ್ ಹೇಳಿದಂತೆ ದಲಿತರನ್ನು &#8220;[ಅವರು ಇರುವಂತೆಯೇ]&#8221; ಮಾನುಷ್ಯರಾಗಿ ಸ್ವೀಕರಿಸಲು ಒತ್ತಾಯಿಸುತ್ತದೆ.</p>



<p>ಇದಲ್ಲದೆ, ಸ್ಪರ್ಶ್ಯರ ಸಮಾಜ ಸುಧಾರಣಾ ಕೆಲಸ ಮತ್ತು ಸ್ಪರ್ಶ್ಯ ಹಿಂದೂ ಹೃದಯಗಳಲ್ಲಿ ಆಗಬೇಕಾದ ಬದಲಾವಣೆಯನ್ನು ಅವಲಂಬಿಸುವ ಬದಲು, ಅಂಬೇಡ್ಕರ್ ಅವರು ದಲಿತರು ಸ್ವಾವಲಂಬಿಗಳಾಗಬೇಕು, ಜಾತಿ ರಚನೆಗಳ ವಿರುದ್ಧ ಹೋರಾಡಬೇಕು ಮತ್ತು ತಮ್ಮದೇ ಆದ ವಿಮೋಚನೆಗಾಗಿ ಕೆಲಸ ಮಾಡಬೇಕು ಎಂದು ಬಯಸಿದ್ದರು. ಇದರ ಪರಿಣಾಮವಾಗಿ, ಮಾರ್ಚ್ 29, 1929 ರಂದು&nbsp;<em>ಬಹಿಷ್ಕೃತ ಭಾರತದಲ್ಲಿ</em>&nbsp;, ಅವರು &#8220;ನಮ್ಮ ಅಸ್ಪೃಶ್ಯ ಸ್ಥಾನಮಾನದ ವಿರುದ್ಧ ನಾವೇ ಹೋರಾಡಬೇಕು&#8221; ಎಂದು ಗುಡುಗಿದರು.</p>



<p>ಅವರು ಪ್ರಬಲ ಜಾತಿ ಪೂರ್ವಾಗ್ರಹ ಮತ್ತು ಊಹೆಗಳ ಬಗ್ಗೆ ಖಂಡಿತವಾಗಿಯೂ ತಿಳಿದಿದ್ದರು ಮತ್ತು ಪರಿಣಾಮವಾಗಿ, ಮಾರ್ಚ್ 7, 1936 ರಂದು&nbsp;<em>ಜನತಾದಲ್ಲಿ</em>&nbsp;ಅಸ್ಪೃಶ್ಯರಿಗೆ, &#8220;ನೀವು ಸರಳ ಮಾನುಸ್ಕಿಗಾಗಿ ಹೋರಾಡಿದರೂ ಸಹ, ಸ್ಪೃಶ್ಯರು ನಿಮ್ಮನ್ನು ಆಕ್ರಮಣಕಾರಿಯಾಗಿ ವಿರೋಧಿಸುತ್ತಾರೆ. ನಿಮ್ಮ ದುರ್ಬಲತೆ ಮತ್ತು ದೌರ್ಬಲ್ಯಗಳನ್ನು ತೊಡೆದುಹಾಕಿ,&#8221; ಎಂದು ನೆನಪಿಸಿದರು, ಈ ರೀತಿಯಾಗಿ, ಅಂಬೇಡ್ಕರ್ ಮಾನವತಾವಾದದ ಉದಾರವಾದಿ ಸಂಪ್ರದಾಯವನ್ನು ಬಳಸಿಕೊಂಡರೂ, ಅವರು ವಿಶಿಷ್ಟವಾದ ದಲಿತ ಮಾನುಸ್ಕಿಯನ್ನು ರಚಿಸಲು ಹೊರಟರು.</p>



<p>೧೯೨೦ ರ ದಶಕದ ಹೊತ್ತಿಗೆ, ಅಂಬೇಡ್ಕರ್ ದಲಿತ ಮಹಿಳೆಯರನ್ನು ಇಡೀ ದಲಿತ ಸಮುದಾಯಕ್ಕೆ ಮಾನುಸ್ಕಿಯನ್ನು ರೂಪಿಸುವವರು ಮತ್ತು ಸಾಮಾಜಿಕ ಪರಿವರ್ತನೆಯ ಏಜೆಂಟ್‌ಗಳಾಗಿ ನೋಡಿದರು. ದಲಿತ ಮಹಿಳೆಯರು ಮತ್ತು ಲಿಂಗ ಮತ್ತು ಲೈಂಗಿಕತೆಯ ಸಮಸ್ಯೆಗಳು ಅಂಬೇಡ್ಕರ್ ಪರಿಕಲ್ಪನೆಯ ಮಾನುಸ್ಕಿಯ ಮೂಲಭೂತ ಅಂಶಗಳಾಗಿದ್ದವು. ಕಳಂಕಿತ ದಲಿತ ಮಹಿಳೆಯರಿಗೆ ದೊಡ್ಡ ರಾಷ್ಟ್ರ, ಸಮಾಜ ಮತ್ತು ಕುಟುಂಬದಲ್ಲಿ ಅವರಿಗೆ ಅವರದೇ ಆದ ಒಂದು ಜಾಗವನ್ನು ರೂಪಿಸಲು ಮಾನುಸ್ಕಿ ಅತ್ಯಂತ ಮುಖ್ಯವಾಗಿತ್ತು. ಇದು ಅಂತಿಮವಾಗಿ&nbsp;<a href="https://www.routledge.com/Dalit-Womens-Education-in-Modern-India-Double-Discrimination/Paik/p/book/9780815384144?srsltid=AfmBOopB2vgzCS5VWyzDipaLg1UCti4J10CO5KTj4HxwycR1tegTrGre">ಅವರು ʼಅನ್ಯರುʼ ಎಂಬ ಸಮಾಜಿಕ ಮನೋಭಾವವನ್ನು ಕೊನೆಗೊಳಿಸಿತು ಮತ್ತು</a>&nbsp;ಆಧುನಿಕ ಭಾರತದಲ್ಲಿ ಅವರಿಗೆ ಪೌರತ್ವವನ್ನು ನೀಡಿತು. ದಲಿತ ಮಹಿಳೆಯರು ತಮ್ಮ ದೇಹವನ್ನು ಪುನಃ ಸ್ವಾಧೀನಪಡಿಸಿಕೊಳ್ಳಲು, ಸ್ವತಂತ್ರರಾಗಲು ಮತ್ತು ವಿಮರ್ಶಾತ್ಮಕವಾಗಿ ತಮ್ಮನ್ನು ತಾವು ಮರುರೂಪಿಸಿಕೊಳ್ಳಲು ಸ್ವಾಭಿಮಾನ, ಸ್ವಾವಲಂಬನೆ ಮತ್ತು ಮಾನುಸ್ಕಿಯ ಬಲವಾದ ದೇಹ ರಾಜಕಾರಣ ಮತ್ತು ನೈತಿಕತೆಯನ್ನು ನಿಯೋಜಿಸಿಕೊಂಡರು. ಅಂಬೇಡ್ಕರ್ ತಮ್ಮ ಮೇಲಿನ ದೌರ್ಜನ್ಯದ ವಿರುದ್ಧ ಹೋರಾಡಲು ಮತ್ತು ವಿಭಿನ್ನ ತಂತ್ರಗಳ ಮೂಲಕ ತಮ್ಮ ಅಸ್ತಿತ್ವವನ್ನು ಗಟ್ಟಿಯಾಗಿ ಸ್ಥಾಪಿಸಲು ದಲಿತ ಮಹಿಳಾ ಸಂಸ್ಥೆಯನ್ನು ಬಲಪಡಿಸಿದರು.&nbsp;</p>



<p>ಸಾಮಾಜಿಕ ಪರಿವರ್ತನೆಯ ಹೋರಾಟದಲ್ಲಿ ಶಿಕ್ಷಣ ಮತ್ತು ಉದ್ಯೋಗವು ಕೇಂದ್ರಬಿಂದುವಾಗಿತ್ತು. ದಲಿತ ಮಹಿಳೆಯ ವ್ಯಕ್ತಿತ್ವವನ್ನು ಪರಿವರ್ತಿಸಲು ಅಂಬೇಡ್ಕರ್ ದೃಢವಾದ ದೇಹ ರಾಜಕಾರಣದ ಮೇಲೆ ಕೇಂದ್ರೀಕರಿಸಿದರು. ಆಧ್ಯಾತ್ಮಿಕತೆ ಮತ್ತು ಧರ್ಮವು ಜಾತಿ ಹಾಗೂ ಲಿಂಗ ವಿಮರ್ಶೆ, ಸ್ವಾತಂತ್ರ್ಯ ಮತ್ತು ಪುನರುಜ್ಜೀವನಗೊಂಡ ಮಾನುಸ್ಕಿಯ ನೆಲೆಗಳನ್ನು ಸಹ ಒದಗಿಸಿತು. ಉದಾಹರಣೆಗೆ, ಅಕ್ಟೋಬರ್ 14, 1956 ರಂದು&nbsp;<em>ಧಮ್ಮದೀಕ್ಷಾ</em>&nbsp;(ಬೌದ್ಧಧರ್ಮಕ್ಕೆ ಮತಾಂತರ) ದಿನದಂದು, ಅಂಬೇಡ್ಕರ್ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಮುಖ್ಯವಾಗಿ ಲಿಂಗ ಸಮಾನತೆಯಿಂದ ತುಂಬಿದ ಸಂಪೂರ್ಣವಾಗಿ ಹೊಸ ಜೀವನವನ್ನು ಒತ್ತಿ ಹೇಳಿದರು. ಬೌದ್ಧಧರ್ಮದ ಮೂಲಕ, ದಲಿತ ಮಹಿಳೆಯರು ಆಂತರಿಕ ಮತ್ತು ಬಾಹ್ಯ ಬದಲಾವಣೆಗಳನ್ನು ಒಳಗೊಂಡಿದ್ದರು &#8211; ಅವರು ಸ್ಪರ್ಶಿಸಲ್ಪಡುವವರು ಮತ್ತು ದಲಿತ ಪುರುಷರಿಗೆ ಸಂಬಂಧಿಸಿದಂತೆ ಮಾನವರಾಗಿ ತಮ್ಮ ಸಮಾನತೆಯನ್ನು ಪ್ರತಿಪಾದಿಸಿದರು, &#8220;ತಮಗೆ ತಾವೇ ಬೆಳಕಾಗುವ&#8221; ಮೂಲಕ (ಬೌದ್ಧ ತತ್ವಗಳ ಪ್ರಕಾರ) ಸ್ವಾವಲಂಬನೆಯನ್ನು ಒತ್ತಿ ಹೇಳಿದರು ಮತ್ತು ಸಮುದಾಯ ಸುಧಾರಣೆ ಮತ್ತು ರಾಜಕೀಯ ಚಲನಶೀಲತೆಯಲ್ಲಿ ವಿಮರ್ಶಾತ್ಮಕವಾಗಿ ತೊಡಗಿಸಿಕೊಂಡರು.&nbsp;</p>



<p>ಈ ಪದ್ಧತಿಗಳು ದಲಿತ ಮಹಿಳೆಯರಲ್ಲಿ ಸ್ವಾಭಿಮಾನವನ್ನು ಬೆಳೆಸಲು, ಸಮಾನತೆ ಮತ್ತು ಬದಲಾವಣೆಗಾಗಿ ಹೋರಾಡಲು ಹಾಗೂ ದಲಿತ ಸ್ತ್ರೀವಾದ-ಮಾನವತಾವಾದವನ್ನು ಆಳಗೊಳಿಸಲು ಅನುವು ಮಾಡಿಕೊಟ್ಟವು.&nbsp;ವೈಯಕ್ತಿಕ ಮಾನುಸ್ಕಿಯನ್ನು ಅರಿತುಕೊಳ್ಳುವುದು ಸಾಮೂಹಿಕ ಸಮಾಜ ಗುರುತಿನೊಂದಿಗೆ ಸಂಬಂಧ ಹೊಂದಿತ್ತು. 1920 ರ ದಶಕದಿಂದ, ಅಂಬೇಡ್ಕರ್ ರಾಷ್ಟ್ರೀಯ ಮಟ್ಟದಲ್ಲಿ ದಲಿತ ಸಮಾಜ ಮತ್ತು ದಲಿತ ಶಕ್ತಿಯನ್ನು ನಿರ್ಮಿಸಲು ಸಾಮಾಜಿಕ, ರಾಜಕೀಯ, ಸೈದ್ಧಾಂತಿಕ, ಶೈಕ್ಷಣಿಕ, ಆಂತರಿಕ ಮತ್ತು ಬಾಹ್ಯ &#8211; ವಿವಿಧ ರಂಗಗಳಲ್ಲಿ ಬಹುಮುಖಿ ಕಾರ್ಯತಂತ್ರವನ್ನು ರೂಪಿಸಿದರು. ಸ್ಪರ್ಶ್ಯ ಸಮಾಜದ ಸುಧಾರಕರಿಂದ, ಹಿಂದೂ ಧರ್ಮದಿಂದ ಭ್ರಮನಿರಸನಗೊಂಡ ಕಾರಣ ಮತ್ತು ಸಮನ್ವಯದ ರಾಜಕೀಯದಿಂದ ಸಾಧಿಸಲ್ಪಟ್ಟ ದಲಿತ ಮಾನುಷ್ಕಿಗೆ ಸಿಗಬೇಕಾಗಿದ್ದ ಮನ್ನಣೆ ಸಿಗದ ಕಾರಣ, ಅಂಬೇಡ್ಕರ್ ದಲಿತರು ಜಾತಿಯ ಸಾಮಾಜಿಕತೆಯ ಬಗ್ಗೆ ಜಾಗರೂಕರಾಗಿರಲು ಮತ್ತು ತಾವೇ ಬದಲಾವಣೆಯ ಏಜೆಂಟ್‌ಗಳಾಗಲು ಇರುವ ತಮ್ಮದೇ ಸಾಮರ್ಥ್ಯವನ್ನು ಗುರುತಿಸಲು ಪ್ರೋತ್ಸಾಹಿಸಿದರು.</p>



<p>ಅಂಬೇಡ್ಕರ್ ನಂತರದ ಕಾಲದಲ್ಲಿ, ದಲಿತರು ಬರವಣಿಗೆ, ಕ್ರಿಯಾಶೀಲತೆ ಮತ್ತು ಇತ್ತೀಚೆಗೆ ವಿದ್ವತ್ಪೂರ್ಣ ರಾಜಕೀಯದ ಮೂಲಕ ಜಾತಿ, ಲಿಂಗ ಮತ್ತು ಲೈಂಗಿಕತೆಯಂತಹ ಪರಸ್ಪರ ಸಂಬಂಧ ಹೊಂದಿರುವ ಸಮಸ್ಯೆಗಳ ಬಗ್ಗೆ ಪ್ರಬಲವಾದ ಪ್ರತಿರೋಧವನ್ನು ರೂಪಿಸಿದರು. 1960 ರ ದಶಕದ ದಲಿತ ಸಾಹಿತ್ಯದ ಹಿನ್ನೆಲೆಯಲ್ಲಿ, ಅನೇಕ ದಲಿತ ಮಹಿಳೆಯರು ತಮ್ಮ ಮಾನುಸ್ಕಿಯನ್ನು ಜೀವಂತವಾಗಿಡಲು, ತಮ್ಮ ನೋವನ್ನು ವ್ಯಕ್ತಪಡಿಸಲು ಮತ್ತು ತಮಗಾಗಿ ಒಂದು ಜಾಗವನ್ನು ರೂಪಿಸಿಕೊಳ್ಳಲು ತಮ್ಮ ಆಲೋಚನೆಗಳು ಮತ್ತು ಜೀವನ ಚರಿತ್ರೆಗಳನ್ನು ಬರೆದು ಪ್ರಕಟಿಸಿದ್ದಾರೆ. 1995 ರಲ್ಲಿ ಪ್ರಕಟವಾದ ತಮ್ಮ ಆತ್ಮಚರಿತ್ರೆಯಲ್ಲಿ, ಪ್ರಸಿದ್ಧ ದಲಿತ ವಿದ್ವಾಂಸ ಕುಮುದ್ ಪಾವ್ಡೆ, &#8220;ನಾನು&nbsp;<em>ಮಾನುಸ್</em>&nbsp;(ಮನುಷ್ಯ) ಅಲ್ಲವೇ? ಹಿಂದೂಗಳು ನಮ್ಮನ್ನು ಮನುಷ್ಯರೆಂದು ಯಾವತ್ತೂ ಏಕೆ ಸ್ವೀಕರಿಸಲಿಲ್ಲ?&#8221; ಎಂದು ವಾದಿಸಿದರು. ಇದು ಅನೇಕ ದಲಿತರು ತೊಡಗಿಸಿಕೊಂಡಿರುವ ವಿಮೋಚನಾ ಮಾರ್ಗವನ್ನು ನಿರೂಪಿಸುವ ಒಂದು ಉದಾಹರಣೆಯಾಗಿದೆ &#8211; ಮಾನವ ಘನತೆ ಅಥವಾ ವ್ಯಕ್ತಿತ್ವದ ಪುನಃಸ್ಥಾಪನೆಗಾಗಿ ನಡೆಸುವ ಯುದ್ಧದ ಒಂದು ಮಾರ್ಗವಾಗಿದೆ.&nbsp;</p>



<p>ಕೊನೆಯದಾಗಿ, ಮಾನುಸ್ ಬಗ್ಗೆ ಅಂಬೇಡ್ಕರ್ ಅವರ ಚಿಂತನೆಯು ಕೇವಲ ಉದಾರವಾದಿ ಪಾಶ್ಚಿಮಾತ್ಯ ಮಾನವತಾವಾದದಿಂದ ಬಂದದ್ದಲ್ಲ. ಅವರಿಗೆ, ಮಾನುಸ್ ಮಾನವೀಯತೆಯ ಆಚರಣೆಯಾಗಿತ್ತು &#8211; ಇದು ಕೇವಲ ಜೈವಿಕವಲ್ಲ, ಬದಲಾಗಿ ಮಾನವ ನೈತಿಕತೆಯ ಸಾಮಾಜಿಕ ಅನುಷ್ಠಾನವಾಗಿದೆ. ದಲಿತ ಚರಿತ್ರೆಗಳು ಲಿಂಗತ್ವ, ಸ್ತ್ರೀವಾದದ ಸಂದರ್ಭೋಚಿತ ಮತ್ತು ಪರಿವರ್ತನಾ ಸಾಮರ್ಥ್ಯವನ್ನು ಮತ್ತು ಮಾನುಸ್ಕಿಯ ಆಧುನಿಕ ರಾಜಕೀಯದಲ್ಲಿ ಅದರ ಮಹತ್ವವನ್ನು ಒತ್ತಿಹೇಳುತ್ತವೆ. ದಲಿತ ರಾಜಕೀಯವು ಮಾನವ ಜನಾಂಗದಲ್ಲೇ ಹೊಸದಾದ ಶಕ್ತಿಯ ಮ್ಯಾಟ್ರಿಕ್ಸ್ ಅನ್ನು ಹೇಗೆ ಉತ್ಪಾದಿಸುವುದು ಎಂದು ಪರಿಗಣಿಸುತ್ತದೆ, ಲಿಂಗತ್ವ ಮತ್ತು ಮಾನವನ ನಡುವಿನ ಸಂಪರ್ಕಗಳನ್ನು ಆಳಗೊಳಿಸುತ್ತದೆ.</p>



<p><em><strong>ಡಾ. ಶೈಲಜಾ ಪೈಕ್ </strong>ಅವರು ಇತಿಹಾಸ ಪ್ರಾಧ್ಯಾಪಕಿ ಮತ್ತು 2024 ರ ಮ್ಯಾಕ್‌ಆರ್ಥರ್ ಫೆಲೋ.</em> ಇದು ದಿ ವೈರ್‌ನಲ್ಲಿ ಪ್ರಕಟವಾದ <a href="https://thewire.in/caste/what-dr-b-r-ambedkar-meant-by-manus-and-manuski"><strong>What Dr. B.R. Ambedkar Meant by Manus and Manuski </strong></a>ಲೇಖನದ ಕನ್ನಡಾನುವಾದವಾಗಿದೆ</p>
]]></content:encoded>
					
		
		
			</item>
		<item>
		<title>ಆರೆಸ್ಸೆಸ್, ಜನಸಂಘ ಸಂವಿಧಾನವನ್ನು ವಿರೋಧಿಸಿತ್ತು: ಖರ್ಗೆ</title>
		<link>https://peepalmedia.com/rss-jana-sangh-opposed-the-constitution-kharge/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 16 Dec 2024 13:35:30 +0000</pubDate>
				<category><![CDATA[ರಾಜಕೀಯ]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[constitution]]></category>
		<category><![CDATA[constitution day]]></category>
		<category><![CDATA[mallikarjuna kharge]]></category>
		<category><![CDATA[modi]]></category>
		<category><![CDATA[narendra modi]]></category>
		<category><![CDATA[nehru]]></category>
		<category><![CDATA[parliment]]></category>
		<guid isPermaLink="false">https://peepalmedia.com/?p=50785</guid>

					<description><![CDATA[ಹೊಸದಿಲ್ಲಿ: 1949ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಮತ್ತು ಜನಸಂಘವು ಮನುಸ್ಮೃತಿಯನ್ನು ಆಧರಿಸಿದೆ ರಚಿಸಿರುವ ಸಂವಿಧಾನವನ್ನು ವಿರೋಧಿಸಿತ್ತು ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಡಿಸೆಂಬರ್ 16, ಸೋಮವಾರ ಆರೋಪಿಸಿದರು. 2002 ರಲ್ಲಿ RSS ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ ಮಾಡಲು ನ್ಯಾಯಾಲಯದ ಆದೇಶ ನೀಡುವ ವರೆಗೆ ಆರ್‌ಎಸ್‌ಎಸ್ ಸಂವಿಧಾನ ಅಥವಾ ತ್ರಿವರ್ಣ ಧ್ವಜವನ್ನು ಸ್ವೀಕರಿಸಲಿಲ್ಲ ಎಂದು ಅವರು ಹೇಳಿದರು. “ಕೇವಲ ಒಬ್ಬರಿಗೊಬ್ಬರು ಬೊಟ್ಟು ಮಾಡಿ ತೋರಿಸುವುದರಿಂದ ಉಪಯೋಗವಿಲ್ಲ. ಜನಸಂಘವು ಒಮ್ಮೆ ಮನುಸ್ಮೃತಿಯ ಕಾನೂನುಗಳ ಆಧಾರದ ಮೇಲೆ [&#8230;]]]></description>
										<content:encoded><![CDATA[
<p><strong>ಹೊಸದಿಲ್ಲಿ:</strong> 1949ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಮತ್ತು ಜನಸಂಘವು ಮನುಸ್ಮೃತಿಯನ್ನು ಆಧರಿಸಿದೆ ರಚಿಸಿರುವ ಸಂವಿಧಾನವನ್ನು ವಿರೋಧಿಸಿತ್ತು ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಡಿಸೆಂಬರ್ 16, ಸೋಮವಾರ ಆರೋಪಿಸಿದರು. 2002 ರಲ್ಲಿ RSS ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ ಮಾಡಲು ನ್ಯಾಯಾಲಯದ ಆದೇಶ ನೀಡುವ ವರೆಗೆ ಆರ್‌ಎಸ್‌ಎಸ್ ಸಂವಿಧಾನ ಅಥವಾ ತ್ರಿವರ್ಣ ಧ್ವಜವನ್ನು ಸ್ವೀಕರಿಸಲಿಲ್ಲ ಎಂದು ಅವರು ಹೇಳಿದರು.</p>



<p>“ಕೇವಲ ಒಬ್ಬರಿಗೊಬ್ಬರು ಬೊಟ್ಟು ಮಾಡಿ ತೋರಿಸುವುದರಿಂದ ಉಪಯೋಗವಿಲ್ಲ. ಜನಸಂಘವು ಒಮ್ಮೆ ಮನುಸ್ಮೃತಿಯ ಕಾನೂನುಗಳ ಆಧಾರದ ಮೇಲೆ ಸಂವಿಧಾನವನ್ನು ರಚಿಸುವ ಗುರಿಯನ್ನು ಹೊಂದಿತ್ತು. ಇದು ಆರ್‌ಎಸ್‌ಎಸ್‌ನ ಉದ್ದೇಶವಾಗಿತ್ತು. ತ್ರಿವರ್ಣ ಧ್ವಜ, ಅಶೋಕ ಚಕ್ರ, ಸಂವಿಧಾನವನ್ನು ಅವಹೇಳನ ಮಾಡುವವರು ಈಗ ನಮಗೆ ಪಾಠ ಮಾಡುತ್ತಿದ್ದಾರೆ. ಸಂವಿಧಾನವನ್ನು ಜಾರಿಗೆ ತಂದ ದಿನ, ಈ ಜನರು ರಾಮಲೀಲಾ ಮೈದಾನದಲ್ಲಿ [ಬಿಆರ್] ಅಂಬೇಡ್ಕರ್, ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರು ಅವರ ಪ್ರತಿಕೃತಿಗಳನ್ನು ಸುಟ್ಟರು. ಅವರು ನಾಚಿಕೆಯಿಲ್ಲದೆ ನೆಹರು-ಗಾಂಧಿ ಕುಟುಂಬವನ್ನು ಅವಮಾನಿಸುತ್ತಾರೆ,” ಎಂದು ಖರ್ಗೆ ಅವರು ರಾಜ್ಯಸಭೆಯಲ್ಲಿ ‘ಭಾರತದ ಸಂವಿಧಾನದ 75 ವರ್ಷಗಳ ಅದ್ಭುತ ಪಯಣ’ ಕುರಿತ ಚರ್ಚೆಯಲ್ಲಿ ಹೇಳಿದರು.</p>



<p>“ಅವರು ಸಂವಿಧಾನ ಅಥವಾ ತ್ರಿವರ್ಣ ಧ್ವಜವನ್ನು ಸ್ವೀಕರಿಸಲಿಲ್ಲ. 26 ಜನವರಿ 2002 ರಂದು, ಮೊದಲ ಬಾರಿಗೆ, ಬಲವಂತದ ಮೇರೆಗೆ RSS ಪ್ರಧಾನ ಕಛೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ಏಕೆಂದರೆ ನ್ಯಾಯಾಲಯದ ಆದೇಶವಿತ್ತು,&#8221; ಎಂದು ಅವರು ಹೇಳಿದರು.</p>



<p>ಇದಲ್ಲದೆ, ಸಂವಿಧಾನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಟೀಕೆಗಳನ್ನು ವಿರೋಧಿಸಿದ ಕಾಂಗ್ರೆಸ್ ಅಧ್ಯಕ್ಷರು, ದೇಶಕ್ಕಾಗಿ ಹೋರಾಡದವರಿಗೆ ಅದರ ಮಹತ್ವವನ್ನು ಗ್ರಹಿಸಲು ಸಾಧ್ಯವಿಲ್ಲ ಎಂದು ಆರೋಪಿಸಿದರು.</p>



<p>11 ವರ್ಷಗಳ ಕಾಲ ಭರವಸೆಗಳನ್ನು ಈಡೇರಿಸಲು ವಿಫಲವಾದ ಮತ್ತು ಭಾರತವನ್ನು ದಾರಿ ತಪ್ಪಿಸಿದ್ದಕ್ಕಾಗಿ ಮೋದಿಯನ್ನು &#8220;ನಂಬರ್ ಒನ್ ಸುಳ್ಳುಗಾರ&#8221; ಎಂದು ಕರೆದರು. ಭರವಸೆ ನೀಡಿದ 15 ಲಕ್ಷ ರೂ.ಗಳ ಉದಾಹರಣೆಯನ್ನು ಅವರು ಉಲ್ಲೇಖಿಸಿ, ಅದು ಎಂದಿಗೂ ಕಾರ್ಯರೂಪಕ್ಕೆ ಬರಲಿಲ್ಲ ಎಂದರು. ಕಳೆದ 11 ವರ್ಷಗಳಲ್ಲಿ ಸಂವಿಧಾನವನ್ನು ಬಲಪಡಿಸಲು ಪ್ರಧಾನಿ ಏನು ಮಾಡಿದ್ದಾರೆ ಎಂಬುದನ್ನು ಅವರು ವಿವರಿಸಬೇಕು ಎಂದು ಖರ್ಗೆ ಆಗ್ರಹಿಸಿದರು.</p>



<p>“ದೇಶಕ್ಕಾಗಿ ಹೋರಾಡದವರಿಗೆ ಸ್ವಾತಂತ್ರ್ಯ ಮತ್ತು ಸಂವಿಧಾನದ ಮಹತ್ವ ಹೇಗೆ ತಿಳಿಯುತ್ತದೆ? ಪ್ರಧಾನಿ ನಮಗೆ ಕಲಿಸುತ್ತಿದ್ದಾರೆ. ನಾವೂ ಸುಳ್ಳು ಹೇಳುತ್ತೇವೆ ಆದರೆ ನಂಬರ್ ಒನ್ ಸುಳ್ಳುಗಾರ ಪ್ರಧಾನಿ,&#8221; ಎಂದು ಹೇಳಿದರು. 15 ಲಕ್ಷ ನೀಡುವುದಾಗಿ ಹೇಳಿದ್ದರೂ ಏನೂ ಬಂದಿಲ್ಲ. ಇವರು ಸುಳ್ಳು ಹೇಳಿ ದೇಶವನ್ನು ದಾರಿ ತಪ್ಪಿಸುತ್ತಿದ್ದಾರೆ ಮತ್ತು ಜನರನ್ನು ವಂಚಿಸುತ್ತಿದ್ದಾರೆ. ಸಂವಿಧಾನವನ್ನು ಬಲಪಡಿಸಲು ಕಳೆದ 11 ವರ್ಷಗಳಲ್ಲಿ ಅವರು ಏನು ಮಾಡಿದ್ದಾರೆ ಎಂಬುದನ್ನು ಪ್ರಧಾನಿ ಹೇಳಬೇಕು ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.</p>



<p>ಪ್ರಗತಿಪರ ವಿದ್ಯಾರ್ಥಿಗಳಿಗೆ ಹೆಸರಾಗಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ (ಜೆಎನ್‌ಯು) ಹಳೆಯ ವಿದ್ಯಾರ್ಥಿಯಾಗಿದ್ದರೂ ಸಮಾಜವಾದವನ್ನು ಪ್ರಶ್ನಿಸುವವರನ್ನು ಹೇಗೆ ಬೆಂಬಲಿಸುತ್ತೀರಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಖರ್ಗೆ ವ್ಯಂಗ್ಯವಾಡಿದರು.</p>



<p>“ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಓದಿದ್ದಾರೆ, ಅವರು ಅಲ್ಲಿ ಏನು ಓದಿದ್ದಾರೆಂದು ನನಗೆ ತಿಳಿದಿಲ್ಲ ಆದರೆ ಜೆಎನ್‌ಯು ವಿದ್ಯಾರ್ಥಿಗಳು ತುಂಬಾ ಪ್ರಗತಿಪರರು. ಮತ್ತು, ಇಲ್ಲಿ ಅವರು ಸಮಾಜವಾದವನ್ನು ಪ್ರಶ್ನಿಸುವವರನ್ನು ಬೆಂಬಲಿಸುತ್ತಿದ್ದಾರೆ. ಒಬ್ಬ ವ್ಯಕ್ತಿ ತನ್ನ ಸಿದ್ಧಾಂತವನ್ನು ಹೀಗೆ ಬದಲಾಯಿಸಲು ಹೇಗೆ ಸಾಧ್ಯ?&#8221; ಎಂದು ಖರ್ಗೆ ಪ್ರಶ್ನಿಸಿದರು.</p>



<p>ಭಾರತೀಯ ಜನತಾ ಪಕ್ಷ (ಬಿಜೆಪಿ) ಜನರನ್ನು ಮೂರ್ಖರನ್ನಾಗಿಸಲು ಜುಮ್ಲಾಗಳನ್ನು ನೀಡುತ್ತಿದೆ ಮತ್ತು ಬದಲಿಗೆ ಕಾಂಗ್ರೆಸ್ ಅನ್ನು ದೂಷಿಸುತ್ತಿದೆ ಎಂದು ಅವರು ಆರೋಪಿಸಿದರು. ಮೋದಿಯವರು ವರ್ತಮಾನವನ್ನು ಕಡೆಗಣಿಸಿ ಭೂತಕಾಲದಲ್ಲಿ ಅಥವಾ ಕಲ್ಪನೆಯ ಲೋಕದಲ್ಲಿ ಬದುಕುತ್ತಿದ್ದಾರೆ ಎಂದು ಖರ್ಗೆ ಟೀಕಿಸಿದರು. </p>



<p>ಭೂಸುಧಾರಣೆ, ಬ್ಯಾಂಕ್‌ಗಳ ರಾಷ್ಟ್ರೀಕರಣ, ಎಂಎನ್‌ಆರ್‌ಇಜಿಎ, ಆಹಾರ ಭದ್ರತಾ ಕಾಯ್ದೆ ಮತ್ತು ಶಿಕ್ಷಣದ ಹಕ್ಕು ಮುಂತಾದ ಬಡವರ ಸ್ಥಿತಿಯನ್ನು ಸುಧಾರಿಸಿದ ಕೆಲಸಗಳ ಮಹತ್ವವನ್ನು ಕಾಂಗ್ರೆಸ್ ನಾಯಕ ಒತ್ತಿ ಹೇಳಿದರು . ಇಂದು ಭಾರತೀಯ ಸಂವಿಧಾನ ಅಪಾಯದಲ್ಲಿದೆ ಎಂದು ಆರೋಪಿಸಿದ ಅವರು, ಬಿಜೆಪಿ ಮೀಸಲಾತಿ ಮತ್ತು ಜಾತಿ ಗಣತಿಯ ವಿರುದ್ಧವಾಗಿದೆ ಎಂದರು.</p>



<p>ನೆಹರೂ ಬಗ್ಗೆ ಸತ್ಯವನ್ನು ತಿರುಚಿ ನೆಹರು-ಗಾಂಧಿ ಕುಟುಂಬವನ್ನು ಅವಮಾನಿಸಿದ್ದಕ್ಕಾಗಿ ಪ್ರಧಾನಿ ಮೋದಿ ಕ್ಷಮೆಯಾಚಿಸಬೇಕು ಎಂದು ಖರ್ಗೆ ಒತ್ತಾಯಿಸಿದರು. ಆರ್‌ಎಸ್‌ಎಸ್ ಮತ್ತು ಜನಸಂಘದ ವಿರೋಧದ ನಡುವೆಯೂ ಮಹಿಳೆಯರಿಗೆ ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕು ಮತ್ತು ಮತದಾನದ ಹಕ್ಕುಗಳನ್ನು ನೀಡುವಲ್ಲಿ ಭಾರತದ ಸಾಧನೆಯನ್ನು ಅವರು ಎತ್ತಿ ತೋರಿಸಿದರು.</p>



<p>“ನೀವು ಪಂಡಿತ್ ಜವಾಹರಲಾಲ್ ನೆಹರು ಹೆಸರಿನಲ್ಲಿ ಎಲ್ಲರನ್ನೂ ಅವಮಾನಿಸುತ್ತಿದ್ದೀರಿ. ಅವರ ಜೊತೆ ಸರ್ದಾರ್ ಪಟೇಲ್ ಕೂಡ ಇದ್ದರು, ಅಂಬೇಡ್ಕರ್ ಕೂಡ ಇದ್ದರು. ನೆಹರೂಜಿಯವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು, ಮೋದಿಜಿಯವರು ತಮ್ಮ ಭಾಷಣದಲ್ಲಿ ನೆಹರೂಜಿಯವರ ಮಾನಹಾನಿ ಮಾಡುವ ಉದ್ದೇಶದಿಂದ ಸತ್ಯವನ್ನು ತಿರುಚುವ ಮೂಲಕ ನೆಹರೂಜಿಯವರ ಬಗ್ಗೆ ಪ್ರಸ್ತಾಪಿಸಿದ್ದರು, ಅದಕ್ಕಾಗಿ ಅವರು ದೇಶದ ಕ್ಷಮೆಯಾಚಿಸಬೇಕು. ಇದು ನನ್ನ ಬೇಡಿಕೆಯಾಗಿದೆ,&#8221; ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.</p>



<p>“ಹಲವು ಶಕ್ತಿಶಾಲಿ ದೇಶಗಳು ಸಾರ್ವತ್ರಿಕ ವಯಸ್ಕರ ಫ್ರಾಂಚೈಸಿಯನ್ನು ಹೊಂದಿರಲಿಲ್ಲ, ಮಹಿಳೆಯರಿಗೆ ಮತದಾನದ ಹಕ್ಕನ್ನು ಹೊಂದಿರಲಿಲ್ಲ, ಆ ಸಮಯದಲ್ಲಿ ಭಾರತವು ಸಾರ್ವತ್ರಿಕ ವಯಸ್ಕರ ಫ್ರಾಂಚೈಸ್ ಅನ್ನು ನೀಡಿತು, ಮಹಿಳೆಯರಿಗೆ ಮತದಾನದ ಹಕ್ಕುಗಳನ್ನು ನೀಡಲಾಯಿತು. ಇದನ್ನು ಕಾಂಗ್ರೆಸ್ ಮಾಡಿದೆ, ಆದರೆ ಆರ್‌ಎಸ್‌ಎಸ್ ಮತ್ತು  ಜನಸಂಘ ಸಂವಿಧಾನವನ್ನು ವಿರೋಧಿಸಿದೆ,&#8221; ಎಂದರು.</p>



<p>ಬಾಂಗ್ಲಾ ವಿಮೋಚನಾ ಯುದ್ಧದ ಸಂದರ್ಭದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರವನ್ನು ಬಿಜೆಪಿಗೆ ನೆನಪಿಸಿದ ಅವರು, ನೆರೆಯ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಮೇಲೆ ನಡೆದ ದೌರ್ಜನ್ಯಗಳ ವಿರುದ್ಧ ಮೋದಿ ನೇತೃತ್ವದ ಸರ್ಕಾರವು ಧ್ವನಿ ಎತ್ತುವಂತೆ ಒತ್ತಾಯಿಸಿದರು.</p>



<p>“ನಮ್ಮ ವೀರ ನಾಯಕಿ ಇಂದಿರಾಗಾಂಧಿಯವರು ಪಾಕಿಸ್ತಾನವನ್ನು ಎರಡು ಭಾಗ ಮಾಡಿ ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಿದರು. ಆಗ ಈ ದೇಶದ ಹೆಮ್ಮೆ ಪ್ರಪಂಚದಾದ್ಯಂತ ಹರಡಿತು. ಅಲ್ಲಿ (ಬಾಂಗ್ಲಾದೇಶದಲ್ಲಿ) ನಡೆಯುತ್ತಿರುವ ಅವ್ಯವಸ್ಥೆಯ ಬಗ್ಗೆ, ಕನಿಷ್ಠ ಈ (ಬಿಜೆಪಿ) ಜನ ತಮ್ಮ ಕಣ್ಣು ತೆರೆಯಬೇಕು ಮತ್ತು ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳು ಮತ್ತು ಕ್ರಿಶ್ಚಿಯನ್ನರನ್ನು ಉಳಿಸಲು ಪ್ರಯತ್ನಿಸಬೇಕು,&#8221; ಎಂದು ಖರ್ಗೆ ಹೇಳಿದರು.</p>
]]></content:encoded>
					
		
		
			</item>
		<item>
		<title>ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಪಾಲಿಸಿ: ಶಾಸಕ ಸ್ವರೂಪ್ ಪ್ರಕಾಶ್</title>
		<link>https://peepalmedia.com/follow-ambedkars-ideals-mla-swaroop-prakash/</link>
		
		<dc:creator><![CDATA[ರಮೇಶ್‌ ಹಾಸನ್‌]]></dc:creator>
		<pubDate>Fri, 06 Dec 2024 18:41:04 +0000</pubDate>
				<category><![CDATA[ಹಾಸನ]]></category>
		<category><![CDATA[Ambedkar]]></category>
		<category><![CDATA[constitution]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=50326</guid>

					<description><![CDATA[ಹಾಸನ: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೬೩ನೇ ಪರಿನಿರ್ವಣ ದಿನದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಸ್ಮರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಪ್ರತಿಮೆ ಹಾಗೂ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ನೆರವೇರಿಸಿದರು. &#160;&#160;&#160;&#160; ನಂತರ ಉದ್ದೇಶಿಸಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯುವ ಮೂಲಕ ಎಲ್ಲರೂ ಅವರ ತತ್ವ ಆದರ್ಶಗಳನ್ನು ಪಾಲಿಸೋಣ. ಭಾರತ ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡುವ ಮೂಲಕ ವಿಶ್ವಕ್ಕೆ ಮಾದರಿ [&#8230;]]]></description>
										<content:encoded><![CDATA[
<p></p>



<p>ಹಾಸನ: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೬೩ನೇ ಪರಿನಿರ್ವಣ ದಿನದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಸ್ಮರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಪ್ರತಿಮೆ ಹಾಗೂ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ನೆರವೇರಿಸಿದರು.</p>





<p>&nbsp;&nbsp;&nbsp;&nbsp; ನಂತರ ಉದ್ದೇಶಿಸಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯುವ ಮೂಲಕ ಎಲ್ಲರೂ ಅವರ ತತ್ವ ಆದರ್ಶಗಳನ್ನು ಪಾಲಿಸೋಣ. ಭಾರತ ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡುವ ಮೂಲಕ ವಿಶ್ವಕ್ಕೆ ಮಾದರಿ ಯಾಗಿರುವ ಅಂಬೇಡ್ಕರ್ ಅವರು ಮಹಿಳೆಯರಿಗೆ, ದೀನ ದಲಿತರಿಗೆ ಸ್ವಾಭಿಮಾನದ ಬದುಕನ್ನು ಕಲ್ಪಿಸಿ ಕೊಟ್ಟಿದ್ದಾರೆ. ಬದುಕಿನುದ್ದಕ್ಕೂ ಎಲ್ಲರಿಗೂ ಸಮಾನತೆ ಕಲ್ಪಿಸಿಕೊಡಲು ಹೋರಾಟ ಮಾಡಿದ ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೊನೆಯ ದಿನಗಳಲ್ಲಿ ಈ ಹಿಂದೂ ಧರ್ಮ ತೇಜಿಸಿ ವಿಶ್ವಕ್ಕೆ ಶಾಂತಿ ಸಂದೇಶ ನೀಡಿದ ಬೌದ್ಧ ಧರ್ಮ ಸ್ವೀಕಾರ ಮಾಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.</p>



<p>&nbsp;&nbsp;&nbsp;&nbsp; ಈ ಸಂದರ್ಭದಲ್ಲಿ ಜೆಡಿಎಸ್ ವಕ್ತಾರ ಹೊಂಗೆರೆ ರಘು, ದಲಿತ ಮುಖಂಡ ಕೃಷ್ಣದಾಸ್, ಹೆಚ್.ಕೆ. ಸಂದೇಶ್, ಅರುಣ್ ಜಯರಾಮ್, &nbsp;ಇತರರು ಉಪಸ್ಥಿತರಿದ್ದರು.</p>
]]></content:encoded>
					
		
		
			</item>
		<item>
		<title>ಸಂವಿಧಾನ ಬದಲಾಯಿಸುತ್ತೇವೆ ಎಂದ ಬಿಜೆಪಿಯನ್ನೇ ಜನ ಬದಲಾಯಿಸಿದರು: ಡಿಸಿಎಂ ಡಿ.ಕೆ.ಶಿವಕುಮಾರ್</title>
		<link>https://peepalmedia.com/people-changed-the-bjp-which-said-it-would-change-the-constitution-d-k-shivakumar/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 26 Nov 2024 09:45:55 +0000</pubDate>
				<category><![CDATA[ರಾಜಕೀಯ]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[constitution]]></category>
		<category><![CDATA[constitution day]]></category>
		<category><![CDATA[democracy]]></category>
		<category><![CDATA[dk shivakumar]]></category>
		<guid isPermaLink="false">https://peepalmedia.com/?p=49632</guid>

					<description><![CDATA[ಬೆಂಗಳೂರು, ನ.26: “ಸಂವಿಧಾನವನ್ನು ಕಿತ್ತು ಹಾಕುತ್ತೇವೆ, ಹರಿದು ಹಾಕುತ್ತೇವೆ, ಬದಲಾಯಿಸುತ್ತೇವೆ ಎಂದು ಬಿಜೆಪಿಯವರನ್ನೇ ಜನರು ಬದಲಾಯಿಸಿದರು. ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿದವರೆಲ್ಲ ಮನೆಗೆ ಹೋಗಿದ್ದಾರೆ&#8221; ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ನಗರದ ವಸಂತ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ʼಸಂವಿಧಾನ ದಿನಾಚರಣೆʼಯಲ್ಲಿ ಮಾತನಾಡಿದ ಅವರು, &#8220;ಸಂವಿಧಾನದ ಬದಲಾವಣೆ ಬಗ್ಗೆ ಮಾತನಾಡಿದ ಬಿಜೆಪಿಯವರಿಗೆ ತಿರುಗೇಟು ನೀಡಲು ರಾಹುಲ್ ಗಾಂಧಿ ಅವರು ತಮ್ಮ ಎಲ್ಲಾ ಭಾಷಣದ ವೇಳೆಯೂ ಸಂವಿಧಾನದ ಪ್ರತಿ ಹಿಡಿದು ಮಾತು ಪ್ರಾರಂಭಿಸುತ್ತಿದ್ದರು. ಇದರಿಂದ [&#8230;]]]></description>
										<content:encoded><![CDATA[
<p><strong>ಬೆಂಗಳೂರು, ನ.26: </strong>“ಸಂವಿಧಾನವನ್ನು ಕಿತ್ತು ಹಾಕುತ್ತೇವೆ, ಹರಿದು ಹಾಕುತ್ತೇವೆ, ಬದಲಾಯಿಸುತ್ತೇವೆ ಎಂದು ಬಿಜೆಪಿಯವರನ್ನೇ ಜನರು ಬದಲಾಯಿಸಿದರು. ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿದವರೆಲ್ಲ ಮನೆಗೆ ಹೋಗಿದ್ದಾರೆ&#8221; ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.</p>



<p>ನಗರದ ವಸಂತ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ʼಸಂವಿಧಾನ ದಿನಾಚರಣೆʼಯಲ್ಲಿ ಮಾತನಾಡಿದ ಅವರು, &#8220;ಸಂವಿಧಾನದ ಬದಲಾವಣೆ ಬಗ್ಗೆ ಮಾತನಾಡಿದ ಬಿಜೆಪಿಯವರಿಗೆ ತಿರುಗೇಟು ನೀಡಲು ರಾಹುಲ್ ಗಾಂಧಿ ಅವರು ತಮ್ಮ ಎಲ್ಲಾ ಭಾಷಣದ ವೇಳೆಯೂ ಸಂವಿಧಾನದ ಪ್ರತಿ ಹಿಡಿದು ಮಾತು ಪ್ರಾರಂಭಿಸುತ್ತಿದ್ದರು. ಇದರಿಂದ ಪ್ರಧಾನ ಮಂತ್ರಿಗಳು ಸಂವಿಧಾನ ಪ್ರತಿಗೆ ನಮಸ್ಕರಿಸಿ ಪ್ರಮಾಣ ವಚನ ತೆಗೆದುಕೊಳ್ಳುವಂತಹ ಸಂದರ್ಭ ಸೃಷ್ಟಿಯಾಯಿತು. ನಮ್ಮ ಇಂಡಿಯಾ ಒಕ್ಕೂಟದ ಸಂಸದರು ಸಂವಿಧಾನದ ಪ್ರತಿ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ್ದು ಇತಿಹಾಸ” ಎಂದರು.</p>



<p><strong>ಇತಿಹಾಸದಿಂದ ಪಾಠ ಕಲಿತು ಪ್ರತಿಯೊಬ್ಬರು ಸಾಕ್ಷಿಗುಡ್ಡೆಗಳನ್ನು ನಿರ್ಮಾಣ ಮಾಡಬೇಕು</strong></p>



<p>“ಹೋರಾಟ ಮಾಡದೇ ಇದ್ದರೂ ಪರವಾಗಿಲ್ಲ ಮಾರಾಟ ಮಾತ್ರ ಆಗಬೇಡ ಎನ್ನುವ ಕಿವಿಮಾತನ್ನು ರಾಜಕಾರಣಿಗಳಿಗೆ ಅಂಬೇಡ್ಕರ್ ಅವರು ಹೇಳಿದ್ದಾರೆ. ನಾವುಗಳು ಇತಿಹಾಸದಿಂದ ಪಾಠ ಕಲಿಯದೇ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ. ಆದ ಕಾರಣ ಪ್ರತಿಯೊಬ್ಬರು ಇತಿಹಾಸದಿಂದ ಪಾಠ ಕಲಿಯಬೇಕು ಎನ್ನುವ ಸಂದೇಶವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ನೀಡಿದ್ದಾರೆ” ಎಂದು ಹೇಳಿದರು.</p>



<p>“ಅನೇಕ ರಾಜ್ಯಗಳಲ್ಲಿ ಜನರಿಂದ ಆಯ್ಕೆಯಾದ ಶಾಸಕರು ಮಾರಾಟವಾಗಿರುವ ನಿದರ್ಶನಗಳನ್ನು ನೋಡಿದ್ದೇವೆ. ಇದು ನಮ್ಮೆಲ್ಲರ ಬದುಕಿಗೂ ಸಂಬಂಧ ಪಡುತ್ತದೆ ಎನ್ನುವ ಕಿವಿಮಾತನ್ನು ನಮಗೆ ಅಂಬೇಡ್ಕರ್ ಅವರು ಬಿಟ್ಟು ಹೋಗಿದ್ದಾರೆ” ಎಂದರು.</p>



<p>“ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ಧರ್ಮ ಗ್ರಂಥಗಳನ್ನು ಆಯಾಯ ಧರ್ಮದವರು ಪವಿತ್ರ ಎಂದು ಹೇಳುತ್ತಾರೆ. ಇಡೀ ಭಾರತಕ್ಕೆ ಸಂವಿಧಾನವೇ ಪವಿತ್ರ ಗ್ರಂಥ. ಇದು ನಮ್ಮೆಲ್ಲರನ್ನು ರಕ್ಷಣೆ ಮಾಡುತ್ತಿದೆ” ಎಂದು ಹೇಳಿದರು.</p>



<p><strong>ನಮ್ಮ ರಾಜಕೀಯ ಆಯಸ್ಸು ಇನ್ನು 10- 15 ವರ್ಷ</strong></p>



<p>“ನಮ್ಮ ರಾಜಕೀಯ ಆಯಸ್ಸು ಇನ್ನು 10- 15 ವರ್ಷ. ವಿದ್ಯಾರ್ಥಿಗಳು ಮುಂದಿನ 60- 70 ವರ್ಷಗಳ ಕಾಲ ಈ ದೇಶವನ್ನು ಮುನ್ನಡೆಸುವವರು. ಅವರಿಗೆ ಸಂವಿಧಾನದ ಬಗ್ಗೆ ಅಡಿಪಾಯ ಹಾಕಬೇಕು ಎನ್ನುವ ಕಾರಣಕ್ಕೆ ಜಾಗೃತಿ ಮೂಡಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಅಮೆರಿಕಾದ ಮಾಜಿ ಅಧ್ಯಕ್ಷರಾದ ಬರಾಕ್ ಬಬಾಮ ಅವರು ಭಾರತದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಹೇಳಿದ್ದಾರೆ” ಎಂದು ತಿಳಿಸಿದರು.</p>



<p>“ಕಾಂಗ್ರೆಸ್ ಪಕ್ಷ ಈ ದೇಶದ ಚುಕ್ಕಾಣಿ ಹಿಡಿದ ಸಂದರ್ಭದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾದರು. ಅಂಬೇಡ್ಕರ್ ಅವರು ಇಡೀ ಪ್ರಪಂಚವೇ ಸ್ಮರಿಸಿಕೊಳ್ಳುವಂತಹ ಮಹಾನ್ ಗ್ರಂಥ ನಮಗೆ ನೀಡಿದ್ದಾರೆ” ಎಂದು ಹೇಳಿದರು.</p>



<p><strong>ಮಹದೇವಪ್ಪ ಅವರನ್ನು ಸಂದರ್ಶಕ ಉಪನ್ಯಾಸಕರನ್ನಾಗಿ ಕಳುಹಿಸಬೇಕು</strong></p>



<p>“ಸಚಿವರಾದ ಎಚ್.ಸಿ. ಮಹದೇವಪ್ಪ ಅವರು ಸಮಾಜ ಕಲ್ಯಾಣ ಇಲಾಖೆಗೆ ಹೊಸ ರೂಪವನ್ನು ನೀಡಿದ್ದಾರೆ. ರಾಜಕೀಯದಿಂದ ನಿವೃತ್ತಿ ಪಡೆದ ಮೇಲೆ ಮಹದೇವಪ್ಪ ಅವರನ್ನು ನಮ್ಮ ವಿಶ್ವವಿದ್ಯಾನಿಲಯಗಳಿಗೆ ಸಂದರ್ಶಕ ಉಪನ್ಯಾಸಕರನ್ನಾಗಿ ಕಳುಹಿಸಬೇಕು ಎನ್ನುವ ಅಭಿಲಾಷೆ ಅವರ ಮಾತುಗಳನ್ನು ಕೇಳಿದಾಗ ಅನ್ನಿಸಿತು” ಎಂದರು.</p>



<p>“ಗುಣಕ್ಕೆ ಮತ್ಸರವಿಲ್ಲ ಎನ್ನುವ ರೀತಿ ನಮ್ಮ ಸಂವಿಧಾನವೇ ನಮ್ಮ ಧರ್ಮ. ಈ ಚಿಕ್ಕ ಮಕ್ಕಳಿಗೂ ಅರ್ಥವಾಗುವ ರೀತಿ ಅವರು ಸಂವಿಧಾನದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಸಂವಿಧಾನ ಪೀಠಿಕೆಯನ್ನು ಶಾಲಾ, ಕಾಲೇಜುಗಳಲ್ಲಿ ಪಠಿಸಬೇಕು ಎನ್ನುವ ಹೊಸ ಆಚರಣೆಗೆ ನಾಂದಿ ಹಾಡಿದವರು. ಇದಕ್ಕಾಗಿ ಅವರಿಗೆ ಅಭಿನಂದನೆ ತಿಳಿಸುತ್ತೇನೆ” ಎಂದರು.</p>



<p></p>
]]></content:encoded>
					
		
		
			</item>
		<item>
		<title>ಜ. ಕೃಷ್ಣ ಅಯ್ಯರ್ ಸಿದ್ಧಾಂತದ ಕುರಿತು ಸಿಜೆಐ ಚಂದ್ರಚೂಡ್ ಹೇಳಿಕೆಗೆ ಜ. ನಾಗರತ್ನ ಮತ್ತು ಧುಲಿಯಾ ಆಕ್ಷೇಪ</title>
		<link>https://peepalmedia.com/justices-nagarathna-dhulias-objected-to-cji-chandrachuds-remarks-on-justice-krishna-iyer/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 05 Nov 2024 16:01:31 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[CJI Chandrachud]]></category>
		<category><![CDATA[constitution]]></category>
		<category><![CDATA[law]]></category>
		<category><![CDATA[legal]]></category>
		<category><![CDATA[nagarathna]]></category>
		<category><![CDATA[Supreme Court]]></category>
		<guid isPermaLink="false">https://peepalmedia.com/?p=48383</guid>

					<description><![CDATA[ಆರ್ಟಿಕಲ್ 39 (ಬಿ) ಗೆ ಸಂಬಂಧಿಸಿದ ಪ್ರಕರಣದ ತಮ್ಮ ತೀರ್ಪುಗಳಲ್ಲಿ, ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಸುಧಾಂಶು ಧುಲಿಯಾ ಅವರು ನ್ಯಾಯಮೂರ್ತಿ ಕೃಷ್ಣಯ್ಯರ್ ಸಿದ್ಧಾಂತದ ವಿರುದ್ಧ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮಾಡಿದ ಟೀಕೆಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರ ಬಗ್ಗೆ ಸಿಜೆಐ ಚಂದ್ರಚೂಡ್ ಅವರ ಕಾಮೆಂಟ್‌ಗಳನ್ನು ನ್ಯಾಯಮೂರ್ತಿ ನಾಗರತ್ನ ಅವರು &#8220;ಅನರ್ಜಿತ ಮತ್ತು ನ್ಯಾಯಸಮ್ಮತವಲ್ಲದ&#8221; ಎಂದು ಹೇಳಿದರೆ, ನ್ಯಾಯಮೂರ್ತಿ ಧುಲಿಯಾ ಅವರು ಸಿಜೆಐ ಅವರ ಟೀಕೆ &#8220;ಒರಟು&#8221;, ಈ ಹೇಳಿಕೆ [&#8230;]]]></description>
										<content:encoded><![CDATA[
<p>ಆರ್ಟಿಕಲ್ 39 (ಬಿ) ಗೆ ಸಂಬಂಧಿಸಿದ ಪ್ರಕರಣದ ತಮ್ಮ ತೀರ್ಪುಗಳಲ್ಲಿ, ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಸುಧಾಂಶು ಧುಲಿಯಾ ಅವರು ನ್ಯಾಯಮೂರ್ತಿ ಕೃಷ್ಣಯ್ಯರ್ ಸಿದ್ಧಾಂತದ ವಿರುದ್ಧ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮಾಡಿದ ಟೀಕೆಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.</p>



<p>ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರ ಬಗ್ಗೆ ಸಿಜೆಐ ಚಂದ್ರಚೂಡ್ ಅವರ ಕಾಮೆಂಟ್‌ಗಳನ್ನು ನ್ಯಾಯಮೂರ್ತಿ ನಾಗರತ್ನ ಅವರು &#8220;ಅನರ್ಜಿತ ಮತ್ತು ನ್ಯಾಯಸಮ್ಮತವಲ್ಲದ&#8221; ಎಂದು ಹೇಳಿದರೆ, ನ್ಯಾಯಮೂರ್ತಿ ಧುಲಿಯಾ ಅವರು ಸಿಜೆಐ ಅವರ ಟೀಕೆ &#8220;ಒರಟು&#8221;, ಈ ಹೇಳಿಕೆ ನೀಡುವುದನ್ನು &#8220;ತಪ್ಪಿಸಬಹುದಿತ್ತು&#8221; ಎಂದು ಹೇಳಿದರು.</p>



<p><strong>ಸಿಜೆಐ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಬಿವಿ ನಾಗರತ್ನ, ಸುಧಾಂಶು ಧುಲಿಯಾ, ಜೆಬಿ ಪರ್ದಿವಾಲಾ, ಮನೋಜ್ ಮಿಶ್ರಾ, ರಾಜೇಶ್ ಬಿಂದಾಲ್, ಸತೀಶ್ ಚಂದ್ರ ಶರ್ಮಾ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್</strong> ಅವರನ್ನೊಳಗೊಂಡ 9 ನ್ಯಾಯಾಧೀಶರ ಪೀಠವು ಖಾಸಗಿ ಒಡೆತನದ ಸಂಪನ್ಮೂಲಗಳು ಸಂವಿಧಾನದ ಪರಿಚ್ಛೇದ 39(ಬಿ) ಪ್ರಕಾರ ಸಾಮಾನ್ಯ ಒಳಿತಿಗಾಗಿ ವಿತರಿಸಲು ಸರ್ಕಾರದ ಬಾಧ್ಯತೆ ಹೊಂದಿರುವ &#8220;ಸಮುದಾಯದ ವಸ್ತು ಸಂಪನ್ಮೂಲಗಳ &#8211; material resources of community&#8221; ವ್ಯಾಪ್ತಿಗೆ ಬರುತ್ತವೆಯೇ ಎಂಬುದರ ಕುರಿತು ಉಲ್ಲೇಖವನ್ನು ನಿರ್ಧರಿಸುತ್ತಿತ್ತು. </p>



<p>ಬಹುಮತದ ತೀರ್ಪನ್ನು ಬರೆದ CJI ಚಂದ್ರಚೂಡ್, <em>ಕರ್ನಾಟಕ ರಾಜ್ಯ ವರ್ಸಸ್ ರಂಗನಾಥ ರೆಡ್ಡಿ</em> (1978) 1 SCR 641 ರಲ್ಲಿ ಖಾಸಗಿ ಆಸ್ತಿಗಳು ಸಹ &#8220;ಸಮುದಾಯದ ವಸ್ತು ಸಂಪನ್ಮೂಲಗಳ&#8221; ಒಳಗೆ ಬರುತ್ತವೆ ಎಂಬ ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಒಪ್ಪಲಿಲ್ಲ. </p>



<p><br>ಸಿಜೆಐ ಬರೆದ ಬಹುಮತದ ತೀರ್ಪು <em>ಸಂಜೀವ್ ಕೋಕ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ ವರ್ಸಸ್ ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್ ಮತ್ತು Anr</em>‌ <em>(1983) 1 SCR 1000</em> ನಲ್ಲಿ ನ್ಯಾಯಮೂರ್ತಿ ಒ ಚಿನ್ನಪ್ಪ ರೆಡ್ಡಿ ಅವರು ನೀಡದ ತೀರ್ಪನ್ನು ತಪ್ಪಾಗಿದೆ ಎಂದು ಹೇಳಿದೆ. <br>ಒ ಚಿನ್ನಪ್ಪ ರೆಡ್ಡಿ ತೀರ್ಪು ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರ ದೃಷ್ಟಿಕೋನವನ್ನು ಅನುಮೋದಿಸಿತ್ತು.</p>



<p>ಎಲ್ಲಾ ಸಂಪನ್ಮೂಲಗಳು-ಖಾಸಗಿಯಾಗಲಿ ಅಥವಾ ಸಾರ್ವಜನಿಕವಾಗಲಿ-ಸಮುದಾಯದ ವಸ್ತು ಸಂಪನ್ಮೂಲಗಳಾಗಿರಬಹುದು ಎಂದು ಪ್ರತಿಪಾದಿಸಿದ ನ್ಯಾಯಮೂರ್ತಿ ನಾಗರತ್ನ ಅವರು ನ್ಯಾಯಮೂರ್ತಿ ಕೃಷ್ಣ  ಅಯ್ಯರ್ ಕುರಿತು ಸಿಜೆಐ ನೀಡಿದ ಹೇಳಿಕೆಗೆ ತಮ್ಮ ಆಕ್ಷೇಪಣೆಯನ್ನು ದಾಖಲಿಸಿದ್ದಾರೆ. ನ್ಯಾಯಮೂರ್ತಿಗಳಾದ ಕೃಷ್ಣ ಅಯ್ಯರ್ ಮತ್ತು ಚಿನ್ನಪ್ಪ ರೆಡ್ಡಿ ಅವರು &#8220;ನಿರ್ದಿಷ್ಟ ಆರ್ಥಿಕ ಸಿದ್ಧಾಂತ&#8221; ದಿಂದ ಪ್ರಭಾವಿತರಾಗಿದ್ದಾರೆ ಎಂದು ಸಿಜೆಐ ಚಂದ್ರಚೂಡ್ ಹೇಳಿರುವುದನ್ನು ನ್ಯಾಯಮೂರ್ತಿ ನಾಗರತ್ನ ಆಕ್ಷೇಪಿಸಿದರು. ಇಬ್ಬರೂ ನ್ಯಾಯಾಧೀಶರು ತಮ್ಮ ಅಭಿಪ್ರಾಯಗಳನ್ನು ಮುಂದಿಡುವಾಗಲೂ ಸಂವಿಧಾನ ನಿರ್ಮಾತೃಗಳ ದೃಷ್ಟಿಕೋನವನ್ನು ನಿರಂತರವಾಗಿ ಉಲ್ಲೇಖಿಸಿದ್ದಾರೆ ಎಂದು ಅವರು ನಾಗರತ್ಹೇನ ಳಿದರು.</p>



<p>ಸಿಜೆಐ ಚಂದ್ರಚೂಡ್ ಅವರ ಹೇಳಿಕೆ: <em>&#8220;.. ಈ ನ್ಯಾಯಾಲಯದ ಪಾತ್ರವು ಆರ್ಥಿಕ ನೀತಿಯನ್ನು ಹಾಕುವುದಲ್ಲ, ಆದರೆ &#8220;ಆರ್ಥಿಕ ಪ್ರಜಾಪ್ರಭುತ್ವ&#8221; ಕ್ಕೆ ಅಡಿಪಾಯ ಹಾಕುವ ರಚನಕಾರರ ಈ ಉದ್ದೇಶವನ್ನು ಸುಗಮಗೊಳಿಸುವುದು. ಕೃಷ್ಣಯ್ಯರ್ ಸಿದ್ಧಾಂತವು ಸಂವಿಧಾನ ವಿಶಾಲ ಮತ್ತು ಹೊಂದಿಕೊಳ್ಳುವ ಮನೋಭಾವಕ್ಕೆ ಹಾನಿ ಮಾಡುತ್ತದೆ. .&#8221;</em></p>



<p>ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರ ವಿಶಾಲವಾದ ವ್ಯಾಖ್ಯಾನಗಳನ್ನು ಆಗ ಚಾಲ್ತಿಯಲ್ಲಿದ್ದ ಸಾಮಾಜಿಕ, ಆರ್ಥಿಕ ಮತ್ತು ಸಾಂವಿಧಾನಿಕ ಸಂಸ್ಕೃತಿಯ ಹಿನ್ನೆಲೆಯಲ್ಲಿ ನೋಡಬೇಕು ಎಂದು ಹೇಳಿರುವ ನ್ಯಾಯಮೂರ್ತಿ ನಾಗರತ್ನ್ ಅವರು ನಿರ್ದಿಷ್ಟ ತೀರ್ಪನ್ನು ತಲುಪಲು ಮಾಜಿ ನ್ಯಾಯಾಧೀಶರ ವೈಯಕ್ತಿಕ ನಿಂದನೆ ಮಾಡಬಹುದೇ ಎಂದು ಕೇಳಿದ್ದಾರೆ.</p>



<p><em>&#8220;ಏನೇ ಇರಲಿ, ಸಂವಿಧಾನ ಸಭೆಯಲ್ಲಿನ ಚರ್ಚೆಗಳು ಮತ್ತು ಆರ್ಥಿಕ ಪ್ರಜಾಪ್ರಭುತ್ವದ ವಿಶಾಲವಾದ ಹೌಸ್‌ನಲ್ಲಿ ಕಾನೂನುಬದ್ಧ ರಾಜ್ಯ ನೀತಿಯನ್ನು ಕಂಡುಕೊಂಡ ಸಮಯದ ಏರಿಳಿತದ ಸಮಗ್ರ ತಿಳುವಳಿಕೆಯಿಂದ, ನಾವು ಮಾಜಿ ನ್ಯಾಯಾಧೀಶರನ್ನು ದೂಷಿಸಬಹುದೇ ಮತ್ತು &#8220;ಅಪರಾಧ&#8221; ಎಂದು ಆರೋಪಿಸಬಹುದೇ? ಇದರಿಂದ ನಿರ್ದಿಷ್ಟ ಅರ್ಥವಿವರಣೆಯ ಫಲಿತಾಂಶವನ್ನು ತಲುಪಲು ಮಾತ್ರವೇ?&#8221;.</em></p>



<p>ಸಿಜೆಐ ಚಂದ್ರಚೂಡ್ ಅವರು <em>&#8220;ಕೃಷ್ಣ ಅಯ್ಯರ್ ವಿಧಾನದಲ್ಲಿನ ಸೈದ್ಧಾಂತಿಕ ದೋಷವು ಕಠಿಣ ಆರ್ಥಿಕ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ, ಇದು ಸಾಂವಿಧಾನಿಕ ಆಡಳಿತಕ್ಕೆ ವಿಶೇಷ ಆಧಾರವಾಗಿ ಖಾಸಗಿ ಸಂಪನ್ಮೂಲಗಳ ಮೇಲೆ ಹೆಚ್ಚಿನ ಸರ್ಕಾರಿ ನಿಯಂತ್ರಣವನ್ನು ಪ್ರತಿಪಾದಿಸುತ್ತದೆ. &#8230; ರಾಜ್ಯವು ಖಾಸಗಿ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಅಂತಿಮ ಗುರಿಯಾಗಿ ಪರಿಗಣಿಸುವ ಏಕೈಕ ಆರ್ಥಿಕ ಸಿದ್ಧಾಂತವು ನಮ್ಮ ಸಾಂವಿಧಾನಿಕ ಚೌಕಟ್ಟಿನ ಫ್ಯಾಬ್ರಿಕ್ ಮತ್ತು ತತ್ವಗಳನ್ನು ದುರ್ಬಲಗೊಳಿಸುತ್ತದೆ</em>,&#8221; ಎಂದು ಹೇಳಿದ್ದಾರೆ. ಇವರ ಈ ಕೆಳಗಿನ ಅವಲೋಕನವನ್ನು ನ್ಯಾಯಮೂರ್ತಿ ನಾಗರತ್ನ ಅವರು &#8220;ಅನರ್ಜಿತ ಮತ್ತು ನ್ಯಾಯಸಮ್ಮತವಲ್ಲದ&#8221; ಎಂದು ಹೇಳಿದ್ದಾರೆ:</p>



<p><strong>ಇಂದಿನ ಆರ್ಥಿಕ ನೀತಿಗಳಲ್ಲಿನ ಬದಲಾವಣೆಗಳ ಆಧಾರದ ಮೇಲೆ ಹಿಂದಿನ ನ್ಯಾಯಾಧೀಶರನ್ನು ಕಳಂಕಗೊಳಿಸಲು ಸಾಧ್ಯವಿಲ್ಲ</strong></p>



<p>ನ್ಯಾಯಮೂರ್ತಿ ನಾಗರತ್ನ ಅವರು ತಮ್ಮ ಭಿನ್ನಾಭಿಪ್ರಾಯವನ್ನು ಈ ಕೆಳಗಿನಂತಿದೆ:</p>



<p><em>&#8220;It is a matter of concern as to how the judicial brethren of posterity view the judgments of the brethren of the past, possibly by losing sight of the times in which the latter discharged their duties and the socio-economic policies that were pursued by the State and formed part of the constitutional culture during those times. Merely because of the paradigm shift in the economic policies of the State to globalisation and liberalisation and privatisation, compendiously called the “Reforms of 1991”, which continue to do so till date, cannot result in branding the judges of this Court of the yesteryears “as doing a disservice to the Constitution”.</em></p>



<p><em>&#8220;I may say that such observations emanating from this Court in subsequent times creates a concavity in the manner of voicing opinions on judgments of the past and their authors by holding them doing a disservice to the Constitution of India and thereby implying that they may not have been true to their oath of office as a Judge of the Supreme Court of India.</em></p>



<p><em>Of course, no particular line of thinking is static and changes are brought about by the State by bearing in mind the exigencies of the times and global impact particularly on the Indian economy. Such attempts to create an environment suitable to the changing times have to be also appreciated by the judiciary, of course, by suitably interpreting the Constitution and the laws. But by there being a paradigm shift in the economy of this Country, akin to Perestroika in the erstwhile USSR, in my view, neither the judgments of the previous decades nor the judges who decided those cases can be said to have done a “disservice to the Constitution”. The answer lies in the obligation that this Court, in particular, and the Indian judiciary, in general, has in meeting the newer challenges of the times by choosing only that part of the past wisdom which is apposite for the present without decrying the past judges.</em></p>



<p><em>ನಂತರದ ನ್ಯಾಯಾಧೀಶರು ಅದೇ ಅಭ್ಯಾಸವನ್ನು ಅನುಸರಿಸಬಾರದು ಎಂದು ನಾನು ಹೇಳುತ್ತೇನೆ. ಭಾರತದ ಸರ್ವೋಚ್ಚ ನ್ಯಾಯಾಲಯ ವೈಯಕ್ತಿಕ ನ್ಯಾಯಾಧೀಶರಿಗಿಂತ ಶ್ರೇಷ್ಠ ಎಂದು ನಾನು ಹೇಳುತ್ತೇನೆ, ಅವರು ಈ ಮಹಾನ್ ದೇಶದ ಇತಿಹಾಸದ ವಿವಿಧ ಹಂತಗಳಲ್ಲಿ ಅದರ ಭಾಗವಾಗಿದ್ದಾರೆ! ಆದ್ದರಿಂದ, ಪ್ರಸ್ತಾವಿತ ತೀರ್ಪಿನಲ್ಲಿ ಮುಖ್ಯ ನ್ಯಾಯಮೂರ್ತಿಗಳ ಅವಲೋಕನಗಳನ್ನು ನಾನು ಒಪ್ಪುವುದಿಲ್ಲ!</em></p>



<p>ನ್ಯಾಯಮೂರ್ತಿ ಧುಲಿಯಾ ಅವರು ನ್ಯಾಯಮೂರ್ತಿಗಳಾದ ಅಯ್ಯರ್ ಮತ್ತು ಚಿನಪ್ಪ ರೆಡ್ಡಿ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಅನುಮೋದಿಸುತ್ತಾ ಹೀಗೆ ಹೇಳಿದ್ದಾರೆ:</p>



<p><em>&#8220;ನಾನು ತೀರ್ಮಾನಿಸುವ ಮೊದಲು, ಕೃಷ್ಣ ಅಯ್ಯರ್ ಸಿದ್ಧಾಂತದ ಮೇಲೆ ಮಾಡಿದ ಟೀಕೆಗಳ ಬಗ್ಗೆ ನನ್ನ ಬಲವಾದ ಅಸಮ್ಮತಿಯನ್ನು ಇಲ್ಲಿ ದಾಖಲಿಸಬೇಕು. ಈ ಟೀಕೆ ಕಠೋರವಾಗಿದೆ ಮತ್ತು ಅದನ್ನು ಮಾಡಬಾರದಿತ್ತು.&#8221;</em></p>



<p><em>ಕೃಷ್ಣಯ್ಯರ್ ಸಿದ್ಧಾಂತ, ಅಥವಾ ಓ. ಚಿನ್ನಪ್ಪ ರೆಡ್ಡಿ ಸಿದ್ಧಾಂತ ಕಾನೂನು ಅಥವಾ ಜೀವನದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರುವ ಎಲ್ಲರಿಗೂ ಪರಿಚಿತವಾಗಿದೆ. ಇದು ನ್ಯಾಯೋಚಿತ ಮತ್ತು ಸಮಾನತೆಯ ಬಲವಾದ ಮಾನವತಾವಾದಿ ತತ್ವಗಳನ್ನು ಆಧರಿಸಿದೆ. ಇದು ಕರಾಳ ಕಾಲದಲ್ಲಿ ನಮ್ಮ ಮಾರ್ಗವನ್ನು ಬೆಳಗಿಸಿದ ಸಿದ್ಧಾಂತವಾಗಿದೆ. ಅವರ ತೀರ್ಪಿನ ದೀರ್ಘ ದೇಹವು ಅವರ ಸೂಕ್ಷ್ಮ ಬುದ್ಧಿಶಕ್ತಿಯ ಪ್ರತಿಬಿಂಬವಲ್ಲ ಆದರೆ ಹೆಚ್ಚು ಮುಖ್ಯವಾಗಿ ಜನರ ಬಗ್ಗೆ ಅವರ ಸಹಾನುಭೂತಿಯ ಪ್ರತಿಬಿಂಬವಾಗಿದೆ, ಏಕೆಂದರೆ ಮಾನವನು ಅವರ ನ್ಯಾಯಾಂಗ ತತ್ತ್ವಶಾಸ್ತ್ರದ ಕೇಂದ್ರವಾಗಿದೆ.</em></p>



<p>ಸಂಪಾದಕೀಯ ಟಿಪ್ಪಣಿ: ಸಿಜೆಐ ಚಂದ್ರಚೂಡ್ ಅವರ ತೀರ್ಪಿನ ಅಂತಿಮ ಆವೃತ್ತಿಯಲ್ಲಿ &#8216;ಅಪರಾಧಿ&#8217; ಹೇಳಿಕೆ ಇಲ್ಲ.</p>



<p><strong>ಪ್ರಕರಣದ ವಿವರಗಳು: </strong><strong>Property Owners Association v. State of Maharashtra (CA No.1012/2002) &amp; Other Connected Matters</strong></p>



<p><strong>Citation : 2024 LiveLaw (SC) 855</strong></p>



<p><a href="https://www.livelaw.in/pdf_upload/7862919922024-11-05-569511.pdf" target="_blank" rel="noreferrer noopener">ತೀರ್ಪನ್ನು ಓದಲು ಇಲ್ಲಿ ಕ್ಲಿಕ್ ಮಾಡಿ</a></p>



<p>(ಲೇಖನ ಕೃಪೆ: ಲೈವ್‌ ಲಾ)</p>
]]></content:encoded>
					
		
		
			</item>
		<item>
		<title>ಭಾರತ ಸಂವಿಧಾನದಲ್ಲಿ ವೈಜ್ಞಾನಿಕ ಮನೋವೃತ್ತಿ (ಅಂಕಣ)</title>
		<link>https://peepalmedia.com/scientific-mind-in-indian-constitution-column/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 06 Aug 2024 10:46:10 +0000</pubDate>
				<category><![CDATA[ಅಂಕಣ]]></category>
		<category><![CDATA[ಜನ-ಗಣ-ಮನ]]></category>
		<category><![CDATA[ದೇಶ]]></category>
		<category><![CDATA[ಸತ್ಯ ಶೋಧ]]></category>
		<category><![CDATA[bengalure]]></category>
		<category><![CDATA[constitution]]></category>
		<category><![CDATA[india]]></category>
		<category><![CDATA[indian]]></category>
		<category><![CDATA[indian constitution]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=43409</guid>

					<description><![CDATA[Scientific Temper ಎಂಬ ಪದವನ್ನು ರೂಪಿಸಿ ಮೊಟ್ಟಮೊದಲು ಬಳಸಿದ್ದು ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು. ಅವರು ಇದನ್ನು 1946ರಲ್ಲಿ  ತಮ್ಮ “ಡಿಸ್ಕವರಿ ಆಫ್ ಇಂಡಿಯಾ” ಕೃತಿಯಲ್ಲಿ ಬಳಸಿದ್ದಾರೆ. ಅಲ್ಲಿ ಅವರು “ಸೈಂಟಿಫಿಕ್ ಟೆಂಪರ್” ಎಂದರೇನು ಎಂದೂ ವ್ಯಾಖ್ಯಾನಿಸಿದ್ದಾರೆ. “The Scientific Temper is a way of life (defined in this context as an individual and social process of thinking and acting) which uses the [&#8230;]]]></description>
										<content:encoded><![CDATA[
<ul class="wp-block-list">
<li><strong>ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಷ</strong></li>
</ul>



<p><strong><em>Scientific Temper </em></strong>ಎಂಬ ಪದವನ್ನು ರೂಪಿಸಿ ಮೊಟ್ಟಮೊದಲು ಬಳಸಿದ್ದು ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು. ಅವರು ಇದನ್ನು 1946ರಲ್ಲಿ  ತಮ್ಮ “ಡಿಸ್ಕವರಿ ಆಫ್ ಇಂಡಿಯಾ” ಕೃತಿಯಲ್ಲಿ ಬಳಸಿದ್ದಾರೆ. ಅಲ್ಲಿ ಅವರು “ಸೈಂಟಿಫಿಕ್ ಟೆಂಪರ್” ಎಂದರೇನು ಎಂದೂ ವ್ಯಾಖ್ಯಾನಿಸಿದ್ದಾರೆ.</p>



<p><em>“The Scientific Temper is a way of life (defined in this context as an individual and social process of thinking and acting) which uses the scientific method and which may, consequently, include questioning, observing physical reality, testing, hypothesizing, analyzing, and communicating (not necessarily in that order).</em></p>



<p>ಸರಳವಾಗಿ ಹೇಳುವುದಾದರೆ,<em>“ಪ್ರಶ್ನೆ, ಭೌತಿಕ ವಾಸ್ತವದ ಅವಲೋಕನ, ಪರೀಕ್ಷೆ, ಪರಿಕಲ್ಪನೆ, ವಿಶ್ಲೇಷಣೆ ಇವುಗಳನ್ನು ಒಳಗೊಂಡ ವಿಜ್ಞಾನ ವಿಧಾನವನ್ನು ಬಳಸುವ ಆಲೋಚನೆ ಮತ್ತು ಆಚರಣೆಯ ವೈಯಕ್ತಿಕ ಮತ್ತು ಸಾಮಾಜಿಕ ಪ್ರಕ್ರಿಯೆ.”</em>ಇಲ್ಲಿ ಆಲೋಚನೆ ಮತ್ತು ಆಚರಣೆ ಎರಡರಲ್ಲಿಯೂ ಇದು ಕಂಡುಬಂದ ವೈಜ್ಞಾನಿಕ ಮನೋವೃತ್ತಿ ಸಾರ್ಥಕ, ಮತ್ತು ಇದು ವೈಯಕ್ತಿಕ ನೆಲೆಯಲ್ಲಷ್ಟೇ ಅಲ್ಲ, ಸಾಮಾಜಿಕ, ರಾಜಕೀಯ ನೆಲೆಯಲ್ಲಿಯೂ ಕಂಡುಬರಬೇಕು ಎಂಬ ಮಾತನ್ನು ಹೇಳಿರುವುದು ಅರ್ಥಪೂರ್ಣವಾಗಿದೆ.</p>



<figure class="wp-block-image size-large"><img fetchpriority="high" decoding="async" width="1024" height="1024" src="https://peepalmedia.com/wp-content/uploads/2024/08/01-1024x1024.jpg" alt="" class="wp-image-43410" srcset="https://peepalmedia.com/wp-content/uploads/2024/08/01-1024x1024.jpg 1024w, https://peepalmedia.com/wp-content/uploads/2024/08/01-300x300.jpg 300w, https://peepalmedia.com/wp-content/uploads/2024/08/01-150x150.jpg 150w, https://peepalmedia.com/wp-content/uploads/2024/08/01-768x769.jpg 768w, https://peepalmedia.com/wp-content/uploads/2024/08/01-1534x1536.jpg 1534w, https://peepalmedia.com/wp-content/uploads/2024/08/01-2046x2048.jpg 2046w, https://peepalmedia.com/wp-content/uploads/2024/08/01-696x697.jpg 696w, https://peepalmedia.com/wp-content/uploads/2024/08/01-1068x1069.jpg 1068w, https://peepalmedia.com/wp-content/uploads/2024/08/01-1920x1922.jpg 1920w" sizes="(max-width: 1024px) 100vw, 1024px" /></figure>



<p>ನೆಹರು ಅವರು ಆರಂಭದಿಂದಲೂ ವೈಜ್ಞಾನಿಕ ಮನೋವೃತ್ತಿ ಉಳ್ಳವರಾಗಿದ್ದರು. ಅವರಿಗೆ ದೇವರಲ್ಲಿ ನಂಬಿಕೆ ಇರಲಿಲ್ಲ. ದೇವಸ್ಥಾನಗಳಿಂದ ಬಲುದೂರ. ಈ ಕುರಿತು ಮಹಾತ್ಮ ಗಾಂಧಿಯವರಿಗೆ ಇದ್ದ ನಂಬಿಕೆಗಳನ್ನೂ ಅವರು ಟೀಕಿಸುತ್ತಿದ್ದರು. ಹೀಗಾಗಿ ತಮ್ಮ “Discovery of India” – “ಭಾರತ ದರ್ಶನ”ದಲ್ಲಿ ಅವರು ವೈಜ್ಞಾನಿಕ ಮನೋವೃತ್ತಿಯ ಕುರಿತು ವಿಶದವಾಗಿ ವಿಶ್ಲೇಷಿಸಿದ್ದಾರೆ. 1928ರಲ್ಲಿ,&nbsp; ಮಸ್ಸೌರಿಯಲ್ಲಿ ಓದುತ್ತಿದ್ದ 10 ವರ್ಷದ ಮಗಳು ಇಂದಿರಾ ಪ್ರಿಯದರ್ಶಿನಿಗೆ ಅವರು 30 ಪತ್ರಗಳನ್ನು ಬರೆಯುತ್ತಾರೆ; ಅವು ಹೇಗಿದ್ದೀಯ, ಚೆನ್ನಾಗಿದ್ದೀಯಾ ಎನ್ನುವ ರೀತಿಯ ತಂದೆ ಮಗಳಿಗೆ ಬರೆದ ಮುದ್ದಿನ ಪತ್ರಗಳಲ್ಲ; ಬದಲಿಗೆ, “ಬುಕ್ ಆಫ್ ನೇಚರ್” ಎಂಬ ಮೊದಲ ಪತ್ರದಿಂದ ಆರಂಭಿಸಿ ನೆಹರು ಅವರು&nbsp; ಭೂಮಿಯಲ್ಲಿ ಜೀವದ ಉಗಮ ಹೇಗಾಯಿತು ಎಂದು ಬರೆಯುತ್ತಾರೆ. ನಂತರ ಒಂದೊಂದೇ ಪತ್ರದಲ್ಲಿ ಜೀವ ವಿಕಾಸ, ಪುರಾಣಗಳು, ಭಾಷೆಗಳು, ವಾಣಿಜ್ಯ, ಭೋಗೋಳ, ವಿಜ್ಞಾನ ಇತ್ಯಾದಿ ವಿವಿಧ ವಿಷಯಗಳ ಕುರಿತು ಬರೆಯುತ್ತಾರೆ. ಅವರ ಪತ್ರಗಳು ಒಬ್ಬ ಪ್ರಜ್ಞಾವಂತ ಶಿಕ್ಷಕ ಹತ್ತು ವರ್ಷದ ಮಗುವನ್ನು ಉದ್ದೇಶಿಸಿ ವಿಷಯಗಳನ್ನು ಹೇಗೆ ಕಲಿಸಬೇಕು ಎಂಬುದಕ್ಕೆ ಮಾದರಿಯಾಗಿವೆ. ಅವುಗಳಲ್ಲಿನ ಶೈಕ್ಷಣಿಕ ವಿಧಾನಗಳು, ಸರಳವಾದ ಭಾಷೆ, ನಿರೂಪಣಾ ಶೈಲಿಯ ಕುರಿತೇ, ಮಹಾರಾಷ್ಟ್ರದ ವೈಜಾಪುರದ ವಿನಾಯಕರಾವ್ ಪಾಟೀಲ್ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕರಾದ ಡಾ.ಡಿ.ಎಸ್.ಸಾಳುಂಕೆಯವರು ಒಂದು ಅಧ್ಯಯನವನ್ನೇ ಪ್ರಕಟಿಸಿದ್ದಾರೆ. ಬಹುಶಃ ಎಳೆಯರಿಗಾಗಿ ಶೈಕ್ಷಣಿಕ ವಿಷಯಗಳ ಬಗ್ಗೆ ಬರೆಯುವವರು, ಬೋಧಿಸುವವರು ಈ ಮೂವತ್ತು ಪತ್ರಗಳನ್ನು ಈ ದೃಷ್ಠಿಯಿಂದ ಅಧ್ಯಯನಿಸುವುದು ಪ್ರಯೋಜನವಾದೀತು.</p>



<p>ಸ್ವಾತಂತ್ರ್ಯ ಹೋರಾಟದಲ್ಲಿ, ಸುಮಾರು 1920 ರಿಂದ 27 ವರ್ಷಗಳ ಕಾಲ ಸಕ್ರಿಯವಾಗಿದ್ದಾಗಲೇ ನೆಹರು ಅವರು ಸ್ವತಂತ್ರ ಭಾರತಕ್ಕಾಗಿ ಹಲವು ಕನಸುಗಳನ್ನು ಕಂಡಿದ್ದರು. ಅವು ಭ್ರಾಮಕ ಕನಸುಗಳಾಗಿರದೇ ಐತಿಹಾಸಿಕ ವಾಸ್ತವಗಳನ್ನು ಆಧರಿಸಿದ ಯೋಜನೆಗಳಾಗಿದ್ದವು. ಸ್ವಾತಂತ್ರ್ಯ ಬಂದು ಅವರೇ ದೇಶದ ಪ್ರಥಮ ಪ್ರಧಾನಿಯಾದಾಗ, ದೇಶವನ್ನು ಕಾಡುತ್ತಿದ್ದ ಹಸಿವು, ಬಡತನ, ನಿರಕ್ಷರತೆ ಇತ್ಯಾದಿ ತುರ್ತು ಸಮಸ್ಯೆಗಳ ಪರಿಹಾರಕ್ಕಾಗಿ ನೆಚ್ಚಿಕೊಂಡಿದ್ದು ವಿಜ್ಞಾನ ಮತ್ತು ತಂತ್ರಜ್ಞಾನವನ್ನು. ಅವರು ಪ್ರಧಾನಿಯಾಗಿದ್ದ ಸುಮಾರು 15 ವರ್ಷಗಳಲ್ಲಿ 32 ಬೃಹತ್ ನೀರಾವರಿ/ವಿದ್ಯುತ್ ಯೋಜನೆಗಳು, ಉದ್ಯಮಗಳು, ಉನ್ನತ ದರ್ಜೆಯ ಶೈಕ್ಷಣಿಕ, ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಿದರು, ಈಗಿನ ಪ್ರಧಾನಿಯವರಿಗೆ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಕಟ್ಟುವುದೇ ರಾಷ್ಟ್ರೀಯ ಕಾರ್ಯ ಯೋಜನೆಯಾಗಿದೆ. ಆದರೆ, ಈ ಮೊದಲ ಪ್ರಧಾನಿ, 1948ರಲ್ಲಿ ಭಾಕ್ರಾ ನಂಗಲ್ ಅಣೆಕಟ್ಟಿಗೆ ಶಂಕುಸ್ಥಾಪನೆ ಮಾಡಿ ಮಾತಾಡಿದಾಗ, ಇವೇ “<strong>ಭಾರತದ ಆಧುನಿಕ ದೇವಾಲಯಗಳು”</strong> ಎಂಬ&nbsp; ಹೇಳಿಕೆಯನ್ನು ಕೊಟ್ಟರು. ಇಂಥ ವಿಷನರಿಯಾಗಿದ್ದ ಪ್ರಧಾನಿ ನೆಹರು ಅವರು ನಿರೂಪಿಸಿದ “ವೈಜ್ಞಾನಿಕ ಮನೋವೃತ್ತಿ”ಯ ವ್ಯಾಖ್ಯೆ ಈಗಲೂ ಪ್ರಚಲಿತ.</p>



<p><strong>ವೈಜ್ಞಾನಿಕ ಮನೋವೃತ್ತಿ ಮತ್ತು ಭಾರತ ಸಂವಿಧಾನ </strong><strong></strong></p>



<p>“ಭಾರತ ಸಂವಿಧಾನ ಎಂಥ ಗ್ರಂಥ” ಎಂದು ಕೇಳಿದರೆ ನಿಮ್ಮ ಉತ್ತರವೇನು? ಕೆಲವರಿಗೆ ಭಾರತ ಸಂವಿಧಾನ ಸಾರುವ ಸಮಾನತೆ, ಸಮತೆ ಮತ್ತು ಇತರ ಹಕ್ಕುಗಳ ಕುರಿತು ಗುನುಗು ಇದೆ, ಹೊರನೋಟಕ್ಕೆ ಅದನ್ನು ಗೌರವಿಸುತ್ತೇವೆ ಎಂದು ಆಲೋಚನೆಯಲ್ಲಿ ಹೇಳಿದರೂ ಆಚರಣೆಯಲ್ಲಿ ಅದನ್ನು ಅವಹೇಳನ ಮಾಡುತ್ತಾರೆ. 2018ರ ಆಗಸ್ಟ್ 9ರಂದು ಯೂತ್ ಫಾರ್ ಇಕ್ವಾಲಿಟಿ ಫೌಂಡೇಷನ್ (ಅಜಾದ್ ಸೇನಾ) ಮತ್ತು ಆರಕ್ಷಣ್ ವಿರೋಧಿ ಪಾರ್ಟಿ ಎಂಬ ಎರಡು ಸಂಘಟನೆಗಳು ಎಸ್.ಸಿ./ಎಸ್.ಟಿ (ದೌರ್ಜನ್ಯಗಳ ತಡೆಗಟ್ಟುವಿಕೆ) ಕಾಯ್ದೆಯಲ್ಲಿ ತರಲಾದ ತಿದ್ದುಪಡಿಯ ವಿರುದ್ಧ ಪ್ರತಿಭಟನೆಯ ವೇಳೆಯಲ್ಲಿ ಭಾರತ ಸಂವಿಧಾನದ ಪ್ರತಿಯನ್ನು ಸುಟ್ಟರು. ಅಪರಾಧಿಗಳನ್ನು ಬಂಧಿಸಿದರು, ಶಿಕ್ಷೆಯೂ ಆಗಿರಬಹುದು. ಇದು ಆಕ್ರೋಶದಲ್ಲಿ ಭೌತಿಕವಾಗಿ ಸಂವಿಧಾನದ ಪ್ರತಿಯನ್ನು ಸುಟ್ಟ ಪ್ರಕರಣ, ಆದರೆ ಸಂವಿಧಾನವನ್ನು ಗೌರವಿಸುತ್ತೇವೆ ಎಂದು ಸಂಭಾವಿತರ ಹಾಗೆ ಮಾತಾಡಿ, ಅದರ ಮೂಲಭೂತ ತತ್ತ್ವಗಳನ್ನೇ ದಿನವೂ ಸುಡುವ ಬಹುತೇಕ ಜನಪ್ರತಿನಿಧಿಗಳು ಈ ದೂಷಣೆಯಿಂದ ತಪ್ಪಿಸಿಕೊಳ್ಳುತ್ತಾರೆ. ಇರಲಿ.</p>



<p>ಇನ್ನೊಂದು ವರ್ಗವಿದೆ. ಅವರು, “ಭಾರತ ಸಂವಿಧಾನ ಒಂದು“ಪವಿತ್ರ” ಗ್ರಂಥ, ಪ್ರಜಾಪ್ರಭುತ್ವ ನಮ್ಮ ಧರ್ಮ, ಸಂವಿಧಾನ ನಮ್ಮ ಧರ್ಮಗ್ರಂಥ” ಎಂದು ಹೇಳುತ್ತಾರೆ, ಡಾ.ಅಂಬೇಡ್ಕರ್ ಜಯಂತಿಯಂದು ಸಂವಿಧಾನದ ಪ್ರತಿಗೆ ಹೂ ಹಾಕಿ ಶಾಸ್ತ್ರೋಕ್ತವಾಗಿ ಊದಿನ ಕಟ್ಟಿ ಹಚ್ಚಿ ಆರತಿ ಬೆಳಗಿ ಪೂಜೆ ಮಾಡುವವರೂ ಇದ್ದಾರೆ. ಅವರ ಅಭಿಮಾನವನ್ನು ಮೆಚ್ಚಬೇಕು. ಮೊದಲು ನಾನೂ ಹಾಗೇ ಹೇಳುತ್ತಿದ್ದೆ. ಆದರೆ ಹೆಚ್ಚು ತಿಳಿವಳಿಕೆ ಬಂದ ನಂತರ ನನ್ನ ಅಭಿಪ್ರಾಯ ಬೇರೆಯಾಯಿತು. ಕುರಾನ್, ಬೈಬಲ್, ಗೀತೆ ಇತ್ಯಾದಿ ಗ್ರಂಥಗಳನ್ನು ನಾವು ದೈವಿಕ, ಅಪೌರುಷೇಯ, ಅವತೀರ್ಣಗೊಂಡಿದ್ದು, ಪವಿತ್ರ ಎಂದೆಲ್ಲಾ ಭಾವಿಸುತ್ತೇವೆ. ಆದ್ದರಿಂದ ಅವುಗಳನ್ನು ಗೌರವಿಸುತ್ತೇವೆ, ಅವುಗಳಿಗೆ ಅವಮಾನವಾದರೆ ಜೀವ ಕೊಡುತ್ತೇವೆ, ಆದರೆ ತೆಗೆದು ಓದುವುದಿಲ್ಲ, ಅದರಲ್ಲಿ ವಾಸ್ತವವಾಗಿ ಏನು ಹೇಳಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ತಾವು ಓದಿದ್ದೇವೆ ಎಂದು ಹೇಳುವರು ಅದರಲ್ಲಿದೆ ಎಂದು ಹೇಳುವುದನ್ನು ಬುದ್ಧಿ ಮುಚ್ಚಿಕೊಂಡು ನಂಬುತ್ತೇವೆ. ಭಾರತ ಸಂವಿಧಾನದ ಕುರಿತು ಈ ಮಾದರಿಯ ಅಂಧವಿಶ್ವಾಸ, ಭಕ್ತಿಯೂ ಸಲ್ಲದು.</p>



<figure class="wp-block-image size-full"><img decoding="async" width="550" height="380" src="https://peepalmedia.com/wp-content/uploads/2024/08/02.jpg" alt="" class="wp-image-43411" srcset="https://peepalmedia.com/wp-content/uploads/2024/08/02.jpg 550w, https://peepalmedia.com/wp-content/uploads/2024/08/02-300x207.jpg 300w, https://peepalmedia.com/wp-content/uploads/2024/08/02-150x104.jpg 150w, https://peepalmedia.com/wp-content/uploads/2024/08/02-218x150.jpg 218w" sizes="(max-width: 550px) 100vw, 550px" /></figure>



<p>ವಾಸ್ತವವಾಗಿ ಭಾರತ ಸಂವಿಧಾನ ಇದ್ಯಾವುದೂ ಅಲ್ಲ. ಎಂದರೆ ಇದು ದೈವಿಕವಲ್ಲ, ಲೌಕಿಕ. ಇದು ಸ್ವತಃ ದೇವರಿಂದ ದೇವದೂತನ ಮೂಲಕ ಅವತೀರ್ಣಗೊಂಡಿಲ್ಲ, ಎಂದರೆ ಅಪೌರುಷೇಯವಲ್ಲ, ಇದನ್ನು ಮನುಷ್ಯರೇ ಬರೆದಿದ್ದು, ಇದು ಪವಿತ್ರವಲ್ಲ, ಮೌಲಿಕವಾದದ್ದು. ಡಾ.ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ, 6.12.1946 ರಿಂದ&nbsp; 24.1.1950ರ (2 ವರ್ಷ 11 ತಿಂಗಳು 18 ದಿನ) ವರೆಗೆ ನಡೆದ ಸಂವಿಧಾನ ರಚನಾ ಸಭೆಯಲ್ಲಿ ಇದರ ರಚನೆಯಾಯಿತು. ವಿವಿಧ ರಾಜ್ಯಗಳಿಂದ ಬಂದ, 15 ಜನ ಮಹಿಳೆಯರೂ ಸೇರಿದ ಹಾಗೆ 299 ಜನಪ್ರತಿನಿಧಿಗಳು ಇದರ ರಚನೆಯಲ್ಲಿ ಪಾಲ್ಗೊಂಡರು. 22 ಸಮಿತಿಗಳಲ್ಲಿ ಹಲವಾರು ವಿಷಯಗಳ ಸುದೀರ್ಘ ವಿಶ್ಲೇಷಣೆ ಮಾಡಿದರು. ಆಯಾ ಸಮಿತಿಗಳಲ್ಲಿ ಮೂಡಿದ ವರದಿಗಳನ್ನು ಸಂವಿಧಾನ ರಚನಾ ಸಭೆಯ 11 ಗೋಷ್ಠಿಗಳಲ್ಲಿ 166 ದಿನ ಎಲ್ಲರೂ ಸೇರಿ ಚರ್ಚಿಸಿ ಪರಿಷ್ಕರಿಸಲಾಯಿತು. 29.08.1947 ರಂದು ರಚನೆಯಾದ ’ಕರಡು ರಚನಾ ಸಮಿತಿ’ಯು ಅದಕ್ಕೆ ಒಂದು ಗ್ರಂಥದ ರೂಪವನ್ನು ನೀಡಿತು. ಈ ಸಮಿತಿಯ ಅಧ್ಯಕ್ಷರಾದ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿದ್ವತ್ತು, ಅನುಭವ, ನಿರಂತರದ ಪರಿಶ್ರಮದ ಫಲವಾಗಿ ಈಗಿನ ಸಂವಿಧಾನದ ಕರಡು ಸಿದ್ಧವಾಯಿತು.26.11.1949ರಂದು ಭಾರತ ಸಂಸತ್ತು ಇದನ್ನು ಅಂಗೀಕರಿಸಿ, 26.01.1950ರಂದು ಇದು ದೇಶದಲ್ಲಿ ಜಾರಿಗೆ ಬಂತು. ಇದರ ರಚನೆಯ ಪ್ರಕ್ರಿಯೆಯೇ ಅತ್ಯಂತ ಲೌಕಿಕವಾಗಿತ್ತು, ಜನತಂತ್ರಾತ್ಮಕವಾಗಿತ್ತು, ಆ ಕಾರಣಕ್ಕಾಗಿ ವೈಜ್ಞಾನಿಕವಾಗಿತ್ತು ಎಂಬುದನ್ನು ಗಮನಿಸಿ.</p>



<p><strong>ಸಂವಿಧಾನದ ಪ್ರಸ್ತಾವನೆ</strong><strong></strong></p>



<p>ಭಾರತ ಸಂವಿಧಾನದ ಮೊದಲ ಪುಟವೇ ಪ್ರಸ್ತಾವನೆ. Preamble of Constitution of India. ಇದು ಇಡೀ ಭಾರತ ಸಂವಿಧಾನದ ಮೂಲ ಆಶಯ, ತಾತ್ಪರ್ಯ, ದ್ಯೇಯೋದ್ಧೇಶದ ಹೇಳಿಕೆ, ಶಪಥ. ಇದರಲ್ಲಿರುವ ಅಂಶಗಳನ್ನು ನಾವು ಬಿಡಿಸಿ ಮನನ ಮಾಡಿಕೊಳ್ಳುವುದು, ಆಲೋಚನೆ ಮತ್ತು ಆಚರಣೆಯಲ್ಲಿ ಅಳವಡಿಸಿಕೊಳ್ಳುವುದು ಒಳ್ಳೆಯದು. ಸಂವಿಧಾನದ ಪ್ರಸ್ತಾವನೆ ಸಂವಿಧಾನದ ತಾತ್ಪರ್ಯವಿದ್ದಂತೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ವಾಸ್ತವವಾಗಿ ಪ್ರಸ್ತಾವನೆಯೇ ’ಸಂವಿಧಾನ’. ನಂತರ ಬರುವ 25 ಭಾಗಗಳ 448 ಅನುಚ್ಛೇದಗಳು, 12 ಅನುಸೂಚಿ ಸಹಿತವಾದ ಸುಮಾರು 250 ಪುಟಗಳ ಪಠ್ಯವು ಪ್ರಸ್ತಾವನೆಯಲ್ಲಿ ಬರುವ ಒಂದೊಂದು ಪದಕ್ಕೆ ನೀಡಿರುವ ’ಅಡಿಟಿಪ್ಪಣಿ’ ಅಥವಾ ’ವಿವರ’ ಎನ್ನಬಹುದು. ಅಷ್ಟು ಮುಖ್ಯ ಸಂವಿಧಾನದ ಪ್ರಸ್ತಾವನೆ. ಪ್ರಸ್ತಾವನೆಯ ಪಠ್ಯದ ಕೆಲವು ಅಂಶಗಳನ್ನು ನೋಡೋಣ;</p>



<p><img decoding="async" width="600" height="315" class="wp-image-43412" style="width: 600px;" src="https://peepalmedia.com/wp-content/uploads/2024/08/03-We-the-People-of-India.jpg" alt="" srcset="https://peepalmedia.com/wp-content/uploads/2024/08/03-We-the-People-of-India.jpg 1200w, https://peepalmedia.com/wp-content/uploads/2024/08/03-We-the-People-of-India-300x158.jpg 300w, https://peepalmedia.com/wp-content/uploads/2024/08/03-We-the-People-of-India-1024x538.jpg 1024w, https://peepalmedia.com/wp-content/uploads/2024/08/03-We-the-People-of-India-768x403.jpg 768w, https://peepalmedia.com/wp-content/uploads/2024/08/03-We-the-People-of-India-150x79.jpg 150w, https://peepalmedia.com/wp-content/uploads/2024/08/03-We-the-People-of-India-696x365.jpg 696w, https://peepalmedia.com/wp-content/uploads/2024/08/03-We-the-People-of-India-1068x561.jpg 1068w" sizes="(max-width: 600px) 100vw, 600px" /></p>



<p>1.ಇಡೀ ಭಾರತ ಸಂವಿಧಾನ ಆರಂಭವಾಗುವುದೇ <strong>We the People of India</strong>, “<strong>ಭಾರತ ಜನತೆಯಾದ ನಾವು”</strong>ಎಂಬ ಮಾತಿನಿಂದ<strong>&#8230;</strong>ಪ್ರಸ್ತಾವನೆ ಕೊನೆಗೊಳ್ಳುವುದು “<strong>ಈ ಸಂವಿಧಾನವನ್ನುನಮಗೆ ನಾವೇ ಅರ್ಪಿಸಿಕೊಂಡು ಅಂಗೀಕರಿಸಿ, ಶಾಸನವಾಗಿ ವಿಧಿಸಿಕೊಂಡಿದ್ದೇವೆ” </strong>ಎಂದು.ಎಂದರೆ ದೇವರಾಗಲೀ, ಪ್ರವಾದಿಗಳಾಗಲೀ, ಯಾವುದೇ ಶಾಹಿಗಳಾಗಲೀ ಇದನ್ನು ನಮ್ಮ ಮೇಲೆ ಹೇರಿಲ್ಲ.ನಮಗೆ ನಾವೇ ವಿಧಿಸಿಕೊಂಡಿದ್ದೇವೆ. ಈ ಪದಗಳನ್ನು ಮನನ ಮಾಡಿಕೊಂಡರೆ ಇದು ನಮ್ಮದೇ ಸಂವಿಧಾನ ಎಂಬ ಪ್ರೀತಿ, ಅಭಿಮಾನ, ಶ್ರದ್ಧೆ, ಜವಾಬ್ದಾರಿ ಮೂಡುತ್ತದೆ. ಮುಂದಿನದೆಲ್ಲ ಹೆಚ್ಚು ಸುಗಮವಾಗುತ್ತದೆ.&nbsp;</p>



<p>2.ಸ್ವತಂತ್ರ ಭಾರತವನ್ನು ಕಟ್ಟುವುದಕ್ಕಾಗಿ ನಮ್ಮ ಗುರಿಗಳೇನು ಎನ್ನುವುದನ್ನು ಪ್ರಸ್ತಾವನೆ Sovereign, Socialist, Secular, Democratic Republic ಎಂದು ಹೇಳಿದೆ. ಇದರಲ್ಲಿ ಎರಡು ಪದಗಳನ್ನು ಮಾತ್ರ ನಾನು ವಿಮರ್ಶೆಗೆ ತೆಗೆದುಕೊಳ್ಳುತ್ತೇನೆ.</p>



<p>ಪ್ರಸ್ತಾವನೆಯ ಇಂಗ್ಲಿಷ್ ಆವೃತ್ತಿಯಲ್ಲಿ <em>Secular </em>ಎಂಬ ಪದವನ್ನು ಬಳಸಿದೆ. ಕೇಂಬ್ರಿಜ್ ಇಂಗ್ಲಿಷ್ ನಿಘಂಟುವಿನಲ್ಲಿ ಇದರ ಅರ್ಥ, ’<em>not</em> connected with religion or spiritual matters’ ಮತ್ತು ‘not having <em>any</em> connection with religion’ ಎಂದಿದೆ. ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್-ಕನ್ನಡ ನಿಘಂಟುವಿನಲ್ಲಿ <em>Secular</em>ಎನ್ನುವ ಪದಕ್ಕೆ, “ಲೌಕಿಕ, ಜಾತ್ಯತೀತ, ಮತ ಧರ್ಮಾತೀತ, ರಾಷ್ಟ್ರನೀತಿ ಆಡಳಿತ ವ್ಯವಸ್ಥೆಯಲ್ಲಿ ಧರ್ಮದ ಪ್ರವೇಶ ಕೂಡದೆನ್ನುವ; ಧಾರ್ಮಿಕ ಕ್ಷೇತ್ರಕ್ಕೆ, ಚರ್ಚು, ಮಠ, ಮಸೀದಿ ಇತ್ಯಾದಿಗಳಿಗೆ ಸಂಬಂಧಿಸದೇ ಇರುವ&#8230;” ಎಂದಿದೆ.</p>



<p>ಇದನ್ನು ಅನುಸರಿಸಿ ಕೆಲವು ಭಾಷೆಗಳಲ್ಲಿ ಸೆಕ್ಯುಲರ್ ಎಂಬ ಪದವನ್ನು ಅನುವಾದ ಮಾಡಿಕೊಂಡಿರುವುದನ್ನು ನೋಡಿ: ಮೂಲ ಇಂಗ್ಲಿಷ್ ಆವೃತ್ತಿಯೊಂದಿಗೇ ರಚಿತವಾದ ಹಿಂದಿ ಆವೃತ್ತಿಯಲ್ಲಿ ’ಪಂಥ್ ನಿರಪೇಕ್ಷ್’ ಎಂಬ ಪದವಿದೆ, ಹಾಗೆಯೇ ತೆಲುಗು-ಲೌಕಿಕ, ಮರಾಠಿ-ಧರ್ಮ್ ನಿರಪೇಕ್ಷ್, ಬಂಗಾಲಿ-ಧರ್ಮ್ ನಿರಪೇಕ್ಷ್. ಆದರೆ ಕನ್ನಡದಲ್ಲಿ ಸರಕಾರದ ಅಧಿಕೃತ ಅನುವಾದದಲ್ಲಿ <strong><sup>[1]</sup></strong>ಸೆಕ್ಯುಲರ್ ಎಂಬ ಪದಕ್ಕೆ “ಸರ್ವಧರ್ಮ ಸಮಭಾವದ” ಎಂಬ ಪದವನ್ನು ಬಳಸಿದ್ದಾರೆ. ಈ ಅರ್ಥ ಎಲ್ಲಿಯೂ ಇಲ್ಲ ಅನ್ನುವುದಷ್ಟೆ ಅಲ್ಲ, ಮೂಲ ಅರ್ಥವನ್ನು ಇದು ಹಾದಿ ತಪ್ಪಿಸುತ್ತದೆ. ಸಂವಿಧಾನದ ಮೂಲ ಆಶಯಕ್ಕೆ ತದ್ವಿರುದ್ಧವಾಗಿದೆ. ಆದ್ದರಿಂದ ಸಂವಿಧಾನದ ಪ್ರಸ್ತಾವನೆಯನ್ನು ಅರ್ಥ ಮಾಡಿಕೊಳ್ಳುವಾಗ ನಾವು ಸೆಕ್ಯುಲರ್ ಎಂಬ ಪದವನ್ನು “ಮತಧರ್ಮ ನಿರಪೇಕ್ಷ” ಎಂದೇ ಅರ್ಥ ಮಾಡಿಕೊಳ್ಳಬೇಕು.</p>



<p>3. ಪ್ರಸ್ತಾವನೆಯಲ್ಲಿರುವ ಇನ್ನೊಂದು ಪದ, Democratic ಎನ್ನುವುದು. ಇದನ್ನು ಬಂಗಾಲಿಯಲ್ಲಿ ಜನತಾಂತ್ರಿಕ್, ಹಿಂದಿಯಲ್ಲಿ ಲೋಕತಂತ್ರಾತ್ಮಕ್, ಮರಾಠಿಯಲ್ಲಿ ಲೋಕಶಾಶಿ, ತಮಿಳಿನಲ್ಲಿ ಜನನಾಯಕ ಎಂದೆಲ್ಲಾ ಮಾಡಿಕೊಂಡಿದ್ದಾರೆ. ಇವು ಹೆಚ್ಚು ಸರಿ. ಆದರೆ ಕನ್ನಡದ ಅಧಿಕೃತ ಅನುವಾದದಲ್ಲಿ Democratic ಎನ್ನುವುದಕ್ಕೆ“ಪ್ರಜಾಸತ್ತಾತ್ಮಕ”ಎಂಬ ಪದವನ್ನು ಬಳಸಲಾಗಿದೆ (ಹೆಚ್ಚಿನವರು ಪ್ರಜಾಪ್ರಭುತ್ವ ಎಂಬ ಪದವನ್ನೇ ಬಳಸುತ್ತಾರೆ.) ಎಂದರೆ ಇಲ್ಲಿ ನಮ್ಮನ್ನು ’ಪ್ರಜೆ’ ಎಂದು ಕರೆಯಲಾಗಿದೆ. ಅನೇಕ ಬಗೆಯ ಪ್ರಭುಗಳು ಇದ್ದಾಗ ನಾವು ವಿನೀತ ಪ್ರಜೆಗಳಾಗಿದ್ದೆವು. ಈಗ ನಾವೇ ದೇಶದ ಸಮಷ್ಠಿ ಮಾಲೀಕರು, ಈಗ ಯಾರೂ ಪ್ರಭುಗಳಿಲ್ಲ, ನಾವೂ ಪ್ರಭುಗಳಾಗಬಾರದು. ನಾವು ಈ ದೇಶದ citizenಗಳು, ನಾಗರಿಕರು, ಜನರು. ಆದ್ದರಿಂದ ನಮ್ಮದು ಜನಸತ್ತಾತ್ಮಕ ಗಣರಾಜ್ಯ.</p>



<p>ಎಲ್ಲ ನಾಗರಿಕರಿಗೆ ನ್ಯಾಯ, ಸ್ವಾತಂತ್ರ್ಯ, ಸಮತೆ ದೊರೆಯುವಂತೆ ಮಾಡುವ ಮತ್ತು ವ್ಯಕ್ತಿ ಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭ್ರಾತೃತ್ವ ಭಾವನೆಯನ್ನು ಮೂಡಿಸುವ ದೃಢ ಸಂಕಲ್ಪ ಮಾಡಿದ್ದೇವೆ ಎಂದಿದೆ. ವಿಧಾನದ ಒಳಗಿನ ಯಾವುದೇ ಅನುಚ್ಛೇದ ಪ್ರಸ್ತಾವನೆಯಲ್ಲಿನ ಮೌಲ್ಯಗಳನ್ನು ಮೀರುವಂತಿಲ್ಲ, ಅದಕ್ಕೆ ಅನುಗುಣವಾಗಿಯೇ ಇರಬೇಕು ಎಂದಾದ ಮೇಲೆ ಇಡೀ ಸಂವಿಧಾನವು ಹೇಗೆ ವೈಚಾರಿಕತೆ, ತರ್ಕ, ಸಾಮಾಜಿಕ ನ್ಯಾಯ, ವೈಜ್ಞಾನಿಕ ಮನೋವೃತ್ತಿಯನ್ನು ಆಧರಿಸಿದೆ ಎಂಬುದನ್ನು ಪ್ರಸ್ತಾವನೆಯಲ್ಲಿಯೇ ದೃಢಪಡಿಸಲಾಗಿದೆ.</p>



<p><strong>ಸಂವಿಧಾನ ಸಾಕ್ಷರತೆ</strong><strong></strong></p>



<figure class="wp-block-image size-large"><img loading="lazy" decoding="async" width="1024" height="538" src="https://peepalmedia.com/wp-content/uploads/2024/08/04-C-of-I-1024x538.jpg" alt="" class="wp-image-43413" srcset="https://peepalmedia.com/wp-content/uploads/2024/08/04-C-of-I-1024x538.jpg 1024w, https://peepalmedia.com/wp-content/uploads/2024/08/04-C-of-I-300x158.jpg 300w, https://peepalmedia.com/wp-content/uploads/2024/08/04-C-of-I-768x403.jpg 768w, https://peepalmedia.com/wp-content/uploads/2024/08/04-C-of-I-150x79.jpg 150w, https://peepalmedia.com/wp-content/uploads/2024/08/04-C-of-I-696x365.jpg 696w, https://peepalmedia.com/wp-content/uploads/2024/08/04-C-of-I-1068x561.jpg 1068w, https://peepalmedia.com/wp-content/uploads/2024/08/04-C-of-I.jpg 1200w" sizes="auto, (max-width: 1024px) 100vw, 1024px" /></figure>



<p>ಸಂವಿಧಾನದ ಪ್ರಕಾರ ನಮ್ಮದು ಜನ ತಂತ್ರಾತ್ಮಕ ಗಣರಾಜ್ಯ. ಎಂದರೆ ಈ ದೇಶದ ನಾಗರಿಕರೇ ಇಡೀ ದೇಶದ ಸಮಷ್ಠಿ ಮಾಲೀಕರು; ದೇಶದ ಆಗುಹೋಗುಗಳಿಗೆ ಬಾಧ್ಯಸ್ಥರು, ಹೊಣೆಗಾರರು. ನಾಗರಿಕರು ಉತ್ಪಾದನೆ, ಸಂಶೋಧನೆ, ಸೇವೆ, ದುಡಿಮೆ ಇತ್ಯಾದಿ ಕಾರ್ಯಗಳಲ್ಲಿ ನಿರತರಾಗಿರುತ್ತಾರೆ. ಆದ್ದರಿಂದ ಅವರ ಪರವಾಗಿ ಈ ದೇಶವನ್ನು (ಆಳಲು ಅಲ್ಲ) ನಡೆಸಿಕೊಂಡು ಹೋಗಲು ಅವರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಚುನಾವಣೆಗಳಲ್ಲಿ (ಮತ’ದಾನ’ ಮಾಡಿ ಅಲ್ಲ) ಮತ (ಅಭಿಪ್ರಾಯ)ದ ಹಕ್ಕನ್ನು ಚಲಾಯಿಸುವ ಮೂಲಕ ಇದನ್ನು ಮಾಡುತ್ತಾರೆ. ಚುನಾಯಿಸಿ ಬರುವವರು ನಮ್ಮ ’ನಾಯಕರಲ್ಲ’, ಅವರು ನಮ್ಮ ಪ್ರತಿನಿಧಿಗಳು. ಅವರಿಗೆ ಸಮಯವಿದೆ, ಪರಿಣತಿ, ಅನುಭವ ಇದೆ ಎಂಬುದಕ್ಕಾಗಿ ನಾವು ಅವರನ್ನು ಆಯ್ಕೆ ಮಾಡುತ್ತೇವೆ. ಅವರಿಗೆ ಸಂವಿಧಾನ ಬದ್ಧವಾದ ಸ್ಥಾನಮಾನ, ಅಧಿಕಾರ, ಸಂಭಾವನೆ, ಸೌಕರ್ಯ, ಭತ್ಯ ಇತ್ಯಾದಿ ಎಲ್ಲವನ್ನೂ ಒದಗಿಸಿ, ನೀವು ಆಯ್ಕೆಯಾಗಿರುವ ಅವಧಿ ಮುಗಿಯುವ ವರೆಗೆ ಪ್ರಾಮಾಣಿಕವಾಗಿ ನಮ್ಮ ಅಭ್ಯುದಯಕ್ಕಾಗಿ ದುಡಿಯಿರಿ ಎಂದು ಕಳಿಸಿರುತ್ತೇವೆ. ಆದರೆ ಈ ಮಾದರಿಯಲ್ಲಿ ತಮ್ಮ ಅಧಿಕಾರವೇನು, ತಮ್ಮ ಮತದ ಮಹತ್ವವೇನು ಎಂಬುದು ನಾಗರಿಕರಿಗೆ ಗೊತ್ತಿದೆಯೇ? ಸಂವಿಧಾನ ಜಾರಿಯಾದ 1950ರ ವರ್ಷದ ಭಾರತೀಯರಿಗೆ ಹೋಗಲಿ, ಈಗಿನ 2020ರ ಸಾರ್ವಜನಿಕರಿಗಾದರೂ ಸಂವಿಧಾನ ಮತ್ತು ಅದರ ಮಹತ್ವದ ಕುರಿತು ಅರಿವಿದೆಯೇ? ಇಲ್ಲ.</p>



<p>ಹೀಗಾಗಿ, ಭಾರತ ಸಂವಿಧಾನದ ಮೂಲಭೂತ ಸಾಕ್ಷರತೆ ಭಾರತದ ನಾಗರಿಕರಿಗೆ ಇರಬೇಕಾಗುತ್ತದೆ; ಮುಖ್ಯವಾಗಿ ಮತವನ್ನು ಚಲಾಯಿಸಿ ದೇಶ ನಡೆಸುವವರನ್ನು ಆಯ್ಕೆ ಮಾಡುವ ವಯಸ್ಕರಿಗೆ ಸಂವಿಧಾನದ ಮೂಲಭೂತ ಅಂಶಗಳು ಗೊತ್ತಿರಬೇಕಾಗುತ್ತದೆ. ಆದರೆ, ಅದ್ಯಾಕೋ, ಅಷ್ಟೊಂದು ಕಾಳಜಿಯಿಂದ, ಸಾಮಾಜಿಕ ಹೊಣೆಗಾರಿಕೆಯಿಂದ ಸಂವಿಧಾನವನ್ನು ರಚಿಸಿ, ಜಾರಿಗೆ ತಂದ ಆಗಿನ ಹಿರಿಯರು, ನಂತರ ಅದರ ಕುರಿತು ದೇಶದ ನಾಗರಿಕರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಗೌಣವಾಗಿ ಕಂಡರು, ಜನಸತ್ತಾತ್ಮಕ ವ್ಯವಸ್ಥೆಯನ್ನು ಅಂಗೀಕರಿಸಿದ ಆರಂಭದಿಂದಲೇ ಆಗಿರುವ&nbsp; ಬಹುದೊಡ್ಡ ಪ್ರಮಾದವಿದು. ಜನರ ಪ್ರತಿನಿಧಿಗಳು ಎಂದು ಹೇಳಿಕೊಂಡು ಸಂವಿಧಾನ ರಚನಾ ಸಭೆಯಲ್ಲಿ ಕುಳಿತು ಪರಿಶ್ರಮ ವಹಿಸಿ ಅದ್ಭುತವಾದ ಸಂವಿಧಾನವನ್ನು ಸಾಕಾರಗೊಳಿಸಿದ ಆ ಹಿರಿಯರು, ಸಭಾಧ್ಯಕ್ಷರೂ, ತಾವೂ ಅದಕ್ಕೆ ’ಭಾರತದ ಜನತೆಯಾದ ನಮ್ಮ’ ಪರವಾಗಿ ಸಹಿ ಹಾಕಿ, 1950ರ ಜನವರಿ 26ರಂದು ಅದನ್ನು ಜಾರಿ ಮಾಡಿದ ನಂತರವಾದರೂ ಕೂಡಲೇ ಮಾಡಬೇಕಾದ ಒಂದು ಕೆಲಸವಿತ್ತು. ಆಗ ಭಾರತದ ಜನಸಂಖ್ಯೆ 36 ಕೋಟಿ ಇತ್ತು. ಅವರನ್ನು ಉದ್ದೇಶಿಸಿ, “ನೋಡಿಯಪ್ಪಾ, ನಿಮ್ಮ ಪರವಾಗಿ ಎಂದು ಹೇಳಿಕೊಂಡು ನಾವು ನಮ್ಮೆಲ್ಲರಿಗಾಗಿ ಈ ಸಂವಿಧಾನವನ್ನು ರಚಿಸಿದ್ದೇವೆ. ಇದರ ಅನುಷ್ಠಾನದಲ್ಲಿ ನೀವೂ ಕೂಡ ಸಮಸಮ ಭಾಧ್ಯಸ್ಥರು, ನೀವೂ ಇದರ ಕುರಿತು ಮೂಲಭೂತ ಅಂಶಗಳನ್ನು ತಿಳಿದುಕೊಳ್ಳುವುದು ಸೂಕ್ತ” ಎಂದು ಪ್ರಾಮಾಣಿಕವಾಗಿ ಹೇಳಬೇಕಾಗಿತ್ತು. ಸಂವಿಧಾನದ ಮೂಲ ತತ್ತ್ವಗಳು, ಹಕ್ಕುಗಳು, ಬಾಧ್ಯತೆಗಳು ಇತ್ಯಾದಿಗಳನ್ನು ಸರಳಗೊಳಿಸಿ, ಕೈಪಿಡಿ ರಚನೆ ಮಾಡಬೇಕಾಗಿತ್ತು. ಅದನ್ನು ಬಳಸಿ ಬೃಹತ್ ಪ್ರಮಾಣದಲ್ಲಿ “ಸಂವಿಧಾನ ಸಾಕ್ಷರತಾ” ಆಂದೋಲನವನ್ನು ನಡೆಸಬೇಕಾಗಿತ್ತು. ದೇಶದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಗಳನ್ನು ನಡೆಸುವ ಮುನ್ನ ದೇಶದ ಮಾಲೀಕರಿಗೆ ಅದರ ಕುರಿತು ಅರಿವನ್ನು ಮೂಡಿಸಬೇಕಾಗಿತ್ತು. ಕೊನೆಯ ಪಕ್ಷ, ಮೊದಲ ಪಂಚವಾರ್ಷಿಕ ಯೋಜನೆಯಲ್ಲಿಯಾದರೂ ಸಂವಿಧಾನ ಸಾಕ್ಷರತೆಗೆ ಪ್ರಪ್ರಥಮ ಆದ್ಯತೆಯನ್ನು ನೀಡಬೇಕಾಗಿತ್ತು. ಆಗಿನ ಸಂವಿಧಾನ ಸಭೆಯ 299 ಪ್ರತಿನಿಧಿಗಳ ಅನುಮೋದನೆ ಪಡೆದ ಹಾಗೆ ಜನರ ಸಹಮತಿಯನ್ನು ಪಡೆಯಬೇಕಾಗಿತ್ತು. ಜನರನ್ನು ಅವರ ಸಂವಿಧಾನದ ಕುರಿತು ಸಾಕ್ಷರರನ್ನಾಗಿ ಮಾಡಬೇಕಾಗಿತ್ತು; ಇದು ಅಕ್ಷರದ ಸಾಕ್ಷರತೆಗಿಂತ, ಬಡತನ ನಿವಾರಣೆಗಿಂತಲೂ ಮಹತ್ವದ್ದಾಗಿತ್ತು, ತುರ್ತಾಗಿತ್ತು. ಅದನ್ನು ಮಾಡದೇ ಇದ್ದದ್ದು, ಈಗಲೂ ಅಂಥ ಯಾವುದೇ ಪ್ರಯತ್ನ, ಯೋಜನೆ ಇಲ್ಲದಿರುವುದು ಭಾರತ ಇಂದು ಎದುರಿಸುತ್ತಿರುವ ಸಾಂವಿಧಾನಿಕ ಮೌಲ್ಯಗಳ ಅವನತಿಗೆ ಮೂಲ ಕಾರಣವಾಗಿದೆ. ಆಟವನ್ನು ಆಡುತ್ತೇವೆ, ಆದರೆ ನಾವು ಆಡುವ ಆಟದ ಮೂಲ ನಿಯಮಗಳೇ ಗೊತ್ತಿಲ್ಲ.</p>



<p><strong>ಹಕ್ಕುಗಳು ಮತ್ತು ಕರ್ತವ್ಯಗಳು</strong><strong></strong></p>



<p>ಬಹುಶಃ ಹಿಂದಿನ ಯಾವುದೇ ಆಳ್ವಿಕೆಗಳಲ್ಲಿ ಇಲ್ಲದೇ ಇದ್ದ ಮಾನವ ಹಕ್ಕುಗಳನ್ನು ಭಾರತ ಸಂವಿಧಾನವು ನಮಗೆ ನೀಡಿದೆ. ಸಂವಿಧಾನದ ಭಾಗ 3ರಲ್ಲಿ, ಅನುಚ್ಛೇದ 12 ರಿಂದ 35ರಲ್ಲಿ ಆರು ಬಗೆಯ ಮೂಲಭೂತ ಹಕ್ಕುಗಳನ್ನು ನೀಡಿದೆ. ಆದರೆ, ಜನತಂತ್ರ ಯಶಸ್ವಿಯಾಗಬೇಕು ಎಂದರೆ ನಾಗರಿಕರು ಬರೀ ತಮ್ಮ ಹಕ್ಕುಗಳನ್ನು ಚಲಾಯಿಸುವುದರಲ್ಲಿ, ಅವುಗಳನ್ನು ಅನುಭವಿಸುವುದರಲ್ಲಿ ಕಾಲ ಕಳೆದರೆ ಆಗುವುದಿಲ್ಲ. ಪ್ರತಿಯೊಬ್ಬ ನಾಕರಿಕರಿಗೂ ಕೆಲವು ಸಾಂವಿಧಾನಿಕ ಕರ್ತವ್ಯಗಳೂ ಇರಬೇಕು. ಇದು ಕಾಲಾಂತರದಲ್ಲಿ ನಮಗೆ ಮನನವಾಯಿತು.</p>



<p>1976ರಲ್ಲಿ ಸರ್ದಾರ್ ಸ್ವರಣ್ ಸಿಂಗ್ ಸಮಿತಿಯು ನೀಡಿದ ಶಿಫಾರಸ್ಸನ್ನು ಅನುಸರಿಸಿ ಅಗಿನ ಸರಕಾರವು ಸಂವಿಧಾನಕ್ಕೆ 42ನೇ ತಿದ್ದುಪಡಿಯನ್ನು ತಂದು ಮೊದಲ ಬಾರಿಗೆ ಭಾಗ 4 ಎ-ರಲ್ಲಿ ಪ್ರತಿಯೊಬ್ಬ ಭಾರತೀಯರೂ ನಿಭಾಯಿಸಬೇಕಾದ 10 ಮೂಲಭೂತ ಕರ್ತವ್ಯಗಳನ್ನು ಪಟ್ಟಿ ಮಾಡಲಾಯಿತು. ಮುಂದೆ 2002ರಲ್ಲಿ, 86ನೇ ಸಂವಿಧಾನ ತಿದ್ದುಪಡಿಯ ಮೂಲಕ ಹನ್ನೊಂದನೆಯ, “ಪ್ರತಿಯೊಬ್ಬ ಪೋಷಕರೂ ತಮ್ಮ 6 ರಿಂದ 14ರ ಒಳಗಿನ ಮಕ್ಕಳಿಗೆ ಶಿಕ್ಷಣದ ಅವಕಾಶವನ್ನು ಒದಗಿಸುವುದು” ಎಂಬ ಮೂಲಭೂತ ಕರ್ತವ್ಯವನ್ನು ಸೇರಿಸಲಾಗಿದೆ. ನನಗೆ ಪ್ರಸ್ತುತ ಮುಖ್ಯವಾಗಿರುವುದು ಇದರಲ್ಲಿನ ಒಂದು ಮೂಲಭೂತ ಕರ್ತವ್ಯ.</p>



<figure class="wp-block-image size-full"><img loading="lazy" decoding="async" width="698" height="402" src="https://peepalmedia.com/wp-content/uploads/2024/08/05.jpg" alt="" class="wp-image-43414" srcset="https://peepalmedia.com/wp-content/uploads/2024/08/05.jpg 698w, https://peepalmedia.com/wp-content/uploads/2024/08/05-300x173.jpg 300w, https://peepalmedia.com/wp-content/uploads/2024/08/05-150x86.jpg 150w, https://peepalmedia.com/wp-content/uploads/2024/08/05-696x401.jpg 696w" sizes="auto, (max-width: 698px) 100vw, 698px" /></figure>



<p>ಸಂವಿಧಾನದ ಭಾಗ 4 ಎ, ಅನುಚ್ಛೇದ 51 ಎ (ಎಚ್)ರ ಪ್ರಕಾರ <strong>“ವೈಜ್ಞಾನಿಕ ಮನೋವೃತ್ತಿ, ಮಾನವೀಯತೆ, ಜಿಜ್ಞಾಸೆ ಮತ್ತು ಸುಧಾರಣಾ ಮನೋಭಾವವನ್ನು ಬೆಳೆಸಿಕೊಳ್ಳುವುದು” </strong>ನಮ್ಮೆಲ್ಲರ ಮೂಲಭೂತ ಕರ್ತವ್ಯವಾಗಿದೆ.</p>



<p>ನಿಜವೆಂದರೆ ’ವೈಜ್ಞಾನಿಕ ಮನೋವೃತ್ತಿ’ ಎಂಬುದರಲ್ಲಿಯೇ ’ಮಾನವೀಯತೆ, ಜಿಜ್ಞಾಸೆ ಮತ್ತು ಸುಧಾರಣಾ ಮನೋಭಾವ”ಗಳು ಒಳಗೊಂಡಿವೆ, ಆದರೂ ಅವುಗಳನ್ನು ಇನ್ನೂ ಸ್ಪಷ್ಟವಾಗಿ ಮನಗಾಣಿಸಲು ಹೀಗೆ ಬರೆಯಲಾಗಿದೆ. ಇತರ ಹಲವು ದೇಶಗಳ ಸಂವಿಧಾನಗಳಲ್ಲಿ ಮೂಲಭೂತ ಕರ್ತವ್ಯಗಳನ್ನು ನಮೂದಿಸಲಾಗಿದ್ದರೂ, ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸಿಕೊಳ್ಳುವುದನ್ನು ಮೂಲಭೂತ ಕರ್ತವ್ಯವನ್ನಾಗಿ ವಿಧಿಸಿರುವುದು ನಮ್ಮ ಸಂವಿಧಾನದಲ್ಲಿ ಮಾತ್ರ ಎಂದು ಹೇಳಲಾಗುತ್ತದೆ.</p>



<p><strong>ಜನ ಏಕೆ ಕಂಗಾಲಾಗಿದ್ದಾರೆ?&nbsp;&nbsp; </strong><strong></strong></p>



<p>ನಮಗೆ ನಾವೇ ಸಂವಿಧಾನವನ್ನು ಕೊಟ್ಟುಕೊಂಡ ನಂತರದಿಂದ ಜನತಂತ್ರಾತ್ಮಕ ಗಣರಾಜ್ಯವಾದ ನಮ್ಮ ದೇಶದಲ್ಲಿ ಜನತೆಯೇ ದೇಶದ ಸಮಷ್ಟಿ ಒಡೆಯರು. ತಮ್ಮನ್ನು ತಾವೇ ಸಂವಿಧಾನದ ಅಡಿಯಲ್ಲಿ ನಿರ್ವಹಿಸಿಕೊಳ್ಳುವವರು. ಆದರೂ ನಮ್ಮ ದೇಶದ ಜನಸಾಮಾನ್ಯರು ಏಕೆ ಇಷ್ಟೊಂದು, ಅಸಹಾಯಕ, ದಯನೀಯ ಪರಿಸ್ಥಿತಿಯಲ್ಲಿದ್ದಾರೆ? ಏಕೆಂದರೆ, ಅವರಿಗೆ ತಮ್ಮ ಪಾತ್ರ, ತಮ್ಮ ಹೊಣೆಗಾರಿಕೆಯ ಅರಿವಿಲ್ಲ.</p>



<p>ಜನತಂತ್ರವು ಯಶಸ್ವಿಯಾಗುವುದು, ಸಬಲಗೊಳ್ಳುವುದು ಜನರ ಭಾಗವಹಿಸುವಿಕೆಯಿಂದ. ಭಾಗವಹಿಸುವುದು ಎಂದರೆ ಚುನಾವಣೆ ಬಂದಾಗ ಕೇವಲ ತಮ್ಮ ಓಟನ್ನು ಒತ್ತಿ ತೆಪ್ಪಗೆ ಕೂಡುವುದಲ್ಲ. ದೇಶದಲ್ಲಿ ಜಾರಿಯಾಗುವ ಪ್ರತಿಯೊಂದು ಯೋಜನೆ, ಅನುಷ್ಠಾನ, ಫಲಿತಾಂಶ ಎಲ್ಲದರಲ್ಲಿಯೂ ಸಕ್ರಿಯವಾಗಿ ಭಾಗವಹಿಸುವುದು, ಯಶಸ್ಸಿನ ಪ್ರಶಂಸೆಯನ್ನು ಪಡೆಯುವುದು, ಸೋಲಿನ ಹೊಣೆಯನ್ನು ಹೊರುವುದು. ಎಂದರೆ, ಜನರ ಮಾಹಿತಿ ಸಂಪನ್ನವಾದ, ವಿವೇಕಯುತ ಭಾಗವಹಿಸುವಿಕೆ ಜನತಂತ್ರದ ಯಶಸ್ಸಿನ ಗುಟ್ಟು. ಇಂಥ ಜನ ನಮ್ಮಲ್ಲಿ ಎಷ್ಟು ಪ್ರಮಾಣದಲ್ಲಿದ್ದಾರೆ? ಇದಕ್ಕಾಗಿ ಮೂಲಭೂತವಾಗಿ ಜನರಲ್ಲಿ ವೈಜ್ಞಾನಿಕ ಮನೋವೃತ್ತಿ, ಜಿಜ್ಹಾಸೆ ಮತ್ತು ಸುಧಾರಣಾ ಮನೋಭಾವ ಇರಬೇಕಾಗುತ್ತೆ, ಅದಕ್ಕೆ ಅಲ್ಲವೇ ಅದನ್ನು 1976ರ ನಂತರವಾದರೂ ನಾವು ನಮ್ಮ ಮೂಲಭೂತ ಕರ್ತವ್ಯವೆಂಬಂತೆ ಒಪ್ಪಿಕೊಂಡಿರುವುದು!</p>



<p>ಸಮಾನತೆ, ಸಮತೆ, ಸೌಹಾರ್ದಯುತವಾದ, ಅಂಧಶ್ರದ್ಧೆ ಮತ್ತು ಅತಾರ್ಕಿಕ ಆಚರಣೆಗಳಿಂದ ಮುಕ್ತವಾದ, ಅಲೌಕಿಕದ ಭ್ರಮೆಯಲ್ಲಿ ಬದುಕುವುದನ್ನು ಬಿಟ್ಟು ಸ್ವವಿಶ್ವಾಸದ ಮೇಲೆ ಭರವಸೆ ಇಡುವ, ಜನರ ಸಕ್ರಿಯವಾದ ಭಾಗವಹಿಸುವಿಕೆಯಿಂದಲೇ ದೇಶದ ಸುಸ್ಥಿರ ಅಭಿವೃದ್ಧಿ ಸಾಧ್ಯ. ಇದು ಸಾಧ್ಯವಾಗಬೇಕು ಎಂದರೆ ಜನತಂತ್ರದಲ್ಲಿ ಭಾಗವಹಿಸುವ ಎಲ್ಲರೂ ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ.</p>



<p><strong>ಮರೀಚಿಕೆಯಾಗಿರುವ ವೈಜ್ಞಾನಿಕ ಮನೋವೃತ್ತಿ</strong><strong></strong></p>



<p>ಶಿಕ್ಷಣ, ಆರ್ಥಿಕ ಅಭಿವೃದ್ಧಿ, ಆಧುನಿಕ ತಂತ್ರಜ್ಞಾನ ಇವುಗಳ ಬೆಳವಣಿಗೆಯಾದಾಗ ಅದರ ಪರಿಣಾಮವಾಗಿ ಸಹಜವಾಗಿಯೇ ಜನರಲ್ಲಿ ವೈಚಾರಿಕತೆ ಬೆಳೆಯುತ್ತದೆ ಎಂಬ ಒಂದು ನಂಬಿಕೆಯಿತ್ತು. ಇದೊಂದು ಮೂಢನಂಬಿಕೆ ಎಂದು ಸಾಬೀತಾಗಿದೆ. ಮೂಢನಂಬಿಕೆ ಕಡಿಮೆಯಾಗುವ ಬದಲು ಹೆಚ್ಚಾಗುತ್ತಿದೆ; ಹೆಚ್ಚು ಆಳವಾಗಿ ಬೇರೂರುತ್ತಿದೆ. ವಿಪರ್ಯಾಸದ ಸಂಗತಿಯೆಂದರೆ ದಟ್ಟವಾದ, ಅಖಂಡವಾದ, ಅಚಲವಾದ ಮೌಢ್ಯವನ್ನು ಜನರಲ್ಲಿ ಬಿತ್ತಿ ಬೆಳೆಸಲು ಆಧುನಿಕ ವಿಜ್ಞಾನ ತಂತ್ರಜ್ಞಾನದ ಸಾಧನಗಳನ್ನೇ ಬಳಸಿಕೊಳ್ಳುತ್ತಿರುವುದು. ಮೌಢ್ಯವನ್ನು ಬೆಳೆಸುವುದು, ಕಣ್ಣುಮುಚ್ಚಿ ಹೇಳಿದ್ದನ್ನು ನಂಬುವ ಮನೋದಾಸ್ಯವನ್ನು ಪೋಷಿಸುವುದು ಫಲಜ್ಯೋತಿಷ, ವಾಸ್ತು, ಸಂಖ್ಯಾಶಾಸ್ತ್ರ, ಮಾಂತ್ರಿಕ ಶಕ್ತಿಯ ವಸ್ತುಗಳನ್ನು ಮಾರುವಂಥ ಕೆಲವರಿಗೆ&nbsp; ಲಾಭದಾಯಕ ವ್ಯಾಪಾರವಾದರೆ, ಸ್ವಾರ್ಥಿ ರಾಜಕಾರಣಿಗಳಿಗೆ ಇದು ಶೋಷಣೆಯ ಸಾಧನವಾಗಿವೆ.</p>



<p>ಸಾಮಾಜಿಕ ಹೊಣೆಗಾರಿಕೆ ಎನ್ನುವುದರ ಮೂಲ ಕಾಗುಣಿತವೂ ಗೊತ್ತಿರದ ಮಾಧ್ಯಮಗಳು, ಅವುಗಳನ್ನು ಬಳಸಿಕೊಳ್ಳುವ ವಂಚಕರು, ಅವರ ಮಾತಿಗೆ ಮರುಳಾಗಿ ಕಂಗಾಲಾಗಿರುವ, ಭಯಗ್ರಸ್ಥರಾಗಿರುವ ಜನ ಸಾಮಾನ್ಯರು ಹೀಗೆ ಅತಾರ್ಕಿಕವಾಗಿ ಮಾತಾಡಿದರೆ, ಆಚರಿಸಿದರೆ ಅದೊಂದು ಮಾತು. ಆದರೆ, ನಮ್ಮ ಪರವಾಗಿ, ಪ್ರತಿನಿಧಿಗಳಾಗಿ ನಮ್ಮ ದೇಶವನ್ನು ನಿರ್ವಹಿಸಿ ಎಂದು ನಾವು ಗ್ರಾಮ ಮಟ್ಟದಿಂದ ಹಿಡಿದು ಸಂಸತ್ತಿನ ಮಟ್ಟದ ವರೆಗೆ ಆಯ್ಕೆ ಮಾಡಿ ಕಳಿಸುವ ರಾಜಕಾರಣಿಗಳೂ ಯಾವುದೇ ನಾಚಿಕೆಯಿಂದಲ್ಲದೇ ಮುಜುಗರವಿಲ್ಲದೇ ಮೂಢಾಚರಣೆಯಲ್ಲಿ ತೊಡಗಿರುವುದು ತುಂಬ ವಿಷಾದದ ಸಂಗತಿ.</p>



<p>ಸಂವಿಧಾನದ ಅನುಚ್ಛೇದ 25-28ರಲ್ಲಿ ಭಾರತದ ನಾಗರೀಕರು ತಮ್ಮ ಆಯ್ಕೆಯ ಧರ್ಮವನ್ನು ಅನುಸರಿಸುವ, ಬೋಧಿಸುವ, ಪ್ರಚಾರ ಮಾಡುವ ಹಕ್ಕು ಮತ್ತು ಸ್ವಾತಂತ್ರ್ಯವನ್ನು ನೀಡುತ್ತದೆ. ದೇಶದ ಬಹುಧರ್ಮೀಯ ಮತ್ತು ಬಹುತ್ವದ ಹಿನ್ನೆಲೆಯಲ್ಲಿ ಇದನ್ನು ಇನ್ನೊಂದು ಧರ್ಮವನ್ನು ಅನುಸರಿಸುವ ನಾಗರಿಕರ ಹಕ್ಕುಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ಮಾಡಬೇಕು ಎಂದು ನಿರೀಕ್ಷಿಸಲಾಗುತ್ತದೆ. ಆದರೆ, ಇದೆಲ್ಲಾ, ನಾಗರಿಕರ ವೈಯಕ್ತಿಕ ಹಕ್ಕಿನ ಪ್ರಶ್ನೆಯಾಯಿತು. ಆದರೆ ಇಡೀ ರಾಷ್ಟ್ರಕ್ಕೆ ತನ್ನದೇ ಆದ ಧರ್ಮ ಎಂಬುದಿಲ್ಲ.</p>



<p>ನವೆಂಬರ್ 5, 2019ರಂದು, 5ನೇ ಇಂಡಿಯಾ ಇಂಟರ್ ನ್ಯಾಷನಲ್ ಸೈನ್ಸ್ ಫೆಸ್ಟಿವಲನ್ನು ಉದ್ಘಾಟಿಸುತ್ತಾ,&nbsp;&nbsp;&nbsp; ಪ್ರಧಾನಿ ಮೋದಿಯವರು &nbsp;ಜನರಲ್ಲಿ ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸುವುದು ಎಷ್ಟೊಂದು ಮಹತ್ವದ ವಿಚಾರ ಎಂಬುದರ ಕುರಿತು ವಿದ್ವತ್ಪೂರ್ಣವಾಗಿ ಮಾತಾಡಿದರು, ಅದೇ ವರ್ಷ ಜನವರಿ 3ರಂದು ೧೦೬ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಉದ್ಘಾಟನೆಯೆ ವೇಳೆಯಲ್ಲಿ ಪುರಾಣದ ಉದಾಹರಣೆಗಳನ್ನು ಕೊಟ್ಟು ಪ್ಲ್ಯಾಸ್ಟಿಕ್ ಸರ್ಜರಿ, ಜೆನೆಟಿಕ್ ಇಂಜಿನಿಯರಿಂಗ್, ವಿಮಾನಯಾನ ಸಾವಿರಾರು ವರ್ಷಗಳ ಹಿಂದೆಯೆ ಭಾರತದಲ್ಲಿತ್ತು ಎಂದು ಹೇಳಿದರು. ಜುಲೈ 22ರಂದು ಗುಜರಾತಿನಲ್ಲಿರುವ ಕಕ್ರಪಾರ್ ಪರಮಾಣು ಶಕ್ತಿ ಕೇಂದ್ರ ಮಾಡಿದ ಪರಮ ಸಾಧನೆಯ ಆಚರಣೆಗಾಗಿ ಇದ್ದಲ್ಲಿಂದಲೇ ವಿಜ್ಞಾನಿಗಳಿಗೆ ಅಭಿನಂದನೆ ಹೇಳಿದರು, ಖುದ್ದಾಗಿ ಹೋಗಲಿಲ್ಲ; ಆದರೆ ಆಗಸ್ಟ್ 5ರಂದು ಅಯೋದ್ಯೆಯ ರಾಮ ಮಂದಿರ ಶಿಲಾನ್ಯಾಸ ಪೂಜೆಗೆ ಸಕಲ ಗೌರವಗಳೊಂದಿಗೆ ಹಾಜರಾದರು. ಇದು ಬೀಜದ ರೂಪದಲ್ಲಿ ನಮ್ಮ ದೇಶದಲ್ಲಿನ ವೈಜ್ಞಾನಿಕ ಮನೋವೃತ್ತಿಯ ಸ್ಥಿತಿಗತಿಯನ್ನು, ಎಡೆಬಿಡಂಗಿತನ, ಗೊಂದಲಗಲಿಬಿಯ ಸ್ಥಿತಿಯನ್ನು ಸೂಚಿಸುತ್ತದೆ. ಈ ಕುರಿತು ನಿಮ್ಮ ಜವಾಬ್ದಾರಿ ಏನು, ಅರಿತುಕೊಳ್ಳಿ.</p>



<p><strong>ಕೃಪೆ: “ಹೊಸರು” ಮಾಸಿಕ</strong></p>



<p></p>



<figure class="wp-block-table"><table class="has-fixed-layout"><tbody><tr><td></td></tr></tbody></table></figure>



<figure class="wp-block-table"><table class="has-fixed-layout"><tbody><tr><td>&nbsp;</td></tr></tbody></table></figure>



<figure class="wp-block-table"><table class="has-fixed-layout"><tbody><tr><td><strong> </strong> </td></tr></tbody></table></figure>



<figure class="wp-block-table"><table class="has-fixed-layout"><tbody><tr><td>&nbsp;</td></tr></tbody></table></figure>



<figure class="wp-block-table"><table class="has-fixed-layout"><tbody><tr><td>&nbsp;</td></tr></tbody></table></figure>



<figure class="wp-block-table"><table class="has-fixed-layout"><tbody><tr><td>&nbsp;</td></tr></tbody></table></figure>
]]></content:encoded>
					
		
		
			</item>
		<item>
		<title>ಲೋಕಸಭೆ ಕಲಾಪದ ಮೊದಲ ದಿನ : ಮೋದಿಗೆ &#8220;ಸಂವಿಧಾನ&#8221; ತೋರಿಸಿ ಮುಜುಗರ ತರಿಸಿದ ರಾಹುಲ್</title>
		<link>https://peepalmedia.com/rahul-embarrassed-modi-by-showing-constitution/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 24 Jun 2024 12:55:42 +0000</pubDate>
				<category><![CDATA[ರಾಜಕೀಯ]]></category>
		<category><![CDATA[constitution]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<guid isPermaLink="false">https://peepalmedia.com/?p=41286</guid>

					<description><![CDATA[ಲೋಕಸಭೆ ಕಲಾಪದ ಮೊದಲ ದಿನವೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನರೇಂದ್ರ ಮೋದಿ ಕಡೆಗೆ ಸಂವಿಧಾನದ ಪ್ರತಿ ತೋರಿಸುವ ಮೂಲಕ &#8216;ನಾವು ಸಂವಿಧಾನದ ಪರ&#8217; ಎಂಬ ಸಂದೇಶ ರವಾನಿಸಿದ್ದಾರೆ. ಮೊದಲ ದಿನ ನೂತನ ಸಂಸದರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಮೊದಲು ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲೇ ಇದು ನಡೆದಿದೆ. ಮೊದಲನೆಯದಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ಪ್ರಮಾಣ ವಚನ ಸ್ವೀಕರಿಸಲು ಕರೆಯಲಾಯಿತು. ವಾರಣಾಸಿ ಕ್ಷೇತ್ರದಿಂದ ಆಯ್ಕೆಯಾದ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಲು ತೆರಳುತ್ತಿದ್ದಂತೆಯೇ, ರಾಹುಲ್ [&#8230;]]]></description>
										<content:encoded><![CDATA[
<p></p>



<p>ಲೋಕಸಭೆ ಕಲಾಪದ ಮೊದಲ ದಿನವೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನರೇಂದ್ರ ಮೋದಿ ಕಡೆಗೆ ಸಂವಿಧಾನದ ಪ್ರತಿ ತೋರಿಸುವ ಮೂಲಕ &#8216;ನಾವು ಸಂವಿಧಾನದ ಪರ&#8217; ಎಂಬ ಸಂದೇಶ ರವಾನಿಸಿದ್ದಾರೆ. ಮೊದಲ ದಿನ ನೂತನ ಸಂಸದರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಮೊದಲು ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲೇ ಇದು ನಡೆದಿದೆ.</p>



<p>ಮೊದಲನೆಯದಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ಪ್ರಮಾಣ ವಚನ ಸ್ವೀಕರಿಸಲು ಕರೆಯಲಾಯಿತು. ವಾರಣಾಸಿ ಕ್ಷೇತ್ರದಿಂದ ಆಯ್ಕೆಯಾದ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಲು ತೆರಳುತ್ತಿದ್ದಂತೆಯೇ, ರಾಹುಲ್ ಗಾಂಧಿ ತಾವು ಕುಳಿತ ಜಾಗದಿಂದಲೇ ಸಂವಿಧಾನ ಪ್ರತಿ ತೋರಿಸಿ ನರೇಂದ್ರ ಮೋದಿಗೆ ಮುಜುಗರ ತರಿಸಿದ್ದಾರೆ.</p>



<p>ಕಲಾಪ ಆರಂಭಕ್ಕೆ ಮುನ್ನ ಕಾಂಗ್ರೆಸ್ ಪ್ರಜಾಪ್ರಭುತ್ವ ಉಳಿಸಿ ಎಂದು ಪಾರ್ಲಿಮೆಂಟ್ ಬಳಿ ಪ್ರತಿಭಟನೆ ನಡೆಸಿತ್ತು. ಈ ವೇಳೆ ಎಲ್ಲಾ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಸಂವಿಧಾನ ಹಿಡಿದು ಪ್ರತಿಭಟನೆ ನಡೆಸಿದ್ದರು.</p>



<p>ಸಂಸತ್ ನ ಒಳಗೂ ಮೋದಿ ವಿರುದ್ಧ ಸಂವಿಧಾನ ಪುಸ್ತಕ ಪ್ರದರ್ಶಿಸುವ ಮೂಲಕ ನಾವು ಪ್ರಜಾಪ್ರಭತ್ವ ಉಳಿಸಲು ಬಂದಿದ್ದೇವೆ ಎಂದು ರಾಹುಲ್ ಸೂಚನೆ ನೀಡಿದರು. ಆದರೆ ಮೋದಿ ರಾಹುಲ್ ಕಡೆ ಕಿಡಿ ನೋಟ ಬೀರಿ ಪ್ರಮಾಣವಚನ ಸ್ವೀಕರಿಸಲು ತೆರಳಿದ್ದು ಇಂದಿನ ಸದನ ಸ್ವಾರಸ್ಯ ವಿಚಾರವಾಗಿದೆ.</p>



<p>ಕಳೆದ ಅವಧಿಯಲ್ಲಿ ನರೇಂದ್ರ ಮೋದಿ ಸಂಪುಟದ ಸಚಿವರು ಹಾಗೂ ಅನೇಕ ಬಿಜೆಪಿ ಸಂಸದರು ಸಂವಿಧಾನ ಬದಲಾಯಿಸಿಯೇ ತೀರುತ್ತೇವೆ ಎಂದು ಉದ್ಧಟತನದ ಮಾತನ್ನಾಡಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ &#8220;ಭಾರತ್ ಐಕ್ಯತಾ ಯಾತ್ರೆ&#8221;ಯುದ್ದಕ್ಕೂ ಸಂವಿಧಾನ ಪ್ರತಿ ಹಿಡಿದುಕೊಂಡೇ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದರು.</p>



<p>ಅಷ್ಟೇ ಅಲ್ಲದೇ ತಮ್ಮ ಚುನಾವಣಾ ಪ್ರಚಾರದುದ್ದಕ್ಕೂ ನರೇಂದ್ರ ಮೋದಿ ವಿರುದ್ಧದ ತಮ್ಮ ಭಾಷಣಗಳಲ್ಲಿ ಸಂವಿಧಾನ ಪ್ರತಿಯ ಪ್ರದರ್ಶನ ಮಾಡುವ ಮೂಲಕ ನಾವು ಸಂವಿಧಾನ ಉಳಿಸಲು ಬರುತ್ತಿದ್ದೇವೆ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದರು. ಅದು ಸಂಸತ್ ಅಧಿವೇಶನದ ಸಂದರ್ಭದಲ್ಲೂಮುಂದುವರೆದಿರುವುದು ವಿಶೇಷ.</p>
]]></content:encoded>
					
		
		
			</item>
		<item>
		<title>ಸಂವಿಧಾನ ಬದಲಿಸಲು ಪ್ರಯತ್ನಿಸಿದರೆ ರಾಜೀನಾಮೆ ನೀಡುತ್ತೇನೆ: ಕೇಂದ್ರ ಸಚಿವ ಅಠವಳೆ</title>
		<link>https://peepalmedia.com/if-they-try-to-change-the-constitution-i-will-resign-union-minister-athawale/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 10 Apr 2024 12:22:32 +0000</pubDate>
				<category><![CDATA[Uncategorized]]></category>
		<category><![CDATA[ಲೋಕಸಭೆ ಚುನಾವಣೆ -2024]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[constitution]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[modi]]></category>
		<category><![CDATA[modiji]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[ramadasathavale]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=38198</guid>

					<description><![CDATA[ಭಂಡಾರಾ (ಮಹಾರಾಷ್ಟ್ರ): ಸಂವಿಧಾನವನ್ನು ಬದಲಿಸುವ ಉದ್ದೇಶ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಖಂಡಿತ ಇಲ್ಲ. ಅಂಥ ಒಂದು ಉದ್ದೇಶ ಇದ್ದದ್ದು ಗೊತ್ತಾದರೆ ನಾನು ಅವತ್ತೇ ರಾಜಿನಾಮೆ ನೀಡುತ್ತೇನೆ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ರಾಮದಾಸ್ ಅಠವಳೆ ಘೋಷಿಸಿದ್ದಾರೆ. &#160;ಮಹಾರಾಷ್ಟ್ರದ ಭಂಡಾರಾ-ಗೊಂಡಿಯಾ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸುನಿಲ್ ಮೆಂಧೆ ಪರ ಪ್ರಚಾರ ಜಾಥಾದಲ್ಲಿ ಭಾಗವಹಿಸಿದ್ದ ಸಂದರ್ಭಧಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಂವಿಧಾನವನ್ನು ಬದಲಾಯಿಸಲು ಯೋಜಿಸುತ್ತಿದೆ ಎಂಬ ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ ಎಂದು ತಳ್ಳಿ ಹಾಕಿದ್ದಾರೆ. [&#8230;]]]></description>
										<content:encoded><![CDATA[
<p><strong>ಭಂಡಾರಾ (ಮಹಾರಾಷ್ಟ್ರ):</strong> ಸಂವಿಧಾನವನ್ನು ಬದಲಿಸುವ ಉದ್ದೇಶ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಖಂಡಿತ ಇಲ್ಲ. ಅಂಥ ಒಂದು ಉದ್ದೇಶ ಇದ್ದದ್ದು ಗೊತ್ತಾದರೆ ನಾನು ಅವತ್ತೇ ರಾಜಿನಾಮೆ ನೀಡುತ್ತೇನೆ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ರಾಮದಾಸ್ ಅಠವಳೆ ಘೋಷಿಸಿದ್ದಾರೆ.</p>



<p>&nbsp;ಮಹಾರಾಷ್ಟ್ರದ ಭಂಡಾರಾ-ಗೊಂಡಿಯಾ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸುನಿಲ್ ಮೆಂಧೆ ಪರ ಪ್ರಚಾರ ಜಾಥಾದಲ್ಲಿ ಭಾಗವಹಿಸಿದ್ದ ಸಂದರ್ಭಧಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಂವಿಧಾನವನ್ನು ಬದಲಾಯಿಸಲು ಯೋಜಿಸುತ್ತಿದೆ ಎಂಬ ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ ಎಂದು ತಳ್ಳಿ ಹಾಕಿದ್ದಾರೆ.</p>



<p>&nbsp;ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಈ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದರೆ, ಸಂವಿಧಾನವನ್ನು ಬದಲಾಯಿಸುತ್ತದೆ ಎಂದು ಆರೋಪ ಮಾಡುವ ಮೂಲಕ ಕಾಂಗ್ರೆಸ್‌ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ. ಅವರ ಆರೋಪ ಸಂಪೂರ್ಣವಾಗಿ ಆಧಾರರಹಿತವಾಗಿದೆ. ಒಂದು ವೇಳೆ ಸರ್ಕಾರ ಅಂತಹ ಪ್ರಯತ್ನ ನಡೆಸಿದರೆ, ನಾನು ಸಂಪುಟಕ್ಕೆ ರಾಜೀನಾಮೆ ನೀಡುತ್ತೇನೆ. ಅಲ್ಲದೆ, ಬಿಜೆಪಿಗೆ ನೀಡುತ್ತಿರುವ ಬೆಂಬಲವನ್ನು ಹಿಂಪಡೆಯುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.</p>



<p>ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಇತ್ತೀಚೆಗೆ ಸಂವಿಧಾನವನ್ನು ತಿದ್ದುಪಡಿ ಮಾಡಲು ಸಂಸತ್ತಿನ ಉಭಯ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಅದಕ್ಕಾಗಿ, ಲೋಕಸಭೆಯಲ್ಲಿ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂದಿದ್ದರು. ಅವರ ಹೇಳಿಕೆಯ ಬಳಿಕ, ವಿಪಕ್ಷಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಬಿಜೆಪಿ, ‘ಆ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ’ ಎಂದಷ್ಟೇ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.</p>
]]></content:encoded>
					
		
		
			</item>
		<item>
		<title>ಸಭಾಧ್ಯಕ್ಷರ ಕ್ಷಮೆ ಯಾಚಿಸಲು ರಾಘವ್‌ ಚಡ್ಡಾ ಸಿದ್ದ</title>
		<link>https://peepalmedia.com/raghav-chadha-agrees-to-apologize-to-rajya-sabha/</link>
		
		<dc:creator><![CDATA[Charan Aivarnad]]></dc:creator>
		<pubDate>Fri, 03 Nov 2023 11:24:06 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[Aam Aadmi Party]]></category>
		<category><![CDATA[AAP]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[constitution]]></category>
		<category><![CDATA[india]]></category>
		<category><![CDATA[judgement]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[law]]></category>
		<category><![CDATA[legal]]></category>
		<category><![CDATA[member of parliment]]></category>
		<category><![CDATA[MP]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[raghav chadda]]></category>
		<category><![CDATA[state politics]]></category>
		<category><![CDATA[Supreme Court]]></category>
		<category><![CDATA[supreme court́]]></category>
		<category><![CDATA[supreme court judgement]]></category>
		<category><![CDATA[Supreme Court of India]]></category>
		<category><![CDATA[trending news]]></category>
		<category><![CDATA[verdict]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=31112</guid>

					<description><![CDATA[ಬೆಂಗಳೂರು,ನವೆಂಬರ್.‌03: ಆಮ್ ಆದ್ಮಿ ಪಾರ್ಟಿ ಸಂಸದ ರಾಘವ್ ಚಡ್ಡಾ ಅವರ ಅಮಾನತು ವಿಚಾರದಲ್ಲಿ &#8216;ಮುಂದಕ್ಕೆ ತೆಗೆದುಕೊಂಡು ಹೋಗುವ &#8211; way forward&#8217; ನಿರ್ಧಾರವನ್ನು ಮಾಡಿರುವ ಸುಪ್ರೀಂ ಕೋರ್ಟ್ ಇಂದು ರಾಜ್ಯಸಭೆಯ ಅಧ್ಯಕ್ಷರ ಬಳಿ ಬೇಷರತ್ ಕ್ಷಮೆಯಾಚಿಸಲು ಒಪ್ಪಿಗೆ ಸೂಚಿಸಿದ ಚಡ್ಡಾ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ ಮತ್ತು ಅದನ್ನು ಇದನ್ನು ಪರಿಗಣಿಸಿ ʼಸಹಾನುಭೂತಿʼ ತೋರುವಂತೆ ಸಭಾಧ್ಯಕ್ಷರನ್ನು ಒತ್ತಾಯಿಸಿದೆ ಎಂದು ಲೈವ್‌ಲಾ ವರದಿ ಮಾಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ [&#8230;]]]></description>
										<content:encoded><![CDATA[
<p><strong>ಬೆಂಗಳೂರು,ನವೆಂಬರ್.‌03: </strong>ಆಮ್ ಆದ್ಮಿ ಪಾರ್ಟಿ ಸಂಸದ ರಾಘವ್ ಚಡ್ಡಾ ಅವರ ಅಮಾನತು ವಿಚಾರದಲ್ಲಿ &#8216;ಮುಂದಕ್ಕೆ ತೆಗೆದುಕೊಂಡು ಹೋಗುವ &#8211; way forward&#8217; ನಿರ್ಧಾರವನ್ನು ಮಾಡಿರುವ ಸುಪ್ರೀಂ ಕೋರ್ಟ್ ಇಂದು ರಾಜ್ಯಸಭೆಯ ಅಧ್ಯಕ್ಷರ ಬಳಿ ಬೇಷರತ್ ಕ್ಷಮೆಯಾಚಿಸಲು ಒಪ್ಪಿಗೆ ಸೂಚಿಸಿದ ಚಡ್ಡಾ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ ಮತ್ತು ಅದನ್ನು ಇದನ್ನು ಪರಿಗಣಿಸಿ ʼಸಹಾನುಭೂತಿʼ ತೋರುವಂತೆ ಸಭಾಧ್ಯಕ್ಷರನ್ನು ಒತ್ತಾಯಿಸಿದೆ ಎಂದು ಲೈವ್‌ಲಾ ವರದಿ ಮಾಡಿದೆ.</p>



<p>ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ  ಅವರನ್ನೊಳಗೊಂಡ ಪೀಠವು ಚಡ್ಡಾ ಸಂಸತ್ತಿನ ಅತ್ಯಂತ ಕಿರಿಯ ಮತ್ತು ಮೊದಲ ಬಾರಿಗೆ ಸಂಸದರಾದವರು. ಸಭಾಧ್ಯಕ್ಷರು ಈ ವಿಷಯದಲ್ಲಿ ವಸ್ತುನಿಷ್ಠ ದೃಷ್ಟಿಕೋನದಿಂದ ಪರಿಗಣಿಸಬೇಕು ಎಂದಿದೆ. ಕಳೆದ ವಿಚಾರಣೆಯಲ್ಲಿ ಪೀಠವು ಚಡ್ಡಾ ಅವರ ಅನಿರ್ದಿಷ್ಟ ಅವಧಿಯ ಅಮಾನತಿನ ಬಗ್ಗೆ ಕಳವಳ ವ್ಯಕ್ತಪಡಿಸಿ, ವಿರೋಧ ಪಕ್ಷದ ಧ್ವನಿಯನ್ನು ಹೊರಗಿಡುವುದು ಗಂಭೀರ ವಿಷಯ ಎಂದು ಟೀಕೆ ಮಾಡಿತ್ತು. ಸಿಜೆಐ &#8220;ನಾವು ಸಂಸತ್ತಿನಿಂದ ಆ ಧ್ವನಿಗಳನ್ನು ಹೊರಗಿಡದಂತೆ ಬಹಳ ಜಾಗರೂಕರಾಗಿರಬೇಕು,&#8221; ಎಂದು ಎಚ್ಚರಿಸಿದ್ದರು.</p>



<p><strong>ಕೇಸ್‌:</strong> <a href="https://indiankanoon.org/doc/185605658/" data-type="link" data-id="https://indiankanoon.org/doc/185605658/">Raghav Chadha v. Rajya Sabha Secretariat And Ors. W.P.(C) No. 1155/2023</a></p>



<p>&#8220;ಕಳೆದ ಬಾರಿ ಅವರು ಕ್ಷಮೆಯಾಚಿಸುತ್ತಿದ್ದರೆ, ಅತ್ಯಂತ ಪ್ರತಿಷ್ಠಿತ ವ್ಯಕ್ತಿ ಮತ್ತು ಸಂವಿಧಾನದ ಮಹಾನ್ ಸ್ಥಾನದಲ್ಲಿರುವ  ಸಭಾಧ್ಯಕ್ಷರು, ಬಹುಶಃ ವಸ್ತುನಿಷ್ಠ ದೃಷ್ಟಿಕೋನದಿಂದ ಅದನ್ನು ಸ್ವೀಕರಿಸುತ್ತಿದ್ದರೋ ಏನೋ,” ಎಂದು ಸಿಜೆಐ ಹೇಳಿದ್ದಾರೆ.</p>



<p>ಅಟಾರ್ನಿ ಜನರಲ್ ಹಾಗೂ ಸಾಲಿಸಿಟರ್ ಜನರಲ್ ಇದಕ್ಕೆ ಒಪ್ಪಿಗೆ ಸೂಚಿಸಿದ ನಂತರ ಸಿಜೆಐ ಅವರು ಕ್ಷಮೆ ಯಾಚಿಸಲು ಸಿದ್ಧರಿದ್ದಾರೆಯೇ ಎಂದು ಚಡ್ಡಾ ಪರವಾಗಿ ಹಾಜರಾದ ವಕೀಲ ಶಾದನ್ ಫರಾಸತ್ ಅವರನ್ನು ಕೇಳಿದ್ದಾರೆ.</p>



<p>ಸಿಜೆಐ, &#8220;ಮಿಸ್ಟರ್ ಫರಾಸತ್, ನೀವು ಈಗಾಗಲೇ ಆರು ಬಾರಿ ಕ್ಷಮೆಯಾಚಿಸಿದ್ದೀರಿ. ಆದರೆ ನೀವು ಗೌರವಾನ್ವಿತ ಸಭಾಧ್ಯಕ್ಷರೊಂದಿಗೆ ಅಪಾಯಿಂಟ್‌ಮೆಂಟ್ ಪಡೆಯಲು ಮತ್ತು ಅಧ್ಯಕ್ಷರನ್ನು ಭೇಟಿ ಮಾಡಲು ಸಿದ್ಧರಿದ್ದೀರಾ, ಕ್ಷಮೆಯಾಚಿಸಲು ಬಯಸುತ್ತೀರಾ?&#8221; ಎಂದು ಕೇಳಿದ್ದಾರೆ.</p>



<p>ಫರಸತ್ ಅವರು ಇದಕ್ಕೆ ಒಪ್ಪಿಕೊಂಡಿದ್ದು, &#8220;ಅವರು ಹಿರಿಯರ ಮನೆಯಲ್ಲಿ ಅತ್ಯಂತ ಕಿರಿಯ ಸದಸ್ಯ. ಅವರಿಗೆ ಕ್ಷಮೆಯಾಚಿಸಲು ಮನಸ್ಸಿಲ್ಲ. ವಿಶೇಷಾಧಿಕಾರ ಸಮಿತಿಗೆ ನಾನು ಬರೆದ ಪತ್ರದಲ್ಲಿಯೂ ನಾನು ಸಭಾಧ್ಯಕ್ಷರಿಗೆ ನನ್ನ ವೈಯಕ್ತಿಕ ಕ್ಷಮೆಯಾಚನೆಯನ್ನು ಹೇಳಿದ್ದೇನೆ&#8230;&#8221; ಅಮಾನತಿನ ವಿರುದ್ಧ ಎದ್ದಿರುವ ಕಾನೂನು ವಿವಾದಗಳಿಗೆ ಕ್ಷಮೆಯಾಚನೆಯು ಪೂರ್ವಾಗ್ರಹವಾಗುವುದಿಲ್ಲ ಎಂದು ಫರಾಸತ್ ಹೇಳಿದ್ದಾರೆ.</p>



<p>ಪೀಠವು &#8220;ರಾಜ್ಯಸಭೆಯಲ್ಲಿ ತಾನು ಅತ್ಯಂತ ಕಿರಿಯ ಸದಸ್ಯ ಎಂದು ಶ್ರೀ ಫರಸತ್ ಹೇಳುತ್ತಾರೆ. ಅವರು ಸದಸ್ಯರಾಗಿರುವ ಮನೆಯ ಘನತೆಗೆ ಧಕ್ಕೆ ತರುವ ಉದ್ದೇಶವಿಲ್ಲ ಎಂದು ಮನಸ್ಸಿನಲ್ಲಿಟ್ಟುಕೊಂಡು, ಅರ್ಜಿದಾರರು ಸಭಾಧ್ಯಕ್ಷರೊಂದಿಗೆ ಅಪಾಯಿಂಟ್ಮೆಂಟ್ ಕೇಳುತ್ತಾರೆ ಎಂದು ಶ್ರೀ ಫರಸತ್ ಹೇಳಿಕೆ ಸಲ್ಲಿಸಿದ್ದಾರೆ. ಅವರು ಕೇಳಬಹುದಾದ ಬೇಷರತ್ತಾದ ಕ್ಷಮೆಯನ್ನು ಸಹಾನುಭೂತಿಯಿಂದ ಪರಿಗಣಿಸಿ,” ಎಂದು ಹೇಳಿದೆ.</p>



<p>GNCTD (ತಿದ್ದುಪಡಿ) ಮಸೂದೆ 2023 ರ ಆಯ್ಕೆ ಸಮಿತಿಯ ಸದಸ್ಯರಾಗಿ ಒಪ್ಪಿಗೆ ಇಲ್ಲದೆ ನಾಲ್ವರು ಎಂಪಿಗಳ ಹೆಸರನ್ನು ಪ್ರಸ್ತಾಪಿಸಿದ (breach of privilege)&nbsp; ಕಾರಣಕ್ಕೆ ಅಗಸ್ಟ್‌ 1ರಂದು ಚಡ್ಡಾರವರನ್ನು ಅಮಾನತು ಮಾಡಲಾಗಿತ್ತು. &nbsp;</p>



<p><br><br></p>
]]></content:encoded>
					
		
		
			</item>
	</channel>
</rss>
