<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Cooker bomb blast &#8211; Peepal Media</title>
	<atom:link href="https://peepalmedia.com/tag/cooker-bomb-blast/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sat, 29 Jul 2023 07:55:31 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Cooker bomb blast &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಸುವರ್ಣ ನ್ಯೂಸ್ ಮೇಲೆ ಮಾನನಷ್ಟ ಮೊಕದ್ದಮೆ : ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸ್ಪಷ್ಟನೆ</title>
		<link>https://peepalmedia.com/defamation-case-against-suvarna-news/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 29 Jul 2023 07:54:49 +0000</pubDate>
				<category><![CDATA[ಮೀಡಿಯಾ]]></category>
		<category><![CDATA[Ajith Hanumakkanavar]]></category>
		<category><![CDATA[Cooker bomb blast]]></category>
		<category><![CDATA[Kimmane Rathnakar]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[sharik]]></category>
		<guid isPermaLink="false">https://peepalmedia.com/?p=24585</guid>

					<description><![CDATA[ಮಾಜಿ ಸಚಿವ ಕಿಮ್ಮನೆ ರತ್ನಾಕರ ಅವರ ಕುರಿತು ಸುವರ್ಣ ನ್ಯೂಸ್ ನಲ್ಲಿ ಜನವರಿ 11, 2023 ರಂದು ಪ್ರಸಾರವಾದ ಸುದ್ದಿ ಈಗ ಮತ್ತೆ ಮಹತ್ವ ಪಡೆದುಕೊಂಡಿದೆ. ರಾಜ್ಯ ವಿಧಾನಸಭಾ ಚುನಾವಣೆಗೂ 4 ತಿಂಗಳ ಮುಂಚೆ ಕಿಮ್ಮನೆ ರತ್ನಾಕರ್ ಅವರ ಮನೆ ಮೇಲೆ ಇ.ಡಿ.ದಾಳಿ ಎಂಬ ಸುದ್ದಿಯನ್ನು ಸುವರ್ಣ ನ್ಯೂಸ್ ಮೇಲಿಂದ ಮೇಲೆ ಪ್ರಸಾರ ಮಾಡಿತ್ತು. ಜೊತೆ ದಕ್ಷಿಣ ಕನ್ನಡದ ಕುಕ್ಕರ್ ಬ್ಲಾಸ್ಟ್ ಪ್ರಕರಣದ ಆರೋಪಿ ಶಾರಿಕ್ ಜೊತೆಗೆ ನಂಟು ಇರುವುದಾಗಿಯೂ ವರದಿ ಪ್ರಸಾರ ಮಾಡಿತ್ತು. ಈ ಬಗ್ಗೆ [&#8230;]]]></description>
										<content:encoded><![CDATA[
<p>ಮಾಜಿ ಸಚಿವ ಕಿಮ್ಮನೆ ರತ್ನಾಕರ ಅವರ ಕುರಿತು ಸುವರ್ಣ ನ್ಯೂಸ್ ನಲ್ಲಿ ಜನವರಿ 11, 2023 ರಂದು ಪ್ರಸಾರವಾದ ಸುದ್ದಿ ಈಗ ಮತ್ತೆ ಮಹತ್ವ ಪಡೆದುಕೊಂಡಿದೆ. ರಾಜ್ಯ ವಿಧಾನಸಭಾ ಚುನಾವಣೆಗೂ 4 ತಿಂಗಳ ಮುಂಚೆ ಕಿಮ್ಮನೆ ರತ್ನಾಕರ್ ಅವರ ಮನೆ ಮೇಲೆ ಇ.ಡಿ.ದಾಳಿ ಎಂಬ ಸುದ್ದಿಯನ್ನು ಸುವರ್ಣ ನ್ಯೂಸ್ ಮೇಲಿಂದ ಮೇಲೆ ಪ್ರಸಾರ ಮಾಡಿತ್ತು. ಜೊತೆ ದಕ್ಷಿಣ ಕನ್ನಡದ ಕುಕ್ಕರ್ ಬ್ಲಾಸ್ಟ್ ಪ್ರಕರಣದ ಆರೋಪಿ ಶಾರಿಕ್ ಜೊತೆಗೆ ನಂಟು ಇರುವುದಾಗಿಯೂ ವರದಿ ಪ್ರಸಾರ ಮಾಡಿತ್ತು. ಈ ಬಗ್ಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಚಾನಲ್ ಮತ್ತು ಅದರ ಪ್ರಧಾನ ಸಂಪಾದಕ ಅಜಿತ್ ಹನಮಕ್ಕನವರ್ ಮೇಲೆ ಪ್ರಕರಣ ದಾಖಲು ಮಾಡಲು ಚಿಂತನೆ ನಡೆಸಿದ್ದಾರೆ.</p>



<p>ಈ ಬಗ್ಗೆ <strong>ಪೀಪಲ್ ಮೀಡಿಯಾ </strong>ಗೆ ಸ್ಪಷ್ಟನೆ ನೀಡಿದ ಕಿಮ್ಮನೆ ರತ್ನಾಕರ್, &#8216;ಸುದ್ದಿ ಮಾಧ್ಯಮದ ಮೇಲೆ ಪ್ರಕರಣ ದಾಖಲಿಸುವುದು ಸ್ಪಷ್ಟ. ಪೂರ್ವಾಪರ ಅರಿಯದೇ ಉದ್ದೇಶಪೂರ್ವಕವಾಗಿ ತೇಜೋವಧೆ ಮಾಡಲೆಂದೇ ಈ ಸುದ್ದಿ ಪ್ರಸಾರ ಮಾಡಿದ್ದಾರೆ. ಈ ಬಗ್ಗೆ ಒಂದು ಕರೆ ಮಾಡಿ ಸ್ಪಷ್ಟನೆ ಕೇಳಬಹುದಿತ್ತು. ಆದರೆ ಅದ್ಯಾವುದರ ಗೊಡವೆಗೂ ಹೋಗದೇ ನೇರವಾಗಿ ನನ್ನ ಮೇಲೆ ದೇಶದ್ರೋಹದಂತಾ ಆರೋಪ ಮಾಡಿರುವುದು ಅಕ್ಷಮ್ಯ ಅಪರಾಧ. ಹಾಗಾಗಿ ಚಾನಲ್ ಮೇಲೆ ಮತ್ತು ಅದರ ಮುಖ್ಯಸ್ಥರ ಮೇಲೆ ಪ್ರಕರಣ ದಾಖಲು ಮಾಡೇ ಮಾಡುತ್ತೇನೆ&#8217; ಎಂದು ಸ್ಪಷ್ಟನೆ ನೀಡಿದ್ದಾರೆ.</p>



<p>&#8216;ಈಗಾಗಲೇ ಆ ವರದಿ ಪ್ರಸಾರವಾಗಿ 6 ತಿಂಗಳ ಮೇಲಾಗಿದೆ, ಅಂದೇ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬಹುದಿತ್ತು, ತಡ ಯಾಕೆ&#8217; ಎಂಬ ಪ್ರಶ್ನೆಗೆ, &#8216;ಚುನಾವಣೆ ಸಂದರ್ಭದಲ್ಲಿ ಬಿತ್ತರಿಸಿದ ಸುದ್ದಿ ಅದಾಗಿದ್ದರಿಂದ ನಾನೂ ಸ್ವಲ್ಪ ಒತ್ತಡದಲ್ಲಿದ್ದೆ. ಆದರೆ ಕಾನೂನು ಕ್ರಮದ ಬಗ್ಗೆ ಅಂದೇ ಚಿಂತನೆ ಮಾಡಿದ್ದೆ. ಮೇಲಾಗಿ ವರದಿ ಪ್ರಸಾರವಾದ ದಿನದಿಂದ 3 ವರ್ಷಗಳ ಒಳಗೆ ಯಾವಾಗ ಬೇಕಾದರೂ ಪ್ರಕರಣ ದಾಖಲಿಸಬಹುದು&#8217; ಎಂದು ಕಿಮ್ಮನೆ ರತ್ನಾಕರ್ ಸ್ಪಷ್ಟನೆ ನೀಡಿದ್ದಾರೆ.</p>



<p>&#8216;ವರದಿ ಪ್ರಸಾರವಾದ ನಂತರ, ತಪ್ಪು ಮಾಹಿತಿ ನೀಡಿದರ ಬಗ್ಗೆ ಕ್ಷಮೆ ಕೇಳಬಹುದಿತ್ತು. ಅಥವಾ ತಮಗೆ ಸಿಕ್ಕ ಮಾಹಿತಿ ತಪ್ಪಾಗಿದೆ ಎಂದೂ ಸ್ಪಷ್ಟನೆ ಕೊಡಬಹುದಿತ್ತು. ಆದರೆ ಇದ್ಯಾವುದೂ ಸುವರ್ಣ ನ್ಯೂಸ್ ಕಡೆಯಿಂದ ಆಗಿಲ್ಲ. ಇದೆಲ್ಲಾ ನೋಡಿದರೆ ಇದು ದುರುದ್ದೇಶಪೂರಿತ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರಿಗೆ ನನ್ನ ತೇಜೋವಧೆ ಮಾಡುವುದೇ ಮುಖ್ಯ ಉದ್ದೇಶವಾಗಿತ್ತು&#8217; ಎಂದು ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.</p>



<p>ಈ ವರದಿ ಪ್ರಸಾರದ ಹಿಂದೆ ಸ್ಥಳೀಯ ಶಾಸಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲರು ಕುಮ್ಮಕ್ಕು ಇದೆ ಎಂಬ ಬಲವಾದ ಅನುಮಾನವಿದೆ. ಸಧ್ಯದಲ್ಲೇ ಈ ಬಗ್ಗೆ ಕ್ರಿಮಿನಲ್ ಪ್ರಕರಣ ಹಾಗೂ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ. ಪ್ರಕರಣ ದಾಖಲಿಸಿದ ನಂತರ ಇವೆಲ್ಲದರ ಸತ್ಯ ತಿಳಿಯಲಿದೆ ಎಂದೂ ಸಹ ಕಿಮ್ಮನೆ ರತ್ನಾಕರ್ <strong>ಪೀಪಲ್ ಮೀಡಿಯಾ </strong>ಗೆ ತಿಳಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಕುಕ್ಕರ್ ಬಾಂಬ್ ಸ್ಫೋಟ: ಆರೋಪಿ ವಿಚಾರಣೆಯೇ ಆರಂಭವಾಗದಿದ್ದರೂ ವದಂತಿ ಹರಡಿದ ಮಾಧ್ಯಮಗಳು</title>
		<link>https://peepalmedia.com/cooker-bomb-blast-even-though-the-trial-of-the-accused-has-not-started-the-media-spread-the-rumour/</link>
		
		<dc:creator><![CDATA[Peepal Media Desk]]></dc:creator>
		<pubDate>Sun, 27 Nov 2022 04:43:09 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[Cooker bomb blast]]></category>
		<category><![CDATA[karnataka]]></category>
		<category><![CDATA[mangalore]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Shakir]]></category>
		<category><![CDATA[Terror attack]]></category>
		<guid isPermaLink="false">https://peepalmedia.com/?p=16699</guid>

					<description><![CDATA[ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೀವ್ರ ಸ್ವರೂಪದ ಆರೋಪಿ, ಶಂಕಿತ ಭಯೋತ್ಪಾದಕ ಶಾರಿಕ್ ವಿಚಾರಣೆ ನಡೆದಿದ್ದರೂ, ಮಾಧ್ಯಮಗಳಲ್ಲಿ ಹಲವು ಬಗೆಯ ವದಂತಿಗಳು ಹರಡಿರುವುದು ಬೆಳಕಿಗೆ ಬಂದಿದೆ. ಆರೋಪಿ ಶಾರಿಕ್ ಮಂಗಳೂರು ಅಲ್ಲದೆ, ಹಲವು ಕಡೆ ಬಾಂಬ್ ಸ್ಫೋಟ ನಡೆಸಲು ಸಂಚು ನಡೆಸಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಗಾಯಾಳುವಾಗಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಕೀರ್ ಅವರನ್ನು ಈವರೆಗೆ ಪೊಲೀಸರು ವಿಚಾರಣೆ [&#8230;]]]></description>
										<content:encoded><![CDATA[
<p style="font-size:20px"><strong><font style="vertical-align: inherit;"><font style="vertical-align: inherit;">ಮಂಗಳೂರು:</font></font></strong><font style="vertical-align: inherit;"><font style="vertical-align: inherit;"> ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೀವ್ರ ಸ್ವರೂಪದ ಆರೋಪಿ, ಶಂಕಿತ ಭಯೋತ್ಪಾದಕ ಶಾ</font></font>ರಿಕ್<font style="vertical-align: inherit;"><font style="vertical-align: inherit;"> ವಿಚಾರಣೆ ನಡೆದಿದ್ದರೂ, ಮಾಧ್ಯಮಗಳಲ್ಲಿ ಹಲವು ಬಗೆಯ ವದಂತಿಗಳು ಹರಡಿರುವುದು ಬೆಳಕಿಗೆ ಬಂದಿದೆ.</font></font></p>



<p style="font-size:20px"><font style="vertical-align: inherit;"><font style="vertical-align: inherit;">ಆರೋಪಿ ಶಾರಿಕ್ ಮಂಗಳೂರು ಅಲ್ಲದೆ, ಹಲವು ಕಡೆ ಬಾಂಬ್ ಸ್ಫೋಟ ನಡೆಸಲು ಸಂಚು ನಡೆಸಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. </font><font style="vertical-align: inherit;">ಆದರೆ ಗಾಯಾಳುವಾಗಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಕೀರ್ ಅವರನ್ನು ಈವರೆಗೆ ಪೊಲೀಸರು ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ.</font></font></p>



<p style="font-size:20px">ಈ ವಿಷಯವನ್ನು ಸ್ವತಃ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ಪಷ್ಟಪಡಿಸಿದ್ದು, ಶಾರೀಕ್ ವಿಚಾರಣೆ ಇನ್ನೂ ಸಾಧ್ಯವಾಗಿಲ್ಲ. ಇದೊಂದು ಸೂಕ್ಷ್ಮ ವಿಷಯವಾಗಿದ್ದು, ವದಂತಿಗಳನ್ನು ಹರಡಬೇಡಿ ಎಂದು ಮಾಧ್ಯಮಗಳಿಗೆ ಸೂಚಿಸಿದ್ದಾರೆ.</p>



<p style="font-size:20px"><font style="vertical-align: inherit;"><font style="vertical-align: inherit;">ಶಾ</font></font>ರೀಕ್<font style="vertical-align: inherit;"><font style="vertical-align: inherit;"> ಪಡೆಯುತ್ತಿರುವ ಆಸ್ಪತ್ರೆಗೆ ಬಿಗಿಭದ್ರತೆ ಒದಗಿಸಲಾಗಿದೆ ಚಿಕಿತ್ಸೆ, ವೈದ್ಯರು ಮೂರು ಪಾಳಿಗಳಲ್ಲಿ ಭದ್ರತೆ ನೀಡುತ್ತಿದ್ದಾರೆ. </font><font style="vertical-align: inherit;">ಆರೋಪಿಯನ್ನು ಗುರುತಿಸುವ ಸಲುವಾಗಿ ಆತನ ಪೋಷಕರನ್ನು ಒಮ್ಮೆ ಮಾತ್ರ ಆಸ್ಪತ್ರೆಗೆ ಸೇರಿಸಲಾಯಿತು. </font><font style="vertical-align: inherit;">ಅದನ್ನು ಹೊಂದಿಲ್ಲದರೆ ಯಾರಿಗೂ ಸಹ ವಸತಿ ಪ್ರವೇಶಿಸಲು ಬಿಟ್ಟಿಲ್ಲ ಎಂದು ಶಶಿಕುಮಾರ್ ಹೇಳಿದ್ದಾರೆ.</font></font></p>



<p style="font-size:20px">ಕುಕ್ಕರ್ ಬಾಂಬ್ ಸ್ಫೋಟ ಘಟನೆ ನಡೆದಾಗಿನಿಂದಲೂ ಕೆಲವು ದೃಶ್ಯಮಾಧ್ಯಮಗಳು ಹಲವಾರು ಬಗೆಯ ಕಪೋಲಕಲ್ಪಿತ ವರದಿಗಳನ್ನು ಪ್ರಸಾರ ಮಾಡುತ್ತಿದ್ದು, ಪ್ರಕರಣವನ್ನು ಅತಿರಂಜಿತಗೊಳಿಸಲು ಪ್ರಯತ್ನಿಸುತ್ತಲೇ ಇವೆ.</p>



<p style="font-size:20px">ಆರೋಪಿಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯಾಧಿಕಾರಿಗಳು ಹೇಳಿಕೆ ನೀಡುವವರೆಗೆ ಪೊಲೀಸರು ಆತನನ್ನು ವಿಚಾರಣೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಇದುವರೆಗೆ ಆತನ ವಿಚಾರಣೆ ನಡೆದಿಲ್ಲ. ಹೀಗಿರುವಾಗ ಮಾಧ್ಯಮಗಳು ಕಪೋಲಕಲ್ಪಿತ ವರದಿಗಳನ್ನು ಪ್ರಕಟಿಸುವ ಔಚಿತ್ಯವೇನು ಎಂಬ ಪ್ರಶ್ನೆ ಈಗ ಉದ್ಭವಿಸಿದೆ.</p>
]]></content:encoded>
					
		
		
			</item>
		<item>
		<title>ಕುಕ್ಕರ್‌ ಬಾಂಬ್‌ ಸ್ಫೋಟ: ಆರೋಪಿ ಪತ್ತೆ ಹಚ್ಚಿದ ಪೊಲೀಸರು</title>
		<link>https://peepalmedia.com/cooker-bomb-blast-police-have-identified-the-accused/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 21 Nov 2022 10:41:42 +0000</pubDate>
				<category><![CDATA[ದಕ್ಷಿಣ ಕನ್ನಡ]]></category>
		<category><![CDATA[ರಾಜ್ಯ]]></category>
		<category><![CDATA[adjp alok kumar]]></category>
		<category><![CDATA[Cooker bomb blast]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[managlore]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=16091</guid>

					<description><![CDATA[ಮಂಗಳೂರು: ನಗರದ ಗರೋಡಿಯಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಿಸಿದ್ದ ಆರೋಪಿಯನ್ನು ಪೊಲೀಸರು ಪತ್ತೆಹಚ್ಚಿದ್ದು, ಆರೋಪಿಯು ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ನಿವಾಸಿ ಶಾರೀಕ್‌ ಎಂದು ಗುರುತಿಸಿದ್ದಾರೆ. ಶಂಕಿತ ಆರೋಪಿಯು ನಗರದಲ್ಲಿ ಆಟೋ ರಿಕ್ಷಾ ಮೂಲಕ ಕುಕ್ಕರ್‌ ಬಾಂಬ್‌ ಸಾಗುಸುತ್ತಿದ್ದ ವೇಳೆ ಬಾಂಬ್‌ ಸ್ಫೋಟಗೊಂಡು ಗಾಯಗೊಂಡಿದ್ದ ಕಾರಣ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಹೀಗಾಗಿ ಆತ ಯಾರೆಂಬ ಪ್ರಶ್ನೆ ಪೊಲೀಸರಿಗೆ ಕಾಡುತಿತ್ತು. ಇದೀಗ ಆ ಪ್ರಶ್ನೆಗೆ ಬ್ರೇಕ್‌ ಬಿದ್ದಂತಾಗಿದ್ದು, ವ್ಯಕ್ತಿಯು ಶಾರೀಕ್‌ ಎಂದು ಆತನ ಕುಟುಂಬದವರು ದೃಢ ಪಡಿಸಿದ್ದಾರೆ ಎಂದು ಎಡಿಜಿಪಿ ಅಲೋಕ್‌ [&#8230;]]]></description>
										<content:encoded><![CDATA[
<p><strong>ಮಂಗಳೂರು:</strong> ನಗರದ ಗರೋಡಿಯಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಿಸಿದ್ದ ಆರೋಪಿಯನ್ನು ಪೊಲೀಸರು ಪತ್ತೆಹಚ್ಚಿದ್ದು, ಆರೋಪಿಯು ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ನಿವಾಸಿ ಶಾರೀಕ್‌ ಎಂದು ಗುರುತಿಸಿದ್ದಾರೆ. </p>



<p>ಶಂಕಿತ ಆರೋಪಿಯು ನಗರದಲ್ಲಿ ಆಟೋ ರಿಕ್ಷಾ ಮೂಲಕ ಕುಕ್ಕರ್‌ ಬಾಂಬ್‌ ಸಾಗುಸುತ್ತಿದ್ದ ವೇಳೆ ಬಾಂಬ್‌ ಸ್ಫೋಟಗೊಂಡು ಗಾಯಗೊಂಡಿದ್ದ ಕಾರಣ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಹೀಗಾಗಿ ಆತ ಯಾರೆಂಬ ಪ್ರಶ್ನೆ ಪೊಲೀಸರಿಗೆ ಕಾಡುತಿತ್ತು. ಇದೀಗ ಆ ಪ್ರಶ್ನೆಗೆ ಬ್ರೇಕ್‌ ಬಿದ್ದಂತಾಗಿದ್ದು, ವ್ಯಕ್ತಿಯು ಶಾರೀಕ್‌ ಎಂದು ಆತನ ಕುಟುಂಬದವರು ದೃಢ ಪಡಿಸಿದ್ದಾರೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ತಿಳಿಸಿದ್ದಾರೆ. ಆದರೆ ಈ ಕೃತ್ಯದ ಹಿಂದೆ ನಿಜಕ್ಕೂ ಯಾರಿದ್ದಾರೆ ಎಂದು ತನಿಖೆ ಜಾರಿಯಲ್ಲಿದೆ. </p>


<div class="wp-block-image">
<figure class="aligncenter size-full is-resized"><img fetchpriority="high" decoding="async" src="https://peepalmedia.com/wp-content/uploads/2022/11/ಶಾರೀಕ್‌.jpg" alt="" class="wp-image-16095" width="428" height="321"/><figcaption class="wp-element-caption">ಶಾರೀಕ್‌</figcaption></figure></div>


<p>ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶನಿವಾರ ನಗರದ ಗರೋಡಿಯಲ್ಲಿ ರಿಕ್ಷಾ ಮೂಲಕ ಕುಕ್ಕರ್‌ ಬಾಂಬ್‌ ಸಾಗಿಸುತ್ತಿರುವ ಸಂದರ್ಭದಲ್ಲಿ ಬಾಂಬ್‌ ಸ್ಫೋಟಗೊಂಡಿತ್ತು. ಈ ಹಿನ್ನೆಲೆಯಲ್ಲಿ ಗಾಯಗೊಂಡಿದ್ದ ವ್ಯಕ್ತಿಯು ನಗರದ ಖಾಸಗಿ ಆಸ್ಪತ್ರೆಯಲ್ಲಿ (ಮಲ್ಲರ್‌ ಆಸ್ಪತ್ರೆ) ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಯಾರೆಂಬುವುದನ್ನು ತಿಳಿಯಲು ಪೊಲೀಸರು ವಿಚಾರಣೆ ನಡೆಸುತ್ತಿದ್ದರು. ಬಳಿಕ ಆ ವ್ಯಕ್ತಿಯು ಶಾರೀಕ್‌ ಎಂದು ಆತನ ಕುಟುಂಬದವರು ಖಚಿತಪಡಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.     </p>



<p>ಬಾಂಬ್‌ ಸ್ಪೋಟಿಸಿದ ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದರು. ಈ ವೇಳೆ ಮೈಸೂರಿನ ಲೋಕನಾಯಕ ನಗರ, ಮೇಟಗಳ್ಳಿಯಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ಶಂಕಿತ ಆರೋಪಿ ವಾಸವಾಗಿದ್ದ ಎಂದು ಸುಳಿವು ತಿಳಿದುಬಂದಿದೆ. ಆಗ ಸ್ಫೋಟದಲ್ಲಿ ಗಾಯಗೊಂಡಿದ್ದ ವ್ಯಕ್ತಿಯ ಪೋಟೋವನ್ನು &nbsp;ಮನೆಯ ಮಾಲಿಕನಿಗೆ ತೋರಿಸಿದಾಗ ಆತನು, ಅದೇ ಮನೆಯಲ್ಲಿ ವಾಸವಿದ್ದ ಎಂದು ಹೇಳಿದ್ದಲ್ಲದೆ ನಂತರ ಪೊಲೀಸರು ಮನೆಯ ಒಳಗೆ ಹೋಗಿ ಪರಿಶೀಲನೆ ನಡೆಸಿದಾಗ, ಆತನ ಕೋಣೆಯಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ, ಜೊತೆಗೆ ಎರೆಡು ನಕಲಿ ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌, ಮೊಬೈಲ್‌, ದೊರಕಿವೆ ಎಂದು ತಿಳಿಸಿದ್ದಾರೆ.</p>



<p>&#8216;ಮನೆ ಬಾಡಿಗೆ ತೆದುಕೊಳ್ಳುವಾಗ ನೀಡಿದ ಮನೆ ವಿಳಾಸವನ್ನು ವಿಚಾರಿಸಿದಾಗ, ಆತ ನೀಡಿರುವ ವಿಳಾಸ ಸುಳ್ಳು, ಹಾಗೂ  ಶಾರೀಕ್  ಅಂತರಾಷ್ಟ್ರೀಯ ಮಟ್ಟದಲ್ಲಿರುವ ಉಗ್ರ ಸಂಘಟನೆಯೊಂದರಿಂದ ಪ್ರೇರಣೆ ಹೊಂದಿದ್ದ ಎಂದು ತಿಳಿದು ಬಂದಿದೆ&#8217; ಎಂದು ಪೊಲೀಸರು ಶಂಕಿಸಿದ್ದಾರೆ. </p>



<p>&#8216;ಶಾರೀಕ್‌, ನಗರದಲ್ಲಿ ಸ್ಪೋಟಿಸುವ ಉದ್ದೇಶದಿಂದಾಗಿ ಕುಕ್ಕರ್‌ ಬಾಂಬ್‌ ಸಾಗಿಸುತ್ತಿದ್ದ, ಆದರೆ ಬಾಂಬ್‌ ತಯಾರಿಯಲ್ಲಿ ಅಷ್ಟೋಂದು ಪರಿಣಿತಿ ಇಲ್ಲದ ಕಾರಣ, ಬಾಂಬ್‌ ಸ್ಫೋಟಗೊಳಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ&#8217; ಎಂದು ಅಲೋಕ್‌ ಕುಮಾರ್‌ ಹೇಳಿದ್ದಾರೆ.</p>



<p>ಈ ಪ್ರಕರಣದಲ್ಲಿ ಶಾರೀಕ್‌ ಆರೋಪಿ ಎಂದು ಗುರುತಿಸಲಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದವರು ಎಂದು ಆರೋಪಿಸಲಾದ ಇನ್ನೂ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿಲಾಗುತ್ತಿದೆ. </p>
]]></content:encoded>
					
		
		
			</item>
	</channel>
</rss>
