<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>daiva &#8211; Peepal Media</title>
	<atom:link href="https://peepalmedia.com/tag/daiva/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Fri, 18 Nov 2022 13:03:21 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>daiva &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಭೂತಾರಾಧನೆಯ ಮೂಲ ಎಲ್ಲಿದೆ?</title>
		<link>https://peepalmedia.com/praveen-s-shetty-article-about-bhoot-kola/</link>
		
		<dc:creator><![CDATA[Peepal Media]]></dc:creator>
		<pubDate>Fri, 18 Nov 2022 13:03:18 +0000</pubDate>
				<category><![CDATA[ಧರ್ಮ- ಸಂಸ್ಕೃತಿ]]></category>
		<category><![CDATA[bhoota]]></category>
		<category><![CDATA[daiva]]></category>
		<category><![CDATA[durgaparameshwari]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[kateel]]></category>
		<category><![CDATA[kateelu]]></category>
		<category><![CDATA[peepalmedia]]></category>
		<category><![CDATA[praveen s shetty]]></category>
		<category><![CDATA[writing]]></category>
		<guid isPermaLink="false">https://peepalmedia.com/?p=15843</guid>

					<description><![CDATA[ಕಟೀಲು ಬಪ್ಪನಾಡು, ಚಿತ್ರಾಪುರ, ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನಗಳಿಗೆ ಬರುವ ಶೇ. 99 ಭಕ್ತರಿಗೆ ಅಲ್ಲಿ ಸಾಂಕೇತಿಕವಾಗಿ ಮಹಿಳೆಯ ಅಂಗ ಪೂಜಿಸುವ ವಿಷಯ ಗೊತ್ತೇ? ಹೆಚ್ಚಿನ ವಿವರಗಳಿಗೆ ಚಿಂತಕ ಪ್ರವೀಣ್‌ ಎಸ್‌ ಶೆಟ್ಟಿಯವರ ಈ ಮಹತ್ವದ ಲೇಖನ ಓದಿ ನಟ ಚೇತನ್ ತುಳುನಾಡಿನ ಭೂತದ ಕೋಲ ನೇಮ ವೈದಿಕ ಸಂಸ್ಕೃತಿಯಲ್ಲ, ಅದು ಮೂಲನಿವಾಸಿಗಳ ಆದಿಮ ಸಂಸ್ಕೃತಿ ಎಂದು ಹೇಳಿದ್ದು ಬಲಪಂಥೀಯರಿಂದ ಬಹಳಷ್ಟು ಟೀಕೆಗೆ ಗುರಿಯಾಗಿತ್ತು. ಜೀವಂತ ಕೋಳಿಯ ರಕ್ತವನ್ನು ಆವೇಶದಲ್ಲಿರುವ ಪಾತ್ರಿ ಕುಡಿಯುವುದು ಮೂಲನಿವಾಸಿ ಸಂಸ್ಕೃತಿಯನ್ನು ಸೂಚಿಸುತ್ತದೆ. ತುಳುನಾಡಿನ [&#8230;]]]></description>
										<content:encoded><![CDATA[
<h4 class="has-text-align-center wp-block-heading"><strong>ಕಟೀಲು ಬಪ್ಪನಾಡು</strong><strong>, ಚಿತ್ರಾಪುರ, ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನಗಳಿಗೆ ಬರುವ ಶೇ. 99 ಭಕ್ತರಿಗೆ ಅಲ್ಲಿ ಸಾಂಕೇತಿಕವಾಗಿ ಮಹಿಳೆಯ ಅಂಗ ಪೂಜಿಸುವ ವಿಷಯ ಗೊತ್ತೇ? ಹೆಚ್ಚಿನ ವಿವರಗಳಿಗೆ ಚಿಂತಕ ಪ್ರವೀಣ್‌ ಎಸ್‌ ಶೆಟ್ಟಿಯವರ ಈ ಮಹತ್ವದ ಲೇಖನ ಓದಿ</strong></h4>



<p>ನಟ ಚೇತನ್ ತುಳುನಾಡಿನ ಭೂತದ ಕೋಲ ನೇಮ ವೈದಿಕ ಸಂಸ್ಕೃತಿಯಲ್ಲ, ಅದು ಮೂಲನಿವಾಸಿಗಳ ಆದಿಮ ಸಂಸ್ಕೃತಿ ಎಂದು ಹೇಳಿದ್ದು ಬಲಪಂಥೀಯರಿಂದ ಬಹಳಷ್ಟು ಟೀಕೆಗೆ ಗುರಿಯಾಗಿತ್ತು. ಜೀವಂತ ಕೋಳಿಯ ರಕ್ತವನ್ನು ಆವೇಶದಲ್ಲಿರುವ ಪಾತ್ರಿ ಕುಡಿಯುವುದು ಮೂಲನಿವಾಸಿ ಸಂಸ್ಕೃತಿಯನ್ನು ಸೂಚಿಸುತ್ತದೆ. ತುಳುನಾಡಿನ ಭೂತಾರಾಧನೆಯಲ್ಲಿ ಗಂಡು ಹೆಣ್ಣು ಭೂತಗಳಲ್ಲದೆ ಹಲವು ‘ತೃತೀಯ ಲಿಂಗಿ’ ಭೂತಗಳನ್ನೂ ಪೂಜಿಸುತ್ತಾರೆ. “ಜುಮಾದಿ, ಉಲ್ಲಾಯ” ಇವು ತೃತೀಯ ಲಿಂಗಿ ದೈವಗಳು. ಮೂಲನಿವಾಸಿಗಳು ಯಾವಾಗಲೂ ತೃತೀಯ ಲಿಂಗಿ ಮನುಷ್ಯರನ್ನು ದೈವಾಂಶ ಸಂಭೂತರು ಎಂಬ ಗೌರವ ಕೊಡುತ್ತಿದ್ದರು, ಆದರೆ ವೈದಿಕರು ತೃತೀಯ ಲಿಂಗಿಗಳನ್ನು ಗೌರವಿಸುತ್ತಿರಲಿಲ್ಲ (ಶಿವನ ಅರ್ಧನಾರೀಶ್ವರ ರೂಪ ತೃತೀಯ ಲಿಂಗಿ ಎಂದು ವರ್ಗೀಕರಿಸಲಾಗದು). ಬ್ರಾಹ್ಮಣರು ಯಾವಾಗಲೂ ಭೂತ ಕೋಲಗಳಿಗೆ ಹೋಗುವುದೇ ಇಲ್ಲ. ಭೂತದ ಗಂಧ ಪ್ರಸಾದ ಮುಟ್ಟುವುದೂ ಇಲ್ಲ. ಇದುವೇ ಭೂತಾರಾಧನೆ ವೈದಿಕ ಸಂಸ್ಕೃತಿಯಲ್ಲ ಎಂಬುದಕ್ಕೆ ಸಾಕ್ಷಿ. ದುಖಃದ ವಿಷಯವೆಂದರೆ ಭೂತಾರಾಧನೆಯ ಮೂಲ ಎಲ್ಲಿದೆ ಎಂದು 95% ತುಳುವರಿಗೆ ಸ್ವತಃ ಗೊತ್ತೇ ಇಲ್ಲ! ಭಯದಿಂದ ಎಲ್ಲಾ ತುಳುವರು ಕುರುಡಾಗಿ ನಂಬುತ್ತಾರೆ ಅಷ್ಟೇ!</p>



<p><strong>ಉಲ್ಲಾಳ್ತಿಯೇ ಕಟೀಲಿನ ದುರ್ಗಾಪರಮೇಶ್ವರಿ!</strong></p>



<p>ಜೈನ ಅರಸರು ಪೂಜಿಸುತ್ತಿದ್ದ ಉಲ್ಲಾಳ್ತಿ ಎಂಬ ಜೈನರ ದೈವವನ್ನು(ಯಕ್ಷಿಯನ್ನು) ವೈದಿಕರು-ಬಂಟರು ವಹಿಸಿಕೊಂಡು ತುಳುನಾಡಿನಲ್ಲಿ ದುರ್ಗಾಪರಮೇಶ್ವರಿ ದೇವಿಯಾಗಿ ಪರಿವರ್ತಿಸಿದರು ಎಂಬುದು ಎಷ್ಟು ಜನಕ್ಕೆ ಗೊತ್ತಿದೆ? ಮೂಲತಃ ಕಟೀಲು ದೇವಳದಲ್ಲಿ ಪೂಜೆಗೊಳ್ಳುತ್ತಿರುವ ದುರ್ಗಾದೇವಿಯೂ ಜೈನರ ಒಂದು ದೈವ (ಯಕ್ಷಿ)!  ಅದರ ಮೂಲ ಹೆಸರು ‘ಉಲ್ಲಾಳ್ತಿ’! ಕಟೀಲು ದೇವಳ ಮೂಲತಃ ಮುಲ್ಕಿಯ ಜೈನ ಅರಸರ ಬೇಸಿಗೆ ಅರಮನೆಯಾಗಿತ್ತು. ಆ ಅರಮನೆಯ ಹಿಂಬದಿಗೆ ಇರುವ ‘ಕುದ್ರು’ ಎಂಬ ಸ್ಥಳದಲ್ಲಿ ಆ ಜೈನ ಅರಸು ಮನೆತನ ಪೂಜಿಸುತ್ತಿದ್ದ ಉಲ್ಲಾಳ್ತಿ ದೈವದ ಗುಡಿಯೂ ಇತ್ತು.  ಅರಮನೆಯನ್ನು ಬೇಸಿಗೆಯಲ್ಲಿ ತಂಪಾಗಿಡಲು ಅದನ್ನು ಒಂದು ಹೊಳೆಯ ನಡುವೆ ಕಟ್ಟಿ ಸುತ್ತಲೂ ನೀರು ನಿಲ್ಲಿಸಲಾಗುತ್ತಿತ್ತು. ಹಾಗಾಗಿ ಅದಕ್ಕೆ ತುಳುವಿನಲ್ಲಿ ‘ಕಟ್ಟದ ಇಲ್ಲ್‌ʼ (ಕೆರೆಯ ಮನೆ) ಎಂದು ಕರೆಯುತ್ತಿದ್ದರು. ಅದುವೇ ಮುಂದೆ ಜನರ ಬಾಯಲ್ಲಿ ಕಟ್ಟದಿಲ್ಲು-ಕಟ್ಟಿಲ್ಲು-ಕಟೀಲು ಆಯಿತು. ಅರಮನೆಯನ್ನು ದುರ್ಗಾ ದೇವಸ್ಥಾನವಾಗಿ ಪರಿವರ್ತಿಸಿದ್ದು 1875 ರಲ್ಲಿ. ಈ ಕುರಿತು ಬ್ರಿಟಿಷ್ ಕಾಲದ ದಾಖಲೆಯೂ ಈ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾಗಿರುವ ಬಂಟ ಮನೆತನದ ಬಳಿ ಈಗಲೂ ಇದೆ.  ಕಟೀಲಿನಲ್ಲಿ ಈಗಲೂ ಉಲ್ಲಾಳ್ತಿ /ದುರ್ಗಾದೇವಿಯನ್ನು “ಶಕ್ತಿಲಿಂಗ” ರೂಪದಲ್ಲಿ ಪೂಜಿಸುತ್ತಾರೆ. ಈ ಶಕ್ತಿಲಿಂಗವು ಕಲ್ಲಿನ ‘ದೋಣಿ ಆಕಾರದಲ್ಲಿ’ ಇದೆ. ಭಕ್ತರಿಗೆ ಅದನ್ನು ನೋಡಲು ಅರ್ಚಕರು ಬಿಡುವುದಿಲ್ಲ. ಅದನ್ನು ಯಾವಾಗಲೂ ಹೂವಿನಿಂದ ಮುಚ್ಚಿರುತ್ತಾರೆ! ಕೇವಲ ಈ ಲಿಂಗದ ಹಿಂದಿರುವ ಮನುಷ್ಯ ರೂಪದ ಉತ್ಸವ ಮೂರ್ತಿಯ ದರ್ಶನವನ್ನು ಮಾತ್ರ ಭಟ್ಟರು ಭಕ್ತರಿಗೆ ಮಾಡಿಸುತ್ತಾರೆ ಅಷ್ಟೇ. ಈ ದೋಣಿಯಾಕಾರದ ಶಕ್ತಿಲಿಂಗದ ಫೋಟೋ ಸಹಾ ಅಂಗಡಿಯಲ್ಲಿ ಮಾರದಂತೆ ದೇವಾಸ್ಥಾನದ ಆಡಳಿತ ನಿರ್ಬಂಧಿಸಿದೆ!</p>


<div class="wp-block-image">
<figure class="aligncenter size-full"><img fetchpriority="high" decoding="async" width="554" height="554" src="https://peepalmedia.com/wp-content/uploads/2022/11/ಉಲ್ಲಾಳತಿ.webp" alt="" class="wp-image-15870" srcset="https://peepalmedia.com/wp-content/uploads/2022/11/ಉಲ್ಲಾಳತಿ.webp 554w, https://peepalmedia.com/wp-content/uploads/2022/11/ಉಲ್ಲಾಳತಿ-300x300.webp 300w, https://peepalmedia.com/wp-content/uploads/2022/11/ಉಲ್ಲಾಳತಿ-150x150.webp 150w" sizes="(max-width: 554px) 100vw, 554px" /><figcaption class="wp-element-caption">ಉಲ್ಲಾಳ್ತಿ</figcaption></figure></div>


<p><strong>ದೋಣಿ ಆಕಾರದ ಲಿಂಗದ ಅರ್ಥ ಏನು?</strong></p>



<p>ಈ ದೋಣಿ ಆಕಾರದ ಲಿಂಗದ ಅರ್ಥ “ಮಹಿಳೆಯ ಜನನಾಂಗ”. ಇದು ಪ್ರಕೃತಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಪುನರುತ್ಪತ್ತಿಯ (Re-production) ಸಂಕೇತ! ಬೀಜದಿಂದ ಮರ ಮರದಿಂದ ಬೀಜ, ಹಕ್ಕಿಯಿಂದ ಮೊಟ್ಟೆ ಮೊಟ್ಟೆಯಿಂದ ಹಕ್ಕಿ, ಸಸ್ತನಿ ಪ್ರಾಣಿಯಿಂದ ಮರಿ, ಆ ಮರಿ ಬೆಳೆದು ಮತ್ತೆ ಮರಿ, ಈ ಪುನರ್ ಸೃಷ್ಟಿಯ ಸಂಕೇತವೆ ಹಿಂದೂ ದೇವಸ್ಥಾನಗಳಲ್ಲಿ ಪೂಜೆಗೊಳ್ಳುತ್ತಿರುವ ಸ್ತ್ರೀಲಿಂಗದ ಅರ್ಥ!&nbsp; ಅಸ್ಸಾಂ ರಾಜ್ಯದ ವಿಶ್ವ ಪ್ರಸಿದ್ಧ ಕಾಮಾಖ್ಯ ದೇವಳದಲ್ಲಿಯೂ ಪ್ರಕೃತಿದೇವಿಯನ್ನು ಇದೇ ದೋಣಿ ಆಕಾರದ ಶಕ್ತಿಲಿಂಗ ಅರ್ಥಾತ್ ಸ್ತ್ರೀಲಿಂಗದ ರೂಪದಲ್ಲಿಯೇ ಪೂಜಿಸುತ್ತಾರೆ. ಕೇರಳದ ಕೆಲವು ಭಗವತಿ ದೇವಸ್ಥಾನಗಳಲ್ಲೂ ಇದೆ ತರದ ದೋಣಿಯಾಕಾರದ ಲಿಂಗವನ್ನೇ ದೇವಿ ಎಂದು ಪೂಜಿಸುತ್ತಾರೆ. (ಶಿವಲಿಂಗಕ್ಕೂ ಇದೇ ಅರ್ಥವಿದೆ, ಅಂದರೆ ಗಂಡು ಹೆಣ್ಣಿನ ಸಂಪರ್ಕದಿಂದ ಪ್ರಕೃತಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಪುನರ್ ಸೃಷ್ಟಿಯ ಸಂಕೇತವೆ ಶಿವಲಿಂಗ. ಈ ಶಿವಲಿಂಗದ ಮೇಲಿನ ಪಿಂಡಾಕಾರದ ಭಾಗ ಗಂಡಿನ ಜನನಾಂಗ ಮತ್ತು ಅಭಿಷೇಕ ಹರಿದು ಹೋಗುವ ಕೆಳಗಿನ ಪಾಣಿಪೀಠ ಹೆಣ್ಣಿನ ಅಂಗ). ಇವೆಲ್ಲಾ ಮೂಲನಿವಾಸಿಗಳ/ಆದಿವಾಸಿಗಳ ಪ್ರಕೃತಿ ಪೂಜೆಯ ಆದಿಮ ರೀತಿ. ಕಟೀಲು ಬಪ್ಪನಾಡು, ಚಿತ್ರಾಪುರ, ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನಗಳಿಗೆ ಬರುವ ಶೇ. 99 ಭಕ್ತರಿಗೆ ಅಲ್ಲಿ ಸಾಂಕೇತಿಕವಾಗಿ ಮಹಿಳೆಯ ಅಂಗ ಪೂಜಿಸುವ ವಿಷಯ ಗೊತ್ತೇ ಇಲ್ಲ! ಇದು ನಮ್ಮ ಹಿಂದೂ ಧರ್ಮದ ವಿಪರ್ಯಾಸ!</p>



<p><strong>ಬಣ್ಣದ ಬಂಟಿಂಗ್ಸ್‌ ಗಳ ಜಾಗವನ್ನು ಕೇಸರಿ ಪತಾಕೆಗಳು ಆಕ್ರಮಿಸಿದವು</strong></p>



<p>ಹಿಂದೆಲ್ಲಾ ಕೋಲನೇಮದ ಸಮಾರಂಭ ನಡೆಯುವ ಸ್ಥಳದಲ್ಲಿ ಹಲವಾರು ಬಣ್ಣದ ಬಂಟಿಂಗ್ಸ್ ಮತ್ತು ಪತಾಕೆಗಳನ್ನು ಕಟ್ಟುತ್ತಿದ್ದರು. ಆದರೆ ಇತ್ತೀಚಿನ ಏಳೆಂಟು ವರ್ಷಗಳಿಂದ ನಾನು ಗಮನಿಸಿದ್ದೇನೆಂದರೆ ಭೂತಸಾನದ ಸುತ್ತ ಕೇವಲ ಕೇಸರಿ ಬಂಟಿಂಗ್ಸ್ ಹಾಗೂ ಓಂ ಮತ್ತು ಸ್ವಸ್ತಿಕ್ ಚಿನ್ಹೆ ಬರೆದ ಕೇಸರಿ ಪತಾಕೆಗಳನ್ನು ಮಾತ್ರ ಕಟ್ಟುತ್ತಿದ್ದಾರೆ. ಭೂತದ ಚಾಕರಿ ಮಾಡುವ ಇತರರು ‘ಜೈ ಶ್ರೀ ರಾಮ್’ ಎಂದು ಮೈಯಿಡಿ ಹಿಂದಿಯಲ್ಲಿ ಬರೆದ ಕೇಸರಿ ಶಾಲು,, ಪಂಚೆ ಧರಿಸುತ್ತಾರೆ. ಅಷ್ಟೇ ಅಲ್ಲ ಛತ್ರಪತಿ ಶಿವಾಜಿಯ ಕೋಪಿಷ್ಠ ಅರ್ಧ ಮುಖದ ಧ್ವಜಗಳನ್ನೂ ಹಾರಿಸುತ್ತಾರೆ. ಮರಾಠಿಗರ ಶಿವಾಜಿಗೂ ತುಳುವರ ಭೂತ ದೈವಗಳಿಗೂ ಎಲ್ಲಿಂದ ಎಲ್ಲಿಯ ಸಂಬಂಧ? ಹನುಮಂತನ ಸ್ವರೂಪದ ಯಾವುದೇ ದೈವ ತುಳುನಾಡಲ್ಲಿ ಇಲ್ಲ, ಆದರೂ ಹನುಮಂತನ ಕೋಪಿಷ್ಠ ಅರ್ಧ ಮುಖದ ಬಾವುಟಗಳು ಅಥವಾ ಒಂಟಿ ರಾಮನು ಬಿಲ್ಲುಬಾಣ ಹಿರಿದು ಕೋಪದಿಂದ ಎಲ್ಲಿಗೋ ನುಗ್ಗುತ್ತಿರುವ ಫ್ಲೆಕ್ಸ್ ಗಳು ಕೋಲದಲ್ಲಿ ರಾರಾಜಿಸುತ್ತವೆ! (ದೇವರು ಭಕ್ತವತ್ಸಲನಂತೆ, ಆದರೂ ಶಾಶ್ವತ ಕೋಪಿಷ್ಠ ಮುಖ ಯಾಕೆ?). ಒಂದು ಕೋಲದಲ್ಲಿ ಸಾವರ್ಕರರ ಫೋಟೋ ಕೂಡಾ ಕಂಡಿದ್ದೆ! ಮುಂದಿನ ವರ್ಷ ಗೋಡ್ಸೆಯ ಫೋಟೋ ಕಂಡರೂ ಆಶ್ಚರ್ಯವಿಲ್ಲ!.</p>



<p><strong>ತುಳುನಾಡಿನ ಭೂತಾರಾಧನೆ ವಿರೂಪಗೊಳ್ಳುತ್ತಿದೆಯೇ?</strong></p>



<p>ಕೇರಳ ಮತ್ತು ತಮಿಳುನಾಡಿನ ಆದಿವಾಸಿಗಳಲ್ಲೂ ತಮ್ಮ ಪೂರ್ವಜರ ಆತ್ಮಗಳನ್ನು ವಿಜೃಂಭಣೆಯಿಂದ ಪೂಜೆ ಮಾಡುವ ಪದ್ಧತಿ ಇದೆ. ಜಾರ್ಖಂಡ್, ಛತ್ತೀಸ್‌ಗಡ, ಒಡಿಶಾದ ಆದಿವಾಸಿಗಳಲ್ಲೂ ತೀರಿಕೊಂಡಿರುವ ಹಿರಿಯರ ಪೂಜೆ ಮಾಡುವ ಪದ್ಧತಿ ಇದೆ. ಇಂಡೋನೇಷಿಯಾ, ಥೈಲ್ಯಾಂಡ್ ಮತ್ತು ಆಫ್ರಿಕಾದ ಆದಿವಾಸಿಗಳಲ್ಲೂ ತಮ್ಮ ಹಿರಿಯರನ್ನು ಭೂತದ ರೂಪದಲ್ಲಿ ಪೂಜಿಸುವ ಪದ್ಧತಿ ಆದಿಕಾಲದಿಂದಲೂ ಇದೆ. ಅದೇ ರೀತಿ ವೀರಗತಿ ಪ್ರಾಪ್ತಿಯಾಗಿರುವ ನಮ್ಮ ಪೂರ್ವಜರನ್ನು ಆರಾಧಿಸುವ ಪದ್ಧತಿಯೇ ತುಳುನಾಡಲ್ಲಿ ಭೂತಾರಾಧನೆಯಲ್ಲಿ ಪರಿವರ್ತಿತವಾಗಿದೆ ಎಂದು ಹೇಳಬಹುದೇನೋ. “ಕನ್ನಡದ ದೆವ್ವ ಎಂಬ ಶಬ್ದವೇ ತುಳುವಿನ ದೈವ” ಎಂದು ಬದಲಾಯಿತು ಎಂದು ಕೆಲವು ಸಂಶೋಧಕರ ಅಭಿಪ್ರಾಯ. ಆದರೆ ಹೆಚ್ಚಿನ ತುಳುವರಿಗೆ ಇದು ನಮ್ಮ ಪೂರ್ವಿಕರ ಆತ್ಮವನ್ನು ಆರಾಧಿಸುವ ಪದ್ಧತಿ ಎಂದು ಗೊತ್ತಿಲ್ಲದಿರುವುದರಿಂದ ಮುಂಬೈ ಉದ್ಯಮಿಗಳ ಶ್ರೀಮಂತಿಕೆಯ ಪ್ರದರ್ಶನದಿಂದ ತುಳುನಾಡಿನ ಭೂತಾರಾಧನೆ ವಿರೂಪಗೊಳ್ಳುತ್ತಿದೆ!<br><br></p>



<p><strong>ಪ್ರವೀಣ್ ಎಸ್ ಶೆಟ್ಟಿ</strong><strong></strong></p>



<p>ಸಂಸ್ಕೃತಿ ಚಿಂತಕರು</p>
]]></content:encoded>
					
		
		
			</item>
		<item>
		<title>ತುಳುನಾಡು ಪರಶುರಾಮ ಸೃಷ್ಟಿ ಅಲ್ಲ…ಬೆರ್ಮೆರೆ ಸೃಷ್ಟಿ..!</title>
		<link>https://peepalmedia.com/tulunad-is-not-parashurama-creation-but-berma/</link>
		
		<dc:creator><![CDATA[Charan Aivarnad]]></dc:creator>
		<pubDate>Tue, 08 Nov 2022 10:58:20 +0000</pubDate>
				<category><![CDATA[ದಕ್ಷಿಣ ಕನ್ನಡ]]></category>
		<category><![CDATA[ಧರ್ಮ- ಸಂಸ್ಕೃತಿ]]></category>
		<category><![CDATA[aiwarnadu]]></category>
		<category><![CDATA[daiva]]></category>
		<category><![CDATA[dakshina kannada]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[mangalore]]></category>
		<category><![CDATA[news]]></category>
		<category><![CDATA[parashu raama]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sullia]]></category>
		<category><![CDATA[tulunadu]]></category>
		<category><![CDATA[writing]]></category>
		<guid isPermaLink="false">https://peepalmedia.com/?p=14782</guid>

					<description><![CDATA[ತುಳುವರ ಆದಿಮೂಲದ ದೈವ ಬೆರ್ಮೆರ್‌ ಯಾರು? ದೇವರು ಹಾಗೂ ದೇವೆರ್ ಎಂಬ ಎರಡೂ ಪದಗಳೂ ಸಂಸ್ಕೃತಜನ್ಯ. ಹಾಗಿದ್ದರೆ ತುಳುವರು ದೇವ ಅಥವಾ ದೇವರು ಎಂಬ ಪದಕ್ಕೆ ಸಂವಾದಿಯಾಗಿ ಯಾವ ಪದವನ್ನು ಬಳಸುತ್ತಿದ್ದರು? ಮತ್ತು ಅದ್ಯಾಕೆ ದಿನಬಳಕೆಯಲ್ಲಿ ಇಲ್ಲ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಎಂದರೆ ತುಳುನಾಡಿನ ಅದಿಮೂಲದ ದೈವ ಯಾವುದು ಎಂಬ ಪ್ರಶ್ನೆಗೆ ಉತ್ತರ ಹುಡುಕುವುದೇ ಆಗಿದೆ. ನನ್ನ ಊರು ಐವರ್ನಾಡಿನಲ್ಲಿ ಇರುವ ಎರಡು ಪ್ರದೇಶಗಳ ಹೆಸರು ಸ್ಥಳನಾಮೆಗಳ ಬಗ್ಗೆ ಓದುವಾಗ ಕುತೂಹಲವನ್ನು ಮೂಡಿಸಿದ್ದವು. ಬಿರ್ಮುಕಜೆ ಮತ್ತು [&#8230;]]]></description>
										<content:encoded><![CDATA[
<p><strong>ತುಳುವರ ಆದಿಮೂಲದ ದೈವ ಬೆರ್ಮೆರ್‌ ಯಾರು?</strong></p>



<p>ದೇವರು ಹಾಗೂ ದೇವೆರ್ ಎಂಬ ಎರಡೂ ಪದಗಳೂ ಸಂಸ್ಕೃತಜನ್ಯ. ಹಾಗಿದ್ದರೆ ತುಳುವರು ದೇವ ಅಥವಾ ದೇವರು ಎಂಬ ಪದಕ್ಕೆ ಸಂವಾದಿಯಾಗಿ ಯಾವ ಪದವನ್ನು ಬಳಸುತ್ತಿದ್ದರು? ಮತ್ತು ಅದ್ಯಾಕೆ ದಿನಬಳಕೆಯಲ್ಲಿ ಇಲ್ಲ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಎಂದರೆ ತುಳುನಾಡಿನ ಅದಿಮೂಲದ ದೈವ ಯಾವುದು ಎಂಬ ಪ್ರಶ್ನೆಗೆ ಉತ್ತರ ಹುಡುಕುವುದೇ ಆಗಿದೆ.</p>



<p style="font-size:20px">ನನ್ನ ಊರು ಐವರ್ನಾಡಿನಲ್ಲಿ ಇರುವ ಎರಡು ಪ್ರದೇಶಗಳ ಹೆಸರು ಸ್ಥಳನಾಮೆಗಳ ಬಗ್ಗೆ ಓದುವಾಗ ಕುತೂಹಲವನ್ನು ಮೂಡಿಸಿದ್ದವು. ಬಿರ್ಮುಕಜೆ ಮತ್ತು ಬೆಮ್ಮಿತ್ತಿಕಂಡ. ಈ ಎರಡೂ ಪದಗಳನ್ನು ಸರಳವಾಗಿ ನಾವು ಬಿಡಿಸಬಹುದು.</p>



<p style="font-size:20px">ಬಿರ್ಮುಕಜೆ &#8211; ಬಿರ್ಮರೆ ಕಜೆ</p>



<p style="font-size:20px">ಬೆಮ್ಮಿತ್ತಿಕಂಡ &#8211; ಬೆರ್ಮೆರ್ ಇತ್ತಿ ಕಂಡ</p>



<p style="font-size:20px">ಈ ಎರಡೂ ಪ್ರದೇಶಗಳೂ ಬೆರ್ಮೆರ್ ಎಂಬ ದೈವದ ನೆಲೆಗಳೇ ಅಗಿವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಈ ಎರಡೂ ಪ್ರದೇಶಗಳಲ್ಲಿ ಈಗ ಬೆರ್ಮೆರ್ ಗೆ ಸಂಬಂಧಿಸಿದ ಆಚರಣೆಗಳು ನಡೆಯುತ್ತಿಲ್ಲ. ಹಾಗಾದರೆ ಈ ಬೆರ್ಮೆರ್ ಎಲ್ಲಿ ಹೋದರು?</p>



<p style="font-size:20px">ಬೆರ್ಮೆರ್ ಅಥವಾ ಬಿರ್ಮೆರ್ ಎಂಬ ಎರಡೂ ಬಳಕೆಗಳು ಜಾನಪದರಲ್ಲಿ ಇವೆ. ಬೆರ್ಮೆರ್ ವೇದಗಳ ಚತುರ್ಮುಖ ಬ್ರಹ್ಮನಲ್ಲ. ಅಲ್ಲದೇ ಸಂಸ್ಕೃತದ ಬ್ರಹ್ಮ ಎಂಬ ಪದದಿಂದ. ಬೆರ್ಮೆರ್ ಪದ ಹುಟ್ಟಿಲ್ಲ. ಕಾಲಾಂತರದಲ್ಲಿ ಬೆರ್ಮೆರ್ ಅನ್ನು ವೈದಿಕ ಬ್ರಹ್ಮನೊಂದಿಗೆ ಸಮೀಕರಿಸಿ, ನಾಗ ಹಾಗೂ ಬೆರ್ಮೆರ್ ಇಬ್ಬರ ಅಬೇಧ್ಯ ಸಂಬಂಧವನ್ನು ವೈದಿಕ ಪುರಾಣಗಳ ಜೊತೆಗೆ ಜೋಡಿಸಿ ಬೆರ್ಮೆರ ಎಲ್ಲಾ&nbsp; ನೆಲೆಗಳನ್ನೂ ಸ್ಥಿತ್ಯಂತರಗೊಳಿಸಲಾಗಿದೆ. ಹೀಗಾಗಿ ಬರ್ಮೇರ ಅಲಡೆಗಳು ಬ್ರಹ್ಮಸ್ಥಾನಗಳಾಗಿಸಲಾಗಿದೆ. ಶಿವಾಲಯಗಳಾಗಿ ಮಾರ್ಪಟ್ಟ ನೆಲೆಗಳು ಬ್ರಹ್ಮಲಿಂಗೇಶ್ವರ ದೇವಾಲಯಗಳಾಗಿವೆ. ಆರಂಭದಲ್ಲಿಯೇ ನಾವು ವೈದಿಕ ಬ್ರಹ್ಮ ಹಾಗೂ ಬೆರ್ಮೆರ್ ಗೆ ಯಾವುದೇ ಸಂಬಂಧ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.</p>



<p style="font-size:20px">&#8220;ಕೆಲವೊಂದು ತುಳುಶಾಸನಗಳಲ್ಲಿ ಬ್ರಹ್ಮನನ್ನು ದೇವರೆಂದು ಉಲ್ಲೇಖಿಸಿದ್ದು, ಆದರೆ ಬಹಳ ವಿಚಿತ್ರ ಎನ್ನುವಂತೆ ಅವನನ್ನು ಭೂತಗಳ ಸಾಲಿಗೆ ಸೇರಿಸಿವೆ. ನಾಗನನ್ನು ಬ್ರಹ್ಮನೊಂದಿಗೆ ಅವಿಭಾಜ್ಯವಾಗಿ ಸಂಗಡಿಸಲಾಗಿದೆ. ನಾಗ ಹಾಗೂ ಬ್ರಹ್ಮನಿಗೆ ಹಾಲು ನೈವೇದ್ಯ ಮಾಡಿದ ಪ್ರಸಂಗದ ವಿವರಣೆ ಶಾಸನವೊಂದರಲ್ಲಿ ಸಿಗುತ್ತದೆ&#8221;(ಪಾದೂರು ಗುರುರಾಜ ಭಟ್ಟ, 1975)</p>



<figure class="wp-block-image size-full"><img decoding="async" width="961" height="720" src="https://peepalmedia.com/wp-content/uploads/2022/11/2cf46057-6ae3-40f9-8bd9-f88ef69cac21.jpg" alt="" class="wp-image-14784" srcset="https://peepalmedia.com/wp-content/uploads/2022/11/2cf46057-6ae3-40f9-8bd9-f88ef69cac21.jpg 961w, https://peepalmedia.com/wp-content/uploads/2022/11/2cf46057-6ae3-40f9-8bd9-f88ef69cac21-300x225.jpg 300w, https://peepalmedia.com/wp-content/uploads/2022/11/2cf46057-6ae3-40f9-8bd9-f88ef69cac21-768x575.jpg 768w, https://peepalmedia.com/wp-content/uploads/2022/11/2cf46057-6ae3-40f9-8bd9-f88ef69cac21-150x112.jpg 150w, https://peepalmedia.com/wp-content/uploads/2022/11/2cf46057-6ae3-40f9-8bd9-f88ef69cac21-696x521.jpg 696w" sizes="(max-width: 961px) 100vw, 961px" /></figure>



<p style="font-size:20px">ಹಾಗಾದರೆ ಈ ಬೆರ್ಮೆರ್ ಯಾರು? ಬೆರ್ಮೆರ್ ಎಂಬ ಪದ ಹೇಗೆ ಹುಟ್ಟಿತು?</p>



<p style="font-size:20px">ತಮಿಳಿನಲ್ಲಿ ಸಾಮಾನ್ಯವಾಗಿ ಎಲ್ಲಾ ದೇವರ ಹೆಸರಿನ ಜೊತೆಗೆ ಪೆರುಮಾಳ್ ಎಂಬ ಹೆಸರೂ ಇರುತ್ತದೆ. ವರದರಾಜ ಪೆರುಮಾಳ್ ಕೋಯಿಲ್, ವೈಕುಂದ ಪೆರುಮಾಳ್ ದೇವಸ್ಥಾನ, ಚೆನ್ರಾಯ ಪೆರುಮಾಳ್ ದೇವಸ್ಥಾನ, ಗೋವಿಂದರಾಜ ಪೆರುಮಾಳ್, ಕರಕಾಟು ಪೆರುಮಾಳ್, ನಿರಕಾಟು ಪೆರುಮಾಳ್,&nbsp; ಇತ್ಯಾದಿ. ಇಲ್ಲಿ ಪೆರುಮಾಳ್ ಎಂಬ ಹೆಸರು ದೇವರು ಎಂಬ ಅರ್ಥದಲ್ಲಿ ಬಳಕೆಯಾಗಿದೆ.</p>



<p style="font-size:20px">ಅನೇಕ ಬಾರಿ ಪೆರುಮಾಳ್ ಎಂಬ ಹೆಸರು ವೈಷ್ಣವ ದೇವತೆಗಳನ್ನು ಪ್ರತಿನಿಧಿಸುತ್ತವೆ. ತಮಿಳು ಸಂತ, ಕವಿ ಕೌಮಾರಂ ಪರಂಪರೆಯ ಅರುಣಗಿರಿನಾಥರ್ (ಸಾ.ಶ 1370- 1450) ತನ್ನ ತಿರುಪ್ಪುಗಳ್ ಭಕ್ತಿ ಕಾವ್ಯದಲ್ಲಿ ಮುರುಗನ್ ಅಂದರೆ ಸ್ಕಂದನನ್ನು ಪೆರುಮಾಳ್ ಎಂದು ಕರೆದಿದ್ದಾನೆ.</p>



<p style="font-size:20px">ತಮಿಳಿನಲ್ಲಿ ಪೆರುಮಾಳ್ ಎಂದರೆ ಯಾವುದೇ ನಿರ್ಧಿಷ್ಟ ದೇವತೆಯಾಗಿರದೆ ಎಲ್ಲಾ ದೇವರನ್ನೂ ಪೆರುಮಾಳ್ ಎಂದೇ ಕರೆಯಲಾಗಿದೆ. ಆದರೆ ಬೇರೆ ಬೇರೆ ಕಾಲಘಟ್ಟದಲ್ಲಿ ಉಚ್ಛ್ರಾಯದಲ್ಲಿ ಇದ್ದ ದೇವತೆಗಳು ಪೆರುಮಾಳ್ ಎಂದೇ ಕರೆಸಿಕೊಂಡಿದ್ದಾರೆ. ಆಯಾಯ ಪಂಥಗಳ, ಮತಗಳ ಮೂಲ ದೇವರು ಅವರಿಗೆ ಪೆರುಮಾಳ್ ಆಗಿದ್ದಾರೆ.</p>



<p style="font-size:20px">ಪೆರುಮ+ ಆಳ್ &#8211; ಪೆರುಮಾಳ್</p>



<p style="font-size:20px">ಪೆರುಮ , ಪೆರಿಯ ಇವೆಲ್ಲವೂ ಹಿರಿಯ, ದೊಡ್ಡ, ಶ್ರೇಷ್ಠವಾದ ಎಂಬ ಅರ್ಥದಲ್ಲಿ ಬಳಕೆಯಾಗಿವೆ. ಅಳ್ ಎಂದರೆ ವ್ಯಕ್ತಿ ಎಂದರ್ಥ. ಹಿರಿಯ ವ್ಯಕ್ತಿಯೇ ಪೆರುಮಾಳ್. ಅದು ದೇವರೇ ಇರಬಹದು, ರಾಜನಿರಬಹುದು ಅಥವಾ ಕುಟುಂಬದ ಹಿರಿಯ ವ್ಯಕ್ತಿ ಇರಬಹುದು. ಯಾರು ನಮ್ಮೆಲ್ಲರಿಗೂ ಹಿರಿಯನೋ ಅವನು ಪೆರುಮಾಳ್.</p>



<p style="font-size:20px">ಇದೇ ಅರ್ಥ, ಭಾವವನ್ನು ತುಳುನಾಡಿನ ಬೆರ್ಮೆರ್ ಗೆ ಕೂಡ ಸಲ್ಲುತ್ತದೆ. ಬೆರ್ಮೆ+ ಆರ್- ಬೆರ್ಮೆರ್, ಬೆರ್ಮ ಎಂದರೆ ಹಿರಿಯ ಎಂದು ಅರ್ಥ.</p>



<p style="font-size:20px">ಹೀಗಾಗಿ ಬೆರ್ಮೆರ್, ಪೆರುಮಾಳ್ ಇವು ದ್ರಾವಿಡ ಭಾಷಾ ವರ್ಗದಲ್ಲಿ ದೇವರು ಎಂದೇ ಅರ್ಥ. ಬೆರ್ಮೆರ್ ಎಂದರೆ ಅದಿ ಮೂಲದ ದೇವರಾದರೆ ನಂತರ ಹುಟ್ಟಿಕೊಂಡ ದೈವಗಳಿಗೆ ಬೇರೆ ಬೇರೆ ಹೆಸರು ಇಡಲಾಗಿದೆ. ಇವೆಲ್ಲವನ್ನೂ ಬೆರ್ಮೆರ್ ಎಂದು ಕರೆಯಲಾಗಿಲ್ಲ. ತಮಿಳಿನಲ್ಲಿ ಮುರುಗನ್ ಪೆರುಮಾಳ್ ಇದ್ದಂತೆ ತುಳುವರು ಪಂಜುರ್ಲಿ ಬೆರ್ಮೆರ್ ಎಂದು ಕರೆಯುವುದಿಲ್ಲ. ಹಾಗಾಗಿ ಬೆರ್ಮೆರ್ ಎಂದರೆ ಅದಿಯಲ್ಲಿ ಇದ್ದ ದೇವರು.</p>



<p style="font-size:20px">ತುಳುನಾಡಿನ ಪೂರ್ವಕ್ಕೆ ಇರುವ ಪಶ್ಚಿಮ ಘಟ್ಟದ ಸಾಲುಗಳು ಮತ್ತು ಸಮೃದ್ಧವಾದ ಹಸಿರು ಹಾವುಗಳ ವಾಸಕ್ಕೆ ಪೂರಕವಾಗಿದೆ. ಸರ್ಪಗಳು ವಿಷಕಾರಿ ಮಾತ್ರವಲ್ಲ, ಪಾದಗಳಿಲ್ಲದೆ ನೀರಿನ ತೊರೆಗಳಂತೆ ಹರಿದುಹೋಗುವುದು ಭಯಾನಕತೆಯನ್ನು ಸೃಷ್ಟಿಸಿದಂತೆ ತೋರುತ್ತದೆ. ಹೀಗಾಗಿ ನಾಗನನ್ನು ಆರಾಧಿಸಲು ಆರಂಭಿಸಿದರು. ಜಗತ್ತಿನ ಬಹುತೇಕ ನಾಗಾರಾಧನೆ ಇದೇ ಹಿನ್ನಲೆಯನ್ನು ಹೊಂದಿವೆ. ಸರ್ಪಗಳ ಕಡಿತದಿಂದ ಸಂಭವಿಸುವ ಸಾವು ಭಯಾನಕ. ಹೀಗಾಗಿ ಸರ್ಪಗಳನ್ನು ಸಂತೈಸಲು ಅವುಗಳನ್ನು ಅರಾಧಿಸಲಾಯಿತು.</p>



<p style="font-size:20px">ಬಹುಶಃ ಆರಂಭದಲ್ಲಿ ನೀರು ಮತ್ತು ಸರ್ಪಗಳನ್ನು ಆರಾಧಿಸುತ್ತಿದ್ದರು ಎಂದು ತೋರುತ್ತದೆ. ಕಾಶ್ಮೀರವನ್ನು&nbsp; ಕರ್ಕೊಟಕ ನಾಗಾ ವಂಶವು ಕ್ರಿ.ಶ ೭-೮ ನೇ ಶತಮಾನದಲ್ಲಿ ಆಳಿದ್ದಾರೆ. ಉತ್ತರ ಪ್ರದೇಶದಲ್ಲಿ ಇರುವ ಅಹಿಚ್ಛತ್ರ ನಾಗ ಜನರ ಪ್ರದೇಶ. ಇವರನ್ನು ಸಮುದ್ರಗುಪ್ತ ಸೋಲಿಸಿದ. ಚುಟು ವಂಶೀಯರು ಆಳಿದ ನಾಗರಖಂಡ ಬನವಾಸಿಯಲ್ಲಿದೆ. ಇಲ್ಲಿ ನಾಗ ಎಂದರೆ ಸರ್ಪವಲ್ಲ. ನಾಗ ಎಂದರೆ ಒಂದು ಜನಾಂಗ.</p>



<p style="font-size:20px">ತುಳುನಾಡನ್ನು ನಾಗರ ಲೋಕ ಎಂದೂ ಕರೆಯುತ್ತಾರೆ. ತುಳುನಾಡಿನಲ್ಲಿ ನಾಗಾರಾಧನೆ ಮುಖ್ಯವಾದ ಆಚರಣೆ. ಅದಿ ತುಳುವರಲ್ಲಿ ನಾಗನೇ ಮೂಲ ದೇವತೆಗಳಲ್ಲಿ ಒಬ್ಬ ಇರಬೇಕು. ಹೀಗಾಗಿ ನಾಗನೂ ಬೆರ್ಮೆರ್ ಆಗಿರುವುದರಿಂದ ಬೆರ್ಮೆರ ಸ್ಥಾನಗಳು ನಾಗ ಸಾನಿಧ್ಯಗಳೇ ಆಗಿವೆ. ಹೀಗಾಗಿ ಬೆರ್ಮೆರ್ ಜೊತೆ ನಾಗ ಹೆಚ್ಚಿನ ಸಂದರ್ಭಗಳಲ್ಲಿ ತಲುಕುಹಾಕಿಕೊಂಡಿದ್ದಾನೆ. ಹೀಗಾಗಿ ತುಳುನಾಡಿನಾದ್ಯಂತ ನಾಗಬ್ರಹ್ಮರ (ವೈದಿಕರಿಂದ ಮರುನಾಮಕರಣಗೊಂಡು) ಸಾನಿಧ್ಯಗಳನ್ನು ಕಾಣಬಹುದು.&nbsp;</p>



<p style="font-size:20px">ಹೀಗಾಗಿ ಬೆರ್ಮೆರ್ ಮತ್ತು ನಾಗ ಇವೆರಡೂ ಅವೈದಿಕ ದೇವತೆಗಳು. &#8220;ನಾಗ ಎಂಬ ಶಬ್ದವಾಗಲೀ, ನಾಗ (ಸರ್ಪ) ಪೂಜೆಯಾಗಲೀ ವೇದಗಳಲ್ಲಿ ಅಥವಾ ಬ್ರಾಹ್ಮಣದಲ್ಲಿ ಹೇಳಿಲ್ಲ&#8221;(ಗೋವಿಂದ ಪೈ, 570, ೧೯೪೭)</p>



<p style="font-size:20px">ತುಳುನಾಡಿನ ಪ್ರಪ್ರಥಮ ಅರಸರು ಅಲುಪರು. ಸಿರಿ ಪಾಡ್ದನದಲ್ಲಿ ಬರುವ ಸಿರಿಯ ಅಜ್ಜ ಬೆರ್ಮ ಆಳ್ವೆರ್ ಎಂಬುದು ಹಿರಿಯ ಅರಸ (ಬೆರ್ &#8211; ಪೆರ್= ಹಿರಿಯ ಆಳ್ವೆರ್ = ಅರಸ) ಎಂದೇ ಆಗಿದೆ. &#8220;ಬೆಳ್ಮಣ್ ನ ತಾಮ್ರ ಶಾಸನ (8 ನೇ ಶತಮಾನ) ಸಿರಿ ಆರಾಧನೆಯ ಪರಿಸರಕ್ಕೆ ಸಮೀಪವಾಗಿದೆ. ಈ ಶಾಸನದಲ್ಲಿ ಹೀಗೆ ಬರೆಯಲಾಗಿದೆ &#8211; &#8216; ಬ್ರಹ್ಮನಿಂದ ರಕ್ಷಿತವಾದ ಕುಲದಲ್ಲಿ ಅಭಿಮಾನವುಳ್ಳ ಶ್ರೀಮದಾಳುವರಸ&#8230;..&#8217; (ಪಾದೂರು ಗುರುರಾಜ ಭಟ್ಟ, 1975) ಈ ಪ್ರದೇಶಗಳ ಆಳುಪ ಅರಸರು ಕ್ರಿ.ಶ. 14 ನೇ ಶತಮಾನದ ವರೆಗೆ ಆಳಿದ್ದಾರೆ. ಸಿರಿ ಪಾಡ್ದನದಲ್ಲಿ ಬರುವ ಬೆರ್ಮ ಆಳ್ವೆರ್ ಒಂದು ಸಾಹಿತ್ಯಿಕ ಅರ್ಥ ಇರುವ ಹೆಸರು (ಪೀಟರ್ ಜೇ ಕ್ಲಾಸ್, 525, ೨೦೦೭)</p>



<p style="font-size:20px">ಬೆರ್ಮ ಆಳ್ವೆರ್ ಎಂಬುದು ಸಾಂಕೇತಿಕವಾಗಿ ಮೂಲ ಪುರುಷ ಅಥವಾ ಅರಸನ್ನೇ ಸಂಕೇತಿಸಿಲಾಗಿದೆ. ಬೆರ್ಮೆರ್ ಎಂಬವ ಒಬ್ಬ ಕುಲದ ಮೂಲ ಪುರುಷ, ಒಡೆಯ, ಅರಸನೇ ಆಗಿರಬೇಕು.</p>



<p style="font-size:20px">ಬೆರ್ಮೆರ್ ಅರಸನೇ?</p>



<p style="font-size:20px">ಬೆರ್ಮೆರ್ ಸ್ಥಾನವನ್ನು ಆಲಡೆ, ಅಥವಾ ಸಿಂಗ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಅಲಡೆಗಳು ಸಮೃದ್ಧ ನೀರು ಇರುವ ಜಾಗಗಳಲ್ಲಿ ಇರುತ್ತವೆ.</p>



<p style="font-size:20px">&nbsp;“ಪ್ರಾಯಶಃ ಇದೇ &#8216;ಆರ್&#8217; ಸಂಬಂಧಿಸಿದ ಪದಗಳಾಗಿರಬೇಕು &#8211; ಆಲುಪ, ಆಳ್ವ, ಅನೂಪ (ಸಂ.ಜಲಭರಿತವಾದ ಭೂಮಿ) ಆಳುಪ ಮುಂತಾದ ರೂಪಗಳು&#8230;&#8230;.. ಆಲಂಪುರ ಹಳೆಯ ಹೈದರಾಬಾದ್ ಸಂಸ್ಥಾನದ ರಾಯಚೂರು ಜಿಲ್ಲೆಯ ನಂದಿಕೋಟಿಕೂರು ತಾಲೂಕಿನಲ್ಲಿದ್ದ ಊರು. ಇಲ್ಲಿ ನವಬ್ರಹ್ಮಶ್ವರ ಮಂದಿರ ಸಮೂಹವೇ ಇಲ್ಲಿಯ ಪ್ರಮುಖ ಇಲ್ಲಿಯ ಮಧ್ಯಭಾಗದಲ್ಲಿರುವ ಬಾಲಬ್ರಹೇಶ್ವರನ ಮಂದಿರ ಪ್ರಮುಖವಾಗಿದೆ. ಉಳಿದ ಅಪ್ಪ ಶಿವಮಂದಿರಗಳೆಂದರೆ &#8216;ಕುಮಾರ ಬ್ರಹ್ಮ, ಅರ್ಕ ಬ್ರಹ್ಮ, ವೀರ ಬ್ರಹ್ಮ, ವಿಶ್ವ ಬ್ರಹ್ಮ, ತಾರಕ ಬ್ರಹ್ಮ, ಗರುಡ ಬ್ರಹ್ಮ, ಸ್ವರ್ಗ ಬ್ರಹ್ಮ, ಮತ್ತು ಪದ್ಮ ಬ್ರಹ್ಮ ಬಾಲ, ಬ್ರಹ್ಮಶ್ವರನನ್ನು ಬರಿಯ ಬ್ರಹ್ಮಶ್ವರ ಎಂದೂ ಕರೆಯಲಾಗುತ್ತದೆ. ಈ ಶಿವ ಮಂದಿರದಿಂದಾಗಿ ಆಲಂಪುರಕ್ಕೆ ಬ್ರಹ್ಮಶ್ವರ ಕ್ಷೇತ್ರ ಅಥವಾ ನವಬ್ರಹೇಶ್ವರ ಕ್ಷೇತ್ರ ಎಂಬ ಮತ್ತೊಂದು ಅಭಿದಾನವೂ ಪ್ರಾಪ್ತವಾಗಿದೆ.&#8221; (ಕೆಮ್ತೂರು ರಘುಪತಿ ಭಟ್ಟ, ೩೯)</p>



<p style="font-size:20px">&#8221; ಕ್ಷೇತ್ರದ ಬಳಿ ಸಮೀಪ &#8216;ಬೀಡು&#8217; ಎನ್ನುವ ಆಲಡೆ ಮನೆಗಳಿವೆ. ಇಲ್ಲಿ ಪಟ್ಟಾಭಿಷೇಕ ಆಗುವ ಪದ್ಧತಿ ಇದೆ. ಈ ಪಟ್ಟಾಭಿಷೇಕದಲ್ಲಿ ಅಜಲಿನ ಎಲ್ಲಾ ಜಾತಿಗಳು ಹಾಜರಿರುತ್ತಾರೆ. ಹೀಗೆ ಈ ಕ್ಷೇತ್ರ ಆಳುವ ಎಡೆಯೂ ಆಗಿದೆ. ಮಾನವ ಶಾಸ್ತ್ರಜ್ಞರ ಪ್ರಕಾರ ಬುಡಗಟ್ಟು ಒಂದು ರಾಜಕೀಯ ಘಟಕವೂ ಆಗಿದೆ. ಬೀಡು ಎಂಬುದು ಆಲಡೆಯ ರಾಜಕೀಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಗಳನ್ನು ನಿರ್ದೇಶಿಸುವ ನಾಯಕನ ಮನೆ, ಆಲಡೆ, ಮನೆಯ ಆಳುವ ವ್ಯಕ್ತಿಯ ಪಟ್ಟಾಭಿಷೇಕದಲ್ಲಿ ಪಡೆಯುವ ಹೆಸರು ಅರ್ಥಾತ್ ಪಟ್ಟದ ಆಳುವ ನಾಮ ಪರಂಪರೆಯಿಂದ ಬದಲಾಗದೆ ಮುಂದುವರಿದಿದೆ ಎಂಬ ಗ್ರಹಿಕೆ ಇದೆ. ಈ ಹೆಸರನ್ನು ಆಲಯದ ಪುದರ್ ಎನ್ನುತ್ತಾರೆ. ನೀರು ಇರುವ ಎಡೆಯನ್ನು ಜನರು ವಾಸದ ಎಡೆಯನ್ನಾಗಿ ಆರಿಸಿದ, ಯಾವುದೇ ಬುಡಕಟ್ಟುಗಳ ಆಳ್ವಿಕೆಯಲ್ಲೂ ಆಳುವ ನಾಯಕ ಇರುತ್ತಾನೆ&#8221; (ಇಂದಿರಾ ಹೆಗ್ಡೆ,೪೦, ೨೦೧೨)</p>



<p style="font-size:20px">ಬೆರ್ಮೆರ್ ಸ್ಥಾನವನ್ನು ಆಲಡೆ ಹಾಗೂ ಸಿಂಗ ಎಂದು ಕರೆಯುತ್ತಾರೆ. ತುಳುವರು ತಮ್ಮ ಪಿತೃ ಪೂಜೆ ಮಾಡಲು ತಮ್ಮ ಮೂಲತಾನಕ್ಕೆ ಬರುತ್ತಾರೆ. ಇಲ್ಲಿ ಬೆರ್ಮೆರ್ ಜೊತೆಗೆ ಪ್ರದೇಶದ ರಕ್ಷಕ ದೈವ ಕ್ಷೇತ್ರಪಾಲ, ನಾಗ, ನಂಡಿಗೋಣ, ಪಂಜುರ್ಲಿ, ಲೆಕ್ಕೆಸಿರಿ, ಚಿಕ್ಕು, ಅಬ್ಬಾಗ &#8211; ದಾರಗ ಇನ್ನಿತರ ದೈವಗಳು ಇರುತ್ತವೆ. ವರ್ಷಾವರ್ತಿ ನಡೆಯುವ ಯಾವುದೇ ಕಾರ್ಯಕ್ರಮಕ್ಕೆ ಕುಟುಂಬದ ಒಬ್ಬನಾದರೂ ಆ ಮೂಲತಾನಕ್ಕೆ ಸಂಬಂಧಿಸಿದವರು ಇರಲೇ ಬೇಕು. ಹೀಗೆ ಹೋಗದೆ ಇದ್ದಲ್ಲಿ ಕುಟುಂಬದಲ್ಲಿ ಸಂದಿ ಹೋದವರು ಉಪದ್ರ ಕೊಡುತ್ತಾರೆ ಎಂಬ ನಂಬಿಕೆ ಇದೆ.</p>



<p style="font-size:20px">ಇಲ್ಲಿ ಎರಡು ಪದಗಳ ಬಗ್ಗೆ ನನ್ನ ಚರ್ಚೆಯನ್ನು ಹೇಳುತ್ತೇನೆ.</p>



<p style="font-size:20px">1. ಆಲಡೆ</p>



<p style="font-size:20px">ಆಲಡೆ ಎಂಬ ಪದದ ವ್ಯುತ್ಪತ್ತಿ ಬಗ್ಗೆ ಅನೇಕ ಚರ್ಚೆಗಳು ಇವೆ. ಇವುಗಳಲ್ಲಿ ಭಿನ್ನತೆಗಳು ಇವೆ. ಆಲಡೆ ಎಂದರೆ ಆಳುವ ಎಡೆ, ಆಡಳಿತ ನಡೆಸುವ ಮೂಲ ಸ್ಥಳ.</p>



<p style="font-size:20px">2. ಸಿಂಗ</p>



<p style="font-size:20px">ದೈವಗಳ ಪರಿಕರಗಳನ್ನು ಇಡುವ ವ್ಯವಸ್ತೆಯನ್ನು ಸಿಂಗದನ ಎಂದು ಕರೆಯುತ್ತಾರೆ. ಸಿಂಗದನ ಎಂದರೆ ಸಿಂಹಾಸನ. ಇಲ್ಲಿ ಸಿಂಗ ಎಂದರೆ ಸಿಂಹಾಸನವೇ ಇರಬೇಕು.</p>



<figure class="wp-block-image size-full"><img decoding="async" width="840" height="549" src="https://peepalmedia.com/wp-content/uploads/2022/11/416368ff-bcfb-41cd-bce7-5af625f7cb60.jpg" alt="" class="wp-image-14785" srcset="https://peepalmedia.com/wp-content/uploads/2022/11/416368ff-bcfb-41cd-bce7-5af625f7cb60.jpg 840w, https://peepalmedia.com/wp-content/uploads/2022/11/416368ff-bcfb-41cd-bce7-5af625f7cb60-300x196.jpg 300w, https://peepalmedia.com/wp-content/uploads/2022/11/416368ff-bcfb-41cd-bce7-5af625f7cb60-768x502.jpg 768w, https://peepalmedia.com/wp-content/uploads/2022/11/416368ff-bcfb-41cd-bce7-5af625f7cb60-150x98.jpg 150w, https://peepalmedia.com/wp-content/uploads/2022/11/416368ff-bcfb-41cd-bce7-5af625f7cb60-696x455.jpg 696w" sizes="(max-width: 840px) 100vw, 840px" /><figcaption class="wp-element-caption">ಬೆರ್ಮೆರೆ ಗುಂಡ &#8211; ಮುಡಿಂಜಿ &#8211; ಕೊಟ್ರಪ್ಪಾಡಿ (ಕೃಪೆ:ಇಂದಿರಾ ಹೆಗ್ಗಡೆ)</figcaption></figure>



<p style="font-size:20px">ತುಳುವರು ಬೆರ್ಮೆರ್ ಅನ್ನು ಕುದುರೆಯ ಮೇಲೆ ಕೂತ, ಖಡ್ಗದಾರಿ, ಸತ್ತಿಗೆ (ಕೊಡೆ) ಹಿಡಿದಿರುವ ಒಬ್ಬ ಯೋಧನಂತೆ ಚಿತ್ರಿಸಿದ್ದಾರೆ. ಇದನ್ನು ಗುರುರಾಜ ಭಟ್ಟರು ಜೈನರ ಪ್ರಭಾವ ಎಂದು ಹೇಳಿದ್ದಾರೆ. ಆದರೆ ಅದಕ್ಕೂ ಹಿಂದೆ ಈ ಪರಿಕಲ್ಪನೆ ಇರಲ್ಲಿಲ್ಲ ಎಂದು ಹೇಳಲು ನಮ್ಮಲ್ಲಿ ಆಧಾರಗಳು ಇಲ್ಲ.&nbsp; ಕೋಟಿ ಚೆನ್ನಯರ ಪಾಡ್ದನದಲ್ಲಿ ಕೆಮ್ಮಲೆಯ ಬೆರ್ಮಾ ಬಿಳಿ ಕುದುರೆ ಏರಿ ಬೆಳ್ಗೊಡೆ ಹಿಡಿದಿರುತ್ತಾನೆ.</p>


<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2022/11/ce771bc9-4b38-456d-b04b-acc82e82f013.jpg" alt="" class="wp-image-14788" width="533" height="399"/></figure></div>


<p style="font-size:20px">1623ರಲ್ಲಿ ತುಳುನಾಡಿಗೆ ಬಂದ ಇಟಲಿಯ ಪ್ರವಾಸಿ ಪಿಯೊತ್ರೋದೆಲ್ಲಾವೆಲ್ಲೆ ಉಳ್ಳಾಲದ ರಾಣಿ ಕಟ್ಟಿಸಿದ ಒಂದು ಗುಡಿಸಿ ಒಳಗೆ ಹೋಗುತ್ತಾನೆ. ಅಲ್ಲಿ ಇರುವ Brimore ಎಂಬ&nbsp; ವಿಗ್ರಹವನ್ನು ನೋಡುತ್ತಾನೆ.</p>



<p style="font-size:20px">&nbsp;“ಊರಿನ ಕೊನೆಯಲ್ಲಿ ಗುಡ್ಡದ ಮೇಲಿದ್ದ &#8216;ನಾರಾಯಣ&#8217; ಎಂಬ ದೇವಸ್ಥಾನ ನೋಡಲು ಹೋದೆ. ಮಾಡಿಗೆ ತೆಂಗಿನ ಸೋಗೆ ಹೊದಿಸಿದ್ದರು. ಮರದ ಹಲಗೆಗಳನ್ನು ಜೋಡಿಸಿ ಕಟ್ಟಿದ ಗುಡಿ ಇದು. ಇದನ್ನು ರಾಣಿ ಕಟ್ಟಿಸಿದಳಂತೆ. ಇದರ ಒಳಗೆ ಭೂತ (devil) ವಿಗ್ರಹವಿತ್ತು&#8230;. ಬ್ರಾಹ್ಮಣ ದುಬಾಶಿ ಭೂತಕ್ಕೆ ಹೆದರಿ ದೂರ ನಿಂತುಬಿಟ್ಟ&#8230; ನಾನು ಜೀಸಸ್ ಕ್ರೈಸ್ತನ ಧ್ಯಾನ ಮಾಡುತ್ತಾ ಗುಡಿಯ ಬಾಗಿಲು ತೆಗೆದು ಒಳಕ್ಕೆ ಹೋದೆ. ವಿಗ್ರಹ ಬಿಳಿಯ ಕಲ್ಲಿನದು. ಒಂದು ಆಳು ಪ್ರಮಾಣಕ್ಕಿಂತ ಬೆರ್ಮರ ದೊಡ್ಡದು. ಅದಕ್ಕೆ ಬಣ್ಣ ಹಚ್ಚಿ ಸುಂದರ ಯುವಕನಂತೆ ಕಾಣುವ ಹಾಗೆ ಮಾಡಿದ್ದರು. ತಲೆಯ ಮೇಲೆ ಕಿರೀಟವಿತ್ತು. ನಾಲ್ಕು ಕೈಗಳಿದ್ದು ವಿಗ್ರಹದ ಜಾಡಿನ ಕಾಲುಗಳ ಮಧ್ಯೆ ಉದ್ದನೆಯ ಗಡ್ಡ ಬಿಟ್ಟ ಬೆತ್ತಲೆಯ ಮನುಷ್ಯನ ವಿಗ್ರಹವಿತ್ತು. ಅದರ ಕೈಗಳು ನೆಲಕ್ಕೆ ಊರಿದ್ದುವು ಪ್ರಾಣಿಯೊಂದು ನಡೆಯುವ ರೀತಿಯಲ್ಲಿ. ದೈವಗ ಇದರ ಮೇಲೆ ಭೂತ ಕುಳಿತು ಸವಾರಿ ಮಾಡುತ್ತಿರುವಂತೆ ಕಾಣುತ್ತಿತ್ತು. ರಾಣಿ ಇಲ್ಲಿ ಗುಡಿ ಕಟ್ಟಿಸಿ Brimore ಎಂಬ ವಿಗ್ರಹವನ್ನು ಸ್ಥಾಪನೆ ಮಾಡಿದ್ದಾಳೆ. Brimore ಎಂಬ ಭೂತ ಬಹಳ ದೊಡ್ಡ ಭೂತವಂತೆ, ಸಾವಿರ ಭೂತಗಳಿಗೆ ಒಡೆಯನಂತೆ. ನನ್ನ ಈ ಊಹೆ ಸರಿ ಎಂದು ಆಮೇಲೆ ಇಲ್ಲಿಯವರು ಹೇಳಿದರು. ಈ ವಿಗ್ರಹಕ್ಕೆ&nbsp; &#8220;ಬುತೋ&#8221; (Buto &#8211; ಭೂತ) ಎಂದು ಹೆಸರು'&#8221; (ಪ್ರವಾಸಿ ಕಂಡ ದಕ್ಷಿಣ &#8211; ಎಸ್.ಎಲ್. ನಾಗೇಗೌಡ)</p>



<figure class="wp-block-image size-full"><img loading="lazy" decoding="async" width="646" height="470" src="https://peepalmedia.com/wp-content/uploads/2022/11/da760ee2-2989-4669-9fdc-a40dc0f70c69.jpg" alt="" class="wp-image-14789" srcset="https://peepalmedia.com/wp-content/uploads/2022/11/da760ee2-2989-4669-9fdc-a40dc0f70c69.jpg 646w, https://peepalmedia.com/wp-content/uploads/2022/11/da760ee2-2989-4669-9fdc-a40dc0f70c69-300x218.jpg 300w, https://peepalmedia.com/wp-content/uploads/2022/11/da760ee2-2989-4669-9fdc-a40dc0f70c69-150x109.jpg 150w" sizes="auto, (max-width: 646px) 100vw, 646px" /><figcaption class="wp-element-caption">ಹುಟ್ಟಿನ ಚಿತ್ತೇರಿಯ ಬೆರ್ಮ &#8211; ಯೆಡ್ತಾಡಿ (ಕೃಪೆ: ಇಂದಿರಾ ಹೆಗ್ಗಡೆ)</figcaption></figure>



<p style="font-size:20px">ಸ್ವತಃ ಜೈನಳಾಗಿದ್ದ ಉಳ್ಳಾಲದ ರಾಣಿ ಕಟ್ಟಿದ ಈ ಗುಡಿ ಜೈನ ಬ್ರಹ್ಮನ ಗುಡಿ ಅಲ್ಲ. ಯಾಕೆಂದರೆ ಪಿಯೊತ್ರೋದೆಲ್ಲಾವೆಲ್ಲೆ ಈ ವಿಗ್ರಹವನ್ನು ಭೂತ ಎಂದು ದಾಖಲಿಸಿದ್ದಾನೆ ಮಾತ್ರವಲ್ಲ ಬ್ರಿಮೋರ್ ಎಂದು ಕರೆದಿದ್ದಾನೆ.</p>



<p style="font-size:20px">ಬ್ರಹ್ಮ ಯಕ್ಷನ ಮೂರ್ತಿಯ ಲಕ್ಷಣಗಳ ಬಗ್ಗೆ ಹಂ ಪ ನಾಗರಾಜಯ್ಯ ಅವರ ಚರ್ಚೆಯನ್ನು ಗಮನಿಸೋಣ.&nbsp; ಬ್ರಹ್ಮ ಯಕ್ಷ ತುರಗವಾಹನ, ಅಷ್ಟಬಾಹು, ಚತುರ್ಮುಖ ಎಂದು ಶಾಸ್ತ್ರ ಕೃತಿಗಳಲ್ಲಿ ವರ್ಣಿತನಾಗಿದ್ದರೂ ದ್ವಿಬಾಹು ಹಾಗೂ ಏಕವಕ್ತ ಮೂರ್ತಿಗಳೇ ದಕ್ಷಿಣ ಕನ್ನಡದಲ್ಲಿ ಕಂಡು ಬರುತ್ತವೆ. ಮಾತುಲಂಗ ಸಂತಾನ ಭಾಗ್ಯ ಸೂಚಕ, ಶ್ವೇತಾಂಬರ, ದಿಗಂಬರ ಎರಡೂ ಪಂಥಗಳ ಚತುರ್ಮುಖ, ಅಷ್ಟಭುಜ ಮತ್ತು ಹಲವು ಆಯುಧ ವಿಕೋಪಗಳು ಧರಿಸಿದ ಬ್ರಹ್ಮನ ವಿಕೋಪಗಳು ಜೈನಶಾಸ್ತ್ರದ ಗ್ರಂಥಗಳಲ್ಲಿವೆ. (Ref. ಇಂದಿರಾ ಹೆಗ್ಗಡೆ, ತುಳುವರ ಮೂಲತಾನ ʼಆದಿ ಆಲಡೆʼ)</p>



<p style="font-size:20px">ಆದರೆ ತುಳುವರು ಬೆರ್ಮೆರನ್ನು ಅವ್ಯಕ್ತ, ನಿರಾಕಾರವಾಗಿ ನಂಬುತ್ತಲೇ ಕಲ್ಲುಗಳಲ್ಲಿ ಕೂಡ ಅರೋಪಿಸಿಕೊಂಡು ನಂಬಿದ್ದಾರೆ.</p>



<p style="font-size:20px">“ತಂದೆ ಮುದ್ದು ನರಯನ, ತಾಯಿ ಮುಂಗುಲಿ ಹೆಂಗುಸು. ಒಂದನೇ ಬೇನೆಗೆ ಒಂದು ಮಾಲೆ ತತ್ತಿ, ಎರಡನೆಯ ಬೇನೆಗೆ ಎರಡು ಮಾಲೆ ತತ್ತಿ, ಮೂರನೆಯ ಬೇನೆಗೆ ಮೂರು ಮಾಲೆ ತತ್ತಿ &#8211; ಹೀಗೆ ಪ್ರತಿ ಬೇರೆಯಲ್ಲೂ ಬೇರೆ ಬೇರೆ ಜಾತಿಯ ಹಾವುಗಳ ಮೊಟ್ಟೆ ಇಡುತ್ತಾಳೆ. ಆರನೆಯ ಬೇನೆಯಲ್ಲಿ ಕೇರೆ ಮಾರಾಜೆ ಹಾವುಗಳು, ಏಳನೆಯ ಬೇನೆಯಲ್ಲಿ ಕರಿಯ ಸಂಕಪಾಲೆ ಮತ್ತು ಬೆಳಿಯ (ಬಿಳಿಯ) ಸಂಕಪಾಲೆ (ಕಾಳಿಂಗ ಸರ್ಪ) ಹುಟ್ಟುತ್ತದೆ&#8230;&#8230;&#8221; (ಇಂದಿರಾ ಹೆಗ್ಗಡೆ, 78, ೨೦೧೨)</p>



<p style="font-size:20px">“ಅಣ್ಣಪ್ಪ ರಾಜ್ಯದ ನಾರಾಯಣ ದೇವರು ಮತ್ತು ಮುಂಗುಡೆ ದೆಯ್ಯಾರು ಗಂಡ ಹೆಂಡತಿ, ಮುಂಗುಡೆ, ದೆಯ್ಯಾರು ಇಟ್ಟ ಮೊಟ್ಟೆ, ಒಂದನೇ ಬೇನೆಗೆ ಒಂದು ಮಾಲೆ ತತ್ತಿ ಎರಡನೆಯ ಬೇನೆಗೆ ಎರಡು ಮಾಲೆ ಹಾವಿನ ಮೊಟ್ಟೆ, ಮೂರನೆಯ ಬೇನೆಗೆ ಮೂರು ಮಾಲೆ ಹಾವಿನ ಮೊಟ್ಟೆ &#8211; ಹೀಗೆ ಮೊಟ್ಟೆಯಿಡುತ್ತಾ ಹೋಗುತ್ತಾಳೆ. ಆರನೆಯ ಬೇನೆಯಲ್ಲಿ ಅರುವತ್ತಾರು ಕೋಟಿ ಹೆಡೆಯ ಬೊಳ್ಯ (ಬಿಳಿ) ಸಂಕಪಾಲೆ &#8216;ಸರ್ಪ&#8217; ಹುಟ್ಟುತ್ತದೆ. ಏಳನೆಯ ಬೇನೆಯಲ್ಲಿ ಎಪ್ಪತ್ತೇಳು ಕೋಟಿ ಹೆಡೆಯುಳ್ಳ &#8216;ಕರಿಯ ಸಂಕಪಾಲೆ&#8217; &#8211; ಹುಟ್ಟುತ್ತದೆ. ನಾರಾಯಣ ದೇವರು(ಸೂರ್ಯ) ಕರಿಯ ಸಂಕಪಾಲನನ್ನು ಕರೆದು &#8220;ನೀನು ಭೂಲೋಕಕ್ಕೆ ಹೋಗಿ ಭೂಲೋಕ ಪಾತಾಳ ಲೋಕಗಳ ಅಧಿಪತಿಯಾಗಿ ನಾಗರಾಜನೆಂಬ ಖ್ಯಾತಿಯಿಂದ ಜೀವಿಸು&#8217; ಎಂದು ಹರಸುತ್ತಾರೆ.” ಭೂಲೋಕ, ಪಾತಾಳ ಲೋಕಗಳ ಅಧಿಪತಿ &#8216;ಬೆರ್ಮೆರ್&#8217; ಎಂದು ಕರೆಸಿಕೊಂಡ ಎಂಬುದನ್ನು ಇಲ್ಲಿಯ ಪಾಡ್ಡನಗಳು ಸ್ಪಷ್ಟಪಡಿಸುತ್ತವೆ. (ಇಂದಿರಾ ಹೆಗ್ಗಡೆ, 64, ೨೦೧೨)</p>



<p style="font-size:20px">ಬೆರ್ಮೆರ್ ವೀಳ್ಯದೆಲೆಯಷ್ಟು ತೆಳ್ಳಗೆ, ಅಡಿಕೆಯಷ್ಟು ಉರುಟಾಗಿ, ತಾಳೆ ಮರದಷ್ಟು ಎತ್ತರಕ್ಕೆ, ಅಲದ ಮರದಷ್ಟು ವಿಶಾಲವಾಗಿ ಉದಿಸಿದರು, ಅವರ ಎಡಭಾಗದಲ್ಲಿ ನಾಗರ ಹುತ್ತ ಬಲ ಭಾಗದಲ್ಲಿ ನಗರಹುತ್ತ, ಮಧ್ಯದಲ್ಲಿ ಜಯವುಳ್ಳ ಬೆರ್ಮೆರ್ ಉದಿಸಿದರು&#8230;&#8230;.(ಇಂದಿರಾ ಹೆಗ್ಗಡೆ, 79, ೨೦೧೨)</p>



<figure class="wp-block-image size-full"><img loading="lazy" decoding="async" width="684" height="559" src="https://peepalmedia.com/wp-content/uploads/2022/11/f9688719-03b3-4d71-a4f1-ef5d45bede98.jpg" alt="" class="wp-image-14790" srcset="https://peepalmedia.com/wp-content/uploads/2022/11/f9688719-03b3-4d71-a4f1-ef5d45bede98.jpg 684w, https://peepalmedia.com/wp-content/uploads/2022/11/f9688719-03b3-4d71-a4f1-ef5d45bede98-300x245.jpg 300w, https://peepalmedia.com/wp-content/uploads/2022/11/f9688719-03b3-4d71-a4f1-ef5d45bede98-150x123.jpg 150w" sizes="auto, (max-width: 684px) 100vw, 684px" /><figcaption class="wp-element-caption">ಹುಟ್ಟಿನ ಚಿತ್ತೇರಿ &#8211; ಯೆಡ್ತಾಡಿ (ಕೃಪೆ: ಇಂದಿರಾ ಹೆಗ್ಗಡೆ)</figcaption></figure>



<p style="font-size:20px">“ಬೆರ್ಮೆರ್ ಹುಟ್ಟಿದ ನಾಡು ಬಲವಾದ ದೇಶ, ಮಣಿ, ಗಂಗೆ, ನೀರು, ಗಂಗೆ, ಮೊಸರು ಗಂಗೆ, ಉಪ್ಪು ನೀರು ಗಂಗೆ, ನೆತ್ತರು ಗಂಗೆಗಳಲ್ಲಿ ಉತ್ತರ ಉರಿಕಂಚಿ, ಪಾತಾಳ ಪಣಿಕಂಚಿ, ಏಳು ಕಂಚಿ ಕಡಂಗದ ಅರಮನೆಯಲ್ಲಿ ಜಗ ಮಗುಚಿತು. (ನಸುಕಿನಲ್ಲಿ) ಜಂಬು ಉಡೆಂಡ್ (ಬಿರಿಯಿತು) ಕತ್ತಲೆ ಬೆಳಕಾಯಿತು, ಎಡದಲ್ಲಿ ಬೆಳ್ಳಿಯ ಪೂ ಮುಡಿ, (ಹೂ ಅಣಿ), ಪೂ ಪುಂಚ (ಹುತ್ತ) ಬಲದಲ್ಲಿ ಬಂಗಾರದ ಪೂ ಮುಡಿ, ಪೂ ಪುಂಜೆ ಆಗ ಕೆಮ್ಮಲೆಯ ಬಿರ್ಮೆರಿಗೆ ಎಡ ಭುಜದಲ್ಲಿ ಬೆಳ್ಳಿಯ ಜನಿವಾರ, ಬಲ ಭುಜದಲ್ಲಿ ಬಂಗಾರದ ಜನಿವಾರ, ಎಡಭಾಗದಲ್ಲಿ ಏಳು ನಿಲೆ (ಅಂಕಣ)ಯ ಬೆಳ್ಳಿಯ ಸತ್ತಿಗೆ, (ಛತ್ರ) ಬಲಭಾಗದಲ್ಲಿ ಒಂಬತ್ತು ನೆಲೆಯ ಬಂಗಾರದ ಸತ್ತಿಗೆ, ಅಳಿನಷ್ಟು ಉದ್ದಕ್ಕೆ ಜಲ್ಲಿ ಕೀಳೂದ್ದ ಬೀಸಣಿಕೆ, ಮೈರೆ ರೆಕ್ಕೆಯ ಸರ್ವಶಾಸ್ತ್ರ ಬೇಧಗಳೊಂದಿಗೆ ಉದ್ಭವವಾದವರು ಕೆಮ್ಮಲೆಯ ಬೆರ್ಮೆರು&#8230;&#8230;(ಇಂದಿರಾ ಹೆಗ್ಗಡೆ, 80, ೨೦೧೨)</p>



<figure class="wp-block-image size-full"><img loading="lazy" decoding="async" width="320" height="302" src="https://peepalmedia.com/wp-content/uploads/2022/11/02188338-70c8-4d65-9561-d886221a7c14.jpg" alt="" class="wp-image-14791" srcset="https://peepalmedia.com/wp-content/uploads/2022/11/02188338-70c8-4d65-9561-d886221a7c14.jpg 320w, https://peepalmedia.com/wp-content/uploads/2022/11/02188338-70c8-4d65-9561-d886221a7c14-300x283.jpg 300w, https://peepalmedia.com/wp-content/uploads/2022/11/02188338-70c8-4d65-9561-d886221a7c14-150x142.jpg 150w" sizes="auto, (max-width: 320px) 100vw, 320px" /><figcaption class="wp-element-caption">ಪುರಾತನ ನಾಗ ಬೆರ್ಮ &#8211; ಆದ್ಯಪ್ಪಾಡಿ (ಕೃಪೆ: ಇಂದಿರಾ ಹೆಗ್ಗಡೆ)</figcaption></figure>



<p style="font-size:20px">ಇಂದಿರಾ ಹೆಗ್ಗಡೆಯವರ ತುಳುವರ ಮೂಲತಾನ ಆಲಡೆ ಕೃತಿಯಲ್ಲಿ ಇರುವ ಬೆರ್ಮೆರ ಉಪಿದಿಪ ಕಥನಗಳನ್ನಷ್ಟೇ ಗಮನಿಸಿದರೆ, ಬೆರ್ಮೆರ್ ಹುಟ್ಟಿದ್ದು ನೀರಿನಲ್ಲಿ&#8230;.ಏಳು ಗಂಗೆಗಳ&nbsp; ನಡುವಿನ ಅರಮನೆಯಲ್ಲಿ. ಬೆರ್ಮೆರ್ ಜೊತೆಗೆ ಸರ್ಪಗಳು, ಹಾವುಗಳು ಕೂಡ ಹುಟ್ಟುತ್ತವೆ. ಹಾಗಾಗಿ ಸರ್ಪಗಳು ಕೂಡ ಬೆರ್ಮೆರ್ ಆಗಿದ್ದಾವೆ.</p>



<p style="font-size:20px">ಆದಿಯಲ್ಲಿ ನೀರು, ಸರ್ಪಗಳೇ ದೇವರು. ಹೀಗಾಗಿ ನಾಗ. ಬೆರ್ಮನ ಆರಾಧನೆ ಮಾಡಿದರು. ಹೀಗಾಗಿ ಒಂದು ಕಡೆಯಲ್ಲಿ ರಾಜನಂತೆ ಬೆರ್ಮೆರನ್ನು ಕಂಡು ಇನ್ನೊಂದು ನಾಗರೂಪಿಯಾಗಿ ನೋಡಿದ್ದರಲ್ಲಿ ವೈರುಧ್ಯ ಇಲ್ಲ. ನಾಗ ಶಿಲ್ಪಗಳಲ್ಲಿ ರಾಜದಂಡ ಹಿಡಿದುಕೊಂಡ ಮಾನವಾಕಾರ ಸೊಂಟದ ಕೆಳಗಡೆ ನಾಗರ ರೂಪ ಇರುವುದನ್ನು ನಾವು ಕಾಣಬಹುದು.</p>



<p style="font-size:20px">ಬೆರ್ಮೆರ್ ಅನ್ನು ಅರಸು ಎಂದೇ ಭಾವಿಸಿದರೂ ಲೌಕಿಕ ರಾಜ್ಯವನ್ನು ಅಳಲು ಒಬ್ಬ ಅರಸು ಇರುತ್ತಾನೆ. ಆದರೆ ಈ ಅರಸು ಬೆರ್ಮೆರ್ ಗೆ ನಡೆದುಕೊಳ್ಳುತ್ತಾನೆ. ಬೆರ್ಮೆರ್ ವನಾಧಿಪತಿ. ಕಾಡೇ ಅವನ ವಾಸಸ್ಥಾನ. ಕಾಡು ಲೌಕಿಕವಾಗಿ ಕಂಡರೂ ತನ್ನೊಳಗೆ ಅನೇಕ ನಿಗೂಢತೆಗಳನ್ನು ಕಾಯ್ದುಕೊಂಡಿರುತ್ತದೆ. ಕಾಡನ್ನು ಬೆರ್ಮೆರ್ ನಿಯಂತ್ರಿಸುತ್ತಾ ಕಾಡಿನಿಂದ ಹೊರಡುವ ಎಲ್ಲಾ ಎಲ್ಲಾ ನೀಚ ಶಕ್ತಿಗಳನ್ನೂ ಬೆರ್ಮೆರ್ ನಿಯಂತ್ರಿಸುತ್ತಾನೆ.</p>



<p style="font-size:20px">ಏಕಕಾಲಕ್ಕೆ ಬೆರ್ಮೆರ್ ನಾಗನಾಗಿ, ಅರಸನಾಗಿ, ಕುಟುಂಬದ ಮೂಲಪುರುಷನಾಗಿ, ಫಲವಂತಿಕೆಯ ದೇವತೆಯಾಗಿ ಕಾಣಿಸಿಕೊಳ್ಳುತ್ತಾನೆ. ಬೆರ್ಮೆರ್ ಎಂದರೆ ನಿರಾಕರವಾದ ಒಂದು ಶಕ್ತಿ. ಮೂಲದಲ್ಲಿ ಇದ್ದದ್ದು ಬೆರ್ಮೆರ್ ಮಾತ್ರ.</p>



<p style="font-size:20px">ಆಕರಸೂಚಿ:</p>



<p style="font-size:20px">1.&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp; ಗೋವಿಂದ ಪೈ, ತುಳುನಾಡು ಪೂರ್ವಸ್ಮೃತಿ, ತೆಂಕನಾಡು, ಕಾಸರಗೋಡು ಸಾಹಿತ್ಯ ಸಮ್ಮೇಳನ ನೆನಪಿನ ಸಂಪುಟ, ಕಾಸರಗೋಡು, ೧೯೪೭</p>



<p style="font-size:20px">2.&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp; ಇಂದಿರಾ ಹೆಗ್ಗಡೆ, ತುಳುವರ ಮೂಲತಾನ ʼಆದಿ ಆಲಡೆʼ, ನವ ಕರ್ನಾಟಕ ಪ್ರಕಾಶನ, ಬೆಂಗಳೂರು, ೨೦೧೨</p>



<p style="font-size:20px">3.&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp; ಕೆಮ್ತೂರು ರಘುಪತಿ ಭಟ್ಟ, ತುಳುನಾಡಿನ ಸ್ಥಳನಾಮೆಗಳು, ೨೦೦೮</p>



<p style="font-size:20px">4.&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp; ಮೌಖಿಕ ಸಂಪ್ರದಾಯಗಳು, ಅರಸು ಆರಾಧನೆ, ದಕ್ಷಿಣ ಭಾರತದ ಜಾತಿವ್ಯವಸ್ಥೆಯ ಮರುಪರಿಶೀಲನೆಗೆ ತಕ್ಕ ಸಾಮಗ್ರಿಗಳು; ಪೀಟರ್‌ ಜೆ ಕ್ಲಾಸ್, ತುಳು ಸಾಹಿತ್ಯ ಚರಿತ್ರೆ, ಪ್ರಸರಾಂಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ, ೨೦೦೭</p>



<p style="font-size:20px">5.            Prof. P Paduru Gururaja Bhatt; Studies in Tuluva History and Culture, Dr. Paduru Gururaja Bhat Memorial Trust, Udupi, 2014</p>



<p><strong>ಚರಣ್‌ ಐವರ್ನಾಡು</strong></p>
]]></content:encoded>
					
		
		
			</item>
		<item>
		<title>ದ್ರಾವಿಡರ ಮೇಲೆ ಆರ್ಯರ ಆಕ್ರಮಣ ಅಂದರೆ ಹೀಗೆ!</title>
		<link>https://peepalmedia.com/arya-invadation-on-dravid-by-indira-hegde/</link>
		
		<dc:creator><![CDATA[Dr Indira Heggade]]></dc:creator>
		<pubDate>Sat, 05 Nov 2022 06:47:16 +0000</pubDate>
				<category><![CDATA[ಧರ್ಮ- ಸಂಸ್ಕೃತಿ]]></category>
		<category><![CDATA[arya]]></category>
		<category><![CDATA[barkur]]></category>
		<category><![CDATA[daiva]]></category>
		<category><![CDATA[dr indira hegde]]></category>
		<category><![CDATA[dravida]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[kattingeri]]></category>
		<category><![CDATA[Kundapura]]></category>
		<category><![CDATA[madedi]]></category>
		<category><![CDATA[mangalore]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[tulunadu]]></category>
		<category><![CDATA[udupi]]></category>
		<guid isPermaLink="false">https://peepalmedia.com/?p=14275</guid>

					<description><![CDATA[‘ಕಟ್ಟಿಂಗರು’ 2000ನೇ ಇಸವಿಯಲ್ಲೂ ಜಾತ್ರೆಯ ದಿನಗಳಲ್ಲಿ ಬಂದಿದ್ದರು. ಆಗ ಜಾತ್ರೆಗೆ ಬಂದಿದ್ದ ‘ತಂತ್ರಿ’ಯವರು ಕಟ್ಟಿಂಗರನ್ನು ಕಂಡವರೇ ದಬಾಯಿಸಿದರು. ಮತ್ತೆಂದೂ ಇತ್ತ ಬರಬಾರದೆಂದು ಅಪ್ಪಣೆ ಇತ್ತರು. ದ್ರಾವಿಡರ ಮೇಲೆ ಆರ್ಯರ ಆಕ್ರಮಣ ಅಂದರೆ ಹೀಗೆ&#8230;ಎಂದು ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ&#160; ನೋವಿನಿಂದ ಹೇಳುತ್ತಾರೆ. ಸರಸ್ವತಿ, ಕಸ್ತೂರಿ ನಾನು ಅ ದಿನ &#160;ಹೊರಟಿದ್ದು ಶಿರ್ವ ಕಟ್ಟಿಂಗೇರಿ ಎಂಬಲ್ಲಿಗೆ. ಉಡುಪಿಯ ಪ್ರೇಮಕ್ಕ ಎಂದಿನಂತೆ ಹೊಟ್ಟೆ ತುಂಬಾ ತಿನ್ನಿಸಿ ನಮ್ಮನ್ನು ಬೀಳ್ಕೊಟ್ಟರು. ಉಡುಪಿ ಪರಿಸರದಲ್ಲಿ ಯಾವ ಮನೆಗೆ ಅಧ್ಯಯನಕ್ಕಾಗಿ ಹೋಗಬಹುದು ಎಂಬ [&#8230;]]]></description>
										<content:encoded><![CDATA[
<h5 class="has-text-align-center wp-block-heading"><strong>‘ಕಟ್ಟಿಂಗರು’ 2000ನೇ ಇಸವಿಯಲ್ಲೂ ಜಾತ್ರೆಯ ದಿನಗಳಲ್ಲಿ ಬಂದಿದ್ದರು. ಆಗ ಜಾತ್ರೆಗೆ ಬಂದಿದ್ದ ‘ತಂತ್ರಿ’ಯವರು ಕಟ್ಟಿಂಗರನ್ನು ಕಂಡವರೇ ದಬಾಯಿಸಿದರು. ಮತ್ತೆಂದೂ ಇತ್ತ ಬರಬಾರದೆಂದು ಅಪ್ಪಣೆ ಇತ್ತರು. ದ್ರಾವಿಡರ ಮೇಲೆ ಆರ್ಯರ ಆಕ್ರಮಣ ಅಂದರೆ ಹೀಗೆ&#8230;ಎಂದು ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ&nbsp; ನೋವಿನಿಂದ ಹೇಳುತ್ತಾರೆ.</strong></h5>



<p>ಸರಸ್ವತಿ, ಕಸ್ತೂರಿ ನಾನು ಅ ದಿನ &nbsp;ಹೊರಟಿದ್ದು ಶಿರ್ವ ಕಟ್ಟಿಂಗೇರಿ ಎಂಬಲ್ಲಿಗೆ. ಉಡುಪಿಯ ಪ್ರೇಮಕ್ಕ ಎಂದಿನಂತೆ ಹೊಟ್ಟೆ ತುಂಬಾ ತಿನ್ನಿಸಿ ನಮ್ಮನ್ನು ಬೀಳ್ಕೊಟ್ಟರು. ಉಡುಪಿ ಪರಿಸರದಲ್ಲಿ ಯಾವ ಮನೆಗೆ ಅಧ್ಯಯನಕ್ಕಾಗಿ ಹೋಗಬಹುದು ಎಂಬ ಬಗ್ಗೆ ನಮಗೆ ಅರಿವು ನೀಡಿದ್ದು ಸರಸ್ವತಿ ಹೆಗ್ಗಡಿತಿ. ಆ ದಿನ ನಾವು ಶಿರ್ವ ಕಟ್ಟಿಂಗೇರ್ ಆಲಡೆಗೇ ನೇರವಾಗಿ ಹೋದೆವು. ದಂತ ಕಥೆಯ ಪ್ರಕಾರ ‘ಬಾಲು ಮಾಡೆದಿ’&nbsp; ಹೆಸರಿನ ಮಹಿಳೆ ಇಲ್ಲಿಯ ಕಟ್ಟೆಯಲ್ಲಿ ಕುಳಿತು ಪಂಚಾಯಿತಿ ಮಾಡುತ್ತಿದ್ದರಂತೆ. ಬಾಲು ಮಾಡೆದಿಯ ವಂಶಕ್ಕೆ ಸೇರಿದವರು ಸರಸ್ವತಿ. ಬಾಲು ಮಾಡೆದಿಯ ಸುಳಿವು ಸಿಗಬಹುದೇನೋ ಎಂಬ ಕುತೂಹಲ ಆಕೆಗೆ.</p>



<p><strong>“ಈರ್ ಇಂದ್ರಕ್ಯ ಅತ್ತೆ?”</strong></p>



<p>ಈಗ ಇದು ಸಿರಿ ಆಲಡೆಯಾಗಿ ಉಳಿದಿಲ್ಲ. ಬ್ರಹ್ಮಸ್ಥಾನವಾಗಿ ಮಾತ್ರ ಇದೆ. ಆದರೆ ಸಿರಿ ಆಲಡೆಯ ಕುರುಹುಗಳು ಇವೆ. ನಾವು ಬ್ರಹ್ಮಸ್ಥಾನದ ಒಳಗೆ ಹೋದೆವು. ಅಲ್ಲಿ ಮಾಹಿತಿದಾರರು ಇರಲಿಲ್ಲ. ಮಾಹಿತಿದಾರರನ್ನು ಕೇಳಿದಾಗ ಬ್ರಹ್ಮಸ್ಥಾನದ ಹಿಂಭಾಗದ ಮನೆಯನ್ನು ತೋರಿಸಿದರು. ಅಲ್ಲಿ ಬೆರ್ಮೆರ ಉಯ್ಯಾಲೆ ಇದೆಯೆಂದರು. ಬ್ರಹ್ಮಸ್ಥಾನದ ಸೇವಾ ಕರ್ತರು!&nbsp; ಬೆರ್ಮರ ಉಯ್ಯಾಲೆ ಅಲ್ಲಿದ್ದರೆ ಅದು ಆಲಡೆ ಮನೆ. ನಾವು ಆ ಮನೆಗೆ ಹೋದೆವು. ಒಂದು ಗದ್ದೆಯಾಚೆ ಆ ಮನೆ ಇತ್ತು. ಚಾವಡಿಯ ಮೆಟ್ಟಲ ಬಳಿ ಎದುರಾದ ಹರೆಯದ ಹೆಣ್ಣು ಮಗಳು, “ಈರ್ ಇಂದ್ರಕ್ಯ ಅತ್ತೆ?” (ನೀವು ಇಂದ್ರಕ್ಕ ಅಲ್ಲವೆ?) ಎಂದು ಮುಗುಳ್ನಗುತ್ತಾ ಕೇಳಿದಳು. ನಾನು ಅಚ್ಚರಿಯಿಂದ ಕಣ್ಣಗಲಿಸಿ ನಿಂತೆ.</p>


<div class="wp-block-image">
<figure class="aligncenter size-large is-resized"><img loading="lazy" decoding="async" src="https://peepalmedia.com/wp-content/uploads/2022/11/55_chapt7-1024x768.jpg" alt="" class="wp-image-14283" width="536" height="402" srcset="https://peepalmedia.com/wp-content/uploads/2022/11/55_chapt7-1024x768.jpg 1024w, https://peepalmedia.com/wp-content/uploads/2022/11/55_chapt7-300x225.jpg 300w, https://peepalmedia.com/wp-content/uploads/2022/11/55_chapt7-768x576.jpg 768w, https://peepalmedia.com/wp-content/uploads/2022/11/55_chapt7-1536x1152.jpg 1536w, https://peepalmedia.com/wp-content/uploads/2022/11/55_chapt7-2048x1536.jpg 2048w, https://peepalmedia.com/wp-content/uploads/2022/11/55_chapt7-150x113.jpg 150w, https://peepalmedia.com/wp-content/uploads/2022/11/55_chapt7-696x522.jpg 696w, https://peepalmedia.com/wp-content/uploads/2022/11/55_chapt7-1068x801.jpg 1068w, https://peepalmedia.com/wp-content/uploads/2022/11/55_chapt7-1920x1440.jpg 1920w" sizes="auto, (max-width: 536px) 100vw, 536px" /></figure></div>


<p><strong>ನಮ್ಮೂರ ಜಾತಿ ರಹಿತ ಬಾಂಧವ್ಯ ಹೀಗಿತ್ತು&#8230;</strong></p>



<p>“ಇದು ನನ್ನ ಗಂಡನ ಮನೆ. ನೀವು ಫೋನ್ ಮಾಡಿ ಬಂದಿದ್ದರೆ ನಾನು ಹೆಬ್ಬಾರ್ (ಇಲ್ಲಿಯ ಈಗಿನ ಆಡಳಿತ ಮೊಕ್ತೇಸರ)  ಅವರನ್ನು ಇವತ್ತು ಇರಿ ಎನ್ನುತ್ತಿದ್ದೆ” ಎಂದ  ಆಕೆ ಅಷ್ಟಕ್ಕೆ ಮುಗಿಸದೆ, ಕೂಡಲೇ ದೂರವಾಣಿ ಕರೆ ಮಾಡಿ ಮುಗಿಸಿ, ʼಈಗ ಬರುತ್ತಾರಂತೆ’ ಎಂದಾಗ ನಾವು ಸಂತೋಷಪಟ್ಟೆವು. ಆಗಲೇ ಶರಬತ್ ಕುಡಿಸಿ ನಮ್ಮ ಅಸರ್ ತಣಿಸಿದರು.<br></p>


<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2022/11/1.jpg" alt="" class="wp-image-14285" width="437" height="686" srcset="https://peepalmedia.com/wp-content/uploads/2022/11/1.jpg 560w, https://peepalmedia.com/wp-content/uploads/2022/11/1-191x300.jpg 191w, https://peepalmedia.com/wp-content/uploads/2022/11/1-150x236.jpg 150w, https://peepalmedia.com/wp-content/uploads/2022/11/1-300x471.jpg 300w" sizes="auto, (max-width: 437px) 100vw, 437px" /></figure></div>


<p><strong>ಲೋಟ ಕವಚಿ ಹಾಕಿಡಿ!</strong></p>



<p>ಈಗ ಆಕೆಯ ಗಂಡನೂ ಬಂದರು. ಅವರಿಗೂ ಈ ಹುಡುಗಿಯ ಕರೆ ಹೋಗಿರಬೇಕು. ಅವರೂ ಸಡಗರಪಟ್ಟರು. ಆಕೆಗೆ ತವರೂರ ಮೋಹ! ಆದರೆ ಆಕೆಯ ಗಂಡ ಮತ್ತು ಅತ್ತೆಯ ಸಡಗರ? ನನಗೆ ನನ್ನ ಪ್ರಾಥಮಿಕ ಶಾಲೆಯಲ್ಲಿ ಒಬ್ಬ ಬ್ರಾಹ್ಮಣ ಕುಟುಂಬದ ಮನೆಗೆ ಮಲಗಲೆಂದು ಹೋಗಿ ಅವರು ಬೆಳಿಗ್ಗೆ ಚಾಪೆ ಒಗೆದು ಹಾಕಿ ಹೋಗಲು ಹೇಳಿದ್ದು ನೆನಪಾಯಿತು. ನಾನು ಅಂದು ದುರು ದುರು ಎಂದು ಆ ಕತ್ತಲೆಯಲ್ಲಿ ನನ್ನ ಹಳ್ಳಿ ಮನೆಯತ್ತ ಹೆಜ್ಜೆ ಹಾಕಿದ್ದೂ ನೆನಪಾಯಿತು. ನಾವು ಅವರ ಮನೆಯಲ್ಲಿ ಕುಡಿದ ನೀರಿನ ಲೋಟವನ್ನು ‘ಕವಚಿ’ ಹಾಕಿಡಿ ಎಂದುದು ನೆನಪಾಯಿತು. ಮತ್ತೊಂದು ಮನೆಯ ಬ್ರಾಹ್ಮಣರು, ‘ಅವರು ಕವಚಿ ಹಾಕಲು ಹೇಳಿದ್ದಾರ? ಅದು ಅವಲಕ್ಷಣ! ಎಂದುದೂ ನೆನಪಾಯಿತು. ಒಟ್ಟಿನಲ್ಲಿ ಈ ಮನೆಯ ಸತ್ಕಾರ ಹಳೆಯದನ್ನು ನೆನಪಿಸಿತು.</p>



<p><strong>‘ಬೆರ್ಮರೆ ಉಜ್ಜಾಲ್’</strong></p>



<p>ಮನೆಯ ಪ್ರವೇಶ ದ್ವಾರದ ಎಡಭಾಗದಲ್ಲಿ ವಿಶಾಲ ಚಾವಡಿ ಇತ್ತು. ಆ ಚಾವಡಿಯಲ್ಲಿ ಒಂದು ತೂಗು ಉಯ್ಯಾಲೆ ಇತ್ತು. ಉಯ್ಯಾಲೆಯಲ್ಲಿ ಯಾವ ವಸ್ತುವೂ ಇರಲಿಲ್ಲ. ಆದರೆ ಅದನ್ನು ‘ಬೆರ್ಮರೆ ಉಜ್ಜಾಲ್’ ಎಂದು ಪರಿಚಯಿಸಿದರು. ಬೆರ್ಮೆರೆ ನಿರಾಕಾರ ರೂಪ ಇಲ್ಲಿಯೂ ಇತ್ತು. ಸಾಮಾನ್ಯವಾಗಿ ಬ್ರಾಹ್ಮಣರು ಆರಾಧನೆ, ಉಪಾಸನೆಯ ವಿಷಯದಲ್ಲಿ ಆಡಂಬರ ಮಾಡರು.</p>



<p><strong>ಕಟ್ಟಿಂಗೇರಿ&#8230;</strong></p>



<p>ಕಟ್ಟಿಂಗೇರಿ ಬ್ರಹ್ಮಸ್ಥಾನ ಸಿರಿ ಆಲಡೆ ಆಗಿದ್ದರೂ ಇತ್ತೀಚೆಗೆ ಸಿರಿ ಆಲಡೆಯ ರೀತಿ ನಡೆಯುತ್ತಿಲ್ಲ ಎಂದಳು ವಾಣಿ.</p>



<p>ಎಲ್ಲಾ ಬ್ರಹ್ಮಸ್ಥಾನಗಳು, ಸಿರಿ ಆಲಡೆಗಳು ಕಾಡಿನ ನಡುವೆಯೇ ಇದ್ದವುಗಳು. ಹಾಗೆಯೇ ಈ ಊರು ಕೂಡಾ ಕಾಡಾಗಿತ್ತು. ಈಗಲೂ ಹೆಚ್ಚಿನ ಭಾಗ ಕಾಡು ಆಗಿ ಉಳಿದಿದೆ. ಇಲ್ಲಿ ರಸ್ತೆ ಅಗಲೀಕರಣ ಆದಾಗ ಈ ಕಾಡಲ್ಲಿ ಬದುಕು ಕಟ್ಟಿರುವ ಜನರ ಅವಶೇಷಗಳು ದೊರಕಿವೆ ಎಂದವರು ಮೊಕ್ತೇಸರರಾದ ಹೆಬ್ಬಾರರು. ಆ ಜನರು ‘ಕಟ್ಟಿಂಗ’ ಎಂಬ ದಲಿತ ಜನಾಂಗದವರು ಎಂದರು. ಇವರ ಜನಾಂಗದ ಗುರಿಕಾರನನ್ನು ‘ಕಟ್ಟಿಂಗ’ ಎಂದು ಗುರುತಿಸುತ್ತಾರೆ ಎಂದು ವಿವರಿಸಿದರು. ಕಟ್ಟಿಂಗರ ಕೇರಿ ‘ಕಟ್ಟಿಂಗೇರಿ’ ಎಂದಾಗಿದೆ. ಕಟ್ಟಿಂಗರ ಆಲಡೆ ಕಟ್ಟಿಂಗೇರಿ ಆಲಡೆ ಎಂದರು. ಕಟ್ಟಿಂಗರ ಬಾಕುಡರು ಎಂದೂ ಗುರುತಿಸುತ್ತಾರಂತೆ.&nbsp; ಇಲ್ಲಿ ‘ಕಟ್ಟಿಂಗ ಕೆರೆ’ ಕೂಡಾ ಇದೆಯೆಂದರು. ಅದು ಈಗ ದೇವಸ್ಥಾನದ ಕೆರೆ ಆಗಿದೆ. ಈ ದೇವರ ಕೆರೆಯೇ ಆರು ಎಕ್ರೆ ಇದೆಯಂತೆ. ಈ ಕೆರೆಯನ್ನು ಮರು ನಿರ್ಮಾಣ ಮಾಡುವಾಗ ಕಟ್ಟಿಂಗರ ಸಮುದಾಯಕ್ಕೆ ಸೇರಿರಬಹುದಾದ ತಾಮ್ರದ ಪಾಪೆ-ಮುಂತಾದ ಪಳೆಯುಳಿಕೆಗಳು ದೊರೆತಿವೆ ಎಂದವರು ಹೆಬ್ಬಾರರು.</p>



<p><strong>ಕಟ್ಟಿಂಗರ ಮೂಲದ ಬನ</strong></p>



<p>ಅಷ್ಟಮಂಗಳ ಪ್ರಶ್ನೆಯಲ್ಲಿ ಕೂಡಾ ಕಟ್ಟಿಂಗರ ವಿಷಯ ತೇಲಿ ಬಂತು ಎಂದರು ಹೆಬ್ಬಾರರು. “ಓ ಅಲ್ಲಿ ಕಟ್ಟಿಂಗರ ಬನ ಇದೆ” ಕೈಚಾಚಿ ಹೇಳಿದರು. ಅವರು ಕೈನೀಡಿ ತೋರಿಸಿದ ಬನ ಆಕೆಯ ಮನೆಯ ಹಿಂಭಾಗದ ಗದ್ದೆಯ ಹಿಂದೆ ಸ್ವಲ್ಪ ಎತ್ತರದ ಜಾಗದಲ್ಲಿತ್ತು. ಬನದ ಪೊದೆ, ಗಿಡ, ಮರ ಕಡಿಯಲಾಗಿದೆ. ಕೆಲವು ಮುರಕಲ್ಲುಗಳನ್ನು ಸಾಲಾಗಿ ಇಡಲಾಗಿದೆ. ಅಲ್ಲಿಗೇ ನಡೆದೆವು ನಾವು. “ ಇದು ಕಟ್ಟಿಂಗರ ಮೂಲದ ಬನ. ಈ ಕಲ ಅವರ ಮೂಲಸ್ಥಾನವಂತೆ. ಅವರೆಲ್ಲ ಇಲ್ಲಿಗೆ ವರ್ಷಕ್ಕೆ ಒಮ್ಮೆ ಮಾತ್ರ ಬರುತ್ತಾರೆ. ಇಲ್ಲಿ ಜಾತ್ರೆ ನಡೆಯುವ ದಿನಗಳವು. ಹೀಗೆ ತುಳುನಾಡಿನ ನೆಲಮೂಲದ ಆಚರಣೆಯಂತೆ ಬೇಸಗೆಯಲ್ಲಿ ವರ್ಷಕ್ಕೆ ಒಮ್ಮೆ ಇವರ ಬನದಲ್ಲಿ ತನು ಸೇವೆ ಮುಗಿಸಿ ಮರಳುತ್ತಾರೆ.’</p>



<p><strong>ದ್ರಾವಿಡರನ್ನು ಆರ್ಯರು ದಬ್ಬಿದರು ಎನ್ನುವುದಕ್ಕೆ ಉದಾಹರಣೆ!</strong></p>



<p>ನಮ್ಮ ಜೊತೆ ಇದ್ದ ಸ್ಥಳೀಯರು ಮಾತು ಮುಂದುವರಿಸಿದರು. 2000 ನೇ ಇಸವಿಯಲ್ಲೂ ಜಾತ್ರೆಯ ದಿನಗಳಲ್ಲಿ ಕಟ್ಟಿಂಗರು ಬಂದಿದ್ದರು. ಬಂದವರು ಇಲ್ಲೇ (ಬನದ ನೆಲದಲ್ಲಿ) ಮಾಮೂಲಿಯಂತೆ ತನು ಹುಯ್ಯಲು/ಎರೆಯಲು ಮುಂದಾದರು. ಆಗ ಜಾತ್ರೆಗೆ ಬಂದಿದ್ದ ‘ತಂತ್ರಿ’ಯವರು ಇದ್ದರು. ಆತ ಕಟ್ಟಿಂಗರನ್ನು ಕಂಡವರೇ ದಬಾಯಿಸಿದರು. ಮತ್ತೆಂದೂ ಇತ್ತ ಬರಬಾರದೆಂದು ಅಪ್ಪಣೆ ಇತ್ತರು ಎಂದಳು! ಇದು ದ್ರಾವಿಡರನ್ನು ಆರ್ಯರು ದಬ್ಬಿದರು ಎನ್ನುವುದಕ್ಕೆ ಉದಾಹರಣೆಯಾಗಬಲ್ಲುದು. ಆ ದಬ್ಬಾಳಿಕೆಯ ಮಾಹಿತಿ ಪಡೆದ ನನಗೆ ನನ್ನ ಮನೆಯಿಂದ ನನ್ನನ್ನು ಹೊರಗೆ ತಳ್ಳಿದಂತೆ ನೋವಾಯಿತು. ನಾವು ಇಲ್ಲಿಗೆ ಹೋದುದು 2000ಕ್ಕೆ. ಆಗ ಜಾತ್ರೆ ಮುಗಿದಿತ್ತು.</p>



<p>ದಲಿತರ ಇಂತಹ ಮೂಲಸ್ಥಾನಗಳನ್ನು ನವೀಕರಣದ ಹೆಸರಲ್ಲಿ ಸಂಸ್ಕೃತೀಕರಣಗೊಳಿಸಿ ದಲಿತರನ್ನು ಕೆಳವರ್ಗದವರನ್ನು ಅವರದೇ ಮೂಲತಾನಗಳಿಂದ, ಅವರದೇ ಕುಲದೇವರುಗಳಿಂದ ದೂರೀಕರಿಸುವುದು ತುಳುನಾಡಿನಲ್ಲಿ ನನ್ನ ಅಧ್ಯಯನ ಕಂಡ ವಿಷಯ. ಉತ್ತರ ಭಾರತ ಮೂಲದವರ ಅಷ್ಟಮಂಗಳದವರ ಬೆಂಬಲವೂ ಇಲ್ಲಿ ಕಾಣಬರುತ್ತದೆ. ಆದರೂ ಇದು ಬ್ರಾಹ್ಮಣರ ಅಥವಾ ಅಷ್ಟಮಂಗಳದವರ ತಪ್ಪಲ್ಲ. ತುಳುನಾಡಿನ ಇತರ ಮೇಲ್ವರ್ಗದವರ ಪಾಲು ಇದರಲ್ಲಿ ಹೆಚ್ಚಿದೆ. ಜೀರ್ಣೋದ್ಧಾರಕ್ಕೆ ರೂಪು ರೇಷೆ ಹಾಕಿ ಅಷ್ಟಮಂಗಳದವರನ್ನು ಕರೆಸುವುದು ಹೆಚ್ಚಾಗಿ ಬಂಟರು.</p>



<p>ಈ ಕಟ್ಟಿಂಗರ ಮೂಲತಾನದ ಆಡಳಿತ, ಹೆಬ್ಬಾರ ಕುಟುಂಬಕ್ಕೆ ಹಸ್ತಾಂತರ ಆದುದು ಜೈನ ಕುಟುಂಬದಿಂದ. ಇಲ್ಲಿ ಇದ್ದ ಜೈನ ಕುಟುಂಬದವರು 1957ರಲ್ಲಿ ಆಸ್ತಿ, ಪಟೇಲ ಹುದ್ದೆ ಹಾಗೂ ಈ ಬ್ರಹ್ಮಸ್ತಾನದ ಒಡೆತನವನ್ನು ಈಗಿನ ಹೆಬ್ಬಾರ ಕುಟುಂಬಕ್ಕೆ ದಾನ ನೀಡಿದ್ದರಂತೆ. ಸಾಮಾನ್ಯವಾಗಿ ಜೈನರ ಕುಟುಂಬ ಸಂಸ್ಥೆ ಚಿಕ್ಕದಿದ್ದರೆ ಅಲ್ಲಿ ಮುಂದೆ ಸಂತಾನ ನಶಿಸುತ್ತದೆ. ಅಂತಹ ಸಂದರ್ಭದಲ್ಲಿ ಇಂತಹ ಕ್ಷೇತ್ರಗಳನ್ನು ಬ್ರಾಹ್ಮಣರಿಗೆ ದಾನ ನೀಡಿ ಪೂಜಾ ವ್ಯವಸ್ಥೆಯನ್ನು ಮಾಡಲು ಕರಾರು ಮಾಡಿರುವುದು ನನ್ನ ಅಧ್ಯಯನ ಕಾಲದಲ್ಲಿ ದೊರಕಿದೆ.</p>



<p><strong>ಬ್ರಹ್ಮನಿಗೆ ಮೂರ್ತರೂಪ ಕೊಟ್ಟಿದ್ದು ಹೀಗೆ&#8230;</strong></p>



<p>ಇತ್ತೀಚಿನ ವರ್ಷಗಳಲ್ಲಿ ಬ್ರಹ್ಮಸ್ಥಾನ ಎಂದು ಗುರುತಿಸಿಕೊಳ್ಳುವ ಈ ದೇವಸ್ಥಾನದಲ್ಲಿ ಚತುರ್ಮುಖ ಬ್ರಹ್ಮ ಶಿಲ್ಪ ಇದೆ. ತುಳುವರ ನಿರಾಕಾರ ಬ್ರಹ್ಮನಿಗೆ ಮೂರ್ತರೂಪ ಕೊಟ್ಟಿದ್ದು ಹೀಗೆ. ಡಾ. ಗುರುರಾಜ ಭಟ್ಟರ ಸಂಗ್ರಹದಲ್ಲಿ ಈ ಶಿಲ್ಪದ ಚಿತ್ರ ಇದೆ. ನಾಲ್ಕು ತಲೆ ಒಂದು ಕಿರೀಟ, ನಾಲ್ಕು ಕೈಗಳ ಹತ್ತು ಅಡಿ ಎತ್ತರದ ಶಿಲ್ಪ ಎಂದು ಬರೆಯುತ್ತಾರೆ ಅವರು. ಈ ಶಿಲ್ಪದ ಮೇಲ್ಭಾಗದ ಒಂದೊಂದು ಕೈಗಳಲ್ಲಿ ಜಪಸರ ಮತ್ತು ಕುಂಡಲಗಳಿವೆ. ಇದು ಪದ್ಮಾಸನದಲ್ಲಿ ಇದ್ದು ಧ್ಯಾನ ಮುದ್ರೆಯಲ್ಲಿರುವ ವೇದ ಬ್ರಹ್ಮ ಎಂದು ಗುರುರಾಜ ಭಟ್ಟರು ಬರೆಯುತ್ತಾರೆ. ಪದ್ಮಾಸನ ಭಂಗಿಯಲ್ಲಿ ಇರುವ ಈ ಚತುರ್ಮುಖ ಶಿಲ್ಪದ ಪೀಠದಲ್ಲಿ ಕೋಳಿಯ ಚಿತ್ರ ಇದೆ. ಕೋಳಿ (ಮಯೂರ) ಕುಮಾರನ ಸಂಕೇತ. ಸಿರಿಯ ಮಗ ಕುಮಾರನ ಸಂಕೇತವೂ ಕೋಳಿ. ತುಳುವರ ಆರಾಧನಾ ಕ್ಷೇತ್ರಗಳಲ್ಲಿ ಕೋಳಿಯ ಪ್ರತಿಮೆಗಳಿವೆ.<br></p>


<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2022/11/302_bakudura-ullalti-naga-kannike-kola-kola-1.jpg" alt="" class="wp-image-14286" width="498" height="753" srcset="https://peepalmedia.com/wp-content/uploads/2022/11/302_bakudura-ullalti-naga-kannike-kola-kola-1.jpg 592w, https://peepalmedia.com/wp-content/uploads/2022/11/302_bakudura-ullalti-naga-kannike-kola-kola-1-198x300.jpg 198w, https://peepalmedia.com/wp-content/uploads/2022/11/302_bakudura-ullalti-naga-kannike-kola-kola-1-150x227.jpg 150w, https://peepalmedia.com/wp-content/uploads/2022/11/302_bakudura-ullalti-naga-kannike-kola-kola-1-300x454.jpg 300w" sizes="auto, (max-width: 498px) 100vw, 498px" /></figure></div>


<p><strong>ಸಿರಿಯ ಕುಟುಂಬ ಇಲ್ಲಿಲ್ಲ&#8230;</strong></p>



<p>ಸಿರಿಯ ಕುಟುಂಬದ ಅಬ್ಬಗ, ದಾರಗ, ಸೊನ್ನೆ, ಗಿಂಡೆ ಮಾತ್ರ ಇಲ್ಲಿ ಇಲ್ಲ. ಆದರೆ ಕುಮಾರ, ನಂದಿಗೋನ, ರೆಕ್ಕೆಸಿರಿ, ಚವುಂಡಿ -ಹೀಗೆ ಪರಿವಾರ ದೈವಗಳಿವೆ. ಕುಮಾರ ಶಿಲ್ಪ ಇದ್ದರೂ ಕುಮಾರ ದರ್ಶನ ಇಲ್ಲ. ಆದರೆ ಕೆಲವು ಕಾಲದ ಹಿಂದೆ ಬ್ರಹ್ಮದರ್ಶನ ಇತ್ತು ಇತ್ತೀಚೆಗೆ ಅದೂ ನಿಂತಿದೆ. ಇಲ್ಲಿ ಹಿಂದೆ ದೆಯ್ಯೊಲೆ ನಲಿಕೆ ಆಗುತ್ತಿತ್ತು ಎನ್ನುತ್ತಾರೆ. ಹೀಗಾಗಿ ಇಲ್ಲಿ ಅತಿಕಾರೆ ಭತ್ತದ ಪ್ರಾತಿನಿಧಿಕ ಸಿರಿಗಳು ಇದ್ದಿರಬಹುದು. ದೆಯ್ಯೊಲೆ ನಲಿಕೆ ನಡೆಯುತ್ತಿದ್ದ ಗದ್ದೆಯನ್ನು ‘ಜಕ್ಕೆದ ಬಾಕ್ಯಾರ್’ ಎಂದು ಇಂದಿಗೂ ಕರೆಯಲಾಗುತ್ತದೆ. ‘ಜಕ್ಕೆದ ಬಳಿ’ ಅಂದರೆ&nbsp; ಢಕ್ಕೆ ಬಳಿ. ದೆಯ್ಯೊಲಿ ನಲಿಕೆ ಆಗುತ್ತಿದ್ದಲ್ಲಿ ಬೀಜದ ಜೊತೆ ಬಂದಿರುವ (ಕುಂಭ) ಕಡ್ಯ ಸಿರಿಯ ಜಕ್ಕೆದ ನಲ್ಕೆ, ದೆಯ್ಯೊಲೆ ನಲ್ಕೆ ನಡೆಯುತ್ತಿದ್ದಿರಬೇಕು.</p>



<p><strong>ಸಂಸ್ಕೃತೀಕರಣ ಮತ್ತು ಮೂಲ ಅಸ್ಮಿತೆ&#8230;</strong></p>



<p>ಸಾಮಾನ್ಯವಾಗಿ ಪಾಳೆಯಗಾರರ ಆಲಡೆ ಕ್ಷೇತ್ರಗಳಲ್ಲಿ ಅಂಬೊಡಿ ನಡೆಯುವ ಗದ್ದೆ, ಅಂಕದ ಗದ್ದೆ ಇತ್ಯಾದಿ ಇರುತ್ತವೆ. ಇಲ್ಲಿಯೂ ಇತ್ತು. ಈಗ ಇಲ್ಲಿಯ ಅಂಕ ಅಂಬೊಡಿಯ ಆಚರಣೆ ನಿಂತಿದೆ. ಆದರೂ ‘ಅಂಕದ ಗದ್ದೆ, ಅಂಬೊಡಿ ಗದ್ದೆ, ಚೆಂಡಿನ ಗದ್ದೆ’ ಎಂಬ ಹೆಸರುಗಳು ನೆಲಮೂಲದ ಕ್ಷೇತ್ರವೊಂದು ವೈದಿಕೀಕರಣ ಗೊಂಡುದಕ್ಕೆ ಸಾಕ್ಷಿ ನೀಡುತ್ತವೆ. ಹೀಗೆ ತುಳು ಜನಪದರ ಉಪಾಸನಾ ಕಲಗಳು ಸಂಸ್ಕೃತೀಕರಣ ಗೊಂಡರೂ ತಮ್ಮ ಮೂಲ ಅಸ್ಮಿತೆಯ ಚಿತ್ರಣವನ್ನು ಕಳೆದುಕೊಳ್ಳುವುದಿಲ್ಲ.</p>



<p>ಸರಸ್ವತಿ ಹೆಗ್ಗಡಿತಿ ಇಲ್ಲಿಗೆ&nbsp; ಬಂದುದರ ಕಾರಣ ನಾನು ಆರಂಭದಲ್ಲೇ ಹೇಳಿರುವೆನು.&nbsp; ಅವರ ನಂಬಿಕೆಯ ‘ಬಾಲು ಮಾಡೆದಿ’ ಕಟ್ಟೆಯನ್ನು ವಾಣಿ ತೋರಿಸಿದಾಗ ಸರಸ್ವತಿಯ ಸಂತಸಕ್ಕೆ ಪಾರವೇ ಇಲ್ಲ. ಆಲಡೆಯ ಜಾತ್ರೆಯ ದಿನಗಳಲ್ಲಿ ಆ ಕಟ್ಟೆಯಲ್ಲಿ ದೀಪ ಹೊತ್ತಿಸಲಾಗುತ್ತದೆಯೆಂದರು. ಐತಿಹ್ಯ ತಲೆಮಾರಿನಿಂದ ತಲೆಮಾರಿಗೆ ಹೀಗೇ ಮುಂದುವರಿಯುತ್ತದೆ.<br></p>



<p><strong>ಡಾ. ಇಂದಿರಾ ಹೆಗ್ಗಡೆ</strong></p>



<p>ಕನ್ನಡ ಮತ್ತು ತುಳು ಭಾಷಾ ಸಾಹಿತಿ, ಉಪನ್ಯಾಸ, ಸಂಶೋಧನೆ ಹಾಗೂ ಸಮಾಜ ಸೇವೆಗಳಲ್ಲಿ ಸದಾ ಸಕ್ರಿಯರು.</p>
]]></content:encoded>
					
		
		
			</item>
	</channel>
</rss>
