<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>daivaaradhane &#8211; Peepal Media</title>
	<atom:link href="https://peepalmedia.com/tag/daivaaradhane/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 24 Nov 2022 03:12:22 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>daivaaradhane &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಕಾಂತಾರ ಗೆದ್ದಿದೆ… ದೈವಾರಾಧನೆ ಸೋತಿದೆ&#8230;!</title>
		<link>https://peepalmedia.com/kanthara-geddide-daivaaraadhane-sothide-article-by-charan-ivarnad/</link>
		
		<dc:creator><![CDATA[Charan Aivarnad]]></dc:creator>
		<pubDate>Thu, 24 Nov 2022 03:12:22 +0000</pubDate>
				<category><![CDATA[ಧರ್ಮ- ಸಂಸ್ಕೃತಿ]]></category>
		<category><![CDATA[charan Ivarnadu]]></category>
		<category><![CDATA[daivaaradhane]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=16340</guid>

					<description><![CDATA[ತುಳುಭಾಷಿಕ ಕಾಂತಾರ ಸಿನೆಮಾದ ಅಭಿಮಾನಿಗಳು ಇಂದು ಈ ಸಿನೆಮಾದ ಪ್ರಭಾವದಿಂದ ಘಟಿಸುತ್ತಿರುವ “ದೈವಗಳ ಅವಹೇಳನ”ದ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ತುಳುನಾಡಿನಿಂದ ಹೊರಗೆ ಇಂದು ದೈವಸ್ಥಾನ, ಕಟ್ಟೆಗಳು ಆರಂಭವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಹಣ ಸಂಗ್ರಹಿಸುವ ಬಗ್ಗೆ ಅವರಿಗೆ ಆಕ್ರೋಶ ಇದೆ ಎನ್ನುವುದನ್ನು ಗುರುತಿಸುತ್ತಾರೆ  ಚರಣ್‌ ಐವರ್ನಾಡು ಕಾಂತಾರ ಸಿನೇಮಾದ ನಂತರ ಕರ್ನಾಟಕದಲ್ಲಿ ಮಾತ್ರವಲ್ಲ ಭಾರತದಾದ್ಯಂತ ತುಳುನಾಡಿನ ದೈವಾರಾಧನೆಯ ಬಗ್ಗೆ ಒಂದು ರೋಮ್ಯಾಂಟಿಸೈಸ್ಡ್‌ ಆಸಕ್ತಿ ಹುಟ್ಟಿಕೊಂಡಿದೆ. ಕಾಂತಾರ ಸಿನೇಮಾ ದೈವಾರಾಧನೆಯನ್ನು ಪ್ರತಿನಿಧಿಸಿದ ರೀತಿಯಲ್ಲಿರುವ ದೋಷಗಳ ಬಗ್ಗೆ ಚರ್ಚೆಗಳು ನಡೆದವು. ಇದು [&#8230;]]]></description>
										<content:encoded><![CDATA[
<h5 class="alignfull has-text-align-center has-very-light-gray-to-cyan-bluish-gray-gradient-background has-background wp-block-heading"><strong>ತುಳುಭಾಷಿಕ ಕಾಂತಾರ ಸಿನೆಮಾದ ಅಭಿಮಾನಿಗಳು ಇಂದು ಈ ಸಿನೆಮಾದ ಪ್ರಭಾವದಿಂದ ಘಟಿಸುತ್ತಿರುವ “ದೈವಗಳ ಅವಹೇಳನ”ದ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ತುಳುನಾಡಿನಿಂದ ಹೊರಗೆ ಇಂದು ದೈವಸ್ಥಾನ, ಕಟ್ಟೆಗಳು ಆರಂಭವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಹಣ ಸಂಗ್ರಹಿಸುವ ಬಗ್ಗೆ ಅವರಿಗೆ ಆಕ್ರೋಶ ಇದೆ ಎನ್ನುವುದನ್ನು ಗುರುತಿಸುತ್ತಾರೆ  ಚರಣ್‌ ಐವರ್ನಾಡು</strong></h5>



<p>ಕಾಂತಾರ ಸಿನೇಮಾದ ನಂತರ ಕರ್ನಾಟಕದಲ್ಲಿ ಮಾತ್ರವಲ್ಲ ಭಾರತದಾದ್ಯಂತ ತುಳುನಾಡಿನ ದೈವಾರಾಧನೆಯ ಬಗ್ಗೆ ಒಂದು ರೋಮ್ಯಾಂಟಿಸೈಸ್ಡ್‌ ಆಸಕ್ತಿ ಹುಟ್ಟಿಕೊಂಡಿದೆ. ಕಾಂತಾರ ಸಿನೇಮಾ ದೈವಾರಾಧನೆಯನ್ನು ಪ್ರತಿನಿಧಿಸಿದ ರೀತಿಯಲ್ಲಿರುವ ದೋಷಗಳ ಬಗ್ಗೆ ಚರ್ಚೆಗಳು ನಡೆದವು. ಇದು ಸಿನೇಮಾ ಮಾತ್ರ, ಸಂಸ್ಕೃತಿಯೊಂದರ ದಾಖಲೀಕರಣ ಅಲ್ಲ ಎಂಬ ವಾದಗಳನ್ನು ಕಾಂತಾರದ ಅಭಿಮಾನಿಗಳು ಟೀಕಿಸಿದ್ದರು. ಸಿನೇಮಾ ಆರಾಧನಾ ಪರಂಪರೆಯೊಂದರ ಮೇಲೆ ಬೀರಬಲ್ಲ ಪ್ರಭಾವದ ಬಗ್ಗೆ ಚಿಕಿತ್ಸಕ ನೋಟಗಳ ಬರಹಗಳನ್ನು ಕೌಂಟರ್‌ ಮಾಡಲೆಂದು ಕಾಂತಾರವನ್ನು ದೈವಾರಾಧನೆಯ ನಿಜವಾದ ಪ್ರತಿನಿಧೀಕರಣದ ಮಾಧ್ಯಮ ಎಂಬಂತೆ ಬಿಂಬಿಸಲಾಯಿತು. ಒಂದು ಹೆಜ್ಜೆ ಮುಂದಕ್ಕೆ ಹೋಗಿ “ಕಾಂತಾರ ಸಿನೇಮಾದಿಂದ ಇಡೀ ಜಗತ್ತಿಗೆ ದೈವ ಎಂದರೇನು ಮತ್ತು ಅದರ ಮಹಿಮೆ ಏನು ಎಂಬುದು ತಿಳಿಯಿತು!” ಎಂಬ ಮಾತು ವ್ಯಾಪಕವಾಗಿ ಪ್ರಚಾರಕ್ಕೆ ಬಂತು.</p>



<p><strong>ಎಲ್ಲೆಲ್ಲೂ ಕಾಂತಾರದ ದೈವಗಳೇ..</strong></p>



<p>ಈ ಸಿನೇಮಾದ ನಂತರ “ಕಾಂತಾರದ ದೈವ” ಎಂಬ ಮಾತು ಚಾಲ್ತಿಗೆ ಬಂದಿದೆ. ಎಲ್ಲಾ ದೈವಗಳನ್ನು ಕಾಂತಾರದ ದೈವ ಎಂದು ಹೇಳುವ ಪರಿಪಾಠ ಕರ್ನಾಟಕದಲ್ಲಿ ಶುರುವಾಗಿದೆ. ಜನ ದೈವದ ವೇಷಭೂಷಣಗಳನ್ನು ಧರಿಸಿ ರಸ್ತೆಗಳಲ್ಲಿ, ವೇದಿಕೆಗಳಲ್ಲಿ, ಪೊಲೀಸ್‌ ಪೆರೇಡ್‌, ಇನ್ಸ್ಟಾಗ್ರಾಂ ರೀಲ್ಸ್‌ ಗಳಲ್ಲಿ ಹೋ….ಎಂದು ಅರೆಬಾಯಿ ಹಾಕುತ್ತಿದ್ದಾರೆ. ಬೆಂಗಳೂರು, ಮೈಸೂರು ಮೊದಲಾದ ಕಡೆಗಳಲ್ಲಿ ಕೊರಗಜ್ಜನ ದೈವಸ್ಥಾನಗಳು ಏಳುತ್ತಿವೆ. ಮೈಸೂರಿನಲ್ಲಿ ಗುಳಿಗನ ನೇಮ ನಡೆಯುತ್ತದೆ. ಇದರಿಂದ ತುಳುನಾಡಿನ ಜನರಲ್ಲಿ ಒಂದು ರೀತಿಯ ಆಕ್ರೋಶ ಹುಟ್ಟಿಕೊಂಡಿದೆ.</p>



<p>ಕಾಂತಾರ ಸಿನೇಮಾಗಿಂತ ಹಿಂದೆ ಯಾವುದೇ ದೈವದ ವೇಷವನ್ನು ತೊಟ್ಟು ರಸ್ತೆಗಳಲ್ಲಿ, ವೇದಿಕೆಗಳಲ್ಲಿ ಕುಣಿಯುವುದನ್ನು ಅವಿಭಜಿತ ದಕ್ಷಿಣ ಕನ್ನಡದಲ್ಲಿ ವಿರೋಧಿಸುತ್ತಿದ್ದರು. ಅನೇಕರ ಮೇಲೆ ಕೇಸ್‌ ಕೂಡ ಹಾಕಲಾಗಿತ್ತು. ಒಂದು ಬಾರಿ ಜಾದೂ ಒಂದರಲ್ಲಿ ದೈವದ ಪಾತ್ರವನ್ನು ತಂದಾಗ ಅದಕ್ಕೆ ತೀವ್ರವಾದ ವಿರೋಧ ವ್ಯಕ್ತವಾಯಿತು. ಯಕ್ಷಗಾನ, ನಾಟಕಗಳಲ್ಲಿ ದೈವಗಳ ಪಾತ್ರಗಳನ್ನು ತರುವ ಬಗ್ಗೆ ತಕರಾರುಗಳಿದ್ದರೂ ಅವುಗಳನ್ನು ರಂಗದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.</p>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow">
<figure class="wp-block-image size-full"><img fetchpriority="high" decoding="async" width="720" height="991" src="https://peepalmedia.com/wp-content/uploads/2022/11/image-16.png" alt="" class="wp-image-16342" srcset="https://peepalmedia.com/wp-content/uploads/2022/11/image-16.png 720w, https://peepalmedia.com/wp-content/uploads/2022/11/image-16-218x300.png 218w, https://peepalmedia.com/wp-content/uploads/2022/11/image-16-150x206.png 150w, https://peepalmedia.com/wp-content/uploads/2022/11/image-16-300x413.png 300w, https://peepalmedia.com/wp-content/uploads/2022/11/image-16-696x958.png 696w" sizes="(max-width: 720px) 100vw, 720px" /></figure>
</div>



<div class="wp-block-column is-layout-flow wp-block-column-is-layout-flow">
<figure class="wp-block-image size-large"><img decoding="async" width="1024" height="1024" src="https://peepalmedia.com/wp-content/uploads/2022/11/image-18-1024x1024.png" alt="" class="wp-image-16344" srcset="https://peepalmedia.com/wp-content/uploads/2022/11/image-18-1024x1024.png 1024w, https://peepalmedia.com/wp-content/uploads/2022/11/image-18-300x300.png 300w, https://peepalmedia.com/wp-content/uploads/2022/11/image-18-150x150.png 150w, https://peepalmedia.com/wp-content/uploads/2022/11/image-18-768x768.png 768w, https://peepalmedia.com/wp-content/uploads/2022/11/image-18-696x696.png 696w, https://peepalmedia.com/wp-content/uploads/2022/11/image-18-1068x1068.png 1068w, https://peepalmedia.com/wp-content/uploads/2022/11/image-18.png 1080w" sizes="(max-width: 1024px) 100vw, 1024px" /></figure>
</div>
</div>



<p><strong>ಜನ ಸಿನೇಮಾವನ್ನು ಸಂಭ್ರಮಿಸಿದರು..</strong></p>



<p>ಇಷ್ಟೆಲ್ಲಾ ರಿಜಿಡಿಟಿಯನ್ನು ಕಾಯ್ದುಕೊಂಡಿದ್ದ ತುಳುವರು ಕಾಂತಾರ ಸಿನೇಮಾ ಬಂದಾಗ ಅದನ್ನು ಮುಕ್ತವಾಗಿ ಒಪ್ಪಿಕೊಂಡರು. ಇದರಲ್ಲಿ ದೈವಾರಾಧನೆಯನ್ನು ನಿರೂಪಿಸಿದ ರೀತಿಯಲ್ಲಿ ದೋಷಗಳಿದ್ದರೂ ಸಿನೇಮಾವನ್ನು ಸಂಭ್ರಮಿಸಿದರು. ಇದರ ಹಿಂದೆ ಇರುವ ರಾಜಕೀಯವನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂಬುದನ್ನು ನಾವು ಚರ್ಚೆ ಮಾಡಬೇಕಷ್ಟೇ. ಆದರೆ ಯಾವುದೇ ವಿರೋಧಗಳು ವ್ಯಕ್ತವಾದರೂ ಅವನ್ನು ನಿವಾರಿಸಲು ಬೇಕಾದ ಸಿದ್ಧತೆಯನ್ನು ಸಿನೇಮಾ ತಂಡ ಮಾಡಿಕೊಂಡಿದ್ದಂತೆ ತೋರುತ್ತದೆ. ಮತ್ತು ಈ ವಿರೋಧಗಳನ್ನು ಬಗ್ಗುಬಡಿಯಲು ಪ್ರೇಕ್ಷಕರೇ ನಿಂತರು.</p>



<p><strong>ತುಳು ಭಾಷಿಕರು ಯಾಕೆ ಸಿಟ್ಟಾಗಿದ್ದಾರೆ?</strong></p>



<p>ಆದರೆ ತುಳುಭಾಷಿಕ ಕಾಂತಾರ ಸಿನೆಮಾದ ಅಭಿಮಾನಿಗಳು ಇಂದು ಈ ಸಿನೆಮಾದ ಪ್ರಭಾವದಿಂದ ಘಟಿಸುತ್ತಿರುವ “ದೈವಗಳ ಅವಹೇಳನ”ದ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ತುಳುನಾಡಿನಿಂದ ಹೊರಗೆ ಇಂದು ದೈವಸ್ಥಾನ, ಕಟ್ಟೆಗಳು ಆರಂಭವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಹಣ ಸಂಗ್ರಹಿಸುವ ಬಗ್ಗೆ ಅವರಿಗೆ ಆಕ್ರೋಶ ಇದೆ. ಆದರೆ ಜನರು ಮಾತ್ರ ಕಾಂತಾರ ಸಿನೆಮಾಕ್ಕೆ ಮರುಳಾಗಿ ತಮ್ಮ ಹಕ್ಕು ಎಂಬಂತೆ ದೈವದ ವೇಷವನ್ನು ಕಟ್ಟಿ ಕುಣಿಯುತ್ತಿದ್ದಾರೆ. “ಸಿನೆಮಾ ಮಾಡುವಾಗ ಮಾಡದ ವಿರೋಧ ನಾವು ಭಕ್ತಿಯಿಂದ ಮಾಡುವಾಗ ಯಾಕೆ ?” ಎಂಬ ಪ್ರಶ್ನೆ ಕೇಳುತ್ತಿದ್ದಾರೆ.</p>



<p><strong>ಟ್ರೆಂಡಿಂಗ್‌ ನಲ್ಲಿ ಇರುವ ಕೊರಗಜ್ಜ</strong></p>



<p>ಸದ್ಯ ತುಳುನಾಡಿನಲ್ಲಿ ಟ್ರೆಂಡಿಂಗ್‌ ನಲ್ಲಿ ಇರುವ ದೈವ ಕೊರಗಜ್ಜ. ಕೊರಗಜ್ಜನ ಕಟ್ಟೆಗಳು ಅಲ್ಲಲ್ಲಿ ತಲೆ ಎತ್ತಿವೆ. ಅನೇಕ ಪವಾಡ ಕಥೆಗಳು ಹುಟ್ಟಿಕೊಂಡು ರಾಜ್ಯ – ಪರ ರಾಜ್ಯದಿಂದ ಭಕ್ತರು ತುಳುನಾಡಿಗೆ ಬರುತ್ತಿದ್ದಾರೆ. ಇದು ಕಳೆದ ಒಂದು ದಶಕದಲ್ಲಿ ನಡೆದಿರುವ ಬದಲಾವಣೆ. ಹಿಂದೆ ಕೊರಗಜ್ಜ ಇಷ್ಟೊಂದು ಖ್ಯಾತಿಯ ದೈವ ಆಗಿರಲಿಲ್ಲ. ಒಂದು ದಶಕದಿಂದ ಈಚೆಗೆ ವ್ಯಾಪಕವಾದ ಪ್ರಚಾರವನ್ನು ಪಡೆದ ಕೊರಗಜ್ಜನಿಗೆ ಅಲ್ಲಲ್ಲಿ ನೇಮ ನಡೆಯುತ್ತಿದೆ.</p>



<figure class="wp-block-image size-large"><img decoding="async" width="1024" height="381" src="https://peepalmedia.com/wp-content/uploads/2022/11/image-19-1024x381.png" alt="" class="wp-image-16345" srcset="https://peepalmedia.com/wp-content/uploads/2022/11/image-19-1024x381.png 1024w, https://peepalmedia.com/wp-content/uploads/2022/11/image-19-300x112.png 300w, https://peepalmedia.com/wp-content/uploads/2022/11/image-19-768x286.png 768w, https://peepalmedia.com/wp-content/uploads/2022/11/image-19-150x56.png 150w, https://peepalmedia.com/wp-content/uploads/2022/11/image-19-696x259.png 696w, https://peepalmedia.com/wp-content/uploads/2022/11/image-19-1068x398.png 1068w, https://peepalmedia.com/wp-content/uploads/2022/11/image-19.png 1080w" sizes="(max-width: 1024px) 100vw, 1024px" /></figure>



<p>ಕೊರಗ ತನಿಯ ಎಂಬ ಹುಡುಗ ದೈವವಾಗಿ ಅವನದೇ ಕೊರಗ ಸಮುದಾಯದವರ ದೈವವಾಗುತ್ತಾನೆ. ಈ ಸಮುದಾಯದಲ್ಲಿ ಕೊರಗ ತನಿಯನಿಗೆ ಕಲ್ಲು ಹಾಕಿ ನಂಬುತ್ತಾರೆಯೇ ಹೊರತು ಕೋಲ ಮಾಡುವುದಿಲ್ಲ. ಯುವಕನಾದ ತನಿಯ ಕೊರಗ ಸಮುದಾಯದಲ್ಲಿ ಸಂದಿ ಹೋದ ಹಿರಿಯ ವ್ಯಕ್ತಿಯಾದ್ದರಿಂದ ಅವರು ಅವನನ್ನು ಅಜ್ಜೆರ್‌ / ಅಜ್ಜ ಎಂದು ಕರೆಯುತ್ತಾರೆ. ಕ್ರಮೇಣ ಇತರ ಸಮುದಾಯಗಳೂ ಈ ದೈವವನ್ನು ನೇಮದ ಮೂಲಕ ಆರಾಧಿಸಲು ಆರಂಭ ಮಾಡಿ ಕೊರಗಜ್ಜ ಎಂದು ಕರೆದರು.</p>



<p>ಅಷ್ಟೇನು ಖ್ಯಾತವಲ್ಲದ ದೈವ ಇದ್ದಕ್ಕಿದ್ದಂತೆ ಪ್ರಚಾರವನ್ನು ಪಡೆಯುತ್ತದೆ. ಸಾವಿರಾರು ಭಕ್ತರು ಸೃಷ್ಟಿಯಾಗುತ್ತಾರೆ. ಭಕ್ತಿಯನ್ನು ಬಂಡವಾಳವಾಗಿ ಮಾಡಿಕೊಂಡು ಅಲ್ಲಲ್ಲಿ ಕಟ್ಟೆಗಳು ನಿರ್ಮಾಣವಾಗುತ್ತವೆ. ಈಗ ಕೊರಗ ತನಿಯನನ್ನು “ಕರಿಯಜ್ಜ” ಎಂದೆಲ್ಲಾ ಕರೆಯಲು ಶುರು ಮಾಡಿದ್ದಾರೆ. ಈಗ “ಕರಿ ಹೈದ ಕರಿ ಅಜ್ಜ” ಎಂಬ ಅಸಂಬದ್ಧ ಟೈಟಲ್‌ ಇರುವ ಕನ್ನಡ ಸಿನೇಮಾ ಒಂದು ಬರುತ್ತಿದೆ. ಬೇರೆ ಬೇರೆ ಭಕ್ತಿ ಗೀತೆಗಳು ಹುಟ್ಟಿಕೊಂಡಿವೆ. ಈ ಮೂಲಕ ದುರಂತ ನಾಯಕ ಕೊರಗ ತನಿಯನ ಜೀವನಗಾಥೆಯನ್ನು, ಪಾಡ್ದನವನ್ನು ವ್ಯವಸ್ಥಿತವಾಗಿ ತಿರುಚುತ್ತಿದ್ದಾರೆ.</p>



<p><strong>ವ್ಯಾಪಕ ಪ್ರಚಾರ ಪಡೆದ ಶಬರಿಮಲೆ ಅಯ್ಯಪ್ಪ..</strong></p>



<p>ಎಪ್ಪತ್ತು – ಎಂಬತ್ತರ ದಶಕದಲ್ಲಿ ಶಬರಿಮಲೆ ಅಯ್ಯಪ್ಪ ಅತ್ಯಂತ ವ್ಯಾಪಕ ಪ್ರಚಾರವನ್ನು ಪಡೆದ ದೈವ. ಸಾಲು ಸಾಲು ಚಲನಚಿತ್ರಗಳು ಅಯ್ಯಪ್ಪನ ಬಗ್ಗೆ ನಿರ್ಮಾಣವಾದವು. ಭಕ್ತಿ ಗೀತೆಗಳು, ಕ್ಯಾಸೆಟ್‌ ಗಳು ಬಂದವು. ಗಾಯಕ ಏಸುದಾಸ್‌ ಹಾಡಿದ “ಹರಿವರಾಸನಂ” ಎಂಬ ಗೀತೆಗೆ ಅಯ್ಯಪ್ಪನ ಬಾಗಿಲು ತೆರೆಯಿತು ಎಂಬ ಕಥೆಗಳು ಸೃಷ್ಟಿಯಾದವು. ದೇಶದ ಮೂಲೆ ಮೂಲೆಯಿಂದ “ಮಕರ ಜ್ಯೋತಿ” ನೋಡಲು ಭಕ್ತರು ಸಾಗರೋಪಾದಿಯಲ್ಲಿ ಬರುತ್ತಾರೆ. ಜ್ಯೋತಿ ಮನುಷ್ಯ ನಿರ್ಮಿತ ಎಂದು ತಿರುವಂಕೂರ್ ದೇವಸ್ವಂ ಬೋರ್ಡ್‌ ಸ್ಪಷ್ಟನೆ ನೀಡಿದರೂ ಭಕ್ತರ ಸಂಖ್ಯೆ ಕಡಿಮೆಯಾಗಿಲ್ಲ.</p>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="918" height="1024" src="https://peepalmedia.com/wp-content/uploads/2022/11/image-20-918x1024.png" alt="" class="wp-image-16346" srcset="https://peepalmedia.com/wp-content/uploads/2022/11/image-20-918x1024.png 918w, https://peepalmedia.com/wp-content/uploads/2022/11/image-20-269x300.png 269w, https://peepalmedia.com/wp-content/uploads/2022/11/image-20-768x857.png 768w, https://peepalmedia.com/wp-content/uploads/2022/11/image-20-150x167.png 150w, https://peepalmedia.com/wp-content/uploads/2022/11/image-20-300x335.png 300w, https://peepalmedia.com/wp-content/uploads/2022/11/image-20-696x777.png 696w, https://peepalmedia.com/wp-content/uploads/2022/11/image-20-1068x1192.png 1068w, https://peepalmedia.com/wp-content/uploads/2022/11/image-20.png 1080w" sizes="auto, (max-width: 918px) 100vw, 918px" /></figure>
</div>



<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="724" height="1024" src="https://peepalmedia.com/wp-content/uploads/2022/11/image-21-724x1024.png" alt="" class="wp-image-16347" srcset="https://peepalmedia.com/wp-content/uploads/2022/11/image-21-724x1024.png 724w, https://peepalmedia.com/wp-content/uploads/2022/11/image-21-212x300.png 212w, https://peepalmedia.com/wp-content/uploads/2022/11/image-21-768x1087.png 768w, https://peepalmedia.com/wp-content/uploads/2022/11/image-21-150x212.png 150w, https://peepalmedia.com/wp-content/uploads/2022/11/image-21-300x424.png 300w, https://peepalmedia.com/wp-content/uploads/2022/11/image-21-696x985.png 696w, https://peepalmedia.com/wp-content/uploads/2022/11/image-21-1068x1511.png 1068w, https://peepalmedia.com/wp-content/uploads/2022/11/image-21.png 1080w" sizes="auto, (max-width: 724px) 100vw, 724px" /></figure>
</div>
</div>



<p><strong>ಸಿನೆಮಾದಿಂದ ಹುಟ್ಟಿದ ದೇವರು </strong><strong>–</strong><strong> ಸಂತೋಷಿ ಮಾತಾ</strong></p>



<p>ಸಂತೋಷಿ ಮಾತಾ ಎಂಬ ದೇವತೆಯನ್ನು ಇಂದು ಭಾರತದಾದ್ಯಂತ ಪೂಜೆ ಮಾಡುತ್ತಾರೆ. ಅನೇಕ ದೇವಾಲಯಗಳು ಕಟ್ಟಲ್ಪಟ್ಟಿವೆ. ಅಚ್ಚರಿಯಾದರೂ ಸತ್ಯ, ಸಂತೋಷಿ ಮಾತಾ ಎಂಬುದು ಎಂದು ಸೆಲ್ಯುಲಾಯಿಡ್‌ ರೀಲ್‌ ನಿಂದ ಹುಟ್ಟಿದ ದೇವಿ. ಎಪ್ಪತ್ತರ ದಶಕದಲ್ಲಿ ಬಂದ ಸಿನೇಮಾವೊಂದು ಸೃಷ್ಟಿಸಿದ ದೇವತೆ.</p>



<p>೧೯೭೫ರಲ್ಲಿ ಶೋಲೇ ಹಾಗೂ ದೀವಾರ್‌ ಸಿನೇಮಾದ ಜೊತೆ ಜೊತೆಗೆ ಅತ್ಯಂತ ಕಡಿಮೆ ಬಜೆಟ್‌ ನ “ಜೈ ಸಂತೋಷಿ ಮಾ” ಎಂಬ ಸಿನೇಮಾ ಬಂತು. ಇದರಲ್ಲಿ ಅಭಿನಯಿಸಲು ರೆಡ್‌ ಲೈಟ್‌ ಏರಿಯಾಗಳಿಂದ ಕಲಾವಿದೆಯರನ್ನು ಕರೆತರಲಾಯಿತು. ಬಜೆಟ್‌ ಜೊತೆಗೆ ತುಲನೆ ಮಾಡಿದರೆ ಸಿನೇಮಾ ಒಳ್ಳೆಯ ಗಳಿಕೆಯನ್ನು ಕೂಡ ಕಂಡಿತ್ತು. ಕಾಂತಾರದ ರೀತಿ ಕಡಿಮೆ ಬಜೆಟ್‌ &#8211; ಹೆಚ್ಚಿನ ಗಳಿಕೆ!</p>



<p>ಸಿನೇಮಾದಲ್ಲಿ ಸಂತೋಷಿ ಮಾತಾ ಪಾತ್ರವನ್ನು ಮಾಡಿದ್ದ ಅನಿತಾ ಗುಹ ತನ್ನ ಅನುಭವವನ್ನು ಹಂಚಿಕೊಳ್ಳುತ್ತಾ “ಜನರು ಸಿನೇಮಾ ನೋಡುತ್ತಾ ಸ್ಕ್ರೀನ್‌ ಮೇಲೆ ಅಕ್ಕಿ, ನಾಣ್ಯ ಹೂಗಳನ್ನು ಎಸೆಯುತ್ತಿದ್ದರು. ಥಿಯೇಟರ್‌ ಒಳಗಡೆ ಬರುವಾಗ ಚಪ್ಪಲಿಯನ್ನು ಕಳಚಿ ಬರುತ್ತಿದ್ದರು. ಹೊರಗಡೆ ಸಣ್ಣ ಗುಡಿಯನ್ನು ಕೂಡ ಕಟ್ಟಿದ್ದರು. ಭಕ್ತಿಪ್ರಧಾನ ಸಿನೇಮಾಗಳು ಪ್ರದರ್ಶನಗೊಳ್ಳದ ಬಾಂದ್ರದಲ್ಲಿ ಈ ಸಿನೇಮಾ ಐವತ್ತು ವಾರಗಳ ಕಾಲ ಓಡಿತು&#8221; ಎನ್ನುತ್ತಾರೆ. ಯಾವುದೇ ಪೌರಾಣಿಕ ಹಿನ್ನಲೆ ಇಲ್ಲದ ಹೊಸದಾಗಿ ಸಿನೇಮಾದಿಂದ ಹುಟ್ಟಿಕೊಂಡ ಸಂತೋಷಿ ಮಾತಾನನ್ನು ಇಡೀ ಭಾರತವೇ ಆರಾಧಿಸಲು ಆರಂಭ ಮಾಡಿತ್ತು. ಇಂದಿಗೂ ವೇಶ್ಯಾಗೃಹಗಳಲ್ಲಿ, ಟ್ರಾನ್ಸ್‌ ಜೆಂಡರ್‌ ಗಳ ಮನೆಗಳಲ್ಲಿ ಈ ಸಂತೋಷಿ ಮಾತಾನ ಫೋಟೋಗಳನ್ನು ನೋಡಬಹುದು.</p>



<p><strong>ಕಾಂತಾರ ಬೀರಿದ ಪ್ರಭಾವ..</strong></p>



<p>ಇಂದು ಕಾಂತಾರ ಕೂಡ ಜನರ ಮೇಲೆ ಇಂತಹ ಪ್ರಭಾವವನ್ನು ಬೀರಿದಂತೆ ತೋರುತ್ತದೆ. ಸಿನೇಮಾವನ್ನು ಮಾಡುವಾಗ ಮಾಂಸಾಹಾರ ತ್ಯಜಿಸಿದ್ದೆ, ವೃತ ಮಾಡಿದ್ದೆ ಎಂದು ನಿರ್ದೇಶಕ-ನಟ ರಿಷಬ್‌ ಶೆಟ್ಟಿ ಹೇಳಿಕೆಗಳನ್ನು ನೀಡಿ ಇಡೀ ಸಿನೇಮಾವನ್ನು “ಭಕ್ತಿ ಭಾವ”ದಿಂದ ಜನರು ನೋಡುವಂತೆ ಮಾಡಿದರು. ಜೈ ಸಂತೋಷಿ ಮಾ ಸಿನೇಮಾವನ್ನು ನೋಡಿದಂತೆ ಜನರು ಚಪ್ಪಲಿ ಕಳಚಿ ಸಿನೇಮಾ ನೋಡಿದರು. ಥಿಯೇಟರ್‌ ಒಳಗಡೆ ಕೆಲವರಿಗೆ ದೈವದ ಆವಾಹನೆಯಾಗಿ ವಿಚಿತ್ರವಾಗಿ ಕುಣಿಯಲು ಶುರು ಮಾಡಿದರು. ರಾತ್ರಿಯಾದರೆ ಟೆರೇಸ್‌ ಹತ್ತಿ “ಹೋ……….ಗುತ್ತಿನಾರೇ…..!” ಎಂದು ಕಿರುಚುತ್ತಿದ್ದಾರೆ.</p>



<p>ಸಿನೇಮಾದಿಂದಾಗಿ ಈಗಾಗಲೇ ಕರ್ನಾಟಕದಾದ್ಯಂತ ಪ್ರಚಾರ ಪಡೆದಿದ್ದ ಕೊರಗಜ್ಜನ ಸಾಲಿಗೆ ಪಂಜುರ್ಲಿ – ಗುಳಿಗವೂ ಸೇರಿವೆ. ಕರ್ನಾಟಕದಾದ್ಯಂತ ಭಕ್ತರು ಸೃಷ್ಟಿಯಾಗಿ ತಮ್ಮ ತಮ್ಮ ಊರುಗಳಲ್ಲಿ ನೇಮ ಮಾಡಲು ಮುಂದಾಗುತ್ತಿದ್ದಾರೆ. ಹೀಗೆ ತುಳುನಾಡಿನ ಹೊರಗೆ ಗುಳಿಗ ದೈವದ ಕಟ್ಟೆ ನಿರ್ಮಾಣ ಮಾಡಿದವರಿಗೆ ಕಾಂತಾರ ಸಿನೇಮಾದ ನಟ ಪ್ರಮೋದ್‌ ಶೆಟ್ಟಿ ಅಭಿನಂದಿಸಿದ್ದರು ಕೂಡ.</p>



<p><strong>ತುಳುವರ ಅಳಲು..</strong></p>



<p>ರಿಷಬ್‌ ಶೆಟ್ಟಿ ಯಶಸ್ವಿಯಾಗಿ ಸಿನೇಮಾವನ್ನು ತೆಗೆದಿದ್ದಾರೆ. ನಾಲ್ಕುನೂರು ಕೋಟಿಗೂ ಅಧಿಕ ಆದಾಯವನ್ನು ಗಳಿಸಿದ್ದಾರೆ. ಅವರ ಈ ಪ್ರಾಜೆಕ್ಟ್‌ ಮುಗಿದಿದೆ. ಮುಂದೆ ಕಾಂತಾರ ಭಾಗ -೨ ಬಂದರೂ ಬರಬಹುದು. ಎಲ್ಲಾ ತುಳುವ ಸಮಾಜವೇ ಕಟ್ಟಿಕೊಂಡ ವಿಧಿ ನಿಷೇಧಗಳನ್ನು ಮೀರಿ ತೆಗೆದ ಈ ಚಿತ್ರವನ್ನು ತುಳುವರೇ ಪ್ರೋತ್ಸಾಹಿಸಿ ಇಂದು ಸಿನೇಮಾದ ಪ್ರಭಾವದಿಂದ ದೈವಾರಾಧನೆಗೆ ಜನರು ಅವಮಾನ ಮಾಡುತ್ತಿದ್ದಾರೆ ಎಂದು ಗೋಗರೆಯುತ್ತಿದ್ದಾರೆ.</p>



<p><strong>ಇದೊಂದು ಅಚ್ಚರಿಯ ಸಂಗತಿ..</strong></p>



<p>ದೈವಾರಾಧನೆ ಒಂದು ಸಂಕೀರ್ಣ ವ್ಯವಸ್ಥೆ. ಇದರಲ್ಲಿ ನಲಿಕೆ, ಪರವ, ಪಂಬದ ಸಮುದಾಯಗಳು ಪಾತ್ರಿಗಳಾಗಿ ಭಾಗವಹಿಸಿದರೆ, ಮಡಿವಾಳ, ಬಿಲ್ಲವ, ಬಂಟ, ಗೌಡ, ಕುಲಾಲ ಮೊದಲಾದ ಸಮುದಾಯಗಳೂ ಪ್ರಧಾನ ಪಾತ್ರಗಳನ್ನು ವಹಿಸುತ್ತಾರೆ. ಇಲ್ಲೊಂದು ಜಾತೀಯ ಶ್ರೇಣೀಕೃತ ವ್ಯವಸ್ಥೆ ಇದೆ. ಇದು ಹಾಗೆಯೇ ಮುಂದುವರಿಯುತ್ತದೆ. ಅಲ್ಲದೇ ಇದೇ ಶ್ರೇಣೀಕೃತ ವ್ಯವಸ್ಥೆ ದೈವಗಳಲ್ಲೂ ಇವೆ. ಪಂಜುರ್ಲಿ, ಗುಳಿಗ ದೈವಗಳಿಗಿಂತ ಪ್ರಧಾನ ದೈವಗಳು ಅನೇಕ ಇವೆ. ಕೊಡಮಣಿತ್ತಾಯ, ವೈದ್ಯನಾಥ, ಕಿನ್ನಿಮಾಣಿ-ಪೂಮಾಣಿ, ಜಾರಂದಾಯ, ಜುಮಾದಿ, ಅರಸು ದೈವಗಳು ಮೊದಲಾದ ಪ್ರಧಾನ ದೈವಗಳಿವೆ. ಇವ್ಯಾವುವೂ ಇಷ್ಟೊಂದು ಪ್ರಚಾರ ಪಡೆಯದೆ ಪಂಜುರ್ಲಿ, ಕೊರಗಜ್ಜ, ಗುಳಿಗ ದೈವಗಳು ಪಡೆದಿರುವುದು ಅಚ್ಚರಿಯ ಸಂಗತಿ.</p>



<p><strong>ದೈವಗಳ ಓಡಾಟಕ್ಕೆ ನಿರ್ಧಿಷ್ಟ ವ್ಯಾಪ್ತಿಯಿದೆ..</strong></p>



<p>ಒಂದು ದೈವಕ್ಕೆ ನಿರ್ಧಿಷ್ಟ ಭೌಗೋಳಿಕ ವ್ಯಾಪ್ತಿ ಇರುತ್ತದೆ. ಇದು ತುಳುನಾಡಿನ ಆಡಳಿತ ವ್ಯವಸ್ಥೆ ರೂಪಿಸಿರುವ ವ್ಯಾಪ್ತಿ. ದೈವಗಳು ಆ ವ್ಯಾಪ್ತಿಯನ್ನು ಮೀರಿ ಹೋಗುವುದಿಲ್ಲ. ಒಂದು ಕಡೆಯಿಂದ ಇನ್ನೊಂದು ಕಡೆಗೆ ದೈವಗಳು ಹೋಗುವುದು ಅಪರೂಪದ ಸಂಗತಿ. ಹೆರಿಗೆಯಾಗಿ ತವರಿನಿಂದ ಗಂಡನ ಮನೆಗೆ ಹೋಗುವಾಗ ದೈವ ಮಗುವಿನ ತೊಟ್ಟಿಲಿನ&nbsp; ಜೊತೆಗೆ ಹೋಗುವುದು, ಬಾಲೊಳಿಗಳಿಂದ ದೈವಗಳನ್ನು ತರುವುದು, ಕುಟುಂಬ ವಲಸೆ ಹೋಗುವಾಗ ದೈವಗಳೂ ಹೋಗುವುದು -ಅವೆಲ್ಲವಕ್ಕೂ ಒಂದು ವ್ಯಾಪ್ತಿ – ನಿರ್ಬಂಧಗಳಿವೆ. ಇನ್ನು ಇವು ಕನ್ನಡ ಭಾಷಿಕ ಪ್ರದೇಶಗಳಿಗೆ ಹೋಗುವುದಿದೆ. ಹೆಚ್ಚೆಂದರೆ ಕೊಡಗು, ಶಿವಮೊಗ್ಗ, ಮಲೆನಾಡು ಭಾಗಗಳಲ್ಲಿ ನೇಮ ನಡೆಯುತ್ತದೆ. ಇದು ಕುಟುಂಬಗಳು ವಲಸೆ ಹೋಗಿ ನಡೆಯುವ ಪ್ರಕರಣಗಳು.</p>



<p><strong>ಸಿನೇಮಾ ಗೆದ್ದಿದೆ, ಆದರೆ ದೈವಾರಾಧನೆಯ ಆಶಯಗಳು ಸೋತಿವೆ..</strong></p>



<p>ಇಂದು ಮೈಸೂರು, ಬೆಂಗಳೂರಿಗೆ ದೈವಗಳು ಹೋಗುತ್ತಿವೆ. ಕಲ್ಲು ಬಿಟ್ಟು ಬ್ಯಾನರ್‌ ಗಳಲ್ಲಿ ದೈವಗಳು ಪ್ರತಿಷ್ಠೆ ಗೊಳ್ಳುತ್ತಿವೆ. ದುಡ್ಡು ಮಾಡುವ ದಂಧೆಯಾಗಿ ಬಳಕೆಯಾಗುತ್ತಿದೆ. ದೈವಗಳನ್ನು ಕಾಂತಾರದ ದೈವಗಳು ಎಂದು ಕರೆಯುವ ಪರಿಪಾಠ ಶುರುವಾಗಿದೆ. ಒಟ್ಟಿನಲ್ಲಿ ಸಿನೇಮಾ ಗೆದ್ದಿದೆ, ಆದರೆ ದೈವಾರಾಧನೆಯ ಆಶಯಗಳು ಸೋತಿವೆ.</p>



<p></p>



<p></p>



<p><strong>ಚರಣ್‌ ಐವರ್ನಾಡು</strong></p>
]]></content:encoded>
					
		
		
			</item>
		<item>
		<title>ದೈವಗಳ ವೈದಿಕೀಕರಣದ ಮಜಲುಗಳು</title>
		<link>https://peepalmedia.com/angles-of-brahminisization-in-daiva-tredition/</link>
		
		<dc:creator><![CDATA[Peepal Media]]></dc:creator>
		<pubDate>Tue, 01 Nov 2022 13:35:39 +0000</pubDate>
				<category><![CDATA[Featured]]></category>
		<category><![CDATA[coastal karnataka]]></category>
		<category><![CDATA[daiva nartaka]]></category>
		<category><![CDATA[daivaaradhane]]></category>
		<category><![CDATA[dakshina kannada]]></category>
		<category><![CDATA[kannada]]></category>
		<category><![CDATA[Kantara]]></category>
		<category><![CDATA[karavali]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[writing]]></category>
		<guid isPermaLink="false">https://peepalmedia.com/?p=13640</guid>

					<description><![CDATA[ಜುಮಾದಿ, ಲೆಕ್ಕೆಸಿರಿಯಂತಹ ಅನೇಕ ದೈವಗಳು ಸಂಸ್ಕೃತೀಕರಣಗೊಂಡು ಧೂಮಾವತಿ, ರಕ್ತೇಶ್ವರಿಗಳಾಗಿ ಬದಲಾಗಿವೆ. ತುಳುವರ ಪಂಜುರ್ಲಿಯೂ ಕೂಡ ಸಂಸ್ಕೃತದ ವರಾಹ ಮೂರ್ತಿಯಾಗಿದ್ದಾನೆ. ಲಾಭಕ್ಕೆ ತಕ್ಕಂತೆ ಅನ್ಯರ ಆಚರಣೆಗಳನ್ನು ತಮ್ಮದಾಗಿಸಿಕೊಳ್ಳುವುದು ವೈದಿಕರಿಗೆ ಹೊಸತೇನಲ್ಲ ಎನ್ನುವ ಲೇಖಕ ಶಂಕರ್‌ ಸೂರ್ನಳ್ಳಿ ಅವರ ಈ ಲೇಖನವು &#160;ವೈದಿಕ ಪ್ರಭಾವವು ದೈವಾರಾಧನೆಯ ಮೂಲ ನೆಲೆಗಟ್ಟನ್ನು ಅಲುಗಾಡಿಸಿದೆ ಎಂಬ ಸತ್ಯವನ್ನು ತೆರೆದಿಡುತ್ತದೆ. ರಿಷಭ್ ಶೆಟ್ಟಿಯವರ ಸೂಪರ್ ಹಿಟ್ ’ಕಾಂತಾರ’ ಸಿನಿಮಾ ಭರ್ಜರಿ ಯಶಸ್ಸಿನ ಜೊತೆಗೆ ಅನೇಕ ಚರ್ಚೆಗಳನ್ನು ಹುಟ್ಟು ಹಾಕಿದೆ. ಅವುಗಳಲ್ಲೊಂದು ಕರಾವಳಿಯ ದೈವಗಳ ವೈದಿಕೀಕರಣದ ಕುರಿತಾದದ್ದು. [&#8230;]]]></description>
										<content:encoded><![CDATA[
<h5 class="wp-block-heading"><strong>ಜುಮಾದಿ, ಲೆಕ್ಕೆಸಿರಿಯಂತಹ ಅನೇಕ ದೈವಗಳು ಸಂಸ್ಕೃತೀಕರಣಗೊಂಡು ಧೂಮಾವತಿ, ರಕ್ತೇಶ್ವರಿಗಳಾಗಿ ಬದಲಾಗಿವೆ. ತುಳುವರ ಪಂಜುರ್ಲಿಯೂ ಕೂಡ ಸಂಸ್ಕೃತದ ವರಾಹ ಮೂರ್ತಿಯಾಗಿದ್ದಾನೆ. ಲಾಭಕ್ಕೆ ತಕ್ಕಂತೆ ಅನ್ಯರ ಆಚರಣೆಗಳನ್ನು ತಮ್ಮದಾಗಿಸಿಕೊಳ್ಳುವುದು ವೈದಿಕರಿಗೆ ಹೊಸತೇನಲ್ಲ ಎನ್ನುವ ಲೇಖಕ ಶಂಕರ್‌ ಸೂರ್ನಳ್ಳಿ ಅವರ ಈ ಲೇಖನವು &nbsp;ವೈದಿಕ ಪ್ರಭಾವವು ದೈವಾರಾಧನೆಯ ಮೂಲ ನೆಲೆಗಟ್ಟನ್ನು ಅಲುಗಾಡಿಸಿದೆ ಎಂಬ ಸತ್ಯವನ್ನು ತೆರೆದಿಡುತ್ತದೆ.</strong></h5>



<p>ರಿಷಭ್ ಶೆಟ್ಟಿಯವರ ಸೂಪರ್ ಹಿಟ್ ’ಕಾಂತಾರ’ ಸಿನಿಮಾ ಭರ್ಜರಿ ಯಶಸ್ಸಿನ ಜೊತೆಗೆ ಅನೇಕ ಚರ್ಚೆಗಳನ್ನು ಹುಟ್ಟು ಹಾಕಿದೆ. ಅವುಗಳಲ್ಲೊಂದು ಕರಾವಳಿಯ ದೈವಗಳ ವೈದಿಕೀಕರಣದ ಕುರಿತಾದದ್ದು. ಕಾಂತಾರ ಸಿನಿಮಾ ಟೈಟಲ್ ನಲ್ಲಿ ಕಾಣಿಸುವ ಓಂ ಚಿಹ್ನೆ, ಸಿನಿಮಾದಲ್ಲಿ ಬರುವಂತಹ ವರಾಹ ಮೂರ್ತಿಯ ಸಂಸ್ಕೃತ ಹಾಡುಗಳಲ್ಲದೇ ಕನ್ನಡದ ನಟ ಚೇತನ್ ರವರು ಇದೇ ಹಿನ್ನೆಲೆಯಲ್ಲಿ ಕರಾವಳಿಯ ದೈವಗಳ ಕುರಿತಂತೆ ಹಿಂದೂ ಧರ್ಮವನ್ನುಲ್ಲೇಖಿಸಿ ಆಡಿದಂತಹ ಮಾತುಗಳು ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ.</p>



<p>ಹೌದು, ಕರಾವಳಿಯ ದೈವಗಳ ಕುರಿತಾಗಿ ಇದೇನು ಹೊಸದಾಗಿ ಹುಟ್ಟಿದಂತಹ ವಿಚಾರವೇನಲ್ಲ. ಹಿಂದಿನಿಂದಲೂ ದೈವಾರಾಧನೆಯ ಕುರಿತಂತೆ ಸಂಶೋಧನೆ ಕೈಗೊಂಡ ವಿದ್ವಾಂಸರುಗಳು ಈ ಕುರಿತಂತೆ ಸಾಕಷ್ಟು ಬರೆದಿದ್ದಾರೆ. ವೈದಿಕ ಸಂಪ್ರದಾಯಗಳಿಗೆ ಹೊರತಾದ ಕರಾವಳಿಯ ದೈವಾರಾಧನೆಯ ಪದ್ಧತಿಯ ವಿಭಿನ್ನತೆಯನ್ನು ಈಗಾಗಲೇ ದಾಖಲಿಸಲಾಗಿದೆ. ಹೀಗಿದ್ದೂ ಕೂಡ ತಳ ಸಮುದಾಯದವರ ಈ ದೈವಾರಾಧನೆ ಯಾವುದೋ ಒಂದು ಬಗೆಯಲ್ಲಿ ಮುಖ್ಯವಾಗಿ ಇತ್ತೀಚೆಗಿನ ದಿನಗಳಲ್ಲಿ ವೈದಿಕ ಸಂಪ್ರದಾಯದೊಂದಿಗೆ ಕಳೆದು ಹೋಗುತ್ತಿರುವುದಕ್ಕೆ ಕಾರಣವಾದರೂ ಏನಿರಬಹುದು?</p>



<h6 class="wp-block-heading"><strong>ದೈವ ಭೂತಗಳೆಲ್ಲ ಎಂದೋ ಪರಶಿವನ ಗಣ ಸೇರಿದುವು!</strong></h6>



<h6 class="wp-block-heading"><br>ಕಾಂತಾರ ಸಿನಿಮಾದಲ್ಲಿ ಪ್ರಮುಖವಾಗಿ ತೋರಿಸಲಾದ ದೈವಗಳೆಂದರೆ ತುಳುನಾಡಿನಲ್ಲಿ ಅದರದ್ದೇ ಆದ ಮಹತ್ವವನ್ನು ಹೊಂದಿರುವ ಗುಳಿಗ ಹಾಗು ಪಂಜುರ್ಲಿ ದೈವಗಳು. ತುಳುನಾಡಿನ ಪಂಜುರ್ಲಿ ದೈವದ ಕಥೆಯಲ್ಲಿ ಶಿವ ಪಾರ್ವತಿಯರು ಪ್ರಮುಖವಾಗಿ ಕಾಣಿಸಿಕೊಂಡರೆ ಗುಳಿಗನ ಕಥೆಯಲ್ಲೂ ಹಿಂದೂ ಪುರಾಣದ ತ್ರಿಮೂರ್ತಿಗಳು ಬರುತ್ತಾರೆ. ಇದೀಗ ಬಲು ಖ್ಯಾತನಾಗಿರುವ ಕೊರಗಜ್ಜನನ್ನು ಸ್ತುತಿಸುವ ಹಾಡುಗಳಲ್ಲೂ ಕೂಡ ಕೊರಗಜ್ಜನನ್ನು ಶಿವನ ಅಂಶ ಎಂದೇ ಸ್ತುತಿಸಲಾಗುತ್ತಿದೆ. ಕರಾವಳಿಯಲ್ಲಿ ಕಂಡುಬರುವ ದೈವ ಭೂತಗಳನ್ನೆಲ್ಲ ಸಾರಾಸಗಟಾಗಿ ಪರಶಿವನ ಗಣಗಳಿಗೆ ಸೇರಿಸಿ ಯಾವುದೋ ಕಾಲವಾಗಿದೆ. ಹಾಗೆಂದು ಹದಿನೆಂಟು ಪುರಾಣಗಳಲ್ಲಾಗಲೀ, ಮತ್ಯಾವುದೋ ಹಿಂದೂ ಗ್ರಂಥಗಳಲ್ಲಾಗಲೀ ಈ ಪಂಜುರ್ಲಿ, ಗುಳಿಗ, ಕೊರಗಜ್ಜನಂತವರ ಪಾತ್ರಗಳ ಯಾವ ಉಲ್ಲೇಖವೂ ಎಲ್ಲೂ ಕಾಣಸಿಗದು. ಅಂದರೆ ಇವುಗಳೆಲ್ಲ ಕಾಲಮಾನದ ಸ್ಥಳೀಯ ಮಾರ್ಪಾಟುಗಳೇ ವಿನಹ ವಿಶೇಷವಾದುದೇನೂ ಇಲ್ಲ.</h6>


<div class="wp-block-image">
<figure class="aligncenter size-full"><img loading="lazy" decoding="async" width="739" height="415" src="https://peepalmedia.com/wp-content/uploads/2022/11/daiva-3.webp" alt="" class="wp-image-13659" srcset="https://peepalmedia.com/wp-content/uploads/2022/11/daiva-3.webp 739w, https://peepalmedia.com/wp-content/uploads/2022/11/daiva-3-300x168.webp 300w, https://peepalmedia.com/wp-content/uploads/2022/11/daiva-3-150x84.webp 150w, https://peepalmedia.com/wp-content/uploads/2022/11/daiva-3-696x391.webp 696w" sizes="auto, (max-width: 739px) 100vw, 739px" /></figure></div>


<h6 class="wp-block-heading">ಕರಾವಳಿ ಕರ್ನಾಟಕದ ಪರಿಸರ ಪ್ರಾಚೀನ ಕಾಲದಿಂದಲೂ ವಿದೇಶದೊಂದಿಗೆ ಸಂಪರ್ಕವಿಟ್ಟುಕೊಂಡಂತಹ ಭಾಗವಾಗಿತ್ತೆನ್ನುವುದಕ್ಕೆ ಅನೇಕ ಐತಿಹಾಸಿಕ ಪುರಾವೆಗಳಿವೆ. ಹಾಗಾಗಿ ಈ ಪರಿಸರಕ್ಕೆ ಹಿಂದಿನಿಂದಲೂ ಅದರದ್ದೇ ಆದ ಸಂಸ್ಕೃತಿ ಪರಂಪರೆಗಳೂ ಇದ್ದಿದ್ದವೇ ಹೊರತು ಹೊರಗಿನಿಂದ ಬಂದಂತವರಿಂದಾಗಿ ಇಲ್ಲಿನ ನಾಗರೀಕತೆ ಹೊಸತಾಗಿ ರೂಪುಗೊಂಡದ್ದೇನಲ್ಲ. ಕೆಲ ರಾಜಕೀಯ ಹಾಗು ಸಾಮಾಜಿಕ ಪಲ್ಲಟಗಳಿಂದಾಗಿ ವೈದಿಕರ ಆಗಮನದ ಬಳಿಕ ಇಲ್ಲಿನ ಸಂಸ್ಕೃತಿಯಲ್ಲಿ ಅವರ ಪ್ರಭಾವ ಹೆಚ್ಚ ತೊಡಗಿತಾದರೂ ಇಲ್ಲಿನ ಕೆಲ ಮೂಲನಂಬಿಕೆಗಳನ್ನು ಮರೆಯಾಗಿಸಲು ಪ್ರಭುತ್ವದ ಬಲವಿದ್ದ ಅವರಿಂದಲೂ ಕೂಡ ಸಾಧ್ಯವಾಗದೇ ಹೋಯಿತು. ಅಂತಾದ್ದರಲ್ಲಿ ಇಲ್ಲಿನ ಮೂಲನಿವಾಸಿಗಳು ತಮ್ಮ ಗತಿಸಿದ ಪ್ರಮುಖ ಹಿರಿಯರನ್ನು ನೆನಪಿಸಿ ಆಹ್ವಾಹಿಸಿಕೊಂಡು ಆರಾಧಿಸುವ ದೈವಾರಾಧನೆಯ ಆಚರಣೆಯೂ ಒಂದು.</h6>



<h6 class="wp-block-heading"><strong>ದೈವಗಳ ಚರಿತ್ರೆಗಳಲ್ಲಿ ಹೋರಾಟದ ಉಲ್ಲೇಖಗಳು</strong></h6>



<p>ಕರಾವಳಿಯ ದೈವಾರಾಧನೆಗೆ ಸಂಬಂಧಿಸಿದಂತೆ ಇಲ್ಲಿ ಸರಿ ಸುಮಾರು ಸಾವಿರದಷ್ಟು ದೈವಗಳನ್ನು ಗುರುತಿಸಲಾಗಿದೆ. ಪಂಜುರ್ಲಿ, ಕಲ್ಲುರ್ಟಿ, ಸಿರಿ, ಕೊರಗಜ್ಜ, ಬಬ್ಬುಸ್ವಾಮಿ, ಕೋಟಿ ಚೆನ್ನಯರಂತಹ ತುಳುನಾಡಿನ ಅನೇಕ ಪ್ರಮುಖ ದೈವಗಳ ಚರಿತ್ರೆಗಳಲ್ಲಿ ಹೋರಾಟದ, ದಬ್ಬಾಳಿಕೆಯನ್ನು ಎದುರಿಸಿ ನಿಂತಂತಹ ಅಥವ ನಿಂತು ಮರಣಿಸಿ (ಮಾಯವಾ)ದಂತಹ ನೇರ ಅಥವಾ ಸೂಚ್ಯ ಉಲ್ಲೇಖಗಳನ್ನು ಗುರುತಿಸಬಹುದು. ಪಂಜುರ್ಲಿಯ ಕಥೆ ಪ್ರಾಣಿ ಸಂಬಂಧಿ ಚರಿತ್ರೆಯಂತೆ ತೋರಿದರೂ ಇಲ್ಲಿ ಬರುವ ಪ್ರವೇಶ ನಿರಾಕರಣೆ, ಕುಟುಂಬ, ಮಕ್ಕಳು ಮೊದಲಾದ ಸಾಮಾಜಿಕ ಅಂಶಗಳನ್ನು ನೋಡಿದರೆ ಹಂದಿ ಕೇವಲ ರೂಪಕದಂತಷ್ಟೆ ತೋರುತ್ತದೆ. ತುಳುವಿನ ಪಂಜಿ (ಹಂದಿ) ಮೂಲದ ಪಂಜುರ್ಲಿಯ ಮತ್ತೊಂದು ಹೆಸರು ಅಣ್ಣಪ್ಪನೆಂದು ಪಂಜುರ್ಲಿ ಕುರಿತ ಪಾಡ್ದನ ಕತೆಗಳಲ್ಲೇ ಬರುತ್ತದೆ. ಮೇಲ್ವರ್ಗದವರು, ಜಮೀನುದಾರರು ತಮ್ಮ ಪಾಳೇಗಾರಿಕೆಯ ದರ್ಪವನ್ನು ತೋರಲು ತಳಸಮುದಾಯದ ಮಕ್ಕಳನ್ನು ಹಂದಿ, ನಾಯಿ, ಹೆಣ್ಣು ನಾಯಿಯಂತಹ ತುಚ್ಛ ಭಾವದ ಹೆಸರಿಟ್ಟು ಕರೆಯುವುದು ಹೊಸತೇನಲ್ಲ. (ನಾನೇ 92 -93ರ ಆಸುಪಾಸಿನಲ್ಲಿ ಓಟರ್ಸ್ ಕಾರ್ಡಿನ ಕೆಲಸ ಮಾಡುತ್ತಿರುವಾಗ ಅವಿಭಜಿತ ದ.ಕ ಜಿಲ್ಲೆಯ ಓಟರ್ಸ್ ಲಿಸ್ಟ್ ನಲ್ಲಿ ಇಂತಹ ಬೊಗ್ಗಿ, ಬೊಗ್ರ, ಪಂಜಿ, ಪಿಜಿನ, ಮರ್ಲೆ ದಂತಹ ಕೀಳುಭಾವದ ದಲಿತ ಹೆಸರುಗಳನ್ನ ಸಾಕಷ್ಟು ನೋಡಿದ್ದೇನೆ) ಪಂಜುರ್ಲಿ ಕಥೆಯಲ್ಲಿ ಬರುವ ಹೆಗ್ಗಡೆ, ವಾದಿರಾಜ ಸ್ವಾಮಿಯ ಉಲ್ಲೇಖಗಳು, ತುಳುನಾಡಿನ ವಿವಿಧ ಊರುಗಳಲ್ಲಿನ ಪಂಜುರ್ಲಿಯ ಕಾರ್ಯಸಾಧನೆಯ ಪಾಡ್ದನ ದಾಖಲೆಯನ್ನು ನೋಡಿದರೆ ಇದು ಪ್ರಾಣಿಗಿಂತ ವ್ಯಕ್ತಿಯೊಬ್ಬನಿಗೆ ಸಂಬಂಧಿಸಿದ ಚರಿತ್ರೆಯಂತೆ ಕಂಡುಬರುತ್ತದೆ.</p>



<h6 class="wp-block-heading"><strong>ದೈವಾರಾಧನೆಯು ಕೇವಲ ತುಳುನಾಡಿಗಷ್ಟೇ ಸೀಮಿತವೇ?</strong></h6>



<p>ವಿಶೇಷವಾಗಿ ಈ ದೈವಾರಾಧನೆ ಎನ್ನುವುದು ಕೇವಲ ತುಳುನಾಡಿಗಷ್ಟೇ ಸೀಮಿತವಾದುದೇನಲ್ಲ. ಜಪಾನ್, ಚೀನಾ, ಅಮೆರಿಕಾ, ಫಿನ್ಲೆಂಡ್ ಸೇರಿದಂತೆ ವಿಶ್ವದಾದ್ಯಂತ ಅನೇಕ ಮೂಲನಿವಾಸಿಗಳ ಆಚರಣೆಗಳಲ್ಲಿ ಮರಣಿಸಿದ ಹಿರಿಯರ ಅಥವ ನಂಬಿದ ಅಗೋಚರ ಶಕ್ತಿಗಳ ಹೆಸರಲ್ಲಿ ಆಯಾಯ ಸಂಸ್ಕೃತಿಗಳಿಗೆ ತಕ್ಕಂತಹ ದೈವಾರಾಧನೆಯ ಸಂಪ್ರದಾಯವನ್ನು ಅಲ್ಲಲ್ಲಿ ಕಾಣಬಹುದು. ಅದೇ ರೀತಿ ಈಗಿನ ಉತ್ತರ ಕೇರಳದಿಂದ ಹಿಡಿದು ಕುಂದಾಪುರದವರೆಗಿನ ಇಲ್ಲಿನ ಮೂಲನಿವಾಸಿಗಳು ಆಚರಿಸಿಕೊಂಡು ಬರುತ್ತಿದ್ದ ಈ ದೈವಾರಾಧನೆ ಮತ್ತು ನಾಗಾರಾಧನೆಯ ಆಚರಣೆಗಳು ಗಟ್ಟಿನೆಲೆಯಲ್ಲಿ ನಿಂತಿದ್ದ ಕಾರಣ (ಅಥವ ರೂಢಿ ಮಾತಿನಲ್ಲಿ ಹೇಳುವುದಾದರೆ ದೈವಗಳ ಕಾರಣಿಕದ ಕಾರಣಕ್ಕಾಗಿ) ಯಾವುದೇ ಹೊರಗಿನ ಸಾಂಸ್ಕೃತಿಕ ದಾಳಿಗಳಿಗೂ ಅದನ್ನು ಅಳಿಸಿ ಹಾಕಲು ಸಾಧ್ಯವಾಗಲಿಲ್ಲ. ಈ ಪ್ರದೇಶದಲ್ಲಿ ಇಂದಿಗೂ ಕೂಡ ದೇವರಿಗೂ ಭಯಪಡದ ಮಂದಿ ದೈವಗಳಿಗೆ ಹೆದರುತ್ತಾರೆ. “ದೈವಕ್ಕೆ ಹೇಳಿಕೊಳ್ಳುತ್ತೇನೆ&#8230;” ಅಂದ್ರೆ ಆಯಿತು. ಅಲ್ಲಿ ನ್ಯಾಯಾಲಯದಲ್ಲಿ ವಕೀಲರು ನಡೆಸುವಂತ ಜಾಣತನದ ತಂತ್ರ ಹಾಗು ಮಾತುಗಾರಿಕೆ ಅಂತವಕ್ಕೆಲ್ಲ ಇಲ್ಲಿ ಬೆಲೆಯೇ ಇಲ್ಲ. ತಪ್ಪಿತಸ್ಥ ದೈವದೆದುರು ಹೋಗೋ ಮೊದಲೇ ಅರ್ಧ ಸೋತು ಶರಣಾಗಿರುತ್ತಾನೆ. ದೈವಗಳಿಗೆ ತೊಂದರೆ ಮಾಡಿದವ, ನುಡಿ ತಪ್ಪಿದರೂ ಪರಿಣಾಮವನ್ನೆದುರಿಸಿದಂತ ಅನೇಕ ಉದಾಹರಣೆಗಳು ಇವೆ. ಕೆಲ ವರ್ಷಗಳ ಹಿಂದೆ ಗೊತ್ತಿಲ್ಲದೇ ದೈವ ಸನ್ನಿಧಿಗೆ ಸೇರಿದ ಜಾಗದಲ್ಲಿ ಮರಕಡಿಯಲು ಹೋದ ಮುಸಲ್ಮಾನನ ಮೇಲೆಯೇ ದೈವ ಆವೇಶಗೊಂಡು ಎಚ್ಚರಿಸಿದ ಸಂಗತಿ ಪ್ರತಿಕೆಗಳಲ್ಲಿ ವರದಿಯಾಗಿತ್ತು.</p>


<div class="wp-block-image">
<figure class="aligncenter size-full"><img loading="lazy" decoding="async" width="452" height="678" src="https://peepalmedia.com/wp-content/uploads/2022/11/daiva-2.webp" alt="" class="wp-image-13660" srcset="https://peepalmedia.com/wp-content/uploads/2022/11/daiva-2.webp 452w, https://peepalmedia.com/wp-content/uploads/2022/11/daiva-2-200x300.webp 200w, https://peepalmedia.com/wp-content/uploads/2022/11/daiva-2-150x225.webp 150w, https://peepalmedia.com/wp-content/uploads/2022/11/daiva-2-300x450.webp 300w" sizes="auto, (max-width: 452px) 100vw, 452px" /></figure></div>


<h6 class="wp-block-heading"><strong>ದೈವಗಳು ಸ್ಥಳೀಯವಾಗಿ ಹೊಂದಿರುವ ಪ್ರಭಾವ&#8230;</strong></h6>



<p>ದಲಿತ ಸಮುದಾಯಕ್ಕೆ ಸೇರಿದ ಅನೇಕ ದೈವಸ್ಥಾನಗಳಲ್ಲಿ ನಡೆಯುವ ಕೋಲ ನೇಮಗಳಿಗೆ ಯಥೇಚ್ಛವಾಗಿ ಭಕ್ತಿಯಿಂದ ಧನಸಹಾಯ ಮಡುವವರು ಬಂಟ ಸಮುದಾಯದಂತಹ ಮೇಲ್ವರ್ಗದವರು. ಮುಂಬಯಿ ಮೊದಲಾದೆಡೆ ದುಡಿಯುವ ಇವರುಗಳು ಈ ದೈವಗಳನ್ನು ತಮ್ಮ ರಕ್ಷಕರೆಂದೇ ಭಾವಿಸಿ ನಂಬುತ್ತಾರೆ. ಕೋಲದ ಸಮಯದಲ್ಲಿ ಪರವ, ಪಂಬದ, ನಲಿಕೆಯವರಂತಹ ದಲಿತ ಸಮುದಾಯದ ಪಾತ್ರಿಗಳಿಂದ ನುಡಿ ಅಭಯ ಪಡೆದುಕೊಳ್ಳಲು ಈ ದಲಿತೇತರ ಮೇಲ್ಜಾತಿಗಳಿಗೆ ಯಾವ ಸಾಮಾಜಿಕ ಅಂತಸ್ತಿನ ಭಾವವೂ ಅಡ್ಡಿಬಾರದು. ಇದು ಆ ದೈವಗಳು ಸ್ಥಳೀಯವಾಗಿ ಹೊಂದಿರುವ ಪ್ರಭಾವವನ್ನು ತೋರುತ್ತದೆ. ಇಲ್ಲಿನ ದೈವಗಳ ಮಹತ್ವವನ್ನು ಮನಗಂಡೇ ತುಳುನಾಡನ್ನು ಆಳುತ್ತಿದ್ದ ಇಲ್ಲಿನ ಜೈನ ಅರಸರುಗಳೂ ಕೂಡ ಇದನ್ನು ಕಡೆಗಣಿಸಹೋಗದೇ ರಕ್ಷಕ ದೈವಗಳೆಂದು ಪರಿಗಣಿಸಿ ಪ್ರೋತ್ಸಾಹಿಸಿದ್ದರಲ್ಲದೇ ಇದೇ ಬಗೆಯಲ್ಲಿ ತಮ್ಮದೇ ಆದ ದೈವಗಳನ್ನು (ರಾಜನ್ ದೈವಗಳು) ಪ್ರತಿಷ್ಠಾಪಿಸಿ ನಂಬಿಕೆಯಿಂದ ನಡೆದು ಕೊಂಡಿದ್ದರು.</p>



<h6 class="wp-block-heading"><strong>ವೈದಿಕ ದೇವತಾರಾಧನೆಯ ಬೆಳವಣಿಗೆ</strong></h6>



<p>ಕದಂಬರ ಲೋಕಾದಿತ್ಯ ಕರೆತಂದ ಉತ್ತರದ ಬ್ರಾಹ್ಮಣ ಕುಟುಂಬಗಳಿಗೆ ಪಶ್ಚಿಮ ಷೋಡಶ (16) (ಕಾರೆವೂರು, ವೊರ್ಕಾಡಿ, ಮರಣಿ, ಕೊಳನಾಡು, ಪಾಡಿ, ಕೂಡಲು, ಮೊಗೆಬೈಲು, ಮಿತ್ತನಾಡು, ನಿರ್ಮಾರ್ಗ, ಸಿಮಂತೂರು, ತೆನೆಕಳ, ಬ್ರಹ್ಮಾವರ, ನೀಲಾವರ, ಕೋಟ, ಕಂದಾವರ ಮತ್ತು ಶಿವಳ್ಳಿ) ಮತ್ತು ಪೂರ್ವ ಷೋಡಶ (16) (ಶ್ರಿಪಾಡಿ, ಓಡಿಲ, ನಾಳ, ಕಾರಂದೂರು, ಉಜಿರೆ, ಕುನ್ಯಮಾರ್ಗ, ಕೊಕ್ಕಡ, ರಾಮಿಂಜ, ಪುದೆ, ಬಳ್ಪ, ಐವರ್ನಾಡು, ಇಡ್ಕಿದು, ಕೆಮ್ಮಿಂಜ, ಪಾಡಿಂಜ, ಸಿರಿಯಾಡಿ ಮತ್ತು ಕೊಡಿಪಾಡಿ) ವೆಂಬ ದ್ವಾತ್ರಿಂಶತ್ (32) ಗ್ರಾಮಗಳನ್ನು ಉಂಬಳಿ ಕೊಟ್ಟು ಕರಾವಳಿ ಜಿಲ್ಲೆಗಳಲ್ಲಿ ನೆಲೆ ನಿಲ್ಲಿಸಿದ ಮೇಲೆ ಪ್ರಭುತ್ವದ ಪ್ರಭಾವಳಿಯಡಿಯಲ್ಲಿ ಇವರ ವೈದಿಕ ಸಾಂಸ್ಕೃತಿಕತೆಯ ವ್ಯಾಪಿಸುವಿಕೆ ಇಲ್ಲಿ ಹೆಚ್ಚತೊಡಗಿತು. ಹೊಸ ಹೊಸ ದೇಗುಲಗಳು ಇಲ್ಲಿ ಹುಟ್ಟಿಕೊಂಡವು. ಕೆಲ ಭೂತಸ್ಥಾನ, ಬಸದಿಗಳು ದೇವಾಲಯಗಳಾಗಿ ಮಾರ್ಪಟ್ಟವು. (ಉಡುಪಿಯ ಅನಂತೇಶ್ವರ ಚಂದ್ರಮೌಳೀಶ್ವರ ದೇಗುಲಗಳು ಇಂತವಕ್ಕೊಂದು ಉದಾಹರಣೆ. ಅದೇ ರೀತಿ ಅನೇಕ ಉಳ್ಳಾಲ್ತಿ ದೈವಸ್ಥಾನಗಳು ದುರ್ಗಾ ಪರಮೇಶ್ವರಿ ದೇವಾಲಯಗಳಾಗಿ ಬದಲಾಗುತ್ತಿರುವುದನ್ನು ಇಂದಿಗೂ ಕಾಣುತ್ತಿದ್ದೇವೆ). ದೈವಾರಾಧನೆಯನ್ನು ಅಳಿಸಿ ಹಾಕಲಾಗದಿದ್ದರೂ ವೈದಿಕ ದೇವತಾರಾಧನೆ ಪ್ರತ್ಯೇಕವಾಗಿ ಇಲ್ಲಿ ಬೆಳೆಯುತ್ತಾ ಹೋಯಿತು.</p>



<p>ಇನ್ನು, ಅವೈದಿಕತೆಯ ಪಂಜುರ್ಲಿ, ಗುಳಿಗ, ಕೊರಗಜ್ಜನಂತವರ ಕಥೆ ಪಾಡ್ದನಗಳಲ್ಲಿ ವೈದಿಕ ದೇವ ದೇವತೆಯ ಪಾತ್ರಗಳು ಬರುವುದಾದರೂ ಹೇಗೆ ಎನ್ನುವುದನ್ನು ಗಮನಿಸಿದರೆ, ಇದರಲ್ಲಿ ವಿಶೇಷವೇನೂ ಇಲ್ಲ. ಇದೊಂದು ಸಾಮಾಜಿಕ ಸಾಂಸ್ಕೃತಿಕ ಅನಿವಾರ್ಯತೆ ಅಷ್ಟೆ. ಪ್ರಸಕ್ತ ಕಾಲಮಾನಕ್ಕೆ ತಕ್ಕಂತೆ ಸರ್ವೈವಲ್ ಆಗಲು ಇರುವ ಅವಕಾಶ ಬಳಕೆಯ ಒಂದು ಸಹಜ ಪ್ರಕ್ರಿಯೆ ಇದೆನ್ನಬಹುದು. ಸಂಪೂರ್ಣವಾಗಿ ಕಳೆದು ಹೋಗುವ ಬದಲು ಕೆಲ ಹೊಂದಾಣಿಕೆಗಳ ಮೂಲಕ ಅಸ್ತಿತ್ವವನ್ನು ಉಳಿಸಿಕೊಳ್ಳುವ ವಿಧಾನ ಇದು. ಸಾಮಾಜಿಕವಾಗಿ ಕಡೆಗಣಿಸಲ್ಪಟ್ಟು ಯಾವುದೇ ಸಾಮಾಜಿಕ ಪ್ರಭಾವವನ್ನಿಟ್ಟುಕೊಳ್ಳದ ವರ್ಗವೊಂದು ಆಗಿನ ಪ್ರಭಾವೀ ವರ್ಗವೊಂದರ ಜೊತೆಗೆ ಯಾವುದೋ ಒಂದು ಬಗೆಯಲ್ಲಿ ಗುರುತಿಸಿಕೊಳ್ಳುವುದರ ಮೂಲಕ ಸಾಂದರ್ಭಿಕವಾಗಿ ತನ್ನತನವನ್ನು ತಕ್ಕಮಟ್ಟಿಗೆ ಕಾಪಿಟ್ಟು ಕೊಂಡಂತಹ ಪ್ರಕ್ರಿಯೆ ಇದು.</p>



<h6 class="wp-block-heading"><strong>ದೈವ ಪಾಡ್ದನಗಳು</strong></h6>



<p>ತಳ ಸಮುದಾಯದವರ ಈ ದೈವಾರಾಧನೆಯನ್ನು ಅಭ್ಯಸಿಸುವವರಿಗೆ ಈ ಕುರಿತ ಒಂದು ಪ್ರಮುಖವಾದ ಆಕರವೆಂದರೆ ಅದು ದೈವಕ್ಕೆ ಸಂಬಂಧಿಸಿದ ಪಾಡ್ದನಗಳು. ಈ ಪಾಡ್ದನದಲ್ಲಿ ನಿರ್ದಿಷ್ಟ ದೈವಗಳಿಗೆ ಸಂಬಂಧಿಸಿದ ಕಥೆಯ ವಿವರಣೆ ದೊರೆಯುತ್ತದೆ. ದೈವ ನರ್ತಕರ ಪರಂಪರೆಯಲ್ಲಿ ಸಾಗಿಬರುವ ಈ ಪಾಡ್ದನ ಕೇವಲ ಒಂದು ಮೌಖಿಕ ದಾಖಲಾತಿ. ಕೆಲ ದಶಕಗಳಿಂದ ಪ್ರೊ. ಲಾರಿ ಹೊಂಕೊ, ಮಾರ್ಥ ಅಶ್ಚನ್ ರಂತಹ ವಿದೇಶಿಗರಿಂದ ಹಿಡಿದು ಅಮೃತ ಸೋಮೇಶ್ವರ, ಡಾ. ವಿವೇಕ ರೈ, ಡಾ. ಪುರುಷೋತ್ತಮ ಬಿಳಿಮಲೆ, ಡಾ. ಚಿನ್ನಪ್ಪ ಗೌಡ, ರಘುನಾಥ ವರ್ಕಾಡಿ, ನಾವಡ ದಂಪತಿ, ಮೊದಲಾದ ಅನೇಕ ಮಹನೀಯರು ಈ ಬಗ್ಗೆ ಅನೇಕ ವಿಚಾರಗಳನ್ನು ಅಭ್ಯಸಿಸಿ ದಾಖಲಿಸಿದ್ದಾರೆ. ಈ ಹಿಂದೆ ಕೇವಲ ಮೌಖಿಕವಾಗಿಯಷ್ಟೆ ಚಾಲ್ತಿಯಲ್ಲಿದ್ದ ಈ ದೈವ ಪಾಡ್ದನಗಳಲ್ಲಿ ಶ್ರೇಷ್ಠತೆಯ ಹೆಸರಲ್ಲಿ ಗುರುತಿಸಿಕೊಂಡಿದ್ದ ವೈದಿಕ ದೇವರುಗಳ ಸೇರಿಸುವಿಕೆಗೆ ಯಾವ ವಿಶೇಷ ರಬ್ಬರು ಪೆನ್ನುಗಳ ಅವಶ್ಯಕತೆಯೇನೂ ಬೇಕಿದ್ದಿರಲಿಲ್ಲ. ಆದರೆ ಯಾವ ಕಾಲ ಘಟ್ಟದಲ್ಲಿ ಈ ಈಶ್ವರ ಪಾರ್ವತಿ ಬ್ರಹ್ಮ ವಿಷ್ಣು ತುಳುನಾಡಿನ ದೈವ ಸಾಹಿತ್ಯದೊಳಗೆ ಸೇರಿಕೊಂಡರೆನ್ನುವುದನ್ನ ನಿಖರವಾಗಿ ಹೆಳಲಾಗದಿದ್ದರೂ ವೈದಿಕತೆಯ ಉಚ್ಛ್ರಾಯ ಕಾಲದಲ್ಲಂತೂ ಹೌದು ಎಂದು ನಂಬಲಡ್ಡಿಯಿಲ್ಲ.</p>



<h6 class="wp-block-heading"><strong>ತುಳುನಾಡಲ್ಲಿ ಎಲ್ಲವೂ ಬ್ರಹ್ಮಮಯಂ!</strong></h6>



<p>ತಮಿಳುನಾಡಿನಲ್ಲಿನ ಯಾವುದೋ ಒಂದು ಸೇತುವೆಗೆ ಬ್ರಿಟಿಷ್ ಅಧಿಕಾರಿಯ ನೆನಪಲ್ಲಿ ಹ್ಯಾಮಿಲ್ಟನ್ ಬ್ರಿಡ್ಜ್ ಎಂದು ಹೆಸರಿಡಲಾಗಿತ್ತಂತೆ. ಅಲ್ಲಿನ ತಮಿಳಿಗರು ನಾಲಗೆಗೆ ತ್ರಾಸ ಕೊಡುವ ಈ ಹ್ಯಾಮಿಲ್ಟನ್ ಹೆಸರನ್ನು ತಮ್ಮದೇ ತಮಿಳು ಶೈಲಿಯಲ್ಲಿ ’ಅಂಬಟನ್ ಬ್ರಿಜ್’ ಮಾಡಿಕೊಂಡಿದ್ದರು. ಜನ ಬಳಕೆಯಲ್ಲಿ ಈ ಹೆಸರೇ ರೂಢಿಗೆ ಬಂದು ಎಷ್ಟೊ ವರ್ಷದ ಬಳಿಕ ಈ ಹ್ಯಾಮಿಲ್ಟನ್ ನ ವಿಚಾರ ತಿಳಿಯದ ವ್ಯಕ್ತಿ ಈ ಬ್ರಿಡ್ಜನ್ನು ಇಂಗ್ಲಿಷ್ ನಲ್ಲಿ ಬಾರ್ಬರ್ ಬ್ರಿಡ್ಜ್ ಎಂದು ಪುನ: ಬದಲಿಸಿದನಂತೆ. ಅಂದರೆ, ತಮಿಳಿನಲ್ಲಿ ’ಅಂಬಟನ್’ ಎಂದರೆ ಕ್ಷೌರಿಕ ಎಂದರ್ಥ. ಇದು ಹ್ಯಾಮಿಲ್ಟನ್ ಬಾರ್ಬರ್ ಆದಂತಹ ಕತೆ. ತುಳುನಾಡಿನ ದೈವಗಳ ವಿಚಾರದಲ್ಲೂ ಕೆಲವೆಡೆ ಇಂತದ್ದೇ ನಡೆದಿದೆ. ಪೆರ್ಮೆರ್ ಎನ್ನುವುದು ’ಹಿರೀಕರು’ ಎನ್ನುವ ಅರ್ಥದ ಪದ. ಇದು ಕ್ರಮೇಣ ಬೆರ್ಮೆರ್ ಆಗಿ ಸಂಸ್ಕೃತೀಕರಣದ ಪ್ರಭಾವದಿಂದ ಇದೀಗ ಬ್ರಹ್ಮ ಎಂದಾಗಿ ಹೆಚ್ಚು ಬಳಕೆಯಲ್ಲಿದೆ. ಹಳೆಗನ್ನಡ ಮತ್ತು ತುಳುಗಳಲ್ಲಿ ಪ ಮತ್ತು ಬ ಪದಗಳು ಒಂದಕ್ಕೊಂದು ಪರ್ಯಾಯ ಶಬ್ದಗಳಾಗಿ ಬಳಕೆಯಾಗುವುದು ಸಾಮಾನ್ಯ. ತುಳುವರನ್ನು ಬೇರೆ ಕಡೆಯ ಕನ್ನಡಿಗರು ಅಪ್ಪನಿಗೆ ಅಮ್ಮ, ಅಮ್ಮನಿಗೆ ಅಪ್ಪ ಅನ್ನುವವರು.. ಅಂತ ತಮಾಷೆ ಮಾಡುವುದುಂಟು. ಆದರೆ ಹಳೆಗನ್ನಡದಲ್ಲಿ ಬಳಕೆಯಲ್ಲಿರುವ ಅಬ್ಬೆಯೇ ಇಲ್ಲಿ ಅಪ್ಪೆಯಾಗಿದೆಯಷ್ಟೆ. ಕುಂದಾಪುರ ಭಾಷೆಯಲ್ಲಿ ಕೆಲ ದಶಕಗಳ ಹಿಂದೆ ಅಮ್ಮನಿಗೆ ಅಬ್ಬಿ ಅಥವಾ ಅಬಾ ಎಂದು ಕರೆಯುವುದು ತುಂಬಾ ಸಾಮಾನ್ಯವಿತ್ತು. ಆದ್ರೆ ಈಗ ಅಲ್ಲಿ ಈ ’ಅಬ್ಬಿ’ ಬಹುತೇಕ ಮಾಯವಾಗಿದೆ. ಬ್ರಹ್ಮಸ್ಥಾನ, ಬ್ರಹ್ಮಲಿಂಗೇಶ್ವರ, ನಾಗಬ್ರಹ್ಮೆರ್, ಬ್ರಹ್ಮಬೈದೆರ್ ಮೊದಲಾದ ದೈವ ಸಂಬಂಧಿ ಹೆಸರುಗಳು. ಬ್ರಹ್ಮಾವರ, ಬ್ರಹ್ಮರ ಕೂಟ್ಲು, ಬ್ರಹ್ಮನಗರದಂತಹ ಊರ ಹೆಸರುಗಳನ್ನೂ ಕೂಡ ಕರಾವಳಿಯಲ್ಲಿ ಕಾಣಬಹುದು. ವೈದಿಕ ಪುರಾಣಗಳ ಪ್ರಕಾರ ಶಾಪಗ್ರಸ್ತ ಬ್ರಹ್ಮನಿಗೆ ಪೂಜೆಯಿಲ್ಲ ದೇಗುಲವೂ ಕೂಡ ಇಲ್ಲ. (ರಾಜಸ್ಥಾನದ ಪುಷ್ಕರ ಬಿಟ್ಟರೆ ಮತ್ತೆ ಕೆಲ ನಾಲ್ಕೈದಷ್ಟೇ ಬ್ರಹ್ಮ ದೇಗುಲ ದೇಶದಲ್ಲಿದೆಯಂತೆ) ಆದರೆ <a>ತುಳುನಾಡಲ್ಲಿ ಮಾತ್ರ ಎಲ್ಲವೂ ಬ್ರಹ್ಮಮಯಂ.</a> ಕಾರಣ ಮಾತ್ರ ಬೇರೆ. ಕರಾವಳಿಯ ದೈವಾರಾಧನೆ ಜಾತಿ ಧರ್ಮವನ್ನೂ ಮೀರಿದ್ದು. ಬಬ್ಬರ್ಯ, ಅಲಿಭೂತಗಳಂತಹ ಮುಸ್ಲಿಮ್ ದೈವಗಳಷ್ಟು ಪ್ರಸಿದ್ಧವಲ್ಲದಿದ್ದರೂ ಕಾಲಘಟ್ಟದಲ್ಲಿ ಸೇರ್ಪಡೆಗೊಂಡ ಕೆಲ ಬ್ರಾಹ್ಮಣ ದೈವಗಳೂ ಇವೆ. (ಅಷ್ಟೇ ಯಾಕೆ, ಇಂತಹ ಹೊಸ ಸೇರ್ಪಡೆಗೆ ಹೊಂದುವಂತೆ ಕಾಪು ಬಳಿ ಪೊಲೀಸ್ ಭೂತ ಎನ್ನುವ ದೈವವೂ ಇದೆಯಂತೆ) ಸಾರ್ವತ್ರಿಕವಲ್ಲದಿದ್ದರೂ ಎಲ್ಲೋ ಕೆಲವೆಡೆ ಶೂದ್ರ ಪರಂಪರೆಯ ಈ ದೈವಗಳನ್ನು ಬ್ರಾಹ್ಮಣರು ನಂಬಿ ಆರಾಧಿಸಿರುವುದೂ ಇದೆ. ಆದರೆ ಈ ವಿಚಾರದ ಆಧಾರದಲ್ಲಿ ತುಳುನಾಡಿನ ತಳ ಸಮುದಾಯದವರು ಆರಾಧಿಸಿಕೊಂಡು ಬರುತ್ತಿದ್ದ ದೈವಾರಾಧನೆಯನ್ನು ಸಾರಾಸಗಟಾಗಿ ವೈದಿಕತೆಯೊಂದಿಗೆ ತಳಕು ಹಾಕಲಾಗದು. ಮೂಲ್ಕಿ ಸಮೀಪದ ಕವತ್ತಾರು ಎಂಬಲ್ಲಿ ಕೇರಳ ಮೂಲದ ಮುಸಲ್ಮಾನರೊಬ್ಬರು ಎರಡು ದಶಕಗಳಿಂದ ಕೊರಗಜ್ಜ, ಕೊರತಿ, ಗುಳಿಗನ ದೈವಸ್ಥಾನ ಕಟ್ಟಿಕೊಂಡು ಕೋಲ ದೈವಾರಾಧನೆಯನ್ನು ನಡೆಸುತ್ತಿರುವ ಉದಾಹರಣೆಯೂ ತುಳುನಾಡಿನಲ್ಲಿದೆ. ಊರಿನವರೂ ಕೂಡ ಈ ಖಾಸಿಮ್ ಸಾಹೇಬರ ದೈವಸ್ಥಾನಕ್ಕೆ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದಾರೆ. ಅವರಿಗೇನೋ ದೈವದಿಂದ ಒಳಿತಾಗಿರಬಹುದು ಅಥವ ಪ್ರೇರಣೆಯಾಗಿದ್ದಿರಲೂ ಬಹುದು ಅಷ್ಟೆ.</p>



<h6 class="wp-block-heading"><strong>ಶೂದ್ರ ದೈವಗಳೆಂದರೆ ವೈದಿಕರಿಗೆ ಒಲವಿಲ್ಲ!</strong></h6>



<p>ಆವತ್ತಿನ ಕಾಲದಲ್ಲಷ್ಟೆ ಅಲ್ಲ ಇವತ್ತಿಗೂ ಕೂಡ ಶೂದ್ರ ದೈವಗಳೆಂದರೆ ವೈದಿಕರಿಗೆ ಅಂಥಾ ಒಲವೇನಿಲ್ಲ. ಮನೆಯಲ್ಲಿರುವ ದನಗಳಿಗೋ ಮಕ್ಕಳಿಗೋ ಹುಷಾರಿಲ್ಲದಿದ್ದರೆ ಅಲ್ಲೆಲ್ಲೋ ಬಯಲಲ್ಲಿರುವ ಕಲ್ಲಿಗೆ ಕೈಮುಗಿದು ಬರುವ ಸಂಪ್ರದಾಯವಿತ್ತು. ಆ ಕಲ್ಲಿಗೆ ’ಕೀಳುಕಲ್ಲು’ ಎಂದು ಕರೆಯುವುದು ವಾಡಿಕೆ. ತಾವು ನಂಬುವ ನಮ್ಮನ್ನು ಕಾಯುವ ಯಾವುದೋ ಅತೀತ ಶಕ್ತಿಯನ್ನು ನಾವೇ ಕೀಳು (ಕನಿಷ್ಠ) ಎಂದು ಕರೆಯುವ ಸಂಪ್ರದಾಯವಿಲ್ಲ. ನಂಬಿಕೆಗೆ ಸಂಬಂಧಿಸಿ ಈ ’ಕೀಳು’ ಎನ್ನುವ ಪದವನ್ನು ಬಳಕೆಗೆ ತಂದವರು ಯಾರು? ಕೋಲ ನೇಮಗಳಲ್ಲಿ ಊರಿನ ಹಿರಿತನದ ಮರ್ಯಾದೆಗಿರುವ ಆಹ್ವಾನದಂತೆ ವೈದಿಕ ಮನೆತನದವರು ಬಂದರೂ ದೈವಕ್ಕೆ ವೈದಿಕೇತರರು ಕೊಡುವಂತಹ ಮರ್ಯಾದೆಯನ್ನು ಇವರು ಕೊಡುವುದು ತೀರಾ ಕಡಿಮೆ. ವಿದ್ಯೆ, ಉದ್ಯೋಗ ಇತ್ಯಾದಿಗಳ ಕಾರಣಕ್ಕೆ ತಳ ಸಮುದಾಯದವರಲ್ಲೂ ಇದೀಗ ಹಣಕಾಸಿಗೇನು ಕೊರತೆಯಿಲ್ಲ. ಕೋಲ, ನೇಮ ನಡೆಸುವ ಬ್ರಾಹ್ಮಣೇತರರ ಆಹ್ವಾನಕ್ಕೆ ದೈವದ ಮೇಲಿನ ನಂಬಿಕೆಗಿಂತ ಶೂದ್ರವರ್ಗದ ಬದಲಾದ ಆರ್ಥಿಕ ಅನುಕೂಲತೆಯ ಆಕರ್ಷಣೆಗೊಳಗಾಗಿ ಭೂಸುರ ಮಂದಿ ನಾಗ ಹಾಗು ಭೂತಾರಾಧನೆಯಲ್ಲಿ ಇದೀಗ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಇದರಲ್ಲಿ ಅವರದ್ದೇನೂ ದೋಷ ಖಂಡಿತಾ ಇಲ್ಲ. ರತ್ನಗಂಬಳಿ ಹಾಸಿ ನಾವೇ ದುಡ್ಡು ಕೊಟ್ಟು ಇನ್ನಿಲ್ಲದ ಮರ್ಯಾದೆಯಿಂದ ಕರೆಯುವಾಗ ಈ ಶೂದ್ರಾಚರಣೆಯಲ್ಲೂ ವೈದಿಕರ ಉಪಸ್ಥಿತಿ ಮತ್ತು ಹಿಡಿತವೆಲ್ಲ ಸ್ವಾಭಾವಿಕ ತಾನೇ (ಅವರ ಭೂತಾರಾಧನೆ ಪೂರ್ವ ಸ್ಥಳಶುದ್ಧಿ, ಕಲಶ ಪೂಜೆಯೇ ಮೊದಲಾದ ಪೂಜಾ ಸಮಯದಲ್ಲಿ ಕರೆಸಿದವರೂ ಕೂಡ ಸಮೀಪ ಹೋಗುವಂತಿಲ್ಲ; ಸಾಮಗ್ರಿಗಳನ್ನು ಮುಟ್ಟುವಂತಿಲ್ಲ; ಅವರ ಮಡಿಮೈಲಿಗೆಯ ಕಾರಣಕ್ಕೆ).</p>



<figure class="wp-block-image size-large"><img loading="lazy" decoding="async" width="768" height="1024" src="https://peepalmedia.com/wp-content/uploads/2022/11/WhatsApp-Image-2022-11-01-at-5.19.28-PM-768x1024.jpeg" alt="" class="wp-image-13661" srcset="https://peepalmedia.com/wp-content/uploads/2022/11/WhatsApp-Image-2022-11-01-at-5.19.28-PM-768x1024.jpeg 768w, https://peepalmedia.com/wp-content/uploads/2022/11/WhatsApp-Image-2022-11-01-at-5.19.28-PM-225x300.jpeg 225w, https://peepalmedia.com/wp-content/uploads/2022/11/WhatsApp-Image-2022-11-01-at-5.19.28-PM-150x200.jpeg 150w, https://peepalmedia.com/wp-content/uploads/2022/11/WhatsApp-Image-2022-11-01-at-5.19.28-PM-300x400.jpeg 300w, https://peepalmedia.com/wp-content/uploads/2022/11/WhatsApp-Image-2022-11-01-at-5.19.28-PM-696x928.jpeg 696w, https://peepalmedia.com/wp-content/uploads/2022/11/WhatsApp-Image-2022-11-01-at-5.19.28-PM.jpeg 960w" sizes="auto, (max-width: 768px) 100vw, 768px" /></figure>



<p><br><strong>ವೈದಿಕ ಆಚರಣೆಗಳಿಗೆ ಇನ್ನಿಲ್ಲದ ಮಹತ್ತ್ವ..</strong></p>



<p>ಈ ಬಗೆಯಲ್ಲಿ ಇಂದು ಶೂದ್ರ ವರ್ಗದ ಭೂತಸ್ಥಾನಗಳಲ್ಲಿ ವೈದಿಕತೆಯ ಆಚರಣೆಗಳಿಗೆ ಇನ್ನಿಲ್ಲದ ಮಹತ್ತ್ವ ನೀಡಲಾಗುತ್ತಿದ್ದು, ದೊಡ್ಡ ದೊಡ್ಡ ಕೋಲ ನೇಮಗಳಷ್ಟೆ ಅಲ್ಲದೇ ಮನೆಯಲ್ಲಿ ನಡೆಸುವಂತಹ ಕುಟುಂಬದ ದೈವ ಕಾರ್ಯಗಳಿಗೂ ಕೂಡ ಸಂಬಂಧವೇ ಇರದ ಹೇಳಲು ಬಾರದಂತಹ ರಾಕ್ಷೋಘ್ನ ಹೋಮ, ಸ್ಥಳ ಶುದ್ಧಿ, ಗಣಪತಿ ಹವನ ಇನ್ನೇನೋ ಎಂದು ಇಲ್ಲಸಲ್ಲದ ಸಂಪ್ರದಾಯಗಳೆಲ್ಲ ಜತೆಯಾಗುತ್ತಿವೆ. ಇನ್ನೂ ಮುಂದುವರೆದು ಪ್ರತಿ ಮನೆಯಲ್ಲೂ ತಂತ್ರಿಗಳನ್ನು ಕರೆಸಿ ಅಷ್ಟಮಂಗಲ ಪ್ರಶ್ನೆ ಮಾಡಿಸುವ ಹೊಸತರದ ’ಪ್ರತಿಷ್ಠೆ’ ಬೇರೆ ಶೂದ್ರವರ್ಗಗಳಲ್ಲಿ ಇದೀಗ ಸುರುವಾಗಿದೆ. ಇನ್ನು ಏನೇನೆಲ್ಲ ಈ ದೈವಾರಾಧನೆಯಲ್ಲಿ ನೋಡಬೇಕೋ.. ಮೂಲ ದೈವಗಳು ಮಾತ್ರ ಗೊತ್ತೇ ಇರದ ಈ ಹೋಮ ಹವನಗಳ ಹೊಗೆಯಿಂದ ಚಡಪಡಿಸಿ ಕಣ್ ಕಣ್ ಬಿಡುತ್ತಿರಬೇಕು ಅಷ್ಟೆ.</p>



<h6 class="wp-block-heading"><strong>ದೈವಗಳು ಸಂಸ್ಕೃತೀಕರಣಗೊಂಡಿವೆ!</strong></h6>



<p>ಮಾಮೂಲಿ ದೇವರುಗಳಿಗಿಂತ ಅವೈದಿಕತೆಯ ಈ ಭೂತಾರಾಧನೆಯಂತವುಗಳಿಗೆ ಜನರು ಮುಗಿಬೀಳುತ್ತಿರುವುದು ಮತ್ತು ದುಡ್ಡು ಸುರಿದು ಮೆರೆಸುತ್ತಿರುವುದನ್ನ ನೋಡಿ ಒಳಗೊಳಗೇ ಸಾಕಷ್ಟು ಕುರುಬುತ್ತಿರುವ ಕೆಲ ಭೂಸುರ ಮಂದಿ (ಈ ಬಗ್ಗೆ ಸಾಕಷ್ಟು ನೋಡಿದ್ದೇನೆ) ಸ್ಥಳೀಯ ಜನರಿಂದ ಪ್ರತ್ಯೇಕಿಸಲಾಗದ ಈ ದೈವಾಚರಣೆಯನ್ನು ವೈದಿಕತೆಯ ವ್ಯಾಪ್ತಿಯೊಳಗೆ ತರುವಂತ ಹುಮ್ಮಸ್ಸಿನಲ್ಲಿ ಇದ್ದಾರೆ. (ಬಹುತೇಕ ಯಶಸ್ವಿಯೂ ಆಗಿದ್ದಾರೆ) ಈ ಕಾರಣಕ್ಕೇ ಜುಮಾದಿ, ಲೆಕ್ಕೆಸಿರಿಯಂತಹ ಅನೇಕ ದೈವಗಳು ಸಂಸ್ಕೃತೀಕರಣಗೊಂಡು ಧೂಮಾವತಿ, ರಕ್ತೇಶ್ವರಿಗಳಾಗಿ ಬದಲಾಗಿವೆ. ತುಳುವರ ಪಂಜುರ್ಲಿಯೂ ಕೂಡ ಸಂಸ್ಕೃತದ ವರಾಹ ಮೂರ್ತಿಯಾಗಿದ್ದಾನೆ. ಲಾಭಕ್ಕೆ ತಕ್ಕಂತೆ ಅನ್ಯರ ಆಚರಣೆಗಳನ್ನು ತಮ್ಮದಾಗಿಸಿಕೊಳ್ಳುವುದು ವೈದಿಕರಿಗೆ ಹೊಸತೇನಲ್ಲ, ಬೌದ್ಧರ ಗೌತಮ ಬುದ್ಧ, ಜೈನರ ಯಕ್ಷಿಗಳನ್ನು ಮಾತ್ರವಲ್ಲದೇ ಅವರ ಪೌರಾಣಿಕ ಕತೆಗಳನ್ನೂ ಕೂಡ ತಮ್ಮ ಗ್ರಂಥಗಳಲ್ಲಿ ಸೇರಿಸಿ ಕೊಂಡಂತವರಿಗೆ ಈ ಭೂತಗಳೇನು ಮಹಾ..</p>



<p></p>



<p><strong>ಶಂಕರ್ ಸೂರ್ನಳ್ಳಿ</strong></p>



<p><strong>ಲೇಖಕರು.</strong></p>
]]></content:encoded>
					
		
		
			</item>
	</channel>
</rss>
