<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Dalit assault &#8211; Peepal Media</title>
	<atom:link href="https://peepalmedia.com/tag/dalit-assault/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 13 Feb 2025 13:15:17 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Dalit assault &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಜಾತಿ ದೌರ್ಜನ್ಯ: ಬುಲೆಟ್ ಬೈಕ್ ಓಡಿಸಿದ್ದಕ್ಕೆ ದಲಿತ ಯುವಕನ ಕೈ ಕತ್ತರಿಸಿದ ಸವರ್ಣೀಯರು</title>
		<link>https://peepalmedia.com/caste-atrocities-upper-caste-people-chop-off-the-hand-of-a-dalit-youth-who-was-riding-a-bullet-bike/</link>
		
		<dc:creator><![CDATA[Peepal Media]]></dc:creator>
		<pubDate>Thu, 13 Feb 2025 13:12:56 +0000</pubDate>
				<category><![CDATA[ದಲಿತ ನೋಟ]]></category>
		<category><![CDATA[Caste atrocities]]></category>
		<category><![CDATA[Dalit assault]]></category>
		<category><![CDATA[Dalit community]]></category>
		<category><![CDATA[tamil nadu]]></category>
		<guid isPermaLink="false">https://peepalmedia.com/?p=53888</guid>

					<description><![CDATA[ಪ್ರಬಲ ಜಾತಿಗರು ಬುಲೆಟ್ ಬೈಕ್ ಓಡಿಸಿದ ಕಾರಣಕ್ಕೆ ದಲಿತ ಯುವಕನ ಕೈ ಕತ್ತರಿಸಿರುವ ವಿಕೃತ ಘಟನೆಯೊಂದು ತಮಿಳುನಾಡಿನ ಶಿವಗಂಗ ಜಿಲ್ಲೆಯ ಮೇಳಪಿದವೂರು ಗ್ರಾಮದಲ್ಲಿ ನಡೆದಿದೆ.   2025 ಫೆಬ್ರವರಿ 12 ರಂದು ಸಂಜೆ ತಮಿಳುನಾಡಿನ ಶಿವಗಂಗ ಜಿಲ್ಲೆಯ ಮೇಳಪಿದವೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬುಲೆಟ್ ಬೈಕ್ ಓಡಿಸುತ್ತಿದ್ದ ಅಯ್ಯಸಾಮಿ ಎಂಬ ಯುವಕನನ್ನು ಅಡ್ಡಗಟ್ಟಿ ದಾಳಿ ನಡೆಸಿರುವ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಬುಧವಾರ ಸಂಜೆ ಅಯ್ಯಸಾಮಿ ತನ್ನ ಬುಲೆಟ್ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ, ಅದೇ [&#8230;]]]></description>
										<content:encoded><![CDATA[
<p>ಪ್ರಬಲ ಜಾತಿಗರು ಬುಲೆಟ್ ಬೈಕ್ ಓಡಿಸಿದ ಕಾರಣಕ್ಕೆ ದಲಿತ ಯುವಕನ ಕೈ ಕತ್ತರಿಸಿರುವ ವಿಕೃತ ಘಟನೆಯೊಂದು ತಮಿಳುನಾಡಿನ ಶಿವಗಂಗ ಜಿಲ್ಲೆಯ ಮೇಳಪಿದವೂರು ಗ್ರಾಮದಲ್ಲಿ ನಡೆದಿದೆ.  </p>



<p>2025 ಫೆಬ್ರವರಿ 12 ರಂದು ಸಂಜೆ ತಮಿಳುನಾಡಿನ ಶಿವಗಂಗ ಜಿಲ್ಲೆಯ ಮೇಳಪಿದವೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬುಲೆಟ್ ಬೈಕ್ ಓಡಿಸುತ್ತಿದ್ದ ಅಯ್ಯಸಾಮಿ ಎಂಬ ಯುವಕನನ್ನು ಅಡ್ಡಗಟ್ಟಿ ದಾಳಿ ನಡೆಸಿರುವ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.</p>



<p>ಪೊಲೀಸರ ಪ್ರಕಾರ, ಬುಧವಾರ ಸಂಜೆ ಅಯ್ಯಸಾಮಿ ತನ್ನ ಬುಲೆಟ್ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ, ಅದೇ ಗ್ರಾಮದ ಮೂವರು ಪ್ರಬಲ ಜಾತಿ ಹಿಂದೂಗಳಾದ ಆರ್. ವಿನೋದ್‌ಕುಮಾರ್ (21), ಎ. ಅಥೀಶ್ವರನ್ (22) ಮತ್ತು ಎಂ. ವಲ್ಲರಸು (21) ಅಡ್ಡಗಟ್ಟಿ ಹರಿತವಾದ ಆಯುಧಗಳಿಂದ ಹಲ್ಲೆ ಮಾಡಿದ್ದಾರೆ ಎಂದು ವರದಿ ಹೇಳಿದೆ.</p>



<p>ಹಲ್ಲೆಗೊಳಗಾದ ಅಯ್ಯಸಾಮಿ ಶಿವಗಂಗೆಯ ಕಾಲೇಜಿನಲ್ಲಿ ಮೂರನೇ ವರ್ಷದ ಯುಜಿ ಗಣಿತ ವಿದ್ಯಾರ್ಥಿ ಎಂದು ತಿಳಿದುಬಂದಿದ್ದು, ಹಲ್ಲೆಯಿಂದಾಗಿ ಗಂಭೀರ ಗಾಯಗೊಂಡಿದ್ದ ಅವರನ್ನು ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.</p>



<p>“ಪ್ರಬಲ ಸಮುದಾಯದ ಯುವಕರು ಮಾತ್ರ ದುಬಾರಿ ಬೈಕ್‌ಗಳನ್ನು ಓಡಿಸಬಹುದು. ದಲಿತರು ಅಂತಹ ಬೈಕ್‌ಗಳನ್ನು ಓಡಿಸಬಾರದು” ಎಂದು ಹೇಳುತ್ತಾ ಆರೋಪಿಗಳು ಅಯ್ಯಸಾಮಿಯ ಕೈಗಳನ್ನು ಕಡಿದಿದ್ದಾರೆ” ಎಂದು ಸಂತ್ರಸ್ತ ಯುವಕನ ಸಂಬಂಧಿ ಮುನಿಯಸಾಮಿ ಹೇಳಿದ್ದಾರೆ.&nbsp;</p>



<p>ದಾಳಿ ನಡೆದಾಗ ಅಯ್ಯಸಾಮಿ ತಪ್ಪಿಸಿಕೊಂಡು ಸ್ಥಳದಿಂದ ಓಡಿ ಹೋಗಿ ಮನೆ ತಲುಪಿದ್ದಾರೆ. ಇಲ್ಲದಿದ್ದರೆ ಆರೋಪಿಗಳು ಆತನನ್ನು ಕೊಲೆ ಮಾಡುತ್ತಿದ್ದರು ಎಂದು ಮುನಿಯಸಾಮಿ ತಿಳಿಸಿದ್ದಾರೆ.</p>



<p>ಕುಟುಂಬಸ್ಥರು ಅಯ್ಯಸಾಮಿಯನ್ನು ಆಸ್ಪತ್ರೆಗೆ ಕರೆದೊಯ್ದ ನಂತರ, ಪ್ರಬಲ ಜಾತಿಯವರು ದಲಿತ ಕುಟುಂಬದ ಮನೆಯನ್ನು ದೋಚಿದ್ದಾರೆ. ಗ್ರಾಮದಲ್ಲಿ ಜಾತಿ ತಾರತಮ್ಯ ಚಾಲ್ತಿಯಲ್ಲಿದೆ. ತಮ್ಮ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡುವಂತೆ ಮುನಿಯಸಾಮಿ ಒತ್ತಾಯಿಸಿದ್ದಾರೆ.</p>



<p>“ಅಯ್ಯಸಾಮಿ ಬುಲೆಟ್ ಬೈಕ್ ಚಲಾಯಿಸುವುದು ಪ್ರಬಲ ಜಾತಿಯವರಿಗೆ ಇಷ್ಟವಿರಲಿಲ್ಲ. ಈ ಹಿಂದೆಯೂ ಅವರು ಬೈಕಿಗೆ ಹಾನಿ ಮಾಡಿದ್ದರು” ಎಂದು ಅವರ ತಂದೆ ಭೂಮಿನಾಥನ್ ಹೇಳಿದ್ದಾರೆ.</p>



<p>ಬುಲೆಟ್ ಓಡಿಸಿದ್ದಕ್ಕೆ ದಾಳಿ ಮಾಡಲಾಗಿದೆ ಎಂಬುವುದನ್ನು ಪೊಲೀಸ್ ಮೂಲಗಳು ನಿರಾಕರಿಸಿವೆ.&nbsp;</p>



<p>ಅಯ್ಯಸಾಮಿ ಆರೋಪಿಗಳಲ್ಲಿ ಒಬ್ಬನಾದ ಅಥೀಶ್ವರನ್‌ಗೆ ಗೇಲಿ ಮಾಡಿದ್ದರು. ಈ ವಿಚಾರಕ್ಕೆ ಅವರ ನಡುವೆ ಮೊದಲೇ ಜಗಳವಿತ್ತು. ತನಿಖೆ ಇನ್ನೂ ಮುಂದುವರೆದಿದೆ ಎಂದು ಹೇಳಿರುವುದಾಗಿ ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್ ವರದಿ ಹೇಳಿದೆ.</p>



<p>ಘಟನೆ ಸಂಬಂಧ ಸಿಪ್ಕಾಟ್ ಪೊಲೀಸರು ವಿನೋದ್‌ಕುಮಾರ್, ಅಥೀಶ್ವರನ್ ಮತ್ತು ವಲ್ಲರಸು ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ 296 (1), 126 (2), 118 (1), 351 (3) ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್‌ 3(1)(ಆರ್)(ಎಸ್‌) ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿಯೂ ವರದಿಯಾಗಿದೆ.</p>
]]></content:encoded>
					
		
		
			</item>
		<item>
		<title>ಕುದ್ಮಲ್‌ ರಂಗರಾಯರು: ಬ್ರಾಹ್ಮಣರಿಗೆ ಮಾದರಿ ವ್ಯಕ್ತಿತ್ವ</title>
		<link>https://peepalmedia.com/kudmal-rangarayu-a-role-model-for-brahmins/</link>
		
		<dc:creator><![CDATA[Peepal Media]]></dc:creator>
		<pubDate>Thu, 30 Jan 2025 08:20:06 +0000</pubDate>
				<category><![CDATA[ಅಂಕಣ]]></category>
		<category><![CDATA[bengalure]]></category>
		<category><![CDATA[Dalit]]></category>
		<category><![CDATA[dalit activists]]></category>
		<category><![CDATA[Dalit assault]]></category>
		<category><![CDATA[Dalit community]]></category>
		<category><![CDATA[Dalit cultural resistance]]></category>
		<category><![CDATA[dalit dalitlivesmatter dalits]]></category>
		<category><![CDATA[Dalit fighters]]></category>
		<category><![CDATA[Dalit leaders M. Devdas]]></category>
		<category><![CDATA[dalit litterature]]></category>
		<category><![CDATA[dalit lives matter]]></category>
		<category><![CDATA[Dalit movement was born to question exploitation]]></category>
		<category><![CDATA[Dalit organizations]]></category>
		<category><![CDATA[dalitha samskruthika prasthirodha]]></category>
		<category><![CDATA[Famous Ghati Subrahmanya Cattle Fair]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[kannadalit]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=53092</guid>

					<description><![CDATA[(ಜ.30 ರಂದು ಅಂದರೆ ಇಂದು ಕುದ್ಮಲ್‌ ರಂಗರಾಯರ ಪುಣ್ಯತಿಥಿ ಸ್ಮರಣಾರ್ಥ ಈ ಬರಹ.) ಮಂಗಳೂರಿನ ನ್ಯಾಯಾಲಯದಲ್ಲಿ ಪೇದೆ ಕೆಲಸವೊಂದು ಖಾಲಿ ಬಿದ್ದ ಕಾರಣ ಅರ್ಜಿಗಳನ್ನು ಆಹ್ವಾನಿಸಿದ್ದರು. ಅಲ್ಪ ವಿದ್ಯಾಭ್ಯಾಸ ಮಾಡಿದ್ದ ದಲಿತ ಸಮುದಾಯದ ಬೆಂದೂರು ಬಾಬು ಎನ್ನುವವರು ಅದಕ್ಕೆ ಅರ್ಜಿ ಹಾಕಿದ್ದರು. ಸಂದರ್ಶನದಲ್ಲಿ ಜಿಲ್ಲಾ ನ್ಯಾಯಾಧೀಶರಿಗೆ ಆತ ಅರ್ಹನೆಂದು ಕಂಡಿತು. ಇದು ಮೇಲ್ಜಾತಿಯವರ ಅಸಹನೆಗೆ ಕಾರಣವಾಯಿತು. ಆತನನ್ನು ಆ ಹುದ್ದೆಗೆ ಆಯ್ಕೆ ಮಾಡಬಾರದೆಂದು ನ್ಯಾಯಾಲಯದಲ್ಲಿ ಗಲಭೆ ಎಬ್ಬಿಸಿದರು. ದಲಿತರು ಯಾರೂ ಆ ವರೆಗೆ ಜಿಲ್ಲಾ ನ್ಯಾಯಾಲಯದಲ್ಲಿ ನೌಕರಿ [&#8230;]]]></description>
										<content:encoded><![CDATA[
<p>(ಜ.30 ರಂದು ಅಂದರೆ ಇಂದು ಕುದ್ಮಲ್‌ ರಂಗರಾಯರ ಪುಣ್ಯತಿಥಿ ಸ್ಮರಣಾರ್ಥ ಈ ಬರಹ.)</p>



<p>ಮಂಗಳೂರಿನ ನ್ಯಾಯಾಲಯದಲ್ಲಿ ಪೇದೆ ಕೆಲಸವೊಂದು ಖಾಲಿ ಬಿದ್ದ ಕಾರಣ ಅರ್ಜಿಗಳನ್ನು ಆಹ್ವಾನಿಸಿದ್ದರು. ಅಲ್ಪ ವಿದ್ಯಾಭ್ಯಾಸ ಮಾಡಿದ್ದ ದಲಿತ ಸಮುದಾಯದ ಬೆಂದೂರು ಬಾಬು ಎನ್ನುವವರು ಅದಕ್ಕೆ ಅರ್ಜಿ ಹಾಕಿದ್ದರು. ಸಂದರ್ಶನದಲ್ಲಿ ಜಿಲ್ಲಾ ನ್ಯಾಯಾಧೀಶರಿಗೆ ಆತ ಅರ್ಹನೆಂದು ಕಂಡಿತು. ಇದು ಮೇಲ್ಜಾತಿಯವರ ಅಸಹನೆಗೆ ಕಾರಣವಾಯಿತು.</p>



<p>ಆತನನ್ನು ಆ ಹುದ್ದೆಗೆ ಆಯ್ಕೆ ಮಾಡಬಾರದೆಂದು ನ್ಯಾಯಾಲಯದಲ್ಲಿ ಗಲಭೆ ಎಬ್ಬಿಸಿದರು. ದಲಿತರು ಯಾರೂ ಆ ವರೆಗೆ ಜಿಲ್ಲಾ ನ್ಯಾಯಾಲಯದಲ್ಲಿ ನೌಕರಿ ಮಾಡಿರಲಿಲ್ಲ. ನ್ಯಾಯಾಧೀಶರು ಆಕ್ಷೇಪಗಳನ್ನು ಲೆಕ್ಕಿಸದೆ ಬೆಂದೂರು ಬಾಬುಗೆ ನೇಮಕಾತಿಯ ಆದೇಶ ಕೊಟ್ಟೇ ಬಿಟ್ಟರು.</p>



<p>ಕುದ್ಮಲ್ ರಂಗರಾಯರು ಅದೇ ನ್ಯಾಯಾಲಯದಲ್ಲಿ ವಕೀಲರಾಗಿದ್ದರು. ಅವರಿಗೆ ಬೆಂದೂರು ಬಾಬುವಿನ ಆಯ್ಕೆ ಸಮಂಜಸವೆಂದು ತೋರಿತ್ತು. ಅವರು ನ್ಯಾಯಾಧೀಶರ ನಿರ್ಧಾರದ ಪರವಾಗಿದ್ದರು.</p>



<p>ಇದು ಸವರ್ಣೀಯರನ್ನು ಕೆರಳಿಸಿ, ಬ್ರಿಟಿಷ್ ಗವರ್ನರ್ ಗೆ ವಿಷಯ ತಿಳಿಸಿ ನೇಮಕಾತಿಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರಿದರು. ಆ ಸಮಯದಲ್ಲಿ ಬ್ರಿಟಿಷ್ ರೆಸಿಡೆನ್ಸಿ ಮದರಾಸಿನಲ್ಲಿತ್ತು. ಗವರ್ನರ್ ಪರಿಶೀಲನೆಗಾಗಿ ನ್ಯಾಯಾಧೀಶನನ್ನು ಅಲ್ಲಿಗೆ ಕರೆಸಿಕೊಂಡರು.</p>



<p>ಮದರಾಸಿಗೆ ಹೋಗಿದ್ದ ಬ್ರಿಟಿಷ್ ನ್ಯಾಯಾಧೀಶರು ಹಿಂದಕ್ಕೆ ಬಂದು ಕುದ್ಮಲ್ ರಂಗರಾಯರು,ಬೆಂದೂರು ಬಾಬು ಇಬ್ಬರನ್ನೂ ತನ್ನ ಕೊಠಡಿಗೆ ಬರಲು ಹೇಳುತ್ತಾರೆ. ಅವರ ಮುಖದಲ್ಲಿ ಮ್ಲಾನತೆ ಇರುತ್ತದೆ. ತನ್ನ ಪ್ರಯತ್ನ ವಿಫಲವಾಗಿದ್ದನ್ನು ತಿಳಿಸಿ ಬೆಂದೂರು ಬಾಬುಗೆ ನೇಮಕಾತಿ ಪತ್ರ ನೀಡಿದ ಕಾರಣಕ್ಕೆ ತನಗೆ ವರ್ಗಾವಣೆಯಾದ ಪತ್ರವನ್ನು ತೋರಿಸುತ್ತಾರೆ.</p>



<p>“ ನೋಡಿ ರಂಗರಾಯರೇ, ನಾನು ಬಾಬುಗೆ ನೇಮಕಾತಿ ಪತ್ರ ಕಳಿಸಿದ್ದೆ. ಅದನ್ನು ತಡೆ ಹಿಡಿಯಲಾಗಿದೆ. ಅದಲ್ಲದೆ ಅವನು ಇಲ್ಲಿ ನೆಮ್ಮದಿಯಿಂದ ಕೆಲಸ ಮಾಡುವುದು ಕಷ್ಟ. ಅವನು ಉದ್ಧಾರವಾಗಲು ಬಿಡಲಾರರು. ಅವನಿಗೆ ಮತ್ತು ಅವನ ಜಾತಿ ಮಕ್ಕಳಿಗೆ ಅನುಕೂಲವಾಗುವಂತೆ ನೀವೇ ಏನಾದರೂ ಪರಿಹಾರ ಕಂಡುಕೊಳ್ಳಬೇಕು”<br>ನ್ಯಾಯಾಧೀಶರು ಬೇಸರದಿಂದ ಹೇಳುತ್ತಾರೆ. ಈ ಮಾತುಗಳು ರಂಗರಾಯರ ಮೇಲೆ ತೀವ್ರವಾದ ಪರಿಣಾಮವನ್ನು ಬೀರುತ್ತವೆ. ಅವರು ಅನ್ನ, ನೀರು ಬಿಟ್ಟು ಮುಂದೇನು ಮಾಡಬೇಕೆಂದು ಯೋಚಿಸುತ್ತಾರೆ.</p>



<p></p>



<p><img fetchpriority="high" decoding="async" width="600" height="922" class="wp-image-53096" style="width: 600px;" src="https://peepalmedia.com/wp-content/uploads/2025/01/WhatsApp-Image-2025-01-28-at-13.04.04_ee473a85.jpg" alt="" srcset="https://peepalmedia.com/wp-content/uploads/2025/01/WhatsApp-Image-2025-01-28-at-13.04.04_ee473a85.jpg 717w, https://peepalmedia.com/wp-content/uploads/2025/01/WhatsApp-Image-2025-01-28-at-13.04.04_ee473a85-195x300.jpg 195w, https://peepalmedia.com/wp-content/uploads/2025/01/WhatsApp-Image-2025-01-28-at-13.04.04_ee473a85-666x1024.jpg 666w, https://peepalmedia.com/wp-content/uploads/2025/01/WhatsApp-Image-2025-01-28-at-13.04.04_ee473a85-150x231.jpg 150w, https://peepalmedia.com/wp-content/uploads/2025/01/WhatsApp-Image-2025-01-28-at-13.04.04_ee473a85-300x461.jpg 300w, https://peepalmedia.com/wp-content/uploads/2025/01/WhatsApp-Image-2025-01-28-at-13.04.04_ee473a85-696x1070.jpg 696w" sizes="(max-width: 600px) 100vw, 600px" /></p>



<p><strong>ಪರಿವರ್ತನೆಯ ಹರಿಕಾರ</strong><br>ತಮ್ಮಂತೆ ಮನುಷ್ಯರೇ ಆದವರನ್ನು ಪಶುಗಳಿಗಿಂತಲೂ ಕೀಳಾಗಿ ಕಾಣುವ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಕುದ್ಮಲ್ ರಂಗರಾಯರಿಗೆ ಸಹಿಸಲಾರದ ನೋವು ಇರುತ್ತದೆ. ಅವರು ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು, ಜಾತೀಯ ವೈಷಮ್ಯವನ್ನು ದೂರ ಮಾಡಲು, ಅಸ್ಪೃಶ್ಯತೆಯ ಪಿಡುಗನ್ನು ನಿವಾರಣೆ ಮಾಡಲು ತನ್ನ ಬಾಳನ್ನು ಮುಡುಪಾಗಿಡುವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಈ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುವ ಉದ್ದೇಶದಿಂದ, ʼ ಸತ್ಯ- ನ್ಯಾಯ ಎಂದರೆ ಕುದ್ಮಲ್ ರಂಗರಾವ್ʼ ಎನ್ನುವ ಮಟ್ಟಿಗೆ ಹೆಸರು ಮಾಡಿದ್ದ ವಕೀಲಿ ವೃತ್ತಿಯನ್ನು ಬಿಟ್ಟು ಬಿಡುತ್ತಾರೆ.</p>



<p>ಅಕ್ಷರವನ್ನೇ ತಿಳಿಯದ ದಲಿತರ ಪರಿಸ್ಥಿತಿಯನ್ನು ಶಿಕ್ಷಣ ನೀಡುವ ಸುಧಾರಿಸಿಬಹುದೆಂದು ಶಾಲೆಗಳನ್ನು ತೆರೆಯುವ ಯೋಚನೆಯನ್ನು ಮಾಡುತ್ತಾರೆ. ಮಂಗಳೂರಿನ ಚಿಲಿಂಬಿಯಲ್ಲಿ ಹುಲ್ಲು ಛಾವಣಿಯ ಮನೆಯೊಂದನ್ನು ಬಾಡಿಗೆಗೆ ಪಡೆದು ಮೊದಲ ಪ್ರಾಥಮಿಕ ಶಾಲೆ ಆರಂಭಿಸುತ್ತಾರೆ. ಇದು ಸವರ್ಣೀಯರ ಕೆಂಗಣ್ಣಿಗೆ ಗುರಿಯಾಗುತ್ತದೆ. ಶಿಕ್ಷಣದಿಂದ ಆಪತ್ತು ಬರುತ್ತದೆ ಎಂದು ದಲಿತರನ್ನು ಬೆದರಿಸುತ್ತಾರೆ. ಮಕ್ಕಳು ಶಾಲೆಗೆ ಬರದಂತೆ ತಡೆಯುವ ಉದ್ದೇಶದಿಂದ ಶಾಲೆಗೆ ಬರುವ ದಾರಿಯಲ್ಲಿ ಮುನಿಸಿಪಾಲಿಟಿಯ ಮಲವನ್ನು ಸುರಿಯುತ್ತಾರೆ. ದಾರಿಗಡ್ಡವಾಗಿ ಕಲ್ಲುಗಳನ್ನು ಪೇರಿಸಿ ಮಕ್ಕಳನ್ನು ತಡೆಯುತ್ತಾರೆ. ಇದರಿಂದ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ. ರಂಗರಾಯರು ಬೇರೆ ದಾರಿ ಇಲ್ಲದೆ ಶಾಲೆಯನ್ನು ಮುಚ್ಚಬೇಕಾಗುತ್ತದೆ.<br>ಆದರೆ ಈ ಅನುಭವದಿಂದ ರಂಗರಾಯರು ಕಂಗೆಡುವುದಿಲ್ಲ. 1892 ರಲ್ಲಿ ಡಿಪ್ರೆಸ್ಡ್ ಕ್ಲಾಸಸ್ ಮಿಶನ್ (ಡಿ ಎಸ್ ಎಸ್ ) ಎನ್ನುವ ಸಂಸ್ಥೆಯನ್ನು ಹುಟ್ಟು ಹಾಕುತ್ತಾರೆ. ಹಿಂದಿನ ಅನುಭವದಿಂದ ಪಾಠ ಕಲಿತು ಸಮಾನ ಮನಸ್ಸಿನ ಕೆಲವರ ನೆರವನ್ನು ಪಡೆಯುತ್ತಾರೆ. ಸಂಸ್ಥೆಯ ವತಿಯಿಂದ ದಡ್ಡಲಕಾಡು, ಶೇಡಿಗುಡ್ಡೆ, ಅತ್ತಾವರ, ನೇಜಾರು, ಬಾಬುಗುಡ್ಡೆ, ಕಂಕನಾಡಿ, ಮುಲ್ಕಿ, ಬನ್ನಂಜೆ, ಉಡುಪಿ, ಬೋಳೂರು ಮುಂತಾದ ಅವಿಭಜಿತ ದಕ್ಷಿಣ ಕನ್ನಡದ ಹಲವು ಕಡೆಗಳಲ್ಲಿ ಶಾಲೆಗಳನ್ನು ತೆರೆಯುತ್ತಾರೆ.</p>



<p>ಶಾಲೆಗಳನ್ನು ಆರಂಭಿಸಿದರೂ ಹೆಚ್ಚು ವಿದ್ಯಾರ್ಥಿಗಳು ಬರುತ್ತಿರಲಿಲ್ಲ. ಶಾಲೆಯಲ್ಲಿ ಕಲಿಸಲು ಅಧ್ಯಾಪಕರ ಕೊರತೆಯೂ ಇತ್ತು.</p>



<p>ರಂಗರಾಯರು ಮಕ್ಕಳು ಶಾಲೆಗೆ ಬರುವಂತೆ ಮಾಡಲು ಮಕ್ಕಳಿಗೆ ಎರಡು ಪೈಸೆ, ಆರು ಪೈಸೆ ಹಣವನ್ನು ಕೊಟ್ಟು ಪ್ರತಿ ದಿನ ಶಾಲೆಗೆ ತಪ್ಪದೇ ಬರುವಂತೆ ಪ್ರೇರೇಪಿಸುತ್ತಾರೆ. ಸವರ್ಣೀಯರು ಪಾಠ ಮಾಡಲು ಒಪ್ಪದಿದ್ದಾಗ ಕ್ರೈಸ್ತ ಅಧ್ಯಾಪಕರನ್ನು ನೇಮಿಸಿಕೊಳ್ಳುತ್ತಾರೆ.</p>



<p>ಆದರೆ ದೂರದ ಮಕ್ಕಳಿಗೆ ಶಾಲೆಗೆ ದಿನಾ ಬಂದು ಹೋಗಲು ಸಾಧ್ಯವಾಗುತ್ತಿರಲಿಲ್ಲ. ಇದರ ಬಗ್ಗೆ ಯೋಚಿಸಿ ವಸತಿ ಶಾಲೆಗಳನ್ನು ತೆರೆಯುವ ತೀರ್ಮಾನ ಮಾಡುತ್ತಾರೆ. ಆ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯೆಯ ಅಗತ್ಯ ಇಲ್ಲವೆಂದೇ ತಿಳಿದಿದ್ದರು. ರಂಗರಾಯರು ಹುಡುಗಿಯರಿಗೂ ಸಮಾನ ವಿದ್ಯಾಭ್ಯಾಸ ಇರಬೇಕೆಂದು 1899 ರಲ್ಲಿ ಮಂಗಳೂರಿನ ಶೇಡಿಗುಡ್ಡೆಯಲ್ಲಿ ವಿದ್ಯಾರ್ಥಿನಿ ನಿಲಯವನ್ನು ಆರಂಭಿಸುತ್ತಾರೆ. ತಮ್ಮ ಹೆಣ್ಣು ಮಕ್ಕಳನ್ನೂ ಸಾಮಾನ್ಯ ಶಾಲೆಗಳಲ್ಲಿಯೇ ಓದಿಸುತ್ತಾರೆ.</p>



<p>ಮೂಢನಂಬಿಕೆ, ಕೆಟ್ಟ ಪದ್ಧತಿಗಳ ನಿವಾರಿಸಿ, ಸ್ವಚ್ಚತೆಯನ್ನು ತಿಳಿಸಿಕೊಡುವುದಕ್ಕಾಗಿ ರಂಗರಾಯರು ಹಗಲು- ರಾತ್ರಿ ದಲಿತರ ಕೇರಿಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಮದ್ಯಪಾನ ಮಾಡಬೇಡಿ, ಕೆಟ್ಟ ಚಟಗಳಿಂದ ದೂರವಿರಿ ಎಂದು ತಿಳಿವಳಿಕೆ ಹೇಳುತ್ತಿದ್ದರು. ದಲಿತ ಮಕ್ಕಳನ್ನು ಸ್ವತಃ ಮೀಯಿಸಿ, ತೊಡೆಯ ಮೇಲೆ ಕೂರಿಸಿಕೊಳ್ಳುತ್ತಿದ್ದರು. ಸ್ವಚ್ಚತಾ ಕೆಲಸದಲ್ಲಿ ತಾವೇ ಭಾಗಿಯಾಗುತ್ತಿದ್ದರು.</p>



<p>ಕುದ್ಮಲ್ ರಂಗರಾಯರು ಮಾಡುತ್ತಿದ್ದ ಅಸ್ಪೃಶ್ಯತೆ ನಿವಾರಣೆಯ ಕೆಲಸವನ್ನು ಸವರ್ಣೀಯರು ಸಹಿಸಿಕೊಳ್ಳುತ್ತಿರಲಿಲ್ಲ. ಅವರು ಸಾರಸ್ವತ ಬ್ರಾಹ್ಮಣ ಸಮಾಜದ ವಿರೋಧಕ್ಕೆ ಗುರಿಯಾಗಬೇಕಾಗುತ್ತದೆ. ರಂಗರಾಯರು ಸೇರಿದಂತೆ ಅವರ ಕುಟುಂಬದ ಎಲ್ಲರೂ ಬಹಿಷ್ಕಾರಕ್ಕೆ ಒಳಗಾಗುತ್ತಾರೆ.<br>ಸವರ್ಣೀಯರ ಆಕ್ರೋಶ ಇಷ್ಟಕ್ಕೇ ನಿಲ್ಲುವುದಿಲ್ಲ. ಅವರ ಮೂವರು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ತಡೆಯೊಡುತ್ತಾರೆ. ಮಾನಭಂಗದ, ಹತ್ಯೆಯ ಬೆದರಿಕೆಗಳು ಬರುತ್ತವೆ. ಆದರೆ ರಂಗರಾಯರು ತಮ್ಮ ನಿಲುವಿನಿಂದ ಕಿಂಚಿತ್ತೂ ಹಿಂದೆ ಸರಿಯುವುದಿಲ್ಲ.</p>



<p>ಶಿಕ್ಷಣದಿಂದ ಮಾತ್ರವೇ ಅಸ್ಪೃಶ್ಯರ ಉದ್ಧಾರವಾಗದು ಎಂದು ರಂಗರಾಯರಿಗೆ ತಿಳಿದಿರುತ್ತದೆ. ದಲಿತರು ಸ್ವತಂತ್ರವಾಗಿ ಬದುಕಲು ಅವಕಾಶ ಕಲ್ಪಿಸುವ ಯೋಜನೆಗಳನ್ನು ಹಾಕಿಕೊಳ್ಳುತ್ತಾರೆ. ಹೃದಯವಂತಿಕೆ ಇರುವ ಜಮೀನುದಾರರಿಂದ, ವ್ಯವಹಾರಸ್ಥರಿಂದ ಜಮೀನು, ಧನವನ್ನು ದೇಣಿಗೆಯಾಗಿ ಪಡೆಯುತ್ತಾರೆ. ರಂಗರಾಯರ ಕೆಲಸವನ್ನು ಗಮನಿಸಿದ ಬ್ರಿಟಿಷ್ ಸರಕಾರ ಖಾಲಿ ಬಿದ್ದ ಭೂಮಿಯನ್ನು, ಗೋಮಾಳವನ್ನು ಉಚಿತವಾಗಿ ಕೊಡುತ್ತದೆ. ದೇಶಭಕ್ತ ಕಾರ್ನಾಡು ಸದಾಶಿವರಾಯರು ತಮ್ಮ ಆಸ್ತಿಯ ಕೆಲವು ಅಂಶವನ್ನೂ, ಹಣವನ್ನೂ ಕೊಡುತ್ತಾರೆ. ದಾನವಾಗಿ ಪಡೆದ ಭೂಮಿಯನ್ನು ದಲಿತರಿಗೆ ಉಳಲು, ವಾಸಿಸಲು ಯೋಗ್ಯವಾಗುವಂತೆ ಹಂಚಿಕೆ ಮಾಡುವ ರಂಗರಾಯರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಲಿತರು ಸ್ವಂತ ಅಸ್ತಿಯನ್ನು ಹೊಂದಲು ಕಾರಣರಾಗುತ್ತಾರೆ.</p>



<p>ರಂಗರಾಯರು ಪರಿಶಿಷ್ಟ ಸಮುದಾಯದಲ್ಲಿ ಸ್ವ ಉದ್ಯೋಗವನ್ನು ಪ್ರೋತ್ಸಾಹಿಸುವ ಕೆಲಸದಲ್ಲಿ ತೊಡಗುತ್ತಾರೆ. ಬಡಗಿ ಕೆಲಸ, ತೋಟಗಾರಿಕೆ, ನೇಯ್ಗೆ, ರೇಷ್ಮೆ ಹುಳು ಸಾಕಾಣಿಕೆ ಮತ್ತು ಸಣ್ಣ ಕೈಗಾರಿಕೆಗಳಲ್ಲಿ ತರಬೇತಿ ಕೊಡಿಸಿ ಸ್ವಂತ ಉದ್ಯೋಗಳಲ್ಲಿ ತೊಡಗುವಂತೆ ಮಾಡುತ್ತಾರೆ. ಅವರ ಉತ್ಪತ್ತಿಗೆ ಮಾರುಕಟ್ಟೆ ಮತ್ತು ಅವಶ್ಯವಾದ ಹಣಕಾಸಿನ ನೆರವಿಗಾಗಿ ʼ ಕೋರ್ಟ್ ಹಿಲ್ ಆದಿ ದ್ರಾವಿಡ ಸಂಘ ʼ ಎನ್ನುವ ಸಂಸ್ಥೆಯನ್ನು ಸ್ಥಾಪಿಸುತ್ತಾರೆ. ಯುವಕ, ಯುವತಿಯರಿಗೆ ಸಣ್ಣ ಕೈಗಾರಿಕೆಯಲ್ಲಿ, ಕುಶಲ ಕರ್ಮಗಳಲ್ಲಿ ಪರಿಣತಿ ನೀಡುವ ಉದ್ದೇಶದಿಂದ ಐಟಿಐಯ ಸ್ಥಾಪನೆಯೂ ಆಗುತ್ತದೆ.</p>



<p>ಅಸ್ಪೃಶ್ಯರ ಸಮಗ್ರ ಏಳಿಗೆಯಾಗಬೇಕಾದರೆ ರಾಜಕೀಯದಲ್ಲೂ ಅವಕಾಶ ಇರಬೇಕೆನ್ನುವುದು ಅವರ ನಿಲುವಾಗಿತ್ತು. ಪರಿಶಿಷ್ಟರಿಗೆ ಮೀಸಲಾತಿ ನೀಡಬೇಕೆಂದು ಹೋರಾಟ ನಡೆಸುತ್ತಾರೆ. ಇದರ ಫಲವಾಗಿ ಅವರ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ಅಂಗಾರ ಮಾಸ್ತರ್ ಜಿಲ್ಲಾ ಬೋರ್ಡ್ ಗೆ ನೇಮಕಗೊಳ್ಳುತ್ತಾರೆ. ಪ್ರತಿಷ್ಠಿತ ಮಂಗಳೂರು ಮುನಿಸಿಪಾಲಿಟಿಯಲ್ಲಿ ದಲಿತರಾದ ಗೋವಿಂದ ಮಾಸ್ತರ್ ಸದಸ್ಯತ್ವ ಪಡೆಯುತ್ತಾರೆ.<br>ದಲಿತರ, ತಳ ಸಮುದಾಯದರ ಏಳಿಗೆಗಾಗಿ ಎಲ್ಲಾ ರೀತಿಯ ಪ್ರಯತ್ನಗಳನ್ನೂ ಮಾಡಿದ ರಂಗರಾಯರು ತನಗಾಗಿ ಏನನ್ನೂ ಬಯಸಿದವರಲ್ಲ. ಆಗಿನ ಬ್ರಿಟಿಷ್ ಸರಕಾರ ರಂಗರಾಯರು ದೀನ ದಲಿತರಿಗೆ ಮಾಡಿದ ಕೆಲಸವನ್ನು ಗುರುತಿಸಿ ʼ ರಾವ್ ಬಹದ್ದೂರ್ ʼ ಬಿರುದನ್ನೂ ಪದಕ, ಪ್ರಮಾಣ ಪತ್ರಗಳನ್ನೂ ಕೊಟ್ಟು ಅವರನ್ನು ಗೌರವಿಸುತ್ತದೆ. ಈ ಬಿರುದು. ಪ್ರಮಾಣ ಪತ್ರಗಳು ಹೆಮ್ಮೆ, ಅಹಂಕಾರಗಳಿಗೆ ಕಾರಣವಾಗುತ್ತದೆಂದು ಅವೆಲ್ಲವನ್ನೂ ಬೆಂಕಿಗೆ ಹಾಕಿ ನಿಶ್ಚಿಂತರಾಗಿ ಉಳಿದ ಮಹನೀಯರು ಅವರು.</p>



<p>&#8220;ನಾನು ಬದುಕಿರುವಾಗಲೇ ನನ್ನ ಶಾಲೆಯಲ್ಲಿ ಕಲಿತ ಓರ್ವ ದಲಿತ ಸಮುದಾಯದ ಹುಡುಗ ಪದವೀಧರನಾಗಿ ಉನ್ನತ ಉದ್ಯೋಗ ಹೊಂದಿ, ಅವನದೇ ಆದ ಮೋಟಾರು ವಾಹನದಲ್ಲಿ ನಮ್ಮೂರ ರಸ್ತೆಯಲ್ಲಿ ಹೋಗುತ್ತಿರುವಾಗ ರಸ್ತೆಯಲ್ಲಿ ಎದ್ದ ಧೂಳು ನನ್ನ ತಲೆಗೆ ತಾಕಿದರೆ ನನ್ನ ಜನ್ಮ ಸಾರ್ಥಕ&#8221; ಎಂದು ಹೇಳುತ್ತಿದ್ದ ಅವರಿಗೆ ದಲಿತರ ಸರ್ವತೋಮುಖ ಏಳಿಗೆಯ ಕನಸಿತ್ತು.</p>



<figure class="wp-block-image size-large"><img decoding="async" width="1024" height="595" src="https://peepalmedia.com/wp-content/uploads/2025/01/WhatsApp-Image-2025-01-28-at-13.04.04_a50694c8-1024x595.jpg" alt="" class="wp-image-53098" srcset="https://peepalmedia.com/wp-content/uploads/2025/01/WhatsApp-Image-2025-01-28-at-13.04.04_a50694c8-1024x595.jpg 1024w, https://peepalmedia.com/wp-content/uploads/2025/01/WhatsApp-Image-2025-01-28-at-13.04.04_a50694c8-300x174.jpg 300w, https://peepalmedia.com/wp-content/uploads/2025/01/WhatsApp-Image-2025-01-28-at-13.04.04_a50694c8-768x447.jpg 768w, https://peepalmedia.com/wp-content/uploads/2025/01/WhatsApp-Image-2025-01-28-at-13.04.04_a50694c8-150x87.jpg 150w, https://peepalmedia.com/wp-content/uploads/2025/01/WhatsApp-Image-2025-01-28-at-13.04.04_a50694c8-696x405.jpg 696w, https://peepalmedia.com/wp-content/uploads/2025/01/WhatsApp-Image-2025-01-28-at-13.04.04_a50694c8-1068x621.jpg 1068w, https://peepalmedia.com/wp-content/uploads/2025/01/WhatsApp-Image-2025-01-28-at-13.04.04_a50694c8.jpg 1080w" sizes="(max-width: 1024px) 100vw, 1024px" /></figure>



<p>ಕುದ್ಮಲ್ ರಂಗರಾಯರ ಕನಸು ಅವರು ಬದುಕಿದ್ದಾಗ ನೆರವೇರುವುದಿಲ್ಲ. 1928ರ ಜನವರಿ 30ರಂದು ತಮ್ಮ ಅರವತೊಂಬತ್ತನೇ ವಯಸ್ಸಲ್ಲಿ ಅವರು ತೀರಿಕೊಂಡ ಎರಡು ವರ್ಷಗಳ ಬಳಿಕ ಅವರ ಸಂಸ್ಥೆಯಲ್ಲಿ ಓದಿದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಯೊಬ್ಬ ಪದವೀಧರನಾಗಿ ಉನ್ನತ ಉದ್ಯೋಗವನ್ನು ಪಡೆಯುತ್ತಾನೆ.</p>



<p>ಜಡ್ಡುಗಟ್ಟಿದ ಸಮಾಜ</p>



<p>ಕುದ್ಮಲ್ ರಂಗರಾಯರು ತಮ್ಮ ಬದುಕಿನುದ್ದಕ್ಕೂ ಅಸಮಾನತೆಯ, ಅಸ್ಪೃಶ್ಯತೆಯ ವಿರುದ್ಧ ಹೋರಾಟ ಮಾಡಿದರು. ಅದರಿಂದ ಕಷ್ಟ, ನಷ್ಟಗಳನ್ನು ಅನುಭವಿಸಿ ಸಮಾಜದ ಅಸಹನೆಗೂ ಗುರಿಯಾದರು. ಆದರೆ ತಾನು ಕನಸಿದ ಸಮಾಜವನ್ನು ಅವರಿಗೆ ಕಾಣಲಾಗಲಿಲ್ಲ. ಅವರ ನಂತರವಾದರೂ ಅವರ ಆಶೋತ್ತರಗಳು ನೆರವೇರಿದವೇ ? ಎಂದು ನಾವು ಯೋಚಿಸಬೇಕಾಗಿದೆ.</p>



<p>ಅವರು ಹೋರಾಟ ಆರಂಭಿಸಿ ಸುಮಾರು ಹದಿನಾಲ್ಕು ದಶಕಗಳು ಕಳೆದಿವೆ. ಆದರೆ ತಾರತಮ್ಯಗಳು ಅಳಿದಿಲ್ಲ. ದುಃಸ್ವಪ್ನದಂತೆ ಹೊಸ ಹೊಸ ರೀತಿಯಲ್ಲಿ ಸಮಾಜದಲ್ಲಿ ವೈಷಮ್ಯಗಳು ಹೆಚ್ಚುತ್ತಿವೆ. ಜನರ ಉಡುಗೆ ತೊಡುಗೆಗಳಲ್ಲಿ, ರಸ್ತೆ, ಕಟ್ಟಡಗಳ ರಚನೆಯಲ್ಲಿ ಬದಲಾವಣೆ ಕಂಡು ಬಂದರೂ ಸಮಾಜದ ರೀತಿನೀತಿಗಳಲ್ಲಿ, ಪ್ರತಿಯೊಬ್ಬರನ್ನೂ ಸಮಾನವಾಗಿ ಕಾಣುವ ದೃಷ್ಟಿಯಲ್ಲಿ ಪರಿವರ್ತನೆಯಾಗಿದ್ದು ಕಡಿಮೆ.</p>



<p>ದಲಿತರಿಗೆ, ಕೊರಗರಿಗೆ ಕುದ್ಮಲ್ ರಂಗರಾಯರು ಕೊಡಿಸಿದ ಸೈಟ್ ಗಳು, ಉಳುಮೆಯ ಭೂಮಿ ಪರರ ಸೊತ್ತಾಗಿದೆ. ಹಲವು ಆಮಿಷ, ಬೆದರಿಕೆಗಳನ್ನು ಒಡ್ಡಿ ಅದನ್ನು ಅವರಿಂದ ವಶ ಪಡಿಸಿಕೊಳ್ಳಲಾಗಿದೆ. ನಾವೆಲ್ಲಾ ಒಂದೇ ಎನ್ನುವ ತೋರ್ಪಡಿಕೆ ಕೇವಲ ಬೂಟಾಟಿಕೆಯಾಗಿದೆ. ಇತ್ತೀಚೆಗೆ ಕೊರಗ ಸಮುದಾಯದವರು ಮೆರವಣಿಗೆಯಲ್ಲಿ ತೆರಳಿ ತಮ್ಮ ಹಕ್ಕುಗಳಿಗಾಗಿ ಬೇಡಿಕೆ ಸಲ್ಲಿಸಿ, ಹೋರಾಟದ ಸೂಚನೆ ನೀಡಿದುದು ಇದಕ್ಕೆ ಸಾಕ್ಷಿ.</p>



<p>ಮಂಗಳೂರಿನ ನಂದಿಗುಡ್ಡೆಯಲ್ಲಿ ರಂಗರಾಯರ ಸಮಾಧಿಯಿದೆ. ಅದನ್ನು ಮಂಗಳೂರಿನವರು ಮರೆತೇ ಬಿಟ್ಟಿದ್ದಾರೆ. ರಂಗರಾಯರ ಬಗ್ಗೆ ತಿಳಿದಿರುವ ಕೆಲವರು ಅಪರೂಪಕ್ಕೆ ಹೋಗಿ ಬರುವುದುಂಟು. ಅವರ ಆದರ್ಶಗಳಿಗೆ, ಮಾಡಿದ ಕೆಲಸ ಕಾರ್ಯಗಳಿಗೆ, ಸಮಾನತೆಯ ಸಮಾಜದ ಕನಸಿಗೆ ಸಮಾಧಿ ಕಟ್ಟಿರುವಾಗ ಇದೇನು ದೊಡ್ಡ ವಿಷಯವಲ್ಲ!</p>



<figure class="wp-block-image size-large"><img decoding="async" width="1024" height="811" src="https://peepalmedia.com/wp-content/uploads/2025/01/WhatsApp-Image-2025-01-28-at-13.04.03_53323ff0-1024x811.jpg" alt="" class="wp-image-53099" srcset="https://peepalmedia.com/wp-content/uploads/2025/01/WhatsApp-Image-2025-01-28-at-13.04.03_53323ff0-1024x811.jpg 1024w, https://peepalmedia.com/wp-content/uploads/2025/01/WhatsApp-Image-2025-01-28-at-13.04.03_53323ff0-300x238.jpg 300w, https://peepalmedia.com/wp-content/uploads/2025/01/WhatsApp-Image-2025-01-28-at-13.04.03_53323ff0-768x608.jpg 768w, https://peepalmedia.com/wp-content/uploads/2025/01/WhatsApp-Image-2025-01-28-at-13.04.03_53323ff0-150x119.jpg 150w, https://peepalmedia.com/wp-content/uploads/2025/01/WhatsApp-Image-2025-01-28-at-13.04.03_53323ff0-696x551.jpg 696w, https://peepalmedia.com/wp-content/uploads/2025/01/WhatsApp-Image-2025-01-28-at-13.04.03_53323ff0-1068x846.jpg 1068w, https://peepalmedia.com/wp-content/uploads/2025/01/WhatsApp-Image-2025-01-28-at-13.04.03_53323ff0.jpg 1080w" sizes="(max-width: 1024px) 100vw, 1024px" /></figure>



<ul class="wp-block-list">
<li><strong>ಎಂ.ನಾಗರಾಜ ಶೆಟ್ಟಿ </strong></li>
</ul>



<p></p>
]]></content:encoded>
					
		
		
			</item>
		<item>
		<title>ಚಾತುವರ್ಣ ಪದ್ದತಿ ಬಗ್ಗೆ ಮೊದಲು ಪ್ರಶ್ನಿಸಿದ ಪುಲೆ ಅವರ ʼಗುಲಾಮಗಿರಿʼ ಕೃತಿಗೆ 150 ವರ್ಷ</title>
		<link>https://peepalmedia.com/150-years-since-pules-work-gulamagiri-which-first-questioned-the-chatuvarna-system/</link>
		
		<dc:creator><![CDATA[Peepal Media]]></dc:creator>
		<pubDate>Sat, 23 Nov 2024 12:32:37 +0000</pubDate>
				<category><![CDATA[ಅಂಕಣ]]></category>
		<category><![CDATA[Dalit]]></category>
		<category><![CDATA[dalit activists]]></category>
		<category><![CDATA[Dalit assault]]></category>
		<category><![CDATA[Dalit community]]></category>
		<category><![CDATA[Dalit couple]]></category>
		<category><![CDATA[Dalit cultural resistance]]></category>
		<category><![CDATA[dalit dalitlivesmatter dalits]]></category>
		<category><![CDATA[Dalit fighters]]></category>
		<category><![CDATA[Dalit guest lecture]]></category>
		<category><![CDATA[Dalit leaders M. Devdas]]></category>
		<category><![CDATA[dalit litterature]]></category>
		<category><![CDATA[Dalit organizations]]></category>
		<category><![CDATA[dalitanews]]></category>
		<category><![CDATA[dalith]]></category>
		<category><![CDATA[dalith women]]></category>
		<category><![CDATA[dalith youth]]></category>
		<category><![CDATA[dalitha samskruthika prasthirodha]]></category>
		<category><![CDATA[daliths]]></category>
		<category><![CDATA[india]]></category>
		<category><![CDATA[jyotibhapule]]></category>
		<category><![CDATA[kannada]]></category>
		<category><![CDATA[maharastra]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[pule]]></category>
		<category><![CDATA[writing]]></category>
		<guid isPermaLink="false">https://peepalmedia.com/?p=49514</guid>

					<description><![CDATA[1873 ರಲ್ಲಿ ಮಹಾತ್ಮ ಜ್ಯೋತಿಬಾ ಫುಲೆಯವರು ರಚಿಸಿದ ʼ ಗುಲಾಮ ಗಿರಿʼ ಕೃತಿಗೆ 150 ವರ್ಷ ತುಂಬಿತು. ಫುಲೆಯವರ ʼ ಗುಲಾಮಗಿರಿʼ ಯ ಮೊದಲು ಜಾತಿ ಪದ್ಧತಿಯನ್ನು ವಿರೋಧಿಸಿದ ಯಾವ ಪುಸ್ತಕವೂ ಪ್ರಕಟವಾಗಿರಲಿಲ್ಲ. ʼ ಗುಲಾಮಗಿರಿʼ ಪುಸ್ತಕದಲ್ಲಿ ಚಾತುರ್ವರ್ಣ್ಯ ಪದ್ಧತಿಯನ್ನು ಕಟುವಾದ ಶಬ್ದಗಳಲ್ಲಿ ಟೀಕಿಸುವ ಜ್ಯೋತಿಬಾ ಫುಲೆಯವರು ಶೂದ್ರರು ಮತ್ತು ಅತಿ ಶೂದ್ರರಲ್ಲಿ ಎಚ್ಚರವನ್ನೂ, ಸ್ವಾತಂತ್ರ್ಯ, ಸಮಾನತೆಯ ಬಯಕೆಯನ್ನೂ ಹುಟ್ಟು ಹಾಕಿದ್ದರು. ʼ ಗುಲಾಮಗಿರಿ- 150 ʼ ಎನ್ನುವ ಅರ್ಥಪೂರ್ಣ ಕಾರ್ಯಕ್ರಮವನ್ನು ಇತ್ತೀಚೆಗೆ ‌ʼ ನವಯಾನ ಟ್ರಸ್ಟ್ [&#8230;]]]></description>
										<content:encoded><![CDATA[
<ul class="wp-block-list">
<li><strong>ಎಂ ನಾಗರಾಜ ಶೆಟ್ಟಿ</strong></li>
</ul>



<p>1873 ರಲ್ಲಿ ಮಹಾತ್ಮ ಜ್ಯೋತಿಬಾ ಫುಲೆಯವರು ರಚಿಸಿದ ʼ ಗುಲಾಮ ಗಿರಿʼ ಕೃತಿಗೆ 150 ವರ್ಷ ತುಂಬಿತು. ಫುಲೆಯವರ ʼ ಗುಲಾಮಗಿರಿʼ ಯ ಮೊದಲು ಜಾತಿ ಪದ್ಧತಿಯನ್ನು ವಿರೋಧಿಸಿದ ಯಾವ ಪುಸ್ತಕವೂ ಪ್ರಕಟವಾಗಿರಲಿಲ್ಲ. ʼ ಗುಲಾಮಗಿರಿʼ ಪುಸ್ತಕದಲ್ಲಿ ಚಾತುರ್ವರ್ಣ್ಯ ಪದ್ಧತಿಯನ್ನು ಕಟುವಾದ ಶಬ್ದಗಳಲ್ಲಿ ಟೀಕಿಸುವ ಜ್ಯೋತಿಬಾ ಫುಲೆಯವರು ಶೂದ್ರರು ಮತ್ತು ಅತಿ ಶೂದ್ರರಲ್ಲಿ ಎಚ್ಚರವನ್ನೂ, ಸ್ವಾತಂತ್ರ್ಯ, ಸಮಾನತೆಯ ಬಯಕೆಯನ್ನೂ ಹುಟ್ಟು ಹಾಕಿದ್ದರು.</p>



<p>ʼ ಗುಲಾಮಗಿರಿ- 150 ʼ ಎನ್ನುವ ಅರ್ಥಪೂರ್ಣ ಕಾರ್ಯಕ್ರಮವನ್ನು ಇತ್ತೀಚೆಗೆ ‌ʼ ನವಯಾನ ಟ್ರಸ್ಟ್ ʼ ಹಮ್ಮಿಕೊಂಡು ಈ ಪುಸ್ತಕವನ್ನು ನೆನಪಿಸುವ ಮತ್ತು ಫುಲೆಯವರ ಸಾಧನೆಗಳ ಬಗ್ಗೆ ಮನನ ಮಾಡುವ ಅವಕಾಶವನ್ನು ಒದಗಿಸಿತು. ಬೆಂಗಳೂರಲ್ಲಿ ಅರಂಭಗೊಂಡ ʼ ನವಯಾನ ಟ್ರಸ್ಟ್‌ ʼ ತನ್ನ ಮೊದಲ ಕಾರ್ಯಕ್ರಮವಾಗಿ ಇಂತಹ ಒಂದು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಶ್ಲಾಘನೀಯ.<img loading="lazy" decoding="async" width="800" height="600" class="wp-image-49515" style="width: 800px;" src="https://peepalmedia.com/wp-content/uploads/2024/11/WhatsApp-Image-2024-11-22-at-11.44.52_c7f33966.jpg" alt="" srcset="https://peepalmedia.com/wp-content/uploads/2024/11/WhatsApp-Image-2024-11-22-at-11.44.52_c7f33966.jpg 1599w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_c7f33966-300x225.jpg 300w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_c7f33966-1024x768.jpg 1024w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_c7f33966-768x576.jpg 768w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_c7f33966-1536x1153.jpg 1536w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_c7f33966-150x113.jpg 150w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_c7f33966-696x522.jpg 696w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_c7f33966-1068x802.jpg 1068w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_c7f33966-265x198.jpg 265w" sizes="auto, (max-width: 800px) 100vw, 800px" /></p>



<p>ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಕೃತಿಯ ವಿವರಗಳನ್ನು ಪ್ರಸ್ತಾಪಿಸಿ, ಪ್ರಸ್ತುತ ಸಂದರ್ಭಕ್ಕೆ ಅನುಸಾರವಾಗಿ ಹಲವು ಪ್ರಶ್ನೆಗಳನ್ನು ಎತ್ತಿದರು. ʼ ಗುಲಾಮಗಿರಿ ʼ ಪ್ರಕಟವಾದ ಸಂದರ್ಭ, ಅದರಲ್ಲಿ ಬಳಕೆಯಾಗಿರುವ ಕಟು ಮಾತುಗಳು, ಪುರಾಣಗಳ ಅರ್ಥೈಸುವಿಕೆ, ಮಿತ್‌ ಗಳ ಅಗತ್ಯ ಇವುಗಳ ಬಗ್ಗೆ ಮಾತು ಬಂತು. ʼ ಗುಲಾಮಗಿರಿ ʼ ಯ ಓದು ಮತ್ತು ಅದನ್ನು ವರ್ತಮಾನಕ್ಕೆ ಹೊಂದಿಸಿಕೊಳ್ಳುವುದರ ಬಗೆಗೆ ಚಿಂತನೆ ಅಗತ್ಯವಿದೆ ಎನ್ನುವ ಮಾತುಗಳು ಕೇಳಿ ಬಂದವು. ಈ ಕುರಿತು ನಿರ್ದುಷ್ಟವಾಗಿ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಮತ್ತು ಅದರ ಅಗತ್ಯ ಇಲ್ಲದಿದ್ದರೂ ಜಾತಿ ಪದ್ಧತಿ ತನ್ನೆಲ್ಲ ಕೆಡುಕುಗಳೊಂದಿಗೆ, ಕಂಡರೂ ಕಾಣದಂತೆ ಸವಾರಿ ಮಾಡುತ್ತಿರುವ ಹೊತ್ತಿನಲ್ಲಿ ʼ ಗುಲಾಮ ಗಿರಿʼ ಕೃತಿಯನ್ನು ಅವಲೋಕಿಸುವ ಮತ್ತು ಅದನ್ನು ಸದ್ಯಕ್ಕೆ ಹೊಂದಿಸಿಕೊಳ್ಳುವ ಅಗತ್ಯವಂತೂ ಇದೆ ಎನ್ನುವುದರಲ್ಲಿ ಸಂದೇಹವಿಲ್ಲ.</p>



<p>ಶೂದ್ರ, ಅತಿ ಶೂದ್ರರ ಗುಲಾಮಗಿರಿ</p>



<p>ಜ್ಯೋತಿಬಾ ಫುಲೆಯವರನ್ನು ಬಾಬಾ ಸಾಹೇಬ್ ಅಂಬೇಡ್ಕರ್ ತನ್ನ ಮೂರನೆಯ ಗುರುವೆಂದು ತಿಳಿದುಕೊಂಡಿದ್ದರು. ಭಗವಾನ್ ಬುದ್ಧ, ಸಂತ ಕಬೀರ ಮತ್ತು ಫುಲೆಯವರನ್ನು ತನ್ನ ಗುರುಗಳೆಂದು ತಿಳಿದಿದ್ದ ಬಾಬಾ ಸಾಹೇಬರಿಗೆ ʼ ಬುದ್ಧ ಮತ್ತು ಧಮ್ಮʼ ಕೃತಿಯ ನಂತರ ಫುಲೆಯವರ ಜೀವನ ಚರಿತ್ರೆ ಬರೆಯುವ ಉದ್ದೇಶವಿತ್ತಂತೆ. ಅವರ ಅನಾರೋಗ್ಯದ ಕಾರಣ ಅದು ಕೈಗೂಡಲಿಲ್ಲ. ಬಾಬಾಸಾಹೇಬರ ತಂದೆ ರಾಮ್ ಜಿ ಸತ್ಪಾಲ್ ರವರಿಗೆ ಫುಲೆ ಮತ್ತು ಅವರ ʼ ಸತ್ಯ ಶೋಧಕ ಸಮಾಜʼ ಗೋವಿಂದ ರಾನಡೆಯವರ ಮೂಲಕ ತಿಳಿದಿತ್ತು. ಇದರಿಂದ ಬಾಲ್ಯದಲ್ಲೇ ಬಾಬಾ ಸಾಹೇಬರು ಫುಲೆಯವರ ವಿಚಾರ ಮತ್ತು ವಿಧಾಯಕ ಕೆಲಸಗಳ ಅರಿವು ಪಡೆದಿದ್ದರು. ಬಾಬಾ ಸಾಹೇಬರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಜ್ಯೋತಿ ಬಾ ಫುಲೆಯವರ ಪ್ರಭಾವ ಇದ್ದೇ ಇತ್ತು.</p>



<p>ಹಾಗಿದ್ದರೂ ಬಾಬಾ ಸಾಹೇಬರು ಹಲವು ವಿಷಯಗಳಲ್ಲಿ ಫುಲೆಯವರಿಗಿಂತ ಭಿನ್ನವಾದ ನಿಲುವನ್ನು ತಳೆಯುತ್ತಾರೆ. ಅವರ ಅಭಿಪ್ರಾಯಗಳನ್ನು ಒಪ್ಪದ ಸಂದರ್ಭಗಳಲ್ಲಿ ಖಂಡಿಸುವುದಿಲ್ಲ. ಆದರೆ ತಮ್ಮ ವ್ಯಾಖ್ಯಾನವನ್ನು ಮಂಡಿಸಲು ಹಿಂಜರಿಯುವುದಿಲ್ಲ. ಇದು ಗುರುವನ್ನು ಗೌರವಿಸುವ ಕ್ರಮ; ಸತ್ಯವೆಂದು ತೋಚಿದ್ದನ್ನು ಹೇಳುವ ಮತ್ತು ಸರಿಯಾದುದನ್ನು ಕಂಡುಕೊಳ್ಳುವ ಸಮರ್ಪಕವಾದ ದಾರಿ. ಬಾಬಾ ಸಾಹೇಬರು ಫುಲೆಯವರ ಸಾಮಾಜಿಕ ಸುಧಾರಣಾ ಕಾರ್ಯಗಳು, ಜಾತಿ ನಿರ್ಮೂಲನ ಆಂದೋಲನವನ್ನು ಮುನ್ನಡೆಸಿದರು. ಅವರ ʼ ಜಾತಿ ವಿನಾಶʼ ( Annihilation of caste ) ಫುಲೆಯವರ ʼ ಗುಲಾಮಗಿರಿʼಯ ಮುಂದುವರಿದ ಮತ್ತು ಖಚಿತ ವೈಚಾರಿಕ ನೆಲೆಯ ಕೃತಿಯೇ ಆಗಿದೆ. ಅಂಬೇಡ್ಕರ್ ರವರ ʼ ಜಾತಿ ವಿನಾಶʼದ ಮೊದಲು ʼ ಗುಲಾಮಗಿರಿʼ ಯನ್ನು ಓದುವುದು ಓದುವಿಕೆಯ ಸರಿಯಾದ ರೀತಿಯೇ ಆಗಿದೆ.</p>



<p>ಸಮಾಜದಲ್ಲಿ ಯಾರೂ ಕನಿಷ್ಠರಲ್ಲ, ಶ್ರೇಷ್ಠರೂ ಅಲ್ಲ; ಪ್ರತಿಯೊಬ್ಬನೂ ಸಮಾನ. ಒಬ್ಬನ ಹಿತ ಮತ್ತೊಬ್ಬನಿಗೆ ಮಾರಕವಾಗಬಾರದು ಎನ್ನುವ ಖಚಿತ ಅಭಿಪ್ರಾಯವನ್ನು ಹೊಂದಿದ್ದ ಜ್ಯೋತಿಬಾರವರು ಕೆಳಜಾತಿಯವರನ್ನು ಅಜ್ಞಾನ, ಅನಕ್ಷರತೆ, ಮೂಢನಂಬಿಕೆಗಳಿಂದ ಪಾರು ಮಾಡಲು ಕಂಕಣಬದ್ಧರಾಗಿದ್ದರು. ಅವರಿಗೆ ಬ್ರಾಹ್ಮಣರ ಮಾನಸಿಕ ದಾಸ್ಯದಿಂದ ಶೋಷಿತ ಜಾತಿಗಳನ್ನು ಬಿಡುಗಡೆ ಮಾಡುವುದು ಅತಿ ಮುಖ್ಯವೆಂದು ತೋಚಿತ್ತು. ಅವರು ಜನರನ್ನು ಸುಲಭವಾಗಿ ತಲುಪುವ ಮಾರ್ಗಗಳನ್ನು ಅನ್ವೇಷಿಸಿದರು. ಮರಾಠಿಯಲ್ಲಿ ಜನಪ್ರಿಯವಾದ ಲಾವಣಿ, ಅಭಂಗ, ಕಾವ್ಯಗಳ ಮುಖಾಂತರ ಜನರಲ್ಲಿ ತಿಳಿವಳಿಕೆಯನ್ನು ಮೂಡಿಸುವ ಪ್ರಯತ್ನ ಮಾಡಿದರು.</p>



<p>1955 ರಲ್ಲಿ ʼ ತೃತೀಯ ರತ್ನʼ ಎನ್ನುವ ನಾಟಕವನ್ನು ಬರೆದು ಮೂಢನಂಬಿಕೆ, ಅಂಧಶ್ರದ್ಧೆಗಳನ್ನು ನೇರವಾಗಿ ವಿರೋಧಿಸಿದ್ದರು. ಅವರು ಶಿವಾಜಿ ಮಹಾರಾಜರ ಸಮಾಧಿಗೆ ಒದಗಿದ ದುರ್ಗತಿಗೆ ಮರುಗಿ ಬರೆದ ಲಾವಣಿ ಮತ್ತು ಪರಶುರಾಮನನ್ನು ಕುರಿತ ಸುಳ್ಳುಗಳನ್ನು ಬಯಲು ಮಾಡುವ ಲಾವಣಿಗಳು ಜನಪ್ರಿಯವಾಗಿದ್ದವು. ಧಾರ್ಮಿಕ ಮತ್ತು ಅಂಧಶೃದ್ಧೆಯ ಜನರನ್ನು ಪೀಡಿಸುವ ಕುಯುಕ್ತಿಯನ್ನು ಖಂಡಿಸುವ ಕಾವ್ಯ ಸಂಗ್ರಹ ʼ ಬ್ರಾಹ್ಮಣರ ಕುಯುಕ್ತಿʼ 1869 ರಲ್ಲಿ ಪ್ರಕಟವಾದಾಗ ಫುಲೆಯವರು ಹಲವರ ದುರಾಗ್ರಹಕ್ಕೆ ಪಾತ್ರರಾಗಬೇಕಾಯಿತು.</p>



<p>ಆ ಬಳಿಕ ಫುಲೆಯವರು ಮಹತ್ವದ, ಕ್ರಾಂತಿಕಾರಕ ಗ್ರಂಥವೊಂದನ್ನು ಬರೆಯಲು ತೀರ್ಮಾನಿಸಿದರು. 1872 ರ ಡಿಸೆಂಬರ್ ತಿಂಗಳಲ್ಲಿ ಕೆಲವು ಅಧ್ಯಾಯಗಳನ್ನು ಬರೆದ ಆ ಗ್ರಂಥ ಜೂನ್ 1873 ರಲ್ಲಿ ಪೂರ್ಣಗೊಂಡಿತು. ವೈದಿಕರ ಗ್ರಂಥ, ಶಾಸ್ತ್ರಗಳನ್ನು ನಿರಾಕರಿಸಿದ, ಅವತಾರಗಳನ್ನು ಪ್ರಶ್ನಿಸಿದ, ಜಾತಿಪದ್ಧತಿಯನ್ನು ಸ್ಪಷ್ಟ ಮಾತುಗಳಲ್ಲಿ ನಿರಾಕರಿಸಿದ, ʼ ಗುಲಾಮಗಿರಿʼ ಗ್ರಂಥ ಜಾತಿ ನಿರ್ಮೂಲನೆಯ ಆಂದೋಲನಕ್ಕೆ ಪ್ರಬಲ ಅಸ್ತ್ರವಾಗಿ ಪರಿಣಮಿಸಿತು.</p>



<figure class="wp-block-image size-large"><img loading="lazy" decoding="async" width="1024" height="1024" src="https://peepalmedia.com/wp-content/uploads/2024/11/WhatsApp-Image-2024-11-22-at-11.44.51_69434e23-1024x1024.jpg" alt="" class="wp-image-49516" srcset="https://peepalmedia.com/wp-content/uploads/2024/11/WhatsApp-Image-2024-11-22-at-11.44.51_69434e23-1024x1024.jpg 1024w, https://peepalmedia.com/wp-content/uploads/2024/11/WhatsApp-Image-2024-11-22-at-11.44.51_69434e23-300x300.jpg 300w, https://peepalmedia.com/wp-content/uploads/2024/11/WhatsApp-Image-2024-11-22-at-11.44.51_69434e23-150x150.jpg 150w, https://peepalmedia.com/wp-content/uploads/2024/11/WhatsApp-Image-2024-11-22-at-11.44.51_69434e23-768x768.jpg 768w, https://peepalmedia.com/wp-content/uploads/2024/11/WhatsApp-Image-2024-11-22-at-11.44.51_69434e23-696x696.jpg 696w, https://peepalmedia.com/wp-content/uploads/2024/11/WhatsApp-Image-2024-11-22-at-11.44.51_69434e23-1068x1068.jpg 1068w, https://peepalmedia.com/wp-content/uploads/2024/11/WhatsApp-Image-2024-11-22-at-11.44.51_69434e23.jpg 1080w" sizes="auto, (max-width: 1024px) 100vw, 1024px" /></figure>



<p>ಇಂಗ್ಲಿಷ್ ಮತ್ತು ಮರಾಠಿ ಎರಡೂ ಭಾಷೆಗಳಲ್ಲಿ ʼಗುಲಾಮಗಿರಿ ʼ ಗೆ ಪ್ರಾರಂಭಿಕ ಮಾತುಗಳನ್ನು ಬರೆದ ಫುಲೆಯವರು ಮರಾಠಿಯ ಮುನ್ನುಡಿಯಲ್ಲಿ ತಮ್ಮ ಉದ್ದೇಶವನ್ನು ಸ್ಪಷ್ಟ ಮಾತುಗಳಲ್ಲಿ ಹೇಳುತ್ತಾರೆ. ʼ ಈ ಪುಸ್ತಕದ ಮೂಲ ಉದ್ದೇಶ ಶೂದ್ರರಿಗೆ ಮತ್ತು ಅತಿ ಶೂದ್ರರಿಗೆ, ಬ್ರಾಹ್ಮಣರ ಸ್ವಾಧೀನದಲ್ಲಿ ಶತ ಶತಮಾನಗಳ ಕಾಲ ಅವರು ಅನುಭವಿಸಿದ ದೀನಾವಸ್ಥೆಯ, ಕಷ್ಟ ಪರಂಪರೆಯ ಅರಿವು ಮೂಡಿಸುವುದಾಗಿದೆ. ಆ ಮೂಲಕ ಅವರು ಇನ್ನು ಮುಂದೆ ಬ್ರಾಹ್ಮಣರ, ಭಟ್ಟರ ದೌರ್ಜನ್ಯದಿಂದ ಬಿಡುಗಡೆ ಪಡೆಯುವ ಮಾರ್ಗವನ್ನು ಆಳವಾಗಿ ಚಿಂತಿಸಿ ಕಂಡುಕೊಳ್ಳಬೇಕುʼ.</p>



<p>ʼ ಗುಲಾಮಗಿರಿʼ ಪುಸ್ತಕದಲ್ಲಿ ಫುಲೆಯವರು ಬ್ರಾಹ್ಮಣ್ಯ ಎನ್ನುವ ಶಬ್ದದ ಬದಲು ಬ್ರಾಹ್ಮಣರು ( Brahmins) ಮತ್ತು ಪುರೋಹಿತದ ಬದಲಾಗಿ ಭಟ್ಟ (Bhats) ಎನ್ನುವ ಪದವನ್ನು ಉಪಯೋಗಿಸುತ್ತಾರೆ. ಇಂಗ್ಲಿಷ್ ಮತ್ತು ಮರಾಠಿ ಎರಡೂ ಭಾಷೆಗಳಲ್ಲಿ ಅವರಿಗೆ ಹಿಡಿತ ಇದ್ದರೂ ʼ ಗುಲಾಮಗಿರಿ ʼ ಯಲ್ಲಿ ಉಪಯೋಗಿಸಿದ ಮರಾಠಿ ಜನರ ಆಡು ಭಾಷೆಯಾಗಿದ್ದು, ಹೆಚ್ಚಿನ ಜನರನ್ನು ತಲುಪುವ ಉದ್ದೇಶದಿಂದ ಅದರಲ್ಲಿ ಗ್ರಾಮ್ಯವನ್ನೂ ಹೇರಳವಾಗಿ ಬಳಸಿದ್ದಾರೆ.</p>



<p>ʼ ಗುಲಾಮಗಿರಿʼ ಪುಸ್ತಕದಲ್ಲಿ ಜ್ಯೋತಿಬಾ ಮತ್ತು ದೋಂಡಿಬಾ ಎನ್ನುವ ಇಬ್ಬರು ವ್ಯಕ್ತಿಗಳ ನಡುವೆ ಸಂಭಾಷಣೆ ನಡೆಯುತ್ತದೆ. ಫುಲೆಯವರು ನಾಟಕಗಳನ್ನು ಬರೆದು, ನಟಿಸಿ, ನಿರ್ದೇಶಿಸಿದವರಾಗಿದ್ದರಿಂದ ಸಂಭಾಷಣೆ ಕಲೆ ಅವರಿಗೆ ಒದಗಿ ಬಂದಿದೆ. ದೋಂಡಿಬಾ ವ್ಯಕ್ತ ಪಡಿಸುವ ಅನುಮಾನಗಳಿಗೆ ನೇರವಾಗಿ, ತಮಾಷೆಯಾಗಿ, ಕಟುವಾಗಿ ಉತ್ತರಿಸುವ ಜ್ಯೋತಿಬಾ ನಿರ್ದಾಕ್ಷಿಣ್ಯವಾಗಿ ಪುರಾಣ, ಶಾಸ್ತ್ರ ಗ್ರಂಥಗಳನ್ನು ಜಾಲಾಡುತ್ತಾರೆ. ದಶಾವತಾರದ ಕಲ್ಪನೆಗಳನ್ನು ಒಂದೊಂದಾಗಿ ವಿಘಟಿಸುವ ಫುಲೆಯವರು ಪರಶುರಾಮನ ಕುರಿತು ತೀವ್ರ ಆಕ್ರೋಶವನ್ನು ವ್ಯಕ್ತ ಪಡಿಸುತ್ತಾರೆ. ಇಪ್ಪತ್ತೊಂದು ಸಲ ಭೂ ಪ್ರದಕ್ಷಿಣೆ ಮಾಡಿ ಹುಡುಕಿ, ಹುಡುಕಿ ಕ್ಷತ್ರಿಯರನ್ನು ನಿರ್ನಾಮ ಮಾಡಿದ್ದಲ್ಲದೆ, ನವ ಜಾತ ಶಿಶುಗಳನ್ನೂ ಬರ್ಬರವಾಗಿ ಹತ್ಯೆ ಮಾಡಿದ್ದನ್ನು, ಗರ್ಭಿಣಿಯರನ್ನು ಅಂಡಲೆಸಿ ಶಿಶು ಹತ್ಯೆ ಮಾಡಿದ್ದನ್ನು ಅತಿ ಕ್ರೂರವಾದ ಕೊಲೆಗಡುಕತನ ಎಂದು ಹೇಳುತ್ತಾರೆ. ಬಾಬಾ ಸಾಹೇಬರು ಮೂಲತಃ ಶೂದ್ರರು ಕ್ಷತ್ರಿಯರಾಗಿದ್ದರು ಎನ್ನುವ ಫುಲೆಯವರ ಸಿದ್ಧಾಂತವನ್ನು ಒಪ್ಪಿರುವುದಲ್ಲದೆ ಈ ಕುರಿತು ವಿವರವಾಗಿ ಬರೆದಿದ್ದಾರೆ.</p>



<p>ಅಂತೆಯೇ ಫುಲೆಯವರು ನ್ಯಾಯವಂತಿಕೆಯಿಂದ ರಾಜ್ಯವಾಳುತ್ತಿದ್ದ ಬಲಿಯನ್ನು ಅನ್ಯಾಯವಾಗಿ ರಾಜ್ಯಭ್ರಷ್ಟನಾಗಿ ಮಾಡಿದ್ದನ್ನು ಖಂಡಿಸುತ್ತಾರೆ. ಅವರ ಪ್ರಕಾರ ಬಲಿ ರಾಜ್ಯ ಸ್ವಾತಂತ್ರ್ಯ, ಸಮಾನತೆಗಳ ರಾಜ್ಯ. ಅವತಾರ ಕಲ್ಪನೆಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವುದೇ ಫುಲೆಯವರ ಉದ್ದೇಶವಾಗಿತ್ತು. ಮಹಾಭಾರತ ರಚನೆಯಾಗುವುದಕ್ಕಿಂತ ಮೊದಲು ಅವತಾರಗಳ ಪ್ರಸ್ತಾಪ ಇರಲಿಲ್ಲ; ಧಾರ್ಮಿಕ ಹತೋಟಿಯನ್ನು ಉದ್ದೇಶದಿಂದ ಪುರಾಣಗಳಲ್ಲಿ ಅವುಗಳನ್ನು ಸೇರ್ಪಡೆಗೊಳಿಸಿರಬಹುದೆಂದು ಅವರು ಅಭಿಪ್ರಾಯ ಪಡುತ್ತಾರೆ.</p>



<p>ʼ ಗುಲಾಮಗಿರಿʼ ಪುಸ್ತಕದ ಕಠೋರತೆಗೆ ಪೇಶ್ವೆಯವರ ಕಾಲದ ದುಷ್ಟ ಆಡಳಿತ ಪದ್ಧತಿಯೇ ಕಾರಣ ಎನ್ನಬಹುದು. ಫುಲೆಯವರು ನೇರವಾಗಿ ಬ್ರಾಹ್ಮಣರ ಟೀಕೆ ಮಾಡಿದ್ದರೂ ಅವರ ಗುರಿ ಚಿತ್ಪಾವನ ಬ್ರಾಹ್ಮಣರು ಎನ್ನಲಾಗುತ್ತದೆ. ಬಾಳಾಜಿ ವಿಶ್ವನಾಥ ಪೇಶ್ವೆಯ ಕಾಲದಲ್ಲಿ ಚಿತ್ಪಾವನ‌ ಬ್ರಾಹ್ಮಣರು ಇನ್ನಿತರ ಬ್ರಾಹ್ಮಣ ಪಂಥಗಳನ್ನು ಬದಿಗೊತ್ತಿ ಶೂದ್ರರನ್ನು, ಅತಿ ಶೂದ್ರರನ್ನು ಅತಿ ಕ್ರೂರವಾಗಿ ನಡೆಸಿಕೊಂಡಿದ್ದಲ್ಲದೆ ಎಲ್ಲಾ ರೀತಿಯ ವೈಭೋಗಗಳನ್ನೂ ಪಡೆದುಕೊಂಡಿದ್ದರು.</p>



<figure class="wp-block-image size-full"><img loading="lazy" decoding="async" width="641" height="973" src="https://peepalmedia.com/wp-content/uploads/2024/11/WhatsApp-Image-2024-11-22-at-11.44.52_254617b4.jpg" alt="" class="wp-image-49517" srcset="https://peepalmedia.com/wp-content/uploads/2024/11/WhatsApp-Image-2024-11-22-at-11.44.52_254617b4.jpg 641w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_254617b4-198x300.jpg 198w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_254617b4-150x228.jpg 150w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_254617b4-300x455.jpg 300w" sizes="auto, (max-width: 641px) 100vw, 641px" /></figure>



<p>ಶೂದ್ರರ, ಅತಿ ಶೂದ್ರರ ದೀನಾವಸ್ಥೆಯನ್ನು ಕಣ್ಣಾರೆ ಕಂಡು ಅನುಭವಿಸಿದ್ದ ಫುಲೆಯವರಿಗೆ ಬರವಣಿಗೆ ಅವರನ್ನು ವಿಮೋಚನೆಯ ದಾರಿಯಲ್ಲಿ ಕೊಂಡೊಯ್ಯವ ಮಾರ್ಗಗಳಲ್ಲಿ ಒಂದಾಗಿ ಕಂಡಿತ್ತು. ಸಮಾನತೆಯನ್ನು, ಸ್ವಾತಂತ್ರ್ಯವನ್ನು ನೀಡುವ ಯಾವುದೇ ಗ್ರಂಥವಾದರೂ ತಾನದನ್ನು ಗೌರವಿಸುತ್ತೇನೆ ಎಂದು ಹೇಳಿದ ಫುಲೆಯವರು ನಾನಾ ರೀತಿಯ ಮೂಢನಂಬಿಕೆ, ಅಜ್ಞಾನದಲ್ಲಿ ತೊಳಲಾಡುತ್ತಿರುವ ಶೂದ್ರ, ಅತಿ ಶೂದ್ರ ಬಂಧುಗಳಲ್ಲಿ ಒಬ್ಬನಾದರೂ ವೈದಿಕರ ದಾಸ್ಯದಿಂದ ಮುಕ್ತನಾಗಲು ಬಯಸಿ ತನ್ನ ಹೆಸರು ತಿಳಿಸಿ ಪತ್ರ ಬರೆದರೆ ನಾನು ಹೆಮ್ಮೆ ಪಡುತ್ತೇನೆ, ಆತನಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದರು.</p>



<p>ಸಮಾಜ ಸುಧಾರಣೆಗಳು</p>



<p>ಫುಲೆಯವರು ಶಾಲೆಯಲ್ಲಿ ಓದಿದ್ದು ಕಡಿಮೆಯೆಂದೇ ಹೇಳಬಹುದು.ಅವರ ಪ್ರಾಥಮಿಕ ಶಿಕ್ಷಣ, ತಂದೆ ಗೋವಿಂದ ರಾಯರಿಗೆ ಕೆಲವರು ದುರ್ಬೋಧೆ ಮಾಡಿದ್ದರಿಂದ ಅರ್ಧದಲ್ಲೇ ನಿಂತಿತ್ತು. ಮತ್ತೆ ಮೂರು ವರ್ಷಗಳ ನಂತರ ತಂದೆ ಮನಸ್ಸು ಬದಲಾಯಿಸಿ ಫುಲೆಯವರನ್ನು ಶಾಲೆಗೆ ಸೇರಿಸಿದರು. ಅವರು ಪಡೆದ ಶಿಕ್ಷಣ, ಇಂಗ್ಲಿಷ್ ಜ್ಞಾನ ಅವರಿಗೆ ಒಳ್ಳೆಯ ನೌಕರಿಯನ್ನು ಖಂಡಿತ ಒದಗಿಸುತ್ತಿತ್ತು. ಆದರೆ ಫುಲೆಯವರು ನೌಕರಿ ಮಾಡದೆ ಬದುಕನ್ನು ಸಾಮಾಜಿಕ ಸೇವೆಗೇ ಮುಡುಪಾಗಿಟ್ಟರು.</p>



<p>ಶೂದ್ರರ ಮತ್ತು ಅತಿ ಶೂದ್ರರ ಸುಧಾರಣೆಗೆ ಶಿಕ್ಷಣದ ಅಗತ್ಯವನ್ನು ಮನಗಂಡ ಫುಲೆಯವರು ಶಾಲೆಗಳನ್ನು ತೆರೆದು ತಾವೇ ಶಿಕ್ಷಕರಾಗಿ ದುಡಿದರು. ಹದಿಮೂರನೇ ವಯಸ್ಸಿಗೆ ಮದುವೆಯಾದ ಫುಲೆ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಹೆಂಡತಿ ಸಾವಿತ್ರಿ ಬಾಯಿಯವರಿಗೆ ತಾವೇ ಓದು ಬರಹ ಕಲಿಸಿದರು. 1948ರಲ್ಲಿ ಮೊದಲ ಹೆಣ್ಣು ಮಕ್ಕಳ ಶಾಲೆ ಪುಣೆಯಲ್ಲಿ ಆರಂಭವಾಯಿತು. ಹಲವು ಅಡ್ಡಿ ಆತಂಕಗಳ ನಡುವೆಯೂ ಫುಲೆ ದಂಪತಿ ಶಾಲೆಗಳನ್ನು ನಡೆಸಿದ್ದಲ್ಲದೆ ಅವರಿಬ್ಬರೂ ಇದಕ್ಕಾಗಿ ಯಾವ ಸವಲತ್ತನ್ನೂ ಪಡೆಯಲಿಲ್ಲ.</p>



<p>ಫುಲೆಯವರು ಸಮಾಜ ಸುಧಾರಕರಾಗಿದ್ದಂತೆ, ವಿಚಾರವಾದಿ, ಬರಹಗಾರ, ಪತ್ರಕರ್ತ ಮತ್ತು ಆಡಳಿತಕಾರನೂ ಆಗಿದ್ದರು. ಶೋಷಿತ ಜಾತಿಗಳ ಸುಧಾರಣೆಗಾಗಿ ಅವರು ಸ್ಥಾಪಿಸಿದ ʼ ಸತ್ಯ ಶೋಧಕ ಸಮಾಜ ʼ ದಲ್ಲಿ ಬ್ರಾಹ್ಮಣರನ್ನೊಳಗೊಂಡು ಎಲ್ಲಾ ಜಾತಿ,ಧರ್ಮದ ಜನರೂ ಇದ್ದರು. ಅಸ್ಪರ್ಶ್ಯತೆಯ ವಿರುದ್ಧ ಸಮರವನ್ನೇ ಸಾರಿದ ಫುಲೆಯವರು ʼ ಅಸ್ಪರ್ಶ್ಯರ ಕೈಫಿಯತ್ತು ʼ ಎನ್ನುವ ಪುಸ್ತಕ ಪ್ರಕಟಿಸಿದ್ದಲ್ಲದೆ, ಅವರ ವಸತಿ ಪ್ರದೇಶಗಳಿಗೆ ಭೇಟಿ ನೀಡಿ ಯುವಕರ ತಂಡವೊಂದನ್ನು ಸಿದ್ಧಪಡಿಸಿದರು. ಅವರಿಗೆ ನಿರಂತರ ಮಾರ್ಗದರ್ಶನ ನೀಡಿ ಬರೆಯಲು, ಭಾಷಣ ಮಾಡಲು ತರಬೇತಿ ಕೊಟ್ಟು ಸುಧಾರಣಾ ಕಾರ್ಯದಲ್ಲಿ ಭಾಗವಹಿಸುವಂತೆ ಮಾಡಿದರು.</p>



<p>ಬ್ರಾಹ್ಮಣ ವಿಧವೆಯ ವಿಮೋಚನೆಗಾಗಿ ಅವರು ಸ್ಥಾಪಿಸಿದ ʼ ಬಾಲಹತ್ಯಾ ಪ್ರತಿಬಂಧಕ ಗೃಹ ʼ ದೇಶದಲ್ಲಿಯೇ ಮೊತ್ತ ಮೊದಲ ಸಂಸ್ಥೆಯಾಗಿತ್ತು. ಈ ಸಂಸ್ಥೆಯಿಂದಾಗಿ ವಿಧವೆಯರು ಅಪಕೀರ್ತಿಗೆ ಒಳಗಾಗುವುದು, ಭ್ರೂಣ ಹತ್ಯೆ, ಶಿಶು ಹತ್ಯೆಗಳಾಗುವುದು ತಪ್ಪಿತು. ಬ್ರಾಹ್ಮಣರಲ್ಲದೆ ಇತರ ಜಾತಿಗಳಲ್ಲೂ ವಿಧವೆಯರ ಮರು ವಿವಾಹವನ್ನು ಪ್ರೋತ್ಸಾಹಿಸಿದರು. ತಾವೇ ನೇತೃತ್ವ ವಹಿಸಿ ಕಡಿಮೆ ಖರ್ಚಿನಲ್ಲಿ ಅಂತರ್ ಜಾತೀಯ ವಿವಾಹಗಳು ನಡೆಯುವಂತೆಯೂ ನೋಡಿಕೊಂಡರು.</p>



<p>ಪೇಶ್ವೆಯರ ಆಡಳಿತಕ್ಕೊಳಪಟ್ಟಿದ್ದ, ಚಿತ್ಪಾವನ ಬ್ರಾಹ್ಮಣರು ಶೂದ್ರ, ಅತಿ ಶೂದ್ರರನ್ನು ನಿಕೃಷ್ಟವಾಗಿ ನೋಡಿಕೊಳ್ಳುತ್ತಿದ್ದ ಪ್ರದೇಶದಲ್ಲಿ ಫುಲೆಯವರು ಏಕಾಂಗಿಯಾಗಿ ಮಾಡಿದ ಸಾಮಾಜಿಕ ಕಾರ್ಯಗಳು ಬೆರಗು ಹುಟ್ಟಿಸುತ್ತವೆ. ಅವರು ಹುಟ್ಟು ಹಾಕಿದ- ಮಹಾರಾಷ್ಟ್ರದಲ್ಲಿ ಹಲವು ಸುಧಾರಣೆಗಳಿಗೆ ಕಾರಣವಾದ ʼ ಸತ್ಯಶೋಧಕ ಸಮಾಜ ʼ ಕ್ರಮೇಣ ನಿಸ್ತೇಜಗೊಂಡಿತು. ಆದರೆ ಶೂದ್ರ, ಅತಿ ಶೂದ್ರರಲ್ಲಿ ಅವರು ಮೂಡಿಸಿದ ಎಚ್ಚರ ಮುಂದಿನ ತಲೆಮಾರುಗಳಿಗೆ ಹರಿದು ಬಂತು. ಫುಲೆಯವರನ್ನು ತಮ್ಮ ಗುರುಗಳೆಂದು ಕರೆದುಕೊಂಡ ಬಾಬಾ ಸಾಹೇಬ ಅಂಬೇಡ್ಕರ್ ರವರು ಫುಲೆಯವರ ಸಿದ್ಧಾಂತಗಳನ್ನು ಪರಿಷ್ಕರಿಸಿದರು; ವಿಸ್ತರಿಸಿದರು.</p>



<p>ಜಾಗೃತಿಯ ಅಗತ್ಯ</p>



<p>ಫುಲೆಯವರ ʼ ಗುಲಾಮಗಿರಿʼ ಪುಸ್ತಕ ಮತ್ತು ಅವರ ವಿಚಾರಗಳಿಗೆ ಮರು ಹುಟ್ಟು ಕೊಟ್ಟವರು ಕಾನ್ಶಿರಾಮ್. ಅವರ ʼ ʼಬಹುಜನ ಸಮಾಜ ಪಕ್ಷʼದ ಪೋಸ್ಟರ್ ಗಳಲ್ಲಿ ಸಮಾಜ ಸುಧಾರಕರ ಚಿತ್ರಗಳು ತಪ್ಪದೇ ಅಚ್ಚಾಗುತ್ತಿದ್ದವು. ಜ್ಯೋತಿಬಾ ಫುಲೆ, ಅಂಬೇಡ್ಕರ್, ನಾರಾಯಣ ಗುರು, ಪೆರಿಯಾರ್ ಇವರನ್ನು ʼ ಬಹುಜನ ಸಮಾಜ ಪಕ್ಷʼ ರಾಷ್ಟ್ರ ಮಟ್ಟದಲ್ಲಿ ಬಿಂಬಿಸಿತು. ವಿಸ್ಮೃತಿಗೆ ಸಂದಿದ್ದ ಫುಲೆಯವರನ್ನು, ಮಹಾರಾಷ್ಟ್ರಕ್ಕೆ ಮತ್ತು ಅಕಡೆಮಿಕ್ ಓದಿಗೆ ಸೀಮಿತರಾಗಿದ್ದ ಅಂಬೇಡ್ಕರ್ ರವರನ್ನು, ಕೇರಳ ಮತ್ತು ಕನ್ನಡ ಜಿಲ್ಲೆಗಳಿಗೆ ಬೆಳಕು ತೋರಿದ ನಾರಾಯಣ ಗುರುಗಳನ್ನು, ದ್ರಾವಿಡ ನಾಡಿಂದೀಚೆ ಹೆಸರು ಗಳಿಸದ ಪೆರಿಯಾರ್ ರವರನ್ನು ದೇಶದಾದ್ಯಂತ ಪರಿಚಯಿಸಿದವರು ಕಾನ್ಶಿರಾಮ್. ಅಂಬೇಡ್ಕರ್ ರವರು ಮುಂದುವರಿಸಿದ ಸುಧಾರಣೆಗಳನ್ನು ಕಾನ್ಶಿರಾಮ್ ಕೈಗೆತ್ತಿಕೊಂಡರು.</p>



<p>ಕಾನ್ಶಿರಾಮ್ ಕಾಲವಾದ ಬಳಿಕ ಹಲವು ಬದಲಾವಣೆಗಳು ಸಂಭವಿಸಿವೆ. ಜಾತಿಪದ್ಧತಿ ಅಳಿಯುವ ಬದಲು ಪ್ರಬಲರ ಅಸ್ತ್ರವಾಗಿ ಶೂದ್ರರ, ತಳಜಾತಿಗಳ,ದಲಿತರ ದಮನಕ್ಕೆ ಬಳಕೆಯಾಗುತ್ತಿದೆ. ಹಿಂದೂ ಎನ್ನುವ ಶಬ್ದ ಪ್ರಯೋಗವನ್ನು ಮಾಡದೆ, ಜಾತಿವಿನಾಶವನ್ನು, ಸಮಾನತೆಯ ಬದುಕನ್ನು ಹಾರೈಸಿದ ಫುಲೆಯವರ ಸಿದ್ಧಾಂತಗಳು ಹಿಂದುತ್ವದ ಅಡಿಯಲ್ಲಿ ನಲುಗುತ್ತಿವೆ. ಫುಲೆಯವರು ಸರಿಯಾಗಿಯೇ ಗುರುತಿಸಿದಂತೆ ಸವರ್ಣೀಯರು ಜಾತಿಗಳಲ್ಲಿ ವಿಭಜನೆ ಮಾಡಿ ತಮ್ಮ ಅನುಕೂಲಕ್ಕೋಸ್ಕರ ಅವರನ್ನು ಉಪಯೋಗಿಸುತ್ತಿರುವುದು ಕಂಡು ಬರುತ್ತಿದೆ. ಶೋಷಿತರು ಶೋಷಕರ ಗುಲಾಮರಾಗಿ ಮುಂದುವರಿಯುತ್ತಿರುವುದು ನಿಚ್ಚಳವಾಗಿ ಕಂಡು ಬರುತ್ತಿದೆ.</p>



<p>ಇಂತಹ ಸನ್ನಿವೇಶದಲ್ಲಿ ಸ್ವಾತಂತ್ರ್ಯ, ಸಮಾನತೆ, ಸಹೋದರತೆಯ ಅಗತ್ಯವನ್ನು ಮತ್ತೆ ಮೂಡಿಸುವುದು ಅವಶ್ಯವಾಗಿದೆ. ದುರ್ದೈವವೆಂದರೆ ʼ ಗುಲಾಮಗಿರಿʼ ಕೃತಿಗೆ 150 ವರ್ಷಗಳಾಗಿದ್ದನ್ನು ನೆನಪಿಸಿಕೊಳ್ಳುವ ಎಚ್ಚರವೂ ಕಾಣೆಯಾಗಿರುವುದು. ಇಂತಹ ಸಂದರ್ಭದಲ್ಲಿʼ ನವಯಾನ ಟ್ರಸ್ಟ್ ʼ ಕಾರ್ಯಕ್ರಮವನ್ನು ಏರ್ಪಡಿಸಿ ಒಳ್ಳೆಯ ಕೆಲಸವನ್ನೇ ಮಾಡಿದೆ. ಇಂತಹ ಕೆಲಸ ಎಲ್ಲಾ ಕಡೆಗಳಲ್ಲೂ ಆಗಬೇಕಿತ್ತು. ಅಂಬೇಡ್ಕರ್, ಕಾನ್ಶಿರಾಮ್ ರಂತ ಮಹನೀಯರು ಮಾತ್ರವೇ ಸಮಾನತೆಯ, ಜಾತಿವಿನಾಶದ, ಸಮಾಜ ಸುಧಾರಣೆಯ ಕೆಲಸ ಮಾಡಬೇಕಿಲ್ಲ. ಪ್ರತಿಯೊಬ್ಬರಲ್ಲೂ ಆ ಎಚ್ಚರ ಇದ್ದು ಅದಕ್ಕಾಗಿ ನಿರಂತರ ಪ್ರಯತ್ನ ಮಾಡಬೇಕಿದೆ.</p>



<p>ʼ ಗುಲಾಮ ಗಿರಿ- 150ʼ ಕಾರ್ಯಕ್ರಮದಲ್ಲಿ ಭಾಷಣ ಮಾಡಿದವರೊಬ್ಬರು ಹೇಳುತ್ತಿದ್ದರು: ʼ ನಿಮ್ಮಲ್ಲಿ ಅನೇಕರು ಸತ್ಯನಾರಾಯಣ ಪೂಜೆ ಮಾಡಿರಬಹುದುʼ. ಅವರಂದಂತೆ ಹತ್ತೊಂಬತ್ತನೇ ಶತಮಾನದಲ್ಲಿ ಹಠಾತ್ತಾಗಿ ಸೃಷ್ಟಿಸಿದ ಸತ್ಯನಾರಾಯಣ ಪೂಜೆ ಮಾಡದೇ ಇರುವವರೇ ಅಪರೂಪವಾಗಿರಬಹುದು. ಫುಲೆಯವರು ಇಂತಹ ನಂಬಿಕೆ, ಮೂಢನಂಬಿಕೆಗಳ ವಿರುದ್ಧ ಸಮರ ಸಾರಿದ್ದರು. ಅವರು ತಮ್ಮ ತಂದೆ ನಿಧನರಾದ ಸಂದರ್ಭದಲ್ಲಿ ಕಾಗೆಗಳಿಗೆ ಎಡೆ ಇಟ್ಟಿರಲಿಲ್ಲ. ಅದರ ಬದಲು ಹೊಟ್ಟೆಗಿಲ್ಲದವರಿಗೆ, ಅಂಗವಿಕಲರಿಗೆ ಉಣ ಬಡಿಸಿದ್ದರು. ಈಗ ಯಾರಾದರೂ ಈ ಆದರ್ಶವನ್ನು ಪಾಲಿಸುತ್ತಾರೆಯೇ? ಅನವಶ್ಯ ಅಹಾರವನ್ನು ಪೋಲು ಮಾಡುವ ಈ ರೀತಿಯ ಪದ್ಧತಿಗಳನ್ನು ಮಾಡದಿರುವುದು ಫುಲೆಯವರನ್ನು ನೆನಸಿಕೊಳ್ಳುವ ಅವರಿಗೆ ಕೃತಜ್ಞತೆ ಹೇಳುವ ಒಂದು ಸಣ್ಣ ಮಾರ್ಗ.ಇಂತಹ ಕ್ರಿಯೆಗಳೇ ಅಜ್ಞಾನವನ್ನು ನಿವಾರಿಸಲು ಸಹಾಯ ಮಾಡುತ್ತವೆ.</p>



<p></p>
]]></content:encoded>
					
		
		
			</item>
		<item>
		<title>“ಅಂಬೇಡ್ಕರ್ ದಿನಚರಿ” ಯುವಜನರು ಓದಲೇಬೇಕಾದ ಪುಸ್ತಕ</title>
		<link>https://peepalmedia.com/ambedkar-diary-is-a-must-read-book-for-young-people/</link>
		
		<dc:creator><![CDATA[Peepal Media]]></dc:creator>
		<pubDate>Tue, 27 Aug 2024 11:25:29 +0000</pubDate>
				<category><![CDATA[ಅಂಕಣ]]></category>
		<category><![CDATA[Ambedkar]]></category>
		<category><![CDATA[Ambedkar Parinirvan Day]]></category>
		<category><![CDATA[ambedkar statue]]></category>
		<category><![CDATA[bengalure]]></category>
		<category><![CDATA[Bhimrao Ramji Ambedkar]]></category>
		<category><![CDATA[Dalit]]></category>
		<category><![CDATA[dalit activists]]></category>
		<category><![CDATA[Dalit assault]]></category>
		<category><![CDATA[Dalit community]]></category>
		<category><![CDATA[Dalit cultural resistance]]></category>
		<category><![CDATA[dalit dalitlivesmatter dalits]]></category>
		<category><![CDATA[Dalit fighters]]></category>
		<category><![CDATA[Dalit organizations]]></category>
		<category><![CDATA[DR B R AMBEDKAR]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=44524</guid>

					<description><![CDATA[ರುದ್ರು ಪುನೀತ್ ಪ್ರತೀ ಬಾರಿಯೂ ಬಾಬಾಸಾಹೇಬರ ಕುರಿತು ಓದುವಾಗ ನನಗನ್ನಿಸುವುದು ಅಷ್ಟೊಂದು ಅಗಾಧವಾದ ಜ್ಞಾನವನ್ನು ಅವರು ದಕ್ಕಿಸಿಕೊಂಡಿದ್ದಾದರೂ ಹೇಗೆ? ನಿರಂತರ ಓದುವುದರಿಂದ, ಅಥವಾ ಹಗಲು ರಾತ್ರಿ ಓದುವುದರಿಂದ, ಅಥವಾ ವಿದೇಶದಲ್ಲಿ ಓದುವುದರಿಂದ ಇವುಗಳ ಕಾರಣಕ್ಕಷ್ಟೇ ಬಾಬಾ ಸಾಹೇಬರು ವಿಶ್ವಮಟ್ಟದ ಜ್ಞಾನಿಯಾಗಿ ಹೊರಹೊಮ್ಮಿದರೇ? ಬಾಬಾಸಾಹೇಬರು ವಿಶ್ವಜ್ಞಾನಿ ಎಂದು ಕರೆಸಿಕೊಳ್ಳಲು ಅವರು ಪಟ್ಟ ಪರಿಶ್ರಮ, ಅವರ ಓದು, ಅವರ ದಿನನಿತ್ಯ ಬದುಕಿನಲ್ಲಿ ಅವರು ಅಳವಡಿಸಿಕೊಂಡ ಶಿಸ್ತು, ಅವರು ಯಾವುದನ್ನೆಲ್ಲ ಓದಲು ಬಯಸುತ್ತಿದ್ದರು ಎನ್ನುವುದನ್ನು ತಿಳಿಯಲು ಅವರ ದಿನಚರಿಯನ್ನು ನಾವು ಗಮನಿಸಬೇಕು. [&#8230;]]]></description>
										<content:encoded><![CDATA[
<p><strong>ರುದ್ರು ಪುನೀತ್</strong></p>



<p>ಪ್ರತೀ ಬಾರಿಯೂ ಬಾಬಾಸಾಹೇಬರ ಕುರಿತು ಓದುವಾಗ ನನಗನ್ನಿಸುವುದು ಅಷ್ಟೊಂದು ಅಗಾಧವಾದ ಜ್ಞಾನವನ್ನು ಅವರು ದಕ್ಕಿಸಿಕೊಂಡಿದ್ದಾದರೂ ಹೇಗೆ?</p>



<p>ನಿರಂತರ ಓದುವುದರಿಂದ, ಅಥವಾ ಹಗಲು ರಾತ್ರಿ ಓದುವುದರಿಂದ, ಅಥವಾ ವಿದೇಶದಲ್ಲಿ ಓದುವುದರಿಂದ ಇವುಗಳ ಕಾರಣಕ್ಕಷ್ಟೇ ಬಾಬಾ ಸಾಹೇಬರು ವಿಶ್ವಮಟ್ಟದ ಜ್ಞಾನಿಯಾಗಿ ಹೊರಹೊಮ್ಮಿದರೇ?</p>



<p>ಬಾಬಾಸಾಹೇಬರು ವಿಶ್ವಜ್ಞಾನಿ ಎಂದು ಕರೆಸಿಕೊಳ್ಳಲು ಅವರು ಪಟ್ಟ ಪರಿಶ್ರಮ, ಅವರ ಓದು, ಅವರ ದಿನನಿತ್ಯ ಬದುಕಿನಲ್ಲಿ ಅವರು ಅಳವಡಿಸಿಕೊಂಡ ಶಿಸ್ತು, ಅವರು ಯಾವುದನ್ನೆಲ್ಲ ಓದಲು ಬಯಸುತ್ತಿದ್ದರು ಎನ್ನುವುದನ್ನು ತಿಳಿಯಲು ಅವರ ದಿನಚರಿಯನ್ನು ನಾವು ಗಮನಿಸಬೇಕು. ಬಾಬಾ ಸಾಹೇಬರ ಜೊತೆಯಲ್ಲಿಯೇ ಇದ್ದು ಹತ್ತಾರು ವರ್ಷಗಳು ಕಳೆದ ದೇವಿದಯಾಳ್ ಅವರು ಬರೆದಿರುವ ಅಂಬೇಡ್ಕರ್ ಡೈರಿ ಪುಸ್ತಕವನ್ನು ಕನ್ನಡಕ್ಕೆ &#8220;ಅಂಬೇಡ್ಕರ್ ದಿನಚರಿ&#8221; ಎನ್ನುವ ಶೀರ್ಷಿಕೆಯೊಂದಿಗೆ ಸಹಾಯಕ ಉಪನ್ಯಾಸಕರು ಮತ್ತು ಅಂಬೇಡ್ಕರ್ ವಾದಿ ಲೇಖಕರಾದ ಪಿ.‌ಆರಡಿಮಲ್ಲಯ್ಯ ಕಟ್ಟೇರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.. ಬಾಬಾಸಾಹೇಬರ ದಿನಚರಿಯನ್ನು ಅವರು ದಾಖಲಿಸಿರುವ ರೀತಿ ಇದೆಯಲ್ಲ ಅದು ನಿಜಕ್ಕೂ ಓದುಗರಿಗೆ ಬಾಬಾಸಾಹೇಬರ ಬಗ್ಗೆ ಹೊಸ ಹೊಳವುಗಳನ್ನು ನೀಡುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಅರ್ಥವಾಗುವ ಹಾಗೆ ಸರಳ ಕನ್ನಡದಲ್ಲಿ ಅನುವಾದಿಸಿದ್ದಾರೆ. ಬಾಬಾಸಾಹೇಬರ ಅನೇಕ ಪುಸ್ತಕಗಳನ್ನು ನಾನು ಓದಿದ್ದೇನೆ. ಆದರೆ ಅಂಬೇಡ್ಕರ್ ದಿನಚರಿ ಸಾಹೇಬರೊಂದಿಗೆ ಜರ್ನಿ ಮಾಡುವ ಅನುಭವ ನೀಡುತ್ತದೆ.</p>



<p>ಶೋಷಿತ ದಮನಿತ ಧ್ವನಿ ಇಲ್ಲದ ನನ್ನ ಸಮುದಾಯಕ್ಕೆ ನಾನು ನ್ಯಾಯ ದೊರಕಿಸಿಕೊಡಲು ನಿತ್ಯ ನಿರಂತರವಾಗಿ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು ಎಂದು ಬಾಬಾ ಸಾಹೇಬರು ಹಾತೊರೆಯುತ್ತಾರೆ. ಬಾಬಾ ಸಾಹೇಬರು ಸಮಯಕ್ಕೆ ತುಂಬಾ ಪ್ರಾಮುಖ್ಯತೆ ನೀಡುತ್ತಿದ್ದರು. ಅವರು ಶಿಸ್ತಿನ ಸಿಪಾಯಿಯಾಗಿದ್ದರು. ಅವರು ತಮ್ಮ ವೈಯಕ್ತಿಕ ಬದುಕಿಗಿಂತ ಹೆಚ್ಚಾಗಿ ತನ್ನ ಸಮುದಾಯದ ಬಗ್ಗೆ ಹೆಚ್ಚು ಚಿಂತಿತರಾಗಿದ್ದರು. ನನ್ನ ಸಮುದಾಯದ ಅಬ್ಯುದಯಕ್ಕಾಗಿ ನಾನು ಮತ್ತಷ್ಟು ಹೆಚ್ಚು ದಿನಗಳು ಬದುಕಬೇಕೆಂದು ಬಯಸಿದ್ದರು. ಬಾಬಾ ಸಾಹೇಬರು ನೇರ ನಿಷ್ಟುರವಾದಿಯಾಗಿದ್ದರು. ಬಾಬಾ ತಮ್ಮ ಆಳವಾದ ಜ್ಞಾನದಿಂದಲೇ ಎದುರಾಳಿಗಳಲ್ಲಿ ಭಯ ಹುಟ್ಟಿಸುವಂತಿದ್ದರು. ಬಾಬಾ ಸಾಹೇಬರ ಬಗ್ಗೆ ಎಲ್ಲೂ ದಾಖಲಾಗದ ಇಂತಹ ಅನೇಕ ವಿಷಯಗಳನ್ನು ಈ ಅಂಬೇಡ್ಕರ್ ಡೈರಿ ತೆರೆದಿಡುತ್ತದೆ. ಈ ಪುಸ್ತಕವು ಖಂಡಿತ ನಿಮಗೆ ಬಾಬಾ ಸಾಹೇಬರನ್ನು ಮತ್ತಷ್ಟು ಓದಲು ಪ್ರಚೋದಿಸಿತ್ತದೆ.</p>



<p><strong>ಇದನ್ನು ಹೇಳಲೇಬೇಕು</strong>: ನಿರಂತರ ಓದು, ಅಥವಾ ಹತ್ತಾರು ಡಿಗ್ರಿಗಳು, ವಿದೇಶದಲ್ಲಿ ಪಡೆದ ಶಿಕ್ಷಣ ಇವುಗಳಿಂದ ಮಾತ್ರ ಜ್ಞಾನಿಗಳು ಎನ್ನಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ನನ್ನ ಅನೇಕ ಸ್ನೇಹಿತರು ಅನೇಕ ಡಿಗ್ರಿಗಳನ್ನು ಪಡೆದುಕೊಂಡು ಕನಿಷ್ಠ ಎಂಟತ್ತು ವರ್ಷಗಳ ಕಾಲ UPSC ಗೆ ಪ್ರಿಪೇರ್ ಆದವರು ಇದ್ದಾರೆ. UPSC ಪ್ರಿಪೇರ್ ಆಗುವುದೆಂದರೆ ವರ್ಲ್ಡ್ ಹಿಸ್ಟರಿ, ವರ್ಲ್ಡ್ ಜಿಯಾಗ್ರಫಿ, ಎನ್ವಿರಾನ್ಮೆಂಟ್, ವಿಜ್ಞಾನ, ಸೋಷಿಯಾಲಾಜಿ, ಲಿಟರೇಚರ್, ಎತಿಕ್ಸ್ ಇವುಗಳೆಲ್ಲವನ್ನು ಓದುತ್ತಾರೆ ಆದರೂ ಪ್ರಿಪೇರ್ ಆಗುವವರನ್ನು ಬಿಟ್ಟಾಕಿ ಈಗಾಗಲೇ IAS ಕ್ಲಿಯರ್ ಮಾಡಿಕೊಂಡು ಉನ್ನತ ಹುದ್ದೆಯಲ್ಲಿರುವ ಪರಿಚಯದ ಅಧಿಕಾರಿಯೊಬ್ಬ ತೀರಾ ಇತ್ತೀಚೆಗೆ ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ಕಲ್ಪಿಸಿ ಸುಪ್ರೀಂಕೋರ್ಟ್ ಕೊಟ್ಟ ತೀರ್ಪು ನಮ್ಮ ದೇಶದ ಧರ್ಮ ಮತ್ತು ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದು ನನ್ನ ಬಳಿ ಹೇಳಿದ್ದನ್ನು ಕೇಳಿ ನಾನು ದಂಗಾಗಿದ್ದೆ. ಅಷ್ಟೇ ಏಕೆ ಈ ದೇಶದ ಉನ್ನತ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ಪರಿಚಯದವರು ಕೂಡ ಬೆಳಗ್ಗೆ ಪೂಜೆ ಮಾಡದೆಯೇ ಆಫೀಸಿಗೆ ಹೋಗೋದಿಲ್ಲ..</p>



<p>ಬಾಬಾಸಾಹೇಬರು ಈ ಜಗತ್ತಿನಲ್ಲಿಯೇ ಅತೀ ಹೆಚ್ಚು ಡಿಗ್ರಿಗಳನ್ನು ಹೊಂದಿದವರು ಎನ್ನುವ ಖ್ಯಾತಿ ಪಡೆದಿದ್ದಾರೆ. ಅವರ ಬಳಿ ಜಗತ್ತಿನ ಅತೀ ದೊಡ್ಡ ವೈಯಕ್ತಿಕ ಲೈಬ್ರರಿ ಇತ್ತು. ಅವರ ಜನ್ಮದಿನವನ್ನು ವಿಶ್ವಸಂಸ್ಥೆಯು ವಿಶ್ವ ಜ್ಞಾನಿಗಳ ದಿನವೆಂದು ಘೋಷಿಸಿದೆ. ಬಾಬಾ ಸಾಹೇಬರು ವಿಶ್ವ ಜ್ಞಾನಿಯಾಗಲು ಖಂಡಿತ ನಿರಂತರ ಓದಿನಿಂದ ಸಾಧ್ಯವಾಯಿತು ಆದರೆ ಆ ಓದಿನ ಹಿಂದೆ ಒಂದು ಸ್ಪಷ್ಟವಾದ ದ್ಯೇಯವಿತ್ತು. ಆ ಕಾರಣಕ್ಕೆ ಅವರು ಈ ದೇಶದ ನೈಜ ಇತಿಹಾಸವನ್ನು ತಿಳಿಯಬಯಸಿದರು. ಸಾವಿರಾರು ವರ್ಷಗಳ ಯಾಕೆ ಈ ದೇಶದ SC/ST/OBC/ಅಲ್ಪಸಂಖ್ಯಾತ ರಾದ ಬಹುಜನರಿಗೆ ಶಿಕ್ಷಣ ಇರಲಿಲ್ಲ. ಯಾಕೆ ಅವರಿಗೆ ಭೂಮಿ ಇರಲಿಲ್ಲ, ಯಾಕೆ ಅವರು ಗುಲಾಮರಾಗಿದ್ದರು, ವರ್ಣ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು ಯಾರು. ಯಾಕೆ ಬ್ರಾಹ್ಮಣರು ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ತಮ್ಮ ವಸಾಹತು ಸ್ಥಾಪಿಸಿದ್ದಾರೆ ಇವುಗಳ ಅಧ್ಯಯನದಲ್ಲಿ ತೊಡಗಿಕೊಂಡರು. ಇತಿಹಾಸವನ್ನು ಹೆಕ್ಕಿ ಹೆಕ್ಕಿ ಹೊರತೆಗೆದರು. ದಾಖಲೆಗಳನ್ನು ಕ್ರೂಡಿಕರಿಸಿದರು,</p>



<p>ಅಸಮಾನತೆಯ ಬಗ್ಗೆ, ಜಾತಿ ವ್ಯವಸ್ಥೆಯ ಬಗ್ಗೆ, ಶ್ರೇಣೀಕೃತ ವ್ಯವಸ್ಥೆಯ ಬಗ್ಗೆ ದಾಖಲಿಸಿದರು, ದೇವರು ದೆವ್ವ ಎನ್ನುವ ಕಾಲ್ಪನಿಕ ಕಥೆಗಳ ಮೂಲಕ ಹೇಗೆ ಈ ದೇಶದ ಬಡವರನ್ನು ಮಂತ್ರಮುಗ್ದರನ್ನಾಗಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎನ್ನುವುದರ ಬಗ್ಗೆಯೂ ಬರೆದರು. ಹೆಣ್ಣಿನ ಮೇಲಾಗುತ್ತಿದ್ದ ಮೇಲಾಗುತ್ತಿದ್ದ ಶೋಷಣೆ ದಬ್ಬಾಳಿಕೆಯ ಬಗ್ಗೆ ಬರೆದರು. ಇಷ್ಟೆಲ್ಲ ಓದು ಬರಹ ಸಂಶೋಧನೆಯ ಕಾರಣಕ್ಕೆ ಬಾಬಾ ಸಾಹೇಬರು ವಿಶ್ವಜ್ಞಾನಿಯಾದ್ರು. ಈ ದೇಶದ ಸಂವಿಧಾನ ಬರೆಯುವ ಮಟ್ಟಕ್ಕೆ ಬೆಳೆದರು. ಆ ಮೂಲಕ ಸಾವಿರಾರು ವರ್ಷಗಳ ಕಾಲ ಗುಲಾಮರಾಗಿದ್ದ ಈ ದೇಶದ ಮೂಲನಿವಾಸಿ SC/ST/OBC/RM ಮತ್ತು ಮಹಿಳೆಯರಿಗೆ ಶಿಕ್ಷಣ, ಭೂಮಿ, ಉದ್ಯೋಗ, ರಾಜಕೀಯ ಪ್ರಾತಿನಿಧ್ಯ, ಆಡಳಿತದಲ್ಲಿ ಅಧಿಕಾರವನ್ನು ನೀಡಲು ಸಾಧ್ಯವಾಯಿತು.</p>



<p>ಕೇವಲ ಶಿಕ್ಷಿತರಾದರೆ ಸಾಲದು ವೈಚಾರಿಕ, ವೈಜ್ಞಾನಿಕ, ಬೌದ್ಧಿಕ ಜ್ಞಾನವನ್ನು ಪಡೆದಾಗ ಮಾತ್ರ ನಾವುಗಳು ನಾಗರೀಕರಾಗಲು ಸಾಧ್ಯ.</p>



<p>ಅಂಬೇಡ್ಕರ್ ಡೈರಿಯನ್ನು ಕನ್ನಡಕ್ಕೆ ಅನುವಾದಿಸಿ ಬಾಬಾಸಾಹೇಬರ ಬಗ್ಗೆ ನಮಗೆ ಗೊತ್ತಿಲ್ಲದ ಅನೇಕ ಸೂಕ್ಷ್ಮ ವಿಷಯಗಳನ್ನು ಅಂಬೇಡ್ಕರ್ ದಿನಚರಿಯ ಮೂಲಕ ಕರ್ನಾಟಕದ ಜನತೆಗೆ ತಲುಪಿಸಿದ್ದಕ್ಕಾಗಿ ನಿಮಗೆ ಕೋಟಿ ಕೋಟಿ ವಂದನೆಗಳು.</p>
]]></content:encoded>
					
		
		
			</item>
		<item>
		<title>ಪಿರಿಯಾಪಟ್ಟಣ : ಧಾರ್ಮಿಕ ಕಾರ್ಯಕ್ರಮದಲ್ಲಿ ಡೋಲು ಬಾರಿಸಲು ನಿರಾಕರಿಸಿದ ದಲಿತ ವ್ಯಕ್ತಿಯ ಮೇಲೆ ಹಲ್ಲೆ</title>
		<link>https://peepalmedia.com/dalit-man-assaulted-for-refusing-to-beat-drum/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 07 Dec 2023 07:38:22 +0000</pubDate>
				<category><![CDATA[ಮೈಸೂರು]]></category>
		<category><![CDATA[ರಾಜ್ಯ]]></category>
		<category><![CDATA[Dalit assault]]></category>
		<category><![CDATA[karnataka]]></category>
		<category><![CDATA[mysore]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[piriyapattana]]></category>
		<guid isPermaLink="false">https://peepalmedia.com/?p=33439</guid>

					<description><![CDATA[ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮಾಕೋಡು ಗ್ರಾಮದ ದೇವಸ್ಥಾನವೊಂದರಲ್ಲಿ ವಾರ್ಷಿಕ ಪೂಜಾ ಕಾರ್ಯಕ್ರಮದ ವೇಳೆ ಡೋಲು ಬಾರಿಸಲು ನಿರಾಕರಿಸಿದ್ದಕ್ಕೆ 65 ವರ್ಷದ ದಲಿತ ವ್ಯಕ್ತಿಯೊಬ್ಬರ ಮೇಲೆ ಗ್ರಾಮಸ್ಥನೊಬ್ಬ ಹಲ್ಲೆ ನಡೆಸಿರುವ ಘಟನೆ ಬುಧವಾರ ನಡೆದಿದೆ. ಗ್ರಾಮದ ಬಸವೇಶ್ವರ ದೇವಸ್ಥಾನದ ವಾರ್ಷಿಕ ಪೂಜೆಯಲ್ಲಿ ಡೋಲು ಬಾರಿಸಲು ದಲಿತ ಪರಮಯ್ಯ ಅವರನ್ನು ಕರೆಯಲಾಗಿತ್ತು. ಆದರೆ ಪರಮಯ್ಯ ಅವರು ಹುಷಾರಿಲ್ಲದ ಕಾರಣ ಡೋಲು ಬಾರಿಸುವುದಕ್ಕೆ ನಿರಾಕರಿಸಿದ್ದಾರೆ. ಪರಮಯ್ಯನವರ ಪ್ರತಿಕ್ರಿಯೆಯಿಂದ ಕೋಪಗೊಂಡ ಅದೇ ಗ್ರಾಮದ ಕುಮಾರ್ ಎನ್ನುವ ವ್ಯಕ್ತಿ ಪರಮಯ್ಯನ ಮೇಲೆ ಹಲ್ಲೆ [&#8230;]]]></description>
										<content:encoded><![CDATA[
<p>ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮಾಕೋಡು ಗ್ರಾಮದ ದೇವಸ್ಥಾನವೊಂದರಲ್ಲಿ ವಾರ್ಷಿಕ ಪೂಜಾ ಕಾರ್ಯಕ್ರಮದ ವೇಳೆ ಡೋಲು ಬಾರಿಸಲು ನಿರಾಕರಿಸಿದ್ದಕ್ಕೆ 65 ವರ್ಷದ ದಲಿತ ವ್ಯಕ್ತಿಯೊಬ್ಬರ ಮೇಲೆ ಗ್ರಾಮಸ್ಥನೊಬ್ಬ ಹಲ್ಲೆ ನಡೆಸಿರುವ ಘಟನೆ ಬುಧವಾರ ನಡೆದಿದೆ.</p>



<p>ಗ್ರಾಮದ ಬಸವೇಶ್ವರ ದೇವಸ್ಥಾನದ ವಾರ್ಷಿಕ ಪೂಜೆಯಲ್ಲಿ ಡೋಲು ಬಾರಿಸಲು ದಲಿತ ಪರಮಯ್ಯ ಅವರನ್ನು ಕರೆಯಲಾಗಿತ್ತು. ಆದರೆ ಪರಮಯ್ಯ ಅವರು ಹುಷಾರಿಲ್ಲದ ಕಾರಣ ಡೋಲು ಬಾರಿಸುವುದಕ್ಕೆ ನಿರಾಕರಿಸಿದ್ದಾರೆ. ಪರಮಯ್ಯನವರ ಪ್ರತಿಕ್ರಿಯೆಯಿಂದ ಕೋಪಗೊಂಡ ಅದೇ ಗ್ರಾಮದ ಕುಮಾರ್ ಎನ್ನುವ ವ್ಯಕ್ತಿ ಪರಮಯ್ಯನ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಜಾತಿಯ ಹೆಸರಿನಲ್ಲಿ ನಿಂದಿಸಿದ್ದಾರೆ&#8221; ಎಂದು ಪಿರಿಯಾಪಟ್ಟಣ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಧರ್ ತಿಳಿಸಿದ್ದಾರೆ.</p>



<p>ಅಧಿಕಾರಿಗಳ ಪ್ರಕಾರ, ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನವಿದ್ದು, ದಶಕಗಳಿಂದ ಎಲ್ಲಾ ಸಮುದಾಯದವರು ಒಟ್ಟಾಗಿ ವಾರ್ಷಿಕ ಪೂಜೆಯನ್ನು ಆಚರಿಸುತ್ತಿದ್ದಾರೆ. ಡೋಲು ಬಾರಿಸುವುದು ದಲಿತ ಸಮುದಾಯದ ಸಾಂಪ್ರದಾಯಿಕ ಕೆಲಸವಾದ್ದರಿಂದ ಪರಮಯ್ಯ ಅವರಿಗೆ ಡೋಲು ಬಾರಿಸಲು ಒತ್ತಾಯಿಸಲಾಗಿದೆ.</p>



<p>“ನನ್ನ ತಂದೆ ಅಸ್ವಸ್ಥರಾಗಿದ್ದಾರೆ, ಅದಕ್ಕಾಗಿಯೇ ಅವರು ಡ್ರಮ್ ನುಡಿಸಲು ನಿರಾಕರಿಸಿದರು. ದೇವಸ್ಥಾನದ ಕಮಿಟಿಯವರಿಗೆ, ಡೋಲು ಬಾರಿಸುವ ಜವಾಬ್ದಾರಿ ನಾನು ವಹಿಸುತ್ತೇನೆ ಎಂದು ತಿಳಿಸಿದರೂ ಆರೋಪಿಗಳು ನನ್ನ ತಂದೆಗೆ ಡೋಲು ಬಾರಿಸುವಂತೆ ಒತ್ತಾಯಿಸಿದ್ದಾರೆ. ಅದಕ್ಕೆ ನನ್ನ ತಂದೆ ನಿರಾಕರಿಸಿದಾಗ ಹಲ್ಲೆ ನಡೆಸಿ, ಜಾತಿ ನಿಂದಿಸಿದ್ದಾರೆ’ ಎಂದು ಪರಮಯ್ಯ ಅವರ ಪುತ್ರ ಬಸವರಾಜು ದೂರಿದ್ದಾರೆ.</p>



<p>‘ಗ್ರಾಮದ ಆರಾಧ್ಯ ದೈವ ಎನಿಸಿರುವ ಬಸವೇಶ್ವರ ದೇವಸ್ಥಾನದ ಪೂಜೆಯಲ್ಲಿ ಮುಸ್ಲಿಮರು ಸೇರಿದಂತೆ ಎಲ್ಲ ಸಮುದಾಯದವರು ದಶಕಗಳಿಂದ ಪಾಲ್ಗೊಳ್ಳುತ್ತಿದ್ದಾರೆ. ಈ ಘಟನೆಯಿಂದ ಗ್ರಾಮದ ಐಕ್ಯತೆಗೆ ಧಕ್ಕೆ ಉಂಟಾಗಬಹುದು. ಆ ಹಿನ್ನೆಲೆಯಲ್ಲಿ ದೇವಸ್ಥಾನ ಸಮಿತಿ ಹಾಗೂ ಇತರರ ನಡುವಿನ ಬಿಕ್ಕಟ್ಟು ನಿವಾರಣೆಗೆ ಮುಂದಿನ ವಾರದಲ್ಲಿ ಎಲ್ಲ ಸಮುದಾಯಗಳ ಜತೆ ಸಭೆ ನಡೆಸಲಾಗುವುದು ಎಂದು ಮಾಕೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಶೈಲಜಾ ತಿಳಿಸಿದ್ದಾರೆ.</p>



<p>ಆರೋಪಿ ಕುಮಾರ್ ದೇವಸ್ಥಾನ ಸಮಿತಿಯ ನಿರ್ದೇಶಕರಾಗಿದ್ದು, ಹಿಂದಿನ ವರ್ಷಗಳಲ್ಲಿ ಮಾಡಿದಂತೆ ವಾರ್ಷಿಕ ದೇವಸ್ಥಾನದ ಪೂಜೆಯನ್ನು ಸುಗಮವಾಗಿ ನಡೆಸುವಂತೆ ನೋಡಿಕೊಳ್ಳಬೇಕು ಎಂದು ಶೈಲಜಾ ತಿಳಿಸಿದ್ದಾರೆ.</p>



<p>&#8220;ನಾವು ಕುಮಾರ್ ವಿರುದ್ಧ ಎಸ್‌ಸಿ / ಎಸ್‌ಟಿ ತಡೆ ಕಾಯಿದೆ, ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 504 (ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ&#8221; ಎಂದು ಪಿರಿಯಾಪಟ್ಟಣ ಇನ್‌ಸ್ಪೆಕ್ಟರ್ ಶ್ರೀಧರ್ ಹೇಳಿದ್ದಾರೆ. &#8221;ಪಿರಿಯಾಪಟ್ಟಣ ತಾಲೂಕು ಸರಕಾರಿ ಆಸ್ಪತ್ರೆಗೆ ಪರಮಯ್ಯ ಅವರನ್ನು ದಾಖಲು ಮಾಡಲಾಗಿದೆ. ಹಾಗೆಯೇ ಆರೋಪಿ ಕುಮಾರ್ ಹಾಗೂ ಘಟನೆ ಸಮಯದಲ್ಲಿ ಆರೋಪಿ ಪರ ನಿಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು&#8217; ಎಂದು ಇನ್‌ಸ್ಪೆಕ್ಟರ್ ಶ್ರೀಧರ್ ಹೇಳಿದ್ದಾರೆ.</p>
]]></content:encoded>
					
		
		
			</item>
	</channel>
</rss>
