<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Dalit community &#8211; Peepal Media</title>
	<atom:link href="https://peepalmedia.com/tag/dalit-community/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 13 Feb 2025 13:15:17 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Dalit community &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಜಾತಿ ದೌರ್ಜನ್ಯ: ಬುಲೆಟ್ ಬೈಕ್ ಓಡಿಸಿದ್ದಕ್ಕೆ ದಲಿತ ಯುವಕನ ಕೈ ಕತ್ತರಿಸಿದ ಸವರ್ಣೀಯರು</title>
		<link>https://peepalmedia.com/caste-atrocities-upper-caste-people-chop-off-the-hand-of-a-dalit-youth-who-was-riding-a-bullet-bike/</link>
		
		<dc:creator><![CDATA[Peepal Media]]></dc:creator>
		<pubDate>Thu, 13 Feb 2025 13:12:56 +0000</pubDate>
				<category><![CDATA[ದಲಿತ ನೋಟ]]></category>
		<category><![CDATA[Caste atrocities]]></category>
		<category><![CDATA[Dalit assault]]></category>
		<category><![CDATA[Dalit community]]></category>
		<category><![CDATA[tamil nadu]]></category>
		<guid isPermaLink="false">https://peepalmedia.com/?p=53888</guid>

					<description><![CDATA[ಪ್ರಬಲ ಜಾತಿಗರು ಬುಲೆಟ್ ಬೈಕ್ ಓಡಿಸಿದ ಕಾರಣಕ್ಕೆ ದಲಿತ ಯುವಕನ ಕೈ ಕತ್ತರಿಸಿರುವ ವಿಕೃತ ಘಟನೆಯೊಂದು ತಮಿಳುನಾಡಿನ ಶಿವಗಂಗ ಜಿಲ್ಲೆಯ ಮೇಳಪಿದವೂರು ಗ್ರಾಮದಲ್ಲಿ ನಡೆದಿದೆ.   2025 ಫೆಬ್ರವರಿ 12 ರಂದು ಸಂಜೆ ತಮಿಳುನಾಡಿನ ಶಿವಗಂಗ ಜಿಲ್ಲೆಯ ಮೇಳಪಿದವೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬುಲೆಟ್ ಬೈಕ್ ಓಡಿಸುತ್ತಿದ್ದ ಅಯ್ಯಸಾಮಿ ಎಂಬ ಯುವಕನನ್ನು ಅಡ್ಡಗಟ್ಟಿ ದಾಳಿ ನಡೆಸಿರುವ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಬುಧವಾರ ಸಂಜೆ ಅಯ್ಯಸಾಮಿ ತನ್ನ ಬುಲೆಟ್ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ, ಅದೇ [&#8230;]]]></description>
										<content:encoded><![CDATA[
<p>ಪ್ರಬಲ ಜಾತಿಗರು ಬುಲೆಟ್ ಬೈಕ್ ಓಡಿಸಿದ ಕಾರಣಕ್ಕೆ ದಲಿತ ಯುವಕನ ಕೈ ಕತ್ತರಿಸಿರುವ ವಿಕೃತ ಘಟನೆಯೊಂದು ತಮಿಳುನಾಡಿನ ಶಿವಗಂಗ ಜಿಲ್ಲೆಯ ಮೇಳಪಿದವೂರು ಗ್ರಾಮದಲ್ಲಿ ನಡೆದಿದೆ.  </p>



<p>2025 ಫೆಬ್ರವರಿ 12 ರಂದು ಸಂಜೆ ತಮಿಳುನಾಡಿನ ಶಿವಗಂಗ ಜಿಲ್ಲೆಯ ಮೇಳಪಿದವೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬುಲೆಟ್ ಬೈಕ್ ಓಡಿಸುತ್ತಿದ್ದ ಅಯ್ಯಸಾಮಿ ಎಂಬ ಯುವಕನನ್ನು ಅಡ್ಡಗಟ್ಟಿ ದಾಳಿ ನಡೆಸಿರುವ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.</p>



<p>ಪೊಲೀಸರ ಪ್ರಕಾರ, ಬುಧವಾರ ಸಂಜೆ ಅಯ್ಯಸಾಮಿ ತನ್ನ ಬುಲೆಟ್ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ, ಅದೇ ಗ್ರಾಮದ ಮೂವರು ಪ್ರಬಲ ಜಾತಿ ಹಿಂದೂಗಳಾದ ಆರ್. ವಿನೋದ್‌ಕುಮಾರ್ (21), ಎ. ಅಥೀಶ್ವರನ್ (22) ಮತ್ತು ಎಂ. ವಲ್ಲರಸು (21) ಅಡ್ಡಗಟ್ಟಿ ಹರಿತವಾದ ಆಯುಧಗಳಿಂದ ಹಲ್ಲೆ ಮಾಡಿದ್ದಾರೆ ಎಂದು ವರದಿ ಹೇಳಿದೆ.</p>



<p>ಹಲ್ಲೆಗೊಳಗಾದ ಅಯ್ಯಸಾಮಿ ಶಿವಗಂಗೆಯ ಕಾಲೇಜಿನಲ್ಲಿ ಮೂರನೇ ವರ್ಷದ ಯುಜಿ ಗಣಿತ ವಿದ್ಯಾರ್ಥಿ ಎಂದು ತಿಳಿದುಬಂದಿದ್ದು, ಹಲ್ಲೆಯಿಂದಾಗಿ ಗಂಭೀರ ಗಾಯಗೊಂಡಿದ್ದ ಅವರನ್ನು ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.</p>



<p>“ಪ್ರಬಲ ಸಮುದಾಯದ ಯುವಕರು ಮಾತ್ರ ದುಬಾರಿ ಬೈಕ್‌ಗಳನ್ನು ಓಡಿಸಬಹುದು. ದಲಿತರು ಅಂತಹ ಬೈಕ್‌ಗಳನ್ನು ಓಡಿಸಬಾರದು” ಎಂದು ಹೇಳುತ್ತಾ ಆರೋಪಿಗಳು ಅಯ್ಯಸಾಮಿಯ ಕೈಗಳನ್ನು ಕಡಿದಿದ್ದಾರೆ” ಎಂದು ಸಂತ್ರಸ್ತ ಯುವಕನ ಸಂಬಂಧಿ ಮುನಿಯಸಾಮಿ ಹೇಳಿದ್ದಾರೆ.&nbsp;</p>



<p>ದಾಳಿ ನಡೆದಾಗ ಅಯ್ಯಸಾಮಿ ತಪ್ಪಿಸಿಕೊಂಡು ಸ್ಥಳದಿಂದ ಓಡಿ ಹೋಗಿ ಮನೆ ತಲುಪಿದ್ದಾರೆ. ಇಲ್ಲದಿದ್ದರೆ ಆರೋಪಿಗಳು ಆತನನ್ನು ಕೊಲೆ ಮಾಡುತ್ತಿದ್ದರು ಎಂದು ಮುನಿಯಸಾಮಿ ತಿಳಿಸಿದ್ದಾರೆ.</p>



<p>ಕುಟುಂಬಸ್ಥರು ಅಯ್ಯಸಾಮಿಯನ್ನು ಆಸ್ಪತ್ರೆಗೆ ಕರೆದೊಯ್ದ ನಂತರ, ಪ್ರಬಲ ಜಾತಿಯವರು ದಲಿತ ಕುಟುಂಬದ ಮನೆಯನ್ನು ದೋಚಿದ್ದಾರೆ. ಗ್ರಾಮದಲ್ಲಿ ಜಾತಿ ತಾರತಮ್ಯ ಚಾಲ್ತಿಯಲ್ಲಿದೆ. ತಮ್ಮ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡುವಂತೆ ಮುನಿಯಸಾಮಿ ಒತ್ತಾಯಿಸಿದ್ದಾರೆ.</p>



<p>“ಅಯ್ಯಸಾಮಿ ಬುಲೆಟ್ ಬೈಕ್ ಚಲಾಯಿಸುವುದು ಪ್ರಬಲ ಜಾತಿಯವರಿಗೆ ಇಷ್ಟವಿರಲಿಲ್ಲ. ಈ ಹಿಂದೆಯೂ ಅವರು ಬೈಕಿಗೆ ಹಾನಿ ಮಾಡಿದ್ದರು” ಎಂದು ಅವರ ತಂದೆ ಭೂಮಿನಾಥನ್ ಹೇಳಿದ್ದಾರೆ.</p>



<p>ಬುಲೆಟ್ ಓಡಿಸಿದ್ದಕ್ಕೆ ದಾಳಿ ಮಾಡಲಾಗಿದೆ ಎಂಬುವುದನ್ನು ಪೊಲೀಸ್ ಮೂಲಗಳು ನಿರಾಕರಿಸಿವೆ.&nbsp;</p>



<p>ಅಯ್ಯಸಾಮಿ ಆರೋಪಿಗಳಲ್ಲಿ ಒಬ್ಬನಾದ ಅಥೀಶ್ವರನ್‌ಗೆ ಗೇಲಿ ಮಾಡಿದ್ದರು. ಈ ವಿಚಾರಕ್ಕೆ ಅವರ ನಡುವೆ ಮೊದಲೇ ಜಗಳವಿತ್ತು. ತನಿಖೆ ಇನ್ನೂ ಮುಂದುವರೆದಿದೆ ಎಂದು ಹೇಳಿರುವುದಾಗಿ ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್ ವರದಿ ಹೇಳಿದೆ.</p>



<p>ಘಟನೆ ಸಂಬಂಧ ಸಿಪ್ಕಾಟ್ ಪೊಲೀಸರು ವಿನೋದ್‌ಕುಮಾರ್, ಅಥೀಶ್ವರನ್ ಮತ್ತು ವಲ್ಲರಸು ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ 296 (1), 126 (2), 118 (1), 351 (3) ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್‌ 3(1)(ಆರ್)(ಎಸ್‌) ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿಯೂ ವರದಿಯಾಗಿದೆ.</p>
]]></content:encoded>
					
		
		
			</item>
		<item>
		<title>ಕುದ್ಮಲ್‌ ರಂಗರಾಯರು: ಬ್ರಾಹ್ಮಣರಿಗೆ ಮಾದರಿ ವ್ಯಕ್ತಿತ್ವ</title>
		<link>https://peepalmedia.com/kudmal-rangarayu-a-role-model-for-brahmins/</link>
		
		<dc:creator><![CDATA[Peepal Media]]></dc:creator>
		<pubDate>Thu, 30 Jan 2025 08:20:06 +0000</pubDate>
				<category><![CDATA[ಅಂಕಣ]]></category>
		<category><![CDATA[bengalure]]></category>
		<category><![CDATA[Dalit]]></category>
		<category><![CDATA[dalit activists]]></category>
		<category><![CDATA[Dalit assault]]></category>
		<category><![CDATA[Dalit community]]></category>
		<category><![CDATA[Dalit cultural resistance]]></category>
		<category><![CDATA[dalit dalitlivesmatter dalits]]></category>
		<category><![CDATA[Dalit fighters]]></category>
		<category><![CDATA[Dalit leaders M. Devdas]]></category>
		<category><![CDATA[dalit litterature]]></category>
		<category><![CDATA[dalit lives matter]]></category>
		<category><![CDATA[Dalit movement was born to question exploitation]]></category>
		<category><![CDATA[Dalit organizations]]></category>
		<category><![CDATA[dalitha samskruthika prasthirodha]]></category>
		<category><![CDATA[Famous Ghati Subrahmanya Cattle Fair]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[kannadalit]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=53092</guid>

					<description><![CDATA[(ಜ.30 ರಂದು ಅಂದರೆ ಇಂದು ಕುದ್ಮಲ್‌ ರಂಗರಾಯರ ಪುಣ್ಯತಿಥಿ ಸ್ಮರಣಾರ್ಥ ಈ ಬರಹ.) ಮಂಗಳೂರಿನ ನ್ಯಾಯಾಲಯದಲ್ಲಿ ಪೇದೆ ಕೆಲಸವೊಂದು ಖಾಲಿ ಬಿದ್ದ ಕಾರಣ ಅರ್ಜಿಗಳನ್ನು ಆಹ್ವಾನಿಸಿದ್ದರು. ಅಲ್ಪ ವಿದ್ಯಾಭ್ಯಾಸ ಮಾಡಿದ್ದ ದಲಿತ ಸಮುದಾಯದ ಬೆಂದೂರು ಬಾಬು ಎನ್ನುವವರು ಅದಕ್ಕೆ ಅರ್ಜಿ ಹಾಕಿದ್ದರು. ಸಂದರ್ಶನದಲ್ಲಿ ಜಿಲ್ಲಾ ನ್ಯಾಯಾಧೀಶರಿಗೆ ಆತ ಅರ್ಹನೆಂದು ಕಂಡಿತು. ಇದು ಮೇಲ್ಜಾತಿಯವರ ಅಸಹನೆಗೆ ಕಾರಣವಾಯಿತು. ಆತನನ್ನು ಆ ಹುದ್ದೆಗೆ ಆಯ್ಕೆ ಮಾಡಬಾರದೆಂದು ನ್ಯಾಯಾಲಯದಲ್ಲಿ ಗಲಭೆ ಎಬ್ಬಿಸಿದರು. ದಲಿತರು ಯಾರೂ ಆ ವರೆಗೆ ಜಿಲ್ಲಾ ನ್ಯಾಯಾಲಯದಲ್ಲಿ ನೌಕರಿ [&#8230;]]]></description>
										<content:encoded><![CDATA[
<p>(ಜ.30 ರಂದು ಅಂದರೆ ಇಂದು ಕುದ್ಮಲ್‌ ರಂಗರಾಯರ ಪುಣ್ಯತಿಥಿ ಸ್ಮರಣಾರ್ಥ ಈ ಬರಹ.)</p>



<p>ಮಂಗಳೂರಿನ ನ್ಯಾಯಾಲಯದಲ್ಲಿ ಪೇದೆ ಕೆಲಸವೊಂದು ಖಾಲಿ ಬಿದ್ದ ಕಾರಣ ಅರ್ಜಿಗಳನ್ನು ಆಹ್ವಾನಿಸಿದ್ದರು. ಅಲ್ಪ ವಿದ್ಯಾಭ್ಯಾಸ ಮಾಡಿದ್ದ ದಲಿತ ಸಮುದಾಯದ ಬೆಂದೂರು ಬಾಬು ಎನ್ನುವವರು ಅದಕ್ಕೆ ಅರ್ಜಿ ಹಾಕಿದ್ದರು. ಸಂದರ್ಶನದಲ್ಲಿ ಜಿಲ್ಲಾ ನ್ಯಾಯಾಧೀಶರಿಗೆ ಆತ ಅರ್ಹನೆಂದು ಕಂಡಿತು. ಇದು ಮೇಲ್ಜಾತಿಯವರ ಅಸಹನೆಗೆ ಕಾರಣವಾಯಿತು.</p>



<p>ಆತನನ್ನು ಆ ಹುದ್ದೆಗೆ ಆಯ್ಕೆ ಮಾಡಬಾರದೆಂದು ನ್ಯಾಯಾಲಯದಲ್ಲಿ ಗಲಭೆ ಎಬ್ಬಿಸಿದರು. ದಲಿತರು ಯಾರೂ ಆ ವರೆಗೆ ಜಿಲ್ಲಾ ನ್ಯಾಯಾಲಯದಲ್ಲಿ ನೌಕರಿ ಮಾಡಿರಲಿಲ್ಲ. ನ್ಯಾಯಾಧೀಶರು ಆಕ್ಷೇಪಗಳನ್ನು ಲೆಕ್ಕಿಸದೆ ಬೆಂದೂರು ಬಾಬುಗೆ ನೇಮಕಾತಿಯ ಆದೇಶ ಕೊಟ್ಟೇ ಬಿಟ್ಟರು.</p>



<p>ಕುದ್ಮಲ್ ರಂಗರಾಯರು ಅದೇ ನ್ಯಾಯಾಲಯದಲ್ಲಿ ವಕೀಲರಾಗಿದ್ದರು. ಅವರಿಗೆ ಬೆಂದೂರು ಬಾಬುವಿನ ಆಯ್ಕೆ ಸಮಂಜಸವೆಂದು ತೋರಿತ್ತು. ಅವರು ನ್ಯಾಯಾಧೀಶರ ನಿರ್ಧಾರದ ಪರವಾಗಿದ್ದರು.</p>



<p>ಇದು ಸವರ್ಣೀಯರನ್ನು ಕೆರಳಿಸಿ, ಬ್ರಿಟಿಷ್ ಗವರ್ನರ್ ಗೆ ವಿಷಯ ತಿಳಿಸಿ ನೇಮಕಾತಿಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರಿದರು. ಆ ಸಮಯದಲ್ಲಿ ಬ್ರಿಟಿಷ್ ರೆಸಿಡೆನ್ಸಿ ಮದರಾಸಿನಲ್ಲಿತ್ತು. ಗವರ್ನರ್ ಪರಿಶೀಲನೆಗಾಗಿ ನ್ಯಾಯಾಧೀಶನನ್ನು ಅಲ್ಲಿಗೆ ಕರೆಸಿಕೊಂಡರು.</p>



<p>ಮದರಾಸಿಗೆ ಹೋಗಿದ್ದ ಬ್ರಿಟಿಷ್ ನ್ಯಾಯಾಧೀಶರು ಹಿಂದಕ್ಕೆ ಬಂದು ಕುದ್ಮಲ್ ರಂಗರಾಯರು,ಬೆಂದೂರು ಬಾಬು ಇಬ್ಬರನ್ನೂ ತನ್ನ ಕೊಠಡಿಗೆ ಬರಲು ಹೇಳುತ್ತಾರೆ. ಅವರ ಮುಖದಲ್ಲಿ ಮ್ಲಾನತೆ ಇರುತ್ತದೆ. ತನ್ನ ಪ್ರಯತ್ನ ವಿಫಲವಾಗಿದ್ದನ್ನು ತಿಳಿಸಿ ಬೆಂದೂರು ಬಾಬುಗೆ ನೇಮಕಾತಿ ಪತ್ರ ನೀಡಿದ ಕಾರಣಕ್ಕೆ ತನಗೆ ವರ್ಗಾವಣೆಯಾದ ಪತ್ರವನ್ನು ತೋರಿಸುತ್ತಾರೆ.</p>



<p>“ ನೋಡಿ ರಂಗರಾಯರೇ, ನಾನು ಬಾಬುಗೆ ನೇಮಕಾತಿ ಪತ್ರ ಕಳಿಸಿದ್ದೆ. ಅದನ್ನು ತಡೆ ಹಿಡಿಯಲಾಗಿದೆ. ಅದಲ್ಲದೆ ಅವನು ಇಲ್ಲಿ ನೆಮ್ಮದಿಯಿಂದ ಕೆಲಸ ಮಾಡುವುದು ಕಷ್ಟ. ಅವನು ಉದ್ಧಾರವಾಗಲು ಬಿಡಲಾರರು. ಅವನಿಗೆ ಮತ್ತು ಅವನ ಜಾತಿ ಮಕ್ಕಳಿಗೆ ಅನುಕೂಲವಾಗುವಂತೆ ನೀವೇ ಏನಾದರೂ ಪರಿಹಾರ ಕಂಡುಕೊಳ್ಳಬೇಕು”<br>ನ್ಯಾಯಾಧೀಶರು ಬೇಸರದಿಂದ ಹೇಳುತ್ತಾರೆ. ಈ ಮಾತುಗಳು ರಂಗರಾಯರ ಮೇಲೆ ತೀವ್ರವಾದ ಪರಿಣಾಮವನ್ನು ಬೀರುತ್ತವೆ. ಅವರು ಅನ್ನ, ನೀರು ಬಿಟ್ಟು ಮುಂದೇನು ಮಾಡಬೇಕೆಂದು ಯೋಚಿಸುತ್ತಾರೆ.</p>



<p></p>



<p><img fetchpriority="high" decoding="async" width="600" height="922" class="wp-image-53096" style="width: 600px;" src="https://peepalmedia.com/wp-content/uploads/2025/01/WhatsApp-Image-2025-01-28-at-13.04.04_ee473a85.jpg" alt="" srcset="https://peepalmedia.com/wp-content/uploads/2025/01/WhatsApp-Image-2025-01-28-at-13.04.04_ee473a85.jpg 717w, https://peepalmedia.com/wp-content/uploads/2025/01/WhatsApp-Image-2025-01-28-at-13.04.04_ee473a85-195x300.jpg 195w, https://peepalmedia.com/wp-content/uploads/2025/01/WhatsApp-Image-2025-01-28-at-13.04.04_ee473a85-666x1024.jpg 666w, https://peepalmedia.com/wp-content/uploads/2025/01/WhatsApp-Image-2025-01-28-at-13.04.04_ee473a85-150x231.jpg 150w, https://peepalmedia.com/wp-content/uploads/2025/01/WhatsApp-Image-2025-01-28-at-13.04.04_ee473a85-300x461.jpg 300w, https://peepalmedia.com/wp-content/uploads/2025/01/WhatsApp-Image-2025-01-28-at-13.04.04_ee473a85-696x1070.jpg 696w" sizes="(max-width: 600px) 100vw, 600px" /></p>



<p><strong>ಪರಿವರ್ತನೆಯ ಹರಿಕಾರ</strong><br>ತಮ್ಮಂತೆ ಮನುಷ್ಯರೇ ಆದವರನ್ನು ಪಶುಗಳಿಗಿಂತಲೂ ಕೀಳಾಗಿ ಕಾಣುವ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಕುದ್ಮಲ್ ರಂಗರಾಯರಿಗೆ ಸಹಿಸಲಾರದ ನೋವು ಇರುತ್ತದೆ. ಅವರು ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು, ಜಾತೀಯ ವೈಷಮ್ಯವನ್ನು ದೂರ ಮಾಡಲು, ಅಸ್ಪೃಶ್ಯತೆಯ ಪಿಡುಗನ್ನು ನಿವಾರಣೆ ಮಾಡಲು ತನ್ನ ಬಾಳನ್ನು ಮುಡುಪಾಗಿಡುವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಈ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುವ ಉದ್ದೇಶದಿಂದ, ʼ ಸತ್ಯ- ನ್ಯಾಯ ಎಂದರೆ ಕುದ್ಮಲ್ ರಂಗರಾವ್ʼ ಎನ್ನುವ ಮಟ್ಟಿಗೆ ಹೆಸರು ಮಾಡಿದ್ದ ವಕೀಲಿ ವೃತ್ತಿಯನ್ನು ಬಿಟ್ಟು ಬಿಡುತ್ತಾರೆ.</p>



<p>ಅಕ್ಷರವನ್ನೇ ತಿಳಿಯದ ದಲಿತರ ಪರಿಸ್ಥಿತಿಯನ್ನು ಶಿಕ್ಷಣ ನೀಡುವ ಸುಧಾರಿಸಿಬಹುದೆಂದು ಶಾಲೆಗಳನ್ನು ತೆರೆಯುವ ಯೋಚನೆಯನ್ನು ಮಾಡುತ್ತಾರೆ. ಮಂಗಳೂರಿನ ಚಿಲಿಂಬಿಯಲ್ಲಿ ಹುಲ್ಲು ಛಾವಣಿಯ ಮನೆಯೊಂದನ್ನು ಬಾಡಿಗೆಗೆ ಪಡೆದು ಮೊದಲ ಪ್ರಾಥಮಿಕ ಶಾಲೆ ಆರಂಭಿಸುತ್ತಾರೆ. ಇದು ಸವರ್ಣೀಯರ ಕೆಂಗಣ್ಣಿಗೆ ಗುರಿಯಾಗುತ್ತದೆ. ಶಿಕ್ಷಣದಿಂದ ಆಪತ್ತು ಬರುತ್ತದೆ ಎಂದು ದಲಿತರನ್ನು ಬೆದರಿಸುತ್ತಾರೆ. ಮಕ್ಕಳು ಶಾಲೆಗೆ ಬರದಂತೆ ತಡೆಯುವ ಉದ್ದೇಶದಿಂದ ಶಾಲೆಗೆ ಬರುವ ದಾರಿಯಲ್ಲಿ ಮುನಿಸಿಪಾಲಿಟಿಯ ಮಲವನ್ನು ಸುರಿಯುತ್ತಾರೆ. ದಾರಿಗಡ್ಡವಾಗಿ ಕಲ್ಲುಗಳನ್ನು ಪೇರಿಸಿ ಮಕ್ಕಳನ್ನು ತಡೆಯುತ್ತಾರೆ. ಇದರಿಂದ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ. ರಂಗರಾಯರು ಬೇರೆ ದಾರಿ ಇಲ್ಲದೆ ಶಾಲೆಯನ್ನು ಮುಚ್ಚಬೇಕಾಗುತ್ತದೆ.<br>ಆದರೆ ಈ ಅನುಭವದಿಂದ ರಂಗರಾಯರು ಕಂಗೆಡುವುದಿಲ್ಲ. 1892 ರಲ್ಲಿ ಡಿಪ್ರೆಸ್ಡ್ ಕ್ಲಾಸಸ್ ಮಿಶನ್ (ಡಿ ಎಸ್ ಎಸ್ ) ಎನ್ನುವ ಸಂಸ್ಥೆಯನ್ನು ಹುಟ್ಟು ಹಾಕುತ್ತಾರೆ. ಹಿಂದಿನ ಅನುಭವದಿಂದ ಪಾಠ ಕಲಿತು ಸಮಾನ ಮನಸ್ಸಿನ ಕೆಲವರ ನೆರವನ್ನು ಪಡೆಯುತ್ತಾರೆ. ಸಂಸ್ಥೆಯ ವತಿಯಿಂದ ದಡ್ಡಲಕಾಡು, ಶೇಡಿಗುಡ್ಡೆ, ಅತ್ತಾವರ, ನೇಜಾರು, ಬಾಬುಗುಡ್ಡೆ, ಕಂಕನಾಡಿ, ಮುಲ್ಕಿ, ಬನ್ನಂಜೆ, ಉಡುಪಿ, ಬೋಳೂರು ಮುಂತಾದ ಅವಿಭಜಿತ ದಕ್ಷಿಣ ಕನ್ನಡದ ಹಲವು ಕಡೆಗಳಲ್ಲಿ ಶಾಲೆಗಳನ್ನು ತೆರೆಯುತ್ತಾರೆ.</p>



<p>ಶಾಲೆಗಳನ್ನು ಆರಂಭಿಸಿದರೂ ಹೆಚ್ಚು ವಿದ್ಯಾರ್ಥಿಗಳು ಬರುತ್ತಿರಲಿಲ್ಲ. ಶಾಲೆಯಲ್ಲಿ ಕಲಿಸಲು ಅಧ್ಯಾಪಕರ ಕೊರತೆಯೂ ಇತ್ತು.</p>



<p>ರಂಗರಾಯರು ಮಕ್ಕಳು ಶಾಲೆಗೆ ಬರುವಂತೆ ಮಾಡಲು ಮಕ್ಕಳಿಗೆ ಎರಡು ಪೈಸೆ, ಆರು ಪೈಸೆ ಹಣವನ್ನು ಕೊಟ್ಟು ಪ್ರತಿ ದಿನ ಶಾಲೆಗೆ ತಪ್ಪದೇ ಬರುವಂತೆ ಪ್ರೇರೇಪಿಸುತ್ತಾರೆ. ಸವರ್ಣೀಯರು ಪಾಠ ಮಾಡಲು ಒಪ್ಪದಿದ್ದಾಗ ಕ್ರೈಸ್ತ ಅಧ್ಯಾಪಕರನ್ನು ನೇಮಿಸಿಕೊಳ್ಳುತ್ತಾರೆ.</p>



<p>ಆದರೆ ದೂರದ ಮಕ್ಕಳಿಗೆ ಶಾಲೆಗೆ ದಿನಾ ಬಂದು ಹೋಗಲು ಸಾಧ್ಯವಾಗುತ್ತಿರಲಿಲ್ಲ. ಇದರ ಬಗ್ಗೆ ಯೋಚಿಸಿ ವಸತಿ ಶಾಲೆಗಳನ್ನು ತೆರೆಯುವ ತೀರ್ಮಾನ ಮಾಡುತ್ತಾರೆ. ಆ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯೆಯ ಅಗತ್ಯ ಇಲ್ಲವೆಂದೇ ತಿಳಿದಿದ್ದರು. ರಂಗರಾಯರು ಹುಡುಗಿಯರಿಗೂ ಸಮಾನ ವಿದ್ಯಾಭ್ಯಾಸ ಇರಬೇಕೆಂದು 1899 ರಲ್ಲಿ ಮಂಗಳೂರಿನ ಶೇಡಿಗುಡ್ಡೆಯಲ್ಲಿ ವಿದ್ಯಾರ್ಥಿನಿ ನಿಲಯವನ್ನು ಆರಂಭಿಸುತ್ತಾರೆ. ತಮ್ಮ ಹೆಣ್ಣು ಮಕ್ಕಳನ್ನೂ ಸಾಮಾನ್ಯ ಶಾಲೆಗಳಲ್ಲಿಯೇ ಓದಿಸುತ್ತಾರೆ.</p>



<p>ಮೂಢನಂಬಿಕೆ, ಕೆಟ್ಟ ಪದ್ಧತಿಗಳ ನಿವಾರಿಸಿ, ಸ್ವಚ್ಚತೆಯನ್ನು ತಿಳಿಸಿಕೊಡುವುದಕ್ಕಾಗಿ ರಂಗರಾಯರು ಹಗಲು- ರಾತ್ರಿ ದಲಿತರ ಕೇರಿಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಮದ್ಯಪಾನ ಮಾಡಬೇಡಿ, ಕೆಟ್ಟ ಚಟಗಳಿಂದ ದೂರವಿರಿ ಎಂದು ತಿಳಿವಳಿಕೆ ಹೇಳುತ್ತಿದ್ದರು. ದಲಿತ ಮಕ್ಕಳನ್ನು ಸ್ವತಃ ಮೀಯಿಸಿ, ತೊಡೆಯ ಮೇಲೆ ಕೂರಿಸಿಕೊಳ್ಳುತ್ತಿದ್ದರು. ಸ್ವಚ್ಚತಾ ಕೆಲಸದಲ್ಲಿ ತಾವೇ ಭಾಗಿಯಾಗುತ್ತಿದ್ದರು.</p>



<p>ಕುದ್ಮಲ್ ರಂಗರಾಯರು ಮಾಡುತ್ತಿದ್ದ ಅಸ್ಪೃಶ್ಯತೆ ನಿವಾರಣೆಯ ಕೆಲಸವನ್ನು ಸವರ್ಣೀಯರು ಸಹಿಸಿಕೊಳ್ಳುತ್ತಿರಲಿಲ್ಲ. ಅವರು ಸಾರಸ್ವತ ಬ್ರಾಹ್ಮಣ ಸಮಾಜದ ವಿರೋಧಕ್ಕೆ ಗುರಿಯಾಗಬೇಕಾಗುತ್ತದೆ. ರಂಗರಾಯರು ಸೇರಿದಂತೆ ಅವರ ಕುಟುಂಬದ ಎಲ್ಲರೂ ಬಹಿಷ್ಕಾರಕ್ಕೆ ಒಳಗಾಗುತ್ತಾರೆ.<br>ಸವರ್ಣೀಯರ ಆಕ್ರೋಶ ಇಷ್ಟಕ್ಕೇ ನಿಲ್ಲುವುದಿಲ್ಲ. ಅವರ ಮೂವರು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ತಡೆಯೊಡುತ್ತಾರೆ. ಮಾನಭಂಗದ, ಹತ್ಯೆಯ ಬೆದರಿಕೆಗಳು ಬರುತ್ತವೆ. ಆದರೆ ರಂಗರಾಯರು ತಮ್ಮ ನಿಲುವಿನಿಂದ ಕಿಂಚಿತ್ತೂ ಹಿಂದೆ ಸರಿಯುವುದಿಲ್ಲ.</p>



<p>ಶಿಕ್ಷಣದಿಂದ ಮಾತ್ರವೇ ಅಸ್ಪೃಶ್ಯರ ಉದ್ಧಾರವಾಗದು ಎಂದು ರಂಗರಾಯರಿಗೆ ತಿಳಿದಿರುತ್ತದೆ. ದಲಿತರು ಸ್ವತಂತ್ರವಾಗಿ ಬದುಕಲು ಅವಕಾಶ ಕಲ್ಪಿಸುವ ಯೋಜನೆಗಳನ್ನು ಹಾಕಿಕೊಳ್ಳುತ್ತಾರೆ. ಹೃದಯವಂತಿಕೆ ಇರುವ ಜಮೀನುದಾರರಿಂದ, ವ್ಯವಹಾರಸ್ಥರಿಂದ ಜಮೀನು, ಧನವನ್ನು ದೇಣಿಗೆಯಾಗಿ ಪಡೆಯುತ್ತಾರೆ. ರಂಗರಾಯರ ಕೆಲಸವನ್ನು ಗಮನಿಸಿದ ಬ್ರಿಟಿಷ್ ಸರಕಾರ ಖಾಲಿ ಬಿದ್ದ ಭೂಮಿಯನ್ನು, ಗೋಮಾಳವನ್ನು ಉಚಿತವಾಗಿ ಕೊಡುತ್ತದೆ. ದೇಶಭಕ್ತ ಕಾರ್ನಾಡು ಸದಾಶಿವರಾಯರು ತಮ್ಮ ಆಸ್ತಿಯ ಕೆಲವು ಅಂಶವನ್ನೂ, ಹಣವನ್ನೂ ಕೊಡುತ್ತಾರೆ. ದಾನವಾಗಿ ಪಡೆದ ಭೂಮಿಯನ್ನು ದಲಿತರಿಗೆ ಉಳಲು, ವಾಸಿಸಲು ಯೋಗ್ಯವಾಗುವಂತೆ ಹಂಚಿಕೆ ಮಾಡುವ ರಂಗರಾಯರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಲಿತರು ಸ್ವಂತ ಅಸ್ತಿಯನ್ನು ಹೊಂದಲು ಕಾರಣರಾಗುತ್ತಾರೆ.</p>



<p>ರಂಗರಾಯರು ಪರಿಶಿಷ್ಟ ಸಮುದಾಯದಲ್ಲಿ ಸ್ವ ಉದ್ಯೋಗವನ್ನು ಪ್ರೋತ್ಸಾಹಿಸುವ ಕೆಲಸದಲ್ಲಿ ತೊಡಗುತ್ತಾರೆ. ಬಡಗಿ ಕೆಲಸ, ತೋಟಗಾರಿಕೆ, ನೇಯ್ಗೆ, ರೇಷ್ಮೆ ಹುಳು ಸಾಕಾಣಿಕೆ ಮತ್ತು ಸಣ್ಣ ಕೈಗಾರಿಕೆಗಳಲ್ಲಿ ತರಬೇತಿ ಕೊಡಿಸಿ ಸ್ವಂತ ಉದ್ಯೋಗಳಲ್ಲಿ ತೊಡಗುವಂತೆ ಮಾಡುತ್ತಾರೆ. ಅವರ ಉತ್ಪತ್ತಿಗೆ ಮಾರುಕಟ್ಟೆ ಮತ್ತು ಅವಶ್ಯವಾದ ಹಣಕಾಸಿನ ನೆರವಿಗಾಗಿ ʼ ಕೋರ್ಟ್ ಹಿಲ್ ಆದಿ ದ್ರಾವಿಡ ಸಂಘ ʼ ಎನ್ನುವ ಸಂಸ್ಥೆಯನ್ನು ಸ್ಥಾಪಿಸುತ್ತಾರೆ. ಯುವಕ, ಯುವತಿಯರಿಗೆ ಸಣ್ಣ ಕೈಗಾರಿಕೆಯಲ್ಲಿ, ಕುಶಲ ಕರ್ಮಗಳಲ್ಲಿ ಪರಿಣತಿ ನೀಡುವ ಉದ್ದೇಶದಿಂದ ಐಟಿಐಯ ಸ್ಥಾಪನೆಯೂ ಆಗುತ್ತದೆ.</p>



<p>ಅಸ್ಪೃಶ್ಯರ ಸಮಗ್ರ ಏಳಿಗೆಯಾಗಬೇಕಾದರೆ ರಾಜಕೀಯದಲ್ಲೂ ಅವಕಾಶ ಇರಬೇಕೆನ್ನುವುದು ಅವರ ನಿಲುವಾಗಿತ್ತು. ಪರಿಶಿಷ್ಟರಿಗೆ ಮೀಸಲಾತಿ ನೀಡಬೇಕೆಂದು ಹೋರಾಟ ನಡೆಸುತ್ತಾರೆ. ಇದರ ಫಲವಾಗಿ ಅವರ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ಅಂಗಾರ ಮಾಸ್ತರ್ ಜಿಲ್ಲಾ ಬೋರ್ಡ್ ಗೆ ನೇಮಕಗೊಳ್ಳುತ್ತಾರೆ. ಪ್ರತಿಷ್ಠಿತ ಮಂಗಳೂರು ಮುನಿಸಿಪಾಲಿಟಿಯಲ್ಲಿ ದಲಿತರಾದ ಗೋವಿಂದ ಮಾಸ್ತರ್ ಸದಸ್ಯತ್ವ ಪಡೆಯುತ್ತಾರೆ.<br>ದಲಿತರ, ತಳ ಸಮುದಾಯದರ ಏಳಿಗೆಗಾಗಿ ಎಲ್ಲಾ ರೀತಿಯ ಪ್ರಯತ್ನಗಳನ್ನೂ ಮಾಡಿದ ರಂಗರಾಯರು ತನಗಾಗಿ ಏನನ್ನೂ ಬಯಸಿದವರಲ್ಲ. ಆಗಿನ ಬ್ರಿಟಿಷ್ ಸರಕಾರ ರಂಗರಾಯರು ದೀನ ದಲಿತರಿಗೆ ಮಾಡಿದ ಕೆಲಸವನ್ನು ಗುರುತಿಸಿ ʼ ರಾವ್ ಬಹದ್ದೂರ್ ʼ ಬಿರುದನ್ನೂ ಪದಕ, ಪ್ರಮಾಣ ಪತ್ರಗಳನ್ನೂ ಕೊಟ್ಟು ಅವರನ್ನು ಗೌರವಿಸುತ್ತದೆ. ಈ ಬಿರುದು. ಪ್ರಮಾಣ ಪತ್ರಗಳು ಹೆಮ್ಮೆ, ಅಹಂಕಾರಗಳಿಗೆ ಕಾರಣವಾಗುತ್ತದೆಂದು ಅವೆಲ್ಲವನ್ನೂ ಬೆಂಕಿಗೆ ಹಾಕಿ ನಿಶ್ಚಿಂತರಾಗಿ ಉಳಿದ ಮಹನೀಯರು ಅವರು.</p>



<p>&#8220;ನಾನು ಬದುಕಿರುವಾಗಲೇ ನನ್ನ ಶಾಲೆಯಲ್ಲಿ ಕಲಿತ ಓರ್ವ ದಲಿತ ಸಮುದಾಯದ ಹುಡುಗ ಪದವೀಧರನಾಗಿ ಉನ್ನತ ಉದ್ಯೋಗ ಹೊಂದಿ, ಅವನದೇ ಆದ ಮೋಟಾರು ವಾಹನದಲ್ಲಿ ನಮ್ಮೂರ ರಸ್ತೆಯಲ್ಲಿ ಹೋಗುತ್ತಿರುವಾಗ ರಸ್ತೆಯಲ್ಲಿ ಎದ್ದ ಧೂಳು ನನ್ನ ತಲೆಗೆ ತಾಕಿದರೆ ನನ್ನ ಜನ್ಮ ಸಾರ್ಥಕ&#8221; ಎಂದು ಹೇಳುತ್ತಿದ್ದ ಅವರಿಗೆ ದಲಿತರ ಸರ್ವತೋಮುಖ ಏಳಿಗೆಯ ಕನಸಿತ್ತು.</p>



<figure class="wp-block-image size-large"><img decoding="async" width="1024" height="595" src="https://peepalmedia.com/wp-content/uploads/2025/01/WhatsApp-Image-2025-01-28-at-13.04.04_a50694c8-1024x595.jpg" alt="" class="wp-image-53098" srcset="https://peepalmedia.com/wp-content/uploads/2025/01/WhatsApp-Image-2025-01-28-at-13.04.04_a50694c8-1024x595.jpg 1024w, https://peepalmedia.com/wp-content/uploads/2025/01/WhatsApp-Image-2025-01-28-at-13.04.04_a50694c8-300x174.jpg 300w, https://peepalmedia.com/wp-content/uploads/2025/01/WhatsApp-Image-2025-01-28-at-13.04.04_a50694c8-768x447.jpg 768w, https://peepalmedia.com/wp-content/uploads/2025/01/WhatsApp-Image-2025-01-28-at-13.04.04_a50694c8-150x87.jpg 150w, https://peepalmedia.com/wp-content/uploads/2025/01/WhatsApp-Image-2025-01-28-at-13.04.04_a50694c8-696x405.jpg 696w, https://peepalmedia.com/wp-content/uploads/2025/01/WhatsApp-Image-2025-01-28-at-13.04.04_a50694c8-1068x621.jpg 1068w, https://peepalmedia.com/wp-content/uploads/2025/01/WhatsApp-Image-2025-01-28-at-13.04.04_a50694c8.jpg 1080w" sizes="(max-width: 1024px) 100vw, 1024px" /></figure>



<p>ಕುದ್ಮಲ್ ರಂಗರಾಯರ ಕನಸು ಅವರು ಬದುಕಿದ್ದಾಗ ನೆರವೇರುವುದಿಲ್ಲ. 1928ರ ಜನವರಿ 30ರಂದು ತಮ್ಮ ಅರವತೊಂಬತ್ತನೇ ವಯಸ್ಸಲ್ಲಿ ಅವರು ತೀರಿಕೊಂಡ ಎರಡು ವರ್ಷಗಳ ಬಳಿಕ ಅವರ ಸಂಸ್ಥೆಯಲ್ಲಿ ಓದಿದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಯೊಬ್ಬ ಪದವೀಧರನಾಗಿ ಉನ್ನತ ಉದ್ಯೋಗವನ್ನು ಪಡೆಯುತ್ತಾನೆ.</p>



<p>ಜಡ್ಡುಗಟ್ಟಿದ ಸಮಾಜ</p>



<p>ಕುದ್ಮಲ್ ರಂಗರಾಯರು ತಮ್ಮ ಬದುಕಿನುದ್ದಕ್ಕೂ ಅಸಮಾನತೆಯ, ಅಸ್ಪೃಶ್ಯತೆಯ ವಿರುದ್ಧ ಹೋರಾಟ ಮಾಡಿದರು. ಅದರಿಂದ ಕಷ್ಟ, ನಷ್ಟಗಳನ್ನು ಅನುಭವಿಸಿ ಸಮಾಜದ ಅಸಹನೆಗೂ ಗುರಿಯಾದರು. ಆದರೆ ತಾನು ಕನಸಿದ ಸಮಾಜವನ್ನು ಅವರಿಗೆ ಕಾಣಲಾಗಲಿಲ್ಲ. ಅವರ ನಂತರವಾದರೂ ಅವರ ಆಶೋತ್ತರಗಳು ನೆರವೇರಿದವೇ ? ಎಂದು ನಾವು ಯೋಚಿಸಬೇಕಾಗಿದೆ.</p>



<p>ಅವರು ಹೋರಾಟ ಆರಂಭಿಸಿ ಸುಮಾರು ಹದಿನಾಲ್ಕು ದಶಕಗಳು ಕಳೆದಿವೆ. ಆದರೆ ತಾರತಮ್ಯಗಳು ಅಳಿದಿಲ್ಲ. ದುಃಸ್ವಪ್ನದಂತೆ ಹೊಸ ಹೊಸ ರೀತಿಯಲ್ಲಿ ಸಮಾಜದಲ್ಲಿ ವೈಷಮ್ಯಗಳು ಹೆಚ್ಚುತ್ತಿವೆ. ಜನರ ಉಡುಗೆ ತೊಡುಗೆಗಳಲ್ಲಿ, ರಸ್ತೆ, ಕಟ್ಟಡಗಳ ರಚನೆಯಲ್ಲಿ ಬದಲಾವಣೆ ಕಂಡು ಬಂದರೂ ಸಮಾಜದ ರೀತಿನೀತಿಗಳಲ್ಲಿ, ಪ್ರತಿಯೊಬ್ಬರನ್ನೂ ಸಮಾನವಾಗಿ ಕಾಣುವ ದೃಷ್ಟಿಯಲ್ಲಿ ಪರಿವರ್ತನೆಯಾಗಿದ್ದು ಕಡಿಮೆ.</p>



<p>ದಲಿತರಿಗೆ, ಕೊರಗರಿಗೆ ಕುದ್ಮಲ್ ರಂಗರಾಯರು ಕೊಡಿಸಿದ ಸೈಟ್ ಗಳು, ಉಳುಮೆಯ ಭೂಮಿ ಪರರ ಸೊತ್ತಾಗಿದೆ. ಹಲವು ಆಮಿಷ, ಬೆದರಿಕೆಗಳನ್ನು ಒಡ್ಡಿ ಅದನ್ನು ಅವರಿಂದ ವಶ ಪಡಿಸಿಕೊಳ್ಳಲಾಗಿದೆ. ನಾವೆಲ್ಲಾ ಒಂದೇ ಎನ್ನುವ ತೋರ್ಪಡಿಕೆ ಕೇವಲ ಬೂಟಾಟಿಕೆಯಾಗಿದೆ. ಇತ್ತೀಚೆಗೆ ಕೊರಗ ಸಮುದಾಯದವರು ಮೆರವಣಿಗೆಯಲ್ಲಿ ತೆರಳಿ ತಮ್ಮ ಹಕ್ಕುಗಳಿಗಾಗಿ ಬೇಡಿಕೆ ಸಲ್ಲಿಸಿ, ಹೋರಾಟದ ಸೂಚನೆ ನೀಡಿದುದು ಇದಕ್ಕೆ ಸಾಕ್ಷಿ.</p>



<p>ಮಂಗಳೂರಿನ ನಂದಿಗುಡ್ಡೆಯಲ್ಲಿ ರಂಗರಾಯರ ಸಮಾಧಿಯಿದೆ. ಅದನ್ನು ಮಂಗಳೂರಿನವರು ಮರೆತೇ ಬಿಟ್ಟಿದ್ದಾರೆ. ರಂಗರಾಯರ ಬಗ್ಗೆ ತಿಳಿದಿರುವ ಕೆಲವರು ಅಪರೂಪಕ್ಕೆ ಹೋಗಿ ಬರುವುದುಂಟು. ಅವರ ಆದರ್ಶಗಳಿಗೆ, ಮಾಡಿದ ಕೆಲಸ ಕಾರ್ಯಗಳಿಗೆ, ಸಮಾನತೆಯ ಸಮಾಜದ ಕನಸಿಗೆ ಸಮಾಧಿ ಕಟ್ಟಿರುವಾಗ ಇದೇನು ದೊಡ್ಡ ವಿಷಯವಲ್ಲ!</p>



<figure class="wp-block-image size-large"><img decoding="async" width="1024" height="811" src="https://peepalmedia.com/wp-content/uploads/2025/01/WhatsApp-Image-2025-01-28-at-13.04.03_53323ff0-1024x811.jpg" alt="" class="wp-image-53099" srcset="https://peepalmedia.com/wp-content/uploads/2025/01/WhatsApp-Image-2025-01-28-at-13.04.03_53323ff0-1024x811.jpg 1024w, https://peepalmedia.com/wp-content/uploads/2025/01/WhatsApp-Image-2025-01-28-at-13.04.03_53323ff0-300x238.jpg 300w, https://peepalmedia.com/wp-content/uploads/2025/01/WhatsApp-Image-2025-01-28-at-13.04.03_53323ff0-768x608.jpg 768w, https://peepalmedia.com/wp-content/uploads/2025/01/WhatsApp-Image-2025-01-28-at-13.04.03_53323ff0-150x119.jpg 150w, https://peepalmedia.com/wp-content/uploads/2025/01/WhatsApp-Image-2025-01-28-at-13.04.03_53323ff0-696x551.jpg 696w, https://peepalmedia.com/wp-content/uploads/2025/01/WhatsApp-Image-2025-01-28-at-13.04.03_53323ff0-1068x846.jpg 1068w, https://peepalmedia.com/wp-content/uploads/2025/01/WhatsApp-Image-2025-01-28-at-13.04.03_53323ff0.jpg 1080w" sizes="(max-width: 1024px) 100vw, 1024px" /></figure>



<ul class="wp-block-list">
<li><strong>ಎಂ.ನಾಗರಾಜ ಶೆಟ್ಟಿ </strong></li>
</ul>



<p></p>
]]></content:encoded>
					
		
		
			</item>
		<item>
		<title>ಚಾತುವರ್ಣ ಪದ್ದತಿ ಬಗ್ಗೆ ಮೊದಲು ಪ್ರಶ್ನಿಸಿದ ಪುಲೆ ಅವರ ʼಗುಲಾಮಗಿರಿʼ ಕೃತಿಗೆ 150 ವರ್ಷ</title>
		<link>https://peepalmedia.com/150-years-since-pules-work-gulamagiri-which-first-questioned-the-chatuvarna-system/</link>
		
		<dc:creator><![CDATA[Peepal Media]]></dc:creator>
		<pubDate>Sat, 23 Nov 2024 12:32:37 +0000</pubDate>
				<category><![CDATA[ಅಂಕಣ]]></category>
		<category><![CDATA[Dalit]]></category>
		<category><![CDATA[dalit activists]]></category>
		<category><![CDATA[Dalit assault]]></category>
		<category><![CDATA[Dalit community]]></category>
		<category><![CDATA[Dalit couple]]></category>
		<category><![CDATA[Dalit cultural resistance]]></category>
		<category><![CDATA[dalit dalitlivesmatter dalits]]></category>
		<category><![CDATA[Dalit fighters]]></category>
		<category><![CDATA[Dalit guest lecture]]></category>
		<category><![CDATA[Dalit leaders M. Devdas]]></category>
		<category><![CDATA[dalit litterature]]></category>
		<category><![CDATA[Dalit organizations]]></category>
		<category><![CDATA[dalitanews]]></category>
		<category><![CDATA[dalith]]></category>
		<category><![CDATA[dalith women]]></category>
		<category><![CDATA[dalith youth]]></category>
		<category><![CDATA[dalitha samskruthika prasthirodha]]></category>
		<category><![CDATA[daliths]]></category>
		<category><![CDATA[india]]></category>
		<category><![CDATA[jyotibhapule]]></category>
		<category><![CDATA[kannada]]></category>
		<category><![CDATA[maharastra]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[pule]]></category>
		<category><![CDATA[writing]]></category>
		<guid isPermaLink="false">https://peepalmedia.com/?p=49514</guid>

					<description><![CDATA[1873 ರಲ್ಲಿ ಮಹಾತ್ಮ ಜ್ಯೋತಿಬಾ ಫುಲೆಯವರು ರಚಿಸಿದ ʼ ಗುಲಾಮ ಗಿರಿʼ ಕೃತಿಗೆ 150 ವರ್ಷ ತುಂಬಿತು. ಫುಲೆಯವರ ʼ ಗುಲಾಮಗಿರಿʼ ಯ ಮೊದಲು ಜಾತಿ ಪದ್ಧತಿಯನ್ನು ವಿರೋಧಿಸಿದ ಯಾವ ಪುಸ್ತಕವೂ ಪ್ರಕಟವಾಗಿರಲಿಲ್ಲ. ʼ ಗುಲಾಮಗಿರಿʼ ಪುಸ್ತಕದಲ್ಲಿ ಚಾತುರ್ವರ್ಣ್ಯ ಪದ್ಧತಿಯನ್ನು ಕಟುವಾದ ಶಬ್ದಗಳಲ್ಲಿ ಟೀಕಿಸುವ ಜ್ಯೋತಿಬಾ ಫುಲೆಯವರು ಶೂದ್ರರು ಮತ್ತು ಅತಿ ಶೂದ್ರರಲ್ಲಿ ಎಚ್ಚರವನ್ನೂ, ಸ್ವಾತಂತ್ರ್ಯ, ಸಮಾನತೆಯ ಬಯಕೆಯನ್ನೂ ಹುಟ್ಟು ಹಾಕಿದ್ದರು. ʼ ಗುಲಾಮಗಿರಿ- 150 ʼ ಎನ್ನುವ ಅರ್ಥಪೂರ್ಣ ಕಾರ್ಯಕ್ರಮವನ್ನು ಇತ್ತೀಚೆಗೆ ‌ʼ ನವಯಾನ ಟ್ರಸ್ಟ್ [&#8230;]]]></description>
										<content:encoded><![CDATA[
<ul class="wp-block-list">
<li><strong>ಎಂ ನಾಗರಾಜ ಶೆಟ್ಟಿ</strong></li>
</ul>



<p>1873 ರಲ್ಲಿ ಮಹಾತ್ಮ ಜ್ಯೋತಿಬಾ ಫುಲೆಯವರು ರಚಿಸಿದ ʼ ಗುಲಾಮ ಗಿರಿʼ ಕೃತಿಗೆ 150 ವರ್ಷ ತುಂಬಿತು. ಫುಲೆಯವರ ʼ ಗುಲಾಮಗಿರಿʼ ಯ ಮೊದಲು ಜಾತಿ ಪದ್ಧತಿಯನ್ನು ವಿರೋಧಿಸಿದ ಯಾವ ಪುಸ್ತಕವೂ ಪ್ರಕಟವಾಗಿರಲಿಲ್ಲ. ʼ ಗುಲಾಮಗಿರಿʼ ಪುಸ್ತಕದಲ್ಲಿ ಚಾತುರ್ವರ್ಣ್ಯ ಪದ್ಧತಿಯನ್ನು ಕಟುವಾದ ಶಬ್ದಗಳಲ್ಲಿ ಟೀಕಿಸುವ ಜ್ಯೋತಿಬಾ ಫುಲೆಯವರು ಶೂದ್ರರು ಮತ್ತು ಅತಿ ಶೂದ್ರರಲ್ಲಿ ಎಚ್ಚರವನ್ನೂ, ಸ್ವಾತಂತ್ರ್ಯ, ಸಮಾನತೆಯ ಬಯಕೆಯನ್ನೂ ಹುಟ್ಟು ಹಾಕಿದ್ದರು.</p>



<p>ʼ ಗುಲಾಮಗಿರಿ- 150 ʼ ಎನ್ನುವ ಅರ್ಥಪೂರ್ಣ ಕಾರ್ಯಕ್ರಮವನ್ನು ಇತ್ತೀಚೆಗೆ ‌ʼ ನವಯಾನ ಟ್ರಸ್ಟ್ ʼ ಹಮ್ಮಿಕೊಂಡು ಈ ಪುಸ್ತಕವನ್ನು ನೆನಪಿಸುವ ಮತ್ತು ಫುಲೆಯವರ ಸಾಧನೆಗಳ ಬಗ್ಗೆ ಮನನ ಮಾಡುವ ಅವಕಾಶವನ್ನು ಒದಗಿಸಿತು. ಬೆಂಗಳೂರಲ್ಲಿ ಅರಂಭಗೊಂಡ ʼ ನವಯಾನ ಟ್ರಸ್ಟ್‌ ʼ ತನ್ನ ಮೊದಲ ಕಾರ್ಯಕ್ರಮವಾಗಿ ಇಂತಹ ಒಂದು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಶ್ಲಾಘನೀಯ.<img loading="lazy" decoding="async" width="800" height="600" class="wp-image-49515" style="width: 800px;" src="https://peepalmedia.com/wp-content/uploads/2024/11/WhatsApp-Image-2024-11-22-at-11.44.52_c7f33966.jpg" alt="" srcset="https://peepalmedia.com/wp-content/uploads/2024/11/WhatsApp-Image-2024-11-22-at-11.44.52_c7f33966.jpg 1599w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_c7f33966-300x225.jpg 300w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_c7f33966-1024x768.jpg 1024w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_c7f33966-768x576.jpg 768w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_c7f33966-1536x1153.jpg 1536w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_c7f33966-150x113.jpg 150w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_c7f33966-696x522.jpg 696w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_c7f33966-1068x802.jpg 1068w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_c7f33966-265x198.jpg 265w" sizes="auto, (max-width: 800px) 100vw, 800px" /></p>



<p>ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಕೃತಿಯ ವಿವರಗಳನ್ನು ಪ್ರಸ್ತಾಪಿಸಿ, ಪ್ರಸ್ತುತ ಸಂದರ್ಭಕ್ಕೆ ಅನುಸಾರವಾಗಿ ಹಲವು ಪ್ರಶ್ನೆಗಳನ್ನು ಎತ್ತಿದರು. ʼ ಗುಲಾಮಗಿರಿ ʼ ಪ್ರಕಟವಾದ ಸಂದರ್ಭ, ಅದರಲ್ಲಿ ಬಳಕೆಯಾಗಿರುವ ಕಟು ಮಾತುಗಳು, ಪುರಾಣಗಳ ಅರ್ಥೈಸುವಿಕೆ, ಮಿತ್‌ ಗಳ ಅಗತ್ಯ ಇವುಗಳ ಬಗ್ಗೆ ಮಾತು ಬಂತು. ʼ ಗುಲಾಮಗಿರಿ ʼ ಯ ಓದು ಮತ್ತು ಅದನ್ನು ವರ್ತಮಾನಕ್ಕೆ ಹೊಂದಿಸಿಕೊಳ್ಳುವುದರ ಬಗೆಗೆ ಚಿಂತನೆ ಅಗತ್ಯವಿದೆ ಎನ್ನುವ ಮಾತುಗಳು ಕೇಳಿ ಬಂದವು. ಈ ಕುರಿತು ನಿರ್ದುಷ್ಟವಾಗಿ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಮತ್ತು ಅದರ ಅಗತ್ಯ ಇಲ್ಲದಿದ್ದರೂ ಜಾತಿ ಪದ್ಧತಿ ತನ್ನೆಲ್ಲ ಕೆಡುಕುಗಳೊಂದಿಗೆ, ಕಂಡರೂ ಕಾಣದಂತೆ ಸವಾರಿ ಮಾಡುತ್ತಿರುವ ಹೊತ್ತಿನಲ್ಲಿ ʼ ಗುಲಾಮ ಗಿರಿʼ ಕೃತಿಯನ್ನು ಅವಲೋಕಿಸುವ ಮತ್ತು ಅದನ್ನು ಸದ್ಯಕ್ಕೆ ಹೊಂದಿಸಿಕೊಳ್ಳುವ ಅಗತ್ಯವಂತೂ ಇದೆ ಎನ್ನುವುದರಲ್ಲಿ ಸಂದೇಹವಿಲ್ಲ.</p>



<p>ಶೂದ್ರ, ಅತಿ ಶೂದ್ರರ ಗುಲಾಮಗಿರಿ</p>



<p>ಜ್ಯೋತಿಬಾ ಫುಲೆಯವರನ್ನು ಬಾಬಾ ಸಾಹೇಬ್ ಅಂಬೇಡ್ಕರ್ ತನ್ನ ಮೂರನೆಯ ಗುರುವೆಂದು ತಿಳಿದುಕೊಂಡಿದ್ದರು. ಭಗವಾನ್ ಬುದ್ಧ, ಸಂತ ಕಬೀರ ಮತ್ತು ಫುಲೆಯವರನ್ನು ತನ್ನ ಗುರುಗಳೆಂದು ತಿಳಿದಿದ್ದ ಬಾಬಾ ಸಾಹೇಬರಿಗೆ ʼ ಬುದ್ಧ ಮತ್ತು ಧಮ್ಮʼ ಕೃತಿಯ ನಂತರ ಫುಲೆಯವರ ಜೀವನ ಚರಿತ್ರೆ ಬರೆಯುವ ಉದ್ದೇಶವಿತ್ತಂತೆ. ಅವರ ಅನಾರೋಗ್ಯದ ಕಾರಣ ಅದು ಕೈಗೂಡಲಿಲ್ಲ. ಬಾಬಾಸಾಹೇಬರ ತಂದೆ ರಾಮ್ ಜಿ ಸತ್ಪಾಲ್ ರವರಿಗೆ ಫುಲೆ ಮತ್ತು ಅವರ ʼ ಸತ್ಯ ಶೋಧಕ ಸಮಾಜʼ ಗೋವಿಂದ ರಾನಡೆಯವರ ಮೂಲಕ ತಿಳಿದಿತ್ತು. ಇದರಿಂದ ಬಾಲ್ಯದಲ್ಲೇ ಬಾಬಾ ಸಾಹೇಬರು ಫುಲೆಯವರ ವಿಚಾರ ಮತ್ತು ವಿಧಾಯಕ ಕೆಲಸಗಳ ಅರಿವು ಪಡೆದಿದ್ದರು. ಬಾಬಾ ಸಾಹೇಬರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಜ್ಯೋತಿ ಬಾ ಫುಲೆಯವರ ಪ್ರಭಾವ ಇದ್ದೇ ಇತ್ತು.</p>



<p>ಹಾಗಿದ್ದರೂ ಬಾಬಾ ಸಾಹೇಬರು ಹಲವು ವಿಷಯಗಳಲ್ಲಿ ಫುಲೆಯವರಿಗಿಂತ ಭಿನ್ನವಾದ ನಿಲುವನ್ನು ತಳೆಯುತ್ತಾರೆ. ಅವರ ಅಭಿಪ್ರಾಯಗಳನ್ನು ಒಪ್ಪದ ಸಂದರ್ಭಗಳಲ್ಲಿ ಖಂಡಿಸುವುದಿಲ್ಲ. ಆದರೆ ತಮ್ಮ ವ್ಯಾಖ್ಯಾನವನ್ನು ಮಂಡಿಸಲು ಹಿಂಜರಿಯುವುದಿಲ್ಲ. ಇದು ಗುರುವನ್ನು ಗೌರವಿಸುವ ಕ್ರಮ; ಸತ್ಯವೆಂದು ತೋಚಿದ್ದನ್ನು ಹೇಳುವ ಮತ್ತು ಸರಿಯಾದುದನ್ನು ಕಂಡುಕೊಳ್ಳುವ ಸಮರ್ಪಕವಾದ ದಾರಿ. ಬಾಬಾ ಸಾಹೇಬರು ಫುಲೆಯವರ ಸಾಮಾಜಿಕ ಸುಧಾರಣಾ ಕಾರ್ಯಗಳು, ಜಾತಿ ನಿರ್ಮೂಲನ ಆಂದೋಲನವನ್ನು ಮುನ್ನಡೆಸಿದರು. ಅವರ ʼ ಜಾತಿ ವಿನಾಶʼ ( Annihilation of caste ) ಫುಲೆಯವರ ʼ ಗುಲಾಮಗಿರಿʼಯ ಮುಂದುವರಿದ ಮತ್ತು ಖಚಿತ ವೈಚಾರಿಕ ನೆಲೆಯ ಕೃತಿಯೇ ಆಗಿದೆ. ಅಂಬೇಡ್ಕರ್ ರವರ ʼ ಜಾತಿ ವಿನಾಶʼದ ಮೊದಲು ʼ ಗುಲಾಮಗಿರಿʼ ಯನ್ನು ಓದುವುದು ಓದುವಿಕೆಯ ಸರಿಯಾದ ರೀತಿಯೇ ಆಗಿದೆ.</p>



<p>ಸಮಾಜದಲ್ಲಿ ಯಾರೂ ಕನಿಷ್ಠರಲ್ಲ, ಶ್ರೇಷ್ಠರೂ ಅಲ್ಲ; ಪ್ರತಿಯೊಬ್ಬನೂ ಸಮಾನ. ಒಬ್ಬನ ಹಿತ ಮತ್ತೊಬ್ಬನಿಗೆ ಮಾರಕವಾಗಬಾರದು ಎನ್ನುವ ಖಚಿತ ಅಭಿಪ್ರಾಯವನ್ನು ಹೊಂದಿದ್ದ ಜ್ಯೋತಿಬಾರವರು ಕೆಳಜಾತಿಯವರನ್ನು ಅಜ್ಞಾನ, ಅನಕ್ಷರತೆ, ಮೂಢನಂಬಿಕೆಗಳಿಂದ ಪಾರು ಮಾಡಲು ಕಂಕಣಬದ್ಧರಾಗಿದ್ದರು. ಅವರಿಗೆ ಬ್ರಾಹ್ಮಣರ ಮಾನಸಿಕ ದಾಸ್ಯದಿಂದ ಶೋಷಿತ ಜಾತಿಗಳನ್ನು ಬಿಡುಗಡೆ ಮಾಡುವುದು ಅತಿ ಮುಖ್ಯವೆಂದು ತೋಚಿತ್ತು. ಅವರು ಜನರನ್ನು ಸುಲಭವಾಗಿ ತಲುಪುವ ಮಾರ್ಗಗಳನ್ನು ಅನ್ವೇಷಿಸಿದರು. ಮರಾಠಿಯಲ್ಲಿ ಜನಪ್ರಿಯವಾದ ಲಾವಣಿ, ಅಭಂಗ, ಕಾವ್ಯಗಳ ಮುಖಾಂತರ ಜನರಲ್ಲಿ ತಿಳಿವಳಿಕೆಯನ್ನು ಮೂಡಿಸುವ ಪ್ರಯತ್ನ ಮಾಡಿದರು.</p>



<p>1955 ರಲ್ಲಿ ʼ ತೃತೀಯ ರತ್ನʼ ಎನ್ನುವ ನಾಟಕವನ್ನು ಬರೆದು ಮೂಢನಂಬಿಕೆ, ಅಂಧಶ್ರದ್ಧೆಗಳನ್ನು ನೇರವಾಗಿ ವಿರೋಧಿಸಿದ್ದರು. ಅವರು ಶಿವಾಜಿ ಮಹಾರಾಜರ ಸಮಾಧಿಗೆ ಒದಗಿದ ದುರ್ಗತಿಗೆ ಮರುಗಿ ಬರೆದ ಲಾವಣಿ ಮತ್ತು ಪರಶುರಾಮನನ್ನು ಕುರಿತ ಸುಳ್ಳುಗಳನ್ನು ಬಯಲು ಮಾಡುವ ಲಾವಣಿಗಳು ಜನಪ್ರಿಯವಾಗಿದ್ದವು. ಧಾರ್ಮಿಕ ಮತ್ತು ಅಂಧಶೃದ್ಧೆಯ ಜನರನ್ನು ಪೀಡಿಸುವ ಕುಯುಕ್ತಿಯನ್ನು ಖಂಡಿಸುವ ಕಾವ್ಯ ಸಂಗ್ರಹ ʼ ಬ್ರಾಹ್ಮಣರ ಕುಯುಕ್ತಿʼ 1869 ರಲ್ಲಿ ಪ್ರಕಟವಾದಾಗ ಫುಲೆಯವರು ಹಲವರ ದುರಾಗ್ರಹಕ್ಕೆ ಪಾತ್ರರಾಗಬೇಕಾಯಿತು.</p>



<p>ಆ ಬಳಿಕ ಫುಲೆಯವರು ಮಹತ್ವದ, ಕ್ರಾಂತಿಕಾರಕ ಗ್ರಂಥವೊಂದನ್ನು ಬರೆಯಲು ತೀರ್ಮಾನಿಸಿದರು. 1872 ರ ಡಿಸೆಂಬರ್ ತಿಂಗಳಲ್ಲಿ ಕೆಲವು ಅಧ್ಯಾಯಗಳನ್ನು ಬರೆದ ಆ ಗ್ರಂಥ ಜೂನ್ 1873 ರಲ್ಲಿ ಪೂರ್ಣಗೊಂಡಿತು. ವೈದಿಕರ ಗ್ರಂಥ, ಶಾಸ್ತ್ರಗಳನ್ನು ನಿರಾಕರಿಸಿದ, ಅವತಾರಗಳನ್ನು ಪ್ರಶ್ನಿಸಿದ, ಜಾತಿಪದ್ಧತಿಯನ್ನು ಸ್ಪಷ್ಟ ಮಾತುಗಳಲ್ಲಿ ನಿರಾಕರಿಸಿದ, ʼ ಗುಲಾಮಗಿರಿʼ ಗ್ರಂಥ ಜಾತಿ ನಿರ್ಮೂಲನೆಯ ಆಂದೋಲನಕ್ಕೆ ಪ್ರಬಲ ಅಸ್ತ್ರವಾಗಿ ಪರಿಣಮಿಸಿತು.</p>



<figure class="wp-block-image size-large"><img loading="lazy" decoding="async" width="1024" height="1024" src="https://peepalmedia.com/wp-content/uploads/2024/11/WhatsApp-Image-2024-11-22-at-11.44.51_69434e23-1024x1024.jpg" alt="" class="wp-image-49516" srcset="https://peepalmedia.com/wp-content/uploads/2024/11/WhatsApp-Image-2024-11-22-at-11.44.51_69434e23-1024x1024.jpg 1024w, https://peepalmedia.com/wp-content/uploads/2024/11/WhatsApp-Image-2024-11-22-at-11.44.51_69434e23-300x300.jpg 300w, https://peepalmedia.com/wp-content/uploads/2024/11/WhatsApp-Image-2024-11-22-at-11.44.51_69434e23-150x150.jpg 150w, https://peepalmedia.com/wp-content/uploads/2024/11/WhatsApp-Image-2024-11-22-at-11.44.51_69434e23-768x768.jpg 768w, https://peepalmedia.com/wp-content/uploads/2024/11/WhatsApp-Image-2024-11-22-at-11.44.51_69434e23-696x696.jpg 696w, https://peepalmedia.com/wp-content/uploads/2024/11/WhatsApp-Image-2024-11-22-at-11.44.51_69434e23-1068x1068.jpg 1068w, https://peepalmedia.com/wp-content/uploads/2024/11/WhatsApp-Image-2024-11-22-at-11.44.51_69434e23.jpg 1080w" sizes="auto, (max-width: 1024px) 100vw, 1024px" /></figure>



<p>ಇಂಗ್ಲಿಷ್ ಮತ್ತು ಮರಾಠಿ ಎರಡೂ ಭಾಷೆಗಳಲ್ಲಿ ʼಗುಲಾಮಗಿರಿ ʼ ಗೆ ಪ್ರಾರಂಭಿಕ ಮಾತುಗಳನ್ನು ಬರೆದ ಫುಲೆಯವರು ಮರಾಠಿಯ ಮುನ್ನುಡಿಯಲ್ಲಿ ತಮ್ಮ ಉದ್ದೇಶವನ್ನು ಸ್ಪಷ್ಟ ಮಾತುಗಳಲ್ಲಿ ಹೇಳುತ್ತಾರೆ. ʼ ಈ ಪುಸ್ತಕದ ಮೂಲ ಉದ್ದೇಶ ಶೂದ್ರರಿಗೆ ಮತ್ತು ಅತಿ ಶೂದ್ರರಿಗೆ, ಬ್ರಾಹ್ಮಣರ ಸ್ವಾಧೀನದಲ್ಲಿ ಶತ ಶತಮಾನಗಳ ಕಾಲ ಅವರು ಅನುಭವಿಸಿದ ದೀನಾವಸ್ಥೆಯ, ಕಷ್ಟ ಪರಂಪರೆಯ ಅರಿವು ಮೂಡಿಸುವುದಾಗಿದೆ. ಆ ಮೂಲಕ ಅವರು ಇನ್ನು ಮುಂದೆ ಬ್ರಾಹ್ಮಣರ, ಭಟ್ಟರ ದೌರ್ಜನ್ಯದಿಂದ ಬಿಡುಗಡೆ ಪಡೆಯುವ ಮಾರ್ಗವನ್ನು ಆಳವಾಗಿ ಚಿಂತಿಸಿ ಕಂಡುಕೊಳ್ಳಬೇಕುʼ.</p>



<p>ʼ ಗುಲಾಮಗಿರಿʼ ಪುಸ್ತಕದಲ್ಲಿ ಫುಲೆಯವರು ಬ್ರಾಹ್ಮಣ್ಯ ಎನ್ನುವ ಶಬ್ದದ ಬದಲು ಬ್ರಾಹ್ಮಣರು ( Brahmins) ಮತ್ತು ಪುರೋಹಿತದ ಬದಲಾಗಿ ಭಟ್ಟ (Bhats) ಎನ್ನುವ ಪದವನ್ನು ಉಪಯೋಗಿಸುತ್ತಾರೆ. ಇಂಗ್ಲಿಷ್ ಮತ್ತು ಮರಾಠಿ ಎರಡೂ ಭಾಷೆಗಳಲ್ಲಿ ಅವರಿಗೆ ಹಿಡಿತ ಇದ್ದರೂ ʼ ಗುಲಾಮಗಿರಿ ʼ ಯಲ್ಲಿ ಉಪಯೋಗಿಸಿದ ಮರಾಠಿ ಜನರ ಆಡು ಭಾಷೆಯಾಗಿದ್ದು, ಹೆಚ್ಚಿನ ಜನರನ್ನು ತಲುಪುವ ಉದ್ದೇಶದಿಂದ ಅದರಲ್ಲಿ ಗ್ರಾಮ್ಯವನ್ನೂ ಹೇರಳವಾಗಿ ಬಳಸಿದ್ದಾರೆ.</p>



<p>ʼ ಗುಲಾಮಗಿರಿʼ ಪುಸ್ತಕದಲ್ಲಿ ಜ್ಯೋತಿಬಾ ಮತ್ತು ದೋಂಡಿಬಾ ಎನ್ನುವ ಇಬ್ಬರು ವ್ಯಕ್ತಿಗಳ ನಡುವೆ ಸಂಭಾಷಣೆ ನಡೆಯುತ್ತದೆ. ಫುಲೆಯವರು ನಾಟಕಗಳನ್ನು ಬರೆದು, ನಟಿಸಿ, ನಿರ್ದೇಶಿಸಿದವರಾಗಿದ್ದರಿಂದ ಸಂಭಾಷಣೆ ಕಲೆ ಅವರಿಗೆ ಒದಗಿ ಬಂದಿದೆ. ದೋಂಡಿಬಾ ವ್ಯಕ್ತ ಪಡಿಸುವ ಅನುಮಾನಗಳಿಗೆ ನೇರವಾಗಿ, ತಮಾಷೆಯಾಗಿ, ಕಟುವಾಗಿ ಉತ್ತರಿಸುವ ಜ್ಯೋತಿಬಾ ನಿರ್ದಾಕ್ಷಿಣ್ಯವಾಗಿ ಪುರಾಣ, ಶಾಸ್ತ್ರ ಗ್ರಂಥಗಳನ್ನು ಜಾಲಾಡುತ್ತಾರೆ. ದಶಾವತಾರದ ಕಲ್ಪನೆಗಳನ್ನು ಒಂದೊಂದಾಗಿ ವಿಘಟಿಸುವ ಫುಲೆಯವರು ಪರಶುರಾಮನ ಕುರಿತು ತೀವ್ರ ಆಕ್ರೋಶವನ್ನು ವ್ಯಕ್ತ ಪಡಿಸುತ್ತಾರೆ. ಇಪ್ಪತ್ತೊಂದು ಸಲ ಭೂ ಪ್ರದಕ್ಷಿಣೆ ಮಾಡಿ ಹುಡುಕಿ, ಹುಡುಕಿ ಕ್ಷತ್ರಿಯರನ್ನು ನಿರ್ನಾಮ ಮಾಡಿದ್ದಲ್ಲದೆ, ನವ ಜಾತ ಶಿಶುಗಳನ್ನೂ ಬರ್ಬರವಾಗಿ ಹತ್ಯೆ ಮಾಡಿದ್ದನ್ನು, ಗರ್ಭಿಣಿಯರನ್ನು ಅಂಡಲೆಸಿ ಶಿಶು ಹತ್ಯೆ ಮಾಡಿದ್ದನ್ನು ಅತಿ ಕ್ರೂರವಾದ ಕೊಲೆಗಡುಕತನ ಎಂದು ಹೇಳುತ್ತಾರೆ. ಬಾಬಾ ಸಾಹೇಬರು ಮೂಲತಃ ಶೂದ್ರರು ಕ್ಷತ್ರಿಯರಾಗಿದ್ದರು ಎನ್ನುವ ಫುಲೆಯವರ ಸಿದ್ಧಾಂತವನ್ನು ಒಪ್ಪಿರುವುದಲ್ಲದೆ ಈ ಕುರಿತು ವಿವರವಾಗಿ ಬರೆದಿದ್ದಾರೆ.</p>



<p>ಅಂತೆಯೇ ಫುಲೆಯವರು ನ್ಯಾಯವಂತಿಕೆಯಿಂದ ರಾಜ್ಯವಾಳುತ್ತಿದ್ದ ಬಲಿಯನ್ನು ಅನ್ಯಾಯವಾಗಿ ರಾಜ್ಯಭ್ರಷ್ಟನಾಗಿ ಮಾಡಿದ್ದನ್ನು ಖಂಡಿಸುತ್ತಾರೆ. ಅವರ ಪ್ರಕಾರ ಬಲಿ ರಾಜ್ಯ ಸ್ವಾತಂತ್ರ್ಯ, ಸಮಾನತೆಗಳ ರಾಜ್ಯ. ಅವತಾರ ಕಲ್ಪನೆಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವುದೇ ಫುಲೆಯವರ ಉದ್ದೇಶವಾಗಿತ್ತು. ಮಹಾಭಾರತ ರಚನೆಯಾಗುವುದಕ್ಕಿಂತ ಮೊದಲು ಅವತಾರಗಳ ಪ್ರಸ್ತಾಪ ಇರಲಿಲ್ಲ; ಧಾರ್ಮಿಕ ಹತೋಟಿಯನ್ನು ಉದ್ದೇಶದಿಂದ ಪುರಾಣಗಳಲ್ಲಿ ಅವುಗಳನ್ನು ಸೇರ್ಪಡೆಗೊಳಿಸಿರಬಹುದೆಂದು ಅವರು ಅಭಿಪ್ರಾಯ ಪಡುತ್ತಾರೆ.</p>



<p>ʼ ಗುಲಾಮಗಿರಿʼ ಪುಸ್ತಕದ ಕಠೋರತೆಗೆ ಪೇಶ್ವೆಯವರ ಕಾಲದ ದುಷ್ಟ ಆಡಳಿತ ಪದ್ಧತಿಯೇ ಕಾರಣ ಎನ್ನಬಹುದು. ಫುಲೆಯವರು ನೇರವಾಗಿ ಬ್ರಾಹ್ಮಣರ ಟೀಕೆ ಮಾಡಿದ್ದರೂ ಅವರ ಗುರಿ ಚಿತ್ಪಾವನ ಬ್ರಾಹ್ಮಣರು ಎನ್ನಲಾಗುತ್ತದೆ. ಬಾಳಾಜಿ ವಿಶ್ವನಾಥ ಪೇಶ್ವೆಯ ಕಾಲದಲ್ಲಿ ಚಿತ್ಪಾವನ‌ ಬ್ರಾಹ್ಮಣರು ಇನ್ನಿತರ ಬ್ರಾಹ್ಮಣ ಪಂಥಗಳನ್ನು ಬದಿಗೊತ್ತಿ ಶೂದ್ರರನ್ನು, ಅತಿ ಶೂದ್ರರನ್ನು ಅತಿ ಕ್ರೂರವಾಗಿ ನಡೆಸಿಕೊಂಡಿದ್ದಲ್ಲದೆ ಎಲ್ಲಾ ರೀತಿಯ ವೈಭೋಗಗಳನ್ನೂ ಪಡೆದುಕೊಂಡಿದ್ದರು.</p>



<figure class="wp-block-image size-full"><img loading="lazy" decoding="async" width="641" height="973" src="https://peepalmedia.com/wp-content/uploads/2024/11/WhatsApp-Image-2024-11-22-at-11.44.52_254617b4.jpg" alt="" class="wp-image-49517" srcset="https://peepalmedia.com/wp-content/uploads/2024/11/WhatsApp-Image-2024-11-22-at-11.44.52_254617b4.jpg 641w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_254617b4-198x300.jpg 198w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_254617b4-150x228.jpg 150w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_254617b4-300x455.jpg 300w" sizes="auto, (max-width: 641px) 100vw, 641px" /></figure>



<p>ಶೂದ್ರರ, ಅತಿ ಶೂದ್ರರ ದೀನಾವಸ್ಥೆಯನ್ನು ಕಣ್ಣಾರೆ ಕಂಡು ಅನುಭವಿಸಿದ್ದ ಫುಲೆಯವರಿಗೆ ಬರವಣಿಗೆ ಅವರನ್ನು ವಿಮೋಚನೆಯ ದಾರಿಯಲ್ಲಿ ಕೊಂಡೊಯ್ಯವ ಮಾರ್ಗಗಳಲ್ಲಿ ಒಂದಾಗಿ ಕಂಡಿತ್ತು. ಸಮಾನತೆಯನ್ನು, ಸ್ವಾತಂತ್ರ್ಯವನ್ನು ನೀಡುವ ಯಾವುದೇ ಗ್ರಂಥವಾದರೂ ತಾನದನ್ನು ಗೌರವಿಸುತ್ತೇನೆ ಎಂದು ಹೇಳಿದ ಫುಲೆಯವರು ನಾನಾ ರೀತಿಯ ಮೂಢನಂಬಿಕೆ, ಅಜ್ಞಾನದಲ್ಲಿ ತೊಳಲಾಡುತ್ತಿರುವ ಶೂದ್ರ, ಅತಿ ಶೂದ್ರ ಬಂಧುಗಳಲ್ಲಿ ಒಬ್ಬನಾದರೂ ವೈದಿಕರ ದಾಸ್ಯದಿಂದ ಮುಕ್ತನಾಗಲು ಬಯಸಿ ತನ್ನ ಹೆಸರು ತಿಳಿಸಿ ಪತ್ರ ಬರೆದರೆ ನಾನು ಹೆಮ್ಮೆ ಪಡುತ್ತೇನೆ, ಆತನಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದರು.</p>



<p>ಸಮಾಜ ಸುಧಾರಣೆಗಳು</p>



<p>ಫುಲೆಯವರು ಶಾಲೆಯಲ್ಲಿ ಓದಿದ್ದು ಕಡಿಮೆಯೆಂದೇ ಹೇಳಬಹುದು.ಅವರ ಪ್ರಾಥಮಿಕ ಶಿಕ್ಷಣ, ತಂದೆ ಗೋವಿಂದ ರಾಯರಿಗೆ ಕೆಲವರು ದುರ್ಬೋಧೆ ಮಾಡಿದ್ದರಿಂದ ಅರ್ಧದಲ್ಲೇ ನಿಂತಿತ್ತು. ಮತ್ತೆ ಮೂರು ವರ್ಷಗಳ ನಂತರ ತಂದೆ ಮನಸ್ಸು ಬದಲಾಯಿಸಿ ಫುಲೆಯವರನ್ನು ಶಾಲೆಗೆ ಸೇರಿಸಿದರು. ಅವರು ಪಡೆದ ಶಿಕ್ಷಣ, ಇಂಗ್ಲಿಷ್ ಜ್ಞಾನ ಅವರಿಗೆ ಒಳ್ಳೆಯ ನೌಕರಿಯನ್ನು ಖಂಡಿತ ಒದಗಿಸುತ್ತಿತ್ತು. ಆದರೆ ಫುಲೆಯವರು ನೌಕರಿ ಮಾಡದೆ ಬದುಕನ್ನು ಸಾಮಾಜಿಕ ಸೇವೆಗೇ ಮುಡುಪಾಗಿಟ್ಟರು.</p>



<p>ಶೂದ್ರರ ಮತ್ತು ಅತಿ ಶೂದ್ರರ ಸುಧಾರಣೆಗೆ ಶಿಕ್ಷಣದ ಅಗತ್ಯವನ್ನು ಮನಗಂಡ ಫುಲೆಯವರು ಶಾಲೆಗಳನ್ನು ತೆರೆದು ತಾವೇ ಶಿಕ್ಷಕರಾಗಿ ದುಡಿದರು. ಹದಿಮೂರನೇ ವಯಸ್ಸಿಗೆ ಮದುವೆಯಾದ ಫುಲೆ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಹೆಂಡತಿ ಸಾವಿತ್ರಿ ಬಾಯಿಯವರಿಗೆ ತಾವೇ ಓದು ಬರಹ ಕಲಿಸಿದರು. 1948ರಲ್ಲಿ ಮೊದಲ ಹೆಣ್ಣು ಮಕ್ಕಳ ಶಾಲೆ ಪುಣೆಯಲ್ಲಿ ಆರಂಭವಾಯಿತು. ಹಲವು ಅಡ್ಡಿ ಆತಂಕಗಳ ನಡುವೆಯೂ ಫುಲೆ ದಂಪತಿ ಶಾಲೆಗಳನ್ನು ನಡೆಸಿದ್ದಲ್ಲದೆ ಅವರಿಬ್ಬರೂ ಇದಕ್ಕಾಗಿ ಯಾವ ಸವಲತ್ತನ್ನೂ ಪಡೆಯಲಿಲ್ಲ.</p>



<p>ಫುಲೆಯವರು ಸಮಾಜ ಸುಧಾರಕರಾಗಿದ್ದಂತೆ, ವಿಚಾರವಾದಿ, ಬರಹಗಾರ, ಪತ್ರಕರ್ತ ಮತ್ತು ಆಡಳಿತಕಾರನೂ ಆಗಿದ್ದರು. ಶೋಷಿತ ಜಾತಿಗಳ ಸುಧಾರಣೆಗಾಗಿ ಅವರು ಸ್ಥಾಪಿಸಿದ ʼ ಸತ್ಯ ಶೋಧಕ ಸಮಾಜ ʼ ದಲ್ಲಿ ಬ್ರಾಹ್ಮಣರನ್ನೊಳಗೊಂಡು ಎಲ್ಲಾ ಜಾತಿ,ಧರ್ಮದ ಜನರೂ ಇದ್ದರು. ಅಸ್ಪರ್ಶ್ಯತೆಯ ವಿರುದ್ಧ ಸಮರವನ್ನೇ ಸಾರಿದ ಫುಲೆಯವರು ʼ ಅಸ್ಪರ್ಶ್ಯರ ಕೈಫಿಯತ್ತು ʼ ಎನ್ನುವ ಪುಸ್ತಕ ಪ್ರಕಟಿಸಿದ್ದಲ್ಲದೆ, ಅವರ ವಸತಿ ಪ್ರದೇಶಗಳಿಗೆ ಭೇಟಿ ನೀಡಿ ಯುವಕರ ತಂಡವೊಂದನ್ನು ಸಿದ್ಧಪಡಿಸಿದರು. ಅವರಿಗೆ ನಿರಂತರ ಮಾರ್ಗದರ್ಶನ ನೀಡಿ ಬರೆಯಲು, ಭಾಷಣ ಮಾಡಲು ತರಬೇತಿ ಕೊಟ್ಟು ಸುಧಾರಣಾ ಕಾರ್ಯದಲ್ಲಿ ಭಾಗವಹಿಸುವಂತೆ ಮಾಡಿದರು.</p>



<p>ಬ್ರಾಹ್ಮಣ ವಿಧವೆಯ ವಿಮೋಚನೆಗಾಗಿ ಅವರು ಸ್ಥಾಪಿಸಿದ ʼ ಬಾಲಹತ್ಯಾ ಪ್ರತಿಬಂಧಕ ಗೃಹ ʼ ದೇಶದಲ್ಲಿಯೇ ಮೊತ್ತ ಮೊದಲ ಸಂಸ್ಥೆಯಾಗಿತ್ತು. ಈ ಸಂಸ್ಥೆಯಿಂದಾಗಿ ವಿಧವೆಯರು ಅಪಕೀರ್ತಿಗೆ ಒಳಗಾಗುವುದು, ಭ್ರೂಣ ಹತ್ಯೆ, ಶಿಶು ಹತ್ಯೆಗಳಾಗುವುದು ತಪ್ಪಿತು. ಬ್ರಾಹ್ಮಣರಲ್ಲದೆ ಇತರ ಜಾತಿಗಳಲ್ಲೂ ವಿಧವೆಯರ ಮರು ವಿವಾಹವನ್ನು ಪ್ರೋತ್ಸಾಹಿಸಿದರು. ತಾವೇ ನೇತೃತ್ವ ವಹಿಸಿ ಕಡಿಮೆ ಖರ್ಚಿನಲ್ಲಿ ಅಂತರ್ ಜಾತೀಯ ವಿವಾಹಗಳು ನಡೆಯುವಂತೆಯೂ ನೋಡಿಕೊಂಡರು.</p>



<p>ಪೇಶ್ವೆಯರ ಆಡಳಿತಕ್ಕೊಳಪಟ್ಟಿದ್ದ, ಚಿತ್ಪಾವನ ಬ್ರಾಹ್ಮಣರು ಶೂದ್ರ, ಅತಿ ಶೂದ್ರರನ್ನು ನಿಕೃಷ್ಟವಾಗಿ ನೋಡಿಕೊಳ್ಳುತ್ತಿದ್ದ ಪ್ರದೇಶದಲ್ಲಿ ಫುಲೆಯವರು ಏಕಾಂಗಿಯಾಗಿ ಮಾಡಿದ ಸಾಮಾಜಿಕ ಕಾರ್ಯಗಳು ಬೆರಗು ಹುಟ್ಟಿಸುತ್ತವೆ. ಅವರು ಹುಟ್ಟು ಹಾಕಿದ- ಮಹಾರಾಷ್ಟ್ರದಲ್ಲಿ ಹಲವು ಸುಧಾರಣೆಗಳಿಗೆ ಕಾರಣವಾದ ʼ ಸತ್ಯಶೋಧಕ ಸಮಾಜ ʼ ಕ್ರಮೇಣ ನಿಸ್ತೇಜಗೊಂಡಿತು. ಆದರೆ ಶೂದ್ರ, ಅತಿ ಶೂದ್ರರಲ್ಲಿ ಅವರು ಮೂಡಿಸಿದ ಎಚ್ಚರ ಮುಂದಿನ ತಲೆಮಾರುಗಳಿಗೆ ಹರಿದು ಬಂತು. ಫುಲೆಯವರನ್ನು ತಮ್ಮ ಗುರುಗಳೆಂದು ಕರೆದುಕೊಂಡ ಬಾಬಾ ಸಾಹೇಬ ಅಂಬೇಡ್ಕರ್ ರವರು ಫುಲೆಯವರ ಸಿದ್ಧಾಂತಗಳನ್ನು ಪರಿಷ್ಕರಿಸಿದರು; ವಿಸ್ತರಿಸಿದರು.</p>



<p>ಜಾಗೃತಿಯ ಅಗತ್ಯ</p>



<p>ಫುಲೆಯವರ ʼ ಗುಲಾಮಗಿರಿʼ ಪುಸ್ತಕ ಮತ್ತು ಅವರ ವಿಚಾರಗಳಿಗೆ ಮರು ಹುಟ್ಟು ಕೊಟ್ಟವರು ಕಾನ್ಶಿರಾಮ್. ಅವರ ʼ ʼಬಹುಜನ ಸಮಾಜ ಪಕ್ಷʼದ ಪೋಸ್ಟರ್ ಗಳಲ್ಲಿ ಸಮಾಜ ಸುಧಾರಕರ ಚಿತ್ರಗಳು ತಪ್ಪದೇ ಅಚ್ಚಾಗುತ್ತಿದ್ದವು. ಜ್ಯೋತಿಬಾ ಫುಲೆ, ಅಂಬೇಡ್ಕರ್, ನಾರಾಯಣ ಗುರು, ಪೆರಿಯಾರ್ ಇವರನ್ನು ʼ ಬಹುಜನ ಸಮಾಜ ಪಕ್ಷʼ ರಾಷ್ಟ್ರ ಮಟ್ಟದಲ್ಲಿ ಬಿಂಬಿಸಿತು. ವಿಸ್ಮೃತಿಗೆ ಸಂದಿದ್ದ ಫುಲೆಯವರನ್ನು, ಮಹಾರಾಷ್ಟ್ರಕ್ಕೆ ಮತ್ತು ಅಕಡೆಮಿಕ್ ಓದಿಗೆ ಸೀಮಿತರಾಗಿದ್ದ ಅಂಬೇಡ್ಕರ್ ರವರನ್ನು, ಕೇರಳ ಮತ್ತು ಕನ್ನಡ ಜಿಲ್ಲೆಗಳಿಗೆ ಬೆಳಕು ತೋರಿದ ನಾರಾಯಣ ಗುರುಗಳನ್ನು, ದ್ರಾವಿಡ ನಾಡಿಂದೀಚೆ ಹೆಸರು ಗಳಿಸದ ಪೆರಿಯಾರ್ ರವರನ್ನು ದೇಶದಾದ್ಯಂತ ಪರಿಚಯಿಸಿದವರು ಕಾನ್ಶಿರಾಮ್. ಅಂಬೇಡ್ಕರ್ ರವರು ಮುಂದುವರಿಸಿದ ಸುಧಾರಣೆಗಳನ್ನು ಕಾನ್ಶಿರಾಮ್ ಕೈಗೆತ್ತಿಕೊಂಡರು.</p>



<p>ಕಾನ್ಶಿರಾಮ್ ಕಾಲವಾದ ಬಳಿಕ ಹಲವು ಬದಲಾವಣೆಗಳು ಸಂಭವಿಸಿವೆ. ಜಾತಿಪದ್ಧತಿ ಅಳಿಯುವ ಬದಲು ಪ್ರಬಲರ ಅಸ್ತ್ರವಾಗಿ ಶೂದ್ರರ, ತಳಜಾತಿಗಳ,ದಲಿತರ ದಮನಕ್ಕೆ ಬಳಕೆಯಾಗುತ್ತಿದೆ. ಹಿಂದೂ ಎನ್ನುವ ಶಬ್ದ ಪ್ರಯೋಗವನ್ನು ಮಾಡದೆ, ಜಾತಿವಿನಾಶವನ್ನು, ಸಮಾನತೆಯ ಬದುಕನ್ನು ಹಾರೈಸಿದ ಫುಲೆಯವರ ಸಿದ್ಧಾಂತಗಳು ಹಿಂದುತ್ವದ ಅಡಿಯಲ್ಲಿ ನಲುಗುತ್ತಿವೆ. ಫುಲೆಯವರು ಸರಿಯಾಗಿಯೇ ಗುರುತಿಸಿದಂತೆ ಸವರ್ಣೀಯರು ಜಾತಿಗಳಲ್ಲಿ ವಿಭಜನೆ ಮಾಡಿ ತಮ್ಮ ಅನುಕೂಲಕ್ಕೋಸ್ಕರ ಅವರನ್ನು ಉಪಯೋಗಿಸುತ್ತಿರುವುದು ಕಂಡು ಬರುತ್ತಿದೆ. ಶೋಷಿತರು ಶೋಷಕರ ಗುಲಾಮರಾಗಿ ಮುಂದುವರಿಯುತ್ತಿರುವುದು ನಿಚ್ಚಳವಾಗಿ ಕಂಡು ಬರುತ್ತಿದೆ.</p>



<p>ಇಂತಹ ಸನ್ನಿವೇಶದಲ್ಲಿ ಸ್ವಾತಂತ್ರ್ಯ, ಸಮಾನತೆ, ಸಹೋದರತೆಯ ಅಗತ್ಯವನ್ನು ಮತ್ತೆ ಮೂಡಿಸುವುದು ಅವಶ್ಯವಾಗಿದೆ. ದುರ್ದೈವವೆಂದರೆ ʼ ಗುಲಾಮಗಿರಿʼ ಕೃತಿಗೆ 150 ವರ್ಷಗಳಾಗಿದ್ದನ್ನು ನೆನಪಿಸಿಕೊಳ್ಳುವ ಎಚ್ಚರವೂ ಕಾಣೆಯಾಗಿರುವುದು. ಇಂತಹ ಸಂದರ್ಭದಲ್ಲಿʼ ನವಯಾನ ಟ್ರಸ್ಟ್ ʼ ಕಾರ್ಯಕ್ರಮವನ್ನು ಏರ್ಪಡಿಸಿ ಒಳ್ಳೆಯ ಕೆಲಸವನ್ನೇ ಮಾಡಿದೆ. ಇಂತಹ ಕೆಲಸ ಎಲ್ಲಾ ಕಡೆಗಳಲ್ಲೂ ಆಗಬೇಕಿತ್ತು. ಅಂಬೇಡ್ಕರ್, ಕಾನ್ಶಿರಾಮ್ ರಂತ ಮಹನೀಯರು ಮಾತ್ರವೇ ಸಮಾನತೆಯ, ಜಾತಿವಿನಾಶದ, ಸಮಾಜ ಸುಧಾರಣೆಯ ಕೆಲಸ ಮಾಡಬೇಕಿಲ್ಲ. ಪ್ರತಿಯೊಬ್ಬರಲ್ಲೂ ಆ ಎಚ್ಚರ ಇದ್ದು ಅದಕ್ಕಾಗಿ ನಿರಂತರ ಪ್ರಯತ್ನ ಮಾಡಬೇಕಿದೆ.</p>



<p>ʼ ಗುಲಾಮ ಗಿರಿ- 150ʼ ಕಾರ್ಯಕ್ರಮದಲ್ಲಿ ಭಾಷಣ ಮಾಡಿದವರೊಬ್ಬರು ಹೇಳುತ್ತಿದ್ದರು: ʼ ನಿಮ್ಮಲ್ಲಿ ಅನೇಕರು ಸತ್ಯನಾರಾಯಣ ಪೂಜೆ ಮಾಡಿರಬಹುದುʼ. ಅವರಂದಂತೆ ಹತ್ತೊಂಬತ್ತನೇ ಶತಮಾನದಲ್ಲಿ ಹಠಾತ್ತಾಗಿ ಸೃಷ್ಟಿಸಿದ ಸತ್ಯನಾರಾಯಣ ಪೂಜೆ ಮಾಡದೇ ಇರುವವರೇ ಅಪರೂಪವಾಗಿರಬಹುದು. ಫುಲೆಯವರು ಇಂತಹ ನಂಬಿಕೆ, ಮೂಢನಂಬಿಕೆಗಳ ವಿರುದ್ಧ ಸಮರ ಸಾರಿದ್ದರು. ಅವರು ತಮ್ಮ ತಂದೆ ನಿಧನರಾದ ಸಂದರ್ಭದಲ್ಲಿ ಕಾಗೆಗಳಿಗೆ ಎಡೆ ಇಟ್ಟಿರಲಿಲ್ಲ. ಅದರ ಬದಲು ಹೊಟ್ಟೆಗಿಲ್ಲದವರಿಗೆ, ಅಂಗವಿಕಲರಿಗೆ ಉಣ ಬಡಿಸಿದ್ದರು. ಈಗ ಯಾರಾದರೂ ಈ ಆದರ್ಶವನ್ನು ಪಾಲಿಸುತ್ತಾರೆಯೇ? ಅನವಶ್ಯ ಅಹಾರವನ್ನು ಪೋಲು ಮಾಡುವ ಈ ರೀತಿಯ ಪದ್ಧತಿಗಳನ್ನು ಮಾಡದಿರುವುದು ಫುಲೆಯವರನ್ನು ನೆನಸಿಕೊಳ್ಳುವ ಅವರಿಗೆ ಕೃತಜ್ಞತೆ ಹೇಳುವ ಒಂದು ಸಣ್ಣ ಮಾರ್ಗ.ಇಂತಹ ಕ್ರಿಯೆಗಳೇ ಅಜ್ಞಾನವನ್ನು ನಿವಾರಿಸಲು ಸಹಾಯ ಮಾಡುತ್ತವೆ.</p>



<p></p>
]]></content:encoded>
					
		
		
			</item>
		<item>
		<title>“ಅಂಬೇಡ್ಕರ್ ದಿನಚರಿ” ಯುವಜನರು ಓದಲೇಬೇಕಾದ ಪುಸ್ತಕ</title>
		<link>https://peepalmedia.com/ambedkar-diary-is-a-must-read-book-for-young-people/</link>
		
		<dc:creator><![CDATA[Peepal Media]]></dc:creator>
		<pubDate>Tue, 27 Aug 2024 11:25:29 +0000</pubDate>
				<category><![CDATA[ಅಂಕಣ]]></category>
		<category><![CDATA[Ambedkar]]></category>
		<category><![CDATA[Ambedkar Parinirvan Day]]></category>
		<category><![CDATA[ambedkar statue]]></category>
		<category><![CDATA[bengalure]]></category>
		<category><![CDATA[Bhimrao Ramji Ambedkar]]></category>
		<category><![CDATA[Dalit]]></category>
		<category><![CDATA[dalit activists]]></category>
		<category><![CDATA[Dalit assault]]></category>
		<category><![CDATA[Dalit community]]></category>
		<category><![CDATA[Dalit cultural resistance]]></category>
		<category><![CDATA[dalit dalitlivesmatter dalits]]></category>
		<category><![CDATA[Dalit fighters]]></category>
		<category><![CDATA[Dalit organizations]]></category>
		<category><![CDATA[DR B R AMBEDKAR]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=44524</guid>

					<description><![CDATA[ರುದ್ರು ಪುನೀತ್ ಪ್ರತೀ ಬಾರಿಯೂ ಬಾಬಾಸಾಹೇಬರ ಕುರಿತು ಓದುವಾಗ ನನಗನ್ನಿಸುವುದು ಅಷ್ಟೊಂದು ಅಗಾಧವಾದ ಜ್ಞಾನವನ್ನು ಅವರು ದಕ್ಕಿಸಿಕೊಂಡಿದ್ದಾದರೂ ಹೇಗೆ? ನಿರಂತರ ಓದುವುದರಿಂದ, ಅಥವಾ ಹಗಲು ರಾತ್ರಿ ಓದುವುದರಿಂದ, ಅಥವಾ ವಿದೇಶದಲ್ಲಿ ಓದುವುದರಿಂದ ಇವುಗಳ ಕಾರಣಕ್ಕಷ್ಟೇ ಬಾಬಾ ಸಾಹೇಬರು ವಿಶ್ವಮಟ್ಟದ ಜ್ಞಾನಿಯಾಗಿ ಹೊರಹೊಮ್ಮಿದರೇ? ಬಾಬಾಸಾಹೇಬರು ವಿಶ್ವಜ್ಞಾನಿ ಎಂದು ಕರೆಸಿಕೊಳ್ಳಲು ಅವರು ಪಟ್ಟ ಪರಿಶ್ರಮ, ಅವರ ಓದು, ಅವರ ದಿನನಿತ್ಯ ಬದುಕಿನಲ್ಲಿ ಅವರು ಅಳವಡಿಸಿಕೊಂಡ ಶಿಸ್ತು, ಅವರು ಯಾವುದನ್ನೆಲ್ಲ ಓದಲು ಬಯಸುತ್ತಿದ್ದರು ಎನ್ನುವುದನ್ನು ತಿಳಿಯಲು ಅವರ ದಿನಚರಿಯನ್ನು ನಾವು ಗಮನಿಸಬೇಕು. [&#8230;]]]></description>
										<content:encoded><![CDATA[
<p><strong>ರುದ್ರು ಪುನೀತ್</strong></p>



<p>ಪ್ರತೀ ಬಾರಿಯೂ ಬಾಬಾಸಾಹೇಬರ ಕುರಿತು ಓದುವಾಗ ನನಗನ್ನಿಸುವುದು ಅಷ್ಟೊಂದು ಅಗಾಧವಾದ ಜ್ಞಾನವನ್ನು ಅವರು ದಕ್ಕಿಸಿಕೊಂಡಿದ್ದಾದರೂ ಹೇಗೆ?</p>



<p>ನಿರಂತರ ಓದುವುದರಿಂದ, ಅಥವಾ ಹಗಲು ರಾತ್ರಿ ಓದುವುದರಿಂದ, ಅಥವಾ ವಿದೇಶದಲ್ಲಿ ಓದುವುದರಿಂದ ಇವುಗಳ ಕಾರಣಕ್ಕಷ್ಟೇ ಬಾಬಾ ಸಾಹೇಬರು ವಿಶ್ವಮಟ್ಟದ ಜ್ಞಾನಿಯಾಗಿ ಹೊರಹೊಮ್ಮಿದರೇ?</p>



<p>ಬಾಬಾಸಾಹೇಬರು ವಿಶ್ವಜ್ಞಾನಿ ಎಂದು ಕರೆಸಿಕೊಳ್ಳಲು ಅವರು ಪಟ್ಟ ಪರಿಶ್ರಮ, ಅವರ ಓದು, ಅವರ ದಿನನಿತ್ಯ ಬದುಕಿನಲ್ಲಿ ಅವರು ಅಳವಡಿಸಿಕೊಂಡ ಶಿಸ್ತು, ಅವರು ಯಾವುದನ್ನೆಲ್ಲ ಓದಲು ಬಯಸುತ್ತಿದ್ದರು ಎನ್ನುವುದನ್ನು ತಿಳಿಯಲು ಅವರ ದಿನಚರಿಯನ್ನು ನಾವು ಗಮನಿಸಬೇಕು. ಬಾಬಾ ಸಾಹೇಬರ ಜೊತೆಯಲ್ಲಿಯೇ ಇದ್ದು ಹತ್ತಾರು ವರ್ಷಗಳು ಕಳೆದ ದೇವಿದಯಾಳ್ ಅವರು ಬರೆದಿರುವ ಅಂಬೇಡ್ಕರ್ ಡೈರಿ ಪುಸ್ತಕವನ್ನು ಕನ್ನಡಕ್ಕೆ &#8220;ಅಂಬೇಡ್ಕರ್ ದಿನಚರಿ&#8221; ಎನ್ನುವ ಶೀರ್ಷಿಕೆಯೊಂದಿಗೆ ಸಹಾಯಕ ಉಪನ್ಯಾಸಕರು ಮತ್ತು ಅಂಬೇಡ್ಕರ್ ವಾದಿ ಲೇಖಕರಾದ ಪಿ.‌ಆರಡಿಮಲ್ಲಯ್ಯ ಕಟ್ಟೇರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.. ಬಾಬಾಸಾಹೇಬರ ದಿನಚರಿಯನ್ನು ಅವರು ದಾಖಲಿಸಿರುವ ರೀತಿ ಇದೆಯಲ್ಲ ಅದು ನಿಜಕ್ಕೂ ಓದುಗರಿಗೆ ಬಾಬಾಸಾಹೇಬರ ಬಗ್ಗೆ ಹೊಸ ಹೊಳವುಗಳನ್ನು ನೀಡುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಅರ್ಥವಾಗುವ ಹಾಗೆ ಸರಳ ಕನ್ನಡದಲ್ಲಿ ಅನುವಾದಿಸಿದ್ದಾರೆ. ಬಾಬಾಸಾಹೇಬರ ಅನೇಕ ಪುಸ್ತಕಗಳನ್ನು ನಾನು ಓದಿದ್ದೇನೆ. ಆದರೆ ಅಂಬೇಡ್ಕರ್ ದಿನಚರಿ ಸಾಹೇಬರೊಂದಿಗೆ ಜರ್ನಿ ಮಾಡುವ ಅನುಭವ ನೀಡುತ್ತದೆ.</p>



<p>ಶೋಷಿತ ದಮನಿತ ಧ್ವನಿ ಇಲ್ಲದ ನನ್ನ ಸಮುದಾಯಕ್ಕೆ ನಾನು ನ್ಯಾಯ ದೊರಕಿಸಿಕೊಡಲು ನಿತ್ಯ ನಿರಂತರವಾಗಿ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು ಎಂದು ಬಾಬಾ ಸಾಹೇಬರು ಹಾತೊರೆಯುತ್ತಾರೆ. ಬಾಬಾ ಸಾಹೇಬರು ಸಮಯಕ್ಕೆ ತುಂಬಾ ಪ್ರಾಮುಖ್ಯತೆ ನೀಡುತ್ತಿದ್ದರು. ಅವರು ಶಿಸ್ತಿನ ಸಿಪಾಯಿಯಾಗಿದ್ದರು. ಅವರು ತಮ್ಮ ವೈಯಕ್ತಿಕ ಬದುಕಿಗಿಂತ ಹೆಚ್ಚಾಗಿ ತನ್ನ ಸಮುದಾಯದ ಬಗ್ಗೆ ಹೆಚ್ಚು ಚಿಂತಿತರಾಗಿದ್ದರು. ನನ್ನ ಸಮುದಾಯದ ಅಬ್ಯುದಯಕ್ಕಾಗಿ ನಾನು ಮತ್ತಷ್ಟು ಹೆಚ್ಚು ದಿನಗಳು ಬದುಕಬೇಕೆಂದು ಬಯಸಿದ್ದರು. ಬಾಬಾ ಸಾಹೇಬರು ನೇರ ನಿಷ್ಟುರವಾದಿಯಾಗಿದ್ದರು. ಬಾಬಾ ತಮ್ಮ ಆಳವಾದ ಜ್ಞಾನದಿಂದಲೇ ಎದುರಾಳಿಗಳಲ್ಲಿ ಭಯ ಹುಟ್ಟಿಸುವಂತಿದ್ದರು. ಬಾಬಾ ಸಾಹೇಬರ ಬಗ್ಗೆ ಎಲ್ಲೂ ದಾಖಲಾಗದ ಇಂತಹ ಅನೇಕ ವಿಷಯಗಳನ್ನು ಈ ಅಂಬೇಡ್ಕರ್ ಡೈರಿ ತೆರೆದಿಡುತ್ತದೆ. ಈ ಪುಸ್ತಕವು ಖಂಡಿತ ನಿಮಗೆ ಬಾಬಾ ಸಾಹೇಬರನ್ನು ಮತ್ತಷ್ಟು ಓದಲು ಪ್ರಚೋದಿಸಿತ್ತದೆ.</p>



<p><strong>ಇದನ್ನು ಹೇಳಲೇಬೇಕು</strong>: ನಿರಂತರ ಓದು, ಅಥವಾ ಹತ್ತಾರು ಡಿಗ್ರಿಗಳು, ವಿದೇಶದಲ್ಲಿ ಪಡೆದ ಶಿಕ್ಷಣ ಇವುಗಳಿಂದ ಮಾತ್ರ ಜ್ಞಾನಿಗಳು ಎನ್ನಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ನನ್ನ ಅನೇಕ ಸ್ನೇಹಿತರು ಅನೇಕ ಡಿಗ್ರಿಗಳನ್ನು ಪಡೆದುಕೊಂಡು ಕನಿಷ್ಠ ಎಂಟತ್ತು ವರ್ಷಗಳ ಕಾಲ UPSC ಗೆ ಪ್ರಿಪೇರ್ ಆದವರು ಇದ್ದಾರೆ. UPSC ಪ್ರಿಪೇರ್ ಆಗುವುದೆಂದರೆ ವರ್ಲ್ಡ್ ಹಿಸ್ಟರಿ, ವರ್ಲ್ಡ್ ಜಿಯಾಗ್ರಫಿ, ಎನ್ವಿರಾನ್ಮೆಂಟ್, ವಿಜ್ಞಾನ, ಸೋಷಿಯಾಲಾಜಿ, ಲಿಟರೇಚರ್, ಎತಿಕ್ಸ್ ಇವುಗಳೆಲ್ಲವನ್ನು ಓದುತ್ತಾರೆ ಆದರೂ ಪ್ರಿಪೇರ್ ಆಗುವವರನ್ನು ಬಿಟ್ಟಾಕಿ ಈಗಾಗಲೇ IAS ಕ್ಲಿಯರ್ ಮಾಡಿಕೊಂಡು ಉನ್ನತ ಹುದ್ದೆಯಲ್ಲಿರುವ ಪರಿಚಯದ ಅಧಿಕಾರಿಯೊಬ್ಬ ತೀರಾ ಇತ್ತೀಚೆಗೆ ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ಕಲ್ಪಿಸಿ ಸುಪ್ರೀಂಕೋರ್ಟ್ ಕೊಟ್ಟ ತೀರ್ಪು ನಮ್ಮ ದೇಶದ ಧರ್ಮ ಮತ್ತು ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದು ನನ್ನ ಬಳಿ ಹೇಳಿದ್ದನ್ನು ಕೇಳಿ ನಾನು ದಂಗಾಗಿದ್ದೆ. ಅಷ್ಟೇ ಏಕೆ ಈ ದೇಶದ ಉನ್ನತ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ಪರಿಚಯದವರು ಕೂಡ ಬೆಳಗ್ಗೆ ಪೂಜೆ ಮಾಡದೆಯೇ ಆಫೀಸಿಗೆ ಹೋಗೋದಿಲ್ಲ..</p>



<p>ಬಾಬಾಸಾಹೇಬರು ಈ ಜಗತ್ತಿನಲ್ಲಿಯೇ ಅತೀ ಹೆಚ್ಚು ಡಿಗ್ರಿಗಳನ್ನು ಹೊಂದಿದವರು ಎನ್ನುವ ಖ್ಯಾತಿ ಪಡೆದಿದ್ದಾರೆ. ಅವರ ಬಳಿ ಜಗತ್ತಿನ ಅತೀ ದೊಡ್ಡ ವೈಯಕ್ತಿಕ ಲೈಬ್ರರಿ ಇತ್ತು. ಅವರ ಜನ್ಮದಿನವನ್ನು ವಿಶ್ವಸಂಸ್ಥೆಯು ವಿಶ್ವ ಜ್ಞಾನಿಗಳ ದಿನವೆಂದು ಘೋಷಿಸಿದೆ. ಬಾಬಾ ಸಾಹೇಬರು ವಿಶ್ವ ಜ್ಞಾನಿಯಾಗಲು ಖಂಡಿತ ನಿರಂತರ ಓದಿನಿಂದ ಸಾಧ್ಯವಾಯಿತು ಆದರೆ ಆ ಓದಿನ ಹಿಂದೆ ಒಂದು ಸ್ಪಷ್ಟವಾದ ದ್ಯೇಯವಿತ್ತು. ಆ ಕಾರಣಕ್ಕೆ ಅವರು ಈ ದೇಶದ ನೈಜ ಇತಿಹಾಸವನ್ನು ತಿಳಿಯಬಯಸಿದರು. ಸಾವಿರಾರು ವರ್ಷಗಳ ಯಾಕೆ ಈ ದೇಶದ SC/ST/OBC/ಅಲ್ಪಸಂಖ್ಯಾತ ರಾದ ಬಹುಜನರಿಗೆ ಶಿಕ್ಷಣ ಇರಲಿಲ್ಲ. ಯಾಕೆ ಅವರಿಗೆ ಭೂಮಿ ಇರಲಿಲ್ಲ, ಯಾಕೆ ಅವರು ಗುಲಾಮರಾಗಿದ್ದರು, ವರ್ಣ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು ಯಾರು. ಯಾಕೆ ಬ್ರಾಹ್ಮಣರು ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ತಮ್ಮ ವಸಾಹತು ಸ್ಥಾಪಿಸಿದ್ದಾರೆ ಇವುಗಳ ಅಧ್ಯಯನದಲ್ಲಿ ತೊಡಗಿಕೊಂಡರು. ಇತಿಹಾಸವನ್ನು ಹೆಕ್ಕಿ ಹೆಕ್ಕಿ ಹೊರತೆಗೆದರು. ದಾಖಲೆಗಳನ್ನು ಕ್ರೂಡಿಕರಿಸಿದರು,</p>



<p>ಅಸಮಾನತೆಯ ಬಗ್ಗೆ, ಜಾತಿ ವ್ಯವಸ್ಥೆಯ ಬಗ್ಗೆ, ಶ್ರೇಣೀಕೃತ ವ್ಯವಸ್ಥೆಯ ಬಗ್ಗೆ ದಾಖಲಿಸಿದರು, ದೇವರು ದೆವ್ವ ಎನ್ನುವ ಕಾಲ್ಪನಿಕ ಕಥೆಗಳ ಮೂಲಕ ಹೇಗೆ ಈ ದೇಶದ ಬಡವರನ್ನು ಮಂತ್ರಮುಗ್ದರನ್ನಾಗಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎನ್ನುವುದರ ಬಗ್ಗೆಯೂ ಬರೆದರು. ಹೆಣ್ಣಿನ ಮೇಲಾಗುತ್ತಿದ್ದ ಮೇಲಾಗುತ್ತಿದ್ದ ಶೋಷಣೆ ದಬ್ಬಾಳಿಕೆಯ ಬಗ್ಗೆ ಬರೆದರು. ಇಷ್ಟೆಲ್ಲ ಓದು ಬರಹ ಸಂಶೋಧನೆಯ ಕಾರಣಕ್ಕೆ ಬಾಬಾ ಸಾಹೇಬರು ವಿಶ್ವಜ್ಞಾನಿಯಾದ್ರು. ಈ ದೇಶದ ಸಂವಿಧಾನ ಬರೆಯುವ ಮಟ್ಟಕ್ಕೆ ಬೆಳೆದರು. ಆ ಮೂಲಕ ಸಾವಿರಾರು ವರ್ಷಗಳ ಕಾಲ ಗುಲಾಮರಾಗಿದ್ದ ಈ ದೇಶದ ಮೂಲನಿವಾಸಿ SC/ST/OBC/RM ಮತ್ತು ಮಹಿಳೆಯರಿಗೆ ಶಿಕ್ಷಣ, ಭೂಮಿ, ಉದ್ಯೋಗ, ರಾಜಕೀಯ ಪ್ರಾತಿನಿಧ್ಯ, ಆಡಳಿತದಲ್ಲಿ ಅಧಿಕಾರವನ್ನು ನೀಡಲು ಸಾಧ್ಯವಾಯಿತು.</p>



<p>ಕೇವಲ ಶಿಕ್ಷಿತರಾದರೆ ಸಾಲದು ವೈಚಾರಿಕ, ವೈಜ್ಞಾನಿಕ, ಬೌದ್ಧಿಕ ಜ್ಞಾನವನ್ನು ಪಡೆದಾಗ ಮಾತ್ರ ನಾವುಗಳು ನಾಗರೀಕರಾಗಲು ಸಾಧ್ಯ.</p>



<p>ಅಂಬೇಡ್ಕರ್ ಡೈರಿಯನ್ನು ಕನ್ನಡಕ್ಕೆ ಅನುವಾದಿಸಿ ಬಾಬಾಸಾಹೇಬರ ಬಗ್ಗೆ ನಮಗೆ ಗೊತ್ತಿಲ್ಲದ ಅನೇಕ ಸೂಕ್ಷ್ಮ ವಿಷಯಗಳನ್ನು ಅಂಬೇಡ್ಕರ್ ದಿನಚರಿಯ ಮೂಲಕ ಕರ್ನಾಟಕದ ಜನತೆಗೆ ತಲುಪಿಸಿದ್ದಕ್ಕಾಗಿ ನಿಮಗೆ ಕೋಟಿ ಕೋಟಿ ವಂದನೆಗಳು.</p>
]]></content:encoded>
					
		
		
			</item>
		<item>
		<title>ನಿಜವಾದ ಆನಂದ ಹೀಗಿದ್ದರು: ಲಕ್ಕೂರರ ಕೊನೆಯ ದಿನಗಳಲ್ಲಿ ಜೊತೆಗಿದ್ದ ಮಿತ್ರನಿಂದ ಅರ್ಥಪೂರ್ಣ ನುಡಿನಮನ</title>
		<link>https://peepalmedia.com/the-real-joy-was-this-a-meaningful-speech-from-a-friend-who-had-been-with-lakkur-in-his-last-days/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 25 May 2024 07:14:00 +0000</pubDate>
				<category><![CDATA[Featured]]></category>
		<category><![CDATA[Uncategorized]]></category>
		<category><![CDATA[ಅಂಕಣ]]></category>
		<category><![CDATA[ಕಲೆ – ಸಾಹಿತ್ಯ]]></category>
		<category><![CDATA[anandlakkur]]></category>
		<category><![CDATA[bengalure]]></category>
		<category><![CDATA[budhdha]]></category>
		<category><![CDATA[Dalit]]></category>
		<category><![CDATA[dalit activists]]></category>
		<category><![CDATA[Dalit community]]></category>
		<category><![CDATA[Dalit cultural resistance]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=39899</guid>

					<description><![CDATA[(ಇತ್ತೀಚೆಗೆ ನಿಧನರಾದ ಯುವ ಬರಹಗಾರರ ಆನಂದ ಲಕ್ಕೂರರ ಬಗ್ಗೆ ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳಾದವು. ವ್ಯಕ್ತಿಯೊಬ್ಬರು ಅಗಲಿದಾಗ ಅವರ ಬಗ್ಗೆ ಏನೆಲ್ಲ ಮಾತನಾಡಬಾರದಾಗಿತ್ತೋ ಅಂತ ಕ್ಷುಲ್ಲಕ ವಿಚಾರಗಳೇ ಹೆಚ್ಚು ಚರ್ಚೆಯಾದದ್ದು ನಮ್ಮ ಸಾಂಸ್ಕೃತಿಕ ಲೋಕದ ಸಣ್ಣತನವೆಂದೇ ಹೇಳಬಹುದು. ಆನಂದ ಬದುಕಿದ್ದಾಗ ಅವರ ಫೋನ್‌ ಕಾಲ್‌ ಸಹ ರೀಸಿವ್‌ ಮಾಡಲು ರೇಜಿಗೆಪಟ್ಟವರೆಲ್ಲ ಇಷ್ಟುದ್ಧ ಬರೆದು ತಮ್ಮ ಹಿಪೋಕ್ರಸಿಯನ್ನು ಹರಾಜಿಗಿಟ್ಟುಕೊಂಡರು. ಆನಂದರ ಕುಡಿತ, ಸಣ್ಣಪುಟ್ಟ ಸಾಲಗಳ ಬಗ್ಗೆ ಬರೆಯುತ್ತಾ ವ್ಯಕ್ತಿ ಹೇಗೆಲ್ಲ ಬದುಕುಬಾರದು ಎಂಬುದಕ್ಕೆ ಆನಂದ ದೊಡ್ಡ ಉದಾಹರಣೆ ಎಂದು [&#8230;]]]></description>
										<content:encoded><![CDATA[
<p>(<strong>ಇತ್ತೀಚೆಗೆ ನಿಧನರಾದ ಯುವ ಬರಹಗಾರರ ಆನಂದ ಲಕ್ಕೂರರ ಬಗ್ಗೆ ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳಾದವು. ವ್ಯಕ್ತಿಯೊಬ್ಬರು ಅಗಲಿದಾಗ ಅವರ ಬಗ್ಗೆ ಏನೆಲ್ಲ ಮಾತನಾಡಬಾರದಾಗಿತ್ತೋ ಅಂತ ಕ್ಷುಲ್ಲಕ ವಿಚಾರಗಳೇ ಹೆಚ್ಚು ಚರ್ಚೆಯಾದದ್ದು ನಮ್ಮ ಸಾಂಸ್ಕೃತಿಕ ಲೋಕದ ಸಣ್ಣತನವೆಂದೇ ಹೇಳಬಹುದು. ಆನಂದ ಬದುಕಿದ್ದಾಗ ಅವರ ಫೋನ್‌ ಕಾಲ್‌ ಸಹ ರೀಸಿವ್‌ ಮಾಡಲು ರೇಜಿಗೆಪಟ್ಟವರೆಲ್ಲ ಇಷ್ಟುದ್ಧ ಬರೆದು ತಮ್ಮ ಹಿಪೋಕ್ರಸಿಯನ್ನು ಹರಾಜಿಗಿಟ್ಟುಕೊಂಡರು. ಆನಂದರ ಕುಡಿತ, ಸಣ್ಣಪುಟ್ಟ ಸಾಲಗಳ ಬಗ್ಗೆ ಬರೆಯುತ್ತಾ ವ್ಯಕ್ತಿ ಹೇಗೆಲ್ಲ ಬದುಕುಬಾರದು ಎಂಬುದಕ್ಕೆ ಆನಂದ ದೊಡ್ಡ ಉದಾಹರಣೆ ಎಂದು ಷರಾ ಬರೆದುಬಿಟ್ಟವರೇ ಹೆಚ್ಚು. ಆದರೆ, ಆನಂದ್‌ ಅದೆಲ್ಲದಕ್ಕೂ ಮಿಗಿಲಾಗಿದ್ದರು. ಆನಂದರ ಓದಿನ ವಿಸ್ತಾರ, ಜಗತ್ತಿನ ಲೇಖಕರನ್ನು ತನ್ನೊಳಗೆ ಇಳಿಸಿಕೊಳ್ಳುವ ಪರಿ ಅವರ ವಾರಿಗೆಯ ಯುವಬರಹಗಾರರಲ್ಲಿ ಬೆರೆಳೆಣಿಕೆಯವರಲ್ಲೂ ಇರಲಿಲ್ಲವೆಂಬುದು ಅವರ ಹತ್ತಿರದ ಒಡನಾಡಿಗಳ ಅಭಿಪ್ರಾಯ. ಆನಂದ ಎಲ್ಲರನ್ನು ಆತುಕೊಳ್ಳುವ ಅಪ್ಪಟ ತಾಯ್ತನದ ಜೀವ. ಆನಂದರ ಕೊನೆಯ ದಿನಗಳಲ್ಲಿ ಜೊತೆಗಿದ್ದ ದೇವನೂರು ನಂದೀಶ್‌ ಆನಂದ &#8220;ತಥಾಗತನ ಮಂದಸ್ಮಿತದಂತೆ ಬದುಕಿದ್ದರು ಎನ್ನುತ್ತಾರೆ. ಅವರ ಪೂರ್ತಿ ಬರಹ ಇಲ್ಲಿ ನಿಮಗಾಗಿ..) </strong></p>



<p>ಕವಿ ಲಕ್ಕೂರು ಆನಂದರು ನನಗೆ ಪರಿಚಯವಾದದ್ದು ನಾನು ಯಾವ ವಿಶ್ವವಿದ್ಯಾಲಯವೊಂದರಲ್ಲಿ ಸಂಶೋಧನೆ ಕೈಗೊಂಡು ಕೆಲಸ ಪ್ರಾರಂಭಿಸಿದ್ದೆನೋ ಆ ಒಂದು ಆವರಣದಲ್ಲಿ. ೨೦೨೨ರ ಫೆಬ್ರುವರಿ ಮಾಯೆಯಲ್ಲಿ ಪಿಹೆಚ್.ಡಿ. ಅಧ್ಯಯನಕ್ಕೆಂದು ಇಲ್ಲಿ ನಾನು ಪ್ರವೇಶ ಪಡೆದ ಬಳಿಕ ಕೆಲ ತಿಂಗಳ ಆನಂತರದ ಅವಧಿಯಲ್ಲಿ ಅವರೂ ಪ್ರವೇಶ ಪಡೆದಿದ್ದಾರೆಂದು ತಿಳಿಯಿತು. ಆದಾದ ಕೆಲದಿನಗಳಲ್ಲಿ ಮೂರ್ನಾಲ್ಕು ಸಂಗಡಿಗರೊಂದಿಗೆ ನಾನಿದ್ದ ಹಾಸ್ಟೆಲ್ ಕೋಣೆಗೆ ಬಂದು ಅವರು ನನಗೆ ಪರಿಚಯವಾದರು. ಬಂದಿದ್ದ ಈ ಮೂರ್ನಾಲ್ಕು ಮಂದಿಯಲ್ಲಿ ಹೊಸ ಪರಿಚಯದ ಮುಖವಾಗಿ ಇವರು ನನಗೆ ಆ ದಿನ ಪರಿಚಯವಾದ ಬಗೆ ನನಗೆ ಅಷ್ಟೇ ಅಚ್ಚರಿಯನ್ನು ಮೂಡಿಸಿತ್ತು. ಆ ಮೊದಲ ದಿನ ನನ್ನ ರೂಮಿನಲ್ಲಿದ್ದ ನೂರಾರು ಪುಸ್ತಕಗಳನ್ನು ಕಂಡು ಇಷ್ಟು ಅಸಂಖ್ಯಾತ ಪುಸ್ತಕಗಳನ್ನು ನೋಡಿ ನನಗೆ ತುಂಬ ಖುಷಿಯಾಯಿತೆಂದು ರೂಮಿನಿಂದ ಹೊರನಡೆಯುತ್ತ ಹೇಳಿದ ಮಾತು ಇನ್ನೂ ನೆನಪಿನಲ್ಲಿದೆ.</p>



<p>ಆನಂತರ ನನ್ನಿಂದ ಬೀಳ್ಕೊಂಡು ಮತ್ತೆ ಕೆಲವು ದಿನಗಳಾದ ಬಳಿಕ ವಿಶ್ವವಿದ್ಯಾಲಯಕ್ಕೆ ಬಂದ ಹೊಸತರಲ್ಲಿ ಕೆಲ ಕಾಲ ನನ್ನ ರೂಮಿನ ಒಂದು ಬದಿಯಲ್ಲಿ ನಾನು ಮತ್ತು ಅವರು ಸಾಕಷ್ಟು ಮಾತುಕತೆಗಳನ್ನಾಡುತ್ತ ಹರಟುತ್ತ ಒಂದು ಕಪ್ ಚಹಾದೊಡನೆ ಹಿತವಾದ ಸಂಭಾಷಣೆಗಳನ್ನು ಮಾಡುತ್ತ ಗಂಟೆಗಟ್ಟಲೆ ಸಾಹಿತ್ಯಕ ಚರ್ಚೆಗಳನ್ನು ನಡೆಸುತ್ತಿದ್ದೆವು. ರಾತ್ರಿ ಊಟವಾದ ಬಳಿಕ ಮತ್ತೆ ಅದು ಇದು ಅಂತೆಲ್ಲ ನಮ್ಮ ಮಾತುಕತೆಗಳನ್ನು ಹೊರಳಿಸಿ ವಾದ-ವಾಗ್ವಾದಗಳ ಬಿಸಿ ಚರ್ಚೆಗಳಲ್ಲಿ ಅಷ್ಟೇ ಸಾವದಾನ ಕಾತರಗಳಿಂದ ಮಂಡಿಸುವುದು ಮತ್ತು ಅದಕ್ಕೆ ಪ್ರತಿಯಾಗಿ ವಿಮರ್ಶೆ ಮಾಡುವುದು ಇದೇ ಆಗುತ್ತಿತ್ತು. ಎಲ್ಲವನ್ನು ಒಪ್ಪುವುದಾಗಲೀ ಖಂಡಿಸುವುದಾಗಲೀ ಪರಿಶೀಲಿಸುವುದಾಗಲೀ ಅಥವ ಒಪ್ಪಿ ಮುನ್ನಡೆಯುವುದಾಗಲೀ ಇಲ್ಲವೆ ತ್ಯಜಿಸಿ ಬೇರೆ ದಿಕ್ಕಿನ ಪ್ರಯಾಣವೊಂದಕ್ಕೆ ಸಜ್ಜಾಗುತ್ತಿದ್ದ ಬಗೆ ನಮ್ಮಗಳ ಮಾತಿನ ಶೈಲಿಯಾಗಿತ್ತು. ಯಾವ ಚರ್ಚೆಗೂ ವ್ಯವಸ್ಥಿತ ಆವರಣವಾಗಲೀ ಚೌಕಟ್ಟಾಗಲೀ ಇರುತ್ತಿರಲಿಲ್ಲ. ಎಲ್ಲವೂ ಬಯಲೆ ಆದರೂ ಕೊಂಚ ಮಟ್ಟಿಗಿನ ಆಲಯದ ಮುಸುಕು ಅಲ್ಲಲ್ಲಿ ಇರುತ್ತಿತ್ತು.</p>



<p>ಸಮಕಾಲೀನ ಕನ್ನಡ ಸಾಹಿತ್ಯದ ಬರೆವಣಿಗೆಯ ಬಗೆಗೆ ಚರ್ಚೆಗಳು ಮೇಲಿಂದ ಮೇಲೆ ಬರುತ್ತಿದ್ದವು. ಕನ್ನಡದಲ್ಲಿ ಕಾವ್ಯಕ್ಷೇತ್ರ ಮತ್ತು ವಿಮರ್ಶಾಕ್ಷೇತ್ರಗಳು ತೀರಾ ಸೊರಗಿ ಹೋಗಿವೆಯೆಂಬ ಅಭಿಪ್ರಾಯಗಳು ಅಂತಿಮವಾಗಿ ಇಬ್ಬರಲ್ಲೂ ಒಡಮೂಡುತ್ತಿದ್ದವು. ಅವು ಅಂತಿಮವೆಂಬಂತೆ ಸತ್ತೆ ಹೋಗಿವೆಯೆಂದು ಹೇಳುವ ಮಟ್ಟಿಗೂ ತಲುಪಿದ್ದೂ ಇದೆ. ಕನ್ನಡ ಚಿಂತನೆಯ ವಿಷಯಕವಾಗಿಯೂ ಈ ಬಗೆಯದೆ ತಾತ್ಸಾರ. ಈ ಮಧ್ಯೆ ಎಲ್ಲ ಅನುವಾದದ ಆಲಯವೇ ಆಗಿದೆಯೆಂಬ ನನ್ನ ಮಾತು ಇದರೊಂದಿಗೆ ಸೇರ್ಪಡೆಯಾಗುತ್ತಿತ್ತು. ಸಮಕಾಲೀನ ಅನುವಾದಕರ ಬಗೆಗೂ ಅವರಲ್ಲಿ ಅಷ್ಟೇ ಒಪ್ಪಿತ ಮತ್ತು ತಿರಸ್ಕಾರದ ದನಿಗಳಿದ್ದವು. ಕೆಲ ಅನುವಾದಕರನ್ನು ಅವರು ಒಪ್ಪುತ್ತಿರಲಿಲ್ಲ. ಮಕ್ಕಳು ಓದುವ ಪಿಲಾಸಫಿ ಪುಸ್ತಕಗಳನ್ನು ಅನುವಾದ ಮಾಡುತ್ತಾರೆಂದು ನನ್ನೊಂದಿಗೆ ಹೇಳುತ್ತಿದ್ದುದುಂಟು.</p>



<p>ನನ್ನದೆ ಆದ ಯಾವ ತೀರ್ಮಾನ-ಅಭಿಪ್ರಾಯಗಳಿಗೂ ಅವರು ಸಮ್ಮತಿ ತೋರುತ್ತಿದ್ದುದು ಒಂದಾದರೆ ಆ ತೀರ್ಮಾನ, ಅಭಿಪ್ರಾಯಗಳಿಗೆ ನಿರ್ಧಾರಕವಾದ ನಿರ್ಣಯವೊಂದು ತಿಳಿಗೊಳದಂತೆ ಮತ್ತಷ್ಟು ತಿಳಿಯಾಗುವಲ್ಲಿ ಇನ್ನಷ್ಟು ನೆರವನ್ನು ಅವರ ಪ್ರತಿಮಾತುಗಳು ನೀಡುತ್ತಿದ್ದವು. ಪ್ರಶಾಂತತೆಯಲ್ಲಿ ಅದು ಕೊನೆಮುಟ್ಟುವುದಾದರೂ ಹಿಮಾಲಯದ ಎತ್ತರದ ಸಾದೃಶ ಆಕೃತಿಯೊಂದು ನನ್ನ ಸ್ಮೃತಿಪಟಲದಲ್ಲಿ ಮೂಡುತ್ತಿತ್ತು. ನಿರ್ಣಯವೊಂದು ಇಬ್ಬರ ಚರ್ಚೆಯಲ್ಲಿ ಯಾವ ತಿಕ್ಕಾಟ-ಜಗಳ, ವಾದ-ವಾಗ್ವಾದಗಳಿಗೆ ನಿಲ್ಲದೆ ಅದು ತನ್ನ ಆಕೃತಿಯ ಮೂಲಕವೆ ಅದರ ಆಶಯಗಳನ್ನೂ ಅದರ ಅಭಿವ್ಯಕ್ತಿಯ ಮಾರ್ಗವನ್ನೂ ಆ ಮೂಲಕವೇ ಮೂಡಿಸುತ್ತಿತ್ತು.</p>



<p>ಬುದ್ಧ ಮತ್ತು ಆತನ ನಂತರದ ಬಗೆಗೆ ಮಾತಿನ ನಡುವೆ ಉಪದೇಶವಾಗುತ್ತಿತ್ತು. ಬುದ್ಧನ ಪೂರ್ವದಲ್ಲಿದ್ದವರ ಬಗೆಗೂ ಕೆಲ ಸಂಗತಿಗಳು ಅವರ ಮೂಲಕವೇ ನನಗೆ ತಿಳಿದುಬರುತ್ತಿತ್ತು. ಬುದ್ದಿಸಮ್‌ನ ಹಿನ್ನಡೆಗೆ ನಾಗಾರ್ಜುನನ ಜಟಿಲವಾದ ಮಾಧ್ಯಮಿಕ ತತ್ತ್ವವೇ ಕಾರಣವಾಗಿತ್ತು ಎಂಬ ಅವರ ಅಭಿಪ್ರಾಯವೂ ಇಲ್ಲಿಗೆ ಸ್ತುತ್ಯರ್ಹ. ಆ ಮಾಧ್ಯಮಿಕಕಾರಿಕೆ ಅರ್ಥವಾಗುವುದಿಲ್ಲವಲ್ಲ! ಎಂದು ಒಮ್ಮೆ ಕೇಳಿದ್ದಕ್ಕೆ &#8216;ಈ ಜಗತ್ತಿನಲ್ಲಿ ಅರ್ಥವಾಗದ ಯಾವೊಂದು ಸಂಗತಿಯೂ ನಿನ್ನಿಂದ ಉಳಿದಿಲ್ಲವಯ್ಯ!&#8217; ಎಂದು ನನ್ನನ್ನು ಗಲಿಬಿಲಿಗೊಳಿಸಿದ್ದೂ ಇದೆ. ಆ ಪುಸ್ತಕಾನ ಹಿಂಬದಿ ಪುಟಗಳಿಂದ ಆರಂಭಿಸಿ ತಲೆಕೆಳಗು ಮಾಡಿ ಓದಬೇಕಯ್ಯ! ಆಗ ಅದು ಅರ್ಥವಾಗುತ್ತದೆ. ಬೇಕಾದರೆ ನೀನು ಇನ್ನೊಮ್ಮೆ ಪ್ರಯತ್ನಿಸು. ಹಾಗೆ ಪ್ರಯತ್ನಿಸಿ ಅಂತ ಆದಿಮಕ್ಕೆ ಬಂದಿದ್ದ ಒಬ್ಬ ವಿದ್ವಾಂಸ ನನಗೆ ತಿಳಿಸಿಕೊಟ್ಟಿದ್ದನಯ್ಯ ಎಂದು ಹೇಳಿ ನನ್ನನ್ನು ಅದರ ಓದಿಗೆ ಹಚ್ಚಿದ್ದೂ ಇದೆ. ಬುದ್ಧನ ಅನೇಕ ಶಿಷ್ಯರಲ್ಲಿ ನಾಗಾರ್ಜುನನೂ ಪ್ರಮುಖವಾದವನು. ಬುದ್ಧನ ಜಾತಕ ಕತೆಗಳು ಆಗಾಗ ರಸ್ತೆಯಲ್ಲಿ ಹೋಗುತ್ತಿದ್ದಾಗ ಭಿತ್ತರಗೊಳ್ಳುತ್ತಿದ್ದವು.</p>



<p>ಮೊದಲ ದಿನ ಪರಿಚಯವಾದ ಬಳಿಕ ಅವರೊಂದಿಗೆ ನಾಲ್ಕಾರು ಹೆಜ್ಜೆ ಹಾಕುತ್ತ ಹೋಗುತ್ತಿರುವಾಗ ರಾಧಾಕೃಷ್ಣನ್ ಅವರ ಇಂಡಿಯನ್ ಫಿಲಾಸಫಿಯ ಮೂರು ಸಂಪುಟಗಳ ಅನುವಾದ ಕಾರ್ಯದಲ್ಲಿ ನಾನು ತೊಡಗಿದ್ದೇನೆ. ಅವು ಇನ್ನೇನು ಕೆಲವೇ ದಿನಗಳಲ್ಲಿ ಭಾಷಾ ಭಾರತಿ ಪ್ರಾಧಿಕಾರದಿಂದ ಬರಲಿದೆ ಎಂದು ಹೇಳಿದ್ದರು. ಇನ್ನಿಲ್ಲದ ಕಾತರದಿಂದ ಕೂಡಿದ ಸಂತಸವನ್ನು ಅವರ ಆ ಮಾತುಗಳು ವ್ಯಕ್ತಪಡಿಸಿದ್ದವು. ಆದರೆ ನಮ್ಮಿಬ್ಬರ ಆತ್ಮೀಯತೆ ಬೆಳೆದು ಎಷ್ಟೋ ದಿನಗಳಾದ ಬಳಿಕ ರಾಹುಲ ಸಾಂಕೃತ್ಸಾಯನರನ್ನು ಅವರು ಓದಲು ಶುರುಮಾಡಿದ್ದರು ಮತ್ತು ಅವರ ಫಿಲಾಸಫಿ ಗ್ರಂಥಗಳನ್ನು ಕೈಗೆತ್ತಿಕೊಂಡಿದ್ದರು. ಅಲ್ಲಿ ರಾಧಾಕೃಷ್ಣನ್ ಅವರ ಪ್ರಮೇಯಗಳನ್ನು ಸಾಂಕೃತ್ಸಾಯನರು ಒಪ್ಪದೆ ತಿರಸ್ಕರಿಸಿರುವ ಬಹಳಷ್ಟು ಸಂಗತಿಗಳನ್ನು ನನಗೆ ಆಗಾಗ ಹೇಳುತ್ತಿದ್ದುದು ಮಾತ್ರವಲ್ಲ ಆ ಬಗೆಗೆ ಅವರ ಅಭಿಪ್ರಾಯಗಳು ಅಷ್ಟೊಂದು ತೀಕ್ಷ್ಣವಾಗಿವೆಯೆಂದೂ ಸಹ ಹೇಳಿದ್ದರು. ರಾಹುಲ ಸಾಂಕೃತ್ಸಾಯನರ ಜೀವನದ ಪ್ರಮುಖ ಘಟ್ಟಗಳನ್ನೂ ಮತ್ತು ಅವರ ಕೊನೆಯ ದಿನಗಳ ಬಗ್ಗೆಯೂ ಆಗಾಗ ಹೇಳುತ್ತಿದ್ದುದುಂಟು. ಹಾಗೆಯೇ ಅವರ ಪ್ರಕಟಿತ ಮತ್ತು ಅಪ್ರಕಟಿತ ಕೃತಿಗಳ ಬಗ್ಗೆಯೂ ಕೆಲ ಮಾಹಿತಿಗಳನ್ನು ಕೊಡುತ್ತಿದ್ದರು. ಜೊತೆಗೆ ಕನ್ನಡಕ್ಕೆ ಅನುವಾದವಾಗಬೇಕಾದ ಅವರ ಕೃತಿಗಳ ಪಟ್ಟಿಯನ್ನೆ ನನ್ನ ಮುಂದಿಡುತ್ತಿದ್ದರು. ರಾಹುಲ ಸಾಂಕೃತ್ಸಾಯನರ ಬಗ್ಗೆ ಒಂದಷ್ಟು ಹರಟುತ್ತಲೆ ಸದಾ ನನ್ನನ್ನು ನಗಿಸುವ ಸಲುವಾಗಿ ತಾನು ಸಂಗ್ರಹಿಸಿದ ಗ್ರಂಥರಾಶಿಯನ್ನೆಲ್ಲ ನೇಪಾಳದಿಂದ ಕತ್ತೆಗಳಿಗೆ ಹೇರಿಕೊಂಡು ಬರುತ್ತಾನಯ್ಯ! ಎಂದು ಆಗಾಗ ಹಾಸ್ಯದ ಚಟಾಕಿಯನ್ನು ಹಾರಿಸುತ್ತಿದ್ದುದುಂಟು.</p>



<p>ಆನಂತರದಲ್ಲಿ ದೇವಿಪ್ರಸಾದ್ ಚಟ್ಟೋಪಾಧ್ಯಾಯರ ತತ್ತ್ವಶಾಸ್ತ್ರ ಚರಿತ್ರೆಯ ಪುಸ್ತಕವೊಂದನ್ನು ಕೈಗೆತ್ತಿಕೊಂಡು ಅನುವಾದಿಸಿ ಅದು ಮುಕ್ತಾಯದ ಹಂತದಲ್ಲಿದೆ ಎಂದಿದ್ದನ್ನು ಕೇಳಿದ್ದೆ. ಆದರೆ ನನಗೆ ಇನ್ನೂ ಹೆಚ್ಚಿನ ಆಸಕ್ತಿ ಇದ್ದದ್ದು ದೇವಿಪ್ರಸಾದರಿಗೆ ಮಾರ್ಗದರ್ಶಕರಾಗಿದ್ದ ಸುರೇಂದ್ರನಾಥ್ ದಾಸಗುಪ್ತರ ಬಗ್ಗೆ. ಈ ಇಬ್ಬರಲ್ಲಿ ಯಾರು ಜೀನಿಯಸ್ ಎಂದು ನಾವಿಬ್ಬರು ಮಾತನಾಡಿಕೊಳ್ಳುತ್ತಿದ್ದಾಗ ನನ್ನ ಗಮನವು ದಾಸ್‌ಗುಪ್ತರ ಕಡೆಗೆ ವಾಲುತ್ತಿತ್ತು. ಹಾಗಾಗಿಯೇ ಸುರೇಂದ್ರನಾಥ ದಾಸಗುಪ್ತರ ಇಂಡಿಯನ್ ಫಿಲಾಸಫಿಯ ಮೂರು ಸಂಪುಟಗಳನ್ನು ಅನುವಾದ ಮಾಡುವಂತೆ ಅವರನ್ನು ತಾಕೀತು ಮಾಡುತ್ತಿದ್ದೆ. ಆದರೆ ಅವರ ನಿರ್ಧಾರವು ಅಂತಿಮವಾಗಿ ದೇವಿಪ್ರಸಾದರ ಕಡೆಗೆ ಹರಿಯುತ್ತಿತ್ತು. ಒಮ್ಮೆ ಆತ್ಮೀಯರೊಂದಿಗೆ ಗುಲ್ಬರ್ಗಾ ಸಿಟಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅದಕ್ಕೆ ಪ್ರತಿಯಾಗಿ ಪ್ಲೇಟೋ ಅರಿಸ್ಟಾಟಲರ ಪ್ರಮೇಯವೊಂದನ್ನು ಹೇಳಿದ್ದೂ ಇದೆ.</p>



<p>ಆನಂದ ಕುಮಾರಸ್ವಾಮಿಯವರ ಪ್ರಸ್ತಾಪವೂ ಆಗಾಗ ನಮ್ಮಿಬ್ಬರ ನಡುವೆ ಆಗುತ್ತಿತ್ತು. ಹತ್ತು ವರ್ಷಕ್ಕೂ ಮುನ್ನ ಅಂದರೆ ಸರಿಸುಮಾರು ೨೦೧೧ರ ಹೊತ್ತಿಗೆ ತಾವು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಎರಡು ಕಂತುಗಳಲ್ಲಿ ಅನುವಾದಿಸಿ ಪ್ರಕಟಿಸಿದ &#8216;ಆನಂದ ಕುಮಾರಸ್ವಾಮಿ ಇಲ್ಲದ ಚಿದಂಬರಂ&#8217; ಎಂಬ ಲೇಖನದ ಬಗ್ಗೆಯೂ ನನ್ನೊಡನೆ ಹೇಳಿದ್ದರು. ನಾನದನ್ನು ಓದಬೇಕೆಂದು ಕೇಳಿದ್ದೆ. ಆದರೆ ಅದರ ಅಸ್ತಿತ್ವ ಅವರ ಬಳಿ ಉಳಿದಿರಲಿಲ್ಲ.</p>



<p>ಒಮ್ಮೆ ಅಚನಕ್ಕಾಗಿ ಮದ್ರಾಸ್ ಮೂಲದ ವಿದ್ವಾಂಸ ಪಿ.ಲಕ್ಷ್ಮೀನರಸು ಅವರ ಪ್ರಸ್ತಾಪವು ನನಗೆ ಅವರಿಂದಲೇ ಆದದ್ದು, ಲೇಖಕ ಲಕ್ಷ್ಮೀನರಸು ಅವರ ಪ್ರಸಿದ್ಧ ಕೃತಿ &#8216;ಎಸೆನ್ಸ್ ಆಫ್ ಬುದ್ಧಿಸಮ್'(ಬುದ್ಧಧರ್ಮಸಾರ)ನ ಪ್ರಸ್ತಾಪವಾಗಿ ಅವರ ಬಗೆಗೆ ಇನ್ನಷ್ಟು ಕಾತರ, ಕುತೂಹಲಗಳನ್ನು ಮೂಡಿಸಿದ್ದವು. ಅಂಬೇಡ್ಕರ್ ಅವರಿಗೆ ಬುದ್ಧಿಸಮ್ ಬಗೆಗೆ ಯಾವುದೇ ಸಮಸ್ಯೆ, ಪ್ರಶ್ನೆಗಳು ಹುಡುಕಾಟಗಳು ಬಂದಾಗ ಅವರು ನೇರವಾಗಿ ಬಂದುಳಿಯುತ್ತಿದ್ದುದು ಮದ್ರಾಸಿನ ಲಕ್ಷ್ಮೀನರಸು ಅವರ ಮನೆಯಲ್ಲಿ ಎಂಬುದು ನನಗೆ ಅವರಿಂದಲೆ ತಿಳಿದುಬಂದಿತ್ತು. ಅಂಬೇಡ್ಕರ್ ಅವರನ್ನು ಏಕವಚನದಲ್ಲಿ ಮಾತನಾಡಿಸುತ್ತಿದ್ದ ಭಾರತದ ಏಕೈಕ ವಿದ್ವಾಂಸನೆಂದರೆ ಅದು ಲಕ್ಷ್ಮೀನರಸು ಮಾತ್ರ! ಎಂಬುದನ್ನು ನನಗೆ ಮನದಟ್ಟು ಮಾಡಿದ್ದು ಅವರೆ. ಅದನ್ನು ಕೇಳಿ ಪಿ.ಲಕ್ಷ್ಮೀನರಸು ಅವರ ಮೇಲೆ ನನ್ನಲ್ಲಿ ಇನ್ನಿಲ್ಲದ ಆಸಕ್ತಿಯೊಂದು ಮೂಡಿತ್ತು. ಲಕ್ಷ್ಮೀನರಸು ಅವರ ಬಳಿ ಬುದ್ಧಧರ್ಮದ ಬಗೆಗಿನ ಯಾವುದೇ ಪ್ರಶ್ನೆಗಳು ಬಂದರೂ ಅದಕ್ಕೆ ಪ್ರತಿಯಾಗಿ &#8216;ಲುಕ್ ಆಟ್ ಅಂಬೇಡ್ಕರ್&#8217; ಎಂದು ಅಷ್ಟೇ ಗಾಂಭೀರ್ಯವಾಗಿ ಅವರು ನುಡಿಯುತ್ತಿದ್ದ ಬಗೆ ಕವಿ ಲಕ್ಕೂರರ ಸಾಭಿನಯವಾದ ಮಾತುಗಳಿಂದ ನನಗೆ ಅರ್ಥವಾಗುತ್ತಿತ್ತು.</p>



<p>ಪಿ.ಲಕ್ಷ್ಮೀನರಸು ಅವರ ಆ ಪುಸ್ತಕ ಪ್ರಕಟವಾದದ್ದು ಕಳೆದ ಶತಮಾನದ ಮೊದಲ ದಶಕದಲ್ಲಿಯೇ ಎಂದು ಹೇಳಬೇಕು. ಆ ಪುಸ್ತಕವು ಮತ್ತೆ ೧೯೪೮ರಲ್ಲಿ ಮತ್ತೆ ಮೂರನೇ ಪುನರ್ಮುದ್ರಣವಾಗುವಾಗ ಅದಕ್ಕೆ ಅಂಬೇಡ್ಕರರ ಮುನ್ನುಡಿ ಸೇರಿದೆ. ಆ ಪುಸ್ತಕವನ್ನು ಪರಿಶೀಲಿಸಿದ ತರುವಾಯ ಅದು ನನಗೆ ತಿಳಿದುಬಂತು. ಈ ಸಂಗತಿಗಳನ್ನು ನನಗೆ ಅವರು ಪ್ರಸ್ತುತಪಡಿಸಿದ ಬಳಿಕ ನಾನು ಆಗಾಗ ಅವರನ್ನು ಮೇಲಿಂದ ಮೇಲೆ ಅವರ ಬಗ್ಗೆ ಮತ್ತು ಅವರು ಬರೆದ ಆ ಪುಸ್ತಕದ ಬಗೆಗೆ ಕೇಳುತ್ತಲೆ ಬಂದಿದ್ದೆ. ಎಷ್ಟೋ ಸಲ ಆ ವಿದ್ವಾಂಸರ ಹೆಸರೂ ಮರೆತುಹೋಗುತ್ತಿತ್ತು. ಜ್ಞಾಪಕಕ್ಕೆ ತಂದುಕೊಳ್ಳಲು ಒಮ್ಮೆ ತೀವ್ರವಾಗಿ ಹೆಣಗಾಡಿ ಅದು ಸಾಧ್ಯವಾಗದೇ ನೇರವಾಗಿ ಅವರಿಗೆ ಪುಟ್ಟದೊಂದು ಕರೆಮಾಡಿ ತಿಳಿದುಕೊಂಡಿದ್ದೆ. ಒಮ್ಮೆ ಗುಲ್ಬರ್ಗಾಕ್ಕೆ ಬಸ್ಸಿನಲ್ಲಿ ಪ್ರಯಾಣಿಸುವಾಗ ಈ ಕುರಿತು ವಿಚಾರಿಸಿದಾಗ ಮುಂದಿನ ಪುಸ್ತಕದ ಅನುವಾದದ ಸಲುವಾಗಿ ಕೊಂಚ ಮಾತನಾಡಿ ನಿನ್ನ ಆಸಕ್ತಿಯನ್ನು ಪರಿಗಣಿಸಿ ಆ ಪುಸ್ತಕವನ್ನೇ ನಾನು ಮುಂದಿನ ಅನುವಾದಕ್ಕೆ ಆಯ್ದುಕೊಂಡಿರುವೆ ಎಂದು ಅಂದೆ ನಿರ್ಧರಿಸಿ ಹೇಳಿದ್ದು ನನ್ನ ಸಂತಸವನ್ನು ಮತ್ತಷ್ಟು ಹಿಮ್ಮಡಿಗೊಳಿಸಿತ್ತು. ಅದರಂತೆ ಆ ಪುಸ್ತಕವನ್ನು ಅನುವಾದಿಸಿದ ಬಳಿಕ ಪ್ರಕಟಣೆಗೆ ಹೋಗುವ ಸಂದರ್ಭದಲ್ಲಿ ಇದಕ್ಕೊಂದು ಮುನ್ನುಡಿಯ ಅಗತ್ಯವಿದೆಯೆಂದು ಹೇಳಿ ಪ್ರಸ್ತುತ ಕನ್ನಡ ನಾಡಿನಲ್ಲಿ ಯಾರು ಇದಕ್ಕೆ ಅಂತಹ ಸೂಕ್ತ ವಿದ್ವಾಂಸರು? ಎಂಬುದರ ಬಗೆಗಿನ ನಮ್ಮಿಬ್ಬರ ಹುಡುಕಾಟ ಆ ಒಂದು ರಾತ್ರಿ ಊಟವಾದ ಬಳಿಕ ನಡೆದಿತ್ತು. ಅದು ಹೇಗೋ ಒಂದು ನಿರ್ಣಾಯಕ ಹಂತವನ್ನು ಮರುದಿನ ತಲುಪಿತೆಂದು ಯಾರೊಂದಿಗೋ ಅವರು ನಡೆಸುತ್ತಿದ್ದ ಫೋನ್ ಕರೆಯ ಸಂಭಾಷಣೆಯಿಂದ ನನಗೆ ಅದು ತಿಳಿದುಬಂದಿತ್ತು.</p>



<p>ನಂತರದಲ್ಲಿ ಎಷ್ಟೋ ದಿನಗಳು ಕಳೆದ ಬಳಿಕ &#8216;ಅಂಬೇಡ್ಕರ್ ಕಂಡ ಭಾರತ&#8217; ಎಂಬ ಪುಸ್ತಕವನ್ನು ಪರಿಶೀಲಿಸುವಂತೆ ಅದರ ಹಸ್ತಪ್ರತಿಯನ್ನು ನನ್ನ ರೂಮಿನಲ್ಲಿ ತಂದಿಟ್ಟು ಹೋಗಿದ್ದ ಸಂದರ್ಭವೂ ಉಂಟು. ಆದರೆ ನಾನು ಈ ಪುಸ್ತಕದ ಆರಂಭದ ಒಂದೆರಡು ಹಾಳೆಗಳನ್ನು ತಿರುವಿ ಹಾಕಿ ಇದರಲ್ಲಿ ಪೂಜ್ಯ ಭಾವವೇ ತುಂಬಿ ಹೋಗಿರುವಂತೆ ಕಾಣುತ್ತದೆ ಸ್ವಲ್ಪವೂ ವೈಚಾರಿಕತೆ ಇಲ್ಲವೆಂದು ಅಲ್ಲೆಗಳೆದು ಅಷ್ಟೇನೂ ಆಸಕ್ತಿ ತೋರಿರಲಿಲ್ಲ. ಹಾಗಾಗಿ ಇದರ ಜೆರಾಕ್ಸ್ ಪ್ರತಿಯೊಂದು ಸುಮಾರು ಆರು ತಿಂಗಳ ಕಾಲ ನನ್ನ ರೂಮಿನಲ್ಲಿದ್ದ ಅನೇಕ ಪುಸ್ತಕಗಳ ಜೊತೆ ಹಾಗೆಯೇ ಉಳಿದಿತ್ತು. ಅನ್ಯ ಕೆಲಸಗಳ ಒತ್ತಡದಲ್ಲಿ ಆ ಪುಸ್ತಕವನ್ನು ನೋಡಲಾಗಿರಲಿಲ್ಲ. ಆದರೆ ಆ ಪುಸ್ತಕದ ಹಸ್ತಪ್ರತಿಯನ್ನು ಅವರಿಗೆ ಆ ಬಳಿಕ ಮರಳಿಸಿದ ಕೆಲದಿನಗಳ ಬಳಿಕ ಆ ಪುಸ್ತಕದ ಬಗೆಗೆ ನನ್ನ ಗಮನಹರಿದಿತ್ತಷ್ಟೆ. ಆದರೆ ಆ ಪುಸ್ತಕವನ್ನು ಕೊಡಿ ನೋಡುವೆ ಎನ್ನುವಲ್ಲಿ ಇಬ್ಬರ ಮುಖಾಮುಖಿಯ ಸಂದರ್ಭವೊಂದು ಮುಂದೆ ಎದುರಾದದ್ದು ಇಲ್ಲ. ಇತ್ತೀಚೆಗೆ ಅದು ಪ್ರಕಟವಾಗಿರುವುದರ ಸುಳಿವು ದೊರೆತು ಸಂತಸವಾಯಿತು.</p>



<p>ನಮ್ಮ ಇತರ ಯಾವುದೇ ಸಾಹಿತ್ಯಕ ಚರ್ಚೆಗಳು ನಮ್ಮಿಬ್ಬರ ನಡುವೆ ಬಂದಾಗ ಅಲ್ಲಿ ಕಿ.ರಂ., ಡಿ.ಆರ್., ರಾಮಯ್ಯ. ಸಿದ್ದಲಿಂಗಯ್ಯ, ಮಹಾದೇವ, ನರಹಳ್ಳಿ, ಕಂಬಾರ, ಅಗ್ರಹಾರ, ಹುಳಿಯಾರ್, ಡೊಮಿನಿಕ್, ಬಂಜಗೆರೆ, ನಾಗಾಭರಣ, ಲಂಕೇಶ್, ಕಲಬುರ್ಗಿ, ಚೆನ್ನಣ್ಣ ವಾಲೀಕಾರ್, ಶೆಟ್ಟರ್, ತಿರುಮಲೇಶ್, ಚೊಕ್ಕಾಡಿ, ಪಟ್ಟಣಶೆಟ್ಟಿ, ಸಿವಾರೆಡ್ಡಿ, ವರವರರಾವ್, ಗೋರಂಟಿ ವೆಂಕಣ್ಣ, ಕತ್ತಿ ಪದ್ಮಾರಾವ್, ಮುಂತಾದವರು ರಸ್ತೆಯ ಎದುರಿನಲ್ಲಿ ಸಿಕ್ಕಿ ಹಿಂದಾಗುತ್ತಿದ್ದರು. ಯುವ ತಲೆಮಾರಿನವರೂ ಏನೂ ಕಡಮೆ ಇದ್ದದ್ದಿಲ್ಲ. ಕಮಲಾದಾಸ್, ಅರುಂಧತಿ ರಾಯ್, ಶಾನ್ಬಾಗ್, ಕಾಯ್ಕಿಣಿ, ಜೋಗಿ, ವಸು, ನೀಹಾ ಮುಂತಾದವರೂ ಅದರ ಬೆನ್ನಲ್ಲೆ ಇಂಬಾಗುತ್ತಿದ್ದರು.</p>



<p>ನಮ್ಮಿಬ್ಬರ ಸಂಭಾಷಣೆಯಲ್ಲಿ ಡಿ.ಆ‌ರ್. ಮತ್ತು ಸೆಂಟ್ರಲ್ ಕಾಲೇಜಿನ ದಿನಗಳ ಆತ್ಮೀಯತೆಯನ್ನು ಆಗಾಗ ಅನುರಣಿಸಿದ್ದುಂಟು. ಡಿ.ಆರ್. ಶಿಮ್ಲಾದ ಶೀತಕ್ಕೆ ಮಂಜುಗಟ್ಟಿ ರಕ್ತಸಂಚಾರಕ್ಕೆ ಕೊರತೆಯುಂಟಾಗಿ ಅನಾರೋಗ್ಯಕ್ಕೆ ತುತ್ತಾದದ್ದು ಮತ್ತು ಅದು ಅವರ ಸಾವಿಗೂ ಕಾರಣವಾದುದರ ಬಗೆಗೆ ಒಂದು ಬಾರಿ ಹಪಾಹಪಿಸಿದ್ದೂ ಇದೆ. ಇಲ್ಲದಿದ್ದಲ್ಲಿ ಅವರು ಕನ್ನಡ ಚಿಂತನೆ ಮತ್ತು ವಿಮರ್ಶಾವಲಯವನ್ನು ಮತ್ತಷ್ಟು ವಿಸ್ತರಿಸುತ್ತಿದ್ದರೆಂದು ನನಗೆ ಆಗಾಗ ಹೇಳುತ್ತಿದ್ದುದುಂಟು. ಅಂತಹ ಕೆಲಸವನ್ನು ಮುಂದೆ ಸುಬ್ಬಣ್ಣ ಮಾಡಿದವರಾದರೂ ಅದು ಡಿ.ಆರ್. ಕ್ರಮದಲ್ಲಿ ಹೆಚ್ಚು ವ್ಯಾಪಿಸಲಿಲ್ಲ ಮತ್ತು ಅದನ್ನು ಅಕ್ಷರ ಮುಂದುವರಿಸುವ ಪ್ರಯತ್ನ ಮಾಡಿದರೂ ಅದು ಅವರಿಂದಲೂ ಅಷ್ಟರಮಟ್ಟಿಗೆ ಸಾಧ್ಯವಾಗಲಿಲ್ಲವೆಂಬ ಬೇಸರದ ದನಿಯೊಂದನ್ನು ನನಗೆ ವ್ಯಕ್ತಪಡಿಸಿದ್ದುಂಟು. ಒಮ್ಮೆ ಅಗ್ರಹಾರ ತನ್ನನ್ನು ನೋಡಿ ಅತ್ತಿದ್ದು ಮತ್ತು ಸಲಹಿದ್ದು ಜೊತೆಗೆ ತನ್ನ ತಂದೆಯ ಕೊನೆಯ ಕ್ಷಣಗಳಲ್ಲಿ ನೆರವಿಗೆ ಬಂದದ್ದನ್ನು ನಮ್ಮ ಕೆಲ ಗೆಳೆಯರ ಗುಂಪಿನಲ್ಲಿ ಹೇಳಿಕೊಂಡದ್ದುಂಟು.</p>



<p>ಒಮ್ಮೆ ಹಾ.ಮಾ.ನಾಯಕರ ಪ್ರಸ್ತಾಪ ಬಂದಾಗಲೂ ಕೂಡ ಹಾ.ಮಾ.ನಾಯಕರು ಇನ್ನೂ ಇರಬೇಕಿತ್ತು ಎಂಬ ವಿಷಾದದ ಪ್ರತಿಕ್ರಿಯೆಯೊಂದು ಬಂದಿತ್ತು. ಬಹಳ ಸಣ್ಣ ವಯಸ್ಸಿನಲ್ಲಿ ಅವರು ತೀರಿಹೋದದ್ದು ಎಂಬ ನನ್ನ ಮಾತೂ ಅದರೊಟ್ಟಿಗೆ ಜೋಡಣೆಯಾಗಿತ್ತು. ಭೈರಪ್ಪನವರ ಸಾಹಿತ್ಯದ ಬಗೆಗೆ ಹರಟುತ್ತ ಕುಳಿತಾಗ ಅವರಿಂದ ಬಂದ ಅಭಿಪ್ರಾಯ ಇದು. ಭೈರಪ್ಪ ದೊಡ್ಡ ಬರೆಹಗಾರ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಪರ್ವದಂತ ಕಾದಂಬರಿ ಅಷ್ಟು ಪುಟಗಳದ್ದಾದರೂ ಅದು ಓದುಗನನ್ನು ಹಿಡಿದು ನಿಲ್ಲಿಸುವ ಬಗೆ ಮತ್ತು ಅದು ಎಲ್ಲಿಯೂ ಬೇಸರವಾಗದಂತೆ ಓದಿಸಿಕೊಂಡು ಹೋಗುವ ಅದರ ಜಾಣ್ಮೆಯ ಕುರಿತಾಗಿ ಆ ಬಗೆಗೆ ನಾಲ್ಕು ಮಾತುಗಳನ್ನಾಡಿದ್ದೂ ಇದೆ. ಅಂತಹ ಬರೆವಣಿಗೆಯ ಕಥನ ತಂತ್ರ ಯಾವೊಬ್ಬ ಆಧುನಿಕ ಬರಹಗಾರನಲ್ಲೂ ಕಾಣುವುದು ಬಹಳ ದುಸ್ಥರ ಎಂದು ಹೇಳಿದ್ದು ಅವರ ತಿಳಿವಳಿಕೆಯ ಬಗೆಯೊಂದನ್ನು ನನಗೆ ದರ್ಶನ ಮಾಡಿಸಿತ್ತು.</p>



<p>ಗಾಂಧಿ-ಅಂಬೇಡ್ಕರರ ಬಗೆಗೆ ಸುತ್ತಲ ಪರಿಸರದಲ್ಲಿ ಏನೇ ಕಲಹಗಳು ಎದುರಾದರೂ ಅದಕ್ಕೆ ಅವರ ತಣ್ಣನೆಯ ಪ್ರತಿಕ್ರಿಯೆ ಇದ್ದೇ ಇರುತ್ತಿತ್ತು. ಕಾರ್ಯಕ್ರಮದ ಚರ್ಚೆಯ ಸಂದರ್ಭವೊಂದರಲ್ಲಿ ಆ ಬಗೆಗೆ ಕೆಲ ವಿಷಾದಗಳು ವ್ಯಕ್ತವಾಗಿದ್ದೂ ಉಂಟು. ಅದಕ್ಕೆ ಪ್ರತಿಯಾಗಿ ಆನಂದರ ಪ್ರತಿಮೆಯು ಎದ್ದುಬಂದು ಪೋಡಿಯಂ ಬಳಿ ನಿಂತಿತ್ತು. ಹಾಗೆ ನಿಂತು ಹೊರಡಿಸಿದ ಅಭಿಪ್ರಾಯದಲ್ಲಿ ಅಷ್ಟೇ ಶಕ್ತಿಯುತವಾಗಿ ಆ ಎರಡೂ ಶಕ್ತಿಗಳನ್ನು ಒಟ್ಟಿಗೆ ಬೆಸೆಯುವ ಪ್ರಯತ್ನವನ್ನು ಮಾಡಬಲ್ಲವಾಗಿದ್ದವೇ ಹೊರತಾಗಿ ಅವೆರಡೂ ವಿರುದ್ಧ ದಿಕ್ಕಿನ ಚಂಡಮಾರುತಗಳೆಂದು ಅವರೆಂದೂ ಭಾವಿಸಿದ ಬಗೆ ನನಗೆ ತಿಳಿದಿಲ್ಲ. ಹಾಗಾಗಿಯೇ ಅವರು ಅಂದು ಚಿಂತಕರೊಬ್ಬರ ಉಪನ್ಯಾಸದ ಬಳಿಕ ಚರ್ಚೆಯ ಸಂದರ್ಭಕ್ಕೆ ಪ್ರತಿಯಾಗಿ ಈ ಮಾತುಗಳನ್ನಾಡಿದ್ದರು. &#8220;ಗಾಂಧಿ-ಅಂಬೇಡ್ಕರ್ ಅವರ ದಾರಿಗಳು ಬೇರೆ ಬೇರೆಯಾದರೂ ಗುರಿ ಮಾತ್ರ ಒಂದೇ&#8221; ಆಗಿದ್ದವೆಂಬ ತಿಳಿವಳಿಕೆಯೊಂದನ್ನು ಪೋಡಿಯಂನ ಬಳಿ ನಿಂತು ಸಾರಿದ ಬಗೆ ನನಗೆ ತಥಾಗತನ ಪ್ರಮೇಯವನ್ನೇ ಹೇಳಿದಂತಿತ್ತು.</p>



<p>ಆನಂದರನ್ನು ನೋಡಿದಾಗಲೆಲ್ಲ ನನಗೆ ಮೂರು ಆಕೃತಿಗಳ ನೇರ ದರ್ಶನಗಳಾಗುತ್ತಿದ್ದವು. ಒಂದು ಗಾಂಧಿಯ ಶಾಂತತೆಯ ಮುಖಭಾವದ್ದಾದರೆ ಸಣ್ಣವರೊಡನೆ ಹರಟುತ್ತ ಕುಳಿತಾಗ ಅವರನ್ನೆಲ್ಲ ಸಂತೈಸಿ ಮಾತಾಡುವಾಗ ಥೇಟ್ ಕಾರಂತರದೇ ಹೋಲಿಕೆ ನನಗೆ ಎದ್ದು ಕಾಣುತಿತ್ತು. ಇನ್ನೊಂದು ಕಡೆಯಿಂದ ನಡೆದುಬರುವಾಗಿನ ದೃಶ್ಯವನ್ನು ನೋಡುವಾಗ ಯಾವುದೋ ಪುರಾತನ ಕಾಲದ ಮಹಾಮುನಿಯೇ ನಡೆದುಬರುವಂತೆ ಕಾಣುತ್ತಿತ್ತು. ಈ ಎಲ್ಲ ವ್ಯಕ್ತಿಯ ವ್ಯಕ್ತಿತ್ವದ ಚಹರೆಯಿಂದ ರೂಪುಗೊಂಡ ವ್ಯಕ್ತಿ ಮತ್ತು ವ್ಯಕ್ತಿತ್ವ ಪ್ರಿಯ ಕವಿ ಲಕ್ಕೂರು ಆನಂದರದು. ಇನ್ನೊಂದು ನೋಟದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಅವ್ಯಾವುವೂ ಇಲ್ಲದಂತೆ ಶುದ್ಧ ಹದಿಯರೆಯದ ಹುಡುಗನ ಹಾಗೆಯೂ ಹಳ್ಳಿಯ ಗಮಾರನಂತೆಯೂ ಸಾದಾ ಸೀದವೆಂಬಂತೆ ಸಾಮಾನ್ಯ ನೋಟವೊಂದರಲ್ಲಿ ದಕ್ಕುತ್ತಿತ್ತು. ಇವ್ಯಾವುವೂ ಕಾಣದ ಹೊತ್ತಿನಲ್ಲಿ ನನ್ನೊಂದಿಗೆ ತರಳೆ ಮಾಡುತ್ತ ಪೋಲಿ ಯುವಕನಂತೆಯೂ ನನಗೆ ಕಂಡಿದ್ದೂ ಇದೆ. ಈ ಎಲ್ಲ ಹಿನ್ನೆಲೆಯಿಂದ ಪ್ರಿಯ ಆನಂದರು ಮತ್ತು ನನ್ನ ಸ್ನೇಹವು ಏಕವಚನದ ಸಲಿಗೆಯಿಂದಲೂ ಒಮ್ಮೊಮ್ಮೆ ಗೌರವದ ಅಂತರ್ಯ್ಯದಿಂದಲೂ ಕೂಡಿದ ಒಡನಾಟವೊಂದರಲ್ಲಿ ಬೆರೆತುಹೋಗಿತ್ತು.</p>



<p>ಎರಡು ವಾರಗಳಿಗೊಮ್ಮೆಯಾದರೂ ನಾನು ಗುಲ್ಬರ್ಗಾಕ್ಕೆ ಹೋಗುವಾಗ ಒಂದೆರಡು ಬಾರಿ ನನ್ನೊಡನೆ ಅವರು ಬಂದದ್ದುಂಟು ಮತ್ತು ಒಮ್ಮೆ ಅಶಿಸ್ತಿನಿಂದ ನಡೆದುಕೊಂಡು ಬೇಸರ ತರಿಸಿದ್ದೂ ಇದೆ. ಆದರೂ ಕೊನೆಗೊಮ್ಮೆ ಅವರ ಅವಸ್ಥೆಯನ್ನು ನೋಡಿ ಸುಮ್ಮನೆ ನಕ್ಕು ಮರಳಿದ್ದೂ ಇದೆ. ಕಳೆದ ವರ್ಷದ ಹಿಂದೆ ಜೇಮ್ಸ್ ಕ್ಯಾಮರೆನ್ ತಯಾರಿಸಿ ಬಿಡುಗಡೆಗೊಳಿಸಿದ ಸಿನೆಮಾವನ್ನು ನೋಡಲೇಬೇಕಾದ ಸಿನೆಮಾ ಅದು ಎಂದು ಹೇಳಿ ನಾನೇ ಅವರನ್ನು ಒಂದು ಭಾನುವಾರ ಗುಲ್ಬರ್ಗಾಕ್ಕೆ ಕರೆದುಕೊಂಡು ಹೋಗಿದ್ದೆ. ಇಬ್ಬರೂ ಆ ಸಿನೆಮಾವನ್ನು ನೋಡಿ ಅಚ್ಚರಿಯೊಂದಿಗೆ ಮರಳಿದ್ದೆವು. ಹೊರಗಡೆ ಟೀ ಕುಡಿಯಲೋ ಊಟ ಮಾಡಲೋ ಅಥವ ಇನ್ಯಾವುದೋ ಕೆಲಸದ ನಿಮಿತ್ತ ಇಬ್ಬರೂ ಒಟ್ಟಿಗೆ ಹೋದಾಗ ಅಲ್ಲಿ ಯಾರಾದರೂ ಪರಿಚಯಸ್ಥರು ಬಂದು ಅವರನ್ನು ಸಮೀಪಿಸಿದಾಗ &#8216;ನೋಡಿ ಇವರು ನಮ್ಮ ಗುರುಗಳು&#8217; ಎಂದು ನನ್ನನ್ನು ಕೆಲವೊಮ್ಮೆ ಪರಿಚಯಿಸಿದ ಉದಾಹರಣೆಗಳೂ ಉಂಟು. ಅದು ಏನೇ ಇರಲಿ. ಆದರೆ ಅವರು ನನ್ನೊಂದಿಗೆ ಕಲೆತು ಕಲಿಸಿದ್ದು ಅದನ್ನೂ ಮೀರಿದ್ದು. ಕಳೆದ ವರ್ಷ ಶಿವಮೊಗ್ಗ, ತುಮಕೂರುಗಳಲ್ಲಿ ನಡೆದ ಕಮ್ಮಟ, ವಿಚಾರ ಸಂಕಿರಣಗಳನ್ನು ನಾನು ಮುಗಿಸಿಕೊಂಡು ಗುಲ್ಬರ್ಗಾಕ್ಕೆ ವಾಪಾಸಾಗಿ ವಿ.ವಿ. ತಲುಪಿದ ಮರುದಿನವೆ ನನ್ನ ರೂಮಿಗೆ ಬಂದು ನನ್ನೊಂದಿಗೆ ಮಾತನಾಡುತ್ತ ನಿನ್ನನ್ನೊಮ್ಮೆ ಕೋಲಾರದ ಆದಿಮಕ್ಕೆ ಕರೆದುಕೊಂಡು ಹೋಗಿ ಕವಿರಾಜಮಾರ್ಗದ ಮೇಲೆ ಉಪನ್ಯಾಸ ಕೊಡಿಸಬೇಕಯ್ಯ ಎಂದು ಹೇಳಿದ್ದು ಇದನ್ನು ಬರೆಯುತ್ತಿರುವಾಗ ನೆನಪಿಗೆ ಬಂತು.</p>



<p>ಇಷ್ಟಲ್ಲದೆಯೂ ನಮ್ಮಿಬ್ಬರ ನಡುವೆ ಆಗಾಗ ಕೋಪ, ಹುಸಿಮುನಿಸುಗಳು ಇಲ್ಲದಿಲ್ಲ. ಇವುಗಳ ಪರಿಣಾಮವಾಗಿ ಇಬ್ಬರೂ ಒಮ್ಮೊಮ್ಮೆ ಒಂದೆರಡು ತಿಂಗಳವರೆಗೂ ಅದೇ ಭಾವದಲ್ಲಿ ಒಬ್ಬರನ್ನೊಬ್ಬರು ಮಾತನಾಡುತ್ತಿರಲಿಲ್ಲ. ಆದರೆ ಅದು ಹೇಗೋ ಏನೋ ಎನ್ನುವಂತೆ ಅವರೆ ನನ್ನ ಬಳಿ ಬಂದು ತಾವೇ ಮಾತನಾಡಿಸಲು ಮುಂದಾಗುತ್ತಿದ್ದರು. ಆಗ ಅವರ ಮೇಲಿದ್ದ ಎಲ್ಲ ಕೋಪ, ಅಸಹನೆಗಳು ಅಷ್ಟೇ ತಣ್ಣಗೆ ಕಣ್ಮರೆಯಾಗುತ್ತಿದ್ದವು ಮತ್ತು ನಮ್ಮಿಬ್ಬರ ಸ್ನೇಹವೂ ಅಷ್ಟೇ ಗಟ್ಟಿಯಾಗಿಯೂ ಇರುತ್ತಿತ್ತು.</p>



<p>ಹೀಗೆ ಯಾವಾಗಲೂ ಫೋನಿನಲ್ಲಿ ಯಾರೊಂದಿಗಾದರೂ ಸದಾ ಹರಟುತ್ತಲೆ ಇದ್ದು ಸಣ್ಣ ಹುಸಿಮುನಿಸಿನಿಂದ ದೂರಾದ ಕವಿ ಕಳೆದ ಹದಿನೈದು ದಿನಗಳಿಂದ ನನ್ನೊಟ್ಟಿಗೆ ಮುಖಾಮುಖಿಯಾದದ್ದು ತೀರಾ ಕಡಮೆ. ಆದರೆ ಆ ಮುನ್ನ ಅಥವ ಈ ಹದಿನೈದು ದಿನಗಳ ಆರಂಭದ ಒಂದೆರಡು ದಿನ ಗ್ರಂಥಾಲಯದಲ್ಲಿ ನನ್ನ ಅಕ್ಕ ಪಕ್ಕದ ಮೇಜಿನ ಬಳಿ ನಾನು ಕುಳಿತಿರುವಷ್ಟು ಸಮಯದವರೆಗೂ ಕುಳಿತು ತಮ್ಮ ಬರೆವಣಿಗೆ ಕಾಯಕದಲ್ಲಿ ಮಗ್ನವಾಗುತ್ತಿದ್ದರು. ಒಮ್ಮೆ ಕೆಲ ಹುಡುಗರೊಟ್ಟಿಗೆ ಟೀ ಕುಡಿಯಲು ಹೋಗುವಾಗ ಇವರ ಮುಖೇನ ಆ ಹುಡುಗರು ನನ್ನನ್ನು ಕರೆದದ್ದು ಇದೆ. ಆದರೆ ನನ್ನ ರಿಸರ್ಚ್‌ನ ಭಾಗವಾಗಿದ್ದ ಯಾವುದೋ ಬರೆವಣಿಗೆ ಕೆಲಸದ ಮೇಲೆ ತೀವ್ರ ನಿಗಾ ಇಟ್ಟಿದ್ದರಿಂದಾಗಿ ನಾನು ಅವರೊಟ್ಟಿಗೆ ಬರಲು ನಿರಾಕರಿಸಿದೆ. ಬಹುಶಃ ನಾನು ಅವರನ್ನು ಎದುರುಗೊಂಡ ಕೊನೆಕ್ಷಣ ಅಂದರೆ ಅದೇ ಇರಬೇಕು.</p>



<p>ಒಂದು ಸಂಜೆ ನಾನು ಗ್ರಂಥಾಲಯದಿಂದ ರೂಮಿಗೆ ಸ್ವಲ್ಪ ಬೇಗ ಮರಳಿದ್ದೆ. ಆಗ ಅವರು ಗ್ರಂಥಾಲಯದಿಂದ ಕೋಣೆಗೆ ಇನ್ನೂ ಮರಳಿರಲಿಲ್ಲ. ನಾವಿದ್ದ ಮೂರನೆಯ ಅಂತಸ್ತಿನ ಆವರಣದಲ್ಲಿ ಅವರು ತಮ್ಮ ಬಟ್ಟೆಗಳನ್ನು ಹೊಗೆದು ಹಾಸ್ಟೆಲಿನ ಒಳ ಆವರಣದಲ್ಲಿ ಒಣಹಾಕಿದ್ದರು. ಒಣ ಹಾಕಿದ್ದ ಬಟ್ಟೆಗಳು ಮೆಟ್ಟಿಲಿನ ಕೆಳಭಾಗಕ್ಕೆ ಸರಿದು ಬಿದ್ದಿದ್ದವು. ಆ ಬಟ್ಟೆಗಳನ್ನು ನಾನೇ ಎತ್ತಿ ಅವರ ಕೋಣೆಯ ಬಳಿ ಇಟ್ಟು ನನ್ನ ಕೋಣೆ ತಲುಪಿದ್ದೆ. ಮರುದಿನ ಬೆಳಗ್ಗೆಯಿಂದ ಆಮೇಲೆ ಒಂದು ವಾರಗಳ ಅವಧಿಯ ತನಕವೂ ಗ್ರಂಥಾಲಯದಲ್ಲಾಗಲೀ ವಿಭಾಗದಲ್ಲಿಯಾಗಲೀ ಅಥವ ಹಾಸ್ಟೆಲಿನಲ್ಲಾಗಲೀ ಹೊರಗಡೆ ಟೀ ಕುಡಿಯಲೋ ಊಟಕ್ಕೆ ಹೊರಡುವಾಗಿನ ಸಮಯದಲ್ಲಿ ನನಗೆ ಅವರು ಎಲ್ಲೂ ಕಾಣಿಸಿಕೊಂಡದ್ದಿಲ್ಲ. ಹಾಗಾಗಿಯೋ ಏನೋ ಒಂದು ವಾರದವರೆಗೂ ಅವರ ರೂಮಿನ ಕೋಣೆ ತೆರೆಯದೆ ಹಾಗೆಯೇ ಬೀಗ ಹಾಕಿ ಮುಚ್ಚಿತ್ತು(ಆ ಒಂದು ವಾರದವರೆಗೆ ಆಂಧ್ರಪ್ರದೇಶದಲ್ಲಿ ನಡೆದ ಅನುವಾದದ ಕಮ್ಮಟಕ್ಕೆ ಹೋಗಿಬಂದಿದ್ದರೆಂಬ ಮಾಹಿತಿಯು ಯಾರೊಬ್ಬರಿಂದಲೂ ತಿಳಿದಿರಲಿಲ್ಲ. ಪತ್ರಿಕೆಗಳನ್ನು ಗಮನಿಸಿ ತುಂಬಾ ದಿನಗಳೇ ಆದರೂ ಕುತೂಹಲಕ್ಕೆ ಮೊನ್ನೆ(೨೧.೦೫.೨೦೨೪) ಡೆಕನ್ ಹೆರಾಲ್ಡ್ ಪತ್ರಿಕೆಯ ಅಬಿಚ್ಯುರಿ ಕಾಲಮ್ ಅನ್ನು ಗಮನಿಸಿದಾಗ ತಿಳಿಯಿತು. ಅದೇ ದಿನ ಪ್ರಕಟವಾದ ಯಾವೊಂದು ಕನ್ನಡ ಪತ್ರಿಕೆಯಲ್ಲೂ ಈ ಮಾಹಿತಿ ನನಗೆ ದೊರಕಿರಲಿಲ್ಲ).</p>



<p>ಅವರು ಎಲ್ಲಿಗಾದರೂ ದೂರದ ಊರುಗಳಿಗೆ ಹೋಗುವಾಗ ಕೆಲವೊಮ್ಮೆ ನನ್ನೊಂದಿಗೆ ಮುಂಚಿತವಾಗಿ ಹೇಳುತ್ತಿದ್ದರು ಮತ್ತು ಕೆಲವೊಮ್ಮೆ ಹಾಗೆಯೇ ತರಾತುರಿಯಲ್ಲಿ ಹೋಗಿರುತ್ತಿದ್ದರು. ಹೋಗಿ ಬಂದ ಬಳಿಕ ಬೆಂಗಳೂರಿಗೋ ಹೈದರಾಬಾದಿಗೋ ಹೋಗಿದ್ದೆ ಎಂದು ಹೇಳಿ ನನ್ನೊಂದಿಗೆ ಮಾತುಗೂಡಿಸುತ್ತಿದ್ದರು. ಆ ಕುರಿತು ಹೆಚ್ಚು ಪರಿಶೀಲಿಸುವ ಗೋಜಿಗೆ ನಾನು ಹೋಗುತ್ತಿರಲಿಲ್ಲ ಮತ್ತು ನನಗೆ ಆ ಬಗೆಗೆ ಯಾವ ಕುತೂಹಲಗಳೂ ಇರುತ್ತಿರಲಿಲ್ಲ. ಆದರೂ ಹೋಗಿಬಂದರಾ ಓ ಸರಿ ಎಂದು ನಮ್ಮ ಮುಂದಿನ ಮಾತುಕತೆಗಳಿಗೆ ಸಮ್ಮತಿಯನ್ನು ಮಾತ್ರ ಸಾವಧಾನವಾಗಿ ತೋರುತ್ತಿದ್ದೆ. ಜೊತೆಗೆ ಆ ಬಗೆಗೆ ಮುಂಚಿತವಾಗಿ ನಾನು ಕೇಳುತ್ತಲೂ ಇರಲಿಲ್ಲ. ಕಳೆದ ಒಂದು ತಿಂಗಳ ಅವಧಿಯಲ್ಲಿ ಕರೆಮಾಡಿ ನಾನು ವಿಶಾಖಪಟ್ಟಣದಲ್ಲಿದ್ದೇನೆ ಇನ್ನೊಂದು ವಾರ ಮರಳುತ್ತೇನೆಂದು ಹೇಳಿದ್ದರು. ಆಗ ನಾನು ತಾವು ದಿನನಿತ್ಯ ಓಡಾಡಲು ಅನುಕೂಲವಾಗುವಂತೆ ಹಡಗೊಂದನ್ನು ತಯಾರಿಸುವಂತೆ ಆರ್ಡರ್ ಕೊಟ್ಟು ಬರಲು ವಿಶಾಖಪಟ್ಟಣಕ್ಕೆ ನೀವು ಹೋಗಿರುವಿರೋ? ಎಂದು ಅವರನ್ನು ಗೇಲಿ ಮಾಡಿದ್ದೂ ಇದೆ.</p>



<p>ಕಳೆದ ನಾಲೈದು ದಿನಗಳ ಹಿಂದಿನ ಒಂದು ರಾತ್ರಿ ಬೇಸಗೆಯ ಬಿರುಸೆಕೆಗೆ ಬಳಲಿ ಛಾವಣಿಯ ಮೇಲೆ ಮಲಗಿದ್ದು ಸರಿಸುಮಾರು ಮಧ್ಯರಾತ್ರಿಯ ಹೊತ್ತಿನಲ್ಲಿ ಶುರುವಾದ ಗಾಳಿ ಮಿಂಚು ಸಿಡಿಲಿನ ಮಳೆಯ ಅಬ್ಬರಕ್ಕೆ ಸೋತು ಸ್ನೇಹಿತರೊಟ್ಟಿಗೆ ಛಾವಣಿಯನ್ನು ಇಳಿದು ನಮ್ಮ ನಮ್ಮ ಕೋಣೆಗಳಿಗೆ ಮರಳುವಾಗ ನನ್ನ ಪಕ್ಕದ ಆನಂದರ ಕೋಣೆಯು ಆಗಷ್ಟೆ ತೆರೆದು ಒಳಗಿನ ಆಗಳಿಯನ್ನು ಹಾಕಲಾಗಿತ್ತು. ಆದರೆ ಒಳಗಿನ ದೀಪ ಇನ್ನೂ ಆರಿರಲಿಲ್ಲ. ಈ ಮೊದಲ ಒಂದೆರಡು ಗಂಟೆಯ ಹಿಂದೆ ಆ ಮೊದಲು ನಾನು ನನ್ನ ಕೋಣೆಯಿಂದ ಛಾವಣಿಗೆ ಏರುವಾಗ ಆನಂದರ ಕೋಣೆ ಇನ್ನೂ ಹಾಗೆಯೇ ಹೊರ ಅಗಳಿಯನ್ನು ಹಾಕಿ ಬೀಗದಿಂದ ಮುಚ್ಚಿತ್ತು. ಆದರೆ ಛಾವಣಿಯಿಂದ ರೂಮಿಗೆ ಮರಳುವಾಗ ಆಗ ತಾನೇ ಬಂದಿದ್ದ ಅವರನ್ನು ರೂಮಿನ ಬಾಗಿಲನ್ನು ತೆರೆಸಿ ಮಾತನಾಡಿಸುವ ಹೆಬ್ಬಯಕೆಯೂ ಇದ್ದಿತಾದರೂ ಎಲ್ಲೋ ಹೋಗಿದ್ದವರು ಹೀಗಷ್ಟೇ ಪ್ರಯಾಣದಿಂದ ಬಳಲಿ ಕೋಣೆಗೆ ಮರಳಿದ್ದಾರೆಂದು ಮತ್ತು ಏನನ್ನೋ ಬರೆಯುತ್ತ ಏಕಾಂತದಲ್ಲಿ ಮೇಜಿನ ಬಳಿ ಕುಳಿತಿರಬಹುದೆಂದು ಊಹಿಸಿ ಈ ಸಮಯದಲ್ಲಿ ತೊಂದರೆ ಕೊಡುವುದು ಬೇಡವೆಂದು ಸದ್ಯ ಅವರು ವಿಶ್ರಾಂತಿ ಪಡೆಯಲಿ ಎನ್ನುತ್ತಲೆ ಸಾಧ್ಯವಾದಲ್ಲಿ ಬೆಳಗ್ಗೆ ಮಾತನಾಡಿಸುವ! ಎಂದು ನನ್ನ ಕೋಣೆಗೆ ಹೋಗಿ ಮಲಗಿದೆ. ಆದರೆ ಮರುದಿನ ಬೆಳಗ್ಗೆಯೂ ನನಗೆ ಅವರು ಬೇಟಿಯಾದದ್ದಿಲ್ಲ. ಈ ನಡುವೆ ಕೊಂಚ ಬೇಸರವಾದದ್ದೂ ಇದೆ. ಇಂತಹ ಸನ್ನಿವೇಶಗಳಲ್ಲಿ ಅವರನ್ನು ಸರಿಯಾಗಿ ಸಂತೈಯಿಸಲಾಗದ ನನ್ನಲ್ಲಿನ ಕಾಠಿಣ್ಯ ಮನಸ್ಥಿತಿಯೂ ಕೂಡ ಸದಾ ಅಪರಾಧಿ ಮನೋಭಾವವನ್ನೇ ನನ್ನಲ್ಲಿ ಬೆರಳಿಟ್ಟು ತೋರಿದೆ.</p>



<p>ಮೇ ೨೦ರಂದು ಹಾಸ್ಟೆಲ್ ಕಟ್ಟಡದ ಛಾವಣಿಯ ಮೇಲೆ ಮಲಗಿದ್ದವ ಬೆಳಗಿನ ಜಾವ ಐದು ಗಂಟೆಗೆ ಎದ್ದು ಸರಿಸುಮಾರು ಆರರ ತರುವಾಯ ವಿಶ್ವವಿದ್ಯಾಲಯದ ಆವರಣದಲ್ಲಿ ಮೂರ್ನಾಲ್ಕು ಕಿ.ಮೀ. ದೂರ ವಾಯುವಿಹಾರವನ್ನು ನಡೆಸಿ ಎಂಟರ ವೇಳೆಗೆಲ್ಲ ರೂಮಿಗೆ ಮರಳಿದಾಗ ಸಣ್ಣ ಫೋನ್ ಕಾಲ್‌ನಿಂದ ಸಾವಿನ ಸುದ್ದಿ ತಿಳಿದು ಗಪ್ಪಾಗಿ ಕುಳಿತಿದ್ದೆ. ತದನಂತರದಲ್ಲಿ ಒಂದಿಬ್ಬರು ಸ್ನೇಹಿತರೊಡನೆ ಬೈಕ್ ಹತ್ತಿ ಸ್ಥಳವನ್ನು ತಲುಪಿದೆ. ವಿಶ್ವವಿದ್ಯಾಲಯದ ಆವರಣದಿಂದ ಮೂರು ಕಿ.ಮೀ. ದೂರದ ಕಡಗಂಚಿಯ ಊರ ಹೊರವಲಯದಲ್ಲಿರುವ ಪೆಟ್ರೋಲ್ ಬಂಕ್ ಬಳಿ ಎಂದು ಮಾಹಿತಿ ಇತ್ತು. ಅದರಂತೆ ಅಲ್ಲಿಗೆ ಹೋಗಿ ಸುತ್ತಲು ನೋಡಿದಾಗ ಅಂತಹ ಯಾವ ದೃಶ್ಯಾವಳಿಯೂ ನಮಗೆ ಅಲ್ಲಿ ಕಾಣದ್ದರಿಂದಾಗಿ ಕೊಂಚ ಅನುಮಾನವೂ ಬೆನ್ನತ್ತಿತ್ತು. ಆದರೆ ಅರೆಕ್ಷಣ ಪಕ್ಕದಲ್ಲಿಯೇ ನಿಂತಿದ್ದ ಸ್ನೇಹಿತರೊಬ್ಬರು ಹಿಂದೆ ತಿರುಗಿ ನೋಡಿ ಎಂದಾಗಲೆ ಎದುರಿನಲೊಂದು ಮರದ ಕಟ್ಟೆಯ ಬಳಿಯಲ್ಲಿ ಆಕೃತಿ ಕಾಣಹತ್ತಿತು. ಆಕೃತಿಯನ್ನು ಮತ್ತಷ್ಟು ಹತ್ತಿರ ಸಮೀಪಿಸುವಷ್ಟರಲ್ಲಿ ಆ ಆಕೃತಿಯು ಇನ್ನಷ್ಟು ಸ್ಪಷ್ಟವಾಯಿತು. ಮರದ ಕಟ್ಟೆಯಿಂದ ಕಾಲುಗಳನ್ನು</p>



<p>ಕೆಳಚಾಚಿ ಕಟ್ಟೆಯ ಮೇಲ್ಬಾಗಕ್ಕೆ ಮುಖವನ್ನು ಆನಿಸಿ ಅಂಗಾತ ಬಿದ್ದಿದ್ದ ದೃಶ್ಯವನ್ನು ನೋಡಿ ದುಃಖ ಇನ್ನಿಲ್ಲದಂತೆ ಉಮ್ಮಳಿಸಿ ಬಂದಿತ್ತು. ಹಾಗೆ ಮಲಗಿರುವ ದೃಶ್ಯ ತಥಾಗತನ ಮಂದಸ್ಮಿತವನ್ನು ನೆನಪಿಗೆ ತರುವಂತಿತ್ತು. ಅಷ್ಟೊತ್ತಿಗಾಗಲೆ ಮುಖದ ಮೇಲೆ ಸಣ್ಣ ಇರುವೆಗಳು, ನೊಣಗಳು ಓಡಾಡ ಹತ್ತಿದ್ದವು. ಮಲಗಿದ ಆ ದೃಶ್ಯವು ಚಿರಾಯು ಎಂಬಂತೆ ದೀರ್ಘನಿದ್ರೆಗೆ ಜಾರಿದ ಹಾಗೆಯೂ ನನಗೆ ಭಾಸವಾದಂತೆ ತೋರುತ್ತಿತ್ತು.</p>



<p>ಇಬ್ಬರು ಪೀಸಿಗಳು ಕುಳಿತಿದ್ದ ಎದುರಿನ ಮುಂಭಾಗದ ಕಟ್ಟೆಯ ಸಮೀಪ ಸರಿಸುಮಾರು ಒಂಬತ್ತರ ತನಕ ಶರೀರವನ್ನು ಕಾಯುತ್ತ ಕುಳಿತಿದ್ದೆವು. ಆನಂತರದಲ್ಲಿ ದೂರದೂರಿನಿಂದ ಒಬ್ಬೊಬ್ಬರಾಗಿ ಬರತೊಡಗಿದರು. ಆ ನಡುವೆ ಕೆಲ ಫೋನ್ ಕರೆಗಳು ಬಂದವು. ಮಾಹಿತಿ ನೀಡಿದ ಬಳಿಕ ಅವರೂ ಸಮೀಪಿಸಿದರು. ಸರಿಸುಮಾರು ಬೆಳಗಿನ ೧೧:೪೫ರ ತನಕ ಶರೀರವನ್ನು ಸ್ಥಳದಲ್ಲಿಯೇ ಇರಿಸಲಾಗಿತ್ತು. ಈ ನಡುವೆ ಪೋಲಿಸ್ ಸಿಬ್ಬಂದಿಗಳು ಬಂದು ಸ್ಥಳ ತಪಾಸಣೆಯೊಂದಿಗೆ ಮತ್ತಿತರ ಮಾಹಿತಿಗಳನ್ನು ಕಲೆಯಾಕಿದರು. ಆನಂತರದಲ್ಲಿ ಆ್ಯಂಬುಲೆನ್ಸ್ ತರಿಸುವ ಪ್ರಯತ್ನವೂ ಆಯಿತು. ಹೇಗೋ ಆ್ಯಂಬುಲೆನ್ಸ್ ಏರ್ಪಾಟಾದ ತರುವಾಯ ಆದೇ ಆ್ಯಂಬುಲೆನ್ಸಿನಲ್ಲಿ ಶರೀರ ತಪಾಸಣೆ ಮಾಡುವ ಸಲುವಾಗಿ ಗುಲ್ಬರ್ಗಾಕ್ಕೆ ಹೊಯ್ಯಲಾಯಿತು. ಈ ಮಧ್ಯೆ ಆ್ಯಂಬುಲೆನ್ಸ್ ಶರೀರವನ್ನು ಏರಿಸುವ ಮುನ್ನವೆ ಒಮ್ಮೆಯಾದರೂ ಪಾದಗಳನ್ನು ಮುಟ್ಟಿ ನಮಸ್ಕರಿಸುವ ತವಕವೊಂದು ಇದ್ದಿತಾದರೂ ಹಾಗೆ ಶರೀರವನ್ನು ನಾವಾರೂ ಮುಟ್ಟುವ ಪರಿಮಿತಿಯನ್ನು ಹೊಂದಿರಲಿಲ್ಲ. ಹಾಗೆ ಮುಟ್ಟಬಾರದ ಹಾಗೆ ಕವಿಯೇ ಬರೆದುಕೊಂಡಿರುವ ಸಾಲನ್ನು ಆನಂತರದಲ್ಲಿ ಪುಸ್ತಕದಲ್ಲಿ ನೋಡಿ ಅವಕ್ಕಾದೆ.</p>



<p>ಮುಂದೆ ಸ್ಥಳ ತಪಾಸಣೆಯಾದ ಬಳಿಕ ಅವರು ಹುಟ್ಟಿ ಬೆಳೆದ ಊರಾದ ಕೋಲಾರದ ಮಣ್ಣಿಗೆ ಹೊಯ್ಯುವ ಸುದ್ದಿಯೂ ಆ ಮೂಲಕವೆ ತಿಳಿದು ಬಂತು. ಬಳಿಕ ಶರೀರವನ್ನು ಕಳುಹಿಸಿಕೊಟ್ಟ ನಾವೊಂದಿಷ್ಟು ಮಂದಿ ವಿ.ವಿ.ಯ ಕನ್ನಡ ವಿಭಾಗದಲ್ಲಿ ಸರಿಸುಮಾರು ೧೨:೦೦ಗಂಟೆಗೆ ನುಡಿನಮನವನ್ನು ಸಲ್ಲಿಸಿದೆವು. ಅದರಲ್ಲಿ ನಾನೂ ಕೂಡ ಒಂದು ಹದಿನೈದು ನಿಮಿಷಗಳ ಕಾಲ ನನ್ನ ಅವರ ಒಡನಾಟದ ಬಗೆಗೆ ಕೆಲವು ಸಂಗತಿಗಳನ್ನು ಹಂಚಿಕೊಂಡೆ. ಅದರ ವಿಸ್ತ್ರತ ರೂಪವೇ ಈ ಬರಹ.</p>



<p>ಕೆಲದಿನದಿಂದಷ್ಟೆ ಎರಿಕ್ ಫ್ರಾಂನ &#8216;ಆರ್ಟ್ ಆಫ್ ಲವಿಂಗ್&#8217; ಪುಸ್ತಕದ ಕನ್ನಡ ಅವತರಣಿಕೆಯನ್ನು ಓದುತ್ತಾ ಕುಳಿತಿದ್ದಾಗ ನನ್ನನ್ನು ನೋಡಿದ ಕವಿಯು &#8216;ಹುಚ್ಚ ಕಣಯ್ಯ&#8217; ಅವನು! ಅವನನ್ನ ಯಾಕಯ್ಯ ಓದ್ತಾ ಇದಿಯಾ? &#8216;ಹುಚ್ಚ ಬರೆದಿರೋ ಪುಸ್ತಕ ಕಣಯ್ಯ ಅದು&#8217; ಎಂದು ನನ್ನನ್ನು ಗಾಬರಿಗೊಳಿಸಿದ್ದೂ ಇದೆ. ಆಮೇಲೆ ಆ ಪುಸ್ತಕವನ್ನ ಓದುತ್ತ ಓದುತ್ತ ಈ ನಮ್ಮ ಕವಿ ಹೇಳಿದ್ದು ನಿಜವಿರಬಹುದು ಎಂದು ಅನುಮಾನಿಸುತ್ತಲೆ ಓದಿ ಮುಗಿಸಿದ್ದೂ ಮತ್ತು ಕೊಂಚ ನಕ್ಕಿದ್ದೂ ಇದೆ. ಈ ಹಿಂದೆ ಅಲ್ಲಮನ ಬಗೆಗೆ ಮಾತನಾಡುವಾಗಲೂ ಅದೇ ಅಧಿಕೃತವಾದ ಧಾಟಿ. ಆ ಬಗೆಗೆ ಕನ್ನಡದಲ್ಲಿ ಅಲ್ಲಮನನ್ನು ಹೆಚ್ಚು ಓದಿದ್ದವರು ಯಾರು? ಎಂದು ನನ್ನನ್ನು ಕೇಳಿದ್ದುಂಟು. ಅದಕ್ಕೆ ನನ್ನಲ್ಲಿ ಉತ್ತರವಾಗಿ ಎಲ್.ಬಿ. ಭೂಸನೂರಮಠ, ಸಿದ್ದಯ್ಯ ಪುರಾಣಿಕ, ಡಿ.ಆರ್. ಮುಂತಾದವರ ಪಟ್ಟಿ ಇತ್ತಾದರೂ ಕೆ.ಬಿ.ಸಿದ್ದಯ್ಯ ಬಗೆಗೆ ನನಗೆ ಅಷ್ಟಾಗಿ ತಿಳಿದಿರಲಿಲ್ಲ. ಅದು ತಿಳಿದದ್ದು ಕವಿಯ ಮೂಲಕವೆ.</p>



<p>ದಾಸ್ತೋವಸ್ಕಿ ಸಿಗರೇಟು ಸೇದುತ್ತಿದ್ದನೆಂದ ಮಾತ್ರಕ್ಕೆ ಆತನನ್ನು ದೊಡ್ಡ ಬರಹಗಾರನಲ್ಲವೆಂದು ಹೇಳಲಾಗದು. ಅಂತೆಯೇ ಕುದುರೆ ಜೂಜನ್ನು ಕಟ್ಟುತ್ತಿದ್ದನೆಂದ ಮಾತ್ರಕ್ಕೆ ಟಾಲ್ ಸ್ಟಾಯ್ ನನ್ನು ತುಚ್ಛ ಬರಹಗಾರನೆಂದು ಹೇಳಲಾಗುವುದಿಲ್ಲ. ಅದರಂತೆ ಅವರನ್ನು ಯಾರೂ ಓದದೆ ಚರಿತ್ರೆಯಲ್ಲಿ ಕೈಬಿಟ್ಟಿದ್ದಿಲ್ಲ. ಓದದೆ ಇದ್ದರೆ ಖಂಡಿತವಾಗಿ ಅದು ಟಾಲ್ಸ್ ಟಾಯ್ ಗೆ ಮಾತ್ರ ನಷ್ಟವನ್ನು ಭರಿಸುವುದಿಲ್ಲ. ಪ್ರಾನ್ಸ್ ಕುಡುಕರ ದೇಶ ಎಂದ ಮಾತ್ರಕ್ಕೆ ಸಾರ್ತೃನಂತ ಮಹಾನುಭಾವನನ್ನು ಅಂಚಿಗೆ ಸರಿಸಲಾಗದು. ಆತನನ್ನು ನಾನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಬಗೆಯೂ ಆ ಬಗೆಯದ್ದೆ. ಅಂದಮಾತ್ರಕ್ಕೆ ಕುಡುಕರನ್ನೂ ಸಿಗರೇಟು ಸೇದುವವರನ್ನೂ ಕುದುರೆ ಜೂಜು ಕಟ್ಟುವವರನ್ನೂ ಹಾದರ ಮಾಡುವವರನ್ನೂ ಸಮರ್ಥಿಸುವ ಸಲುವಾಗಿಯೂ ಈ ಸಾಲುಗಳನ್ನು ಬರೆಯುತ್ತಿಲ್ಲ. ಹಾಗಿದ್ದ ಮೇಲೆ ಅಂತಹ ವಾಕ್ಯಗಳನ್ನು ಯಾಕಾದರೂ ಬರೆಯಬೇಕು ಎಂದು ಕೇಳಬಹುದು. ಇರಲಿ. ಅದು ಬೇರೆ ದಿಕ್ಕಿನ ನಡಿಗೆ. ಕವಿ ನನ್ನೊಡನೆ ಚರ್ಚಿಸುತ್ತಿದ್ದ ಸಂದರ್ಭದಲ್ಲಿ ಸಾರ್ತೃ ಏನನ್ನು ಹೇಳಲು ಹೊರಟಿದ್ದನೋ ಅದು ಜನರಿಗೆ ಅಷ್ಟು ಬೇಗ ಅರ್ಥವಾಗುವಂತಿರಲಿಲ್ಲ ಮತ್ತು ಅದು ಅವನ ಬರೆವಣಿಗೆಯ ದೌರ್ಬಲ್ಯವೋ ಅಥವ ಜನರ ಗ್ರಹಿಕೆಯಲ್ಲಿನ ಹಿನ್ನಡೆಯೋ ಹೇಳುವುದು ಬಲುಕಷ್ಟ ಎಂದು ಆತನನ್ನು ಪ್ರಸ್ತಾಪಿಸಿ ಆಗಾಗ್ಗೆ ನನ್ನೊಡನೆ ಅವರು ಹೇಳುತ್ತಿದ್ದುದುಂಟು.</p>



<p>ಅದು ಏನೇ ಇರಲಿ. ನಮ್ಮ ಯಾವ ವ್ಯಸನಗಳೂ ಮತ್ತೊಬ್ಬರಿಗೆ ಅರ್ಥಾತ್ ಪ್ರೀತಿ ಪಾತ್ರರಿಗೆ ದುಃಖವನ್ನು ತಂದುಕೊಡದಂತೆ ಇರಲಿ ಎಂದಷ್ಟೆ ಹೇಳುವುದು ಒಂದಾದರೆ ಹಾಗೆ ಮತ್ತೊಬ್ಬರಿಗೆ ಆ ದುಃಖವನ್ನು ತಾರದೆಯೂ ತನಗೆ ಮಾತ್ರ ತಂದುಕೊಳ್ಳುವ ದುಃಖವೂ ಕೂಡ ಅಷ್ಟೇ ಘೋರವಾದದ್ದು ಎಂದಷ್ಟೆ ಹೇಳಬಯಸುತ್ತೇನೆ. ಆದರೂ ಸಮುದಾಯದಲ್ಲಿ ಬೆರೆತ ವ್ಯಕ್ತಿಯಲ್ಲಾಗಲೀ ಆ ಸಮುದಾಯದಲ್ಲಿಯಾಗಲೀ ತಾನು ಎನ್ನುವುದಾಗಲಿ ಮತ್ತು ಬೇರೆ ಎನ್ನುವುದಾಗಲೀ ಅಲ್ಲಿ ಉಳಿದಿರುವುದಿಲ್ಲ. ಕವಿ ಲಕ್ಕೂರರ ಸಾವು ಆ ರೀತಿಯದ್ದು. ಅದರಂತೆ ಸಾರ್ವತ್ರಿಕ ಶೋಕವೆಂಬುದು ಕೂಡ ಆ ಬಗೆಯದ್ದೆ ಎಂದು ನಾನು ತಿಳಿದಿದ್ದೇನೆ.</p>



<p>ಹಾಗಾಗಿಯೇ ಬುದ್ಧನು ಆನಂದರಂತಹ ನೂರಾರು ಶಿಷ್ಯರಿಗೆ ಬೋಧಿಸಿದ ದುಃಖ ನಿವಾರಣೆಯ ತತ್ತ್ವವಾದರೂ ಯಾವುದು? ಮತ್ತು ಎಂತಹದು? ಮತ್ತೊಮ್ಮೆ ಪರಿಶೀಲಿಸುವ ಅಗತ್ಯವಿದೆಯೆಂದು ಇದನ್ನು ಬರೆಯುತ್ತಿರುವಾಗ ಅನ್ನಿಸಿದ್ದೂ ಇದೆ.</p>



<p>ಎಲ್ಲ ಬರಹಗಾರರೂ ಸುಳ್ಳನ್ನೇ ಹೇಳುತ್ತಾರಯ್ಯ! ಎಂದು ಒಮ್ಮೆ ನನ್ನನ್ನು ದಿಗ್ಭ್ರಾಂತನನ್ನಾಗಿಸಿದ್ದೂ ಇದೆ. ಆದರೆ ಇದಕ್ಕೆ ಪ್ರತಿಯಾಗಿ ಹಾಗೆ ಎಲ್ಲ ಬರಹಗಾರರೂ ಸುಳ್ಳನ್ನೇ ಹೇಳುವುದಾದರೆ ಆ ಎಲ್ಲ ಬರಹಗಾರರನ್ನು ಯಾಕೆ ಓದಬೇಕು? ಮತ್ತು ಓದಲಾಗುತ್ತದೆ? ಹಾಗೆ ಓದಿದ ಎಲ್ಲ ಬರಹಗಳೂ ಸುಳ್ಳೆ ಅದಲ್ಲಿ ಯಾಕಾಗಿ ಅಂತಹ ಬರಹವನ್ನು ಓದಬೇಕು? ಎಂದೆಲ್ಲ ಪ್ರಶ್ನೆಗಳು ನನ್ನಲ್ಲಿ ಮರುಕಳಿಹಿಸಿದ್ದೂ ಇದೆ.</p>



<p>ನನ್ನ ಬರೆವಣಿಗೆಯ ಕುರಿತಂತೆ ಕೊಂಚ ಮಾತನಾಡುವಾಗಲೂ ಕವಿ ನನಗೆ ಜರಾತೂಸ್ತ್ರನೇ ಸರಿ. ನೀನು ಬರೆದ ಬರಹ ನಿನಗೆ ಬೇಕಾಗಿಲ್ಲದಿರಬಹುದು. ಆ ಕಾರಣವಾಗಿ ನೀನು ಬರೆದ ಬರೆಹವನ್ನು ಪ್ರಕಟಿಸದೆ ಇರಬಹುದು. ಆದರೆ ನಿನ್ನ ಬರೆಹ ಜನರಿಗೆ ಬೇಕಿದೆ ಮತ್ತು ಬೇಕು. ಆ ಕಾರಣದಿಂದಾದರೂ ನೀನು ಬರೆಯಬೇಕೆಂದು ನನ್ನನ್ನು ಒತ್ತಾಯಿಸಿದ್ದೂ ಇದೇ. ಹಾಗಾಗಿ ನೀಷೆ ತನ್ನ ಕೃತಿಯೊಂದಕ್ಕೆ ಬೈಬಲ್‌ನಿಂದ ಎಳೆದು ತಂದ ಜರಾತೂಸ್ತ್ರನ ಹಾಗೆ ಕವಿ ನನ್ನನ್ನು ಈ ಬರೆಹಕ್ಕೆ ಎಳೆದು ತಂದಿದ್ದಾನೆ.</p>



<p>ಕತೆ ಹೇಳುವಲ್ಲಿಯೂ ನಿಸ್ಸೀಮ ಕತೆಗಾರರಂತೆ ನನಗೆ ಕಾಣುತ್ತಿದ್ದುದು ಅವರು ಬುದ್ಧನ ಜಾತಕ ಕತೆಗಳ ಬಗೆಗೆ ಹೇಳುತ್ತಿದ್ದ ಬಗೆಯೊಂದರಲ್ಲಿ. ಅದರಂತೆ ಭಾರತದ ಈಶಾನ್ಯ ರಾಜ್ಯಗಳ ಪೈಕಿ ಯಾವುದೋ ಬುಡಕಟ್ಟು ಸಮುದಾಯದಿಂದ ಜನಪದ ಕತೆಯೊಂದನ್ನು ಆರಿಸಿ ಎ.ಕೆ.ರಾಮಾನುಜನ್ ಅವರಿಗೆ ಎದುರುಗೊಳ್ಳುತ್ತ ಮುದುಕಿಯೊಬ್ಬಳು ಹೇಳಿದ ಕತೆಯನ್ನು ಡಿ.ಆರ್. ಧಾಟಿಯಲ್ಲಿ ಕಥಾಕಮ್ಮಟವೊಂದರಲ್ಲಿ ಅವರು ಪ್ರಸ್ತುತಪಡಿಸಿದ್ದು ಇಲ್ಲಿ ನೆನಪಿಗೆ ಬರುತ್ತಿದೆ. ಜೊತೆಗೆ ಅನೇಕ ಕರ್ನಾಟಕಾಂದ್ರ ವೈಚಾರಿಕ ಲೇಖಕರ ಪಡೆಯೇ ನನಗೆ ಅವರಿಂದಲೆ ಪರಿಚಯವಾಗುತ್ತಿತ್ತು. ನನ್ನಯ್ಯನಿಂದ ಹಿಡಿದು ಪ್ರಸ್ತುತ ತೆಲುಗು ಸಾಹಿತ್ಯವನ್ನು ಕುರಿತಂತೆ ತೆಲುಗು ಸಾಹಿತ್ಯ ಚರಿತ್ರೆಯ ಚಾರಿತ್ರಕ ವಿಮರ್ಶೆಯ ಗ್ರಂಥವೊಂದನ್ನು ಕನ್ನಡದಲ್ಲಿ ಬರೆಯಲಿದ್ದೇನೆಂದು ಹೇಳಿ ಪ್ರಾರಂಭದ ನಾಲ್ಕಾರು ಪುಟಗಳನ್ನು ನನಗೆ ತೋರಿಸಿದ್ದೂ ಉಂಟು.</p>



<p>ಪ್ರತಿಯೊಬ್ಬರಿಗೂ ಓದಲು ಬರೆಯಲು ಸಹಾಯವಾಗುವಂತೆ ಪ್ರತ್ಯೇಕವಾದೊಂದು ಕೋಣೆ ಇರಬೇಕಯ್ಯ! ಇಲ್ಲದಿದ್ದರೆ ನಮ್ಮ</p>



<p>ಓದು ಬರಹಗಳು ಅಸಾಧ್ಯ ಎಂದು ವರ್ಜಿನಿಯಾ ವೂಲ್ಫ್ ಳನ್ನು ಕೋಟ್ ಮಾಡಿದ್ದುಂಟು. ಅವಳು ಬರೆದ &#8216;ಎ ರೂಮ್ ಆಫ್ ವನ್ಸ್ ವೋನ್'(ಸ್ವಂತಕ್ಕೊಂದು ಕೋಣೆ) ಅನ್ನು ಹೆಸರಿಸಿ ಆ ಪುಸ್ತಕವನ್ನು ಓದಿ ಮುಗಿಸಿದ ಮೇಲೆ ಒಂದು ಕವಿತೆಯನ್ನೇ ಬರೆದಿದ್ದೆ ಎಂದು ಹೇಳಿದ್ದರು. ಆ ಪುಸ್ತಕವನ್ನು ಕನ್ನಡಕ್ಕೆ ಯಾರೂ ಕನ್ನಡಕ್ಕೆ ತಂದದ್ದಿಲ್ಲ ಎಂದು ನಾನು ಹೇಳಿದ್ದ ನೆನಪು.</p>



<p>ಒಂದು ಸಂಜೆ ಚಹಾ ಹೀರುತ್ತ ಪತ್ರಿಕೆಗಳನ್ನು ತಿರುವಿಯಾಕುತ್ತ ಕುಳಿತಿದ್ದಾಗ ಮಾತಿನ ನಡುವೆ ಜಗತ್ತಿನ ಬರಹಗಾರರಲ್ಲಿ ಇಂದಿಗೆ ಯಾರು ಹೆಚ್ಚು ಪ್ರಸ್ತುತ ಎಂಬ ಪ್ರಶ್ನೆ ನಮ್ಮಿಬ್ಬರ ಚರ್ಚೆಯಲ್ಲಿ ಬಂದಿತ್ತು. ನನ್ನ ಮಾತಿನಲ್ಲಿ ಆರ್ವೆಲ್ ಮತ್ತು ಹೆಮಿಂಗ್ ವೇ ಇಬ್ಬರೂ ಕೂಡ ಎಂದೇ ವ್ಯಕ್ತವಾಗಿದ್ದನ್ನು ಕವಿ ಸಮ್ಮತಿಸಿದ್ದೂ ಇದೆ. ಆ ಇಬ್ಬರೂ ಎರಡು ಜಾಗತಿಕ ಯುದ್ಧಗಳು ಸಂಭವಿಸಿದ ಹೊತ್ತಿನಲ್ಲಿ ಬದುಕಿದ್ದ ಮಹತ್ತ್ವದ ಬರಹಗಾರರು. ಅಂತಹ ಜಾಗತಿಕ ಯುದ್ಧಗಳು ನಡೆದ ಹೊತ್ತಿನಲ್ಲಿಯೇ ವಿಶ್ವಶಾಂತಿಗಾಗಿ ಹವಣಿಸಿದ ಇನ್ನಿಬ್ಬರು ಮೇರು ತತ್ತ್ವಜ್ಞಾನಿಗಳಾದ ಬರ್ಟಂಡ್ ರಸೆಲ್ ಮತ್ತು ವಿಲ್ ಡ್ಯುರಾಂಡರನ್ನೂ ಸಹ ಆಗ ತಾನೇ ಓದಲು ಶುರುಮಾಡಿದ್ದೆ. ಸಮಕಾಲೀನ ಸಂದರ್ಭದಲ್ಲಿ ಬರೆಹಗಾರನ ಬೌದ್ಧಿಕ ಜವಾಬ್ದಾರಿಯು ಎಷ್ಟಿದೆಯೆಂಬುದನ್ನೂ ಆ ಮೂಲಕವೇ ನನಗೆ ಅರಿವಾದದ್ದು ಇದೆ.</p>



<p>ಹಾಗೆ ನಮ್ಮ ಮತ್ತೊಂದು ಚಹಾಕೂಟದ ನಡುವೆ ಅಫ್ರಿಕಾ ಬರೆಹಗಾರರ ಒಕ್ಕೂಟವೆ ನಮ್ಮ ರೂಮಿನ ಕೋಣೆಯ ಬಳಿ ನೆರೆದಿತ್ತು. ಅಲ್ಲಿಗೆ ಬಹುದೊಡ್ಡ ತಲೆಯ ಗೂಗಿ ವಾಥಿಯಾಂಗೊ ಬಂದಿದ್ದನು. ಅಲ್ಲಿ ಆತ ಯಾರನ್ನೂ ಅಷ್ಟಾಗಿ ಪರಿಗಣಿಸದವನು ಕವಿ ಆನಂದರನ್ನು ನೋಡಿದ ಆ ಕ್ಷಣವೇ &#8220;ಡಿಯರ್ ಆನಂದ್ ಪ್ಲೀಸ್ ಕಮಿಂಗ್ ನಿಯರ್ಲಿ&#8230; ಪ್ಲೀಸ್ ಕಮ್ ಅಪ್ ಆನ್ ದಿ ಸ್ಟೇಜ್&#8221; ಎಂದು ಸ್ಟೇಜಿನ ಮೇಲೆ ಎಳೆಕರೆತಂದದ್ದು ಇದೆ. ಚಿನುವಾ ಆಚಿಬೆಯ ಜೊತೆಗಿನ ಮಾತುಕತೆಯೂ ಆ ಬಗೆಯದ್ದೆ. ಚಿನುಅ ಅಚಿಬೆ ಬಗ್ಗೆಯೂ ನನಗೆ ಅವರು ಬಹಳಷ್ಟು ಸಲ ಅಂತಹ ಪ್ರಸಂಗಗಳನ್ನೂ ಪ್ರಸ್ತಾಪಿಸಿದ್ದುಂಟು. ಹೀಗೆ ತಾನು ಕಂಡ ಕನಸುಗಳನ್ನೆಲ್ಲ ಮಾಂತ್ರಿಕ ಗ್ಯಾಬೋನಂತೆ ವಾಸ್ತವವಾಗಿಸಿ ನಮ್ಮನ್ನೆಲ್ಲ ಬೆರಗು ಹುಟ್ಟುವಂತೆ ಮಾಡುತ್ತಿದ್ದ ಮತ್ತು ಹೀಗಲೂ ಹಾಗೆಯೇ ಅಂತಹ ನೆನಪುಗಳಲ್ಲಿ ನಮ್ಮನ್ನು ಸದಾ ಮೋಡಿ ಮಾಡುವ ಹೃದಯ ಶ್ರೀಮಂತಿಕೆ ಕವಿ ಲಕ್ಕೂರರಲ್ಲಿದೆ. ಮತ್ತು ನಮ್ಮ ನಡುವೆ ಅದು ಆಳಿಸಲಾಗದ ಲಿಪಿಯಂತೆ ಅಷ್ಟೇ ಅಪಾರವೂ ಕೂಡ.</p>



<ul class="wp-block-list">
<li><strong>ದೇವನೂರು ನಂದೀಶ್‌</strong></li>
</ul>
]]></content:encoded>
					
		
		
			</item>
		<item>
		<title>ಮುಜರಾಯಿ ಇಲಾಖೆ ಟೆಂಡರ್‌: ದಲಿತ ಸಮುದಾಯದವರ ಕ್ಷಮೆಯಾಚಿಸುವಂತೆ ಸರ್ಕಾರಕ್ಕೆ ಕಾಂಗ್ರೆಸ್‌ ಆಗ್ರಹ</title>
		<link>https://peepalmedia.com/mujarai-department-tender-congress-demands-government-to-apologize-to-dalit-community/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 03 Nov 2022 11:48:53 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[ರಾಜ್ಯ]]></category>
		<category><![CDATA[apologize]]></category>
		<category><![CDATA[BASAVARAJ BOMMAYI]]></category>
		<category><![CDATA[bjp]]></category>
		<category><![CDATA[congrees]]></category>
		<category><![CDATA[Dalit community]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Mujarai department tender]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=14024</guid>

					<description><![CDATA[ಬೆಂಗಳೂರು: ಸರ್ಕಾರದ ಮುಜರಾಯಿ ಇಲಾಖೆಯು ದೇವಸ್ಥಾನದಲ್ಲಿ ಚಪ್ಪಲಿ ಕಾಯುವ ಟೆಂಡರನ್ನು ದಲಿತ ಸಮುದಾಯಕ್ಕೆ ಮೀಸಲಿಟ್ಟ ವಿಷಯದ ಕುರಿತು ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್‌ ಘಟಕ ವಾಗ್ದಾಳಿ ನಡೆಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮತ್ತು ಮುಜರಾಯಿ ಸಚಿವರು ದಲಿತ ಸಮುದಾಯದವರಲ್ಲಿ ಕ್ಷಮೆ ಕೇಳುವಂತೆ ಒತ್ತಾಯಿಸಿದೆ. ಸರ್ಕಾರದ ವ್ಯಾಪ್ತಿಯಲ್ಲಿರುವ ಬೆಂಗಳೂರಿನ ದೊಡ್ಡಗಣಪತಿ ಮತ್ತು ಸಮೂಹ ದೇವಸ್ಥಾನಗಳ ಕಾರ್ಯನಿರ್ವಾಹಕ ಅಧಿಕಾರಿಗಳ ಕಛೇರಿ ಅಕ್ಟೋಬರ್‌ 31ರಂದು ನಡೆಸಿದ ಬಹಿರಂಗ ಹರಾಜು ಪ್ರಕಟಣೆಯಲ್ಲಿ, ದೇವಸ್ಥಾನದ ಆವರಣದಲ್ಲಿ ಪೂಜಾ ಸಾಮಾಗ್ರಿ, ಎಳನೀರು ಮಾರಾಟ, ಸುಂಕ ವಸೂಲಿ [&#8230;]]]></description>
										<content:encoded><![CDATA[
<p style="font-size:20px"><strong>ಬೆಂಗಳೂರು:</strong> ಸರ್ಕಾರದ ಮುಜರಾಯಿ ಇಲಾಖೆಯು ದೇವಸ್ಥಾನದಲ್ಲಿ ಚಪ್ಪಲಿ ಕಾಯುವ ಟೆಂಡರನ್ನು ದಲಿತ ಸಮುದಾಯಕ್ಕೆ ಮೀಸಲಿಟ್ಟ ವಿಷಯದ ಕುರಿತು ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್‌ ಘಟಕ ವಾಗ್ದಾಳಿ ನಡೆಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮತ್ತು ಮುಜರಾಯಿ ಸಚಿವರು ದಲಿತ ಸಮುದಾಯದವರಲ್ಲಿ ಕ್ಷಮೆ ಕೇಳುವಂತೆ ಒತ್ತಾಯಿಸಿದೆ.</p>



<p style="font-size:20px">ಸರ್ಕಾರದ ವ್ಯಾಪ್ತಿಯಲ್ಲಿರುವ ಬೆಂಗಳೂರಿನ ದೊಡ್ಡಗಣಪತಿ ಮತ್ತು ಸಮೂಹ ದೇವಸ್ಥಾನಗಳ ಕಾರ್ಯನಿರ್ವಾಹಕ ಅಧಿಕಾರಿಗಳ ಕಛೇರಿ ಅಕ್ಟೋಬರ್‌ 31ರಂದು ನಡೆಸಿದ ಬಹಿರಂಗ ಹರಾಜು ಪ್ರಕಟಣೆಯಲ್ಲಿ, ದೇವಸ್ಥಾನದ ಆವರಣದಲ್ಲಿ ಪೂಜಾ ಸಾಮಾಗ್ರಿ, ಎಳನೀರು ಮಾರಾಟ, ಸುಂಕ ವಸೂಲಿ ಹಕ್ಕುಗಳು ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟಿದ್ದು, ಚಪ್ಪಲಿ ನೋಡಿಕೊಳ್ಳುವ ಹಕ್ಕನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟಿದ್ದು, ಈ ಬಗ್ಗೆ ಬಾರಿ ಆಕ್ರೋಶಕ್ಕೆ ಕಾರಣವಾಗಿತ್ತು.</p>



<p style="font-size:20px">ಈ ಕುರಿತು ರಾಜ್ಯ ಕಾಂಗ್ರೆಸ್‌ ಘಟಕ ಟ್ವೀಟ್‌ ಮಾಡಿದ್ದು, ದೇವಸ್ಥಾನದಲ್ಲಿ ಚಪ್ಪಲಿ ಕಾಯುವ ಟೆಂಡರನ್ನು ದಲಿತರಿಗೆ ಮೀಸಲಿರಿಸುವ ಮೂಲಕ ಬಿಜೆಪಿ ಸರ್ಕಾರ ತನ್ನೊಳಗಿನ ಕೊಳಕಿನ ಮನುವಾದವನ್ನು ಜಾರಿಯಲ್ಲಿಡಲು ಯತ್ನಿಸಿದೆ. ಜನಾಕ್ರೋಶದ ನಂತರ ಪ್ರಕಟಣೆ ಬದಲಾಗಿರಬಹುದು, ಆದರೆ ಬಿಜೆಪಿಯ ದಲಿತವಿರೋಧಿ ಮನಸ್ಥಿತಿ ಬದಲಾಗಿಲ್ಲ ಎಂದು ಟೀಕಿಸಿದೆ.</p>



<p style="font-size:20px">ಈ ಹಿನ್ನಲೆಯಲ್ಲಿ, ಸಿಎಂ ಹಾಗೂ ಮುಜರಾಯಿ ಸಚಿವರು ದಲಿತರಲ್ಲಿ ಕ್ಷಮೆ ಕೇಳಬೇಕು ಎಂದು ರಾಜ್ಯ ಕಾಂಗ್ರೆಸ್‌ ಘಟಕ ಆಗ್ರಹಿಸಿದೆ.</p>
]]></content:encoded>
					
		
		
			</item>
	</channel>
</rss>
